ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅಂಕಣಗಳು

Hari Prasad Naadig Column: ತಬ್ಬಲಿಯು ನೀನಾದೆ ಬೆಟ್ಟವೇ...

Hari Prasad Naadig Column: ತಬ್ಬಲಿಯು ನೀನಾದೆ ಬೆಟ್ಟವೇ...

ಸಾಮಾನ್ಯವಾಗಿ ಎಷ್ಟೋ ಸಾಫ್ಟ್‌ʼವೇರ್ ಇಂಜಿನಿಯರ್‌ಗಳು ವಾರಾಂತ್ಯದ ಬೇಸರ ಕಳೆಯಲು ಬೇರೆ ಬೇರೆ ಜಾಗಗಳಿಗೆ ಹೋಗಿ ಗಿಡ ನೆಟ್ಟು ಬರುತ್ತಾರೆ. ಅದಾದ ಮೇಲೆ ಆ ಗಿಡಗಳು ಏನಾದವು ಎಂದು ತಿರುಗಿ ನೋಡುವುದು ಕಡಿಮೆ. ಆದರೆ ಇಲ್ಲಿ ಹತ್ತಾರು ಜನ ಇಂಜಿನಿಯರ್‌ಗಳು ತಾವು ನೆಟ್ಟ ಗಿಡಗಳನ್ನು ಇಷ್ಟು ವರ್ಷಗಳ ಕಾಲ ಪ್ರೀತಿಯಿಂದ ಕಾಪಾಡಿಕೊಂಡು ಬಂದು, ಈಗಲೂ ಅದರ ಬಗ್ಗೆ ತಲೆಕೆಡಿಸಿಕೊಳ್ಳು ತ್ತಿರುವುದನ್ನು ನೋಡಿ ನನಗೂ ಆಶ್ಚರ್ಯವಾಯಿತು.

Narayana Yaji Column: ಕೆರೆಮನೆ ಮನೆತನಕ್ಕೆ 4ನೇ ರಾಷ್ಟ್ರ ಪ್ರಶಸ್ತಿ

Narayana Yaji Column: ಕೆರೆಮನೆ ಮನೆತನಕ್ಕೆ 4ನೇ ರಾಷ್ಟ್ರ ಪ್ರಶಸ್ತಿ

ಇತ್ತೀಚೆಗಷ್ಟೇ ಅವರ ಸಾಧನೆಯನ್ನು ಗುರುತಿಸಿ ‘ಶ್ರೀ ವಿದ್ಯಾ ವೇದ ವಿಜ್ಞಾನ ಅಂತರಾಷ್ಟ್ರೀಯ ವಿಶ್ವ ವಿದ್ಯಾಲಯ, ಫ್ಲೋರಿಡಾ (ಅಮೇರಿಕಾ) ಹಾಗೂ ಶ್ರೀ ವಿದ್ಯಾ ವಿಶ್ವ ಸಂಶೋಧನಾ ಪ್ರತಿಷ್ಠಾನಂ, ಬೆಂಗಳೂರು’ ಇವರು ಗೌರವ ಡಾಕ್ಟರೇಟ್ ಪುರಸ್ಕಾರ ನೀಡಿ ಗೌರವಿಸಿದ್ದಾರೆ. ಇದು ಯಕ್ಷಗಾನ ಕಲೆಗೆ ಸಂದ ಗೌರವ. ಎರಡು ತಿಂಗಳ ಹಿಂದೆ ಯಕ್ಷಗಾನಕ್ಕೆ ಮೀಸಲಾದ ‘ಯಕ್ಷರಂಗ’ ಪತ್ರಿಕೆಯ ಕಡತೋಕಾ ಮಂಜುನಾಥ ಭಾಗವತರ ಸಂಸ್ಮರಣೆಯ ಕಾರ್ಯಕ್ರಮದಲ್ಲಿ ಇವರಿಗೆ ‘ಯಕ್ಷ ಸಂಘಟಕ’ ಪ್ರಶಸ್ತಿಯನ್ನು ಪುರಸ್ಕರಿಸಿ ಗೌರವಿಸಿತ್ತು.

Ravi Hunj Column: ಗಣಾಚಾರವೊಂದು ಮುಖಾಚಾರ ಮೂರು !

Ravi Hunj Column: ಗಣಾಚಾರವೊಂದು ಮುಖಾಚಾರ ಮೂರು !

ಇವನೊಬ್ಬ ಅರೆಹುಚ್ಚ ಇದರ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳಬೇಕಿಲ್ಲ’ ಎಂದು ಅಭಿಪ್ರಾಯ ಹಂಚಿ ದವರು ಹಂದಿಗುಂದ ಮಠದ ಪೂಜ್ಯ ಶ್ರೀ ಶಿವಾನಂದ ಸ್ವಾಮಿಗಳು! ನಾನು ಈ ಅಸಭ್ಯ ಪರಿಭಾಷೆಯ ಅಭಿಪ್ರಾಯ ನೋಡಿದಾಕ್ಷಣ ಯಾರೋ ಅವಿದ್ಯಾವಂತ ಮುಗ್ಧ, ಅನಾಗರಿಕ ವ್ಯಕ್ತಿಯೆಂದು ಉಪೇಕ್ಷಿ ಸಿದ್ದೆ. ಅಭಿಪ್ರಾಯ ಹಾಕಿರುವ ವ್ಯಕ್ತಿಯ ಹೆಸರನ್ನು ಸಹ ಗಮನಿಸಿರಲಿಲ್ಲ. ಆದರೆ ಓದುಗರೊಬ್ಬರು ಗಮನ ಹರಿಸಲು ತಿಳಿಸಿದ ನಂತರ ಗಮನಿಸಿದೆ.

Srivathsa Joshi Column: ಪ್ರೇಕ್ಷಕರೇ ಪ್ರದರ್ಶಕರಾಗುವ ಕಲೆ ಮೆಕ್ಸಿಕನ್‌ ಅಲೆ

ಪ್ರೇಕ್ಷಕರೇ ಪ್ರದರ್ಶಕರಾಗುವ ಕಲೆ ಮೆಕ್ಸಿಕನ್‌ ಅಲೆ

ಕಣ್ಣು-ಕಿವಿಗಳಂತೆ ಮೂಗಿಗೂ ಅಲೆಗಳು ಬಂದು ಅಪ್ಪಳಿಸಬಹುದು “ಸೇವಂತಿಯೆ ಸೇವಂತಿಯೇ ನನ್ನಾಸೆ ಅಲೆಯಲ್ಲಿ ಘಮ್ಮಂತೀಯೆ..." ಪರಿಮಳದ ರೀತಿಯಲ್ಲಿ. ಅಷ್ಟೇಕೆ, ಅಗೋಚರವೂ ಅತೀಂದ್ರಿ ಯವೂ ಆಗಬಲ್ಲವು ಕಷ್ಟಕಾರ್ಪಣ್ಯದ ನೋವಿನ ಅಲೆಗಳು, ಅಥವಾ ಮಧುರವಾಗಿ ಮರುಕಳಿಸುವ ನೆನಪಿನ ಅಲೆಗಳು.

Hari Paraak Column: ಪ್ರೆಗ್ನೆನ್ಸಿ ತಡೆಯಲು ತಿನ್ನೋದು: ಜ್ಞಾಪಾನ ಮಾತ್ರೆ

Hari Paraak Column: ಪ್ರೆಗ್ನೆನ್ಸಿ ತಡೆಯಲು ತಿನ್ನೋದು: ಜ್ಞಾಪಾನ ಮಾತ್ರೆ

ನೀವು ಸಹಿ ಹಾಕಿ ’ಅಣ್ಣಾ’ ಎಂದು ಎಲ್ಲರ ಮುಂದೆ ಡಂಗುರ ಬಾರಿಸುತ್ತಿದ್ದಾರೆ. ಅವರ ಈ ಮನೋ ಭಾವ ನೋಡಿದಾಗ, ಆಹಾ, ಎಂಥ ಒಳ್ಳೆಯ ವಿಷಯ ಅಲ್ಲವೇ? ನಮ್ಮ ಸಿನಿಮಾ ನಿರ್ದೇಶಕರಿಗೆ ಇಂಥ ಬುದ್ಧಿ ಯೂ ಇದೆಯಲ್ಲ ಎಂದು ಖುಷಿಯಾಗುತ್ತದೆ. ಆದರೆ ಒಂ ಚೂರು ಕೆದಕಿದರೆ ಅವರು ಜನಪ್ರಿಯ ಧಾರಾವಾಹಿಗಳ ನಿರ್ಮಾ ಪಕರೂ ಹೌದು. ಹಾಗಾಗಿ ಅವರ ಚಳುವಳಿ ನೋಡಿದವ ರೊಬ್ಬರು ಸಿನಿಮಾ ಪತ್ರಕರ್ತರೊಬ್ಬರ ಬಳಿ ಮಾತನಾಡುತ್ತ ‘ಅವಯ್ಯ ಹಿಂಗೆ ಹೇಳಿ ಸ್ಕೋಪ್ ತಗೋತಾನಲ್ಲ, ನಾನು ಅವರ ಧಾರಾವಾಹಿಗೆ ಸ್ಕ್ರಿಪ್ಟ್ ಬರೆದಿದ್ದೆ, ಡೈಲಾಗ್ ಬರೆದಿದ್ದೆ.

Vishweshwar Bhat Column: ಫೇಸ್‌ʼಬುಕ್‌ʼನಲ್ಲಿ ಜವಾಬ್ದಾರಿಯಿಂದ ಕಾಮೆಂಟ್‌ ಮಾಡಬೇಕು, ಏಕೆಂದರೆ...!

ಫೇಸ್‌ʼಬುಕ್‌ʼನಲ್ಲಿ ಜವಾಬ್ದಾರಿಯಿಂದ ಕಾಮೆಂಟ್‌ ಮಾಡಬೇಕು, ಏಕೆಂದರೆ...!

ಒಂದು ಬರಹದ ಸಾರಾಂಶ, ಅದರ ಆಳ ಮತ್ತು ಲೇಖಕರು ಹೇಳ ಹೊರಟಿರುವ ನಿಜವಾದ ಆಶಯ ಏನು ಎಂಬುದು ತಿಳಿಯಬೇಕಾದರೆ ಮೊದಲು ಆ ಲೇಖನವನ್ನು ಪೂರ್ತಿಯಾಗಿ ಓದಬೇಕು. ‘ನಾಳೆ ಲೇಖನ ಬಂದ ಬಳಿಕ, ಅದನ್ನು ಓದಿ, ಅರ್ಥೈಸಿಕೊಂಡು ನಂತರ ಕಾಮೆಂಟ್ ಮಾಡಬೇಕು’ ಎಂಬ ಪ್ರಾಥಮಿಕ ತಿಳಿವಳಿಕೆ ಮತ್ತು ಕನಿಷ್ಠ ಸೌಜನ್ಯವೂ ಇಂದಿನ ಅನೇಕ ಜಾಲತಾಣ ಬಳಕೆದಾರರಲ್ಲಿ ಇಲ್ಲದಂತಿರುವುದು ನಿಜಕ್ಕೂ ಬೇಸರದ ಸಂಗತಿ.

Vinayaka M Bhat Column: ಪ್ರಾರ್ಥನೆಗೊಲಿದ ಆಸನ, ಅಂತೂ ಶುರುವಾದ ಶಿವ ಶಾಸನ

ಪ್ರಾರ್ಥನೆಗೊಲಿದ ಆಸನ, ಅಂತೂ ಶುರುವಾದ ಶಿವ ಶಾಸನ

ಹೈಕಮಾಂಡ್ ನಲ್ಲಿ ಶಿವಕುಮಾರ್ ಅವರಿಗಿರುವ ಖದರು ಅದು. ಜೈಲಿನಿಂದ ಬಿಡುಗಡೆಯಾಗಿ ಇನ್ನೂ ಎಂಟೊಂಬತ್ತು ತಿಂಗಳುಗಳು ಕಳೆದಿರಲಿಲ್ಲ, ಗಂಭೀರವಾದ ಆರೋಪವನ್ನೆದುರಿಸುತ್ತಿರುವ, ಜೈಲು ವಾಸ ಮಾಡಿಬಂದ ಶಿವಕುಮಾರ್ ಅವರನ್ನು ಎಲ್ಲರಿಗೂ ಅಚ್ಚರಿಯಾಗುವಂತೆ ರಾಜ್ಯಾಧ್ಯಕ್ಷರ ಹುದ್ದೆಗೆ ಸೋನಿಯಾ ಗಾಂಧಿ ನೇಮಕ ಮಾಡಿದ್ದರು.

Leena Joshi Column: ಕಂಪನಿ ತೋರಿಸುವ ಆದಾಯ ನೋಡಿ ಮೋಸ ಹೋಗಬೇಡಿ !

ಕಂಪನಿ ತೋರಿಸುವ ಆದಾಯ ನೋಡಿ ಮೋಸ ಹೋಗಬೇಡಿ !

ಹರ್ಷದ್ ಮೆಹ್ತಾ ಬ್ಯಾಂಕಿಂಗ್ ರಸೀದಿಗಳನ್ನು ಕೃತಕವಾಗಿ ಸೃಷ್ಟಿಸಿ ಮಾರುಕಟ್ಟೆಯನ್ನು ನಿಯಂತ್ರಿಸಿ ದರೆ, ರಾಜೇಶ್ ಮೆಹ್ತಾ ಕಂಪನಿಯ ಆದಾಯದ ಲೆಕ್ಕಪುಸ್ತಕಗಳನ್ನೇ ಕೃತಕವಾಗಿ ಸೃಷ್ಟಿಸಿ ಹೂಡಿಕೆದಾರ ರನ್ನು ದಾರಿ ತಪ್ಪಿಸಿದ್ದಾರೆ. ಭಾರತದ ಮಾರುಕಟ್ಟೆ ನಿಯಂತ್ರಕ ಸೆಬಿ ದೇಶದ ಅತಿ ದೊಡ್ಡ ಚಿನ್ನದ ಆಭರಣ ರಫ್ತು ಕಂಪನಿಯಾದ ರಾಜೇಶ್ ಎಕ್ಸ್‌ಪೋರ್ಟ್ಸ್‌ ಮತ್ತು ಅದರ ಮುಖ್ಯಸ್ಥ ರಾಜೇಶ್ ಮೆಹ್ತಾ ವಿರುದ್ಧ ಭಾರೀ ಆರ್ಥಿಕ ಅವ್ಯವಹಾರಗಳ ಆರೋಪ ಹೊರಿಸಿದೆ.

Dr Jagadeesh Maane Column: ವಿಶ್ವದ ರಕ್ಷಣಾ ರಂಗದಲ್ಲಿ ಭಾರತದ ಸಿಂಹಗರ್ಜನೆ !

ವಿಶ್ವದ ರಕ್ಷಣಾ ರಂಗದಲ್ಲಿ ಭಾರತದ ಸಿಂಹಗರ್ಜನೆ !

ಇಂದು ಸಾಮಾನ್ಯವಾಗಿ ಯಾವ ದೇಶ ಹೆಚ್ಚು ಪ್ರಮಾಣದಲ್ಲಿ ಆಯುಧಗಳನ್ನು ಖರೀದಿಸ ತ್ತದೆಯೋ, ಆ ದೇಶದ ಸುತ್ತ ಯುದ್ಧದ ಕಾರ್ಮೋಡಗಳು ಅಥವಾ ಭದ್ರತಾ ಆತಂಕಗಳು ದಟ್ಟ ವಾಗಿರುವುದನ್ನು ಕಾಣಬಹುದು. ಆ ರಾಷ್ಟ್ರದ ಸುತ್ತಲಿನ ಸಮಸ್ಯೆಗಳು, ಗಡಿ ವಿವಾದಗಳು ಮತ್ತು ಭದ್ರತಾ ಸವಾಲುಗಳು ಹೆಚ್ಚಾದಂತೆ ಅದರ ಆಯುಧ ಖರೀದಿಯೂ ಹೆಚ್ಚಾಗುತ್ತದೆ. ಹೀಗಾಗಿ ಸಮಸ್ಯೆಗಳು ಮತ್ತು ಆಯುಧ ಖರೀದಿ ಒಂದಕ್ಕೊಂದು ಪೂರಕವಾಗಿ ಸಾಗುವ ಸ್ಥಿತಿ ನಿರ್ಮಾಣ ವಾಗುತ್ತದೆ.

Prof R G Hegde Column: ಜಿರಲೆ ಕ್ರಾಂತಿ ನಡೆಯುವುದಿಲ್ಲ, ಆದರೆ..

Prof R G Hegde Column: ಜಿರಲೆ ಕ್ರಾಂತಿ ನಡೆಯುವುದಿಲ್ಲ, ಆದರೆ..

ದೊಡ್ಡ ಗುರಿ ಹೊತ್ತು ಬಂದಂತಿರುವ ಜಿರಲೆಗೊಂದು ನಿರಾಸೆಯ ಮಾತು ಹೇಳಿಯೇ ಮುಂದೆ ಹೋಗಬೇಕು. ಏನೆಂದರೆ, ನಮ್ಮ ದೇಶದಲ್ಲಿ ಜಿರಲೆ ಬರಲಿ, ಚೇಳು ಬರಲಿ, ಶ್ರೀಲಂಕಾ, ನೇಪಾಳ, ಬಾಂಗ್ಲಾದೇಶ ಪಾಕಿಸ್ತಾನ ಮಾದರಿಯ ‘ಕ್ರಾಂತಿ’ ನಡೆಯುವುದಿಲ್ಲ. ನಮ್ಮ ವೈವಿಧ್ಯತೆಗಳೇ ದೇಶವನ್ನು ಕಾಪಾಡುತ್ತವೆ. ನಮ್ಮ ಮೂರು ರಾಜಕೀಯ ಹೋಳುಗಳು: ಮಧ್ಯಮ ವರ್ಗ, ಹಿಂದು ಳಿದ ವರ್ಗಗಳು, ಮತ್ತು ಮೈನಾರಿಟಿಗಳು ಇವು ದೇವರೇ ಬಂದು ಹೇಳಿದರೂ ಕೂಡ ‘ಕ್ಷಿಪ್ರ ಕ್ರಾಂತಿ’ಗಾಗಿ ಒಂದೇ ವೇದಿಕೆಯ ಮೇಲೆ ಬರುವುದಿಲ್ಲ.

Mohan Vishwa Column: 1991ರ ಆರ್ಥಿಕ ದುರಂತಕ್ಕೆ ಹೊಣೆ ಯಾರು ?

Mohan Vishwa Column: 1991ರ ಆರ್ಥಿಕ ದುರಂತಕ್ಕೆ ಹೊಣೆ ಯಾರು ?

ಮೋದಿಯವರು ಚುನಾಯಿತ ಪ್ರಧಾನ ಮಂತ್ರಿಯಾಗಿ ನೆಹರು ದಾಖಲೆಯನ್ನು ಮುರಿದಿದ್ದಾರೆ, ಈ ಸಮಯದಲ್ಲಿಎಪ್ಪತ್ತು ವರ್ಷದ ಹಿಂದಿನ ನೆಹರು ಭಾರತದ ಬಗ್ಗೆ ಈಗಿನ ಭಾರತದ ಹೋಲಿಕೆ ಮಾಡುವುದು ಸರಿಯಲ್ಲ ಎಂಬ ಟೊಳ್ಳು ವಾದವನ್ನು ಕಾಂಗ್ರೆಸ್ಸಿಗರು ಮುಂದಿಡು ತ್ತಿದ್ದಾರೆ. ಆದರೆ 1947ರಿಂದ 1991ರ ವರೆಗೂ ಸತತವಾಗಿ ನಾಲ್ಕು ದಶಕಗಳ ಕಾಲ ಭಾರತ ವನ್ನಾಳಿದ ನೆಹರು ಕುಟುಂಬಸ್ಥರು ದೇಶಕ್ಕಾಗಿ ಮಾಡಿದ್ದಾದರೂ ಏನು? 1991ರ ಆರ್ಥಿಕ ಉದಾರೀಕರಣದ ಬಗ್ಗೆ ತಮ್ಮ ಬೆನ್ನು ತಟ್ಟಿಕೊಳ್ಳುವ ಕಾಂಗ್ರೆಸ್ಸಿಗರು, 1991ರಲ್ಲಿ ಭಾರತದಲ್ಲಿ ಉಂಟಾದ ಆರ್ಥಿಕ ಬಿಕ್ಕಟ್ಟಿಗೆ ಕಾರಣ ಯಾರೆಂಬುದರ ಚರ್ಚೆಗೆ ಬರುವುದಿಲ್ಲ.

Vishweshwar Bhat Column: ಭಾರತದ ಪೆನ್‌ ಉದ್ಯಮ

Vishweshwar Bhat Column: ಭಾರತದ ಪೆನ್‌ ಉದ್ಯಮ

ಸ್ವಾತಂತ್ರ್ಯಾ ನಂತರದ ದಿನಗಳಲ್ಲಿ, ಅಂದರೆ 1950ರ ದಶಕದ ಕೊನೆಯ ಅವಧಿಯಲ್ಲಿ ಭಾರತೀಯ ಪೆನ್ ಉದ್ಯಮವು ದೇಶೀಯ ಮಾರುಕಟ್ಟೆಯಲ್ಲಿ ಭದ್ರ ಅಡಿಪಾಯವನ್ನು ಹಾಕಿ ಕೊಂಡಿತು. ಆ ಸಮಯದಲ್ಲಿ ದೇಶದ ಒಳಗಿನ ಮಾರುಕಟ್ಟೆಯ ಬರೋಬ್ಬರಿ 60 ಕೋಟಿ ರುಪಾಯಿಗಳಿಗೂ ಹೆಚ್ಚಿನ ವಹಿವಾಟಿನಿಂದ ಈ ಉದ್ಯಮವು ತನ್ನ ಬಲವನ್ನು ಪ್ರದರ್ಶಿಸಿತ್ತು.

Roopa Gururaj Column: ಹಕ್ಕು ಮರುಸ್ಥಾಪಿಸಿದ ತೀರ್ಪು

Roopa Gururaj Column: ಹಕ್ಕು ಮರುಸ್ಥಾಪಿಸಿದ ತೀರ್ಪು

ಆಸ್ತಿಗಾಗಿ ಹಿರಿಯರನ್ನು ನಿರ್ಲಕ್ಷಿಸುವ ಇಂದಿನ ತಲೆಮಾರಿಗೆ ಈ ತೀರ್ಪು ಒಂದು ಗಂಭೀರ ಎಚ್ಚರಿಕೆಯಾಗಿದೆ. ನಂಬಿಕೆ ದ್ರೋಹ ಎಸಗುವ ಕುಟುಂಬದ ಸದಸ್ಯರ ವಿರುದ್ಧ ಕಾನೂನು ಯಾವ ರೀತಿ ರಕ್ಷಣೆಯಾಗಿ ನಿಲ್ಲುತ್ತದೆ ಎಂಬುದಕ್ಕೆ ಈ ಘಟನೆಯೇ ಪ್ರತ್ಯಕ್ಷ ಸಾಕ್ಷಿ. 89ರ ಹರೆಯ ದಲ್ಲೂ ಹೌಸಾಬಾಯಿಯವರು ತೋರಿದ ಕಾನೂನು ಪ್ರಜ್ಞೆ ಮತ್ತು ಧೈರ್ಯ ಸಮಾಜದ ಎಲ್ಲ ಹಿರಿಯರಿಗೂ ಪ್ರೇರಣೆಯಾಗಿದೆ.

M J Akbar Column: ಪಾಕಿಸ್ತಾನವೆಂಬ ಇಸ್ಲಾಮಿಕ್‌ ದೇಶ ಮರಣ ಹೊಂದಿದ್ದು 1971ರಲ್ಲಿ !

ಪಾಕಿಸ್ತಾನವೆಂಬ ಇಸ್ಲಾಮಿಕ್‌ ದೇಶ ಮರಣ ಹೊಂದಿದ್ದು 1971ರಲ್ಲಿ !

ಮೋತಿಲಾಲರು ಐಷಾರಾಮಿ ಮನುಷ್ಯ. ಆದರೆ ಅವರ ವಿಸ್ತರಿತ ಕುಟುಂಬಗಳಿಗೆ ಅಂತಹುದೇ ಐಷಾರಾಮಿ ಬದುಕಿನ ಮಟ್ಟವನ್ನು ಕಾಯ್ದುಕೊಳ್ಳುವುದು ಕಷ್ಟವಾಗುತ್ತಿತ್ತು. ಆದರೂ ಅವರು ಮೇಲ್ಮಟ್ಟದ ಜೀವನ ವಿಧಾನವನ್ನೇ ಅನುಸರಿಸುತ್ತಿದ್ದರು. ಬಿ.ಕೆ.ನೆಹರೂ ಅವರ ತಂದೆ ಬ್ರಜ್‌ ಲಾಲ್ ಆಕ್ಸ್ ಫರ್ಡ್‌ನ ಎಕ್ಸ್‌ಟರ್ ಕಾಲೇಜಿನಲ್ಲಿ ಎಂ.ಎ. ಪಡೆದು, ಬ್ಯಾರಿಸ್ಟರ್ ಆಗಲು ಯತ್ನಿಸಿ, ನಂತರ ಇಂಪೀರಿಯಲ್ ಸಿವಿಲ್ ಸರ್ವೀಸ್ ಆಯ್ಕೆ ಮಾಡಿಕೊಂಡು, ಬ್ರಿಟಿಷ್ ಸರಕಾರದ ಹಣಕಾಸು ಇಲಾಖೆಗೆ ನೇಮಕಗೊಂಡರು.

Shashidhara Halady Column: ಕಾಡಿನ ನಡುವೆ ಕಟ್ಟಿಕೊಂಡ ಬದುಕು

Shashidhara Halady Column: ಕಾಡಿನ ನಡುವೆ ಕಟ್ಟಿಕೊಂಡ ಬದುಕು

ಹಸಿರನ್ನೇ ಒಡಲಲ್ಲಿ ತುಂಬಿಕೊಂಡಿರುವ ಕುಚ್ಚೂರು, ಸಂಜೆ ಹೊತ್ತಿನ ಕೆಂಬಣ್ಣದ ಲೋಕದಲ್ಲಿ, ಬೇರೊಂದೇ ವರ್ಣಛಾಯೆಯಲ್ಲಿ ಮಿಂದೇಳುತ್ತದೆ; ಮನದಲ್ಲಿ ಕಾವ್ಯಾನು ಭವವನ್ನೇ ಮೂಡಿ ಸುತ್ತದೆ. ಕೊನೆಯಲ್ಲಿ ಸೂರ್ಯ ಮರೆಯಾದಾಗ, ಆ ಸುತ್ತಲಿನ ಹಸಿರು ಲೋಕವು ಕತ್ತಲಿನಲ್ಲಿ ನಿಧಾನ ಅದೃಶ್ಯವಾಗುವಾಗ, ನೋಡುವವರ ಮನಸ್ಸಿನಲ್ಲಿ ಒಂದು ರೀತಿಯ ವಿಷಾದ ತುಂಬಿದ ಅನುಭವ, ಆ ವಿಷಾದದಲ್ಲೂ ಸೂರ್ಯಾಸ್ತದ ಅದ್ಭುತ ನೋಟ ಕಣ್ತುಂಬಿಕೊಂಡ ತೃಪ್ತಭಾವ.

Shishir Hegde Column: ಎಲ್ಲರ ತಲೆಯೊಳಗಿರುವ ಅವನೊಬ್ಬ ವಿಚಿತ್ರ ಇತಿಹಾಸಕಾರ !

ಎಲ್ಲರ ತಲೆಯೊಳಗಿರುವ ಅವನೊಬ್ಬ ವಿಚಿತ್ರ ಇತಿಹಾಸಕಾರ !

ಊಟ ಮುಗಿಯುವ ಹೊತ್ತಿಗೆ ಎಲ್ಲರೂ ಒಪ್ಪಿಕೊಂಡ ಒಂದೇ ವಿಷಯವೆಂದರೆ- ಉಳಿದವ ರೆಲ್ಲರ ನೆನಪು ಸರಿಯಿಲ್ಲ - ನನಗೆ ನೆನಪಿದ್ದದ್ದೇ ಸರಿ! ಆದರೇನು ಗೊತ್ತಾ.. ಆ ಪಂಕ್ತಿಯಲ್ಲಿ ಯಾರೊ ಬ್ಬರೂ ಸುಳ್ಳು ಹೇಳುತ್ತಿರಲಿಲ್ಲ. ಪ್ರತಿಯೊಬ್ಬರೂ ಸತ್ಯವನ್ನೇ ಹೇಳುತ್ತಿದ್ದರು- ಅವರವರ ನೆನಪಿ ನಲ್ಲಿ ಇದ್ದ ಹಾಗೆ. ತನಗೆ ನೆನಪಿದ್ದದ್ದೇ ಸತ್ಯ ಎನ್ನುವುದನ್ನು ಯಾರೊಬ್ಬರೂ ಬಿಟ್ಟು ಕೊಡಲು ತಯಾರಿರಲಿಲ್ಲ!

‌Roopa Gururaj Column: ತಾಯಂದಿರ ಆರೋಗ್ಯಕ್ಕಾಗಿ ಮಿಡಿದ ಮಾತೃ ಹೃದಯಿ ರಾಣಿ ನಿಲೂಫರ್

ತಾಯಂದಿರ ಆರೋಗ್ಯಕ್ಕಾಗಿ ಮಿಡಿದ ಮಾತೃ ಹೃದಯಿ ರಾಣಿ ನಿಲೂಫರ್

1949ರಲ್ಲಿ ಆಕೆಯ ಕನಸಿನ ಕೂಸಾದ ನಿಲೂಫರ್ ಹಾಸ್ಪಿಟಲ್ ಫಾರ್ ವುಮೆನ್ ಅಂಡ್ ಚಿಲ್ಡ್ರನ್ ತಲೆಯೆತ್ತಿತು. ನಿಲೂಫರ್ ಕೇವಲ ಹಣ ನೀಡಿ ಸುಮ್ಮನಾಗಲಿಲ್ಲ; ಸ್ವತಃ ತಾನೇ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳ ಯೋಗಕ್ಷೇಮ ವಿಚಾರಿಸುತ್ತಿದ್ದರು. ಬಡ ಹೆಣ್ಣುಮಕ್ಕಳಿಗೆ ಉಚಿತ ಚಿಕಿತ್ಸೆ, ಉನ್ನತ ಗುಣಮಟ್ಟದ ಹೆರಿಗೆ ಸೌಲಭ್ಯ ಸಿಗುವಂತೆ ನೋಡಿಕೊಂಡರು.

Vishweshwar Bhat Column: ವಿಜಿಗೀಷು ಪ್ರವೃತ್ತಿ ಎಂದರೇನು ?

Vishweshwar Bhat Column: ವಿಜಿಗೀಷು ಪ್ರವೃತ್ತಿ ಎಂದರೇನು ?

ರಾಜಕಾರಣಿಗಳನ್ನು ಬಿಡಿ, ಸಾಹಿತಿಗಳು, ವಿದ್ವಾಂಸರು ಸಹ ಸಾಮಾನ್ಯವಾಗಿ ಯಾರೂ ಆ ಪದವನ್ನು ಬಳಸುವುದಿಲ್ಲ. ಹೀಗಾಗಿ ಜೋಶಿಯವರ ಬಾಯಿಂದ ಆ ಪದ ಬಂದಾಗ ನನಗೆ ಅದು ವಿಶೇಷ ಎನಿಸಿತು. ‘ವಿಜಿಗೀಷು’ ಎಂಬುದು ಸಂಸ್ಕೃತ ಮೂಲದ ಅತ್ಯಂತ ಶಕ್ತಿಯುತ ವಾದ ಪದಗುಚ್ಛ.

Keshava Prasad B Column: ನೆಹರೂ-ಮೋದಿ ಆರ್ಥಿಕ ನೀತಿ: ನಮಗೀಗ ಯಾವುದಗತ್ಯ ?

ನೆಹರೂ-ಮೋದಿ ಆರ್ಥಿಕ ನೀತಿ: ನಮಗೀಗ ಯಾವುದಗತ್ಯ ?

ಮೋದಿನಾಮಿಕ್ಸ್ ಎಂಬುದು ಆರ್ಥಿಕ ವಿವೇಚನೆ ಮತ್ತು ಕಲ್ಯಾಣ ನೀತಿಗಳ ಮಿಶ್ರಣ ವಾಗಿದೆ. ರಾಜಕೀಯವಾಗಿ ಇದರ ಮೇಲೆ ಅನೇಕ ಅಪಪ್ರಚಾರಗಳು ನಡೆದರೂ, ವಾಸ್ತವದಲ್ಲಿ ಇದು ಭಾರತದ ಮ್ಯಾಕ್ರೋ-ಎಕನಾಮಿಕ್ ಸ್ಥಿರತೆಯನ್ನು ಬಲಪಡಿಸಿದೆ. ಆದರೆ, ಹೆಚ್ಚುತ್ತಿರುವ ಆರ್ಥಿಕ ಅಸಮಾನತೆ, ಗ್ರಾಮೀಣ ಭಾಗದ ಆರ್ಥಿಕ ಒತ್ತಡ ಮತ್ತು ಯುವಕ ರಿಗೆ ಗುಣಮಟ್ಟದ ಉದ್ಯೋಗ ಸೃಷ್ಟಿಯ ಸವಾಲುಗಳನ್ನು ಸಂಪೂರ್ಣವಾಗಿ ನಿವಾರಿಸಲು ಸರಕಾರ ಇನ್ನೂ ಶ್ರಮಿಸಬೇಕಾಗಿದೆ.

Dr N Someshwara Column: ಬ್ರಿಟಿಷರ ಅಹಂಕಾರವನ್ನು ಮಣಿಸಿದ ಬಂಗಾಳದ ಇಕ್ಕುಳ

ಬ್ರಿಟಿಷರ ಅಹಂಕಾರವನ್ನು ಮಣಿಸಿದ ಬಂಗಾಳದ ಇಕ್ಕುಳ

ಅಪರೂಪದ ಬುದ್ಧಿಮತ್ತೆಯ ವಿದ್ಯಾರ್ಥಿಯಾಗಿದ್ದ ಕೇದಾರನಾಥ್, ಲಭ್ಯವಿದ್ದ ಬಹುತೇಕ ಎಲ್ಲ ಪ್ರಮುಖ ಶೈಕ್ಷಣಿಕ ಗೌರವಗಳನ್ನು ತಮ್ಮದಾಗಿಸಿಕೊಂಡರು. ಅವರು ಬರೋಬ್ಬರಿ ಎಂಟು ಚಿನ್ನದ ಪದಕಗಳನ್ನು ಗಳಿಸಿದರು. ಅತ್ಯಂತ ಕಠಿಣ ವಿಭಾಗವಾದ ಸೂಲಗಿತ್ತಿ ತಂತ್ರಜ್ಞಾನದಲ್ಲಿ (ಮಿಡ್‌ ವೈಫರಿ) ನೂರಕ್ಕೆ ನೂರು ಅಂಕಗಳನ್ನು ಪಡೆದದ್ದು ಗಮನೀಯ ಹಾಗೂ ಗಣನೀಯ.

Janamejaya Umarji Column: ಶರಣರ ಹಿಂದೂ ಸಮಾವೇಶಕ್ಕೆ ಯಾಕಿಷ್ಟು ಭಯ ?

ಶರಣರ ಹಿಂದೂ ಸಮಾವೇಶಕ್ಕೆ ಯಾಕಿಷ್ಟು ಭಯ ?

ಕನ್ನೇರಿ ಶ್ರೀ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಜಮಖಂಡಿ, ಬಬಲೇಶ್ವರ, ಶಹಾಪುರ, ಗದಗ ಸೇರಿದಂತೆ ಹಲವೆಡೆ ನಡೆದ ಈ ಸಮಾವೇ ಶಗಳು ಕನಿಷ್ಟ ಹತ್ತು ಹತ್ತು ಸಾವಿರ ಜನರನ್ನು ಸೆಳೆದಿವೆ. ಈಗ ಬಸವಣ್ಣನವರ ಕರ್ಮಭೂಮಿಯಾದ ಬಸವಕಲ್ಯಾಣದಲ್ಲಿ ಇದೇ ಸಮಾವೇಶ ನಡೆಯಲಿರುವುದು ಚರ್ಚೆಯನ್ನು ಮತ್ತಷ್ಟು ತೀವ್ರಗೊಳಿಸಿದೆ.

Harish Kera Column: ಅಲೋಕ ಮತ್ತು ಭೈರವ: ಬುದ್ಧ ಮತ್ತು ಶಿವ

Harish Kera Column: ಅಲೋಕ ಮತ್ತು ಭೈರವ: ಬುದ್ಧ ಮತ್ತು ಶಿವ

ಅಮೆರಿಕದ ಟೆಕ್ಸಾಸ್‌ನ ಫೋರ್ಟ್ ವರ್ತ್‌ನಲ್ಲಿರುವ ಹಂಗ್ ಡಾವೊ ವಿಪಸ್ಸನ ಭವನ ಕೇಂದ್ರದ ಗುರು. ಕೋಲ್ಕತಾದ ವಿಮಾನ ನಿಲ್ದಾಣದ ಬಳಿ ಈ ಬಿಕ್ಕುಗಳ ತಂಡವನ್ನು ಬೀದಿನಾಯಿಗಳ ಗುಂಪೊಂದು ಸೇರಿಕೊಂಡಿತು. ಸ್ವಲ್ಪ ದೂರ ನಡೆದು ಉಳಿದೆಲ್ಲ ನಾಯಿಗಳು ಹಿಂದುಳಿದರೆ, ಕಂದು-ಬಿಳಿ ಬಣ್ಣದ, ಹಣೆಯ ಮೇಲೆ ಹೃದಯದಾಕಾರದ ಬಿಳಿ ಬಣ್ಣವಿದ್ದ ಈ ನಾಯಿ ಬಿಡದೇ ಹಿಂಬಾಲಿಸಿತು. ಏಳೆಂಟು ದಿನಗಳ ಕಾಲ ಜತೆಗೇ ಸಾಗಿದ ಈ ನಾಯಿಯನ್ನು ಕಂಡು ಈತ ಎಲ್ಲರಂತಲ್ಲ, ಇದರಲ್ಲೇನೋ ವಿಶೇಷತೆ ಇದೆ ಎಂದೆನಿಸಿತು.

Gururaj Gantihole Column: ಸೆಮಿ ಕಂಡಕ್ಟರ್‌ ಚಿಪ್:‌ ಮಾಡದಿರಲಿ ಕರ್ನಾಟಕ ತಪ್ಪು

ಸೆಮಿ ಕಂಡಕ್ಟರ್‌ ಚಿಪ್:‌ ಮಾಡದಿರಲಿ ಕರ್ನಾಟಕ ತಪ್ಪು

ಸೆಮಿಕಂಡಕ್ಟರ್ ಚಿಪ್ಟ್ ಎಂದರೆ ಸರಳವಾಗಿ ಹೇಳಬೇಕೆಂದರೆ, ನಮ್ಮ ಸ್ಮಾರ್ಟ್ʼಫೋನ್‌ಗಳು, ಕಂಪ್ಯೂ ಟರ್‌ಗಳು ಮತ್ತು ಕಾರುಗಳಂತಹ ಆಧುನಿಕ ಎಲೆಕ್ಟ್ರಾನಿಕ್ ಸಾಧನಗಳ ಮೆದುಳು. ನಮ್ಮ ತಲೆಗೂದಲಿನ ಎಳೆಯಷ್ಟೇ ಸೂಕ್ಷ ವಾಗಿರುವ ಈ ಸಿಲಿಕಾನ್ ತುಣುಕುಗಳು ವಿದ್ಯುತ್ ಪ್ರವಾಹವನ್ನು ನಿಯಂತ್ರಿಸುವ ಮೂಲಕ ಸಾಧನಗಳು ಹೇಗೆ ಕೆಲಸ ಮಾಡಬೇಕೆಂದು ನಿರ್ಧರಿಸುತ್ತವೆ.

Vishweshwar Bhat Column: ಗ್ರಾಹಕರ ಮನಸ್ಸು

Vishweshwar Bhat Column: ಗ್ರಾಹಕರ ಮನಸ್ಸು

ಪ್ರತಿಯೊಬ್ಬ ಗ್ರಾಹಕನೂ ಯಾವುದೋ ಒಂದು ಸಮಸ್ಯೆಯನ್ನು ಎದುರಿಸುತ್ತಿರುತ್ತಾನೆ ಅಥವಾ ಒಂದು ನಿರ್ದಿಷ್ಠ ಗುರಿಯನ್ನು ತಲುಪಲು ಬಯಸುತ್ತಿರುತ್ತಾನೆ. ನೀವು ಉತ್ಪನ್ನವನ್ನು ಮಾರುವಾಗ, ವಾಸ್ತವ ವಾಗಿ ನೀವು ಆ ಸಮಸ್ಯೆಗೆ ಪರಿಹಾರವನ್ನು ಮಾರುತ್ತಿರುತ್ತೀರಿ. ಗ್ರಾಹಕರಿಗೆ ತೂಕ ಇಳಿಸುವ ಯಂತ್ರ ಬೇಕಾಗಿರುವುದಿಲ್ಲ, ಅವರಿಗೆ ‘ಆರೋಗ್ಯಕರ ಮತ್ತು ಸುಂದರ ದೇಹ’ ಬೇಕಾಗಿರುತ್ತದೆ. ಅಂದರೆ, ಅವರು ಕೊನೆಯಲ್ಲಿ ಸಿಗುವ ಫಲಿತಾಂಶವನ್ನು (Result) ಖರೀದಿಸುತ್ತಿದ್ದಾರೆ.

Loading...