ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ವಾಣಿಜ್ಯ

Gold Price Today On 17th March:  ಮತ್ತೆ ಏರಿಕೆ ಕಂಡ ಚಿನ್ನದ ದರ; ಬೆಂಗಳೂರಿನಲ್ಲಿ ಇಂದಿನ ಬೆಲೆಯೆಷ್ಟಿದೆ?

ಮತ್ತೆ ಏರಿಕೆ ಕಂಡ ಚಿನ್ನದ ದರ; ಬೆಂಗಳೂರಿನಲ್ಲಿ ಇಂದಿನ ಬೆಲೆಯೆಷ್ಟಿದೆ?

Gold Rate Today: ಹಲವು ದಿನಗಳಿಂದ ಇಳಿಕೆಯಿಂದ ಚಿನ್ನದ ದರದಲ್ಲಿ ಇಂದು ಏರಿಕೆಯಾಗಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ದರ 110 ರೂ. ಏರಿಕೆಯಾಗಿ, 14,540 ರೂ. ಇದ್ದರೆ, 24 ಕ್ಯಾರಟ್‌ನ ಒಂದು ಗ್ರಾಂಗೆ 120 ರೂ. ಏರಿಕೆಯಾಗಿ, 15,862 ರೂ.ಆಗಿದೆ.

ಹೆನ್ಕೆಲ್‌ ನ ಅತ್ಯಾಧುನಿಕ ಅಪ್ಲಿಕೇಶನ್ ಸೆಂಟರ್ ಆರಂಭ; ಬೆಂಗಳೂರಿನಲ್ಲಿ ವಿಶ್ವದರ್ಜೆಯ ಎಲೆಕ್ಟ್ರಾನಿಕ್ಸ್ ಕೋ- ಇನ್ನೋವೇಶನ್ ಹಬ್ ಸ್ಥಾಪನೆ

ಹೆನ್ಕೆಲ್‌ ನ ಅತ್ಯಾಧುನಿಕ ಅಪ್ಲಿಕೇಶನ್ ಸೆಂಟರ್ ಆರಂಭ

ಈ ನೂತನ ಘಟಕವು ಸಹಯೋಗದ ಆವಿಷ್ಕಾರ ಕೇಂದ್ರವಾಗಿ (ಕೊಲ್ಯಾಬೊರೇಟಿವ್ ಇನ್ನೋ ವೇಷನ್ ಹಬ್) ಕಾರ್ಯನಿರ್ವಹಿಸಲಿದ್ದು, ಇಲ್ಲಿ ಹೆನ್ಕೆಲ್ ತಜ್ಞರು ಮತ್ತು ಗ್ರಾಹಕರು ಸೇರಿ ಮುಂದಿನ ಪೀಳಿಗೆಯ ಎಲೆಕ್ಟ್ರಾನಿಕ್ಸ್ ಉತ್ಪನ್ನ ಉತ್ಪಾದನೆಗಾಗಿ ಸುಧಾರಿತ ಅದೆಸಿವ್ ಮತ್ತು ಶಾಖ ನಿರ್ವಹಣಾ ಉತ್ಪನ್ನಗಳನ್ನು ಜಂಟಿಯಾಗಿ ಅಭಿವೃದ್ಧಿಪಡಿಸಬಹುದು, ಪರೀಕ್ಷಿಸ ಬಹುದು ಮತ್ತು ಮೌಲ್ಯೀಕರಿಸಬಹುದಾಗಿದೆ.

ಚಿಲ್ಲರೆ ವ್ಯಾಪಾರಿಗಳಿಗಾಗಿ ಅಲ್ಗೋ ಟ್ರೇಡಿಂಗ್ ಸರಳಗೊಳಿಸಲು ‘ಸ್ಮಾರ್ಟ್‌ಇನ್ವೆಸ್ಟ್’ ಬಿಡುಗಡೆ ಮಾಡಿದ ಲೆಮನ್

ಟ್ರೇಡಿಂಗ್ ಸರಳಗೊಳಿಸಲು ‘ಸ್ಮಾರ್ಟ್‌ಇನ್ವೆಸ್ಟ್’ ಬಿಡುಗಡೆ ಮಾಡಿದ ಲೆಮನ್

ಸಾಂಪ್ರದಾಯಿಕವಾಗಿ ಅಲ್ಗಾರಿದಮಿಕ್ ಟ್ರೇಡಿಂಗ್ ಒಂದು ಸಂಕೀರ್ಣ ಮತ್ತು ವಿಶಿಷ್ಟ ಉತ್ಪನ್ನ ವಾಗಿಯೇ ಉಳಿದಿದೆ. ತಮ್ಮದೇ ಆದ ತಂತ್ರಗಳನ್ನು ವಿನ್ಯಾಸಗೊಳಿಸಲು, ಪರೀಕ್ಷಿಸಲು ಮತ್ತು ಕಾರ್ಯಗತಗೊಳಿಸಲು ತಾಂತ್ರಿಕ ಪರಿಣತಿ ಹೊಂದಿರುವ ಅತ್ಯಾಧುನಿಕ ಟ್ರೇಡರ್‌ಗಳಿಗೆ ಮಾತ್ರ ಇದು ಹೆಚ್ಚಾಗಿ ಸೀಮಿತವಾಗಿತ್ತು

ದೇಶದಲ್ಲಿ ಎಲ್‌ಪಿಜಿ ಕೊರತೆಯಾಗಿಲ್ಲ, ವಿತರಣೆಗೆ ಬೇಕಾಗುವಷ್ಟು ಇದೆ: ಕೇಂದ್ರ ಸರ್ಕಾರ ಸ್ಪಷ್ಟನೆ

ದೇಶದಲ್ಲಿ ಎಲ್‌ಪಿಜಿ ಕೊರತೆ ಇಲ್ಲ

ಪಶ್ಚಿಮ ಏಷ್ಯಾ ಸಂಘರ್ಷದ ಪರಿಣಾಮವಾಗಿ ದೇಶದಲ್ಲಿ ಏಕಾಏಕಿ ತೈಲ, ಅಡುಗೆ ಅನಿಲ ಬೇಡಿಕೆ ಹೆಚ್ಚಿತ್ತು. ಇದರ ಪರಿಣಾಮ ವಿತರಣೆಯಲ್ಲಿ ಉಂಟಾದ ವ್ಯತ್ಯಯದಿಂದ ದೇಶಾದ್ಯಂತ ತೈಲ, ಅಡುಗೆ ಅನಿಲ ಬಿಕ್ಕಟ್ಟು ಕಾಣಿಸಿಕೊಂಡಿದೆ. ದೇಶದಲ್ಲಿ ಎಲ್‌ಪಿಜಿ ಕೊರತೆ ಇಲ್ಲ. ಈ ಕುರಿತು ವಿತರಕರಿಂದ ಯಾವುದೇ ದೂರುಗಳು ಬಂದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆಯನ್ನು ನೀಡಿದೆ.

ಭಾರತಕ್ಕೆ ಎಲ್‌ಪಿಜಿ ಹೊತ್ತು ತರುವ ನೌಕೆಗೆ ಮಾತ್ರ  ಹೊರ್ಮುಜ್ ಜಲಸಂಧಿಯ ದಾರಿ ಬಿಡಲು ಇರಾನ್ ಒಪ್ಪಿಗೆ

ಹೊರ್ಮುಜ್ ಜಲಸಂಧಿಯಲ್ಲಿ ಭಾರತಕ್ಕೆ ದಾರಿ ಬಿಡಲು ಒಪ್ಪಿದ ಇರಾನ್

ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಉಂಟಾಗಿರುವ ಉದ್ವಿಗ್ನತೆಯ ಪರಿಣಾಮ ಇರಾನ್ ಹೊರ್ಮುಜ್ ಜಲಸಂಧಿಯಲ್ಲಿ ಸರಕು ಸಾಗಣೆಗೆ ಅಡ್ಡಿ ಪಡಿಸಿತ್ತು. ಆದರೆ ಇದೀಗ ಅದು ಭಾರತಕ್ಕೆ ಸರಕು ಸಾಗಿಸುವ ನೌಕೆಗಳನ್ನು ಬಿಡಲು ಒಪ್ಪಿಕೊಂಡಿದೆ. ಈ ಕುರಿತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಭಾನುವಾರ ತಿಳಿಸಿದ್ದಾರೆ.

HSBC Gold ETF ಅನ್ನು ಪ್ರಾರಂಭಿಸಿದ HSBC ಮ್ಯೂಚುವಲ್ ಫಂಡ್

HSBC Gold ETF ಅನ್ನು ಪ್ರಾರಂಭಿಸಿದ HSBC ಮ್ಯೂಚುವಲ್ ಫಂಡ್

HSBC Gold ETF ಮತ್ತು HSBC Gold ETF ಫಂಡ್ ಆಫ್ ಫಂಡ್‌ನ NFO ಅವಧಿಯಲ್ಲಿ, ಹೂಡಿಕೆ ದಾರರು ಕನಿಷ್ಠ ರೂ. 5,000 ಹೂಡಿಕೆ ಮಾಡಬಹುದು ಮತ್ತು ನಂತರ ರೂ. 1ರ ಗುಣಾಕಾರ ಗಳಲ್ಲಿ ಹೆಚ್ಚುವರಿ ಹೂಡಿಕೆ ಮಾಡಬಹುದು. HSBC Gold ETF ನ ಹೂಡಿಕೆ ಉದ್ದೇಶವೆಂದರೆ ವೆಚ್ಚಗಳನ್ನು ಕಡಿತಗೊಳಿಸುವ ಮೊದಲು ದೇಶೀಯ ಚಿನ್ನದ ಬೆಲೆಯ ಕಾರ್ಯಕ್ಷಮತೆಯನ್ನು ಸಾಧ್ಯವಾದಷ್ಟು ಅನುಸರಿಸುವಂತಹ ಆದಾಯವನ್ನು ಪಡೆಯು ವುದು, ಆದರೆ ಟ್ರ್ಯಾಕಿಂಗ್ ದೋಷಗಳು ಇರಬಹುದು

ಎಲ್‌ಪಿಜಿ ಸಿಲಿಂಡರ್‌ ಬುಕಿಂಗ್‌ ನಿಯಮದಲ್ಲಿ ಬದಲಾವಣೆ; ಸಬ್ಸಿಡಿ ಪಡೆಯಲು ಇ-ಕೆವೈಸಿ ಕಡ್ಡಾಯ?

ಇ-ಕೆವೈಸಿ ಮಾಡದಿದ್ರೆ ಎಲ್‌ಪಿಜಿ ಸಬ್ಸಿಡಿ ಸಿಗೋದಿಲ್ಲ

ಗೃಹ ಬಳಕೆಯ ಅಡುಗೆ ಅನಿಲ ಬಳಸುವ ಗ್ರಾಹಕರು ಇ-ಕೆವೈಸಿ ಮಾಡುವಂತೆ ಕೇಂದ್ರ ಸರ್ಕಾರ ಹೇಳಿದೆ. ಒಂದು ವೇಳೆ ಇ-ಕೆವೈಸಿ ಮಾಡದೇ ಇದ್ದರೆ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ (ಪಿಎಂಯುವೈ) 105.1 ಮಿಲಿಯನ್‌ಗಿಂತಲೂ ಹೆಚ್ಚು ಫಲಾನುಭವಿಗಳಿಗೆ ಸಿಗುವ ಸಬ್ಸಿಡಿ ಸಿಗದೇ ಇರಬಹುದು. ಇದಕ್ಕಾಗಿ ಇ-ಕೆವೈಸಿ ಮಾಡುವಂತೆ ಸಲಹೆ ನೀಡಿದೆ.

Stock Market: ಸೆನ್ಸೆಕ್ಸ್‌ 1,000 ಅಂಕ ಜಿಗಿತ, ಕೊನೆಗೂ ಅಬ್ಬರಿಸಿದ ಗೂಳಿ; ಕಾರಣವೇನು?

ಷೇರು ಮಾರುಕಟ್ಟೆಯಲ್ಲಿ ಗೂಳಿ ಅಬ್ಬರ: ಬದಲಾವಣೆಗೆ ಕಾರಣವೇನು?

Share Market: ಸತತ ಮೂರು ದಿನಗಳಿಂದ ಕುಸಿತಕ್ಕೀಡಾಗಿದ್ದ ಬೆಂಚ್‌ಮಾರ್ಕ್‌ ಇಂಡೆಕ್ಸ್‌ ಸೆನ್ಸೆಕ್ಸ್‌ ಮತ್ತು ನಿಫ್ಟಿ ಸೋಮವಾರ ಗಣನೀಯವಾಗಿ ಚೇತರಿಸಿಕೊಂಡಿದೆ. ಉಭಯ ಸೂಚ್ಯಂಕಗಳು ಇತ್ತೀಚೆಗೆ ಇಳಿಮುಖವಾಗಿದ್ದರಿಂದ ಹೂಡಿಕೆದಾರರು ವಾಲ್ಯೂ ಬೈಯಿಂಗ್‌ ಮಾಡಿದರು. ಉತ್ತಮ ಗುಣಮಟ್ಟದ ಷೇರುಗಳನ್ನು ಖರೀದಿಸಿದರು. ಇದರ ಪರಿಣಾಮ ಸೂಚ್ಯಂಕಗಳು ಜಿಗಿದಿವೆ.

ಹೊರ್ಮುಜ್‌ ಜಲಸಂಧಿ ದಾಟಿ ಗುಜರಾತ್‌ ಕರಾವಳಿ ತಲುಪಿದ ಎಲ್‌ಪಿಜಿ ಹೊತ್ತ  ಶಿವಾಲಿಕ್‌ ಹಡಗು; ಅಡುಗೆ ಅನಿಲ ಸಮಸ್ಯೆಗೆ ಇನ್ನಾದರೂ ಬೀಳುತ್ತಾ ಬ್ರೇಕ್‌?

ಗುಜರಾತ್‌ ಕರಾವಳಿ ತಲುಪಿದ ಎಲ್‌ಪಿಜಿ ಹೊತ್ತ ಶಿವಾಲಿಕ್‌ ಹಡಗು

ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಆರಂಭವಾಗುತ್ತಿದ್ದಂತೆ ಇರಾನ್‌ ಹೊರ್ಮುಜ್‌ ಜಲಸಂಧಿಯನ್ನು ಸ್ಥಗಿತಗೊಳಿಸಿದೆ. ಇದರಿಂದ ಭಾರತ ಸೇರಿದಂತೆ ಹಲವು ದೇಶಗಳ ಕಚ್ಚಾ ತೈಲ, ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಅದಾಗ್ಯೂ ಭಾರತದ ಸಂಧಾನದ ಬಳಿಕ ಇತ್ತೀಚೆಗೆ ಯಶಸ್ವಿಯಾಗಿ ದಾಟಿದ್ದ ಎಲ್‌ಪಿಜಿಯನ್ನು ಹೊತ್ತ ಶಿವಾಲಿಕ್‌ ಹಡಗು ಗುಜರಾತ್‌ ಕರಾವಳಿಗೆ ಬಂದು ಮುಟ್ಟಿದೆ.

ಇಂದು ಅಥವಾ ನಾಳೆ ಭಾರತೀಯ ಬಂದರು ತಲುಪಲಿದೆ ಎಲ್‌ಪಿಜಿ

ಶೀಘ್ರದಲ್ಲೇ ಭಾರತಕ್ಕೆ ಬರಲಿದೆ ಎಲ್‌ಪಿಜಿ

ಲೈಬೀರಿಯಾ ಧ್ವಜದೊಂದಿಗೆ ಸೌದಿ ಅರೇಬಿಯಾದಿಂದ ಹೊರಟಿದ್ದ ತೈಲ ಟ್ಯಾಂಕರ್ ಹೊರ್ಮುಜ್ ಜಲಸಂಧಿ ದಾಟಿ ಬಂದಿದ್ದು, ಮುಂಬೈ ತಲುಪಿದೆ. ಹಡಗು ಟ್ರ್ಯಾಕಿಂಗ್ ದತ್ತಾಂಶದ ಪ್ರಕಾರ ತೈಲ ಟ್ಯಾಂಕರ್ ಸ್ಮಿರ್ನಿ 1 ಮಿಲಿಯನ್ ಬ್ಯಾರೆಲ್‌ಗಳಷ್ಟು ಸೌದಿ ಅರೇಬಿಯನ್ ಕಚ್ಚಾ ತೈಲವನ್ನು ಹೊತ್ತುಕೊಂಡು ಭಾರತದ ಬಂದರು ಸಮೀಪ ಬಂದಿದೆ. ಇನ್ನು ಎಲ್‌ಪಿಜಿ ಹೊತ್ತ ಟ್ಯಾಂಕರ್ ಸೋಮವಾರ ಅಥವಾ ಮಂಗಳವಾರ ಭಾರತೀಯ ಬಂದರು ತಲುಪುವ ಸಾಧ್ಯತೆ ಇದೆ.

Gold Price Today On 16th March:  ಸ್ವರ್ಣ ಪ್ರಿಯರಿಗೆ ಸಿಹಿ ಸುದ್ದಿ; ಚಿನ್ನದ ಬೆಲೆಯಲ್ಲಿ ಮತ್ತೆ ಇಳಿಕೆ

ಸ್ವರ್ಣ ಪ್ರಿಯರಿಗೆ ಸಿಹಿ ಸುದ್ದಿ; ಚಿನ್ನದ ಬೆಲೆಯಲ್ಲಿ ಮತ್ತೆ ಇಳಿಕೆ

ಚಿನ್ನದ ದರದಲ್ಲಿಂದು ಮತ್ತೆ ಇಳಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ದರದಲ್ಲಿ 45 ರೂ. ಇಳಿಕೆಯಾಗಿ 14,590 ರೂ. ಆಗಿದೆ. 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ದರದಲ್ಲಿ 49 ರೂ. ಇಳಿಕೆಯಾಗಿ 15,917 ರೂ. ಆಗಿದೆ.

ವಾಹನ ಮಾಲಕರ ಗಮನಕ್ಕೆ... ಫಾಸ್​ಟ್ಯಾಗ್ ವಾರ್ಷಿಕ ಪಾಸ್ ಶುಲ್ಕದಲ್ಲಿ ಏರಿಕೆ; ಹೊಸ ದರ ಪಟ್ಟಿ ಇಲ್ಲಿದೆ

ಫಾಸ್​ಟ್ಯಾಗ್ ವಾರ್ಷಿಕ ಪಾಸ್ ಶುಲ್ಕದಲ್ಲಿ ಏರಿಕೆ

FASTag Annual Pass: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ 2026-27ರ ಹಣಕಾಸು ವರ್ಷಕ್ಕೆ ಫಾಸ್​ಟ್ಯಾಗ್ ವಾರ್ಷಿಕ ಪಾಸ್‌ ಶುಲ್ಕವನ್ನು ಹೆಚ್ಚಿಸಿದೆ. ಏಪ್ರಿಲ್ 1ರಿಂದ ಖಾಸಗಿ ಕಾರುಗಳು, ಜೀಪ್, ವ್ಯಾನ್​ಗಳ ವಾರ್ಷಿಕ ಪಾಸ್​ನ ಬೆಲೆ 3,000 ರುಪಾಯಿಯಿಂದ 3,075 ರುಪಾಯಿಗೆ ಏರಿಕೆಯಾಗಲಿದೆ.

ಚುಪಾ ಚುಪ್ಸ್‌ನಿಂದ ‘ಕ್ರೇಜಿ ರಾಫೆ’ ಬಿಡುಗಡೆ: ತಿನ್ನಲು ಮಜಾ ನೀಡುವ ಉದ್ದನೆಯ, ಸುರುಳಿಯಾಕಾರದ ಜೆಲ್ಲಿಯೊಂದಿಗೆ ಸ್ನ್ಯಾಕಿಂಗ್ ಲೋಕಕ್ಕೆ ಹೊಸ ಮೆರುಗು!

ಚುಪಾ ಚುಪ್ಸ್‌ನಿಂದ ‘ಕ್ರೇಜಿ ರಾಫೆ’ ಬಿಡುಗಡೆ

ಪರ್ಫೆಟ್ಟಿ ವಾನ್ ಮೆಲ್ಲೆ ಸಂಸ್ಥೆಯ ಜನಪ್ರಿಯ ಬ್ರ್ಯಾಂಡ್ 'ಚುಪಾ ಚುಪ್ಸ್', ತನ್ನ ಹೊಸ ಉತ್ಪನ್ನ ‘ಕ್ರೇಜಿ ರಾಫೆ’ ಅನ್ನು ಮಾರುಕಟ್ಟೆಗೆ ಪರಿಚಯಿಸುವ ಮೂಲಕ ಸ್ನ್ಯಾಕಿಂಗ್ ಲೋಕದಲ್ಲಿ ಸಂಚಲನ ಮೂಡಿಸಿದೆ. ಉದ್ದನೆಯ, ಸುರುಳಿಯಾಕಾರದ ಮತ್ತು ಮಧ್ಯದಲ್ಲಿ ಕ್ರೀಮ್ ತುಂಬಿದ ಈ ಜೆಲ್ಲಿಯು ಸಾಮಾನ್ಯ ತಿಂಡಿ ತಿನ್ನುವ ಸಮಯವನ್ನು ಒಂದು ಸಾಹಸಮಯ ಆಟದಂತೆ ಬದಲಾಯಿಸುತ್ತದೆ

Gold Price Today On 15th March: ಚಿನ್ನದ ದರದಲ್ಲಿಂದು ಯಥಾಸ್ಥಿತಿ ; ಬೆಂಗಳೂರಿನಲ್ಲಿ ಬೆಲೆಯೆಷ್ಟಿದೆ?

ಚಿನ್ನದ ದರದಲ್ಲಿಂದು ಯಥಾಸ್ಥಿತಿ ; ಬೆಂಗಳೂರಿನಲ್ಲಿ ಬೆಲೆಯೆಷ್ಟಿದೆ?

ಹಲವು ದಿನಗಳಿಂದ ಇಳಿಕೆಯಲ್ಲಿದ್ದ ಚಿನ್ನದ ಬೆಲೆಯಲ್ಲಿಂದು ಯಥಾಸ್ಥಿತಿ ಕಂಡು ಬಂದಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ದರ 14,635 ರೂ. ಇದೆ. ಇನ್ನು 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ದರ 15,966 ರೂ. ಇದೆ.

ಮಾತುಕತೆಗೆ ಇರಾನ್ ಸಿದ್ಧವಾದರೂ ನಮಗೆ ಯುದ್ಧ ತೃಪ್ತಿ ಕೊಟ್ಟಿಲ್ಲ ಎಂದ ದೊಡ್ಡಣ್ಣ

ಇರಾನ್‌ನ ಖಾರ್ಗ್ ದ್ವೀಪದ ಮೇಲೆ ದಾಳಿ: ಡೊನಾಲ್ಡ್ ಟ್ರಂಪ್ ಎಚ್ಚರಿಕೆ

ಕಳೆದ ಎರಡು ವಾರಗಳಿಂದ ಇರಾನ್ ಮೇಲೆ ನಿರಂತರ ಆಕ್ರಮಣ ಮಾಡುತ್ತಿರುವ ಅಮೆರಿಕಗೆ ಯುದ್ಧ ಇನ್ನೂ ತೃಪ್ತಿ ಕೊಟ್ಟಿಲ್ಲವಂತೆ. ಅದಕ್ಕಾಗಿ ಇರಾನ್‌ನ ಖಾರ್ಗ್ ದ್ವೀಪದ ಮೇಲೆ ಮತ್ತಷ್ಟು ದಾಳಿ ಮಾಡಲು ಸಿದ್ಧತೆ ನಡೆಸುತ್ತಿರುವುದಾಗಿ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಹೀಗಾಗಿ ಇರಾನ್ ಈಗ ಮಾತುಕತೆಗೆ ಸಿದ್ಧವಾಗಿದ್ದರೂ ಕೂಡ ಯುದ್ಧ ನಿಲ್ಲುವ ಲಕ್ಷಣ ಕಾಣುತ್ತಿಲ್ಲ.

LPG vs PNG: ದೇಶದಲ್ಲಿ ಎಲ್‌ಪಿಜಿಗೆ ಕೊರತೆಯಾಗಿದ್ದರೂ ಪಿಎನ್‌ಜಿ ಪೂರೈಕೆ ಸರಾಗ; ಇದು ಸಾಧ್ಯವಾಗಿದ್ದು ಹೇಗೆ? ಏನು ಇವೆರಡರ ವ್ಯತ್ಯಾಸ?

ದೇಶದಲ್ಲಿ ಎಲ್‌ಪಿಜಿಗೆ ಕೊರತೆಯಾಗಿದ್ದರೂ ಪಿಎನ್‌ಜಿ ಪೂರೈಕೆ ಸರಾಗ; ಹೇಗೆ?

ಹೊರ್ಮುಜ್‌ ಜಲಸಂಧಿ ಸ್ಥಗಿತಗೊಂಡಿದ್ದು, ಇಂಧನ, ಅಡುಗೆ ಅನಿಲ ಸರಾಗ ಸಾಗಾಟಕ್ಕೆ ತಡೆ ಬಿದ್ದಿದೆ. ಇದರಿಂದ ಭಾರತದಲ್ಲೂ ದ್ರವೀಕೃತ ಪೆಟ್ರೋಲಿಯಂ ಅನಿಲ ಸಿಲಿಂಡರ್‌ಗೆ ಕೊರತೆ ಉಂಟಾಗಿದೆ. ಮತ್ತೊಂದೆಡೆ ದೇಶದಲ್ಲಿ ಪೈಪ್ಡ್ ನ್ಯಾಚುರಲ್ ಗ್ಯಾಸ್ ಪೂರೈಕೆ ಸರಾಗವಾಗಿದೆ. ಹಾಗಾದರೆ ಪಿಎನ್‌ಜಿಗೆ ಸಮಸ್ಯೆ ಆಗಿಲ್ಲವೇಕೆ? ನಿಮ್ಮೆಲ್ಲ ಪ್ರಶ್ನೆಗೆ ಇಲ್ಲಿದೆ ಉತ್ತರ.

ಭಾರತದ ಅಡುಗೆಮನೆಗೆ ತಟ್ಟಿದ ಮಧ್ಯಪ್ರಾಚ್ಯ ಸಂಘರ್ಷದ ಬಿಸಿ: ಎಲ್‌ಪಿಜಿ ಕೊರತೆ ಇಲ್ಲ ಎಂದ ಕೇಂದ್ರ ಸರ್ಕಾರ

ಭಾರತದ ಅಡುಗೆಮನೆಗೆ ತಟ್ಟಿದ ಮಧ್ಯಪ್ರಾಚ್ಯ ಸಂಘರ್ಷದ ಬಿಸಿ

Middle East conflict: ಭಾರತವು ವಿಶ್ವದ ಎರಡನೇ ಅತಿ ದೊಡ್ಡ ಎಲ್‌ಪಿಜಿ ಖರೀದಿದಾರ ರಾಷ್ಟ್ರವಾಗಿದ್ದು, ಸುಮಾರು ಶೇಕಡಾ 90ರಷ್ಟು ಹೊರ್ಮುಜ್ ಜಲಸಂಧಿ ಮೂಲಕ ಬರುತ್ತದೆ. ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಎಲ್‌ಪಿಜಿ ಪೂರೈಕೆ ಇನ್ನೂ ಕಳವಳಕಾರಿ ವಿಷಯವಾಗಿ ಮುಂದುವರಿದಿದೆ.

Ranbir Kapoor: ಮನ ಪ್ರಾಜೆಕ್ಸ್ಟ್‌ ಗೆ ಬ್ಯ್ರಾಂಡ್‌ ಅಂಬಾಸಿಡರ್ ಆಗಿ ಕೈ ಜೋಡಿಸಿದ ರಣಬೀರ್ ಕಪೂರ್

ಮನ ಪ್ರಾಜೆಕ್ಸ್ಟ್‌ ಗೆ ಬ್ಯ್ರಾಂಡ್‌ ಅಂಬಾಸಿಡರ್ ಆಗಿ ರಣಬೀರ್ ಕಪೂರ್

ನವೀಕರಿಸಿದ ಬ್ರ್ಯಾಂಡ್ ಗುರುತು, ಸ್ಥಳ, ಡಿಸೈನ್‌, ಪ್ರಕೃತಿ, ಕಲ್ಪನೆ ಒಳಗೊಂಡ ವಸತಿ ಪರಿಸರವನ್ನು ಸೃಷ್ಟಿಸುವ ತತ್ವದೊಂದಿಗೆ ಅರ್ಥಪೂರ್ಣ ಜೀವನ ಅನುಭವ ನೀಡುವುದನ್ನು ಪ್ರತಿನಿಧಿಸುತ್ತದೆ. ಪ್ರಕೃತಿಯ ಜೊತೆ ಜೀವನ ಎಂಬ ನಂಬಿಕೆಯೊಂದಿಗೆ ಸಂಸ್ಥೆಯು ಚಿಂತನಶೀಲ ವಾಸ್ತುಶಿಲ್ಪ, ಪರಿಸರ ಸಂವೇದನೆ ಮತ್ತು ಸಮಕಾಲೀನ ಜೀವನ ಶೈಲಿಯ ಅಗತ್ಯಗಳನ್ನು ಸಂಯೋಜಿಸುವ ಸಮುದಾಯಗಳನ್ನು ಅಭಿವೃದ್ಧಿ ಪಡಿಸುವುದನ್ನು ಮುಂದುವರೆಸಿದೆ.

ಯುಪಿಎ ತೈಲ ಬಾಂಡ್‌ನ ಅಸಲು ಬಡ್ಡಿ ಕಟ್ಟಿದ್ದ ಎನ್‌ಡಿಎ!

ಯುಪಿಎ ಅವಧಿಯ ತೈಲ ಬಾಂಡ್‌ ಹೇಗೆ ಪ್ರಯೋಜನಕಾರಿಯಾಗಿತ್ತು?

Oil Bonds: 18 ವರ್ಷಗಳ ಹಿಂದೆ 2008ರ ಜುಲೈಯಲ್ಲಿ ತೈಲ ದರ 147 ಡಾಲರ್‌ಗೆ ಏರಿಕೆಯಾಗಿತ್ತು. 2014ರ ಜನವರಿಯಲ್ಲಿ ಸಬ್ಸಿಡಿಯುಕ್ತ ಎಲ್‌ಪಿಜಿ ಸಿಲಿಂಡರ್‌ಗೆ 400 ರುಪಾಯಿ ಮತ್ತು ಸಬ್ಸಿಡಿ ರಹಿತ ಸಿಲಿಂಡರ್‌ ದರ 1,200 ರುಪಾಯಿ ದಾಟಿತ್ತು! ಆಗ ಯುಪಿಎ ಸರ್ಕಾರಕ್ಕೆ ತೈಲ ದರ ಏರಿಕೆಯ ಆಘಾತದಿಂದ ಜನರನ್ನು ರಕ್ಷಿಸಲು ತೈಲ ಬಾಂಡ್‌ ಸಹಕಾರಿಯಾಗಿತ್ತು.

4 ಸುತ್ತಿನ ಮಾತುಕತೆ, ಪ್ರಧಾನಿಯಿಂದ ಸಂಧಾನ; ಹೊರ್ಮುಜ್ ಜಲಸಂಧಿ ದಾಟಲು ಭಾರತದ 2 ಹಡಗುಗಳಿಗೆ ಇರಾನ್‌ ಅನುಮತಿ ನೀಡಿದ್ದೇಗೆ?

ರಾಜತಾಂತ್ರಿಕ ಗೆಲುವು: ಹೊರ್ಮುಜ್ ದಾಟಿದ ಭಾರತೀಯ ಹಡಗುಗಳು

ಪಶ್ಚಿಮ ಏಷ್ಯಾದ ಯುದ್ಧ ಪರಿಸ್ಥಿತಿಯ ನಡುವೆಯೇ ಹೊರ್ಮುಜ್ ಜಲಸಂಧಿಯಲ್ಲಿ ಸಿಲುಕಿಕೊಂಡಿದ್ದ ಭಾರತದ ಶಿಪ್ಪಿಂಗ್ ಕಾರ್ಪೊರೇಶನ್‌ಗೆ ಸೇರಿದ ಶಿವಾಲಿಕ್ ಮತ್ತು ನಂದಾದೇವಿ ಎಲ್‌ಪಿಜಿ ಟ್ಯಾಂಕರ್‌ಗಳು ಸುರಕ್ಷಿತವಾಗಿ ಜಲಸಂಧಿಯನ್ನು ದಾಟಿವೆ. ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರ ರಾಜತಾಂತ್ರಿಕ ಪ್ರಯತ್ನಗಳ ಫಲವಾಗಿ ಈ ಯಶಸ್ಸು ಸಾಧ್ಯವಾಗಿದ್ದು, ಭಾರತಕ್ಕೆ ಅಡುಗೆ ಅನಿಲ ಸರಬರಾಜಿನ ಆತಂಕ ತಗ್ಗಿಸಿದೆ.

Gold Price Today On 14th March: ಸ್ವರ್ಣ ಪ್ರಿಯರಿಗೆ ಗುಡ್‌ ನ್ಯೂಸ್‌; ಚಿನ್ನದ ದರದಲ್ಲಿ ಭಾರೀ ಇಳಿಕೆ

ಸ್ವರ್ಣ ಪ್ರಿಯರಿಗೆ ಗುಡ್‌ ನ್ಯೂಸ್‌; ಚಿನ್ನದ ದರದಲ್ಲಿ ಭಾರೀ ಇಳಿಕೆ

ಚಿನ್ನದ ಬೆಲೆಯಲ್ಲಿಂದು ಇಳಿಕೆಯಾಗಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ದರದಲ್ಲಿ 95 ರೂ. ಇಳಿಕೆ ಕಂಡು 14,635 ರೂ. ಇದೆ. ಇನ್ನು 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ದರದಲ್ಲಿ 103 ರೂ. ಇಳಿಕೆಯಾಗಿ 15,966 ರೂ. ಇದೆ.

ಇರಾನ್ ಸಂಘರ್ಷದಿಂದ ದೇಶದಲ್ಲಿ ಪೆಟ್ರೋಲ್,  ಡೀಸೆಲ್ ಸಮಸ್ಯೆ ಕಾಡದೇ ಇದ್ದರೂ ಎಲ್‌ಪಿಜಿಗೆ ಕೊರತೆಯಾಗಿರುವುದೇಕೆ?

ದೇಶದಲ್ಲಿ ಎಲ್‌ಪಿಜಿ ಕೊರತೆ ಕಾಡುತ್ತಿರುವುದೇಕೆ?

ಯುಎಸ್ ಮತ್ತು ಇಸ್ರೇಲ್ ಸೇನಾ ಪಡೆಯು ದಾಳಿ ನಡೆಸಿರುವ ಪರಿಣಾಮ ಹೊರ್ಮುಜ್ ಜಲಸಂಧಿಯನ್ನು ಇರಾನ್ ಮುಚ್ಚಿದ್ದು, ಇದು ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬಿಕ್ಕಟ್ಟನ್ನು ಉಂಟು ಮಾಡಿದೆ. ದೇಶದಲ್ಲಿ ಮೇಲ್ನೋಟಕ್ಕೆ ಪೆಟ್ರೋಲ್, ಡೀಸೆಲ್ ಸಮಸ್ಯೆ ಕಾಡುತ್ತಿಲ್ಲ. ಆದರೆ ಅಡುಗೆ ಅನಿಲ ಕೊರತೆ ಸ್ಪಷ್ಟವಾಗಿ ಗೋಚರವಾಗುತ್ತಿದೆ. ಯಾಕೆ ಈ ಸಮಸ್ಯೆ ಎನ್ನುವುದಕ್ಕೆ ಇಲ್ಲಿದೆ ಮಾಹಿತಿ.

ಸಂಘರ್ಷದ ಕಾಲದಲ್ಲಿ ದೇಶದ ಆರ್ಥಿಕ ಸ್ಥಿರತೆ ಕಾಪಾಡಲು 1 ಲಕ್ಷ ಕೋಟಿ ರೂ. ಮೀಸಲು: ನಿರ್ಮಲಾ ಸೀತಾರಾಮನ್

ದೇಶದಲ್ಲಿ ರಸಗೊಬ್ಬರದ ಕೊರತೆ ಇಲ್ಲ

ಪಶ್ಚಿಮ ಏಷ್ಯಾ ಭಾಗದಲ್ಲಿ ಉಂಟಾಗಿರುವ ಉದ್ವಿಗ್ನತೆಯ ಪರಿಣಾಮ ದೇಶದಲ್ಲಿ ಉಂಟಾಗಬಹುದಾದ ಆರ್ಥಿಕ ಹೊಡೆತವನ್ನು ತಪ್ಪಿಸಲು 1 ಲಕ್ಷ ಕೋಟಿ ರೂ. ಮೀಸಲಿರಿಸುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು. ಶುಕ್ರವಾರ ಸಂಸತ್ತಿನಲ್ಲಿ ಮಾತನಾಡಿದ ಅವರು ಇದು ಭಾರತವು ಜಾಗತಿಕ ಹಿನ್ನಡೆಗಳನ್ನು ಎದುರಿಸಲು ಸಹಾಯ ಮಾಡಲಿದೆ ಎಂದು ತಿಳಿಸಿದರು.

ಹೊರ್ಮುಜ್‌ ಜಲಸಂಧಿ ದಾಟಿ ಭಾರತದತ್ತ ಹೊರಟ 40,000 ಮೆಟ್ರಿಕ್‌ ಟನ್‌ ಎಲ್‌ಪಿಜಿ ಹೊತ್ತ ಹಡಗು

ಹೊರ್ಮುಜ್‌ ಜಲಸಂಧಿ ದಾಟಿ ಭಾರತದತ್ತ ಹೊರಟ ಎಲ್‌ಪಿಜಿ ಹೊತ್ತ ಹಡಗು

Strait of Hormuz: ಬೃಹತ್‌ ಪ್ರಮಾಣದ ಎಲ್‌ಪಿಜಿಯನ್ನು ಹೊತ್ತು ಇರಾನ್‌ನ ಹೊರ್ಮುಜ್‌ ಜಲಸಂಧಿ ದಾಟಿ ಭಾರತದ ಹಡಗು ನಮ್ಮ ಕರಾವಳಿ ತೀರದತ್ತ ಬರುತ್ತಿದೆ. ಇದು ಶೀಘ್ರದಲ್ಲೇ ಭಾರತದ ಕರಾವಳಿ ಸೇರುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.

Loading...