ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಅಂಕಣಗಳು

Hosmane Muttu Column: ಸಾಂಪ್ರದಾಯಿಕ ‘ಕೂರಿ’ಯ ತಾಂತ್ರಿಕ ಚಮತ್ಕಾರ..!

Hosmane Muttu Column: ಸಾಂಪ್ರದಾಯಿಕ ‘ಕೂರಿ’ಯ ತಾಂತ್ರಿಕ ಚಮತ್ಕಾರ..!

ಅಪರೂಪದ ಹಸ್ತಕಲೆಯಾದ ಈ ಸಾಧನವನ್ನು ಸಿದ್ಧಪಡಿಸಲು ಬೇಕಿರುವುದು ಬರಿ ಕೌಶಲ ವಲ್ಲ; ಅತೀವ ತಾಳ್ಮೆ ಮತ್ತು ನಿಖರತೆ. ಇದರ ತಯಾರಿಕೆಗೆ ಬಿದಿರು, ಬೆತ್ತ ಅಥವಾ ಈಚಲು ಮರದ ತೆಳುವಾದ ಕಡ್ಡಿಗಳೇ ಆಧಾರ. ಇವುಗಳನ್ನು ಸಮಾನ ಅಳತೆಯ ತೆಳು ವಾದ ಪಟ್ಟಿಗಳಾಗಿ ಸೀಳಿ ನಾರಿನಿಂದ ನೈಪುಣ್ಯದಿಂದ ಹೆಣೆದು, ಶಂಕುವಿನಾಕಾರದಲ್ಲಿ ಸಿದ್ಧಪಡಿಸಲಾಗುತ್ತದೆ.

Dr Karaveeraprabhu Kyalakonda Column: ಅಸೂಯೆಯ ಅಳಿವಿನಿಂದ ಆರೋಗ್ಯ- ಆನಂದ- ಅಭಿವೃದ್ಧಿ

ಅಸೂಯೆಯ ಅಳಿವಿನಿಂದ ಆರೋಗ್ಯ- ಆನಂದ- ಅಭಿವೃದ್ಧಿ

ಅಸೂಯೆ ಎಂಬ ಶತ್ರು: ನಮ್ಮ ಸಹಪಾಠಿಗಳು ಅಥವಾ ಸಹೋದ್ಯೋಗಿಗಳ ಮೇಲೆ ಸಾಮಾನ್ಯ ವಾಗಿ ಈ ಅಸೂಯೆ ಉಂಟಾಗುತ್ತದೆ. ನಮ್ಮ ಜೀವನದ ಅವಧಿ ಕಿರಿದಾದುದು. ಹೀಗಿರುವಾಗ ವಿನಾಕಾರಣ ಅಸೂಯೆಗೆ ಒಡ್ಡಿಕೊಂಡು ಬದುಕನ್ನು ಹಾಳು ಮಾಡಿಕೊಳ್ಳುವುದು ವಿಪರ್ಯಾಸ ವಲ್ಲವೇ? ಅಸೂಯೆ ಎಂಬ ಕಾಯಿಲೆ ಬಹುತೇಕ ಎಲ್ಲರನ್ನೂ ಒಂದಲ್ಲಾ ಒಂದು ಹಂತದಲ್ಲಿ ಕಾಡುವುದು ನಿಜ.

Dr Ravishankar A K Column: ಯುದ್ಧ ಮುಗಿಯದು

Dr Ravishankar A K Column: ಯುದ್ಧ ಮುಗಿಯದು

ಯುದ್ಧ ಮುಗಿಯುವುದಿಲ್ಲ ಎನ್ನುವುದು ಕೇವಲ ಒಂದು ವಾಕ್ಯವಲ್ಲ, ಅದು ಈ ಜಗತ್ತಿನ ಕಟುವಾಸ್ತವ. ಯುದ್ಧಗಳು ಕೇವಲ ಗಡಿಭಾಗಗಳಲ್ಲಿ ನಡೆಯುತ್ತಿಲ್ಲ; ಅವು ಮನುಷ್ಯನ ಆಲೋಚನೆಗಳಲ್ಲಿ, ಮಾರುಕಟ್ಟೆಯ ವ್ಯವಹಾರಗಳಲ್ಲಿ ಮತ್ತು ಸ್ವಾರ್ಥದ ಅಡಿಪಾಯದ ಮೇಲೆ ನಿರಂತರವಾಗಿ ನಡೆಯುತ್ತಲೇ ಇವೆ.

Laxmikant L.V. Column: ತಂಪೆರೆಯುವ ಅಕ್ಷರದ ಮಳೆ

Laxmikant L.V. Column: ತಂಪೆರೆಯುವ ಅಕ್ಷರದ ಮಳೆ

ಸೂರ್ಯನು ನತ್ತ ನೆತ್ತಿಯ ಮೇಲೆ ಬೆಂಕಿಯ ಉಂಡೆಗಳನ್ನು ಸುರಿಸುತ್ತಿದ್ದಾನೆ. ಮರಗಿಡಗಳು ಬಸವಳಿದು ನಿಂತಿವೆ, ರಸ್ತೆಗಳು ಬಿಕೋ ಎನ್ನುತ್ತಿವೆ. ಇಪ್ಪತ್ತೊಂದನೇ ಶತಮಾನದ ಈ ದಿನಗಳಲ್ಲಿ ಗ್ಲೋಬಲ್ ವಾರ್ಮಿಂಗ್ ಎನ್ನುವ ಮಾತು ಬರಿ ಸುದ್ದಿಯಲ್ಲ, ಅದು ನಮ್ಮ ಚರ್ಮಕ್ಕೆ ತಾಗುವ ಸುಡುವಾಸ್ತವ.

Ramanand Sharma Column: ಮಕ್ಕಳಿರಲವ್ವ ಮನೆ ತುಂಬಾ ಎನ್ನುತ್ತಿರುವ ನಾಯ್ಡುಗಾರು

ಮಕ್ಕಳಿರಲವ್ವ ಮನೆ ತುಂಬಾ ಎನ್ನುತ್ತಿರುವ ನಾಯ್ಡುಗಾರು

‘ದುಡಿಯುವುದಕ್ಕೆ ಕೈಗಳಿಲ್ಲ’ ಎಂಬಂತೆ ಆಗುತ್ತಿದೆ ಎಂದು ಆತಂಕವನ್ನು ವ್ಯಕ್ತಪಡಿಸಿದ್ದರು. ‘ಉತ್ಸಾಹದಿಂದ ದುಡಿಯಬಲ್ಲ ಯುವಜನರ ಸಂಖ್ಯೆ ಕಡಿಮೆಯಾಗುವುದು ರಾಜ್ಯದ ಮತ್ತು ದೇಶದ ಆರ್ಥಿಕ ಬೆಳವಣಿಗೆಗೆ ಮಾರಕ; ನಮ್ಮ ರಾಜ್ಯದ ಲೋಕಸಭಾ ಸ್ಥಾನಗಳ ಕುಸಿತಕ್ಕೂ ಅದು ಕಾರಣವಾಗಬಹುದು’ ಎಂದಿದ್ದರು ನಾಯ್ಡು.

Venugopal Column: ಇವರು ಸಂವಿಧಾನಕ್ಕಿಂತ ಮೇಲಲ್ಲ; ಜನಾದೇಶದ ಅಧಿಕಾರವೇ ಪರಮೋಚ್ಛ

ಇವರು ಸಂವಿಧಾನಕ್ಕಿಂತ ಮೇಲಲ್ಲ; ಜನಾದೇಶದ ಅಧಿಕಾರವೇ ಪರಮೋಚ್ಛ

ತಮಿಳುನಾಡಿನಲ್ಲಿ ರಾಜ್ಯಪಾಲರು ವಿಧಾನಸಭೆಯಲ್ಲಿ ಪೂರ್ಣ ಭಾಷಣವನ್ನು ಓದಲು ನಿರಾ ಕರಿಸಿದರು. ಕೇರಳದಲ್ಲಿ ರಾಜ್ಯಪಾಲರು ಭಾಷಣದ ಕೆಲವು ಪ್ರಮುಖ ಭಾಗಗಳನ್ನು ಬಿಟ್ಟು ಬಿಟ್ಟರು. ಕರ್ನಾಟಕದಲ್ಲಿ ರಾಜ್ಯಪಾಲರು ಕೇವಲ ಎರಡು ಸಾಲುಗಳನ್ನು ಹೇಳಿ ಸಭೆಯಿಂದ ಹೊರ ನಡೆದರು. ಈ ಘಟನೆಗಳು ಸಾಮಾನ್ಯ ರಾಜಕೀಯ ವಿವಾದ ಮಾತ್ರ ವಲ್ಲ; ಅವು ಸಂವಿಧಾನಾತ್ಮಕ ಸಂಪ್ರದಾಯಗಳ ಮಹತ್ವವನ್ನು ಮತ್ತೆ ಪ್ರಶ್ನೆಗೆ ಒಳಪಡಿಸಿವೆ.

Ranjith H Ashwath Column: ಭರ್ತಿ ಜತೆ ಖಾಲಿ ಹುದ್ದೆ ಬಗ್ಗೆಯೂ ಗಮನಿಸಿ !

Ranjith H Ashwath Column: ಭರ್ತಿ ಜತೆ ಖಾಲಿ ಹುದ್ದೆ ಬಗ್ಗೆಯೂ ಗಮನಿಸಿ !

ಖಾಲಿ ಹುದ್ದೆಗಳ ಭರ್ತಿಗೆ ಹತ್ತಾರು ಕಾರಣಗಳಿದ್ದರೂ, ಪ್ರತಿವರ್ಷ ನಿವೃತ್ತಿಯಾಗುವ ನೌಕರರ, ಸಿಬ್ಬಂದಿಯ ಸಂಖ್ಯೆಯಂತೂ ಸರಾಸರಿ ಒಂದೇ ರೀತಿಯಲ್ಲಿರುತ್ತದೆ. ಇದರೊಂದಿಗೆ ಅಸಹಜ ವಾಗಿ ಮೃತಪಡುವ, ವಿವಿಧ ಕಾರಣಕ್ಕೆ ಸ್ವಯಂ ನಿವೃತ್ತಿ ಪಡೆಯುವವರ ಸಂಖ್ಯೆಯೂ ಸೇರಿಕೊಳ್ಳುವುದರಿಂದ ಆಯಾ ವರ್ಷದ ಭರ್ತಿಯನ್ನು ಆಯಾ ವರ್ಷವೇ ಮಾಡದೇ ಹೋದರೆ ಇರುವ ಸಿಬ್ಬಂದಿಯ ಮೇಲೆ ಕಾರ್ಯದೊತ್ತಡ ಹೆಚ್ಚಾಗುತ್ತಲೇ ಸಾಗುತ್ತದೆಯೇ ಹೊರತು, ಕಡಿಮೆಯಾಗುವುದಿಲ್ಲ.

Roopa Gururaj Column: ಶ್ರೀ ರಾಮನ ಭಕ್ತ ಹನುಮಂತನ ಅಪ್ರತಿಮ ಭಕ್ತಿಯ ಪರಾಕಾಷ್ಠೆ

ಶ್ರೀ ರಾಮನ ಭಕ್ತ ಹನುಮಂತನ ಅಪ್ರತಿಮ ಭಕ್ತಿಯ ಪರಾಕಾಷ್ಠೆ

ರಾಮನ ಹೆಸರಿಲ್ಲದ ವಸ್ತು ಅದೆಷ್ಟೇ ಬೆಲೆ ಬಾಳುವ ಚಿನ್ನವಾಗಿದ್ದರೂ ಅದು ನನಗೆ ಹೊರೆ ಮಾತ್ರ". ಸೀತೆಗೆ ಆಗ ತಾನು ಮಾಡಿದ ತಪ್ಪಿನ ಅರಿವಾಗಿತ್ತು. ಅವಳು ಅದನ್ನು ಶ್ರೀ ರಾಮನ ಹೆಸರಿನಿಂದ ನೀಡುವ ಬದಲು ‘ನನ್ನ ಉಡುಗೊರೆ’ ಎಂದು ನೀಡಿದ್ದಳು. ಆಗ ಸಭೆಯಲ್ಲಿದ್ದವ ರೊಬ್ಬರು “ಹನುಮಂತಾ, ಹಾಗಿದ್ದರೆ ನಿನ್ನ ದೇಹದೊಳಗೆ ರಾಮನಿದ್ದಾನೆಯೇ?" ಎಂದು ಕೇಳಿಬಿಟ್ಟರು.

Surendra Pai Column: ಸಾರ್ವಜನಿಕ ಶೌಚಾಲಯದ ಗೋಳು ಕೇಳುವವರಾರು ?

Surendra Pai Column: ಸಾರ್ವಜನಿಕ ಶೌಚಾಲಯದ ಗೋಳು ಕೇಳುವವರಾರು ?

ಸಾರ್ವಜನಿಕ ಶೌಚಾಲಯಗಳಲ್ಲಿ ಅಶುಚಿತ್ವ ಮತ್ತು ನಿರ್ವಹಣೆಯ ಕೊರತೆಯು ಪ್ರಮುಖ ಸಮಸ್ಯೆಯಾಗಿದೆ. ಶೇ.76ಕ್ಕಿಂತ ಹೆಚ್ಚು ಶೌಚಾಲಯಗಳು ಕಳಪೆ ನಿರ್ವಹಣೆಯಿಂದಾಗಿ (ಅಂದರೆ ಸಮರ್ಪಕ ಬಾಗಿಲು, ಒಳಗಿನಿಂದ ಚಿಲಕಹಾಕುವ ವ್ಯವಸ್ಥೆ, ನೀರು ಮುಂತಾದವು ಇಲ್ಲದಿರು ವಿಕೆ) ಬಳಕೆಗೆ ಯೋಗ್ಯವಾಗಿಲ್ಲ; ಕೊಳಕು, ದುರ್ವಾಸನೆ ಮತ್ತು ಸೋಂಕು ಹರಡುವ ಭೀತಿ ಇಲ್ಲೆಲ್ಲಾ ಮಾಮೂಲು.

Rangaswamy Mookanahalli Column: ಮಕ್ಕಳು ನಮ್ಮ ಕನಸನ್ನು ಪೂರೈಸಲು ಹುಟ್ಟಿಲ್ಲ !

ಮಕ್ಕಳು ನಮ್ಮ ಕನಸನ್ನು ಪೂರೈಸಲು ಹುಟ್ಟಿಲ್ಲ !

ಪ್ರಥಮ ಹತ್ತು ವರ್ಷ ಟೈಮ್‌ಪಾಸ್ ಮಾಡುವುದು ಅಭ್ಯಾಸ ಮಾಡಿಕೊಂಡ ಮಕ್ಕಳು ಈಗ ಓದುವುದಕ್ಕೆ ಹೇಗೆ ಸಾಧ್ಯ? ಪ್ರಮಾಣ ಮಾಡಿ ಹೇಳುತ್ತೇನೆ, ಕಳೆದ ಹತ್ತು ವರ್ಷದಿಂದ ಇದೇ ಪ್ಯಾಟ್ರನ್ ನೋಡುತ್ತಾ ಬಂದಿದ್ದೇನೆ. ಹೋಗಲಿ ಮಕ್ಕಳು ತಾವು ಸೇರಿಕೊಂಡ ಇತರ ತರಗತಿ ಗಳಲ್ಲಿ ಏನಾದರೂ ಕ್ಷಮತೆಯನ್ನು ಗಳಿಸಿಕೊಂಡರೆ ಎಂದರೆ ಅದಕ್ಕೂ ಉತ್ತರ ‘ಇಲ್ಲ’ ಎನ್ನುವುದೇ ಆಗಿರುತ್ತದೆ.

Vishweshwar Bhat Column: ‘ದಿ ಗ್ರೇ ಲೇಡಿ’ ಎಂದರೆ ಯಾರು ?

Vishweshwar Bhat Column: ‘ದಿ ಗ್ರೇ ಲೇಡಿ’ ಎಂದರೆ ಯಾರು ?

ಬೂದು ಬಣ್ಣವು ಸ್ಥಿರತೆ ಮತ್ತು ಗಾಂಭೀರ್ಯದ ಸಂಕೇತ. ಪತ್ರಿಕೆಯು ತನ್ನ ನಿಷ್ಠುರವಾದ ಸುದ್ದಿಗಾರಿಕೆ ಮತ್ತು ಸಂಪ್ರದಾಯಬದ್ಧ ಶೈಲಿಯಿಂದಾಗಿ ಒಬ್ಬ ಗೌರವಾನ್ವಿತ, ಹಿರಿಯ ಮತ್ತು ಸಭ್ಯ ಮಹಿಳೆಯಂತೆ (Lady) ಭಾಸವಾಯಿತು. ಹೀಗಾಗಿಯೇ ಇದಕ್ಕೆ ‘ಲೇಡಿ’ ಎಂಬ ಗೌರವದ ಸಂಬೋಧನೆ ಸಿಕ್ಕಿತು. ಈ ಪತ್ರಿಕೆಯ ವಿನ್ಯಾಸವನ್ನು ‘ದಿ ಗ್ರೇ ಲೇಡಿ’ ಎಂದು ಕರೆಯಲು ಮತ್ತೊಂದು ಕಾರಣ ಅದರ ಕಟ್ಟುನಿಟ್ಟಾದ ಶಿಸ್ತು.

K V Chandramouli Column: ಇಂಧನ ಸುಧಾರಣೆಗಳ ಬುನಾದಿ: ಯುಪಿಎ ಕಾಲದ ನೀತಿಗಳ ವಾಸ್ತವ ವಿಶ್ಲೇಷಣೆ

ಇಂಧನ ಸುಧಾರಣೆಗಳ ಬುನಾದಿ: ಯುಪಿಎ ಕಾಲದ ನೀತಿಗಳ ವಾಸ್ತವ ವಿಶ್ಲೇಷಣೆ

ಇಂಧನ ಕ್ಷೇತ್ರದಂಥ ಸಂಕೀರ್ಣ ವಿಷಯವನ್ನು ವಿಶ್ಲೇಷಿಸುವಾಗ ಕೇವಲ ರಾಜಕೀಯ ಅಭಿಪ್ರಾಯಗಳ ಆಧಾರದಲ್ಲಿ ನಿರ್ಣಯಕ್ಕೆ ಬರುವುದು ಸರಿಯಲ್ಲ. ಜಾಗತಿಕ ಕಚ್ಚಾತೈಲದ ಬೆಲೆಗಳ ಏರಿಳಿತ, ದೇಶೀಯ ತೆರಿಗೆ ರಚನೆ, ಸಬ್ಸಿಡಿ ವ್ಯವಸ್ಥೆಯ ಉದ್ದೇಶ, ಸಾರ್ವಜನಿಕ ತೈಲ ಕಂಪನಿಗಳ ಆರ್ಥಿಕ ಸ್ಥಿತಿ ಹಾಗೂ ಸಾಮಾನ್ಯ ಜನರ ಮೇಲೆ ಬೀರುವ ಸಾಮಾಜಿಕ-ಆರ್ಥಿಕ ಪರಿಣಾಮಗಳನ್ನು ಸಮಗ್ರವಾಗಿ ಪರಿಗಣಿಸಿ ವಿಶ್ಲೇಷಣೆ ಮಾಡಬೇಕು.

Kiran Upadhyay Column: ಅನ್ವೇಷಕರು ಯಾರೋ, ಅನುಭವಿಸೋರು ಯಾರೋ...

ಅನ್ವೇಷಕರು ಯಾರೋ, ಅನುಭವಿಸೋರು ಯಾರೋ...

ನಮ್ಮ ಆಯ್ಕೆ ಎರಡನೆಯದಾಗಿತ್ತು. ಅದಕ್ಕೆ ಎರಡು ಕಾರಣಗಳಿದ್ದವು. ಮೊದಲನೆಯದು, ಬವೇರಿಯನ್ ಪ್ರಾಂತ್ಯದಲ್ಲಿರುವ ಮ್ಯೂನಿಕ್ ನಗರ ಅಕ್ಟೋಬರ್ ಫೆಸ್ಟ್ ನಡೆಯುವ ಸ್ಥಳಕ್ಕೆ ಸಮೀಪದಲ್ಲಿದ್ದರೆ, ಎರಡನೆಯದು, ಬಿಎಮ್‌ಡಬ್ಲ್ಯೂ ಕಾರುಗಳು ನಮ್ಮ ಹೃದಯಕ್ಕೆ ಹತ್ತಿರವಾಗಿದ್ದವು. ಏಕೋ-ಏನೋ, ಮೊದಲಿನಿಂದಲೂ ನನಗೆ ಬಿಎಮ್‌ಡಬ್ಲ್ಯೂ ಎಂದರೆ ಏನೋ ಮೋಹ... ಏಕೋ ದಾಹ...

Ganesh Bhat Column: ಭಾರತವು ರಕ್ಷಣಾ ಕ್ಷೇತ್ರದಲ್ಲಿ ಏಕೆ ಸ್ವಾವಲಂಬಿಯಾಗಬೇಕು ?

ಭಾರತವು ರಕ್ಷಣಾ ಕ್ಷೇತ್ರದಲ್ಲಿ ಏಕೆ ಸ್ವಾವಲಂಬಿಯಾಗಬೇಕು ?

ಮಧ್ಯಪ್ರಾಚ್ಯ ಯುದ್ಧದ ಹಿನ್ನೆಲೆಯಲ್ಲಿ ಭಾರತದ ರಕ್ಷಣಾ ಸಚಿವ ರಾಜನಾಥ ಸಿಂಗ್‌ರವರು ಮಾತನಾಡುತ್ತಾ, ‘ಯುದ್ಧದ ಪರಿಣಾಮವು ಎಲ್ಲೆಡೆ ಕಾಣಿಸಿಕೊಳ್ಳುತ್ತಿದೆ. ರಕ್ಷಣಾ ಕ್ಷೇತ್ರದಲ್ಲಿನ ಸ್ವಾವಲಂಬನೆಯೇ ಅಡಚಣೆಯನ್ನು ತಪ್ಪಿಸಿಕೊಳ್ಳುವುದಕ್ಕಿರುವ ಏಕೈಕ ಮಾರ್ಗ’ ಎಂದಿದ್ದಾರೆ. 2014ರವರೆಗೂ ಭಾರತವು ಸುಮಾರು ಶೇ.70ರಷ್ಟು ರಕ್ಷಣಾ ಉಪಕರಣಗಳನ್ನು ವಿದೇಶ ಗಳಿಂದಲೇ ತರಿಸಿಕೊಳ್ಳುತ್ತಿತ್ತು.

R‌ T Vittalmurthy Column: ಬಿಜೆಪಿಯಲ್ಲಿ ಮತ್ತೆ ಪ್ರೆಸಿಡೆಂಟ್‌ ವಾರ್

R‌ T Vittalmurthy Column: ಬಿಜೆಪಿಯಲ್ಲಿ ಮತ್ತೆ ಪ್ರೆಸಿಡೆಂಟ್‌ ವಾರ್

ಸರಕಾರ ಅಸ್ತಿತ್ವಕ್ಕೆ ಬಂದು 33 ತಿಂಗಳುಗಳು ಕಳೆದಿವೆ. ಈಗಲಾದರೂ ಸಂಪುಟ ಪುನಾರಚನೆ ಮಾಡದಿದ್ದರೆ ಹೇಗೆ? ಅಂತ ಹಿರಿಯ ಶಾಸಕರು ವರಾತ ತೆಗೆಯುತ್ತಿದ್ದಾರೆ. ಅವರ ಈ ವರಾತ ವನ್ನು ತಡೆಗಟ್ಟಲು ಮುಂದಾಗದಿದ್ದರೆ ಅಪಾಯ ಗ್ಯಾರಂಟಿ. ಹೀಗಾಗಿ ಸಂಪುಟ ಪುನಾರಚನೆಗೆ ಅನುಮತಿ ಕೊಡಿ ಅಂತ ಕೇಳುತ್ತಾರೆ.

Vishweshwar Bhat Column: ಪತ್ರಿಕೆಗಳು ಮತ್ತು ಅನ್ವರ್ಥನಾಮಗಳು

Vishweshwar Bhat Column: ಪತ್ರಿಕೆಗಳು ಮತ್ತು ಅನ್ವರ್ಥನಾಮಗಳು

‘ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆಯ ಪ್ರಧಾನ ಕಚೇರಿಯು ಮುಂಬೈನ ಸಿ.ಎಸ್.ಟಿ (ಛತ್ರಪತಿ ಶಿವಾಜಿ ಟರ್ಮಿನಲ್) ರೈಲು ನಿಲ್ದಾಣದ ಎದುರಿಗಿದೆ. ಈ ಪ್ರದೇಶವನ್ನು ಹಿಂದೆ ‘ಬೋರಿ ಬಂದರ್’ ಎಂದು ಕರೆಯಲಾಗುತ್ತಿತ್ತು. ಪತ್ರಿಕೆಯು ದಶಕಗಳಿಂದ ಇದೇ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವುದರಿಂದ ‘ಬೋರಿಬಂದರ್’ ಎಂಬ ಹೆಸರು ಅಂಟಿಕೊಂಡಿತು. ‌

Susan Thomas Column: ಪೆಂಗ್ವಿನ್‌ ಮತ್ತು ಪಂಚ್‌ ಆಧುನಿಕ ನಿರ್ವಾತವನ್ನು ಹೇಗೆ ತುಂಬುತ್ತದೆ ?

ಪೆಂಗ್ವಿನ್‌ ಮತ್ತು ಪಂಚ್‌ ಆಧುನಿಕ ನಿರ್ವಾತವನ್ನು ಹೇಗೆ ತುಂಬುತ್ತದೆ ?

2025ರಲ್ಲಿ, ಪ್ರಪಂಚಕ್ಕೆ ‘ಕಿಡಲ್ಟ್ ಪ್ರವೃತ್ತಿ’ಯನ್ನು ಪೂರ್ಣವಾಗಿ ತಂದ ಕೊಳಕು-ಮುದ್ದಾದ ಗೊಂಬೆಗಳಾದ ಲ್ಯಾಬುಬಸ್ ಬಗ್ಗೆ ಜಗತ್ತು ಭಯಭೀತವಾಗಿತ್ತು. 18‌ ರಿಂದ 25 ವರ್ಷ ದೊಳಗಿನ ಯುವಕರು, ಸಾಮಾಜಿಕ ಮಾಧ್ಯಮದ ಸಕ್ರಿಯ ಬಳಕೆದಾರರು, ಅವುಗಳನ್ನು ಚೀಲಗಳಲ್ಲಿ ಮೋಡಿಗಳಂತೆ ನೇತುಹಾಕಿದರು, ಅವುಗಳನ್ನು ಷೇರುಗಳಂತೆ ಮಾರಾಟ ಮಾಡಿದರು ಮತ್ತು ಖರೀದಿಸಿದರು, ಬಾಲ್ಯ ಮತ್ತು ಪ್ರೌಢಾವಸ್ಥೆಯ ಅಚ್ಚುಕಟ್ಟಾದ ವರ್ಗೀಕರಣಗಳ ಬಗ್ಗೆ ಪುನ ರ್ವಿಮರ್ಶಿಸಲು ಜಗತ್ತಿಗೆ ಅವಕಾಶ ನೀಡಿದರು, ವಯಸ್ಕರು ಸಹ ಮಕ್ಕಳಾಗಿರಬೇಕು ಎಂಬ ವಾದವನ್ನು ಮಂಡಿಸಿದರು.

Hari Paraak Column: MOMO ಮತ್ತು MEME

Hari Paraak Column: MOMO ಮತ್ತು MEME

ಇದೇನೂ ಹೊಸದಲ್ಲ ಬಿಡಿ, ಮೇರುನಟ ಡಾ.ರಾಜ್‌ಕುಮಾರ್ ಅವರಿಂದ ಹಿಡಿದು ಇಂದಿನ ಯುವಪೀಳಿಗೆಯ ನಟರನ್ನೂ ಈ ಗೀಳು ಬಿಟ್ಟಿಲ್ಲ. ಈಗ ಮತ್ತೆ ನಮ್ಮ ಕನ್ನಡದ ನಟರು ಜನರಿಗೆ ಸಹಾಯ ಮಾಡಬೇಕು, ತಮ್ಮ ದುಡ್ಡನ್ನ ಜನರಿಗೆ ಕೊಡಬೇಕು, ತಮ್ಮ ಸಿನಿಮಾಗಳಲ್ಲಿ ವಿಲನ್‌ ಗಳನ್ನು ಹೊಡೆದೋಡಿಸಿದಂತೆ ಒಂದೇ ಸಲ ಸಂಕಷ್ಟಗಳನ್ನು ಓಡಿಸಬೇಕು ಎಂಬೆಲ್ಲ ಪ್ರಲಾಪ ಗಳು ಶುರುವಾಗಿವೆ.

Srivathsa Joshi Column: ಕನಕದಾಸರು ಆ ಬಾಳೆಹಣ್ಣನ್ನು ತಿನ್ನಲೇ ಇಲ್ಲವೇಕೆ ?

ಕನಕದಾಸರು ಆ ಬಾಳೆಹಣ್ಣನ್ನು ತಿನ್ನಲೇ ಇಲ್ಲವೇಕೆ ?

ಕುಟುಂಬ, ಸಮಾಜ ಅನ್ನೋದಕ್ಕೆಲ್ಲ ಅರ್ಥವೇ ಇಲ್ಲ. ಮಾನವೀಯ ಸಂಬಂಧಗಳ ಒಂದೊಂದು ಎಳೆಯೂ ಛಿದ್ರಛಿದ್ರ. ಕಾಡಿನಲ್ಲಾದರೂ ಪ್ರಾಣಿಗಳೆಲ್ಲ ಒಂದು ಅಲಿಖಿತ ನೀತಿ ನಿಯಮ ಪಾಲಿಸಿ ಸಹಬಾಳ್ವೆ ನಡೆಸುತ್ತಿರುವಾಗ ನಾಡಿನ ಮನುಷ್ಯಪ್ರಾಣಿ ಅವುಗಳಿಗಿಂತಲೂ ಕಡೆ ಎನ್ನಿಸಿಕೊಳ್ಳುವಂಥ ಅಸಹ್ಯ ಅನೂಹ್ಯ ಸನ್ನಿವೇಶ!

Vinayaka V Bhat Column: ಶಾಂತಿಯಂತೆ ಸಂಗ್ರಾಮಕ್ಕೂ ಜಗತ್ತಿಗೆ ಭಾರತವೇ ಆದರ್ಶ

ಶಾಂತಿಯಂತೆ ಸಂಗ್ರಾಮಕ್ಕೂ ಜಗತ್ತಿಗೆ ಭಾರತವೇ ಆದರ್ಶ

ಸಾಮ, ದಾನ, ಭೇದ ಎನ್ನುವ ಮೂರು ಉಪಾಯಗಳು ಫಲ ನೀಡದಿದ್ದಾಗ ಮಾತ್ರ ಭಾರತದಲ್ಲಿ ದಂಡವನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಭಾರತೀಯರು ಶಾಂತಿಪ್ರಿಯರು, ಎರಡು ಮಾತಿಲ್ಲ; ಆದರೆ ಯುದ್ಧವನ್ನು, ಯುದ್ಧದ ನೀತಿಯನ್ನು ಜಗತ್ತಿಗೆ ಕಲಿಸಿದವರು ಭಾರತೀಯರೇ ಆಗಿದ್ದಾರೆ ಎಂದರೆ ತಪ್ಪಾಗಲಾರದು.

Vishweshwar Bhat Column: ಆ ಟಿಪ್ಪರರಿ ಮತ್ತು ತಿಪ್ಪಾರಳ್ಳಿ ನಡುವೆ ಹತ್ತಾರು ನೆನಪುಗಳು !

ಆ ಟಿಪ್ಪರರಿ ಮತ್ತು ತಿಪ್ಪಾರಳ್ಳಿ ನಡುವೆ ಹತ್ತಾರು ನೆನಪುಗಳು !

ಟಿಪ್ಪರರಿ ಐರ್ಲೆಂಡ್‌ನ ಅತಿದೊಡ್ಡ ಒಳನಾಡಿನ ಕೌಂಟಿ. ಇದು ಸಮುದ್ರ ತೀರವನ್ನು ಹೊಂದಿ ಲ್ಲದಿದ್ದರೂ, ಪ್ರಕೃತಿ ಸೌಂದರ್ಯಕ್ಕೆ ಕೊರತೆಯಿಲ್ಲ. ಸದಾ ನಿದ್ದೆಯಲ್ಲಿರುವಂತೆ, ನಿಧಾನ ಜೀವನಗತಿ ಹೊಂದಿರುವ ಊರು. ಲಿಮೆರಿಕ್ ನಗರದಿಂದ ಮುಕ್ಕಾಲು ಗಂಟೆ ಕಾರಿನಲ್ಲಿ ಪ್ರಯಾಣದಷ್ಟು ಹತ್ತಿರದಲ್ಲಿರುವ ಪಟ್ಟಣ. ಜನಸಂಖ್ಯೆ ಹೆಚ್ಚೆಂದರೆ ಐದಾರು ಸಾವಿರ ಇರಬಹುದು.

Ranganath Gudimani Column: ತಾಳುವಿಕೆಗಿಂತ ಅನ್ಯ ತಪವಿಲ್ಲ

ತಾಳುವಿಕೆಗಿಂತ ಅನ್ಯ ತಪವಿಲ್ಲ

ಮದುವೆಯ ಸಮಯದಲ್ಲಿ ಸಪ್ತಪದಿ ತುಳಿದು ವಧುವಿಗೆ ವರನು ತಾಳಿ ಕಟ್ಟುವುದು ಯಾಕೆ? ಸಂಸಾರ ಸಾಗರದಲ್ಲಿ ತಾಳಿಕೊಂಡು ಒಂದಾಗಿ, ಚೆಂದಾಗಿ ಸುಖವಾಗಿ ಬಾಳಿ ಬದುಕಲು ತಾನೇ? ಭೂಮಿಗೆ ಬಿದ್ದ ಬೀಜವು ಮೊಳೆತು ಹುಲುಸಾಗಿ ಬೆಳೆಯಲು ಕಾಲಾವಕಾಶ ಬೇಕಲ್ಲವೇ? ಅದಕ್ಕಾ ಗಿಯೇ ಭರವಸೆಯ ಜತೆಗೆ ತಾಳ್ಮೆಯಿಂದ ಕಾಯಬೇಕು.

ಜೀವನ್ಮುಕ್ತ ಸ್ಥಿತಿ ಅರ್ಥಮಾಡಿಕೊಳ್ಳುವುದು

ಜೀವನ್ಮುಕ್ತ ಸ್ಥಿತಿ ಅರ್ಥಮಾಡಿಕೊಳ್ಳುವುದು

ನಿರಂತರ ಮಾನಸಿಕ ಗದ್ದಲ ನಿಂತು ಹೋಗಿ ಒಳಗೆ ಮೌನ ಇರುತ್ತದೆ. ಸಂಪೂರ್ಣವಾಗಿ ನಿಶ್ಚಲತೆ ಮನಸ್ಸನ್ನು ತುಂಬಿರುತ್ತದೆ. ಏನೇ ಕೆಲಸ ಮಾಡಿದರೂ ‘ನಾನು ಮಾಡುತ್ತಿದ್ದೇನೆ’ ಎಂಬ ಭಾವನೆ ಇರುವುದಿಲ್ಲ. ವಿಷಯಗಳು ‘ನಾನು’ ಎಂಬುದಿಲ್ಲದೆ ತಾನಾಗಿಯೇ ನಡೆಯುತ್ತವೆ. ಹೊರಗಡೆ ನಷ್ಟ, ಅವಮಾನ, ಅನಾರೋಗ್ಯ ಅಥವಾ ಹೊಗಳಿಕೆ ಏನೇ ಆಗಲಿ ಅವರ ನಿಶ್ಚಲತೆಯನ್ನು ಅವು ಕದಡುವುದಿಲ್ಲ

Maya Balachandra Column: ದೇವರು ಮೇಲಿದ್ದಾನೆಯೇ? ನಮ್ಮೊಳಗಿದ್ದಾನೆಯೇ ?

ದೇವರು ಮೇಲಿದ್ದಾನೆಯೇ? ನಮ್ಮೊಳಗಿದ್ದಾನೆಯೇ ?

ವ್ಯಕ್ತಿ ಅಥವಾ ವಸ್ತುವಿನ ಇರುವಿಕೆಯನ್ನು ಗುರುತಿಸಬೇಕಾದರೆ, ಆ ವ್ಯಕ್ತಿ ಅಥವಾ ವಸ್ತು ವಿನ ಪರಿಚಯ ಇರಲೇಬೇಕು. ಇಲ್ಲವಾದಲ್ಲಿ, ನಮ್ಮೆದುರಿಗೆ ಇದ್ದರೂ, ಆ ವ್ಯಕ್ತಿ/ವಸ್ತುವನ್ನು ಗುರುತಿಸಲು ಸೋತು ಬಿಡುತ್ತೇವೆ. ‘ಇದೆ’ ಎಂದುಕೊಳ್ಳುವ ವಸ್ತುವಿನ ಯಾವ ಪರಿಚಯ ವೂ ಇಲ್ಲದಿದ್ದ ಮೇಲೆ, ಆ ನಂಬಿಕೆ ಏನು ತಾನೆ ಮಾಡಲು ಸಾಧ್ಯ? ಹಾಗಾಗಿ, ಎಲ್ಲಕ್ಕಿಂತ ಮೊದಲು, ನಮ್ಮ ಮನಸ್ಸಿನಲ್ಲಿ, ಭಗವಂತ ಅಥವಾ ದೇವರ ಚಿತ್ರಣ ಹೇಗಿದೆ ಅನ್ನುವುದು ಬಹಳ ಮುಖ್ಯ.

Loading...