ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ವಾಣಿಜ್ಯ

ಸಂಘರ್ಷದ ಕಾಲದಲ್ಲಿ ದೇಶದ ಆರ್ಥಿಕ ಸ್ಥಿರತೆ ಕಾಪಾಡಲು 1 ಲಕ್ಷ ಕೋಟಿ ರೂ. ಮೀಸಲು: ನಿರ್ಮಲಾ ಸೀತಾರಾಮನ್

ದೇಶದಲ್ಲಿ ರಸಗೊಬ್ಬರದ ಕೊರತೆ ಇಲ್ಲ

ಪಶ್ಚಿಮ ಏಷ್ಯಾ ಭಾಗದಲ್ಲಿ ಉಂಟಾಗಿರುವ ಉದ್ವಿಗ್ನತೆಯ ಪರಿಣಾಮ ದೇಶದಲ್ಲಿ ಉಂಟಾಗಬಹುದಾದ ಆರ್ಥಿಕ ಹೊಡೆತವನ್ನು ತಪ್ಪಿಸಲು 1 ಲಕ್ಷ ಕೋಟಿ ರೂ. ಮೀಸಲಿರಿಸುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು. ಶುಕ್ರವಾರ ಸಂಸತ್ತಿನಲ್ಲಿ ಮಾತನಾಡಿದ ಅವರು ಇದು ಭಾರತವು ಜಾಗತಿಕ ಹಿನ್ನಡೆಗಳನ್ನು ಎದುರಿಸಲು ಸಹಾಯ ಮಾಡಲಿದೆ ಎಂದು ತಿಳಿಸಿದರು.

ಹೊರ್ಮುಜ್‌ ಜಲಸಂಧಿ ದಾಟಿ ಭಾರತದತ್ತ ಹೊರಟ 40,000 ಮೆಟ್ರಿಕ್‌ ಟನ್‌ ಎಲ್‌ಪಿಜಿ ಹೊತ್ತ ಹಡಗು

ಹೊರ್ಮುಜ್‌ ಜಲಸಂಧಿ ದಾಟಿ ಭಾರತದತ್ತ ಹೊರಟ ಎಲ್‌ಪಿಜಿ ಹೊತ್ತ ಹಡಗು

Strait of Hormuz: ಬೃಹತ್‌ ಪ್ರಮಾಣದ ಎಲ್‌ಪಿಜಿಯನ್ನು ಹೊತ್ತು ಇರಾನ್‌ನ ಹೊರ್ಮುಜ್‌ ಜಲಸಂಧಿ ದಾಟಿ ಭಾರತದ ಹಡಗು ನಮ್ಮ ಕರಾವಳಿ ತೀರದತ್ತ ಬರುತ್ತಿದೆ. ಇದು ಶೀಘ್ರದಲ್ಲೇ ಭಾರತದ ಕರಾವಳಿ ಸೇರುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.

ತೈಲ ಬೆಲೆ ಏರಿಕೆ, ಮಾರುಕಟ್ಟೆ ಕುಸಿತ: ಜಾಗತಿಕ ಆರ್ಥಿಕತೆಗೆ ಭಾರಿ ಪೆಟ್ಟು ಕೊಟ್ಟ ಇರಾನ್ ಯುದ್ಧ

ಇರಾನ್ ಯುದ್ಧದಿಂದ ತೈಲ ಬೆಲೆ ಏರಿಕೆ, ಜಾಗತಿಕ ಮಾರುಕಟ್ಟೆ ಕುಸಿತ

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ ಜಾಗತಿಕ ಆರ್ಥಿಕತೆಯ ಮೇಲೆ ಭಾರಿ ಪರಿಣಾಮ ಬೀರುತ್ತಿದೆ. ತೈಲ ಬೆಲೆ ಏರಿಕೆ, ಷೇರು ಮಾರುಕಟ್ಟೆಗಳ ಕುಸಿತ ಮತ್ತು ಸರಬರಾಜು ಸರಪಳಿಯ ವ್ಯತ್ಯಯದಿಂದ ಅನೇಕ ದೇಶಗಳಲ್ಲಿ ಆರ್ಥಿಕ ಅಸ್ಥಿರತೆ ಉಂಟಾಗಿದೆ. ಹೊರ್ಮುಜ್ ಜಲಸಂಧಿ ಬಂದ್ ಮಾಡುವುದಾಗಿ ಇರಾನ್ ನೀಡಿದ ಎಚ್ಚರಿಕೆ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಆತಂಕ ಹೆಚ್ಚಿಸಿದೆ.

ಸೆನ್ಸೆಕ್ಸ್‌ 1,470 ಅಂಕ ಪತನ; ಹೂಡಿಕೆದಾರರಿಗೆ 10 ಲಕ್ಷ ಕೋಟಿ ರುಪಾಯಿ ನಷ್ಟ

ಸೆನ್ಸೆಕ್ಸ್‌ 1,470, ನಿಫ್ಟಿ 488 ಅಂಕ ಪತನ; ಕಾರಣವೇನು?

Share Market Today: ಷೇರು ಪೇಟೆಯಲ್ಲಿ ಮತ್ತೆ ರಕ್ತಪಾತವಾಗಿದ್ದು, ಶುಕ್ರವಾರ (ಮಾರ್ಚ್‌ 14) ಸೆನ್ಸೆಕ್ಸ್‌ 1,470ಕ್ಕೂ ಹೆಚ್ಚು ಅಂಕ ಪತನವಾಗಿ 74,563ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ನಿಫ್ಟಿ 488 ಅಂಕ ಕಳೆದುಕೊಂಡು 23,151ಕ್ಕೆ ಸ್ಥಿರವಾಯಿತು. ಹೂಡಿಕೆದಾರರಿಗೆ 10 ಲಕ್ಷ ಕೋಟಿ ರುಪಾಯಿ ನಷ್ಟ ಉಂಟಾಯಿತು.

ದೇಶೀಯ ಎಲ್​ಪಿಜಿ ಉತ್ಪಾದನೆಯಲ್ಲಿ ಶೇಕಡಾ 30ರಷ್ಟು ಹೆಚ್ಚಳ; ಪ್ಯಾನಿಕ್ ಬುಕಿಂಗ್ ಬೇಡ ಎಂದ ಕೇಂದ್ರ

ದೇಶೀಯ ಎಲ್​ಪಿಜಿ ಉತ್ಪಾದನೆಯಲ್ಲಿ ಶೇಕಡಾ 30ರಷ್ಟು ಹೆಚ್ಚಳ

LPG Crisis: ದೇಶೀಯ ಎಲ್​ಪಿಜಿ ಉತ್ಪಾದನೆಯಲ್ಲಿ ಶೇ. 30ರಷ್ಟು ಏರಿಕೆಯಾಗಿದೆ. ಹೀಗಾಗಿ ಅಡುಗೆ ಅನಿಲ ಲಭ್ಯತೆ ಬಗ್ಗೆ ಯಾವುದೇ ರೀತಿಯ ಭಯ ಬೇಡ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಗೃಹ ಬಳಕೆಯ ಎಲ್‌ಪಿಜಿ ಸರಬರಾಜು ಎಂದಿನಂತೆ ಸರಾಗವಾಗಿ ನಡೆಯುತ್ತಿದೆ ಎಂದೂ ಮಾಹಿತಿ ನೀಡಿದೆ.

Via.com ಕಂಪನಿಯ ಬುಕಿಂಗ್‌: ವರ್ಷದಿಂದ ವರ್ಷಕ್ಕೆ ಶೇ.14% ರಷ್ಟು ಬೆಳವಣಿಗೆ

Via.com ಕಂಪನಿಯ ಬುಕಿಂಗ್‌: ಶೇ.14% ರಷ್ಟು ಬೆಳವಣಿಗೆ

ಜುಲೈ ಮತ್ತು ಜನವರಿ ತಿಂಗಳುಗಳು ನಿರಂತರವಾಗಿ ಪ್ಲಾಟ್‌ಫಾರ್ಮ್‌ಗೆ ಅತ್ಯಧಿಕ ಪ್ರಮಾ ಣದ ತಿಂಗಳುಗಳಾಗಿ ಹೊರಹೊಮ್ಮಿವೆ ಎಂಬುದಾಗಿ ಐತಿಹಾಸಿಕ ಬುಕಿಂಗ್‌ ಡೇಟಾ ತೋರಿಸುತ್ತಿದ್ದು, ಪ್ರತಿಯೊಂದೂ ಸರಾಸರಿ ಮಾಸಿಕ ಮಾನದಂಡಗಳಿಗಿಂತ ಗಮನಾರ್ಹ ವಾಗಿ ಉತ್ತಮ ಪ್ರದರ್ಶನವನ್ನು ನೀಡಿದೆ.

ಹೊರ್ಮುಜ್ ಜಲಸಂಧಿ ಬಿಕ್ಕಟ್ಟು: 8 ಎಲ್‌ಪಿಜಿ ಟ್ಯಾಂಕರ್‌ಗಳ ಸಂಚಾರಕ್ಕೆ ಇರಾನ್ ಜತೆ ಭಾರತದ ಮಾತುಕತೆ

ಹೊರ್ಮುಜ್ ಜಲಸಂಧಿಯಲ್ಲಿ ಸಿಲುಕಿದ 8 LPG ಟ್ಯಾಂಕರ್

ಮಧ್ಯಪ್ರಾಚ್ಯದ ಯುದ್ಧದ ಹಿನ್ನೆಲೆ ಹೊರ್ಮುಜ್ ಜಲಸಂಧಿ ಬಂದ್ ಆಗಿರುವುದರಿಂದ ಭಾರತಕ್ಕೆ ಬರಬೇಕಾದ 8 ಎಲ್‌ಪಿಜಿ ಟ್ಯಾಂಕರ್ ಹಡಗುಗಳು ಅಲ್ಲಿ ಸಿಲುಕಿಕೊಂಡಿವೆ. ಇದರಿಂದ ಭಾರತದಲ್ಲಿ ಅಡುಗೆ ಅನಿಲ ಪೂರೈಕೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ಸಮಸ್ಯೆಯನ್ನು ಬಗೆಹರಿಸಲು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಇರಾನ್ ಅಧಿಕಾರಿಗಳು ಸಹಕಾರ ನೀಡುತ್ತಿರುವುದರಿಂದ ಶೀಘ್ರದಲ್ಲೇ ಈ ಹಡಗುಗಳಿಗೆ ಸಂಚಾರಕ್ಕೆ ಅನುಮತಿ ಸಿಗುವ ನಿರೀಕ್ಷೆ ಇದೆ.

Cooking oil prices rise: ಅಡುಗೆ ಎಣ್ಣೆ ಬೆಲೆ ಏರಿಕೆ, ಗ್ರಾಹಕರಿಗೆ ಬರೆ

ಅಡುಗೆ ಎಣ್ಣೆ ಬೆಲೆ ಏರಿಕೆ, ಗ್ರಾಹಕರಿಗೆ ಬರೆ

ಮಾರುಕಟ್ಟೆ ಮೂಲಗಳ ಪ್ರಕಾರ, ಪ್ರಮುಖ ಬ್ರ್ಯಾಂಡ್‌ಗಳ ಅಡುಗೆ ಎಣ್ಣೆಯ ಬೆಲೆಯಲ್ಲಿ ಪ್ರತಿ ಲೀಟರ್‌ಗೆ ಸರಾಸರಿ ಲೀ. ಸಗಟು ದರ 10 ರಿಂದ 12 ರು.ರಷ್ಟು ಏರಿಕೆಯಾಗಿದೆ. ಕಳೆದ ತಿಂಗಳು ರು.15 ಏರಿಕೆಯಾಗಿತ್ತು. ಹಾಗಾಗಿ ಹಿಂದಿನ ದರಕ್ಕೆ ಹೋಲಿಸಿದರೆ ಒಟ್ಟು 25 ರು. ಏರಿಕೆ ಯಾದಂತಾಯಿತು.

ಹೊರ್ಮುಜ್ ಜಲಸಂಧಿಯಲ್ಲಿ 20 ತೈಲ ಟ್ಯಾಂಕರ್‌ ಸುರಕ್ಷಿತ ಸಾಗಣೆಗೆ ಇರಾನ್ ಜೊತೆ ಭಾರತ ಮಾತುಕತೆ

ತೈಲ ಟ್ಯಾಂಕರ್‌ ಸುರಕ್ಷಿತ ಸಾಗಣೆಗೆ ಇರಾನ್ ಜೊತೆ ಭಾರತ ಮಾತುಕತೆ

ಇಸ್ರೇಲ್ ಮತ್ತು ಯುಎಸ್ ಸೇನಾ ಪಡೆಯು ಇರಾನ್ ಮೇಲೆ ದಾಳಿ ನಡೆಸಿದ ಬಳಿಕ ಇರಾನ್ ಹೊರ್ಮುಜ್ ಜಲಸಂಧಿಯಲ್ಲಿ ಸರಕು ಸಾಗಣೆಗೆ ಅಡ್ಡಿ ಪಡಿಸಿದೆ. ಇದರಿಂದ ಭಾರತ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳಲ್ಲಿ ತೈಲ ಬಿಕ್ಕಟ್ಟು ಉಂಟಾಗಿದೆ. ಇದೀಗ ಈ ಜಲ ಸಂಧಿಯ ಮೂಲಕ ಭಾರತಕ್ಕೆ ಬರಬೇಕಿರುವ 20 ತೈಲ ಟ್ಯಾಂಕರ್ ಗಳಿಗೆ ಸುರಕ್ಷತೆ ಒದಗಿಸುವಂತೆ ಭಾರತ ಇರಾನ್ ಜೊತೆ ಮಾತುಕತೆ ನಡೆಸಿದ್ದು, ಇರಾನ್ ಇದಕ್ಕೆ ಒಪ್ಪಿಕೊಂಡಿದೆ ಎನ್ನಲಾಗಿದೆ.

ಸಾಲ ಮರಳಿಸುವಲ್ಲಿ ಆರ್ಥಿಕ ಶಿಸ್ತು, ಭಾರತದ ಸಾಲ ನೀಡಿಕೆಯಲ್ಲಿ ವಿಸ್ತರಣೆ: ಎಕ್ಸ್‌ಪೀರಿಯನ್ ವರದಿ

ಸಾಲ ಮರಳಿಸುವಲ್ಲಿ ಆರ್ಥಿಕ ಶಿಸ್ತು, ಭಾರತದ ಸಾಲ ನೀಡಿಕೆಯಲ್ಲಿ ವಿಸ್ತರಣೆ

ಚಿನ್ನದ ಸಾಲಗಳು, ಗೃಹ ಸಾಲಗಳು ಮತ್ತು ವಾಹನ ಸಾಲಗಳಂತಹ ಸುರಕ್ಷಿತ ಸಾಲಗಳಿಗೆ ಹೆಚ್ಚುತ್ತಿರುವ ಒಲವು ಈಗಿನ ಪ್ರವೃತ್ತಿಗಳಲ್ಲಿ ಒಂದಾಗಿದೆ. ಹೊಸ ಮೂಲಗಳಲ್ಲಿ ಸುರಕ್ಷಿತ ಸಾಲಗಳ ಪಾಲು 34% ಕ್ಕೆ ಏರಿದ್ದು, ಇದರ ಹೆಚ್ಚಳಕ್ಕೆ ಚಿನ್ನ ಮತ್ತು ವಸತಿ ಹಣಕಾಸುಗಾಗಿ ಬಲವಾದ ಬೇಡಿಕೆ ಬಂದಿರುವುದಾಗಿದೆ.

ಲಿಬರ್ಟಿ ಶೂಸ್–neOwn ಸಹಭಾಗಿತ್ವ: ಬೆಂಗಳೂರಿನಲ್ಲಿ ಮಕ್ಕಳ ಓದಿಗೆ ಪ್ರೋತ್ಸಾಹ

ಲಿಬರ್ಟಿ ಶೂಸ್–neOwn ಸಹಭಾಗಿತ್ವ

neOwn ಸಂಸ್ಥೆಯನ್ನು ಕ್ರಾಂತಿ ಗಡಾ, ಶೆಮಾರು ಎಂಟರ್‌ಟೈನ್‌ಮೆಂಟ್‌ನ ಮಾಜಿ ಸಿಒಒ, ಸ್ಥಾಪಿಸಿದ್ದಾರೆ. ಅವರು ಐಡಿಯಾಬಾಜ್ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ, ಲಿಬರ್ಟಿ ಶೂಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ಅನುಪಮ್ ಬನ್ಸಲ್ ಅವರ ಗಮನ ಸೆಳೆದಿದ್ದರು. ನಂತರ ನಡೆದ ಚರ್ಚೆಗಳ ಮೂಲಕ ಈ ಸಹಭಾಗಿತ್ವ ರೂಪುಗೊಂಡಿತು.

ಭಾರತೀಯರಿಂದ ತಮ್ಮ ಭಾಷೆ ಬಳಕೆಯ ಪ್ರಯಾಣದ ಅನ್ವೇಷಣೆ: ಮೇಕ್‌ ಮೈಟ್ರಿಪ್

ಭಾರತೀಯರಿಂದ ತಮ್ಮ ಭಾಷೆ ಬಳಕೆಯ ಪ್ರಯಾಣದ ಅನ್ವೇಷಣೆ

ಮೈರಾದ ಬಳಕೆದಾರ ಬೇಸ್ ಇನ್ನೂ ಬೆಳೆಯುತ್ತಲೇ ಇದ್ದು ಈಗ ಪ್ರತಿದಿನ 50,000ಕ್ಕಿಂತ ಹೆಚ್ಚಿನ ಸಂಭಾಷಣೆಗಳನ್ನು ತೋರಿಸುತ್ತಿದ್ದರೂ, ಆರಂಭಿಕ ಮಾಹಿತಿಯು, ಧ್ವನಿಯು, ಹೆಚ್ಚು ಅಭಿವ್ಯಕ್ತಿಯುಳ್ಳ, ಸಾಂದರ್ಭಿಕ ಹಾಗೂ ಭಾಷೆ ಒಳಗೊಂಡ ಪ್ರಯಾಣ ಶೋಧಕ್ಕೆ ನೆರವಾಗು ತ್ತಿದೆ ಎಂದು ಸೂಚಿಸುತ್ತಿದೆ. ಇದು, ಬಳಕೆದಾರರು ಪಠ್ಯದ ಮೂಲಕ ಶೋಧ ಮಾಡುವುದಕ್ಕಿಂತ ಭಿನ್ನವಾಗಿದೆ

ಎಲ್‌ಪಿಜಿ ಲಭ್ಯತೆ ಬಗ್ಗೆ ಜನರಲ್ಲಿ ಅನಗತ್ಯವಾಗಿ ಭೀತಿ ಮೂಡಿಸಲಾಗುತ್ತಿದೆ: ಪ್ರಧಾನಿ ಮೋದಿ

ಎಲ್‌ಪಿಜಿ ಬಿಕ್ಕಟ್ಟು: ಪ್ರಧಾನಿ ಮೋದಿ ಹೇಳಿದ್ದೇನು?

ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಉಂಟಾಗಿರುವ ಸಂಘರ್ಷದ ಪರಿಣಾಮ ದೇಶಾದ್ಯಂತ ತೈಲ, ಅಡುಗೆ ಅನಿಲ ಬಿಕ್ಕಟ್ಟಿನ ಬಗ್ಗೆ ವದಂತಿಗಳು ದಿನೇ ದಿನೇ ಹೆಚ್ಚಾಗುತ್ತಿದೆ. ಅದರಲ್ಲೂ ಮುಖ್ಯವಾಗಿ ಅಡುಗೆ ಅನಿಲ ಲಭ್ಯತೆ ಅನೇಕರಲ್ಲಿ ಆತಂಕ ಉಂಟು ಮಾಡಿದೆ. ಇದೀಗ ಈ ಕುರಿತು ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಕೋವಿಡ್ ಕಾಲದಂತೆಯೇ ಈ ಸಮಸ್ಯೆಯನ್ನು ಕೂಡ ನಾವು ಎದುರಿಸುತ್ತೇವೆ ಎಂದು ಹೇಳಿದ್ದಾರೆ.

ತೈಲ ಬೆಲೆ ಬ್ಯಾರೆಲ್‌ಗೆ 200 ಡಾಲರ್‌ ತಲುಪಲಿದೆ: ಹಡಗುಗಳ ಮೇಲಿನ ದಾಳಿಗೆ ಇರಾನ್ ಖಡಕ್‌ ಎಚ್ಚರಿಕೆ

ತೈಲ ಬೆಲೆ ಬ್ಯಾರೆಲ್‌ಗೆ 200 ಡಾಲರ್‌ ತಲುಪುವ ಎಚ್ಚರಿಕೆ ನೀಡಿದ ಇರಾನ್‌

ಪಶ್ಚಿಮ ಏಷ್ಯಾದಲ್ಲಿ ಉಲ್ಬಣಗೊಂಡಿರುವ ಸಂಘರ್ಷದ ನಡುವೆ ಪರ್ಷಿಯನ್ ಕೊಲ್ಲಿಯಲ್ಲಿ ಇರಾನ್ ಪಡೆಗಳು ವ್ಯಾಪಾರಿ ಹಡಗುಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದ ಹಿನ್ನೆಲೆ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಆತಂಕ ಹೆಚ್ಚಾಗಿದೆ. ಪರಿಸ್ಥಿತಿ ತೀವ್ರಗೊಂಡರೆ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 200 ಡಾಲರ್‌ ತಲುಪಬಹುದು ಎಂದು ಇರಾನ್ ಎಚ್ಚರಿಕೆ ನೀಡಿದೆ. ಹೊರ್ಮುಜ್ ಜಲಸಂಧಿಯಲ್ಲಿ ಉದ್ಭವಿಸಿರುವ ಉದ್ವಿಗ್ನತೆಯಿಂದ ವಿಶ್ವದ ತೈಲ ಸರಬರಾಜಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಅಮೆಜಾನ್ ಬಿಸಿನೆಸ್ 2025 ರಲ್ಲಿ ಭಾರತೀಯ ವ್ಯವಹಾರಗಳಿಗೆ ₹2 ಸಾವಿರ ಕೋಟಿಗೂ ಹೆಚ್ಚು ಆರ್ಥಿಕ ಮೌಲ್ಯ ಹೆಚ್ಚಳ

ಭಾರತೀಯ ವ್ಯವಹಾರಗಳಿಗೆ ₹2 ಸಾವಿರ ಕೋಟಿ ಆರ್ಥಿಕ ಮೌಲ್ಯ ಹೆಚ್ಚಳ

ಇದು ಕೇವಲ ಪ್ರಯೋಗಶೀಲತೆಯಲ್ಲದೆ, ಅಮೆಜಾನ್ ಬಿಸಿನೆಸ್ ಮೂಲಕ ವ್ಯವಹಾರ ಖರೀದಿಯನ್ನು ಕ್ರೋಢೀಕರಿಸುವ ಉದ್ದೇಶಪೂರ್ವಕ ಬದಲಾವಣೆಯನ್ನು ಪ್ರತಿಬಿಂಬಿಸು ತ್ತದೆ. ಉತ್ತರ ಮತ್ತು ಪಶ್ಚಿಮದ ಸೂರತ್ ಮತ್ತು ಲೂಧಿಯಾನದಿಂದ ಹಿಡಿದು ದಕ್ಷಿಣದ ಕೊಯ ಮತ್ತೂರು ಮತ್ತು ಕೊಚ್ಚಿಯಂತಹ ಟೈರ್ 2 ಮತ್ತು ಟೈರ್ 3 ನಗರಗಳ ವ್ಯವಹಾರಗಳಿಂದ ಪ್ರಬಲವಾದ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಈ ನಗರಗಳು ಈಗ ಗ್ರಾಹಕರ ಪಟ್ಟಿಯಲ್ಲಿ 70% ಕ್ಕಿಂತ ಹೆಚ್ಚಿನ ಪಾಲನ್ನು ಹೊಂದಿವೆ.

ರಷ್ಯಾದಿಂದ ಕಚ್ಚಾ ತೈಲ ಖರೀದಿ, ರಹಸ್ಯ ಗುಹೆ: ಇಂಧನ ಕೊರತೆ ನೀಗಲು ಭಾರತ ಕೈಗೊಂಡ ಕ್ರಮಗಳು ಏನೇನು?

ಭಾರತಕ್ಕೆ ತೈಲ ಭೀತಿ ಇಲ್ಲ; ನೆರವಿಗೆ ಧಾವಿಸಿದ ಕೇಂದ್ರ ಸರ್ಕಾರ

ಪಶ್ಚಿಮ ಏಷ್ಯಾದಲ್ಲಿ ಇರಾನ್ ಯುದ್ಧ ತೀವ್ರಗೊಂಡ ಹಿನ್ನೆಲೆ, ತೈಲ ಪೂರೈಕೆ ಬಗ್ಗೆ ಜಾಗತಿಕ ಆತಂಕ ಹೆಚ್ಚಾಗಿದೆ. ಆದರೆ ಭಾರತವು ಕಳೆದ ಹತ್ತು ವರ್ಷಗಳಲ್ಲಿ ನಿರ್ಮಿಸಿದ ಭೂಗತ ಕಚ್ಚಾ ತೈಲ ಸಂಗ್ರಹಾಗಾರಗಳು ಮತ್ತು ಪೂರೈಕೆ ಮೂಲಗಳ ವೈವಿಧ್ಯೀಕರಣದಿಂದ ಇಂಧನ ಭದ್ರತೆ ಹೆಚ್ಚಿದೆ. ವಿಶಾಖಪಟ್ಟಣಂ, ಮಂಗಳೂರು ಮತ್ತು ಪಾದೂರಿನಲ್ಲಿರುವ ಶೇಖರಣಾ ಕೇಂದ್ರಗಳು ದೇಶದ ತುರ್ತು ಅಗತ್ಯವನ್ನು ಪೂರೈಸಲು ಸಹಾಯ ಮಾಡುತ್ತಿವೆ.

Infosys: ಮೊಹಾಲಿಯಲ್ಲಿ ಇನ್ಫೋಸಿಸ್ ಅಭಿವೃದ್ಧಿ ಕೇಂದ್ರ ವಿಸ್ತರಣೆ

ಮೊಹಾಲಿಯಲ್ಲಿ ಇನ್ಫೋಸಿಸ್ ಅಭಿವೃದ್ಧಿ ಕೇಂದ್ರ ವಿಸ್ತರಣೆ

ವಿಸ್ತರಣೆಯ ಭಾಗವಾಗಿ ಇನ್ಫೋಸಿಸ್ ಹೊಸ ಸಾಫ್ಟ್ ವೇರ್ ಅಭಿವೃದ್ಧಿ ಬ್ಲಾಕ್ ಗಳನ್ನು ಅಭಿವೃದ್ಧಿಪಡಿಸಲಿದೆ. ಇದರ ಜೊತೆಗೆ ಅಗತ್ಯ ಮೂಲಸೌಕರ್ಯಗಳನ್ನು ಅಭಿವೃದ್ಧಿ ಪಡಿಸುತ್ತಿದೆ. ಸುಮಾರು 3,50,000 ಚದರಡಿಯ ಬಿಲ್ಟ್-ಅಪ್ ಪ್ರದೇಶ ಮತ್ತು ಸುಮಾರು 3,000 ಉದ್ಯೋಗಿಗಳು ಕುಳಿತುಕೊಳ್ಳಲು ವಿಶಾಲ ಸ್ಥಳದ ನಿರ್ಮಾಣವನ್ನೂ ಮಾಡಲಾಗು ತ್ತಿದೆ.

Edelweiss Life Insurance: ಎಫ್‌ವೈ27ರ ವೇಳೆಗೆ ಎಡೆಲ್ವೈಸ್ ಲೈಫ್ ಇನ್ಶೂರೆನ್ಸ್ ಬ್ರೇಕ್-ಈವನ್ ತಲುಪುವ ಗುರಿ

ಬಂಡವಾಳದ ದೃಷ್ಟಿಕೋನದಿಂದ, ಕಂಪನಿ ಉತ್ತಮ ಬಂಡವಾಳ ಹೊಂದಿದೆ

ಕಂಪನಿಯು ಕ್ಯೂ3ಎಫ್‌ವೈ26ನಲ್ಲಿ ಬಲವಾದ ವೇಗವನ್ನು ಕಂಡಿತು. ಇದರ ವೈಯಕ್ತಿಕ ಎಪಿಇ ವರ್ಷದಿಂದ ವರ್ಷಕ್ಕೆ 38% ರಷ್ಟು ಬೆಳೆದಿದೆ, ಇದು ಉದ್ಯಮದ ಸರಾಸರಿಗಿಂತ ಹೆಚ್ಚಿನದಾಗಿದೆ. ಎಫ್‌ವೈ26 ರಲ್ಲಿ, ಕಂಪನಿಯು ಸುಮಾರು 650 ಕೋಟಿ ರೂ.ಗಳ ಹೊಸ ವ್ಯವಹಾರ ಮತ್ತು ಸುಮಾರು 2400 ಕೋಟಿ ರೂ.ಗಳ ಒಟ್ಟು ಪ್ರೀಮಿಯಂ ಆದಾಯವನ್ನು ಗಳಿಸುವ ಗುರಿಯನ್ನು ಹೊಂದಿದೆ.

ಕೊನೆಗೂ ಹೊರ್ಮುಜ್ ಜಲಸಂಧಿ ದಾಟಿ ಭಾರತಕ್ಕೆ ಬಂತು ಮೊದಲ ತೈಲ ಹಡಗು; ಮುಂಬೈ ಬಂದರಿಗೆ ತಲುಪಿದ್ದು ಟ್ಯಾಂಕರ್‌ ಅಲ್ಲ ಕೋಟ್ಯಂತರ ಭಾರತೀಯರ ನಿರೀಕ್ಷೆ

ಹೊರ್ಮುಜ್ ಜಲಸಂಧಿ ದಾಟಿ ಭಾರತಕ್ಕೆ ಬಂತು ತೈಲ ಹಡಗು

First oil tanker reaches India: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಸಂಘರ್ಷದ ಮಧ್ಯೆ ಭಾರತೀಯ ಕ್ಯಾಪ್ಟನ್ ಮುನ್ನಡೆಸುತ್ತಿರುವ ಲೈಬೀರಿಯನ್ ಧ್ವಜವನ್ನು ಹೊಂದಿರುವ ಕಚ್ಚಾ ತೈಲ ಟ್ಯಾಂಕರ್, ಹೊರ್ಮುಜ್ ಜಲಸಂಧಿಯನ್ನು ದಾಟಿ ಮುಂಬೈ ಬಂದರನ್ನು ತಲುಪಿದೆ. ಇರಾನ್ ಈ ಹಡಗಿಗೆ ಅನುಮತಿ ನೀಡಿದ ನಂತರವೇ ಇದು ಹೊರ್ಮುಜ್ ಜಲಸಂಧಿಯನ್ನು ದಾಟಿದೆ.

Gold Price Today On 12th March: ಚಿನ್ನದ ದರದಲ್ಲಿಂದು ಇಳಿಕೆ; ಬೆಂಗಳೂರಿನಲ್ಲಿ ಬೆಲೆ ಎಷ್ಟಿದೆ?

ಚಿನ್ನದ ದರದಲ್ಲಿಂದು ಇಳಿಕೆ; ಬೆಂಗಳೂರಿನಲ್ಲಿ ಬೆಲೆ ಎಷ್ಟಿದೆ?

ಹಲವು ದಿನಗಳಿಂದ ಸತತ ಏರಿಕೆಯಲ್ಲಿದ್ದ ಚಿನ್ನದ ಬೆಲೆಯಲ್ಲಿಂದು ಇಳಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ದರದಲ್ಲಿ 100 ರೂ. ಗ್ರಾಂ ಇಳಿಕೆ ಕಂಡು ಬಂದಿದ್ದು, 14,870 ರೂ. ಆಗಿದೆ. 24 ಕ್ಯಾರಟ್‌ನ 1 ಗ್ರಾಂಗೆ 16,222 ರೂ. ಆಗಿದೆ.

Basmati rice exports fall: ಬಾಸುಮತಿ ಅಕ್ಕಿ ರಫ್ತು ಕುಸಿತ, ಬೆಲೆ ಇಳಿಕೆ

ಬಾಸುಮತಿ ಅಕ್ಕಿ ರಫ್ತು ಕುಸಿತ, ಬೆಲೆ ಇಳಿಕೆ

ಬಾಸ್ಮತಿ ಅಕ್ಕಿಯನ್ನು ಇರಾನ್‌ಗೆ ಮಾತ್ರವಲ್ಲದೆ ಇರಾಕ್, ಬಹ್ರೇನ್, ಕುವೈತ್ ಮತ್ತು ಕತಾರ್ ಸೇರಿದಂತೆ ಹಲವಾರು ಮಧ್ಯಪ್ರಾಚ್ಯ ದೇಶಗಳಿಗೂ ರಫ್ತು ಮಾಡಲಾಗುತ್ತದೆ. ಯುದ್ಧದಿಂದಾಗಿ ಈ ದೇಶಗಳಿಗೆ ಕಳಿಸಿರುವ ಅಕ್ಕಿಯು ದಾರಿಯಲ್ಲಿರುವ ಹಡಗುಗಳಲ್ಲಿ ಸಿಲುಕಿಕೊಂಡಿವೆ, ಪೂರೈಕೆ ಸಂಪೂರ್ಣವಾಗಿ ನಿಂತಿದೆ. ಹಾಗಾಗಿ ಈಗ ಅಲ್ಲಿನ ಮಧ್ಯಪ್ರಾಚ್ಯ ಮಾರುಕಟ್ಟೆ ಕುಸಿದಿದೆ.

ಚಿನ್ನ ಅಥವಾ ಬೆಳ್ಳಿ ಹೂಡಿಕೆಗೆ ಯಾವುದು ಬೆಸ್ಟ್? ತಜ್ಞರು ಏನಂತಾರೆ? ಇಲ್ಲಿದೆ ವಿವರ

ಚಿನ್ನ, ಬೆಳ್ಳಿ ಹೂಡಿಕೆ ಮಾಡುವಾಗ ಗಮನಿಸಬೇಕಾದ ಅಂಶ ಏನು?

ಇವತ್ತು ಚಿನ್ನ ಮತ್ತು ಬೆಳ್ಳಿಯ ದರ ಪರಸ್ಪರ ಪೈಪೋಟಿ ಕೊಡುವಂತಿದೆ. ಹೀಗಿರುವಾಗ ಹೂಡಿಕೆ ಮಾಡುವಾಗ ಏನೆಲ್ಲ ಅಂಶಗಳನ್ನು ಗಮನಿಸಬೇಕು, ಯಾವ ರೀತಿ ಹೂಡಿಕೆಗೆ ಆದ್ಯತೆ ನೀಡಬೇಕು ಎನ್ನುವ ಕುರಿತು ಖ್ಯಾತ ಹೂಡಿಕೆ ತಜ್ಞ ಕೌಟಿಲ್ಯ ಕ್ಯಾಪಿಟಲ್ ಸಂಸ್ಥಾಪಕ ಅಶೋಕ್ ದೇವನಾಂಪ್ರಿಯ ಅವರು ತಿಳಿಸಿರುವ ಮಾಹಿತಿ ಇಲ್ಲಿದೆ.

ಎಲ್‌ಪಿಜಿ ಸಿಗುತ್ತಿಲ್ಲವೆಂಬ ಚಿಂತೆಯೇ ಬೇಡ: ಅಡುಗೆ ಅನಿಲದ ಬದಲು ಉಪಯೋಗಿಸಬಹುದಾದ 5 ಪರ್ಯಾಯಗಳು, ಇಂಧನ ಉಳಿಸುವ ವಿಧಾನ ಇಲ್ಲಿದೆ

ಅನಿಲ ಕೊರತೆ; ಇಂಧನ ಉಳಿಸುವ ಸರಳ ವಿಧಾನಗಳು ಇವು

ಪಶ್ಚಿಮ ಏಷ್ಯಾದ ಯುದ್ಧದಿಂದ ಎಲ್‌ಪಿಜಿ ಪೂರೈಕೆಯಲ್ಲಿ ಅಡಚಣೆ ಉಂಟಾಗುವ ಭೀತಿ ಹೆಚ್ಚಾಗಿದೆ. ಇದರಿಂದ ಅಡುಗೆ ಅನಿಲದ ಬೆಲೆ ಮತ್ತು ಲಭ್ಯತೆ ಬಗ್ಗೆ ಆತಂಕ ಮೂಡಿದ್ದು, ಪಿಎನ್‌ಜಿ, ಇಂಡಕ್ಷನ್ ಸ್ಟೌ, ಸೌರ ಒಲೆ ಹಾಗೂ ಬಯೋಗ್ಯಾಸ್‌ನಂತಹ ಪರ್ಯಾಯಗಳನ್ನು ಬಳಸುವುದು ಮತ್ತು ಇಂಧನ ಉಳಿಸುವ ಅಡುಗೆ ವಿಧಾನಗಳನ್ನು ಅನುಸರಿಸುವುದು ಅನಿವಾರ್ಯ ಎನಿಸಿಕೊಂಡಿದೆ.

40 ಲಕ್ಷ ಭಾರತೀಯರು ಬಳಸುತ್ತಿದ್ದಾರೆ ವಿವಾಹೇತರ ಡೇಟಿಂಗ್ ಆ್ಯಪ್; ಅಗ್ರ ಸ್ಥಾನದಲ್ಲಿರುವ ನಗರ ಯಾವುದು ಗೊತ್ತೇ?

ಅತೀ ಹೆಚ್ಚು ಡೇಟಿಂಗ್ ಆಪ್ ಬಳಸುತ್ತಿರುವ ಭಾರತದ ನಗರ ಯಾವುದು?

ದೇಶಾದ್ಯಂತ ಈಗ ವಿವಾಹೇತರ ಸಂಬಂಧಗಳು ಹೆಚ್ಚಾಗುತ್ತಿದೆ. ಇದಕ್ಕೆ ವೇದಿಕೆ ನಿರ್ಮಿಸಿಕೊಟ್ಟಿರುವುದು ವಿವಾಹೇತರ ಡೇಟಿಂಗ್ ಅಪ್ಲಿಕೇಶನ್. ಸುಮಾರು 40 ಲಕ್ಷ ಭಾರತೀಯರು ವಿವಾಹೇತರ ಡೇಟಿಂಗ್ ಅಪ್ಲಿಕೇಶನ್ ಬಳಸುತ್ತಿದ್ದು, ಇದರಲ್ಲಿ ಹೆಚ್ಚಿನ ಪುರುಷರು 25 ರಿಂದ 30 ವರ್ಷ ವಯಸ್ಸಿನ ಮಹಿಳೆಯರನ್ನು ಹುಡುಕಲು ಒಲವು ತೋರುತ್ತಿರುವುದು ಅದೇ ರೀತಿ ಮಹಿಳೆಯರು 30 ರಿಂದ 40 ವರ್ಷ ವಯಸ್ಸಿನ ಪುರುಷರನ್ನು ಹುಡುಕುತ್ತಿರುವುದನ್ನು ಅಂಕಿ ಅಂಶಗಳು ಬಹಿರಂಗ ಪಡಿಸಿವೆ.

Loading...