<?xml version="1.0" encoding="utf-8"?>
<rss version="2.0" xmlns:atom="http://www.w3.org/2005/Atom" xmlns:content="http://purl.org/rss/1.0/modules/content/" xmlns:dc="http://purl.org/dc/elements/1.1/" xmlns:slash="http://purl.org/rss/1.0/modules/slash/" xmlns:sy="http://purl.org/rss/1.0/modules/syndication/" xmlns:wfw="http://wellformedweb.org/CommentAPI/"><channel><title>Vishwavani News - Latest Kannada News</title><link>https://vishwavani.news</link><description>Latest news and updates from Vishwavani News</description><atom:link href="https://www.vishwavani.news/feed/" rel="self"/><language>kn-IN</language><lastBuildDate>Fri, 07 Aug 2026 01:30:00 +0000</lastBuildDate><copyright>https://vishwavani.news/</copyright><generator>https://vishwavani.news/</generator><atom:link href="https://www.vishwavani.news/feed/" rel="self" type="application/rss+xml"/><item><title>ಪ್ರೋಟೀನ್ ಭರಿತ ಆಹಾರವನ್ನು ಹೇಗೆ ಸೇವಿಸಬೇಕು? ತಜ್ಞರು ನೀಡಿದ ಸಲಹೆ ಏನು?</title><link>https://vishwavani.news/health/do-you-know-how-to-eat-protein-foods-85790.html</link><guid>https://vishwavani.news/health/do-you-know-how-to-eat-protein-foods-85790.html</guid><pubDate>Fri, 07 Aug 2026 01:30:00 +0000</pubDate><description>&lt;![CDATA[Health Tips: ಕಡಲೆ, ರಾಜ್ಮಾ, ಹೆಸರುಕಾಳಿನಂತಹ ಆಹಾರಗಳನ್ನು ಪೌಷ್ಟಿಕಾಂಶ ಹೆಚ್ಚಿಸಲು  ಸೇವಿಸಲಾಗುತ್ತದೆ, ಆದರೆ ಪ್ರತಿಯೊಂದೂ ನೆನೆಸುವುದು, ಮೊಳಕೆ ಭರಿಸುವುದು, ಕುದಿಸುವುದು ಅಥವಾ ಹುರಿ ಯುವುದರಿಂದ ಆರೋಗ್ಯ ಲಾಭವನ್ನು ಪಡೆಯಲಾಗುವುದಿಲ್ಲ. ಹಾಗಿದ್ದರೆ ಪ್ರೋಟೀನ್ ಭರಿತ ಆಹಾರವನ್ನು ಹೇಗೆ ಸೇವಿಸಬೇಕು?]]&gt;</description><dc:creator>&lt;![CDATA[Pushpa Kumari]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಆರೋಗ್ಯ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Protein_Food.original.jpg" class="attachment-large size-large wp-post-image" alt="ಪ್ರೋಟೀನ್ ಭರಿತ ಆಹಾರವನ್ನು ಹೇಗೆ ಸೇವಿಸಬೇಕು? ತಜ್ಞರು ನೀಡಿದ ಸಲಹೆ ಏನು?" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="oqvh0"&gt;&lt;b&gt;ನವದೆಹಲಿ,ಆ.6&lt;/b&gt;: ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸರಿಯಾದ ಪ್ರಮಾಣದ ಪೋಷಕಾಂಶಗಳು ಅಗತ್ಯ. ಮುಖ್ಯವಾಗಿ ಪ್ರೋಟಿನ್ ಭರಿತ&lt;b&gt; (Protein Food)&lt;/b&gt; ಆಹಾರ, ಆದರೆ ಇದನ್ನು ಸೇವಿಸುವ ವಿಧಾನವೇ ತಪ್ಪಾಗಿದ್ದರೆ ದೇಹಕ್ಕೆ ಬೇಕಾದ ಪೋಷಕಾಂಶಗಳು ಸಿಗದೇ ಇರಬಹುದು. ಕಡಲೆ, ರಾಜ್ಮಾ, ಹೆಸರುಕಾಳಿನಂತಹ ಆಹಾರಗಳನ್ನು ಪೌಷ್ಟಿಕಾಂಶ ಹೆಚ್ಚಿಸಲು ಸೇವಿಸಲಾಗುತ್ತದೆ, ಆದರೆ ಪ್ರತಿಯೊಂದೂ ನೆನೆಸುವುದು, ಮೊಳಕೆ ಭರಿಸುವುದು, ಕುದಿಸುವುದು ಅಥವಾ ಹುರಿ ಯುವುದರಿಂದ ಆರೋಗ್ಯ ಲಾಭವನ್ನು ಪಡೆಯಲಾಗುವುದಿಲ್ಲ. ಹಾಗಿದ್ದರೆ ಪ್ರೋಟೀನ್ ಭರಿತ ಆಹಾರವನ್ನು ಹೇಗೆ ಸೇವಿಸಬೇಕು?&lt;/p&gt;&lt;p data-block-key="dcdvo"&gt;&lt;b&gt;ಕಡಲೆಕಾಳು:&lt;/b&gt;&lt;/p&gt;&lt;p data-block-key="54rkg"&gt;ಕಡಲೆ ಉತ್ತಮ ಪ್ರೋಟಿನ್ ನ ಮೂಲವಾಗಿದೆ‌ ಆದರೆ ಅವುಗಳನ್ನು ತಯಾರು ಮಾಡುವ ವಿಧಾನವು ದೇಹವು ಅವುಗಳನ್ನು ಎಷ್ಟು ಚೆನ್ನಾಗಿ ನಿರ್ವಹಿಸುತ್ತದೆ ಎಂಬುದರ ಮೇಲೆ ಪರಿಣಾಮ ಬೀರುತ್ತದೆ. ಕೆಲವೊಮ್ಮೆ ಮೊಳಕೆ ಭರಿಸಿ ಸೇವಿಸಿದರೆ ಗ್ಯಾಸ್ಟ್ರಿಕ್‌, ಹೊಟ್ಟೆ ನೋವಿನಂತಹ ಸಮಸ್ಯೆಗೆ ಕಾರಣ ವಾಗ ಬಹುದು. ಹಾಗಾಗಿ ಕಡಲೆಕಾಳು ಬೇಯಿಸಿ ತಿಂದರೆ ಉತ್ತಮ ಎಂದು ಆಹಾರ ತಜ್ಞರು ಸಲಹೆ ನೀಡಿದ್ದಾರೆ.&lt;/p&gt;&lt;p data-block-key="87bcu"&gt;&lt;b&gt;ರಾಜ್ಮಾ:&lt;/b&gt;&lt;/p&gt;&lt;p data-block-key="b8ot5"&gt;ಇದು ತೂಕ ನಿಯಂತ್ರಣಕ್ಕೆ, ಮಧುಮೇಹಿಗಳಿಗೆ ಅತ್ಯಂತ ಉಪಯುಕ್ತವಾಗಿದೆ. ಇದು ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ ಹೊಂದಿದ್ದು ಸಕ್ಕರೆ ಪ್ರಮಾಣ ಕಡಿಮೆ ಮಾಡುತ್ತದೆ. ​ರಾಜ್ಮಾವನ್ನು ಮೊಳಕೆ ಭರಿಸಿ ತಿಂದರೆ ದೇಹಕ್ಕೆ ಹಿಡಿಸುವುದಿಲ್ಲ. ಇದರಲ್ಲಿರುವ ಕೆಲವು ಅಂಶಗಳು ಹೊಟ್ಟೆಯ ಕಿಣ್ವದ ಅಸ್ವಸ್ಥತೆಗೆ ಕಾರಣ ವಾಗಬಹುದು. ಹಾಗಾಗಿ ಬೇಯಿಸಿ ತಿಂದರೆ ಜೀರ್ಣಕ್ರಿಯೆಗೆ ಉತ್ತಮ.&lt;/p&gt;&lt;p data-block-key="1oh48"&gt;&lt;a href="/health/nutritionist-recommends-5-polyphenol-rich-foods-that-improve-gut-health-80881.html"&gt;&lt;b&gt;Health Tips: ಕರುಳಿನ ಆರೋಗ್ಯ ಸುಧಾರಿಸುವ ನೀವು ಸೇವಿಸಬೇಕಾದ ಆಹಾರಗಳಿವು&lt;/b&gt;&lt;/a&gt;&lt;/p&gt;&lt;p data-block-key="81ld1"&gt;&lt;b&gt;ಹೆಸರುಕಾಳು:&lt;/b&gt;&lt;/p&gt;&lt;p data-block-key="dlav3"&gt;ಮೊಳಕೆಯೊಡೆದ ಹೆಸರುಕಾಳು ಪ್ರತಿಯೊಬ್ಬರು ಸೇವಿಸಲು ಆಸಕ್ತಿ ವಹಿಸುತ್ತಾರೆ. ಜೀರ್ಣಿಸಿ ಕೊಳ್ಳಲು ಸುಲಭ ಮತ್ತು ಉತ್ತಮ ಪೋಷಕಾಂಶಕ್ಕೆ ಬೆಂಬಲಿಸುತ್ತದೆ. ಇದನ್ನು ಮೊಳಕೆ ಒಡೆದು ಅಥವಾ ಬೇಯಿಸಿ ತಿಂದರೂ ಕೂಡ ಉತ್ತಮ ಎಂದು ತಜ್ಞರು ತಿಳಿಸಿದ್ದಾರೆ. ಹಾಗಾಗಿ ನಿಮ್ಮ ಆಹಾರದಲ್ಲಿ ಇದಕ್ಕೆ ಆಧ್ಯತೆಯೂ ಇರಲಿ&lt;/p&gt;&lt;p data-block-key="2i1pe"&gt;&lt;b&gt;​ಕಡಲೆಕಾಯಿ / ಶೇಂಗಾ:&lt;/b&gt;&lt;/p&gt;&lt;p data-block-key="8229h"&gt;​ಕಡಲೆಕಾಯಿಯನ್ನು ಹುರಿದು ತಿನ್ನುವುದು ಜೀರ್ಣಕ್ರಿಯೆಗೆ ಒಳ್ಳೆಯದು,ಅದರ ಜೊತೆ ರುಚಿಯನ್ನೂ ಹೆಚ್ಚಿಸುತ್ತದೆ. ಎಣ್ಣೆಯಲ್ಲಿ ಕರಿದ ಕಡಲೆಕಾಯಿ ದೇಹಕ್ಕೆ ಪರಿಣಾಮ ಬೀರಬಹುದು.&lt;/p&gt;&lt;p data-block-key="orja"&gt;&lt;b&gt;ಸೋಯಾಬೀನ್ ಮತ್ತು ಹುರುಳಿಕಾಳುಗಳು:&lt;/b&gt;&lt;/p&gt;&lt;p data-block-key="9deu0"&gt;ಸೋಯಾ ಬೀನ್ ಗಳು ಮತ್ತು ಹುರುಳಿಕಾಳುಗಳನ್ನು ಕುದಿ ಸುವುದರಿಂದ ಹೆಚ್ಚಿನ ಪ್ರಯೋಜನವನ್ನು ಪಡೆಯಬಹುದು. ಇದರಿಂದ ಜೀರ್ಣಕ್ರಿಯೆ ಸುಧಾರಿಸಲು ಸಹಾಯ ಮಾಡುತ್ತದೆ.&lt;/p&gt;&lt;p data-block-key="84ssq"&gt;&lt;b&gt;​ಕಪ್ಪು ಕಡಲೆ:&lt;/b&gt;&lt;/p&gt;&lt;p data-block-key="5pn6h"&gt;​ಇದನ್ನು ಬೇಯಿಸಿ ಅಥವಾ ಮೊಳಕೆ ಬರಿಸಿ ಎರಡೂ ರೀತಿಯಲ್ಲೂ ಸೇವಿಸಬಹುದು. ಇವೆರಡೂ ವಿಧಾನಗಳು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತವೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>Shishir Hegde Column: ಬ್ರೆಜಿಲ್ ನ ಕಾಡಿನಲ್ಲಿ ಲಕ್ಷ ವೀರಪ್ಪನ್ ಗಳಿದ್ದಾರೆ</title><link>https://vishwavani.news/ankanagalu/there-are-a-hundred-thousand-veerappans-in-the-forests-of-brazil-85828.html</link><guid>https://vishwavani.news/ankanagalu/there-are-a-hundred-thousand-veerappans-in-the-forests-of-brazil-85828.html</guid><pubDate>Fri, 07 Aug 2026 00:31:12 +0000</pubDate><description>&lt;![CDATA[ಕಾಡು ನೋಡಲು ಬ್ರೆಝಿಲ್ ನ ಮನೌಸ್ ನಗರಕ್ಕೆ ಬಂದಿಳಿದಾಗ ಹತ್ತಿರದಲ್ಲೆಲ್ಲೋ ಗದ್ದೆ ಕೊಯ್ಲಿನ ನಂತರ ಮಣ್ಣು ಸುಡುವಾಗಿನ ಹೊಗೆಯ ಘಮಲು ನಮ್ಮನ್ನು ಆವರಿಸಿತ್ತು. ಹಳ್ಳಿಮನೆಯ ಬಚ್ಚಲು ಮನೆಯಂತೆ ಇಡೀ ನಗರ ಖಮಟು ಹೊಡೆಯುತ್ತಿತ್ತು. ಇದು ಏನೆಂದು ವಿವರವಾಗಿ ಕೇಳಬೇಕೆಂದರೆ ಅವರಿಗೆ ಪೋರ್ಚುಗೀಸ್ ಭಾಷೆ ಬಿಟ್ಟರೆ ಇನ್ನೊಂದು ಬರುತ್ತಿರಲಿಲ್ಲ. ಇನ್ನು ಎರಡು ದಿನದ ನಂತರ ನಮ್ಮನ್ನು ಇಂಗ್ಲಿಷ್ ಗೈಡ್ ಒಬ್ಬ ಸೇರಿಕೊಳ್ಳುವವನಿದ್ದ.]]&gt;</description><dc:creator>&lt;![CDATA[ಶಿಶಿರ್‌ ಹೆಗಡೆ]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಅಂಕಣಗಳು]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/S_Hegde_7.original.jpg" class="attachment-large size-large wp-post-image" alt="Shishir Hegde Column: ಬ್ರೆಜಿಲ್ ನ ಕಾಡಿನಲ್ಲಿ ಲಕ್ಷ ವೀರಪ್ಪನ್ ಗಳಿದ್ದಾರೆ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="izg2a"&gt;&lt;b&gt;ಶಿಶಿರಕಾಲ&lt;/b&gt;&lt;/p&gt;&lt;p data-block-key="qufg"&gt;ನಾವು ಕೆಲ ಸ್ನೇಹಿತರು ಸೇರಿ ಅಮೆಜಾನ್ ಕಾಡಿನೊಳಕ್ಕೆ ಸ್ವಲ್ಪ ಹೋಗಿ ನೋಡಿ ಬರೋದು ಅಂತ ಹೊರಟಿದ್ದೆವು. ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಬೆಳೆದ ನನಗೇನು ಕಾಡು ಹೊಸತಾಗಿರಲಿಲ್ಲ. ಆದರೆ ಅಮೆಜಾನ್ ಎಂದರೆ ಅದೇನೋ ಸೆಳೆತ. ಅಮೆಜಾನ್ ನತ್ತ ಆಸಕ್ತಿಯನ್ನು ಮೊದಲು ಹುಟ್ಟು ಹಾಕಿದ್ದು ಹೈಸ್ಕೂಲ್ ಭೂಗೋಳದ ಮೇಸ್ಟ್ರು, ಎಂ.ಎಸ್.ಪ್ರಭು ಅವರು. ಅವರು ಅಮೆಜಾನ್ ಕಾಡನ್ನು ರಸವತ್ತಾಗಿ ಕಟ್ಟಿ ಕೊಡುವಾಗ ಇದೇನು ನಿಮ್ಮ ಮನೆಯ ಹಿಂದಿನ ಬೆಟ್ಟದಂತಲ್ಲ ಎಂದು ತಮಾಷೆ ಮಾಡಿದ್ದರು. ಅಂದೇ ಅಮೆಜಾನ್ ಕಾಡನ್ನು ಒಮ್ಮೆಯಾದರೂ ನೋಡಬೇಕೆಂಬ ಆಸೆ ಹುಟ್ಟಿತ್ತು. ಈಗ ಆ ಸಮಯ ಬಂದಿತ್ತು.&lt;/p&gt;&lt;p data-block-key="380uh"&gt;ಅಮೆಜಾನ್ ಕಾಡು ಎಂದರೆ ಅದೊಂದು ಜೈವಿಕ ಮಾಯಾಲೋಕ. 70 ಲಕ್ಷ ಚದರ ಕಿಲೋಮೀಟರ್ ಜಾಗವನ್ನು ಅಮೇಝೋನಿಯಾ ಅಂತ ಕರೆಯೋದು. ಈ ಪ್ರದೇಶದಲ್ಲಿ ಇರುವ ಉಷ್ಣವಲಯದ ಮಳೆ ಕಾಡು (ಟ್ರೋಪಿಕಲ್ ರೈನ್ ಫಾರೆಸ್ಟ್) ಸುಮಾರು 55 ಲಕ್ಷ ಚ.ಕಿ.ಮೀ. ಈ ಕಾಡು ಒಂಭತ್ತು ದೇಶಗಳಿಗೆ ಹರಡಿದ್ದರೂ ಅತಿಹೆಚ್ಚು ಭಾಗ ಇರೋದು ಬ್ರೆಜಿಲ್ ನಲ್ಲಿ. ಇಷ್ಟೊಂದು ಅಗಾಧವಾದ ಕಾಡು, ಸುಮಾರು ಹದಿನಾರು ಸಾವಿರದಷ್ಟು ಮರಗಳ ವೈವಿಧ್ಯ, 25 ಲಕ್ಷ ಕೀಟ ಪ್ರಬೇಧಗಳು, ಎರಡು ಸಾವಿರಕ್ಕೂ ಮೀರಿದ ಹಕ್ಕಿ ಪ್ರಬೇಧಗಳು, ಇನ್ನೊಂದಿಷ್ಟು ಸಾವಿರ ವಲಸೆ ಹಕ್ಕಿಗಳು, ಹತ್ತಿರ ಹತ್ತಿರ ಒಂದು ಲಕ್ಷದಷ್ಟು ವಿಧದ ಅಕಶೇರುಕಗಳು (ಬೆನ್ನೆಲುಬಿಲ್ಲದ ಜೀವಿ) ಇವೆಲ್ಲ ಮನುಷ್ಯನ ಲೆಕ್ಕಕ್ಕೆ ಸಿಕ್ಕವು, ದಾಖಲಾದವು.&lt;/p&gt;&lt;p data-block-key="7e39b"&gt;ಇದೆಲ್ಲದರ ಜೊತೆ ಬಹುದೊಡ್ಡ ಪ್ರಮಾಣದಲ್ಲಿ ಆಧುನಿಕತೆ, ಹೊರ, ನಾವಿರುವ ಜಗತ್ತಿನಿಂದ ದೂರ, ಕಾಡೊಳಗೆ ಬದುಕುತ್ತಿರುವ 350 ಕಾಡು ಮನುಷ್ಯರ ಜನಾಂಗಗಳು. ಅದರಲ್ಲಿ 60 ಈ ರೀತಿ ಯ ಮೂಲ ಕಾಡು ನಿವಾಸಿಗಳಿಗೆ ಹೊರಜಗತ್ತಿನ ಇರುವಿಕೆಯ ಅಂದಾಜು ಕೂಡ ಇಲ್ಲ. ಇನ್ನುಳಿದ ಬುಡಕಟ್ಟು ಜನಾಂಗಗಳು ಸ್ವಲ್ಪ ಆಧುನಿಕತೆಯ ಪಸೆಯಂಟಿಸಿಕೊಂಡಿವೆ. ಇದೆಲ್ಲ ಅಲ್ಲಿನ ಬುಡಕಟ್ಟು ಜನಾಂಗದ ಒಟ್ಟೂ ಜನ ಸಂಖ್ಯೆ ಸುಮಾರು ಮೂರು ಕೋಟಿ. ಇವರನ್ನು ಅಲ್ಲಿನ ಜನ ಕಾಡಿನ ರಕ್ಷಕರು ಎಂಬರ್ಥಬರುವ ಹೆಸರಿನಿಂದ ಕರೆಯುವುದು. ಇವರು ನಿಜ ಅರ್ಥದಲ್ಲಿ ಕಾಡಿನ ರಕ್ಷಕರು.&lt;/p&gt;&lt;p data-block-key="6t4fo"&gt;&lt;b&gt;ಇದನ್ನೂ ಓದಿ:&lt;/b&gt; &lt;a href="/ankanagalu/the-history-of-gold--a-golden-history-85241.html"&gt;Shishir Hegde Column: ಚಿನ್ನದ ಇತಿಹಾಸ- ಚಿನ್ನದಂತಹ ಇತಿಹಾಸ&lt;/a&gt;&lt;/p&gt;&lt;p data-block-key="5o7ie"&gt;ಕಾಡು ನೋಡಲು ಬ್ರೆಝಿಲ್ ನ ಮನೌಸ್ ನಗರಕ್ಕೆ ಬಂದಿಳಿದಾಗ ಹತ್ತಿರದಲ್ಲೆಲ್ಲೋ ಗದ್ದೆ ಕೊಯ್ಲಿನ ನಂತರ ಮಣ್ಣು ಸುಡುವಾಗಿನ ಹೊಗೆಯ ಘಮಲು ನಮ್ಮನ್ನು ಆವರಿಸಿತ್ತು. ಹಳ್ಳಿಮನೆಯ ಬಚ್ಚಲು ಮನೆಯಂತೆ ಇಡೀ ನಗರ ಖಮಟು ಹೊಡೆಯುತ್ತಿತ್ತು. ಇದು ಏನೆಂದು ವಿವರವಾಗಿ ಕೇಳಬೇಕೆಂದರೆ ಅವರಿಗೆ ಪೋರ್ಚುಗೀಸ್ ಭಾಷೆ ಬಿಟ್ಟರೆ ಇನ್ನೊಂದು ಬರುತ್ತಿರಲಿಲ್ಲ. ಇನ್ನು ಎರಡು ದಿನದ ನಂತರ ನಮ್ಮನ್ನು ಇಂಗ್ಲಿಷ್ ಗೈಡ್ ಒಬ್ಬ ಸೇರಿಕೊಳ್ಳುವವನಿದ್ದ.&lt;/p&gt;&lt;p data-block-key="2ghjo"&gt;ಕಾಡಿಗೆ ಹೊರಡುವ ದಿನ ನಮ್ಮ ಬಟ್ಟೆಯೆಲ್ಲ ಹೊಗೆಯ ವಾಸನೆ. ಅಲ್ಲಿಯವರೆಗೆ ಈ ಹೊಗೆಯ ಕಂಪು ನಮಗೆ ಅಭ್ಯಾಸವಾಗಿ ಕಾರಣ ಕೇಳಬೇಕೆಂಬುದೇ ಮರೆತು ಹೋಗಿತ್ತು. ಕಾಡಿನ ಅಂಚಿನಲ್ಲಿ ಅಲ್ಲಲ್ಲಿ ಇಂತಹ ಹೊಗೆಯಾಡುವುದು ರಿಯೋ ನೆಗ್ರೋ ನದಿಯಲ್ಲಿ ಬೋಟಿನಲ್ಲಿ ಹೋಗುವಾಗ ಮತ್ತೆ ಕಾಣಿಸಿ ನೆನಪಾಯಿತು. ನಾಲ್ಕಾರು ಬಾರಿ ಗೈಡ್ ಹತ್ತಿರ ಕಾರಣ ಕೇಳಿದಾಗ ಕೊನೆಯಲ್ಲಿ ತೀರಾ ಗುಟ್ಟಿನಲ್ಲಿ ಪಿಸುಗುಟ್ಟುತ್ತ ಹೇಳಿದ್ದ. ಇದು ಅಲ್ಲಿನ ಮಾಫಿಯಾಗಳು ಕಾಡನ್ನು ಕೊಳ್ಳೆ ಹೊಡೆ ಯುವ, ತೋಟ ಮತ್ತು ಗದ್ದೆ ಮಾಡಿ ಮಾರುವ ಕಾರ್ಯದ ಒಂದು ಭಾಗ , ಕಾಡಿಗೆ ಬೆಂಕಿ ಇಡುವುದು ಎಂದು.&lt;/p&gt;&lt;p data-block-key="ni9i"&gt;ನಾವು ಹತ್ತಿದ್ದ ಬೋಟು ನೆಗ್ರೋ ನದಿಯಲ್ಲಿ ಉತ್ತರಕ್ಕೆ ಹೊರಟು ಮೂರು ದಿನವಾಗಿತ್ತು. ಅಲ್ಲಲ್ಲಿ ಕಾಡಿನ ಮಧ್ಯೆ ಕೋಟೆಯಂತಹ ಗೋಡೆಗಳ ಮಧ್ಯೆ ಇರುವ ಖಾಲಿ ಗೆಸ್ಟ್ ಹೌಸ್ ಗಳಲ್ಲಿ ತಂಗುವುದು. ಅಲ್ಲಿ ಬೇಕಾಗುವ ದಿನಬಳಕೆಯ ಸಾಮಾನುಗಳು ಮತ್ತು ಆಹಾರವನ್ನು ಬೋಟಿನಲ್ಲಿಯೇ ಒಯ್ಯ ಬೇಕಿತ್ತು. ಇಂತಹ ಗೆಸ್ಟ್ ಹೌಸ್ ಗಳಿಗೆ ಅಲ್ಲಿನ ಕಾಡು ಜನ ಬಂದು ಕಬ್ಜಾ ಮಾಡಿಕೊಳ್ಳ ಬಾರದೆಂದು ಭರ್ಜರಿ ಬಂದೋಬಸ್ತ್ ಇತ್ತು.&lt;/p&gt;
&lt;/div&gt;

    
&lt;figure class="article-image text-center mb-4"&gt;
    &lt;img alt="Screenshot_1 6.1" class="img-fluid" height="720" src="https://cdn.vishwavani.news/media/images/Screenshot_1_6.1.max-1280x720.format-webp.webp" width="1280"&gt;
    
&lt;/figure&gt;

    
&lt;div class="article-paragraph"&gt;
    &lt;p data-block-key="7nonm"&gt;ಈ ಮೂರು ದಿನ ನದಿಯ ಗುಂಟ ವಾಸವಿದ್ದ ಜನರನ್ನು ತೋರಿಸಿ ಇವರೆಲ್ಲ ಇಲ್ಲಿನ ಬುಡಕಟ್ಟಿ ನವರು, ಕಾಡು ಮನುಷ್ಯರು ಎಂದು ನಮ್ಮ ಗೈಡ್ ಕಥೆ ಹೊಡೆಯುತ್ತಿದ್ದ. ಅವರನ್ನು ನೋಡಿದರೆ ತೀರಾ ಬಡ ಕೇರಿಯ ಜನರನ್ನು ನೋಡಿದಂತೆ ಅನ್ನಿಸುತ್ತಿತ್ತು. ನದಿಯಗುಂಟ ಅವರು ಬಂದು ಮೀನು ಹಿಡಿಯುತ್ತಿದ್ದರು, ಪಾತ್ರೆ ಬಟ್ಟೆ ತೊಳೆಯುತ್ತಿದ್ದರು, ಗುಡಿಸಲಿನ ಮನೆಗಳು, ಕೋಳಿ ದನ ಇತ್ಯಾದಿ. ಇವರು ನೋಡಲಿಕ್ಕೆ ಹಿಂದುಳಿದುಬಿಟ್ಟವರಂತೆ ಕಂಡರೂ ಅವರ ಬಟ್ಟೆ, ಪಾತ್ರೆಪಗಡೆ ಇವೆಲ್ಲ ಭಿನ್ನವಾಗೇನೂ ಇರಲಿಲ್ಲ.&lt;/p&gt;&lt;p data-block-key="e0kak"&gt;ನಾವು ನದಿಯ ಮಧ್ಯೆ ಹೋಗುತ್ತಿದ್ದರೆ ಗುಂಟ ಬಂದು ನಮ್ಮನ್ನು ಕರೆಯುತ್ತಿದ್ದರು, ಬಾಳೆ ಸೇರಿದಂತೆ ನಾನಾರೀತಿಯ ಹಣ್ಣುಗಳನ್ನು ಮಾರಾಟಕ್ಕೆ ‘ಡಾಲರ್ ಡಾಲರ್’ ಎಂದು ಕೂಗುತ್ತಿದ್ದರು. ಇವರನ್ನು ನೋಡಿ ಅವರ ಬಡತನದ ಬಗ್ಗೆ ಬೇಸರವಾಗುತ್ತಿತ್ತು. ಆದರೆ ಅವರನ್ನು ನೋಡುವ ಯಾವುದೇ ಆಸಕ್ತಿ ನಮ್ಮಲ್ಲಿರಲಿಲ್ಲ.&lt;/p&gt;&lt;p data-block-key="enc8d"&gt;ಏಕೆಂದರೆ ನಮ್ಮ ಲೆಕ್ಕದಲ್ಲಿ ಕಾಡು ಮನುಷ್ಯರೆಂದರೆ ಬೇರೆಯದೇ ಅನಿಸಿಕೆಗಳಿದ್ದವು. ಗೈಡ್ ಗೆ ಹೇಗಾದರೂ ಮಾಡಿ ಅಲ್ಲಿನ ಮೂಲ ನಿವಾಸಿ ಕಾಡಿನಲ್ಲಿ ವಾಸಿಸುವ ನಿಜವಾದ ಕಾಡು ಜನರನ್ನು ತೋರಿಸಬೇಕೆಂದು ಕೇಳಿಕೊಂಡೆವು. ಅದಕ್ಕೆ ಆತ ಇವರೇ ಅವರು ಎಂದು. ನಮಗೆ ಸಮಾಧಾನ ವಿಲ್ಲ, ಆತ ಮೊದಲಿಗೆ ಒಪ್ಪಲೇ ಇಲ್ಲ. ಅವರ ಜಾಗಕ್ಕೆ ನದಿಯಲ್ಲಿ ನಾವು ಹೋದರೆ ಬಾಣದಿಂದ, ಈಟಿಯಿಂದ ಕೊಂದು ಬಿಡುತ್ತಾರೆ, ಕಾಡಿನ ಸೆಕ್ಯುರಿಟಿಯವರಿಗೆ ಗೊತ್ತಾದರೆ ನಮ್ಮೆಲ್ಲರನ್ನೂ ಜೈಲಿಗೆ ಹಾಕುತ್ತಾರೆ ಎಂದೆಲ್ಲ ಹೇಳಿದ್ದ, ಅದು ಹೌದು ಕೂಡ.&lt;/p&gt;&lt;p data-block-key="3kmtm"&gt;ನಂತರ ಒಂದಿಷ್ಟು ಭಕ್ಷೀಸ್ ಆತನ ಕಿಸೆಗೆ ತುರಿಕಿದಾಗಲೇ ಆತ ಏನೋ ಒಂದು ಮಾಡೋಣ ಎಂದು ಮನಸ್ಸು ಮಾಡಿದ್ದು. ಆದರೆ ಆತ ಮೊದಲೇ ಹೇಳಿಬಿಟ್ಟಿದ್ದ. ಕಾಡು ಜನರನ್ನು ನೋಡಲಿಕ್ಕೆಲ್ಲ ಸಾಧ್ಯವೇ ಇಲ್ಲ ಆದರೆ ಅವರಿರುವ ಜಾಗದ ಹತ್ತಿರಕ್ಕೆ ಹೋಗಿ ಬರಬಹುದು ಎಂದು. ನಾವು ನಸೀಬು ತಿಳಿಯಲು ತಯಾರಾಗಿದ್ದೆವು.&lt;/p&gt;&lt;p data-block-key="6d4is"&gt;ನಾಲ್ಕನೆಯ ದಿನ ಬೆಳಿಗ್ಗೆ ಮೂರಕ್ಕೆಲ್ಲ ಹೊರಟುಬಿಡಬೇಕು, Tomorrow is your day ! ಎಂದು ಪರೋಕ್ಷವಾಗಿ ಗೈಡ್ ಹೇಳಿದ್ದ. ಆ ದಿನ ಬೆಳಿಗ್ಗೆ ನಾವು ನದಿಯಲ್ಲಿ ಕಾಡಿನಲ್ಲಿ ಬಹಳಷ್ಟು ಒಳಕ್ಕೆ ಬಂದಿದ್ದೆವು. ಸುಮಾರು ಬೆಳಗಿನ ಐದು ಗಂಟೆ. ಅದಾಗಲೇ ಬೆಳಕು ಸ್ವಲ್ಪ ಹರಿದಿತ್ತು. ನಮ್ಮ ಗೈಡ್ ಒಮ್ಮೆಲೇ ಎಲ್ಲರನ್ನೂ ಶಾಂತವಾಗಿಸಿದ. ಬೋಟಿನ ಡಬಲ್ ಎಂಜಿನ್ ಅನ್ನು ಆರಿಸುವಂತೆ ಕ್ಯಾಪ್ಟನ್'ಗೆ ಸನ್ನೆಯಲ್ಲೇ ಸೂಚಿಸಿದ. ಒಂದಿಷ್ಟು ಹೊತ್ತು ಶಾಂತವೆನಿಸಿದ್ದ ಕಾಡಿನಲ್ಲಿ ಒಮ್ಮಿಂದೊ ಮ್ಮೆಲೇ ಜೀರುಂಡೆಯ ತಡೆಯಲಾಗದಷ್ಟು ಶಬ್ದ ಶುರುವಾಯಿತು.&lt;/p&gt;&lt;p data-block-key="2m8qf"&gt;ಸಮುದ್ರದಲೆಯಷ್ಟೇ ಭೋರ್ಗರೆತ. ಆಮೇಲೆ, ಕೆಲವು ನಿಮಿಷಗಳಲ್ಲಿ ಎಲ್ಲವೂ ನಿಂತು ಮತ್ತೆ ಭಯ ಹುಟ್ಟುವಷ್ಟು ಭೀಕರ ಮೌನ. ನಾವು ಹಾಗೆ ನದಿಯ ಮೂಲೆಯಲ್ಲಿ ಅಡಗಿ ನಿಂತದ್ದು ಅಲ್ಲಿಯೇ ಇದ್ದ ಕೆಲವು ಫಾರೆಸ್ಟ್ ಗಾರ್ಡ್ ಗಳಿಗೆ ಕಾಣಿಸಿ ಅವರು ಅಲ್ಲಿಗೆ ಬಂದು ಪಿಸುಮಾತಿನಲ್ಲಿಯೇ ನಮ್ಮ ಕ್ಯಾಪ್ಟನ್ ಗೆ ಅವಾಜು ಹಾಕುತ್ತಿದ್ದರು.&lt;/p&gt;&lt;p data-block-key="2sbei"&gt;ಮಧ್ಯೆ ಮಧ್ಯೆ ನಮ್ಮತ್ತ ನೋಡುತ್ತಿದ್ದರು. ಅವರಿಗೆ ಇಂಗ್ಲಿಷ್ ಬರುತ್ತಿರಲಿಲ್ಲ, ನಮಗೆ ಪೋರ್ಚುಗೀಸ್ ತಿಳಿಯುತ್ತಿರಲಿಲ್ಲ. ನಮಗೆ ಈ ಗೈಡ್ ನಮ್ಮ ಮೇಲೆಯೇ ಗೂಬೆ ಕೂರಿಸುತ್ತಿದ್ದಾನೆಯೇ ಎಂಬ ಅನುಮಾನ. ಆ ಕ್ಷಣ ಕಾಡಿನೊಳಗಿಂದ ಒಂದೇ ಸಮನೆ ಸುಮಾರು ಐವತ್ತು ಜನ ಕಲ್ಲು ಕುಟ್ಟುತ್ತಿರು ವಂತಹ ಶಬ್ದ ಕೇಳಿಸತೊಡಗಿತು. ಎರಡೂ ಬೋಟಿನವರು ಶಾಂತವಾಗಿ ಕೇಳಿಸಿಕೊಂಡೆವು.&lt;/p&gt;&lt;p data-block-key="fdjl3"&gt;ಅದು ಸುಮಾರು ಹದಿನೈದು ನಿಮಿಷ ಕೇಳಿಸಿತು. ಅವರನ್ನು ನೋಡಲಂತೂ ಆಗಲಿಲ್ಲ, ಕೊನೆಯ ಪಕ್ಷ ಅವರ ಶಬ್ದ ಕೇಳಿಸಿಕೊಂಡು ಬಂದದ್ದಾಯಿತು. ಅಷ್ಟು ಬೆಳಿಗ್ಗೆ ಆ ಕಾಡುಜನ ಏನನ್ನು ಕುಟ್ಟು ತ್ತಿದ್ದರು, ಒಂದು ವೇಳೆ ಅಲ್ಲಿ ಆ ಸೆಕ್ಯೂರಿಟಿ ಗಾರ್ಡ್ ಗಳಿಲ್ಲದಿದ್ದಲ್ಲಿ ನಾವು ಮುಂದೆ ಹೋಗುತ್ತಿದ್ದೇ ವಾ ಇವೆಲ್ಲ ಪ್ರಶ್ನೆಯಾಗಿಯೇ ಉಳಿಯಿತು. ಇದು ಅತ್ಯಂತ ರೋಚಕತೆ ಹುಟ್ಟಿಸಿದ, ಈಗ ನೆನೆಸಿ ಕೊಂಡರೆ ಹುಚ್ಚು ಭಂಡತನ ಎಂದೆನ್ನಿಸುವ ಒಂದು ನೆನಪು.&lt;/p&gt;&lt;p data-block-key="38mqh"&gt;ಯುರೋಪಿಯನ್ನರು ಬ್ರೆಝಿಲ್ ಗೆ ಕಾಲಿಡುವ ಸಮಯದಲ್ಲಿ ಇಂತಹ 2000 ಬುಡಕಟ್ಟು, ಕಾಡು ಜನಾಂಗಗಳು ಬ್ರೆಝಿಲ್ ನಲ್ಲಿ ಇದ್ದವು ಎನ್ನುವುದಕ್ಕೆ ದಾಖಲಿಯಿದೆ. ಅವರೆಲ್ಲ ಸುಮಾರು ಐವತ್ತು ಸಾವಿರ ವರ್ಷದ ಹಿಂದೆ ಈ ನೆಲಕ್ಕೆ ಬಂದರು ಎನ್ನಲಾಗುತ್ತದೆ. ಯುರೋಪಿಯನ್ನರು ಬ್ರೆಝಿಲ್ ಗೆ ಬಂದದ್ದು ಹದಿನಾಲ್ಕನೇ ಶತಮಾನ, ಈಗಿನಿಂದ 522 ವರ್ಷ ಹಿಂದೆ. ಆಗಲೇ ಶುರುವಾದ ಯುರೋಪಿಯನ್ ಮತ್ತು ಅಮೆಜಾನ್ ಬುಡಕಟ್ಟು ಜನಾಂಗದ ನಡುವಿನ ಯುದ್ಧ ಇಂದಿನವರೆಗೆ ನಾನಾ ರೀತಿ, ಸ್ವರೂಪಗಳನ್ನು ಪಡೆದು ಮುಂದುವರಿದುಕೊಂಡೆ ಬಂದಿದೆ.&lt;/p&gt;&lt;p data-block-key="a9ida"&gt;ಮೊದಲು ಬಂದ ಪೋರ್ಚುಗೀಸರ ವಿರುದ್ಧ ಯುದ್ಧಕ್ಕೆ ನಿಂತವರೆಂದರೆ ‘ತುಪಿನಂಬಾ’ ಬುಡಕಟ್ಟಿ ನವರು. ಈ ಯುದ್ಧ ಎರಡು ವರ್ಷಗಳ ಕಾಲ ನಡೆಯಿತು. ಕೊನೆಗೆ ಆ ಜನಾಂಗ ಸೋತು ಮಂಡಿ ಯೂರಿತು. ನಂತರ ಐಮೋರ್ ಎನ್ನುವ ಇನ್ನೊಂದು ಜನಾಂಗ ಪೋರ್ಚುಗೀಸರ ವಿರುದ್ಧ ಸುಮಾರು ನೂರಿಪ್ಪತ್ತು ವರ್ಷ ಕಾದಾಡಿ ನಂತರ ಸೋತಿತು.&lt;/p&gt;&lt;p data-block-key="8d05t"&gt;ಹೀಗೆ ಸೋತವರನ್ನು ಪೋರ್ಚುಗೀಸರು ಮತಾಂತರಿಸಿ ಆ ನೆಲಕ್ಕೆ ಆಕ್ರಮಣಕ್ಕೆ ಬರುತ್ತಿದ್ದ ಬ್ರಿಟೀಷರು, ಫ್ರೆಂಚರನ್ನು ಸದೆಬಡಿಯಲು ಯುದ್ಧದಲ್ಲಿ ಆಳಾಗಿ ಬಳಸಿಕೊಳ್ಳುತ್ತಿದ್ದರು. ಮನವೊ, ಗೌರಾನಿ ಹೀಗೆ ನೂರಾರು ಕಾಡು ಜನಾಂಗ ನಿರಂತರ ಹೋರಾಡಿ ಸೋತು ಅಂದಿನ 2000 ಜನಾಂಗಗಳಲ್ಲಿ ಇಂದು ಉಳಿದುಕೊಂಡದ್ದು 350 ಜನಾಂಗ ಮಾತ್ರ. ಅದರಲ್ಲಿ 290 ಜನಾಂಗ ಅದಾಗಲೇ ಹೊರಜಗತ್ತಿಗೆ ತೆರೆದುಕೊಂಡಿದೆ ಮತ್ತು ಜೊತೆಯಲ್ಲಿ ತಮ್ಮ ಬದುಕನ್ನು ಪ್ರತ್ಯೇಕ ವಾಗಿಯೇ ನಡೆಸಿಕೊಂಡು ಹೋಗುತ್ತಿವೆ.&lt;/p&gt;&lt;p data-block-key="81v4"&gt;ಅಮೆಜಾನ್ ಕಾಡಿನ ಬಗ್ಗೆ ಕಳೆದ ಒಂದು ದಶಕದಿಂದ ಒಂದೇ ಒಂದು ಒಳ್ಳೆಯ ಸುದ್ದಿ ಕೇಳಿದ್ದಿಲ್ಲ. ಮೊದಲನೆಯದು ತೀವ್ರಗತಿಯ ಕಾಡಿನ ನಾಶ. ಇಷ್ಟೊಂದು ದೊಡ್ಡ ಕಾಡು ಕಳೆದ ಕೆಲ ವರ್ಷದಿಂದ ಈಚೆ ಪ್ರತೀ ವರ್ಷ ಶೇ. 1 ರಷ್ಟು ಕಡಿಮೆಯಾಗುತ್ತಿದೆ. ಕಳೆದ ಐದು ದಶಕದಲ್ಲಿ ಶೇ.20 ಸಸ್ಯ ಸಂಪತ್ತು ನಾಶವಾಗಿದೆ ಎನ್ನುವ ಅಜಮಾಸು ಲೆಕ್ಕ. ಎರಡನೆಯದು ಈ ಕಾಡಿನ ನಾಶದ ಜೊತೆ ನಾಶವಾಗುವ ಅಥವಾ ಆಧುನಿಕತೆಯ ಇತ್ತಕಡೆ ದಾಟಿಬರುವ ಈ ಬುಡಕಟ್ಟು ಜನಾಂಗಗಳು, ಬದುಕು. ಇದರಿಂದ ಕಾಡು ಇನ್ನಷ್ಟು ನಾಶಕ್ಕೆ ತೆರೆದುಕೊಳ್ಳುತ್ತಿದೆ.&lt;/p&gt;&lt;p data-block-key="etfnq"&gt;2000 ಇದ್ದ ಕಾಡು ಜನಾಂಗ ಇಂದು 350 ಕ್ಕೆ ಬಂದಿದೆ ಎಂದೇನಲ್ಲ. ಅದರಲ್ಲಿ ಈ ಕಾಡಿನ ಅಂಚಿನ ಲ್ಲಿಲ್ಲದ, ಕಾಡಿನ ತೀರಾ ಒಳಕ್ಕೆ ಇರುವ 60 ಕಾಡು ಜನಾಂಗ ಇಂದಿಗೂ ಸುರಕ್ಷಿತವಾಗಿಯೇ ಉಳಿದು ಕೊಂಡಿದೆ. ಅವರ ಸರದಿ ಬರಲು ಇನ್ನೂ ಸಮಯ ಬೇಕು. ಆದರೆ ಈ ಅಂಚಿನಲ್ಲಿರುವ ಜನಾಂಗ ಗಳದ್ದು ಇಂದಿನ, ಕೆಲ ಶತಮಾನಗಳ ನಿರಂತರ ಯುದ್ಧ, ಘರ್ಷಣೆ. ಇವರೆಲ್ಲ ಇರುವುದು ಕಾಡಿನ ಅಂಚಿನಲ್ಲಿ, ಆಧುನಿಕ ನಾಡಿಗೆ ತಾಗಿ. ಇಂದು ಮಾಫಿಯಾ, ಅದರ ಆಣತಿಯಂತೆ ನಡೆಯುವ ಸರಕಾರ ಹೊಡೆದು ಬಡಿದು ಅವರಿಂದ ಅವರ ನೆಲ, ಕಾಡನ್ನು ಕಿತ್ತುಕೊಳ್ಳುತ್ತಿದೆ.&lt;/p&gt;&lt;p data-block-key="7b92g"&gt;ಇನ್ನು ಕ್ರಿಶ್ಚನ್ ಮಿಷನರಿಗಳಿಗೆ ಅವರನ್ನು ಆದಷ್ಟು ಬೇಗ ಮತಾಂತರಿಸುವ ಗಡಿಬಿಡಿ. ಇದೆಲ್ಲದರ ನಡುವೆ ತಮ್ಮತನ, ತಮ್ಮ ಜೀವನ ರೀತಿಯನ್ನು ಕಾಪಾಡಿಕೊಳ್ಳುವ ಹೊಡೆದಾಟದ ಬದುಕು ಈ ಬುಡಕಟ್ಟು ಜನಾಂಗದವರದ್ದು. ಈ ಅಂಚಿನಲ್ಲಿರುವ ಬುಡಕಟ್ಟು ಜನಾಂಗದ ತೀವ್ರ ವಿರೋಧ ಬ್ರೆಝಿಲ್ ನ ಮಾಫಿಯಾ ಮತ್ತು ಸರಕಾರವನ್ನು ಕಾಡು ಹೊಕ್ಕದಂತೆ ಹಲವು ಕಡೆ ಅಡ್ಡಿಯಾಗಿ ನಿಂತಿವೆ. ಈ ಬುಡಕಟ್ಟು ಜನ ಹೀಗಾಗಿ ಅರಣ್ಯ ರಕ್ಷಕರು.&lt;/p&gt;&lt;p data-block-key="cn4pv"&gt;ಈ ಕಾಡಿನ ಕೊಳ್ಳೆಗೆ ತಡೆಯಾಗಿ ನಿಂತಿರುವ ಈ ಗಡಿಯಂಚಿನ ಬುಡಕಟ್ಟಿನವರನ್ನು ಹೇಗಾದರೂ ಮಾಡಿ, ವ್ಯವಸ್ಥಿತಯವಾಗಿ ಸದೆಬಡಿಯಬೇಕೆಂದು ಬ್ರೆಝಿಲ್ ಸರಕಾರ ಈಗ ಐದು ವರ್ಷದ ಹಿಂದೆ ಹೊಸತೊಂದು ಕಾನೂನನ್ನು ಜಾರಿಗೆ ತಂದಿತ್ತು. ಅದರ ಪ್ರಕಾರ ಯಾರ ಬಳಿ ಅವರಿರುವ ಜಾಗದ ಕಾಗದ ಪತ್ರ ಇಲ್ಲವೋ ಅವರೆಲ್ಲ ಕಾಡನ್ನು ಬಿಡಬೇಕು, ಅದು ಸರಕಾರದ ಆಸ್ತಿ. ಇಂತಹದ್ದೊಂದು ಕಾನೂನು ಜಾರಿಯಾಗುತ್ತಿದೆ ಎಂಬ ಸುದ್ದಿ ತಿಳಿದ ಈ ಗಡಿನಾಡಿನ ಬುಡಕಟ್ಟಿನವರು ಆಗ ಸಾವಿರದ ಲೆಕ್ಕದಲ್ಲಿ ಬ್ರೆಝಿಲ್ ನ ಸಂಸತ್ತಿನ ಮೇಲೆ ಮುಗಿಬಿದ್ದಿದ್ದರು, ಸುದ್ದಿಯಾಗಿತ್ತು.&lt;/p&gt;&lt;p data-block-key="4m7p7"&gt;ಇದೆಲ್ಲ ಖದೀಮತನಕ್ಕೆ ಚಾಲನೆ ಕೊಟ್ಟದ್ದು ಅಲ್ಲಿನ ಅಧ್ಯಕ್ಷ ಜೈರ್ ಬಾಲ್ಸನಾರೋ. ಆತ ಈ ಕಾನೂನನ್ನು ಶತಾಯು ಗತಾಯು ಜಾರಿಗೆ ತಂದೇ ತೀರುತ್ತೇನೆ ಎಂದು ಹೊರಟವ. ಇದಷ್ಟೇ ಅಲ್ಲ, ಅಲ್ಲಿನ ಬುಡಕಟ್ಟು ಜನಾಂಗವನ್ನು ಕಾಪಾಡುತ್ತಿದ್ದ FUNAI ಎನ್ನುವ ಗಟ್ಟಿ ಸಂಸ್ಥೆಯೊಂದಿತ್ತು. ಇದರಲ್ಲಿ ಅತಿಹೆಚ್ಚು ಪ್ರಮಾಣದಲ್ಲಿ ಬುಡಕಟ್ಟು ಜನಾಂಗದ, ಕಲಿತ, ಬಹಳಷ್ಟು ಹೋರಾಟ ಗಾರರಿದ್ದರು.&lt;/p&gt;&lt;p data-block-key="aapie"&gt;ಅಧ್ಯಕ್ಷ ಬಾಲ್ಸನಾರೋ ಈ ಸಂಸ್ಥೆಗೆ ಸಂದಾಯವಾಗುತ್ತಿದ್ದ ಹಣವನ್ನೆಲ್ಲ ನಿಲ್ಲಿಸಿಬಿಟ್ಟ. ಸರಕಾರದ ವಿರುದ್ಧವೇ ಚಟುವಟಿಕೆ ಮಾಡುವವರಿಗೆ ಸರಕಾರ ಏಕೆ ಹಣ ಕೊಡಬೇಕು ಎಂದು ಪ್ರಶ್ನಿಸಿದ. ನೋಡನೋಡುತ್ತಲೇ ಆ ಸಂಸ್ಥೆ ಹಲ್ಲು ಕಿತ್ತ ಹವಾಯಿತು. ಇದರಿಂದ ಸರಕಾರ, ಮಾಫಿಯಾ ಮತ್ತು ಭೂಕಬಳಿಕೆ ಮಾಡುವವರನ್ನು ಕೇಳುವವರೇ ಇಲ್ಲದಂತಾಯಿತು.&lt;/p&gt;&lt;p data-block-key="6tg67"&gt;ನಾವು ರಸ್ತೆಯಲ್ಲಿ ಪ್ರಯಾಣಿಸುವಾಗ ರಸ್ತೆ ಬದಿಯಲ್ಲಿ ಊರೇ ಅಲ್ಲದಂತಹ ಜಾಗದಲ್ಲಿ ಇಂದು ನೂರಾರು ಗುಡಿಸಲುಗಳು, ಕುಟುಂಬಗಳು ಕಾಣಿಸಿಕೊಳ್ಳುತ್ತವೆ. ಇವರೆಲ್ಲ ಅಲ್ಲಿನ ಸರಕಾರ ಕಾಡಿನಿಂದ ಓಡಿಸಿ ನೆಲೆ ಕಳೆದುಕೊಂಡವರು. ಅವರು ಹಗಲಲ್ಲಿ ಹೈವೇ ಗಳಲ್ಲಿ ಬಂದು ನಿಂತು ಆಹಾರಕ್ಕೆ, ನೀರಿಗೆ, ಹಣಕ್ಕೆ ಬೇಡುತ್ತಾರೆ.&lt;/p&gt;&lt;p data-block-key="dm8s4"&gt;ರಾತ್ರೆಯಾಯಿತೆಂದರೆ ಆ ರಸ್ತೆಗಳಲ್ಲಿ ಸಂಚರಿಸಬಾರದು ಎಂಬ ಅಲಿಖಿತ ನಿಯಮ. ಏಕೆಂದರೆ ಅವರೇ ಅಡ್ಡ ಹಾಕಿ ಸುಲಿಗೆ ಮಾಡುತ್ತಾರೆ. ಇದೆಲ್ಲದಕ್ಕೆ ಕಾರಣವೇನು, ಏಕೆ ಹೀಗಾಯಿತು, ಏಕೆ ಈ ಸುಲಿಗೆ ನಡೆಯುತ್ತಿದೆ ಎಂಬ ಮೂಲ ಪ್ರಶ್ನೆಗೆ ಉತ್ತರ ಈಗ ನಿಮಗೆ ಗೊತ್ತಿದೆ. ಒಟ್ಟಾರೆ ಇಂದು ಬ್ರೆಜಿಲ್ ನ ಮೂಲ ನಿವಾಸಿಗಳು, ಬುಡಕಟ್ಟಿನವರು ಅವರದೇ ನೆಲದಲ್ಲಿ ಅತಂತ್ರರಾಗಿ ಅಸಾಧ್ಯ ಸ್ಥಿತಿಗೆ ಬಂದು ನಿಂತಿದ್ದಾರೆ. ಅದೆಷ್ಟೋ ಲಕ್ಷ ಮಂದಿ ಕಾಡಿಲ್ಲದೆ, ನಾಡಿಗೂ ಸೇರದೇ ತಮ್ಮ ನೆಲದಲ್ಲಿಯೇ ಪರಕೀಯರಂತೆ ಬದುಕುತ್ತಿದ್ದಾರೆ. ಅವರಲ್ಲಿ ಹೆಚ್ಚಿನವರು ವೋಟಿಂಗ್ ವ್ಯವಸ್ಥೆ ಯೊಳಕ್ಕೆ ಇನ್ನೂ ಬಾರದಿರುವುದರಿಂದ ರಾಜಕೀಯವಾಗಿ ಅವರೆಲ್ಲ ದುರ್ಬಲರು, ಲೆಕ್ಕಕ್ಕಿಲ್ಲದವರು.&lt;/p&gt;&lt;p data-block-key="3u4t1"&gt;ಒಂದೊಳ್ಳೆ ಸುದ್ದಿಯೆಂದರೆ ಕಳೆದ ತಿಂಗಳು ಜೈರ್ ಬಾಲ್ಸನಾರೋ ಚುನಾವಣೆಯಲ್ಲಿ ಸೊತ್ತಿದ್ದಾನೆ. ಇದು ಕೊಡುವ ಸಮಾಧಾನಕ್ಕಿಂತ ಈಗ ಆರಿಸಿ ಬಂದಿರುವ ಲೂಯೀಸ್ ಡಾ ಸಿಲ್ವಾ ಒಂದಿಷ್ಟು ಭರವಸೆಯನ್ನು ಹುಟ್ಟಿಹಾಕಿದ್ದಾನೆ. ಆತ ಮೊದಲಿನಿಂದ ಹೇಳಿಕೊಂಡು ಬಂದದ್ದು ಎರಡನ್ನು. ಮೊದಲನೆಯದು ಅಮೆಜಾನ್ ಕಾಡನ್ನು ಸಂರಕ್ಷಿಸುವುದು. ಎರಡನೆಯದು ಅಲ್ಲಿನ ಕಾಡು, ಬುಡಕಟ್ಟಿನವರನ್ನು ಅವರಷ್ಟಕ್ಕೆ ಅವರಿಗಿರಲು ಅವಕಾಶ ಮಾಡಿಕೊಡುವುದು.&lt;/p&gt;&lt;p data-block-key="emhks"&gt;ಬ್ರೆಝಿಲ್ ಕಾಡುಜನರದ್ದು ಹೊರಜಗತ್ತಿನವರೊಂದಿಗೆ ಐನೂರು ವರ್ಷದ ಯುದ್ಧ. ಇದರಲ್ಲಿ ಸತ್ತವರ, ನಿರ್ಗತಿಕರಾದವರ ಯಾವುದೇ ಲೆಕ್ಕವಿಟ್ಟವರು ಯಾರೂ ಇಲ್ಲ. ಪ್ರತೀ ಅಕ್ರಮಣದಲ್ಲೂ ನಶಿಸಿಹೋಗುವ ಭಾಷೆ, ಸಂಸ್ಕೃತಿ, ಕಲೆಗೆ ಕೂಡ ಲೆಕ್ಕವಿಲ್ಲ. ಇದು ನಿಲ್ಲಬೇಕಿದೆ. ಅಮೆಜಾನ್ ಎಂದರೆ ಅದು ಜಗತ್ತಿನ ಶ್ವಾಸಕೋಶ. ಅಮೆಜಾನ್ ನಾಶವೆಂದರೆ ಅದು ಹೆಚ್ಚುಕಡಿಮೆ ಭೂಮಿಯ ನಾಶ. ಅದರ ಪರಿಣಾಮ ಜಗತ್ತಿನ ಎಲ್ಲರ ಮೇಲೆ ಒಂದಿಲ್ಲೊಂದು ರೀತಿಯಲ್ಲಿ ತಟ್ಟಿಯೇ ತಟ್ಟುತ್ತದೆ. ಆದರೆ ಅದು ಅಷ್ಟು ಸುಲಭದ ಕೆಲಸವಲ್ಲ.&lt;/p&gt;&lt;p data-block-key="8mv3q"&gt;ಅಲ್ಲಿನ ಮಾಫಿಯಾವನ್ನು, ಕಾಡುಗಳ್ಳರನ್ನು ನಿಯಂತ್ರಿಸುವುದು ನಾಡಿನ ಸರಕಾರಕ್ಕಂತೂ ಅಸಾಧ್ಯವೇ ಹೌದು. ಏಕೆಂದರೆ ಕಾಡು ಅಷ್ಟು ದೊಡ್ಡದು. ಇದರ ರಕ್ತ ಹೀರಲು, ಮರಕ್ಕೆ, ಅಲ್ಲಿನ ಖನಿಜಕ್ಕೆ, ಅಪರೂಪದ ಪ್ರಾಣಿಗಳಿಗೆ, ಅದರ ಚರ್ಮ, ಕೊಡು, ಉಗುರು ಇತ್ಯಾದಿಯನ್ನು ಕದ್ದು ಮಾರುವ ಸುಮಾರು 600 ಗ್ಯಾಂಗ್ ಗಳು ಇಂದು ಬ್ರೆಝಿಲ್ ನಲ್ಲಿಯೇ ಸಕ್ರೀಯವಾಗಿವೆ. ಅವು ವ್ಯವಸ್ಥೆಯ ಭಾಗವೇ ಆಗಿಹೋಗಿದೆ. ಇದೆಲ್ಲ ಕಳ್ಳಸಾಗಾಣಿಕೆಗೆ ವ್ಯವಸ್ಥಿತ ರಫ್ತು ಸಾವಿರದೆಂಟು ಮಾರ್ಗಗಳಿವೆ. ಒಂದು ವೀರಪ್ಪನ್ ನನ್ನೇ ಹಿಡಿಯಲು ನಮಗೆ ಅದೆಷ್ಟೋ ದಶಕ ಬೇಕಾಯಿತು. ಇಲ್ಲಿ ಅಂತಹ ಲಕ್ಷ ವೀರಪ್ಪನ್ ಗಳಿದ್ದಾರೆ. ಇದು ಬ್ರೆಝಿಲ್ ಸರಕಾರವನ್ನು ಮೀರಿ ಬೆಳೆದಾಗಿದೆ. ಈ ಗ್ಯಾಂಗುಗಳ ಬಳಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳಿವೆ, ಯಥೇಚ್ಛ ಹಣ, ರಾಜಕೀಯ ಬೆಂಬಲ ಎಲ್ಲವೂ ಇದೆ.&lt;/p&gt;&lt;p data-block-key="b6un6"&gt;ಕಾಡು ಜನರ ಐನೂರು ವರ್ಷದ ಯುದ್ಧದಲ್ಲಿ ಸೋಲು ಮಾತ್ರ ಖಚಿತ. ಈ ಸೋಲು ಯಾರೊಬ್ಬರ ಗೆಲುವೂ ಆಗುವುದಿಲ್ಲ ಎನ್ನುವುದು ಕೂಡ ಅಷ್ಟೇ ಸತ್ಯ. ಇಂದು ಅಮೆಜಾನ್ - ಜಗತ್ತಿನ ಶ್ವಾಸಕೋಶಕ್ಕೆ ಕ್ಯಾನ್ಸರ್ ಉಲ್ಬಣಿಸಿ ಕೆಲ ದಶಕವೇ ಸರಿದಿದೆ. ಕಾಡುಜನರು ಬಳಲಿದ್ದಾರೆ. ಕಾಡು ಕೂಡ ಬಸವಳಿದಿದೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ದಿನ ಭವಿಷ್ಯ, ಆಗಸ್ಟ್‌ 7, 2026: ಈ ರಾಶಿಗೆ ಕೆಲಸದ ಹೊರೆ ಹೆಚ್ಚಾದರೂ ಫಲ ಸಿಗುವ ದಿನ!</title><link>https://vishwavani.news/religious/if-the-workload-increases-for-this-zodiac-sign-it-will-be-a-success-day-85797.html</link><guid>https://vishwavani.news/religious/if-the-workload-increases-for-this-zodiac-sign-it-will-be-a-success-day-85797.html</guid><pubDate>Fri, 07 Aug 2026 00:31:10 +0000</pubDate><description>&lt;![CDATA[Horoscope Today August 7th: ಇಂದು ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಆಷಾಡ ಮಾಸ, ಶುಕ್ಲ ಪಕ್ಷದ, ನವಮಿ ತಿಥಿ, ಕೃತಿಕಾ ನಕ್ಷತ್ರದ, ಆಗಸ್ಟ್ 7ನೇ ತಾರೀಖಿನ ಶುಕ್ರವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ]]&gt;</description><dc:creator>&lt;![CDATA[Pushpa Kumari]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಧಾರ್ಮಿಕ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Daily_Horoscope_5_KL4CGTy.original.jpg" class="attachment-large size-large wp-post-image" alt="ದಿನ ಭವಿಷ್ಯ, ಆಗಸ್ಟ್‌ 7, 2026: ಈ ರಾಶಿಗೆ ಕೆಲಸದ ಹೊರೆ ಹೆಚ್ಚಾದರೂ ಫಲ ಸಿಗುವ ದಿನ!" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="wsur1"&gt;&lt;b&gt;ಬೆಂಗಳೂರು:&lt;/b&gt; ಇಂದು ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಆಷಾಡ ಮಾಸ, ಶುಕ್ಲ ಪಕ್ಷದ, ಕೃತಿಕಾ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ‌ ರಾಶಿ ಭವಿಷ್ಯದ ಬಗ್ಗೆ ಮಾಹಿತಿ ಇಲ್ಲಿದೆ.&lt;/p&gt;&lt;p data-block-key="9j2tj"&gt;&lt;b&gt;ಮೇಷ ರಾಶಿ:&lt;/b&gt; ಈ ರಾಶಿಗೆ ಇಂದು ಉತ್ತಮವಾದ ದಿನವಾಗಿದೆ. ವೈಯಕ್ತಿಕ ವಿಚಾರ ಬಗ್ಗೆ ಹೆಚ್ಚು ಯೋಚನೆ ಮಾಡಬೇಕಾಗುತ್ತದೆ.‌ ಅದೇ ರೀತಿ ಕುಟುಂಬದ ಒಳಿತಿಗಾಗಿ ನೀವಿಂದು ಶ್ರಮಿಸಬೇಕಾಗುತ್ತದೆ.&lt;/p&gt;&lt;p data-block-key="fkvjm"&gt;&lt;b&gt;ವೃಷಭ ರಾಶಿ&lt;/b&gt;: ಈ ರಾಶಿಯವರಿಗೆ ಮಧ್ಯಾಹ್ನವರೆಗೂ ಪಾರ್ಟ್ನರ್ಸ್ ಶೀಪ್ ವ್ಯವಹಾರ ಹಾಗೂ ಕೆಲಸದಲ್ಲಿ ತೊಂದರೆಗಳು ಎದುರಾಗುತ್ತದೆ. ಮಧ್ಯಾಹ್ನ ಬಳಿಕ ಇದಕ್ಕೆಲ್ಲಾ ಪರಿಹಾರ ಸಿಕ್ಕಿ ಖುಷಿಯಾದ ದಿನ ಕಳೆಯುತ್ತೀರಿ.&lt;/p&gt;&lt;p data-block-key="cscdr"&gt;&lt;b&gt;ಮಿಥುನ ರಾಶಿ&lt;/b&gt;: ಇಂದು ಈ ರಾಶಿಗೆ ಮಧ್ಯಾಹ್ನವರೆಗೂ ಇಷ್ಟಾರ್ಥ ಸಿದ್ದಿಯಾಗುತ್ತದೆ. ನೀವು ಅಂದುಕೊಂಡದ್ದೆಲ್ಲ ಸಿದ್ದಿಯಾಗುತ್ತದೆ. ಆದರೆ ಮಧ್ಯಾಹ್ನ ಬಳಿಕ ಶತ್ರುಗಳಿಂದ ತೊಂದರೆ ಕಾಡಬಹುದು.&lt;/p&gt;&lt;p data-block-key="6frur"&gt;&lt;b&gt;ಕಟಕ ರಾಶಿ&lt;/b&gt;: ಕಟಕ ರಾಶಿ ಅವರಿಗೆ ಕಾರ್ಯಕ್ಷೇತ್ರದಲ್ಲಿ ಜವಾಬ್ದಾರಿ ಹೆಚ್ಚಾಗುತ್ತದೆ. ಆದರೆ ಸ್ನೇಹಿತರ ಜೊತೆ ಉತ್ತಮ ಸಮಯ ಕಳೆಯಲಿದ್ದು ಧನ ಆಗಮನದ ಸೂಚನೆಗಳು ಕೂಡ ಇರುತ್ತವೆ.&lt;/p&gt;&lt;p data-block-key="a179c"&gt;&lt;b&gt;ಸಿಂಹ ರಾಶಿ&lt;/b&gt;: ಸಿಂಹ ರಾಶಿಯವರಿಗೆ ಮಧ್ಯಾಹ್ನವರೆಗೂ ಆತ್ಮ ವಿಶ್ವಾಸದಿಂದ ಕೈಗೊಂಡ ಕೆಲಸದಲ್ಲಿ ತೊಂದರೆ ಎದುರಾದರೂ ಮಧ್ಯಾಹ್ನ ಬಳಿಕ ಯಶಸ್ಸು ಸಿಗುತ್ತದೆ.&lt;/p&gt;&lt;p data-block-key="23pqg"&gt;&lt;b&gt;ಕನ್ಯಾ ರಾಶಿ:&lt;/b&gt; ಕನ್ಯಾ ರಾಶಿಯವರಿಗೆ ಮಧ್ಯಾಹ್ನವರೆಗೆ ಇಂದು ಭಾಗ್ಯದಲ್ಲಿ ಏರು ಪೇರು ಆಗಬಹುದು. ಮಧ್ಯಾಹ್ನ ಬಳಿಕ ಮನಸ್ಸಿಗೆ ನೆಮ್ಮದಿ ಹಾಗೂ ಕೆಲಸ ಕಾರ್ಯದಲ್ಲಿ ಯಶಸ್ಸು&lt;/p&gt;&lt;p data-block-key="a9chg"&gt;&lt;a href="/vastu-world/is-your-home-vastu-causing-health-issues-tips-for-a-healthier-life-76961.html"&gt;&lt;b&gt;Vastu Tips: ವಾಸ್ತು ದೋಷ , ಆರೋಗ್ಯ: ಯಾವ ದಿಕ್ಕು ಯಾವ ಅನಾರೋಗ್ಯ ಸಮಸ್ಯೆಗೆ ಕಾರಣ? ಇಲ್ಲಿದೆ ಮಾಹಿತಿ&lt;/b&gt;&lt;/a&gt;&lt;/p&gt;&lt;p data-block-key="5f6np"&gt;&lt;b&gt;ತುಲಾ ರಾಶಿ&lt;/b&gt;: ತುಲಾ ರಾಶಿ ಅವರಿಗೆ ಮಧ್ಯಾಹ್ನವರೆಗೂ ಮನಸ್ಸಿಗೆ ಕ್ಷೇಶ, ನೊವು ಬೇಸರ ಕಾಡಬಹುದು. ಮಧ್ಯಾಹ್ನ ಬಳಿಕ ಇದಕ್ಕೆಲ್ಲ ಪರಿಹಾರ ಕಂಡುಕೊಳ್ಳುತ್ತೀರಿ.&lt;/p&gt;&lt;p data-block-key="e86l0"&gt;&lt;b&gt;ವೃಶ್ಚಿಕ ರಾಶಿ&lt;/b&gt;: ಈ ರಾಶಿಗೆ ಮಧ್ಯಾಹ್ನವರೆಗೂ ಸಾಮಾಜಿಕ ಚಟುವಟಿಕೆಯಲ್ಲಿ ಬ್ಯುಸಿ ಇರುತ್ತೀರಿ. ಮಧ್ಯಾಹ್ನ ಬಳಿಕ ಪ್ರೀತಿ ಪಾತ್ರರ ಜೊತೆ ಸಮಯ ಕಳೆಯುತ್ತೀರಿ&lt;/p&gt;&lt;p data-block-key="fppj2"&gt;&lt;b&gt;ಧನಸ್ಸು ರಾಶಿ&lt;/b&gt;: ಧನಸ್ಸು ರಾಶಿಗೆ ಇಂದು ಮಧ್ಯಾಹ್ನವರೆಗೂ ತೊಂದರೆ. ಹಣಕಾಸಿನ ವಿಚಾರ ಹಾಗೂ ಪ್ರೀತಿ ಪ್ರೇಮದಲ್ಲಿ ಬೇಸರವಾಗಬಹುದು. ಮಧ್ಯಾಹ್ನ ಬಳಿಕ ಶತ್ರುಗಳನ್ನು ಹಿಮ್ಮೆಟ್ಟಬಹುದು.&lt;/p&gt;&lt;p data-block-key="bqqhg"&gt;&lt;b&gt;ಮಕರ ರಾಶಿ&lt;/b&gt;: ಮಕರ ರಾಶಿಯವರಿಗೆ ಮಧ್ಯಾಹ್ನವರೆಗೂ ಮನಸ್ಸಿಗೆ ಕ್ಲೇಷ ಇರುತ್ತದೆ. ಮಧ್ಯಾಹ್ನ ಬಳಿಕ ಹಣಕಾಸಿನ ತೊಂದರೆ ನಿವಾರಣೆ&lt;/p&gt;&lt;p data-block-key="958cl"&gt;&lt;b&gt;ಕುಂಭ ರಾಶಿ:&lt;/b&gt; ಈ ರಾಶಿಗೆ ಇಂದು ಮಧ್ಯಾಹ್ನವರೆಗು ಎಲ್ಲವು ನಿಮ್ಮ ಪರವಾಗಿ ನಡೆಯಬಹುದು. ಮಧ್ಯಾಹ್ನ ಬಳಿಕ ನಾನಾ ರೀತಿಯ ಜವಾಬ್ದಾರಿ ಹೆಚ್ಚಾಗಬಹುದು.&lt;/p&gt;&lt;p data-block-key="al2jv"&gt;&lt;b&gt;ಮೀನ ರಾಶಿ&lt;/b&gt;: ಮೀನ ರಾಶಿಯವರಿಗೆ ಮಧ್ಯಾಹ್ನ ವರೆಗೆ ತೊಂದರೆ. ಮಧ್ಯಾಹ್ನ ಬಳಿಕ ಕೆಲಸ ಕಾರ್ಯಸಲ್ಲಿ ಯಶಸ್ಸು ಸಿಗುತ್ತದೆ.‌ ಮಾಧ್ಯಮ,ಸೋಷಿಯಲ್ ಮೀಡಿಯಾದಲ್ಲಿ ಇರೋರಿಗೆ ಲಾಭದಾಯಕವಾಗಿದೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>Shashidhara Halady Column: ನೀಲಿ ಬಾನಿನಲ್ಲಿ ಹಾರಿ ಬಂದ ಬೆಳ್ಳಕ್ಕಿ ಸಾಲು</title><link>https://vishwavani.news/ankanagalu/a-line-of-white-herons-flying-across-the-blue-sky-85827.html</link><guid>https://vishwavani.news/ankanagalu/a-line-of-white-herons-flying-across-the-blue-sky-85827.html</guid><pubDate>Fri, 07 Aug 2026 00:31:08 +0000</pubDate><description>&lt;![CDATA[ಒಂದು ಮುಂಜಾನೆ, ಗದ್ದೆ ಕೆಲಸ ಮಾಡುವ ಕಾರ್ಮಿಕರು, ಆರೆಂಟು ಮಂದಿ ಬಹುಬೇಗನೆ ಬಂದಿದ್ದರು- ಅವರ ನಡುವಿನ ಒಬ್ಬನು, ಮೇಸಿಯ ಕೆಲಸವನ್ನು ತಾನೇ ಆವಾಹಿಸಿಕೊಂಡು, ‘ಎಲ್ಲಾ ಬನ್ನಿ, ದರೆ ಹತ್ತಿ, ಹಕ್ಕಲಿಗೆ ಹ್ವಾಪ, ಅಲ್ಲಿ ಮಸ್ತ್ ಮುರಕಲ್ಲು ಇದ್ದೊ’ ಎಂದು ಹೇಳಿದ್ದೇ ತಡ, ಎಲ್ಲರೂ ಮನೆ ಹಿಂದಿನ ಒಂದು ಇಳಿಜಾರಿನ ಗುಡ್ಡದ ದಾರಿಯನ್ನೇರಿ, ಹಕ್ಕಲಿನತ್ತ ನಡೆದರು.]]&gt;</description><dc:creator>&lt;![CDATA[ಶಶಿಧರ ಹಾಲಾಡಿ]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಅಂಕಣಗಳು]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/S_Halady_7.original.jpg" class="attachment-large size-large wp-post-image" alt="Shashidhara Halady Column: ನೀಲಿ ಬಾನಿನಲ್ಲಿ ಹಾರಿ ಬಂದ ಬೆಳ್ಳಕ್ಕಿ ಸಾಲು" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="dbdol"&gt;&lt;b&gt;ಶಶಾಂಕಣ&lt;/b&gt;&lt;/p&gt;&lt;p data-block-key="6p008"&gt;ವರ್ಷದ ಹಲವು ತಿಂಗಳುಗಳಲ್ಲಿ, ನಮ್ಮ ಹಳ್ಳಿಮನೆಯ ಮುಂಭಾಗದಲ್ಲಿ ನಿಂತಾಗ ಕಾಣಿಸುವ ಒಂದು ದೃಶ್ಯಕಾವ್ಯವು, ಮನದಲ್ಲಿ ಮೂಡಿಸಿರುವ ಮಧುರ ಭಾವನೆಗಳನ್ನು ಅಕ್ಷರಗಳಲ್ಲಿ ಬಣ್ಣಿಸು ವುದು ತುಸು ಕಷ್ಟವೇ ಎಂದು ಹೇಳಬೇಕು. ಮನೆಯ ಅಂಗಳಕ್ಕೆ ಅಂಟಿಕೊಂಡಂತಿರುವ ಅಗೇಡಿಯ ಆಚೆಬದಿಯ ಅಂಚಿನ ಮೇಲೆ, ಸಾಲಾಗಿ ಕುಳಿತುಕೊಂಡಿರುವ ಬೆಳ್ಳಕ್ಕಿಗಳ ಸಾಲು, ಆ ಬೆಳ್ಳಕ್ಕಿಗಳ ವೈವಿಧ್ಯ- ಇದೇ ಆ ದೃಶ್ಯಕಾವ್ಯ! ಅಗೇಡಿಯಲ್ಲಿ ನೀರು ತುಂಬಿದ ದಿನಗಳಲ್ಲಂತೂ, ಆ ಬಿಳಿ ಹಕ್ಕಿಗಳ ಪ್ರತಿಬಿಂಬವು ನೀರಿನಲ್ಲಿ ಮೂಡಿ, ಆ ಮಧುರಾನುಭವವನ್ನು ಇಮ್ಮಡಿಗೊಳಿಸುವ ಪರಿಯಂತೂ, ಇನ್ನಷ್ಟು ಬೆರಗುಗೊಳಿಸುವಂತಹದ್ದು.&lt;/p&gt;&lt;p data-block-key="5nvcn"&gt;ಬೆಳ್ಳಕ್ಕಿಗಳ ಒಪ್ಪವಾದ, ಓರಣವಾದ ಆ ಸಾಲಿನ ಅಂದವನ್ನು ಇನ್ನಷ್ಟು ವಿವರವಾಗಿ ವರ್ಣಿಸಿ ದಾಗಲೇ, ನಿಮಗೂ ಆ ಒಂದು ಚಿತ್ತಾರವು, ಅದೇಕೆ ದೃಶ್ಯಕಾವ್ಯದ ಅನುಭವವನ್ನು ನೀಡುತ್ತದೆ ಎಂಬುದರ ಸ್ವಲ್ಪವಾದರೂ ಅರಿವಾಗಬಲ್ಲದು. ನಮ್ಮ ಹಳ್ಳಿ ಮನೆಯನ್ನು ಗದ್ದೆಯೊಂದರ ಮೇಲೆ ನಿರ್ಮಿಸಿದ್ದಾರೆ ಎಂಬುದು ಒಂದು ವಾಸ್ತವವೇ, ಹೊರತು ಅದರಲ್ಲಿ ಅತಿಶಯೋಕ್ತಿ ಇಲ್ಲ. ಕೆಲವು ದಶಕಗಳ ಹಿಂದೆ, ಆ ಪುಟ್ಟ ಮನೆಯ ಚಾವಡಿಯ ಭಾಗವನ್ನು ಸ್ಥಳೀಯ ಕೃಷಿಕಾರ್ಮಿಕರು ನಿರ್ಮಿಸುವಾಗ ನಾನು ಅಲ್ಲೇ ನಿಂತು ನೋಡುತ್ತಿದ್ದೆ!&lt;/p&gt;&lt;p data-block-key="fja1k"&gt;ಒಂದು ಮುಂಜಾನೆ, ಗದ್ದೆ ಕೆಲಸ ಮಾಡುವ ಕಾರ್ಮಿಕರು, ಆರೆಂಟು ಮಂದಿ ಬಹುಬೇಗನೆ ಬಂದಿದ್ದರು- ಅವರ ನಡುವಿನ ಒಬ್ಬನು, ಮೇಸಿಯ ಕೆಲಸವನ್ನು ತಾನೇ ಆವಾಹಿಸಿಕೊಂಡು, ‘ಎಲ್ಲಾ ಬನ್ನಿ, ದರೆ ಹತ್ತಿ, ಹಕ್ಕಲಿಗೆ ಹ್ವಾಪ, ಅಲ್ಲಿ ಮಸ್ತ್ ಮುರಕಲ್ಲು ಇದ್ದೊ’ ಎಂದು ಹೇಳಿದ್ದೇ ತಡ, ಎಲ್ಲರೂ ಮನೆ ಹಿಂದಿನ ಒಂದು ಇಳಿಜಾರಿನ ಗುಡ್ಡದ ದಾರಿಯನ್ನೇರಿ, ಹಕ್ಕಲಿನತ್ತ ನಡೆದರು. ಒಂದರ್ಧಗಂಟೆಯ ಸಮಯದಲ್ಲಿ ನೂರಾರು ದುಂಡುಗಲ್ಲುಗಳನ್ನು ತಂದು ಅಂಗಳದ ಒಂದು ಮೂಲೆಯಲ್ಲಿ ರಾಶಿ ಹಾಕಿದರು. ಅದಾದ ನಂತರ, ಹಳೆಮನೆಯ ಅಂಗಳಕ್ಕೆ ತಾಗಿಕೊಂಡಿದ್ದ ಅಗೇಡಿಯಲ್ಲಿ, ಒಂದೂವರೆ ಅಡಿ ಅಗಲದ ಪಾಯವನ್ನು ತೋಡಿದರು. ಆ ಪಾಯದಲ್ಲಿ ಅರ್ಧ ಅಡಿ ನೀರು!&lt;/p&gt;&lt;p data-block-key="25erg"&gt;&lt;b&gt;ಇದನ್ನೂ ಓದಿ:&lt;/b&gt; &lt;a href="/ankanagalu/hundreds-of-kannada-books-published-in-the-village-85242.html"&gt;Shashidhara Halady Column: ಹಳ್ಳಿಯಲ್ಲಿ ಪ್ರಕಟಗೊಂಡ ನೂರಾರು ಕನ್ಡಡ ಪುಸ್ತಕ !&lt;/a&gt;&lt;/p&gt;&lt;p data-block-key="491cr"&gt;ಆ ನೀರು ತುಂಬಿದ ತಳಪಾಯದುದ್ದಕ್ಕೂ, ಹಕ್ಕಲಿನಿಂದ ತಂದಿದ್ದ ಮುರಗಲ್ಲುಗಳನ್ನು ಒಂದೊಂದಾಗಿ ಸಾಲಾಗಿ ಜೋಡಿಸಿದರು; ಅಲ್ಲಿಗೆ ಮನೆಯ ತಳಪಾಯದ ಕೆಲಸ ಮುಗಿಯಿತು. ಅಗೇಡಿಯಲ್ಲೇ ನೀರಿನ ನಡುವೆಯೇ ಆ ಸರಳ ತಳಪಾಯವನ್ನು ನಿರ್ಮಿಸಿದ್ದರಿಂದ, ಅದರ ಮೇಲೆ ಗೋಡೆಯನ್ನು ನಿರ್ಮಿಸಿದ್ದ ರಿಂದ, ಮುಂದಿನ ಮಳೆಗಾಲದಲ್ಲಿ ಚಾವಡಿಯ ಆ ಭಾಗವು ನಿಧಾನ ವಾಗಿ ಆರು ಇಂಚು ಕುಸಿದು ಹೋಗಿದ್ದಂತೂ ನಿಜ! ಸದ್ಯ, ಅದರಿಂದಾಗಿ, ಮನೆಯ ಗೋಡೆಗಳಲ್ಲಿ ಬಿರುಕು ಬಂದರೂ, ಬೀಳಲಿಲ್ಲ! ಗದ್ದೆಯಲ್ಲೇ ನಮ್ಮ ಮನೆಯನ್ನು ಕಟ್ಟಿದ್ದರು ಎಂಬುದನ್ನು ಖಚಿತವಾಗಿ ಹೇಳಲು ಈ ಸನ್ನಿವೇಶದ ವಿವರವನ್ನು ನೀಡಬೇಕಾಯಿತು! ಅದಿರಲಿ.&lt;/p&gt;&lt;p data-block-key="dsrtm"&gt;ಅಗೇಡಿಯ ಉಳಿದ ಅರ್ಧಭಾಗದಲ್ಲಿ, ಎಂದಿನಂತೆ ಬತ್ತದ ಕೃಷಿ ಮುಂದುವರಿಯಿತು. ದೀಪಾವಳಿ ಕಳೆದು, ಮೊದಲ ಬೆಳೆಯ ಕೊಯ್ಲು ನಡೆದು, ಎರಡನೆಯ ಬೆಳೆಗಾಗಿ ಅಗೇಡಿಯ ಉಳುಮೆ ಮಾಡಿ ನೀರು ನಿಲ್ಲಿಸಿದ ಸಂದರ್ಭ; ಒಂದು ಮುಂಜಾನೆ, ನಿದ್ದೆಯಿಂದೆದ್ದು ಹೊರಗೆ ಬಂದು ನೋಡಿದರೆ, 30 ಅಡಿ ದೂರದಲ್ಲಿರುವ ಅಗೇಡಿಯ ಆಚೆ ಭಾಗದ ಅಂಚಿನಲ್ಲಿ, ಸಾಲಾಗಿ ಬೆಳ್ಳಕ್ಕಿಗಳು ಕುಳಿತಿವೆ.&lt;/p&gt;&lt;p data-block-key="2d291"&gt;ಒಂದಲ್ಲ, ಎರಡಲ್ಲ, ಹತ್ತಾರು. ಬೆಳಗಿನ ಎಳೆಬಿಸಿಲಿನಲ್ಲಿ ಅವುಗಳ ಪ್ರತಿಬಿಂಬದ ಸಾಲು ಗದ್ದೆಯ ನೀರಿನಲ್ಲೂ ಪ್ರತಿ-ಲನಗೊಂಡು, ಮನೆ ಮುಂದೆ ರಾಶಿರಾಶಿ ಹಕ್ಕಿಗಳ ಚಿತ್ರಗಳನ್ನು ಕಟ್ಟಿಕೊಟ್ಟು, ಆ ಬೆಳಗಿನ ನಿಸರ್ಗ ದೃಶ್ಯಕ್ಕೆ ಮೆರಗನ್ನೇ ತಂದಂತಿತ್ತು! ಅಷ್ಟರಲ್ಲಿ ಕೃಷಿ ಕೆಲಸಕ್ಕೆಂದು ಅದೇ ದಾರಿ ಯಾಗಿ ನಡೆದು ಬಂದ ಕುಯಿರನಾಯಕನ ‘ಬಪ್ಪು ಬರ’ದ ನಡಿಗೆಯ ಹೆಜ್ಜೆ ಸದ್ದಿಗೆ, ಬೆಳ್ಳಕ್ಕಿಗಳೆಲ್ಲಾ ಒಮ್ಮೆಗೇ ಹಾರಿದವು! ಆಗ ಅವುಗಳ ನೋಟವು ‘ದೇವರು ರುಜು ಮಾಡಿದಂತೆ’ ಕಾಣಿಸಿ, ಆ ಮುಂಜಾನೆಯಲ್ಲಿ ಮನದ ತುಂಬಾ ದೈವಿಕ ಎನಿಸುವ ರಸಾನುಭೂತಿ ಯನ್ನೇ ತುಂಬಿತು.&lt;/p&gt;
&lt;/div&gt;

    
&lt;figure class="article-image text-center mb-4"&gt;
    &lt;img alt="71" class="img-fluid" height="546" src="https://cdn.vishwavani.news/media/images/71_nMBceng.max-1280x720.format-webp.webp" width="665"&gt;
    
&lt;/figure&gt;

    
&lt;div class="article-paragraph"&gt;
    &lt;p data-block-key="402hh"&gt;ಗದ್ದೆಯ ನೀರಿನಲ್ಲಿ ಪ್ರತಿಬಿಂಬ ಮೂಡಿಸಿದ ಆ ಬೆಳ್ಳಕ್ಕಿ ಸಾಲು, ರೆಕ್ಕೆ ಬೀಸುತ್ತಾ ಬಾನಿನತ್ತ ಸಾಗಿದಾಗ, ಅಲ್ಲೊಂದು ಚಿತ್ರಕಾವ್ಯ ರಚನೆಗೊಂಡಿದ್ದಂತೂ ನಿಜ; ಆದರೆ, ಅಂತಹ ದೃಶ್ಯಗಳು ನಮ್ಮ ಹಳ್ಳಿಯ ಮನೆಯಲ್ಲಿದ್ದವರಿಗೆ ತೀರಾ ಅಪರೂಪವೇನಲ್ಲ!&lt;/p&gt;&lt;p data-block-key="ucam"&gt;ವರ್ಷದ ವಿವಿಧ ಋತುಗಳಲ್ಲಿ, ತಮ್ಮ ವೈವಿಧ್ಯಮಯ ದಿನಚರಿಯಿಂದ ಆ ಬೆಳ್ಳಕ್ಕಿಗಳು ನಮ್ಮ ಮನರಂಜಿಸುತ್ತಿದ್ದುದು, ಸ್ವಲ್ಪ ಸಾಮಾನ್ಯ ಎನಿಸುವ ಅನುಭವ ಎಂದೇ ಹೇಳಬಹುದು; ಅದನ್ನು ನೋಡುತ್ತಾ ಅರೆಚಣ ನಿಂತು, ಪ್ರಕೃತಿಯ ನಾನಾ ರೀತಿಯ ಆಟಗಳಲ್ಲಿ ಇದೊಂದು ದೃಶ್ಯ ಹೆಚ್ಚು ಮನಸೆಳೆಯುತ್ತದೆ ಎಂದು ಮನಸ್ಸಿನಲ್ಲಿ ಅಂದುಕೊಂಡಾಗ ಮಾತ್ರ, ಅದೊಂದು ವಿಶೇಷ ಅನುಭೂತಿಯಾಗಿ ಚಿತ್ರಗಟ್ಟುತ್ತದೆ.&lt;/p&gt;&lt;p data-block-key="5g8g4"&gt;ನಮ್ಮೂರಿನಲ್ಲಿ ಈ ರೀತಿ ಸಾಲಾಗಿ ಕುಳಿತು, ಮನೆಯೆದುರಿನ ವಿಶಾಲ ನೈಸರ್ಗಿಕ ಕ್ಯಾನ್‌ವಾಸ್‌ನಲ್ಲಿ ತಮ್ಮದೇ ರೀತಿಯಲ್ಲಿ ಸುಂದರ ಚಿತ್ರ ಬರೆಯುವ ಬೆಳ್ಳಕ್ಕಿಗಳಲ್ಲಿ ಹಲವು ಪ್ರಭೇದಗಳಿವೆ. ಸಮಾನ ಗಾತ್ರದ, ಅಚ್ಚ ಬಿಳಿ ಬಣ್ಣದ ಬೆಳ್ಳಕ್ಕಿಗಳಲ್ಲಿ, ಸಾಮಾನ್ಯವಾಗಿ ಕಾಣಸಿಗುವಂತಹವು ಕ್ಯಾಟಲ್ ಈಗ್ರೆಟ್ (ಪಶು ಬೆಳ್ಳಕ್ಕಿ) ಮತ್ತು ಲಿಟಲ್ ಈಗ್ರೆಟ್ (ಸಾಮಾನ್ಯ ಕೊಕ್ಕರೆ). ನಮ್ಮ ಹಳ್ಳಿಯವರು ಅವೆಲ್ಲವನ್ನೂ ‘ಕೊಕ್ಕಾನಕ್ಕಿ’ ಎಂಬ ಒಂದೇ ಹೆಸರಿನಲ್ಲಿ ಸಮೀಕರಿಸಿಬಿಟ್ಟಿದ್ದಾರೆ.&lt;/p&gt;&lt;p data-block-key="86acs"&gt;ಮೇಲ್ನೋಟಕ್ಕೆ ಅವುಗಳಲ್ಲಿ ಕಾಣಿಸುವ ಒಂದು ಪ್ರಮುಖ ವ್ಯತ್ಯಾಸವೆಂದರೆ, ಪಶು ಬೆಳ್ಳಕ್ಕಿಗಳ ಕೊಕ್ಕು ಹಳದಿ ಮಿಶ್ರಿತ; ಇನ್ನೊಂದು ಕೊಕ್ಕರೆಯ ಕೊಕ್ಕು ಕಪ್ಪು ಬಣ್ಣ. ನಮ್ಮ ಮನೆಯ ಎದುರಿನ ಗದ್ದೆಗಳಲ್ಲಿ ಹೆಚ್ಚಾಗಿ ಕಾಣಿಸುವಂತಹವು ಪಶು ಬೆಳ್ಳಕ್ಕಿಗಳು ಮಾತ್ರ. ಕಪ್ಪು ಬಣ್ಣದ ಕೊಕ್ಕು ಹೊತ್ತ ಕೊಕ್ಕರೆಗಳು ಅಪರೂಪಕ್ಕೆ ಮಾತ್ರ ಕಾಣಿಸುತ್ತವೆ.&lt;/p&gt;&lt;p data-block-key="7o46o"&gt;ಬಯಲು ಸೀಮೆಯಲ್ಲಿ ಪಶುಗಳ ಸುತ್ತಮುತ್ತ ಓಡಾಡುತ್ತಾ, ಉಳುಮೆ ಮಾಡುವ ಎತ್ತುಗಳ ಜತೆಯಲ್ಲೇ ನೆಲದ ಮೇಲೆ ಕುಪ್ಪಳಿಸುತ್ತಾ, ಆಹಾರ ಹುಡುಕುವ ಅಭ್ಯಾಸದಿಂದಾಗಿ, ಅವುಗಳಿಗೆ ಪಶು ಬೆಳ್ಳಕ್ಕಿ ಎಂಬ ಹೆಸರು. ಆದರೆ, ಗದ್ದೆಗಳಲ್ಲಿ ನೀರು ತುಂಬಿದಾಗ, ಅಗೇಡಿಗೆಂದು ಗದ್ದೆಯನ್ನು ಉತ್ತು, ಹಸನು ಮಾಡಿದಾಗ, ಆ ಕೆಸರು ಗದ್ದೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿರುವ ಕಪ್ಪೆ ಮತ್ತು ಮೀನು ಗಳನ್ನು ಹಿಡಿಯುವುದರಲ್ಲೂ ಈ ಪಶು ಬೆಳ್ಳಕ್ಕಿಗಳು ನಿಸ್ಸೀಮರು.&lt;/p&gt;&lt;p data-block-key="fpulq"&gt;ಅಚ್ಚ ಬಿಳಿ ಬಣ್ಣದ ಈ ಬೆಳ್ಳಕ್ಕಿಗಳು ದೃಶ್ಯಕಾವ್ಯದಂತಹ ಇನ್ನೊಂದು ಸನ್ನಿವೇಶದಲ್ಲಿ ಭಾಗಿಯಾಗು ವುದು, ಸಂಜೆಯ ಸಮಯದಲ್ಲಿ. ನಮ್ಮೂರಿನಲ್ಲಿ ಮಳೆಗಾಲವೆಂದರೆ, ಮೂರು ನಾಲ್ಕು ತಿಂಗಳುಗಳ ವಿದ್ಯಮಾನ ತಾನೆ!&lt;/p&gt;&lt;p data-block-key="34v6a"&gt;ಪ್ರತಿ ವರ್ಷ ಮಳೆಗಾಲದಲ್ಲಿ ಹಲವು ವಾರಗಳ ಕಾಲ ಮಳೆ ಸುರಿಯುವ ಸೀಮೆ ನಮ್ಮದು. ಮಳೆಗಾಲ ದಲ್ಲಿ ನಡುನಡುವೆ, ಒಂದೆರಡು ದಿನವೋ, ನಾಲ್ಕೆಂಟು ದಿನವೋ ಹೊಳವಾಗುವು ದುಂಟು. ಆಗ, ಆಗಸದಲ್ಲಿ ದಟ್ಟ ಮೋಡವಿರಲಾರದು; ಅಲ್ಲಲ್ಲಿ ಮೋಡಗಳ ರಾಶಿ, ಕೆಲವೆಡೆ ಬಾನಿನ ದರ್ಶನ. ಅಂತಹ ದಿನಗಳಲ್ಲಿ, ಸಂಜೆಯ ಹೊತ್ತಿನಲ್ಲಿ, ಮೋಡಗಳ ನಡುವಿನಿಂದ ತೂರಿಬರುವ ಸೂರ್ಯನ ಕಿರಣಗಳು, ಒಮ್ಮೆಗೇ, ಗದ್ದೆಯಾಚೆಗಿನ ಹಕ್ಕಲಿನ ಗಿಡಮರಗಳ ಮೇಲೆ ಬಿದ್ದು, ಇಡೀ ದಿನದ ಮೋಡಕವಿದ ವಾತಾವರಣದ ಬೇಸರವನ್ನು ದೂರಮಾಡಿ, ಸುತ್ತಲ ಜಗವನ್ನು ಬೆಳಗುತ್ತವೆ.&lt;/p&gt;&lt;p data-block-key="5chnb"&gt;ಸಂಜೆಯ ಐದು ಗಂಟೆಯ ನಂತರ, ಈ ರೀತಿ ಮರಗಿಡಗಳ ಮೇಲೆ ಬೀಳುವ ಕಿರಣಗಳು, ತಮ್ಮಲ್ಲಿನ ಇಳಿಬಿಸಿಲಿನ ಬಣ್ಣದ ರಾಶಿಯನ್ನು ಹಸುರಿನ ಮೇಲೆ ಸುರಿಸಿ, ಬೇರೊಂದೇ ಲೋಕ ಎನಿಸುವ ಚಿತ್ರಣವನ್ನು ಕಟ್ಟಿಕೊಡುವ ಪರಿ ಅವರ್ಣನೀಯ. ಸಂಜೆ ಐದರ ನಂತರ ಈ ರೀತಿ ಮೋಡಗಳ ನಡುವೆ ತೂರಿ ಬರುವ ಸೂರ್ಯಕಿರಣಗಳನ್ನು, ನಮ್ಮ ಹಳ್ಳಿಯ ಜನರು ‘ನೇಸರ ಬಿಸಿಲು’ ಎಂದೇ ಹೆಸರಿಸಿದ್ದಾರೆ. ವ್ಯಾಕರಣದ ದೃಷ್ಟಿಯಲ್ಲಿ ಅದೊಂದು ದ್ವಿರುಕ್ತಿ ಎನಿಸಿದರೂ, ಮನೆಯ ಎದುರಿನ ಆ ಚಂದದ ದೃಶ್ಯವನ್ನು ನೋಡುತ್ತಿದ್ದ ನಮಗೆಲ್ಲಾ, ಅದೊಂದು ‘ದೃಶ್ಯಕಾವ್ಯ’ವೇ ಸರಿ.&lt;/p&gt;&lt;p data-block-key="4krsl"&gt;‘ನೇಸರ ಬಿಸಿಲಿ’ನ ಕಿರಣಗಳಲ್ಲಿ ಹಸುರು ಮರಗಳು ಸ್ನಾನ ಮಾಡುತ್ತಿರುವ ಆ ಸಂಜೆಯ ಬಾನಿನಲ್ಲಿ, ಒಮ್ಮೆಗೇ ಬೆಳ್ಳಕ್ಕಿಗಳ ಸಾಲೊಂದು ಹಾರಿ ಬಂದು, ಉತ್ತರದಿಂದ ಪೂರ್ವಕ್ಕೆ ತಿರುಗಿಕೊಂಡು, ಬಯಲಿನುದ್ದಕ್ಕೂ ಹಾರಿಹೋಗುವ ದೃಶ್ಯವಂತೂ, ಇನ್ನೂ ಅಂದ. ‘ಹಕ್ಕಿ ಹಾರುತಿದೆ ನೋಡಿ ದಿರಾ..’ ಎಂಬ ಕವಿವಾಣಿ ನೆನಪಾಗುವ ಆ ಹೊತ್ತಿನಲ್ಲಿ, ನನಗನಿಸುತ್ತಿದ್ದುದು ‘ನೇಸರ ಬಿಸಿನಲಿ ಸಾಗಿದೆ ನೋಡಿ, ಬೆಳ್ಳಕ್ಕಿಗಳ ಶಿಸ್ತಿನ ಸಾಲು..!’&lt;/p&gt;&lt;p data-block-key="3iifn"&gt;ವರ್ಷದ ವಿವಿಧ ತಿಂಗಳುಗಳಲ್ಲಿ ಈ ಬೆಳ್ಳಕ್ಕಿಗಳ ದಿನಚರಿಯು ಬೇರೆ ಬೇರೆ ತೆರ ಎಂದು ಹೇಳಿದೆ ನಲ್ಲಾ, ಅದನ್ನು ಸ್ಪಷ್ಟವಾಗಿ ಗುರುತಿಸಲು, ಮಳೆಗಾಲ ಕಳೆದು ಬೇಸಗೆ ಬರಬೇಕು. ಎರಡನೆಯ ಬೆಳೆ ಕೊಯ್ಲು ಆಗಿ, ಶಿವರಾತ್ರಿಯ ನಂತರ ನಮ್ಮ ಗದ್ದೆಗಳು ಖಾಲಿಯಾಗಿರುತ್ತವೆ; ಕೆಲವರು ಉದ್ದು, ಹೆಸರುಕಾಳು ಮೊದಲಾದ ಧಾನ್ಯಗಳನ್ನು ಆಗ ಬಿತ್ತುವುದುಂಟು. ಅದಕ್ಕಾಗಿ ಗದ್ದೆಯನ್ನು ಉಳು ವಾಗ, ಪಶು ಬೆಳ್ಳಕ್ಕಿಗಳು, ತಮ್ಮ ನಾಮಧೇಯಕ್ಕನುಗುಣವಾಗಿ, ಉಳುಮೆ ಮಾಡುವ ಹೋರಿಗಳ ಹಿಂದೆಯೇ ಸಾಗುತ್ತವೆ.&lt;/p&gt;&lt;p data-block-key="1s7j8"&gt;ಹೋರಿಗಳು ನೊಗ ಹೊತ್ತು ಮುಂದೆ ಮುಂದೆ ಸಾಗಿದಂತೆಲ್ಲಾ, ನೆಲದ ಮೇಲೆ ಕುಳಿತಿದ್ದ ಮಿಡತೆ ಮತ್ತಿತರ ಕೀಟಗಳು ಹಾರುತ್ತವೆ; ಅವನ್ನು ಗುರುತಿಸಿ, ಹಿಡಿದು ತಿನ್ನುವುದು ಈ ಬೆಳ್ಳಕ್ಕಿಗಳ ಆ ಋತು ವಿನ ದಿನಚರಿ. ಉಳುಮೆ ಮಾಡಿದ ನಂತರವೂ, ಹಗಲಿಡೀ ಗದ್ದೆಗಳಲ್ಲಿ ಅತ್ತಿತ್ತ ಓಡಾಡುತ್ತಾ, ನೆಲದಲ್ಲಿರುವ ಚಾರಟೆ, ಎರೆಹುಳ ಮತ್ತಿತರ ಕೀಟಗಳನ್ನು ಕೊಕ್ಕಿನಿಂದ ಹಿಡಿದು ಹೊಟ್ಟೆಗಿಳಿಸಿ, ಸಂಜೆಯಾಗುತ್ತಿದ್ದಂತೆ, ಗುಂಪಾಗಿ ಹೊರಟು, ಅದಾವುದೋ ದೂರದ ಮರದ ಮೇಲೆ ಕುಳಿತು ರಾತ್ರಿಯ ನಿದ್ದೆಗೆ ಸಿದ್ಧವಾಗುತ್ತವೆ.&lt;/p&gt;&lt;p data-block-key="6o9ek"&gt;ಈಚಿನ ವರ್ಷಗಳಲ್ಲಿ, ಈ ಕೊಕ್ಕರೆಗಳ ಜತೆಯಲ್ಲೇ, ಗದ್ದೆಯಲ್ಲಿ ಕಾಣಿಸುವ ಹಕ್ಕಿಗಳೆಂದರೆ ನವಿಲು ಗಳು! ಕೆಲವು ದಶಕಗಳ ಹಿಂದೆ ನಮ್ಮ ಹಳ್ಳಿಯಲ್ಲಿ ನವಿಲುಗಳಿರಲಿಲ್ಲ; ದೂರದ ಅದಾವುದೋ ಹಳ್ಳಿಗಳಲ್ಲಿ ಅವು ಆಗಾಗ ಕಾಣಿಸುತ್ತಿವೆ ಎಂಬ ಸುದ್ದಿಯೇ ನಮಗೆ ಬೆರಗನ್ನು ತರುತ್ತಿತ್ತು. ಆದರೆ, ಈಚಿನ ಒಂದೆರಡು ದಶಕಗಳಲ್ಲಿ, ಮನೆ ಎದುರು ನವಿಲುಗಳ ಓಡಾಟ, ಒಮ್ಮೊಮ್ಮೆ ಅವುಗಳ ನರ್ತನ, ತಾಯಿ ನವಿಲು ನಾಲ್ಕಾರು ಮರಿನವಿಲುಗಳನ್ನು ಕಟ್ಟಿಕೊಂಡು ಗದ್ದೆಯುದ್ದಕ್ಕೂ ಓಡಾಡು ವುದು ಎಲ್ಲಾ ಮಾಮೂಲು ಎನಿಸಿದೆ. ಕೊಯ್ಲು ಆದ ನಂತರ, ಗದ್ದೆಯುದ್ದಕ್ಕೂ ಓಡಾಡುವ ಬಿಳಿ ಕೊಕ್ಕರೆಗಳ ಜತೆಯಲ್ಲೇ, ಒಂದೆರಡು ನವಿಲುಗಳು ಹೆಜ್ಜೆ ಹಾಕುತ್ತಾ, ಕ್ರಿಮಿ ಕೀಟಗಳನ್ನು ಹಿಡಿಯುತ್ತಾ ಇರುತ್ತವೆ.&lt;/p&gt;&lt;p data-block-key="532ln"&gt;ಮುಂಗಾರಿನ ದಿನಗಳಲ್ಲಿ, ಮೋಡ ಕವಿದ ವಾತಾವರಣವಿದ್ದಾಗ, ಗದ್ದೆಯ ಒಂದು ಮೂಲೆಯಲ್ಲಿ ಗಂಡು ನವಿಲೊಂದು ಗರಿ ಬಿಚ್ಚಿ ನರ್ತನ ಮಾಡುವುದೂ ಇದೆ. ಬಿಳಿ ಬಣ್ಣದ ಕೊಕ್ಕರೆಗಳು ಮತ್ತು ವಿವಿಧ ಬಣ್ಣದ ಗರಿಗಳನ್ನುಹೊಂದಿರುವ ನವಿಲುಗಳು ಮನೆ ಎದುರಿನ ಗದ್ದೆಯಲ್ಲಿ ಓಡಾಡುತ್ತಾ ತಮ್ಮ ಪಾಡಿಗೆ ತಾವು ಆಹಾರ ಹುಡುಕುತ್ತಾ ಇದ್ದಾಗ, ಗದ್ದೆಯಂಚಿನಲ್ಲಿ ನಿಂತು ಅವುಗಳನ್ನು ನೋಡುವುದೆಂದರೆ ನಮಗೆಲ್ಲಾ ಒಂದು ವಿಶಿಷ್ಟ ಅನುಭವ.&lt;/p&gt;&lt;p data-block-key="7mgsl"&gt;ಆದರೆ ನಮ್ಮ ಹಳ್ಳಿಯ ಕೃಷಿಕರ ದೃಷ್ಟಿಯಲ್ಲಿ, ನಮ್ಮೂರಿಗೆ ನವಿಲುಗಳ ಆಗಮನ ಅಷ್ಟೊಂದು ಒಳ್ಳೆಯ ಬೆಳವಣಿಗೆಯೇನಲ್ಲ; ಏಕೆಂದರೆ, ಅವು ಬತ್ತದ ತೆನೆಯನ್ನು, ಧಾನ್ಯದ ಕಾಳುಗಳನ್ನು ತಿನ್ನುತ್ತವೆ ಮತ್ತು ಕೃಷಿಗೆ ಅವು ಒಂದು ತೊಡಕೇ ಸರಿ ಎಂಬುದು ಅವರ ಮನೋಗತ. ಬದಲಾದ ವಾತಾವರಣ ಮತ್ತು ಕಾಡಿನ ನಾಶವೇ, ನಮ್ಮ ಹಳ್ಳಿಗೆ ನವಿಲುಗಳು ಬರಲು ಕಾರಣ ಎಂದು ಹಲವರು ಅಂದುಕೊಂಡಿದ್ದಾರೆ.&lt;/p&gt;&lt;p data-block-key="65kci"&gt;ಅದೇನೇ ಇದ್ದರೂ, ಬಿಳಿಕೊಕ್ಕರೆಗಳು ನೀಲ ಬಾನಿನಲ್ಲಿ ಸಾಲಾಗಿ ಹಾರುವಾಗ ನಿರ್ಮಿಸುವ ಆ ಚಂದದ ದೃಶ್ಯ, ಮನೆಗೆ ಅನತಿ ದೂರದಲ್ಲೇ ತನ್ನೆಲ್ಲಾ ಗರಿಗಳನ್ನು ಬಿಚ್ಚಿ ನರ್ತಿಸುವ ನವಿಲಿನ ಆಟ, ಅವುಗಳನ್ನು ನೋಡಲು ದೊರೆಯುವ ಅವಕಾಶ- ಇಂತಹ ವಿದ್ಯಮಾನಗಳು ಪ್ರಕೃತಿಯು ನಮಗೆ ನೀಡುವ ಅಪರೂಪದ ಅನುಭವ ಎಂದೇ ಹೇಳಬಹುದು.&lt;/p&gt;&lt;p data-block-key="c7mau"&gt;&lt;b&gt;(ಕೆಲವು ಪದಗಳ ಅರ್ಥ- ಚಾವಡಿ: ಮನೆಯ ಪ್ರಧಾನ ಭಾಗ. ಅಗೇಡಿ: ಬತ್ತದ ಸಸಿಗಳನ್ನು ಮಡಿಮಾಡುವ ಗದ್ದೆ. ಹಕ್ಕಲು: ಹದವಾಗಿ ಗಿಡಮರಗಳು ಬೆಳೆದಿರುವ ಜಾಗ. ಮುರಕಲ್ಲು: ಜಂಬಿಟ್ಟಿಗೆ ಕಲ್ಲು. ಹೊಳ: ಮಳೆಗಾಲದಲ್ಲಿ ಮಳೆ ಇಲ್ಲದ ಕೆಲವು ದಿನಗಳು. ಚಾರಟೆ: ಸಹಸ್ರಪದಿ)&lt;/b&gt;&lt;/p&gt;
&lt;/div&gt;
&lt;/p&gt;]]&gt;</content:encoded></item><item><title>Vishwavani Editorial: ನ್ಯಾಯಾಂಗ ವರದಿಗಾರಿಕೆಯ ಸೂಕ್ಷ್ಮ</title><link>https://vishwavani.news/sampadakeeya/the-nuances-of-judicial-reporting-85825.html</link><guid>https://vishwavani.news/sampadakeeya/the-nuances-of-judicial-reporting-85825.html</guid><pubDate>Fri, 07 Aug 2026 00:31:07 +0000</pubDate><description>&lt;![CDATA[ನ್ಯಾಯಾಲಯದ ಅನುಮತಿ ಪಡೆಯದೇ ಕಲಾಪದ ಆಡಿಯೋ ಅಥವಾ ವಿಡಿಯೋ ರೆಕಾರ್ಡಿಂಗ್‌ ಗಳನ್ನು ಪ್ರಸಾರ ಮಾಡಲಾಗುತ್ತಿತ್ತು. ಮುಖ್ಯವಾಗಿ ಕಲಾಪ ವೇಳೆ ನ್ಯಾಯಮೂರ್ತಿಗಳು ನೀಡುವ ಹೇಳಿಕೆಗಳು, ವಾದ-ಪ್ರತಿವಾದ ಹಾಗೂ ಪ್ರಕರಣದ ಬೆಳವಣಿಗೆಗಳಲ್ಲಿ ಆಯ್ದ ಭಾಗಗಳನ್ನು ಮಾತ್ರ ಎಡಿಟ್ ಮಾಡಿ ಜಾಲತಾಣಗಳಲ್ಲಿ ಹಾಕಲಾಗುತ್ತಿತ್ತು.]]&gt;</description><dc:creator>&lt;![CDATA[Ashok Nayak]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಸಂಪಾದಕೀಯ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/court_9j04iCX.original.jpg" class="attachment-large size-large wp-post-image" alt="Vishwavani Editorial: ನ್ಯಾಯಾಂಗ ವರದಿಗಾರಿಕೆಯ ಸೂಕ್ಷ್ಮ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="ahiax"&gt;ನ್ಯಾಯಾಲಯ ಕಲಾಪ ವರದಿಗಾರಿಕೆ ಕುರಿತು ಸುಪ್ರೀಂ ಕೋರ್ಟ್ ಗುರುವಾರ ಸ್ಪಷ್ಟ ಮಾರ್ಗಸೂಚಿ ನೀಡಿದೆ. ಕೋರ್ಟ್ ಕಲಾಪಗಳನ್ನು ವರದಿ ಮಾಡಬಹುದು, ಆದರೆ, ಆಡಿಯೊ-ವಿಡಿಯೊ ಕ್ಲಿಪ್‌ಗಳ ಬಳಕೆಯನ್ನು ನಿರ್ಬಂಧಿಸಿದೆ. ನ್ಯಾಯಾಲಯದಲ್ಲಿನ ನಿತ್ಯದ ಕಲಾಪಗಳನ್ನು ಮಾಧ್ಯಮಗಳು ಯಥಾರೀತಿ ವರದಿ ಪ್ರಕಟಿಸಲು ಯಾವುದೇ ಅಡ್ಡಿಯಿಲ್ಲ. ಈ ಮೊದಲೂ ಜವಾಬ್ದಾರಿಯುತ ಮುದ್ರಣ ಮಾಧ್ಯಮಗಳು ಇದನ್ನು ದೋಷರಹಿತವಾಗಿ ಮಾಡುತ್ತಿದ್ದವು. ಆದರೆ ಸಾಮಾಜಿಕ ಜಾಲ ತಾಣಗಳ ಆಧಿಕ್ಯದಿಂದ ಇದು ಬೇರೆ ದಾರಿ ಹಿಡಿದಿತ್ತು.&lt;/p&gt;&lt;p data-block-key="181ek"&gt;ನ್ಯಾಯಾಲಯದ ಅನುಮತಿ ಪಡೆಯದೇ ಕಲಾಪದ ಆಡಿಯೋ ಅಥವಾ ವಿಡಿಯೋ ರೆಕಾರ್ಡಿಂಗ್‌ ಗಳನ್ನು ಪ್ರಸಾರ ಮಾಡಲಾಗುತ್ತಿತ್ತು. ಮುಖ್ಯವಾಗಿ ಕಲಾಪ ವೇಳೆ ನ್ಯಾಯಮೂರ್ತಿಗಳು ನೀಡುವ ಹೇಳಿಕೆಗಳು, ವಾದ-ಪ್ರತಿವಾದ ಹಾಗೂ ಪ್ರಕರಣದ ಬೆಳವಣಿಗೆಗಳಲ್ಲಿ ಆಯ್ದ ಭಾಗಗಳನ್ನು ಮಾತ್ರ ಎಡಿಟ್ ಮಾಡಿ ಜಾಲತಾಣಗಳಲ್ಲಿ ಹಾಕಲಾಗುತ್ತಿತ್ತು.&lt;/p&gt;&lt;p data-block-key="bd3tm"&gt;&lt;b&gt;ಇದನ್ನೂ ಓದಿ:&lt;/b&gt; &lt;a href="/sampadakeeya/humiliating-women-is-unacceptable-85739.html"&gt;Vishwavani Editorial: ಮಹಿಳೆಯ ಅಪಮಾನ ಸಲ್ಲದು&lt;/a&gt;&lt;/p&gt;&lt;p data-block-key="8s1s2"&gt;ಇದು ಹೆಚ್ಚಿನ ಬಾರಿ ತಪ್ಪು ಅರ್ಥ ಕೊಡುತ್ತಿದ್ದವು. ಕಲಾಪದಲ್ಲಿ ಕೆಲವೊಮ್ಮೆ ಸೂಕ್ಷ ವೈಯಕ್ತಿಕ ಮಾಹಿತಿ, ಗೌಪ್ಯ ದಾಖಲೆಗಳು ಅಥವಾ ಸಂದರ್ಭದೊಂದಿಗೆ ಮಾತ್ರ ಅರ್ಥವಾಗುವ ಹೇಳಿಕೆಗಳು ಇರಬಹುದು. ಇದರ ವಿವೇಚನೆ, ವರದಿ ಮಾಡುವವರಿಗೆ ಇಲ್ಲದೆ ಹೋದಾಗ ಅನರ್ಥಗಳು ಸಂಭವಿಸುತ್ತವೆ. ಈ ತೀರ್ಪು ನ್ಯಾಯಾಂಗ ವರದಿಗಾರಿಕೆಗೆ ಹೊಣೆಗಾರಿಕೆಯನ್ನೂ ಘನತೆಯನ್ನೂ ತಂದುಕೊಡುವುದು ಮಾತ್ರವಲ್ಲ, ಇತರ ವರದಿಗಾರಿಕೆಗೂ ಇದು ಅನ್ವಯವಾಗುವ ಸಂಗತಿ.&lt;/p&gt;&lt;p data-block-key="7ami9"&gt;ಮುಖ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹೊಣೆಯಿಲ್ಲದೇ ಎಲ್ಲವನ್ನೂ ಹಂಚಿಕೊಳ್ಳುವ, ಪ್ರಚೋದನಕಾರಿ ಥಂಬ್‌ನೈಲ್‌ಗಳನ್ನು ಕೊಟ್ಟು ಪ್ರಕಟಿಸುವ ಚಾಳಿUಗೆ ಇದು ಅಂತ್ಯ ಹಾಡಲಿ. ಇದೇ ವೇಳೆಗೆ, ಇಂಥ ನಿಯಂತ್ರಣವಿಲ್ಲದ ಕಲಾಪ ವರದಿಗಾರಿಕೆಯ ಪರಿಣಾಮ ಕೆಲವು ನ್ಯಾಯಾ ಧೀಶರು ಕಡಿವಾಣವಿಲ್ಲದೆ ತಮ್ಮ ಮಾತುಗಳನ್ನು ಹರಿಬಿಡುವ ಚಾಳಿಯನ್ನೂ ರೂಢಿಸಿಕೊಂಡಿ ದ್ದರು ಎನ್ನುವ ಆರೋಪವಿದೆ. ಇದಕ್ಕೂ ತಡೆ ಬೀಳಬಹುದು. ಆದರೂ, ಈಗಿನದು ಡಿಜಿಟಲ್ ಯುಗ. ಡಿಜಿಟಲ್ ಸಾಕ್ಷ್ಯಗಳು ಪ್ರಮುಖ ಸಾಕ್ಷಿಗಳಾಗಿ ಅಂಗೀಕರಿಸಲ್ಪಡುತ್ತಿವೆ ಎಂಬುದನ್ನು ನ್ಯಾಯಾಂಗ ಮರೆಯುವಂತಿಲ್ಲ.&lt;/p&gt;&lt;p data-block-key="86ne"&gt;ಅನೇಕ ಪ್ರಕರಣಗಳಲ್ಲಿ, ಡಿಜಿಟಲ್ ಸಾಕ್ಷ್ಯಗಳಿಂದಾಗಿಯೇ ನ್ಯಾಯಾಧೀಶರು ಮಾಡಿದ ತಪ್ಪುಗಳು ಕೂಡ ಬಯಲಾಗಿವೆ. ಡಿಜಿಟಲ್ ರೆಕಾರ್ಡಿಂಗ್ ಇದ್ದಾಗ ಹೆಚ್ಚಿನ ಹೊಣೆಗಾರಿಕೆಯಿಂದ ವಕೀಲರು, ಕಕ್ಷಿದಾರರು ಸೇರಿದಂತೆ ಎಲ್ಲರೂ ನಡೆದುಕೊಳ್ಳಲು ಸಾಧ್ಯವಿದೆ ಎನ್ನಬಹುದು.&lt;/p&gt;&lt;p data-block-key="d0p2b"&gt;ನೋಡುಗರು ಕೂಡ ಈ ಕಲಾಪಗಳ ವೀಕ್ಷಣೆಯಿಂದ ಕಾನೂನು, ನ್ಯಾಯಾಂಗ ಪ್ರಕ್ರಿಯೆಗಳ ಅರಿವು ಪಡೆದುಕೊಳ್ಳುತ್ತಿದ್ದರು. ಈ ಸಂಗತಿಯನ್ನೂ ಪರಿಗಣಿಸಬೇಕಿದೆ. ನೆಗಡಿಯಾಗಿದೆ ಎಂದು ಮೂಗು ಕೊಯ್ಯುವಂತಿಲ್ಲ ಅಲ್ಲವೇ. ಭಾರತೀಯ ನ್ಯಾಯಾಂಗ ಕೂಡ ಇನ್ನಷ್ಟು ‘ಟೆಕ್ ಸ್ನೇಹಿ’ಯಾಗಬೇಕಿದೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>R‌oopa Gururaj Column: ಸ್ವಾಭಿಮಾನವನ್ನು ಎಂದಿಗೂ ಬಿಡದ ಡಾಲಿ ಪಾರ್ಟನ್</title><link>https://vishwavani.news/ankanagalu/dolly-parton-who-never-compromises-her-self-respect-85831.html</link><guid>https://vishwavani.news/ankanagalu/dolly-parton-who-never-compromises-her-self-respect-85831.html</guid><pubDate>Fri, 07 Aug 2026 00:31:06 +0000</pubDate><description>&lt;![CDATA[ಟೆನ್ನೆಸ್ಸೀಯ ಸ್ಮೋಕಿ ಪರ್ವತಗಳ ನಡುವಿನ ಆ ಪುಟ್ಟ ಮರದ ಗುಡಿಸಲು, ವಿದ್ಯುತ್ ನೀರಿನ ಅನುಕೂಲ ವೂ ಅಲ್ಲಿ ಇರಲಿಲ್ಲ. ಚಳಿಗಾಲ ಬಂದರೆ ಬೆಚ್ಚಗಿರಲು ಮನೆಯ ಮೂರ್ನಾಲ್ಕು ಮಕ್ಕಳು ಒಂದೇ ಹಾಸಿಗೆಯಲ್ಲಿ ಮುದುರಿ ಮಲಗಬೇಕಾದಂತಹ ಕಡುಬಡತನ. 1946ರಲ್ಲಿ ಆ ಹೆಣ್ಣುಮಗಳು ಜನಿಸಿದಾಗ, ಅವಳ ತಂದೆಯ ಬಳಿ ವೈದ್ಯರಿಗೆ ಫೀಸ್ ಕಟ್ಟಲು ಹಣವಿರಲಿಲ್ಲ; ಬದಲಾಗಿ ಒಂದು ಚೀಲ ಜೋಳದ ಹಿಟ್ಟನ್ನು ನೀಡಿದ್ದರು. ಆಕೆಯೇ ಮುಂದೆ ಜಗತ್ಪ್ರಸಿದ್ಧ ಗಾಯಕಿಯಾದ ‘ಡಾಲಿ ಪಾರ್ಟನ್.’]]&gt;</description><dc:creator>&lt;![CDATA[ರೂಪಾ ಗುರುರಾಜ್]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಅಂಕಣಗಳು]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/parten.original.jpg" class="attachment-large size-large wp-post-image" alt="R‌oopa Gururaj Column: ಸ್ವಾಭಿಮಾನವನ್ನು ಎಂದಿಗೂ ಬಿಡದ ಡಾಲಿ ಪಾರ್ಟನ್" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="ocmqz"&gt;&lt;b&gt;ಒಂದೊಳ್ಳೆ ಮಾತು&lt;/b&gt;&lt;/p&gt;&lt;p data-block-key="asc8q"&gt;ಟೆನ್ನೆಸ್ಸೀಯ ಸ್ಮೋಕಿ ಪರ್ವತಗಳ ನಡುವಿನ ಆ ಪುಟ್ಟ ಮರದ ಗುಡಿಸಲು, ವಿದ್ಯುತ್ ನೀರಿನ ಅನುಕೂಲವೂ ಅಲ್ಲಿ ಇರಲಿಲ್ಲ. ಚಳಿಗಾಲ ಬಂದರೆ ಬೆಚ್ಚಗಿರಲು ಮನೆಯ ಮೂರ್ನಾಲ್ಕು ಮಕ್ಕಳು ಒಂದೇ ಹಾಸಿಗೆಯಲ್ಲಿ ಮುದುರಿ ಮಲಗಬೇಕಾದಂತಹ ಕಡುಬಡತನ. 1946ರಲ್ಲಿ ಆ ಹೆಣ್ಣುಮಗಳು ಜನಿಸಿದಾಗ, ಅವಳ ತಂದೆಯ ಬಳಿ ವೈದ್ಯರಿಗೆ ಫೀಸ್ ಕಟ್ಟಲು ಹಣವಿರಲಿಲ್ಲ; ಬದಲಾಗಿ ಒಂದು ಚೀಲ ಜೋಳದ ಹಿಟ್ಟನ್ನು ನೀಡಿದ್ದರು. ಆಕೆಯೇ ಮುಂದೆ ಜಗತ್ಪ್ರಸಿದ್ಧ ಗಾಯಕಿಯಾದ ‘ಡಾಲಿ ಪಾರ್ಟನ್.’&lt;/p&gt;&lt;p data-block-key="aacjh"&gt;ಬಡತನವಿದ್ದರೂ ಆಕೆಯ ಬಳಿ ದೈವದತ್ತವಾದ ಅದ್ಭುತ ಕಂಠವಿತ್ತು. ಹದಿಹರೆಯದ ತನ್ನ ಹಾಡುಗಳ ಗಂಟನ್ನು ಕಟ್ಟಿಕೊಂಡು, ಹಳೆಯದಾದ ಒಂದು ಸೂಟ್‌ಕೇಸ್ ಹಿಡಿದು ನ್ಯಾಶ್ವಿ ನಗರಕ್ಕೆ ಬಂದಾಗ ಎಲ್ಲರೂ ಅವಳನ್ನು ಹೀಯಾಳಿಸಿದರು. ನೀನೊಬ್ಬಳು ದಡ್ಡ ಸುಂದರಿ, ನಿನ್ನನ್ನು ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ, ವಾಪಸ್ ಊರಿಗೆ ಹೊರಟುಹೋಗು ಎಂದು ಮೂದ ಲಿಸಿದರು. ಆದರೆ ಅವಳು ಆ ಮಾತುಗಳಿಗೆ ಕಿವಿಗೊಡಲಿಲ್ಲ.&lt;/p&gt;&lt;p data-block-key="86kn7"&gt;ಸಂಗೀತ ಲೋಕದ ದೊಡ್ಡ ಗುಟ್ಟೊಂದು ಆಕೆಗೆ ತಿಳಿದಿತ್ತು. ‘ಹಣವಿರುವುದು ಕೇವಲ ಹಾಡುವು ದರಲ್ಲಲ್ಲ, ಆ ಹಾಡಿನ ಮಾಲೀಕತ್ವವನ್ನು ಉಳಿಸಿಕೊಳ್ಳುವುದರಲ್ಲಿ’ ಎಂಬ ಸತ್ಯ ಆಕೆಗೆ ಅರಿವಾಗಿತ್ತು. ಹೀಗಾಗಿಯೇ ತನ್ನದೇ ಆದ ಪಬ್ಲಿಷಿಂಗ್ ಕಂಪನಿಯನ್ನು ಹುಟ್ಟುಹಾಕಿದಳು. ತಾನು ಬರೆದ ಪ್ರತಿಯೊಂದು ಪದದ ಹಕ್ಕೂ ತನ್ನದೇ ಆಗಿರಬೇಕೆಂದು ನಿರ್ಧರಿಸಿದಳು.&lt;/p&gt;&lt;p data-block-key="di2ee"&gt;&lt;b&gt;ಇದನ್ನೂ ಓದಿ:&lt;/b&gt; &lt;a href="/ankanagalu/the-story-of-grishneshwar-jyotirlinga-proclaiming-the-greatness-of-forgiveness-85736.html"&gt;Roopa Gururaj Column: ಕ್ಷಮೆಯ ಹಿರಿಮೆ ಸಾರುವ ಗೃಷ್ಣೇಶ್ವರ ಜ್ಯೋತಿರ್ಲಿಂಗದ ಕಥೆ&lt;/a&gt;&lt;/p&gt;&lt;p data-block-key="2apq7"&gt;1967ರಲ್ಲಿ ಪೋರ್ಟರ್ ವ್ಯಾಗನರ್ ಎಂಬ ಪ್ರಸಿದ್ಧ ಗಾಯಕ ತನ್ನ ಜನಪ್ರಿಯ ಟಿವಿ ಶೋನಲ್ಲಿ ಆಕೆಗೆ ಅವಕಾಶ ನೀಡಿದ. ಡಾಲಿಯ ವೃತ್ತಿಜೀವನಕ್ಕೆ ದೊಡ್ಡ ತಿರುವು ಸಿಕ್ಕಿತು. ಆದರೆ ಏಳು ವರ್ಷಗಳ ಕಾಲ ಆತನ ನೆರಳಿನ ಬೆಳೆದ ಆಕೆಗೆ, ತನ್ನದೇ ಆದ ಸ್ವತಂತ್ರ ಸಾಮ್ರಾಜ್ಯ ಕಟ್ಟುವ ಹಂಬಲ ಶುರುವಾ ಯಿತು.&lt;/p&gt;&lt;p data-block-key="33e2o"&gt;ಪೋರ್ಟರ್ ಇದಕ್ಕೆ ಒಪ್ಪಲಿಲ್ಲ. ಆಗ ಆಕೆ ಒಂದೇ ದಿನದಲ್ಲಿ Jolene ಮತ್ತು I Will Always Love You ಎಂಬ ಎರಡು ಅದ್ಭುತ ಗೀತೆಗಳನ್ನು ರಚಿಸಿದಳು. ಅದರಲ್ಲಿ ಎರಡನೆಯ ಹಾಡು ಕೇವಲ ಪ್ರೇಮ ಗೀತೆ ಯಾಗಿರಲಿಲ್ಲ; ಅದು ಪೋರ್ಟರ್‌ಗೆ ಆಕೆ ನೀಡಿದ ಕಾವ್ಯಾತ್ಮಕ ‘ರಾಜೀನಾಮೆ ಪತ್ರ’ವಾಗಿತ್ತು.&lt;/p&gt;&lt;p data-block-key="1gtle"&gt;1974ರಲ್ಲಿ ಈ ಹಾಡು ಭಾರಿ ಜನಪ್ರಿಯವಾಯಿತು. ಆ ಜನಪ್ರಿಯತೆ ಎಷ್ಟಿತ್ತೆಂದರೆ, ಸಾಕ್ಷಾತ್ ‘ಕಿಂಗ್ ಆಫ್ ರಾಕ್ ಆಂಡ್ ರೋಲ್’ ಖ್ಯಾತಿಯ ಎಲ್ವಿಸ್ ಪ್ರೀಸ್ಲಿ ಆ ಹಾಡನ್ನು ತಾನು ಹಾಡಬೇಕೆಂದು ಆಸೆಪಟ್ಟ. ಗುಡಿಸಲಿನಲ್ಲಿ ಹುಟ್ಟಿದ ಡಾಲಿಗೆ ಇದಕ್ಕಿಂತ ದೊಡ್ಡ ಅದೃಷ್ಟ ಇನ್ನೇನಿದೆ? ಆದರೆ ರೆಕಾರ್ಡಿಂಗ್‌ನ ಹಿಂದಿನ ದಿನ ರಾತ್ರಿ ಎಲ್ವಿಸ್‌ನ ಮ್ಯಾನೇಜರ್ ಕರ್ನಲ್ ಟಾಮ್ ಪಾರ್ಕರ್ ಕರೆ‌ ಮಾಡಿ, ಹಾಡಿನ ಶೇಕಡಾ 50ರಷ್ಟು ಹಕ್ಕುಗಳನ್ನು ನಮಗೆ ಬರೆದುಕೊಡಬೇಕು, ಇಲ್ಲದಿದ್ದರೆ ಎಲ್ವಿಸ್ ಹಾಡುವುದಿಲ್ಲ ಎಂಬ ಕಠಿಣ ಷರತ್ತು ವಿಧಿಸಿದ. ಅದು ಆಕೆಯ ಜೀವಮಾನದ ಕನಸು. ಆದರೆ, ಆಕೆ ತನ್ನ ಹಾಡಿನ ಹಕ್ಕನ್ನು ಬಿಟ್ಟುಕೊಡಲು ಸಿದ್ಧಳಿರಲಿಲ್ಲ.&lt;/p&gt;&lt;p data-block-key="c9i5q"&gt;ಭಾರವಾದ ಹೃದಯ ದಿಂದ, ‘ಇಲ್ಲ’ ಎಂದುಬಿಟ್ಟಳು. ಎಲ್ವಿಸ್ ಆ ಹಾಡನ್ನು ಹಾಡಲಿಲ್ಲ. ಆ ರಾತ್ರಿಯಿಡೀ ಆಕೆ ಬಿಕ್ಕಿ ಬಿಕ್ಕಿ ಅತ್ತಳು. ಶೋ ಬಿಟ್ಟು ಬಂದಿದ್ದಕ್ಕಾಗಿ ಆಕೆಯ ಹಳೆಯ ಗುರು ಪೋರ್ಟರ್ ಕೂಡ 3 ಮಿಲಿಯನ್ ಡಾಲರ್ ಮೊಕದ್ದಮೆ ಹೂಡಿದ. ಎಲ್ಲವನ್ನೂ ಆಕೆ ಒಂಟಿಯಾಗಿ ಎದುರಿಸಿದಳು, ದಂಡ ಕಟ್ಟಿದಳು, ಆದರೆ ತನ್ನ ಸ್ವಾಭಿಮಾನವನ್ನು ಮಾತ್ರ ಬಿಟ್ಟುಕೊಡಲಿಲ್ಲ.&lt;/p&gt;&lt;p data-block-key="fee3b"&gt;ಕಾಲ ಉರುಳಿತು. ಡಾಲಿ ತನ್ನದೇ ಸ್ವಂತ ಶ್ರಮದಿಂದ ಜಾಗತಿಕ ಬ್ರ್ಯಾಂಡ್ ಆಗಿ ಬೆಳೆದಳು. 1992ರಲ್ಲಿ ‘ದಿ ಬಾಡಿಗಾರ್ಡ್’ ಚಿತ್ರಕ್ಕಾಗಿ ಖ್ಯಾತ ಗಾಯಕಿ ವಿಟ್ನಿ ಹೂಸ್ಟನ್ ಆಕೆಯ ಅದೇ ಹಾಡನ್ನು ಹಾಡಿ ದಾಗ, ಅದು ಜಗತ್ತಿನಾದ್ಯಂತ ಹೊಸ ಇತಿಹಾಸವನ್ನೇ ಸೃಷ್ಟಿಸಿತು. ತನ್ನ ಹಾಡಿನ ಸಂಪೂರ್ಣ ಮಾಲೀಕತ್ವ ಉಳಿಸಿಕೊಂಡಿದ್ದ ಡಾಲಿಗೆ, ಆ ಒಂದೇ ಹಾಡು ಕೋಟ್ಯಂತರ ಡಾಲರ್ ಸಂಪತ್ತನ್ನು ತಂದುಕೊಟ್ಟಿತು. ಆಕೆ ಒಮ್ಮೆ ನಗುತ್ತಾ ಹೇಳಿದ್ದಳು, ‘ಆ ಹಾಡಿನಿಂದ ಬಂದ ಹಣದಲ್ಲಿ ನಾನು ಎಲ್ವಿಸ್ ಪ್ರೀಸ್ಲಿಯ ಇಡೀ ಅರಮನೆಯನ್ನೇ ಖರೀದಿಸಬಲ್ಲೆ!’ ಎಂದು.&lt;/p&gt;&lt;p data-block-key="4m773"&gt;ಇಂದು ಅವಳು ನೂರಾರು ಮಿಲಿಯನ್ ಡಾಲರ್‌ಗಳ ಒಡತಿ. ತನ್ನದೇ ಆದ ‘ಡಾಲಿವುಡ್’ ಸಾಮ್ರಾಜ್ಯ ಕಟ್ಟಿದ್ದಾಳೆ. ತಂದೆಯ ನೆನಪಿನಲ್ಲಿ ಬಡಮಕ್ಕಳಿಗೆ ಕೋಟ್ಯಂತರ ಪುಸ್ತಕಗಳನ್ನು ಹಂಚಿದ್ದಾಳೆ.&lt;/p&gt;&lt;p data-block-key="3i3jv"&gt;ಜೀವನದಲ್ಲಿ ಬೆಳೆಯುವ ಸಲುವಾಗಿ ನಾವು ಅನೇಕ ಬಾರಿ ನಮ್ಮ ಸ್ವಾಭಿಮಾನದೊಂದಿಗೆ ರಾಜಿ ಮಾಡಿಕೊಂಡು ಬಿಡುತ್ತೇವೆ. ಕೆಲವೊಮ್ಮೆ ಇಷ್ಟವಿಲ್ಲದ ಕೆಲಸಗಳನ್ನು ಕೂಡ ಮಾಡಿ ಬಿಡುತ್ತೇವೆ. ಆದರೆ ಅಂತಹ ಬೆಳವಣಿಗೆಯಿಂದ ನಮ್ಮ ನಿಜವಾದ ಅಸ್ತಿತ್ವ ಇರುತ್ತದೆಯೇ ಯೋಚಿಸಬೇಕು. ನಮ್ಮ ಬಗ್ಗೆ ನಮಗೆ ಆತ್ಮವಿಶ್ವಾಸವಿದ್ದಾಗ , ಆತ್ಮ ಗೌರವವನ್ನು ನಾವು ಎಂದೂ ಕಳೆದುಕೊಳ್ಳುವು ದಿಲ್ಲ. ಜೀವನದ ಯಾವ ನಿರ್ಧಾರವೂ ಕೂಡ ಮುಂದೆ ನಾವು ಪಶ್ಚಾತ್ತಾಪ ಪಡುವಂತೆ ಇರಬಾರದು. ಕೆಲವೊಮ್ಮೆ, ನಾವು ಹೇಳುವ ಒಂದು ಖಂಡಿತವಾದ ‘ಇಲ್ಲ’ ಎಂಬ ಪದವೇ, ನಮ್ಮ ಭವಿಷ್ಯದ ಭದ್ರ ಬುನಾದಿಯಾಗಬಲ್ಲದು.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>Vishweshwar Bhat Column: ಸಿ.ಪಿ.ಎನ್. ಸಿಂಗ್ ನೆನಪು</title><link>https://vishwavani.news/ankanagalu/cpn-singhs-memory-85830.html</link><guid>https://vishwavani.news/ankanagalu/cpn-singhs-memory-85830.html</guid><pubDate>Fri, 07 Aug 2026 00:31:04 +0000</pubDate><description>&lt;![CDATA[ಸ್ವತಂತ್ರ ಭಾರತದ ಆರಂಭಿಕ ದಶಕಗಳಲ್ಲಿ ಪ್ರಮುಖ ದೇಶಗಳಲ್ಲಿ ರಾಯಭಾರಿಯಾಗಿ, ನಂತರದಲ್ಲಿ ಪ್ರಮುಖ ರಾಜ್ಯಗಳ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ ಅವರು, ದೆಹಲಿಯ ರಾಜಕೀಯ ಕಾರಿಡಾರ್‌ ನಲ್ಲಿ ಅತ್ಯಂತ ಪ್ರಭಾವಶಾಲಿ ವ್ಯಕ್ತಿಯಾಗಿದ್ದರು. ಸಿ.ಪಿ.ಎನ್. ಸಿಂಗ್ ಅವರು ಬಿಹಾರದ ಅತ್ಯಂತ ಪ್ರಭಾವಿ ಹಾಗೂ ಶ್ರೀಮಂತ ಜಮೀನ್ದಾರಿ ಕುಟುಂಬದಲ್ಲಿ ಜನ್ಮ ತಾಳಿದರು.]]&gt;</description><dc:creator>&lt;![CDATA[ವಿಶ್ವೇಶ್ವರ ಭಟ್‌]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಅಂಕಣಗಳು]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Singh.original.jpg" class="attachment-large size-large wp-post-image" alt="Vishweshwar Bhat Column: ಸಿ.ಪಿ.ಎನ್. ಸಿಂಗ್ ನೆನಪು" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="fwgta"&gt;&lt;b&gt;ಸಂಪಾದಕರ ಸದ್ಯಶೋಧನೆ&lt;/b&gt;&lt;/p&gt;&lt;p data-block-key="2egmj"&gt;ಭಾರತೀಯ ರಾಜಕೀಯ, ರಾಜತಾಂತ್ರಿಕ ಹಾಗೂ ಆಡಳಿತಾತ್ಮಕ ಇತಿಹಾಸದಲ್ಲಿ ಸಿ.ಪಿ.ಎನ್. ಸಿಂಗ್ (ಚಂದೇಶ್ವರ ಪ್ರಸಾದ ನಾರಾಯಣ ಸಿಂಗ್) ಎನ್ನುವ ಹೆಸರು ಅತ್ಯಂತ ಗೌರವಾನ್ವಿತವಾದುದು.&lt;/p&gt;&lt;p data-block-key="d10ue"&gt;ಸ್ವತಂತ್ರ ಭಾರತದ ಆರಂಭಿಕ ದಶಕಗಳಲ್ಲಿ ಪ್ರಮುಖ ದೇಶಗಳಲ್ಲಿ ರಾಯಭಾರಿಯಾಗಿ, ನಂತರದಲ್ಲಿ ಪ್ರಮುಖ ರಾಜ್ಯಗಳ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ ಅವರು, ದೆಹಲಿಯ ರಾಜಕೀಯ ಕಾರಿಡಾರ್‌ ನಲ್ಲಿ ಅತ್ಯಂತ ಪ್ರಭಾವಶಾಲಿ ವ್ಯಕ್ತಿಯಾಗಿದ್ದರು. ಸಿ.ಪಿ.ಎನ್. ಸಿಂಗ್ ಅವರು ಬಿಹಾರದ ಅತ್ಯಂತ ಪ್ರಭಾವಿ ಹಾಗೂ ಶ್ರೀಮಂತ ಜಮೀನ್ದಾರಿ ಕುಟುಂಬದಲ್ಲಿ ಜನ್ಮತಾಳಿದರು.&lt;/p&gt;&lt;p data-block-key="99vnu"&gt;ಉನ್ನತ ಶಿಕ್ಷಣವನ್ನು ಪಡೆದಿದ್ದ ಅವರು, ಚಿಕ್ಕ ವಯಸ್ಸಿನಲ್ಲೇ ತಮ್ಮ ಜಾಣ್ಮೆ, ಗಂಭೀರ ವ್ಯಕ್ತಿತ್ವ ಮತ್ತು ಇಂಗ್ಲಿಷ್ ಭಾಷೆಯ ಮೇಲಿನ ಪ್ರಭುತ್ವದಿಂದ ದೇಶದ ಪ್ರಮುಖ ನಾಯಕರ ಗಮನ ಸೆಳೆದರು. ಬಿಹಾರ ಶಾಸನಸಭೆಯ ಸದಸ್ಯರಾಗುವ ಮೂಲಕ ಸಾರ್ವಜನಿಕ ಜೀವನ ಪ್ರವೇಶಿಸಿದ ಅವರು, ಬಿಹಾರ ವಿಶ್ವವಿದ್ಯಾಲಯದ ಕುಲಪತಿಗಳಾಗಿಯೂ ಸೇವೆ ಸಲ್ಲಿಸಿ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಕಾಣಿಕೆ ನೀಡಿದ್ದರು. ಸ್ವಾತಂತ್ರ್ಯದ ನಂತರ ಭಾರತದ ಮೊದಲ ಪ್ರಧಾನಿ ಜವಾಹರ್‌ಲಾಲ್ ನೆಹರು ಅವರು ಸಿ.ಪಿ.ಎನ್. ಸಿಂಗ್ ಅವರ ಕೌಶಲವನ್ನು ಗುರುತಿಸಿ, 1949ರಲ್ಲಿ ನೇಪಾಳಕ್ಕೆ ಭಾರತದ ರಾಯಭಾರಿಯಾಗಿ ನೇಮಿಸಿದರು. ಆ ಸಮಯದಲ್ಲಿ ನೇಪಾಳದಲ್ಲಿ ರಾಣಾ ಆಡಳಿತ ವ್ಯವಸ್ಥೆ ಮತ್ತು ರಾಜ ತ್ರಿಭುವನ್ ನಡುವೆ ಭಾರಿ ಸಂಘರ್ಷ ನಡೆಯುತ್ತಿತ್ತು.&lt;/p&gt;&lt;p data-block-key="d7b4a"&gt;&lt;b&gt;ಇದನ್ನೂ ಓದಿ:&lt;/b&gt; &lt;a href="/ankanagalu/an-island-belonging-to-three-countries-85735.html"&gt;Vishweshwar Bhat Column: ಮೂರು ದೇಶಕ್ಕೆ ಸೇರಿದ ಒಂದು ದ್ವೀಪ&lt;/a&gt;&lt;/p&gt;&lt;p data-block-key="ctd7s"&gt;ನೇಪಾಳದ ರಾಜಕೀಯ ಬಿಕ್ಕಟ್ಟಿನ ಸಮಯದಲ್ಲಿ ಸಿ.ಪಿ.ಎನ್. ಸಿಂಗ್ ಅವರು ಭಾರತದ ಹಿತಾಸಕ್ತಿಯನ್ನು ಕಾಯ್ದುಕೊಳ್ಳುವಲ್ಲಿ ಮತ್ತು ನೇಪಾಳದಲ್ಲಿ ಪ್ರಜಾಪ್ರಭುತ್ವ ಸ್ಥಾಪನೆಗೆ ರಾಜ ತ್ರಿಭುವನ್ ಅವರಿಗೆ ರಕ್ಷಣೆ ನೀಡುವಲ್ಲಿ ಅತ್ಯಂತ ಪ್ರಮುಖ ಹಾಗೂ ತಂತ್ರಗಾರಿಕೆಯ ಪಾತ್ರ ವಹಿಸಿದರು. ತದನಂತರ, 1950ರ ದಶಕದಲ್ಲಿ ಅವರು ಜಪಾನ್‌ಗೂ ಭಾರತದ ರಾಯಭಾರಿಯಾಗಿ ಕಾರ್ಯನಿರ್ವಹಿಸಿ, ಭಾರತದ ವಿದೇಶಾಂಗ ನೀತಿಯನ್ನು ಬಲಪಡಿಸಿದರು.&lt;/p&gt;&lt;p data-block-key="356m7"&gt;ರಾಜತಾಂತ್ರಿಕ ಸೇವೆಗಳ ನಂತರ ಸಿ.ಪಿ.ಎನ್. ಸಿಂಗ್ ಅವರನ್ನು ಆಡಳಿತಾತ್ಮಕ ಕ್ಷೇತ್ರಕ್ಕೆ ತರಲಾ ಯಿತು. ಅವರು ಭಾರತದ ಪ್ರಮುಖ ರಾಜ್ಯಗಳಿಗೆ ರಾಜ್ಯಪಾಲರಾಗಿ ನಿಯೋಜನೆಗೊಂಡರು. ಪಂಜಾಬ್ ಮತ್ತು ಹರಿಯಾಣ ವಿಭಜನೆ ಹಾಗೂ ಗಡಿ ಸಂಘರ್ಷಗಳ ಸೂಕ್ಷ್ಮ ಅವಧಿಯಲ್ಲಿ ಅವರು ಪಂಜಾಬ್‌ನ ರಾಜ್ಯಪಾಲರಾಗಿ ಆಡಳಿತವನ್ನು ಚಾಣಾಕ್ಷತನದಿಂದ ನಿಭಾಯಿಸಿದರು.&lt;/p&gt;&lt;p data-block-key="bdn3d"&gt;ಇಂದಿರಾ ಗಾಂಧಿಯವರು ಮತ್ತೆ ಅಧಿಕಾರಕ್ಕೆ ಬಂದ ನಂತರ, ದೇಶದ ಅತಿ ದೊಡ್ಡ ರಾಜ್ಯವಾದ ಉತ್ತರ ಪ್ರದೇಶದ ರಾಜ್ಯಪಾಲರನ್ನಾಗಿ ಸಿ.ಪಿ.ಎನ್. ಸಿಂಗ್ ಅವರನ್ನು ನೇಮಿಸಲಾಯಿತು. ಐದು ವರ್ಷಗಳ ಕಾಲ ಅತ್ಯಂತ ಯಶಸ್ವಿಯಾಗಿ ಆಡಳಿತ ನಡೆಸಿದ ಅವರು, ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರದ ನಡುವೆ ಜಾಣ್ಮೆಯ ಸೇತುವೆಯಾಗಿ ಕೆಲಸ ಮಾಡಿದರು. ಸಿ.ಪಿ.ಎನ್. ಸಿಂಗ್ ಅವರು ನೆಹರು ಕುಟುಂಬಕ್ಕೆ ಅತ್ಯಂತ ಹತ್ತಿರದ ಒಡನಾಡಿಯಾಗಿದ್ದರು.&lt;/p&gt;&lt;p data-block-key="25q34"&gt;ಪ್ರಧಾನಿ ಇಂದಿರಾ ಗಾಂಧಿ ಅವರ ಬಲಗೈ ಬಂಟನಾಗಿದ್ದ ಆರ್.ಕೆ. ಧವನ್ ಅವರಿಗೂ ಸಿ.ಪಿ.ಎನ್. ಸಿಂಗ್ ಅತ್ಯಂತ ಆತ್ಮೀಯರಾಗಿದ್ದರು. 1977ರಲ್ಲಿ ತುರ್ತು ಪರಿಸ್ಥಿತಿಯ ನಂತರ ನಡೆದ ಚುನಾವಣೆ ಯಲ್ಲಿ ಇಂದಿರಾ ಗಾಂಧಿ ಸೋತು, ಕಾಂಗ್ರೆಸ್ ಅಧಿಕಾರ ಕಳೆದುಕೊಂಡಾಗ, ಆರ್.ಕೆ. ಧವನ್ ಅವರಿಗೆ ನೆಲೆಸಲು ಸರಿಯಾದ ವಸತಿ ಇರಲಿಲ್ಲ. ಆ ಸಂಕಷ್ಟದ ಸಮಯದಲ್ಲಿ, ಸಿ.ಪಿ.ಎನ್. ಸಿಂಗ್ ಅವರು ಉದಾರ ಮನಸ್ಸಿನಿಂದ ದೆಹಲಿಯ ಅತ್ಯಂತ ದುಬಾರಿ ಮತ್ತು ಪ್ರಭಾವಿ ಎನಿಸಿದ 'ಗೊಲ್ಫ್ ಲಿಂಕ್ಸ್' ನಲ್ಲಿದ್ದ ತಮ್ಮ ಸ್ವಂತ ಬಂಗ್ಲೆಯ ಕೆಳಮಹಡಿಯನ್ನು ಧವನ್ ಅವರಿಗೆ ವಾಸಿಸಲು ಬಿಟ್ಟುಕೊಟ್ಟಿ ದ್ದರು!&lt;/p&gt;&lt;p data-block-key="2m3db"&gt;ಧವನ್ ಅವರು ತಮ್ಮ ಕೊನೆಯುಸಿರಿನವರೆಗೂ ಅದೇ ಬಂಗ್ಲೆಯಲ್ಲಿ ವಾಸವಿದ್ದರು (ಧವನ್ ನಿಧನದ ನಂತರ ಈ ಬಂಗ್ಲೆಯ ಆಸ್ತಿಹಕ್ಕಿಗೆ ಸಂಬಂಧಿಸಿದಂತೆ ಸಿ.ಪಿ.ಎನ್. ಸಿಂಗ್ ಅವರ ಮಗಳು ಜಯಶ್ರೀ ಸಿಂಗ್ ಮತ್ತು ಧವನ್ ಪತ್ನಿ ಅಚಲಾ ಮೋಹನ್ ನಡುವೆ ಕಾನೂನು ಹೋರಾಟವೂ ನಡೆಯಿತು). ಸಿ.ಪಿ.ಎನ್. ಸಿಂಗ್ ವೈಯಕ್ತಿಕ ಹಾಗೂ ರಾಜಕೀಯ ಪರಂಪರೆಯನ್ನು ಅವರ ಕುಟುಂಬ ಮುಂದಕ್ಕೆ ಒಯ್ಯಿತು. ಅವರ ಕುಟುಂಬದ ಹಲವು ಸದಸ್ಯರು ಭಾರತೀಯ ರಾಜಕೀಯದಲ್ಲಿ ಸಕ್ರಿಯರಾದರು.&lt;/p&gt;&lt;p data-block-key="fl0g"&gt;ಉತ್ತರ ಪ್ರದೇಶದ ಕುಶಿನಗರದ ಲೋಕಸಭಾ ಸದಸ್ಯರಾಗಿದ್ದ ಹಾಗೂ ಕೇಂದ್ರ ರಕ್ಷಣಾ ರಾಜ್ಯ ಸಚಿವ ರಾಗಿದ್ದ ಕುಂವರ್ ಸಿ.ಪಿ.ಎನ್. ಸಿಂಗ್ ಮತ್ತು ಅವರ ಮೊಮ್ಮಗ, ಕೇಂದ್ರ ಮಾಜಿ ಗೃಹ ರಾಜ್ಯ ಸಚಿವ ರಾಗಿದ್ದ ಆರ್.ಪಿ.ಎನ್. ಸಿಂಗ್ ಈ ರಾಜಮನೆತನ ಹಾಗೂ ರಾಜಕೀಯ ಪರಂಪರೆಯನ್ನೇ ಮುಂದುವರಿಸಿಕೊಂಡು ಬಂದಿದ್ದಾರೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>Keshava Prasad B Column: ಬಿಲಿಯೇರ್‌ ಎಂದರೆ ಯಾರು? ಅವರೆಲ್ಲರೂ ಹುಟ್ಟುವಾಗಲೇ ಶ್ರೀಮಂತರೇ?</title><link>https://vishwavani.news/ankanagalu/who-is-a-billionaire-are-they-all-wealthy-from-birth-85829.html</link><guid>https://vishwavani.news/ankanagalu/who-is-a-billionaire-are-they-all-wealthy-from-birth-85829.html</guid><pubDate>Fri, 07 Aug 2026 00:31:02 +0000</pubDate><description>&lt;![CDATA[ಯಾವುದೇ ವ್ಯಕ್ತಿಯ ನಿವ್ವಳ ಮೌಲ್ಯವು (Net Worth) ಪ್ರಮುಖ ಜಾಗತಿಕ ಕರೆನ್ಸಿಯಾದ ಒಂದು ಬಿಲಿಯನ್ (ನೂರು ಕೋಟಿ) ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಡಾಲರ್‌ಗಳಿಗೆ ಸಮಾನ ವಾಗಿದ್ದರೆ ಅವರನ್ನು 'ಬಿಲಿಯನೇರ್‌' ಎಂದು ಕರೆಯಲಾಗುತ್ತದೆ. ಭಾರತದ ರೂಪಾಯಿಗಳ ಲೆಕ್ಕಾ ಚಾರದಲ್ಲಿ ಹೇಳುವುದಾದರೆ, ಸುಮಾರು 8,300 ಕೋಟಿ ರೂಪಾಯಿಗಳಿಗೂ ಅಧಿಕ ಆಸ್ತಿಯನ್ನು ಹೊಂದಿರುವ ವ್ಯಕ್ತಿ ಈ ವರ್ಗಕ್ಕೆ ಸೇರುತ್ತಾರೆ.]]&gt;</description><dc:creator>&lt;![CDATA[ಕೇಶವ ಪ್ರಸಾದ್​ ಬಿ]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಅಂಕಣಗಳು]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/KP_7.original.jpg" class="attachment-large size-large wp-post-image" alt="Keshava Prasad B Column: ಬಿಲಿಯೇರ್‌ ಎಂದರೆ ಯಾರು? ಅವರೆಲ್ಲರೂ ಹುಟ್ಟುವಾಗಲೇ ಶ್ರೀಮಂತರೇ?" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="gzgaq"&gt;&lt;b&gt;ಮನಿಮೈಂಡೆಡ್‌&lt;/b&gt;&lt;/p&gt;&lt;p data-block-key="7c92a"&gt;ಬಿಲಿಯನೇರ್‌ ಆಗಲು ಯಾರಿಗೆ ಬಯಕೆ ಇರುವುದಿಲ್ಲ ಹೇಳಿ. ಆದರೆ ಎಲ್ಲರಿಗೂ ಅದು ಸಾಧ್ಯ ವಾಗುವುದಿಲ್ಲ. ಪ್ರಪಂಚದ ಜನಸಂಖ್ಯೆಯಲ್ಲಿ ಅವರು 0.0002 ಪರ್ಸೆಂಟ್‌ ಮಾತ್ರ! ಆದ್ದರಿಂದ ಅನೇಕ ಮಂದಿಗೆ ಬಿಲಿಯನೇರ್‌ ಅಂದ್ರೆ ಈರ್ಷ್ಯೆ ಇದ್ದರೆ ಆಶ್ಚರ್ಯವಿಲ್ಲ.&lt;/p&gt;&lt;p data-block-key="c21kt"&gt;'ಬಿಲಿಯನೇರ್‌' (Billionaire) ಎಂಬ ಪದವು ಕೇವಲ ಹಣದ ಮೊತ್ತವನ್ನು ಸೂಚಿಸುವುದಷ್ಟೇ ಅಲ್ಲ, ಬದಲಿಗೆ ಜಾಗತಿಕ ಆರ್ಥಿಕತೆಯ ಮೇಲೆ ಪ್ರಭಾವ ಬೀರುವ ಅಸಾಧಾರಣ ಶಕ್ತಿ, ಯಶಸ್ಸಿನ ಪ್ರತೀಕ ವಾಗಿದೆ. ಜನಸಾಮಾನ್ಯರ ಕುತೂಹಲದ ಕೇಂದ್ರಬಿಂದುವಾಗಿದೆ. ಇಷ್ಟೊಂದು ಅಪಾರ ಸಂಪತ್ತು ಎಂದರೆ ಏನು? ಬಿಲಿಯನೇರ್‌ಗಳ ಸಂಖ್ಯೆ ಜಗತ್ತಿನಲ್ಲಿ ಎಷ್ಟಿದೆ? ಭಾರತದ ಸ್ಥಿತಿಗತಿಯೇನು? ಮತ್ತು ಎಲ್ಲ ಬಿಲಿಯನೇರ್‌ಗಳು ಹುಟ್ಟುವಾಗಲೇ ಶ್ರೀಮಂತರೇ, ಅವರ ಬಗ್ಗೆ ಚಾಲ್ತಿಯಲ್ಲಿರುವ ತಪ್ಪು ಕಲ್ಪನೆಗಳು ಏನೇನು? ಎಂಬೆಲ್ಲ ರೋಚಕ ಪ್ರಶ್ನೆಗಳಿಗೆ ಉತ್ತರಗಳನ್ನು ಈ ಲೇಖನದಲ್ಲಿ ವಿವರವಾಗಿ ತಿಳಿದುಕೊಳ್ಳೋಣ.&lt;/p&gt;&lt;p data-block-key="2s0cn"&gt;ಯಾವುದೇ ವ್ಯಕ್ತಿಯ ನಿವ್ವಳ ಮೌಲ್ಯವು (Net Worth) ಪ್ರಮುಖ ಜಾಗತಿಕ ಕರೆನ್ಸಿಯಾದ ಒಂದು ಬಿಲಿಯನ್ (ನೂರು ಕೋಟಿ) ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಡಾಲರ್‌ಗಳಿಗೆ ಸಮಾನ ವಾಗಿದ್ದರೆ ಅವರನ್ನು 'ಬಿಲಿಯನೇರ್‌' ಎಂದು ಕರೆಯಲಾಗುತ್ತದೆ. ಭಾರತದ ರೂಪಾಯಿಗಳ ಲೆಕ್ಕಾ ಚಾರದಲ್ಲಿ ಹೇಳುವುದಾದರೆ, ಸುಮಾರು 8,300 ಕೋಟಿ ರೂಪಾಯಿಗಳಿಗೂ ಅಧಿಕ ಆಸ್ತಿಯನ್ನು ಹೊಂದಿರುವ ವ್ಯಕ್ತಿ ಈ ವರ್ಗಕ್ಕೆ ಸೇರುತ್ತಾರೆ.&lt;/p&gt;&lt;p data-block-key="ju1r"&gt;&lt;b&gt;ಇದನ್ನೂ ಓದಿ:&lt;/b&gt; &lt;a href="/ankanagalu/manufacturing-and-it-recover-ai-fears-dispelled-85240.html"&gt;Keshava Prasad B Column: ಚೇತರಿಸಿದ ಉತ್ಪಾದನೆ, ಐಟಿ: ಎಐ ಆತಂಕ ದೂರ !&lt;/a&gt;&lt;/p&gt;&lt;p data-block-key="65dac"&gt;ಸಂಪತ್ತಿನ ನಿವ್ವಳ ಮೌಲ್ಯ ಎಂದರೆ ಕೇವಲ ಕೈಯಲ್ಲಿರುವ ನಗದು ಅಲ್ಲ. ಬದಲಿಗೆ ಅವರು ಹೊಂದಿ ರುವ ಕಂಪನಿಗಳ ಷೇರುಗಳು, ರಿಯಲ್ ಎಸ್ಟೇಟ್, ಭೂಮಿ, ಕೈಗಾರಿಕೆಗಳು, ಚಿನ್ನ, ಬೆಲೆಬಾಳುವ ಕಲಾಕೃತಿಗಳು ಮತ್ತು ಇತರೆ ಎಲ್ಲಾ ಹೂಡಿಕೆಗಳ ಒಟ್ಟು ಮೌಲ್ಯದಿಂದ ಅವರ ಮೇಲಿನ ಸಾಲ ಗಳನ್ನು ಕಳೆದು ಉಳಿಯುವ ಶುದ್ಧ ಆಸ್ತಿ ಮೌಲ್ಯ. ಫೋರ್ಬ್ಸ್ (Forbes) ಮತ್ತು ಬ್ಲೂಮ್‌ಬರ್ಗ್ (Bloomberg) ಮುಂತಾದ ಜಾಗತಿಕ ಆರ್ಥಿಕ ನಿಯತಕಾಲಿಕೆಗಳು ಜಗತ್ತಿನ ಈ ಶ್ರೀಮಂತರ ಪಟ್ಟಿಯನ್ನು ಸತತವಾಗಿ ಟ್ರ್ಯಾಕ್ ಮಾಡಿ ಪ್ರಕಟಿಸುತ್ತಿರುತ್ತವೆ.&lt;/p&gt;&lt;p data-block-key="e398d"&gt;ಜಾಗತಿಕ ಮಟ್ಟದಲ್ಲಿ ಬಿಲಿಯನೇರ್‌ಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ಹೆಚ್ಚಾಗು ತ್ತಿದೆ. ತಂತ್ರಜ್ಞಾನದ ಬೆಳವಣಿಗೆ, ಸ್ಟಾರ್ಟ್‌ಅಪ್ ಸಂಸ್ಕೃತಿ ಮತ್ತು ಷೇರುಪೇಟೆಯ ಉತ್ಕರ್ಷ ಇದಕ್ಕೆ ಪ್ರಮುಖ ಕಾರಣಗಳು. ಇತ್ತೀಚಿನ ಫೋರ್ಬ್ಸ್ ವರದಿಗಳ ಪ್ರಕಾರ, ಇಡೀ ವಿಶ್ವದಲ್ಲಿ ಒಟ್ಟು ಬಿಲಿಯ ನೇರ್‌ಗಳ ಸಂಖ್ಯೆ 2,700 ರಿಂದ 2,800 ರ ಆಸುಪಾಸಿನಲ್ಲಿದೆ. ಇವರ ಬಳಿ ಇರುವ ಒಟ್ಟು ಸಂಪತ್ತು ಹಲವು ದೇಶಗಳ ಜಿಡಿಪಿಗಿಂತಲೂ (GDP) ಹೆಚ್ಚು.&lt;/p&gt;&lt;p data-block-key="8s68p"&gt;ಜಗತ್ತಿನಲ್ಲಿ ಅತಿ ಹೆಚ್ಚು ಬಿಲಿಯನೇರ್‌ ಗಳನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದೆ. ಇದರ ನಂತರದ ಸ್ಥಾನಗಳಲ್ಲಿ ಚೀನಾ ಮತ್ತು ಭಾರತ ದೇಶಗಳಿವೆ. ಎಲಾನ್ ಮಸ್ಕ್, ಜೆಫ್ ಬೆಜೋಸ್, ಮಾರ್ಕ್ ಜುಕರ್‌ಬರ್ಗ್ ಮತ್ತು ಬಿಲ್ ಗೇಟ್ಸ್ ಮುಂತಾದ ದಿಗ್ಗಜರು ಜಾಗತಿಕ ಬಿಲಿಯನೇರ್‌ಗಳ ಮುಂಚೂಣಿಯಲ್ಲಿದ್ದಾರೆ.&lt;/p&gt;
&lt;/div&gt;

    
&lt;figure class="article-image text-center mb-4"&gt;
    &lt;img alt="62 ok" class="img-fluid" height="720" src="https://cdn.vishwavani.news/media/images/62_ok_jKYIz3P.max-1280x720.format-webp.webp" width="1280"&gt;
    
&lt;/figure&gt;

    
&lt;div class="article-paragraph"&gt;
    &lt;p data-block-key="bjnm6"&gt;ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯೊಂದಿಗೆ ಭಾರತವು ಜಾಗತಿಕ ಬಿಲಿಯನೇರ್‌ಗಳ ಪಟ್ಟಿ ಯಲ್ಲಿ ತನ್ನ ಸ್ಥಾನವನ್ನು ಗಟ್ಟಿಗೊಳಿಸಿಕೊಂಡಿದೆ. ಭಾರತದಲ್ಲಿ ಪ್ರಸ್ತುತ ಸುಮಾರು 200ಕ್ಕೂ ಅಧಿಕ ಬಿಲಿಯನೇರ್‌ಗಳಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಭಾರತೀಯ ಶ್ರೀಮಂತರ ಸಂಖ್ಯೆ ಮತ್ತು ಅವರ ಸಂಪತ್ತಿನ ಗಾತ್ರವು ದಾಖಲೆ ಮಟ್ಟದಲ್ಲಿ ಏರಿಕೆಯಾಗಿದೆ.&lt;/p&gt;&lt;p data-block-key="eut4n"&gt;ಮುಖೇಶ್ ಅಂಬಾನಿ (ರಿಲಯನ್ಸ್ ಇಂಡಸ್ಟ್ರೀಸ್) ಮತ್ತು ಗೌತಮ್ ಅದಾನಿ (ಅದಾನಿ ಗ್ರೂಪ್) ಅವರು ಭಾರತದ ಮಾತ್ರವಲ್ಲದೆ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಗಳ ಸಾಲಿನಲ್ಲಿ ಅಗ್ರಸ್ಥಾನ ದಲ್ಲಿದ್ದಾರೆ. ಇವರೊಂದಿಗೆ ಸೀರಮ್ ಇನ್‌ಸ್ಟಿಟ್ಯೂಟ್‌ನ ಸೈರಸ್ ಪೂನಾವಾಲಾ, ಎಚ್‌ಸಿಎಲ್‌ನ ಶಿವ ನಾಡಾರ್, ಡಿ-ಮಾರ್ಟ್‌ನ ರಾಧಾಕಿಷನ್ ದಮಾನಿ ಮುಂತಾದವರು ಭಾರತದ ಪ್ರಮುಖ ಬಿಲಿಯನೇರ್‌ಗಳಾಗಿದ್ದಾರೆ.&lt;/p&gt;&lt;p data-block-key="bec3p"&gt;ಮುಂಬಯಿ ಮಹಾ ನಗರವು ಅತಿ ಹೆಚ್ಚು ಬಿಲಿಯನೇರ್‌ಗಳನ್ನು ಹೊಂದಿರುವ ಭಾರತದ ವಾಣಿಜ್ಯ ರಾಜಧಾನಿಯಾಗಿದೆ. ಇದರ ನಂತರ ದಿಲ್ಲಿ ಮತ್ತು ಬೆಂಗಳೂರು ನಗರಗಳು ಪ್ರಮುಖ ಸ್ಥಾನ ಪಡೆದಿವೆ. ತಂತ್ರಜ್ಞಾನ ಮತ್ತು ನಾವೀನ್ಯತೆಯ ತವರಾಗಿರುವ ಬೆಂಗಳೂರು ಯುವ ಬಿಲಿಯನೇರ್‌ ಗಳ ಹುಟ್ಟಿಗೆ ಸಾಕ್ಷಿಯಾಗಿದೆ.&lt;/p&gt;&lt;p data-block-key="f9v65"&gt;ಸಾಮಾನ್ಯವಾಗಿ ಜನರಲ್ಲಿ ಒಂದು ಅಭಿಪ್ರಾಯವಿರುತ್ತದೆ - "ಶ್ರೀಮಂತರ ಮಕ್ಕಳು ಮಾತ್ರ ದೊಡ್ಡ ಶ್ರೀಮಂತರಾಗಲು ಸಾಧ್ಯ" ಎಂದು. ಆದರೆ ಈ ನಂಬಿಕೆ ಸಂಪೂರ್ಣವಾಗಿ ಸತ್ಯವಲ್ಲ. ಜಾಗತಿಕ ಮತ್ತು ಭಾರತೀಯ ಬಿಲಿಯನೇರ್‌ಗಳ ಇತಿಹಾಸವನ್ನು ಕೆದಕಿದರೆ, ಎರಡು ರೀತಿಯ ಶ್ರೀಮಂತರು ನಮ್ಮ ಕಣ್ಣಿಗೆ ಬೀಳುತ್ತಾರೆ.&lt;/p&gt;&lt;p data-block-key="ffitr"&gt;ಕೆಲವರು ಹುಟ್ಟುವಾಗಲೇ ಬಂಗಾರದ ಚಮಚ ಬಾಯಿಯಲ್ಲಿಟ್ಟು ಕೊಂಡು ಹುಟ್ಟಿರುತ್ತಾರೆ. ಅಂದರೆ ತಮ್ಮ ಕುಟುಂಬದ ಹಿರಿಯರು ಕಟ್ಟಿ ಬೆಳೆಸಿದ ದೊಡ್ಡ ಸಾಮ್ರಾಜ್ಯ ಅಥವಾ ಆಸ್ತಿಯನ್ನು ವಾರಸುದಾರರಾಗಿ ಪಡೆಯುತ್ತಾರೆ. ಉದಾಹರಣೆಗೆ, ವಾಲ್ಮಾರ್ಟ್ ಸಂಸ್ಥಾಪಕರ ಕುಟುಂಬ ಅಥವಾ ಕೆಲವು ಐಷಾರಾಮಿ ಬ್ರ್ಯಾಂಡ್‌ಗಳ ಮಾಲೀಕರು. ಇವರಿಗೆ ಆರ್ಥಿಕ ಭದ್ರತೆ ಆರಂಭದಿಂದಲೇ ಸುಲಭವಾಗಿ ಸಿಕ್ಕಿರುತ್ತದೆ.&lt;/p&gt;&lt;p data-block-key="90ijh"&gt;ಅಚ್ಚರಿಯ ಸಂಗತಿಯೆಂದರೆ, ಜಗತ್ತಿನ ಮತ್ತು ಭಾರತದ ಅರ್ಧಕ್ಕೂ ಹೆಚ್ಚಿನ ಬಿಲಿಯನೇರ್‌ಗಳು ಶೂನ್ಯದಿಂದ ಅಥವಾ ಸಾಮಾನ್ಯ ಕುಟುಂಬಗಳಿಂದ ಬಂದು ತಮ್ಮ ಕಠಿಣ ಪರಿಶ್ರಮ, ಬುದ್ಧಿವಂತಿಕೆ ಮತ್ತು ಛಲದಿಂದ ದೊಡ್ಡ ಸಾಮ್ರಾಜ್ಯವನ್ನು ಕಟ್ಟಿದವರಾಗಿದ್ದಾರೆ. ಇವರನ್ನು 'ಸೆಲ್ಫ್-ಮೇಡ್ ಬಿಲಿಯನೇರ್‌ಗಳು' ಎನ್ನಲಾಗುತ್ತದೆ. ವಿಶ್ವದ ಅತ್ಯಂತ ಶ್ರೀಮಂತರಲ್ಲಿ ಒಬ್ಬರಾದ ಎಲಾನ್ ಮಸ್ಕ್ ಮತ್ತು ಜೆಫ್ ಬೆಜೋಸ್ ಅವರು ಅತಿ ಸಾಮಾನ್ಯ ಹಿನ್ನೆಲೆಯಿಂದ ಬಂದು ತಮ್ಮದೇ ಆದ ಹೊಸ ಆಲೋಚನೆಗಳಿಂದ ಜಗತ್ತನ್ನೇ ಬದಲಾಯಿಸಿ ಬಿಲಿಯನೇರ್‌ಗಳಾದರು.&lt;/p&gt;&lt;p data-block-key="2g3ng"&gt;ಭಾರತದ ಐಟಿ ದೈತ್ಯ ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಅವರ ಆರಂಭಿಕ ಬದುಕು ಸಾಮಾನ್ಯ ಮಧ್ಯಮ ವರ್ಗದ ಆದಾಯವಿರುವ ಕುಟುಂಬದ್ದಾಗಿತ್ತು. ಜೆಪ್ಟೋ, ಜೊಮಾಟೊ, ಜೆರೋಧಾ ಮುಂತಾದ ಕಂಪನಿಗಳ ಯುವ ಸಿಇಒಗಳು ಯಾವುದೇ ದೊಡ್ಡ ಹಿನ್ನೆಲೆಯಿಲ್ಲದೆ ಸ್ವಂತ ಬಲದಿಂದ ಬಿಲಿಯನೇರ್ ಪದವಿ ಅಲಂಕರಿಸಿದ್ದಾರೆ.&lt;/p&gt;&lt;p data-block-key="1fjk4"&gt;ಅಪಾರ ಸಂಪತ್ತು ವ್ಯಕ್ತಿಯೊಬ್ಬನಿಗೆ ಐಷಾರಾಮಿ ಜೀವನವನ್ನು ನೀಡಿದರೂ, ಸಮಾಜದ ಕಡೆಗೆ ಅವರ ಜವಾಬ್ದಾರಿಯೂ ಅಷ್ಟೇ ದೊಡ್ಡದಿರುತ್ತದೆ. ಇಂದು ಜಗತ್ತಿನ ಅನೇಕ ಬಿಲಿಯನೇರ್‌ಗಳು 'ದಿ ಗಿವಿಂಗ್ ಪ್ಲೆಡ್ಜ್' (The Giving Pledge) ನಂತಹ ಅಭಿಯಾನಗಳ ಮೂಲಕ ತಮ್ಮ ಸಂಪತ್ತಿನ ಸಿಂಹಪಾಲು ಭಾಗವನ್ನು ಲೋಕೋಪಕಾರಿ ಕಾರ್ಯಗಳಿಗೆ, ಶಿಕ್ಷಣಕ್ಕೆ, ಆರೋಗ್ಯ ಕ್ಷೇತ್ರಕ್ಕೆ ಮತ್ತು ಬಡತನ ನಿರ್ಮೂಲನೆಗೆ ದಾನ ಮಾಡುತ್ತಿದ್ದಾರೆ. ಭಾರತದಲ್ಲೂ ಅಜೀಂ ಪ್ರೇಮ್‌ಜಿ (Wipro) ಮುಂತಾದವರು ಸಾವಿರಾರು ಕೋಟಿ ರೂಪಾಯಿಗಳನ್ನು ದಾನ ಮಾಡುವ ಮೂಲಕ ಆದರ್ಶ ಪ್ರಾಯರಾಗಿದ್ದಾರೆ.&lt;/p&gt;&lt;p data-block-key="ebtee"&gt;ಬಿಲಿಯೇರ್‌ ಎಂದರೆ ಕೇವಲ ದೊಡ್ಡ ಬ್ಯಾಂಕ್ ಬ್ಯಾಲೆನ್ಸ್ ಹೊಂದಿರುವವರಲ್ಲ; ಅವರು ಆರ್ಥಿಕತೆಗೆ ಚಲನಶೀಲತೆ ನೀಡುವವರು, ಲಕ್ಷಾಂತರ ಜನರಿಗೆ ಉದ್ಯೋಗ ಸೃಷ್ಟಿಸುವವರು ಮತ್ತು ಹೊಸ ತಂತ್ರಜ್ಞಾನಗಳಿಗೆ ಬಂಡವಾಳ ಹೂಡುವ ಸಾಹಸಿಗರು. ಹುಟ್ಟುವಾಗ ಬಡವರಾಗಿರಬಹುದು ಅಥವಾ ಶ್ರೀಮಂತರಾಗಿರಬಹುದು, ಆದರೆ ಒಬ್ಬ ವ್ಯಕ್ತಿ ಬಿಲಿಯನೇರ್ ಆಗಿ ಹೊರಹೊಮ್ಮಲು ದೃಢಸಂಕಲ್ಪ, ರಿಸ್ಕ್ ತೆಗೆದುಕೊಳ್ಳುವ ಧೈರ್ಯ ಮತ್ತು ಸಮಯದ ಸರಿಯಾದ ಬಳಕೆಯು ಅತ್ಯಂತ ಅವಶ್ಯಕವಾಗಿದೆ. ಸಮಾಜದ ಆರ್ಥಿಕ ಸಮತೋಲನದಲ್ಲಿ ಇವರ ಪಾತ್ರ ದೊಡ್ಡದಾಗಿದ್ದು, ಸಂಪತ್ತಿನ ಜೊತೆಗೆ ಸಾಮಾಜಿಕ ಕಳಕಳಿಯೂ ಬೆಳೆದಾಗ ಮಾತ್ರ ಆ ಯಶಸ್ಸು ಪರಿಪೂರ್ಣ ವಾಗುತ್ತದೆ.&lt;/p&gt;&lt;p data-block-key="26oim"&gt;ಜಾಗತಿಕವಾಗಿ ಪ್ರತಿವರ್ಷ ಬ್ಯುಸಿನೆಸ್, ಸ್ವಂತ ಅಭಿವೃದ್ಧಿ ಮತ್ತು ಸಂಪತ್ತು ಸೃಷ್ಟಿಗೆ ಸಂಬಂಧಿಸಿದ ನೂರಾರು ಪುಸ್ತಕಗಳು ಪ್ರಕಟಗೊಳ್ಳುತ್ತವೆ. ಬಿಲಿಯನೇರ್‌ಗಳ ರಹಸ್ಯಗಳೆಂದರೆ ಕೇವಲ ಉದ್ಯಮ ಪಾಠಗಳಷ್ಟೇ ಅಲ್ಲದೆ, ಅವರ ಮಾನಸಿಕತೆ (Mindset) ಮತ್ತು ದಿನಚರಿಯನ್ನು ತಿಳಿಸುವ " ಬಿಲಿಯ ನೇರ್‌ ಹ್ಯಾಬಿಟ್ಸ್‌ʼ " ಸೀಕ್ರೆಟ್ಸ್‌ ಆಫ್‌ ದಿ ಮಿಲಿಯನೇರ್‌ ಮೈಂಡ್‌ʼ " ಥಿಂಕ್‌ ಆಂಡ್‌ ಗ್ರೊ ರಿಚ್‌ʼ ಮುಂತಾದ ಅನೇಕ ಜನಪ್ರಿಯ ಪುಸ್ತಕಳು ಲಭ್ಯವಿವೆ.&lt;/p&gt;&lt;p data-block-key="9rm41"&gt;ಎಲಾನ್ ಮಸ್ಕ್, ಸ್ಟೀವ್ ಜಾಬ್ಸ್, ವಾರೆನ್ ಬಫೆಟ್, ಬಿಲ್ ಗೇಟ್ಸ್ ಮುಂತಾದ ಬಿಲಿಯನೇರ್‌ಗಳ ಜೀವನಗಾಥೆ ಮತ್ತು ಅವರ ಯಶಸ್ಸಿನ ರಹಸ್ಯಗಳನ್ನು ಬಿಚ್ಚಿಡುವ ನೂರಾರು ಅಧಿಕೃತ ಹಾಗೂ ಅನಧಿಕೃತ ಪುಸ್ತಕಗಳು ಪ್ರಪಂಚದಾದ್ಯಂತ ಕೋಟ್ಯಂತರ ಪ್ರತಿಗಳು ಮಾರಾಟವಾಗಿವೆ. ಬ್ಯುಸಿನೆಸ್ ಪುಸ್ತಕಗಳ ಹೊರತಾಗಿ, 'ಬಿಲಿಯನೇರ್ ರೊಮ್ಯಾನ್ಸ್' ಅಥವಾ ಕಾಲ್ಪನಿಕ ಕಥೆಗಳ ವಿಭಾಗದಲ್ಲೂ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸಾವಿರಾರು ಕಾದಂಬರಿಗಳು ಲಭ್ಯವಿವೆ.&lt;/p&gt;&lt;p data-block-key="1dqud"&gt;ಈಗ ಬಿಲಿಯನೇರ್‌ಗಳ ಬಗ್ಗೆ ಇರುವ ಮಿಥ್ಯೆಗಳನ್ನು ನೋಡೋಣ. ಇವರೆಲ್ಲ ತಮ್ಮ ತಂದೆ-ತಾಯಿ ಗಳ ಆಸ್ತಿಯನ್ನು ವಾರಸ್ದಾರರಾಗಿ ಪಡೆದು ಶ್ರೀಮಂತರಾದವರು ಎಂಬ ಭಾವನೆ ಇದೆ. ಆದರೆ ಅರ್ಧಕ್ಕೂ ಹೆಚ್ಚು ಬಿಲಿಯನೇರ್‌ಗಳು 'ಸೆಲ್ಫ್-ಮೇಡ್' ಅಂದರೆ ಸ್ವಂತ ಬಲದಿಂದ ಮೇಲೆ ಬಂದವ ರಾಗಿದ್ದಾರೆ. ಇವರು ಕೇವಲ ಹಣದ ಹಿಂದೆ ಬಿದ್ದು, ಬೇರೆ ಯಾವುದೇ ಖುಷಿ, ಹವ್ಯಾಸಗಳನ್ನು ಇಟ್ಟುಕೊಂಡಿರುವುದಿಲ್ಲ ಎಂಬ ಭಾವನೆ ಇದೆ. ಯಶಸ್ವಿ ಬಿಲಿಯನೇರ್‌ಗಳು ಸಮಯ ನಿರ್ವಹಣೆ ಯಲ್ಲಿ ನುರಿತವರು.&lt;/p&gt;&lt;p data-block-key="6boke"&gt;ಬಿಲ್ ಗೇಟ್ಸ್, ವಾರೆನ್‌ ಬಫೆಟ್ ಪುಸ್ತಕ ಓದುವುದರಲ್ಲಿ, ಎಲಾನ್ ಮಸ್ಕ್ ವಿಜ್ಞಾನ ಹಾಗೂ ವಿಡಿಯೋ ಗೇಮ್‌ಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಇವರು ತಮ್ಮ ಆರೋಗ್ಯ, ಕುಟುಂಬ ಮತ್ತು ಹವ್ಯಾಸಗಳಿಗೂ ಸಾಕಷ್ಟು ಸಮಯ ಮೀಸಲಿಡುತ್ತಾರೆ.‌ ಇವರ ಬ್ಯಾಂಕ್ ಖಾತೆಗಳಲ್ಲಿ ಯಾವಾಗಲೂ ಲಕ್ಷಾಂತರ ಕೋಟಿ ರೂಪಾಯಿಗಳ ನಗದು ಹಣ ತುಂಬಿರುತ್ತದೆ ಎಂದು ಜನ ಭಾವಿಸುತ್ತಾರೆ.&lt;/p&gt;&lt;p data-block-key="b91s5"&gt;ಬಿಲಿಯನೇರ್‌ಗಳ ಸಂಪತ್ತು ಎಂದರೆ ಅವರ ಬಳಿ ಇರುವ ದೊಡ್ಡ ಪ್ರಮಾಣದ ನಗದು ಅಲ್ಲ. ಬದಲಿಗೆ ಅವರು ಹೊಂದಿರುವ ಕಂಪನಿಗಳ ಷೇರುಗಳು (Shares), ರಿಯಲ್ ಎಸ್ಟೇಟ್, ಕಾರ್ಖಾನೆ ಗಳು ಮತ್ತು ವಿವಿಧ ವ್ಯವಹಾರಗಳ ಒಟ್ಟು ಮೌಲ್ಯ. ಇವರ ಸಂಪತ್ತಿನ ಸಿಂಹಪಾಲು ಮಾರುಕಟ್ಟೆ ಯಲ್ಲಿ ಹೂಡಿಕೆಯ ರೂಪದಲ್ಲಿರುತ್ತದೆ.&lt;/p&gt;&lt;p data-block-key="a1ll9"&gt;ಶ್ರೀಮಂತರು ತಮ್ಮ ಪ್ರಭಾವ ಬಳಸಿ ದೇಶಕ್ಕೆ ಯಾವುದೇ ತೆರಿಗೆ ಕಟ್ಟುವುದಿಲ್ಲ ಎಂಬ ಆರೋಪ ಸದಾ ಕೇಳಿಬರುತ್ತದೆ. ವಾಸ್ತವದಲ್ಲಿ, ಬಿಲಿಯನೇರ್‌ಗಳು ತಮ್ಮ ಆದಾಯದ ಮೇಲೆ ಅತ್ಯಧಿಕ ಪ್ರಮಾಣದ ತೆರಿಗೆಯನ್ನು ಪಾವತಿಸುತ್ತಾರೆ. ಇವರು ಅಂದುಕೊಂಡಿದ್ದೆಲ್ಲ ಅದೃಷ್ಟವಶಾತ್ ಒಲಿದುಬಂದಿದೆ ಎಂದು ಜನ ಹಗುರವಾಗಿ ಮಾತನಾಡುತ್ತಾರೆ. ಆದರೆ ದೀರ್ಘಕಾಲೀನ ಯಶಸ್ಸಿಗೆ ಉಕ್ಕಿನಂತಹ ಶಿಸ್ತು, ದೊಡ್ಡ ರಿಸ್ಕ್ ತೆಗೆದುಕೊಳ್ಳುವ ಸಾಮರ್ಥ್ಯ, ದೋಷಗಳಿಂದ ಪಾಠ ಕಲಿಯುವ ಗುಣ ಮತ್ತು ಸಂಶೋಧನೆ ಅವಶ್ಯಕ. ಕೇವಲ ಅದೃಷ್ಟದಿಂದ ಯಾರೂ ದಶಕಗಳ ಕಾಲ ಬಿಲಿಯ ನೇರ್ ಸ್ಥಾನದಲ್ಲಿ ಉಳಿಯಲು ಸಾಧ್ಯವಿಲ್ಲ.&lt;/p&gt;&lt;p data-block-key="550ot"&gt;ಇವರ ಜೀವನದಲ್ಲಿ ಸೋಲು ಎಂಬ ಪದವೇ ಇಲ್ಲ, ಮುಟ್ಟಿದ್ದೆಲ್ಲಾ ಚಿನ್ನವಾಗುತ್ತದೆ ಎಂದುಕೊಳ್ಳ ಲಾಗುತ್ತದೆ. ವಾಸ್ತವದಲ್ಲಿ ಬಿಲಿಯನೇರ್‌ಗಳು ತಮ್ಮ ಜೀವನದಲ್ಲಿ ಅತ್ಯಂತ ದೊಡ್ಡ ಸೋಲುಗಳು, ದಿವಾಳಿತನದಂಚಿನ ಸನ್ನಿವೇಶಗಳು ಮತ್ತು ಅಪಮಾನಗಳನ್ನು ಎದುರಿಸಿ ಬಂದಿರುತ್ತಾರೆ. ಉದಾ ಹರಣೆಗೆ, ಸ್ಟೀವ್ ಜಾಬ್ಸ್ ತಮ್ಮದೇ ಕಂಪನಿಯಿಂದ ಹೊರಹಾಕಲ್ಪಟ್ಟಿದ್ದರು ಮತ್ತು ಎಲಾನ್ ಮಸ್ಕ್ ಕಂಪನಿಗಳು ಮುಳುಗುವ ಹಂತಕ್ಕೆ ಹೋಗಿದ್ದವು. ಸೋಲಿನಿಂದ ಕುಗ್ಗದೆ ಪಾಠ ಕಲಿತು ಮೇಲೆ ಬಂದವರೇ ನಿಜವಾದ ಬಿಲಿಯನೇರ್‌ಗಳು.&lt;/p&gt;&lt;p data-block-key="d5ahk"&gt;ಕೇವಲ ಸಾಫ್ಟ್‌ವೇರ್ ಅಥವಾ ಟೆಕ್ ಕಂಪನಿಗಳ ಮೂಲಕ ಮಾತ್ರ ಈಗ ಬಿಲಿಯನೇರ್ ಆಗಲು ಸಾಧ್ಯ ಎಂಬ ನಂಬಿಕೆ ವ್ಯಾಪಕವಾಗಿದೆ. ತಂತ್ರಜ್ಞಾನ ಕ್ಷೇತ್ರವು ವೇಗವಾಗಿ ಬೆಳೆದಿದ್ದರೂ, ರಿಟೇಲ್‌, ಉಡುಪು, ರಿಯಲ್ ಎಸ್ಟೇಟ್, ಮೂಲ ಸೌಕರ್ಯ ಮತ್ತು ಉತ್ಪಾದನೆಯ ವಲಯಗಳಲ್ಲೂ ಅಪಾರ ಸಂಪತ್ತು ಗಳಿಸಿದ ಅದೆಷ್ಟೋ ಬಿಲಿಯನೇರ್‌ಗಳು ಜಗತ್ತಿನಲ್ಲಿದ್ದಾರೆ.&lt;/p&gt;&lt;p data-block-key="3mddq"&gt;ಕೊನೆಯದಾಗಿ ರಾತ್ರಿ ಹಗಲು ಅದ್ದೂರಿ ಕ್ಲಬ್‌ಗಳು ಮತ್ತು ಪಾರ್ಟಿಗಳಲ್ಲಿ ಇವರ ಜೀವನ ಕಳೆಯುತ್ತದೆ ಎನ್ನಲಾಗುತ್ತದೆ. ಆದರೆ ವಿಶ್ವದ ಅತ್ಯಂತ ಶ್ರೀಮಂತರಾದ ಮಾರ್ಕ್ ಜುಕರ್‌ಬರ್ಗ್, ಜೆಫ್ ಬಿಜೋಸ್ ಅಥವಾ ವಾರೆನ್ ಬಫೆಟ್ ಅವರ ದೈನಂದಿನ ಜೀವನವು ಅಚ್ಚರಿಯಾಗುವಷ್ಟು ಸರಳವಾಗಿರುತ್ತದೆ. ಇವರು ಬೆಳಿಗ್ಗೆ ಬೇಗ ಏಳುವುದು, ವ್ಯಾಯಾಮ ಮಾಡುವುದು ಮತ್ತು ತಮ್ಮ ಕೆಲಸದ ಕಡೆಗೆ ಗರಿಷ್ಠ ಗಮನ ಹರಿಸುವುದಕ್ಕೆ ಹೆಚ್ಚು ಮಹತ್ವ ನೀಡುತ್ತಾರೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>K V Chandramouli Column: ಕಾವೇರಿ: ಸಂಘರ್ಷದಿಂದ ಪರಿಹಾರವಿಲ್ಲ, ವೈಜ್ಞಾನಿಕ ಜಲಾಡಳಿತದಿಂದ ನ್ಯಾಯ</title><link>https://vishwavani.news/ankanagalu/cauvery-no-solution-through-conflict-justice-lies-in-scientific-water-management-85826.html</link><guid>https://vishwavani.news/ankanagalu/cauvery-no-solution-through-conflict-justice-lies-in-scientific-water-management-85826.html</guid><pubDate>Fri, 07 Aug 2026 00:31:00 +0000</pubDate><description>&lt;![CDATA[2026ರ ಮುಂಗಾರು ಮಳೆಯ ಕೊರತೆಯಿಂದ ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ನಿರೀಕ್ಷಿತ ಮಟ್ಟದ ನೀರು ಸಂಗ್ರಹವಾಗದ ಸಂದರ್ಭದಲ್ಲಿ, ಕಾವೇರಿ ಜಲ ನಿಯಂತ್ರಣ ಸಮಿತಿ (CWRC) ಕರ್ನಾಟಕ ಪ್ರತಿದಿನ 3500 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡಬೇಕೆಂದು ನಿರ್ದೇಶಿಸಿದೆ. ಈ ನಿರ್ಧಾರ ರೈತರಲ್ಲಿ ಆತಂಕವನ್ನೂ, ಸಾರ್ವಜನಿಕರಲ್ಲಿ ಪ್ರಶ್ನೆಗಳನ್ನೂ ಹುಟ್ಟು ಹಾಕಿದೆ.]]&gt;</description><dc:creator>&lt;![CDATA[Ashok Nayak]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಅಂಕಣಗಳು]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/KVC_7.original.jpg" class="attachment-large size-large wp-post-image" alt="K V Chandramouli Column: ಕಾವೇರಿ: ಸಂಘರ್ಷದಿಂದ ಪರಿಹಾರವಿಲ್ಲ, ವೈಜ್ಞಾನಿಕ ಜಲಾಡಳಿತದಿಂದ ನ್ಯಾಯ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="auuh5"&gt;&lt;b&gt;ಜಲತರಂಗ&lt;/b&gt;&lt;/p&gt;&lt;p data-block-key="ckeh6"&gt;&lt;b&gt;ಕೆ.ವಿ ಚಂದ್ರಮೌಳಿ&lt;/b&gt;&lt;/p&gt;&lt;p data-block-key="a2qj9"&gt;&lt;b&gt;(ಭಾಗ 1)&lt;/b&gt;&lt;/p&gt;&lt;p data-block-key="7c8r1"&gt;ನದಿಗಳು ರಾಜ್ಯಗಳ ಗಡಿಗಳನ್ನು ಗುರುತಿಸುವುದಿಲ್ಲ; ಅವು ಜೀವವನ್ನು ಮಾತ್ರ ಸಾಗಿಸುತ್ತವೆ. ಆದ್ದರಿಂದ ನದಿನೀರಿನ ಹಂಚಿಕೆಯೂ ಸಂಘರ್ಷದಿಂದಲ್ಲ, ವಿಜ್ಞಾನ, ನ್ಯಾಯ ಮತ್ತು ಸಹಕಾರ ದಿಂದ ನಡೆಯಬೇಕು. ಕಾವೇರಿ ನದಿ ಕರ್ನಾಟಕ ಮತ್ತು ತಮಿಳುನಾಡಿನ ಕೋಟ್ಯಂತರ ಜನರ ಜೀವನಾಡಿ. ಕುಡಿಯುವ ನೀರು, ಕೃಷಿ, ಕೈಗಾರಿಕೆ, ಪರಿಸರ ಸಂರಕ್ಷಣೆ, ಮೀನುಗಾರಿಕೆ ಹಾಗೂ ವಿದ್ಯುತ್ ಉತ್ಪಾದನೆ-ಇವೆಲ್ಲವೂ ಕಾವೇರಿ ಜಲವ್ಯವಸ್ಥೆಯ ಮೇಲೆ ಅವಲಂಬಿತವಾಗಿವೆ. ಆದ್ದರಿಂದ ಕಾವೇರಿ ವಿವಾದವನ್ನು ಕೇವಲ ಎರಡು ರಾಜ್ಯಗಳ ನಡುವಿನ ರಾಜಕೀಯ ಅಥವಾ ಭಾವನಾತ್ಮಕ ಸಂಘರ್ಷವೆಂದು ನೋಡುವುದು ವಾಸ್ತವಿಕತೆಯನ್ನು ಸರಳೀಕರಿಸುವ ಪ್ರಯತ್ನವಾಗುತ್ತದೆ.&lt;/p&gt;&lt;p data-block-key="ne05"&gt;2026ರ ಮುಂಗಾರು ಮಳೆಯ ಕೊರತೆಯಿಂದ ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ನಿರೀಕ್ಷಿತ ಮಟ್ಟದ ನೀರು ಸಂಗ್ರಹವಾಗದ ಸಂದರ್ಭದಲ್ಲಿ, ಕಾವೇರಿ ಜಲ ನಿಯಂತ್ರಣ ಸಮಿತಿ (CWRC) ಕರ್ನಾಟಕ ಪ್ರತಿದಿನ 3500 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡಬೇಕೆಂದು ನಿರ್ದೇಶಿಸಿದೆ. ಈ ನಿರ್ಧಾರ ರೈತರಲ್ಲಿ ಆತಂಕವನ್ನೂ, ಸಾರ್ವಜನಿಕರಲ್ಲಿ ಪ್ರಶ್ನೆಗಳನ್ನೂ ಹುಟ್ಟು ಹಾಕಿದೆ.&lt;/p&gt;&lt;p data-block-key="9n7vb"&gt;ಈ ಲೇಖನದ ಉದ್ದೇಶ ಯಾವುದೇ ಕಾನೂನುಬದ್ಧ ಸಂಸ್ಥೆಯ ಅಧಿಕಾರವನ್ನು ಪ್ರಶ್ನಿಸುವುದಲ್ಲ. ಬದಲಾಗಿ, ಪಾರದರ್ಶಕತೆ, ವೈಜ್ಞಾನಿಕ ಜಲಾಡಳಿತ ಮತ್ತು ದೀರ್ಘಕಾಲಿಕ ಶಾಶ್ವತ ಪರಿಹಾರದ ಅಗತ್ಯವನ್ನು ಚರ್ಚಿಸುವುದಾಗಿದೆ.&lt;/p&gt;&lt;p data-block-key="94bas"&gt;&lt;b&gt;ಇದನ್ನೂ ಓದಿ:&lt;/b&gt; &lt;a href="/ankanagalu/an-open-letter-to-cm-dkshi-how-to-achieve-less-government-more-governance-85246.html"&gt;K V Chandramouli Column: ಸಿಎಂ ಡಿಕೆಶಿಗೊಂದು ಮುಕ್ತ ಪತ್ರ: ಕಡಿಮೆ ಸರಕಾರ, ಹೆಚ್ಚು ಆಡಳಿತ ಹೇಗೆ ?&lt;/a&gt;&lt;/p&gt;&lt;p data-block-key="c62l1"&gt;&lt;b&gt;ಜಲಾಶಯದ ನೀರೆಲ್ಲ ಬಳಕೆಗಿಲ್ಲ&lt;/b&gt;&lt;/p&gt;&lt;p data-block-key="47vei"&gt;ಜಲಾಶಯದಲ್ಲಿ ಇಷ್ಟು ಟಿಎಂಸಿ ನೀರಿದೆ ಎಂಬ ಹೇಳಿಕೆಗಳು ಸಾಮಾನ್ಯ. ಆದರೆ ಜಲ&lt;b&gt;ಶಾಸ್ತ್ರ&lt;/b&gt;ದ ದೃಷ್ಟಿಯಿಂದ ಇದು ಸಂಪೂರ್ಣ ಚಿತ್ರವಲ್ಲ. ಪ್ರತಿಯೊಂದು ಜಲಾಶಯದಲ್ಲೂ ಮೂರು ಪ್ರಮುಖ ಸಂಗ್ರಹ ಮಟ್ಟಗಳಿವೆ: ಒಟ್ಟು ಸಂಗ್ರಹ ಸಾಮರ್ಥ್ಯ (Gross Storage), ಜೀವಂತ ಸಂಗ್ರಹ (Live Storage), ಡೆಡ್ ಸ್ಟೋರೇಜ್ (Dead Storage).&lt;/p&gt;&lt;p data-block-key="6ie8g"&gt;ಜಲಾಶಯ ಸಂಪೂರ್ಣವಾಗಿ ತುಂಬಿದಾಗ ಅದರಲ್ಲಿ ಸಂಗ್ರಹಿಸಬಹುದಾದ ಒಟ್ಟು ನೀರಿನ ಪ್ರಮಾಣವನ್ನು ಒಟ್ಟು ಸಂಗ್ರಹ ಸಾಮರ್ಥ್ಯ ಎಂದು ಕರೆಯಲಾಗುತ್ತದೆ. ಇದರಲ್ಲಿ ಬಳಕೆಗೆ ಯೋಗ್ಯವಾದ ನೀರು ಹಾಗೂ ಕೆಳಭಾಗದಲ್ಲಿ ಉಳಿಯುವ ನೀರು ಎರಡೂ ಸೇರಿರುತ್ತವೆ. ಜಲಾಶಯ ದಿಂದ ಗೇಟ್‌ಗಳು, ಕಾಲುವೆಗಳು ಅಥವಾ ಪೈಪ್‌ಗಳ ಮೂಲಕ ಕುಡಿಯುವ ನೀರು, ನೀರಾವರಿ, ವಿದ್ಯುತ್ ಉತ್ಪಾದನೆ ಹಾಗೂ ಇತರ ಬಳಕೆಗಳಿಗೆ ಹೊರಹರಿಸಬಹುದಾದ ನೀರಿನ ಪ್ರಮಾಣವನ್ನು ಜೀವಂತ ಸಂಗ್ರಹ ಎಂದು ಕರೆಯಲಾಗುತ್ತದೆ.&lt;/p&gt;&lt;p data-block-key="fdu5k"&gt;ಪ್ರಾಯೋಗಿಕವಾಗಿ ಜನರಿಗೆ ಉಪಯೋಗವಾಗುವ ನೀರು ಇದೇ. ಬಳಕೆಗೆ ಲಭ್ಯವಾಗುವುದು ಜೀವಂತ ಸಂಗ್ರಹ ಮಾತ್ರ. ಡೆಡ್ ಸ್ಟೋರೇಜ್‌ನಲ್ಲಿರುವ ನೀರನ್ನು ಗುರುತ್ವಾಕರ್ಷಣೆಯ ಮೂಲಕ ಸಂಪೂರ್ಣ ವಾಗಿ ಹೊರಹರಿಸಲು ಸಾಧ್ಯವಿಲ್ಲ. ಇದಕ್ಕಿಂತಲೂ ಪ್ರಮುಖವಾದ ಅಂಶವೆಂದರೆ ಹೂಳು ತುಂಬಿಕೆ. ಹಲವು ದಶಕಗಳಿಂದ ಜಲಾಶಯಗಳಲ್ಲಿ ಸೇರುತ್ತಿರುವ ಹೂಳು ಜೀವಂತ ಸಂಗ್ರಹ ಸಾಮರ್ಥ್ಯ ವನ್ನು ಕ್ರಮೇಣ ಕಡಿಮೆ ಮಾಡುತ್ತದೆ. ಹೀಗಾಗಿ ನಿರ್ಮಾಣದ ವೇಳೆಯಲ್ಲಿದ್ದ ಮೂಲ ಸಾಮರ್ಥ್ಯವೇ ಇಂದಿಗೂ ಲಭ್ಯವಿದೆ ಎಂದು ಪರಿಗಣಿಸುವುದು ವೈಜ್ಞಾನಿಕವಾಗಿ ಸರಿಯಲ್ಲ.&lt;/p&gt;
&lt;/div&gt;

    
&lt;figure class="article-image text-center mb-4"&gt;
    &lt;img alt="72 ಒಕ" class="img-fluid" height="720" src="https://cdn.vishwavani.news/media/images/72_ok_XLWCUZG.max-1280x720.format-webp.webp" width="1280"&gt;
    
&lt;/figure&gt;

    
&lt;div class="article-paragraph"&gt;
    &lt;p data-block-key="6fjo3"&gt;ಜಲಾಶಯದ ತಳಭಾಗದಲ್ಲಿ, ನೀರು ಬಿಡುವ ಕವಾಟಗಳ ಮಟ್ಟಕ್ಕಿಂತ ಕೆಳಗೆ ಉಳಿಯುವ ನೀರನ್ನು ಡೆಡ್ ಸ್ಟೋರೇಜ ಎಂದು ಕರೆಯಲಾಗುತ್ತದೆ. ಈ ನೀರನ್ನು ಗುರುತ್ವಾಕರ್ಷಣೆಯ ಮೂಲಕ ಹೊರ ಹರಿಸಲು ಸಾಧ್ಯವಿಲ್ಲ. ಇದು ಮುಖ್ಯವಾಗಿ ಹೂಳು ಸಂಗ್ರಹವಾಗಲು, ಪರಿಸರ ಸಮತೋಲನ ಕಾಪಾಡಲು ಮತ್ತು ಜಲಾಶಯದ ಕಾರ್ಯಾಚರಣೆಗೆ ಮೀಸಲು.&lt;/p&gt;&lt;p data-block-key="9pv2f"&gt;&lt;b&gt;ಎರಡು ರಾಜ್ಯಗಳ ಸವಾಲು&lt;/b&gt;&lt;/p&gt;&lt;p data-block-key="bti1d"&gt;ಕರ್ನಾಟಕದ ಪ್ರಮುಖ ಕಾವೇರಿ ಜಲಾಶಯಗಳ ಮೂಲ ಸಾಮರ್ಥ್ಯ ಹೀಗಿದೆ: ಕೃಷ್ಣರಾಜಸಾಗರ- ಸುಮಾರು 49.45 ಟಿಎಂಸಿ, ಡೆಡ್ ಸ್ಟೋರೇಜ್ 4.45 ಟಿಎಂಸಿ. ಹೇಮಾವತಿ (ಗೊರೂರು)- ಸುಮಾರು 37.00 ಟಿಎಂಸಿ, ಡೆಡ್ ಸ್ಟೋರೇಜ್ 5.84 ಟಿಎಂಸಿ. ಕಬಿನಿ- ಸುಮಾರು 19.52 ಟಿಎಂಸಿ, ಡೆಡ್ ಸ್ಟೋರೇಜ್ 3.51ಟಿಎಂಸಿ. ಹಾರಂಗಿ- ಸುಮಾರು 8.50 ಟಿಎಂಸಿ ಡೆಡ್ ಸ್ಟೋರೇಜ್ 0.56 ಟಿಎಂಸಿ.&lt;/p&gt;&lt;p data-block-key="50plr"&gt;ನಾಲ್ಕು ಪ್ರಮುಖ ಜಲಾಶಯಗಳ ಒಟ್ಟು ವಿನ್ಯಾಸ ಸಂಗ್ರಹ ಸಾಮರ್ಥ್ಯ ಸುಮಾರು 114.57 ಟಿಎಂಸಿ. ಅವುಗಳ ಡೆಡ್ ಸ್ಟೋರೇಜ್ ಒಟ್ಟಾರೆ ಸುಮಾರು 14.36 ಟಿಎಂಸಿ. ಆದಾಗ್ಯೂ, ಈ ಸಂಪೂರ್ಣ ಸಂಗ್ರಹಿತ ನೀರು ಬಳಕೆಗೆ ಲಭ್ಯವಿಲ್ಲ. ಜಲಾಶಯಗಳಲ್ಲಿ ವರ್ಷಗಳಿಂದ ಸಂಗ್ರಹವಾಗಿರುವ ಹೂಳು, ಡೆಡ್ ಸ್ಟೋರೇಜ್, ಕುಡಿಯುವ ನೀರಿಗಾಗಿ ಕಡ್ಡಾಯವಾಗಿ ಕಾಯ್ದಿರಿಸಬೇಕಾದ ಸಂಗ್ರಹ ಹಾಗೂ ಪರಿಸರ ಸಮತೋಲನಕ್ಕಾಗಿ ಅಗತ್ಯವಾದ ಹರಿವುಗಳನ್ನು ಪರಿಗಣಿಸಿದ ನಂತರವೇ ವಾಸ್ತವವಾಗಿ ಬಳಕೆಗೆ ಲಭ್ಯವಿರುವ ಜೀವಂತ ಸಂಗ್ರಹ (Available Live Storage) ಎಷ್ಟು ಎಂಬುದನ್ನು ವೈಜ್ಞಾ ನಿಕವಾಗಿ ನಿರ್ಧರಿಸಬಹುದು.&lt;/p&gt;&lt;p data-block-key="avpvf"&gt;ಇದೇ ವಾಸ್ತವಿಕತೆ ತಮಿಳುನಾಡಿನ ಮೆಟ್ಟೂರು ಜಲಾಶಯಕ್ಕೂ ಅನ್ವಯಿಸುತ್ತದೆ. ಈ ಜಲಾಶಯದ ಒಟ್ಟು ವಿನ್ಯಾಸ ಸಂಗ್ರಹ ಸಾಮರ್ಥ್ಯ ಸುಮಾರು 93.47 ಟಿಎಂಸಿ, ಡೆಡ್ ಸ್ಟೋರೇಜ್ ಸುಮಾರು 20 ಟಿಎಂಸಿ ಇದೆ. ಹೀಗಾಗಿ ಇದರ ಸಂಪೂರ್ಣ ಸಂಗ್ರಹ ಸಾಮರ್ಥ್ಯವೂ ಬಳಕೆಗೆ ಲಭ್ಯವಿರುವ ನೀರಲ್ಲ. ಅಲ್ಲಿಯೂ ಹಲವು ದಶಕಗಳಿಂದ ಸಂಗ್ರಹವಾಗಿರುವ ಹೂಳು, ಜೀವಂತ ಸಂಗ್ರಹ ಸಾಮರ್ಥ್ಯದ ಇಳಿಕೆ, ಕಾವೇರಿ ಡೆಲ್ಟಾದ ನೀರಾವರಿ ಅವಶ್ಯಕತೆಗಳು ಹಾಗೂ ಕುಡಿಯುವ ನೀರಿನ ಮೀಸಲುಗಳನ್ನು ಪರಿಗಣಿಸಿದ ನಂತರವೇ ವಾಸ್ತವವಾಗಿ ಲಭ್ಯವಿರುವ ನೀರಿನ ಪ್ರಮಾಣ ನಿರ್ಧರಿಸಬಹುದು. ಆದ್ದರಿಂದ ಇದು ಕಾವೇರಿ ಜಲಾನಯನ ಪ್ರದೇಶವನ್ನು ಹಂಚಿಕೊಂಡಿರುವ ಎರಡೂ ರಾಜ್ಯಗಳು ಎದುರಿಸುತ್ತಿರುವ ಸಾಮಾನ್ಯ ಜಲಸಂಪನ್ಮೂಲ ನಿರ್ವಹಣೆಯ ಸವಾಲು.&lt;/p&gt;&lt;p data-block-key="6f9pc"&gt;&lt;b&gt;ಪುನರುಜ್ಜೀವನಕ್ಕೆ ಮೊದಲ ಆದ್ಯತೆ&lt;/b&gt;&lt;/p&gt;&lt;p data-block-key="7o8im"&gt;ಮಂಡ್ಯ ಜಿಲ್ಲಾ ಹಿತರಕ್ಷಣಾ ಸಮಿತಿಯ ಅಧ್ಯಕ್ಷರಾದ ಕೆ. ಬೋರಯ್ಯ ಹಾಗೂ ಪ್ರಧಾನ ಕಾರ್ಯ ದರ್ಶಿ ಸುನಂದಾ ಜಯರಾಮ್ ಅವರು ಹಲವು ವರ್ಷಗಳಿಂದ ದೂರದೃಷ್ಟಿಯ ಒಂದು ಮಹತ್ವದ ಸಲಹೆಯನ್ನು ಮುಂದಿಟ್ಟಿದ್ದಾರೆ. ಅವರ ಅಭಿಪ್ರಾಯವೆಂದರೆ, ಕಾವೇರಿ ಜಲಾನಯನ ಪ್ರದೇಶದಲ್ಲಿ ಹೊಸ ಜಲಾಶಯಗಳು ಅಥವಾ ಹೊಸ ಜಲಸಂಗ್ರಹ ಯೋಜನೆಗಳನ್ನು ನಿರ್ಮಿಸುವ ಬಗ್ಗೆ ಯೋಚಿಸುವ ಮೊದಲು, ಇರುವ ಜಲಸಂಗ್ರಹ ಮೂಲಸೌಕರ್ಯವನ್ನು ಅದರ ಮೂಲ ಸಾಮರ್ಥ್ಯ ಕ್ಕೆ ಸಾಧ್ಯವಾದಷ್ಟು ಮರುಸ್ಥಾಪಿಸಬೇಕು. ಈ ದೃಷ್ಟಿಕೋನವು ಆಧುನಿಕ ಜಲಸಂಪನ್ಮೂಲ ನಿರ್ವಹಣೆಯ ಮೂಲಭೂತ ತತ್ವಗಳಿಗೂ ಸಂಪೂರ್ಣವಾಗಿ ಹೊಂದಿಕೆಯಾಗುತ್ತದೆ.&lt;/p&gt;&lt;p data-block-key="c0qb6"&gt;ಕರ್ನಾಟಕದ ಪ್ರಮುಖ ನಾಲ್ಕು ಜಲಾಶಯಗಳಾದ ಕೃಷ್ಣರಾಜಸಾಗರ (49.45 ಟಿಎಂಸಿ), ಹೇಮಾವತಿ (37.10 ಟಿಎಂಸಿ), ಕಬಿನಿ (19.52 ಟಿಎಂಸಿ) ಹಾಗೂ ಹಾರಂಗಿ (8.50 ಟಿಎಂಸಿ) ಸೇರಿ ಒಟ್ಟು 114.57 ಟಿಎಂಸಿ ನೀರನ್ನು ಸಂಗ್ರಹಿಸುವ ಸಾಮರ್ಥ್ಯ ಹೊಂದಿವೆ. ತಮಿಳುನಾಡಿನ ಮೆಟ್ಟೂರು (ಸ್ಟಾನ್ಲಿ) ಜಲಾಶಯದ ಮೂಲ ವಿನ್ಯಾಸ ಸಾಮರ್ಥ್ಯ 93.47 ಟಿಎಂಸಿ. ಈ ಎರಡೂ ರಾಜ್ಯಗಳ ಪ್ರಮುಖ ಜಲಾಶಯಗಳ ಒಟ್ಟು ವಿನ್ಯಾಸ ಸಾಮರ್ಥ್ಯ ಸುಮಾರು 208 ಟಿಎಂಸಿ.&lt;/p&gt;&lt;p data-block-key="78g7e"&gt;ಆದರೆ ಈ ಸಾಮರ್ಥ್ಯ ಇಂದು ಸಂಪೂರ್ಣವಾಗಿ ಲಭ್ಯವಿದೆ ಎಂದು ಹೇಳಲು ಸಾಧ್ಯವಿಲ್ಲ. ಹಲವು ದಶಕಗಳಿಂದ ಹರಿದು ಬಂದ ಹೂಳು ಜಲಾಶಯಗಳ ತಳಭಾಗದಲ್ಲಿ ಸಂಗ್ರಹವಾಗುತ್ತಾ ಬಂದಿರುವು ದರಿಂದ ಜೀವಂತ ಸಂಗ್ರಹ ಸಾಮರ್ಥ್ಯ ನಿರಂತರವಾಗಿ ಕಡಿಮೆಯಾಗುತ್ತಿದೆ. ಕೇಂದ್ರ ಜಲ ಆಯೋಗ ಹಾಗೂ ವಿವಿಧ ಜಲವಿಜ್ಞಾನ ಅಧ್ಯಯನಗಳು ದೇಶದ ಅನೇಕ ಹಳೆಯ ಜಲಾಶಯಗಳಲ್ಲಿ ಮೂಲ ಸಂಗ್ರಹ ಸಾಮರ್ಥ್ಯದ 10 ರಿಂದ 30 ಶೇಕಡಾ ಹೂಳು ತುಂಬಿರುವುದನ್ನು ದಾಖಲಿಸಿವೆ.&lt;/p&gt;&lt;p data-block-key="85tho"&gt;ಈ ನೈಜ ಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಜಲಾಶಯಗಳ ತಳಭಾಗದ ಆಳಮಾಪನ ಸಮೀಕ್ಷೆ ಅತ್ಯಗತ್ಯ. ಸೋನಾರ್, ಜಿಪಿಎಸ್ ಹಾಗೂ ಇತರ ಆಧುನಿಕ ತಂತ್ರಜ್ಞಾನಗಳ ಮೂಲಕ ನಡೆಸುವ ಈ ಸಮೀಕ್ಷೆಯು ಜಲಾಶಯದ ತಳಭಾಗದ ಆಕೃತಿ, ಹೂಳು ಸಂಗ್ರಹದ ಪ್ರಮಾಣ ಹಾಗೂ ಉಳಿದಿರುವ ನೈಜ ಜೀವಂತ ಸಂಗ್ರಹ ಸಾಮರ್ಥ್ಯವನ್ನು ನಿಖರವಾಗಿ ನಿರ್ಧರಿಸುತ್ತದೆ. ದುರದೃಷ್ಟವಶಾತ್, ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳಿಗೆ ಸಂಬಂಧಿಸಿದ ಇತ್ತೀಚಿನ ಸಮಗ್ರ ಸಮೀಕ್ಷಾ ವರದಿಗಳು ಸಾರ್ವಜನಿಕವಾಗಿ ಲಭ್ಯವಿಲ್ಲ.&lt;/p&gt;&lt;p data-block-key="av7l0"&gt;ಕಾವೇರಿ ಜಲಭದ್ರತೆ ಕೇವಲ ಪ್ರಮುಖ ಜಲಾಶಯಗಳ ಮೇಲೆ ಮಾತ್ರ ಅವಲಂಬಿತವಾಗಿಲ್ಲ. ಕೊಡಗಿನ ಮೇಲ್ಕಾವೇರಿ ಪ್ರದೇಶದ ಕೆರೆಗಳು ಮತ್ತು ಅಣೆಕಟ್ಟುಗಳು, ಮಂಡ್ಯದ ಕಾಲುವೆ ವ್ಯಾಪ್ತಿಯ ಟ್ಯಾಂಕ್ ಸರಪಳಿಗಳು, ಮೈಸೂರು, ಹಾಸನ ಹಾಗೂ ಚಾಮರಾಜನಗರ ಜಿ‌ಲ್ಲೆಗಳ ಸಣ್ಣ ನೀರಾವರಿ ಕೆರೆಗಳು, ವಿವಿಧ ಉಪನದಿಗಳ ಮೇಲಿನ ನೂರಾರು ಚೆಕ್‌ಡ್ಯಾಂಗಳು ಸ್ಥಳೀಯ ಜಲಸಂಗ್ರಹ ಹಾಗೂ ಅಂತರ್ಜಲ ಪುನರ್ಭರ್ತಿಗೆ ಮಹತ್ವದ ಕೊಡುಗೆ ನೀಡುತ್ತಿವೆ. ಅದೇ ರೀತಿ ತಮಿಳುನಾಡಿನ ಮೆಟ್ಟೂರು, ಮುಕ್ಕೊಂಬು, ಐತಿಹಾಸಿಕ ಕಲ್ಲಣೈ, ಭವಾನಿಸಾಗರ, ಅಮರಾವತಿ ಹಾಗೂ ಕಾವೇರಿ ಡೆಲ್ಟಾದ ಸಾವಿರಾರು ಸಾಂಪ್ರದಾಯಿಕ ಏರಿ ವ್ಯವಸ್ಥೆಗಳೂ ಸಮಾನ ಪ್ರಾಮುಖ್ಯ ಹೊಂದಿವೆ.&lt;/p&gt;&lt;p data-block-key="ein0d"&gt;ಸರಕಾರಿ ಅಂದಾಜುಗಳ ಪ್ರಕಾರ ಕರ್ನಾಟಕದ ಸಣ್ಣ ಜಲಸಂಗ್ರಹ ವ್ಯವಸ್ಥೆಗಳು ಸುಮಾರು 10-15 ಟಿಎಂಸಿ, ತಮಿಳುನಾಡಿನ ಏರಿ ಮತ್ತು ಟ್ಯಾಂಕ್ ವ್ಯವಸ್ಥೆಗಳು 40-55 ಟಿಎಂಸಿ ನೀರನ್ನು ಸಂಗ್ರಹಿಸ ಬಲ್ಲವು. ಅಂದರೆ ಎರಡೂ ರಾಜ್ಯಗಳ ಸಣ್ಣ ಜಲಸಂಗ್ರಹ ಮೂಲಸೌಕರ್ಯಗಳು ಸೇರಿ 50-70 ಟಿಎಂಸಿ ಹೆಚ್ಚುವರಿ ಸಂಗ್ರಹ ಸಾಮರ್ಥ್ಯ ಹೊಂದಿವೆ. ಹೀಗಾಗಿ ಪ್ರಮುಖ ಜಲಾಶಯಗಳು ಮತ್ತು ಸಣ್ಣ ಜಲಸಂಗ್ರಹ ವ್ಯವಸ್ಥೆಗಳನ್ನು ಸೇರಿಸಿದರೆ, ಕಾವೇರಿ ಜಲಾನಯನ ಪ್ರದೇಶದಲ್ಲಿ ಈಗಾಗಲೇ 250 ಟಿಎಂಸಿಗೂ ಅಧಿಕ ಜಲಸಂಗ್ರಹ ಮೂಲಸೌಕರ್ಯ ಅಸ್ತಿತ್ವದಲ್ಲಿದೆ.&lt;/p&gt;&lt;p data-block-key="9mk22"&gt;ವೈಜ್ಞಾನಿಕ ಹೂಳು ತೆಗೆಯುವಿಕೆ, ಜಲಾನಯನ ಪ್ರದೇಶ ಸಂರಕ್ಷಣೆ ಮತ್ತು ಮಣ್ಣಿನ ಕೊರೆತ ನಿಯಂತ್ರಣ ಕಾರ್ಯಕ್ರಮಗಳನ್ನು ಸಮನ್ವಯವಾಗಿ ಜಾರಿಗೊಳಿಸಿದರೆ, ಒಟ್ಟಾರೆ 10 ರಿಂದ 20 ಟಿಎಂಸಿ ಹೆಚ್ಚುವರಿ ಜೀವಂತ ಸಂಗ್ರಹ ಸಾಮರ್ಥ್ಯವನ್ನು ಮರುಪಡೆಯುವ ಸಾಧ್ಯತೆ ಇದೆ ಎಂದು ಜಲಸಂಪನ್ಮೂಲ ತಜ್ಞರು ಅಂದಾಜಿಸಿದ್ದಾರೆ. ಸಾಮಾನ್ಯ ವರ್ಷಗಳಲ್ಲಿ ಈ ಪ್ರಮಾಣ ಅಲ್ಪವೆನಿಸ ಬಹುದು; ಆದರೆ ಬರಗಾಲದಲ್ಲಿ ಇದೇ ನೀರು ಲಕ್ಷಾಂತರ ರೈತರ ಬೆಳೆ ಉಳಿಸುವುದಕ್ಕೂ, ಕೋಟ್ಯಂತರ ಜನರ ಕುಡಿಯುವ ನೀರಿನ ಭದ್ರತೆಯನ್ನು ಕಾಪಾಡುವುದಕ್ಕೂ ಮತ್ತು ಪರಿಸರ ಹರಿವುಗಳನ್ನು ನಿರ್ವಹಿಸುವುದಕ್ಕೂ ಅತ್ಯಂತ ಮಹತ್ವದ ಯುಕ್ತಿಯುತ ಜಲ ಮೀಸಲು ಆಗಬಹುದು.&lt;/p&gt;&lt;p data-block-key="1n4qj"&gt;&lt;b&gt;ಹೂಳು ತೆಗೆಯುವಿಕೆ ಕಾರ್ಯಕ್ರಮ&lt;/b&gt;&lt;/p&gt;&lt;p data-block-key="8altc"&gt;ಈ ಹಿನ್ನೆಲೆಯಲ್ಲಿ ಭಾರತ, ಕರ್ನಾಟಕ, ತಮಿಳುನಾಡು ಸರಕಾರಗಳು ಹಾಗೂ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ ಜಂಟಿಯಾಗಿ ರಾಷ್ಟ್ರೀಯ ಕಾವೇರಿ ಜಲಸಂಗ್ರಹ ಪುನರುಜ್ಜೀವನ ಮತ್ತು ಹೂಳು ತೆಗೆಯುವಿಕೆ ಕಾರ್ಯಕ್ರಮ (National Cauvery Reservoir Restoration and Desiltation Programme) ಆರಂಭಿಸುವುದು ಸಮಯೋಚಿತ.&lt;/p&gt;&lt;p data-block-key="7h6rb"&gt;ಈ ಕಾರ್ಯಕ್ರಮದ ಪ್ರಮುಖ ಅಂಶಗಳು: 1. ಕಾವೇರಿ ಜಲಾನಯನ ಪ್ರದೇಶದ ಎಲ್ಲಾ ಪ್ರಮುಖ ಜಲಾಶಯಗಳು, ಬ್ಯಾರೇಜುಗಳು, ಅಣೆಕಟ್ಟುಗಳು, ನೀರಾವರಿ ಕೆರೆಗಳು, ಚೆಕ್‌ಡ್ಯಾಂಗಳು ಹಾಗೂ ಏರಿ ವ್ಯವಸ್ಥೆಗಳ ಸಮಗ್ರ ತಳಭಾಗದ ಆಳಮಾಪನ ಸಮೀಕ್ಷೆ ನಡೆಸುವುದು. 2. ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳ ಸಂಗ್ರಹ ಸಾಮರ್ಥ್ಯ ಮತ್ತು ಹೂಳು ಸಂಗ್ರಹಣೆಯ ಸಮಗ್ರ ಅಟ್ಲಸ್ ಸಿದ್ಧಪಡಿಸಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ಪ್ರಕಟಿಸುವುದು. 3. ಪ್ರತಿಯೊಂದು ಜಲಸಂಗ್ರಹ ವ್ಯವಸ್ಥೆಗೆ ಮೂಲ ವಿನ್ಯಾಸ ಸಾಮರ್ಥ್ಯ, ಪ್ರಸ್ತುತ ಜೀವಂತ ಸಂಗ್ರಹ, ಡೆಡ್ ಸ್ಟೋರೇಜ್, ಹೂಳು ಸಂಗ್ರಹಣೆಯ ಪ್ರಮಾಣ, ವಾರ್ಷಿಕ ಸಾಮರ್ಥ್ಯ ಕುಸಿತ, ಮರುಪಡೆಯಬಹುದಾದ ಜೀವಂತ ಸಂಗ್ರಹ ಹಾಗೂ ವೆಚ್ಚ-ಲಾಭ ವಿಶ್ಲೇಷಣೆಯನ್ನು ಪ್ರಕಟಿಸುವುದು. 4. ವೆಚ್ಚ-ಲಾಭ ಅನುಪಾತ ಅತ್ಯಧಿಕವಾಗಿರುವ ಜಲಾಶಯಗಳು, ಕೆರೆಗಳು ಮತ್ತು ಏರಿ ವ್ಯವಸ್ಥೆಗಳಿಗೆ ಆದ್ಯತೆ ನೀಡಿ ವೈಜ್ಞಾನಿಕ ಹೂಳು ತೆಗೆಯುವಿಕೆ ಕೈಗೊಳ್ಳುವುದು. 5. ಜಲಾನಯನ ಪ್ರದೇಶ ಸಂರಕ್ಷಣೆ ಮತ್ತು ಪುನಶ್ಚೇತನ ಕಾರ್ಯಕ್ರಮ, ಮಣ್ಣಿನ ಕೊರೆತ ನಿಯಂತ್ರಣ, ವೃಕ್ಷಾರೋಪಣ ಹಾಗೂ ಮಳೆ‌ ನೀರು ಸಂರಕ್ಷಣೆ ಮೂಲಕ ಭವಿಷ್ಯದ ಹೂಳು ಸಂಗ್ರಹಣೆಯನ್ನು ಕಡಿಮೆ ಮಾಡುವುದು. 6. ಪ್ರಮುಖ ಜಲಾಶಯ ಗಳಲ್ಲಿ ಕನಿಷ್ಠ ಐದು ವರ್ಷಗಳಿಗೊಮ್ಮೆ ಮರು ಸಮೀಕ್ಷೆ ನಡೆಸಿ ಸಂಗ್ರಹ ಸಾಮರ್ಥ್ಯದಗುವ ಬದಲಾವಣೆಗಳನ್ನು ದಾಖಲಿಸಿ ಸಾರ್ವಜನಿಕರಿಗೆ ಪ್ರಕಟಿಸುವುದು.&lt;/p&gt;&lt;p data-block-key="be5n3"&gt;ಈ ರೀತಿಯಾಗಿ ಈಗಿರುವ ಜಲಸಂಗ್ರಹ ಮೂಲಸೌಕರ್ಯವನ್ನು ವೈಜ್ಞಾನಿಕವಾಗಿ ಪುನರುಜ್ಜೀವನ ಗೊಳಿಸಿ ಅದರ ಮೂಲ ಸಾಮರ್ಥ್ಯವನ್ನು ಸಾಧ್ಯವಾದಷ್ಟು ಮರುಸ್ಥಾಪಿಸಲು ಸಾಧ್ಯವಾದರೆ, ಗಮನಾರ್ಹ ಪ್ರಮಾಣದ ಹೆಚ್ಚುವರಿ ನೀರನ್ನು ಸಂಗ್ರಹಿಸುವುದರ ಜೊತೆಗೆ ಹೊಸ ಜಲಾಶಯಗಳ ನಿರ್ಮಾಣದ ಅಗತ್ಯ, ಅವುಗಳ ಆರ್ಥಿಕ ನ್ಯಾಯಸಮ್ಮತತೆ, ಪರಿಸರ ಪರಿಣಾಮ ಮತ್ತು ಸಾಮಾಜಿಕ ವೆಚ್ಚಗಳನ್ನು ಹೆಚ್ಚು ವಾಸ್ತವಿಕ ಹಾಗೂ ವೈಜ್ಞಾನಿಕವಾಗಿ ಮೌಲ್ಯಮಾಪನ ಮಾಡಲು ಸಾಧ್ಯ ವಾಗುತ್ತದೆ. ಇದರಿಂದ ಸಾರ್ವಜನಿಕ ಹಣದ ಸಮರ್ಥ ಬಳಕೆ, ಪರಿಸರ ಸಂರಕ್ಷಣೆ ಮತ್ತು ಅಂತಾ ರಾಜ್ಯ ಜಲಸಂಪನ್ಮೂಲಗಳ ನ್ಯಾಯಯುತ ನಿರ್ವಹಣೆ- ಈ ಮೂರು ಉದ್ದೇಶಗಳೂ ಏಕಕಾಲದಲ್ಲಿ ಸಾಧಿಸಬಹುದು.&lt;/p&gt;&lt;p data-block-key="ctn0c"&gt;ಆದ್ದರಿಂದ ಮೊದಲು ಪುನರುಜ್ಜೀವನ, ನಂತರವೇ ಹೊಸ ಸಂಗ್ರಹ ಎಂಬ ತತ್ವ ಕೇವಲ ತಾಂತ್ರಿಕ ಶಿಫಾರಸ್ಸಲ್ಲ; ಭಾರತದ ಭವಿಷ್ಯದ ಜಲಸಂಪನ್ಮೂಲ ಯೋಜನೆಗಳಿಗೆ ಮಾರ್ಗದರ್ಶಕ ರಾಷ್ಟ್ರೀಯ ನೀತಿಯಾಗಬೇಕು. ಕಾವೇರಿ ಕಣಿವೆಯಲ್ಲಿ ಈ ತತ್ವವನ್ನು ಯಶಸ್ವಿಯಾಗಿ ಜಾರಿಗೊಳಿಸಲು ಸಾಧ್ಯ ವಾದರೆ, ಅದು ದೇಶದ ಇತರ ಅಂತಾರಾಜ್ಯ ನದಿ ಜಲಾನಯನ ಪ್ರದೇಶಗಳಿಗೂ ಅನುಕರಣೀಯ ಮಾದರಿಯಾಗಬಹುದು.&lt;/p&gt;&lt;p data-block-key="5k9gd"&gt;&lt;b&gt;ಮೊದಲು ಕುಡಿಯುವ ನೀರು&lt;/b&gt;&lt;/p&gt;&lt;p data-block-key="eqraf"&gt;ಭಾರತದ ರಾಷ್ಟ್ರೀಯ ಜಲ ನೀತಿ ಹಾಗೂ ವಿವಿಧ ನ್ಯಾಯಾಂಗ ತೀರ್ಪುಗಳು ಸ್ಪಷ್ಟವಾಗಿ ಹೇಳುವ ಮೂಲ ತತ್ವವೆಂದರೆ ಮಾನವ ಜೀವ ರಕ್ಷಣೆಗೆ ಅಗತ್ಯವಾದ ಕುಡಿಯುವ ನೀರಿಗೆ ಮೊದಲ ಆದ್ಯತೆ. ಅದಾದ ನಂತರವೇ: ಕೃಷಿ, ಕೈಗಾರಿಕೆ, ವಿದ್ಯುತ್ ಉತ್ಪಾದನೆ ಹಾಗೂ ಇತರ ಬಳಕೆಗಳು.&lt;/p&gt;&lt;p data-block-key="6l6lq"&gt;ಹೀಗಾಗಿ ಬೆಂಗಳೂರು, ಮೈಸೂರು, ಮಂಡ್ಯ ಸೇರಿದಂತೆ ಕರ್ನಾಟಕದ ನಗರಗಳು ಹಾಗೂ ಗ್ರಾಮಗಳ ಕುಡಿಯುವ ನೀರಿನ ಭದ್ರತೆಯನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಇದೇ ರೀತಿ ತಮಿಳುನಾಡಿನ ಜನರ ಕುಡಿಯುವ ನೀರಿನ ಅಗತ್ಯವೂ ಸಮಾನ ಗೌರವಕ್ಕೆ ಪಾತ್ರವಾಗಿದೆ. ಆದ್ದರಿಂದ ಕಾವೇರಿ ಪ್ರಶ್ನೆಯನ್ನು ಕರ್ನಾಟಕ ವಿರುದ್ಧ ತಮಿಳುನಾಡು ಎಂಬ ದೃಷ್ಟಿಯಿಂದ ಅಲ್ಲ, ಮಾನವ ಜೀವನ, ಸಂವಿಧಾನಾ ತ್ಮಕ ಆದ್ಯತೆ ಮತ್ತು ನ್ಯಾಯಸಮ್ಮತ ಜಲ ನಿರ್ವಹಣೆ ಎಂಬ ದೃಷ್ಟಿಯಿಂದ ನೋಡಬೇಕು.&lt;/p&gt;&lt;p data-block-key="cnio6"&gt;ಕರ್ನಾಟಕದ ಮಂಡ್ಯ ರೈತ ಮಳೆಯ ಕೊರತೆಯಿಂದ ಸಂಕಷ್ಟದಲ್ಲಿದ್ದಾನೆ. ತಮಿಳುನಾಡಿನ ಕಾವೇರಿ ಡೆಲ್ಟಾದ ರೈತನೂ ಅದೇ ಅನಿಶ್ಚಿತತೆಯನ್ನು ಎದುರಿಸುತ್ತಿದ್ದಾನೆ. ಭಾಷೆ ಬೇರೆ. ರಾಜ್ಯ ಬೇರೆ. ಆದರೆ ರೈತನ ಕಣ್ಣೀರಿಗೆ ಭಾಷೆಯಿಲ್ಲ. ಆದ್ದರಿಂದ ರೈತರನ್ನು ಪರಸ್ಪರ ಎದುರಾಳಿಗಳಂತೆ ಚಿತ್ರಿಸುವ ರಾಜಕೀಯವು ಸಮಸ್ಯೆಯನ್ನು ಪರಿಹರಿಸುವುದಿಲ್ಲ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಕ್ಷೇತ್ರದ ಆರೋಗ್ಯ, ಶಿಕ್ಷಣ, ರಸ್ತೆ ಸುರಕ್ಷತೆ, ಆಡಳಿತ, ಬರ ಪರಿಹಾರ ಸೇರಿ ಅಭಿವೃದ್ಧಿ ಅಜೆಂಡಾ ಮುಂದಿಟ್ಟ ಶಾಸಕ; ಉಸ್ತುವಾರಿ ಸಚಿವರಿಂದ ಬೇಡಿಕೆ ಈಡೇರಿಕೆಯ ಭರವಸೆ</title><link>https://vishwavani.news/karnataka/chikkaballapur/mla-pradeep-eshwar-is-a-bold-voice-in-kdp-85824.html</link><guid>https://vishwavani.news/karnataka/chikkaballapur/mla-pradeep-eshwar-is-a-bold-voice-in-kdp-85824.html</guid><pubDate>Thu, 06 Aug 2026 18:18:10 +0000</pubDate><description>&lt;![CDATA[ನಗರ ಹೊರವಲಯದ ಜಿಲ್ಲಾಡಳಿತ ಭವನದ ಸರ್.ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ನಡೆದ ಸಭೆ ಯಲ್ಲಿ ಮಾತನಾಡಿದ ಅವರು, ಹಿಂದಿನ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರ ಅವಧಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಎಂಆರ್‌ಐ ಸ್ಕ್ಯಾನಿಂಗ್ ಕೇಂದ್ರ ಸ್ಥಾಪನೆಗೆ ಸಿದ್ಧತೆ ನಡೆಸಲಾಗಿದ್ದು, ಹೊಸ ಕಟ್ಟಡವೂ ಅಂತಿಮ ಹಂತದಲ್ಲಿದೆ. ಹೀಗಾಗಿ ಯಾವುದೇ ವಿಳಂಬ ಮಾಡದೆ ಜಿಲ್ಲಾಸ್ಪತ್ರೆಯಲ್ಲಿ ಎಂಆರ್‌ಐ ಸ್ಕ್ಯಾನಿಂಗ್ ಸೇವೆ ಆರಂಭಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.]]&gt;</description><dc:creator>&lt;![CDATA[Ashok Nayak]]&gt;</dc:creator><category>&lt;![CDATA[ಚಿಕ್ಕಬಳ್ಳಾಪುರ]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕರ್ನಾಟಕ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/cbpm5kdp.original.jpg" class="attachment-large size-large wp-post-image" alt="ಕ್ಷೇತ್ರದ ಆರೋಗ್ಯ, ಶಿಕ್ಷಣ, ರಸ್ತೆ ಸುರಕ್ಷತೆ, ಆಡಳಿತ, ಬರ ಪರಿಹಾರ ಸೇರಿ ಅಭಿವೃದ್ಧಿ ಅಜೆಂಡಾ ಮುಂದಿಟ್ಟ ಶಾಸಕ; ಉಸ್ತುವಾರಿ ಸಚಿವರಿಂದ ಬೇಡಿಕೆ ಈಡೇರಿಕೆಯ ಭರವಸೆ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="kxfiq"&gt;&lt;b&gt;ಚಿಕ್ಕಬಳ್ಳಾಪುರ: &lt;/b&gt;ನೂತನ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಎಸ್. ಸುರೇಶ್(&lt;b&gt;Byrati S Suresh&lt;/b&gt;) ಅಧ್ಯಕ್ಷತೆಯಲ್ಲಿ ನಡೆದ ಮೊದಲ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಮೇಲ್ವಿಚಾರಣಾ ಸಮಿತಿ (ಕೆಡಿಪಿ) ಸಭೆಯಲ್ಲಿ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್(&lt;b&gt;MLA Pradeep Eshwar&lt;/b&gt;) ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದ ಮಹತ್ವದ ವಿಷಯಗಳನ್ನು ಪ್ರಬಲವಾಗಿ ಪ್ರಸ್ತಾಪಿಸುವ ಮೂಲಕ ಸಭೆಯ ಕೇಂದ್ರಬಿಂದುವಾದರು.&lt;/p&gt;&lt;p data-block-key="2lgq1"&gt;ಆರೋಗ್ಯ, ಶಿಕ್ಷಣ, ರಸ್ತೆ ಸುರಕ್ಷತೆ, ಆಡಳಿತಾತ್ಮಕ ಮೂಲಸೌಕರ್ಯ ಹಾಗೂ ಬರ ಪರಿಹಾರ ಸೇರಿ ದಂತೆ ಜನಜೀವನಕ್ಕೆ ನೇರವಾಗಿ ಸಂಬಂಧಿಸಿದ ಹಲವು ಬೇಡಿಕೆಗಳನ್ನು ಮುಂದಿಟ್ಟು ಸರ್ಕಾರದ ತಕ್ಷಣದ ಗಮನ ಸೆಳೆದರು.&lt;/p&gt;&lt;p data-block-key="3nkkq"&gt;ನಗರ ಹೊರವಲಯದ ಜಿಲ್ಲಾಡಳಿತ ಭವನದ ಸರ್.ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಹಿಂದಿನ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್(&lt;b&gt;Dr M C Sudhakar&lt;/b&gt;) ಅವರ ಅವಧಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಎಂಆರ್‌ಐ ಸ್ಕ್ಯಾನಿಂಗ್ ಕೇಂದ್ರ ಸ್ಥಾಪನೆಗೆ ಸಿದ್ಧತೆ ನಡೆಸಲಾಗಿದ್ದು, ಹೊಸ ಕಟ್ಟಡವೂ ಅಂತಿಮ ಹಂತದಲ್ಲಿದೆ. ಹೀಗಾಗಿ ಯಾವುದೇ ವಿಳಂಬ ಮಾಡದೆ ಜಿಲ್ಲಾಸ್ಪತ್ರೆಯಲ್ಲಿ ಎಂಆರ್‌ಐ ಸ್ಕ್ಯಾನಿಂಗ್ ಸೇವೆ ಆರಂಭಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.&lt;/p&gt;&lt;p data-block-key="2c63o"&gt;&lt;b&gt;ಇದನ್ನೂ ಓದಿ: &lt;/b&gt;&lt;a href="/karnataka/chikkaballapur/file-a-case-against-mla-pradeep-easwar-otherwise-violent-protests-manjunatha-reddy-82586.html"&gt;MLA Pradeep Eshwar: ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಪ್ರಕರಣ ದಾಖಲಿಸಿ; ಇಲ್ಲದಿದ್ದರೆ ಉಗ್ರ ಪ್ರತಿಭಟನೆ: ಮಂಜುನಾಥರೆಡ್ಡಿ&lt;/a&gt;&lt;/p&gt;&lt;p data-block-key="2e6sa"&gt;ಮಂಚೇನಹಳ್ಳಿ ತಾಲೂಕು ಕೇಂದ್ರದಲ್ಲಿ ನಿರ್ಮಾಣ ಹಂತದಲ್ಲಿರುವ ಬಸ್ ನಿಲ್ದಾಣ ಹಾಗೂ ತಾಲೂಕು ಆಡಳಿತ ಸೌಧ ಕಾಮಗಾರಿಗಳು ನಿಧಾನಗತಿಯಲ್ಲಿ ಸಾಗುತ್ತಿವೆ. ಗುತ್ತಿಗೆದಾರರಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿ ಕಾಮಗಾರಿಯ ವೇಗ ಹೆಚ್ಚಿಸುವುದರ ಜೊತೆಗೆ ಅಗತ್ಯ ಹೆಚ್ಚುವರಿ ಅನು ದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.&lt;/p&gt;&lt;p data-block-key="9hf14"&gt;ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದ ಬಸ್ ನಿಲ್ದಾಣಕ್ಕೆ ಕಾಲಜ್ಞಾನಿ ಶ್ರೀ ಕೈವಾರ ಯೋಗಿ ನಾರಾಯಣ ಯತೀಂದ್ರ (ತಾತಯ್ಯ) ಅವರ ಹೆಸರನ್ನು ನಾಮಕರಣ ಮಾಡಬೇಕು ಎಂದು ಮನವಿ ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಬೈರತಿ ಎಸ್. ಸುರೇಶ್, ಜಿಲ್ಲೆಯಿಂದ ಅಧಿಕೃತ ಶಿಫಾರಸು ಕಳುಹಿಸಿ ದರೆ ಸಚಿವ ಸಂಪುಟದಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಭರವಸೆ ನೀಡಿದರು.&lt;/p&gt;&lt;p data-block-key="39grs"&gt;ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಹಾಗೂ ಖಾಯಂ ಸಿಬ್ಬಂದಿ ಕೊರತೆ ಯಿಂದ ಗ್ರಾಮೀಣ ಜನರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಇತ್ತೀಚೆಗೆ ವೈದ್ಯರ ಕೊರತೆ ಯಿಂದ ಮಗುವೊಂದು ಪ್ರಾಣ ಕಳೆದುಕೊಂಡ ಘಟನೆ ಉಲ್ಲೇಖಿಸಿದ ಶಾಸಕ, ಗ್ರಾಮೀಣ ಆರೋಗ್ಯ ಸೇವೆ ಬಲಪಡಿಸುವಂತೆ ಆಗ್ರಹಿಸಿದರು.&lt;/p&gt;&lt;p data-block-key="1eide"&gt;ಈ ವೇಳೆ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಹೇಶ್ ಕುಮಾರ್, ಜಿಲ್ಲೆಯ ಬಹುತೇಕ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಖಾಯಂ ವೈದ್ಯರು ಹಾಗೂ ಸಿಬ್ಬಂದಿಯ ಕೊರತೆ ಇರುವುದನ್ನು ಸಭೆಯ ಗಮನಕ್ಕೆ ತಂದರು. ಖಾಯಂ ನೇಮಕಾತಿ ಆಗುವವರೆಗೆ ಲಭ್ಯವಿರುವ ಸಿಬ್ಬಂದಿಯಿಂದಲೇ ಸೇವೆ ಯಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.&lt;/p&gt;&lt;p data-block-key="1iio8"&gt;ಜಿಲ್ಲೆಯಲ್ಲಿ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದ ಜಿಲ್ಲಾ ಡಳಿತವನ್ನು ಅಭಿನಂದಿಸಿದ ಶಾಸಕ, ಇದೇ ಮಾದರಿಯಲ್ಲಿ ಮುಂಬರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಗಳನ್ನೂ ಪೂರ್ವಸಿದ್ಧತೆಯಿಂದ ಮುಖ್ಯ ಪರೀಕ್ಷೆಯವರೆಗೆ ವ್ಯವಸ್ಥಿತವಾಗಿ ನಡೆಸಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಉತ್ತಮ ವಾತಾವರಣ ಕಲ್ಪಿಸಬೇಕು ಎಂದು ಸಲಹೆ ನೀಡಿದರು.&lt;/p&gt;&lt;p data-block-key="gvph"&gt;ನಂದಿ ವೈದ್ಯಕೀಯ ಕಾಲೇಜಿನಲ್ಲಿ ಆಸ್ಪತ್ರೆಯನ್ನು ಶೀಘ್ರ ಆರಂಭಿಸು ಸಂಬಂಧ ಈಗಾಗಲೇ ಸಚಿವ ಸಂಪುಟದ ಅನುಮೋಧನೆ ದೊರೆತಿದೆ.ಕೂಡಲೇ ಇಲ್ಲಿ ಆಸ್ಪತ್ರೆ ಪ್ರಾರಂಭಸಬೇಕು ಎಂದು ಮನವಿ ಮಾಡಿದರು.&lt;/p&gt;&lt;p data-block-key="8jlr4"&gt;ನಂದಿ ಮೆಡಿಕಲ್ ಕಾಲೇಜು ಎದುರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ವಿದ್ಯಾರ್ಥಿಗಳ ಸುರಕ್ಷಿತ ಸಂಚಾರಕ್ಕಾಗಿ ಸ್ಕೈವಾಕ್ ನಿರ್ಮಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ನಿರ್ದೇಶನ ನೀಡುವಂತೆ ಮನವಿ ಮಾಡಿದರು.&lt;/p&gt;&lt;p data-block-key="9pvr9"&gt;ತಾಲೂಕು ಕಚೇರಿ ಆವರಣದಲ್ಲಿರುವ ಜಿಲ್ಲಾ ಉಪವಿಗಾಧಿಕಾರಿಗಳ ಕಚೇರಿ ಅತ್ಯಂತ ಇಕ್ಕಟ್ಟಾ ಗಿದ್ದು, ಹೊಸ ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ಹಾಗೂ ಅಗತ್ಯ ಅನುದಾನ ಒದಗಿಸಬೇಕು ಎಂದರು.&lt;/p&gt;&lt;p data-block-key="6vvrk"&gt;ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ತೀವ್ರ ಬರ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರು ಸೇರಿದಂತೆ ಬರ ಪರಿಹಾರ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸಚಿವರ ಗಮನ ಸೆಳೆದರು.&lt;/p&gt;&lt;p data-block-key="8k79b"&gt;ಕೆಡಿಪಿ ಸಭೆಯಲ್ಲಿ ಶಾಸಕ ಪ್ರದೀಪ್ ಈಶ್ವರ್ ಮಂಡಿಸಿದ ಬಹುತೇಕ ಎಲ್ಲ ಬೇಡಿಕೆಗಳಿಗೆ ನೂತನ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಎಸ್. ಸುರೇಶ್ ಸಕಾರಾತ್ಮಕ ಸ್ಪಂದನೆ ವ್ಯಕ್ತಪಡಿಸಿ, ಸಂಬಂಧಿತ ಇಲಾಖೆಗಳ ಮೂಲಕ ಹಂತ ಹಂತವಾಗಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಅಭಿವೃದ್ಧಿ ವಿಷಯಗಳ ಬಗ್ಗೆ ಶಾಸಕ ಪ್ರದೀಪ್ ಈಶ್ವರ್ ಸಮಗ್ರವಾಗಿ ಮಂಡಿಸಿದ ಬೇಡಿಕೆಗಳು ಸಭೆಯಲ್ಲಿ ವಿಶೇಷ ಗಮನ ಸೆಳೆದವು.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಐಟಿ ಕಂಪನಿಯ 18 ಲಕ್ಷ ರುಪಾಯಿ ಸಂಬಳ ತೊರೆದು ಡೇರಿ ಉದ್ಯಮ ಆರಂಭಿಸಿದ 42 ವರ್ಷದ ಟೆಕ್ಕಿ! ಸ್ಫೂರ್ತಿದಾಯಕ ವಿಡಿಯೊ ನೋಡಿ</title><link>https://vishwavani.news/viral/42-year-old-techie-found-success-after-quitting-his-it-company-job-to-start-a-dairy-business-85771.html</link><guid>https://vishwavani.news/viral/42-year-old-techie-found-success-after-quitting-his-it-company-job-to-start-a-dairy-business-85771.html</guid><pubDate>Thu, 06 Aug 2026 18:10:47 +0000</pubDate><description>&lt;![CDATA[Viral News: ಮಾನಸಿಕ ನೆಮ್ಮದಿಗಾಗಿ ಲಕ್ಷ ಲಕ್ಷ ರುಪಾಯಿ ಸಂಬಳ ಸಿಗುತ್ತಿದ್ದ ಉದ್ಯೋಗ ತೊರೆದು ಸ್ವಂತ ಉದ್ಯಮ ನಡೆಸುವವರು ಅನೇಕರು ಇದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ತೆಲಂಗಾಣದ ಹೈದರಾಬಾದ್‌ನ 42 ವರ್ಷದ ಎಂಜಿನಿಯರ್ ಒಬ್ಬರು ಐಟಿ ಕೆಲಸಕ್ಕೆ ಗುಡ್ ಬೈ ಹೇಳಿ ಡೇರಿ ಉದ್ಯಮ ಆರಂಭಿಸಿದ್ದಾರೆ. ಕೆಲಸದ ಬಗ್ಗೆ ಅಭದ್ರತೆ ಕಾಡಿರುವುದರಿಂದ ಸ್ವಂತ ಉದ್ಯಮವನ್ನು ಆರಂಭಿಸಲು ಇಚ್ಚಿಸಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಸದ್ಯ ಇವರ ಯಶಸ್ಸು ಕಂಡು ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.]]&gt;</description><dc:creator>&lt;![CDATA[Pushpa Kumari]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ವೈರಲ್‌]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Hyderabad_news_19.original.jpg" class="attachment-large size-large wp-post-image" alt="ಐಟಿ ಕಂಪನಿಯ 18 ಲಕ್ಷ ರುಪಾಯಿ ಸಂಬಳ ತೊರೆದು ಡೇರಿ ಉದ್ಯಮ ಆರಂಭಿಸಿದ 42 ವರ್ಷದ ಟೆಕ್ಕಿ! ಸ್ಫೂರ್ತಿದಾಯಕ ವಿಡಿಯೊ ನೋಡಿ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="qnpf7"&gt;&lt;b&gt;ಹೈದರಾಬಾದ್, ಆ. 6:&lt;/b&gt; ಕಾರ್ಪೊರೇಟ್ ವಲಯದ ಒತ್ತಡದ ಬಗ್ಗೆ ಅನೇಕ ಯುವಕ- ಯುವತಿಯರು ದೂರುತ್ತಾರೆ. ಮಾನಸಿಕ ನೆಮ್ಮದಿಗಾಗಿ ಲಕ್ಷ ಲಕ್ಷ ರುಪಾಯಿ ವೇತನದ ಉದ್ಯೋಗ ತೊರೆದು ಸ್ವಂತ ಉದ್ಯಮ ನಡೆಸಿದವರು ಅನೇಕರು ಇದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ತೆಲಂಗಾಣದ ಹೈದರಾಬಾದ್‌ನ 42 ವರ್ಷದ ಎಂಜಿನಿಯರ್ ಒಬ್ಬರು ಐಟಿ ಕೆಲಸಕ್ಕೆ ಗುಡ್ ಬೈ ಹೇಳಿ ಡೇರಿ ಉದ್ಯಮ ಆರಂಭಿಸಿದ್ದಾರೆ. ಕೆಲಸದ ಬಗ್ಗೆ ಅಭದ್ರತೆ ಕಾಡಿರುವುದರಿಂದ ಸ್ವಂತ ಉದ್ಯಮವನ್ನು ಆರಂಭಿಸಿದ್ದಾಗಿ ಅವರು &lt;a href="/viral/a-man-stood-on-a-bridge-and-threw-a-bottle-of-alcohol-onto-the-road-84351.html"&gt;&lt;b&gt;(Viral News)&lt;/b&gt;&lt;/a&gt;&lt;b&gt; &lt;/b&gt;ಹೇಳಿಕೊಂಡಿದ್ದಾರೆ. ಸದ್ಯ ಇವರ ಯಶಸ್ಸಿನ ಕಥೆ ವೈರಲ್‌ ಆಗಿದೆ.&lt;/p&gt;&lt;p data-block-key="aoavc"&gt;ಅನೇಕ ವೃತ್ತಿಪರರು ತಮ್ಮ ಉದ್ಯೋಗಗಳನ್ನು ತೊರೆದು ತಮ್ಮದೇ ಸ್ವಂತ ಉದ್ಯಮವನ್ನು ಪ್ರಾರಂಭಿಸಲು ಕನಸು ಕಾಣುತ್ತಾರೆ. ಆದರೆ ಕೆಲವರು ಮಾತ್ರ ಸಕ್ಸಸ್ ಕಾಣುತ್ತಾರೆ. ಅಂತವರಲ್ಲಿ ಹೈದರಾಬಾದ್‌ನ ಎಂಜನಿಯರ್ ಒಬ್ಬರು ನೆಟ್ಟಿಗರ ಗಮನ ಸೆಳೆದಿದ್ದಾರೆ. ಭವಿಷ್ಯದಲ್ಲಿ ತನ್ನ ಕೆಲಸ ಸುರಕ್ಷಿತ ಅಲ್ಲ ಎಂದು ಯೋಚನೆ ಮಾಡಿ ಈ ನಿರ್ಧಾರ ಕೈಗೊಂಡಿದ್ದಾರೆ.&lt;/p&gt;&lt;h3 data-block-key="aot11"&gt;&lt;b&gt;ವೈರಲ್‌ ಪೋಸ್ಟ್‌ ಇಲ್ಲಿದೆ:&lt;/b&gt;&lt;/h3&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="twitter-tweet"&gt;&lt;p lang="en" dir="ltr"&gt;There is a guy in my area who completed his &lt;a href="https://t.co/Ws1j7hoGgc"&gt;https://t.co/Ws1j7hoGgc&lt;/a&gt; from Osmania University. He is around 42 years old and was earning about ₹18 LPA. Recently, he left his job and started an organic dairy business.&lt;br&gt;&lt;br&gt;When I asked him why he left his job, he said that after Trump…&lt;/p&gt;&amp;mdash; Vikas Alwys (@VikasAlwys) &lt;a href="https://x.com/VikasAlwys/status/2084483587630600287?ref_src=twsrc%5Etfw"&gt;August 4, 2026&lt;/a&gt;&lt;/blockquote&gt; &lt;script async src="https://platform.x.com/widgets.js" charset="utf-8"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="9fus5"&gt;ಹೈದರಾಬಾದ್‌ನ 42 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ 18 ಲಕ್ಷ ರುಪಾಯಿ ವಾರ್ಷಿಕ ವೇತನದ ಐಟಿ ಕೆಲಸಕ್ಕೆ ರಾಜೀನಾಮೆ ನೀಡಿ ಡೇರಿ ಉದ್ಯಮವನ್ನು ಆರಂಭಿಸಿದ್ದಾರೆ. ಈ ವಿಚಾರವನ್ನು ಸಾಫ್ಟ್‌ವೇರ್ ಎಂಜಿನಿಯರ್ ವಿಕಾಸ್ ಅಲ್ವಿಸ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಬಿ.ಟೆಕ್ ಮುಗಿಸಿದ್ದುಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.&lt;/p&gt;&lt;p data-block-key="adphk"&gt;&lt;a href="/viral/uber-driver-drags-biker-half-a-kilometer-away-85036.html"&gt;&lt;b&gt;ನಿದ್ದೆಯ ಮಂಪರಿನಲ್ಲಿ ಬೈಕ್ ಸವಾರನನ್ನು ಅರ್ಧ ಕಿಲೋ ಮೀಟರ್ ಎಳೆದೊಯ್ದ ಉಬರ್ ಚಾಲಕ&lt;/b&gt;&lt;/a&gt;&lt;/p&gt;&lt;p data-block-key="6fpgh"&gt;ಇತ್ತೀಚಿನ ದಿನಗಳಲ್ಲಿ ಉದ್ಯೋಗ ಮಾರುಕಟ್ಟೆಯಲ್ಲಿ ಆದ ಬದಲಾವಣೆಯಿಂದ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ಅವರ ಕಂಪನಿಯು ಕಡಿಮೆ ಯೋಜನೆ ತೆಗೆದುಕೊಳ್ಳಲು ಪ್ರಾರಂಭಿಸಿತು. ಇದರಿಂದಾಗಿ ಉದ್ಯೋಗಿಗಳು ತಮ್ಮ ಉದ್ಯೋಗಗಳ ಬಗ್ಗೆ ಚಿಂತಿಸುತ್ತಿದ್ದರು. ಕೆಲಸ ಕಳೆದು ಹೋಗುತ್ತದೆ ಎಂಬ ಅನಿಶ್ಚಿತತೆಯಲ್ಲಿ ಬದುಕುತ್ತಿದ್ದರು. ಇದರ ಬದಲು ಸ್ವಂತ ಉದ್ಯಮ ಆರಂಭಿಸುವುದೇ ಲೇಸು ಎಂದು ಅವರು ತೀರ್ಮಾನ ಮಾಡಿದ್ದಾರೆ.&lt;/p&gt;&lt;p data-block-key="8u8j4"&gt;ತಮ್ಮ ಬಳಿಯಿದ್ದ ಉಳಿತಾಯದ ಹಣವನ್ನು ಉಪಯೋಗಿಸಿ ಸಾವಯವ ಹಾಲಿನ ಉತ್ಪನ್ನಗಳಾದ ದೇಸಿ ತುಪ್ಪ, ಮೊಸರು, ಇತರ ಡೇರಿ ಉತ್ಪನ್ನಗಳ ಮಾರಾಟ ಉದ್ಯಮವನ್ನು ಪ್ರಾರಂಭಿಸಿದ್ದಾರೆ. ಇಂದು, ಅವರ ವ್ಯವಹಾರವು ಮಾಸಿಕ 3.5 ಲಕ್ಷ ರುಪಾಯಿ ಆದಾಯವನ್ನು ಗಳಿಸುತ್ತಿದೆ ಮತ್ತು ತಿಂಗಳಿಗೆ ಸುಮಾರು 1.5 ಲಕ್ಷ ರುಪಾಯಿ ಲಾಭ ಇದೆಯಂತೆ.&lt;/p&gt;&lt;p data-block-key="1sdhm"&gt;​ಸದ್ಯ ​ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಇವರ ನಿರ್ಧಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಬ್ಬರು, ʼʼ42ನೇ ವಯಸ್ಸಿನಲ್ಲಿ ಸ್ಥಿರವಾದ 18 LPA ಕೆಲಸವನ್ನು ಬಿಟ್ಟು ಸ್ವಂತ ಉದ್ಯಮ ನಡೆಸಲು ಧೈರ್ಯ ಬೇಕುʼʼ ಎಂದಿದ್ದಾರೆ. ಮತ್ತೊಬ್ಬರು, ʼʼನಿಜಕ್ಕೂ ಇವರು ಶ್ರಮಜೀವಿʼʼ ಎಂದು ಕೊಂಡಾಡಿದ್ದಾರೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>Chikkaballapur News: ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಶ್ರೀ ವೀರ ಬ್ರಹ್ಮೇಂದ್ರಸ್ವಾಮಿಗಳ ರಥೋತ್ಸವ; ವೇದಘೋಷ, ಹೋಮ-ಹವನ, ಅಭಿಷೇಕಗಳಿಂದ ಕಂಗೊಳಿಸಿದ ಪುಣ್ಯಕ್ಷೇತ್ರ</title><link>https://vishwavani.news/karnataka/chikkaballapur/sri-veera-brahmendra-swamys-chariot-festival-held-in-the-presence-of-thousands-of-devotees-the-holy-site-resplendent-with-vedic-chants-sacred-fire-rituals-and-ritual-ablutions-85823.html</link><guid>https://vishwavani.news/karnataka/chikkaballapur/sri-veera-brahmendra-swamys-chariot-festival-held-in-the-presence-of-thousands-of-devotees-the-holy-site-resplendent-with-vedic-chants-sacred-fire-rituals-and-ritual-ablutions-85823.html</guid><pubDate>Thu, 06 Aug 2026 18:08:10 +0000</pubDate><description>&lt;![CDATA[ಬೆಳಗ್ಗೆಯಿಂದಲೇ ಗಣಪತಿ ಪೂಜೆ, ಪುಣ್ಯಾಹ, ದಶಶಾಂತಿ, ರುದ್ರಾಭಿಷೇಕ, ಕಳಶಾರಾಧನೆ, ಮಹಾನ್ಯಾಸ ಪೂರ್ವಕ ಅಭಿಷೇಕ, ಮಹಾಮಂತ್ರ ಹೋಮ, ಧ್ವಜಾರೋಹಣ, ಕಳಶೋತ್ಸವ, ಲಿಂಗ ಪ್ರತಿಷ್ಠಾಪನೆ ಹಾಗೂ ಶ್ರೀ ಶರಭಯೋಗೇಂದ್ರಸ್ವಾಮಿ, ಅನ್ನಪೂರ್ಣದೇವಿ ಮತ್ತು ಕಾಶಿ ವಿಶ್ವನಾಥ ಸ್ವಾಮಿಗಳಿಗೆ ಪಂಚಾಮೃತಾಭಿಷೇಕ ಸೇರಿದಂತೆ ವಿವಿಧ ವೈದಿಕ ಪೂಜೆಗಳು ಭಕ್ತಿಭಾವದಿಂದ ನೆರವೇರಿದವು.]]&gt;</description><dc:creator>&lt;![CDATA[Ashok Nayak]]&gt;</dc:creator><category>&lt;![CDATA[ಚಿಕ್ಕಬಳ್ಳಾಪುರ]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕರ್ನಾಟಕ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/867682_ok.original.jpg" class="attachment-large size-large wp-post-image" alt="Chikkaballapur News: ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಶ್ರೀ ವೀರ ಬ್ರಹ್ಮೇಂದ್ರಸ್ವಾಮಿಗಳ ರಥೋತ್ಸವ; ವೇದಘೋಷ, ಹೋಮ-ಹವನ, ಅಭಿಷೇಕಗಳಿಂದ ಕಂಗೊಳಿಸಿದ ಪುಣ್ಯಕ್ಷೇತ್ರ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="d4oxj"&gt;&lt;b&gt;ಚಿಕ್ಕಬಳ್ಳಾಪುರ: &lt;/b&gt;ಶೈವ ಸಂಪ್ರದಾಯದ ಪವಿತ್ರ ಕ್ಷೇತ್ರಗಳಲ್ಲಿ ಒಂದಾದ ಶ್ರೀ ಶ್ರೀ ದಕ್ಷಿಣ ಕಾಶಿ ಪಂಚನಂದಿ ಮಹಾ ಪುಣ್ಯಕ್ಷೇತ್ರ ಪಾಪಾಗ್ನಿ ಮಠದಲ್ಲಿ ಶ್ರೀ ಶ್ರೀ ಶರಭಯೋಗೇಂದ್ರಸ್ವಾಮಿಗಳ 308ನೇ ಆರಾಧನಾ ಮಹೋತ್ಸವ ಹಾಗೂ ಶ್ರೀ ಶ್ರೀ ಶ್ರೀ ವೀರ ಬ್ರಹ್ಮೇಂದ್ರಸ್ವಾಮಿಗಳ ಬ್ರಹ್ಮ ರಥೋತ್ಸವ ಗುರುವಾರ ಅಪಾರ ಭಕ್ತಸಾಗರದ ನಡುವೆ ಅತ್ಯಂತ ವೈಭವ, ಭಕ್ತಿ ಮತ್ತು ವೈದಿಕ ಸಂಪ್ರದಾಯಗಳೊಂದಿಗೆ ನೆರವೇರಿತು. &lt;/p&gt;&lt;p data-block-key="c30kj"&gt;ತಾಲೂಕಿನ ಕಳವಾರ ಗ್ರಾಮದ ಬಳಿಯಿರುವ ಪಾಪಾಗ್ನಿ ಮಠದಲ್ಲಿ ಆರಾಧನಾ ಮಹೋತ್ಸವದ ಅಂಗವಾಗಿ ನಡೆದ ವೇದಮಂತ್ರಗಳ ಘೋಷ, ನಾದಸ್ವರದ ಮಂಗಳ ನಿನಾದ, ಪೂಜಾ ಕೈಂಕರ್ಯ ಗಳು ಹಾಗೂ ರಥೋತ್ಸವದ ಸಿದ್ಧತೆಗಳು ಇಡೀ ಪುಣ್ಯಕ್ಷೇತ್ರದಲ್ಲಿ ಆಧ್ಯಾತ್ಮಿಕ ವಾತಾವರಣದಿಂದ ಕಂಗೊಳಿಸಿತು.&lt;/p&gt;&lt;p data-block-key="6gr85"&gt;&lt;b&gt;ಇದನ್ನೂ ಓದಿ: &lt;/b&gt;&lt;a href="/karnataka/chikkaballapur/distribution-of-sarees-to-women-and-books-to-children-harish-reddy-stated-that-the-peoples-affection-is-his-strength-and-pledged-to-serve-without-betraying-their-trust-85822.html"&gt;Chikkaballapur News: ಮಹಿಳೆಯರಿಗೆ ಸೀರೆ, ಮಕ್ಕಳಿಗೆ ಪುಸ್ತಕ ವಿತರಣೆ; ಜನರ ಪ್ರೀತಿಯೇ ನನ್ನ ಶಕ್ತಿ, ನಂಬಿಕೆಗೆ ಚ್ಯುತಿ ಬಾರದಂತೆ ಸೇವೆ ಮಾಡುತ್ತೇನೆ ಎಂದ ಹರೀಶ್ ರೆಡ್ಡಿ&lt;/a&gt;&lt;/p&gt;&lt;p data-block-key="6ccov"&gt;ಬೆಳಗ್ಗೆಯಿಂದಲೇ ಗಣಪತಿ ಪೂಜೆ, ಪುಣ್ಯಾಹ, ದಶಶಾಂತಿ, ರುದ್ರಾಭಿಷೇಕ, ಕಳಶಾರಾಧನೆ, ಮಹಾನ್ಯಾಸಪೂರ್ವಕ ಅಭಿಷೇಕ, ಮಹಾಮಂತ್ರ ಹೋಮ, ಧ್ವಜಾರೋಹಣ, ಕಳಶೋತ್ಸವ, ಲಿಂಗ ಪ್ರತಿಷ್ಠಾಪನೆ ಹಾಗೂ ಶ್ರೀ ಶರಭಯೋಗೇಂದ್ರಸ್ವಾಮಿ, ಅನ್ನಪೂರ್ಣದೇವಿ ಮತ್ತು ಕಾಶಿ ವಿಶ್ವನಾಥ ಸ್ವಾಮಿಗಳಿಗೆ ಪಂಚಾಮೃತಾಭಿಷೇಕ ಸೇರಿದಂತೆ ವಿವಿಧ ವೈದಿಕ ಪೂಜೆಗಳು ಭಕ್ತಿಭಾವದಿಂದ ನೆರವೇರಿದವು. &lt;/p&gt;&lt;p data-block-key="5s1ue"&gt;ಬಳಿಕ ಶ್ರೀ ವೀರ ಬ್ರಹ್ಮೇಂದ್ರಸ್ವಾಮಿಗಳ ರಥೋತ್ಸವಕ್ಕೆ ವಿಧಿವತ್ತಾಗಿ ಚಾಲನೆ ನೀಡಲಾಗಿದ್ದು, ನೂರಾರು ಭಕ್ತರು "ಹರ ಹರ ಮಹಾದೇವ" ಮತ್ತು "ಜೈ ವೀರ ಬ್ರಹ್ಮೇಂದ್ರಸ್ವಾಮಿ" ಎಂಬ ಜಯ ಘೋಷಗಳ ನಡುವೆ ರಥವನ್ನು ಎಳೆದು ತಮ್ಮ ಭಕ್ತಿಯನ್ನು ಸಮರ್ಪಿಸಿದರು.&lt;/p&gt;
&lt;/div&gt;

    
&lt;figure class="article-image text-center mb-4"&gt;
    &lt;img alt="867681 ok" class="img-fluid" height="659" src="https://cdn.vishwavani.news/media/images/867681_ok.max-1280x720.format-webp.webp" width="1280"&gt;
    
&lt;/figure&gt;

    
&lt;div class="article-paragraph"&gt;
    &lt;p data-block-key="1msdc"&gt;ಚಿಕ್ಕಬಳ್ಳಾಪುರ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳು ಹಾಗೂ ನೆರೆಯ ರಾಜ್ಯಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ದೇವರ ದರ್ಶನ ಪಡೆದು ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ಲೋಕಕ್ಷೇಮ, ಉತ್ತಮ ಮಳೆ, ಸಮೃದ್ಧ ಬೆಳೆ ಹಾಗೂ ಸಕಲ ಜನರ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಿ ದರು. ದಿನವಿಡೀ ಅನ್ನಸಂತರ್ಪಣೆ ಸೇರಿದಂತೆ ವಿವಿಧ ಧಾರ್ಮಿಕ ಸೇವಾ ಕಾರ್ಯಕ್ರಮಗಳು ನಡೆದವು.&lt;/p&gt;&lt;p data-block-key="j9j5"&gt;ಟ್ರಸ್ಟ್ ಅಧ್ಯಕ್ಷ ಬ್ರಹ್ಮಶ್ರೀ ಎನ್. ಹೆಂಜಾರಾಚಾರಿ ಮಾತನಾಡಿ, "ಪಾಪಾಗ್ನಿ ಮಠವು ಶತಮಾನಗಳ ಆಧ್ಯಾತ್ಮಿಕ ಪರಂಪರೆಯನ್ನು ಹೊಂದಿರುವ ಪವಿತ್ರ ಕ್ಷೇತ್ರವಾಗಿದೆ. ಶ್ರೀ ಶರಭಯೋಗೇಂದ್ರ ಸ್ವಾಮಿಗಳ ಅನುಗ್ರಹದಿಂದ ಪ್ರತಿವರ್ಷ ಸಾವಿರಾರು ಭಕ್ತರು ಆರಾಧನಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದು ಈ ಕ್ಷೇತ್ರದ ಮಹಿಮೆಗೆ ಸಾಕ್ಷಿಯಾಗಿದೆ. ಧರ್ಮ, ಸಂಸ್ಕೃತಿ ಮತ್ತು ಗುರುಪರಂಪರೆಯ ಮೌಲ್ಯಗಳನ್ನು ಉಳಿಸುವ ಕಾರ್ಯ ವನ್ನು ಟ್ರಸ್ಟ್ ನಿರಂತರವಾಗಿ ಮುಂದುವರಿಸಲಿದೆ" ಎಂದು ಹೇಳಿದರು.&lt;/p&gt;&lt;p data-block-key="cji4f"&gt;ಟ್ರಸ್ಟ್ ಉಪಾಧ್ಯಕ್ಷ ಬ್ರಹ್ಮಶ್ರೀ ಎ.ಬಿ. ಮಂಜುನಾಥಾಚಾರಿ ಮಾತನಾಡಿ, "ಶ್ರೀ ವೀರ ಬ್ರಹ್ಮೇಂದ್ರ ಸ್ವಾಮಿಗಳ ಗುರುಪರಂಪರೆಯೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಪಾಪಾಗ್ನಿ ಮಠವು ಭಕ್ತರ ನಂಬಿಕೆಯ ಆಧ್ಯಾತ್ಮಿಕ ಕೇಂದ್ರವಾಗಿದೆ. ಪೂರ್ವಿಕರು ಹಾಕಿಕೊಟ್ಟ ಧಾರ್ಮಿಕ ಸಂಪ್ರದಾಯ ವನ್ನು ಮುಂದುವರಿಸಿಕೊಂಡು ಪ್ರತಿವರ್ಷ ವೈದಿಕ ವಿಧಿ-ವಿಧಾನಗಳೊಂದಿಗೆ ಆರಾಧನಾ ಮಹೋ ತ್ಸವ ಆಚರಿಸಲಾಗುತ್ತಿದೆ. ಈ ಬಾರಿ ಉತ್ತಮ ಮಳೆ, ಸಮೃದ್ಧ ಬೆಳೆ, ದೇಶದ ಸುಭಿಕ್ಷತೆ ಹಾಗೂ ವಿಶ್ವಶಾಂತಿಗಾಗಿ ವಿಶೇಷ ಹೋಮ-ಹವನ ಮತ್ತು ಪೂಜೆಗಳನ್ನು ನೆರವೇರಿಸಲಾಗಿದೆ" ಎಂದು ತಿಳಿಸಿದರು.&lt;/p&gt;&lt;p data-block-key="2dgt3"&gt;ಕಾರ್ಯಕ್ರಮದಲ್ಲಿ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಸಿ.ಜಿ. ಸಂಜುಂಡಾಚಾರಿ, ಉಪಾಧ್ಯಕ್ಷ ವಿ. ಸುಬ್ರಹ್ಮಣ್ಯಾಚಾರಿ, ಖಜಾಂಚಿ ಎನ್. ಮಂಜುನಾಥ್, ಸದಸ್ಯರಾದ ಪಿ.ಎನ್. ಕೇಶವಾಚಾರಿ, ಎಂ. ಸುಬ್ರಹ್ಮಣ್ಯಾಚಾರಿ, ಎ. ಮಹೇಶಾಚಾರಿ ಸೇರಿದಂತೆ ಟ್ರಸ್ಟ್ ಪದಾಧಿಕಾರಿಗಳು, ಗಣ್ಯರು ಹಾಗೂ ಅಪಾರ ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಅಧಿಕಾರ ದರ್ಪದಿಂದ ಬೀದಿಬದಿ ವ್ಯಾಪಾರಿಯ ಆಹಾರ ಚೆಲ್ಲಿದ ಪೊಲೀಸ್ ಅಧಿಕಾರಿ: ಕಣ್ಣೀರಿಟ್ಟ ಮಾರಾಟಗಾರನ ವಿಡಿಯೊ ವೈರಲ್‌</title><link>https://vishwavani.news/viral/police-officer-spills-food-from-street-vendor-netizens-outraged-85805.html</link><guid>https://vishwavani.news/viral/police-officer-spills-food-from-street-vendor-netizens-outraged-85805.html</guid><pubDate>Thu, 06 Aug 2026 18:00:47 +0000</pubDate><description>&lt;![CDATA[Viral Video: ಕಾನೂನು ರಕ್ಷಿಸಬೇಕಾದ ಪೊಲೀಸರೇ ಬೀದಿಬದಿ ವ್ಯಾಪಾರಿಯ ಆಹಾರ ಮತ್ತು ಪಾತ್ರೆಗಳನ್ನು ನೆಲಕ್ಕೆ ಎಸೆದಿದ್ದಾರೆ. ಪೊಲೀಸ್ ಅಧಿಕಾರ ದರ್ಪದ ಬಗ್ಗೆ ನೆಟ್ಟಿಗರು ಕಿಡಿಕಾರಿದ್ದು ಈ ಘಟನೆ ಈಗ ವ್ಯಾಪಕ ಆಕ್ರೋಶವನ್ನು ಹುಟ್ಟುಹಾಕಿದೆ. ಅನೇಕರು ಆಹಾರವನ್ನು ಎಸೆದ ಕ್ರಮವನ್ನು ಪ್ರಶ್ನಿಸಿದ್ದು, ಇಂತಹ ಅಧಿಕಾರಿಗಳು ಬಡವರ್ಗದ ಜನತೆಯ ಮೇಲೆ ಮಾತ್ರ ದರ್ಪ ತೋರಿಸಲು ಸಾಧ್ಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.]]&gt;</description><dc:creator>&lt;![CDATA[Pushpa Kumari]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ವೈರಲ್‌]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Street_Vendor.original.jpg" class="attachment-large size-large wp-post-image" alt="ಅಧಿಕಾರ ದರ್ಪದಿಂದ ಬೀದಿಬದಿ ವ್ಯಾಪಾರಿಯ ಆಹಾರ ಚೆಲ್ಲಿದ ಪೊಲೀಸ್ ಅಧಿಕಾರಿ: ಕಣ್ಣೀರಿಟ್ಟ ಮಾರಾಟಗಾರನ ವಿಡಿಯೊ ವೈರಲ್‌" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="az7h8"&gt;&lt;b&gt;ನವದೆಹಲಿ, ಆ. 6: &lt;/b&gt;ದೆಹಲಿಯ ಜನಕ್‌ಪುರಿಯಲ್ಲಿ ಹೃದಯ ವಿದ್ರಾವಕ ಘಟನೆಯೊಂದು &lt;a href="/viral/a-young-man-came-to-delhi-from-australia-after-spending-1-lakh-for-neet-protest-84472.html"&gt;&lt;b&gt;(Viral News)&lt;/b&gt;&lt;/a&gt;&lt;b&gt; &lt;/b&gt;ನಡೆದಿದೆ. ಕಾನೂನು ರಕ್ಷಣೆ ಮಾಡಬೇಕಾದ ಪೊಲೀಸರೇ ಬೀದಿಬದಿ ವ್ಯಾಪಾರಿಯ ಆಹಾರ ಮತ್ತು ಪಾತ್ರೆಗಳನ್ನು ನೆಲಕ್ಕೆ ಎಸೆದಿದ್ದಾರೆ. ಪೊಲೀಸರ ಅಧಿಕಾರ ದರ್ಪದ ಬಗ್ಗೆ ನೆಟ್ಟಿಗರು ಕಿಡಿಕಾರಿದ್ದು ಈ ಘಟನೆ ಈಗ ವ್ಯಾಪಕ ಆಕ್ರೋಶವನ್ನು ಹುಟ್ಟುಹಾಕಿದೆ. ಅನೇಕರು ಆಹಾರವನ್ನು ಎಸೆದ ಕೃತ್ಯವನ್ನು ಪ್ರಶ್ನಿಸಿದ್ದು, ಇಂತಹ ಅಧಿಕಾರಿಗಳು ಬಡವರ್ಗದ ಜನತೆಯ ಮೇಲೆ ಮಾತ್ರ ದರ್ಪ ತೊರಿಸಲು ಸಾಧ್ಯ ಎಂದಿದ್ದಾರೆ.&lt;/p&gt;&lt;p data-block-key="6i34v"&gt;ಈ ಘಟನೆಯು ಜನಕಪುರಿಯ ಕಾಳಿ ಮಾತಾ ಮಂದಿರದ ಬಳಿ ಅತಿಕ್ರಮಣ ವಿರೋಧಿ ಅಭಿಯಾನದ ಸಮಯದಲ್ಲಿ ಸಂಭವಿಸಿದೆ. ವೈರಲ್ ವಿಡಿಯೊದಲ್ಲಿ ರಸ್ತೆಬದಿಯ ಆಹಾರ ಮಾರಾಟಗಾರನೊಬ್ಬ ಕಣ್ಣೀರು ಸುರಿಸುತ್ತಾ ಪೊಲೀಸರೊಂದಿಗೆ ಬೇಡಿಕೊಳ್ಳುತ್ತಿರುವ ದೃಶ್ಯ ಕಂಡು ಬಂದಿದೆ. ಈ ಘಟನೆ ಸಾಮಾಜಿಕ ಮಾಧ್ಯಮ ಬಳಕೆದಾರರಲ್ಲಿ ಆಕ್ರೋಶವನ್ನು ಹುಟ್ಟುಹಾಕಿದೆ. ಅನೇಕರು ಮಾರಾಟಗಾರನ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದರೆ, ಇತರರು ಪೊಲೀಸರ ವರ್ತನೆ ವಿರುದ್ಧ ಕಿಡಿಕಾರಿದ್ದಾರೆ.&lt;/p&gt;&lt;h3 data-block-key="22gkv"&gt;&lt;b&gt;ವಿಡಿಯೊ ನೋಡಿ:&lt;/b&gt;&lt;/h3&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="twitter-tweet"&gt;&lt;p lang="en" dir="ltr"&gt;Sir, I just come here to earn for 2 hours... &lt;br&gt;&lt;br&gt;In Delhi&amp;#39;s Janakpuri, the police threw away the food of a small shopkeeper who sets up a roadside stall—his cry of anguish, weeping and wailing, is a stain on the system and humanity!&lt;br&gt;&lt;br&gt;Is this how those earning their daily bread… &lt;a href="https://t.co/d002RKcgAi"&gt;pic.twitter.com/d002RKcgAi&lt;/a&gt;&lt;/p&gt;&amp;mdash; Pragnya Gupta (@GuptaPragnya) &lt;a href="https://x.com/GuptaPragnya/status/2084679671220957232?ref_src=twsrc%5Etfw"&gt;August 4, 2026&lt;/a&gt;&lt;/blockquote&gt; &lt;script async src="https://platform.x.com/widgets.js" charset="utf-8"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="2h68s"&gt;ವೈರಲ್ ಆಗಿರುವ ಕ್ಲಿಪ್‌ನಲ್ಲಿ, ಮಾರಾಟಗಾರನು ರಸ್ತೆ ಪಕ್ಕದಲ್ಲಿ ನಿಂತಿದ್ದು, ಅವನ ಪಾತ್ರೆಗಳು ಮತ್ತು ಆಹಾರ ಪದಾರ್ಥಗಳು ನೆಲದ ಮೇಲೆ ಹರಡಿಕೊಂಡಿರುವುದು ಕಂಡುಬಂದಿದೆ. ಆತ ಪೊಲೀಸ್ ಅಧಿಕಾರಿಯೊಂದಿಗೆ, ʼʼನಾನು ಎಂದಿಗೂ ಯಾರೊಂದಿಗೂ ಜಗಳವಾಡುವುದಿಲ್ಲ, ನಾನು ಜೀವನೋಪಾಯಕ್ಕಾಗಿ ಎರಡು ಗಂಟೆಗಳ ಕಾಲ ಇಲ್ಲಿಗೆ ಬಂದಿದ್ದೇನೆʼʼ ಎಂದು ಹೇಳುತ್ತಾ ಬೇಡಿಕೊಳ್ಳುತ್ತಿರುವುದು ಕಂಡುಬಂದಿದೆ.&lt;/p&gt;&lt;p data-block-key="9u3e5"&gt;ಸ್ಥಳದಲ್ಲಿ ನೆರೆದಿದ್ದ ಜನಸಮೂಹವು ಪೊಲೀಸರ ವರ್ತನೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ಈ ಬಗ್ಗೆ ದೆಹಲಿ ಪೊಲೀಸರು ಮಾರಾಟಗಾರ ಮಾಡಿದ ಆರೋಪಗಳನ್ನು ತಿರಸ್ಕರಿಸಿ ಸ್ಪಷ್ಟೀಕರಣವನ್ನು ನೀಡಿದ್ದಾರೆ. ಪೊಲೀಸರೆ ಆಹಾರವನ್ನು ಎಸೆದಿದ್ದಾರೆ ಎಂಬುದಕ್ಕೆ ವಿಚಾರಣೆಯಲ್ಲಿ ಯಾವುದೇ ಪುರಾವೆ ಕಂಡುಬಂದಿಲ್ಲ. ​ಪೊಲೀಸರ ತೆರವು ಕಾರ್ಯಾಚರಣೆ ಸಂದರ್ಭದಲ್ಲಿ ಜನರ ಅನುಕಂಪ ಗಿಟ್ಟಿಸಿಕೊಳ್ಳಲು ವ್ಯಾಪಾರಿಯೇ ಸ್ವತಃ ಆಹಾರ ಹಾಗೂ ಪಾತ್ರೆಗಳನ್ನು ನೆಲಕ್ಕೆ ಎಸೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.&lt;/p&gt;&lt;p data-block-key="ds9nj"&gt;ಈ ಬಗ್ಗೆ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದು, ಒಬ್ಬರು, ʼʼಅಕ್ರಮ ಮಾರಾಟವನ್ನು ಪ್ರೋತ್ಸಾಹಿಸಬಾರದು. ಆದರೆ ಕಡಿಮೆ ಸವಲತ್ತು ಹೊಂದಿರುವವರನ್ನು ಘನತೆ, ಗೌರವದಿಂದ ನಡೆಸಿಕೊಳ್ಳುವುದು ಅಗತ್ಯ. ಅವರಿಗೆ ಬದುಕುವ ಮತ್ತು ಜೀವನೋಪಾಯವನ್ನು ಗಳಿಸುವ ಹಕ್ಕಿಲ್ಲವೇ?ʼʼ ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬರು ಈ ಅಧಿಕಾರಿ ವಿರುದ್ಧ ಕ್ರಮಕೈಗೊಳ್ಳಲು ಮನವಿ ಮಾಡಿದ್ದಾರೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>Chikkaballapur News: ಮಹಿಳೆಯರಿಗೆ ಸೀರೆ, ಮಕ್ಕಳಿಗೆ ಪುಸ್ತಕ ವಿತರಣೆ; ಜನರ ಪ್ರೀತಿಯೇ ನನ್ನ ಶಕ್ತಿ, ನಂಬಿಕೆಗೆ ಚ್ಯುತಿ ಬಾರದಂತೆ ಸೇವೆ ಮಾಡುತ್ತೇನೆ ಎಂದ ಹರೀಶ್ ರೆಡ್ಡಿ</title><link>https://vishwavani.news/karnataka/chikkaballapur/distribution-of-sarees-to-women-and-books-to-children-harish-reddy-stated-that-the-peoples-affection-is-his-strength-and-pledged-to-serve-without-betraying-their-trust-85822.html</link><guid>https://vishwavani.news/karnataka/chikkaballapur/distribution-of-sarees-to-women-and-books-to-children-harish-reddy-stated-that-the-peoples-affection-is-his-strength-and-pledged-to-serve-without-betraying-their-trust-85822.html</guid><pubDate>Thu, 06 Aug 2026 18:00:10 +0000</pubDate><description>&lt;![CDATA[ಗುರುವಾರ ಬೆಳಿಗ್ಗೆ ನಗರದಲ್ಲಿರುವ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಹರೀಶ್ ರೆಡ್ಡಿ, ಬಳಿಕ ಅಂಬೇಡ್ಕರ್ ನಗರದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಹಿಳೆಯರಿಗೆ ಸೀರೆ ಹಾಗೂ ಶಾಲಾ ಮಕ್ಕಳಿಗೆ ಪುಸ್ತಕಗಳನ್ನು ವಿತರಿಸಿದರು. ನಂತರ ಮೂಸ್ಟೂರಿನಲ್ಲಿ ಯುವಕರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬೃಹತ್ ಕೇಕ್ ಕತ್ತರಿಸಿ ಯುವಕರೊಂದಿಗೆ ಸಂಭ್ರಮ ಹಂಚಿಕೊಂಡರು]]&gt;</description><dc:creator>&lt;![CDATA[Ashok Nayak]]&gt;</dc:creator><category>&lt;![CDATA[ಚಿಕ್ಕಬಳ್ಳಾಪುರ]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕರ್ನಾಟಕ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/867778_birthday.original.jpg" class="attachment-large size-large wp-post-image" alt="Chikkaballapur News: ಮಹಿಳೆಯರಿಗೆ ಸೀರೆ, ಮಕ್ಕಳಿಗೆ ಪುಸ್ತಕ ವಿತರಣೆ; ಜನರ ಪ್ರೀತಿಯೇ ನನ್ನ ಶಕ್ತಿ, ನಂಬಿಕೆಗೆ ಚ್ಯುತಿ ಬಾರದಂತೆ ಸೇವೆ ಮಾಡುತ್ತೇನೆ ಎಂದ ಹರೀಶ್ ರೆಡ್ಡಿ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="fr96x"&gt;&lt;b&gt;ಚಿಕ್ಕಬಳ್ಳಾಪುರ: &lt;/b&gt;ಜನ್ಮದಿನವನ್ನು ಆಡಂಬರದಿಂದಲ್ಲ, ಸಮಾಜಮುಖಿ ಸೇವಾ ಕಾರ್ಯಗಳ ಮೂಲಕ ಅರ್ಥಪೂರ್ಣವಾಗಿ ಆಚರಿಸಿದರೆ ಸಮಾಜಕ್ಕೆ  ಅನುಕೂಲ ಆಗಲಿದೆ ಎಂದು ಶ್ರೀ ಹರಿಕೃಷ್ಣ ಫೌಂಡೇಶನ್ ಅಧ್ಯಕ್ಷ ಹಾಗೂ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಗೋದಾನಿ (ಆನೇಮಡುಗು) ಹರೀಶ್ ಕೆ.ರೆಡ್ಡಿ ತಿಳಿಸಿದರು .&lt;/p&gt;&lt;p data-block-key="57tli"&gt;ನಗರದ ವಿವಿಧ ವಾರ್ಡ್‌ಗಳಲ್ಲಿ ಮಹಿಳೆಯರಿಗೆ ಸೀರೆ, ಮಕ್ಕಳಿಗೆ ಪುಸ್ತಕ ವಿತರಣೆ, ಯುವಕರೊಂದಿಗೆ ಜನ್ಮದಿನ ಆಚರಣೆ ಸೇರಿದಂತೆ ಹಲವು ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.&lt;/p&gt;&lt;p data-block-key="coia6"&gt;&lt;b&gt;ಇದನ್ನೂ ಓದಿ: &lt;/b&gt;&lt;a href="/karnataka/chikkaballapur/youth-congress-stages-sticker-protest-demanding-withdrawal-of-firs-against-students-85821.html"&gt;Chikkaballapur News: ವಿದ್ಯಾರ್ಥಿಗಳ ಮೇಲಿನ ಎಫ್‌ಐಆರ್ ಹಿಂಪಡೆಯಲು ಆಗ್ರಹಿಸಿ ಯುವ ಕಾಂಗ್ರೆಸ್ ಸ್ಟಿಕರ್ ಪ್ರತಿಭಟನೆ&lt;/a&gt;&lt;/p&gt;&lt;p data-block-key="c1s0e"&gt;ಗುರುವಾರ ಬೆಳಿಗ್ಗೆ ನಗರದಲ್ಲಿರುವ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಹರೀಶ್ ರೆಡ್ಡಿ, ಬಳಿಕ ಅಂಬೇಡ್ಕರ್ ನಗರದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಹಿಳೆಯರಿಗೆ ಸೀರೆ ಹಾಗೂ ಶಾಲಾ ಮಕ್ಕಳಿಗೆ ಪುಸ್ತಕಗಳನ್ನು ವಿತರಿಸಿದರು. ನಂತರ ಮೂಸ್ಟೂರಿನಲ್ಲಿ ಯುವಕರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬೃಹತ್ ಕೇಕ್ ಕತ್ತರಿಸಿ ಯುವಕರೊಂದಿಗೆ ಸಂಭ್ರಮ ಹಂಚಿಕೊಂಡರು.&lt;/p&gt;
&lt;/div&gt;

    
&lt;figure class="article-image text-center mb-4"&gt;
    &lt;img alt="867779 present" class="img-fluid" height="602" src="https://cdn.vishwavani.news/media/images/867779_present.max-1280x720.format-webp.webp" width="1280"&gt;
    
&lt;/figure&gt;

    
&lt;div class="article-paragraph"&gt;
    &lt;p data-block-key="b0ccq"&gt;ಈ ಸಂದರ್ಭದಲ್ಲಿ ಮಾತನಾಡಿದ ಹರೀಶ್ ಕೆ.ರೆಡ್ಡಿ, "ಜನರಿಂದ ಸಿಗುತ್ತಿರುವ ಪ್ರೀತಿ, ವಿಶ್ವಾಸ ಮತ್ತು ಆಶೀರ್ವಾದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಬೆಳಗ್ಗೆಯಿಂದಲೇ ನೂರಾರು ದೂರವಾಣಿ ಕರೆಗಳು, ಶುಭಾಶಯಗಳು ಹಾಗೂ ನೇರವಾಗಿ ಭೇಟಿ ನೀಡಿ ಶುಭ ಹಾರೈಸಿದ ಪ್ರತಿಯೊಬ್ಬರ ಪ್ರೀತಿ ನನ್ನ ಮನಸ್ಸನ್ನು ತುಂಬಿದೆ. &lt;/p&gt;&lt;p data-block-key="7hdpg"&gt;ಮುಂದಿನ ದಿನಗಳಲ್ಲಿ ಜನಪ್ರತಿನಿಧಿಯಾಗಿ ಸೇವೆ ಸಲ್ಲಿಸಬೇಕು ಎಂಬ ಜನರ ಆಶಯ ನನ್ನ ಮೇಲಿನ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ. ಜನರ ನಂಬಿಕೆಗೆ ಎಂದಿಗೂ ಧಕ್ಕೆಯಾಗದಂತೆ ಪ್ರಾಮಾ ಣಿಕವಾಗಿ ಕೆಲಸ ಮಾಡುತ್ತೇನೆ. ಶ್ರೀ ಹರಿಕೃಷ್ಣ ಫೌಂಡೇಶನ್ ಮೂಲಕ ಶಿಕ್ಷಣ, ಆರೋಗ್ಯ ಮತ್ತು ಬಡವರ ನೆರವಿನಂತಹ ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ಇನ್ನಷ್ಟು ವಿಸ್ತರಿಸಿ ನಿರಂತರ ವಾಗಿ ಮುಂದುವರಿಸುತ್ತೇನೆ" ಎಂದು ಹೇಳಿದರು.&lt;/p&gt;&lt;p data-block-key="62j33"&gt;ಕಾರ್ಯಕ್ರಮದಲ್ಲಿ ಸ್ಥಳೀಯ ಮುಖಂಡರು, ಬಿಜೆಪಿ ಕಾರ್ಯಕರ್ತರು, ಶ್ರೀ ಹರಿಕೃಷ್ಣ ಫೌಂಡೇಶನ್ ಪದಾಧಿಕಾರಿಗಳು, ಯುವಕರು, ಮಹಿಳೆಯರು ಹಾಗೂ ಸಾರ್ವಜನಿಕರು ಭಾಗವಹಿಸಿ ಹರೀಶ್ ಕೆ. ರೆಡ್ಡಿಗೆ ಜನ್ಮದಿನದ ಶುಭಾಶಯಗಳನ್ನು ಕೋರಿದರು.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>Chikkaballapur News: ವಿದ್ಯಾರ್ಥಿಗಳ ಮೇಲಿನ ಎಫ್‌ಐಆರ್ ಹಿಂಪಡೆಯಲು ಆಗ್ರಹಿಸಿ ಯುವ ಕಾಂಗ್ರೆಸ್ ಸ್ಟಿಕರ್ ಪ್ರತಿಭಟನೆ</title><link>https://vishwavani.news/karnataka/chikkaballapur/youth-congress-stages-sticker-protest-demanding-withdrawal-of-firs-against-students-85821.html</link><guid>https://vishwavani.news/karnataka/chikkaballapur/youth-congress-stages-sticker-protest-demanding-withdrawal-of-firs-against-students-85821.html</guid><pubDate>Thu, 06 Aug 2026 17:48:06 +0000</pubDate><description>&lt;![CDATA[ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ರಾಜ್ಯಾಧ್ಯಕ್ಷ ಎಚ್.ಎಸ್.ಮಂಜುನಾಥಗೌಡ ಅವರ ಸೂಚನೆಯಂತೆ ನಡೆದ ಪ್ರತಿಭಟನೆಗೆ ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷೆ ಹಾಗೂ ಜಿಲ್ಲಾ ಉಸ್ತುವಾರಿ ದಿವ್ಯಾ ಚಾಲನೆ ನೀಡಿದರು. ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ ರೆಡ್ಡಿ ನೇತೃತ್ವ ದಲ್ಲಿ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಘೋಷಣೆಗಳನ್ನು ಕೂಗಿ ಸ್ಟಿಕರ್ ಅಂಟಿಸಿ ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸಿದರು.]]&gt;</description><dc:creator>&lt;![CDATA[Ashok Nayak]]&gt;</dc:creator><category>&lt;![CDATA[ಚಿಕ್ಕಬಳ್ಳಾಪುರ]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕರ್ನಾಟಕ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/867920_ok.original.jpg" class="attachment-large size-large wp-post-image" alt="Chikkaballapur News: ವಿದ್ಯಾರ್ಥಿಗಳ ಮೇಲಿನ ಎಫ್‌ಐಆರ್ ಹಿಂಪಡೆಯಲು ಆಗ್ರಹಿಸಿ ಯುವ ಕಾಂಗ್ರೆಸ್ ಸ್ಟಿಕರ್ ಪ್ರತಿಭಟನೆ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="3rzh9"&gt;&lt;b&gt;ಚಿಕ್ಕಬಳ್ಳಾಪುರ:&lt;/b&gt; ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ಖಂಡಿಸಿ ಜಂತರ್ ಮಂತರ್‌ನಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಿದ್ದ ವಿದ್ಯಾರ್ಥಿಗಳ ವಿರುದ್ಧ ದಾಖಲಿಸಿರುವ ಎಫ್‌ಐಆರ್‌ಗಳನ್ನು ತಕ್ಷಣವೇ ಹಿಂಪಡೆಯುವಂತೆ ಆಗ್ರಹಿಸಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಘಟಕ ಗುರುವಾರ ಸ್ಟಿಕರ್ ಅಂಟಿಸುವ ಮೂಲಕ ಪ್ರತಿಭಟನೆ ನಡೆಸಿತು.&lt;/p&gt;&lt;p data-block-key="574h0"&gt;ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ರಾಜ್ಯಾಧ್ಯಕ್ಷ ಎಚ್.ಎಸ್.ಮಂಜುನಾಥಗೌಡ ಅವರ ಸೂಚನೆಯಂತೆ ನಡೆದ ಪ್ರತಿಭಟನೆಗೆ ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷೆ ಹಾಗೂ ಜಿಲ್ಲಾ ಉಸ್ತುವಾರಿ ದಿವ್ಯಾ ಚಾಲನೆ ನೀಡಿದರು. ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ ರೆಡ್ಡಿ ನೇತೃತ್ವದಲ್ಲಿ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಘೋಷಣೆಗಳನ್ನು ಕೂಗಿ ಸ್ಟಿಕರ್ ಅಂಟಿಸಿ ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸಿದರು.&lt;/p&gt;&lt;p data-block-key="771jf"&gt;&lt;b&gt;ಇದನ್ನೂ ಓದಿ; &lt;/b&gt;&lt;a href="/karnataka/chikkaballapur/selection-of-new-sdmc-office-bearers-for-pasupalodu-government-school-85794.html"&gt;Chikkaballapur News: ಪಸುಪಲೋಡು ಸರ್ಕಾರಿ ಶಾಲೆಗೆ ಎಸ್‌ಡಿಎಂಸಿ ನೂತನ ಪದಾಧಿಕಾರಿಗಳ ಆಯ್ಕೆ&lt;/a&gt;&lt;/p&gt;&lt;p data-block-key="2t95g"&gt;ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷೆ ದಿವ್ಯಾ, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಹಿನ್ನೆಲೆಯಲ್ಲಿ ನ್ಯಾಯಕ್ಕಾಗಿ ಶಾಂತಿಯುತವಾಗಿ ಪ್ರತಿ ಭಟನೆ ನಡೆಸಿದ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಎಸಗಿ, ಅವರ ವಿರುದ್ಧವೇ ಎಫ್‌ಐಆರ್ ದಾಖಲಿಸಿರು ವುದು ಪ್ರಜಾಪ್ರಭುತ್ವ ವಿರೋಧಿ ಕ್ರಮವಾಗಿದೆ ಎಂದು ಆರೋಪಿಸಿದರು. ಪ್ರಶ್ನೆಪತ್ರಿಕೆ ಸೋರಿಕೆಗೆ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್(&lt;b&gt;Dharmendra Pradhan&lt;/b&gt;) ರಾಜೀನಾಮೆ ನೀಡಿರುವುದು ಮಾತ್ರ ಸಾಕಾಗುವುದಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ(&lt;b&gt;Amit Shah&lt;/b&gt;)ಕೂಡ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.&lt;/p&gt;
&lt;/div&gt;

    
&lt;figure class="article-image text-center mb-4"&gt;
    &lt;img alt="867897 ok" class="img-fluid" height="635" src="https://cdn.vishwavani.news/media/images/867897_ok.max-1280x720.format-webp.webp" width="1280"&gt;
    
&lt;/figure&gt;

    
&lt;div class="article-paragraph"&gt;
    &lt;p data-block-key="em3do"&gt;ಯುವ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ ರೆಡ್ಡಿ ಮಾತನಾಡಿ, &lt;b&gt;ತಮ್ಮ ಭವಿಷ್ಯವನ್ನು ಉಳಿಸಿಕೊಳ್ಳಲು ನ್ಯಾಯಕ್ಕಾಗಿ ಧ್ವನಿ ಎತ್ತಿದ ವಿದ್ಯಾರ್ಥಿಗಳ ಮೇಲೆಯೇ ಪ್ರಕರಣ ದಾಖಲಿಸಿರುವುದು ಖಂಡನೀಯ&lt;/b&gt; ಎಂದು ಹೇಳಿದರು. ವಿದ್ಯಾರ್ಥಿಗಳ ವಿರುದ್ಧ ದಾಖಲಿಸಿರುವ ಎಫ್‌ಐಆರ್‌ಗಳನ್ನು ತಕ್ಷಣವೇ ಹಿಂಪಡೆಯಬೇಕು. ಇಲ್ಲವಾದಲ್ಲಿ ಯುವ ಕಾಂಗ್ರೆಸ್ ರಾಜ್ಯಾದ್ಯಂತ ಉಗ್ರ ಹೋರಾಟ ರೂಪಿಸಲಿದೆ ಎಂದು ಎಚ್ಚರಿಕೆ ನೀಡಿದರು.&lt;/p&gt;&lt;p data-block-key="31nse"&gt;ಪ್ರತಿಭಟನೆಯಲ್ಲಿ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಮೇಶ್, ಜಿಲ್ಲಾ ಉಪಾಧ್ಯಕ್ಷ ವಿನಯ್ ಬಂಗಾರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಕ್ಷಿತ್ ರೆಡ್ಡಿ, ನವೀನ್, ಆರಿಫ್, ಅಶೋಕ್, ಮಂಜುಳ, ಧರ್ಮತೇಜ್ ಸೇರಿದಂತೆ ಯುವ ಕಾಂಗ್ರೆಸ್ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>81ರ ವೃದ್ಧೆ, 24ರ ಯುವಕ: ಸೋಶಿಯಲ್ ಮೀಡಿಯಾ ಪ್ರೀತಿ, ಏರ್‌ಪೋರ್ಟ್‌ನಲ್ಲಿ ಭಾವುಕ ಭೇಟಿ! ವಿಡಿಯೊ ವೈರಲ್</title><link>https://vishwavani.news/viral/81-year-old-woman-24-year-old-man-love-story-viral-september-wedding-85814.html</link><guid>https://vishwavani.news/viral/81-year-old-woman-24-year-old-man-love-story-viral-september-wedding-85814.html</guid><pubDate>Thu, 06 Aug 2026 17:47:05 +0000</pubDate><description>&lt;![CDATA[Viral Video: ಫ್ರಾನ್ಸ್‌ನ 81 ವರ್ಷದ ಮಹಿಳೆ ಮತ್ತು ಸೆನೆಗಲ್‌ನ 24 ವರ್ಷದ ಯುವಕ ಸೋಶಿಯಲ್ ಮೀಡಿಯಾದಲ್ಲಿ ಪರಿಚಯವಾಗಿ ಪ್ರೀತಿಯಲ್ಲಿ ಬಿದ್ದಿದ್ದಾರೆ. ಎರಡು ವರ್ಷಗಳ ಆನ್‌ಲೈನ್‌ ಸಂಪರ್ಕದ ಬಳಿಕ ಸೆನೆಗಲ್‌ನಲ್ಲಿ ಮೊದಲ ಬಾರಿ ಭೇಟಿಯಾದ ಇವರ ಭಾವುಕ ವಿಡಿಯೊ ವೈರಲ್ ಆಗಿದೆ. 57 ವರ್ಷಗಳ ವಯಸ್ಸಿನ ಅಂತರದ ನಡುವೆಯೂ 2026ರ ಸೆಪ್ಟೆಂಬರ್‌ನಲ್ಲಿ ಮದುವೆಯಾಗಲು ಈ ಜೋಡಿ ಮುಂದಾಗಿದೆ.]]&gt;</description><dc:creator>&lt;![CDATA[Sushmitha Jain]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ವೈರಲ್‌]]&gt;</category><category>&lt;![CDATA[ವಿದೇಶ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/1000633221.original.jpg" class="attachment-large size-large wp-post-image" alt="81ರ ವೃದ್ಧೆ, 24ರ ಯುವಕ: ಸೋಶಿಯಲ್ ಮೀಡಿಯಾ ಪ್ರೀತಿ, ಏರ್‌ಪೋರ್ಟ್‌ನಲ್ಲಿ ಭಾವುಕ ಭೇಟಿ! ವಿಡಿಯೊ ವೈರಲ್" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="g9hfv"&gt;&lt;b&gt;ಡಕಾರ್ (ಸೆನೆಗಲ್), ಆ. 6: &lt;/b&gt;ಪ್ರೀತಿಗೆ ವಯಸ್ಸಿನ ಹಂಗಿಲ್ಲ ಎಂಬ ಮಾತನ್ನು ಸಾಬೀತುಪಡಿಸುವ ರೀತಿಯಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಹೊಸ ಪ್ರೇಮಕಥೆಯೊಂದು ಸಖತ್ ಸದ್ದು ಮಾಡುತ್ತಿದೆ. ಫ್ರಾನ್ಸ್ ಮೂಲದ 81 ವರ್ಷದ ವೃದ್ಧೆ ಮತ್ತು ಆಫ್ರಿಕಾದ ಸೆನೆಗಲ್‌ನ 24 ವರ್ಷದ ಯುವಕನ ನಡುವೆ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿ, ಪ್ರೀತಿ ಚಿಗುರಿದೆ. ಇಬ್ಬರೂ ಸುಮಾರು ಎರಡು ವರ್ಷಗಳ ಕಾಲ ವೀಡಿಯೊ ಕರೆ ಹಾಗೂ ಸಂದೇಶಗಳ ಮೂಲಕ ನಿರಂತರ ಸಂಪರ್ಕದಲ್ಲಿದ್ದರು. ಆನ್‌ಲೈನ್ ಮೂಲಕ ಸುದೀರ್ಘ ಸಂಭಾಷಣೆ ನಡೆಸಿದ ನಂತರ, ಮಹಿಳೆಯು ಆ ಯುವಕನನ್ನು ನೇರವಾಗಿ ಭೇಟಿಯಾಗಲು ನಿರ್ಧರಿಸಿದರು. ಅದರಂತೆ ಸಾವಿರಾರು ಕಿಲೋ ಮೀಟರ್ ಪ್ರಯಾಣಿಸಿ ಸೆನೆಗಲ್‌ಗೆ ತಲುಪಿದರು. ಸದ್ಯ ಈ ವಿಚಾರ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ (Viral Video) Agide.&lt;/p&gt;&lt;h3 data-block-key="253fp"&gt;&lt;b&gt;ವಿಮಾನ ನಿಲ್ದಾಣದ ಭೇಟಿ ವೀಡಿಯೊ ವೈರಲ್&lt;/b&gt;&lt;/h3&gt;&lt;p data-block-key="f98bg"&gt;ಸೆನೆಗಲ್ ವಿಮಾನ ನಿಲ್ದಾಣದಲ್ಲಿ ಅವರಿಬ್ಬರ ಮೊದಲ ಭೇಟಿ ಅತ್ಯಂತ ಭಾವುಕವಾಗಿತ್ತು. ವೈರಲ್ ಆದ ವಿಡಿಯೊದಲ್ಲಿ ಇಬ್ಬರೂ ಪರಸ್ಪರ ಅಪ್ಪಿಕೊಳ್ಳುವುದು ಕಂಡುಬಂದಿದೆ. ಅಲ್ಲಿದ್ದ ವ್ಯಕ್ತಿಯೊಬ್ಬರು ಈ ಸುಂದರ ಕ್ಷಣವನ್ನು ಕ್ಯಾಮರಾದಲ್ಲಿ ಸೆರೆಹಿಡಿದಿದ್ದು, ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಕಾಡ್ಗಿಚ್ಚಿನಂತೆ ಹರಡಿದೆ. ಈ ವಿಶಿಷ್ಟ ಪ್ರೇಮಕಥೆಗೆ ನೆಟ್ಟಿಗರಿಂದ ವಿವಿಧ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.&lt;/p&gt;&lt;h3 data-block-key="avsp5"&gt;&lt;b&gt;ವೈರಲ್‌ ವಿಡಿಯೊ ಇಲ್ಲಿದೆ:&lt;/b&gt;&lt;/h3&gt;&lt;p data-block-key="9ad5l"&gt;&lt;/p&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="instagram-media" data-instgrm-captioned data-instgrm-permalink="https://www.instagram.com/reel/DYnNoIsvC_-/?utm_source=ig_embed&amp;amp;utm_campaign=loading" data-instgrm-version="14" style=" background:#FFF; border:0; border-radius:3px; box-shadow:0 0 1px 0 rgba(0,0,0,0.5),0 1px 10px 0 rgba(0,0,0,0.15); margin: 1px; max-width:540px; min-width:326px; padding:0; width:99.375%; width:-webkit-calc(100% - 2px); width:calc(100% - 2px);"&gt;&lt;div style="padding:16px;"&gt; &lt;a href="https://www.instagram.com/reel/DYnNoIsvC_-/?utm_source=ig_embed&amp;amp;utm_campaign=loading" style=" background:#FFFFFF; line-height:0; padding:0 0; text-align:center; text-decoration:none; width:100%;" target="_blank"&gt; &lt;div style=" display: flex; flex-direction: row; align-items: center;"&gt; &lt;div style="background-color: #F4F4F4; border-radius: 50%; flex-grow: 0; height: 40px; margin-right: 14px; width: 40px;"&gt;&lt;/div&gt; &lt;div style="display: flex; flex-direction: column; flex-grow: 1; justify-content: center;"&gt; &lt;div style=" background-color: #F4F4F4; border-radius: 4px; flex-grow: 0; height: 14px; margin-bottom: 6px; width: 100px;"&gt;&lt;/div&gt; &lt;div style=" background-color: #F4F4F4; border-radius: 4px; flex-grow: 0; height: 14px; width: 60px;"&gt;&lt;/div&gt;&lt;/div&gt;&lt;/div&gt;&lt;div style="padding: 19% 0;"&gt;&lt;/div&gt; &lt;div style="display:block; height:50px; margin:0 auto 12px; width:50px;"&gt;&lt;svg width="50px" height="50px" viewBox="0 0 60 60" version="1.1" xmlns="https://www.w3.org/2000/svg" xmlns:xlink="https://www.w3.org/1999/xlink"&gt;&lt;g stroke="none" stroke-width="1" fill="none" fill-rule="evenodd"&gt;&lt;g transform="translate(-511.000000, -20.000000)" fill="#000000"&gt;&lt;g&gt;&lt;path d="M556.869,30.41 C554.814,30.41 553.148,32.076 553.148,34.131 C553.148,36.186 554.814,37.852 556.869,37.852 C558.924,37.852 560.59,36.186 560.59,34.131 C560.59,32.076 558.924,30.41 556.869,30.41 M541,60.657 C535.114,60.657 530.342,55.887 530.342,50 C530.342,44.114 535.114,39.342 541,39.342 C546.887,39.342 551.658,44.114 551.658,50 C551.658,55.887 546.887,60.657 541,60.657 M541,33.886 C532.1,33.886 524.886,41.1 524.886,50 C524.886,58.899 532.1,66.113 541,66.113 C549.9,66.113 557.115,58.899 557.115,50 C557.115,41.1 549.9,33.886 541,33.886 M565.378,62.101 C565.244,65.022 564.756,66.606 564.346,67.663 C563.803,69.06 563.154,70.057 562.106,71.106 C561.058,72.155 560.06,72.803 558.662,73.347 C557.607,73.757 556.021,74.244 553.102,74.378 C549.944,74.521 548.997,74.552 541,74.552 C533.003,74.552 532.056,74.521 528.898,74.378 C525.979,74.244 524.393,73.757 523.338,73.347 C521.94,72.803 520.942,72.155 519.894,71.106 C518.846,70.057 518.197,69.06 517.654,67.663 C517.244,66.606 516.755,65.022 516.623,62.101 C516.479,58.943 516.448,57.996 516.448,50 C516.448,42.003 516.479,41.056 516.623,37.899 C516.755,34.978 517.244,33.391 517.654,32.338 C518.197,30.938 518.846,29.942 519.894,28.894 C520.942,27.846 521.94,27.196 523.338,26.654 C524.393,26.244 525.979,25.756 528.898,25.623 C532.057,25.479 533.004,25.448 541,25.448 C548.997,25.448 549.943,25.479 553.102,25.623 C556.021,25.756 557.607,26.244 558.662,26.654 C560.06,27.196 561.058,27.846 562.106,28.894 C563.154,29.942 563.803,30.938 564.346,32.338 C564.756,33.391 565.244,34.978 565.378,37.899 C565.522,41.056 565.552,42.003 565.552,50 C565.552,57.996 565.522,58.943 565.378,62.101 M570.82,37.631 C570.674,34.438 570.167,32.258 569.425,30.349 C568.659,28.377 567.633,26.702 565.965,25.035 C564.297,23.368 562.623,22.342 560.652,21.575 C558.743,20.834 556.562,20.326 553.369,20.18 C550.169,20.033 549.148,20 541,20 C532.853,20 531.831,20.033 528.631,20.18 C525.438,20.326 523.257,20.834 521.349,21.575 C519.376,22.342 517.703,23.368 516.035,25.035 C514.368,26.702 513.342,28.377 512.574,30.349 C511.834,32.258 511.326,34.438 511.181,37.631 C511.035,40.831 511,41.851 511,50 C511,58.147 511.035,59.17 511.181,62.369 C511.326,65.562 511.834,67.743 512.574,69.651 C513.342,71.625 514.368,73.296 516.035,74.965 C517.703,76.634 519.376,77.658 521.349,78.425 C523.257,79.167 525.438,79.673 528.631,79.82 C531.831,79.965 532.853,80.001 541,80.001 C549.148,80.001 550.169,79.965 553.369,79.82 C556.562,79.673 558.743,79.167 560.652,78.425 C562.623,77.658 564.297,76.634 565.965,74.965 C567.633,73.296 568.659,71.625 569.425,69.651 C570.167,67.743 570.674,65.562 570.82,62.369 C570.966,59.17 571,58.147 571,50 C571,41.851 570.966,40.831 570.82,37.631"&gt;&lt;/path&gt;&lt;/g&gt;&lt;/g&gt;&lt;/g&gt;&lt;/svg&gt;&lt;/div&gt;&lt;div style="padding-top: 8px;"&gt; &lt;div style=" color:#3897f0; font-family:Arial,sans-serif; font-size:14px; font-style:normal; font-weight:550; line-height:18px;"&gt;View this post on Instagram&lt;/div&gt;&lt;/div&gt;&lt;div style="padding: 12.5% 0;"&gt;&lt;/div&gt; &lt;div style="display: flex; flex-direction: row; margin-bottom: 14px; align-items: center;"&gt;&lt;div&gt; &lt;div style="background-color: #F4F4F4; border-radius: 50%; height: 12.5px; width: 12.5px; transform: translateX(0px) translateY(7px);"&gt;&lt;/div&gt; &lt;div style="background-color: #F4F4F4; height: 12.5px; transform: rotate(-45deg) translateX(3px) translateY(1px); width: 12.5px; flex-grow: 0; margin-right: 14px; margin-left: 2px;"&gt;&lt;/div&gt; &lt;div style="background-color: #F4F4F4; border-radius: 50%; height: 12.5px; width: 12.5px; transform: translateX(9px) translateY(-18px);"&gt;&lt;/div&gt;&lt;/div&gt;&lt;div style="margin-left: 8px;"&gt; &lt;div style=" background-color: #F4F4F4; border-radius: 50%; flex-grow: 0; height: 20px; width: 20px;"&gt;&lt;/div&gt; &lt;div style=" width: 0; height: 0; border-top: 2px solid transparent; border-left: 6px solid #f4f4f4; border-bottom: 2px solid transparent; transform: translateX(16px) translateY(-4px) rotate(30deg)"&gt;&lt;/div&gt;&lt;/div&gt;&lt;div style="margin-left: auto;"&gt; &lt;div style=" width: 0px; border-top: 8px solid #F4F4F4; border-right: 8px solid transparent; transform: translateY(16px);"&gt;&lt;/div&gt; &lt;div style=" background-color: #F4F4F4; flex-grow: 0; height: 12px; width: 16px; transform: translateY(-4px);"&gt;&lt;/div&gt; &lt;div style=" width: 0; height: 0; border-top: 8px solid #F4F4F4; border-left: 8px solid transparent; transform: translateY(-4px) translateX(8px);"&gt;&lt;/div&gt;&lt;/div&gt;&lt;/div&gt; &lt;div style="display: flex; flex-direction: column; flex-grow: 1; justify-content: center; margin-bottom: 24px;"&gt; &lt;div style=" background-color: #F4F4F4; border-radius: 4px; flex-grow: 0; height: 14px; margin-bottom: 6px; width: 224px;"&gt;&lt;/div&gt; &lt;div style=" background-color: #F4F4F4; border-radius: 4px; flex-grow: 0; height: 14px; width: 144px;"&gt;&lt;/div&gt;&lt;/div&gt;&lt;/a&gt;&lt;p style=" color:#c9c8cd; font-family:Arial,sans-serif; font-size:14px; line-height:17px; margin-bottom:0; margin-top:8px; overflow:hidden; padding:8px 0 7px; text-align:center; text-overflow:ellipsis; white-space:nowrap;"&gt;&lt;a href="https://www.instagram.com/reel/DYnNoIsvC_-/?utm_source=ig_embed&amp;amp;utm_campaign=loading" style=" color:#c9c8cd; font-family:Arial,sans-serif; font-size:14px; font-style:normal; font-weight:normal; line-height:17px; text-decoration:none;" target="_blank"&gt;A post shared by AR noticias (@ar_noticias)&lt;/a&gt;&lt;/p&gt;&lt;/div&gt;&lt;/blockquote&gt;
&lt;script async src="//www.instagram.com/embed.js"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="a9pu0"&gt;&lt;/p&gt;&lt;h3 data-block-key="ac16"&gt;&lt;b&gt;57 ವರ್ಷಗಳ ವಯಸ್ಸಿನ ವ್ಯತ್ಯಾಸ ಚರ್ಚೆಗೆ ಗ್ರಾಸ&lt;/b&gt;&lt;/h3&gt;&lt;p data-block-key="elkjc"&gt;81 ವರ್ಷದ ಮಹಿಳೆ ಹಾಗೂ 24 ವರ್ಷದ ಯುವಕನ ನಡುವೆ ಬರೋಬ್ಬರಿ 57 ವರ್ಷಗಳ ವಯಸ್ಸಿನ ಅಂತರವಿದೆ. ಇದೇ ಕಾರಣಕ್ಕೆ ಈ ಸಂಬಂಧವು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕೆಲವರು ಇದನ್ನು ನಿಜವಾದ ಪ್ರೀತಿಗೆ ಸಾಕ್ಷಿ ಎಂದು ಬಣ್ಣಿಸುತ್ತಿದ್ದರೆ, ಇನ್ನು ಕೆಲವರು ಈ ಸಂಬಂಧದ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ.&lt;/p&gt;&lt;h3 data-block-key="8vntc"&gt;&lt;b&gt;ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ&lt;/b&gt;&lt;/h3&gt;&lt;p data-block-key="1oe9f"&gt;ಈ ಅಸಾಧಾರಣ ಪ್ರೇಮಕಥೆಯು ಇಂಟರ್‌ನೆಟ್‌ ಜಗತ್ತಿನಲ್ಲಿ ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟುಹಾಕಿದೆ. ಅನೇಕ ನೆಟ್ಟಿಗರು ಪ್ರೀತಿಗೆ ವಯಸ್ಸಿನ ಹಿತಾಸಕ್ತಿಗಳಿಲ್ಲ ಎಂದು ಹೇಳಿ ಈ ಜೋಡಿಗೆ ತಮ್ಮ ಶುಭ ಹಾರೈಕೆಗಳನ್ನು ತಿಳಿಸುತ್ತಿದ್ದಾರೆ. ಆದರೆ ಮತ್ತೊಂದೆಡೆ, ಕೆಲವು ಬಳಕೆದಾರರು ಈ ಸಂಬಂಧದ ಹಿಂದೆ ಬೇರೆ ಏನಾದರೂ ಉದ್ದೇಶಗಳಿರಬಹುದು ಎಂದು ಅನುಮಾನ ವ್ಯಕ್ತಪಡಿಸಿ ಟೀಕಿಸುತ್ತಿದ್ದಾರೆ.&lt;/p&gt;&lt;h3 data-block-key="5i97o"&gt;&lt;b&gt;ಸೆಪ್ಟೆಂಬರ್‌ನಲ್ಲಿ ಮದುವೆಗೆ ತಯಾರಿ&lt;/b&gt;&lt;/h3&gt;&lt;p data-block-key="etl3q"&gt;ವರದಿಗಳ ಪ್ರಕಾರ, ಸೆನೆಗಲ್‌ನಲ್ಲಿ ಭೇಟಿಯಾದ ನಂತರ ಈ ಜೋಡಿ ಈಗ ಫ್ರಾನ್ಸ್‌ಗೆ ಹಿಂತಿರುಗಲು ಸಿದ್ಧತೆ ನಡೆಸುತ್ತಿದೆ. ಇಬ್ಬರೂ 2026ರ  ಸೆಪ್ಟೆಂಬರ್‌ನಲ್ಲಿ ಅಧಿಕೃತವಾಗಿ ವಿವಾಹವಾಗಲು ಮುಂದಾಗಿದ್ದಾರೆ. ವಿಮರ್ಶೆಗಳು ಏನೇ ಇದ್ದರೂ, ಇಬ್ಬರೂ ತಮ್ಮ ಕುಟುಂಬ ಮತ್ತು ಆಪ್ತರ ಸಮ್ಮುಖದಲ್ಲಿ ಹೊಸ ಜೀವನಕ್ಕೆ ಕಾಲಿಡಲು ಸಂಪೂರ್ಣ ಸಿದ್ಧತೆ ನಡೆಸುತ್ತಿದ್ದು, ಸದ್ಯ ಇವರ ಪ್ರೇಮಕಥೆ ತೀವ್ರ ಚರ್ಚೆಯಲ್ಲಿದೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಪ್ರಧಾನಿ ನರೇಂದ್ರ ಮೋದಿಗೆ ಕರೆ ಮಾಡಿದ  ಬೆಂಜಮಿನ್ ನೆತನ್ಯಾಹು; ಭಾರತ–ಇಸ್ರೇಲ್ ಬಾಂಧವ್ಯ ಮತ್ತಷ್ಟು ಬಲಪಡಿಸಲು ಮಾತುಕತೆ</title><link>https://vishwavani.news/national/modi-netanyahu-phone-call-india-israel-west-asia-talks-85818.html</link><guid>https://vishwavani.news/national/modi-netanyahu-phone-call-india-israel-west-asia-talks-85818.html</guid><pubDate>Thu, 06 Aug 2026 17:38:06 +0000</pubDate><description>&lt;![CDATA[Narendra Modi: ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ದೂರವಾಣಿ ಮೂಲಕ ಮಾತುಕತೆ ನಡೆಸಿ, ಭಾರತ–ಇಸ್ರೇಲ್ ವಿಶೇಷ ಕಾರ್ಯತಂತ್ರದ ಪಾಲುದಾರಿಕೆ ಹಾಗೂ ಪಶ್ಚಿಮ ಏಷ್ಯಾದ ಇತ್ತೀಚಿನ ಬೆಳವಣಿಗೆಗಳ ಕುರಿತು ಚರ್ಚೆ ನಡೆಸಿದರು. ಉಭಯ ನಾಯಕರು ವಿವಿಧ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ಮತ್ತಷ್ಟು ಬಲಪಡಿಸಲು ಬದ್ಧತೆ ವ್ಯಕ್ತಪಡಿಸಿ, ಮುಂದೆಯೂ ಸಂಪರ್ಕದಲ್ಲಿರಲು ಒಪ್ಪಿಗೆ ಸೂಚಿಸಿದರು.]]&gt;</description><dc:creator>&lt;![CDATA[Sushmitha Jain]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ದೇಶ]]&gt;</category><category>&lt;![CDATA[ರಾಜಕೀಯ]]&gt;</category><category>&lt;![CDATA[ವಿದೇಶ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/1000633413.original.jpg" class="attachment-large size-large wp-post-image" alt="ಪ್ರಧಾನಿ ನರೇಂದ್ರ ಮೋದಿಗೆ ಕರೆ ಮಾಡಿದ  ಬೆಂಜಮಿನ್ ನೆತನ್ಯಾಹು; ಭಾರತ–ಇಸ್ರೇಲ್ ಬಾಂಧವ್ಯ ಮತ್ತಷ್ಟು ಬಲಪಡಿಸಲು ಮಾತುಕತೆ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="c11vw"&gt;&lt;b&gt;ನವದೆಹಲಿ, ಆ. 7: &lt;/b&gt;ಪ್ರಧಾನ ಮಂತ್ರಿ ನರೇಂದ್ರ ಮೋದಿ &lt;a href="/national/wrong-parle-stock-hits-upper-circuit-after-modi-meloni-video-goes-viral-78689.html"&gt;&lt;b&gt;(PM Narendra Modi)&lt;/b&gt;&lt;/a&gt;&lt;b&gt; &lt;/b&gt;ಗುರುವಾರ ಇಸ್ರೇಲ್‌ನ ಪ್ರಧಾನಿ ಬೆಂಜಮಿನ್ ನೆತನ್ಯಾಹು &lt;a href="/foreign/netanyahu-praises-modi-india-support-bilateral-relations-85590.html"&gt;(&lt;b&gt;Benjamin Netanyahu)&lt;/b&gt;&lt;/a&gt; ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದರು. ಈ ವೇಳೆ ಭಾರತ–ಇಸ್ರೇಲ್ ವಿಶೇಷ ಕಾರ್ಯತಂತ್ರದ ಪಾಲುದಾರಿಕೆಯ (India-Israel Special Strategic Partnership) ಪ್ರಗತಿ ಪರಿಶೀಲನೆ ನಡೆಸಿದ ಇಬ್ಬರು ನಾಯಕರು, ಪಶ್ಚಿಮ ಏಷ್ಯಾದ (West Asia) ಇತ್ತೀಚಿನ ಬೆಳವಣಿಗೆಗಳ ಕುರಿತು ಅಭಿಪ್ರಾಯ ವಿನಿಮಯ ಮಾಡಿಕೊಂಡರು.&lt;/p&gt;&lt;p data-block-key="8ucqr"&gt;ಪ್ರಧಾನಮಂತ್ರಿ ಕಚೇರಿ (PMO) ಬಿಡುಗಡೆ ಮಾಡಿದ ಪ್ರಕಟಣೆಯ ಪ್ರಕಾರ, ಉಭಯ ನಾಯಕರು ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ಬಗ್ಗೆ ಚರ್ಚೆ ನಡೆಸಿದರು. ರಕ್ಷಣೆ, ಕೃಷಿ, ನಾವೀನ್ಯತೆ, ತಂತ್ರಜ್ಞಾನ, ಜಲ ನಿರ್ವಹಣೆ, ಸೈಬರ್ ಭದ್ರತೆ ಮತ್ತು ವ್ಯಾಪಾರ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಹಕಾರವನ್ನು ಇನ್ನಷ್ಟು ವಿಸ್ತರಿಸುವ ಬದ್ಧತೆಯನ್ನು ಪುನರುಚ್ಚರಿಸಿದರು.&lt;/p&gt;&lt;p data-block-key="b8mfa"&gt;"ಭಾರತ–ಇಸ್ರೇಲ್ ವಿಶೇಷ ಕಾರ್ಯತಂತ್ರದ ಪಾಲುದಾರಿಕೆಯಲ್ಲಿ ಸಾಧಿಸಿರುವ ನಿರಂತರ ಪ್ರಗತಿಯನ್ನು ಉಭಯ ನಾಯಕರು ಪರಿಶೀಲಿಸಿದರು. ಉಭಯ ರಾಷ್ಟ್ರಗಳ ಪರಸ್ಪರ ಹಿತಾಸಕ್ತಿಗಾಗಿ ವಿವಿಧ ಕ್ಷೇತ್ರಗಳಲ್ಲಿ ಸಹಕಾರವನ್ನು ಮತ್ತಷ್ಟು ಬಲಪಡಿಸಲು ಬದ್ಧತೆಯನ್ನು ವ್ಯಕ್ತಪಡಿಸಿದರು" ಎಂದು ಪಿಎಂಒ ತಿಳಿಸಿದೆ.&lt;/p&gt;&lt;h3 data-block-key="1tsjg"&gt;&lt;b&gt;ಪಶ್ಚಿಮ ಏಷ್ಯಾ ಬೆಳವಣಿಗೆಗಳ ಕುರಿತು ಚರ್ಚೆ&lt;/b&gt;&lt;/h3&gt;&lt;p data-block-key="8aghd"&gt;ಮಾತುಕತೆಯ ವೇಳೆ ಪಶ್ಚಿಮ ಏಷ್ಯಾದಲ್ಲಿನ ಇತ್ತೀಚಿನ ಬೆಳವಣಿಗೆಗಳು ಹಾಗೂ ಅಲ್ಲಿನ ಭದ್ರತಾ ಮತ್ತು ರಾಜತಾಂತ್ರಿಕ ಪರಿಸ್ಥಿತಿಗಳ ಕುರಿತೂ ಇಬ್ಬರು ನಾಯಕರು ಚರ್ಚೆ ನಡೆಸಿದರು. ಈ ಕುರಿತು ಹೆಚ್ಚಿನ ವಿವರಗಳನ್ನು ಪಿಎಂಒ ಬಹಿರಂಗಪಡಿಸಿಲ್ಲ.&lt;/p&gt;&lt;h3 data-block-key="1ci7q"&gt;&lt;b&gt;ಸಂಪರ್ಕ ಮುಂದುವರಿಸಲು ಒಪ್ಪಿಗೆ&lt;/b&gt;&lt;/h3&gt;&lt;p data-block-key="b0b05"&gt;ಮಾತುಕತೆಯ ಅಂತ್ಯದಲ್ಲಿ ಪ್ರಧಾನಿ ಮೋದಿ ಮತ್ತು ಪ್ರಧಾನಿ ನೆತನ್ಯಾಹು ಮುಂದೆಯೂ ಪರಸ್ಪರ ಸಂಪರ್ಕದಲ್ಲಿರಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ಪಿಎಂಒ ಪ್ರಕಟಣೆಯಲ್ಲಿ ತಿಳಿಸಿದೆ. ಭಾರತ ಮತ್ತು ಇಸ್ರೇಲ್ ನಡುವಿನ ಉನ್ನತ ಮಟ್ಟದ ಸಂಪರ್ಕ ಹಾಗೂ ಕಾರ್ಯತಂತ್ರದ ಸಹಭಾಗಿತ್ವವನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಈ ದೂರವಾಣಿ ಮಾತುಕತೆ ಮಹತ್ವ ಪಡೆದಿದೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>Vishwavani Impact: ಪಂಪ್‌ʼಸೆಟ್‌ಗಳಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಆರೋಪ: ತಮ್ಮ ಯಾವುದೇ ಕೈವಾಡ ಇಲ್ಲ ಎಂದು ಗ್ರಾಮಸ್ಥರಿಗೆ ಮನವರಿಕೆ</title><link>https://vishwavani.news/byline-stories/vishwavani-impact-villagers-convinced-of-no-involvement-on-their-part-85820.html</link><guid>https://vishwavani.news/byline-stories/vishwavani-impact-villagers-convinced-of-no-involvement-on-their-part-85820.html</guid><pubDate>Thu, 06 Aug 2026 17:31:15 +0000</pubDate><description>&lt;![CDATA[ವಿಶ್ವವಾಣಿಯಲ್ಲಿ ಹೆಸ್ಕಾಂ ಸಿಬ್ಬಂದಿಯ ಪಿತೂರಿ: ಪಂಪ್‌ʼಸೆಟ್‌ಗಳಿಗೆ ದೊರೆಯದ ವಿದ್ಯುತ್ ಎಂಬ ಶೀರ್ಷಿಕೆಯಲ್ಲಿ ಸುದ್ದಿ ಪ್ರಕಟಗೊಂಡಿತ್ತು. ಗ್ರಾಮಸ್ಥರು ಹಾಗೂ ಹೆಸ್ಕಾಂ ಉಪ ಕೇಂದ್ರದ ಶಾಖಾಧಿಕಾರಿ ಮಾರುತಿ ಹಟ್ಟಿ ಆರೋಪದ ಬೆನ್ನಲ್ಲೆ ಗ್ರಾಮಕ್ಕೆ ಆಗಮಿಸಿದ ಹಿಂದೆ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಸಿಬ್ಬಂದಿಗಳು ತಮ್ಮ ಮೇಲೆ ವಿನಾಕಾರಣ ಆರೋಪವಿದೆ.]]&gt;</description><dc:creator>&lt;![CDATA[Ashok Nayak]]&gt;</dc:creator><category>&lt;![CDATA[ಬೆಳಗಾವಿ]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕರ್ನಾಟಕ]]&gt;</category><category>&lt;![CDATA[ಬೈಲೈನ್‌ ಸ್ಟೋರೀಸ್‌]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/elecric.original.jpg" class="attachment-large size-large wp-post-image" alt="Vishwavani Impact: ಪಂಪ್‌ʼಸೆಟ್‌ಗಳಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಆರೋಪ: ತಮ್ಮ ಯಾವುದೇ ಕೈವಾಡ ಇಲ್ಲ ಎಂದು ಗ್ರಾಮಸ್ಥರಿಗೆ ಮನವರಿಕೆ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="u3khq"&gt;&lt;b&gt;ರಾಮದುರ್ಗ:&lt;/b&gt; ತಾಲೂಕಿನ ಸುರೇಬಾನ ವಿದ್ಯುತ್ ಉಪಕೇಂದ್ರದ ವ್ಯಾಪ್ತಿಯ ಚಿಕ್ಕತಡಸಿ ಗ್ರಾಮದ ಜಮೀನೊಂದರಲ್ಲಿ ವಿದ್ಯುತ್ ವಿತರಣಾ ಕೇಂದ್ರದ ಶಾಖಾಧಿಕಾರಿ ಮಾರುತಿ ಹಟ್ಟಿ ಕಿಡಗೇಡಿಗಳನ್ನು ಬಳಕೆ ಮಾಡಿಕೊಂಡು ಹಿಂದೆ ವರ್ಗಾವಣೆಗೊಂಡ ಇಲಾಖೆಯ ಸಿಬ್ಬಂದಿ ಲೈನ್‌ಪಾರ್ಟ ಮಾಡುತ್ತಿರ ಬಹುದು ಎಂದು ಗ್ರಾಮಸ್ಥರು ಆರೋಪಿಸಿದ್ದೇವು. ಆದರೆ ಹಿಂದಿನ ಸಿಬ್ಬಂದಿ ಗ್ರಾಮಕ್ಕೆ ಆಗಮಿಸಿ ತಮ್ಮ ಯಾವುದೇ ಕೈವಾಡ ಇಲ್ಲ ಎಂದು ಗ್ರಾಮಸ್ಥರಿಗೆ ಮನವರಿಕೆ ಮಾಡಿದ್ದಾರೆ ಎಂದು ಗ್ರಾಮದ ಮುಖಂಡ ರಮೇಶ ಹೊಳೆಯನ್ನವರ ತಿಳಿಸಿದ್ದಾರೆ.&lt;/p&gt;&lt;p data-block-key="1gda2"&gt;&lt;b&gt;ವಿಶ್ವವಾಣಿಯಲ್ಲಿ ಹೆಸ್ಕಾಂ ಸಿಬ್ಬಂದಿಯ ಪಿತೂರಿ: ಪಂಪ್‌ʼಸೆಟ್‌ಗಳಿಗೆ ದೊರೆಯದ ವಿದ್ಯುತ್&lt;/b&gt; ಎಂಬ ಶೀರ್ಷಿಕೆಯಲ್ಲಿ ಸುದ್ದಿ ಪ್ರಕಟಗೊಂಡಿತ್ತು. ಗ್ರಾಮಸ್ಥರು ಹಾಗೂ ಹೆಸ್ಕಾಂ ಉಪ ಕೇಂದ್ರದ ಶಾಖಾಧಿಕಾರಿ ಮಾರುತಿ ಹಟ್ಟಿ ಆರೋಪದ ಬೆನ್ನಲ್ಲೆ ಗ್ರಾಮಕ್ಕೆ ಆಗಮಿಸಿದ ಹಿಂದೆ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಸಿಬ್ಬಂದಿಗಳು ತಮ್ಮ ಮೇಲೆ ವಿನಾಕಾರಣ ಆರೋಪವಿದೆ. ರೈತರ ವಿಷಯದಲ್ಲಿ ನಾವು ತಪ್ಪು ಮಾಡುವುದಿಲ್ಲ. ಲೈನ್‌ಪಾರ್ಟ ನಾವೇ ಮಾಡಿಸುತ್ತಿದ್ದೇವೆ ಎಂಬ ಆರೋಪ ಸತ್ಯಕ್ಕೆ ದೂರವಾದ ಮಾತು. ರೈತ ಸ್ನೇಹಿಯಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಸ್ಪಷ್ಠೀಕರಣ ನೀಡಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.&lt;/p&gt;&lt;p data-block-key="b159g"&gt;&lt;b&gt;ಇದನ್ನೂ ಓದಿ:&lt;/b&gt; &lt;a href="/karnataka/belagavi/owner-stole-from-his-own-gold-shop-to-get-insurance-money-in-belagavi-84353.html"&gt;Belagavi News: ಇನ್ಶೂರೆನ್ಸ್‌ ಹಣದ ಆಸೆಗಾಗಿ ಚಿನ್ನದಂಗಡಿಯಲ್ಲಿ ಕಳ್ಳತನದ ನಾಟಕ; ಮಾಲೀಕ ಅರೆಸ್ಟ್‌&lt;/a&gt;&lt;/p&gt;&lt;p data-block-key="aq8cf"&gt;ಪತ್ರಿಕೆಯಲ್ಲಿ ವರದಿ ಪ್ರಕಟಗೊಂಡ ನಂತರ ಹೆಸ್ಕಾಂ ಇಲಾಖೆಯ ಅಧಿಕಾರಿಗಳು ರೈತರ ಪಂಪ್‌ʼಸೆಟ್‌ಗಳಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಕೆಲಸ ನಿರ್ವಹಿಸುತ್ತೇವೆ ಎಂದು ತಿಳಿಸಿದ್ದಾರೆ. ಲೈನ್‌ಪಾರ್ಟ ಉದ್ದೇಶಪೂರ್ವಕವಾಗಿ ಮಾಡುವವರನ್ನು ಪತ್ತೆ ಹಚ್ಚಲು ಶಾಖಾಧಿಕಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿ, ತಪ್ಪಿತಸ್ಥರ ಮೇಲೆ ಶಿಕ್ಷೆಯಾಗುವಂತೆ ನೋಡಿ ಕೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.&lt;/p&gt;&lt;p data-block-key="dn849"&gt;ಈ ಸಂದರ್ಭದಲ್ಲಿ ರೈತರಾದ ರಮೇಶ ಹೊಳೆಯನ್ನವರ, ಕಲ್ಲನಗೌಡ ಪಾಟೀಲ, ಕಲ್ಮೇಶ ರೋಣದ, ಮಂಜು ಹರನಟ್ಟಿ, ಶಿವಯೋಗಿ ಹರನಟ್ಟಿ, ಶಿವಯೋಗಿ ರೋಣದ, ಮಹೇಶ ಹರನಟ್ಟಿ, ಮಾರುತಿ ಉಪ್ಪಾರ, ಬಸನಗೌಡ ಪಾಟೀಲ, ನಾಗನಗೌಡ ಕುಲಕರ್ಣಿ, ಶಿವನಗೌಡ ಕುಲಕರ್ಣಿ, ಸಂತೋಷ ಹರನಟ್ಟಿ, ಶಿವಪ್ಪ ಹರನಟ್ಟಿ, ಆನಂದ ಬೂದನ್ನವರ, ಈರಣ್ಣ ನಾಯ್ಕರ, ಬೈಲಪ್ಪ ಹರನಟ್ಟಿ, ಫಕೀರಪ್ಪ ರೋಣದ, ಮೈಲಾರಿ ಹಳ್ಳಿ ಸೇರಿದಂತೆ ಇತರರಿದ್ದರು.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಭಾರತ ತಂಡದಲ್ಲಿ ಆಕಿಬ್‌ ನಬಿಗೆ ಚಾನ್ಸ್‌ ನೀಡಿದ್ದ ಅಗರ್ಕರ್‌, ಗಂಭೀರ್‌ ವಿರುದ್ಧ ವಾಸೀಮ್‌ ಜಾಫರ್‌ ಕಿಡಿ!</title><link>https://vishwavani.news/sports/cricket/ajit-agarkar-gautam-gambhir-slammed-for-picking-auqib-nabi-as-replacement-for-sri-lanka-tests-85819.html</link><guid>https://vishwavani.news/sports/cricket/ajit-agarkar-gautam-gambhir-slammed-for-picking-auqib-nabi-as-replacement-for-sri-lanka-tests-85819.html</guid><pubDate>Thu, 06 Aug 2026 17:24:56 +0000</pubDate><description>&lt;![CDATA[ಶ್ರೀಲಂಕಾ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಗಾಯಾಳು ಜಸ್‌ಪ್ರೀತ್‌ ಬುಮ್ರಾ ಅವರ ಸ್ಥಾನಕ್ಕೆ ಜಮ್ಮು ಮತ್ತು ಕಾಶ್ಮೀರದ ಆಕಿಬ್‌ ನಬಿ ಅವರನ್ನು ಆಯ್ಕೆ ಮಾಡಿರುವುದಕ್ಕೆ ಬಿಸಿಸಿಐ ಸೆಲೆಕ್ಟರ್‌ ಅಜಿತ್‌ ಅಗರ್ಕರ್‌ ಹಾಗೂ ಟೀಮ್‌ ಇಂಡಿಯಾ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ ಅವರ ವಿರುದ್ಧ ಮಾಜಿ ಟೆಸ್ಟ್‌ ಆರಂಭಿಕ ವಾಸೀಮ್‌ ಜಾಫರ್‌ ಕಿಡಿಕಾರಿದ್ದಾರೆ.]]&gt;</description><dc:creator>&lt;![CDATA[Ramesh Kote]]&gt;</dc:creator><category>&lt;![CDATA[ಕ್ರಿಕೆಟ್‌]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕ್ರೀಡೆ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Wasim_Jaffer-Aquib_Nabi.original.jpg" class="attachment-large size-large wp-post-image" alt="ಭಾರತ ತಂಡದಲ್ಲಿ ಆಕಿಬ್‌ ನಬಿಗೆ ಚಾನ್ಸ್‌ ನೀಡಿದ್ದ ಅಗರ್ಕರ್‌, ಗಂಭೀರ್‌ ವಿರುದ್ಧ ವಾಸೀಮ್‌ ಜಾಫರ್‌ ಕಿಡಿ!" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="u6xbp"&gt;&lt;b&gt;ನವದೆಹಲಿ:&lt;/b&gt; ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಜಸ್‌ಪ್ರೀತ್‌ ಬುಮ್ರಾ (Jasprit Bumrah) ಬದಲಿಗೆ ಜಮ್ಮು ಮತ್ತು ಕಾಶ್ಮೀರದ ವೇಗದ ಬೌಲರ್ ಆಕಿಬ್ ನಬಿ (Auqib Nabi) ಅವರನ್ನು ಆಯ್ಕೆ ಮಾಡಿರುವ ಬಿಸಿಸಿಐ ಆಯ್ಕೆ ಸಮಿತಿಯ ನಿರ್ಧಾರವನ್ನು ಭಾರತದ ಮಾಜಿ ಬ್ಯಾಟರ್ ವಾಸೀಮ್‌ ಜಾಫರ್ (Wasim Jaffer) ಟೀಕಿಸಿದ್ದಾರೆ. ಕಳೆದ ರಣಜಿ ಟ್ರೋಫಿ ಟೂರ್ನಿಯಲ್ಲಿ ಜಮ್ಮು ಮತ್ತು ಕಾಶ್ಮೀರ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಆಕಿಬ್ ನಬಿ, ಬುಮ್ರಾ ಸಂಪೂರ್ಣ ಫಿಟ್ನೆಸ್ ಪಡೆಯಲು ವಿಫಲವಾದ ಹಿನ್ನೆಲೆಯಲ್ಲಿ ಗಾಲೆ ಮತ್ತು ಕೊಲಂಬೊದಲ್ಲಿ ನಡೆಯಲಿರುವ ಟೆಸ್ಟ್‌ಗಳಿಗೆ ಮೊದಲ ಬಾರಿ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ.&lt;/p&gt;&lt;p data-block-key="1s5gt"&gt;ಆದರೆ, ಜಸ್‌ಪ್ರೀತ್‌ ಬುಮ್ರಾ ಅವರ ಬದಲಿಯಾಗಿ ಆಕಿಬ್ ನಬಿ ಆಯ್ಕೆಯಾಗುವಷ್ಟು ಅರ್ಹತೆ ಇನ್ನೂ ಗಳಿಸಿಲ್ಲ ಎಂಬ ಅಭಿಪ್ರಾಯವನ್ನು ವಾಸೀಮ್‌ ಜಾಫರ್ ವ್ಯಕ್ತಪಡಿಸಿದ್ದಾರೆ. ಆದರೂ, "ತಡವಾಗಿ ಅವಕಾಶ ಸಿಕ್ಕರೂ ಪರವಾಗಿಲ್ಲ, ಅವಕಾಶ ಸಿಗದಿರುವುದಕ್ಕಿಂತ ಇದು ಉತ್ತಮ" ಎಂದು ಅವರು ಹೇಳಿದ್ದಾರೆ.&lt;/p&gt;&lt;p data-block-key="6u644"&gt;ಇದು ಆಕಿಬ್ ನಬಿಗೆ ದೊಡ್ಡ ಸಾಧನೆ ಮತ್ತು ಅತ್ಯಂತ ಸಂತೋಷದ ಕ್ಷಣ. ಇಷ್ಟು ಉತ್ತಮ ಪ್ರದರ್ಶನ ನೀಡಿದ ನಂತರ ಅವರು ಬದಲಿ ಆಟಗಾರನಾಗಿ ತಂಡಕ್ಕೆ ಬರಬೇಕಾದ ಪರಿಸ್ಥಿತಿ ಬರಬಾರದು," ಎಂದು ವಾಸೀಮ್‌ ಜಾಫರ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.&lt;/p&gt;&lt;p data-block-key="ekbvd"&gt;&lt;a href="/sports/cricket/ind-vs-sl-injury-scare-for-india-captain-shubman-gill-before-first-test-against-sri-lanka-85815.html"&gt;&lt;b&gt;IND vs SL: ಟೆಸ್ಟ್‌ ಸರಣಿಯ ಆರಂಭಕ್ಕೂ ಮುನ್ನ ಭಾರತ ತಂಡಕ್ಕೆ ಶುಭಮನ್‌ ಗಿಲ್‌ರ ಗಾಯದ ಭೀತಿ!&lt;/b&gt;&lt;/a&gt;&lt;/p&gt;&lt;p data-block-key="c7e7l"&gt;ಕಳೆದ ರಣಜಿ ಟ್ರೋಫಿ ಋತುವಿನಲ್ಲಿ ಆಕಿಬ್ ನಬಿ 60 ವಿಕೆಟ್‌ಗಳನ್ನು ಕಬಳಿಸಿ, ಜಮ್ಮು ಮತ್ತು ಕಾಶ್ಮೀರ ತಂಡ ತನ್ನ ಚೊಚ್ಚಲ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇಂತಹ ಪ್ರದರ್ಶನದ ಆಧಾರದ ಮೇಲೆ ಅವರನ್ನು ಆರಂಭದಲ್ಲೇ ಭಾರತ ತಂಡಕ್ಕೆ ಆಯ್ಕೆ ಮಾಡಬೇಕಾಗಿತ್ತು, ಬದಲಿ ಆಟಗಾರನಾಗಿ ಅಲ್ಲ ಎಂದು ಜಾಫರ್ ಅಭಿಪ್ರಾಯಪಟ್ಟರು.&lt;/p&gt;&lt;p data-block-key="793kl"&gt;"ತಡವಾದರೂ ಅವಕಾಶ ಸಿಕ್ಕಿರುವುದು ಸಂತೋಷದ ವಿಷಯ. ಅವರು ಆರಂಭಿಕ ತಂಡದಲ್ಲೇ ಸ್ಥಾನ ಪಡೆಯಲು ಸಂಪೂರ್ಣ ಅರ್ಹರಾಗಿದ್ದರು. ಅವರಿಗಾಗಿ ನನಗೆ ತುಂಬಾ ಸಂತೋಷವಾಗಿದೆ," ಎಂದು ಜಾಫರ್ ಹೇಳಿದ್ದಾರೆ. ಇದೀಗ ಆಕಿಬ್ ನಬಿ, ಕೊಲಂಬೊದಲ್ಲಿ ಶ್ರೀಲಂಕಾ ಇಲೆವೆನ್ ವಿರುದ್ಧ ನಡೆಯಲಿರುವ ಭಾರತ ತಂಡದ ಮೂರು ದಿನಗಳ ಅಭ್ಯಾಸ ಪಂದ್ಯದ ಮುನ್ನ ನೆಟ್‌ಗಳಲ್ಲಿ ಬೌಲಿಂಗ್ ಅಭ್ಯಾಸ ನಡೆಸುತ್ತಿರುವುದು ಕಂಡುಬಂದಿದೆ.&lt;/p&gt;&lt;p data-block-key="4dtcs"&gt;&lt;a href="/sports/cricket/batting-great-sunil-gavaskar-picks-indias-world-cup-2027-squad-85801.html"&gt;&lt;b&gt;2027ರ ಏಕದಿನ ವಿಶ್ವಕಪ್‌ ಟೂರ್ನಿಗೆ ಭಾರತ ತಂಡವನ್ನು ಆರಿಸಿದ ಸುನೀಲ್‌ ಗವಾಸ್ಕರ್‌!&lt;/b&gt;&lt;/a&gt;&lt;/p&gt;&lt;p data-block-key="ar269"&gt;ದೇಶಿ ಕ್ರಿಕೆಟ್‌ನಲ್ಲಿ ಸತತವಾಗಿ ಉತ್ತಮ ಪ್ರದರ್ಶನ ನೀಡಿದ್ದ ಆಕಿಬ್ ನಬಿ, 2026ರ ಐಪಿಎಲ್ ಟೂರ್ನಿಯಲ್ಲಿ ಮೊದಲ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡದೊಂದಿಗೆ ಒಪ್ಪಂದ ಪಡೆದಿದ್ದರು. ಆದರೆ ಐದು ಪಂದ್ಯಗಳಲ್ಲಿ ಆಡಿದರೂ ಅವರಿಗೆ ಒಂದೇ ಒಂದು ವಿಕೆಟ್ ಕೂಡ ಸಿಗಲಿಲ್ಲ. ಇದರ ಬಳಿಕ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದ ಭಾರತ 'ಎ' ತಂಡದಲ್ಲೂ ಅವರು ಸ್ಥಾನ ಪಡೆದಿದ್ದರು. ಅಲ್ಲಿ ನಡೆದಿದ್ದ ಎರಡು ನಾಲ್ಕು ದಿನಗಳ ಪಂದ್ಯಗಳಲ್ಲಿ ಆರು ವಿಕೆಟ್‌ಗಳನ್ನು ಕಬಳಿಸಿ ಗಮನ ಸೆಳೆದರು. ಆ ಸರಣಿಯನ್ನು ಭಾರತ 'ಎ' ತಂಡ 1-0 ಅಂತರದಿಂದ ತನ್ನದಾಗಿಸಿಕೊಂಡಿತ್ತು.&lt;/p&gt;&lt;p data-block-key="20srq"&gt;ಇದಕ್ಕೂ ಮುನ್ನ ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೆ ಆಕಿಬ್ ನಬಿ ನೆಟ್ ಬೌಲರ್ ಆಗಿ ಭಾರತ ತಂಡದೊಂದಿಗೆ ಇದ್ದರು. ಇದೀಗ ಅವರ ನಿರಂತರ ಪರಿಶ್ರಮ ಮತ್ತು ದೇಶಿ ಕ್ರಿಕೆಟ್‌ನಲ್ಲಿನ ಉತ್ತಮ ಪ್ರದರ್ಶನವನ್ನು ಪರಿಗಣಿಸಿರುವ ಆಯ್ಕೆ ಸಮಿತಿ, ಮೊದಲ ಬಾರಿ ಭಾರತ ರಾಷ್ಟ್ರೀಯ ಟೆಸ್ಟ್ ತಂಡದಲ್ಲಿ ಅವರಿಗೆ ಅಧಿಕೃತ ಸ್ಥಾನ ನೀಡಿದೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>“ಹೆಣ್ಣು ಮಗು ಹುಟ್ಟಿದರೂ ಕೇಂದ್ರ ಸರ್ಕಾರವನ್ನೇ ದೂಷಿಸುತ್ತೀರಿ”: ವಿವಾದ ಹುಟ್ಟು ಹಾಕಿದ ಬಿಜೆಪಿ ಶಾಸಕ</title><link>https://vishwavani.news/national/you-blame-the-centre-even-for-the-birth-of-a-girl-child-aap-slams-bjp-mla-ashwani-sharma-over-remark-85802.html</link><guid>https://vishwavani.news/national/you-blame-the-centre-even-for-the-birth-of-a-girl-child-aap-slams-bjp-mla-ashwani-sharma-over-remark-85802.html</guid><pubDate>Thu, 06 Aug 2026 17:19:05 +0000</pubDate><description>&lt;![CDATA[AAP Slams BJP MLA: ಪಂಜಾಬ್ ಬಿಜೆಪಿ ಶಾಸಕ ಅಶ್ವನಿ ಶರ್ಮಾ ಹೆಣ್ಣುಮಕ್ಕಳ ಜನನ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದಕ್ಕೆ ಆಡಳಿತಾರೂಢ ಆಮ್ ಆದ್ಮಿ ಪಕ್ಷ (ಎಎಪಿ) ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಯಾರದ್ದಾದರೂ ಕುಟುಂಬದಲ್ಲಿ ಹೆಣ್ಣು ಮಗು ಹುಟ್ಟಿದರೆ ಅದು ಕೂಡ ಕೇಂದ್ರದ ತಪ್ಪಾಗುತ್ತದೆ ಎಂದು ಶಾಸಕರು ಹೇಳಿದ್ದು ವಿವಾದಕ್ಕೆ ಕಾರಣವಾಗಿದೆ.]]&gt;</description><dc:creator>&lt;![CDATA[Priyanka P]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ದೇಶ]]&gt;</category><category>&lt;![CDATA[ರಾಜಕೀಯ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/AAP_Slams_BJP_MLA.original.jpg" class="attachment-large size-large wp-post-image" alt="“ಹೆಣ್ಣು ಮಗು ಹುಟ್ಟಿದರೂ ಕೇಂದ್ರ ಸರ್ಕಾರವನ್ನೇ ದೂಷಿಸುತ್ತೀರಿ”: ವಿವಾದ ಹುಟ್ಟು ಹಾಕಿದ ಬಿಜೆಪಿ ಶಾಸಕ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="rnsgb"&gt;&lt;b&gt;ಚಂಡೀಗಢ, ಆ. 6:&lt;/b&gt; ಪಂಜಾಬ್ ವಿಧಾನಸಭೆಯಲ್ಲಿ ಗಣಿಗಾರಿಕೆ ಆದಾಯದ ಕುರಿತು ನಡೆದ ತೀವ್ರ ಚರ್ಚೆಯು ಅನಿರೀಕ್ಷಿತ ತಿರುವು ಪಡೆದುಕೊಂಡಿತು. ಬಿಜೆಪಿ ಶಾಸಕ ಅಶ್ವನಿ ಶರ್ಮಾ&lt;b&gt; &lt;/b&gt;(MLA Ashwani Sharma) ಈ ವೇಳೆ ಹೆಣ್ಣುಮಕ್ಕಳ ಜನನ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದಕ್ಕೆ ಆಡಳಿತಾರೂಢ ಆಮ್ ಆದ್ಮಿ ಪಕ್ಷ &lt;a href="https://vishwavani.news/national/relation-with-aap-ex-civil-servant-quit-cockroach-janata-party-78932.html"&gt;&lt;b&gt;(Aam Aadmi Party)&lt;/b&gt;&lt;/a&gt;&lt;b&gt; &lt;/b&gt;ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಮಹಿಳೆಯರ ಬಗ್ಗೆ ಅವರು ತಾರತಮ್ಯದ ಮನೋಭಾವ ಪ್ರದರ್ಶಿಸಿದ್ದಾರೆ ಎಂದು ಎಎಪಿ ಆರೋಪಿಸಿತು.&lt;/p&gt;&lt;p data-block-key="f9cpt"&gt;ಪಂಜಾಬ್ ಬಿಜೆಪಿಯ ಮಾಜಿ ಅಧ್ಯಕ್ಷರಾಗಿದ್ದ ಅಶ್ವನಿ ಶರ್ಮಾ ನಂತರ ಕ್ಷಮೆಯಾಚಿಸಿ, ವ್ಯಾಪಕವಾಗಿ ಬಳಸಲಾಗುತ್ತಿರುವ ಒಂದು ಉದಾಹರಣೆಯನ್ನು ಉಲ್ಲೇಖಿಸಿರುವುದಾಗಿ ಹೇಳಿದರು. ಗಣಿ ಮತ್ತು ಭೂವಿಜ್ಞಾನ ಸಚಿವ ನರಿಂದರ್ ಕುಮಾರ್ ಗೋಯಲ್ ರಾಜ್ಯವು ಈ ವಲಯದಿಂದ ಗರಿಷ್ಠ ಆದಾಯವನ್ನು ಗಳಿಸಲು ಸಾಧ್ಯವಾಗದಿರುವ ಕಾರಣ ಕೇಂದ್ರವನ್ನು ದೂಷಿಸಿದಾಗ ವಿವಾದ ಆರಂಭವಾಯಿತು.&lt;/p&gt;&lt;p data-block-key="22rgp"&gt;“ಕೇಂದ್ರ ಸರ್ಕಾರ ನಮಗೆ ಬೆಂಬಲ ನೀಡಿದ್ದರೆ, ಅರವಿಂದ್ ಕೇಜ್ರಿವಾಲ್ ಭರವಸೆ ನೀಡಿದಂತೆ ಗಣಿಗಾರಿಕೆ ಆದಾಯ 20,000 ಕೋಟಿ ರುಪಾಯಿ ತಲುಪುತ್ತಿತ್ತು. ಪಂಜಾಬ್ ಅಭಿವೃದ್ಧಿ ಹೊಂದುವುದನ್ನು ಕೇಂದ್ರ ಸರ್ಕಾರ ಬಯಸುವುದಿಲ್ಲ. ಅಕ್ರಮ ಗಣಿಗಾರಿಕೆಯ ಪ್ರತಿಯೊಂದು ದೂರಿನ ಮೇಲೂ ನಾವು ಕ್ರಮ ಕೈಗೊಳ್ಳುತ್ತೇವೆ. ಅಗತ್ಯವಿರುವಲ್ಲೆಲ್ಲ ಎಫ್‌ಐಆರ್‌ಗಳನ್ನು ದಾಖಲಿಸುತ್ತೇವೆ. ಅಲ್ಲದೆ ಅಕ್ರಮ ಗಣಿಗಾರಿಕೆಯ ವಿರುದ್ಧದ ನಮ್ಮ ಕ್ರಮಕ್ಕಾಗಿ ಕೇಂದ್ರ ಸರ್ಕಾರದಿಂದ ಮೆಚ್ಚುಗೆಯ ಪ್ರಶಸ್ತಿಯನ್ನು ಸಹ ಪಡೆದಿದ್ದೇವೆ” ಎಂದು ಗೋಯಲ್ ಹೇಳಿದರು.&lt;/p&gt;&lt;p data-block-key="cdpom"&gt;&lt;a href="https://vishwavani.news/national/punjab-sangrur--bjp-office-petrol-bomb-attack-investigation-84923.html"&gt;&lt;b&gt;ಪಂಜಾಬ್ ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ದಾಳಿ: ಕಾನೂನು ಸುವ್ಯವಸ್ಥೆ ಬಗ್ಗೆ ಸರ್ಕಾರಕ್ಕೆ ಬಿಜೆಪಿ ಪ್ರಶ್ನೆ&lt;/b&gt;&lt;/a&gt;&lt;/p&gt;&lt;h3 data-block-key="5dv4g"&gt;&lt;b&gt;ವಿವಾದದ ಕಿಡಿ ಹೊತ್ತಿದ್ದು ಹೇಗೆ?&lt;/b&gt;&lt;/h3&gt;&lt;p data-block-key="3envn"&gt;ಕೇಂದ್ರ ಸರ್ಕಾರದ ಮೇಲೆ ಪದೇ ಪದೆ ಆರೋಪ ಹೊರಿಸುತ್ತಿರುವುದಕ್ಕೆ ಸಿಟ್ಟಿಗೆದ್ದ ಅಶ್ವನಿ ಶರ್ಮಾ, ʼʼಯಾರದ್ದಾದರೂ ಕುಟುಂಬದಲ್ಲಿ ಹೆಣ್ಣು ಮಗು ಹುಟ್ಟಿದರೆ ಅದು ಕೂಡ ಕೇಂದ್ರದ ತಪ್ಪಾಗುತ್ತದೆ. ಆದರೆ ಗಂಡು ಮಗು ಹುಟ್ಟಿದರೆ ಅದು ನಿಮ್ಮ ಕಠಿಣ ಪರಿಶ್ರಮದಿಂದ ಎಂಬಂತೆ ವರ್ತಿಸುತ್ತೀರಿ. ಎಲ್ಲದಕ್ಕೂ ಕೇಂದ್ರವನ್ನೇ ದೂಷಿಸುತ್ತೀರಿ” ಎಂದು ಎಎಪಿಯನ್ನು ಶರ್ಮಾ ತರಾಟೆಗೆ ತೆಗೆದುಕೊಂಡರು.&lt;/p&gt;&lt;p data-block-key="b0m1s"&gt;ಇದು ಆಪ್ ನಾಯಕರ ಆಕ್ರೋಶಕ್ಕೆ ಕಾರಣವಾಯಿತು. “ನೀವು ಹುಡುಗರು ಮತ್ತು ಹುಡುಗಿಯರ ನಡುವೆ ವ್ಯತ್ಯಾಸ ಮಾಡುತ್ತೀರಾ? ಹುಡುಗಿಯರು ಇಂದು ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಿದ್ದಾರೆ. ನಿಮ್ಮ ಪ್ರಧಾನಿ 'ಬೇಟಿ ಬಚಾವೋ, ಬೇಟಿ ಪಡಾವೋ' ಬಗ್ಗೆ ಮಾತನಾಡುತ್ತಾರೆ. ಆದರೆ, ಹೆಣ್ಣುಮಕ್ಕಳು ಟ್ರೋಲ್‌ಗೆ ಒಳಗಾಗುತ್ತಿದ್ದಾರೆ. ಅಶ್ವನಿ ಶರ್ಮಾ ಪ್ರತಿ ಹೆಣ್ಣು ಮಗುವಿನ ಕ್ಷಮೆಯಾಚಿಸಬೇಕು. ಅವರು ತಮ್ಮ ಕಿವಿಗಳನ್ನು ಹಿಡಿದು ಕ್ಷಮೆಯಾಚಿಸಬೇಕು” ಎಂದು ಸಚಿವ ಅಮನ್ ಅರೋರಾ ಹೇಳಿದರು.&lt;/p&gt;&lt;p data-block-key="44tkb"&gt;ಈ ಗದ್ದಲದ ನಂತರ ತಮ್ಮ ಹೇಳಿಕೆಗಳಿಗೆ ಸ್ಪಷ್ಟನೆ ನೀಡಿದ ಶರ್ಮಾ, ಪಂಜಾಬ್‌ನಲ್ಲಿ ಪ್ರಚಲಿತದಲ್ಲಿರುವ ಒಂದು ಪದಗುಚ್ಛವನ್ನು ತಾವು ಬಳಸಿರುವುದಾಗಿ ಹೇಳಿದರು. “ನಾನು ಪಂಜಾಬ್‌ನಲ್ಲಿ ಸಾಮಾನ್ಯವಾಗಿ ಮಾತನಾಡುವ ಒಂದು ನುಡಿಗಟ್ಟು ಬಳಸಿದ್ದೇನೆ. ಅದರ ನಂತರವೂ, ಆ ಹೇಳಿಕೆ ಅನುಚಿತವೆಂದು ಭಾವಿಸಿದರೆ, ಅದನ್ನು ದಾಖಲೆಯಿಂದ ತೆಗೆದುಹಾಕಬೇಕು. ನಮ್ಮ ಹೆಣ್ಣುಮಕ್ಕಳ ಆಶೀರ್ವಾದವನ್ನು ಪಡೆದ ನಂತರ ನಾವು ನಮ್ಮ ಮನೆಯಿಂದ ಹೊರಬರುತ್ತೇವೆ. ನಾನು ಬಳಸಿದ ಯಾವುದೇ ಪದದಿಂದ ಯಾರಿಗಾದರೂ ನೋವಾಗಿದ್ದರೆ, ನಾನು ವಿಷಾದ ವ್ಯಕ್ತಪಡಿಸುತ್ತೇನೆ” ಎಂದು ಶರ್ಮಾ ತಿಳಿಸಿದರು.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ʼ‘ಜೆನ್ ಝೀಗಳೂ ನಮ್ಮವರೇ; ಪ್ರತಿಭಟನೆ ನಡೆಸಿದ ಕಾರಣಕ್ಕೆ ಅವರನ್ನು ದೇಶದ್ರೋಹಿಗಳು ಎನ್ನಲಾಗದುʼ’: ಮೋಹನ್ ಭಾಗವತ್ ಅಚ್ಚರಿಯ ಹೇಳಿಕೆ</title><link>https://vishwavani.news/national/mohan-bhagwat-gen-z-protest-anti-national-remarks-85816.html</link><guid>https://vishwavani.news/national/mohan-bhagwat-gen-z-protest-anti-national-remarks-85816.html</guid><pubDate>Thu, 06 Aug 2026 17:02:43 +0000</pubDate><description>&lt;![CDATA[Mohan Bhagwat: ಆರ್‌ಎಸ್‌ಎಸ್‌ ಸರಸಂಘಚಾಲಕ ಮೋಹನ್ ಭಾಗವತ್, ಪ್ರತಿಭಟನೆ ನಡೆಸಿದ ಕಾರಣಕ್ಕೆ ಜೆನ್ ಝೀ ಸಮುದಾಯವನ್ನು ದೇಶದ್ರೋಹಿಗಳು ಎಂದು ಕರೆಯಲಾಗುವುದಿಲ್ಲ ಎಂಬುದಾಗಿ ಅಬಿಪ್ರಾಯಪಟ್ಟಿದ್ದಾರೆ. ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ, ಶಿಕ್ಷಣಕ್ಕೆ ಹೆಚ್ಚಿನ ಅನುದಾನ ಹಾಗೂ ಪಾಕಿಸ್ತಾನ-ಚೀನಾ ಜತೆಗಿನ ಸಂಬಂಧಗಳ ಬಗ್ಗೆ ಸಮತೋಲಿತ ನಿಲುವಿನ ಅಗತ್ಯವಿದೆ ಎಂದೂ ಅವರು ಹೇಳಿದ್ದಾರೆ.]]&gt;</description><dc:creator>&lt;![CDATA[Sushmitha Jain]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ದೇಶ]]&gt;</category><category>&lt;![CDATA[ರಾಜಕೀಯ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/mohan-bhagwat-ok.original.jpg" class="attachment-large size-large wp-post-image" alt="ʼ‘ಜೆನ್ ಝೀಗಳೂ ನಮ್ಮವರೇ; ಪ್ರತಿಭಟನೆ ನಡೆಸಿದ ಕಾರಣಕ್ಕೆ ಅವರನ್ನು ದೇಶದ್ರೋಹಿಗಳು ಎನ್ನಲಾಗದುʼ’: ಮೋಹನ್ ಭಾಗವತ್ ಅಚ್ಚರಿಯ ಹೇಳಿಕೆ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="ro8uq"&gt;&lt;b&gt;ಮುಂಬೈ, ಆ. 6: ​&lt;/b&gt;ರಾಷ್ಟ್ರೀಯ ಸ್ವಯಂಸೇವಕ ಸಂಘದ&lt;a href="/karnataka/kalaburagi/high-court-gives-green-signal-to-rss-procession-in-chittapur-on-november-2-58323.html"&gt;&lt;b&gt; (RSS&lt;/b&gt;&lt;/a&gt;) ಸರಸಂಘಚಾಲಕ ಮೋಹನ್ ಭಾಗವತ್ &lt;a href="/national/todays-young-generation-has-not-lost-its-way-rss-chief-mohan-bhagwats-message-amidst-student-protests-84758.html"&gt;&lt;b&gt;(Mohan Bhagwat)&lt;/b&gt;&lt;/a&gt;, "ಜೆನ್ ಝೀಗಳು (ಯುವ ಸಮೂಹ) ಪ್ರತಿಭಟನೆ ನಡೆಸಿದರೆ ಅವರನ್ನು ದೇಶದ್ರೋಹಿಗಳು ಎಂದು ಕರೆಯಲಾಗುವುದಿಲ್ಲ. ಅವರು ನಮ್ಮವರೇ" ಎಂದು ಗುರುವಾರ ಹೇಳಿದ್ದಾರೆ. ​ಮುಂಬೈಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಇಂದಿನ ಯುವಪೀಳಿಗೆಯವರು ಹಿರಿಯರನ್ನು ಪ್ರಶ್ನಿಸದೆ ಒಪ್ಪಿಕೊಳ್ಳುತ್ತಿದ್ದ ಹಿಂದಿನ ಪೀಳಿಗೆಯಂತಿಲ್ಲ, ಅವರಿಗೆ ತಾರ್ಕಿಕ ಉತ್ತರಗಳು ಬೇಕಾಗಿವೆ ಎಂದರು.&lt;/p&gt;&lt;p data-block-key="5l0vg"&gt;​"ನಾವು ಅವರ ವಯಸ್ಸಿನಲ್ಲಿದ್ದಾಗ ಹಿರಿಯರು ಹೇಳಿದ್ದನ್ನು ಕೇಳುತ್ತಿದ್ದೆವು. ಎಂದಿಗೂ ಪ್ರಶ್ನೆ ಮಾಡುತ್ತಿರಲಿಲ್ಲ. ಆದರೆ ಇಂದಿನ ಜೆನ್ ಝೀ ಪೀಳಿಗೆಗೆ ತಾರ್ಕಿಕ ಉತ್ತರಗಳು ಬೇಕು. ಅವರು ಪ್ರತಿಭಟನೆ ನಡೆಸಿದರೆ ದೇಶದ್ರೋಹಿಗಳಾಗುವುದಿಲ್ಲ. ಅವರು ನಮ್ಮ ಮುಂದಿನ ಪೀಳಿಗೆ. ಇಂದಿನ ಜೆನ್ ಝೀ ಮತ್ತು ಜೆನ್ ಆಲ್ಫಾ ಪೀಳಿಗೆಯು ನಮ್ಮ ಪೀಳಿಗೆಗಿಂತ ಹೆಚ್ಚು ಪ್ರಾಮಾಣಿಕವಾಗಿದೆ. ದೇಶಭಕ್ತಿ ಮತ್ತು ಸೇವೆಯ ನಿಜವಾದ ಕರೆಗೆ ಅವರು ಸ್ಪಂದಿಸುತ್ತಾರೆ" ಎಂದು ಭಾಗವತ್ ಅಭಿಪ್ರಾಯಪಟ್ಟರು.&lt;/p&gt;&lt;h3 data-block-key="7jrl1"&gt;&lt;b&gt;ಜೆನ್ ಝೀಗಳ ಬಗ್ಗೆ ಮೋಹನ್‌ ಭಾಗವತ್‌ ಮಾತು:&lt;/b&gt;&lt;/h3&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="twitter-tweet"&gt;&lt;p lang="en" dir="ltr"&gt;RSS chief Mohan Bhagwat on Gen Z protests: If Gen Z is protesting, they are not anti-nationals. They are our people, and next generation is more committed than the present one &lt;a href="https://t.co/8QRJykdV1G"&gt;pic.twitter.com/8QRJykdV1G&lt;/a&gt;&lt;/p&gt;&amp;mdash; Padmaja Joshi (@PadmajaJoshi) &lt;a href="https://x.com/PadmajaJoshi/status/2085374210231476606?ref_src=twsrc%5Etfw"&gt;August 6, 2026&lt;/a&gt;&lt;/blockquote&gt; &lt;script async src="https://platform.x.com/widgets.js" charset="utf-8"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="86jh3"&gt;&lt;/p&gt;&lt;p data-block-key="bdu"&gt;​ಇತ್ತೀಚೆಗೆ ದೆಹಲಿಯ ಜಂತರ್ ಮಂತರ್‌ನಲ್ಲಿ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಯುವ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯ ಹಿನ್ನೆಲೆಯಲ್ಲಿ ಈ ಹೇಳಿಕೆ ಪ್ರಾಮುಖ್ಯತೆ ಪಡೆದಿದೆ. ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಕ್ರಮದ ಕುರಿತು ಮಾತನಾಡುತ್ತಾ, "ಲಾಠಿಚಾರ್ಜ್ ಮತ್ತು ಪೆಲೆಟ್ ಗನ್‌ಗಳನ್ನು ಏಕೆ ಬಳಸಲಾಯಿತು? ಇದರ ಹಿಂದಿನ ಕಾರಣಗಳನ್ನು ನಾವು ಅಧ್ಯಯನ ಮಾಡಬೇಕಾಗಿದೆ" ಎಂದರು.&lt;/p&gt;&lt;h3 data-block-key="2h3v5"&gt;&lt;b&gt;​ಶಿಕ್ಷಣ ರಂಗದ ಸುಧಾರಣೆ&lt;/b&gt;&lt;/h3&gt;&lt;p data-block-key="8vu03"&gt;ಶಿಕ್ಷಣ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆಯ ಅಗತ್ಯವಿದೆ ಎಂದ ಭಾಗವತ್, "ಶಿಕ್ಷಣವು ವ್ಯಾಪಾರವಲ್ಲ. ಪ್ರತಿಯೊಬ್ಬರಿಗೂ ಶಿಕ್ಷಣ ಸಿಗುವಂತಾಗಬೇಕು. ಶುಲ್ಕದ ರಚನೆಯನ್ನು ಸರಿಪಡಿಸಬೇಕು" ಎಂದು ಹೇಳುತ್ತಾ, ಭಾರತದ ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರದ ಪಾಲು ಶೇಕಡಾ 6ಕ್ಕೆ ಹೆಚ್ಚಾಗಬೇಕು ಎಂಬ ಬೇಡಿಕೆ ಮಂಡಿಸಿದರು.&lt;/p&gt;&lt;p data-block-key="419bj"&gt;&lt;a href="/national/bjp-to-give-high-priority-to-young-leaders-to-learn-about-zen-ji-85353.html"&gt;&lt;b&gt;ಝೆನ್ ಜಿ ಬಗ್ಗೆ ತಿಳಿದುಕೊಳ್ಳಲು ಯುವ ನಾಯಕರಿಗೆ ಹೆಚ್ಚಿನ ಆದ್ಯತೆ ನೀಡಲು ಮುಂದಾದ ಬಿಜೆಪಿ&lt;/b&gt;&lt;/a&gt;&lt;/p&gt;&lt;h3 data-block-key="epe4o"&gt;&lt;b&gt;​ಪಾಕಿಸ್ತಾನ ಮತ್ತು ಚೀನಾ ಕುರಿತು ಭಿನ್ನ ನಿಲುವು&lt;/b&gt;&lt;/h3&gt;&lt;p data-block-key="eomqf"&gt;ದೇಶಗಳ ನಡುವಿನ ಸಂಘರ್ಷಗಳು ದ್ವಿಪಕ್ಷೀಯ ಬಾಂಧವ್ಯವನ್ನು ಶಾಶ್ವತವಾಗಿ ಹಾಳು ಮಾಡಬಾರದು ಎಂದು ಭಾಗವತ್ ಹೇಳಿದರು. ಪಾಕಿಸ್ತಾನ ಮತ್ತು ಚೀನಾದಂತಹ ದೇಶಗಳನ್ನು ಸಂಪೂರ್ಣವಾಗಿ ಭಾರತದ ಶತ್ರುಗಳು ಎಂದು ನೋಡಬಾರದು ಎಂದ ಅವರು ಹೇಳಿದರು.&lt;/p&gt;&lt;p data-block-key="p6vk"&gt;​"ಸಂಘರ್ಷದ ಸಮಯದಲ್ಲಿ ನಾವು ದ್ವಿಪಕ್ಷೀಯ ಸಂಬಂಧಗಳನ್ನು ಸಂಪೂರ್ಣವಾಗಿ ಕಡಿದುಕೊಳ್ಳಬಾರದು. ಸಮಸ್ಯೆ ಬಗೆಹರಿಯುವವರೆಗೆ ಸಂಬಂಧಗಳನ್ನು ತಾತ್ಕಾಲಿಕವಾಗಿ ತಡೆಹಿಡಿಯಬಹುದೇ ಹೊರತು ಕೊನೆಗೊಳಿಸಲು ಸಾಧ್ಯವಿಲ್ಲ. ಪಾಕಿಸ್ತಾನ ಮತ್ತು ಚೀನಾ ಪೂರ್ಣಪ್ರಮಾಣದಲ್ಲಿ ನಮ್ಮ ಶತ್ರುಗಳು ಎಂದೇನಲ್ಲ, ರಾಜಕೀಯವೂ ಇಲ್ಲಿ ಪಾತ್ರ ವಹಿಸುತ್ತದೆ" ಎಂದರು.&lt;/p&gt;&lt;p data-block-key="ahosv"&gt;​ಸಂಘರ್ಷದ ಸಮಯದಲ್ಲಿ ಜನ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಸರ್ಕಾರದ ಜತೆ ನಿಲ್ಲಬೇಕು, ಅಂತಿಮವಾಗಿ ಮಾನವೀಯತೆಯೇ ಎಲ್ಲಕ್ಕಿಂತ ಮಿಗಿಲಾದದ್ದು ಎಂದು ಅವರು ಹೇಳಿದ್ದಾರೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>John Turner: ಕೇವಲ 25ನೇ ವಯಸ್ಸಿನಲ್ಲಿ ವೃತ್ತಿಪರ ಕ್ರಿಕೆಟ್‌ಗೆ ವಿದಾಯ ಹೇಳಿದ ಜಾನ್‌ ಟರ್ನರ್‌!</title><link>https://vishwavani.news/sports/cricket/england-pacer-john-turner-announces-retirement-at-just-25-years-issues-statement-to-confirm-decision-85817.html</link><guid>https://vishwavani.news/sports/cricket/england-pacer-john-turner-announces-retirement-at-just-25-years-issues-statement-to-confirm-decision-85817.html</guid><pubDate>Thu, 06 Aug 2026 16:56:55 +0000</pubDate><description>&lt;![CDATA[ದೀರ್ಘಾವಧಿ ಬೆನ್ನು ನೋವಿನ ಸಮಸ್ಯೆಯಿಂದ ಇಂಗ್ಲೆಂಡ್‌ ತಂಡದ ಯುವ ವೇಗಿ ಜಾನ್‌ ಟರ್ನರ್‌ ಅವರು ತಮ್ಮ 25ನೇ ವಯಸ್ಸಿನಲ್ಲಿ ವೃತ್ತಿ ಪರ ಕ್ರಿಕೆಟ್‌ ಜೀವನಕ್ಕೆ ವಿದಾಯ ಹೇಳಿದ್ದಾರೆ. ಹ್ಯಾಂಪ್‌ಶೈರ್‌ ವೇಗಿ 2024ರಲ್ಲಿ ನಾಲ್ಕು ಅಂತಾರಾಷ್ಟ್ರೀಯ ವೈಟ್‌ಬಾಲ್‌ ಪಂದ್ಯಗಳನ್ನು ಆಡಿದ್ದಾರೆ. ಫಿಟ್‌ನೆಸ್‌ ಸಮಸ್ಯೆಯಿಂದ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆಂದು ಅವರು ಹೇಳಿದ್ದಾರೆ.]]&gt;</description><dc:creator>&lt;![CDATA[Ramesh Kote]]&gt;</dc:creator><category>&lt;![CDATA[ಕ್ರಿಕೆಟ್‌]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕ್ರೀಡೆ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/John_Turner.original.jpg" class="attachment-large size-large wp-post-image" alt="John Turner: ಕೇವಲ 25ನೇ ವಯಸ್ಸಿನಲ್ಲಿ ವೃತ್ತಿಪರ ಕ್ರಿಕೆಟ್‌ಗೆ ವಿದಾಯ ಹೇಳಿದ ಜಾನ್‌ ಟರ್ನರ್‌!" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="nyoef"&gt;&lt;b&gt;ಲಂಡನ್‌:&lt;/b&gt; ಇಂಗ್ಲೆಂಡ್‌ನ ಯುವ ವೇಗಿ ಜಾನ್ ಟರ್ನರ್ (John Turner) ಬೆನ್ನುನೋವಿನ ಗಾಯದಿಂದಾಗಿ ವೃತ್ತಿಪರ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. 2024ರಲ್ಲಿ ಇಂಗ್ಲೆಂಡ್ ಪರ (England Cricket) ನಾಲ್ಕು ವೈಟ್‌ಬಾಲ್ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದ ಅವರು, ಮೂರು ವಿಕೆಟ್‌ಗಳನ್ನು ಕಬಳಿಸಿದ್ದರು. ಆದರೆ ಬೆನ್ನಿನ ಸ್ಟ್ರೆಸ್ ಫ್ರ್ಯಾಕ್ಚರ್ ಸಮಸ್ಯೆಯಿಂದಾಗಿ 2025ರ ಜೂನ್ ಬಳಿಕ ಯಾವುದೇ ವೃತ್ತಿಪರ ಪಂದ್ಯದಲ್ಲಿ ಆಡಿರಲಿಲ್ಲ.&lt;/p&gt;&lt;p data-block-key="ek454"&gt;25 ವರ್ಷದ ಟರ್ನರ್ ಕಳೆದ ವರ್ಷದ ಅಂತ್ಯದವರೆಗೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಬೋರ್ಡ್ (ECB) ಅಭಿವೃದ್ಧಿ ಒಪ್ಪಂದದ ಭಾಗವಾಗಿದ್ದರು. ಅಲ್ಲದೆ, ಒಂದು ವರ್ಷದ ಹಿಂದಷ್ಟೇ 2027ರ ಋತುವಿನ ಅಂತ್ಯದವರೆಗೆ ಹ್ಯಾಂಪ್‌ಶೈರ್ ತಂಡದೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು. ಆದರೆ ನಿರಂತರ ಗಾಯಗಳಿಂದಾಗಿ ಹೆಚ್ಚಿನ ಸಮಯ ಮೈದಾನದಿಂದ ದೂರವೇ ಉಳಿಯಬೇಕಾಯಿತು.&lt;/p&gt;&lt;p data-block-key="66r6b"&gt;ಈ ಹಿನ್ನೆಲೆಯಲ್ಲಿ ನಿವೃತ್ತಿ ಘೋಷಿಸಿರುವ ಟರ್ನರ್ ತಮ್ಮ ಹೇಳಿಕೆಯಲ್ಲಿ, "ವೃತ್ತಿಪರ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುವುದು ನನ್ನ ಬಾಲ್ಯದ ಕನಸಾಗಿತ್ತು. ಹ್ಯಾಂಪ್‌ಶೈರ್ ಹಾಗೂ ಇಂಗ್ಲೆಂಡ್ ಪರ ಆಡುವ ಅವಕಾಶ ಸಿಕ್ಕಿದ್ದು, ಆ ಕನಸು ನನಸಾದಂತಾಗಿದೆ," ಎಂದು ತಿಳಿಸಿದ್ದಾರೆ.&lt;/p&gt;&lt;p data-block-key="9aaop"&gt;&lt;a href="/sports/cricket/batting-great-sunil-gavaskar-picks-indias-world-cup-2027-squad-85801.html"&gt;&lt;b&gt;2027ರ ಏಕದಿನ ವಿಶ್ವಕಪ್‌ ಟೂರ್ನಿಗೆ ಭಾರತ ತಂಡವನ್ನು ಆರಿಸಿದ ಸುನೀಲ್‌ ಗವಾಸ್ಕರ್‌!&lt;/b&gt;&lt;/a&gt;&lt;/p&gt;&lt;p data-block-key="dk4mp"&gt;"ಆದರೆ, ಈಗ ನಾನು ವೃತ್ತಿಪರ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಲು ನಿರ್ಧರಿಸಿದ್ದೇನೆ. ನೀವು ಊಹಿಸಬಹುದಾದಂತೆ, ಇದು ನನ್ನ ಜೀವನದ ಅತ್ಯಂತ ಕಠಿಣ ನಿರ್ಧಾರಗಳಲ್ಲಿ ಒಂದಾಗಿದೆ. ಒಂದು ವರ್ಷಕ್ಕೂ ಹೆಚ್ಚು ಕಾಲ ನನ್ನನ್ನು ಮೈದಾನದಿಂದ ದೂರವಿಟ್ಟ ಬೆನ್ನಿನ ಸ್ಟ್ರೆಸ್ ಫ್ರ್ಯಾಕ್ಚರ್ ಹಾಗೂ ಪದೇ ಪದೇ ಕಾಡಿದ ಗಾಯಗಳ ಕಾರಣದಿಂದ, ಕ್ರಿಕೆಟಿಗನಾಗಿ ನನ್ನ ಭವಿಷ್ಯದ ಬಗ್ಗೆ ಮಾತ್ರವಲ್ಲದೆ ಕ್ರಿಕೆಟ್ ನಂತರದ ಜೀವನದ ಬಗ್ಗೆಯೂ ಗಂಭೀರವಾಗಿ ಯೋಚಿಸಲು ಆರಂಭಿಸಿದೆ. ಈ ಎಲ್ಲವನ್ನು ಪರಿಗಣಿಸಿದ ಬಳಿಕ, ಜೀವನದ ಮುಂದಿನ ಅಧ್ಯಾಯವನ್ನು ಆರಂಭಿಸಲು ಇದೇ ಸರಿಯಾದ ಸಮಯ ಎಂದು ನಾನು ನಿರ್ಧರಿಸಿದ್ದೇನೆ," ಎಂದು ಜಾನ್ ಟರ್ನರ್ ಹೇಳಿದ್ದಾರೆ.&lt;/p&gt;&lt;h3 data-block-key="856ft"&gt;&lt;b&gt;ದಕ್ಷಿಣ ಆಫ್ರಿಕಾದಿಂದ ಇಂಗ್ಲೆಂಡ್‌ವರೆಗೆ ಜಾನ್ ಟರ್ನರ್ ಅವರ ಕ್ರಿಕೆಟ್ ಪಯಣ&lt;/b&gt;&lt;/h3&gt;&lt;p data-block-key="9jm9b"&gt;ಜಾನ್ ಟರ್ನರ್ 2021ರಲ್ಲಿ ದಕ್ಷಿಣ ಆಫ್ರಿಕಾದಿಂದ ಯುನೈಟೆಡ್ ಕಿಂಗ್‌ಡಮ್‌ಗೆ ಸ್ಥಳಾಂತರಗೊಂಡಿದ್ದರು. ಅದೇ ವರ್ಷ ಹ್ಯಾಂಪ್‌ಶೈರ್ ಪರ ಒನ್-ಡೇ ಕಪ್‌ನಲ್ಲಿ ಪದಾರ್ಪಣೆ ಮಾಡಿದ್ದರು. ಅವರ ವೃತ್ತಿಪರ ಕ್ರಿಕೆಟ್‌ನ ಮೊದಲ ವಿಕೆಟ್ ಇಂಗ್ಲೆಂಡ್‌ನ ಮಾಜಿ ನಾಯಕ ಅಲಿಸ್ಟರ್ ಕುಕ್ ಅವರದ್ದಾಗಿತ್ತು. ಆ ಟೂರ್ನಿಯಲ್ಲಿ ಹ್ಯಾಂಪ್‌ಶೈರ್ ಪರ ಜಂಟಿ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಯನ್ನು ಕೂಡ ಪಾತ್ರರಾಗಿದ್ದರು.&lt;/p&gt;&lt;p data-block-key="frc1j"&gt;&lt;a href="/sports/cricket/yashasvi-jaiswal-recalls-rohit-sharmas-scolding-with-hilarious-post-ahead-of-sl-tests-85811.html"&gt;&lt;b&gt;ʻಗಲ್ಲಿ ಕ್ರಿಕೆಟ್‌ ಆಡುತ್ತಿದ್ದೀರಾ?ʼ: ರೋಹಿತ್‌ ಶರ್ಮಾ ಬೈದಿದ್ದ ಘಟನೆಯನ್ನು ನೆನೆದ ಯಶಸ್ವಿ ಜೈಸ್ವಾಲ್‌!&lt;/b&gt;&lt;/a&gt;&lt;/p&gt;&lt;p data-block-key="3v58e"&gt;ಇದಾದ ಬಳಿಕ ಶ್ರೀಲಂಕಾ ಡೆವಲಪ್‌ಮೆಂಟ್ ಇಲೆವೆನ್ ವಿರುದ್ಧದ ತಮ್ಮ ಪ್ರಥಮ ಪ್ರಥಮ ದರ್ಜೆ ಪಂದ್ಯದಲ್ಲೇ ಐದು ವಿಕೆಟ್‌ಗಳನ್ನು ಕಬಳಿಸಿ ಗಮನ ಸೆಳೆದರು. ನಂತರ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಆರು ಪಂದ್ಯಗಳನ್ನು ಆಡಿದರು. 2025ರ ಆರಂಭದಲ್ಲಿ ಲ್ಯಾಂಕಶೈರ್ ತಂಡದ ಪರ ಆಡಿದರೂ, ಗಾಯಗಳು ಅವರ ಬೆಳವಣಿಗೆಗೆ ಅಡ್ಡಿಯಾದವು.&lt;/p&gt;&lt;p data-block-key="16ijq"&gt;ಟಿ20 ಕ್ರಿಕೆಟ್‌ನಲ್ಲಿ ಟರ್ನರ್ ಅತ್ಯಂತ ಪರಿಣಾಮಕಾರಿ ಪ್ರದರ್ಶನ ನೀಡಿದ್ದರು. 2023ರ ಟಿ20 ಬ್ಲಾಸ್ಟ್ ಟೂರ್ನಿಯಲ್ಲಿ 11.76ರ ಸರಾಸರಿಯಲ್ಲಿ 21 ವಿಕೆಟ್ ಪಡೆದು ಮಿಂಚಿದ್ದರು. ಈ ಪ್ರದರ್ಶನವೇ ಅವರಿಗೆ ಅದೇ ವರ್ಷದ ಕೊನೆಯಲ್ಲಿ ಮೊದಲ ಬಾರಿ ಇಂಗ್ಲೆಂಡ್ ತಂಡದಿಂದ ಕರೆ ಬರುವಂತೆ ಮಾಡಿತು. ಇದಲ್ಲದೆ, ದಿ ಹಂಡ್ರೆಡ್ ಟೂರ್ನಿಯಲ್ಲಿ ಟ್ರೆಂಟ್ ರಾಕೆಟ್ಸ್ ತಂಡವನ್ನು ಪ್ರತಿನಿಧಿಸಿದ ಅವರು ಐದು ಪಂದ್ಯಗಳಲ್ಲಿ ಆರು ವಿಕೆಟ್‌ಗಳನ್ನು ಪಡೆದು ಉತ್ತಮ ಪ್ರದರ್ಶನ ನೀಡಿದ್ದರು.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಕೊನೆ ಕ್ಷಣದಲ್ಲಿ ಎಐ ಬಳಸಿ ಮೆಹೆಂದಿ ವಿನ್ಯಾಸ ಆರಿಸಿದ ಮುಂಬೈ ವಧು: 'ಪರ್ಫೆಕ್ಟ್ ಡಿಸೈನ್'ಎಂದ ನೆಟ್ಟಿಗರು</title><link>https://vishwavani.news/viral/bride-chooses-mehndi-design-using-ai-netizens-are-in-awe-of-the-design-85697.html</link><guid>https://vishwavani.news/viral/bride-chooses-mehndi-design-using-ai-netizens-are-in-awe-of-the-design-85697.html</guid><pubDate>Thu, 06 Aug 2026 16:50:45 +0000</pubDate><description>&lt;![CDATA[Viral News: ಏನೇ ಪ್ರಶ್ನೆ, ಗೊಂದಲಗಳಿದ್ದರೂ ಕ್ಷಣಾರ್ಧದಲ್ಲಿ ಉತ್ತರಿಸುವ ಎಐ ಆಧಾರಿತ ತಂತ್ರಜ್ಞಾನದಿಂದ ಪರಿಹಾರ ಕಂಡುಕೊಳ್ಳುವವರು ಅನೇಕರು ಇದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಮೆಹೆಂದಿ ಶಾಸ್ತ್ರದ ಕೊನೆ ಕ್ಷಣದ ವೇಳೆಗೆ ಮಹಾರಾಷ್ಟ್ರದ ಮುಂಬೈ ವಧುವೊಬ್ಬರು ಚಾಟ್ ಜಿಟಿಪಿ ಬಳಸಿ ಮೆಹೆಂದಿ ಡಿಸೈನ್ ಆಯ್ಕೆ ಮಾಡಿದ್ದಾರೆ. ತಮ್ಮ ಪ್ರೇಮಕಥೆಯನ್ನು ಬಿಂಬಿಸುವ ಈ ಡಿಸೈನ್ ತನಗೆ ಸೂಕ್ತವಾಗಿತ್ತು ಎಂದು ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.]]&gt;</description><dc:creator>&lt;![CDATA[Pushpa Kumari]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ವೈರಲ್‌]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/mumbai_video_1.original.jpg" class="attachment-large size-large wp-post-image" alt="ಕೊನೆ ಕ್ಷಣದಲ್ಲಿ ಎಐ ಬಳಸಿ ಮೆಹೆಂದಿ ವಿನ್ಯಾಸ ಆರಿಸಿದ ಮುಂಬೈ ವಧು: 'ಪರ್ಫೆಕ್ಟ್ ಡಿಸೈನ್'ಎಂದ ನೆಟ್ಟಿಗರು" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="uapry"&gt;&lt;b&gt;ಮುಂಬೈ, ಆ. 6:&lt;/b&gt; ತಂತ್ರಜ್ಞಾನ ಲೋಕದಲ್ಲೇ ಹೆಚ್ಚು ಟ್ರೆಂಡಿಂಗ್‌ನಲ್ಲಿರುವ ವಿಚಾರ ಏನಪ್ಪ ಅಂದ್ರೆ ಅದು ಚಾಟ್ ಜಿಪಿಟಿ. ಏನೇ ಪ್ರಶ್ನೆ, ಗೊಂದಲಗಳಿದ್ದರೂ ಕ್ಷಣಾರ್ಧದಲ್ಲಿ ಉತ್ತರಿಸುವ ಎಐ ಆಧಾರಿತ ತಂತ್ರಜ್ಞಾನದಿಂದ ಪರಿಹಾರ ಕಂಡುಕೊಳ್ಳುವವರು ಅನೇಕರು ಇದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಮೆಹೆಂದಿ ಶಾಸ್ತ್ರದ ಕೊನೆ ಕ್ಷಣದ ವೇಳೆಗೆ ಮುಂಬೈ ವಧುವೊಬ್ಬರು ಚಾಟ್‌ಜಿಟಿಪಿ ಬಳಸಿ ಮೆಹೆಂದಿ ಡಿಸೈನ್ ಆಯ್ಕೆ ಮಾಡಿದ್ದಾರೆ. ತಮ್ಮ ಪ್ರೇಮ ಕಥೆಯನ್ನು ಬಿಂಬಿಸುವ ಈ ಡಿಸೈನ್ ತನಗೆ ಸೂಕ್ತವಾಗಿತ್ತು ಎಂದು ಸೋಷಿಯಲ್ ಮೀಡಿಯಾದಲ್ಲಿ&lt;a href="/viral/uber-driver-drags-biker-half-a-kilometer-away-85036.html"&gt;&lt;b&gt; (Viral News)&lt;/b&gt;&lt;/a&gt; ಹೇಳಿಕೊಂಡಿದ್ದಾರೆ.&lt;/p&gt;&lt;p data-block-key="9kdug"&gt;ಮದುವೆ ಅಥವಾ ಯಾವುದೇ ಸಮಾರಂಭದಲ್ಲಿ ಸಾಮಾನ್ಯವಾಗಿ ಕೊನೆಯ ಕ್ಷಣದ ನಿರ್ಧಾರ, ಆಯ್ಕೆಗಳೇ ತಮಗೆ ಖುಷಿ ನೀಡುತ್ತವೆ‌. ಇದೀಗ ವಧುವೊಬ್ಬರು ಶಾಸ್ತ್ರದ ಕೊನೆ ಕ್ಷಣದಲ್ಲಿ ಮೆಹೆಂದಿ ಡಿಸೈನ್ ಯಾವುದು ಆಯ್ಕೆ ಮಾಡಬೆಕೇಂದು ಚಾಟ್‌ಜಿಪಿಟಿ ಬಳಸಿ ಡಿಸೈನ್ ರೂಪಿಸಿಕೊಂಡು ಭಾರಿ ಸುದ್ದಿಯಾಗಿದ್ದಾರೆ. ಕೆಲವೇ ನಿಮಿಷದಲ್ಲಿ ಚಾಟ್‌ಜಿಪಿಟಿ ಆಕೆಯ ಪ್ರೇಮಕಥೆ, ಕುಟುಂಬ ಮತ್ತು ಮದುವೆಯ ಥೀಮ್ ಪ್ರತಿಬಿಂಬಿಸುವ ಡಿಸೈನ್ ನೀಡಿದೆ.&lt;/p&gt;&lt;p data-block-key="3tsqd"&gt;&lt;a href="https://www.instagram.com/p/DbX4LJkiAII/?utm_source=ig_web_copy_link&amp;amp;igsh=NTc4MTIwNjQ2YQ%3D%3D&amp;amp;img_index=6"&gt;&lt;b&gt;ಮೆಹೆಂದಿ ಡಿಸೈನ್‌ ನೋಡಲು ಇಲ್ಲಿ ಕ್ಲಿಕ್‌ ಮಾಡಿ.&lt;/b&gt;&lt;/a&gt;&lt;/p&gt;
&lt;/div&gt;

    
&lt;div class="article-paragraph"&gt;
    &lt;p data-block-key="cdgtg"&gt;ಮಹಾರಾಷ್ಟ್ರದ ಮುಂಬೈಯಲ್ಲಿರುವ ಅನುಷಾ ಜೈನ್ ಇತ್ತೀಚೆಗೆ ಜೈಪುರದಲ್ಲಿ ನಡೆದ ತಮ್ಮ ವಿವಾಹ ಸಂದರ್ಭದ ಫೋಟೊ ಶೇರ್ ಮಾಡಿದ್ದಾರೆ. ಈ ವಿವರವಾದ ಡಿಸೈನ್ ಅನೇಕ ಜನರನ್ನು ಆಕರ್ಷಿಸಿದೆ. ಯುವತಿ ಮೆಹೆಂದಿ ಶಾಸ್ತ್ರದ ಸಮಯದಲ್ಲಿ ಯಾವುದೇ ಡಿಸೈನ್ ಅನ್ನು ಆಯ್ಕೆ ಮಾಡಿ ಕೊಂಡಿರಲಿಲ್ಲ. ಆದರೆ ಮೆಹೆಂದಿ ಡಿಸೈನರ್ ಬಂದು ಕೇಳಿದಾಗ ಏನು ಐಡಿಯಾ ಸಿಗದೇ ಸುಮ್ಮನಾಗಿದ್ದರು.&lt;/p&gt;&lt;p data-block-key="f36p0"&gt;&lt;a href="/viral/young-man-saves-childs-life-after-falling-from-building-in-london-watch-video-80930.html"&gt;&lt;b&gt;ಲಂಡನ್‌ನ ಕಟ್ಟಡದ ಮೇಲಿಂದ ಬಿದ್ದ ಮಗುವನ್ನು 'ಕ್ಯಾಚ್' ಹಿಡಿದು ಜೀವ ಉಳಿಸಿದ ಭಾರತೀಯ&lt;/b&gt;&lt;/a&gt;&lt;/p&gt;&lt;p data-block-key="2dubr"&gt;ಆದರೆ ಅನುಷಾ ಅವರ ಅಣ್ಣ ಕೊನೆ ಕ್ಷಣದಲ್ಲಿ ಚಾಟ್‌ಜಿಪಿಟಿ ಬಳಸಲು ಸಲಹೆ ನೀಡಿದ್ದಾರೆ. ಕೊನೆಗೆ ಅವರು ಜೋಡಿಯ ವಿವರಗಳನ್ನು ಎಐಯಲ್ಲಿ ನಮೂದಿಸಿದರು. ಅನುಷಾ ಮುಂಬೈಯವರು, ಅವರ ಪತಿ ಜೈಪುರದವರು. ಇಬ್ಬರೂ ಇಷ್ಟ ಪಡುವ ಆಹಾರ, ಮದುವೆಯ ಥೀಮ್, ಸಂಬಂಧದ ಬಗ್ಗೆ ಉಲ್ಲೇಖಿಸಿದ್ದಾರೆ.&lt;/p&gt;&lt;p data-block-key="blgrj"&gt;​ಚಾಟ್‌ಜಿಪಿಟಿ ಕೆಲವೇ ಸೆಕೆಂಡುಗಳಲ್ಲಿ ವಿಶಿಷ್ಟಡಿಸೈನ್‌ ನೀಡಿದೆ. ಮುಂಬೈಯನ್ನು ಪ್ರತಿನಿಧಿಸಲು ಒಂದು ಆಟೋ-ರಿಕ್ಷಾ ಹಾಗೂ ಜೈಪುರ ಪ್ರತಿನಿಧಿಸಲು ಆನೆ. ಪ್ರಯಾಣವನ್ನು ಸೂಚಿಸಲು ಮುಂಬೈ ವಿಮಾನ ನಿಲ್ದಾಣ ​ಹಾಗೂ ಎರಡೂ ಕುಟುಂಬದವರ ಹೆಸರುಗಳಿದ್ದ ಪದಗಳನ್ನು ನೀಡಿದೆ. ಎಐ ನೀಡಿದ ಡಿಸೈನ್ ಮೂಲಕ ಮೆಹಂದಿ ಕಲಾವಿದೆ ಅತ್ಯಂತ ನೈಜವಾಗಿ ಕೈಗಳ ಮೇಲೆ ಬಿಡಿಸಿದ್ದು ಭಾರಿ ಅಂದವಾಗಿ ಮೂಡಿ ಬಂದಿದೆ. ನೆಟ್ಟಿಗರು ಈ ಕ್ರಿಯಾಶೀಲತೆಗೆ ಮೆಚ್ಚುಗೆ ನೀಡಿದ್ದು ಬಳಕೆದಾರರೊಬ್ಬರು ಎಐ ಐಡಿಯಾ ನೀಡಿದರೂ ಈ ಕ್ರೆಡಿಟ್ ಮೆಹೆಂದಿ ಡಿಸೈನರ್‌ಗೆ ಸಲ್ಲಬೇಕು ಎಂದಿದ್ದಾರೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಚಾಲಕನ ನಿರ್ಲಕ್ಷ್ಯದಿಂದ ಯುವತಿ ಗಂಭೀರ ಗಾಯ; ಚಿಕಿತ್ಸೆಗೆ 20 ಲಕ್ಷ ರುಪಾಯಿ ಆಗಿದ್ದರೂ ಕ್ಯಾರೇ ಎನ್ನದ ರ‍್ಯಾಪಿಡೋ ಸಂಸ್ಥೆ</title><link>https://vishwavani.news/karnataka/bengaluru-urban/young-woman-seriously-injured-due-to-drivers-negligence-netizens-slam-rapido-85750.html</link><guid>https://vishwavani.news/karnataka/bengaluru-urban/young-woman-seriously-injured-due-to-drivers-negligence-netizens-slam-rapido-85750.html</guid><pubDate>Thu, 06 Aug 2026 16:33:14 +0000</pubDate><description>&lt;![CDATA[Viral News: ಯುವತಿಯೊಬ್ಬರು ಕಚೇರಿಗೆ ತೆರಳಲು ಬೆಂಗಳೂರಿನಿಂದ ರ‍್ಯಾಪಿಡೋ ಬುಕ್ ಮಾಡಿದ್ದರು. ಆದರೆ ರೈಡರ್ ಅಜಾಗರೂಕತೆಯಿಂದ ವೇಗವಾಗಿ ತೆರಳಿದ ಕಾರಣ ನಿಯಂತ್ರಣ ತಪ್ಪಿ ಅಪಘಾತವಾಗಿದೆ. ಇದರಿಂದ ಯುವತಿ ರಸ್ತೆಗೆ ಬಿದ್ದಿದ್ದು ಟ್ರ್ಯಾಕ್ಟರ್‌ ಅವರ ಮೇಲೆ ಹರಿದಿದೆ. ಈ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ರ‍್ಯಾಪಿಡೋ ಸಂಸ್ಥೆ ಮಾತ್ರ ಯಾವುದೇ ವೈದ್ಯಕೀಯ ವೆಚ್ಚಗಳನ್ನು ನೀಡದೆ ನಿರ್ಲಕ್ಷ್ಯವಹಿಸಿದೆ.]]&gt;</description><dc:creator>&lt;![CDATA[Pushpa Kumari]]&gt;</dc:creator><category>&lt;![CDATA[ಬೆಂಗಳೂರು ನಗರ]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕರ್ನಾಟಕ]]&gt;</category><category>&lt;![CDATA[ವೈರಲ್‌]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Bengaluru_video_7.original.jpg" class="attachment-large size-large wp-post-image" alt="ಚಾಲಕನ ನಿರ್ಲಕ್ಷ್ಯದಿಂದ ಯುವತಿ ಗಂಭೀರ ಗಾಯ; ಚಿಕಿತ್ಸೆಗೆ 20 ಲಕ್ಷ ರುಪಾಯಿ ಆಗಿದ್ದರೂ ಕ್ಯಾರೇ ಎನ್ನದ ರ‍್ಯಾಪಿಡೋ ಸಂಸ್ಥೆ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="wuaih"&gt;&lt;b&gt;ಬೆಂಗಳೂರು, ಆ. 6:&lt;/b&gt; ಯುವತಿಯೊಬ್ಬರು ಕಚೇರಿಗೆ ತೆರಳಲು ಬೆಂಗಳೂರಿನಿಂದ ರ‍್ಯಾಪಿಡೋ &lt;b&gt;(Rapido)&lt;/b&gt; ಬುಕ್ ಮಾಡಿದ್ದರು. ಆದರೆ ರೈಡರ್ ಅಜಾಗರೂಕತೆಯಿಂದ ವೇಗವಾಗಿ ತೆರಳಿದ ಕಾರಣ ನಿಯಂತ್ರಣ ತಪ್ಪಿ ಅಪಘಾತವಾಗಿದೆ. ಇದರಿಂದ ಯುವತಿ ರಸ್ತೆಗೆ ಬಿದ್ದಿದ್ದು ಟ್ರಾಕ್ಟರ್ ವೊಂದು ಅವರ ಮೇಲೆ ಹರಿದಿದೆ. ಈ ಅಪಘಾತದಲ್ಲಿ ಅವರು ಗಂಭೀರವಾಗಿ ಗಾಯಗೊಂಡಿದ್ದು ಚಿಕಿತ್ಸೆ ಪಡೆ ಯುತ್ತಿದ್ದಾರೆ. ಆದರೆ  ರ‍್ಯಾಪಿಡೋ ಸಂಸ್ಥೆ ಮಾತ್ರ ಯಾವುದೇ ವೈದ್ಯಕೀಯ ವೆಚ್ಚ ನೀಡದೆ ನಿರ್ಲಕ್ಷ್ಯ ವಹಿಸಿದೆ ಎಂದು ಯುವತಿಯ ಕುಟುಂಬದವರು ಆರೋಪಿಸಿದ್ದಾರೆ.&lt;/p&gt;&lt;p data-block-key="crkqe"&gt;ಕೇರಳಂನ 32 ವರ್ಷದ ಇಂಟೀರಿಯರ್ ಡಿಸೈನರ್ ಸಾನಿ ಕೃಷ್ಣ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರು. ಅವರು ಬೈರಸಂದ್ರದಲ್ಲಿರುವ ತಮ್ಮ ನಿವಾಸದಿಂದ ದೊಮ್ಮಲೂರಿನ ಕಚೇರಿಗೆ ಬೆಳಗ್ಗಿನ ಸಮಯ ರ‍್ಯಾಪಿಡೋ ಬುಕ್ ಮಾಡಿದ್ದರು. ಪ್ರಯಾಣ ಆರಂಭವಾಗಿ ಒಂದು ಕಿಲೋ ಮೀಟರ್‌ ಅಂತರದಲ್ಲಿ ರ‍್ಯಾಪಿಡೋ  ಸವಾರ ಅಜಾಗರೂಕತೆಯಿಂದ ಟ್ರ್ಯಾಕ್ಟರ್ ಹಿಂದಿಕ್ಕಲು ಪ್ರಯತ್ನಿಸಿದ್ದಾನೆ. ಇದರಿಂದಾಗಿ ಬೈಕ್ ನಿಯಂತ್ರಣ ತಪ್ಪಿ ಬಿದ್ದಿದೆ. ಟ್ರ್ಯಾಕ್ಟರ್ ಯುವತಿಯ ಮೇಲೆ ಹರಿದಿದ್ದು ಇದರಿಂದಾಗಿ ಅವರು ತೀವ್ರವಾಗಿ ಗಾಯಗೊಂಡಿದ್ದಾರೆ.&lt;/p&gt;
&lt;/div&gt;

    
&lt;div class="article-paragraph"&gt;
    &lt;p data-block-key="7l2ra"&gt;ಮೊದಲು ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಬಳಿಕ ಇದೀಗ ಕೇರಳಂನ ಕೋಝಿಕ್ಕೋಡ್‌ನಲ್ಲಿರುವ ಮಿತ್ರಾಸ್ ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ತೀವ್ರ ಅಪಘಾತದಿಂದಾಗಿ ಪಕ್ಕೆಲುಬುಗಳು ಮುರಿತಕ್ಕೊಳಗಾಗಿದ್ದು, ಮುಖಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಲಾಗಿದೆ. ಶ್ವಾಸಕೋಶ ಹಾಗೂ ಪಿತ್ತಜನಕಾಂಗಕ್ಕೆ ತೀವ್ರ ಹಾನಿಯಾಗಿದೆ.&lt;/p&gt;&lt;p data-block-key="5q300"&gt;ಅಪಘಾತದ ಎರಡು ವಾರಗಳ ನಂತರವೂ ಸಾನಿ ಕೃಷ್ಣ ಹಾಸಿಗೆ ಹಿಡಿದಿದ್ದಾರೆ. ಈಗಾಗಲೇ ಅವರ ವೈದ್ಯಕೀಯ ವೆಚ್ಚಗಳು 20 ಲಕ್ಷ ರುಪಾಯಿ ದಾಟಿದೆ. ಆದರೆ ಬೈಕ್ ಟ್ಯಾಕ್ಸಿ ಸಂಸ್ಥೆ ರ‍್ಯಾಪಿಡೋ ತಮ್ಮನ್ನು ಕೈಬಿಟ್ಟಿದೆ ಎಂದು ಅಪಘಾತಕ್ಕೆ ಒಳಗಾದ ಯುವತಿ ಸೋಷಿಯಲ್ ಮೀಡಿಯಾದಲ್ಲಿ ಗಂಭೀರ ಆರೋಪ ಮಾಡಿದ್ದಾರೆ.&lt;/p&gt;&lt;h3 data-block-key="31sra"&gt;&lt;b&gt;ವಿಡಿಯೊ ನೋಡಿ:&lt;/b&gt;&lt;/h3&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="instagram-media" data-instgrm-captioned data-instgrm-permalink="https://www.instagram.com/reel/DblejWLv9qp/?utm_source=ig_embed&amp;amp;utm_campaign=loading" data-instgrm-version="14" style=" background:#FFF; border:0; border-radius:3px; box-shadow:0 0 1px 0 rgba(0,0,0,0.5),0 1px 10px 0 rgba(0,0,0,0.15); margin: 1px; max-width:540px; min-width:326px; padding:0; width:99.375%; width:-webkit-calc(100% - 2px); width:calc(100% - 2px);"&gt;&lt;div style="padding:16px;"&gt; &lt;a href="https://www.instagram.com/reel/DblejWLv9qp/?utm_source=ig_embed&amp;amp;utm_campaign=loading" style=" background:#FFFFFF; line-height:0; padding:0 0; text-align:center; text-decoration:none; width:100%;" target="_blank"&gt; &lt;div style=" display: flex; flex-direction: row; align-items: center;"&gt; &lt;div style="background-color: #F4F4F4; border-radius: 50%; flex-grow: 0; height: 40px; margin-right: 14px; width: 40px;"&gt;&lt;/div&gt; &lt;div style="display: flex; flex-direction: column; flex-grow: 1; justify-content: center;"&gt; &lt;div style=" background-color: #F4F4F4; border-radius: 4px; flex-grow: 0; height: 14px; margin-bottom: 6px; width: 100px;"&gt;&lt;/div&gt; &lt;div style=" background-color: #F4F4F4; border-radius: 4px; flex-grow: 0; height: 14px; width: 60px;"&gt;&lt;/div&gt;&lt;/div&gt;&lt;/div&gt;&lt;div style="padding: 19% 0;"&gt;&lt;/div&gt; &lt;div style="display:block; height:50px; margin:0 auto 12px; width:50px;"&gt;&lt;svg width="50px" height="50px" viewBox="0 0 60 60" version="1.1" xmlns="https://www.w3.org/2000/svg" xmlns:xlink="https://www.w3.org/1999/xlink"&gt;&lt;g stroke="none" stroke-width="1" fill="none" fill-rule="evenodd"&gt;&lt;g transform="translate(-511.000000, -20.000000)" fill="#000000"&gt;&lt;g&gt;&lt;path d="M556.869,30.41 C554.814,30.41 553.148,32.076 553.148,34.131 C553.148,36.186 554.814,37.852 556.869,37.852 C558.924,37.852 560.59,36.186 560.59,34.131 C560.59,32.076 558.924,30.41 556.869,30.41 M541,60.657 C535.114,60.657 530.342,55.887 530.342,50 C530.342,44.114 535.114,39.342 541,39.342 C546.887,39.342 551.658,44.114 551.658,50 C551.658,55.887 546.887,60.657 541,60.657 M541,33.886 C532.1,33.886 524.886,41.1 524.886,50 C524.886,58.899 532.1,66.113 541,66.113 C549.9,66.113 557.115,58.899 557.115,50 C557.115,41.1 549.9,33.886 541,33.886 M565.378,62.101 C565.244,65.022 564.756,66.606 564.346,67.663 C563.803,69.06 563.154,70.057 562.106,71.106 C561.058,72.155 560.06,72.803 558.662,73.347 C557.607,73.757 556.021,74.244 553.102,74.378 C549.944,74.521 548.997,74.552 541,74.552 C533.003,74.552 532.056,74.521 528.898,74.378 C525.979,74.244 524.393,73.757 523.338,73.347 C521.94,72.803 520.942,72.155 519.894,71.106 C518.846,70.057 518.197,69.06 517.654,67.663 C517.244,66.606 516.755,65.022 516.623,62.101 C516.479,58.943 516.448,57.996 516.448,50 C516.448,42.003 516.479,41.056 516.623,37.899 C516.755,34.978 517.244,33.391 517.654,32.338 C518.197,30.938 518.846,29.942 519.894,28.894 C520.942,27.846 521.94,27.196 523.338,26.654 C524.393,26.244 525.979,25.756 528.898,25.623 C532.057,25.479 533.004,25.448 541,25.448 C548.997,25.448 549.943,25.479 553.102,25.623 C556.021,25.756 557.607,26.244 558.662,26.654 C560.06,27.196 561.058,27.846 562.106,28.894 C563.154,29.942 563.803,30.938 564.346,32.338 C564.756,33.391 565.244,34.978 565.378,37.899 C565.522,41.056 565.552,42.003 565.552,50 C565.552,57.996 565.522,58.943 565.378,62.101 M570.82,37.631 C570.674,34.438 570.167,32.258 569.425,30.349 C568.659,28.377 567.633,26.702 565.965,25.035 C564.297,23.368 562.623,22.342 560.652,21.575 C558.743,20.834 556.562,20.326 553.369,20.18 C550.169,20.033 549.148,20 541,20 C532.853,20 531.831,20.033 528.631,20.18 C525.438,20.326 523.257,20.834 521.349,21.575 C519.376,22.342 517.703,23.368 516.035,25.035 C514.368,26.702 513.342,28.377 512.574,30.349 C511.834,32.258 511.326,34.438 511.181,37.631 C511.035,40.831 511,41.851 511,50 C511,58.147 511.035,59.17 511.181,62.369 C511.326,65.562 511.834,67.743 512.574,69.651 C513.342,71.625 514.368,73.296 516.035,74.965 C517.703,76.634 519.376,77.658 521.349,78.425 C523.257,79.167 525.438,79.673 528.631,79.82 C531.831,79.965 532.853,80.001 541,80.001 C549.148,80.001 550.169,79.965 553.369,79.82 C556.562,79.673 558.743,79.167 560.652,78.425 C562.623,77.658 564.297,76.634 565.965,74.965 C567.633,73.296 568.659,71.625 569.425,69.651 C570.167,67.743 570.674,65.562 570.82,62.369 C570.966,59.17 571,58.147 571,50 C571,41.851 570.966,40.831 570.82,37.631"&gt;&lt;/path&gt;&lt;/g&gt;&lt;/g&gt;&lt;/g&gt;&lt;/svg&gt;&lt;/div&gt;&lt;div style="padding-top: 8px;"&gt; &lt;div style=" color:#3897f0; font-family:Arial,sans-serif; font-size:14px; font-style:normal; font-weight:550; line-height:18px;"&gt;View this post on Instagram&lt;/div&gt;&lt;/div&gt;&lt;div style="padding: 12.5% 0;"&gt;&lt;/div&gt; &lt;div style="display: flex; flex-direction: row; margin-bottom: 14px; align-items: center;"&gt;&lt;div&gt; &lt;div style="background-color: #F4F4F4; border-radius: 50%; height: 12.5px; width: 12.5px; transform: translateX(0px) translateY(7px);"&gt;&lt;/div&gt; &lt;div style="background-color: #F4F4F4; height: 12.5px; transform: rotate(-45deg) translateX(3px) translateY(1px); width: 12.5px; flex-grow: 0; margin-right: 14px; margin-left: 2px;"&gt;&lt;/div&gt; &lt;div style="background-color: #F4F4F4; border-radius: 50%; height: 12.5px; width: 12.5px; transform: translateX(9px) translateY(-18px);"&gt;&lt;/div&gt;&lt;/div&gt;&lt;div style="margin-left: 8px;"&gt; &lt;div style=" background-color: #F4F4F4; border-radius: 50%; flex-grow: 0; height: 20px; width: 20px;"&gt;&lt;/div&gt; &lt;div style=" width: 0; height: 0; border-top: 2px solid transparent; border-left: 6px solid #f4f4f4; border-bottom: 2px solid transparent; transform: translateX(16px) translateY(-4px) rotate(30deg)"&gt;&lt;/div&gt;&lt;/div&gt;&lt;div style="margin-left: auto;"&gt; &lt;div style=" width: 0px; border-top: 8px solid #F4F4F4; border-right: 8px solid transparent; transform: translateY(16px);"&gt;&lt;/div&gt; &lt;div style=" background-color: #F4F4F4; flex-grow: 0; height: 12px; width: 16px; transform: translateY(-4px);"&gt;&lt;/div&gt; &lt;div style=" width: 0; height: 0; border-top: 8px solid #F4F4F4; border-left: 8px solid transparent; transform: translateY(-4px) translateX(8px);"&gt;&lt;/div&gt;&lt;/div&gt;&lt;/div&gt; &lt;div style="display: flex; flex-direction: column; flex-grow: 1; justify-content: center; margin-bottom: 24px;"&gt; &lt;div style=" background-color: #F4F4F4; border-radius: 4px; flex-grow: 0; height: 14px; margin-bottom: 6px; width: 224px;"&gt;&lt;/div&gt; &lt;div style=" background-color: #F4F4F4; border-radius: 4px; flex-grow: 0; height: 14px; width: 144px;"&gt;&lt;/div&gt;&lt;/div&gt;&lt;/a&gt;&lt;p style=" color:#c9c8cd; font-family:Arial,sans-serif; font-size:14px; line-height:17px; margin-bottom:0; margin-top:8px; overflow:hidden; padding:8px 0 7px; text-align:center; text-overflow:ellipsis; white-space:nowrap;"&gt;&lt;a href="https://www.instagram.com/reel/DblejWLv9qp/?utm_source=ig_embed&amp;amp;utm_campaign=loading" style=" color:#c9c8cd; font-family:Arial,sans-serif; font-size:14px; font-style:normal; font-weight:normal; line-height:17px; text-decoration:none;" target="_blank"&gt;A post shared by Sani Krishna (@sani_krishna)&lt;/a&gt;&lt;/p&gt;&lt;/div&gt;&lt;/blockquote&gt;
&lt;script async src="//www.instagram.com/embed.js"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="2okn7"&gt;ಇನ್‌ಸ್ಟಾಗ್ರಾಮ್‌ನಲ್ಲಿ ಯುವತಿ ವಿಡಿಯೊ ಶೇರ್ ಮಾಡಿಕೊಂಡಿದ್ದು,  ರ‍್ಯಾಪಿಡೋ ಜಾಹೀರಾತುಗಳಲ್ಲಿ ಮಹಿಳಾ ಸುರಕ್ಷತೆಯ ಬಗ್ಗೆ ಪ್ರಚಾರ ಮಾಡಿದರೂ ಬೆಂಬಲಕ್ಕೆ ನಿಲ್ಲಲು ಹಿಂಜರಿದಿದೆ ಎಂದು ದೂರಿದ್ದಾರೆ. ತನ್ನ ಒಂಬತ್ತು ಪಕ್ಕೆಲುಬುಗಳನ್ನು ಮುರಿದಿದೆ. ಮುಖದ ಮೇಲೆ ಪ್ಲಾಸ್ಟಿಕ್ ಸರ್ಜರಿ ಮಾಡಲಾಗಿದೆ. ಆಸ್ಪತ್ರೆಯ ಬಿಲ್ ಈಗಾಗಲೇ 20 ಲಕ್ಷ ರುಪಾಯಿ ದಾಟಿದೆ ಎಂದಿದ್ದಾರೆ. &lt;/p&gt;&lt;p data-block-key="36kf0"&gt;&lt;a href="/viral/police-bike-rapido-service-warangal-85698.html"&gt;&lt;b&gt;ಪೊಲೀಸ್ ಬೈಕ್‌ನಲ್ಲಿ ರ‍್ಯಾಪಿಡೋ ಸೇವೆ; ಸಬ್ ಇನ್ಸ್‌ಪೆಕ್ಟರ್‌ ವಿರುದ್ಧ ಕ್ರಮ&lt;/b&gt;&lt;/a&gt;&lt;/p&gt;&lt;p data-block-key="aiaau"&gt;ಆದರೆ ರ‍್ಯಾಪಿಡೋ ಸಂಸ್ಥೆ ಯಾವುದೇ ನೆರವು ನೀಡಿಲ್ಲ. ಈ ಬಗ್ಗೆ ಕಾನೂನು ಪ್ರಕಾರ ನೋಟಿಸ್ ಕಳುಹಿಸಿದರೂ ಕಂಪನಿ ಕೇವಲ ಇಮೇಲ್ ಆಧಾರಿತ ಇನ್ಶೂರೆನ್ಸ್ ಪ್ರಕ್ರಿಯೆಗೆ ಸೂಚಿಸಿದೆಯೇ ಹೊರತು ಯಾವುದ ನೆರವು ನೀಡಿಲ್ಲ. ರ‍್ಯಾಪಿಡೋ  ಸುರಕ್ಷತಾ ಖಾತರಿಯು ಮಾರ್ಕೆಟಿಂಗ್ ಮೂಲಗಳು ಸುಳ್ಳು, ಗ್ರಾಹಕ ನ್ಯಾಯಾಲಯಕ್ಕೆ ದೂರು ನೀಡುವುದಾಗಿ ತಿಳಿಸಿದೆ.&lt;/p&gt;&lt;p data-block-key="de5sv"&gt;ʼʼಈ ಘಟನೆಗೆ ಸಂಬಂಧಿಸಿದಂತೆ ನಾವು ಸಂತ್ರಸ್ತೆಯ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದೇವೆ. ಅಗತ್ಯವಿರುವ ಎಲ್ಲ ಸಹಾಯವನ್ನು ಒದಗಿಸಲು ಬದ್ಧʼʼ ಎಂದು ರ‍್ಯಾಪಿಡೋ ಸಂಸ್ಥೆ ಹೇಳಿಕೆ ನೀಡಿದೆ. ಆದಾಗ್ಯೂ, ಸಾನಿ ಅವರ ಕುಟುಂಬವು ಇಲ್ಲಿಯವರೆಗೆ ಯಾವುದೇ ಆರ್ಥಿಕ ನೆರವು ಅಥವಾ ಪರಿಹಾರವನ್ನು ನೀಡಿಲ್ಲ ಎಂದು ದೂರಿದೆ.&lt;/p&gt;&lt;p data-block-key="f33c7"&gt;ಈ ಘಟನೆಯು ವ್ಯಾಪಕ ಟೀಕೆಗೆ ಕಾರಣವಾಗಿದೆ. ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಕಿಡಿಕಾರಿದ್ದಾರೆ. ಪೊಲೀಸರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>IND vs SL: ಟೆಸ್ಟ್‌ ಸರಣಿಯ ಆರಂಭಕ್ಕೂ ಮುನ್ನ ಭಾರತ ತಂಡಕ್ಕೆ ಶುಭಮನ್‌ ಗಿಲ್‌ರ ಗಾಯದ ಭೀತಿ!</title><link>https://vishwavani.news/sports/cricket/ind-vs-sl-injury-scare-for-india-captain-shubman-gill-before-first-test-against-sri-lanka-85815.html</link><guid>https://vishwavani.news/sports/cricket/ind-vs-sl-injury-scare-for-india-captain-shubman-gill-before-first-test-against-sri-lanka-85815.html</guid><pubDate>Thu, 06 Aug 2026 16:07:30 +0000</pubDate><description>&lt;![CDATA[Shubman Gill Injury: ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್‌ ಸರಣಿ ಆರಂಭಕ್ಕೂ ಮುನ್ನ ಭಾರತ ತಂಡಕ್ಕೆ ಗಾಯದ ಭೀತಿ ಎದುರಾಗಿದೆ. ಟೀಮ್‌ ಇಂಡಿಯಾ ನಾಯಕ ಶುಭಮನ್‌ ಗಿಲ್‌ ಅವರು ಅಭ್ಯಾಸ ನಡೆಸುತ್ತಿದ್ದ ವೇಳೆ ಎರಡು ಗಾಯಗಳಾಗಿದ್ದು, ಪ್ರವಾಸಿ ತಂಡದ ಕ್ಯಾಂಪ್‌ನಲ್ಲಿ ಆತಂಕ ಉಂಟಾಗಿದೆ.]]&gt;</description><dc:creator>&lt;![CDATA[Ramesh Kote]]&gt;</dc:creator><category>&lt;![CDATA[ಕ್ರಿಕೆಟ್‌]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕ್ರೀಡೆ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Shubman_Gill_KF1Z0vl.original.jpg" class="attachment-large size-large wp-post-image" alt="IND vs SL: ಟೆಸ್ಟ್‌ ಸರಣಿಯ ಆರಂಭಕ್ಕೂ ಮುನ್ನ ಭಾರತ ತಂಡಕ್ಕೆ ಶುಭಮನ್‌ ಗಿಲ್‌ರ ಗಾಯದ ಭೀತಿ!" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="q0s0q"&gt;&lt;b&gt;ನವದೆಹಲಿ:&lt;/b&gt; ಶ್ರೀಲಂಕಾ ವಿರುದ್ಧದ ಟೆಸ್ಟ್‌ ಸರಣಿಗೂ (IND vs SL) ಮುನ್ನ ಭಾರತ ತಂಡಕ್ಕೆ ಗಾಯದ ಭೀತಿ ಎದುರಾಗಿದೆ. ಭಾರತ ತಂಡದ ನಾಯಕ ಶುಭಮನ್‌ ಗಿಲ್‌ (Shubman Gill) ಅವರಿಗೆ ಎರಡು ಗಾಯಗಳ ಭೀತಿ ಎದುರಾಗಿದೆ. ನೆಟ್ಸ್‌ನಲ್ಲಿ ಬ್ಯಾಟಿಂಗ್‌ ಅಭ್ಯಾಸ ನಡೆಸುತ್ತಿದ್ದ ವೇಳೆ ಗಿಲ್‌ ಅವರ ಹೆಬ್ಬೆರಳಿಗೆ ಚೆಂಡು ತಗುಲಿ ಗಾಯವಾಗಿದೆ. ಈ ವೇಳೆ ಆಗಮಿಸಿದ ಫಿಸಿಯೊ ಅವರ ಬ್ಯಾಟಿಂಗ್‌ ಪುನರಾರಂಭಿಸಲು ಅನುಮತಿ ನೀಡಿದರು. ಎರಡನೇ ಬಾರಿ ಚೆಂಡು ತಗುಲಿದ ಬಳಿಕ ಅವರು ನೋವು ಅನುಭವಿಸಿದ ವಿಡಿಯೊ ಹಾಗೂ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ಕಾಣಿಸಿಕೊಂಡಿವೆ. ಸ್ಲಿಪ್‌ನಲ್ಲಿ ಕ್ಯಾಚ್‌ ಪಡೆಯುವ ವೇಳೆ ಅವರ ಬಲಗೈಗೆ ಚೆಂಡು ತಗುಲಿತ್ತು. ಮತ್ತೊಮ್ಮೆ ಫಿಸಿಯೊ ನೆಟ್ಸ್‌ ಬಳಿಕ ಗಿಲ್‌ ಅವರ ಗಾಯವನ್ನು ತಪಾಸಣೆ ನಡೆಸಿದರು. ಈ ವೇಳೆ ನೂತನ ಫೀಲ್ಡಿಂಗ್‌ ಕೋಚ್‌ ಕೂಡ ಸೇರಿದರು.&lt;/p&gt;&lt;p data-block-key="bvk4t"&gt;ಭಾರತ ತಂಡದ ನಾಯಕ ಶುಭಮನ್ ಗಿಲ್ ಸಂಪೂರ್ಣ ಫಿಟ್ ಆಗಿ ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾಗವಹಿಸಲಿ ಎಂಬುದು ಭಾರತ ತಂಡದ ಪ್ರಮುಖ ನಿರೀಕ್ಷೆಯಾಗಿದೆ. ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಬಳಿಕ ವಿವಿಧ ಗಾಯಗಳ ಕಾರಣದಿಂದ ಗಿಲ್ ಈಗಾಗಲೇ ಹಲವು ಪಂದ್ಯಗಳನ್ನು ತಪ್ಪಿಸಿಕೊಂಡಿದ್ದಾರೆ. ಆದ್ದರಿಂದ ಈ ಬಾರಿ ಅವರು ಸಂಪೂರ್ಣ ಫಿಟ್ನೆಸ್ ಕಾಯ್ದುಕೊಂಡು ಸರಣಿಯ ಎಲ್ಲ ಪಂದ್ಯಗಳಲ್ಲೂ ಆಡಿದರೆ ತಂಡಕ್ಕೆ ದೊಡ್ಡ ಬಲವಾಗಲಿದೆ.&lt;/p&gt;&lt;p data-block-key="2dcho"&gt;&lt;a href="/sports/cricket/ind-vs-sl-2026-gautam-gambhirs-strong-message-to-india-before-must-win-sri-lanka-series-85778.html"&gt;&lt;b&gt;IND vs SL: ಟೆಸ್ಟ್‌ ಸರಣಿಗೂ ಮುನ್ನ ಭಾರತ ತಂಡದ ಆಟಗಾರರಿಗೆ ಬಲವಾದ ಸಂದೇಶ ರವಾನಿಸಿದ ಗೌತಮ್‌ ಗಂಭೀರ್‌!&lt;/b&gt;&lt;/a&gt;&lt;/p&gt;&lt;p data-block-key="f5fnm"&gt;ಭಾರತ ಟೆಸ್ಟ್‌ ತಂಡದ ನಾಯಕತ್ವವನ್ನು ಸ್ವೀಕರಿಸಿದ ಶುಭಮನ್‌ ಗಿಲ್‌ ಇದೇ ಮೊದಲ ಬಾರಿ ಶ್ರೀಲಂಕಾ ಎದುರು ಟೆಸ್ಟ್‌ ಸರಣಿಯಲ್ಲಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ರೋಹಿತ್‌ ಶರ್ಮಾ ಟೆಸ್ಟ್‌ಗೆ ವಿದಾಯ ಹೇಳಿದ ಬಳಿಕ ಗಿಲ್‌ ಈ ಸ್ಥಾನವನ್ನು ಅಲಂಕರಿಸಿದ್ದರು. 2025ರ ಇಂಗ್ಲೆಂಡ್‌ ಟೆಸ್ಟ್‌ ಸರಣಿಯಲ್ಲಿ ಮೊದಲ ಬಾರಿ ಭಾರತ ತಂಡವನ್ನು ಗಿಲ್‌ ಮುನ್ನಡೆಸಿದ್ದರು ಹಾಗೂ ಈ ಸರಣಿ ಡ್ರಾನಲ್ಲಿ ಅಂತ್ಯವಾಗಿತ್ತು.&lt;/p&gt;&lt;h3 data-block-key="co961"&gt;&lt;b&gt;ಅಭ್ಯಾಸ ಪಂದ್ಯಗಳಿಗೆ ಸಾಯಿ ಸುದರ್ಶನ್‌ ಔಟ್‌&lt;/b&gt;&lt;/h3&gt;&lt;p data-block-key="b4rfk"&gt;ಶ್ರೀಲಂಕಾ ಎದುರು ಅಭ್ಯಾಸ ಪಂದ್ಯಗಳಿಗೆ ಸಾಯಿ ಸುದರ್ಶನ್‌ ಅವರು ಅಲಭ್ಯರಾಗಿದ್ದಾರೆ. ಅವರ ಹೆಬ್ಬೆರಳು ಗಾಯಕ್ಕೆ ತುತ್ತಾಗಿದ್ದರು. ಅವರು ಸದ್ಯ ಬೆಂಗಳೂರಿನ ಬಿಸಿಸಿಐ ಸೆಂಟರ್‌ ಆಫ್‌ ಎಕ್ಸ್‌ಲೆನ್ಸ್‌ನಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಈ ವಾರದಲ್ಲಿ ಅವರು ಶ್ರೀಲಂಕಕ್ಕೆ ತೆರಳಿ ತಂಡಕ್ಕೆ ಸೇರ್ಪಡೆಯಾಗಲಿದ್ದಾರೆ. &lt;/p&gt;&lt;p data-block-key="5j7se"&gt;&lt;/p&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="twitter-tweet" data-media-max-width="560"&gt;&lt;p lang="en" dir="ltr"&gt; Big Setback for Team India &lt;br&gt;&lt;br&gt;Team India captain Shubman Gill suffered an injury during a practice session. While attempting a catch, the ball struck his thumb, leaving him in considerable pain. The team physio rushed in and provided immediate treatment as Gill looked… &lt;a href="https://t.co/On2ihguKCe"&gt;pic.twitter.com/On2ihguKCe&lt;/a&gt;&lt;/p&gt;&amp;mdash; Central Cricket (@arshdeep3444) &lt;a href="https://x.com/arshdeep3444/status/2085367607893393719?ref_src=twsrc%5Etfw"&gt;August 6, 2026&lt;/a&gt;&lt;/blockquote&gt; &lt;script async src="https://platform.x.com/widgets.js" charset="utf-8"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="bd1tl"&gt;&lt;/p&gt;&lt;p data-block-key="f0rh9"&gt;ಸುದರ್ಶನ್‌ ಅವರು ತಂಡದಲ್ಲಿ ಮೂರನೇ ಕ್ರಮಾಂಕದಲ್ಲಿ ಆಡಿದ  7 ಟೆಸ್ಟ್‌ ಪಂದ್ಯಗಳಿಂದ 383 ರನ್‌ಗಳು ಕಲೆ ಹಾಕಿದ್ದರು.ಅವರು ರೆಡ್‌ ಬಾಲ್‌ ಕ್ರಿಕೆಟ್‌ನಲ್ಲಿ ಮೂರು ಅರ್ಧಶತಕಗಳನ್ನು ಕಲೆ ಹಾಕಿದ್ದಾರೆ. ಶ್ರೀಲಂಕಾ ಎ ವಿರುದ್ಧದ ಪಂದ್ಯದಲ್ಲಿ ಅವರು ಸತತ ಶತಕಗಳನ್ನು ಬಾರಿಸಿದ್ದಾರೆ.&lt;/p&gt;&lt;p data-block-key="kigu"&gt;ಜಸ್‌ಪ್ರೀತ್‌ ಬುಮ್ರಾ ಅವರು ಶ್ರೀಲಂಕಾ ವಿರುದ್ಧದ ಟೆಸ್ಟ್‌ ಸರಣಿಯಿಂದ ಹೊರಬಿದ್ದಿದ್ದಾರೆ. ಇಂಗ್ಲೆಂಡ್‌ ವಿರುದ್ಧದ ಎರಡನೇ ಒಡಿಐ ಪಂದ್ಯದಲ್ಲಿ ಗಬುಮ್ರಾ ಗಾಯಕ್ಕೆ ತುತ್ತಾಗಿದ್ದರು. ಹಾಗಾಗಿ ಮೂರನೇ ಪಂದ್ಯಕ್ಕೆ ಅವರು ಅಲಭ್ಯರಾಗಿದ್ದರು. ಅವರು ಫಿಟ್‌ ಆಗಿದ್ದರೆ, 2026ರ ಏಷ್ಯಾ ಗೇಮ್ಸ್‌ನಲ್ಲಿ ಅವರು ತಂಡಕ್ಕೆ ಮರಳುವ ಸಾಧ್ಯತೆ ಇದೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>Annabrahma chaturmasya: ನಮ್ಮೊಳಗೆ ಒಂದಾಗದೇ ಇರುವ ಆಹಾರವೇ ನಮಗೆ ಶತ್ರು; ರಾಘವೇಶ್ವರ ಶ್ರೀ ವಿಶ್ಲೇಷಣೆ</title><link>https://vishwavani.news/karnataka/uttara-kannada/food-is-advaitha-sadhana-says-sri-raghaveshwara-bharathi-swamiji-85812.html</link><guid>https://vishwavani.news/karnataka/uttara-kannada/food-is-advaitha-sadhana-says-sri-raghaveshwara-bharathi-swamiji-85812.html</guid><pubDate>Thu, 06 Aug 2026 15:42:26 +0000</pubDate><description>&lt;![CDATA[Sri Raghaveshwara Bharathi Swamiji: ಜೀವವು ಉತ್ಕೃಷ್ಟ ಆಹಾರವನ್ನೇ ಸ್ವೀಕರಿಸಬೇಕಾಗುತ್ತದೆ. ದೋಷಯುಕ್ತ ಆಹಾರವನ್ನು ಸೇವಿಸಿದಾಗ ಅದು ನಮ್ಮ ಜೀವಕ್ಕೆ ಹಾನಿಯನ್ನು ಮಾಡುವುದರ ಜತೆಗೆ ಮುಂದಿನ ಪೀಳಿಗೆಗೂ ದೋಷವನ್ನು ವರ್ಗಾಯಿಸುತ್ತದೆ. ಹಾಗಾಗಿ ಜೀವವೆಂಬ ಯಂತ್ರಕ್ಕೆ ಉತ್ತಮವಾದ ಆಹಾರವೆಂಬ ಇಂಧನವನ್ನಷ್ಟೇ ನೀಡಬೇಕು ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ತಿಳಿಸಿದ್ದಾರೆ.]]&gt;</description><dc:creator>&lt;![CDATA[Siddalinga Swamy]]&gt;</dc:creator><category>&lt;![CDATA[ಉತ್ತರ ಕನ್ನಡ]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕರ್ನಾಟಕ]]&gt;</category><category>&lt;![CDATA[ಧಾರ್ಮಿಕ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Sri_Raghaveshwara_Bharathi_Swamiji_dLpKEiN.original.jpg" class="attachment-large size-large wp-post-image" alt="Annabrahma chaturmasya: ನಮ್ಮೊಳಗೆ ಒಂದಾಗದೇ ಇರುವ ಆಹಾರವೇ ನಮಗೆ ಶತ್ರು; ರಾಘವೇಶ್ವರ ಶ್ರೀ ವಿಶ್ಲೇಷಣೆ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="zi4m2"&gt;&lt;b&gt;ಗೋಕರ್ಣ, ಆ. 6:&lt;/b&gt; ಭೋಜನವೆಂದರೆ ಅದು ಅದ್ವೈತ ಸಾಧನೆಯಾಗಿದ್ದು, ಊಟ ಮಾಡಿದ ಆಹಾರ ನಮ್ಮೊಳಗೆ, ನಮ್ಮ ರಕ್ತ, ಮೇಧಸ್ಸು, ಚರ್ಮ ಎಲ್ಲವೂ ಆಗಿ, ಅದು ನಾವೇ ಆಗಿ ರೂಪುಗೊಳ್ಳುತ್ತದೆ. ಮೊದಲು ಆಹಾರವೇ ಬೇರೆ ನಾವೇ ಬೇರೆಯಾಗಿರುತ್ತೇವೆ. ಆದರೆ ನಾವು ಸ್ವೀಕರಿಸಿದ ಆಹಾರ ಕಾಲಕ್ರಮೇಣ ಪ್ರತ್ಯೇಕತೆಯನ್ನು ಕಳೆದುಕೊಂಡು ನಾವೇ ಆಗಿ ನಮ್ಮಲ್ಲಿ ಒಂದಾಗುತ್ತದೆ. ನಮ್ಮ ಜನ್ಮವೂ ಹಾಗೆಯೇ, ಭೂಮಿಯಲ್ಲಿ ಎಲ್ಲ ಕರ್ಮಗಳನ್ನು ಕಳೆದುಕೊಂಡು, ಆನಂತರ ಪರಮಾತ್ಮನಲ್ಲಿ ಒಂದಾಗುವುದೇ ಜೀವನದ ಪರಮ ಗುರಿಯಾಗಿದೆ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ (&lt;a href="/karnataka/uttara-kannada/daytime-sleep-invites-many-diseases-says-sri-raghaveshwara-bharathi-swamiji-85534.html"&gt;&lt;b&gt;Sri Raghaveshwara Bharathi Swamiji&lt;/b&gt;&lt;/a&gt;) ತಿಳಿಸಿದರು.&lt;/p&gt;&lt;p data-block-key="627s8"&gt;ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ 'ಅನ್ನಬ್ರಹ್ಮ ಚಾತುರ್ಮಾಸ್ಯ'ದ ಧರ್ಮಸಭೆಯಲ್ಲಿ ಗುರುವಾರ 'ಅನ್ನಂ ಬ್ರಹ್ಮ' ಮಾಲಿಕೆಯಲ್ಲಿ ಪ್ರವಚನ ಅನುಗ್ರಹಿಸಿದ ಶ್ರೀಗಳು, ಜೀವ - ದೇವಾದ್ವೈತಕ್ಕೆ ಭೋಜನವೆಂಬುದು ತಯಾರಿಯಾಗಿದ್ದು, ಇದು ಜೀವ-ಜೀವಾದ್ವೈತವಾಗಿದೆ. ಅದ್ವೈತವಿರುವಲ್ಲಿ ಆನಂದವಿದ್ದು, ಜೀವ-ಜೀವಾದ್ವೈತವಾದ ಭೋಜನವನ್ನು ಸವಿಯುವಾಗಲೂ ಆನಂದವಾಗುತ್ತದೆ. ಸೇವಿಸುವ ಆಹಾರ ನಮ್ಮೋಳಗೆ ಅದ್ವೈತವಾಗದೇ, ನಮ್ಮೊಳಗೆ ಒಂದಾಗದೇ ಇದ್ದಾಗ ಅದೇ ನಮಗೆ ಶತ್ರುವಾಗುತ್ತದೆ. ಅದೇ ಅನಾರೋಗ್ಯಕ್ಕೂ, ಮರಣಕ್ಕೂ ಕಾರಣವಾಗಬಹುದು. ಸೇವಿಸಿದ ಆಹಾರವನ್ನು ನಾವೇ ಜೀರ್ಣಿಸಿಕೊಳ್ಳಬೇಕು. ಅದಿಲ್ಲದಿದ್ದರೆ ಆ ಆಹಾರವೇ ನಮ್ಮನ್ನು ಜೀರ್ಣಗೊಳಿಸುತ್ತದೆ. ಆಯುರ್ವೇದದ ಸೂತ್ರವೂ ಇದನ್ನೇ ಹೇಳುತ್ತದೆ. ಜೀರ್ಣವಾಗದೇ ಉಳಿಯುವ ಆಹಾರವೇ ಸರ್ವ ರೋಗಕ್ಕೂ ಮೂಲ ಎನ್ನಲಾಗಿದೆ ಎಂದು ಅಭಿಪ್ರಾಯಪಟ್ಟರು.&lt;/p&gt;
&lt;/div&gt;

    
&lt;figure class="article-image text-center mb-4"&gt;
    &lt;img alt="Annabrahma Chaturmasya" class="img-fluid" height="720" src="https://cdn.vishwavani.news/media/images/Annabrahma_Chaturmasya_MwXlGuG.max-1280x720.format-webp.webp" width="1280"&gt;
    
&lt;/figure&gt;

    
&lt;div class="article-paragraph"&gt;
    &lt;p data-block-key="chqpp"&gt;ಭೋಜನದಲ್ಲಿ ಜೀವ- ಜೀವ ಸೇರಿದರೆ, ಜೀವನದಲ್ಲಿ ಜೀವ - ದೇವ ಸೇರುವುದಾಗಿದೆ. ಸೇವಿಸಿದ ಆಹಾರ ಸಂಪೂರ್ಣ ಜೀರ್ಣವಾಗಿ ದೇಹದ ಭಾಗವಾದರೆ ಅದು ಭೌತಿಕ ಅದ್ವೈತ. ಆದರೆ ಅನ್ನಂ ಬ್ರಹ್ಮ ಎಂಬ ಭಾವದಲ್ಲಿ ಸೇವಿಸಿದಾಗ ಅದು ಉನ್ನತ ಮಟ್ಟದ ಅದ್ವೈತವಾಗಿದ್ದು, ಅದು ನಮ್ಮನ್ನು ಮುಕ್ತಿಗೇ ಕರೆದುಕೊಂಡು ಹೋಗುವ ಸಾಧನವಾಗುತ್ತದೆ. ಹಾಗೆಯೇ ಮಣ್ಣು ಮರಳುಗಳನ್ನು ಸೇವಿಸಿ ಜೀವನ ಮಾಡಲಾಗದು. ನಾವು ಸೇವಿಸುವ ಆಹಾರಕ್ಕೆ ಜೀವವಿದ್ದು, ಗಿಡಗಳಿಗೆ ಸುಪ್ತವಾದ ಜೀವವಿದೆ. ಅದಕ್ಕೆ ಸಂವೇದನೆಯೂ ಇದೆ. ಒಂದಾಗುವ ವಸ್ತುಗಳಲ್ಲಿ ಸಮಾನತೆ ಬೇಕು ಎಂಬುದು ಸೃಷ್ಟಿಯ ನಿಯಮ. ಹಾಗಾಗಿ ಜಡ ವಸ್ತುವು ಜೀವಕ್ಕೆ ಆಹಾರವಾಗಲು ಸಾಧ್ಯವಿಲ್ಲ. ಜೀವಕ್ಕೆ ಜೀವವಿರುವ ವಸ್ತುವೇ ಆಹಾರವಾಗಬೇಕು ಎಂದು ತಿಳಿಸಿದರು.&lt;/p&gt;
&lt;/div&gt;

    
&lt;figure class="article-image text-center mb-4"&gt;
    &lt;img alt="Shri Raghaveshwara Bharathi Swamiji" class="img-fluid" height="720" src="https://cdn.vishwavani.news/media/images/Shri_Raghaveshwara_Bharathi_Sw_gQBbOnh.max-1280x720.format-webp.webp" width="1280"&gt;
    
&lt;/figure&gt;

    
&lt;div class="article-paragraph"&gt;
    &lt;p data-block-key="h8ka"&gt;ದೇಹವೆಂಬ ಯಂತ್ರ ಬೆಳಗಿನ ಹೊತ್ತು ಪೂರ್ಣ ಶಕ್ತಿಯಿಂದ ಕಾರ್ಯಾಚರಿಸಿದರೆ, ಸಂಜೆಯಾಗುತ್ತಿದ್ದಂತೆ ನಿಧಾನವಾಗುತ್ತದೆ. ರಾತ್ರಿ ಅದು ವಿಶ್ರಾಂತಿ ಪಡೆಯುವ ಹೊತ್ತು. ಇಂದಿನ ದಿನಗಳಲ್ಲಿ ರಾತ್ರಿ ವೇಳೆ ಕೆಲಸ ಮಾಡುವ ಪ್ರವೃತ್ತಿ ಇದೆ. ಇದು ನಿಜವಾಗಿ ದೇಹದ ಜತೆಗಿನ ಯುದ್ಧವೇ ಆಗಿದೆ ಎಂದು ಅಭಿಪ್ರಾಯಪಟ್ಟರು.&lt;/p&gt;
&lt;/div&gt;

    
&lt;figure class="article-image text-center mb-4"&gt;
    &lt;img alt="Annabrahma chaturmasya" class="img-fluid" height="720" src="https://cdn.vishwavani.news/media/images/Annabrahma_chaturmasya_3M8dBCS.max-1280x720.format-webp.webp" width="1280"&gt;
    
&lt;/figure&gt;

    
&lt;div class="article-paragraph"&gt;
    &lt;p data-block-key="2782d"&gt;ಇದೇ ಸಂದರ್ಭದಲ್ಲಿ ಧಾರ್ಮಿಕ ಪಂಚಾಂಗ ಸಮಿತಿಯ ಪ್ರೋ. ಶಂಭು ಭಟ್ಟ ಕಡತೋಕ ಹಾಗೂ ವಿದ್ವಾನ್ ಪತಂಜಲಿ ವೀಣಾಕರ ಅವರು ಪ್ಲವಂಗ ನಾಮ ಸಂವತ್ಸರದ ಧಾರ್ಮಿಕ ಪಂಚಾಂಗದ ಕರಡು ಪ್ರತಿಯನ್ನು ಶ್ರೀಗಳಿಗೆ ಸಮರ್ಪಿಸಿ ಆಶೀರ್ವಾದ ಪಡೆದರು.&lt;/p&gt;&lt;p data-block-key="12gb3"&gt;&lt;a href="/karnataka/uttara-kannada/daytime-sleep-invites-many-diseases-says-sri-raghaveshwara-bharathi-swamiji-85534.html"&gt;&lt;b&gt;ಹಗಲು ನಿದ್ರೆ ಅನೇಕ ರೋಗಗಳಿಗೆ ಆಹ್ವಾನ: ರಾಘವೇಶ್ವರ ಶ್ರೀ&lt;/b&gt;&lt;/a&gt;&lt;/p&gt;&lt;p data-block-key="29eks"&gt;ಸಾಗರ ಹವ್ಯಕ ಮಂಡಲದ ಕೆಳದಿ ಪಶ್ಚಿಮ, ಕೆಳದಿ ಪೂರ್ವ, ಉಳವಿ, ಕ್ಯಾಸನೂರ, ಇಕ್ಕೆರಿ, ಆವಿನಳ್ಳಿ ವಲಯಗಳ ಪರವಾಗಿ ರಮೇಶ ಹಾರೆಗೊಪ್ಪ ದಂಪತಿಗಳು ಗುರುಭಿಕ್ಷಾ ಸೇವೆ ಸಮರ್ಪಿಸಿದರು. ಸುಬ್ರಹ್ಮಣ್ಯ ಚಿಪ್ಳಿ, ರಾಘವೇಂದ್ರ ಹೊಡಬಟ್ಟೆ, ಗೋವಿಂದ ಹೆಗಡೆ, ನಿಖಿಲ್ ಭಟ್, ದಿನ ಪ್ರಧಾನರಾಗಿ ಗಣಪತಿ ಟಿ.ಆರ್. ವರದಾಮೂಲ ದಂಪತಿ ಉಪಸ್ಥಿತರಿದ್ದರು.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ರಾಜಸ್ಥಾನದ ಸರ್ಕಾರಿ ಆಸ್ಪತ್ರೆಯಲ್ಲಿ ಅಘಾತಕಾರಿ ಘಟನೆ: ಮಹಿಳೆ ಮೇಲೆ ಕುಸಿದು ಬಿದ್ದ ಚಾವಣಿ; ಸಿಸಿಟಿವಿ ದೃಶ್ಯ ವೈರಲ್</title><link>https://vishwavani.news/national/woman-seriously-injured-after-roof-of-government-hospital-collapses-85807.html</link><guid>https://vishwavani.news/national/woman-seriously-injured-after-roof-of-government-hospital-collapses-85807.html</guid><pubDate>Thu, 06 Aug 2026 15:33:24 +0000</pubDate><description>&lt;![CDATA[Viral Video: ರಾಜಸ್ಥಾನದ ಚುರು ಜಿಲ್ಲೆಯ ಸುಜನ್‌ಗಢದಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಅಘಾತಕಾರಿ ಘಟನೆಯೊಂದು ನಡೆದಿದೆ. ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಮುಖ್ಯದ್ವಾರದ ಚಾವಣಿ ಕುಸಿದು ಬಿದ್ದಿದ್ದು ಮಹಿಳೆಯೊಬ್ಬರ ತಲೆಗೆ ತೀವ್ರ ಗಾಯವಾಗಿದೆ. ಮಹಿಳೆಯನ್ನು ಸರ್ಕಾರಿ ಬಗಾಡಿಯಾ ಉಪ-ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.]]&gt;</description><dc:creator>&lt;![CDATA[Pushpa Kumari]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ದೇಶ]]&gt;</category><category>&lt;![CDATA[ವೈರಲ್‌]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Rajasthan_video_1.original.jpg" class="attachment-large size-large wp-post-image" alt="ರಾಜಸ್ಥಾನದ ಸರ್ಕಾರಿ ಆಸ್ಪತ್ರೆಯಲ್ಲಿ ಅಘಾತಕಾರಿ ಘಟನೆ: ಮಹಿಳೆ ಮೇಲೆ ಕುಸಿದು ಬಿದ್ದ ಚಾವಣಿ; ಸಿಸಿಟಿವಿ ದೃಶ್ಯ ವೈರಲ್" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="vbx4r"&gt;&lt;b&gt;ಜೈಪುರ, ಆ. 6:&lt;/b&gt; ಚುರು ಜಿಲ್ಲೆಯ ಸುಜನ್‌ಗಢದಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಅಘಾತಕಾರಿ ಘಟನೆಯೊಂದು ನಡೆದಿದೆ. ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಮುಖ್ಯದ್ವಾರದ ಚಾವಣಿ ಕುಸಿದು ಬಿದ್ದಿದ್ದು, ಮಹಿಳೆಯೊಬ್ಬರ ತಲೆಗೆ ತೀವ್ರ ಗಾಯವಾಗಿದೆ. ಸದ್ಯ ಮಹಿಳೆಯನ್ನು ಸರ್ಕಾರಿ ಬಗಾಡಿಯಾ ಉಪ-ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅಲ್ಲಿ ಅವರು ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆಯ ಸಿಸಿಟಿವಿ ದೃಶ್ಯ ವೈರಲ್ &lt;a href="/viral/uber-driver-drags-biker-half-a-kilometer-away-85036.html"&gt;&lt;b&gt;(Viral News)&lt;/b&gt;&lt;/a&gt;&lt;b&gt; &lt;/b&gt;ಆಗಿದ್ದು ನೆಟ್ಟಿಗರು ಅಘಾತ ವ್ಯಕ್ತ ಪಡಿಸಿದ್ದಾರೆ.&lt;/p&gt;&lt;p data-block-key="8lpk7"&gt;ಈ ಘಟನೆ ಆಸ್ಪತ್ರೆಗಳ ಸ್ಥಿತಿಯ ಬಗ್ಗೆ ಕಳವಳ ಮೂಡಿಸಿದೆ. ಬಾಲ್ಕನಿಯಿಂದ ಸಾರ್ವಜನಿಕರ ಮೇಲೆ ಸುಣ್ಣದ ಚೂರು, ಸಿಮೆಂಟ್ ಚೂರು ಬಿದ್ದಿದೆ. ಈ ಕುಸಿತವು ಆಸ್ಪತ್ರೆಯ ಆವರಣದಲ್ಲಿ ಭೀತಿ ಸೃಷ್ಟಿಸಿದೆ. ರೋಗಿಗಳು, ಸಹಾಯಕರು ಮತ್ತು ಸಿಬ್ಬಂದಿ ಸುರಕ್ಷಿತ ಸ್ಥಳಕ್ಕೆ ಧಾವಿಸಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಘಟನೆಯ ಸಮಯದಲ್ಲಿ ಪ್ರವೇಶದ್ವಾರವು ಜನ ದಟ್ಟಣೆಯಿಂದ ತುಂಬಿರಲಿಲ್ಲ. ಇಲ್ಲದಿದ್ದರೆ ಪರಿಸ್ಥಿತಿ ಇನ್ನಷ್ಟು ಗಂಭೀರವಾಗುತ್ತಿತ್ತು ಎಂದಿದ್ದಾರೆ.&lt;/p&gt;&lt;h3 data-block-key="audql"&gt;&lt;b&gt;ವಿಡಿಯೊ ನೋಡಿ:&lt;/b&gt;&lt;/h3&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="twitter-tweet"&gt;&lt;p lang="en" dir="ltr"&gt;In Rajasthan&amp;#39;s Churu district, a female patient had come to the government hospital for her treatment and suddenly the plaster of Roof fell off &lt;a href="https://t.co/x0h36pU3Yf"&gt;pic.twitter.com/x0h36pU3Yf&lt;/a&gt;&lt;/p&gt;&amp;mdash; Ghar Ke Kalesh (@gharkekalesh) &lt;a href="https://x.com/gharkekalesh/status/2085242367418958249?ref_src=twsrc%5Etfw"&gt;August 6, 2026&lt;/a&gt;&lt;/blockquote&gt; &lt;script async src="https://platform.x.com/widgets.js" charset="utf-8"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="dnh84"&gt;ಮಹಿಳೆಯೊಬ್ಬರಿಗೆ ಮಾತ್ರ ಗಾಯವಾಗಿದ್ದು, ಸದ್ಯ ಅವರಿಗೆ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯಲ್ಲಿ ಬೇರೆ ಯಾರಿಗೂ ಗಾಯಗಳಾಗಿಲ್ಲ ಎಂದು ಆಸ್ಪತ್ರೆ ಆಡಳಿತ ಮಂಡಳಿ ತಿಳಿಸಿದೆ. ಘಟನೆಯ ನಂತರ, ಸ್ಥಳೀಯ ನಿವಾಸಿಗಳು ಆಸ್ಪತ್ರೆ ಕಟ್ಟಡದ ತಾಂತ್ರಿಕ ಪರಿಶೀಲನೆಗೆ ಕರೆ ನೀಡಿದ್ದಾರೆ. ಪ್ರಸ್ತುತ ಮಹಿಳಾ ಆಸ್ಪತ್ರೆಯು ಹಳೆಯ ಟ್ರಾಮಾ ಸೆಂಟರ್ ಕಟ್ಟಡದಲ್ಲಿ ಕಾರ್ಯಾ ಚರಿಸುತ್ತಿದ್ದು, ಈ ಕಟ್ಟಡವು ಕಳೆದ ಕೆಲವು ಸಮಯದಿಂದ ದುರಸ್ತಿಯಲ್ಲಿದೆ.&lt;/p&gt;&lt;p data-block-key="5d2v8"&gt;&lt;a href="/viral/a-fight-broke-out-in-a-shop-over-samosas-video-goes-viral-83889.html"&gt;&lt;b&gt;ಸಮೋಸ ನೀಡಲು ತಡವಾಗಿದ್ದಕ್ಕೆ ರಣರಂಗವಾದ ಬೇಕರಿ; ನೌಕರನ ಮೇಲೆ ಮಾರಣಾಂತಿಕ ಹಲ್ಲೆ&lt;/b&gt;&lt;/a&gt;&lt;/p&gt;&lt;p data-block-key="1e51j"&gt;ಹಳೆಯ ಸಾರ್ವಜನಿಕ ಕಟ್ಟಡಗಳನ್ನು ನಿರ್ಲಕ್ಷಿಸುವುದರಿಂದ ಭವಿಷ್ಯದಲ್ಲಿ ಇದೇ ರೀತಿಯ ಅಪಘಾತಗಳು ಉಂಟಾಗಬಹುದು ಎಂದು ನೆಟ್ಟಿಗರು ಕಳವಳ ವ್ಯಕ್ತಪಡಿಸಿದ್ದಾರೆ. ​ಸರ್ಕಾರಿ ಆರೋಗ್ಯ ಮೂಲಸೌಕರ್ಯಗಳ ಭದ್ರತೆ ಬಗ್ಗೆ ಆಸ್ಪತ್ರೆ ಆಡಳಿತ ಮಂಡಳಿಯ ಬೇಜವಾಬ್ದಾರಿಯ ಬಗ್ಗೆ ಈಗ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಘಟನೆಗೆ ಪ್ರತಿಕ್ರಿಯಿಸಿದ ಆಸ್ಪತ್ರೆಯ ಉಸ್ತುವಾರಿ "ನಾನು ಈಗಾಗಲೇ ಆಸ್ಪತ್ರೆಯ ಬಗ್ಗೆ ಪತ್ರ ಬರೆದಿದ್ದೇನೆ ಮತ್ತು ಶೀಘ್ರದಲ್ಲೇ ಸುಧಾರಣೆಗಳನ್ನು ಮಾಡಲಾಗುವುದು" ಎಂದು ತಿಳಿಸಿದ್ದಾರೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>The Paradise teaser:  ನಾನಿ ‘ದಿ ಪ್ಯಾರಡೈಸ್’ ಚಿತ್ರದ ಟೀಸರ್‌ ಔಟ್‌!</title><link>https://vishwavani.news/movies/the-paradise-teaser-nani-fights-against-feudalism-sits-on-mountain-of-bodies-85813.html</link><guid>https://vishwavani.news/movies/the-paradise-teaser-nani-fights-against-feudalism-sits-on-mountain-of-bodies-85813.html</guid><pubDate>Thu, 06 Aug 2026 15:30:09 +0000</pubDate><description>&lt;![CDATA[The Paradise teaser:  ದಿ ಪ್ಯಾರಡೈಸ್ ಆರಂಭದಲ್ಲಿ ಮಾರ್ಚ್ 26 ರಂದು ಬಿಡುಗಡೆಯಾಗಬೇಕಿತ್ತು. ಇದನ್ನು ಆಗಸ್ಟ್ 21 ಕ್ಕೆ ಮತ್ತು ಈಗ ಸೆಪ್ಟೆಂಬರ್ 24 ಕ್ಕೆ ಮುಂದೂಡಲಾಗಿದೆ. ಎಸ್‌ಎಲ್‌ವಿ ಸಿನಿಮಾಸ್ ಅಡಿಯಲ್ಲಿ ಸುಧಾಕರ್ ಚೆರುಕುರಿ ನಿರ್ಮಿಸಿದ್ದಾರೆ ಮತ್ತು ಇಶಾನ್ ಸಕ್ಸೇನಾ ಸಹ-ನಿರ್ಮಿಸಿದ್ದಾರೆ.  ಬಾಲಿವುಡ್ ನಟ ರಾಘವ್ ಜುಯಾಲ್, ಸಂಪೂರ್ಣೇಶ್ ಬಾಬು, ಮೋಹನ್ ಬಾಬು, ಸೋನಾಲಿ ಕುಲಕರ್ಣಿ, ಈಶ್ವರಿ ರಾವ್, ರಾಜ ರವೀಂದ್ರ, ತನಿಕೇಲ್ಲ ಭರಣಿ, ಎಂ.ಎಸ್. ಚೌಧರಿ ಮತ್ತು ರಾಮ್ ಜಗನ್ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿದ್ದಾರೆ.]]&gt;</description><dc:creator>&lt;![CDATA[Yashaswi Devadiga]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಮನರಂಜನೆ]]&gt;</category><category>&lt;![CDATA[ಸಿನಿಮಾ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/The_Paradise_teaser__Nani_fights_against_feudal.original.jpg" class="attachment-large size-large wp-post-image" alt="The Paradise teaser:  ನಾನಿ ‘ದಿ ಪ್ಯಾರಡೈಸ್’ ಚಿತ್ರದ ಟೀಸರ್‌ ಔಟ್‌!" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="nptb6"&gt;ಶ್ರೀಕಾಂತ್ ಒಡೆಲಾ ಅವರ ದಿ ಪ್ಯಾರಡೈಸ್ (The Paradise) ಚಿತ್ರದ ಟೀಸರ್ ಗುರುವಾರ ಬಿಡುಗಡೆಯಾಗಿದ್ದು, ಚಿತ್ರ ಹೇಗಿರುತ್ತದೆ ಎಂಬುದರ ಒಂದು ಸಣ್ಣ ಝಲಕ್‌ ನೀಡಿದೆ ಈ ಚಿತ್ರದಲ್ಲಿ ನಾನಿ , ಮೋಹನ್ ಬಾಬು (Mohan Babu), ರಾಘವ್ ಜುಯಾಲ್ ಮತ್ತು ಕಯಾದು ಲೋಹರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.&lt;/p&gt;&lt;h3 data-block-key="e5a6o"&gt;&lt;b&gt;ಮಿಶ್ರ ಪ್ರತಿಕ್ರಿಯೆ&lt;/b&gt;&lt;/h3&gt;&lt;p data-block-key="6n6tb"&gt;1 ನಿಮಿಷ-42 ಸೆಕೆಂಡುಗಳ ಉದ್ದದ ದಿ ಪ್ಯಾರಡೈಸ್ ಟೀಸರ್. "#TheParadise ಪ್ರಪಂಚಕ್ಕೆ ಸ್ವಾಗತ" ಎಂದು ಬರೆದಿದ್ದಾರೆ. ಟೀಸರ್‌ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾದವು.&lt;/p&gt;&lt;p data-block-key="38dkf"&gt;&lt;b&gt;ಇದನ್ನೂ ಓದಿ:&lt;/b&gt; &lt;a href="/movies/bigg-boss-weekend-episode-live-entry-agnipariksha-challenge-in-lalbagh-botanical-garden-85804.html"&gt;Bigg Boss Kannada 13: ಬಿಗ್​​ಬಾಸ್ ವೀಕೆಂಡ್ ಎಪಿಸೋಡ್ ಲೈವ್ ನೋಡಬೇಕಾ? ಹಾಗಾದ್ರೆ ಹೀಗೆ ಮಾಡಿ&lt;/a&gt;&lt;/p&gt;&lt;p data-block-key="23cj4"&gt;"ಟೀಸರ್ ಚೆನ್ನಾಗಿದೆ ಆದರೆ ಸಂಗೀತ ಅಷ್ಟು ಇಲ್ಲ ಎಂದು ಬರೆದುಕೊಂಡಿದ್ದಾರೆ. ದಿ ಪ್ಯಾರಡೈಸ್ ಚಿತ್ರವನ್ನು ಶ್ರೀಕಾಂತ್ ಒಡೆಲಾ ಬರೆದು ನಿರ್ದೇಶಿಸಿದ್ದಾರೆ, ಇವರು ಈ ಹಿಂದೆ 2023 ರ ದಸರಾ ಚಿತ್ರದಲ್ಲಿ ನಾನಿ ಅವರೊಂದಿಗೆ ಕೆಲಸ ಮಾಡಿದ್ದರು. ಕೀರ್ತಿ ಸುರೇಶ್ ಮತ್ತು ದೀಕ್ಷಿತ್ ಶೆಟ್ಟಿ ವಿಮರ್ಶಾತ್ಮಕವಾಗಿ ಯಶಸ್ವಿಯಾಯಿತು. ಈಗ ಅವರ ಪುನರ್ಮಿಲನಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ನೀಡಲಿದ್ದಾರೆ. ಇದನ್ನು ಎಸ್‌ಎಲ್‌ವಿ ಸಿನಿಮಾಸ್ ಅಡಿಯಲ್ಲಿ ಸುಧಾಕರ್ ಚೆರುಕುರಿ ನಿರ್ಮಿಸಿದ್ದಾರೆ ಮತ್ತು ಇಶಾನ್ ಸಕ್ಸೇನಾ ಸಹ-ನಿರ್ಮಿಸಿದ್ದಾರೆ. ದಿ ಪ್ಯಾರಡೈಸ್ ಆರಂಭದಲ್ಲಿ ಮಾರ್ಚ್ 26 ರಂದು ಬಿಡುಗಡೆಯಾಗಬೇಕಿತ್ತು. ಇದನ್ನು ಆಗಸ್ಟ್ 21 ಕ್ಕೆ ಮತ್ತು ಈಗ ಸೆಪ್ಟೆಂಬರ್ 24 ಕ್ಕೆ ಮುಂದೂಡಲಾಗಿದೆ.&lt;/p&gt;&lt;p data-block-key="d7m4v"&gt;&lt;/p&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;iframe width="560" height="315" src="https://www.youtube.com/embed/Y3xewv1ZnHc?si=gmIRjHKyBCOV0mhn" title="YouTube video player" frameborder="0" allow="accelerometer; autoplay; clipboard-write; encrypted-media; gyroscope; picture-in-picture; web-share" referrerpolicy="strict-origin-when-cross-origin" allowfullscreen&gt;&lt;/iframe&gt;
    &lt;hr&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;iframe width="560" height="315" src="https://www.youtube.com/embed/Y3xewv1ZnHc?si=eyc_bmp-FNXwhyAv" title="YouTube video player" frameborder="0" allow="accelerometer; autoplay; clipboard-write; encrypted-media; gyroscope; picture-in-picture; web-share" referrerpolicy="strict-origin-when-cross-origin" allowfullscreen&gt;&lt;/iframe&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="9pjep"&gt;&lt;/p&gt;&lt;p data-block-key="9e46b"&gt;'ದಿ ಪ್ಯಾರಡೈಸ್'ನ ಮೊದಲ ಹಾಡು 'ಆಯಾ ಶೇರ್' ಯೂಟ್ಯೂಬ್‌ನಲ್ಲಿ ಧೂಳೆಬ್ಬಿಸಿತ್ತು. ಈ ಹಾಡು ಕೇವಲ ಭಾರತದಲ್ಲಷ್ಟೇ ಅಲ್ಲ, ಜಾಗತಿಕ ಮಟ್ಟದಲ್ಲೂ ಸದ್ದು ಮಾಡುತ್ತಿದೆ. ಬರೋಬ್ಬರಿ 9 ದೇಶಗಳ ಮ್ಯೂಸಿಕ್ ಚಾರ್ಟ್‌ಗಳಲ್ಲಿ 'ಆಯಾ ಶೇರ್' ಮೊದಲ ಸ್ಥಾನದಲ್ಲಿ ಟ್ರೆಂಡ್ ಆಗಿದೆ. ನಾನಿ ಅವರ ಹುಟ್ಟುಹಬ್ಬದ ಪ್ರಯುಕ್ತ ಈ ಹಾಡನ್ನು ಬಿಡುಗಡೆ ಮಾಡಲಾಗಿತ್ತು. ರಿಲೀಸ್ ಆದ ಕೇವಲ 24 ಗಂಟೆಗಳಲ್ಲಿ ಯೂಟ್ಯೂಬ್‌ನಲ್ಲಿ 15 ಮಿಲಿಯನ್‌ಗೂ ಹೆಚ್ಚು ವೀಕ್ಷಣೆ ಪಡೆದಿತ್ತು.&lt;/p&gt;&lt;p data-block-key="9nod4"&gt;ನಾನಿ ಅವರ ವೃತ್ತಿಜೀವನದಲ್ಲೇ 'ದಿ ಪ್ಯಾರಡೈಸ್' ಅತಿದೊಡ್ಡ ರಿಲೀಸ್ ಆಗಲಿದೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಫಸ್ಟ್ ಲುಕ್ ಪೋಸ್ಟರ್‌ಗಳು ಮತ್ತು 'ಸ್ಪಾರ್ಕ್ ಆಫ್ ಪ್ಯಾರಡೈಸ್' ಗ್ಲಿಂಪ್ಸ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಗಮನ ಸೆಳೆದಿದೆ.&lt;/p&gt;&lt;p data-block-key="7rmcl"&gt;&lt;b&gt;ಇದನ್ನೂ ಓದಿ:&lt;/b&gt; &lt;a href="/movies/bigg-boss-kannada-13-these-are-the-judges-of-bigg-boss-85809.html"&gt;Bigg Boss Kannada 13: ಬಿಗ್‌ ಬಾಸ್‌ ಅಗ್ನಿ ಪರೀಕ್ಷೆಯ ತೀರ್ಪುಗಾರರು ಇವರೇ!&lt;/a&gt;&lt;/p&gt;&lt;p data-block-key="enif6"&gt;ಬಾಲಿವುಡ್ ನಟ ರಾಘವ್ ಜುಯಾಲ್, ಸಂಪೂರ್ಣೇಶ್ ಬಾಬು, ಮೋಹನ್ ಬಾಬು, ಸೋನಾಲಿ ಕುಲಕರ್ಣಿ, ಈಶ್ವರಿ ರಾವ್, ರಾಜ ರವೀಂದ್ರ, ತನಿಕೇಲ್ಲ ಭರಣಿ, ಎಂ.ಎಸ್. ಚೌಧರಿ ಮತ್ತು ರಾಮ್ ಜಗನ್ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿದ್ದಾರೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>80ರ ವರ್ಷದ ತಂದೆಯನ್ನು ಮೊದಲ ಬಾರಿಗೆ ಬೀಚ್‌ಗೆ ಕರೆದೊಯ್ದ ಮಗ; ಭಾವುಕ ಕ್ಷಣದ ವಿಡಿಯೊ ವೈರಲ್</title><link>https://vishwavani.news/viral/son-takes-father-to-the-beach-who-has-never-seen-the-sea-85776.html</link><guid>https://vishwavani.news/viral/son-takes-father-to-the-beach-who-has-never-seen-the-sea-85776.html</guid><pubDate>Thu, 06 Aug 2026 15:22:42 +0000</pubDate><description>&lt;![CDATA[Viral Video: 80 ವರ್ಷದ ವೃದ್ಧ ತಂದೆ ಮೊದಲ ಬಾರಿಗೆ ಬೀಚ್‌ಗೆ ಕಾಲಿಟ್ಟು ರೋಮಾಂಚಿತರಾಗಿರುವ ವಿಡಿಯೊ ವೈರಲ್ ಆಗಿದೆ. ಒಡಿಶಾದ ಕೊನಾರ್ಕ್ ಬಳಿಯ ಚಂದ್ರಭಾಗ ಬೀಚ್‌ಗೆ ವೃದ್ಧ ತಂದೆಯನ್ನು ಮಗ ಕರೆದುಕೊಂಡು ಹೋಗಿದ್ದು ಅವರು ಸಣ್ಣ ಮಗುವಿನಂತೆ ಖುಷಿ ಪಟ್ಟಿದ್ದಾರೆ. ಅವರು ಸಮುದ್ರ  ತೀರವನ್ನು ಸಮೀಪಿಸುತ್ತಿದ್ದಂತೆ, ತನ್ನ ಕೈಗಳನ್ನು ಮುಗಿದು ಪ್ರಾರ್ಥನೆ ಮಾಡಿದ್ದಾರೆ. ಕೆಲವು ಕ್ಷಣಗಳ ನಂತರ, ಅಲೆಗಳು ಅವರ ಪಾದಗಳನ್ನು ನಿಧಾನವಾಗಿ ಸ್ಪರ್ಶಿಸಿದಾಗ ಮೌನವಾಗಿ ನಿಂತು ನೋಡಿದ್ದಾರೆ.]]&gt;</description><dc:creator>&lt;![CDATA[Pushpa Kumari]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ವೈರಲ್‌]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Odisha_Video.original.jpg" class="attachment-large size-large wp-post-image" alt="80ರ ವರ್ಷದ ತಂದೆಯನ್ನು ಮೊದಲ ಬಾರಿಗೆ ಬೀಚ್‌ಗೆ ಕರೆದೊಯ್ದ ಮಗ; ಭಾವುಕ ಕ್ಷಣದ ವಿಡಿಯೊ ವೈರಲ್" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="52uk4"&gt;&lt;b&gt;ಭುವನೇಶ್ವರ, ಆ. 6: &lt;/b&gt;ಹೆತ್ತವರ ಸಣ್ಣ- ಪುಟ್ಟ ಆಸೆಗಳನ್ನು ಮಕ್ಕಳು ಈಡೇರಿಸಿದರೆ ಅದಕ್ಕಿಂದ ದೊಡ್ಡ ಯಶಸ್ಸು ಯಾವುದೂ ಇಲ್ಲ.‌ ಸಾಕಿ- ಸಲಹಿದ ಪೋಷಕರನ್ನು ಪ್ರೀತಿ, ಕಾಳಜಿಯಿಂದ ನೋಡಿಕೊಳ್ಳುವುದು ಮಕ್ಕಳ ಜವಾಬ್ದಾರಿ. ಇದೀಗ ತಂದೆ- ಮಗನ ಬಾಂಧವ್ಯ ಸಾರುವ ಅತ್ಯಂತ ಭಾವನಾತ್ಮಕ ವಿಡಿಯೊವೊಂದು ವೈರಲ್&lt;a href="/viral/uber-driver-drags-biker-half-a-kilometer-away-85036.html"&gt;&lt;b&gt; (Viral News)&lt;/b&gt;&lt;/a&gt; ಆಗುತ್ತಿದೆ. 80 ವರ್ಷದ ತಂದೆಯನ್ನು ಮೊದಲ ಬಾರಿಗೆ ಮಗನೊಬ್ಬ ಬೀಚ್ ಗೆ ಕರೆದುಕೊಂಡು ಹೋಗಿದ್ದು ಈ ಭಾವನಾತ್ಮಕ ದೃಶ್ಯ ಆನ್‌ಲೈನ್‌ನಲ್ಲಿ ವೈರಲ್‌ ಆಗಿದೆ.&lt;/p&gt;&lt;p data-block-key="apv9s"&gt;80 ವರ್ಷದ ವೃದ್ಧ ತಂದೆ ಮೊದಲ ಬಾರಿಗೆ ಬೀಚ್‌ನಲ್ಲಿ ಸಮಯ ಕಳೆಯುತ್ತಿರುವ ವಿಡಿಯೊ ನೆಟ್ಟಿಗರ ಗಮನ ಸೆಳೆದಿದೆ. ಒಡಿಶಾದ ಕೊನಾರ್ಕ್ ಬಳಿಯ ಚಂದ್ರಭಾಗ ಬೀಚ್‌ಗೆ ವೃದ್ಧ ತಂದೆಯನ್ನು ಮಗ ಕರೆದುಕೊಂಡು ಹೋಗಿದ್ದು, ಅವರು ಸಣ್ಣ ಮಗುವಿನಂತೆ ಖುಷಿ ಪಟ್ಟಿದ್ದಾರೆ. ಸಮುದ್ರ ತೀರವನ್ನು ಸಮೀಪಿಸುತ್ತಿದ್ದಂತೆ, ಪ್ರಾರ್ಥನೆ ಮಾಡಿ ಜಲ ರಾಶಿಗೆ ನಮಸ್ಕರಿಸಿದ್ದಾರೆ. ಕೆಲವು ಕ್ಷಣಗಳ ನಂತರ, ಅಲೆಗಳು ಅವರ ಪಾದಗಳನ್ನು ನಿಧಾನವಾಗಿ ಸ್ಪರ್ಶಿಸಿದಾಗ, ಮೌನವಾಗಿ ನಿಂತು ನೋಡಿದ್ದಾರೆ.&lt;/p&gt;&lt;h3 data-block-key="37cke"&gt;&lt;b&gt;ವಿಡಿಯೊ ನೋಡಿ:&lt;/b&gt;&lt;/h3&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="instagram-media" data-instgrm-captioned data-instgrm-permalink="https://www.instagram.com/reel/DbiHmeaM6k4/?utm_source=ig_embed&amp;amp;utm_campaign=loading" data-instgrm-version="14" style=" background:#FFF; border:0; border-radius:3px; box-shadow:0 0 1px 0 rgba(0,0,0,0.5),0 1px 10px 0 rgba(0,0,0,0.15); margin: 1px; max-width:540px; min-width:326px; padding:0; width:99.375%; width:-webkit-calc(100% - 2px); width:calc(100% - 2px);"&gt;&lt;div style="padding:16px;"&gt; &lt;a href="https://www.instagram.com/reel/DbiHmeaM6k4/?utm_source=ig_embed&amp;amp;utm_campaign=loading" style=" background:#FFFFFF; line-height:0; padding:0 0; text-align:center; text-decoration:none; width:100%;" target="_blank"&gt; &lt;div style=" display: flex; flex-direction: row; align-items: center;"&gt; &lt;div style="background-color: #F4F4F4; border-radius: 50%; flex-grow: 0; height: 40px; margin-right: 14px; width: 40px;"&gt;&lt;/div&gt; &lt;div style="display: flex; flex-direction: column; flex-grow: 1; justify-content: center;"&gt; &lt;div style=" background-color: #F4F4F4; border-radius: 4px; flex-grow: 0; height: 14px; margin-bottom: 6px; width: 100px;"&gt;&lt;/div&gt; &lt;div style=" background-color: #F4F4F4; border-radius: 4px; flex-grow: 0; height: 14px; width: 60px;"&gt;&lt;/div&gt;&lt;/div&gt;&lt;/div&gt;&lt;div style="padding: 19% 0;"&gt;&lt;/div&gt; &lt;div style="display:block; height:50px; margin:0 auto 12px; width:50px;"&gt;&lt;svg width="50px" height="50px" viewBox="0 0 60 60" version="1.1" xmlns="https://www.w3.org/2000/svg" xmlns:xlink="https://www.w3.org/1999/xlink"&gt;&lt;g stroke="none" stroke-width="1" fill="none" fill-rule="evenodd"&gt;&lt;g transform="translate(-511.000000, -20.000000)" fill="#000000"&gt;&lt;g&gt;&lt;path d="M556.869,30.41 C554.814,30.41 553.148,32.076 553.148,34.131 C553.148,36.186 554.814,37.852 556.869,37.852 C558.924,37.852 560.59,36.186 560.59,34.131 C560.59,32.076 558.924,30.41 556.869,30.41 M541,60.657 C535.114,60.657 530.342,55.887 530.342,50 C530.342,44.114 535.114,39.342 541,39.342 C546.887,39.342 551.658,44.114 551.658,50 C551.658,55.887 546.887,60.657 541,60.657 M541,33.886 C532.1,33.886 524.886,41.1 524.886,50 C524.886,58.899 532.1,66.113 541,66.113 C549.9,66.113 557.115,58.899 557.115,50 C557.115,41.1 549.9,33.886 541,33.886 M565.378,62.101 C565.244,65.022 564.756,66.606 564.346,67.663 C563.803,69.06 563.154,70.057 562.106,71.106 C561.058,72.155 560.06,72.803 558.662,73.347 C557.607,73.757 556.021,74.244 553.102,74.378 C549.944,74.521 548.997,74.552 541,74.552 C533.003,74.552 532.056,74.521 528.898,74.378 C525.979,74.244 524.393,73.757 523.338,73.347 C521.94,72.803 520.942,72.155 519.894,71.106 C518.846,70.057 518.197,69.06 517.654,67.663 C517.244,66.606 516.755,65.022 516.623,62.101 C516.479,58.943 516.448,57.996 516.448,50 C516.448,42.003 516.479,41.056 516.623,37.899 C516.755,34.978 517.244,33.391 517.654,32.338 C518.197,30.938 518.846,29.942 519.894,28.894 C520.942,27.846 521.94,27.196 523.338,26.654 C524.393,26.244 525.979,25.756 528.898,25.623 C532.057,25.479 533.004,25.448 541,25.448 C548.997,25.448 549.943,25.479 553.102,25.623 C556.021,25.756 557.607,26.244 558.662,26.654 C560.06,27.196 561.058,27.846 562.106,28.894 C563.154,29.942 563.803,30.938 564.346,32.338 C564.756,33.391 565.244,34.978 565.378,37.899 C565.522,41.056 565.552,42.003 565.552,50 C565.552,57.996 565.522,58.943 565.378,62.101 M570.82,37.631 C570.674,34.438 570.167,32.258 569.425,30.349 C568.659,28.377 567.633,26.702 565.965,25.035 C564.297,23.368 562.623,22.342 560.652,21.575 C558.743,20.834 556.562,20.326 553.369,20.18 C550.169,20.033 549.148,20 541,20 C532.853,20 531.831,20.033 528.631,20.18 C525.438,20.326 523.257,20.834 521.349,21.575 C519.376,22.342 517.703,23.368 516.035,25.035 C514.368,26.702 513.342,28.377 512.574,30.349 C511.834,32.258 511.326,34.438 511.181,37.631 C511.035,40.831 511,41.851 511,50 C511,58.147 511.035,59.17 511.181,62.369 C511.326,65.562 511.834,67.743 512.574,69.651 C513.342,71.625 514.368,73.296 516.035,74.965 C517.703,76.634 519.376,77.658 521.349,78.425 C523.257,79.167 525.438,79.673 528.631,79.82 C531.831,79.965 532.853,80.001 541,80.001 C549.148,80.001 550.169,79.965 553.369,79.82 C556.562,79.673 558.743,79.167 560.652,78.425 C562.623,77.658 564.297,76.634 565.965,74.965 C567.633,73.296 568.659,71.625 569.425,69.651 C570.167,67.743 570.674,65.562 570.82,62.369 C570.966,59.17 571,58.147 571,50 C571,41.851 570.966,40.831 570.82,37.631"&gt;&lt;/path&gt;&lt;/g&gt;&lt;/g&gt;&lt;/g&gt;&lt;/svg&gt;&lt;/div&gt;&lt;div style="padding-top: 8px;"&gt; &lt;div style=" color:#3897f0; font-family:Arial,sans-serif; font-size:14px; font-style:normal; font-weight:550; line-height:18px;"&gt;View this post on Instagram&lt;/div&gt;&lt;/div&gt;&lt;div style="padding: 12.5% 0;"&gt;&lt;/div&gt; &lt;div style="display: flex; flex-direction: row; margin-bottom: 14px; align-items: center;"&gt;&lt;div&gt; &lt;div style="background-color: #F4F4F4; border-radius: 50%; height: 12.5px; width: 12.5px; transform: translateX(0px) translateY(7px);"&gt;&lt;/div&gt; &lt;div style="background-color: #F4F4F4; height: 12.5px; transform: rotate(-45deg) translateX(3px) translateY(1px); width: 12.5px; flex-grow: 0; margin-right: 14px; margin-left: 2px;"&gt;&lt;/div&gt; &lt;div style="background-color: #F4F4F4; border-radius: 50%; height: 12.5px; width: 12.5px; transform: translateX(9px) translateY(-18px);"&gt;&lt;/div&gt;&lt;/div&gt;&lt;div style="margin-left: 8px;"&gt; &lt;div style=" background-color: #F4F4F4; border-radius: 50%; flex-grow: 0; height: 20px; width: 20px;"&gt;&lt;/div&gt; &lt;div style=" width: 0; height: 0; border-top: 2px solid transparent; border-left: 6px solid #f4f4f4; border-bottom: 2px solid transparent; transform: translateX(16px) translateY(-4px) rotate(30deg)"&gt;&lt;/div&gt;&lt;/div&gt;&lt;div style="margin-left: auto;"&gt; &lt;div style=" width: 0px; border-top: 8px solid #F4F4F4; border-right: 8px solid transparent; transform: translateY(16px);"&gt;&lt;/div&gt; &lt;div style=" background-color: #F4F4F4; flex-grow: 0; height: 12px; width: 16px; transform: translateY(-4px);"&gt;&lt;/div&gt; &lt;div style=" width: 0; height: 0; border-top: 8px solid #F4F4F4; border-left: 8px solid transparent; transform: translateY(-4px) translateX(8px);"&gt;&lt;/div&gt;&lt;/div&gt;&lt;/div&gt; &lt;div style="display: flex; flex-direction: column; flex-grow: 1; justify-content: center; margin-bottom: 24px;"&gt; &lt;div style=" background-color: #F4F4F4; border-radius: 4px; flex-grow: 0; height: 14px; margin-bottom: 6px; width: 224px;"&gt;&lt;/div&gt; &lt;div style=" background-color: #F4F4F4; border-radius: 4px; flex-grow: 0; height: 14px; width: 144px;"&gt;&lt;/div&gt;&lt;/div&gt;&lt;/a&gt;&lt;p style=" color:#c9c8cd; font-family:Arial,sans-serif; font-size:14px; line-height:17px; margin-bottom:0; margin-top:8px; overflow:hidden; padding:8px 0 7px; text-align:center; text-overflow:ellipsis; white-space:nowrap;"&gt;&lt;a href="https://www.instagram.com/reel/DbiHmeaM6k4/?utm_source=ig_embed&amp;amp;utm_campaign=loading" style=" color:#c9c8cd; font-family:Arial,sans-serif; font-size:14px; font-style:normal; font-weight:normal; line-height:17px; text-decoration:none;" target="_blank"&gt;A post shared by Bhukkhad Musafir | Shrikant &amp;amp; Noopur ❤️ (@bhukkhad_musafir)&lt;/a&gt;&lt;/p&gt;&lt;/div&gt;&lt;/blockquote&gt;
&lt;script async src="//www.instagram.com/embed.js"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="2a78n"&gt;ಅವರ ಮಗ ಈ ಭಾವನಾತ್ಮಕ ಕ್ಷಣವನ್ನು ರೆಕಾರ್ಡ್ ಮಾಡಿದ್ದಾರೆ. ಆ ಕ್ಷಣವನ್ನು ಪರಿಚಯಿಸುತ್ತಾ, ʼʼನನ್ನ ತಂದೆ ಎಂದಿಗೂ ಸಮುದ್ರ ತೀರವನ್ನು ನೋಡಿಲ್ಲ. ನಾನು ಅವರನ್ನು ಜೀವನದಲ್ಲಿ ಮೊದಲ ಬಾರಿಗೆ ಕಡಲ ತೀರಕ್ಕೆ ಕರೆತಂದಿದ್ದೇನೆ. ನನ್ನ ತಂದೆಯ ಮೊದಲ ಪ್ರತಿಕ್ರಿಯೆ ಹೇಗಿರುತ್ತದೆ ಎಂದು ನೋಡೋಣʼʼ ಎಂದು ಹೇಳಿದ್ದಾರೆ.&lt;/p&gt;&lt;p data-block-key="db281"&gt;&lt;a href="/viral/a-young-woman-consumed-poison-in-the-police-station-fed-up-with-delayed-justice-85498.html"&gt;&lt;b&gt;ನ್ಯಾಯ ಸಿಕ್ಕಿಲ್ಲ ಎಂದು ಬೇಸತ್ತು ಪೊಲೀಸ್ ಠಾಣೆಯಲ್ಲೇ ವಿಷ ಸೇವಿಸಿದ ಯುವತಿ!&lt;/b&gt;&lt;/a&gt;&lt;/p&gt;&lt;p data-block-key="atlv7"&gt;ನೀರಿನ ದಂಡೆಯ ಹತ್ತಿರ ಹೋದಂತೆ ಅವರು ಕೈಮುಗಿದು ಪ್ರಣಾಮ ಸಲ್ಲಿಸಿದ್ದಾರೆ. ತಣ್ಣನೆಯ ಅಲೆಗಳು ಅವರ ಕಾಲುಗಳನ್ನು ಸ್ಪರ್ಶಿಸಿದಾಗ ಸಮುದ್ರದ ವಿಸ್ತಾರವನ್ನು ನೋಡುತ್ತಾ ಮೌನವಾಗಿ ನಿಂತು ಬಿಟ್ಟಿದ್ದಾರೆ. "ಬಾಬುಜಿ, ನೀರು ನಿಮ್ಮ ಕಾಲ ಬಳಿ ಬರುತ್ತಿದೆ, ನಿಮಗೆ ಏನೆನಿಸುತ್ತಿದೆ?" ಎಂದು ಮಗ ಕೇಳಿದಾಗ, "ಜೀವನದಲ್ಲಿ ಇಂತಹ ದೊಡ್ಡ ಜಲರಾಶಿಯನ್ನು ನಾನು ನೋಡಿಲ್ಲ, ನಾನು ಅದನ್ನು ನೋಡುತ್ತಲೇ ಇರಬೇಕು ಎನಿಸುತ್ತಿದೆ'' ಎಂದು ಪ್ರತಿಕ್ರಿಯಿಸಿದ್ದಾರೆ.&lt;/p&gt;&lt;p data-block-key="esur0"&gt;ಈ ವಿಡಿಯೊಗೆ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದು, ಸಾಗರಕ್ಕೆ ಮೊದಲು ನಮಸ್ಕರಿಸಿದ್ದಾರೆ. ಇವರು ಪ್ರಕೃತಿಯ ನಿಜವಾದ ಮೌಲ್ಯವನ್ನು ಅರ್ಥ ಮಾಡಿಕೊಂಡಿದ್ದಾನೆ ಎಂದು ಬರೆದಿದ್ದಾರೆ. ಮತ್ತೊಬ್ಬರು, ʼʼಇವರ ಮುಗ್ಧತೆ ಎದ್ದು ತೋರುತ್ತಿದೆʼʼ ಎಂದಿದ್ದಾರೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ʻಗಲ್ಲಿ ಕ್ರಿಕೆಟ್‌ ಆಡುತ್ತಿದ್ದೀರಾ?ʼ: ರೋಹಿತ್‌ ಶರ್ಮಾ ಬೈದಿದ್ದ ಘಟನೆಯನ್ನು ನೆನೆದ ಯಶಸ್ವಿ ಜೈಸ್ವಾಲ್‌!</title><link>https://vishwavani.news/sports/cricket/yashasvi-jaiswal-recalls-rohit-sharmas-scolding-with-hilarious-post-ahead-of-sl-tests-85811.html</link><guid>https://vishwavani.news/sports/cricket/yashasvi-jaiswal-recalls-rohit-sharmas-scolding-with-hilarious-post-ahead-of-sl-tests-85811.html</guid><pubDate>Thu, 06 Aug 2026 14:53:02 +0000</pubDate><description>&lt;![CDATA[ಶ್ರೀಲಂಕಾ ವಿರುದ್ಧದ ಟೆಸ್ಟ್‌ ಸರಣಿಗೂ ಮುನ್ನ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಯಶಸ್ವಿ ಜೈಸ್ವಾಲ್‌ ಅವರು ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ತಮಗೆ ಮಾಜಿ ನಾಯಕ ರೋಹಿತ್‌ ಶರ್ಮಾ ಒನ್ನೆ ಬೈದಿದ್ದ  ಹಾಸ್ಯಕರ ಪ್ರಸಂಗವನ್ನು ಎಡಗೈ ಬ್ಯಾಟ್ಸ್‌ಮನ್‌ ಇದೀಗ ರಿವೀಲ್‌ ಮಾಡಿದ್ದಾರೆ.]]&gt;</description><dc:creator>&lt;![CDATA[Ramesh Kote]]&gt;</dc:creator><category>&lt;![CDATA[ಕ್ರಿಕೆಟ್‌]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕ್ರೀಡೆ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Yashasvi_jaiswal-KL_Rahul.original.jpg" class="attachment-large size-large wp-post-image" alt="ʻಗಲ್ಲಿ ಕ್ರಿಕೆಟ್‌ ಆಡುತ್ತಿದ್ದೀರಾ?ʼ: ರೋಹಿತ್‌ ಶರ್ಮಾ ಬೈದಿದ್ದ ಘಟನೆಯನ್ನು ನೆನೆದ ಯಶಸ್ವಿ ಜೈಸ್ವಾಲ್‌!" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="d2qhx"&gt;&lt;b&gt;ನವದೆಹಲಿ: &lt;/b&gt;ಶ್ರೀಲಂಕಾ ವಿರುದ್ಧದ ಮುಂಬರುವ ಟೆಸ್ಟ್ ಸರಣಿಗೆ (IND vs SL) ಭಾರತ ತಂಡ ಸಿದ್ಧತೆ ನಡೆಸುತ್ತಿರುವ ನಡುವೆ ಯುವ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ (Yashasvi jaiswal), ಮಾಜಿ ನಾಯಕ ರೋಹಿತ್ ಶರ್ಮಾ (Rohit Sharma)ಅವರೊಂದಿಗಿನ ಒಂದು ತಮಾಷೆಯ ಪ್ರಸಂಗವೊಂದನ್ನು ನೆನೆದು ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಭಾರತ ತಂಡದ ಅಭ್ಯಾಸದ ಕೆಲವು ಚಿತ್ರಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ಜೈಸ್ವಾಲ್, ಅದಕ್ಕೆ ನೀಡಿದ ಶೀರ್ಷಿಕೆ ಕ್ರಿಕೆಟ್ ಅಭಿಮಾನಿಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಯಿತು.&lt;/p&gt;&lt;p data-block-key="8d9en"&gt;"ಒಬ್ಬ ದಿಗ್ಗಜ ಹೇಳಿದಂತೆ – 'ಜಬ್ ತಕ್ ಖೇಲೇಗಾ ನಹೀಂ, ತಬ್ ತಕ್ ಉತ್ತ್ನೇಕಾ ನಹೀಂ'" ಎಂದು ಜೈಸ್ವಾಲ್ ಬರೆದುಕೊಂಡಿದ್ದಾರೆ.&lt;/p&gt;&lt;p data-block-key="41ugv"&gt;ಈ ಸಾಲು 2024-25ರ ಬಾರ್ಡರ್-ಗವಾಸ್ಕರ್ ಟ್ರೋಫಿ ವೇಳೆ ನಡೆದ ಒಂದು ವೈರಲ್ ಘಟನೆಯನ್ನು ನೆನಪಿಸಿತು. ಆ ಪಂದ್ಯದಲ್ಲಿ ಜೈಸ್ವಾಲ್, ಫಾರ್ವರ್ಡ್ ಶಾರ್ಟ್ ಲೆಗ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದರು. ಸ್ಟೀವ್ ಸ್ಮಿತ್ ಚೆಂಡನ್ನು ಸಂಪೂರ್ಣವಾಗಿ ಆಡಲು ಮುನ್ನವೇ ಜೈಸ್ವಾಲ್ ಎದ್ದು ನಿಂತಿದ್ದರು. ಅದನ್ನು ಗಮನಿಸಿದ ಅಂದಿನ ನಾಯಕ ರೋಹಿತ್ ಶರ್ಮಾ ತಕ್ಷಣವೇ, "ಅರೇ ಜಸ್ಸು, ಗಲ್ಲಿ ಕ್ರಿಕೆಟ್ ಆಡ್ತಿದಿಯಾ? ಕೆಳಗೆ ಕೂತು... ಬ್ಯಾಟರ್ ಚೆಂಡು ಆಡುವವರೆಗೂ ಏಳಬೇಡ!" ಎಂದು ಸ್ಟಂಪ್ ಮೈಕ್‌ನಲ್ಲಿ ಗದರಿಸಿದ್ದರು.&lt;/p&gt;&lt;p data-block-key="apui1"&gt;&lt;a href="/sports/cricket/batting-great-sunil-gavaskar-picks-indias-world-cup-2027-squad-85801.html"&gt;&lt;b&gt;2027ರ ಏಕದಿನ ವಿಶ್ವಕಪ್‌ ಟೂರ್ನಿಗೆ ಭಾರತ ತಂಡವನ್ನು ಆರಿಸಿದ ಸುನೀಲ್‌ ಗವಾಸ್ಕರ್‌!&lt;/b&gt;&lt;/a&gt;&lt;/p&gt;&lt;p data-block-key="5urle"&gt;ರೋಹಿತ್ ಅವರ ಆ ಪ್ರತಿಕ್ರಿಯೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿ, ಆಸ್ಟ್ರೇಲಿಯಾ ಪ್ರವಾಸದ ಅತ್ಯಂತ ಮನರಂಜನೆಯ ಕ್ಷಣಗಳಲ್ಲಿ ಒಂದಾಗಿ ಪರಿಣಮಿಸಿತ್ತು. ಈಗ ಹಲವು ತಿಂಗಳುಗಳ ಬಳಿಕ ಜೈಸ್ವಾಲ್ ತಮ್ಮ ಇನ್‌ಸ್ಟಾಗ್ರಾಂ ಪೋಸ್ಟ್ ಮೂಲಕ ಅದೇ ಘಟನೆಯನ್ನು ಮತ್ತೆ ನೆನಪಿಸಿ ಅಭಿಮಾನಿಗಳಿಗೆ ನಗು ತಂದಿದ್ದಾರೆ.&lt;/p&gt;&lt;p data-block-key="2ka00"&gt;ಇದೀಗ ಭಾರತ ತಂಡ ಆಗಸ್ಟ್ 15ರಂದು ಗಾಲೆಯಲ್ಲಿ ಆರಂಭವಾಗಲಿರುವ ಟೆಸ್ಟ್ ಸರಣಿಯ ಮೊದಲನೇ ಪಂದ್ಯದಲ್ಲಿ ಶ್ರೀಲಂಕಾವನ್ನು ಎದುರಿಸಲು ಸಜ್ಜಾಗಿದೆ. ಶುಭಮನ್ ಗಿಲ್ ನಾಯಕತ್ವದ ತಂಡಕ್ಕೆ ಈ ಸರಣಿ ಟೆಸ್ಟ್ ಕ್ರಿಕೆಟ್‌ನಲ್ಲಿ ಉತ್ತಮ ಲಯ ಕಂಡುಕೊಳ್ಳಲು ಮಹತ್ವದ್ದಾಗಿದೆ.&lt;/p&gt;&lt;p data-block-key="3du0j"&gt;ಭಾರತದ ಬ್ಯಾಟಿಂಗ್ ಕ್ರಮಾಂಕದಲ್ಲಿ ಜೈಸ್ವಾಲ್ ಮತ್ತೊಮ್ಮೆ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ. ಟೆಸ್ಟ್ ಪದಾರ್ಪಣೆಯ ಬಳಿಕ ಅವರು 29 ಪಂದ್ಯಗಳಲ್ಲಿ 48.75ರ ಸರಾಸರಿಯಲ್ಲಿ 2,535 ರನ್ ಗಳಿಸಿದ್ದು, ಏಳು ಶತಕ ಮತ್ತು 13 ಅರ್ಧಶತಕಗಳನ್ನು ದಾಖಲಿಸಿದ್ದಾರೆ.&lt;/p&gt;&lt;p data-block-key="1o8ft"&gt;&lt;a href="/sports/cricket/england-announce-16-member-squad-for-pakistan-test-series-jordan-cox-ruled-out-85785.html"&gt;&lt;b&gt;ENG vs PAK ಟೆಸ್ಟ್‌ ಸರಣಿಗೆ 16 ಸದಸ್ಯರ ಇಂಗ್ಲೆಂಡ್‌ ತಂಡ ಪ್ರಕಟ, ಜೋರ್ಡನ್‌ ಕಾಕ್ಸ್‌ ಔಟ್‌!&lt;/b&gt;&lt;/a&gt;&lt;/p&gt;&lt;p data-block-key="6bfg8"&gt;ಆದರೆ ಇತ್ತೀಚಿನ ಕೆಲವು ಸರಣಿಗಳಲ್ಲಿ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ, ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಮತ್ತೆ ಉತ್ತಮ ಲಯ ಕಂಡುಕೊಂಡು ಭಾರತದ ಟೆಸ್ಟ್ ಬ್ಯಾಟಿಂಗ್ ಕ್ರಮಾಂಕದಲ್ಲಿ ತಮ್ಮ ಸ್ಥಾನವನ್ನು ಗಟ್ಟಿ ಮಾಡಿಕೊಳ್ಳುವ ಗುರಿಯನ್ನು ಜೈಸ್ವಾಲ್ ಹೊಂದಿದ್ದಾರೆ.&lt;/p&gt;&lt;p data-block-key="5vikm"&gt;&lt;b&gt;ಶ್ರೀಲಂಕಾ ಟೆಸ್ಟ್‌ ಸರಣಿಗೆ ಭಾರತ ತಂಡ:&lt;/b&gt; ಶುಭಮನ್‌ ಗಿಲ್‌ (ನಾಯಕ), ಕೆಎಲ್‌ ರಾಹುಲ್‌ (ಉಪ ನಾಯಕ), ಯಶಸ್ವಿ ಜೈಸ್ವಾಲ್‌, ರಿಷಭ್‌ ಪಂತ್‌ (ವಿಕೆಟ್‌ ಕೀಪರ್‌), ಸಾಯಿ ಸುದರ್ಶನ್‌*, ಧ್ರುವ್‌ ಜುರೆಲ್‌ (ವಿಕೆಟ್‌ ಕೀಪರ್‌), ರವೀಂದ್ರ ಜಡೇಜಾ, ಕುಲ್ದೀಪ್‌ ಯಾದವ್‌, ಮಾನವ್‌ ಸುತಾರ್‌, ಆಕಿಬ್‌ ನಬಿ, ಮೊಹಮ್ಮದ್‌ ಸಿರಾಜ್‌, ಪ್ರಸಿಧ್‌ ಕೃಷ್ಣ, ಗುರ್ನೂರ್‌ ಬ್ರಾರ್‌, ದೇವದತ್‌ ಪಡಿಕ್ಕಲ್‌, ಸಾರಾಂಶ್‌ ಜೈನ್‌&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಉದ್ಯೋಗಾಂಕ್ಷಿಗಳ ಗಮನಕ್ಕೆ...: ಗ್ರಾಮ ಆಡಳಿತ ಅಧಿಕಾರಿ ಹುದ್ದೆ ಅರ್ಜಿ ಸಲ್ಲಿಕೆ ದಿನಾಂಕ ಮತ್ತೊಮ್ಮೆ ವಿಸ್ತರಣೆ</title><link>https://vishwavani.news/job/kea-recruitment-the-last-date-to-apply-for-the-village-administration-officer-position-has-been-extended-to-august-20-85810.html</link><guid>https://vishwavani.news/job/kea-recruitment-the-last-date-to-apply-for-the-village-administration-officer-position-has-been-extended-to-august-20-85810.html</guid><pubDate>Thu, 06 Aug 2026 14:49:00 +0000</pubDate><description>&lt;![CDATA[KEA Recruitment: 572 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇದೀಗ ಕೊನೆಯ ದಿನಾಂಕವನ್ನು ವಿಸ್ತರಿಸಿ ಆದೇಸ ಹೊರಡಿಸಿದೆ. ಹೊಸ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳು ಆಗಸ್ಟ್‌ 20ರವರೆಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಆನ್‌ಲೈನ್‌ ಮೂಲಕ ಶುಲ್ಕ ಪಾವತಿಸಲು ಕೊನೆಯ ದಿನ ಆಗಸ್ಟ್‌ 21.]]&gt;</description><dc:creator>&lt;![CDATA[Ramesh Ballamoole]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕರ್ನಾಟಕ]]&gt;</category><category>&lt;![CDATA[ಉದ್ಯೋಗ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/KEA_Recruitment.original.jpg" class="attachment-large size-large wp-post-image" alt="ಉದ್ಯೋಗಾಂಕ್ಷಿಗಳ ಗಮನಕ್ಕೆ...: ಗ್ರಾಮ ಆಡಳಿತ ಅಧಿಕಾರಿ ಹುದ್ದೆ ಅರ್ಜಿ ಸಲ್ಲಿಕೆ ದಿನಾಂಕ ಮತ್ತೊಮ್ಮೆ ವಿಸ್ತರಣೆ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="0b7c4"&gt;&lt;b&gt;ಬೆಂಗಳೂರು, ಆ. 6:&lt;/b&gt; 572 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ಭರ್ತಿಗೆ ಮುಂದಾಗುವ ಮೂಲಕ ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ ನೀಡಿದ ರಾಜ್ಯ ಸರ್ಕಾರ ಇದೀಗ ಮಹತ್ವದ ಅಪ್‌ಡೇಟ್‌ ಪ್ರಕಟಿಸಿದೆ. ಕಂದಾಯ ಇಲಾಖೆಯ ವಿವಿಧ ಜಿಲ್ಲೆಗಳಲ್ಲಿನ ಕಲ್ಯಾಣ ಕರ್ನಾಟಕ (KK) ಮತ್ತು ಉಳಿಕೆ ಮೂಲ ವೃಂದದಲ್ಲಿ(RPC) ಒಟ್ಟು 572 ಗ್ರಾಮ ಆಡಳಿತ ಅಧಿಕಾರಿ ಹುದ್ದೆ &lt;a href="/job/vao-recruitment-2026-applications-invited-for-572-village-administrative-officer-posts-heres-the-information-about-the-recruitment-83453.html"&gt;&lt;b&gt;(VAO Recruitment 2026)&lt;/b&gt;&lt;/a&gt; ಇದ್ದು, ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಭರ್ತಿ ಮಾಡಲಾಗುತ್ತಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದ್ದು, ಇದೀಗ ಆನ್‌ಲೈನ್‌ ಅರ್ಜಿ ಸಲ್ಲಿಕೆ ದಿನಾಂಕವನ್ನು ವಿಸ್ತರಿಸಿದೆ. ಹೊಸ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳು ಆಗಸ್ಟ್‌ 20ರವರೆಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಆನ್‌ಲೈನ್‌ ಮೂಲಕ ಶುಲ್ಕ ಪಾವತಿಸಲು ಕೊನೆಯ ದಿನ ಆಗಸ್ಟ್‌ 21.&lt;/p&gt;&lt;p data-block-key="6urn0"&gt;ವಿಶೇಷ ಎಂದರೆ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ ಬದಲಾಗುತ್ತಿರುವುದು ಇದು 2ನೇ ಬಾರಿ. ಆರಂಭದಲ್ಲಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಕೆ ಜುಲೈ  30 ಮತ್ತು ಶುಲ್ಕ ಪಾವತಿಸಲು ಜುಲೈ 31ರವರೆಗೆ ಅವಕಾಶ ನೀಡಲಾಗಿತ್ತು. ಬಳಿಕ ಅದನ್ನು ಆಗಸ್ಟ್‌ 7 ಮತ್ತು 8ಕ್ಕೆ ಮರುನಿಗದಿಪಡಿಸಲಾಯಿತು. ಇದೀಗ ಇನ್ನೂ 13 ದಿನ ಹೆಚ್ಚುವರಿಯಾಗಿ ನೀಡಲಾಗಿದೆ. ಈ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಣೆ ಹೊರಡಿಸಿದೆ. &lt;/p&gt;&lt;h3 data-block-key="8er24"&gt;&lt;b&gt;ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಪ್ರಕಟಣೆ:&lt;/b&gt;&lt;/h3&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="twitter-tweet"&gt;&lt;p lang="kn" dir="ltr"&gt;&lt;a href="https://x.com/hashtag/KEARecruitment?src=hash&amp;amp;ref_src=twsrc%5Etfw"&gt;#KEARecruitment&lt;/a&gt;: ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸುವ ಕೊನೆ ದಿನಾಂಕವನ್ನು ಆಗಸ್ಟ್ 20ರವರೆಗೆ &lt;a href="https://x.com/hashtag/KEA?src=hash&amp;amp;ref_src=twsrc%5Etfw"&gt;#KEA&lt;/a&gt; ವಿಸ್ತರಿಸಿದೆ.&lt;br&gt;&lt;br&gt;ಶುಲ್ಕ ಪಾವತಿಸಲು ಆಗಸ್ಟ್ 21 ಕೊನೆ ದಿನ.&lt;br&gt;&lt;br&gt;ಸಾರ್ವಜನಿಕರ ಕೋರಿಕೆ ಮೇರೆಗೆ ಆ.7ಕ್ಕೆ ಇದ್ದ ಕೊನೆ ದಿನಾಂಕ ವಿಸ್ತರಿಸಲಾಗಿದೆ.&lt;br&gt;&lt;br&gt;ಕಲ್ಯಾಣ ಕರ್ನಾಟಕ ವೃಂದಕ್ಕೆ ಅರ್ಜಿ ಸಲ್ಲಿಸುವವರಿಗೂ ಅನ್ವಯವಾಗುತ್ತದೆ.… &lt;a href="https://t.co/mR1Uq9sHur"&gt;pic.twitter.com/mR1Uq9sHur&lt;/a&gt;&lt;/p&gt;&amp;mdash; ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA (@KEA_karnataka) &lt;a href="https://x.com/KEA_karnataka/status/2085359420838711560?ref_src=twsrc%5Etfw"&gt;August 6, 2026&lt;/a&gt;&lt;/blockquote&gt; &lt;script async src="https://platform.x.com/widgets.js" charset="utf-8"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="fl1ob"&gt;&lt;b&gt;ಪ್ರಕಟಣೆಯಲ್ಲಿ ಏನಿದೆ?&lt;/b&gt;&lt;/p&gt;&lt;p data-block-key="9tovf"&gt;ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯ ವಿವಿಧ ಜಿಲ್ಲೆಗಳಲ್ಲಿನ ಉಳಿಕೆ ಮೂಲ ವೃಂದದಲ್ಲಿ ಖಾಲಿ ಇರುವ ಗ್ರಾಮ ಆಡಳಿತಾಧಿಕಾರಿ ನೇರ ನೇಮಕಾತಿ ಹುದ್ದೆಗಳನ್ನು ಭರ್ತಿ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಜುಲೈ 10ರಂದು ಅಧಿಸೂಚನೆಯನ್ನು ಹೊರಡಿಸಿ, ಅರ್ಹ ಅಭ್ಯಥಿಗಳಿಂದ ಅರ್ಜಿಗಳನ್ನು ಅಹ್ವಾನಿಸಿ, ಜುಲೈ 30ರವರೆಗೆ ಅರ್ಜಿ ಸಲ್ಲಿಸಲು ಮತ್ತು ಜುಲೈ 31ರವರೆಗೆ ಶುಲ್ಕ ಪಾವತಿಸಲು ಅವಕಾಶ ನೀಡಿತ್ತು. ಅದಾದ ಬಳಿಕ ಜುಲೈ 29ರಂದು ಪ್ರಕಟಣೆ ಹೊರಡಿಸಿ ದಿನಾಂಕ ಆಗಸ್ಟ್‌ 7ರವರೆಗೆ ದಿನಾಂಕ ವಿಸ್ತರಿಸಿ ಅರ್ಜಿಸಲ್ಲಿಸಲು ಕಾಲಾವಕಾಶ ನೀಡಲಾಗಿತ್ತು.&lt;/p&gt;&lt;p data-block-key="5bkmf"&gt;&lt;a href="/job/forest-department-invites-applications-for-750-forest-watcher-posts-83895.html"&gt;&lt;b&gt;ಅರಣ್ಯ ಇಲಾಖೆಯಲ್ಲಿ ಭರ್ಜರಿ ನೇಮಕಾತಿ; 750 ಅರಣ್ಯ ವೀಕ್ಷಕ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ&lt;/b&gt;&lt;/a&gt;&lt;/p&gt;&lt;p data-block-key="c1gck"&gt;ಪ್ರಸ್ತುತ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಹಾಗೂ ಶುಲ್ಕ ಪಾವತಿಸಲು ದಿನಾಂಕವನ್ನು ಈ ಕೆಳಗಿನಂತೆ ವಿಸ್ತರಿಸಲಾಗಿದೆ.&lt;/p&gt;&lt;p data-block-key="1i0f3"&gt;ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20.08.2026.&lt;/p&gt;&lt;p data-block-key="3mgh8"&gt;ಆನ್‌ಲೈನ್ ಮೂಲಕ ಶುಲ್ಕ ಪಾವತಿಸಲು ಕೊನೆಯ ದಿನಾಂಕ 21.08.2026. ಉಳಿದಂತೆ ನಿಯಮಗಳು ಅದೇ ರೀತಿ ಇರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.&lt;/p&gt;&lt;p data-block-key="1ngrd"&gt;&lt;a href="/job/kpsc-invites-applications-for-319-kas-posts-here-are-the-full-details-of-the-recruitment-85310.html"&gt;&lt;b&gt;319 ಕೆಎಎಸ್‌ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಕೆಪಿಎಸ್‌ಸಿ; ನೇಮಕಾತಿಯ ಸಂಪೂರ್ಣ ವಿವರ ಇಲ್ಲಿದೆ&lt;/b&gt;&lt;/a&gt;&lt;/p&gt;&lt;h3 data-block-key="c67v9"&gt;&lt;b&gt;ಪರೀಕ್ಷಾ ವಿಧಾನ&lt;/b&gt;&lt;/h3&gt;&lt;p data-block-key="7tbof"&gt;ಹುದ್ದೆಗಳ ನೇಮಕಾತಿಗೆ ಅರ್ಹತೆ ಪಡೆಯಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಬೇಕು. ಆಯ್ಕೆ ಪ್ರಕ್ರಿಯೆಯು ಲಿಖಿತ ಪರೀಕ್ಷೆ ಮೂಲಕ ನಡೆಯಲಿದೆ. ಅದರಂತೆ, ಪರೀಕ್ಷೆಯಲ್ಲಿ ಎರಡು ಪತ್ರಿಕೆಗಳಿರುತ್ತವೆ. ಬೆಳಗ್ಗೆ 10.30ರಿಂದ 12.30ರವರೆಗೆ ಮೊದಲ ಪತ್ರಿಕೆ ಮತ್ತು ಮಧ್ಯಾಹ್ನ 2.30ರಿಂದ 4.30ರವರೆಗೆ ಎರಡನೇ ಪತ್ರಿಕೆ ನಡೆಯಲಿದೆ. ಇನ್ನೂ, ಪ್ರತಿ ಪತ್ರಿಕೆಗೆ 100 ಅಂಕಗಳು ಮತ್ತು 100 ಪ್ರಶ್ನೆಗಳಿರುತ್ತವೆ. ತಪ್ಪು ಉತ್ತರಕ್ಕೆ 0.25 ನೆಗೆಟಿವ್ ಅಂಕ ಕಡಿತ ಮಾಡಲಾಗುತ್ತದೆ. ಅದರಲ್ಲೂ, ಪರೀಕ್ಷೆಯು ಆಫ್‌ಲೈನ್ ಒಎಂಆರ್ ಮಾದರಿಯಲ್ಲಿ ನಡೆಯಲಿದ್ದು, ಮೆರಿಟ್ ಆಧಾರದಲ್ಲಿ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಲಾಗುತ್ತದೆ.&lt;/p&gt;&lt;p data-block-key="8ikbm"&gt; &lt;a href="https://vishwavani.news/job/"&gt;&lt;b&gt;ಇನ್ನಷ್ಟು ಉದ್ಯೋಗದ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.&lt;/b&gt;&lt;/a&gt;&lt;/p&gt;&lt;p data-block-key="4njno"&gt;&lt;a href="https://www.pravasiprapancha.com/"&gt;&lt;b&gt;ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.&lt;/b&gt;&lt;/a&gt;&lt;/p&gt;
&lt;/div&gt;
&lt;/p&gt;]]&gt;</content:encoded></item><item><title>Bigg Boss Kannada 13: ಬಿಗ್‌ ಬಾಸ್‌  ಅಗ್ನಿ ಪರೀಕ್ಷೆಯ ತೀರ್ಪುಗಾರರು ಇವರೇ!</title><link>https://vishwavani.news/movies/bigg-boss-kannada-13-these-are-the-judges-of-bigg-boss-85809.html</link><guid>https://vishwavani.news/movies/bigg-boss-kannada-13-these-are-the-judges-of-bigg-boss-85809.html</guid><pubDate>Thu, 06 Aug 2026 14:16:27 +0000</pubDate><description>&lt;![CDATA[Bigg boss Kannada 13: ಬಿಗ್​ಬಾಸ್​​ ಸ್ಪರ್ಧಿಗಳಂತೆಯೇ ಅಗ್ನಿಪರೀಕ್ಷೆ ನಡೆಸಿಕೊಡುವವರ ಬಗ್ಗೆಯೂ ಇದಾಗಲೇ ಸಾಕಷ್ಟು ಚರ್ಚೆಯಾಗುತ್ತಿದೆ. ಅವರು, ಇವರು ಎಂದೆಲ್ಲಾ ಚರ್ಚೆಯಾಗುತ್ತಿದ್ದು, ಅವರ ಪೈಕಿ ಮೊದಲ ಜಡ್ಜ್​ ಫೋಟೋ ಅನ್ನು ಕಲರ್ಸ್​ ವಾಹಿನಿ ಶೇರ್​ ಮಾಡಿದೆ. ಅಗ್ನಿಪರೀಕ್ಷೆಗೆ ready ಆಗಿರೋ ಸ್ಪರ್ಧಿಗಳನ್ನು ಜಡ್ಜ್ ಮಾಡೋ ಈ handsome ಯಾರು ಎಂದು ಕ್ಯಾಪ್ಟನ್‌ ಕೊಟ್ಟಿದೆ. ಅವರು ಬಿಗ್​ಬಾಸ್​​ ಖ್ಯಾತಿಯ ವಿನಯ್​ ಗೌಡ ಎನ್ನೋದು ಗೊತ್ತಾಗುತ್ತಿದೆ. ಇದಕ್ಕೆ ಹಲವರು ಕಮೆಂಟ್​ ಮಾಡಿದ್ದು, ಇವರ ಹೆಸರನ್ನು ತಿಳಿಸಿದ್ದಾರೆ.]]&gt;</description><dc:creator>&lt;![CDATA[Yashaswi Devadiga]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಮನರಂಜನೆ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Bigg_Boss_Kannada_13_These_are_the_judges_of_Bi.original.jpg" class="attachment-large size-large wp-post-image" alt="Bigg Boss Kannada 13: ಬಿಗ್‌ ಬಾಸ್‌  ಅಗ್ನಿ ಪರೀಕ್ಷೆಯ ತೀರ್ಪುಗಾರರು ಇವರೇ!" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="f6wyz"&gt;ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ʻ&lt;a href="/movies/bigg-boss-telugu-9-winner-kalyan-padala-lifts-trophy-beats-thanuja-64253.html"&gt;ಬಿಗ್‌ಬಾಸ್ ಕನ್ನಡ ಸೀಸನ್‌ 13&lt;/a&gt;ರʼ (Bigg Boss Kannada 13) ಆರಂಭಕ್ಕೆ ಮುಹೂರ್ತ ಫಿಕ್ಸ್‌ ಆಗಿದೆ. ಈ ಬಾರಿಯ ಮತ್ತೊಂದು ವಿಶೇಷ ಅಂದ್ರೆ ಕಾಮನ್‌ ಮ್ಯಾನ್‌ ಎಂಟ್ರಿ.  ಬಿಗ್​ಬಾಸ್​ ಸೀಸನ್ 13 ರಲ್ಲಿ ಜನಸಾಮಾನ್ಯರಿಗೆ ಅವಕಾಶ ನೀಡಲಾಗಿದ್ದು, 'ಬಿಗ್​ಬಾಸ್​ ಅಗ್ನಿಪರೀಕ್ಷೆ' (Bigg Boss Agnipariksha)  ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಈ ಅಗ್ನಿಪರೀಕ್ಷೆಗೆ ತೀರ್ಪುಗಾರರಾಗಿ ವಿನಯ್ ಗೌಡ ಆಯ್ಕೆಯಾಗಿದ್ದು, ಪ್ರೇಕ್ಷಕರಿಗೆ ಲೈವ್ (Live) ವೀಕ್ಷಣೆಗೆ ಲಾಲ್‌ಬಾಗ್‌ನಲ್ಲಿ ವಿಶೇಷ ಸ್ಪರ್ಧೆ ಏರ್ಪಡಿಸಲಾಗಿದೆ.&lt;/p&gt;&lt;p data-block-key="7k7sh"&gt;ಬಿಗ್​ಬಾಸ್​​ ಸ್ಪರ್ಧಿಗಳಂತೆಯೇ ಅಗ್ನಿಪರೀಕ್ಷೆ ನಡೆಸಿಕೊಡುವವರ ಬಗ್ಗೆಯೂ ಇದಾಗಲೇ ಸಾಕಷ್ಟು ಚರ್ಚೆಯಾಗುತ್ತಿದೆ. ಅವರು, ಇವರು ಎಂದೆಲ್ಲಾ ಚರ್ಚೆಯಾಗುತ್ತಿದ್ದು, ಅವರ ಪೈಕಿ ಮೊದಲ ಜಡ್ಜ್​ ಫೋಟೋ ಅನ್ನು ಕಲರ್ಸ್​ ವಾಹಿನಿ ಶೇರ್​ ಮಾಡಿದೆ. ಅಗ್ನಿಪರೀಕ್ಷೆಗೆ ready ಆಗಿರೋ ಸ್ಪರ್ಧಿಗಳನ್ನು ಜಡ್ಜ್ ಮಾಡೋ ಈ handsome ಯಾರು ಎಂದು ಕ್ಯಾಪ್ಟನ್‌ ಕೊಟ್ಟಿದೆ. ಅವರು ಬಿಗ್​ಬಾಸ್​​ ಖ್ಯಾತಿಯ ವಿನಯ್​ ಗೌಡ ಎನ್ನೋದು ಗೊತ್ತಾಗುತ್ತಿದೆ. ಇದಕ್ಕೆ ಹಲವರು ಕಮೆಂಟ್​ ಮಾಡಿದ್ದು, ಇವರ ಹೆಸರನ್ನು ತಿಳಿಸಿದ್ದಾರೆ.&lt;/p&gt;&lt;p data-block-key="fvdg0"&gt;&lt;b&gt;ಇದನ್ನೂ ಓದಿ: &lt;/b&gt;&lt;a href="/movies/rashmika-mandanna-recovery-routine-includes-sleeping-eating-85755.html"&gt;Rashmika Mandanna: ಮದುವೆ ಫೋಟೋ ನೋಡಲು ಸಿಕ್ಕಿತು ಸಮಯ! ರಶ್ಮಿಕಾ ಹೊಸ ಪೋಸ್ಟ್‌&lt;/a&gt;&lt;/p&gt;&lt;p data-block-key="1pkj9"&gt;ಆಗಸ್ಟ್ 6ರಿಂದ ಆರಂಭವಾಗಿರುವ ಫ್ಲವರ್ ಶೋನಲ್ಲಿ ಬಿಗ್ ಬಾಸ್‌ ತಂಡ ವಿಶೇಷವಾದ ‘ಬಿಗ್ ಬಾಸ್‌ ಅಗ್ನಿಪರೀಕ್ಷೆ ಎಕ್ಸ್‌ಪೀರಿಯನ್ಸ್ ಜೋನ್’ ಸಿದ್ಧಪಡಿಸಿದೆ. ಈ ಜೋನ್‌ನಲ್ಲಿ ಬಿಗ್ ಬಾಸ್‌ನ ಐಕಾನಿಕ್ ಚೇರ್ ಜೊತೆಗೆ ವಿಶೇಷ ಸೆಲ್ಫಿ ಜೋನ್ ಕೂಡ ಇರಲಿದೆ.&lt;/p&gt;&lt;p data-block-key="9mqdu"&gt;ಬಿಗ್​​ಬಾಸ್ ಎಕ್ಸ್​ಪೀರಿಯನ್ಸ್ ಜೋನ್ಗೆ ಹೋಗಿ ಅಲ್ಲಿ ಸೆಲ್ಫೀ ಕ್ಲಿಕ್ಕಿಸಿಕೊಂಡು ಅದನ್ನು ಇನ್​​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಬೇಕು. ಹೀಗೆ ಹಂಚಿಕೊಂಡ ಫೋಟೊವನ್ನು ಕಲರ್ಸ್ ಕನ್ನಡದ ಜೊತೆಗೆ ಟ್ಯಾಗ್ ಮಾಡಬೇಕು.ಚಿತ್ರಕ್ಕೆ #BBKAGNIPARIKSHE ಹ್ಯಾಷ್ ಟ್ಯಾಗ್ ಹಾಕಬೇಕು. ಕಲರ್ಸ್ ವಾಹಿನಿ ಅಥವಾ ಬಿಗ್​​ಬಾಸ್ ಆಯೋಜಕರು ಆಯ್ದ ಕೆಲವರನ್ನು ಬಿಗ್​​ಬಾಸ್ ಕನ್ನಡ ವೀಕೆಂಡ್ ಎಪಿಸೋಡ್ ಅನ್ನು ಲೈವ್ ಆಗಿ ನೋಡಲು ಆಹ್ವಾನವನ್ನು ಕಳಿಹಿಸುತ್ತಾರೆ. ಲಾಲ್​​ಬಾಗ್ ಫ್ಲವರ್ ಶೋ ಆಗಸ್ಟ್ 06 ಆರಂಭವಾಗಿದ್ದು, ಆಗಸ್ಟ್ 17ರ ವರೆಗೆ ನಡೆಯಲಿದೆ.&lt;/p&gt;&lt;p data-block-key="6tddg"&gt;&lt;/p&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="instagram-media" data-instgrm-captioned data-instgrm-permalink="https://www.instagram.com/p/DbstMdqk_PR/?utm_source=ig_embed&amp;amp;utm_campaign=loading" data-instgrm-version="14" style=" background:#FFF; border:0; border-radius:3px; box-shadow:0 0 1px 0 rgba(0,0,0,0.5),0 1px 10px 0 rgba(0,0,0,0.15); margin: 1px; max-width:540px; min-width:326px; padding:0; width:99.375%; width:-webkit-calc(100% - 2px); width:calc(100% - 2px);"&gt;&lt;div style="padding:16px;"&gt; &lt;a href="https://www.instagram.com/p/DbstMdqk_PR/?utm_source=ig_embed&amp;amp;utm_campaign=loading" style=" background:#FFFFFF; line-height:0; padding:0 0; text-align:center; text-decoration:none; width:100%;" target="_blank"&gt; &lt;div style=" display: flex; flex-direction: row; align-items: center;"&gt; &lt;div style="background-color: #F4F4F4; border-radius: 50%; flex-grow: 0; height: 40px; margin-right: 14px; width: 40px;"&gt;&lt;/div&gt; &lt;div style="display: flex; flex-direction: column; flex-grow: 1; justify-content: center;"&gt; &lt;div style=" background-color: #F4F4F4; border-radius: 4px; flex-grow: 0; height: 14px; margin-bottom: 6px; width: 100px;"&gt;&lt;/div&gt; &lt;div style=" background-color: #F4F4F4; border-radius: 4px; flex-grow: 0; height: 14px; width: 60px;"&gt;&lt;/div&gt;&lt;/div&gt;&lt;/div&gt;&lt;div style="padding: 19% 0;"&gt;&lt;/div&gt; &lt;div style="display:block; height:50px; margin:0 auto 12px; width:50px;"&gt;&lt;svg width="50px" height="50px" viewBox="0 0 60 60" version="1.1" xmlns="https://www.w3.org/2000/svg" xmlns:xlink="https://www.w3.org/1999/xlink"&gt;&lt;g stroke="none" stroke-width="1" fill="none" fill-rule="evenodd"&gt;&lt;g transform="translate(-511.000000, -20.000000)" fill="#000000"&gt;&lt;g&gt;&lt;path d="M556.869,30.41 C554.814,30.41 553.148,32.076 553.148,34.131 C553.148,36.186 554.814,37.852 556.869,37.852 C558.924,37.852 560.59,36.186 560.59,34.131 C560.59,32.076 558.924,30.41 556.869,30.41 M541,60.657 C535.114,60.657 530.342,55.887 530.342,50 C530.342,44.114 535.114,39.342 541,39.342 C546.887,39.342 551.658,44.114 551.658,50 C551.658,55.887 546.887,60.657 541,60.657 M541,33.886 C532.1,33.886 524.886,41.1 524.886,50 C524.886,58.899 532.1,66.113 541,66.113 C549.9,66.113 557.115,58.899 557.115,50 C557.115,41.1 549.9,33.886 541,33.886 M565.378,62.101 C565.244,65.022 564.756,66.606 564.346,67.663 C563.803,69.06 563.154,70.057 562.106,71.106 C561.058,72.155 560.06,72.803 558.662,73.347 C557.607,73.757 556.021,74.244 553.102,74.378 C549.944,74.521 548.997,74.552 541,74.552 C533.003,74.552 532.056,74.521 528.898,74.378 C525.979,74.244 524.393,73.757 523.338,73.347 C521.94,72.803 520.942,72.155 519.894,71.106 C518.846,70.057 518.197,69.06 517.654,67.663 C517.244,66.606 516.755,65.022 516.623,62.101 C516.479,58.943 516.448,57.996 516.448,50 C516.448,42.003 516.479,41.056 516.623,37.899 C516.755,34.978 517.244,33.391 517.654,32.338 C518.197,30.938 518.846,29.942 519.894,28.894 C520.942,27.846 521.94,27.196 523.338,26.654 C524.393,26.244 525.979,25.756 528.898,25.623 C532.057,25.479 533.004,25.448 541,25.448 C548.997,25.448 549.943,25.479 553.102,25.623 C556.021,25.756 557.607,26.244 558.662,26.654 C560.06,27.196 561.058,27.846 562.106,28.894 C563.154,29.942 563.803,30.938 564.346,32.338 C564.756,33.391 565.244,34.978 565.378,37.899 C565.522,41.056 565.552,42.003 565.552,50 C565.552,57.996 565.522,58.943 565.378,62.101 M570.82,37.631 C570.674,34.438 570.167,32.258 569.425,30.349 C568.659,28.377 567.633,26.702 565.965,25.035 C564.297,23.368 562.623,22.342 560.652,21.575 C558.743,20.834 556.562,20.326 553.369,20.18 C550.169,20.033 549.148,20 541,20 C532.853,20 531.831,20.033 528.631,20.18 C525.438,20.326 523.257,20.834 521.349,21.575 C519.376,22.342 517.703,23.368 516.035,25.035 C514.368,26.702 513.342,28.377 512.574,30.349 C511.834,32.258 511.326,34.438 511.181,37.631 C511.035,40.831 511,41.851 511,50 C511,58.147 511.035,59.17 511.181,62.369 C511.326,65.562 511.834,67.743 512.574,69.651 C513.342,71.625 514.368,73.296 516.035,74.965 C517.703,76.634 519.376,77.658 521.349,78.425 C523.257,79.167 525.438,79.673 528.631,79.82 C531.831,79.965 532.853,80.001 541,80.001 C549.148,80.001 550.169,79.965 553.369,79.82 C556.562,79.673 558.743,79.167 560.652,78.425 C562.623,77.658 564.297,76.634 565.965,74.965 C567.633,73.296 568.659,71.625 569.425,69.651 C570.167,67.743 570.674,65.562 570.82,62.369 C570.966,59.17 571,58.147 571,50 C571,41.851 570.966,40.831 570.82,37.631"&gt;&lt;/path&gt;&lt;/g&gt;&lt;/g&gt;&lt;/g&gt;&lt;/svg&gt;&lt;/div&gt;&lt;div style="padding-top: 8px;"&gt; &lt;div style=" color:#3897f0; font-family:Arial,sans-serif; font-size:14px; font-style:normal; font-weight:550; line-height:18px;"&gt;View this post on Instagram&lt;/div&gt;&lt;/div&gt;&lt;div style="padding: 12.5% 0;"&gt;&lt;/div&gt; &lt;div style="display: flex; flex-direction: row; margin-bottom: 14px; align-items: center;"&gt;&lt;div&gt; &lt;div style="background-color: #F4F4F4; border-radius: 50%; height: 12.5px; width: 12.5px; transform: translateX(0px) translateY(7px);"&gt;&lt;/div&gt; &lt;div style="background-color: #F4F4F4; height: 12.5px; transform: rotate(-45deg) translateX(3px) translateY(1px); width: 12.5px; flex-grow: 0; margin-right: 14px; margin-left: 2px;"&gt;&lt;/div&gt; &lt;div style="background-color: #F4F4F4; border-radius: 50%; height: 12.5px; width: 12.5px; transform: translateX(9px) translateY(-18px);"&gt;&lt;/div&gt;&lt;/div&gt;&lt;div style="margin-left: 8px;"&gt; &lt;div style=" background-color: #F4F4F4; border-radius: 50%; flex-grow: 0; height: 20px; width: 20px;"&gt;&lt;/div&gt; &lt;div style=" width: 0; height: 0; border-top: 2px solid transparent; border-left: 6px solid #f4f4f4; border-bottom: 2px solid transparent; transform: translateX(16px) translateY(-4px) rotate(30deg)"&gt;&lt;/div&gt;&lt;/div&gt;&lt;div style="margin-left: auto;"&gt; &lt;div style=" width: 0px; border-top: 8px solid #F4F4F4; border-right: 8px solid transparent; transform: translateY(16px);"&gt;&lt;/div&gt; &lt;div style=" background-color: #F4F4F4; flex-grow: 0; height: 12px; width: 16px; transform: translateY(-4px);"&gt;&lt;/div&gt; &lt;div style=" width: 0; height: 0; border-top: 8px solid #F4F4F4; border-left: 8px solid transparent; transform: translateY(-4px) translateX(8px);"&gt;&lt;/div&gt;&lt;/div&gt;&lt;/div&gt; &lt;div style="display: flex; flex-direction: column; flex-grow: 1; justify-content: center; margin-bottom: 24px;"&gt; &lt;div style=" background-color: #F4F4F4; border-radius: 4px; flex-grow: 0; height: 14px; margin-bottom: 6px; width: 224px;"&gt;&lt;/div&gt; &lt;div style=" background-color: #F4F4F4; border-radius: 4px; flex-grow: 0; height: 14px; width: 144px;"&gt;&lt;/div&gt;&lt;/div&gt;&lt;/a&gt;&lt;p style=" color:#c9c8cd; font-family:Arial,sans-serif; font-size:14px; line-height:17px; margin-bottom:0; margin-top:8px; overflow:hidden; padding:8px 0 7px; text-align:center; text-overflow:ellipsis; white-space:nowrap;"&gt;&lt;a href="https://www.instagram.com/p/DbstMdqk_PR/?utm_source=ig_embed&amp;amp;utm_campaign=loading" style=" color:#c9c8cd; font-family:Arial,sans-serif; font-size:14px; font-style:normal; font-weight:normal; line-height:17px; text-decoration:none;" target="_blank"&gt;A post shared by Colors Kannada Official (@colorskannadaofficial)&lt;/a&gt;&lt;/p&gt;&lt;/div&gt;&lt;/blockquote&gt;
&lt;script async src="//www.instagram.com/embed.js"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="9soui"&gt;&lt;/p&gt;&lt;p data-block-key="7qkh1"&gt;ಈ ಬಾರಿ ದೊಡ್ಮನೆಗೆ ಎಂಟ್ರಿ ಕೊಡೋಕೆ ಅಗ್ನಿಪರೀಕ್ಷೆಯ ವೇದಿಕೆ ಸಜ್ಜಾಗಿದೆ.ಇದೇ ಆಗಸ್ಟ್‌ 16ರ ರಾತ್ರಿ 9ಕ್ಕೆ ಬಿಗ್‌ ಮನೆಗೆ ಎಂಟ್ರಿ ಕೊಡೋಕೆ ಅಗ್ನಿಪರೀಕ್ಷೆಯ ವೇದಿಕೆ ಸಜ್ಜಾಗಿದೆ.ಇನ್ನೂ ಆ.17ರಿಂದ ಪ್ರತೀ ಸೋಮವಾರದಿಂದ ಭಾನುವಾರದವರೆಗೆ ರಾತ್ರಿ 9:30ಕ್ಕೆ ಪ್ರಸಾರವಾಗಲಿದೆ. ರಿಲೀಸ್‌ ಆದ ಪ್ರೋಮೋದಲ್ಲಿ `Thank You Karnataka’ ಎಂದು ಶುರುವಾಗಿ ಬಿಗ್‌ ಬಾಸ್‌ ಮನೆಗೆ ಎಂಟ್ರಿ ಕೊಡೋ ನಿಮ್ಮ ಕನಸುಗಳು ವಿಡಿಯೋ ಮೂಲಕ ನಮ್ಮನ್ನ ತಲುಪಿವೆ.&lt;/p&gt;&lt;p data-block-key="d2jai"&gt;ಈಗ ಆ ಕನಸುಗಳಿಗೆ ವೇದಿಕೆ ಸಜ್ಜಾಗ್ತಿದೆ. ಈ ಅಂತಿಮ ಪರೀಕ್ಷೆಯನ್ನು ಎದುರಿಸಿ ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಡೋರು ಯಾರು?.. ಇದೆಲ್ಲದಕ್ಕೆ ಉತ್ತರ ಆಗಸ್ಟ್‌ 16ರ ರಾತ್ರಿ 9ಕ್ಕೆ ಸಿಗಲಿದೆ ಎಂದು ತಿಳಿಸಿದೆ.&lt;/p&gt;&lt;p data-block-key="2pkdh"&gt;&lt;/p&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="instagram-media" data-instgrm-captioned data-instgrm-permalink="https://www.instagram.com/reel/Dbswp3CgDtY/?utm_source=ig_embed&amp;amp;utm_campaign=loading" data-instgrm-version="14" style=" background:#FFF; border:0; border-radius:3px; box-shadow:0 0 1px 0 rgba(0,0,0,0.5),0 1px 10px 0 rgba(0,0,0,0.15); margin: 1px; max-width:540px; min-width:326px; padding:0; width:99.375%; width:-webkit-calc(100% - 2px); width:calc(100% - 2px);"&gt;&lt;div style="padding:16px;"&gt; &lt;a href="https://www.instagram.com/reel/Dbswp3CgDtY/?utm_source=ig_embed&amp;amp;utm_campaign=loading" style=" background:#FFFFFF; line-height:0; padding:0 0; text-align:center; text-decoration:none; width:100%;" target="_blank"&gt; &lt;div style=" display: flex; flex-direction: row; align-items: center;"&gt; &lt;div style="background-color: #F4F4F4; border-radius: 50%; flex-grow: 0; height: 40px; margin-right: 14px; width: 40px;"&gt;&lt;/div&gt; &lt;div style="display: flex; flex-direction: column; flex-grow: 1; justify-content: center;"&gt; &lt;div style=" background-color: #F4F4F4; border-radius: 4px; flex-grow: 0; height: 14px; margin-bottom: 6px; width: 100px;"&gt;&lt;/div&gt; &lt;div style=" background-color: #F4F4F4; border-radius: 4px; flex-grow: 0; height: 14px; width: 60px;"&gt;&lt;/div&gt;&lt;/div&gt;&lt;/div&gt;&lt;div style="padding: 19% 0;"&gt;&lt;/div&gt; &lt;div style="display:block; height:50px; margin:0 auto 12px; width:50px;"&gt;&lt;svg width="50px" height="50px" viewBox="0 0 60 60" version="1.1" xmlns="https://www.w3.org/2000/svg" xmlns:xlink="https://www.w3.org/1999/xlink"&gt;&lt;g stroke="none" stroke-width="1" fill="none" fill-rule="evenodd"&gt;&lt;g transform="translate(-511.000000, -20.000000)" fill="#000000"&gt;&lt;g&gt;&lt;path d="M556.869,30.41 C554.814,30.41 553.148,32.076 553.148,34.131 C553.148,36.186 554.814,37.852 556.869,37.852 C558.924,37.852 560.59,36.186 560.59,34.131 C560.59,32.076 558.924,30.41 556.869,30.41 M541,60.657 C535.114,60.657 530.342,55.887 530.342,50 C530.342,44.114 535.114,39.342 541,39.342 C546.887,39.342 551.658,44.114 551.658,50 C551.658,55.887 546.887,60.657 541,60.657 M541,33.886 C532.1,33.886 524.886,41.1 524.886,50 C524.886,58.899 532.1,66.113 541,66.113 C549.9,66.113 557.115,58.899 557.115,50 C557.115,41.1 549.9,33.886 541,33.886 M565.378,62.101 C565.244,65.022 564.756,66.606 564.346,67.663 C563.803,69.06 563.154,70.057 562.106,71.106 C561.058,72.155 560.06,72.803 558.662,73.347 C557.607,73.757 556.021,74.244 553.102,74.378 C549.944,74.521 548.997,74.552 541,74.552 C533.003,74.552 532.056,74.521 528.898,74.378 C525.979,74.244 524.393,73.757 523.338,73.347 C521.94,72.803 520.942,72.155 519.894,71.106 C518.846,70.057 518.197,69.06 517.654,67.663 C517.244,66.606 516.755,65.022 516.623,62.101 C516.479,58.943 516.448,57.996 516.448,50 C516.448,42.003 516.479,41.056 516.623,37.899 C516.755,34.978 517.244,33.391 517.654,32.338 C518.197,30.938 518.846,29.942 519.894,28.894 C520.942,27.846 521.94,27.196 523.338,26.654 C524.393,26.244 525.979,25.756 528.898,25.623 C532.057,25.479 533.004,25.448 541,25.448 C548.997,25.448 549.943,25.479 553.102,25.623 C556.021,25.756 557.607,26.244 558.662,26.654 C560.06,27.196 561.058,27.846 562.106,28.894 C563.154,29.942 563.803,30.938 564.346,32.338 C564.756,33.391 565.244,34.978 565.378,37.899 C565.522,41.056 565.552,42.003 565.552,50 C565.552,57.996 565.522,58.943 565.378,62.101 M570.82,37.631 C570.674,34.438 570.167,32.258 569.425,30.349 C568.659,28.377 567.633,26.702 565.965,25.035 C564.297,23.368 562.623,22.342 560.652,21.575 C558.743,20.834 556.562,20.326 553.369,20.18 C550.169,20.033 549.148,20 541,20 C532.853,20 531.831,20.033 528.631,20.18 C525.438,20.326 523.257,20.834 521.349,21.575 C519.376,22.342 517.703,23.368 516.035,25.035 C514.368,26.702 513.342,28.377 512.574,30.349 C511.834,32.258 511.326,34.438 511.181,37.631 C511.035,40.831 511,41.851 511,50 C511,58.147 511.035,59.17 511.181,62.369 C511.326,65.562 511.834,67.743 512.574,69.651 C513.342,71.625 514.368,73.296 516.035,74.965 C517.703,76.634 519.376,77.658 521.349,78.425 C523.257,79.167 525.438,79.673 528.631,79.82 C531.831,79.965 532.853,80.001 541,80.001 C549.148,80.001 550.169,79.965 553.369,79.82 C556.562,79.673 558.743,79.167 560.652,78.425 C562.623,77.658 564.297,76.634 565.965,74.965 C567.633,73.296 568.659,71.625 569.425,69.651 C570.167,67.743 570.674,65.562 570.82,62.369 C570.966,59.17 571,58.147 571,50 C571,41.851 570.966,40.831 570.82,37.631"&gt;&lt;/path&gt;&lt;/g&gt;&lt;/g&gt;&lt;/g&gt;&lt;/svg&gt;&lt;/div&gt;&lt;div style="padding-top: 8px;"&gt; &lt;div style=" color:#3897f0; font-family:Arial,sans-serif; font-size:14px; font-style:normal; font-weight:550; line-height:18px;"&gt;View this post on Instagram&lt;/div&gt;&lt;/div&gt;&lt;div style="padding: 12.5% 0;"&gt;&lt;/div&gt; &lt;div style="display: flex; flex-direction: row; margin-bottom: 14px; align-items: center;"&gt;&lt;div&gt; &lt;div style="background-color: #F4F4F4; border-radius: 50%; height: 12.5px; width: 12.5px; transform: translateX(0px) translateY(7px);"&gt;&lt;/div&gt; &lt;div style="background-color: #F4F4F4; height: 12.5px; transform: rotate(-45deg) translateX(3px) translateY(1px); width: 12.5px; flex-grow: 0; margin-right: 14px; margin-left: 2px;"&gt;&lt;/div&gt; &lt;div style="background-color: #F4F4F4; border-radius: 50%; height: 12.5px; width: 12.5px; transform: translateX(9px) translateY(-18px);"&gt;&lt;/div&gt;&lt;/div&gt;&lt;div style="margin-left: 8px;"&gt; &lt;div style=" background-color: #F4F4F4; border-radius: 50%; flex-grow: 0; height: 20px; width: 20px;"&gt;&lt;/div&gt; &lt;div style=" width: 0; height: 0; border-top: 2px solid transparent; border-left: 6px solid #f4f4f4; border-bottom: 2px solid transparent; transform: translateX(16px) translateY(-4px) rotate(30deg)"&gt;&lt;/div&gt;&lt;/div&gt;&lt;div style="margin-left: auto;"&gt; &lt;div style=" width: 0px; border-top: 8px solid #F4F4F4; border-right: 8px solid transparent; transform: translateY(16px);"&gt;&lt;/div&gt; &lt;div style=" background-color: #F4F4F4; flex-grow: 0; height: 12px; width: 16px; transform: translateY(-4px);"&gt;&lt;/div&gt; &lt;div style=" width: 0; height: 0; border-top: 8px solid #F4F4F4; border-left: 8px solid transparent; transform: translateY(-4px) translateX(8px);"&gt;&lt;/div&gt;&lt;/div&gt;&lt;/div&gt; &lt;div style="display: flex; flex-direction: column; flex-grow: 1; justify-content: center; margin-bottom: 24px;"&gt; &lt;div style=" background-color: #F4F4F4; border-radius: 4px; flex-grow: 0; height: 14px; margin-bottom: 6px; width: 224px;"&gt;&lt;/div&gt; &lt;div style=" background-color: #F4F4F4; border-radius: 4px; flex-grow: 0; height: 14px; width: 144px;"&gt;&lt;/div&gt;&lt;/div&gt;&lt;/a&gt;&lt;p style=" color:#c9c8cd; font-family:Arial,sans-serif; font-size:14px; line-height:17px; margin-bottom:0; margin-top:8px; overflow:hidden; padding:8px 0 7px; text-align:center; text-overflow:ellipsis; white-space:nowrap;"&gt;&lt;a href="https://www.instagram.com/reel/Dbswp3CgDtY/?utm_source=ig_embed&amp;amp;utm_campaign=loading" style=" color:#c9c8cd; font-family:Arial,sans-serif; font-size:14px; font-style:normal; font-weight:normal; line-height:17px; text-decoration:none;" target="_blank"&gt;A post shared by Colors Kannada Official (@colorskannadaofficial)&lt;/a&gt;&lt;/p&gt;&lt;/div&gt;&lt;/blockquote&gt;
&lt;script async src="//www.instagram.com/embed.js"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="cmo81"&gt;&lt;/p&gt;&lt;p data-block-key="69ds6"&gt;&lt;b&gt;ಇದನ್ನೂ ಓದಿ: &lt;/b&gt;&lt;a href="/movies/bigg-boss-weekend-episode-live-entry-agnipariksha-challenge-in-lalbagh-botanical-garden-85804.html"&gt;Bigg Boss Kannada 13: ಬಿಗ್​​ಬಾಸ್ ವೀಕೆಂಡ್ ಎಪಿಸೋಡ್ ಲೈವ್ ನೋಡಬೇಕಾ? ಹಾಗಾದ್ರೆ ಹೀಗೆ ಮಾಡಿ&lt;/a&gt;&lt;/p&gt;&lt;p data-block-key="crgfc"&gt;ಅಸಂಖ್ಯ ಜನರು ತಮ್ಮ ವಿಡಿಯೋ ಕಳುಹಿಸಿದ್ದಾರೆ. ಇವರಲ್ಲಿ ಆಯ್ಕೆಯಾದವರು ಒಂದಿಷ್ಟು ಮಂದಿ. ಅವರು ಯಾರು, ಅಗ್ನಿ ಪರೀಕ್ಷೆಯಲ್ಲಿ ಗೆದ್ದವರು ಯಾರು ಎನ್ನೋದನ್ನು ಆಗಸ್ಟ್​ 16ರ ರಾತ್ರಿ 9 ಗಂಟೆಗೆ ಹೇಳುವುದಾಗಿ ಈ ಪ್ರೊಮೋದಲ್ಲಿ ತಿಳಿಸಲಾಗಿದೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ವಾಲಿವಾಲ್‌ ಆಡುತ್ತಿದ್ದಾಗಲೇ ಕುಸಿದು ಬಿದ್ದು 10ನೇ ತರಗತಿ ವಿದ್ಯಾರ್ಥಿ ಸಾವು; ಸುರತ್ಕಲ್‌ನಲ್ಲಿ ಭೀಕರ ಘಟನೆ: ವಿಡಿಯೊ ವೈರಲ್‌</title><link>https://vishwavani.news/karnataka/dakshina-kannada/class-10-student-dies-after-collapsing-mid-volleyball-match-in-mangaluru-85808.html</link><guid>https://vishwavani.news/karnataka/dakshina-kannada/class-10-student-dies-after-collapsing-mid-volleyball-match-in-mangaluru-85808.html</guid><pubDate>Thu, 06 Aug 2026 13:52:34 +0000</pubDate><description>&lt;![CDATA[Heart Attack: ಇತ್ತೀಚೆಗೆ ಯುವ ಜನತೆ ಅದರಲ್ಲೂ ಚಿಕ್ಕ ಚಿಕ್ಕ ಮಕ್ಕಳು ಹೃದಯಾಘಾತಕ್ಕೆ ಬಲಿಯಾಗುತ್ತಿರುವ ಘಟನೆ ಹೆಚ್ಚಾಗುತ್ತಿದ್ದು, ಅದಕ್ಕೆ ಮತ್ತೊಂದು ಉದಾಹರಣೆ ಎಂಬಂತೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಸುರತ್ಕಲ್‌ನಲ್ಲಿ ನಡೆದಿದೆ. ವಾಲಿಬಾಲ್‌ ಆಡುತ್ತಿದ್ದ ಲಿಖಿತ್‌ ಆಮೀನ್‌ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಮೃತಪಟ್ಟಿದ್ದಾನೆ.]]&gt;</description><dc:creator>&lt;![CDATA[Ramesh Ballamoole]]&gt;</dc:creator><category>&lt;![CDATA[ದಕ್ಷಿಣ ಕನ್ನಡ]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕರ್ನಾಟಕ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Heart_Attack_VnA3HzN.original.jpg" class="attachment-large size-large wp-post-image" alt="ವಾಲಿವಾಲ್‌ ಆಡುತ್ತಿದ್ದಾಗಲೇ ಕುಸಿದು ಬಿದ್ದು 10ನೇ ತರಗತಿ ವಿದ್ಯಾರ್ಥಿ ಸಾವು; ಸುರತ್ಕಲ್‌ನಲ್ಲಿ ಭೀಕರ ಘಟನೆ: ವಿಡಿಯೊ ವೈರಲ್‌" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="lyak3"&gt;&lt;b&gt;ಸುರತ್ಕಲ್‌, ಆ. 8:&lt;/b&gt; ಇತ್ತೀಚೆಗೆ ಯುವ ಜನತೆ ಅದರಲ್ಲೂ ಚಿಕ್ಕ ಚಿಕ್ಕ ಮಕ್ಕಳು ಹೃದಯಾಘಾತಕ್ಕೆ ಬಲಿಯಾಗುತ್ತಿರುವ ಘಟನೆ ಹೆಚ್ಚಾಗುತ್ತಿರುವುದು ಕಳವಳ ಮೂಡಿಸಿದೆ. ಕೆಲವು ದಿನಗಳ ಹಿಂದೆ 1ನೇ ತರಗತಿಯ ಬಾಲಕನೊಬ್ಬ ಶಾಲಾ ಆವರಣದಲ್ಲೇ ಕುಸಿದು ಬಿದ್ದು ಮೃತಪಟ್ಟಿರುವ ಕರುಣಾಜನಕ ಘಟನೆ ಶಿವಮೊಗ್ಗ ನಡೆದಿತ್ತು &lt;a href="/latest-news/heart-attack-series-continues-in-karnataka-5-death-today-48748.html"&gt;&lt;b&gt;(Heart Attack)&lt;/b&gt;&lt;/a&gt;. ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್‌ ಸಮೀಪ ವಾಲಿವಾಲ್‌ ಆಡುತ್ತಿದ್ದ 15 ವರ್ಷದ ಬಾಲಕ ನೋಡ ನೋಡುತ್ತಿದ್ದಂತೆ ಕುಸಿದು ಬಿದ್ದು ಮೃತ ಪಟ್ಟಿದ್ದಾನೆ. ಆತನ ಕೊನೆಯ ಕ್ಷಣ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ &lt;a href="/sports/a-young-man-playing-cricket-suffered-a-heart-attack-47392.html"&gt;&lt;b&gt;(Viral Video)&lt;/b&gt;&lt;/a&gt; ಆಗಿದೆ.&lt;/p&gt;&lt;p data-block-key="ek1ps"&gt;ಸುರತ್ಕಲ್‌ನ ಸೂರಿಂಜೆಯಲ್ಲಿ ಈ ಘಟನೆ ನಡೆದಿದೆ. ಮೃತ ಬಾಲಕನನ್ನು 15 ವರ್ಷದ, 10ನೇ ತರಗತಿಯ ಲಿಖಿತ್‌ ಅಮೀನ್‌ ಎಂದು ಗುರುತಿಸಲಾಗಿದೆ. ಸೂರಿಂಜೆಯ ಕೋಟೆ ಬೊಳ್ಳೂರಿನ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಯಾಗಿರುವ ಈತ ಸ್ನೇಹಿತರೊಂದಿಗೆ ವಾಲಿಬಾಲ್‌ ಆಡುತ್ತಿದ್ದಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾನೆ. ಅಲ್ಲೇ ಪ್ರಾಣ ಹೊರಟು ಹೋಗಿದೆ ಎಂದು ಮೂಲಗಳು ತಿಳಿಸಿವೆ.&lt;/p&gt;&lt;h3 data-block-key="8q8tc"&gt;&lt;b&gt;ಬಾಲಕ ಕುಸಿದು ಬಿದ್ದ ವೈರಲ್‌ ವಿಡಿಯೊ ಇಲ್ಲಿದೆ:&lt;/b&gt;&lt;/h3&gt;&lt;p data-block-key="fp95o"&gt;&lt;/p&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="twitter-tweet"&gt;&lt;p lang="en" dir="ltr"&gt;August 5, 2026 | Heartbreaking news from Mangaluru: 15-year-old 10th-grade student, Likhit Amin, suddenly collapsed and passed away while playing volleyball at his school near Surathkal.&lt;br&gt;&lt;br&gt;Heartfelt condolences to his family and classmates during this immense grief  &lt;a href="https://t.co/IfkgqaSFea"&gt;pic.twitter.com/IfkgqaSFea&lt;/a&gt;&lt;/p&gt;&amp;mdash; Bricx News (@BricxNews) &lt;a href="https://x.com/BricxNews/status/2085326729577713809?ref_src=twsrc%5Etfw"&gt;August 6, 2026&lt;/a&gt;&lt;/blockquote&gt; &lt;script async src="https://platform.x.com/widgets.js" charset="utf-8"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="1d3q"&gt;ʼʼಸೂರಿಂಜೆಯ ಮೈದಾನದಲ್ಲಿ ಲಿಖಿತ್‌ ತನ್ನ ಸ್ನೇಹಿತರೊಂದಿಗೆ ಆಟವಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಅಸ್ವಸ್ಥನಾಗಿ ಕುಸಿದು ಬಿದ್ದಿದ್ದಾನೆʼʼ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ಬಾಲ್‌ ಸರ್ವ್‌ ಮಾಡಿ ಲಿಖಿತ್‌ ಓಡುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದ್ದು, ಕೈ ಮೇಲಕ್ಕೆತ್ತುತ್ತಿದ್ದಂತೆ ಇದ್ದಕ್ಕಿದ್ದಂತೆ ಬಿದ್ದು ಬಿಟ್ಟಿದ್ದಾನೆ.&lt;/p&gt;&lt;p data-block-key="9bpn5"&gt;ಕುಸಿದು ಬಿದ್ದ ಲಿಖಿತ್‌ನನ್ನು ಕೂಡಲೇ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರು. ಆದರೆ ಅಷ್ಟರಲ್ಲಾಗಲೇ ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಮರಣೋತ್ತರ ಪರೀಕ್ಷೆ ಬಳಿಕ ಸಾವಿಗೆ ನಿಜವಾದ ಕಾರಣ ತಿಳಿದು ಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.&lt;/p&gt;&lt;p data-block-key="absve"&gt;&lt;a href="/karnataka/heart-attack-to-newborn-baby-karnataka-sees-5-death-on-july-16-49104.html"&gt;&lt;b&gt;ನವಜಾತ ಶಿಶುವಿಗೇ ಹೃದಯಾಘಾತ, ಕೊಪ್ಪಳದಲ್ಲಿ 26ರ ಯುವತಿ ಬಲಿ&lt;/b&gt;&lt;/a&gt;&lt;/p&gt;&lt;h3 data-block-key="fu41s"&gt;&lt;b&gt;5 ವರ್ಷದ ಬಾಲಕನಿಗೆ ರಸ್ತೆಯಲ್ಲಿ ಹೃದಯಾಘಾತ&lt;/b&gt;&lt;/h3&gt;&lt;p data-block-key="ekr1i"&gt;&lt;b&gt;ಚಿಕ್ಕಮಗಳೂರು:&lt;/b&gt; ಇತ್ತೀಚೆಗೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಹೃದಯವೈಫಲ್ಯದಿಂದ 15 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ನಡೆದಿತ್ತು. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾನಳ್ಳಿಯಲ್ಲಿ ಹೃದಯಾಘಾತದಿಂದ 15 ವರ್ಷದ ಬಾಲಕ ಸಾವನ್ನಪ್ಪಿದ್ದ.&lt;/p&gt;&lt;p data-block-key="ciajb"&gt;ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಎದೆನೋವು ಕಾಣಿಸಿಕೊಂಡು ಹೃದಯಾಘಾತದಿಂದ 15 ವರ್ಷದ ಬಾಲಕ ಪ್ರೀತಮ್ ಸಾವನ್ನಪ್ಪಿದ್ದ ಎಂದು ಮೂಲಗಳು ತಿಳಿಸಿವೆ. ಚಿಕ್ಕಮಗಳೂರು ಮಲ್ಲೇಗೌಡ ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಹೃದಯಾಘಾತದಿಂದ ಮೃತಪಟ್ಟಿರುವುದನ್ನು ವೈದ್ಯರು ಖಚಿತ ಪಡಿಸಿದ್ದಾರೆ. ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.&lt;/p&gt;&lt;p data-block-key="5e4kl"&gt;&lt;a href="https://vishwavani.news/karnataka/"&gt;&lt;b&gt;ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.&lt;/b&gt;&lt;/a&gt;&lt;/p&gt;&lt;p data-block-key="55o9g"&gt;&lt;a href="https://www.pravasiprapancha.com/"&gt;&lt;b&gt;ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.&lt;/b&gt;&lt;/a&gt;&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಕಾರವಾರದಲ್ಲಿ ಕಾರ್ಯಾಚರಣೆಗಿಳಿದ ಐಎನ್‌ಎಸ್ ಮಾಲವನ್‌, ಈ ಯುದ್ಧನೌಕೆಯ ಹಿಂದಿದೆ ಎಎಂ/ಎನ್ಎಸ್ ಇಂಡಿಯಾ ಉಕ್ಕಿನ ಶಕ್ತಿ!</title><link>https://vishwavani.news/karnataka/uttara-kannada/ins-malvan-commissioned-in-karwar-the-steel-power-behind-this-warship-is-am-ns-india-85768.html</link><guid>https://vishwavani.news/karnataka/uttara-kannada/ins-malvan-commissioned-in-karwar-the-steel-power-behind-this-warship-is-am-ns-india-85768.html</guid><pubDate>Thu, 06 Aug 2026 13:39:08 +0000</pubDate><description>&lt;![CDATA[ಭಾರತೀಯ ನೌಕಾಪಡೆಗೆ ಇತ್ತೀಚೆಗೆ ಅತ್ಯಾಧುನಿಕ 'ಐಎನ್‌ಎಸ್ ಮಾಲವನ್‌' ಯುದ್ಧನೌಕೆ ಸೇರ್ಪಡೆಗೊಂಡಿತ್ತು. ಇದರ ನಿರ್ಮಾಣಕ್ಕೆ ಅಗತ್ಯವಿದ್ದ ಶೇ. 100ರಷ್ಟು ವಿಶೇಷ ಉಕ್ಕನ್ನು ಪ್ರಸಿದ್ಧ ಆರ್ಸೆಲರ್ ಮಿತ್ತಲ್ ನಿಪ್ಪಾನ್ ಸ್ಟೀಲ್ ಇಂಡಿಯಾ ಪೂರೈಸಿದೆ. ಈ ಕುರಿತ ಡಿಟೇಲ್ಸ್‌ ಇಲ್ಲಿದೆ.]]&gt;</description><dc:creator>&lt;![CDATA[Siddalinga Swamy]]&gt;</dc:creator><category>&lt;![CDATA[ಉತ್ತರ ಕನ್ನಡ]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕರ್ನಾಟಕ]]&gt;</category><category>&lt;![CDATA[ದೇಶ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/INS_Malvan.original.jpg" class="attachment-large size-large wp-post-image" alt="ಕಾರವಾರದಲ್ಲಿ ಕಾರ್ಯಾಚರಣೆಗಿಳಿದ ಐಎನ್‌ಎಸ್ ಮಾಲವನ್‌, ಈ ಯುದ್ಧನೌಕೆಯ ಹಿಂದಿದೆ ಎಎಂ/ಎನ್ಎಸ್ ಇಂಡಿಯಾ ಉಕ್ಕಿನ ಶಕ್ತಿ!" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="naxgn"&gt;&lt;b&gt;ಬೆಂಗಳೂರು, ಆ.06:&lt;/b&gt; ಭಾರತೀಯ ನೌಕಾಪಡೆಗೆ ಇತ್ತೀಚೆಗೆ ಅತ್ಯಾಧುನಿಕ 'ಐಎನ್‌ಎಸ್ ಮಾಲವನ್‌' ಯುದ್ಧನೌಕೆ ಸೇರ್ಪಡೆಗೊಂಡಿತ್ತು. ಇದರ ನಿರ್ಮಾಣಕ್ಕೆ ಅಗತ್ಯವಿದ್ದ ಶೇ. 100ರಷ್ಟು ವಿಶೇಷ ಉಕ್ಕನ್ನು ಪ್ರಸಿದ್ಧ ಆರ್ಸೆಲರ್ ಮಿತ್ತಲ್ ನಿಪ್ಪಾನ್ ಸ್ಟೀಲ್ ಇಂಡಿಯಾ ಪೂರೈಸಿದೆ. ಜುಲೈ 22, 2026 ರಂದು ಕರ್ನಾಟಕದ ಕಾರವಾರದಲ್ಲಿರುವ ಕದಂಬ ನೌಕಾನೆಲೆಯಲ್ಲಿ ಈ ನೌಕೆಯನ್ನು ಅಧಿಕೃತವಾಗಿ ನೌಕಾಪಡೆಗೆ ಸೇರ್ಪಡೆಗೊಳಿಸಲಾಗಿತ್ತು. ಭಾರತದ ರಕ್ಷಣಾ ವಲಯ ಮತ್ತು ಕಡಲ ಭದ್ರತೆಯಲ್ಲಿ ಈ ನೌಕೆ ಪ್ರಮುಖ ಪಾತ್ರ ವಹಿಸಲಿದ್ದು, 'ಮೇಕ್ ಇನ್ ಇಂಡಿಯಾ' ಯೋಜನೆಗೆ ಈ ಸಾಧನೆ ದೊಡ್ಡ ಬೂಸ್ಟ್ ನೀಡಿದೆ.&lt;/p&gt;&lt;h3 data-block-key="a3md6"&gt;&lt;b&gt;ಐಎನ್‌ಎಸ್ ಮಾಲವನ್‌ ಯುದ್ಧನೌಕೆಯ ವಿಶೇಷತೆಗಳೇನು?&lt;/b&gt;&lt;/h3&gt;&lt;p data-block-key="1rtsd"&gt;&lt;/p&gt;&lt;p data-block-key="agf59"&gt;ಕೊಚ್ಚಿನ್ ಶಿಪ್‌ಯಾರ್ಡ್ ಲಿ. ನಿರ್ಮಿಸಿರುವ ಈ ನೌಕೆಯು ಜಲಾಂತರ್ಗಾಮಿ ನಿರೋಧಕ ಯುದ್ಧನೌಕೆ ಆಗಿದೆ. ಸಮುದ್ರದೊಳಗಿನ ಕಣ್ಗಾವಲು, ಶತ್ರುಗಳ ಜಲಾಂತರ್ಗಾಮಿ ನೌಕೆಗಳನ್ನು ಹೊಡೆದುರುಳಿಸುವುದು ಹಾಗೂ ಕರಾವಳಿ ಭದ್ರತೆಗೆ ಇದು ಹೇಳಿಮಾಡಿಸಿದ ನೌಕೆಯಾಗಿದೆ.&lt;/p&gt;
&lt;/div&gt;

    
&lt;figure class="article-image text-center mb-4"&gt;
    &lt;img alt="INS Malavan" class="img-fluid" height="720" src="https://cdn.vishwavani.news/media/images/INS_Malavan.max-1280x720.format-webp.webp" width="1280"&gt;
    
&lt;/figure&gt;

    
&lt;div class="article-paragraph"&gt;
    &lt;p data-block-key="ph1m"&gt;ಈ ನೌಕೆಯನ್ನು ಶೇ. 80ಕ್ಕೂ ಹೆಚ್ಚು ದೇಶೀಯ ವಸ್ತುಗಳನ್ನೇ ಬಳಸಿ ನಿರ್ಮಿಸಲಾಗಿದ್ದು, ಇದು ಕೇಂದ್ರ ಸರ್ಕಾರದ ಆತ್ಮನಿರ್ಭರ್ ಭಾರತ್ ಹಾಗೂ ವಿಕಸಿತ ಭಾರತ ಗುರಿಗಳಿಗೂ ಶಕ್ತಿ ತುಂಬಿದೆ. ನೌಕಾಪಡೆಗಾಗಿ 'ಮಾಹೆ' ಸರಣಿಯ ಒಟ್ಟು 8 ಯುದ್ಧನೌಕೆಗಳನ್ನು ನಿರ್ಮಿಸಲಾಗುತ್ತಿದ್ದು, ಅದರಲ್ಲಿ ಐಎನ್‌ಎಸ್ ಮಾಲವನ್‌ ಎರಡನೇ ನೌಕೆಯಾಗಿದೆ.&lt;/p&gt;&lt;p data-block-key="fhton"&gt;&lt;/p&gt;&lt;h3 data-block-key="7ga8c"&gt;&lt;b&gt;ಗುಜರಾತ್‌ನಲ್ಲಿ ತಯಾರಾದ ವಿಶೇಷ 'ಉಕ್ಕು'&lt;/b&gt;&lt;/h3&gt;&lt;p data-block-key="64hvs"&gt;ನೌಕಾಪಡೆಯ ಹಡಗುಗಳಿಗೆ ಸಾಮಾನ್ಯ ಉಕ್ಕನ್ನು ಬಳಸುವಂತಿಲ್ಲ. ಅದಕ್ಕಾಗಿ ಗುಜರಾತ್‌ನ ಹಜೀರಾದಲ್ಲಿರುವ ಎಎಂ/ಎನ್ಎಸ್ ಇಂಡಿಯಾ ಘಟಕದಲ್ಲಿ ಅತ್ಯುನ್ನತ ಗುಣಮಟ್ಟದ 'ನೇವೆಲ್-ಗ್ರೇಡ್' ಸ್ಟೀಲ್ ಅನ್ನು ತಯಾರಿಸಿ ಈ ನೌಕೆಗೆ ಬಳಸಲಾಗಿದೆ.&lt;/p&gt;&lt;p data-block-key="bsmtl"&gt;ಈ ಬಗ್ಗೆ ಮಾತನಾಡಿದ ಎಎಂ/ಎನ್ಎಸ್ ಇಂಡಿಯಾದ ಸೇಲ್ಸ್ ಮತ್ತು ಮಾರ್ಕೆಟಿಂಗ್ ವಿಭಾಗದ ನಿರ್ದೇಶಕ ಹಾಗೂ ಉಪಾಧ್ಯಕ್ಷ ರಂಜನ್ ಧರ್, "ಭಾರತದ ರಕ್ಷಣಾ ವಲಯವು ದೇಶೀಯ ಉತ್ಪಾದನೆಯಿಂದ ಹೇಗೆ ಬಲಗೊಳ್ಳುತ್ತಿದೆ ಎಂಬುದಕ್ಕೆ ಐಎನ್‌ಎಸ್ ಮಾಲವನ್‌ ನೌಕೆ ಅತ್ಯುತ್ತಮ ಉದಾಹರಣೆ. ನೌಕಾಪಡೆಗೆ ಬೇಕಾದ ಉಕ್ಕು ತಯಾರಿಸಲು ಅತ್ಯುನ್ನತ ಗುಣಮಟ್ಟ ಹಾಗೂ ಪರಿಣತಿಯ ಅಗತ್ಯವಿದೆ. ನಮ್ಮ ಕಂಪನಿಯ ಉಕ್ಕು ನೌಕಾಪಡೆಯ ಬಲ ಹೆಚ್ಚಿಸುತ್ತಿರುವುದು ನಮಗೆ ಹೆಮ್ಮೆಯ ವಿಚಾರ" ಎಂದು ಸಂತಸ ವ್ಯಕ್ತಪಡಿಸಿದರು.&lt;/p&gt;
&lt;/div&gt;

    
&lt;figure class="article-image text-center mb-4"&gt;
    &lt;img alt="AM NS India" class="img-fluid" height="720" src="https://cdn.vishwavani.news/media/images/AM_NS_India.max-1280x720.format-webp.webp" width="1280"&gt;
    
&lt;/figure&gt;

    
&lt;div class="article-paragraph"&gt;
    &lt;h3 data-block-key="ci4qi"&gt;&lt;b&gt;ಕೇವಲ ನೌಕೆಯಲ್ಲ, ರಾಷ್ಟ್ರೀಯ ಯೋಜನೆಗಳಿಗೂ ಉಕ್ಕು ಪೂರೈಕೆ&lt;/b&gt;&lt;/h3&gt;&lt;p data-block-key="8u55a"&gt;ನೌಕಾಪಡೆಗಾಗಿ ನಿರ್ಮಾಣವಾಗುತ್ತಿರುವ ಒಟ್ಟು 8 'ಆಂಟಿ-ಸಬ್‌ಮರೀನ್' ಯುದ್ಧನೌಕೆಗಳಿಗೂ ಎಎಂ/ಎನ್ಎಸ್ ಇಂಡಿಯಾ ಕಂಪನಿಯೇ ಸಂಪೂರ್ಣ ಉಕ್ಕನ್ನು ಪೂರೈಸುತ್ತಿದೆ. ಇದಕ್ಕೂ ಮುನ್ನ ಐಎನ್‌ಎಸ್ ವಿಶಾಖಪಟ್ಟಣಂ ಹಾಗೂ ಐಎನ್‌ಎಸ್ ಸೂರತ್ ನೌಕೆಗಳಿಗೂ ಈ ಕಂಪನಿ ಉಕ್ಕು ನೀಡಿತ್ತು.&lt;/p&gt;&lt;p data-block-key="ettdd"&gt;ಇದಲ್ಲದೆ, ಕಾಶ್ಮೀರದಲ್ಲಿರುವ ವಿಶ್ವದ ಅತಿ ಎತ್ತರದ 'ಚೀನಾಬ್ ರೈಲ್ವೆ ಸೇತುವೆ', ಅಂಜಿಕಾಡ್ ರೈಲ್ವೆ ಸೇತುವೆ, ಬೋಗಿಬೀಲ್ ಸೇತುವೆ ಮತ್ತು ನ್ಯೂಟ್ರಿನೋ ವೀಕ್ಷಣಾಲಯದಂತಹ ಪ್ರಮುಖ ರಾಷ್ಟ್ರೀಯ ಯೋಜನೆಗಳಿಗೂ ಈ ಕಂಪನಿ ಉಕ್ಕು ಪೂರೈಸುವ ಮೂಲಕ ದೇಶದ ಮೂಲಸೌಕರ್ಯ ಅಭಿವೃದ್ಧಿಗೆ ಕೊಡುಗೆ ನೀಡಿದೆ.‌&lt;/p&gt;&lt;p data-block-key="8jbhq"&gt;&lt;/p&gt;&lt;p data-block-key="2ace"&gt;&lt;a href="/politics/union-cabinet-approves-pm-surya-sarovar-project-says-union-minister-pralhad-joshi-85311.html"&gt;&lt;b&gt;ʼಪಿಎಂ ಸೂರ್ಯ ಸರೋವರ' ಯೋಜನೆಗೆ ಕೇಂದ್ರ ಅಸ್ತು: ಬಳಕೆಯಾಗದ ಜಲಮೂಲಗಳಲ್ಲಿ 5000 ಮೆ.ವ್ಯಾ ತೇಲುವ ಸೌರ PV ಅಳವಡಿಕೆ&lt;/b&gt;&lt;/a&gt;&lt;/p&gt;&lt;p data-block-key="pj48"&gt;&lt;/p&gt;&lt;p data-block-key="531s4"&gt;ಎಎಂ/ಎನ್ಎಸ್ ಇಂಡಿಯಾ ವಿಶ್ವದ ಪ್ರಮುಖ ಸ್ಟೀಲ್ ಕಂಪನಿಗಳಾದ ಆರ್ಸೆಲರ್ ಮಿತ್ತಲ್ ಮತ್ತು ನಿಪ್ಪಾನ್ ಸ್ಟೀಲ್ ನಡುವಿನ ಜಂಟಿ ಉದ್ಯಮವಾಗಿದೆ. ಭಾರತದಲ್ಲಿ ವಾರ್ಷಿಕ 90 ಲಕ್ಷ ಟನ್ ಕಚ್ಚಾ ಉಕ್ಕು ಉತ್ಪಾದಿಸುವ ಸಾಮರ್ಥ್ಯವನ್ನು ಇದು ಹೊಂದಿದೆ. ಸದ್ಯ ಆಂಧ್ರಪ್ರದೇಶದಲ್ಲೂ ವಾರ್ಷಿಕ 82 ಲಕ್ಷ ಟನ್ ಸಾಮರ್ಥ್ಯದ ಹೊಸ ಸ್ಟೀಲ್ ಪ್ಲಾಂಟ್ ಅನ್ನು ಕಂಪನಿ ಸ್ಥಾಪಿಸುತ್ತಿದೆ. ವಿಶೇಷವೆಂದರೆ, ಕೇಂದ್ರ ಉಕ್ಕು ಸಚಿವಾಲಯದಿಂದ ಪರಿಸರ ಸ್ನೇಹಿ 'ಗ್ರೀನ್ ಸ್ಟೀಲ್ ಪ್ರಮಾಣಪತ್ರ' ಪಡೆದ ದೇಶದ ಏಕೈಕ ಸ್ಟೀಲ್ ಕಂಪನಿ ಇದಾಗಿದೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ವಿದೇಶ ಪ್ರವಾಸಗಳಿಗೆ ಈ ವರ್ಷ ಪ್ರಧಾನಿ ಮೋದಿ ಖರ್ಚು ಮಾಡಿದ್ದೆಷ್ಟು?  ವಿದೇಶಾಂಗ ಸಚಿವಾಲಯದ ಮಾಹಿತಿ ಇಲ್ಲಿದೆ</title><link>https://vishwavani.news/national/pm-modis-foreign-visits-cost-rs-745-crore-this-year-says-ministry-of-external-affairs-85800.html</link><guid>https://vishwavani.news/national/pm-modis-foreign-visits-cost-rs-745-crore-this-year-says-ministry-of-external-affairs-85800.html</guid><pubDate>Thu, 06 Aug 2026 13:36:30 +0000</pubDate><description>&lt;![CDATA[PM Modi's Foreign Visits Cost: ಈ ವರ್ಷ ಪ್ರಧಾನಿ ನರೇಂದ್ರ ಮೋದಿಯವರ ವಿದೇಶ ಪ್ರವಾಸಗಳಿಗಾಗಿ ಕೇಂದ್ರ ಸರ್ಕಾರ ಸುಮಾರು 74.5 ಕೋಟಿ ರೂ. ಗಳನ್ನು ಖರ್ಚು ಮಾಡಿದೆ ಎಂದು ವಿದೇಶಾಂಗ ಸಚಿವಾಲಯ ರಾಜ್ಯಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದೆ. ಸಂಸದರಾದ ಸಂಜಯ್ ಸಿಂಗ್ ಮತ್ತು ಡಾ. ವಿ. ಶಿವದಾಸನ್ ಅವರು ಕೇಳಿದ ಪ್ರಶ್ನೆಗೆ ಉತ್ತರವಾಗಿ ಸರ್ಕಾರವು ಈ ಅಂಕಿಅಂಶಗಳನ್ನು ಹಂಚಿಕೊಂಡಿದೆ.]]&gt;</description><dc:creator>&lt;![CDATA[Priyanka P]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ದೇಶ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/PM_Narendra_Modi_3_QAxfqaw.original.jpg" class="attachment-large size-large wp-post-image" alt="ವಿದೇಶ ಪ್ರವಾಸಗಳಿಗೆ ಈ ವರ್ಷ ಪ್ರಧಾನಿ ಮೋದಿ ಖರ್ಚು ಮಾಡಿದ್ದೆಷ್ಟು?  ವಿದೇಶಾಂಗ ಸಚಿವಾಲಯದ ಮಾಹಿತಿ ಇಲ್ಲಿದೆ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="b2u6v"&gt;&lt;b&gt;ನವದೆಹಲಿ, ಆ.6:&lt;/b&gt; ಈ ವರ್ಷ ಪ್ರಧಾನಿ ನರೇಂದ್ರ ಮೋದಿಯವರ &lt;a href="https://vishwavani.news/foreign/netanyahu-praises-modi-india-support-bilateral-relations-85590.html"&gt;&lt;b&gt;(PM Narendra Modi)&lt;/b&gt;&lt;/a&gt; ವಿದೇಶ ಪ್ರವಾಸಗಳಿಗಾಗಿ ಸರ್ಕಾರ ಸುಮಾರು 74.5 ಕೋಟಿ ರೂ.ಗಳನ್ನು ಖರ್ಚು ಮಾಡಿದೆ ಎಂದು ವಿದೇಶಾಂಗ ಸಚಿವಾಲಯ &lt;b&gt;(Ministry of External Affairs)&lt;/b&gt; ರಾಜ್ಯಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದೆ. ಏಪ್ರಿಲ್ 2021 ರಿಂದ ಭಾರತವು 381.8 ಬಿಲಿಯನ್ ಅಮೆರಿಕನ್ ಡಾಲರ್ ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಪಡೆದಿದೆ ಎಂದು ಅದು ಬಹಿರಂಗಪಡಿಸಿದೆ.&lt;/p&gt;&lt;p data-block-key="ciive"&gt;ಸಂಸದರಾದ ಸಂಜಯ್ ಸಿಂಗ್ ಮತ್ತು ಡಾ. ವಿ. ಶಿವದಾಸನ್ ಅವರು ಕೇಳಿದ ಪ್ರಶ್ನೆಗೆ ಉತ್ತರವಾಗಿ ಸರ್ಕಾರವು ಈ ಅಂಕಿಅಂಶಗಳನ್ನು ಹಂಚಿಕೊಂಡಿದೆ. 2021ರಿಂದ ಪ್ರಧಾನಿಯವರ ವಿದೇಶ ಪ್ರವಾಸಗಳ ದೇಶವಾರು ವಿವರ, ಪ್ರತಿ ವರ್ಷದ ಹಾಗೂ ಪ್ರತಿ ಪ್ರವಾಸದ ವೆಚ್ಚ, ಆ ಪ್ರವಾಸದಿಂದಾಗಿ ನಡೆದ ದ್ವಿಪಕ್ಷೀಯ ಒಪ್ಪಂದಗಳು, ಹೂಡಿಕೆ ಭರವಸೆಗಳು ಹಾಗೂ ನೇರ ವಿದೇಶಿ ಹೂಡಿಕೆ (FDI) ಕುರಿತು ಮಾಹಿತಿ ನೀಡುವಂತೆ ಸಂಸದರು ಪ್ರಶ್ನಿಸಿದ್ದರು.&lt;/p&gt;&lt;p data-block-key="cj7tf"&gt;ವರ್ಷವಾರು ಮತ್ತು ಭೇಟಿವಾರು ವೆಚ್ಚದ ಅಂಕಿ ಅಂಶಗಳು, ಭೇಟಿಗಳ ಸಮಯದಲ್ಲಿ ಸಹಿ ಹಾಕಲಾದ ತಿಳುವಳಿಕೆ ಒಪ್ಪಂದಗಳ ದೇಶವಾರು ಪಟ್ಟಿಯನ್ನು ಉತ್ತರಕ್ಕೆ ಲಗತ್ತಿಸಲಾದ ಎರಡು ಅನುಬಂಧಗಳಲ್ಲಿ ಇರಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವೆ ಪಬಿತ್ರ ಮಾರ್ಗರಿಟಾ ಅವರು ಹೇಳಿದರು.&lt;/p&gt;&lt;p data-block-key="1g4l4"&gt;&lt;a href="https://vishwavani.news/national/%E0%B2%95%E0%B2%AE6pm-modi-kyrgyzstan-uzbekistan-central-asia-visit-85651.html"&gt;ತಿಂಗಳಾಂತ್ಯದಲ್ಲಿ ಕಿರ್ಗಿಸ್ತಾನ್‌, ಉಜ್ಬೇಕಿಸ್ತಾನ್‌ಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ; ಮಧ್ಯ ಏಷ್ಯಾದೊಂದಿಗೆ ಭಾರತದ ಬಾಂಧವ್ಯ ಮತ್ತಷ್ಟು ವೃದ್ಧಿಸಲು ಕ್ರಮ&lt;/a&gt;&lt;/p&gt;&lt;p data-block-key="dviso"&gt;ಇದೇ ವೇಳೆ ಕೇಂದ್ರ ಸಚಿವಾಲಯವು, ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ದಿವಂಗತ ಡಾ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ನಡೆದ ಕೆಲವು ವಿದೇಶ ಪ್ರವಾಸಗಳ ವೆಚ್ಚವನ್ನು ಉಲ್ಲೇಖಿಸಿದೆ. 2011ರಲ್ಲಿ ಅಮೆರಿಕ ಪ್ರವಾಸಕ್ಕೆ ರೂ. 10.74 ಕೋಟಿ, 2013ರಲ್ಲಿ ರಷ್ಯಾ ಪ್ರವಾಸಕ್ಕೆ ರೂ. 9.96 ಕೋಟಿ, 2011ರಲ್ಲಿ ಫ್ರಾನ್ಸ್ ಪ್ರವಾಸಕ್ಕೆ ರೂ. 8.33 ಕೋಟಿ, ಹಾಗೂ 2013ರಲ್ಲಿ ಜರ್ಮನಿ ಪ್ರವಾಸಕ್ಕೆ ರೂ. 6.02 ಕೋಟಿ ವೆಚ್ಚವಾಗಿತ್ತು. ಈ ಪ್ರತಿಯೊಂದು ವಿದೇಶ ಪ್ರವಾಸದ ವೆಚ್ಚವೂ ಈ ವರ್ಷದ ಪ್ರಧಾನಿ ಮೋದಿ ಅವರ ಒಟ್ಟು ವಿದೇಶ ಪ್ರವಾಸ ವೆಚ್ಚಕ್ಕಿಂತ ಹೆಚ್ಚಾಗಿದೆ ಎಂದು ಸಚಿವಾಲಯ ತಿಳಿಸಿದೆ.&lt;/p&gt;&lt;p data-block-key="4elvm"&gt;ಎಫ್‌ಡಿಐಗೆ ಸಂಬಂಧಪಟ್ಟಂತೆ, 2021ರ ಏಪ್ರಿಲ್ ಮತ್ತು 2025ರ ಡಿಸೆಂಬರ್ ನಡುವೆ ಭಾರತವು 381.8 ಶತಕೋಟಿ ಅಮೆರಿಕನ್ ಡಾಲರ್ ಎಫ್‌ಡಿಐ ಪಡೆದಿದೆ ಎಂದು ಸರ್ಕಾರ ಹೇಳಿದೆ. ಪ್ರಧಾನಿಯವರ ಉನ್ನತ ಮಟ್ಟದ ವಿದೇಶ ಪ್ರವಾಸಗಳು ದ್ವಿಪಕ್ಷೀಯ, ಪ್ರಾದೇಶಿಕ ಹಾಗೂ ಜಾಗತಿಕ ಸಂಬಂಧಗಳನ್ನು ಬಲಪಡಿಸುವ ಪರಿಣಾಮಕಾರಿ ಮಾರ್ಗವಾಗಿವೆ ಎಂದು ಸರ್ಕಾರ ಹೇಳಿದೆ. ಇಂತಹ ಪ್ರವಾಸಗಳ ವೇಳೆ ಸಹಿ ಮಾಡಲಾದ ಒಪ್ಪಂದಗಳು ತಂತ್ರಜ್ಞಾನ, ನಾವೀನ್ಯತೆ, ವ್ಯಾಪಾರ ಮತ್ತು ಹೂಡಿಕೆ, ರಕ್ಷಣಾ ಸಹಕಾರ, ಇಂಧನ ಸಹಭಾಗಿತ್ವ ಹಾಗೂ ಪೂರೈಕೆ ಸರಪಳಿ ಸ್ಥಿರತೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಪಾಲುದಾರಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸಲು ನೆರವಾಗಿವೆ ಎಂದು ಸರ್ಕಾರ ತಿಳಿಸಿದೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ತನ್ನ ಟಿ20 ದಾಖಲೆಯನ್ನು ವೈಭವ್‌ ಸೂರ್ಯವಂಶಿ ಮಾತ್ರ ಮುರಿಯಬಲ್ಲರು: ಜೋಸ್‌ ಬಟ್ಲರ್‌!</title><link>https://vishwavani.news/sports/cricket/someone-will-break-my-t20-record-itll-probably-be-vaibhav-sooryavanshi-jos-buttler-85806.html</link><guid>https://vishwavani.news/sports/cricket/someone-will-break-my-t20-record-itll-probably-be-vaibhav-sooryavanshi-jos-buttler-85806.html</guid><pubDate>Thu, 06 Aug 2026 13:32:57 +0000</pubDate><description>&lt;![CDATA[ಇಂಗ್ಲೆಂಡ್‌ನ ಸ್ಫೋಟಕ ಬ್ಯಾಟರ್ ಜೋಸ್ ಬಟ್ಲರ್, ಕೈರೊನ್ ಪೊಲಾರ್ಡ್ ಅವರನ್ನು ಹಿಂದಿಕ್ಕಿ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಆದರೆ ವೈಭವ್ ಸೂರ್ಯವಂಶಿ ಭವಿಷ್ಯದಲ್ಲಿ ವಿಶ್ವ ಕ್ರಿಕೆಟ್‌ನ ದೊಡ್ಡ ಸೂಪರ್‌ಸ್ಟಾರ್‌ಗಳಲ್ಲಿ ಒಬ್ಬರಾಗುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಬಟ್ಲರ್ ವಿಶ್ವಾಸ ವ್ಯಕ್ತಪಡಿಸಿದರು.]]&gt;</description><dc:creator>&lt;![CDATA[Ramesh Kote]]&gt;</dc:creator><category>&lt;![CDATA[ಕ್ರಿಕೆಟ್‌]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕ್ರೀಡೆ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Jos_Buttler-Vaibhav_Sooryavsnhi.original.jpg" class="attachment-large size-large wp-post-image" alt="ತನ್ನ ಟಿ20 ದಾಖಲೆಯನ್ನು ವೈಭವ್‌ ಸೂರ್ಯವಂಶಿ ಮಾತ್ರ ಮುರಿಯಬಲ್ಲರು: ಜೋಸ್‌ ಬಟ್ಲರ್‌!" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="n5uck"&gt;&lt;b&gt;ನವದೆಹಲಿ:&lt;/b&gt; ಇಂಗ್ಲೆಂಡ್‌ನ ಸ್ಫೋಟಕ ಬ್ಯಾಟರ್ ಜೋಸ್ ಬಟ್ಲರ್, ವೆಸ್ಟ್ ಇಂಡೀಸ್‌ ಮಾಜಿ ಆಲ್‌ರೌಂಡರ್‌ ಕೈರೊನ್ ಪೊಲಾರ್ಡ್ ಅವರನ್ನು ಹಿಂದಿಕ್ಕಿ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ದಾಖಲೆಯನ್ನು ಬರೆದಿದ್ದಾರೆ. ಬುಧವಾರ ನಡೆದಿದ್ದ ದಿ ಹಂಡ್ರೆಡ್ ಟೂರ್ನಿಯ ವೆಲ್ಶ್ ಫೈರ್ ವಿರುದ್ಧ ಮ್ಯಾಂಚೆಸ್ಟರ್ ಸೂಪರ್ ಜಯಂಟ್ಸ್‌ ಪರ ಕೇವಲ 20 ಎಸೆತಗಳಲ್ಲಿ 51 ರನ್‌ಗಳ ಸಿಡಿಲಬ್ಬರದ ಇನಿಂಗ್ಸ್‌ ಆಡುವ ಮೂಲಕ ಅವರು ಈ ಮೈಲುಗಲ್ಲು ತಲುಪಿದ್ದಾರೆ. ಆದರೆ ಈ ಪಂದ್ಯದ ಬಳಿಕ ಬಟ್ಲರ್ ಹೇಳಿದ ಮಾತು ಭಾರತೀಯ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆಯಿತು.&lt;/p&gt;&lt;p data-block-key="eq0hs"&gt;ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾದ ಕ್ಷಣದಲ್ಲೇ, ತಮ್ಮ ದಾಖಲೆಯನ್ನು ಭವಿಷ್ಯದಲ್ಲಿ ಯಾರು ಮುರಿಯಬಹುದು ಎಂಬ ಪ್ರಶ್ನೆಗೆ ಉತ್ತರಿಸಿದ ಬಟ್ಲರ್, ಭಾರತದ 15 ವರ್ಷದ ಯುವ ಪ್ರತಿಭೆ ವೈಭವ್ ಸೂರ್ಯವಂಶಿಯ ಹೆಸರನ್ನು ಉಲ್ಲೇಖಿಸಿದರು.&lt;/p&gt;&lt;p data-block-key="1marl"&gt;"ಇದು ನಿಜಕ್ಕೂ ವಿಶೇಷ ಕ್ಷಣ. ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿರುವುದು ಸಂತೋಷದ ಸಂಗತಿ. ಆದರೆ ಒಂದು ದಿನ ಯಾರಾದರೂ ಈ ದಾಖಲೆಯನ್ನು ಮುರಿಯುತ್ತಾರೆ. ನನ್ನ ಅನಿಸಿಕೆಯಲ್ಲಿ ಆ ಆಟಗಾರನ ಹೆಸರು ವೈಭವ್ ಸೂರ್ಯವಂಶಿ ಆಗಿರಬಹುದು," ಎಂದು ಬಟ್ಲರ್ ಸ್ಕೈ ಸ್ಪೋರ್ಟ್ಸ್‌ಗೆ ತಿಳಿಸಿದ್ದಾರೆ.&lt;/p&gt;&lt;p data-block-key="abp4g"&gt;&lt;a href="/sports/cricket/vaibhav-sooryavanshi-named-vice-captain-as-east-zone-announce-duleep-trophy-2026-squad-85134.html"&gt;&lt;b&gt;Duleep Trophy 2026:  ಪೂರ್ವ ವಲಯ ತಂಡಕ್ಕೆ ವೈಭವ್‌ ಸೂರ್ಯವಂಶಿ ಉಪ ನಾಯಕ!&lt;/b&gt;&lt;/a&gt;&lt;/p&gt;&lt;p data-block-key="ae8g8"&gt;ಬಟ್ಲರ್ ಅವರ ಈ ಹೇಳಿಕೆಗೆ ವಿಶೇಷ ಮಹತ್ವವಿದೆ. ಏಕೆಂದರೆ ಐಪಿಎಲ್‌ ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಪರ ಆಡಿದ ವೇಳೆ ಅವರು ವೈಭವ್ ಸೂರ್ಯವಂಶಿಯೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿದ್ದರು. ಅಲ್ಲಿ ಯುವ ಬ್ಯಾಟರ್‌ನ ಭಯಮುಕ್ತ ಆಟವನ್ನು ಹತ್ತಿರದಿಂದ ಕಂಡಿದ್ದ ಬಟ್ಲರ್, ಅವರ ಅಪಾರ ಪ್ರತಿಭೆಯನ್ನು ಮೆಚ್ಚಿಕೊಂಡಿದ್ದಾರೆ.&lt;/p&gt;&lt;p data-block-key="55o52"&gt;ಕೇವಲ 15ನೇ ವಯಸ್ಸಿನಲ್ಲೇ ವೈಭವ್ ಸೂರ್ಯವಂಶಿ ಹಲವು ಮಾಜಿ ಕ್ರಿಕೆಟಿಗರಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಸರಿಯಾದ ಮಾರ್ಗದರ್ಶನ ಸಿಕ್ಕರೆ ವೈಭವ್ ಸೂರ್ಯವಂಶಿ ವೈಟ್‌ಬಾಲ್ ಕ್ರಿಕೆಟ್‌ನಲ್ಲಿ ಸಚಿನ್ ತೆಂಡೂಲ್ಕರ್ ಅವರಿಗಿಂತಲೂ ಹೆಚ್ಚಿನ ಪ್ರಭಾವ ಬೀರುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಕೆಲವೇ ದಿನಗಳ ಹಿಂದೆ ರಾಬಿನ್ ಉತ್ತಪ್ಪ ಭವಿಷ್ಯ ನುಡಿದಿದ್ದರು.&lt;/p&gt;&lt;p data-block-key="dc7rh"&gt;ಇನ್ನು ತಮ್ಮ ದಾಖಲೆಯ ಬಗ್ಗೆ ಮಾತನಾಡಿದ ಬಟ್ಲರ್, "ಕ್ರಿಕೆಟ್ ಎಷ್ಟು ಬೇಗ ಬದಲಾಗುತ್ತದೆ ಎಂಬುದು ಆಶ್ಚರ್ಯಕರ. ಕೆಲ ತಿಂಗಳ ಹಿಂದೆ ನಾನು ಕಳಪೆ ಫಾರ್ಮ್‌ನಲ್ಲಿದ್ದೆ. ಆದರೆ ಕಳೆದ ಕೆಲವು ವಾರಗಳಿಂದ ನನ್ನ ವೃತ್ತಿಜೀವನದಲ್ಲೇ ಅತ್ಯುತ್ತಮ ಬ್ಯಾಟಿಂಗ್ ಮೂಡಿ ಬರುತ್ತಿರುವ ಅನುಭವವಾಗುತ್ತಿದೆ. ಇದು ತುಂಬಾ ಸಂತೋಷ ನೀಡುತ್ತಿದೆ," ಎಂದರು.&lt;/p&gt;&lt;p data-block-key="12emh"&gt;&lt;a href="/sports/jos-buttler-breaks-kieron-pollards-world-record-on-return-to-manchester-super-giants-captaincy-in-the-hundred-85749.html"&gt;&lt;b&gt;ಪೊಲಾರ್ಡ್‌ ವಿಶ್ವದಾಖಲೆ ಮುರಿದ ಜಾಸ್‌ ಬಟ್ಲರ್‌&lt;/b&gt;&lt;/a&gt;&lt;/p&gt;&lt;p data-block-key="e26pp"&gt;"ಆಟಗಾರನ ಮುಂದೆ ಯಾವಾಗಲೂ ಎರಡು ಆಯ್ಕೆಗಳಿರುತ್ತವೆ. ಒಂದು ಕೈಚೆಲ್ಲುವುದು, ಮತ್ತೊಂದು ಹೋರಾಟ ಮುಂದುವರಿಸಿ ಮತ್ತೆ ಫಾರ್ಮ್ ಕಂಡುಕೊಳ್ಳುವುದು. ನಾನು ಎರಡನೇ ಮಾರ್ಗವನ್ನು ಆಯ್ಕೆ ಮಾಡಿಕೊಂಡೆ. ಅದೇ ನನ್ನ ಯಶಸ್ಸಿಗೆ ಕಾರಣ," ಎಂದು ಹೇಳಿದರು.&lt;/p&gt;&lt;p data-block-key="9u5bs"&gt;34 ವರ್ಷದ ಬಟ್ಲರ್, ಮ್ಯಾಂಚೆಸ್ಟರ್ ಸೂಪರ್ ಜಯಂಟ್ಸ್‌ ಮತ್ತು ಎಂಐ ಲಂಡನ್ ನಡುವಿನ ಪಂದ್ಯದಲ್ಲೇ ಪೊಲಾರ್ಡ್ ಎದುರಿದ್ದಾಗಲೇ ಈ ದಾಖಲೆ ಮುರಿಯಬೇಕೆಂದು ಬಯಸಿದ್ದಾಗಿ ತಿಳಿಸಿದರು. "ಪೊಲಾರ್ಡ್ ಅಲ್ಲಿದ್ದಾಗಲೇ ಅವರ ದಾಖಲೆಯನ್ನು ಹಿಂದಿಕ್ಕಿದ್ದರೆ ಇನ್ನೂ ವಿಶೇಷವಾಗುತ್ತಿತ್ತು. ಆ ಪಟ್ಟಿಯಲ್ಲಿ ಅನೇಕ ಶ್ರೇಷ್ಠ ಆಟಗಾರರ ಹೆಸರುಗಳಿವೆ. ಅವರ ನಡುವೆ ನನ್ನ ಹೆಸರು ಅಗ್ರಸ್ಥಾನದಲ್ಲಿರುವುದು ಹೆಮ್ಮೆಯ ವಿಷಯ," ಎಂದು ಬಟ್ಲರ್ ತಿಳಿಸಿದ್ದಾರೆ.&lt;/p&gt;&lt;p data-block-key="5s4rq"&gt;ಆದರೆ ದಾಖಲೆಗಳು ಎಂದಿಗೂ ಶಾಶ್ವತವಲ್ಲ ಎಂಬುದನ್ನು ಒಪ್ಪಿಕೊಂಡ ಬಟ್ಲರ್, "ಇಂದು ನಾನು ಅಗ್ರಸ್ಥಾನದಲ್ಲಿದ್ದೇನೆ. ಆದರೆ ಭವಿಷ್ಯದಲ್ಲಿ ಆ ಸ್ಥಾನವನ್ನು ಅಲಂಕರಿಸುವ ಸಾಮರ್ಥ್ಯ ವೈಭವ್ ಸೂರ್ಯವಂಶಿಗೆ ಇದೆ. ಇದೇ ರೀತಿಯ ಪ್ರದರ್ಶನ ಮುಂದುವರಿಸಿದರೆ, ಒಂದು ದಿನ ಆತ ಈ ದಾಖಲೆಯನ್ನು ತನ್ನದಾಗಿಸಿಕೊಳ್ಳುವುದು ಖಚಿತ," ಎಂದು ವಿಶ್ವಾಸ ವ್ಯಕ್ತಪಡಿಸಿದರು.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡೋದು ನೋಡಿದ್ರೆ ಶಾಕ್‌ ಆಗ್ತೀರಾ! ಮುರಿದ ಕಾಲಿಗೆ ಪ್ಲಾಸ್ಟರ್ ಬದಲಿಗೆ ಕಾರ್ಡ್‌ಬೋರ್ಡ್ ಬ್ಯಾಂಡೇಜ್ ಹಾಕಿದ ವೈದ್ಯರು!</title><link>https://vishwavani.news/viral/doctor-puts-cardboard-bandage-on-injured-man-instead-of-plaster-85780.html</link><guid>https://vishwavani.news/viral/doctor-puts-cardboard-bandage-on-injured-man-instead-of-plaster-85780.html</guid><pubDate>Thu, 06 Aug 2026 13:28:06 +0000</pubDate><description>&lt;![CDATA[Viral Video: ಬಿಹಾರದ ಬೇಗೂಸರಾಯ್ ಆಸ್ಪತ್ರೆಯೊಂದರಲ್ಲಿ ಪ್ಲಾಸ್ಟರ್ ಬದಲಿಗೆ ಗಾಯಗೊಂಡ ವ್ಯಕ್ತಿಯ ಕಾಲಿಗೆವಖಾಲಿ ರಟ್ಟಿನ ಬಾಕ್ಸ್ ಬಳಸಿ ಬ್ಯಾಂಡೇಜ್ ಮಾಡಿರುವ ವಿಡಿಯೊವೊಂದು ವೈರಲ್ ಆಗಿದೆ. ಈ ದೃಶ್ಯ ಬಿಹಾರದ ಆರೋಗ್ಯ ವ್ಯವಸ್ಥೆಯ ಬಗ್ಗೆ ವ್ಯಾಪಕ ಟೀಕೆಗೆ ಕಾರಣವಾಗಿದ್ದು ನೆಟ್ಟಿಗರು ಆಸ್ಪತ್ರೆ ಸಿಬ್ಬಂದಿಗಳ ವರ್ತನೆ ವಿರುದ್ಧ ಕಿಡಿಕಾರಿದ್ದಾರೆ.]]&gt;</description><dc:creator>&lt;![CDATA[Pushpa Kumari]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ವೈರಲ್‌]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/bihar_news_19.original.jpg" class="attachment-large size-large wp-post-image" alt="ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡೋದು ನೋಡಿದ್ರೆ ಶಾಕ್‌ ಆಗ್ತೀರಾ! ಮುರಿದ ಕಾಲಿಗೆ ಪ್ಲಾಸ್ಟರ್ ಬದಲಿಗೆ ಕಾರ್ಡ್‌ಬೋರ್ಡ್ ಬ್ಯಾಂಡೇಜ್ ಹಾಕಿದ ವೈದ್ಯರು!" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="1mduj"&gt;&lt;b&gt;ಬಿಹಾರ,ಆ.6:&lt;/b&gt; ಸಾಮಾನ್ಯವಾಗಿ ಕಾಲು- ಕೈಗೆ ಯಾವುದೇ ಗಾಯವಾದಾಗ ಪ್ಲಾಸ್ಟರ್ ಹಾಕಿ ಬ್ಯಾಂಡೇಜ್ ಮಾಡಿರುವುದನ್ನು ನೀವು ನೋಡಿರಬಹುದು. ಆದರೆ ಬಿಹಾರದ ಬೇಗೂಸರಾಯ್ ಆಸ್ಪತ್ರೆಯೊಂದರಲ್ಲಿ ಪ್ಲಾಸ್ಟರ್ ಬದಲಿಗೆ ಗಾಯಗೊಂಡ ವ್ಯಕ್ತಿಯ ಕಾಲಿಗೆವಖಾಲಿ ರಟ್ಟಿನ ಬಾಕ್ಸ್ ಬಳಸಿ ಬ್ಯಾಂಡೇಜ್ ಮಾಡಿರುವ ವಿಡಿಯೊವೊಂದು ವೈರಲ್&lt;a href="/viral/uber-driver-drags-biker-half-a-kilometer-away-85036.html"&gt; (&lt;b&gt;Viral News)&lt;/b&gt;&lt;/a&gt;&lt;b&gt; &lt;/b&gt;ಆಗಿದೆ. ಈ ದೃಶ್ಯ ಬಿಹಾರದ ಆರೋಗ್ಯ ವ್ಯವಸ್ಥೆಯ ಬಗ್ಗೆ ವ್ಯಾಪಕ ಟೀಕೆಗೆ ಕಾರಣವಾಗಿದ್ದು ನೆಟ್ಟಿಗರು ಆಸ್ಪತ್ರೆ ಸಿಬ್ಬಂದಿಗಳ ವರ್ತನೆ ವಿರುದ್ಧ ಕಿಡಿಕಾರಿದ್ದಾರೆ.&lt;/p&gt;&lt;p data-block-key="aetd8"&gt;ಬಿಹಾರದ ಬೇಗುಸರಾಯ್ ಜಿಲ್ಲೆಯ ಮಂಜೌಲ್ ಉಪ-ವಿಭಾಗೀಯ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಗಾಯಾಳು ವ್ಯಕ್ತಿಗೆ ಕಾರ್ಡ್‌ಬೋರ್ಡ್ ಬಳಸಿ ಪ್ರಥಮ ಚಿಕಿತ್ಸೆ ನೀಡಲಾಯಿತು ಎಂದು ಹೇಳಲಾಗಿದೆ. ಅಧಿಕಾರಿಗಳ ಪ್ರಕಾರ, ಆಗಸ್ಟ್ 3 ರ ಸಂಜೆ ಈ ಘಟನೆ ಸಂಭವಿಸಿದೆ. ನೌಕೋಥಿ ಪೊಲೀಸ್ ಠಾಣೆ ವ್ಯಾಪ್ತಿಯ ಮಹೇಶ್ವರ ಗ್ರಾಮದ ನಿವಾಸಿ ಕುನಾಲ್ ಕುಮಾರ್ ಅವರ ಬೈಕ್ಹರ್ ಸಿಂಗ್ ಸೇತುವೆ ಬಳಿ ಅಪಘಾತಕ್ಕೀಡಾಗಿಡಾಗಿದ್ದು ಕಾಲನ್ನು ಮುರಿದುಕೊಂಡಿದ್ದರು.&lt;/p&gt;&lt;p data-block-key="f8h3s"&gt;&lt;b&gt;ವಿಡಿಯೋ ನೋಡಿ:&lt;/b&gt;&lt;/p&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="twitter-tweet"&gt;&lt;p lang="hi" dir="ltr"&gt;बेगूसराय के मंझौल अस्पताल से बेहद शर्मनाक तस्वीर सामने आई है। सड़क दुर्घटना में घायल एक युवक के पैर में प्लास्टर करने के बजाय डॉक्टरों ने कार्टून बांधकर उसे रेफर कर दिया।&lt;br&gt;&lt;br&gt;यह सिर्फ लापरवाही नहीं, बल्कि मरीज की जान और स्वास्थ्य के साथ गंभीर खिलवाड़ है।&lt;a href="https://x.com/Nishantjdu?ref_src=twsrc%5Etfw"&gt;@Nishantjdu&lt;/a&gt; &lt;a href="https://x.com/Nishantjdu81?ref_src=twsrc%5Etfw"&gt;@Nishantjdu81&lt;/a&gt; &lt;a href="https://t.co/dsTrAJN8Tc"&gt;pic.twitter.com/dsTrAJN8Tc&lt;/a&gt;&lt;/p&gt;&amp;mdash; Mukesh singh (@Mukesh_Journo) &lt;a href="https://x.com/Mukesh_Journo/status/2085017486622351362?ref_src=twsrc%5Etfw"&gt;August 5, 2026&lt;/a&gt;&lt;/blockquote&gt; &lt;script async src="https://platform.x.com/widgets.js" charset="utf-8"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="eifl1"&gt;ಸಾರ್ವಜನಿಕರು ಆತನನ್ನು ಆಸ್ಪತ್ರೆಗೆ ಸೇರಿಸಿದಾಗ, ವೈದ್ಯರು ಕಾಲನ್ನು ಸ್ಥಿರವಾಗಿ ಇರಿಸಲು ರಟ್ಟಿನ ಬಾಕ್ಸ್ ಕಟ್ಟಿ, ಹೆಚ್ಚಿನ ಚಿಕಿತ್ಸೆಗೆ ಬೇರೊಂದು ದೊಡ್ಡ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ಹಲವಾರು ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಮಂಜೌಲ್ ಉಪ-ವಿಭಾಗೀಯ ಆಸ್ಪತ್ರೆಯಲ್ಲಿ ರಸ್ತೆ ಅಪಘಾತ ಗಳಿಂದ ಉಂಟಾಗುವ ಪ್ರಕರಣಗಳಿಗೆ ಚಿಕಿತ್ಸೆ ನೀಡಲು ಸೌಲಭ್ಯಗಳಿಲ್ಲ ನೆಟ್ಟಿಗರು ಕಿಡಿಕಾರಿದ್ದಾರೆ.&lt;/p&gt;&lt;p data-block-key="c8k02"&gt;&lt;a href="/viral/jalaun-police-station-intimate-video-82253.html"&gt;&lt;b&gt;Viral Video: ಪೊಲೀಸ್ ಠಾಣೆಯಲ್ಲೇ ಕಾನ್ಸ್‌ಟೇಬಲ್‌ಗಳ ರೊಮ್ಯಾನ್ಸ್‌; ತನ್ನ ಪಾಡಿಗೆ ಕೂತಿದ್ದ ಪೇದೆಯನ್ನು ತಬ್ಬಿ ಮುತ್ತಿಕ್ಕಿದ ಲೇಡಿ ಪೊಲೀಸ್&lt;/b&gt;&lt;/a&gt;&lt;/p&gt;&lt;p data-block-key="bfeup"&gt;ಈ ವಿವಾದಕ್ಕೆ ಪ್ರತಿಕ್ರಿಯಿಸಿದ ಆಸ್ಪತ್ರೆಯ ಉಸ್ತುವಾರಿ ಅಭಿನವ್ ಪ್ರಿಯದರ್ಶಿ, ಕಾಲು,ಕೈ ಮುರಿತದ ರೋಗಿಗಳಿಗೆ ತಾತ್ಕಾಲಿಕ ಸ್ಪ್ಲಿಂಟ್ ಆಗಿ ಕಾರ್ಡ್‌ಬೋರ್ಡ್ ಅನ್ನು ಬಳಸುವುದು ತುರ್ತು ಪ್ರಥಮ ಚಿಕಿತ್ಸೆಯಾಗಿದೆ. ರಕ್ತಸ್ರಾವ ತಡೆಯಲು ಮತ್ತು ಮೂಳೆ ಹೆಚ್ಚು ಅಲ್ಲಾಡದಂತೆ ಮಾಡಲು ಈ ತುರ್ತು ಪ್ರಥಮ ಸಮರ್ಥಿಸಿಕೊಂಡಿದ್ದಾರೆ. ಸದ್ಯ ಈ ಘಟನೆಯು ಬಿಹಾರದಲ್ಲಿ ತುರ್ತು ಆರೋಗ್ಯ ಸೌಲಭ್ಯಗಳ ಕುರಿತು ಚರ್ಚೆಯನ್ನು ಹುಟ್ಟುಹಾಕಿದೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಡಿಸೆಂಬರ್‌ನಲ್ಲಿ ಬಾಂಗ್ಲಾದೇಶಕ್ಕೆ ಮರಳುತ್ತೇನೆ: ಬಂಧನಕ್ಕೂ ಹೆದರಲ್ಲ, ಶೇಖ್‌ ಹಸೀನಾ ದೃಢ ನಿರ್ಧಾರ</title><link>https://vishwavani.news/national/sheikh-hasina-announces-return-to-bangladesh-in-december-despite-arrest-risk-85766.html</link><guid>https://vishwavani.news/national/sheikh-hasina-announces-return-to-bangladesh-in-december-despite-arrest-risk-85766.html</guid><pubDate>Thu, 06 Aug 2026 13:06:52 +0000</pubDate><description>&lt;![CDATA[ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಬಂಧನ ಅಥವಾ ಜೈಲು ಶಿಕ್ಷೆಯ ಸಾಧ್ಯತೆ ಇದ್ದರೂ ಈ ವರ್ಷದ ಡಿಸೆಂಬರ್‌ನಲ್ಲಿ ದೇಶಕ್ಕೆ ಮರಳುವುದಾಗಿ ಘೋಷಿಸಿದ್ದಾರೆ. ದೇಶದಲ್ಲಿ ಪ್ರಜಾಪ್ರಭುತ್ವ ಮತ್ತು ಸ್ಥಿರತೆಯನ್ನು ಪುನಃ ಸ್ಥಾಪಿಸುವ ಉದ್ದೇಶದಿಂದಲೇ ತಮ್ಮ ಮರಳುವಿಕೆ ಎಂದು ಅವರು ತಿಳಿಸಿದ್ದಾರೆ.]]&gt;</description><dc:creator>&lt;![CDATA[Sushmitha Jain]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ದೇಶ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Sheikh_Hasina_87tAiZk.original.jpg" class="attachment-large size-large wp-post-image" alt="ಡಿಸೆಂಬರ್‌ನಲ್ಲಿ ಬಾಂಗ್ಲಾದೇಶಕ್ಕೆ ಮರಳುತ್ತೇನೆ: ಬಂಧನಕ್ಕೂ ಹೆದರಲ್ಲ, ಶೇಖ್‌ ಹಸೀನಾ ದೃಢ ನಿರ್ಧಾರ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="3edqz"&gt;&lt;b&gt;ನವದೆಹಲಿ, ಆ. 6:&lt;/b&gt; ಬಂಧನವಾಗಲಿ, ಜೈಲು ಶಿಕ್ಷೆ (Imprisonment)ಯಾಗಲಿ, ಯಾವುದೇ ಪರಿಣಾಮ ಎದುರಾದರೂ ಈ ವರ್ಷದ ಡಿಸೆಂಬರ್‌ನಲ್ಲಿ ಬಾಂಗ್ಲಾದೇಶಕ್ಕೆ ಮರಳುವುದಾಗಿ ಮಾಜಿ ಪ್ರಧಾನಿ ಶೇಖ್ ಹಸೀನಾ &lt;a href="/foreign/bangladesh-president-shahabuddin-may-resign-between-the-issue-of-sheikh-hasinas-return-84558.html"&gt;&lt;b&gt;(Sheikh Hasina)&lt;/b&gt;&lt;/a&gt; ಘೋಷಿಸಿದ್ದಾರೆ. ಅಧಿಕಾರದಿಂದ ಕೆಳಗಿಳಿದ ಬಳಿಕ ಮೊದಲ ಬಾರಿಗೆ ದೆಹಲಿಯಿಂದ ಅಂತರರಾಷ್ಟ್ರೀಯ ಮಾಧ್ಯಮಗಳಿಗೆ ಆಡಿಯೋ ಸಂದೇಶ ನೀಡಿದ ಅವರು, "ನನ್ನ ದೇಶದ ಜನರು ಸಂಕಷ್ಟದಲ್ಲಿರುವಾಗ ನಾನು ದೂರ ಉಳಿಯಲು ಸಾಧ್ಯವಿಲ್ಲ. ನನ್ನನ್ನು ಬಂಧಿಸಬಹುದು, ಜೈಲಿಗೆ ಕಳುಹಿಸಬಹುದು. ಸುಳ್ಳು ಪ್ರಕರಣಗಳಲ್ಲಿ ಶಿಕ್ಷೆ ವಿಧಿಸಲು ಪ್ರಯತ್ನಿಸಬಹುದು. ಆದರೆ ಭಯವು ನನ್ನ ಕರ್ತವ್ಯವನ್ನು ನಿರ್ಧರಿಸಲು ಸಾಧ್ಯವಿಲ್ಲ. ನನ್ನ ಜೀವನ ವೈಯಕ್ತಿಕ ಸುರಕ್ಷತೆಯ ಲೆಕ್ಕಾಚಾರಕ್ಕಿಂತ ದೇಶದ ಜನರಿಗಾಗಿ ಮೀಸಲಾಗಿದೆ," ಎಂದು ಹೇಳಿದ್ದಾರೆ.&lt;/p&gt;&lt;p data-block-key="b0heg"&gt;"ನಾನು ಡಿಸೆಂಬರ್‌ನಲ್ಲಿ ದೇಶಕ್ಕೆ ಮರಳುವುದಾಗಿ ಈಗಾಗಲೇ ಘೋಷಿಸಿದ್ದೇನೆ. ಸೂಕ್ತ ಸಮಯದಲ್ಲಿ ನಿಖರ ದಿನಾಂಕವನ್ನು ಪ್ರಕಟಿಸುತ್ತೇನೆ," ಎಂದು ಹಸೀನಾ ತಿಳಿಸಿದ್ದಾರೆ. ತಮ್ಮ ಮರಳುವಿಕೆ ಅಧಿಕಾರಕ್ಕಾಗಿ ಅಲ್ಲ, ದೇಶದಲ್ಲಿ ಭದ್ರತೆ, ಅಭಿವೃದ್ಧಿ, ಸಮೃದ್ಧಿ, ಶಾಂತಿ ಹಾಗೂ ಪ್ರಜಾಪ್ರಭುತ್ವವನ್ನು ಪುನಃ ಸ್ಥಾಪಿಸುವುದಕ್ಕಾಗಿ ಎಂದು ಅವರು ಹೇಳಿದ್ದಾರೆ. ಬಾಂಗ್ಲಾದೇಶವು ಮತ್ತೆ ಅಭಿವೃದ್ಧಿಯ ಹಾದಿಗೆ ಮರಳಬೇಕು ಎಂಬುದು ತಮ್ಮ ಆಶಯ ಎಂದು ತಿಳಿಸಿದರು.&lt;/p&gt;&lt;p data-block-key="btvv7"&gt;&lt;a href="/national/kerala-hero-rajesh-life-jacket-flood-rescue-85711.html"&gt;ರೈತನ ಜೀವ ಉಳಿಸಲು ತನ್ನ ಲೈಫ್ ಜಾಕೆಟ್ ನೀಡಿ ತಾನೇ ಪ್ರವಾಹದಲ್ಲಿ ಕೊಚ್ಚಿ ಹೋದ ಈಜು ತರಬೇತುದಾರ&lt;/a&gt;&lt;/p&gt;&lt;p data-block-key="ft5nr"&gt;ಪ್ರಸ್ತುತ ಮಧ್ಯಂತರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಹಸೀನಾ, ದೇಶದ ಪ್ರಜಾಪ್ರಭುತ್ವ ಮತ್ತು ಧರ್ಮನಿರಪೇಕ್ಷ ಮೌಲ್ಯಗಳನ್ನು ದುರ್ಬಲಗೊಳಿಸಲಾಗಿದೆ ಎಂದು ಆರೋಪಿಸಿದರು. "ದೇಶದ ಸ್ವಾತಂತ್ರ್ಯದ ಸ್ಮಾರಕಗಳು ಹಾಗೂ ರಾಷ್ಟ್ರೀಯ ಹೆಮ್ಮೆಯ ಸಂಕೇತಗಳನ್ನು ನಾಶಪಡಿಸಲಾಗಿದೆ" ಎಂದು ಅವರು ಟೀಕಿಸಿದರು.&lt;/p&gt;&lt;p data-block-key="42ku5"&gt;ತಮ್ಮ ರಾಜಕೀಯ ಜೀವನವನ್ನು ನೆನಪಿಸಿಕೊಂಡ ಹಸೀನಾ, ಜೈಲು ಜೀವನ, ಆರು ವರ್ಷಗಳ ವಲಸೆ ಹಾಗೂ ಹಲವು ರಾಜಕೀಯ ಸವಾಲುಗಳನ್ನು ಎದುರಿಸಿದ್ದೇನೆ. ನನ್ನ ವಿರುದ್ಧ 19 ಬಾರಿ ಹತ್ಯೆ ಯತ್ನಗಳು ನಡೆದಿದ್ದರೂ ದೇಶದ ಸೇವೆಯಿಂದ ಹಿಂದೆ ಸರಿದಿಲ್ಲ ಎಂದು ಹೇಳಿದರು.&lt;/p&gt;&lt;h3 data-block-key="61bmq"&gt;&lt;b&gt;ಹಿನ್ನೆಲೆ:&lt;/b&gt;&lt;/h3&gt;&lt;p data-block-key="acc3v"&gt;2024ರ ಆಗಸ್ಟ್‌ 5ರಂದು ವಿದ್ಯಾರ್ಥಿಗಳ ನೇತೃತ್ವದಲ್ಲಿ ನಡೆದ ಭಾರಿ ಪ್ರತಿಭಟನೆಗಳ ಬಳಿಕ ಶೇಖ್ ಹಸೀನಾ ಪ್ರಧಾನಿ ಸ್ಥಾನ ಕಳೆದುಕೊಂಡು ಭಾರತಕ್ಕೆ ಬಂದಿದ್ದರು. ಬಳಿಕ ಮಧ್ಯಂತರ ಸರ್ಕಾರವು ಅವಾಮಿ ಲೀಗ್ ಪಕ್ಷವನ್ನು ನಿಷೇಧಿಸಿತು. 2025ರಲ್ಲಿ ಬಾಂಗ್ಲಾದೇಶದ ಅಂತರರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ 2024ರ ಪ್ರತಿಭಟನೆಗಳ ಹಿಂಸಾಚಾರ ಪ್ರಕರಣದಲ್ಲಿ ಹಸೀನಾ ಅವರನ್ನು ಗೈರುಹಾಜರಿಯಲ್ಲಿ ದೋಷಿ ಎಂದು ತೀರ್ಪು ನೀಡಿ ಮರಣದಂಡನೆ ವಿಧಿಸಿತು. ಆದರೆ ಈ ಆರೋಪಗಳು ರಾಜಕೀಯ ಪ್ರೇರಿತವಾಗಿವೆ ಎಂದು ಹಸೀನಾ ತಳ್ಳಿಹಾಕಿದ್ದಾರೆ. ಅವರನ್ನು ಭಾರತದಿಂದ ಹಸ್ತಾಂತರಿಸುವಂತೆ ಬಾಂಗ್ಲಾದೇಶ ಮನವಿ ಸಲ್ಲಿಸಿದ್ದು, ಆ ಕುರಿತು ಭಾರತ ಸರ್ಕಾರ ಕಾನೂನು ಪ್ರಕ್ರಿಯೆ ಮುಂದುವರಿಸಿದೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಗುಂಡಿನ ಸದ್ದಿಗೆ ಬೆದರಿದ ಬೆಂಗಳೂರು: ಅಪಾರ್ಟ್‌ಮೆಂಟ್‌ನಲ್ಲಿ ಮನಬಂದಂತೆ ಏರ್ ಗನ್‌ನಿಂದ ಶೂಟೌಟ್ ಮಾಡಿದ ಟೆಕ್ಕಿ</title><link>https://vishwavani.news/karnataka/bengaluru-urban/techie-opens-fire-with-air-gun-inside-apartment-in-bengaluru-85792.html</link><guid>https://vishwavani.news/karnataka/bengaluru-urban/techie-opens-fire-with-air-gun-inside-apartment-in-bengaluru-85792.html</guid><pubDate>Thu, 06 Aug 2026 12:55:51 +0000</pubDate><description>&lt;![CDATA[Techie Opens Fire: ಬೆಂಗಳೂರಿನ ಅಪಾರ್ಟ್‌ಮೆಂಟ್ ಒಳಗೆ ಭದ್ರತಾ ಸಿಬ್ಬಂದಿ ಮತ್ತು ವಾಹನಗಳ ಮೇಲೆ ಏರ್ ಗನ್‌ನಿಂದ ಗುಂಡು ಹಾರಿಸಿದ ಆರೋಪದ ಮೇಲೆ 40 ವರ್ಷದ ಐಟಿ ಉದ್ಯೋಗಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆ ವೇಳೆ ಅನುರಾಗ್ ತಿವಾರಿ ಕುಡಿದ ಅಮಲಿನಲ್ಲಿದ್ದ. ನಂತರ ಬಾಲ್ಕನಿಗೆ ಹೋಗಿ ಏರ್ ಗನ್‌ನಿಂದ ಗುಂಡು ಹಾರಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.]]&gt;</description><dc:creator>&lt;![CDATA[Priyanka P]]&gt;</dc:creator><category>&lt;![CDATA[ಬೆಂಗಳೂರು ನಗರ]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕರ್ನಾಟಕ]]&gt;</category><category>&lt;![CDATA[ಕ್ರೈಂ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Techie_Opens_Fire.original.jpg" class="attachment-large size-large wp-post-image" alt="ಗುಂಡಿನ ಸದ್ದಿಗೆ ಬೆದರಿದ ಬೆಂಗಳೂರು: ಅಪಾರ್ಟ್‌ಮೆಂಟ್‌ನಲ್ಲಿ ಮನಬಂದಂತೆ ಏರ್ ಗನ್‌ನಿಂದ ಶೂಟೌಟ್ ಮಾಡಿದ ಟೆಕ್ಕಿ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="qk9u2"&gt;&lt;b&gt;ಬೆಂಗಳೂರು, ಆ. 6:&lt;/b&gt; ಅಪಾರ್ಟ್‌ಮೆಂಟ್ ಒಳಗೆ ಭದ್ರತಾ ಸಿಬ್ಬಂದಿ ಮತ್ತು ವಾಹನಗಳ ಮೇಲೆ ಏರ್‌ ಗನ್‌ನಿಂದ ಗುಂಡು ಹಾರಿಸಿದ ಆರೋಪದ ಮೇಲೆ 40 ವರ್ಷದ ಐಟಿ ಉದ್ಯೋಗಿಯನ್ನು (Techie Opens Fire) ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನ &lt;a href="https://vishwavani.news/viral/a-young-man-quit-his-job-at-an-it-company-and-found-success-in-the-water-business-85576.html"&gt;&lt;b&gt;(Bengaluru)&lt;/b&gt;&lt;/a&gt; ಹೊರವಲಯದ ಆನೇಕಲ್‌ನ ಬಂದಾಪುರ ಬಳಿಯ ಸಿಪಾನಿ ಅಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ನಡೆದಿದೆ. ಆರೋಪಿಯನ್ನು ಉತ್ತರ ಪ್ರದೇಶದ ಲಖನೌ ಮೂಲದ ಅನುರಾಗ್ ತಿವಾರಿ ಎಂದು ಗುರುತಿಸಲಾಗಿದೆ. ಈತ ಎಂಟು ತಿಂಗಳಿನಿಂದ ಬಾಡಿಗೆ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದು, ವೈಟ್‌ಫೀಲ್ಡ್‌ನಲ್ಲಿರುವ ಖಾಸಗಿ ಐಟಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ.&lt;/p&gt;&lt;p data-block-key="7kjhi"&gt;ಘಟನೆ ವೇಳೆ ತಿವಾರಿ ವಿಪರೀತ ಕುಡಿದ ಅಮಲಿನಲ್ಲಿದ್ದ. ತನ್ನ ಅಪಾರ್ಟ್‌ಮೆಂಟ್‌ ಒಳಗೆ ಫೋನ್‌ನಲ್ಲಿ ಮಾತನಾಡುತ್ತಾ ಕೂಗುತ್ತಿದ್ದ. ನಂತರ ಅವನು ಬಾಲ್ಕನಿಗೆ ಹೋಗಿ ಏರ್ ಗನ್‌ನಿಂದ ಗುಂಡು ಹಾರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ನಿಲ್ಲಿಸಿದ್ದ ಕಾರ್‌ಗಳ ಮೇಲೆ ಪೆಲೆಟ್‌ ಗುಂಡು ಹಾರಿದವು. ಗುಂಡಿನ ಸದ್ದು ಕೇಳಿ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ನಂತರ ಅನುರಾಗ್ ತಿವಾರಿ ಅವರ ಮೇಲೆಯೂ ಗುಂಡು ಹಾರಿಸಿದ್ದಾನೆ ಎಂದು ಆರೋಪಿಸಲಾಗಿದೆ.&lt;/p&gt;&lt;p data-block-key="3rp5o"&gt;&lt;a href="https://vishwavani.news/foreign/another-shooting-in-australia-gun-attack-on-the-day-of-mourning-for-the-bondi-beach-attack-leaves-three-dead-67288.html"&gt;&lt;b&gt;ಆಸ್ಟ್ರೇಲಿಯಾದಲ್ಲಿ ಮತ್ತೊಂದು ಶೂಟೌಟ್; ಬೋಂಡಿ ಬೀಚ್ ದಾಳಿಯ ಶೋಕಾಚರಣೆಯಂದೇ ಗುಂಡಿನ ದಾಳಿ&lt;/b&gt;&lt;/a&gt;&lt;/p&gt;&lt;p data-block-key="4b3pb"&gt;ಸೂರ್ಯ ನಗರ ಪೊಲೀಸರು ಅಪಾರ್ಟ್‌ಮೆಂಟ್ ತಲುಪಿ ಆರೋಪಿಯನ್ನು ವಶಕ್ಕೆ ತೆಗೆದುಕೊಳ್ಳುವ ಮೊದಲು ಸುಮಾರು 45 ನಿಮಿಷಗಳ ಕಾಲ ಗುಂಡಿನ ದಾಳಿ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ಬಳಸಲಾದ ಏರ್ ಗನ್ ಮತ್ತು ಪೆಲೆಟ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸೂರ್ಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.&lt;/p&gt;&lt;h3 data-block-key="efmrg"&gt;&lt;b&gt;ಹರಿಯಾಣದಲ್ಲಿ ಸ್ಕಾರ್ಪಿಯೋ ಸವಾರನ ಮೇಲೆ ಗುಂಡಿನ ದಾಳಿ&lt;/b&gt;&lt;/h3&gt;&lt;p data-block-key="csjcm"&gt;ಅಪರಿಚಿತ ದುಷ್ಕರ್ಮಿಗಳು ಸ್ಕಾರ್ಪಿಯೋ ಕಾರಿನ ಮೇಲೆ ಮನಬಂದಂತೆ ಗುಂಡು ಹಾರಿಸಿರುವ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ. ಅಪರಾಧ ಮಾಡಿದ ನಂತರ, ದಾಳಿಕೋರರು ಸ್ಥಳದಿಂದ ಪರಾರಿಯಾಗಿದ್ದಾರೆ. ಗುಂಡಿನ ಚಕಮಕಿ ಆ ಪ್ರದೇಶದಾದ್ಯಂತ ಭೀತಿಯನ್ನುಂಟುಮಾಡಿತು. ಘಟನೆಯಲ್ಲಿ ಸ್ಕಾರ್ಪಿಯೋದಲ್ಲಿದ್ದ ಏಳು ಜನರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ರೋಹ್ಟಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>Bigg Boss Kannada 13: ಬಿಗ್​​ಬಾಸ್ ವೀಕೆಂಡ್ ಎಪಿಸೋಡ್ ಲೈವ್ ನೋಡಬೇಕಾ? ಹಾಗಾದ್ರೆ ಹೀಗೆ ಮಾಡಿ</title><link>https://vishwavani.news/movies/bigg-boss-weekend-episode-live-entry-agnipariksha-challenge-in-lalbagh-botanical-garden-85804.html</link><guid>https://vishwavani.news/movies/bigg-boss-weekend-episode-live-entry-agnipariksha-challenge-in-lalbagh-botanical-garden-85804.html</guid><pubDate>Thu, 06 Aug 2026 12:44:27 +0000</pubDate><description>&lt;![CDATA[Bigg Boss Kannada: ಈ ಬಾರಿ ದೊಡ್ಮನೆಗೆ ಎಂಟ್ರಿ ಕೊಡೋಕೆ ಅಗ್ನಿಪರೀಕ್ಷೆಯ ವೇದಿಕೆ ಸಜ್ಜಾಗಿದೆ.ಇದೇ ಆಗಸ್ಟ್‌ 16ರ ರಾತ್ರಿ 9ಕ್ಕೆ ಬಿಗ್‌ ಮನೆಗೆ ಎಂಟ್ರಿ ಕೊಡೋಕೆ ಅಗ್ನಿಪರೀಕ್ಷೆಯ ವೇದಿಕೆ ಸಜ್ಜಾಗಿದೆ.ಇನ್ನೂ ಆ.17ರಿಂದ ಪ್ರತೀ ಸೋಮವಾರದಿಂದ ಭಾನುವಾರದವರೆಗೆ ರಾತ್ರಿ 9:30ಕ್ಕೆ ಪ್ರಸಾರವಾಗಲಿದೆ.ವಿಶೇಷವೆಂದರೆ ಈ ಬಾರಿ ಬಿಗ್​​ಬಾಸ್ ವೀಕೆಂಡ್ ಎಪಿಸೋಡ್ ಅನ್ನು ಲೈವ್ ನೋಡುವ ಅವಕಾಶವನ್ನು ಸಹ ಗೆಲ್ಲಬಹುದಾಗಿದೆ.]]&gt;</description><dc:creator>&lt;![CDATA[Yashaswi Devadiga]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಮನರಂಜನೆ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Bigg_boss_1_3z4MQEB.original.jpg" class="attachment-large size-large wp-post-image" alt="Bigg Boss Kannada 13: ಬಿಗ್​​ಬಾಸ್ ವೀಕೆಂಡ್ ಎಪಿಸೋಡ್ ಲೈವ್ ನೋಡಬೇಕಾ? ಹಾಗಾದ್ರೆ ಹೀಗೆ ಮಾಡಿ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="qkv0n"&gt;&lt;a href="/movies/kiccha-sudeep-bigg-boss-kannada-season-13-show-likely-to-start-from-september-6th-85615.html"&gt;ಬಿಗ್‌ ಬಾಸ್‌ ಸೀಸನ್‌ 13&lt;/a&gt;ರರಿಂದ (Bigg Boss kannada 13) ಕ್ಷಣ ಕ್ಷಣಕ್ಕೂ ಅಪ್‌ಡೇಟ್‌ ಬರುತ್ತಲೇ ಇದೆ. ಇದೇ ಆಗಸ್ಟ್‌ 16ರ ರಾತ್ರಿ 9ಕ್ಕೆ ಬಿಗ್‌ ಮನೆಗೆ ಎಂಟ್ರಿ ಕೊಡೋಕೆ ಅಗ್ನಿಪರೀಕ್ಷೆಯ (Agni parikshe) ವೇದಿಕೆ ಸಜ್ಜಾಗಿದೆ. ವಿಶೇಷವೆಂದರೆ ಈ ಬಾರಿ ಬಿಗ್​​ಬಾಸ್ ವೀಕೆಂಡ್ ಎಪಿಸೋಡ್ ಅನ್ನು ಲೈವ್ ನೋಡುವ ಅವಕಾಶವನ್ನು ಸಹ ಗೆಲ್ಲಬಹುದಾಗಿದೆ.&lt;/p&gt;&lt;h3 data-block-key="9qdv0"&gt;&lt;b&gt;ಲಾಲ್​​ಬಾಗ್ ಫ್ಲವರ್ ಶೋ&lt;/b&gt;&lt;/h3&gt;&lt;p data-block-key="6rtn2"&gt;ಲಾಲ್​ಬಾಗ್ ಫ್ಲವರ್ ಶೋನಲ್ಲಿ ಭಾಗವಹಿಸಬೇಕಿದೆ. ಲಾಲ್​​ಬಾಗ್ ಫ್ಲವರ್ ಶೋ ಇದೀಗ ಆರಂಭವಾಗಿದೆ. ಈ ಲಾಲ್​​ಬಾಗ್ ಫ್ಲವರ್ ಶೋನಲ್ಲಿ ‘ಬಿಗ್​​ಬಾಸ್ ಅಗ್ನಿಪರೀಕ್ಷೆ ಎಕ್ಸ್ಪೀರಿಯನ್ಸ್ ಜೋನ್’ ಒಂದನ್ನು ಬಿಗ್​​ಬಾಸ್ ತಂಡ ಮಾಡಿದೆ.&lt;/p&gt;&lt;p data-block-key="e8k06"&gt;&lt;b&gt;ಇದನ್ನೂ ಓದಿ:&lt;/b&gt; &lt;a href="/movies/rashmika-mandanna-recovery-routine-includes-sleeping-eating-85755.html"&gt;Rashmika Mandanna: ಮದುವೆ ಫೋಟೋ ನೋಡಲು ಸಿಕ್ಕಿತು ಸಮಯ! ರಶ್ಮಿಕಾ ಹೊಸ ಪೋಸ್ಟ್‌&lt;/a&gt;&lt;/p&gt;&lt;p data-block-key="beqmg"&gt;ಬಿಗ್​​ಬಾಸ್ ಎಕ್ಸ್​ಪೀರಿಯನ್ಸ್ ಜೋನ್ಗೆ ಹೋಗಿ ಅಲ್ಲಿ ಸೆಲ್ಫೀ ಕ್ಲಿಕ್ಕಿಸಿಕೊಂಡು ಅದನ್ನು ಇನ್​​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಬೇಕು. ಹೀಗೆ ಹಂಚಿಕೊಂಡ ಫೋಟೊವನ್ನು ಕಲರ್ಸ್ ಕನ್ನಡದ ಜೊತೆಗೆ ಟ್ಯಾಗ್ ಮಾಡಬೇಕು.ಚಿತ್ರಕ್ಕೆ #BBKAGNIPARIKSHE ಹ್ಯಾಷ್ ಟ್ಯಾಗ್ ಹಾಕಬೇಕು. ಕಲರ್ಸ್ ವಾಹಿನಿ ಅಥವಾ ಬಿಗ್​​ಬಾಸ್ ಆಯೋಜಕರು ಆಯ್ದ ಕೆಲವರನ್ನು ಬಿಗ್​​ಬಾಸ್ ಕನ್ನಡ ವೀಕೆಂಡ್ ಎಪಿಸೋಡ್ ಅನ್ನು ಲೈವ್ ಆಗಿ ನೋಡಲು ಆಹ್ವಾನವನ್ನು ಕಳಿಹಿಸುತ್ತಾರೆ. ಲಾಲ್​​ಬಾಗ್ ಫ್ಲವರ್ ಶೋ ಆಗಸ್ಟ್ 06 ಆರಂಭವಾಗಿದ್ದು, ಆಗಸ್ಟ್ 17ರ ವರೆಗೆ ನಡೆಯಲಿದೆ.&lt;/p&gt;&lt;p data-block-key="4d6o7"&gt;&lt;/p&gt;&lt;img alt="Bigg Boss weekend episode live entry Agnipariksha challenge in lalbagh botanical garden" class="richtext-image left" height="281" src="https://cdn.vishwavani.news/media/images/Bigg_boss.width-500.jpg" width="500"&gt;&lt;p data-block-key="4mlkm"&gt;&lt;/p&gt;&lt;h3 data-block-key="5dkbk"&gt;&lt;b&gt;ಆಗಸ್ಟ್‌ 16ರ ರಾತ್ರಿ 9ಕ್ಕೆ ಬಿಗ್‌ ಮನೆಗೆ ಎಂಟ್ರಿ&lt;/b&gt;&lt;/h3&gt;&lt;p data-block-key="1k0ce"&gt;ಈ ಬಾರಿ ದೊಡ್ಮನೆಗೆ ಎಂಟ್ರಿ ಕೊಡೋಕೆ ಅಗ್ನಿಪರೀಕ್ಷೆಯ ವೇದಿಕೆ ಸಜ್ಜಾಗಿದೆ.ಇದೇ ಆಗಸ್ಟ್‌ 16ರ ರಾತ್ರಿ 9ಕ್ಕೆ ಬಿಗ್‌ ಮನೆಗೆ ಎಂಟ್ರಿ ಕೊಡೋಕೆ ಅಗ್ನಿಪರೀಕ್ಷೆಯ ವೇದಿಕೆ ಸಜ್ಜಾಗಿದೆ.ಇನ್ನೂ ಆ.17ರಿಂದ ಪ್ರತೀ ಸೋಮವಾರದಿಂದ ಭಾನುವಾರದವರೆಗೆ ರಾತ್ರಿ 9:30ಕ್ಕೆ ಪ್ರಸಾರವಾಗಲಿದೆ. ರಿಲೀಸ್‌ ಆದ ಪ್ರೋಮೋದಲ್ಲಿ `Thank You Karnataka’ ಎಂದು ಶುರುವಾಗಿ ಬಿಗ್‌ ಬಾಸ್‌ ಮನೆಗೆ ಎಂಟ್ರಿ ಕೊಡೋ ನಿಮ್ಮ ಕನಸುಗಳು ವಿಡಿಯೋ ಮೂಲಕ ನಮ್ಮನ್ನ ತಲುಪಿವೆ.&lt;/p&gt;&lt;p data-block-key="dtrsq"&gt;&lt;/p&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="instagram-media" data-instgrm-captioned data-instgrm-permalink="https://www.instagram.com/reel/Dbscoo3RaLX/?utm_source=ig_embed&amp;amp;utm_campaign=loading" data-instgrm-version="14" style=" background:#FFF; border:0; border-radius:3px; box-shadow:0 0 1px 0 rgba(0,0,0,0.5),0 1px 10px 0 rgba(0,0,0,0.15); margin: 1px; max-width:540px; min-width:326px; padding:0; width:99.375%; width:-webkit-calc(100% - 2px); width:calc(100% - 2px);"&gt;&lt;div style="padding:16px;"&gt; &lt;a href="https://www.instagram.com/reel/Dbscoo3RaLX/?utm_source=ig_embed&amp;amp;utm_campaign=loading" style=" background:#FFFFFF; line-height:0; padding:0 0; text-align:center; text-decoration:none; width:100%;" target="_blank"&gt; &lt;div style=" display: flex; flex-direction: row; align-items: center;"&gt; &lt;div style="background-color: #F4F4F4; border-radius: 50%; flex-grow: 0; height: 40px; margin-right: 14px; width: 40px;"&gt;&lt;/div&gt; &lt;div style="display: flex; flex-direction: column; flex-grow: 1; justify-content: center;"&gt; &lt;div style=" background-color: #F4F4F4; border-radius: 4px; flex-grow: 0; height: 14px; margin-bottom: 6px; width: 100px;"&gt;&lt;/div&gt; &lt;div style=" background-color: #F4F4F4; border-radius: 4px; flex-grow: 0; height: 14px; width: 60px;"&gt;&lt;/div&gt;&lt;/div&gt;&lt;/div&gt;&lt;div style="padding: 19% 0;"&gt;&lt;/div&gt; &lt;div style="display:block; height:50px; margin:0 auto 12px; width:50px;"&gt;&lt;svg width="50px" height="50px" viewBox="0 0 60 60" version="1.1" xmlns="https://www.w3.org/2000/svg" xmlns:xlink="https://www.w3.org/1999/xlink"&gt;&lt;g stroke="none" stroke-width="1" fill="none" fill-rule="evenodd"&gt;&lt;g transform="translate(-511.000000, -20.000000)" fill="#000000"&gt;&lt;g&gt;&lt;path d="M556.869,30.41 C554.814,30.41 553.148,32.076 553.148,34.131 C553.148,36.186 554.814,37.852 556.869,37.852 C558.924,37.852 560.59,36.186 560.59,34.131 C560.59,32.076 558.924,30.41 556.869,30.41 M541,60.657 C535.114,60.657 530.342,55.887 530.342,50 C530.342,44.114 535.114,39.342 541,39.342 C546.887,39.342 551.658,44.114 551.658,50 C551.658,55.887 546.887,60.657 541,60.657 M541,33.886 C532.1,33.886 524.886,41.1 524.886,50 C524.886,58.899 532.1,66.113 541,66.113 C549.9,66.113 557.115,58.899 557.115,50 C557.115,41.1 549.9,33.886 541,33.886 M565.378,62.101 C565.244,65.022 564.756,66.606 564.346,67.663 C563.803,69.06 563.154,70.057 562.106,71.106 C561.058,72.155 560.06,72.803 558.662,73.347 C557.607,73.757 556.021,74.244 553.102,74.378 C549.944,74.521 548.997,74.552 541,74.552 C533.003,74.552 532.056,74.521 528.898,74.378 C525.979,74.244 524.393,73.757 523.338,73.347 C521.94,72.803 520.942,72.155 519.894,71.106 C518.846,70.057 518.197,69.06 517.654,67.663 C517.244,66.606 516.755,65.022 516.623,62.101 C516.479,58.943 516.448,57.996 516.448,50 C516.448,42.003 516.479,41.056 516.623,37.899 C516.755,34.978 517.244,33.391 517.654,32.338 C518.197,30.938 518.846,29.942 519.894,28.894 C520.942,27.846 521.94,27.196 523.338,26.654 C524.393,26.244 525.979,25.756 528.898,25.623 C532.057,25.479 533.004,25.448 541,25.448 C548.997,25.448 549.943,25.479 553.102,25.623 C556.021,25.756 557.607,26.244 558.662,26.654 C560.06,27.196 561.058,27.846 562.106,28.894 C563.154,29.942 563.803,30.938 564.346,32.338 C564.756,33.391 565.244,34.978 565.378,37.899 C565.522,41.056 565.552,42.003 565.552,50 C565.552,57.996 565.522,58.943 565.378,62.101 M570.82,37.631 C570.674,34.438 570.167,32.258 569.425,30.349 C568.659,28.377 567.633,26.702 565.965,25.035 C564.297,23.368 562.623,22.342 560.652,21.575 C558.743,20.834 556.562,20.326 553.369,20.18 C550.169,20.033 549.148,20 541,20 C532.853,20 531.831,20.033 528.631,20.18 C525.438,20.326 523.257,20.834 521.349,21.575 C519.376,22.342 517.703,23.368 516.035,25.035 C514.368,26.702 513.342,28.377 512.574,30.349 C511.834,32.258 511.326,34.438 511.181,37.631 C511.035,40.831 511,41.851 511,50 C511,58.147 511.035,59.17 511.181,62.369 C511.326,65.562 511.834,67.743 512.574,69.651 C513.342,71.625 514.368,73.296 516.035,74.965 C517.703,76.634 519.376,77.658 521.349,78.425 C523.257,79.167 525.438,79.673 528.631,79.82 C531.831,79.965 532.853,80.001 541,80.001 C549.148,80.001 550.169,79.965 553.369,79.82 C556.562,79.673 558.743,79.167 560.652,78.425 C562.623,77.658 564.297,76.634 565.965,74.965 C567.633,73.296 568.659,71.625 569.425,69.651 C570.167,67.743 570.674,65.562 570.82,62.369 C570.966,59.17 571,58.147 571,50 C571,41.851 570.966,40.831 570.82,37.631"&gt;&lt;/path&gt;&lt;/g&gt;&lt;/g&gt;&lt;/g&gt;&lt;/svg&gt;&lt;/div&gt;&lt;div style="padding-top: 8px;"&gt; &lt;div style=" color:#3897f0; font-family:Arial,sans-serif; font-size:14px; font-style:normal; font-weight:550; line-height:18px;"&gt;View this post on Instagram&lt;/div&gt;&lt;/div&gt;&lt;div style="padding: 12.5% 0;"&gt;&lt;/div&gt; &lt;div style="display: flex; flex-direction: row; margin-bottom: 14px; align-items: center;"&gt;&lt;div&gt; &lt;div style="background-color: #F4F4F4; border-radius: 50%; height: 12.5px; width: 12.5px; transform: translateX(0px) translateY(7px);"&gt;&lt;/div&gt; &lt;div style="background-color: #F4F4F4; height: 12.5px; transform: rotate(-45deg) translateX(3px) translateY(1px); width: 12.5px; flex-grow: 0; margin-right: 14px; margin-left: 2px;"&gt;&lt;/div&gt; &lt;div style="background-color: #F4F4F4; border-radius: 50%; height: 12.5px; width: 12.5px; transform: translateX(9px) translateY(-18px);"&gt;&lt;/div&gt;&lt;/div&gt;&lt;div style="margin-left: 8px;"&gt; &lt;div style=" background-color: #F4F4F4; border-radius: 50%; flex-grow: 0; height: 20px; width: 20px;"&gt;&lt;/div&gt; &lt;div style=" width: 0; height: 0; border-top: 2px solid transparent; border-left: 6px solid #f4f4f4; border-bottom: 2px solid transparent; transform: translateX(16px) translateY(-4px) rotate(30deg)"&gt;&lt;/div&gt;&lt;/div&gt;&lt;div style="margin-left: auto;"&gt; &lt;div style=" width: 0px; border-top: 8px solid #F4F4F4; border-right: 8px solid transparent; transform: translateY(16px);"&gt;&lt;/div&gt; &lt;div style=" background-color: #F4F4F4; flex-grow: 0; height: 12px; width: 16px; transform: translateY(-4px);"&gt;&lt;/div&gt; &lt;div style=" width: 0; height: 0; border-top: 8px solid #F4F4F4; border-left: 8px solid transparent; transform: translateY(-4px) translateX(8px);"&gt;&lt;/div&gt;&lt;/div&gt;&lt;/div&gt; &lt;div style="display: flex; flex-direction: column; flex-grow: 1; justify-content: center; margin-bottom: 24px;"&gt; &lt;div style=" background-color: #F4F4F4; border-radius: 4px; flex-grow: 0; height: 14px; margin-bottom: 6px; width: 224px;"&gt;&lt;/div&gt; &lt;div style=" background-color: #F4F4F4; border-radius: 4px; flex-grow: 0; height: 14px; width: 144px;"&gt;&lt;/div&gt;&lt;/div&gt;&lt;/a&gt;&lt;p style=" color:#c9c8cd; font-family:Arial,sans-serif; font-size:14px; line-height:17px; margin-bottom:0; margin-top:8px; overflow:hidden; padding:8px 0 7px; text-align:center; text-overflow:ellipsis; white-space:nowrap;"&gt;&lt;a href="https://www.instagram.com/reel/Dbscoo3RaLX/?utm_source=ig_embed&amp;amp;utm_campaign=loading" style=" color:#c9c8cd; font-family:Arial,sans-serif; font-size:14px; font-style:normal; font-weight:normal; line-height:17px; text-decoration:none;" target="_blank"&gt;A post shared by Rakshitha RV (@just.rakshitha)&lt;/a&gt;&lt;/p&gt;&lt;/div&gt;&lt;/blockquote&gt;
&lt;script async src="//www.instagram.com/embed.js"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="c8754"&gt;&lt;/p&gt;&lt;p data-block-key="9gcla"&gt;ಈಗ ಆ ಕನಸುಗಳಿಗೆ ವೇದಿಕೆ ಸಜ್ಜಾಗ್ತಿದೆ. ಈ ಅಂತಿಮ ಪರೀಕ್ಷೆಯನ್ನು ಎದುರಿಸಿ ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಡೋರು ಯಾರು?.. ಇದೆಲ್ಲದಕ್ಕೆ ಉತ್ತರ ಆಗಸ್ಟ್‌ 16ರ ರಾತ್ರಿ 9ಕ್ಕೆ ಸಿಗಲಿದೆ ಎಂದು ತಿಳಿಸಿದೆ.&lt;/p&gt;&lt;p data-block-key="7in"&gt;ಅಸಂಖ್ಯ ಜನರು ತಮ್ಮ ವಿಡಿಯೋ ಕಳುಹಿಸಿದ್ದಾರೆ. ಇವರಲ್ಲಿ ಆಯ್ಕೆಯಾದವರು ಒಂದಿಷ್ಟು ಮಂದಿ. ಅವರು ಯಾರು, ಅಗ್ನಿ ಪರೀಕ್ಷೆಯಲ್ಲಿ ಗೆದ್ದವರು ಯಾರು ಎನ್ನೋದನ್ನು ಆಗಸ್ಟ್​ 16ರ ರಾತ್ರಿ 9 ಗಂಟೆಗೆ ಹೇಳುವುದಾಗಿ ಈ ಪ್ರೊಮೋದಲ್ಲಿ ತಿಳಿಸಲಾಗಿದೆ.&lt;/p&gt;&lt;p data-block-key="36vcb"&gt;&lt;b&gt;ಇದನ್ನೂ ಓದಿ:&lt;/b&gt; &lt;a href="/movies/entry-to-the-bigg-boss-kannada-13-house-announce-85742.html"&gt;Bigg Boss Kannada 13: ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡೋಕೆ ಮುಹೂರ್ತ ಫಿಕ್ಸ್‌! ಇಲ್ಲಿದೆ ಹೊಸ ಪ್ರೋಮೋ&lt;/a&gt;&lt;/p&gt;&lt;p data-block-key="6huke"&gt;ಪ್ರತಿ ಸಲದಂತೆ ಈ ಬಾರಿಯೂ ಬಿಗ್​ಬಾಸ್​ಗೆ ಹೋಗುವ ಸ್ಪರ್ಧಿಗಳ ಬಗ್ಗೆ ಗೋಪ್ಯತೆ ಕಾಪಾಡಲಾಗಿದೆ. ಇದಾಗಲೇ ಬಹುತೇಕ ಸ್ಪರ್ಧಿಗಳಿಗೆ ಆಹ್ವಾನ ಹೋಗಿದ್ದು, ತಯಾರಿ ಕೂಡ ನಡೆಸುತ್ತಿದ್ದಾರೆ. ಆದರೆ ಅವರಿಗೆ ಈ ಬಗ್ಗೆ ಎಲ್ಲಿಯೂ ಹೇಳದಂತೆ ಷರತ್ತು ವಿಧಿಸಿರಲಾಗುತ್ತದೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಉತ್ತರ ಪ್ರದೇಶದಲ್ಲಿ ಭಾರಿ ಮಳೆ: ಮನೆ, ಗೋಡೆ ಕುಸಿದು 9 ಮಂದಿ ದುರ್ಮರಣ</title><link>https://vishwavani.news/national/uttar-pradesh-heavy-rains-house-wall-collapse-9-dead-85796.html</link><guid>https://vishwavani.news/national/uttar-pradesh-heavy-rains-house-wall-collapse-9-dead-85796.html</guid><pubDate>Thu, 06 Aug 2026 12:43:10 +0000</pubDate><description>&lt;![CDATA[Heavy Rain: ಉತ್ತರ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯ ಪರಿಣಾಮ ಪ್ರತಾಪಗಢ, ಬರಾಬಂಕಿ ಹಾಗೂ ಸಹಾರನ್‌ಪುರ ಜಿಲ್ಲೆಗಳಲ್ಲಿ ಮನೆ ಮತ್ತು ಗೋಡೆ ಕುಸಿದು ಒಂದೇ ಕುಟುಂಬದ ಆರು ಮಂದಿ ಸೇರಿ ಒಟ್ಟು 9 ಮಂದಿ ಮೃತಪಟ್ಟಿದ್ದಾರೆ. ಹಲವು ಮಂದಿ ಗಾಯಗೊಂಡಿದ್ದು, ಘಟನೆಗಳ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.]]&gt;</description><dc:creator>&lt;![CDATA[Sushmitha Jain]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ದೇಶ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/House_collapses.original.jpg" class="attachment-large size-large wp-post-image" alt="ಉತ್ತರ ಪ್ರದೇಶದಲ್ಲಿ ಭಾರಿ ಮಳೆ: ಮನೆ, ಗೋಡೆ ಕುಸಿದು 9 ಮಂದಿ ದುರ್ಮರಣ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="ex8wy"&gt;&lt;b&gt;ಲಖನೌ, ಆ. 6:&lt;/b&gt; ಉತ್ತರ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯ &lt;a href="/weather/karnataka-weather-heavy-rain-forecast-in-coastal-districts-moderate-rain-in-other-parts-till-june-28-81818.html"&gt;&lt;b&gt;(Heavy Rain)&lt;/b&gt;&lt;/a&gt; ಪರಿಣಾಮ ವಿವಿಧ ಜಿಲ್ಲೆಗಳಲ್ಲಿ ಮನೆ ಹಾಗೂ ಗೋಡೆ ಕುಸಿದು ಒಂದೇ ಕುಟುಂಬದ ಆರು ಮಂದಿ ಸೇರಿದಂತೆ ಒಟ್ಟು 9 ಮಂದಿ ಮೃತಪಟ್ಟಿರುವ ದಾರುಣ ಘಟನೆ  ಸಂಭವಿಸಿದೆ. ಹಲವರು ಗಾಯಗೊಂಡಿದ್ದು, ರಾಜ್ಯದ ಹಲವು ಭಾಗಗಳಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ಮುಂದುವರಿದಿದೆ.&lt;/p&gt;&lt;p data-block-key="1somu"&gt;ಅತ್ಯಂತ ಭೀಕರ ಘಟನೆ ಪ್ರತಾಪಗಢ ಜಿಲ್ಲೆಯ ಮಹುಲಿ ಬಜಾರ್‌ನಲ್ಲಿ ಗುರುವಾರ ಮುಂಜಾನೆ 2 ಗಂಟೆ ಸುಮಾರಿಗೆ ನಡೆದಿದೆ. ಸುಮಾರು 100 ವರ್ಷಗಳಷ್ಟು ಹಳೆಯ ಮನೆ ಏಕಾಏಕಿ ಕುಸಿದು ಬಿದ್ದ ಪರಿಣಾಮ, ಒಂದೇ ಕೋಣೆಯಲ್ಲಿ ಮಲಗಿದ್ದ ಕುಟುಂಬದ ಏಳು ಮಂದಿ ಅವಶೇಷಗಳಡಿ ಸಿಲುಕಿದರು. ಘಟನೆಯಲ್ಲಿ ಪ್ರಮೋದ್ ಶ್ರೀವಾಸ್ತವ, ಅವರ ಪತ್ನಿ ರೀಟಾ, ಪುತ್ರ ನಿತಿನ್, ಸೊಸೆ ಮಾಧುರಿ ಹಾಗೂ ಇಬ್ಬರು ಪುಟ್ಟ ಮೊಮ್ಮಕ್ಕಳು ಮೃತಪಟ್ಟಿದ್ದಾರೆ. ಕುಟುಂಬದ ಹಿರಿಯ ಪುತ್ರ ಅಮನ್ ಅವಶೇಷಗಳಿಂದ ಹೊರಬಂದು ನೆರವಿಗಾಗಿ ಕೂಗಿದ ಬಳಿಕ ಸ್ಥಳೀಯರು ಹಾಗೂ ಪೊಲೀಸರು ರಕ್ಷಣಾ ಕಾರ್ಯಾಚರಣೆ ನಡೆಸಿದರು. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದರೂ ಆರು ಮಂದಿಯನ್ನು ವೈದ್ಯರು ಮೃತರೆಂದು ಘೋಷಿಸಿದರು.&lt;/p&gt;&lt;h3 data-block-key="al910"&gt;&lt;b&gt;ವೈರಲ್‌ ವಿಡಿಯೊ ಇಲ್ಲಿದೆ:&lt;/b&gt;&lt;/h3&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="twitter-tweet"&gt;&lt;p lang="en" dir="ltr"&gt; TRAGIC INCIDENT | Pratapgarh, Uttar Pradesh: Six members of a family lost their lives after the roof of their dilapidated house collapsed during heavy rainfall. One person was seriously injured and is currently undergoing treatment. &lt;a href="https://t.co/7ihpfOeKRV"&gt;pic.twitter.com/7ihpfOeKRV&lt;/a&gt;&lt;/p&gt;&amp;mdash; indiainlast24hr (@indiain24hr) &lt;a href="https://x.com/indiain24hr/status/2085325056067195251?ref_src=twsrc%5Etfw"&gt;August 6, 2026&lt;/a&gt;&lt;/blockquote&gt; &lt;script async src="https://platform.x.com/widgets.js" charset="utf-8"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="3q1fi"&gt;ಬರಾಬಂಕಿ ಜಿಲ್ಲೆಯ ಅಲಿಯಾಬಾದ್ ಗ್ರಾಮದಲ್ಲಿ, ನಿರಂತರ ಮಳೆಯಿಂದ ಶಿಥಿಲಗೊಂಡಿದ್ದ ಹಳೆಯ ಇಟ್ಟಿಗೆ ಗೋಡೆ ಆಟವಾಡುತ್ತಿದ್ದ ಐವರು ಮಕ್ಕಳ ಮೇಲೆ ಕುಸಿದು ಬಿದ್ದಿದೆ. ಈ ದುರ್ಘಟನೆಯಲ್ಲಿ ಸಹೋದರ-ಸಹೋದರಿ ಹುಜೈಫಾ ಮತ್ತು ಹಜ್ರಾ ಬಾನು ಮೃತಪಟ್ಟಿದ್ದು, ಹಸನ್, ಹಾನಿಯಾ ಹಾಗೂ ಅದ್ನಾನ್ ಎಂಬ ಮೂವರು ಮಕ್ಕಳು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗೋಡೆಯು ಬಹಳ ಹಳೆಯದಾಗಿದ್ದು, ನಿರಂತರ ಮಳೆಯಿಂದ ಇನ್ನಷ್ಟು ದುರ್ಬಲಗೊಂಡಿತ್ತು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.&lt;/p&gt;&lt;p data-block-key="csg5d"&gt;&lt;a href="/national/flood-situation-worsens-in-assam-death-toll-rises-to-95-over-16-lakh-people-displaced-85759.html"&gt;&lt;b&gt;ಅಸ್ಸಾಂನಲ್ಲಿ ಬಿಗಡಾಯಿಸಿದ ಪ್ರವಾಹ ಪರಿಸ್ಥಿತಿ, ಸಾವಿನ ಸಂಖ್ಯೆ 95ಕ್ಕೆ ಏರಿಕೆ&lt;/b&gt;&lt;/a&gt;&lt;/p&gt;&lt;p data-block-key="eu3e6"&gt;ಇನ್ನೊಂದು ಘಟನೆ ಸಹಾರನ್‌ಪುರ ಜಿಲ್ಲೆಯ ಘಾಘ್ರೆಕಿ ಗ್ರಾಮದಲ್ಲಿ ನಡೆದಿದ್ದು, ಬುಧವಾರ ತಡರಾತ್ರಿ ಭಾರಿ ಮಳೆಯ ನಡುವೆ ಮಣ್ಣಿನ ಮನೆ ಕುಸಿದ ಪರಿಣಾಮ 35 ವರ್ಷದ ಮಹಿಳೆ ಅವಶೇಷಗಳಡಿ ಸಿಲುಕಿ ಮೃತಪಟ್ಟಿದ್ದಾರೆ.&lt;/p&gt;&lt;p data-block-key="e28k7"&gt;ಮೂರು ಪ್ರತ್ಯೇಕ ಘಟನೆಗಳಲ್ಲಿ ಒಟ್ಟು 9 ಮಂದಿ ಮೃತಪಟ್ಟಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಘಟನೆಗಳ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದು, ನಿರ್ಲಕ್ಷ್ಯ ಕಂಡುಬಂದರೆ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಇದೇ ವೇಳೆ, ನಿರಂತರ ಮಳೆಯ ಹಿನ್ನೆಲೆಯಲ್ಲಿ ಹಳೆಯ ಹಾಗೂ ಶಿಥಿಲಗೊಂಡ ಕಟ್ಟಡಗಳಿಂದ ದೂರವಿರಲು ರಾಜ್ಯ ಸರ್ಕಾರ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಅಸ್ಸಾಂನಲ್ಲಿ ಬಿಗಡಾಯಿಸಿದ ಪ್ರವಾಹ ಪರಿಸ್ಥಿತಿ, ಸಾವಿನ ಸಂಖ್ಯೆ 95ಕ್ಕೆ ಏರಿಕೆ: ನಿರಾಶ್ರಿತರಾದ 1.6 ಲಕ್ಷಕ್ಕೂ ಹೆಚ್ಚು ಮಂದಿ</title><link>https://vishwavani.news/national/flood-situation-worsens-in-assam-death-toll-rises-to-95-over-16-lakh-people-displaced-85759.html</link><guid>https://vishwavani.news/national/flood-situation-worsens-in-assam-death-toll-rises-to-95-over-16-lakh-people-displaced-85759.html</guid><pubDate>Thu, 06 Aug 2026 12:33:33 +0000</pubDate><description>&lt;![CDATA[Assam Flood: ಅಸ್ಸಾಂ ರಾಜ್ಯವು ಭೀಕರ ಪ್ರವಾಹಕ್ಕೆ ಅಕ್ಷರಶಃ ತತ್ತರಿಸಿದೆ. ಈಶಾನ್ಯ ರಾಜ್ಯದ 14 ಜಿಲ್ಲೆಗಳು ಮತ್ತು 1.6 ಲಕ್ಷಕ್ಕೂ ಹೆಚ್ಚು ಜನರು ಪ್ರವಾಹದಿಂದ ನಿರಾಶ್ರಿತರಾಗಿದ್ದಾರೆ. ಸಾವಿನ ಸಂಖ್ಯೆಯು 95ಕ್ಕೇರಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಪ್ರವಾಹದ ನೀರು ಒಡ್ಡುಗಳು, ರಸ್ತೆಗಳು, ಸೇತುವೆಗಳು ಮತ್ತು ಇತರ ಮೂಲಸೌಕರ್ಯಗಳನ್ನು ಹಾನಿಗೊಳಿಸಿದೆ.]]&gt;</description><dc:creator>&lt;![CDATA[Priyanka P]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ದೇಶ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Assam_Flood_iKabmAM.original.jpg" class="attachment-large size-large wp-post-image" alt="ಅಸ್ಸಾಂನಲ್ಲಿ ಬಿಗಡಾಯಿಸಿದ ಪ್ರವಾಹ ಪರಿಸ್ಥಿತಿ, ಸಾವಿನ ಸಂಖ್ಯೆ 95ಕ್ಕೆ ಏರಿಕೆ: ನಿರಾಶ್ರಿತರಾದ 1.6 ಲಕ್ಷಕ್ಕೂ ಹೆಚ್ಚು ಮಂದಿ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="90l9o"&gt;&lt;b&gt;ದಿಸ್ಪುರ್, ಆ.7:&lt;/b&gt; ಅಸ್ಸಾಂ ರಾಜ್ಯವು ಭೀಕರ ಪ್ರವಾಹಕ್ಕೆ &lt;a href="https://vishwavani.news/national/assam-flood-death-toll-climbs-to-78-fresh-rain-warning-as-3-lakh-remain-affected-85169.html"&gt;(Assam Flood)&lt;/a&gt; ಅಕ್ಷರಶಃ ತತ್ತರಿಸಿದೆ. ಈಶಾನ್ಯ ರಾಜ್ಯದ 14 ಜಿಲ್ಲೆಗಳು ಮತ್ತು 1.6 ಲಕ್ಷಕ್ಕೂ ಹೆಚ್ಚು ಜನರು ಪ್ರವಾಹದಿಂದ &lt;b&gt;(flood)&lt;/b&gt; ನಿರಾಶ್ರಿತರಾಗಿದ್ದಾರೆ. ಸಾವಿನ ಸಂಖ್ಯೆಯು 95ಕ್ಕೇರಿದೆ. ಇತ್ತೀಚಿನ ವರದಿ ಪ್ರಕಾರ, ಶಿವಸಾಗರ್ ಮತ್ತು ಬಿಸ್ವಾನಾಥ್ ಜಿಲ್ಲೆಗಳಲ್ಲಿ ತಲಾ ಇಬ್ಬರು ಮತ್ತು ಗೋಲಾಘಾಟ್ ಮತ್ತು ಮೋರಿಗಾಂವ್‌ನಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಶಿವಸಾಗರ್ ಅತಿ ಹೆಚ್ಚು ಹಾನಿಗೊಳಗಾದ ಜಿಲ್ಲೆಯಾಗಿದ್ದು, ಇದುವರೆಗೆ 50 ಸಾವುಗಳು ಸಂಭವಿಸಿವೆ. ನೆರೆಯ ಚಾರೈಡಿಯೊದಲ್ಲಿ 21 ಸಾವುಗಳು ಸಂಭವಿಸಿವೆ.&lt;/p&gt;&lt;p data-block-key="1a6ot"&gt;ಜೋರ್ಹತ್‌ನಲ್ಲಿ ಒಂಬತ್ತು ಮಂದಿ ಸಾವನ್ನಪ್ಪಿದ್ದರೆ, ಗೋಲಾಘಾಟ್‌ನಲ್ಲಿ ಐದು, ಧೇಮಾಜಿಯಲ್ಲಿ ಮೂರು, ಕರ್ಬಿ ಆಂಗ್ಲಾಂಗ್ ಮತ್ತು ಬಿಸ್ವಾನಾಥ್‌ನಲ್ಲಿ ತಲಾ ಎರಡು ಮತ್ತು ಸೋನಿತ್‌ಪುರ, ಕಾಮರೂಪ ಮೆಟ್ರೋಪಾಲಿಟನ್ ಮತ್ತು ಮೋರಿಗಾಂವ್‌ನಲ್ಲಿ ತಲಾ ಒಂದು ಸಾವು ಸಂಭವಿಸಿದೆ. ಬಿಸ್ವನಾಥ್, ಚರೈಡಿಯೊ, ದರ್ರಾಂಗ್, ಧೇಮಾಜಿ, ಗೋಲಾಘಾಟ್, ಜೋರ್ಹತ್, ಕಮ್ರೂಪ್ ಮೆಟ್ರೋಪಾಲಿಟನ್, ಕರ್ಬಿ ಆಂಗ್ಲಾಂಗ್, ಲಖಿಂಪುರ, ನಾಗಾಂವ್, ಶಿವಸಾಗರ್, ಸೋನಿತ್‌ಪುರ್, ತಿನ್ಸುಕಿಯಾ ಮತ್ತು ಉದಲ್ಗುರಿ ಜಿಲ್ಲೆಗಳಲ್ಲಿ 1,60,600 ಕ್ಕೂ ಹೆಚ್ಚು ಜನರು ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.&lt;/p&gt;&lt;p data-block-key="63dq3"&gt; ಐದು ಜಿಲ್ಲೆಗಳಲ್ಲಿ 1.22 ಲಕ್ಷದಷ್ಟು ಮಂದಿ ಪ್ರವಾಹದಿಂದ ನಿರಾಶ್ರಿತರಾಗಿದ್ದಾರೆ. ಆರು ಜಿಲ್ಲೆಗಳಲ್ಲಿ 100ಕ್ಕೂ ಹೆಚ್ಚು ಪರಿಹಾರ ಶಿಬಿರಗಳು ಮತ್ತು ಪರಿಹಾರ ವಿತರಣಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ 44,523 ಪೀಡಿತ ಜನರಿಗೆ ಆಹಾರ ಒದಗಿಸುತ್ತಿವೆ. 16,951.76 ಹೆಕ್ಟೇರ್ ಬೆಳೆ ಪ್ರದೇಶವು ಜಲಾವೃತಗೊಂಡಿದೆ. &lt;/p&gt;&lt;p data-block-key="cfb6l"&gt;&lt;a href="https://vishwavani.news/sports/cricket/rcbs-co-owner-ananya-birla-visits-flood-hit-assam-distributes-relief-materials-in-jorhat-85361.html"&gt;ʻಆರ್‌ಸಿಬಿಯ ನಿಜವಾದ ರಾಣಿʼ: ಅಸ್ಸಾಂ ಪ್ರವಾಹ ಪೀಡಿತರಿಗೆ ನೆರವಾದ ಅನನ್ಯಾ ಬಿರ್ಲಾ!&lt;/a&gt;&lt;/p&gt;&lt;p data-block-key="a7p5k"&gt;ರಾಜ್ಯದ ವಿವಿಧ ಭಾಗಗಳಲ್ಲಿ ಪ್ರವಾಹದ ನೀರು ಒಡ್ಡುಗಳು, ರಸ್ತೆಗಳು, ಸೇತುವೆಗಳು ಮತ್ತು ಇತರ ಮೂಲಸೌಕರ್ಯಗಳನ್ನು ಹಾನಿಗೊಳಿಸಿದೆ. ಬುಧವಾರ (ಆ,5) ಕೇಂದ್ರ ಸಚಿವ ಜೆ.ಪಿ. ನಡ್ಡಾ ಅವರು ಅತಿ ಹೆಚ್ಚು ಹಾನಿಗೊಳಗಾದ ಜಿಲ್ಲೆಗಳ ಪರಿಸ್ಥಿತಿಯನ್ನು ಪರಿಶೀಲಿಸಿದರು. ಹಾನಿಯ ಪ್ರಮಾಣವು ತುಂಬಾ ದೊಡ್ಡದಿದೆ. ಸಹಜ ಸ್ಥಿತಿಗೆ ಮರಳಲು ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.&lt;/p&gt;&lt;p data-block-key="81fjl"&gt;ಜುಲೈ 19 ರಂದು ಪ್ರಾರಂಭವಾದ ಇತ್ತೀಚಿನ ಪ್ರವಾಹದಲ್ಲಿ ಹೆಚ್ಚು ಹಾನಿಗೊಳಗಾದ ಪ್ರದೇಶಗಳಲ್ಲಿ ಒಂದಾದ ಅಸ್ಸಾಂ-ನಾಗಾಲ್ಯಾಂಡ್ ಗಡಿಯಲ್ಲಿರುವ ಶಿವಸಾಗರ್ ಜಿಲ್ಲೆಯ ನೇಪಾಳಿಖುಟಿ ಪ್ರದೇಶಕ್ಕೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಭೇಟಿ ನೀಡಿದರು. ಸಂಜೆ ನಂತರ, ನಡ್ಡಾ ಅವರು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ಹಿರಿಯ ರಾಜ್ಯ ಸರ್ಕಾರಿ ಅಧಿಕಾರಿಗಳೊಂದಿಗೆ ಪ್ರವಾಹ ಪರಿಸ್ಥಿತಿ ಮತ್ತು ತೆಗೆದುಕೊಳ್ಳುತ್ತಿರುವ ಪರಿಹಾರ, ಪುನರ್ವಸತಿ ಮತ್ತು ಆರೋಗ್ಯ ಕ್ರಮಗಳ ಕುರಿತು ಉನ್ನತ ಮಟ್ಟದ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದರು.&lt;/p&gt;&lt;p data-block-key="bur47"&gt;ಸಂತ್ರಸ್ತರಿಗೆ ಕೇಂದ್ರದಿಂದ ಸಾಧ್ಯವಿರುವ ಎಲ್ಲಾ ಸಹಾಯವನ್ನು ನೀಡುವುದಾಗಿ ಅವರು ಭರವಸೆ ನೀಡಿದರು. ಸರ್ಕಾರ ಅವರೊಂದಿಗೆ ದೃಢವಾಗಿ ನಿಲ್ಲುತ್ತದೆ ಎಂದು ಹೇಳಿದರು. ಪ್ರವಾಹವು ಅಸ್ಸಾಂನಾದ್ಯಂತ ವ್ಯಾಪಕ ಹಾನಿಯನ್ನುಂಟುಮಾಡಿದೆ. ಜೀವಹಾನಿ, ದೊಡ್ಡ ಪ್ರಮಾಣದ ಸ್ಥಳಾಂತರ, ಮುಳುಗಿದ ಬೆಳೆಗಳು ಮತ್ತು ಪ್ರಮುಖ ಮೂಲಸೌಕರ್ಯಗಳಿಗೆ ಹಾನಿಯಾಗಿದೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಬೆಂಗಳೂರಿನಲ್ಲಿ ಆಗಸ್ಟ್‌ 8ರಂದು ವಿಪ್ರ ವ್ಯವಹಾರ ವೇದಿಕೆಯಿಂದ "ವಿಪ್ರ ಸಮ್ಮಿಲನ–2026"</title><link>https://vishwavani.news/karnataka/bengaluru-urban/vipra-sammilana-2026-to-be-held-by-vipra-business-forum-on-august-8-in-bengaluru-85789.html</link><guid>https://vishwavani.news/karnataka/bengaluru-urban/vipra-sammilana-2026-to-be-held-by-vipra-business-forum-on-august-8-in-bengaluru-85789.html</guid><pubDate>Thu, 06 Aug 2026 12:23:17 +0000</pubDate><description>&lt;![CDATA[Vipra Sammilana 2026: ವಿಪ್ರ ವ್ಯವಹಾರ ವೇದಿಕೆ ವತಿಯಿಂದ ಆಗಸ್ಟ್ 8ರಂದು ಶನಿವಾರ ಮಧ್ಯಾಹ್ನ 3.30 ರಿಂದ ರಾತ್ರಿ 8.00 ಗಂಟೆಯವರೆಗೆ ಬೆಂಗಳೂರು ನಗರದ ಕೆಜಿ ರಸ್ತೆಯಲ್ಲಿರುವ ಎಫ್‌ಕೆಸಿಸಿಐ ಸಂಸ್ಥೆಯ ಸರ್‌ ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ "ವಿಪ್ರ ಸಮ್ಮಿಲನ–2026" ಹಮ್ಮಿಕೊಳ್ಳಲಾಗಿದೆ.]]&gt;</description><dc:creator>&lt;![CDATA[Siddalinga Swamy]]&gt;</dc:creator><category>&lt;![CDATA[ಬೆಂಗಳೂರು ನಗರ]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕರ್ನಾಟಕ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Vipra.original.jpg" class="attachment-large size-large wp-post-image" alt="ಬೆಂಗಳೂರಿನಲ್ಲಿ ಆಗಸ್ಟ್‌ 8ರಂದು ವಿಪ್ರ ವ್ಯವಹಾರ ವೇದಿಕೆಯಿಂದ "ವಿಪ್ರ ಸಮ್ಮಿಲನ–2026"" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="h1xw4"&gt;&lt;b&gt;ಬೆಂಗಳೂರು, ಆ.6:&lt;/b&gt; ವಿಪ್ರ ವ್ಯವಹಾರ ವೇದಿಕೆ (&lt;b&gt;VIPRA Business Forum – VBF&lt;/b&gt;) ವತಿಯಿಂದ ಆಗಸ್ಟ್ 8ರಂದು ಶನಿವಾರ ಮಧ್ಯಾಹ್ನ 3.30 ರಿಂದ ರಾತ್ರಿ 8.00 ಗಂಟೆಯವರೆಗೆ ಬೆಂಗಳೂರು ನಗರದ ಕೆಜಿ ರಸ್ತೆಯಲ್ಲಿರುವ ಎಫ್‌ಕೆಸಿಸಿಐ ಸಂಸ್ಥೆಯ ಸರ್‌ ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ "ವಿಪ್ರ ಸಮ್ಮಿಲನ–2026" ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ. ಕಳೆದ 8 ವರ್ಷಗಳಿಂದ ವಿಪ್ರ ವ್ಯವಹಾರ ವೇದಿಕೆ (VBF) ಕರ್ನಾಟಕದಾದ್ಯಂತ ಬ್ರಾಹ್ಮಣ ಉದ್ಯಮಿಗಳು, ಕೈಗಾರಿಕೋದ್ಯಮಿಗಳು, ವ್ಯಾಪಾರಸ್ಥರು, ವಿವಿಧ ವೃತ್ತಿಪರರು, ಸ್ಟಾರ್ಟ್‌ಅಪ್ ಸಂಸ್ಥಾಪಕರು, ಸ್ವಯಂ ಉದ್ಯೋಗಿಗಳು ಹಾಗೂ ಸೇವಾ ವಲಯದ ಪ್ರತಿನಿಧಿಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ, ಉದ್ಯಮಶೀಲತೆ, ವ್ಯವಹಾರ ಅಭಿವೃದ್ಧಿ, ಪರಸ್ಪರ ಸಹಕಾರ ಹಾಗೂ ಆರ್ಥಿಕ ಸಬಲೀಕರಣದ ದಿಸೆಯಲ್ಲಿ ಕಾರ್ಯನಿರ್ವಹಿಸುತ್ತಿದೆ.&lt;/p&gt;&lt;p data-block-key="2kk97"&gt;&lt;/p&gt;&lt;p data-block-key="egsla"&gt;ಭಾರತದ ಒಟ್ಟು ಜನಸಂಖ್ಯೆಯಲ್ಲಿ ಬ್ರಾಹ್ಮಣ ಸಮುದಾಯದ ಪ್ರಮಾಣ ಸುಮಾರು 4–5%, ಕರ್ನಾಟಕದಲ್ಲಿ ಸುಮಾರು 3–5% ಎಂದು ಅಂದಾಜಿಸಲಾಗಿದೆ. ಸಂಖ್ಯೆಯಲ್ಲಿ ಸಣ್ಣ ಸಮುದಾಯವಾಗಿದ್ದರೂ ಶಿಕ್ಷಣ, ವಿಜ್ಞಾನ, ಸಂಶೋಧನೆ, ವೈದ್ಯಕೀಯ, ಇಂಜಿನಿಯರಿಂಗ್, ಮಾಹಿತಿ ತಂತ್ರಜ್ಞಾನ, ನ್ಯಾಯಾಂಗ, ಆಡಳಿತ, ಸಾಹಿತ್ಯ, ಕಲೆ, ಸಂಸ್ಕೃತಿ, ರಕ್ಷಣಾ ಕ್ಷೇತ್ರ ಹಾಗೂ ಕೈಗಾರಿಕಾ ಅಭಿವೃದ್ಧಿಯಲ್ಲಿ ಬ್ರಾಹ್ಮಣ ಸಮುದಾಯದ ಕೊಡುಗೆ ಅಪಾರವಾಗಿದೆ. ಇಂದು ಸಾವಿರಾರು ಬ್ರಾಹ್ಮಣ ಉದ್ಯಮಿಗಳು ದೇಶ-ವಿದೇಶಗಳಲ್ಲಿ ಯಶಸ್ವಿಯಾಗಿ ಉದ್ಯಮಗಳನ್ನು ನಡೆಸುತ್ತಿದ್ದು ಲಕ್ಷಾಂತರ ಜನರಿಗೆ ನೇರ ಮತ್ತು ಪರೋಕ್ಷವಾಗಿ ಉದ್ಯೋಗ ನೀಡುತ್ತಿದ್ದಾರೆ.&lt;/p&gt;&lt;p data-block-key="4rfg5"&gt;&lt;/p&gt;&lt;p data-block-key="b2qkr"&gt;ವಿಪ್ರ ಸಮ್ಮಿಲನ–2026ರ ಪ್ರಮುಖ ಉದ್ದೇಶ ಬ್ರಾಹ್ಮಣ ಉದ್ಯಮಿಗಳನ್ನು ಒಂದೇ ವೇದಿಕೆಯಲ್ಲಿ ಸಂಪರ್ಕಿಸಿ, ಪರಸ್ಪರ ವ್ಯವಹಾರ ವೃದ್ಧಿ, ಹೂಡಿಕೆ, ತಂತ್ರಜ್ಞಾನ, ಮಾರ್ಗದರ್ಶನ ಹಾಗೂ ಸಹಭಾಗಿತ್ವಕ್ಕೆ ಉತ್ತೇಜನ ನೀಡುವುದಾಗಿದೆ.&lt;/p&gt;&lt;p data-block-key="802h9"&gt;&lt;/p&gt;&lt;h3 data-block-key="204jf"&gt;&lt;b&gt;ಸಮ್ಮಿಲನದ ಪ್ರಮುಖ ಆಕರ್ಷಣೆಗಳು&lt;/b&gt;&lt;/h3&gt;&lt;p data-block-key="458sp"&gt;&lt;/p&gt;&lt;p data-block-key="6gv7t"&gt;&lt;b&gt;V-BIZZ – Digital Business Networking Platform&lt;/b&gt;&lt;/p&gt;&lt;p data-block-key="5lqpq"&gt;&lt;/p&gt;&lt;p data-block-key="3q3eb"&gt;ಬ್ರಾಹ್ಮಣ ಉದ್ಯಮಿಗಳು, ತಯಾರಕರು, ವ್ಯಾಪಾರಿಗಳು, ವೃತ್ತಿಪರರು, ಸ್ಟಾರ್ಟ್‌ಅಪ್‌ಗಳು ಹಾಗೂ ಸೇವಾ ಪೂರೈಕೆದಾರರನ್ನು ಒಂದೇ ಡಿಜಿಟಲ್ ವೇದಿಕೆಯಲ್ಲಿ ಸಂಪರ್ಕಿಸುವ ವ್ಯವಸ್ಥೆ. ಸದಸ್ಯರಿಗೆ B2B ಸಂಪರ್ಕ, ಉತ್ಪನ್ನ ಮತ್ತು ಸೇವೆಗಳ ಪ್ರಚಾರ, ವ್ಯವಹಾರ ವಿಸ್ತರಣೆ ಹಾಗೂ ಹೊಸ ಮಾರುಕಟ್ಟೆ ಅವಕಾಶಗಳನ್ನು ಒದಗಿಸಲಾಗುತ್ತದೆ.&lt;/p&gt;&lt;p data-block-key="19iij"&gt;&lt;/p&gt;&lt;p data-block-key="eisfq"&gt;&lt;b&gt;VIPRA Golden Souvenir&lt;/b&gt;&lt;/p&gt;&lt;p data-block-key="arnjm"&gt;&lt;/p&gt;&lt;p data-block-key="86pps"&gt;ಸದಸ್ಯರ ಉದ್ಯಮ, ಉತ್ಪನ್ನಗಳು, ಸೇವೆಗಳು, ಯಶೋಗಾಥೆಗಳು ಹಾಗೂ ಸಾಧನೆಗಳನ್ನು ಪರಿಚಯಿಸುವ ವಿಶೇಷ ಸುವರ್ಣ ಸ್ಮರಣ ಸಂಚಿಕೆ. ಮುದ್ರಿತ ಹಾಗೂ ಡಿಜಿಟಲ್ ರೂಪದಲ್ಲಿ ಪ್ರಕಟವಾಗುವ ಈ ಸಂಚಿಕೆಯ ಮೂಲಕ ಸದಸ್ಯರ ಉದ್ಯಮಗಳಿಗೆ ಕರ್ನಾಟಕ, ಭಾರತ ಹಾಗೂ ಜಾಗತಿಕ ಮಟ್ಟದಲ್ಲಿ ಪ್ರಚಾರ ದೊರೆಯಲಿದೆ.&lt;/p&gt;&lt;p data-block-key="bhjm9"&gt;&lt;/p&gt;&lt;p data-block-key="8rg5h"&gt;&lt;b&gt;VEDIKA Women's Wing&lt;/b&gt;&lt;/p&gt;&lt;p data-block-key="g6un"&gt;&lt;/p&gt;&lt;p data-block-key="bp1s4"&gt;ಮಹಿಳಾ ಉದ್ಯಮಿಗಳಿಗೆ ನಾಯಕತ್ವ, ನೆಟ್‌ವರ್ಕಿಂಗ್, ಮಾರ್ಗದರ್ಶನ, ಬ್ರ್ಯಾಂಡಿಂಗ್, ಕೌಶಲ್ಯಾಭಿವೃದ್ಧಿ, ಉದ್ಯಮ ವಿಸ್ತರಣೆ ಹಾಗೂ ಮಾರುಕಟ್ಟೆ ಸಂಪರ್ಕ ಕಲ್ಪಿಸುವ ವಿಶೇಷ ಮಹಿಳಾ ವಿಭಾಗ.&lt;/p&gt;&lt;p data-block-key="cavp4"&gt;&lt;/p&gt;&lt;h3 data-block-key="9gr1l"&gt;&lt;b&gt;VBFಯ ಉದ್ದೇಶಗಳು&lt;/b&gt;&lt;/h3&gt;&lt;p data-block-key="2v6m4"&gt;&lt;/p&gt;&lt;ul&gt;&lt;li data-block-key="9tkgj"&gt;ಉದ್ಯಮಶೀಲತೆಯನ್ನು ಉತ್ತೇಜಿಸುವುದು.&lt;/li&gt;&lt;li data-block-key="9prto"&gt;ಹೊಸ ಉದ್ಯಮ ಆರಂಭಿಸಲು ಪ್ರೋತ್ಸಾಹ ನೀಡುವುದು.&lt;/li&gt;&lt;li data-block-key="aignq"&gt;Business-to-Business (B2B) ಸಹಭಾಗಿತ್ವವನ್ನು ವೃದ್ಧಿಸುವುದು.&lt;/li&gt;&lt;li data-block-key="1dipl"&gt;Supply Chain ಸಹಕಾರವನ್ನು ಬಲಪಡಿಸುವುದು.&lt;/li&gt;&lt;li data-block-key="2ch7e"&gt;ಸ್ಟಾರ್ಟ್‌ಅಪ್‌ಗಳಿಗೆ ಮಾರ್ಗದರ್ಶನ ಹಾಗೂ ಹೂಡಿಕೆ ಅವಕಾಶಗಳನ್ನು ಕಲ್ಪಿಸುವುದು.&lt;/li&gt;&lt;li data-block-key="aqo5i"&gt;ಹಿರಿಯ ಉದ್ಯಮಿಗಳು ಮತ್ತು ಯುವ ಉದ್ಯಮಿಗಳ ನಡುವೆ ಮಾರ್ಗದರ್ಶನ (Mentorship) ವ್ಯವಸ್ಥೆ ನಿರ್ಮಿಸುವುದು.&lt;/li&gt;&lt;li data-block-key="bbtub"&gt;ಮಹಿಳಾ ಉದ್ಯಮಿಗಳನ್ನು ಆರ್ಥಿಕವಾಗಿ ಸಬಲಗೊಳಿಸುವುದು.&lt;/li&gt;&lt;li data-block-key="ee8s1"&gt;ವಿದ್ಯಾರ್ಥಿಗಳು ಮತ್ತು ಯುವಜನರನ್ನು "ಉದ್ಯೋಗ ಅರಸುವವರಿಗಿಂತ ಉದ್ಯೋಗ ಸೃಷ್ಟಿಸುವವರಾಗಿ" ರೂಪಿಸುವುದು.&lt;/li&gt;&lt;/ul&gt;&lt;p data-block-key="gv3f"&gt;&lt;/p&gt;&lt;h3 data-block-key="5nkkj"&gt;&lt;b&gt;ಸದಸ್ಯರ ಉದ್ಯಮ ಕ್ಷೇತ್ರಗಳು&lt;/b&gt;&lt;/h3&gt;&lt;p data-block-key="29vif"&gt;&lt;/p&gt;&lt;p data-block-key="f4me3"&gt;VBF ಸದಸ್ಯರು ಉತ್ಪಾದನೆ, ವ್ಯಾಪಾರ, ಆರೋಗ್ಯ, ಆಸ್ಪತ್ರೆಗಳು, ಔಷಧೋದ್ಯಮ, ಶಿಕ್ಷಣ, ಮಾಹಿತಿ ತಂತ್ರಜ್ಞಾನ, ಪ್ರವಾಸೋದ್ಯಮ, ಟ್ರಾವೆಲ್, ಆತಿಥ್ಯ, ಬ್ಯಾಂಕಿಂಗ್, ಹಣಕಾಸು, ವಿಮೆ, ತೆರಿಗೆ, ಕಾನೂನು, ನಿರ್ಮಾಣ, ಕೃಷಿ, ಸಾವಯವ ಉತ್ಪನ್ನಗಳು, ವಾಹನೋದ್ಯಮ, ನವೀಕರಿಸಬಹುದಾದ ಇಂಧನ, ಸಲಹಾ ಸೇವೆಗಳು, ಗೃಹೋದ್ಯಮ, ಇ-ಕಾಮರ್ಸ್ ಹಾಗೂ ಸ್ಟಾರ್ಟ್‌ಅಪ್ ಸೇರಿದಂತೆ 20ಕ್ಕೂ ಹೆಚ್ಚು ಉದ್ಯಮ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.&lt;/p&gt;&lt;p data-block-key="63fm2"&gt;&lt;/p&gt;&lt;h3 data-block-key="bhrg"&gt;&lt;b&gt;ಸಮ್ಮಿಲನದಲ್ಲಿ ಏನಿರಲಿದೆ?&lt;/b&gt;&lt;/h3&gt;&lt;p data-block-key="9t7dd"&gt;&lt;/p&gt;&lt;ul&gt;&lt;li data-block-key="5cfk9"&gt;V-BIZZ ಡಿಜಿಟಲ್ ವೇದಿಕೆಯ ಅನಾವರಣ.&lt;/li&gt;&lt;li data-block-key="3te45"&gt;VIPRA Golden Souvenir ಬಿಡುಗಡೆ.&lt;/li&gt;&lt;li data-block-key="9qicu"&gt;VEDIKA Women's Wing ಉದ್ಘಾಟನೆ.&lt;/li&gt;&lt;li data-block-key="1f8vp"&gt;ಹಿರಿಯ ಉದ್ಯಮಿಗಳು ಹಾಗೂ ಸಾಧಕರಿಗೆ ಗೌರವ ಸಮರ್ಪಣೆ.&lt;/li&gt;&lt;li data-block-key="b0663"&gt;ಉದ್ಯಮಾಭಿವೃದ್ಧಿ ಕುರಿತ ವಿಶೇಷ ಉಪನ್ಯಾಸಗಳು.&lt;/li&gt;&lt;li data-block-key="8fepa"&gt;B2B Networking Session.&lt;/li&gt;&lt;li data-block-key="evn7l"&gt;ಹೊಸ ಸದಸ್ಯರ ಪರಿಚಯ.&lt;/li&gt;&lt;li data-block-key="454eg"&gt;ಯುವ ಉದ್ಯಮಿಗಳಿಗೆ ಮಾರ್ಗದರ್ಶನ.&lt;/li&gt;&lt;li data-block-key="1bqbq"&gt;ಮಹಿಳಾ ಉದ್ಯಮಿಗಳಿಗೆ ವಿಶೇಷ ಸಂವಾದ.&lt;/li&gt;&lt;li data-block-key="akc7g"&gt;ವ್ಯವಹಾರ ವಿಸ್ತರಣೆಗೆ ಸಹಭಾಗಿತ್ವದ ಅವಕಾಶಗಳು.‌&lt;/li&gt;&lt;/ul&gt;&lt;p data-block-key="9s2mg"&gt;&lt;/p&gt;&lt;p data-block-key="82i08"&gt;&lt;a href="/karnataka/bengaluru-urban/utthana-katha-spardhe-2026-stories-invites-for-utthana-varshika-katha-spardhe-85592.html"&gt;&lt;b&gt;Utthana Katha Spardhe 2026: ಉತ್ಥಾನ ವಾರ್ಷಿಕ ಕಥಾ ಸ್ಪರ್ಧೆ-2026ಕ್ಕೆ ಕಥೆಗಳ ಆಹ್ವಾನ; ಅ.10 ಕೊನೆಯ ದಿನ&lt;/b&gt;&lt;/a&gt;&lt;/p&gt;&lt;p data-block-key="avb9g"&gt;&lt;/p&gt;&lt;p data-block-key="3n605"&gt;ವಿಪ್ರ ವ್ಯವಹಾರ ವೇದಿಕೆ ಕೇವಲ ಒಂದು ಸಂಘಟನೆಯಲ್ಲ; ಇದು ಉದ್ಯಮ, ನಾಯಕತ್ವ, ಜ್ಞಾನ, ಸೇವೆ ಮತ್ತು ಸಮುದಾಯದ ಆರ್ಥಿಕ ಸಬಲೀಕರಣದ ಚಳವಳಿಯಾಗಿದೆ. ಕರ್ನಾಟಕದ ಎಲ್ಲಾ ಬ್ರಾಹ್ಮಣ ಉದ್ಯಮಿಗಳು, ಕೈಗಾರಿಕೋದ್ಯಮಿಗಳು, ವ್ಯಾಪಾರಸ್ಥರು, ವೈದ್ಯರು, ಇಂಜಿನಿಯರ್‌ಗಳು, ಚಾರ್ಟರ್ಡ್ ಅಕೌಂಟೆಂಟ್‌ಗಳು, ವಕೀಲರು, ಬ್ಯಾಂಕರ್‌ಗಳು, ಐಟಿ ವೃತ್ತಿಪರರು, ಶಿಕ್ಷಕರು, ಸ್ಟಾರ್ಟ್‌ಅಪ್ ಸಂಸ್ಥಾಪಕರು, ಮಹಿಳಾ ಉದ್ಯಮಿಗಳು, ಸ್ವಯಂ ಉದ್ಯೋಗಿಗಳು ಹಾಗೂ ಯುವ ಉದ್ಯಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಐತಿಹಾಸಿಕ ಸಮ್ಮಿಲನವನ್ನು ಯಶಸ್ವಿಗೊಳಿಸುವಂತೆ ವಿಪ್ರ ವ್ಯವಹಾರ ವೇದಿಕೆ ಆತ್ಮೀಯವಾಗಿ ಆಹ್ವಾನಿಸುತ್ತದೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>2027ರ ಏಕದಿನ ವಿಶ್ವಕಪ್‌ ಟೂರ್ನಿಗೆ ಭಾರತ ತಂಡವನ್ನು ಆರಿಸಿದ ಸುನೀಲ್‌ ಗವಾಸ್ಕರ್‌!</title><link>https://vishwavani.news/sports/cricket/batting-great-sunil-gavaskar-picks-indias-world-cup-2027-squad-85801.html</link><guid>https://vishwavani.news/sports/cricket/batting-great-sunil-gavaskar-picks-indias-world-cup-2027-squad-85801.html</guid><pubDate>Thu, 06 Aug 2026 12:08:31 +0000</pubDate><description>&lt;![CDATA[2027ರ ಐಸಿಸಿ ಏಕದಿನ ವಿಶ್ವಕಪ್‌ಗೆ ಇನ್ನೂ 14 ತಿಂಗಳು ಬಾಕಿ ಇದ್ದರೂ, ಪ್ರತಿಷ್ಠಿತ ಟೂರ್ನಿಗೆ ಭಾರತ ತಂಡ ಹೇಗಿರಲಿದೆ ಎಂಬ ಲೆಕ್ಕಾಚಾರ, ಸಂಭಾವ್ಯ ಸಂಯೋಜನೆಗಳು ಹಾಗೂ ಊಹಾಪೋಹಗಳು ಈಗಾಗಲೇ ಕ್ರಿಕೆಟ್ ವಲಯದಲ್ಲಿ ಜೋರಾಗಿ ಆರಂಭವಾಗಿವೆ. ಅದರಂತೆ ಬ್ಯಾಟಿಂಗ್‌ ದಿಗ್ಗಜ ಸುನೀಲ್‌ ಗವಾಸ್ಕರ್‌ ತಮ್ಮ ನೆಚ್ಚಿನ ತಂಡವನ್ನು ಆರಿಸಿದ್ದಾರೆ.]]&gt;</description><dc:creator>&lt;![CDATA[Ramesh Kote]]&gt;</dc:creator><category>&lt;![CDATA[ಕ್ರಿಕೆಟ್‌]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕ್ರೀಡೆ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Sunil_Gavaskar_xOFz4Wn.original.jpg" class="attachment-large size-large wp-post-image" alt="2027ರ ಏಕದಿನ ವಿಶ್ವಕಪ್‌ ಟೂರ್ನಿಗೆ ಭಾರತ ತಂಡವನ್ನು ಆರಿಸಿದ ಸುನೀಲ್‌ ಗವಾಸ್ಕರ್‌!" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="wq59o"&gt;&lt;b&gt;ನವದೆಹಲಿ: &lt;/b&gt;ಐಸಿಸಿ ಏಕದಿನ ವಿಶ್ವಕಪ್‌ 2027ರ ಟೂರ್ನಿಗೆ (ICC ODI World Cup 2027) ಇನ್ನೂ 14 ತಿಂಗಳು ಬಾಕಿ ಇದ್ದರೂ, ಭಾರತ ತಂಡದ ಸಂಭಾವ್ಯ ಸಂಯೋಜನೆ ಬಗ್ಗೆ ಈಗಾಗಲೇ ಚರ್ಚೆಗಳು ಆರಂಭವಾಗಿವೆ. 2011ರ ಬಳಿಕ ಭಾರತ ಏಕದಿನ ವಿಶ್ವಕಪ್ ಗೆಲ್ಲಲು ಸಾಧ್ಯವಾಗಿಲ್ಲ. 2023ರ ವಿಶ್ವಕಪ್‌ ಟೂರ್ನಿಯಲ್ಲಿ ರನ್ನರ್-ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿದ್ದ ಭಾರತ, ಪ್ರಸ್ತುತ ಟಿ20 ವಿಶ್ವಕಪ್ ಹಾಗೂ ಚಾಂಪಿಯನ್ಸ್ ಟ್ರೋಫಿ ಚಾಂಪಿಯನ್ ಆಗಿರುವ ಕಾರಣ ಶುಭ್‌ಮನ್ ಗಿಲ್ ನೇತೃತ್ವದ ತಂಡದ ಮೇಲೆ ನಿರೀಕ್ಷೆಗಳು ಹೆಚ್ಚಿವೆ. ಇದರ ನಡುವೆ ಮಾಜಿ ಕ್ರಿಕೆಟಿಗ ಸುನೀಲ್ ಗವಾಸ್ಕರ್ (Sunil Gavaskar) ಆಯ್ಕೆ ಮಾಡಿರುವ ಸಂಭಾವ್ಯ ಭಾರತ ತಂಡವನ್ನು ಮಾಜಿ ಆಟಗಾರ ಆಕಾಶ್ ಚೋಪ್ರಾ (Aakash Chopra) ವಿಶ್ಲೇಷಿಸಿದ್ದಾರೆ.&lt;/p&gt;&lt;p data-block-key="c4rco"&gt;"ಶುಭ್‌ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಟಾಪ್-5 ಬ್ಯಾಟರ್‌ಗಳಾಗಿದ್ದಾರೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಿದ್ದ ಅದೇ ಮೊದಲ ಐವರು ಇಲ್ಲಿ ಕೂಡ ಮುಂದುವರಿದಿದ್ದಾರೆ.&lt;/p&gt;&lt;p data-block-key="8mhsv"&gt;ಇಶಾನ್ ಕಿಶನ್ ಅವರನ್ನು 15 ಸದಸ್ಯರ ತಂಡದಲ್ಲಿ ಸೇರಿಸಲಾಗಿದೆ. ಅವರು ಈಗ ಉತ್ತಮ ಫಾರ್ಮ್‌ನಲ್ಲಿದ್ದು, ಈ ಮಾದರಿಗೆ ಸಂಪೂರ್ಣ ಸಿದ್ಧರಾಗಿದ್ದಾರೆ. ಆಲ್‌ರೌಂಡರ್ ವಿಭಾಗದಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ನಿತೀಶ್ ಕುಮಾರ್ ರೆಡ್ಡಿ ಇದ್ದಾರೆ. ಇಬ್ಬರೂ ಪರಸ್ಪರ ಉತ್ತಮ ಪರ್ಯಾಯ ಆಟಗಾರರಂತೆ ಕಾಣುತ್ತಾರೆ. ಇದು ನನಗೆ ಇಷ್ಟವಾಯಿತು."&lt;/p&gt;&lt;p data-block-key="1nlgm"&gt;&lt;a href="/sports/cricket/ind-vs-sl-2026-gautam-gambhirs-strong-message-to-india-before-must-win-sri-lanka-series-85778.html"&gt;&lt;b&gt;IND vs SL: ಟೆಸ್ಟ್‌ ಸರಣಿಗೂ ಮುನ್ನ ಭಾರತ ತಂಡದ ಆಟಗಾರರಿಗೆ ಬಲವಾದ ಸಂದೇಶ ರವಾನಿಸಿದ ಗೌತಮ್‌ ಗಂಭೀರ್‌!&lt;/b&gt;&lt;/a&gt;&lt;/p&gt;&lt;p data-block-key="a05lo"&gt;"ಸ್ಪಿನ್ ಬೌಲಿಂಗ್ ಆಲ್‌ರೌಂಡರ್‌ಗಳ ವಿಷಯಕ್ಕೆ ಬಂದರೆ ಅಕ್ಷರ್ ಪಟೇಲ್ ಹಾಗೂ ರವೀಂದ್ರ ಜಡೇಜಾ ಇದ್ದಾರೆ. ಇಬ್ಬರೂ ಅನುಭವಿ ಎಡಗೈ ಸ್ಪಿನ್ನರ್‌ಗಳು. ಇವರು ಕೂಡ ಪರಸ್ಪರ ಉತ್ತಮ ಬದಲಾವಣೆ ಆಟಗಾರರಾಗಬಹುದು. ಸನ್ನಿ (ಸುನೀಲ್‌ ಗವಾಸ್ಕರ್‌) ಸರ್ ಆಯ್ಕೆ ಮಾಡಿದ ನಾಲ್ವರು ಆಲ್‌ರೌಂಡರ್‌ಗಳು ಪರಸ್ಪರ ಸಮರ್ಥ ಪರ್ಯಾಯ ಆಟಗಾರರಾಗಿದ್ದಾರೆ. ಈ ಆಯ್ಕೆ ಅರ್ಥಪೂರ್ಣವಾಗಿದೆ," ಎಂದು ಆಕಾಶ್ ಚೋಪ್ರಾ ತಮ್ಮ ಯೂಟ್ಯೂಬ್ ವಿಡಿಯೊದಲ್ಲಿ ಹೇಳಿದ್ದಾರೆ.&lt;/p&gt;&lt;p data-block-key="efq7i"&gt;"ಜಸ್‌ಪ್ರೀತ್‌ ಬುಮ್ರಾ, ಮೊಹಮ್ಮದ್ ಸಿರಾಜ್ ಹಾಗೂ ಕುಲ್ದೀಪ್ ಯಾದವ್ ಬೌಲಿಂಗ್ ದಾಳಿಯ ಪ್ರಮುಖ ಅಸ್ತ್ರಗಳು. ಹರ್ಷಿತ್ ರಾಣಾ ವೇಗದ ಬೌಲರ್ ಆಗಿರುವುದರ ಜೊತೆಗೆ ಬ್ಯಾಟಿಂಗ್‌ನಲ್ಲಿಯೂ ನೆರವು ನೀಡಬಲ್ಲರು. ಇದರಿಂದ ತಂಡಕ್ಕೆ ಹೆಚ್ಚುವರಿ ಆಯ್ಕೆ ಸಿಗುತ್ತದೆ. ಅರ್ಷದೀಪ್ ಸಿಂಗ್ ಕೂಡ ಉತ್ತಮ ಆಯ್ಕೆಯಾಗಿದ್ದಾರೆ. ಎಡಗೈ ವೇಗದ ಬೌಲರ್ ತಂಡದಲ್ಲಿರುವುದು ಯಾವಾಗಲೂ ಉಪಯುಕ್ತ. ಒಟ್ಟಾರೆ ಇದು 10ರಲ್ಲಿ 8.5 ಅಥವಾ 9 ಅಂಕಗಳಿಗೆ ಅರ್ಹವಾದ ಅತ್ಯುತ್ತಮ ತಂಡ. ಅಂತಿಮವಾಗಿ ಆಯ್ಕೆಯಾಗುವ ಭಾರತ ತಂಡಕ್ಕೆ ಇದು ಬಹಳ ಹತ್ತಿರದ ಸಂಯೋಜನೆ ಎಂದು ನಾನು ಭಾವಿಸುತ್ತೇನೆ," ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.&lt;/p&gt;&lt;p data-block-key="32ud3"&gt;&lt;a href="/sports/cricket/england-announce-16-member-squad-for-pakistan-test-series-jordan-cox-ruled-out-85785.html"&gt;&lt;b&gt;ENG vs PAK ಟೆಸ್ಟ್‌ ಸರಣಿಗೆ 16 ಸದಸ್ಯರ ಇಂಗ್ಲೆಂಡ್‌ ತಂಡ ಪ್ರಕಟ, ಜೋರ್ಡನ್‌ ಕಾಕ್ಸ್‌ ಔಟ್‌!&lt;/b&gt;&lt;/a&gt;&lt;/p&gt;&lt;p data-block-key="3v3c6"&gt;&lt;b&gt;ಸುನೀಲ್‌ ಗವಾಸ್ಕರ್‌ ಆಯ್ಕೆಯ ಭಾರತ ಏಕದಿನ ವಿಶ್ವಕಪ್‌ ತಂಡ:&lt;/b&gt; ಶುಭಮನ್‌ ಗಿಲ್‌ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್‌ ಕೀಪರ್‌), ಹಾರ್ದಿಕ್ ಪಾಂಡ್ಯ, ನಿತೀಶ್ ಕುಮಾರ್ ರೆಡ್ಡಿ,  ಅಕ್ಷರ್ ಪಟೇಲ್ , ರವೀಂದ್ರ ಜಡೇಜಾ, ಜಸ್‌ಪ್ರೀತ್‌ ಬುಮ್ರಾ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್, ಹರ್ಷಿತ್ ರಾಣಾ, ಅರ್ಷದೀಪ್‌ ಸಿಂಗ್‌&lt;/p&gt;
&lt;/div&gt;
&lt;/p&gt;]]&gt;</content:encoded></item><item><title>‘ಒತ್ತಡದ ಬದುಕಿನಲ್ಲಿ ಮಾನಸಿಕ ಆರೋಗ್ಯಕ್ಕೂ ಆದ್ಯತೆ ನೀಡಿ’ : ಮಾನ್ವಿತಾ ಕಾಮತ್</title><link>https://vishwavani.news/karnataka/bengaluru-urban/prioritize-mental-health-amidst-a-stressful-life-manvitha-kamath-85799.html</link><guid>https://vishwavani.news/karnataka/bengaluru-urban/prioritize-mental-health-amidst-a-stressful-life-manvitha-kamath-85799.html</guid><pubDate>Thu, 06 Aug 2026 12:05:16 +0000</pubDate><description>&lt;![CDATA[ಆರೋಗ್ಯ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ವೈದ್ಯರು ಹಾಗೂ ಆರೋಗ್ಯ ವಲಯದ ಸಾಧಕರನ್ನು ಗೌರವಿಸುವ ಉದ್ದೇಶದಿಂದ ವಿಶ್ವವಾಣಿ ಟಿವಿ ಆಯೋಜಿಸಿದ್ದ ‘ಪ್ರೈಡ್ ಆಫ್ ಹೆಲ್ತ್‌ಕೇರ್ ಅವಾರ್ಡ್’ಕಾರ್ಯಕ್ರಮವು ಬುಧವಾರ (ಆ. 5) ಸಂಜೆ ಬೆಂಗಳೂರಿನ ರಾಡಿಸನ್‌ ಬ್ಲೂ ಹೋಟೆಲ್‌ನಲ್ಲಿ ನಡೆಯಿತು.  ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಸ್ಯಾಂಡಲ್‌ವುಡ್‌ ನಟಿ ಮಾನ್ವಿತಾ ಕಾಮತ್‌ ಆಗಮಿಸಿದ್ದರು.]]&gt;</description><dc:creator>&lt;![CDATA[Vishakha Bhat Heggar]]&gt;</dc:creator><category>&lt;![CDATA[ಬೆಂಗಳೂರು ನಗರ]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕರ್ನಾಟಕ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Manvita_Kamat.original.jpg" class="attachment-large size-large wp-post-image" alt="‘ಒತ್ತಡದ ಬದುಕಿನಲ್ಲಿ ಮಾನಸಿಕ ಆರೋಗ್ಯಕ್ಕೂ ಆದ್ಯತೆ ನೀಡಿ’ : ಮಾನ್ವಿತಾ ಕಾಮತ್" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="9sasc"&gt;&lt;b&gt;ಬೆಂಗಳೂರು:&lt;/b&gt; ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವುದು ಹೆಮ್ಮೆಯ ಸಂಗತಿ. ವೈದ್ಯರ ಸಾಧನೆಯನ್ನು ಗುರುತಿಸಿ ವಿಶ್ವವಾಣಿ ಟಿವಿ&lt;b&gt; (Vishwavani TV)&lt;/b&gt; ಸಂಸ್ಥೆಯು ಪ್ರೈಡ್ ಆಫ್ ಹೆಲ್ತ್‌ಕೇರ್ ಅವಾರ್ಡ್ ನೀಡಿ ಗೌರವಿಸುತ್ತಿದೆ. ಸಮಾಜಕ್ಕೆ ಕೊಡುಗೆ ನೀಡುವವರನ್ನು ಸನ್ಮಾನಿಸುವ ಕೆಲಸ ಹೆಚ್ಚಬೇಕು. ಈ ನಿಟ್ಟಿನಲ್ಲಿ ವಿಶ್ವವಾಣಿ ಟಿವಿ ಕಾರ್ಯ ಶ್ಲಾಘನೀಯ  ಎಂದು ಜನಪ್ರಿಯ ನಟಿ ಮಾನ್ವಿತಾ ಕಾಮತ್‌ (&lt;b&gt;Manvita Kamath&lt;/b&gt;)  ಹೇಳಿದರು. ವಿಶ್ವವಾಣಿ ಟಿವಿ ಬೆಂಗಳೂರಿನಲ್ಲಿ ಬುಧವಾರ ಆಯೋಜಿಸಿದ್ದ ‘ಪ್ರೈಡ್ ಆಫ್ ಹೆಲ್ತ್‌ಕೇರ್ ಅವಾರ್ಡ್’ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.&lt;/p&gt;&lt;p data-block-key="6sm77"&gt;ಇಂದಿನ ಪೀಳಿಗೆಯ ಅತೀ ದೊಡ್ಡ ಸಮಸ್ಯೆ ಒತ್ತಡ. ಪ್ರತಿಯೊಬ್ಬರೂ ಒತ್ತಡದಲ್ಲಿಯೇ ಜೀವನ ನಡೆಸುತ್ತಿದ್ದಾರೆ. ದೈಹಿಕ ಆರೋಗ್ಯ ಕಾಪಾಡಿಕೊಳ್ಳುವ ಜೊತೆಗೆ ಮಾನಸಿಕ ಆರೋಗ್ಯದ ಸಮತೋಲನವೂ ಅಷ್ಟೇ ಮುಖ್ಯವಾಗಿರುತ್ತದೆ. ವ್ಯಾಯಾಮ, ಯೋಗ, ನಡಿಗೆ, ಸಮತೋಲಿತ ಆಹಾರ ಇವೆಲ್ಲವೂ ಮನುಷ್ಯನ ಸಂಪೂರ್ಣ ದೇಹ ಆರೋಗ್ಯವಾಗಿರುವಂತೆ ಮಾಡುತ್ತದೆ. ಕಾರ್ಯದೊತ್ತಡವನ್ನು ನಿಭಾಯಿಸಿ ಕೆಲಸ ಮಾಡುವ ಕುರಿತು ಜಾಗೃತಿ ಮೂಡಿಸುವ ಕೆಲಸ ಆಗಬೇಕು ಎಂದು ಮಾನ್ವಿತಾ ಹೇಳಿದರು.&lt;/p&gt;&lt;p data-block-key="99ful"&gt;ಮಹಿಳೆಯರ ಋತುಬಂಧದ ಸಮಸ್ಯೆ ಕುರಿತು ಮಾತನಾಡಿದ ಮಾನ್ವಿತಾ ಕಾಮತ್‌, 40 ವರ್ಷಕ್ಕೂ ಮೇಲ್ಪಟ್ಟ ಮಹಿಳೆಯರು ಋತುಬಂಧದ ಸಮಯದಲ್ಲಿ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಇದೇ ಸಮಯದಲ್ಲಿ ಗರ್ಭಕೋಶದ ಸಮಸ್ಯೆ, ಅಧಿಕ ರಕ್ತಸ್ರಾವ ಹಾಗೂ ದೇಹದಲ್ಲಿ ಪೋಷಕಾಂಶದ ಸಮಸ್ಯೆಗಳು ಪ್ರಾರಂಭವಾಗುತ್ತವೆ. ಹಲವರಿಗೆ ಮಾನಸಿಕ ತೊಂದರೆಯೂ ಉಂಟಾಗುತ್ತದೆ. ಈ ಸಮಯದಲ್ಲಿ ಸರಿಯಾದ ಆರೈಕೆ ಹಾಗೂ ಸರಿಯಾದ ಔಷಧ ಮುಖ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಪ್ರಾರಂಭಿಸಿರುವ ʻಋತುತಾರೆʼ ಯೋಜನೆ ಮಹಿಳೆಯರಿಗೆ ಸಹಾಯಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.&lt;/p&gt;&lt;p data-block-key="eg1v5"&gt;&lt;/p&gt;&lt;p data-block-key="5sj1g"&gt;&lt;/p&gt;&lt;p data-block-key="221qs"&gt;&lt;/p&gt;
&lt;/div&gt;
&lt;/p&gt;]]&gt;</content:encoded></item><item><title>Miss World pageant: ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಮಿಂಚಿದ ಚಿಕ್ಕಬಳ್ಳಾಪುರದ ಡಾ.ವಿ.ಮೋನಿಷಾ</title><link>https://vishwavani.news/karnataka/chikkaballapur/dr-v-monisha-from-chikkaballapur-shines-at-the-miss-world-pageant-85798.html</link><guid>https://vishwavani.news/karnataka/chikkaballapur/dr-v-monisha-from-chikkaballapur-shines-at-the-miss-world-pageant-85798.html</guid><pubDate>Thu, 06 Aug 2026 12:04:52 +0000</pubDate><description>&lt;![CDATA[ಚಿಂತಾಮಣಿಯ ರಾಯಲ್ ಶಾಲೆ ಹಾಗೂ ಏನಿಗದಲೆ ಜವಾಹರ್ ನವೋದಯ ವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡಿದ ಅವರು, ಉಡುಪಿಯ ಎಸ್‌ಡಿಎಂ ಆಯುರ್ವೇದ ಮಹಾವಿದ್ಯಾಲಯದಲ್ಲಿ ಆಯುರ್ವೇದ ವೈದ್ಯಕೀಯ ಪದವಿ ಹಾಗೂ ನಿಟ್ಟೆ ವಿಶ್ವವಿದ್ಯಾಲಯದಲ್ಲಿ ಸಾರ್ವಜನಿಕ ಆರೋಗ್ಯ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.]]&gt;</description><dc:creator>&lt;![CDATA[Ashok Nayak]]&gt;</dc:creator><category>&lt;![CDATA[ಚಿಕ್ಕಬಳ್ಳಾಪುರ]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕರ್ನಾಟಕ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/DR_Monisha_Top.original.jpg" class="attachment-large size-large wp-post-image" alt="Miss World pageant: ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಮಿಂಚಿದ ಚಿಕ್ಕಬಳ್ಳಾಪುರದ ಡಾ.ವಿ.ಮೋನಿಷಾ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="5td50"&gt;&lt;b&gt;ಚಿಕ್ಕಬಳ್ಳಾಪುರ:&lt;/b&gt; ಶಿಕ್ಷಣ, ಆರೋಗ್ಯ ಸೇವೆ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿರುವ ಚಿಕ್ಕಬಳ್ಳಾಪುರ ಮೂಲದ ಡಾ.ವಿ.ಮೋನಿಷಾ(&lt;b&gt;Dr V Monisha&lt;/b&gt;) ಅವರು ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಅತ್ಯುತ್ತಮ ದೈಹಿಕ ಸಾಮರ್ಥ್ಯ ಪ್ರದರ್ಶಿಸಿದ ಸ್ಪರ್ಧಾಳು ಪ್ರಶಸ್ತಿ ಪಡೆದು ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ.&lt;/p&gt;
&lt;/div&gt;

    
&lt;figure class="article-image text-center mb-4"&gt;
    &lt;img alt="Dr Monisha" class="img-fluid" height="720" src="https://cdn.vishwavani.news/media/images/Dr_Monisha.max-1280x720.format-webp.webp" width="512"&gt;
    
&lt;/figure&gt;

    
&lt;div class="article-paragraph"&gt;
    &lt;p data-block-key="40r5o"&gt;ಚಿಂತಾಮಣಿಯ ರಾಯಲ್ ಶಾಲೆ ಹಾಗೂ ಏನಿಗದಲೆ ಜವಾಹರ್ ನವೋದಯ ವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡಿದ ಅವರು, ಉಡುಪಿಯ ಎಸ್‌ಡಿಎಂ ಆಯುರ್ವೇದ ಮಹಾವಿದ್ಯಾಲಯದಲ್ಲಿ ಆಯುರ್ವೇದ ವೈದ್ಯಕೀಯ ಪದವಿ ಹಾಗೂ ನಿಟ್ಟೆ ವಿಶ್ವವಿದ್ಯಾಲಯದಲ್ಲಿ ಸಾರ್ವಜನಿಕ ಆರೋಗ್ಯ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ವಿದ್ಯಾರ್ಥಿ ಜೀವನದಲ್ಲಿಯೇ ವಾಲಿಬಾಲ್ ಮತ್ತು ಬ್ಯಾಸ್ಕೆಟ್‌ ಬಾಲ್ ಕ್ರೀಡೆಗಳಲ್ಲಿ ರಾಜ್ಯ ಹಾಗೂ ವಿಶ್ವವಿದ್ಯಾಲಯ ಮಟ್ಟದಲ್ಲಿ ಸಾಧನೆ ಮಾಡಿ ಗುರುತಿಸಿ ಕೊಂಡಿದ್ದರು.&lt;/p&gt;&lt;p data-block-key="6ddbi"&gt;&lt;b&gt;ಇದನ್ನೂ ಓದಿ; &lt;/b&gt;&lt;a href="/karnataka/chikkaballapur/selection-of-new-sdmc-office-bearers-for-pasupalodu-government-school-85794.html"&gt;Chikkaballapur News: ಪಸುಪಲೋಡು ಸರ್ಕಾರಿ ಶಾಲೆಗೆ ಎಸ್‌ಡಿಎಂಸಿ ನೂತನ ಪದಾಧಿಕಾರಿಗಳ ಆಯ್ಕೆ&lt;/a&gt;&lt;/p&gt;&lt;p data-block-key="4sq7n"&gt;ಪ್ರಸ್ತುತ ಚಿಕ್ಕಬಳ್ಳಾಪುರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಜಿಲ್ಲಾ ಕಾರ್ಯಕ್ರಮ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿರುವ ಅವರು, ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಹಲವು ಮಹತ್ವದ ಯೋಜನೆಗಳ ಅನುಷ್ಠಾನದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವಿದೇಶ ಗಳಲ್ಲಿ ತರಬೇತಿ ಪಡೆದು ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಸಂಶೋಧನಾ ಲೇಖನಗಳನ್ನೂ ಪ್ರಕಟಿಸಿದ್ದಾರೆ.&lt;/p&gt;&lt;p data-block-key="610gv"&gt;ಇತ್ತೀಚೆಗೆ ನಡೆದ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಅತ್ಯುತ್ತಮ ದೈಹಿಕ ಕ್ಷಮತೆ, ಆರೋಗ್ಯಕರ ಜೀವನಶೈಲಿ ಮತ್ತು ಆತ್ಮವಿಶ್ವಾಸದ ಪ್ರದರ್ಶನಕ್ಕಾಗಿ &lt;b&gt;ಅತ್ಯುತ್ತಮ ದೈಹಿಕ ಸಾಮರ್ಥ್ಯ ಪ್ರಶಸ್ತಿ&lt;/b&gt; ಪಡೆದಿದ್ದಾರೆ.&lt;/p&gt;&lt;p data-block-key="cjs2v"&gt;ಈ ಸಾಧನೆಯನ್ನು ಕುಟುಂಬ, ಗುರುಗಳು ಹಾಗೂ ತಮ್ಮನ್ನು ಬೆಂಬಲಿಸಿದ ಎಲ್ಲರಿಗೂ ಸಮರ್ಪಿಸಿ ರುವ ಡಾ. ಮೋನಿಷಾ, ಮಹಿಳೆಯರಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಸಂಕಲ್ಪ ವ್ಯಕ್ತಪಡಿಸಿದ್ದಾರೆ. ಅವರ ಈ ಸಾಧನೆ ಚಿಕ್ಕಬಳ್ಳಾಪುರ ಜಿಲ್ಲೆಯ ಯುವಜನತೆ ಹಾಗೂ ಮಹಿಳೆಯರಿಗೆ ಪ್ರೇರಣೆಯಾಗಿದೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಪುಟ್ಟಣ್ಣ ಕಣಗಾಲ್‌ರ ಅಪೂರ್ಣ ಕನಸಿನ ಪೂರ್ಣತೆ; 'ಸಾವಿರ ಮೆಟ್ಟಿಲು' ಏರಿದ ಕನ್ನಡ ಸಿನಿಮಾ</title><link>https://vishwavani.news/movies/dr-praveen-eshwarappa-wretes-about-puttanna-kanagal-directorial-saavira-mettilu-movie-85795.html</link><guid>https://vishwavani.news/movies/dr-praveen-eshwarappa-wretes-about-puttanna-kanagal-directorial-saavira-mettilu-movie-85795.html</guid><pubDate>Thu, 06 Aug 2026 11:59:22 +0000</pubDate><description>&lt;![CDATA[ಕನ್ನಡ ಚಿತ್ರರಂಗದ ದಿಗ್ಗಜ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಅಕಾಲಿಕ ನಿಧನದಿಂದ ಅರ್ಧಕ್ಕೇ ನಿಂತಿದ್ದ 'ಸಾವಿರ ಮೆಟ್ಟಿಲು' ಚಿತ್ರವು ನಿರ್ಮಾಪಕ ಡಾ. ಡಿ. ಬಿ. ಬಸವೇಗೌಡರ ಹಠ ಹಾಗೂ ಶಿಷ್ಯ ಕೆ. ಎಸ್. ಎಲ್. ಸ್ವಾಮಿ ಅವರ ಪ್ರಯತ್ನದಿಂದ 2006ರಲ್ಲಿ ಪೂರ್ಣಗೊಂಡು ರಿಲೀಸ್‌ ಆಗಿ, ಇತಿಹಾಸ ಬರೆದಿತ್ತು. ಈ ಸಿನಿಮಾದ ಕುರಿತು ಡಾ. ಪ್ರವೀಣ್ ಈಶ್ವರಪ್ಪ ಬರೆದ ಲೇಖನ ಇಲ್ಲಿದೆ.]]&gt;</description><dc:creator>&lt;![CDATA[Avinash GR]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಮನರಂಜನೆ]]&gt;</category><category>&lt;![CDATA[ಸಿನಿಮಾ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/akl_1.original.jpg" class="attachment-large size-large wp-post-image" alt="ಪುಟ್ಟಣ್ಣ ಕಣಗಾಲ್‌ರ ಅಪೂರ್ಣ ಕನಸಿನ ಪೂರ್ಣತೆ; 'ಸಾವಿರ ಮೆಟ್ಟಿಲು' ಏರಿದ ಕನ್ನಡ ಸಿನಿಮಾ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="qp9fl"&gt;&lt;b&gt;- ಡಾ. ಪ್ರವೀಣ್ ಈಶ್ವರಪ್ಪ&lt;/b&gt;&lt;/p&gt;&lt;p data-block-key="f22q"&gt;ಕೆಲವು ಸಿನಿಮಾಗಳು ಬಿಡುಗಡೆಯಾದ ದಿನದಿಂದಲೇ ಇತಿಹಾಸವಾಗುತ್ತವೆ. ಇನ್ನು ಕೆಲವು, ಅವುಗಳ ನಿರ್ಮಾಣದ ಕಥೆಯಿಂದಲೇ ಇತಿಹಾಸದಲ್ಲಿ ಶಾಶ್ವತ ಸ್ಥಾನ ಪಡೆಯುತ್ತವೆ. "ಸಾವಿರ ಮೆಟ್ಟಿಲು" ಅಂತಹ ಅಪರೂಪದ ಚಿತ್ರ. ಅದು ಕೇವಲ ಒಂದು ಸಿನಿಮಾವಲ್ಲ; ಕನ್ನಡ ಚಿತ್ರರಂಗದ ಆತ್ಮವನ್ನು ಹೊತ್ತಿರುವ ಒಂದು ಕಾಲಘಟ್ಟದ ದಾಖಲೆ.&lt;/p&gt;&lt;p data-block-key="21nkr"&gt;ಮೊದಲಿಗೆ ಒಂದು ತಪ್ಪು ಕಲ್ಪನೆಯನ್ನು ದೂರ ಮಾಡಬೇಕು. 'ಸಾವಿರ ಮೆಟ್ಟಿಲು' ಯಾವುದೇ ಕಾದಂಬರಿಯನ್ನು ಆಧರಿಸಿದ ಚಿತ್ರವಲ್ಲ. ಇದು ಪಿ. ವಿ. ನಂಜರಾಜ ಅರಸ್ ಅವರ ಮೂಲ ಕಥೆ ಮತ್ತು ಚಿತ್ರಕಥೆ. ಆದರೆ ಕಥೆಯ ನಿರೂಪಣೆ, ಪಾತ್ರಗಳ ಆಳ ಹಾಗೂ ಸಂಭಾಷಣೆಗಳ ಸೊಗಸು—ಇವೆಲ್ಲವೂ ಪುಟ್ಟಣ್ಣ ಕಣಗಾಲ್ ಅವರ ಚಿತ್ರಗಳಲ್ಲಿದ್ದ ಸಾಹಿತ್ಯದ ಘಮವನ್ನು ನೆನಪಿಸುತ್ತವೆ. ಬಹುಶಃ ಅದಕ್ಕೇ ಅನೇಕರು ಇದನ್ನು ಕಾದಂಬರಿ ಆಧಾರಿತ ಚಿತ್ರವೆಂದು ಭಾವಿಸಿರುವುದು ಆಶ್ಚರ್ಯವೇನಲ್ಲ.&lt;/p&gt;&lt;h3 data-block-key="75app"&gt;&lt;b&gt;ಕಾಲವನ್ನು ಸೋಲಿಸಿದ ಸಿನಿಮಾ&lt;/b&gt;&lt;/h3&gt;&lt;p data-block-key="500ot"&gt;1970ರ ದಶಕದ ಕೊನೆಯಲ್ಲಿ ಪುಟ್ಟಣ್ಣ ಕಣಗಾಲ್ ಅವರು ಈ ಚಿತ್ರವನ್ನು ಕೈಗೆತ್ತಿಕೊಂಡರು. ಚಿತ್ರೀಕರಣದ ಬಹುಭಾಗ ಪೂರ್ಣಗೊಂಡಿತ್ತು. ಆದರೆ ನಿರ್ಮಾಣದ ಸಮಸ್ಯೆಗಳು, ಹಣಕಾಸಿನ ಅಡಚಣೆಗಳು ಮತ್ತು ವಿಧಿಯ ಕ್ರೂರ ಆಟ, ಪುಟ್ಟಣ್ಣ ಅವರ ಅಕಾಲಿಕ ನಿಧನ, ಚಿತ್ರವನ್ನು ಅರ್ಧದಲ್ಲೇ ನಿಲ್ಲಿಸಿತು. ಅಲ್ಲಿಗೆ ಸಿನಿಮಾ ಮುಗಿಯಿತು ಎಂದೇ ಭಾವಿಸಲಾಗಿತ್ತು. ಆದರೆ ಕೆಲವು ಕನಸುಗಳು ಸಾಯುವುದಿಲ್ಲ.&lt;/p&gt;&lt;p data-block-key="5j32e"&gt;ಚಿತ್ರದ ನಿರ್ಮಾಪಕ ಡಾ. ಡಿ. ಬಿ. ಬಸವೇಗೌಡ ಅವರು ಈ ಚಿತ್ರವನ್ನು ಮರೆತುಬಿಡಲಿಲ್ಲ. ವರ್ಷಗಳ ಕಾಲ ಚಿತ್ರದ ನೆಗೆಟಿವ್‌ಗಳನ್ನು ಭದ್ರವಾಗಿ ಸಂರಕ್ಷಿಸಿದರು. ಕೊನೆಗೆ ಪುಟ್ಟಣ್ಣ ಅವರ ಶಿಷ್ಯ ಕೆ. ಎಸ್. ಎಲ್. ಸ್ವಾಮಿ ಅವರ ನಿರ್ದೇಶನದಲ್ಲಿ ಉಳಿದ ಭಾಗಗಳನ್ನು ಚಿತ್ರೀಕರಿಸಿ, ಹಳೆಯ ದೃಶ್ಯಗಳೊಂದಿಗೆ ಜೋಡಿಸಿ, 2006ರಲ್ಲಿ ಚಿತ್ರವನ್ನು ಪ್ರೇಕ್ಷಕರ ಮುಂದೆ ತಂದರು. ಸುಮಾರು ನಾಲ್ಕು ದಶಕಗಳ ಅಂತರವನ್ನು ದಾಟಿ ಬಿಡುಗಡೆಯಾದ ಈ ಚಿತ್ರ, ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ಅಪರೂಪದ ಸಾಧನೆ.&lt;/p&gt;&lt;h3 data-block-key="bkt9j"&gt;&lt;b&gt;ಕಥೆಯ ಶಕ್ತಿ&lt;/b&gt;&lt;/h3&gt;&lt;p data-block-key="15la2"&gt;ಕಥೆಯ ಕೇಂದ್ರಬಿಂದು 'ಶಾಂತಿ'. ಪ್ರೀತಿ, ಅಧಿಕಾರದ ದುರುಪಯೋಗ, ತಪ್ಪು ಆರೋಪ, ಜೈಲು ಜೀವನ, ನ್ಯಾಯಕ್ಕಾಗಿ ನಡೆಯುವ ಹೋರಾಟ, ಈ ಎಲ್ಲದರ ನಡುವೆ ಸಾಗುವ ಕಥೆ ಇದು. ಇದು ಕೇವಲ ಒಂದು ನ್ಯಾಯಾಲಯದ ಕಥೆಯಲ್ಲ; ಸಮಾಜದಲ್ಲಿ ಸತ್ಯವು ಎಷ್ಟು ಮೆಟ್ಟಿಲುಗಳನ್ನು ಏರಬೇಕು ಎಂಬ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನ. ಇಂತಹ ಕಥೆಗಳು ಒಮ್ಮೆ ಕನ್ನಡ ಸಿನಿಮಾದ ಹೆಮ್ಮೆಯಾಗಿದ್ದವು.&lt;/p&gt;&lt;h3 data-block-key="f80og"&gt;&lt;b&gt;ನನ್ನನ್ನು ಕಾಡಿದ ಒಂದು ದೃಶ್ಯ&lt;/b&gt;&lt;/h3&gt;&lt;p data-block-key="e7lp5"&gt;ಈ ಚಿತ್ರವನ್ನು ನಾನು 2026ರಲ್ಲಿ ಯೂಟ್ಯೂಬ್‌ನಲ್ಲಿ ನೋಡಿದೆ. ನಾನು 1970ರ ದಶಕದಲ್ಲಿ ಜನಿಸಿದವನು. ಪುಟ್ಟಣ್ಣ ಕಣಗಾಲ್, ಸಿದ್ಧಲಿಂಗಯ್ಯ, ಭಾರ್ಗವ, ಶಂಕರ್ ನಾಗ್, ಗಿರೀಶ್ ಕಾಸರವಳ್ಳಿ ಅವರ ಸಿನಿಮಾಗಳನ್ನು ನೋಡುತ್ತಲೇ ಬೆಳೆದ ತಲೆಮಾರಿನವನಾಗಿ, 'ಸಾವಿರ ಮೆಟ್ಟಿಲು' ನೋಡುವುದು ಕೇವಲ ಒಂದು ಸಿನಿಮಾ ವೀಕ್ಷಣೆಯಾಗಿರಲಿಲ್ಲ. ಅದು ನನ್ನ ಬಾಲ್ಯದ ಕನ್ನಡ ಸಿನಿಮಾವನ್ನು ಮತ್ತೊಮ್ಮೆ ಬದುಕಿದ ಅನುಭವ. ಆ ಅನುಭವದಲ್ಲಿ ನನ್ನ ಮನಸ್ಸನ್ನು ಅತ್ಯಂತ ತಟ್ಟಿದ ಕ್ಷಣ ಒಂದೇ.&lt;/p&gt;&lt;h3 data-block-key="f3v"&gt;&lt;b&gt;ಜಯಂತಿ ಮತ್ತು ಕೆ. ಎಸ್. ಅಶ್ವತ್ ಅವರ ದೃಶ್ಯ&lt;/b&gt;&lt;/h3&gt;&lt;p data-block-key="83sbb"&gt;1970ರ ದಶಕದಲ್ಲಿ ಚಿತ್ರೀಕರಿಸಿದ ದೃಶ್ಯಗಳಲ್ಲಿ ತಂದೆ–ಮಗಳಾಗಿದ್ದ ಅವರು, ಹಲವು ದಶಕಗಳ ನಂತರವೂ ಅದೇ ಸಂಬಂಧವನ್ನು ಮುಂದುವರಿಸಿಕೊಂಡು ತೆರೆಯ ಮೇಲೆ ಕಾಣಿಸಿಕೊಂಡಾಗ, ಅದು ಕೇವಲ ಪಾತ್ರಗಳ ಪುನರಾಗಮನವಾಗಿರಲಿಲ್ಲ. ಅದು ಕಾಲವನ್ನೇ ದಾಟಿ ಬಂದ ಭಾವನೆಯಾಗಿತ್ತು. ವಯಸ್ಸು ಅವರ ಮುಖದಲ್ಲಿ ಗೋಚರಿಸಿರಬಹುದು, ಆದರೆ ಅಭಿನಯದ ನೈಜತೆ ಮಾತ್ರ ಬದಲಾಗಿರಲಿಲ್ಲ. ಆ ದೃಶ್ಯಗಳನ್ನು ನೋಡಿದಾಗ ಕಣ್ಣುಗಳು ಒದ್ದೆಯಾಗದೆ ಇರಲು ಸಾಧ್ಯವಾಗಲಿಲ್ಲ. ಇದು ಸಿನಿಮಾ ನೀಡಿದ ಅತ್ಯಂತ ದೊಡ್ಡ ಉಡುಗೊರೆ.&lt;/p&gt;&lt;h3 data-block-key="f0g6g"&gt;&lt;b&gt;ನನಗೆ ಸಣ್ಣದೊಂದು ಕೊರಗು&lt;/b&gt;&lt;/h3&gt;&lt;p data-block-key="39r49"&gt;ಈ ಚಿತ್ರವನ್ನು ಪೂರ್ಣಗೊಳಿಸುವ ಸಂದರ್ಭದಲ್ಲಿ ಕೆಲವು ಪಾತ್ರಗಳಿಗೆ ಹೊಸ ಕಲಾವಿದರನ್ನು ಆಯ್ಕೆ ಮಾಡುವುದು ಅನಿವಾರ್ಯವಾಗಿತ್ತು ಎಂಬುದನ್ನು ಅರ್ಥಮಾಡಿಕೊಳ್ಳಬಹುದು. ಆದರೂ, ಪ್ರೇಕ್ಷಕನಾಗಿ ನನಗೆ ಒಂದು ಸಣ್ಣ ಕೊರಗು ಉಳಿಯಿತು. ಉದಯಕುಮಾರ್ ಅವರ ಪಾತ್ರವನ್ನು ಮುಂದುವರಿಸಿದ ರಾಮಕೃಷ್ಣ ಮತ್ತು ವಜ್ರಮುನಿಯವರ ಪಾತ್ರವನ್ನು ನಿರ್ವಹಿಸಿದ ಸುಂದರ್ ರಾಜ್, ಮೂಲ ಕಲಾವಿದರ ಪರದೆಯ ವ್ಯಕ್ತಿತ್ವವನ್ನು ಸಂಪೂರ್ಣವಾಗಿ ನೆನಪಿಸುವಂತೆ ಕಾಣಲಿಲ್ಲ. ಅವರ ಅಭಿನಯದ ಬಗ್ಗೆ ಪ್ರಶ್ನೆಯಿಲ್ಲ; ಆದರೆ ಆ ಪಾತ್ರಗಳಿಗೆ ಮೂಲ ಕಲಾವಿದರ ದೇಹಭಾಷೆ, ಮುಖಚಹರೆ ಅಥವಾ ಪರದೆಯ ಛಾಯೆಯನ್ನು ಹೋಲುವ ಕಲಾವಿದರನ್ನು ಆಯ್ಕೆ ಮಾಡಿದ್ದರೆ, ಹಳೆಯ ಮತ್ತು ಹೊಸ ದೃಶ್ಯಗಳ ನಡುವಿನ ಅಂತರ ಇನ್ನಷ್ಟು ಕರಗುತ್ತಿತ್ತು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ.&lt;/p&gt;&lt;p data-block-key="dtpf6"&gt;&lt;a href="/movies/dr-rajkumar-puttanna-kanagal-vishnuvardhan-awards-for-the-year-2020-2021-announced-sara-govindu-jayamala-honored-66000.html"&gt;&lt;b&gt;2020-2021ನೇ ಸಾಲಿನ ಡಾ. ರಾಜ್‌ಕುಮಾರ್, ಪುಟ್ಟಣ್ಣ ಕಣಗಾಲ್, ವಿಷ್ಣುವರ್ಧನ್ ಪ್ರಶಸ್ತಿ ಪ್ರಕಟ; ಸಾ.ರಾ. ಗೋವಿಂದು,  ಜಯಮಾಲಾಗೆ ಗೌರವ&lt;/b&gt;&lt;/a&gt;&lt;/p&gt;&lt;h3 data-block-key="31i3a"&gt;&lt;b&gt;ನಾವು ಏನನ್ನು ಕಳೆದುಕೊಂಡಿದ್ದೇವೆ?&lt;/b&gt;&lt;/h3&gt;&lt;p data-block-key="aauq1"&gt;'ಸಾವಿರ ಮೆಟ್ಟಿಲು' ನೋಡಿದ ನಂತರ ನನ್ನ ಮನಸ್ಸಿನಲ್ಲಿ ಒಂದೇ ಪ್ರಶ್ನೆ ಉಳಿಯಿತು: ನಮ್ಮ ಕನ್ನಡ ಸಿನಿಮಾ ಯಾವ ತಿರುವಿನಲ್ಲಿ ಕಥೆಯನ್ನು ಕಳೆದುಕೊಂಡಿತು? ಒಂದು ಕಾಲದಲ್ಲಿ ಸಿನಿಮಾ ಎಂದರೆ ಕಥೆ. ಪಾತ್ರಗಳು ಬದುಕುತ್ತಿದ್ದವು, ಸಂಭಾಷಣೆಗಳು ಮನಸ್ಸಿನಲ್ಲಿ ಮನೆ ಮಾಡುತ್ತಿದ್ದವು. ಚಿತ್ರಮಂದಿರದಿಂದ ಹೊರಬಂದ ಮೇಲೂ ಆ ಪಾತ್ರಗಳು ನಮ್ಮೊಂದಿಗೆ ನಡೆಯುತ್ತಿದ್ದವು. ಇಂದು ತಂತ್ರಜ್ಞಾನ ಬೆಳೆದಿದೆ, ಕ್ಯಾಮೆರಾಗಳು ಬದಲಾಗಿವೆ, ಗ್ರಾಫಿಕ್ಸ್ ಬೆಳೆದಿವೆ. ಆದರೆ ಕಥೆ? ಸಂಭಾಷಣೆ? ಪಾತ್ರಗಳ ಆತ್ಮ? ಇತ್ತೀಚಿನ ಅನೇಕ ಸಿನಿಮಾಗಳನ್ನು ನೋಡಿದಾಗ, ದೃಶ್ಯ ವೈಭವ ಹೆಚ್ಚಾಗಿದೆ; ಆದರೆ ಕಥೆಯ ಆಳ ಕಡಿಮೆಯಾಗಿದೆ ಎನ್ನುವ ಭಾವನೆ ಮೂಡುತ್ತದೆ.&lt;/p&gt;&lt;p data-block-key="fjriu"&gt;ಎಲ್ಲ ಚಿತ್ರಗಳೂ ಹಾಗೆ ಎಂದು ಹೇಳುವುದು ನ್ಯಾಯವಲ್ಲ, ಇಂದಿಗೂ ಉತ್ತಮ ಸಿನಿಮಾಗಳು ಬರುತ್ತಿವೆ. ಆದರೆ ಗಟ್ಟಿಯಾದ ಕಥೆ ಮತ್ತು ಸಾಹಿತ್ಯದ ಸುವಾಸನೆ ಹೊಂದಿದ್ದ ಚಿತ್ರಗಳ ಸಂಖ್ಯೆ ಹಿಂದೆ ಇದ್ದಷ್ಟಿಲ್ಲ ಎಂಬ ಕೊರಗು ಅನೇಕ ಹಳೆಯ ಸಿನಿರಸಿಕರ ಮನದಲ್ಲಿದೆ. ಬಹುಶಃ ಅದಕ್ಕೇ 'ಸಾವಿರ ಮೆಟ್ಟಿಲು' ನೋಡಿದಾಗ, ನಾವು ಒಂದು ಸಿನಿಮಾವನ್ನು ನೋಡುತ್ತಿರಲಿಲ್ಲ, ಬದಲಾಗಿ ಕನ್ನಡ ಚಿತ್ರರಂಗದ ಸುವರ್ಣಯುಗವನ್ನು ಮತ್ತೆ ಅನುಭವಿಸುತ್ತಿದ್ದೆವು.‌&lt;/p&gt;&lt;p data-block-key="dgf7t"&gt;&lt;/p&gt;&lt;img alt="Dr Praveen Eshwarappa" class="richtext-image left" height="527" src="https://cdn.vishwavani.news/media/images/WhatsApp_Image_2026-08-06_at_2.18.01_PM.width-500.jpg" width="500"&gt;&lt;p data-block-key="385gd"&gt;&lt;/p&gt;&lt;p data-block-key="hqoa"&gt;'ಸಾವಿರ ಮೆಟ್ಟಿಲು' ಕನ್ನಡ ಸಿನಿಮಾದಲ್ಲಿ ಒಂದು ಅಪೂರ್ಣ ಚಿತ್ರದ ಪೂರ್ಣತೆ ಮಾತ್ರವಲ್ಲ. ಅದು ಒಬ್ಬ ನಿರ್ದೇಶಕನ ಕನಸಿಗೆ ಸಲ್ಲಿಸಿದ ಗೌರವ, ಒಬ್ಬ ನಿರ್ಮಾಪಕನ ಹಠಕ್ಕೆ ದೊರೆತ ಜಯ, ಒಂದು ತಲೆಮಾರಿನ ಕಲಾವಿದರಿಗೆ ಸಲ್ಲಿಸಿದ ನಮನ ಮತ್ತು ನಮ್ಮಂತಹ ಹಳೆಯ ಸಿನಿರಸಿಕರಿಗೆ ಕಳೆದುಹೋದ ಕಾಲವನ್ನು ಮತ್ತೊಮ್ಮೆ ಮುಟ್ಟುವ ಅಪರೂಪದ ಅವಕಾಶ.&lt;/p&gt;&lt;p data-block-key="an7v7"&gt;ಚಿತ್ರದ ಕೊನೆಯ ಶೀರ್ಷಿಕೆಗಳು ಹರಿದಾಗ, ನನ್ನ ಮನಸ್ಸಿನಲ್ಲಿ ಒಂದು ವಾಕ್ಯ ಮಾತ್ರ ಉಳಿಯಿತು:&lt;/p&gt;&lt;p data-block-key="3pfnp"&gt;"ಪುಟ್ಟಣ್ಣ ಕಣಗಾಲ್ ದೇಹವಾಗಿ ನಮ್ಮೊಂದಿಗಿಲ್ಲ, ಆದರೆ ಅವರು ಹೇಳಿದ ಕಥೆಗಳು ಇನ್ನೂ ನಮ್ಮೊಳಗೆ ಜೀವಂತವಾಗಿವೆ. ಆ ಕಥೆಗಳು ಏರಿದ ಸಾವಿರ ಮೆಟ್ಟಿಲುಗಳನ್ನು ಕನ್ನಡ ಸಿನಿಮಾ ಎಂದಿಗೂ ಮರೆಯುವುದಿಲ್ಲ."&lt;/p&gt;
&lt;/div&gt;
&lt;/p&gt;]]&gt;</content:encoded></item><item><title>Chikkaballapur News: ಪಸುಪಲೋಡು ಸರ್ಕಾರಿ ಶಾಲೆಗೆ ಎಸ್‌ಡಿಎಂಸಿ ನೂತನ ಪದಾಧಿಕಾರಿಗಳ ಆಯ್ಕೆ</title><link>https://vishwavani.news/karnataka/chikkaballapur/selection-of-new-sdmc-office-bearers-for-pasupalodu-government-school-85794.html</link><guid>https://vishwavani.news/karnataka/chikkaballapur/selection-of-new-sdmc-office-bearers-for-pasupalodu-government-school-85794.html</guid><pubDate>Thu, 06 Aug 2026 11:45:54 +0000</pubDate><description>&lt;![CDATA[ತಾಲೂಕಿನ ಪಸುಪಲೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಪೋಷಕರ ಸಾಮಾನ್ಯ ಸಭೆಯಲ್ಲಿ ಮುಂದಿನ ಮೂರು ವರ್ಷಗಳ ಅವಧಿಗೆ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್‌ಡಿಎಂಸಿ)ಯ 18 ಸದಸ್ಯರನ್ನು ಆಯ್ಕೆ ಮಾಡಲಾಯಿತು. ಆಯ್ಕೆಯಾದ ಸದಸ್ಯರು ಸಭೆ ನಡೆಸಿ, ಸುಮತಿ ಅವರನ್ನು ಎಸ್‌ಡಿಎಂಸಿ ಅಧ್ಯಕ್ಷರಾಗಿ ಹಾಗೂ ಜಿ.ವಿ. ವೆಂಕಟೇಶಪ್ಪ ಅವರನ್ನು ಉಪಾಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ ಮಾಡಿದರು.]]&gt;</description><dc:creator>&lt;![CDATA[Ashok Nayak]]&gt;</dc:creator><category>&lt;![CDATA[ಚಿಕ್ಕಬಳ್ಳಾಪುರ]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕರ್ನಾಟಕ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/4cbpm7s_ok.original.jpg" class="attachment-large size-large wp-post-image" alt="Chikkaballapur News: ಪಸುಪಲೋಡು ಸರ್ಕಾರಿ ಶಾಲೆಗೆ ಎಸ್‌ಡಿಎಂಸಿ ನೂತನ ಪದಾಧಿಕಾರಿಗಳ ಆಯ್ಕೆ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="mizo3"&gt;&lt;b&gt;ಚಿಕ್ಕಬಳ್ಳಾಪುರ:&lt;/b&gt; ತಾಲೂಕಿನ ಪಸುಪಲೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಪೋಷಕರ ಸಾಮಾನ್ಯ ಸಭೆಯಲ್ಲಿ ಮುಂದಿನ ಮೂರು ವರ್ಷಗಳ ಅವಧಿಗೆ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್‌ಡಿಎಂಸಿ)ಯ 18 ಸದಸ್ಯರನ್ನು ಆಯ್ಕೆ ಮಾಡಲಾಯಿತು.&lt;/p&gt;&lt;p data-block-key="fful7"&gt;ಆಯ್ಕೆಯಾದ ಸದಸ್ಯರು ಸಭೆ ನಡೆಸಿ, &lt;b&gt;ಸುಮತಿ&lt;/b&gt; ಅವರನ್ನು ಎಸ್‌ಡಿಎಂಸಿ ಅಧ್ಯಕ್ಷರಾಗಿ ಹಾಗೂ &lt;b&gt;ಜಿ.ವಿ. ವೆಂಕಟೇಶಪ್ಪ&lt;/b&gt; ಅವರನ್ನು ಉಪಾಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ ಮಾಡಿದರು.&lt;/p&gt;&lt;p data-block-key="c8p56"&gt;&lt;b&gt;ಇದನ್ನೂ ಓದಿ:&lt;/b&gt; &lt;a href="/karnataka/chikkaballapur/registration-begins-for-bharat-jodo-youth-associations-85786.html"&gt;Chikkaballapur News: ಭಾರತ್ ಜೋಡೋ ಯುವ ಸಂಘಗಳಿಗೆ ನೋಂದಣಿ ಆರಂಭ&lt;/a&gt;&lt;/p&gt;&lt;p data-block-key="be1l0"&gt;ಸಮಿತಿಯ ಸದಸ್ಯರಾಗಿ ಸುಮತಿ, ಗೀತಾ, ಶ್ರೀನಾಥ್, ನಾಗಮಣಿ, ಗಣೇಶ್ ಸಿಂಗ್, ಚಲಪತಿ, ಗೀತಾ, ನಳಿನ, ಗಂಗೆಶ್ ಜಿ.ಆರ್., ವೆಂಕಟೇಶಪ್ಪ ಜಿ.ವಿ., ಆನಂದ್, ಸರಸ್ವತಿ, ಶೈಲಜ, ಮಂಜುನಾಥ್, ರೇಣುಕಾ, ಗೀತಾ, ಗಂಗಮ್ಮ ಹಾಗೂ ಕೆ.ಆರ್. ಶ್ರೀನಿವಾಸ್ ಆಯ್ಕೆಯಾದರು.&lt;/p&gt;&lt;p data-block-key="chnb9"&gt;ಸಭೆಯಲ್ಲಿ ಪ್ರೌಢಶಾಲಾ ಶಿಕ್ಷಣ ಸಂಯೋಜಕರಾದ &lt;b&gt;ಶ್ರೀನಿವಾಸ್&lt;/b&gt; ಅವರು ಎಸ್‌ಡಿಎಂಸಿ ಸದಸ್ಯರ ಆಯ್ಕೆ ಪ್ರಕ್ರಿಯೆ ಹಾಗೂ ನಿಯಮಾವಳಿಗಳ ಕುರಿತು ವಿವರಿಸಿ, ಪಾರದರ್ಶಕವಾಗಿ ಚುನಾವಣೆ ನಡೆಸಿಕೊಟ್ಟರು.&lt;/p&gt;&lt;p data-block-key="2plc8"&gt;ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ &lt;b&gt;ವಿ. ಶ್ರೀರಾಮಪ್ಪ&lt;/b&gt;, ಸಹಶಿಕ್ಷಕಿಯರಾದ &lt;b&gt;ಉಮಾ ದೇವಿ&lt;/b&gt; ಹಾಗೂ &lt;b&gt;ಷಾಜೀಯ ಪರ್ವೀನ್&lt;/b&gt;, ಪೋಷಕರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಜೀ ಕನ್ನಡದಲ್ಲಿ ಹೊಸ ರಿಯಾಲಿಟಿ ಶೋ 'ಹಳ್ಳಿ ಪವರ್ ರಿಲೋಡೆಡ್'; ಅಕುಲ್ ಬಾಲಾಜಿ ನಿರೂಪಣೆ, ಆಗಸ್ಟ್ 8ರಿಂದ ಪ್ರಸಾರ!</title><link>https://vishwavani.news/movies/akul-balaji-halli-power-reloaded-reality-show-contestants-name-and-premiere-date-85793.html</link><guid>https://vishwavani.news/movies/akul-balaji-halli-power-reloaded-reality-show-contestants-name-and-premiere-date-85793.html</guid><pubDate>Thu, 06 Aug 2026 11:34:58 +0000</pubDate><description>&lt;![CDATA[ಜೀ ಕನ್ನಡ ವಾಹಿನಿಯು ‘ಹಳ್ಳಿ ಪವರ್ ರಿಲೋಡೆಡ್’ ಎಂಬ ವಿನೂತನ ರಿಯಾಲಿಟಿ ಶೋವನ್ನು ತರಲು ಸಂಪೂರ್ಣ ಸಜ್ಜಾಗಿದೆ. ಆಗಸ್ಟ್ 8ರಿಂದ ಪ್ರಸಾರವಾಗಲಿರುವ ಈ ಕಾರ್ಯಕ್ರಮವನ್ನು ಜನಪ್ರಿಯ ನಿರೂಪಕ ಅಕುಲ್ ಬಾಲಾಜಿ ನಡೆಸಿಕೊಡಲಿದ್ದಾರೆ. ನಗರದ ಐಷಾರಾಮಿ ವಾತಾವರಣದಲ್ಲಿ ಬೆಳೆದ 16 ಮಹಿಳಾ ಸ್ಪರ್ಧಿಗಳು 'ಹಳ್ಳಿ ಪವರ್' ಪಟ್ಟಕ್ಕಾಗಿ ಫೈಟ್‌ ಮಾಡಲಿದ್ದಾರೆ.]]&gt;</description><dc:creator>&lt;![CDATA[Avinash GR]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಮನರಂಜನೆ]]&gt;</category><category>&lt;![CDATA[ಸಿನಿಮಾ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/akl.original.jpg" class="attachment-large size-large wp-post-image" alt="ಜೀ ಕನ್ನಡದಲ್ಲಿ ಹೊಸ ರಿಯಾಲಿಟಿ ಶೋ 'ಹಳ್ಳಿ ಪವರ್ ರಿಲೋಡೆಡ್'; ಅಕುಲ್ ಬಾಲಾಜಿ ನಿರೂಪಣೆ, ಆಗಸ್ಟ್ 8ರಿಂದ ಪ್ರಸಾರ!" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="reovl"&gt;ಕಿರುತೆರೆ ಪ್ರೇಕ್ಷಕರಿಗೆ ಸದಾ ಹೊಸತನದ ಮನರಂಜನೆ ನೀಡುವ 'ಜೀ ಕನ್ನಡ' ವಾಹಿನಿಯು ಇದೀಗ 'ಹಳ್ಳಿ ಪವರ್ ರಿಲೋಡೆಡ್' ಎಂಬ ವಿನೂತನ ರಿಯಾಲಿಟಿ ಶೋವನ್ನು ಪರಿಚಯಿಸಲು ಸಂಪೂರ್ಣ ಸಜ್ಜಾಗಿದೆ. ಗ್ರಾಮೀಣ ಕರ್ನಾಟಕದ ಭವ್ಯ ಸಂಸ್ಕೃತಿ, ಬದುಕಿನ ಸೊಗಡು ಹಾಗೂ ಹಳ್ಳಿಗಾಡಿನ ಸವಾಲುಗಳನ್ನು ಅನಾವರಣಗೊಳಿಸುವ ಈ ಕಾರ್ಯಕ್ರಮವು ಪ್ರೇಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿದೆ. ಕರ್ನಾಟಕದ ಜನಪ್ರಿಯ ನಿರೂಪಕ ಅಕುಲ್ ಬಾಲಾಜಿ ಅವರು ಈ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.&lt;/p&gt;&lt;h3 data-block-key="8vb38"&gt;&lt;b&gt;ಟಿವಿ, ಮೊಬೈಲ್ ಇಲ್ಲ; ಸಿಟಿ ಹುಡುಗಿಯರಿಗೆ ಹಳ್ಳಿ ಜೀವನ!&lt;/b&gt;&lt;/h3&gt;&lt;p data-block-key="47r6m"&gt;ನಗರದ ಐಷಾರಾಮಿ ವಾತಾವರಣದಲ್ಲಿ ಬೆಳೆದ 16 ಜನ ಮಹಿಳಾ ಸ್ಪರ್ಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಇವರಿಗೆ ಟೆಲಿವಿಷನ್, ಮೊಬೈಲ್, ಇಂಟರ್ನೆಟ್ ಸೇರಿದಂತೆ ಯಾವುದೇ ಆಧುನಿಕ ಸೌಲಭ್ಯಗಳು ಸಿಗುವುದಿಲ್ಲ. ಕುಟುಂಬದವರಿಂದ ಸಂಪೂರ್ಣವಾಗಿ ದೂರವಿದ್ದು, ಹಳ್ಳಿಯ ಸರಳ ಹಾಗೂ ಕಠಿಣ ಜೀವನಕ್ಕೆ ಒಗ್ಗಿಕೊಳ್ಳಬೇಕಾಗುತ್ತದೆ. ಕೃಷಿ ಕೆಲಸ, ಜಾನುವಾರುಗಳ ಪಾಲನೆ-ಪೋಷಣೆ, ಸೌದೆ ಒಲೆಯ ಅಡುಗೆ ಹಾಗೂ ಮನೆಯ ದಿನನಿತ್ಯದ ಜವಾಬ್ದಾರಿಗಳನ್ನು ನಿರ್ವಹಿಸುವ ಮೂಲಕ ಸ್ಪರ್ಧಿಗಳು ತಮ್ಮ ದೈಹಿಕ ಸಾಮರ್ಥ್ಯ ಮತ್ತು ಮಾನಸಿಕ ಸ್ಥಿರತೆಯನ್ನು ಪರೀಕ್ಷಿಸಿಕೊಳ್ಳಲಿದ್ದಾರೆ.&lt;/p&gt;&lt;p data-block-key="49nqa"&gt;&lt;a href="/movies/zee-kannada-dance-karnataka-dance-super-mom-audition-date-time-and-place-85271.html"&gt;&lt;b&gt;ರಾಜ್ಯದ ಅಮ್ಮಂದಿರಿಗಾಗಿ ಜೀ ಕನ್ನಡದಲ್ಲಿ ಬರಲಿದೆ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ - ಸೂಪರ್ ಮಾಮ್’ ಶೋ; ಆಡಿಷನ್ ಎಲ್ಲಿ, ಯಾವಾಗ?&lt;/b&gt;&lt;/a&gt;&lt;/p&gt;&lt;h3 data-block-key="8lml2"&gt;ಇವರೇ ನೋಡಿ 16 ಜನ ಸ್ಪರ್ಧಿಗಳು&lt;/h3&gt;&lt;p data-block-key="fm43r"&gt;ಸ್ನೇಹ ಎಚ್&lt;/p&gt;&lt;p data-block-key="4saae"&gt;ಬಿ ಬಿ ಹಾಜಿರಾ&lt;/p&gt;&lt;p data-block-key="336mf"&gt;ಏಂಜೆಲೀನ್&lt;/p&gt;&lt;p data-block-key="ec0ku"&gt;ರಿಗ್ಮ್ಯಾ ರಾಜಶ್ರೀ&lt;/p&gt;&lt;p data-block-key="6ddpc"&gt;ದರ್ಶಿನಿ ಗೌಡ&lt;/p&gt;&lt;p data-block-key="e2tpl"&gt;ಪೂಜಾ ಚಂದ್ರಶೇಖರ್&lt;/p&gt;&lt;p data-block-key="7mm2"&gt;ಅನಿಷಾ ಲಕ್ಷ್ಮಣ್&lt;/p&gt;&lt;p data-block-key="2vlrc"&gt;ಸುಷ್ಮಾ ತೊಗರೆ&lt;/p&gt;&lt;p data-block-key="4kj6n"&gt;ತೇಜಸ್ವಿನಿ&lt;/p&gt;&lt;p data-block-key="5avld"&gt;ಅಂಕಿತ ದೇವ್&lt;/p&gt;&lt;p data-block-key="c2es1"&gt;ಪೂರ್ವಿಕ ಆರ್ ಕೆ&lt;/p&gt;&lt;p data-block-key="ea1gs"&gt;ಚಿತ್ರಶ್ರೀ&lt;/p&gt;&lt;p data-block-key="9efk0"&gt;ಪೂರ್ವ ವೈ&lt;/p&gt;&lt;p data-block-key="emghv"&gt;ರಚನಾ&lt;/p&gt;&lt;p data-block-key="fr6am"&gt;ನಿಖಿತಾ ಸ್ವಾಮಿ&lt;/p&gt;&lt;p data-block-key="4c11b"&gt;ನಿವೇದಿತಾ ರೈ&lt;/p&gt;&lt;h3 data-block-key="9k751"&gt;&lt;b&gt;ಹಳ್ಳಿ 'ಪವರ್' ಪಟ್ಟಕ್ಕಾಗಿ ಪೈಪೋಟಿ&lt;/b&gt;&lt;/h3&gt;&lt;p data-block-key="7ug26"&gt;ನಗರದ ಸ್ಪರ್ಧಿಗಳು ಹಳ್ಳಿಯ ವಾತಾವರಣಕ್ಕೆ ಹೊಂದಿಕೊಳ್ಳುವಾಗ ಎದುರಾಗುವ ಸವಾಲುಗಳು, ಅವರ ನಡುವಿನ ಸ್ನೇಹ, ವಿರೋಧ, ಗೆಲುವು-ಸೋಲು ಮತ್ತು ಆತ್ಮವಿಶ್ವಾಸದ ಪಯಣವನ್ನು ಈ ಶೋ ಅನಾವರಣಗೊಳಿಸಲಿದೆ. ಅಂತಿಮವಾಗಿ 'ಹಳ್ಳಿ ಪವರ್' ಪಟ್ಟವನ್ನು ತನ್ನದಾಗಿಸಿಕೊಳ್ಳಲು ಪ್ರತಿಯೊಬ್ಬ ಸ್ಪರ್ಧಿಯೂ ಕಠಿಣ ಶ್ರಮ ಹಾಕಲಿದ್ದು, ಈ ರಿಯಾಲಿಟಿ ಶೋ ಪ್ರೇಕ್ಷಕರಿಗೆ ಪೂರ್ಣ ಪ್ರಮಾಣದ ಮನರಂಜನೆಯ ಜೊತೆಗೆ ಸ್ಫೂರ್ತಿಯನ್ನೂ ನೀಡಲಿದೆ.&lt;/p&gt;&lt;p data-block-key="3s48b"&gt;ಆಗಸ್ಟ್ 8ರಿಂದ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಈ ಶೋ ಶುರುವಾಗಲಿದ್ದು, ಸೋಮವಾರದಿಂದ ಶುಕ್ರವಾರದ ತನಕ ರಾತ್ರಿ 9.30ಕ್ಕೆ ಪ್ರಸಾರವಾಗಲಿದೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ರಾಜ್ಯದ ಸಾಧಕ ವೈದ್ಯರಿಗೆ ವಿಶ್ವವಾಣಿ ಟಿವಿಯ ‘ಪ್ರೈಡ್ ಆಫ್ ಹೆಲ್ತ್‌ಕೇರ್ʼ ಅವಾರ್ಡ್; Photo Gallery ಇಲ್ಲಿದೆ</title><link>https://vishwavani.news/photo-gallery/vishwavani-tvs-pride-of-healthcare-award-presented-to-achievers-in-the-healthcare-sector-85791.html</link><guid>https://vishwavani.news/photo-gallery/vishwavani-tvs-pride-of-healthcare-award-presented-to-achievers-in-the-healthcare-sector-85791.html</guid><pubDate>Thu, 06 Aug 2026 11:33:34 +0000</pubDate><description>&lt;![CDATA[Pride of Healthcare Award: ಆರೋಗ್ಯ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ವೈದ್ಯರು ಹಾಗೂ ಆರೋಗ್ಯ ವಲಯದ ಸಾಧಕರನ್ನು ಗುರುತಿಸಿ ವಿಶ್ವವಾಣಿ ಟಿವಿ ಬೆಂಗಳೂರಿನಲ್ಲಿ ಗೌರವಿಸಿದೆ. ರಾಜ್ಯದ ವಿವಿಧ ಕಡೆಗಳಿಂದ ಆಗಮಿಸಿದ ವೈದ್ಯಕೀಯ ಸಾಧಕರಿಗೆ ಪ್ರೈಡ್ ಆಫ್ ಹೆಲ್ತ್‌ಕೇರ್ ಅವಾರ್ಡ್‌ ಮಾಡಲಾಯಿತು. ಬುಧವಾರ (ಆಗಸ್ಟ್‌ 5) ಸಂಜೆ ಬೆಂಗಳೂರಿನ ರಾಡಿಸನ್‌ ಬ್ಲೂ ಹೋಟೆಲ್‌ನಲ್ಲಿ ನಡೆಯಿತು. ಇಲ್ಲಿದೆ ಪ್ರಶಸ್ತಿ ಪುರಸ್ಕೃತರ ವಿವರ.]]&gt;</description><dc:creator>&lt;![CDATA[Ramesh Ballamoole]]&gt;</dc:creator><category>&lt;![CDATA[ಬೆಂಗಳೂರು ನಗರ]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕರ್ನಾಟಕ]]&gt;</category><category>&lt;![CDATA[ಫೋಟೋ ಗ್ಯಾಲರಿ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Pride_of_Healthcare_Award_2E0VPSa.original.jpg" class="attachment-large size-large wp-post-image" alt="ರಾಜ್ಯದ ಸಾಧಕ ವೈದ್ಯರಿಗೆ ವಿಶ್ವವಾಣಿ ಟಿವಿಯ ‘ಪ್ರೈಡ್ ಆಫ್ ಹೆಲ್ತ್‌ಕೇರ್ʼ ಅವಾರ್ಡ್; Photo Gallery ಇಲ್ಲಿದೆ" /&gt;&lt;/figure&gt;&lt;p&gt;
&lt;/p&gt;]]&gt;</content:encoded></item><item><title>'ನಿರ್ಲಕ್ಷಿಸಲಾಗಿದೆ ಆದರೆ ಅಂತಿಮವಾಗಿಲ್ಲ'; ಶಮಿ ಕಮ್‌ಬ್ಯಾಕ್‌ ಬಗ್ಗೆ ಕೋಚ್‌ ವಿಶ್ವಾಸ</title><link>https://vishwavani.news/sports/ignored-but-not-finished-mohammed-shami-targeting-2027-odi-world-cup-swansong-85788.html</link><guid>https://vishwavani.news/sports/ignored-but-not-finished-mohammed-shami-targeting-2027-odi-world-cup-swansong-85788.html</guid><pubDate>Thu, 06 Aug 2026 11:13:01 +0000</pubDate><description>&lt;![CDATA[Mohammed Shami: ಕಳೆದ ಋತುವಿನಲ್ಲಿ ಏಳು ರಣಜಿ ಟ್ರೋಫಿ ಪಂದ್ಯಗಳಲ್ಲಿ 37 ವಿಕೆಟ್‌ಗಳನ್ನು ಮತ್ತು ಏಳು ವಿಜಯ್ ಹಜಾರೆ ಟ್ರೋಫಿ ಪಂದ್ಯಗಳಲ್ಲಿ 15 ವಿಕೆಟ್‌ ಪಡೆದಿದ್ದರು. ಹೀಗಿದ್ದೂ ಶಮಿಯನ್ನು ರಾಷ್ಟ್ರೀಯ ತಂಡದಿಂದ ಕೈ ಬಿಡುತ್ತಿರುವುದು ಆಯ್ಕೆ ಸಮಿತಿಯನ್ನು ಮೌಲ್ಯಮಾಪನಕ್ಕೆ ಒಳಗಾಗಿಸಿದೆ.]]&gt;</description><dc:creator>&lt;![CDATA[Abhilash BC]]&gt;</dc:creator><category>&lt;![CDATA[ಕ್ರಿಕೆಟ್‌]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕ್ರೀಡೆ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Mohammed_Shami_9.original.jpg" class="attachment-large size-large wp-post-image" alt="'ನಿರ್ಲಕ್ಷಿಸಲಾಗಿದೆ ಆದರೆ ಅಂತಿಮವಾಗಿಲ್ಲ'; ಶಮಿ ಕಮ್‌ಬ್ಯಾಕ್‌ ಬಗ್ಗೆ ಕೋಚ್‌ ವಿಶ್ವಾಸ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="sjs7z"&gt;&lt;b&gt;ಕೋಲ್ಕತಾ, ಆ.6: &lt;/b&gt;ಮತ್ತೊಂದು ಪ್ರಭಾವಶಾಲಿ ದೇಶೀಯ ಋತುವಿನ ಹೊರತಾಗಿಯೂ ರಾಷ್ಟ್ರೀಯ ತಂಡದಿಂದ ಹೊರಗುಳಿದ ಮತ್ತು ನಿರ್ಲಕ್ಷಿಸಲ್ಪಟ್ಟ ಮೊಹಮ್ಮದ್ ಶಮಿ ಭಾರತೀಯ ತಂಡಕ್ಕೆ ಮರಳುವ ಭರವಸೆಯನ್ನು ಬಿಟ್ಟುಕೊಡಲು ನಿರಾಕರಿಸಿದ್ದಾರೆ. &lt;/p&gt;&lt;p data-block-key="7rlat"&gt;ಮುಂದಿನ ತಿಂಗಳು 36 ವರ್ಷ ತುಂಬಲಿರುವ ವೇಗದ ಬೌಲರ್ ಶಮಿ, 2025 ರಲ್ಲಿ ಚಾಂಪಿಯನ್ಸ್ ಟ್ರೋಫಿಯ ನಂತರ ಭಾರತವನ್ನು ಪ್ರತಿನಿಧಿಸಿಲ್ಲ. 2015 ಮತ್ತು 2023 ರ ನಡುವಿನ ಅವಧಿಯಲ್ಲಿ ಭಾರತದ ವೇಗದ ಬೌಲಿಂಗ್ ಘಟಕದ ಹಿಂದಿನ ಪ್ರೇರಕ ಶಕ್ತಿಗಳಲ್ಲಿ ಒಬ್ಬರಾದ ಶಮಿ ಅವರ ಅಂತರರಾಷ್ಟ್ರೀಯ ವೃತ್ತಿಜೀವನದ ಅಂತಿಮ ಅಧ್ಯಾಯವು ಭಾರತೀಯ ಕ್ರಿಕೆಟ್‌ನಲ್ಲಿ ಉತ್ತರಿಸಲಾಗದ ಅತಿದೊಡ್ಡ ಪ್ರಶ್ನೆಗಳಲ್ಲಿ ಒಂದಾಗಿದೆ.&lt;/p&gt;&lt;p data-block-key="fs0mo"&gt;ಶಮಿ ಪೂರ್ಣ ಫಿಟ್ನೆಸ್ ಪಡೆದುಕೊಂಡು ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದರೂ, ಆಯ್ಕೆದಾರರು ಅವರನ್ನು ನಿರಂತರವಾಗಿ ಕಡೆಗಣಿಸುತ್ತಲೇ ಬಂದಿದ್ದಾರೆ. ಆದರೂ, ಅವರ ಹೆಸರು ಬಂದಾಗಲೆಲ್ಲಾ ಭಾರತದ ಆಯ್ಕೆ ಸಮಿತಿ ಅವರನ್ನು ಸಂಪೂರ್ಣವಾಗಿ ಕೈಬಿಟ್ಟಿದೆ.&lt;/p&gt;&lt;p data-block-key="db0cb"&gt;ಶಮಿ ಅವರ ಅತ್ಯಂತ ಆತ್ಮೀಯ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಅವರು ಈ ವರ್ಷದ ಆರಂಭದಲ್ಲಿ ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೂ ಮುನ್ನ ಶಮಿ ಅವರ ಭವಿಷ್ಯದ ಹೇಳಿಕೆಯೊಂದನ್ನು ನೀಡಿದ್ದರು. &lt;/p&gt;&lt;p data-block-key="3rped"&gt;"ಶಮಿ ಈ ವರ್ಷ ದೇಶೀಯ ಸರಣಿಯನ್ನು ಆಡಿದ್ದಾರೆಂದು ನನಗೆ ತಿಳಿದಿದೆ. ಆದರೆ ನನಗೆ ಸಿಕ್ಕಿರುವ ಮಾಹಿತಿಯ ಪ್ರಕಾರ, ಈ ಹಂತದಲ್ಲಿ ಅವರು ಟಿ20 ಕ್ರಿಕೆಟ್‌ಗೆ ಸಿದ್ಧರಾಗಿಲ್ಲ" ಎಂದು ಅಗರ್ಕರ್ ಹೇಳಿದ್ದರು.&lt;/p&gt;&lt;p data-block-key="298lt"&gt;ಕಳೆದ ಋತುವಿನಲ್ಲಿ ಏಳು ರಣಜಿ ಟ್ರೋಫಿ ಪಂದ್ಯಗಳಲ್ಲಿ 37 ವಿಕೆಟ್‌ಗಳನ್ನು ಮತ್ತು ಏಳು ವಿಜಯ್ ಹಜಾರೆ ಟ್ರೋಫಿ ಪಂದ್ಯಗಳಲ್ಲಿ 15 ವಿಕೆಟ್‌ ಪಡೆದಿದ್ದರು. ಹೀಗಿದ್ದೂ ಅವರನ್ನು ರಾಷ್ಟ್ರೀಯ ತಂಡದಿಂದ ಕೈ ಬಿಡುತ್ತಿರುವುದು ಆಯ್ಕೆ ಸಮಿತಿಯನ್ನು ಮೌಲ್ಯಮಾಪನಕ್ಕೆ ಒಳಗಾಗಿಸಿದೆ.&lt;/p&gt;&lt;p data-block-key="7m71t"&gt;&lt;a href="/sports/india-vs-sri-lanka-live-streaming-warm-up-match-2026-preview-when-and-where-to-watch-practice-match-85761.html"&gt;ನಾಳೆಯಿಂದ ಭಾರತ-ಶ್ರೀಲಂಕಾ ಮೂರು ದಿನಗಳ ಅಭ್ಯಾಸ ಪಂದ್ಯ ಆರಂಭ&lt;/a&gt;&lt;/p&gt;&lt;p data-block-key="fpa66"&gt;ಪದೇ ಪದೇ ಎದುರಿಸಿದ ನಿರ್ಲಕ್ಷ್ಯಗಳ ಮಧ್ಯೆಯೂ ಅನುಭವಿ ವೇಗಿ ಭಾರತ ತಂಡಕ್ಕೆ ಮರಳುವ ಭರವಸೆಯನ್ನು ಹೊಂದಿದ್ದಾರೆ ಮತ್ತು ಮತ್ತೊಂದು ದೇಶೀಯ ಋತುವಿಗೆ ಸದ್ದಿಲ್ಲದೆ ತಯಾರಿ ನಡೆಸುತ್ತಿದ್ದಾರೆ. ಅವರ ಬಾಲ್ಯದ ತರಬೇತುದಾರ ಮೊಹಮ್ಮದ್ ಬದ್ರುದ್ದೀನ್ ಅವರ ಪ್ರಕಾರ, ಶಮಿ ಕಳೆದ ಋತುವಿನಿಂದ ಐದು ಕಿಲೋ ತೂಕ ಇಳಿಸಿಕೊಂಡಿದ್ದಾರೆ ಮತ್ತು ಉತ್ತಮ ಆಕಾರಕ್ಕೆ ಮರಳಲು ಎಂದಿಗಿಂತಲೂ ಹೆಚ್ಚು ಶ್ರಮಿಸುತ್ತಿದ್ದಾರೆ ಎಂದಿದ್ದಾರೆ.&lt;/p&gt;&lt;p data-block-key="5ofp"&gt;"ಶಮಿ ಅವರ ಮನಸ್ಥಿತಿ ಸಕಾರಾತ್ಮಕವಾಗಿದೆ. ಮುಂದಿನ ಋತುವಿಗೆ ಅವರು ಸಾಕಷ್ಟು ಪ್ರೇರೇಪಿತರಾಗಿದ್ದಾರೆ" ಎಂದು ಬದ್ರುದ್ದೀನ್ ಇಂಡಿಯಾ ಟುಡೇಗೆ ತಿಳಿಸಿದರು.&lt;/p&gt;&lt;p data-block-key="10bn8"&gt;"ಅವರಲ್ಲಿ ಇನ್ನೂ ಕ್ರಿಕೆಟ್ ಉಳಿದಿದೆ. ಅವರು ಸಿದ್ಧರಿದ್ದಾರೆ, ಮತ್ತು ದೇಶಕ್ಕೆ ಅವರ ಅಗತ್ಯವಿದ್ದರೆ, ಅವರು ಸೇವೆ ಸಲ್ಲಿಸಲು ಸಿದ್ಧರಾಗುತ್ತಾರೆ" ಎಂದು ಕೋಚ್ ಹೇಳಿದರು. &lt;/p&gt;&lt;p data-block-key="7d3li"&gt;ದಕ್ಷಿಣ ಆಫ್ರಿಕಾದಲ್ಲಿ 2027 ರ ಏಕದಿನ ವಿಶ್ವಕಪ್ ಸೇರಿದಂತೆ ಪ್ರಮುಖ ಕಾರ್ಯಯೋಜನೆಗಳಲ್ಲಿ ಶಮಿಯಂತಹ ಅನುಭವಿ ಪ್ರಚಾರಕರನ್ನು ಕರೆದೊಯ್ಯುವುದರಿಂದ ಭಾರತಕ್ಕೆ ಪ್ರಯೋಜನವಾಗುತ್ತದೆ ಎಂದು ಹೇಳಿದರು.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ನಾಡಿನ ಆರೋಗ್ಯ ಸಾಧಕರಿಗೆ ವಿಶ್ವವಾಣಿ ಟಿವಿ ಗೌರವ ಸಚಿವ ಯು ಟಿ ಖಾದರ್‌ ಶ್ಲಾಘನೆ</title><link>https://vishwavani.news/karnataka/bengaluru-urban/doctors-do-not-work-merely-for-a-salary-it-is-a-service--health-minister-ut-khader-85787.html</link><guid>https://vishwavani.news/karnataka/bengaluru-urban/doctors-do-not-work-merely-for-a-salary-it-is-a-service--health-minister-ut-khader-85787.html</guid><pubDate>Thu, 06 Aug 2026 11:11:45 +0000</pubDate><description>&lt;![CDATA[ಆರೋಗ್ಯ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ವೈದ್ಯರು ಹಾಗೂ ಆರೋಗ್ಯ ವಲಯದ ಸಾಧಕರನ್ನು ಗೌರವಿಸುವ ಉದ್ದೇಶದಿಂದ ವಿಶ್ವವಾಣಿ ಟಿವಿ ಆಯೋಜಿಸಿದ್ದ ‘ಪ್ರೈಡ್ ಆಫ್ ಹೆಲ್ತ್‌ಕೇರ್ ಅವಾರ್ಡ್’ಕಾರ್ಯಕ್ರಮವು ಬುಧವಾರ (ಆ. 5) ಸಂಜೆ ಬೆಂಗಳೂರಿನ ರಾಡಿಸನ್‌ ಬ್ಲೂ ಹೋಟೆಲ್‌ನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆಗೈದ 17 ಮಂದಿ ಸಾಧಕರನ್ನು ಸನ್ಮಾನಿಸಲಾಗಿದೆ.]]&gt;</description><dc:creator>&lt;![CDATA[Vishakha Bhat Heggar]]&gt;</dc:creator><category>&lt;![CDATA[ಬೆಂಗಳೂರು ನಗರ]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕರ್ನಾಟಕ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/U.T_Khader.original.jpg" class="attachment-large size-large wp-post-image" alt="ನಾಡಿನ ಆರೋಗ್ಯ ಸಾಧಕರಿಗೆ ವಿಶ್ವವಾಣಿ ಟಿವಿ ಗೌರವ ಸಚಿವ ಯು ಟಿ ಖಾದರ್‌ ಶ್ಲಾಘನೆ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="g5s1y"&gt;&lt;b&gt;ಬೆಂಗಳೂರು:&lt;/b&gt; ಎಲ್ಲ ವೃತ್ತಿಗಿಂತಲೂ ವೈದ್ಯಕೀಯ ವೃತ್ತಿ ವಿಭಿನ್ನ. ವೈದ್ಯರು ಕೇವಲ ಸಂಬಳವನ್ನು ಮಾತ್ರವಲ್ಲ ಪುಣ್ಯವನ್ನೂ ಸಂಪಾದಿಸುತ್ತಾರೆ.  ವೃತ್ತಿಯ ಜೊತೆಯಲ್ಲಿ ಜನರ ಸೇವೆ ಮಾಡುವ ಭಾಗ್ಯ ವೈದ್ಯರದ್ದಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ ಖಾದರ್‌ ಹೇಳಿದರು. ಆರೋಗ್ಯ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ವೈದ್ಯರು ಹಾಗೂ ಆರೋಗ್ಯ ವಲಯದ ಸಾಧಕರನ್ನು ಗೌರವಿಸಲು ವಿಶ್ವವಾಣಿ ಟಿವಿ ಬೆಂಗಳೂರಿನಲ್ಲಿ ಬುಧವಾರ ಆಯೋಜಿಸಿದ್ದ ‘ಪ್ರೈಡ್ ಆಫ್ ಹೆಲ್ತ್‌ಕೇರ್ ಅವಾರ್ಡ್’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.&lt;/p&gt;&lt;p data-block-key="us14"&gt;ಕೋವಿಡ್‌ನಂತಹ ಸಂಕಷ್ಟ ಕಾಲದಿಂದ ಹಿಡಿದು ಪ್ರತಿಯೊಂದು ಸಮಯದಲ್ಲಿಯೂ ವೈದ್ಯರ ಕೊಡುಗೆ ಅಪಾರ. ಇಂಥ ವೈದ್ಯರ ಬದ್ಧತೆ, ಕಾರ್ಯಕ್ಷಮತೆ ಮತ್ತು ಮಾಡಿರುವ ವಿಶೇಷ ಸೇವೆ, ಸಾಧನೆಯನ್ನು ಗುರುತಿಸಿ ವಿಶ್ವವಾಣಿ ಟಿವಿ ಇಂತಹ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದು ಶ್ಲಾಘನಾರ್ಹ ಎಂದು ಯು ಟಿ ಖಾದರ್‌ ಅವರು ಹೇಳಿದರು.&lt;/p&gt;&lt;h3 data-block-key="6oni3"&gt;&lt;b&gt;ವೈದ್ಯನಾಗಲು ಹೋದೆ, ಆರೋಗ್ಯ ಮಂತ್ರಿಯಾದೆ!&lt;/b&gt;&lt;/h3&gt;&lt;p data-block-key="8kdji"&gt;ವೈದ್ಯರಾಗುವುದು ಸುಲಭದ ಮಾತಲ್ಲ. ಗರಿಷ್ಠ ತಾಳ್ಮೆ ಬೇಕು. ಹೊಸತನ್ನು ಕಲಿಯುವ ಮನೋಭಾವ, ಕರುಣೆ, ಜಾಣ್ಮೆ ಇವೆಲ್ಲ ಇದ್ದರೆ ಮಾತ್ರ ಈ ವೃತ್ತಿಯಲ್ಲಿ ಯಶಸ್ವಿಯಾಗಲು ಸಾಧ್ಯ. ನಾನೂ ಸಹ ವೈದ್ಯನಾಗಲು ಬಯಸಿ ಪಿಯುಸಿಯಲ್ಲಿ ಸೈನ್ಸ್‌ ತೆಗೆದುಕೊಂಡಿದ್ದೆ. ಆದರೆ ನನಗೆ ಅದು ಕಬ್ಬಿಣ ಕಡಲೆಯಾಗತೊಡಗಿದ್ದರಿಂದ ಒಂದು ತಿಂಗಳಲಿನಲ್ಲಿಯೇ ಕೋರ್ಸ್‌ ಬದಲಾವಣೆ ಮಾಡಿ ಆರ್ಟ್ಸ್‌ ವಿಭಾಗಕ್ಕೆ ಬಂದೆ. ವೈದ್ಯನಾಗದಿದ್ದರೂ ಆರೋಗ್ಯ ಸಚಿವನಾದೆ ಎಂದು ಯು. ಟಿ ಖಾದರ್‌ ತಮ್ಮ ಜೀವನದ ಹಿನ್ನೋಟ ನೆನಪಿಸಿಕೊಂಡರು.&lt;/p&gt;&lt;h3 data-block-key="26nnm"&gt;&lt;b&gt;ತಾಯಿಯಿಂದಲೇ ಆರೋಗ್ಯ ಪಾಠ!&lt;/b&gt;&lt;/h3&gt;&lt;p data-block-key="f6c9b"&gt;ತಾಯಿಯೇ ಮೊದಲ ಗುರು ಎನ್ನುವಂತೆ ಮಕ್ಕಳಿಗೆ ಮನೆಯಲ್ಲಿಯೇ ಆರೋಗ್ಯದ ಪಾಠ ಶುರು ಮಾಡಬೇಕು. ಇಂದಿನ ಯುವ ಪೀಳಿಗೆ ಬಹಳ ಬೇಗ ಕಾಯಿಲೆಗೆ ತುತ್ತಾಗುತ್ತಿದೆ. ಚಿಕ್ಕ ವಯಸ್ಸಿನಿಂದಲೇ ಮಕ್ಕಳಿಗೆ ಪೋಷಕಾಂಶಯುಕ್ತ ಆಹಾರವನ್ನು ನೀಡುವುದನ್ನು ತಾಯಂದಿರು ಅಭ್ಯಾಸ ಮಾಡಬೇಕು. ಆರೋಗ್ಯವನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಆದ್ಯತೆ ಆಗಿರಬೇಕು. ನಗರ ಭಾಗದಲ್ಲಿ ಮಾತ್ರ ಅಲ್ಲದೇ ಹಳ್ಳಿಯಲ್ಲೂ ಶರವೇಗದಲ್ಲಿ ಕ್ಯಾನ್ಸರ್‌ನಂತಹ ಮಹಾಮಾರಿ ಹಬ್ಬುತ್ತಿದೆ. ಹೀಗಾಗಿ ಆರೋಗ್ಯವಂತ ವ್ಯಕ್ತಿಯೂ ನಿಯಮಿತ ತಪಾಸಣೆಗೆ ಒಳಗಾಗಿ, ಆರೋಗ್ಯಕರ ದಿನಚರಿಯನ್ನು ರೂಢಿಸಿಕೊಳ್ಳುವುದು ಅವಶ್ಯಕ ಎಂದು ಆರೋಗ್ಯ ಸಚಿವರು ಕಿವಿ ಮಾತು ಹೇಳಿದರು.&lt;/p&gt;&lt;p data-block-key="1marl"&gt;ಹಲವು ರೋಗಗಳ ಚಿಕಿತ್ಸೆಗೆ ಉತ್ತಮ ಹಾಗೂ ಉಚಿತ ಚಿಕಿತ್ಸೆ ನೀಡಲು ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಅಪಘಾತ ವಿಮೆ ಸೌಲಭ್ಯ ಕಲ್ಪಿಸಲಾಗಿದೆ. ಸಾರ್ವಜನಿಕರು ಇವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಖಾದರ್‌ ಹೇಳಿದರು.&lt;/p&gt;&lt;h3 data-block-key="8htk8"&gt;&lt;b&gt;ವಿಶ್ವವಾಣಿ ಪ್ರಶಸ್ತಿಗೆ ಖಾದರ್‌ ಮೆಚ್ಚುಗೆ&lt;/b&gt;&lt;/h3&gt;&lt;p data-block-key="7oi1j"&gt;ಒಂದು ದಿನಪತ್ರಿಕೆಯನ್ನು ಪ್ರಾರಂಭಿಸಿ ಯಶಸ್ವಿಯಾಗಿ ನಿರ್ವಹಿಸುವುದು ಸುಲಭದ ಮಾತಲ್ಲ. ವಿಶ್ವೇಶ್ವರ ಭಟ್‌ ಅವರು ವಿಶ್ವವಾಣಿ ಪತ್ರಿಕೆಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಅಷ್ಟೇ ಅಲ್ಲದೇ, ವೈದ್ಯರು ಹಾಗೂ ಆರೋಗ್ಯ ವಲಯದ ಸಾಧಕರನ್ನು ಗೌರವಿಸುವ ಸಲುವಾಗಿ ವಿಶ್ವವಾಣಿ ಟಿವಿ ಪ್ರೈಡ್ ಆಫ್ ಹೆಲ್ತ್‌ಕೇರ್ ಅವಾರ್ಡ್ ನೀಡಲಾಗುತ್ತಿದೆ. ವೈದ್ಯಕೀಯ ವಲಯ ಕೇವಲ ಒಂದು ವೃತ್ತಿಯಲ್ಲ, ಇದೊಂದು ಸೇವಾ ಕಾರ್ಯ. ಕಾರ್ಯದೊತ್ತಡ, ಸಮಯವನ್ನು ಲೆಕ್ಕಿಸದೆ ವೈದ್ಯರು ರೋಗಿಗಳ ಜೀವ ಉಳಿಸುತ್ತಾರೆ. ಇಂಥವರನ್ನು ಸನ್ಮಾನಿಸುತ್ತಿರುವುದು ಸಂತಸದ ವಿಷಯ ಎಂದು ಯು ಟಿ ಖಾದರ್‌ ಹೇಳಿದರು.&lt;/p&gt;&lt;h3 data-block-key="bedk4"&gt;&lt;b&gt;ಯು ಟಿ ಖಾದರ್‌ ಕಾರ್ಯವೈಖರಿಗೆ ವಿಶ್ವೇಶ್ವರ ಭಟ್‌ ಶ್ಲಾಘನೆ&lt;/b&gt;&lt;/h3&gt;&lt;p data-block-key="77mt2"&gt;ವಿಶ್ವವಾಣಿಯ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್‌ ಅವರು ಮಾತನಾಡಿ, ಆರೋಗ್ಯ ಸಚಿವ ಯು ಟಿ ಖಾದರ್‌ ಅವರ ಕಾರ್ಯವೈಖರಿ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ತಮ್ಮ ಕಾರ್ಯದೊತ್ತಡದ ಮಧ್ಯೆಯೂ ವೈದ್ಯರನ್ನು ಸತ್ಕರಿಸುತ್ತಿರುವ ಈ ಕಾರ್ಯಕ್ರಮಕ್ಕೆ ಆಗಮಿಸಿರುವುದು ಸಂತಸ ತಂದಿದೆ. ಖಾದರ್‌ ಅವರ ಕಾರ್ಯಕ್ಷಮತೆ ಹಾಗೂ ಸಮಯ ಪರಿಪಾಲನೆ ಎಲ್ಲ ರಾಜಕಾರಣಿಗಳೂ ಮಾದರಿಯಾಗಿದೆ. 18 ವರ್ಷಗಳಿಂದ ನಾನು ಅವರ ಒಡನಾಟದಲ್ಲಿದ್ದೇನೆ. ಯಾವುದೇ ಧರ್ಮ, ಜಾತಿಯನ್ನು ಲೆಕ್ಕಿಸದೆ ಅವರು ಕೆಲಸ ಮಾಡುತ್ತಿದ್ದಾರೆ. ಅವರನ್ನು ಯಾವುದೇ ಕೋಮು ಅಥವಾ ಧರ್ಮಕ್ಕೆ ಅಂಟಿಸಲಾಗದು. ಖಾದರ್‌ ಅವರ ಕೆಲ ಆದರ್ಶಗಳು ಅನುಕರಣೀಯ ಎಂದು ಹೇಳಿದರು.&lt;/p&gt;&lt;p data-block-key="egp6p"&gt;ಯು ಟಿ ಖಾದರ್‌ ಒಬ್ಬ ಭರವಸೆಯ ರಾಜಕಾರಣಿ. ಸಾಮಾನ್ಯ ರಾಜಕಾರಣಿಗಿಂತ ಇವರು ಭಿನ್ನ. ಎಲ್ಲ ಪಕ್ಷದವರ ಜತೆಗೆ ಆತ್ಮೀಯವಾಗಿ ಇರುವ, ಜನಸಾಮಾನ್ಯರ ಜತೆ ಸಾಮಾನ್ಯರಾಗಿ ಬೆರೆಯುವ ಇವರ ಗುಣ ಅಪರೂಪ ಎಂದು ವಿಶ್ವೇಶ್ವರ ಭಟ್‌ ಅವರು ಬಣ್ಣಿಸಿದರು.&lt;/p&gt;&lt;p data-block-key="1p2hi"&gt;&lt;a href="/byline-stories/the-coast-is-blessed-with-the-administration-of-khader-saheb-80029.html"&gt;&lt;b&gt;Ministry for U T Khader: ಕರಾವಳಿಗೆ ಖಾದರ್ ಸಾಹೇಬರ ಖದರ್ ಆಡಳಿತ ಭಾಗ್ಯ!&lt;/b&gt;&lt;/a&gt;&lt;/p&gt;&lt;p data-block-key="e4l5h"&gt;ವೈದ್ಯಕೀಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ 17 ಸಾಧಕರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಯುಟಿ ಖಾದರ್‌, ನಟಿ ಮಾನ್ವಿತಾ ಕಾಮತ್‌, ಬೈಂದೂರು ಕ್ಷೇತ್ರದ ಮಾಜಿ ಶಾಸಕ ಸುಕುಮಾರ ಶೆಟ್ಟಿ ಸೇರಿದಂತೆ ಹಲವು  ಗಣ್ಯರು ಉಪಸ್ಥಿತರಿದ್ದರು. ವಿಶ್ವವಾಣಿಯ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್‌ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಪರ್ವ ಗ್ರೂಪ್‌ ಸಂಸ್ಥಾಪಕ ಎಚ್‌ ಪಿ ನೀಲೇಶ್‌ ಮತ್ತು ಅಡಿಗಾಸ್‌ ಯಾತ್ರಾ ಸಂಸ್ಥಾಪಕ ನಾಗರಾಜ ಅಡಿಗ ಅವರು ಭಾಗವಹಿಸಿದ್ದರು. ಸಪ್ತಕ ಬೆಂಗಳೂರು ಸಂಘಟನೆಯ ಮುಖ್ಯಸ್ಥರಾದ ಜಿ ಎಸ್‌ ಹೆಗಡೆ ಅವರ ಸಹಕಾರದಲ್ಲಿ ಚೈತ್ರಾ ಹಾಕೋಡ್ಲು, ಶ್ರೀಧರ್‌ ಚಿಟ್ಟೇಪಾಲ್‌ ಮತ್ತು ವಿಘ್ನೇಶ್‌ ಭಾಗವತ ಅವರು ಸಂಗೀತ ಕಾರ್ಯಕ್ರಮ ನೀಡಿದರು. ಶ್ರೀಮತಿ ಶುಭಾ ಭಟ್‌ ಅವರು ಭರತನಾಟ್ಯ ಪ್ರದರ್ಶನ ನೀಡಿದರು. ಈ ವಿಶೇಷ ಕಾರ್ಯಕ್ರಮವನ್ನು ಪರ್ವ ಗ್ರೂಪ್‌, ಡಿಯಾಗ್‌ ಫಿನಾನ್ಸ್‌, ಅಡಿಗಾಸ್‌ ಯಾತ್ರಾ ಮತ್ತು ಓಬಿಡಬ್ಲ್ಯೂ ಸಂಸ್ಥೆಗಳು ಪ್ರಾಯೋಜಿಸಿದ್ದವು.&lt;/p&gt;&lt;p data-block-key="7tc5v"&gt;&lt;/p&gt;
&lt;/div&gt;
&lt;/p&gt;]]&gt;</content:encoded></item><item><title>Chikkaballapur News: ಭಾರತ್ ಜೋಡೋ ಯುವ ಸಂಘಗಳಿಗೆ ನೋಂದಣಿ ಆರಂಭ</title><link>https://vishwavani.news/karnataka/chikkaballapur/registration-begins-for-bharat-jodo-youth-associations-85786.html</link><guid>https://vishwavani.news/karnataka/chikkaballapur/registration-begins-for-bharat-jodo-youth-associations-85786.html</guid><pubDate>Thu, 06 Aug 2026 11:07:32 +0000</pubDate><description>&lt;![CDATA[16ರಿಂದ 35 ವರ್ಷದೊಳಗಿನ 100 ಯುವ ಸದಸ್ಯರನ್ನು ಒಳಗೊಂಡ ಒಂದು ಸಂಘವನ್ನು ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ರಚಿಸಲಾಗುವುದು. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೆ ಪ್ರಾತಿ ನಿಧ್ಯ ದೊರೆಯುವಂತೆ ಸಂಘಗಳನ್ನು ರೂಪಿಸಲು ಸೂಚಿಸಲಾಗಿದೆ. ಪ್ರತಿ ಸಂಘಕ್ಕೆ ರಾಜ್ಯ ಸರ್ಕಾರ ದಿಂದ ವಾರ್ಷಿಕ 10 ಲಕ್ಷ ರೂ. ಅನುದಾನ ನೀಡಲಾಗುತ್ತದೆ.]]&gt;</description><dc:creator>&lt;![CDATA[Ashok Nayak]]&gt;</dc:creator><category>&lt;![CDATA[ಚಿಕ್ಕಬಳ್ಳಾಪುರ]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕರ್ನಾಟಕ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Bharath_Jodo.original.jpg" class="attachment-large size-large wp-post-image" alt="Chikkaballapur News: ಭಾರತ್ ಜೋಡೋ ಯುವ ಸಂಘಗಳಿಗೆ ನೋಂದಣಿ ಆರಂಭ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="m9n4k"&gt;&lt;b&gt;ಚಿಕ್ಕಬಳ್ಳಾಪುರ: &lt;/b&gt;ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಭಾರತ್ ಜೋಡೋ ಯುವ ಸಂಘ ಯೋಜನೆಯಡಿ ಜಿಲ್ಲೆಯ 154 ಗ್ರಾಮ ಪಂಚಾಯಿತಿಗಳಲ್ಲಿ ಯುವ ಸಂಘಗಳನ್ನು ರಚಿಸಲು ನೋಂದಣಿ ಪ್ರಕ್ರಿಯೆ ಆರಂಭವಾಗಿದೆ.&lt;/p&gt;&lt;p data-block-key="3sbr2"&gt;16 ರಿಂದ 35 ವರ್ಷದೊಳಗಿನ 100 ಯುವ ಸದಸ್ಯರನ್ನು ಒಳಗೊಂಡ ಒಂದು ಸಂಘವನ್ನು ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ರಚಿಸಲಾಗುವುದು. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮ ಗಳಿಗೆ ಪ್ರಾತಿನಿಧ್ಯ ದೊರೆಯುವಂತೆ ಸಂಘಗಳನ್ನು ರೂಪಿಸಲು ಸೂಚಿಸಲಾಗಿದೆ. ಪ್ರತಿ ಸಂಘಕ್ಕೆ ರಾಜ್ಯ ಸರ್ಕಾರದಿಂದ ವಾರ್ಷಿಕ &lt;b&gt;10 ಲಕ್ಷ ರೂ. ಅನುದಾನ&lt;/b&gt; ನೀಡಲಾಗುತ್ತದೆ.&lt;/p&gt;&lt;p data-block-key="8cvub"&gt;&lt;b&gt;ಇದನ್ನೂ ಓದಿ: &lt;/b&gt;&lt;a href="/movies/geetha-bharathi-bhat-doesnot-care-about-the-sarcastic-body-shaming-statement-on-the-jodi-number-reality-show-74322.html"&gt;Geetha Bharathi Bhat: ಚುಚ್ಚು ಮಾತುಗಳ ಬಾಣಕ್ಕೆ ಗೀತಾ ಭಾರತಿ ಭಟ್ ಡೋಂಟ್ ಕೇರ್; ನಟಿಗೆ ಪತಿಯೇ ಸಾಥ್‌&lt;/a&gt;&lt;/p&gt;&lt;p data-block-key="e90ah"&gt;ಈ ಅನುದಾನವನ್ನು ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು, ಗಣಕಯಂತ್ರ, ಅಂತರ್ಜಾಲ, ಕಚೇರಿ ಮೂಲಸೌಕರ್ಯ ಹಾಗೂ ಅನುಮೋದಿತ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಬಹು ದಾಗಿದೆ.&lt;/p&gt;&lt;p data-block-key="ejqsn"&gt;ಯುವಕರು &lt;b&gt;ಬಿಜೆವೈಎಸ್ (BJYS) ಪೋರ್ಟಲ್ ಅಥವಾ ಮೊಬೈಲ್ ಅನ್ವಯಿಕೆ&lt;/b&gt;, ಗ್ರಾಮ ಪಂಚಾಯಿತಿ, ಗ್ರಾಮ ಒನ್, ಕರ್ನಾಟಕ ಒನ್ ಹಾಗೂ ನಾಗರಿಕ ಸೇವಾ ಕೇಂದ್ರಗಳ ಮೂಲಕ &lt;b&gt;ಆ.20ರೊಳಗೆ&lt;/b&gt; ನೋಂದಣಿ ಮಾಡಿಸಬಹುದು.&lt;/p&gt;&lt;p data-block-key="daa0b"&gt;ನೋಂದಣಿಗೆ ಆಧಾರ್ ಕಡ್ಡಾಯವಾಗಿದ್ದು, ಅರ್ಜಿದಾರರು ಅದೇ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವಾಸಿಗಳಾಗಿರಬೇಕು. ಒಬ್ಬ ಸದಸ್ಯರು ಒಂದೇ ಸಂಘಕ್ಕೆ ಮಾತ್ರ ಸೇರ್ಪಡೆಯಾಗಲು ಅವಕಾಶವಿದೆ ಎಂದು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ವೈ. ನವೀನ್ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ENG vs PAK ಟೆಸ್ಟ್‌ ಸರಣಿಗೆ 16 ಸದಸ್ಯರ ಇಂಗ್ಲೆಂಡ್‌ ತಂಡ ಪ್ರಕಟ, ಜೋರ್ಡನ್‌ ಕಾಕ್ಸ್‌ ಔಟ್‌!</title><link>https://vishwavani.news/sports/cricket/england-announce-16-member-squad-for-pakistan-test-series-jordan-cox-ruled-out-85785.html</link><guid>https://vishwavani.news/sports/cricket/england-announce-16-member-squad-for-pakistan-test-series-jordan-cox-ruled-out-85785.html</guid><pubDate>Thu, 06 Aug 2026 11:07:08 +0000</pubDate><description>&lt;![CDATA[England test Squad: ಪಾಕಿಸ್ತಾನ ವಿರುದ್ಧದ ಟೆಸ್ಟ್‌ ಸರಣಿಗೆ 16 ಸದಸ್ಯರ ಇಂಗ್ಲೆಂಡ್‌ ತಂಡವನ್ನು ಪ್ರಕಟಿಸಲಾಗಿದ್ದು, ಜೋರ್ಡನ್‌ ಕಾಕ್ಸ್‌ ಅವರನ್ನು ಕೈ ಬಿಡಲಾಗಿದೆ. ಮೊಣಕಾಲು ಗಾಯದಿಂದಾಗಿ ಜೇಕಬ್‌ ಬೆಥೆಲ್‌ ಅವರು ಕೂಡ ಈ ಸರಣಿಯಿಂದ ಹೊರಗುಳಿದಿದ್ದಾರೆ. ಇನ್ನು ಜೋ ರೂಟ್‌ ಅವರು ಎರಡನೇ ಬಾರಿ ಇಂಗ್ಲೆಂಡ್‌ ತಂಡವನ್ನು ಮುನ್ನಡೆಸಲಿದ್ದಾರೆ.]]&gt;</description><dc:creator>&lt;![CDATA[Ramesh Kote]]&gt;</dc:creator><category>&lt;![CDATA[ಕ್ರಿಕೆಟ್‌]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕ್ರೀಡೆ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Joe_Root_88djp8j.original.jpg" class="attachment-large size-large wp-post-image" alt="ENG vs PAK ಟೆಸ್ಟ್‌ ಸರಣಿಗೆ 16 ಸದಸ್ಯರ ಇಂಗ್ಲೆಂಡ್‌ ತಂಡ ಪ್ರಕಟ, ಜೋರ್ಡನ್‌ ಕಾಕ್ಸ್‌ ಔಟ್‌!" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="ku5wt"&gt;&lt;b&gt;ನವದೆಹಲಿ:&lt;/b&gt; ಪಾಕಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್‌ ಸರಣಿಯ (IND vs PAK) ಆರಂಭಿಕ ಎರಡು ಪಂದ್ಯಗಳಿಗೆ ಇಂಗ್ಲೆಂಡ್‌ ತಂಡವನ್ನು (England Test Squad) ಪ್ರಕಟಿಸಲಾಗಿದ್ದು, ಒಲ್ಲೀ ಪೋಪ್‌ ಹಾಗೂ ಡ್ಯಾನ್‌ ಲಾರೆನ್ಸ್‌ ಅವರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆಗಸ್ಟ್‌ 19 ರಂದು ಹೆಡಿಂಗ್ಲೆಯಲ್ಲಿ ಮೊದಲ ಪಂದ್ಯದ ಮೂಲಕ ಟೆಸ್ಟ್‌ ಸರಣಿ ಆರಂಭವಾಗಲಿದೆ. ಮೊಣಕಾಲು ಗಾಯದಿಂದ ಬಳಲುತ್ತಿರುವ ಆಲ್‌ರೌಂಡರ್‌ ಜೇಕಬ್‌ ಬೆಥೆಲ್‌ ಟೆಸ್ಟ್‌ ಸರಣಿಯಿಂದ ಹೊರ ಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಜೋರ್ಡನ್‌ ಕಾಕ್ಸ್‌ ಅವರು ಮೂರನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಲಿದ್ದಾರೆ.&lt;/p&gt;&lt;p data-block-key="87i22"&gt;ಬೆನ್‌ ಸ್ಟೋಕ್ಸ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ಹಾಗೂ ಬ್ರೆಂಡನ್‌ ಮೆಕಲಮ್‌ ಹೆಡ್‌ ಕೋಚ್‌ ಹುದ್ದೆಯನ್ನು ತೊರೆದ ಬಳಿಕ ಇಂಗ್ಲೆಂಡ್‌ ತಂಡದ ಮೊದಲ ಟೆಸ್ಟ್‌ ಸರಣಿ ಇದಾಗಿದೆ. ಹೊಸದಾಗಿ ಹೆಡ್‌ ಕೋಚ್‌ ಆಗಿರುವ ಸ್ಟಿಫನ್‌ ಫ್ಲೆಮಿಂಗ್‌ ಅವರು ದಕ್ಷಿಣ ಆಫ್ರಿಕಾ ವಿರುದ್ದದ ಸರಣಿಯ ವೇಳೆ ತಮ್ಮ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. ಹಾಗಾಗಿ ಇದೀಗ ಮಾರ್ಕಸ್‌ ಟ್ರೆಸ್ಕೋಥಿಕ್‌ ಅವರ ಹಂಗಾಮಿ ಕೋಚ್‌ ಆಗಿ ಕಾರ್ಯನಿರ್ವಹಿಸಲಿದ್ದಾರೆ.&lt;/p&gt;&lt;p data-block-key="ekptr"&gt;&lt;a href="/sports/cricket/ind-vs-sl-2026-gautam-gambhirs-strong-message-to-india-before-must-win-sri-lanka-series-85778.html"&gt;&lt;b&gt;IND vs SL: ಟೆಸ್ಟ್‌ ಸರಣಿಗೂ ಮುನ್ನ ಭಾರತ ತಂಡದ ಆಟಗಾರರಿಗೆ ಬಲವಾದ ಸಂದೇಶ ರವಾನಿಸಿದ ಗೌತಮ್‌ ಗಂಭೀರ್‌!&lt;/b&gt;&lt;/a&gt;&lt;/p&gt;&lt;h3 data-block-key="99n4"&gt;&lt;b&gt;ಲಾರೆನ್ಸ್‌, ಪೋಪ್‌ ಕಮ್‌ಬ್ಯಾಕ್‌&lt;/b&gt;&lt;/h3&gt;&lt;p data-block-key="onqh"&gt;ಡ್ಯಾನ್ ಲಾರೆನ್ಸ್ ಅವರು 2024ರ ಸೆಪ್ಟೆಂಬರ್ ಬಳಿಕ ಮೊದಲ ಬಾರಿ ಇಂಗ್ಲೆಂಡ್ ಟೆಸ್ಟ್ ತಂಡಕ್ಕೆ ಮರಳಿದ್ದಾರೆ. ಸರ್ರೆ (Surrey) ಪರ ಈ ಬಾರಿ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಬಳಿಕ ಅವರಿಗೆ ರಾಷ್ಟ್ರೀಯ ತಂಡದಲ್ಲಿ ಅವಕಾಶ ದೊರೆತಿದೆ. 13 ಇನಿಂಗ್ಸ್‌ಗಳಲ್ಲಿ 65.66ರ ಸರಾಸರಿಯಲ್ಲಿ 788 ರನ್‌ಗಳನ್ನು ಗಳಿಸಿರುವ ಲಾರೆನ್ಸ್, ಐದು ಶತಕಗಳನ್ನು ಸಿಡಿಸಿ ಗಮನ ಸೆಳೆದಿದ್ದಾರೆ. ಬೆನ್ ಸ್ಟೋಕ್ಸ್ ನಿವೃತ್ತಿಯಿಂದ ತೆರವಾದ ಆರನೇ ಕ್ರಮಾಂಕದ ಸ್ಥಾನವನ್ನು ಅವರು ತುಂಬುವ ಸಾಧ್ಯತೆಯಿದೆ.&lt;/p&gt;&lt;p data-block-key="a20n0"&gt;ಲಾರೆನ್ಸ್ ಆಫ್‌ಸ್ಪಿನ್ ಬೌಲ್ ಮಾಡುವ ಸಾಮರ್ಥ್ಯ ಹೊಂದಿದ್ದರೂ, ಬೌಲಿಂಗ್‌ನಲ್ಲಿ ಅವರ ಪಾತ್ರ ಸ್ಟೋಕ್ಸ್ ಅವರಂತಿಲ್ಲ. ಜೂನ್ 2022ರಿಂದ ಇಂಗ್ಲೆಂಡ್ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಗಸ್ ಅಟ್ಕಿನ್ಸನ್ 79 ವಿಕೆಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಸ್ಟೋಕ್ಸ್ 78 ವಿಕೆಟ್‌ಗಳನ್ನು ಪಡೆದು ಎರಡನೇ ಸ್ಥಾನದಲ್ಲಿದ್ದಾರೆ. ಇತ್ತ ಲಾರೆನ್ಸ್ ಈ ಋತುವಿನ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ 178.2 ಓವರ್‌ಗಳಲ್ಲಿ 9 ವಿಕೆಟ್‌ಗಳನ್ನು ಮಾತ್ರ ಪಡೆದಿದ್ದಾರೆ.&lt;/p&gt;&lt;p data-block-key="epr8r"&gt;&lt;/p&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="twitter-tweet"&gt;&lt;p lang="en" dir="ltr"&gt;Joe Root is back as captain and some familiar faces also are making their return  &lt;a href="https://t.co/imQamKKjjr"&gt;pic.twitter.com/imQamKKjjr&lt;/a&gt;&lt;/p&gt;&amp;mdash; England Cricket (@englandcricket) &lt;a href="https://x.com/englandcricket/status/2085293556218949795?ref_src=twsrc%5Etfw"&gt;August 6, 2026&lt;/a&gt;&lt;/blockquote&gt; &lt;script async src="https://platform.x.com/widgets.js" charset="utf-8"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="3bd9m"&gt;&lt;/p&gt;&lt;h3 data-block-key="6iqu3"&gt;&lt;b&gt;ಟೆಸ್ಟ್‌ ತಂಡಕ್ಕೆ ಮರಳಿದ ಒಲ್ಲೀ ಪೋಪ್‌&lt;/b&gt;&lt;/h3&gt;&lt;p data-block-key="fm0ve"&gt;ಸತತ ಕಳಪೆ ಪ್ರದರ್ಶನದ ಕಾರಣ ಟೆಸ್ಟ್ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದ ಒಲ್ಲಿ ಪೋಪ್ ಮತ್ತೆ ಇಂಗ್ಲೆಂಡ್ ತಂಡಕ್ಕೆ ಮರಳಿದ್ದಾರೆ. ಮಾಜಿ ಉಪನಾಯಕರಾಗಿದ್ದ ಪೋಪ್ ಅವರನ್ನು ಆಸ್ಟ್ರೇಲಿಯಾದಲ್ಲಿ ನಡೆದ ಆಶಸ್ ಸರಣಿಯ ಕೊನೆಯ ಹಂತದಲ್ಲಿ ಮೂರನೇ ಕ್ರಮಾಂಕದಲ್ಲಿ ಜೇಕಬ್ ಬೆಥೆಲ್ ಬದಲಿಸಿದ್ದರು. ಬಳಿಕ ನ್ಯೂಜಿಲೆಂಡ್ ವಿರುದ್ಧದ ಸರಣಿಗೂ ಅವರನ್ನು ಆಯ್ಕೆ ಮಾಡಿರಲಿಲ್ಲ. ಆದರೆ ದೇಶಿ ಕ್ರಿಕೆಟ್‌ನಲ್ಲಿ ಪೋಪ್ ಮತ್ತೆ ಉತ್ತಮ ಫಾರ್ಮ್ ಕಂಡುಕೊಂಡಿದ್ದು, ಸರ್ರೆ ಪರ 56.66ರ ಸರಾಸರಿಯಲ್ಲಿ 510 ರನ್ ಗಳಿಸಿದ್ದಾರೆ. ಇದರಲ್ಲಿ ಐದು ಅರ್ಧಶತಕ ಅಥವಾ ಅದಕ್ಕಿಂತ ಹೆಚ್ಚಿನ ಸ್ಕೋರ್‌ಗಳು ಸೇರಿವೆ. ಇತ್ತ, ಬೆಥೆಲ್ ಅನುಪಸ್ಥಿತಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ದಿ ಓವಲ್‌ನಲ್ಲಿ ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದ ಕಾಕ್ಸ್ ಅವರನ್ನು ಈ ಬಾರಿ ಮೇಲಿನ ಕ್ರಮಾಂಕದಲ್ಲಿ ಆಡಿಸುವ ಸಾಧ್ಯತೆ ಇದೆ.&lt;/p&gt;&lt;p data-block-key="6jn80"&gt;&lt;b&gt;ಪಾಕಿಸ್ತಾನ ವಿರುದ್ಧದ ಆರಂಭಿಕ 2 ಟೆಸ್ಟ್‌ ಪಂದ್ಯಗಳಿಗೆ ಇಂಗ್ಲೆಂಡ್‌ ತಂಡ:&lt;/b&gt; ಜೋ ರೂಟ್‌ (ನಾಯಕ), ಜೋಫ್ರಾ ಆರ್ಚರ್‌, ಗಸ್‌ ಅಟ್ಕಿನ್ಸನ್‌, ಶೋಯೆಬ್‌ ಬಶೀರ್‌, ಹ್ಯಾರಿ ಬ್ರೂಕ್‌, ಬ್ರೈಡೆನ್‌ ಕಾರ್ಸ್‌, ಸ್ಯಾಮ್‌ ಕುಕ್‌, ಜೋರ್ಡನ್‌ ಕಾಕ್ಸ್‌, ಬೆನ್‌ ಡಕೆಟ್‌, ಮ್ಯಾಥ್ಯೂ ಫಿಷರ್‌, ಎಲಿಮಿಯೊ ಗೇ, ಡ್ಯಾನ್‌ ಲಾರೆನ್ಸ್‌, ಒಲ್ಲೀ ಪೋಪ್‌, ಒಲ್ಲಿ ರಾಬಿನ್ಸನ್‌, ಜೇಮಿ ಸ್ಮಿತ್‌, ಜಾಶ್‌ ಟಂಗ್‌&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಲೈಂಗಿಕ ದೌರ್ಜನ್ಯ ಪ್ರಕರಣ: ತರುಣ್ ತೇಜ್‌ಪಾಲ್‌ಗೆ 10 ವರ್ಷಗಳ ಜೈಲು ಶಿಕ್ಷೆ</title><link>https://vishwavani.news/crime/physical-abuse-case-tarun-tejpal-sentenced-to-10-years-in-prison-85784.html</link><guid>https://vishwavani.news/crime/physical-abuse-case-tarun-tejpal-sentenced-to-10-years-in-prison-85784.html</guid><pubDate>Thu, 06 Aug 2026 11:02:02 +0000</pubDate><description>&lt;![CDATA[ತೆಹಲ್ಕಾದ ಮಾಜಿ ಸಂಪಾದಕ ತರುಣ್ ತೇಜ್‌ಪಾಲ್‌ಗೆ ಬಾಂಬೆ ಹೈಕೋರ್ಟ್ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿದೆ. 2013ರ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್‌ನ ಗೋವಾ ಪೀಠವು ಗುರುವಾರ ಅವರನ್ನು ದೋಷಿ ಎಂದು ತೀರ್ಮಾನಿಸಿ ತೀರ್ಪು ನೀಡಿದೆ.]]&gt;</description><dc:creator>&lt;![CDATA[ವಿದ್ಯಾ ಇರ್ವತ್ತೂರು]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ದೇಶ]]&gt;</category><category>&lt;![CDATA[ಕ್ರೈಂ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/tehalk1.original.jpg" class="attachment-large size-large wp-post-image" alt="ಲೈಂಗಿಕ ದೌರ್ಜನ್ಯ ಪ್ರಕರಣ: ತರುಣ್ ತೇಜ್‌ಪಾಲ್‌ಗೆ 10 ವರ್ಷಗಳ ಜೈಲು ಶಿಕ್ಷೆ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="1gbak"&gt;&lt;b&gt;ಮುಂಬೈ:&lt;/b&gt;  ಕಿರಿಯ ಸಹೋದ್ಯೋಗಿಯ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ತೆಹಲ್ಕಾ ನಿಯತಕಾಲಿಕೆಯ ಸ್ಥಾಪಕ ಮತ್ತು ಮಾಜಿ ಸಂಪಾದಕ (&lt;a href="/karnataka/chikkaballapur/nandigiridhama-police-crack-grape-theft-case-five-accused-arrested-248-lakh-in-cash-seized-85061.html"&gt;Ex-Tehelka Editor&lt;/a&gt;) ತರುಣ್ ತೇಜ್‌ಪಾಲ್ (Tarun Tejpal) ಅವರಿಗೆ ಬಾಂಬೆ ಹೈಕೋರ್ಟ್ (Bombay High Court) 10 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ. ಈ ಕುರಿತು ಗುರುವಾರ ನ್ಯಾಯಮೂರ್ತಿಗಳಾದ ಡಾ. ನೀಲಾ ಗೋಖಲೆ ಮತ್ತು ಅಮಿತ್ ಜಮ್ಸಂದೇಕರ್ ​​ಅವರನ್ನೊಳಗೊಂಡ ಬಾಂಬೆ ಹೈಕೋರ್ಟ್‌ನ ಗೋವಾ ಪೀಠವು ತೀರ್ಪು ನೀಡಿದೆ. &lt;/p&gt;&lt;p data-block-key="drk4g"&gt;ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪದಲ್ಲಿ ಅಪರಾಧಿ ಎಂದು ನ್ಯಾಯಾಲಯದಿಂದ ಘೋಷಿಸಲ್ಪಟ್ಟ ತೆಹಲ್ಕಾದ ಮಾಜಿ ಸಂಪಾದಕ ತರುಣ್ ತೇಜ್‌ಪಾಲ್ ಅವರಿಗೆ  ಬಾಂಬೆ ಹೈಕೋರ್ಟ್ ಗುರುವಾರ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ. ಈ ಪ್ರಕರಣದಲ್ಲಿ  ಐದು ವರ್ಷಗಳ ಹಿಂದೆ ಗೋವಾ ಸೆಷನ್ಸ್ ನ್ಯಾಯಾಲಯವು ಅವರನ್ನು ಖುಲಾಸೆಗೊಳಿಸಿತ್ತು. &lt;/p&gt;&lt;p data-block-key="8rf4m"&gt;&lt;a href="/crime/2013-physical-abuse-case-bombay-high-court-convicts-former-tehelka-editor-tarun-tejpal-85767.html"&gt;&lt;b&gt;2013ರ ಲೈಂಗಿಕ ದೌರ್ಜನ್ಯ ಪ್ರಕರಣ: ತೆಹಲ್ಕಾದ ಮಾಜಿ ಸಂಪಾದಕ ತರುಣ್ ತೇಜ್‌ಪಾಲ್‌ ಅಪರಾಧಿ ಎಂದು ಘೋಷಿಸಿದ ಬಾಂಬೆ ಹೈಕೋರ್ಟ್‌&lt;/b&gt;&lt;/a&gt;&lt;/p&gt;&lt;p data-block-key="46b68"&gt;ತರುಣ್ ತೇಜ್‌ಪಾಲ್ ಅವರ ಕೋರಿಕೆಯ ಮೇರೆಗೆ ನ್ಯಾಯಾಲಯವು ಅವರಿಗೆ ಎರಡು ವಾರಗಳಲ್ಲಿ ಶರಣಾಗಲು ಅವಧಿ ನೀಡಿದೆ. ಪ್ರಕರಣಕ್ಕೆ ಸಂಬಂಧಿಸಿ ಕನಿಷ್ಠ ಶಿಕ್ಷೆಯನ್ನು ನ್ಯಾಯಾಲಯ ವಿಧಿಸಿದ್ದು, ಇದಕ್ಕೆ ಕಾರಣವನ್ನು ಉಲ್ಲೇಖಿಸಿದೆ. ಈ ಘಟನೆ 13 ವರ್ಷಗಳ ಹಿಂದೆ ನಡೆದಿದೆ. ತೇಜ್‌ಪಾಲ್ ಅವರಿಂದ ಬೇರೆ ಯಾವುದೇ ಅಪರಾಧವಾಗಿಲ್ಲ ಎಂದು ತಿಳಿಸಿದೆ. &lt;/p&gt;&lt;p data-block-key="3op29"&gt;ತೇಜ್‌ಪಾಲ್‌ ಅವರಿಗೆ ನ್ಯಾಯಾಲಯವು 10,21,000 ರೂಪಾಯಿ ದಂಡವನ್ನು ವಿಧಿಸಿದ್ದು, ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತೆಗೆ ಸಂಪೂರ್ಣ ದಂಡದ ಮೊತ್ತವನ್ನು ಪಾವತಿಸಲಾಗುವುದು. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376, 354 ಮತ್ತು 354 ರ ಅಡಿಯಲ್ಲಿ ಅವರನ್ನು ದೋಷಿ ಎಂದು ಘೋಷಿಸಿರುವ ನ್ಯಾಯಾಲಯ ಅವರಿಗೆ  ಸೆಕ್ಷನ್ 376 ರ ಅಡಿಯಲ್ಲಿ ಹತ್ತು ವರ್ಷ, ಸೆಕ್ಷನ್ 354 ರ ಅಡಿಯಲ್ಲಿ ಒಂದು ವರ್ಷ ಮತ್ತು ಸೆಕ್ಷನ್ 354 ರ ಅಡಿಯಲ್ಲಿ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಎಲ್ಲಾ ಶಿಕ್ಷೆಗಳು ಏಕಕಾಲದಲ್ಲಿ ಜಾರಿಯಾಗುತ್ತವೆ ಎಂದು ತಿಳಿಸಿದೆ. &lt;/p&gt;&lt;p data-block-key="19d35"&gt;ನ್ಯಾಯಾಲಯದಲ್ಲಿ ತಾನು ಇಬ್ಬರು ಹೆಣ್ಣು ಮಕ್ಕಳ ತಂದೆ. ನನಗೆ ಹೆಂಡತಿ ಇದ್ದಾಳೆ. ರಾಜಕೀಯಕ್ಕೆ ನಾನು ಬಲಿಪಶುವಾಗಿದ್ದೇನೆ ಎಂದಿರುವ ತೇಜ್ ಪಾಲ್, ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವುದಾಗಿ ತೇಜ್‌ಪಾಲ್ ತಿಳಿಸಿದ್ದಾರೆ. &lt;/p&gt;&lt;p data-block-key="94bhm"&gt;ತೇಜ್‌ಪಾಲ್ ಅವರ ವಕೀಲ ಆಬಾದ್ ಪೊಂಡಾ ಅವರು ಕನಿಷ್ಠ ಶಿಕ್ಷೆಗಾಗಿ ನ್ಯಾಯಾಲಯಕ್ಕೆ ಮನವಿ ಮಾಡಿದರು. ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಸಾಧ್ಯವಾಗುವಂತೆ ಶಿಕ್ಷೆ ಮತ್ತು ಶಿಕ್ಷೆಯನ್ನು ಕನಿಷ್ಠ 10 ವಾರಗಳ ಕಾಲ ಅಮಾನತುಗೊಳಿಸುವಂತೆ ನ್ಯಾಯಾಲಯವನ್ನು ಒತ್ತಾಯಿಸಿದರು.&lt;/p&gt;&lt;p data-block-key="3qklh"&gt;&lt;a href="/national/cjps-abhijit-dipke-backs-jharkhand-protest-students-launch-hunger-strike-85695.html"&gt;&lt;b&gt;ಜಾರ್ಖಂಡ್ ಪ್ರತಿಭಟನೆಗೆ ಸಿಜೆಪಿಯ ಅಭಿಜಿತ್ ದೀಪ್ಕೆ ಬೆಂಬಲ: ಮುಂದುವರಿದ ವಿದ್ಯಾರ್ಥಿಗಳ ಉಪವಾಸ ಸತ್ಯಾಗ್ರಹ&lt;/b&gt;&lt;/a&gt;&lt;/p&gt;&lt;p data-block-key="1h1qk"&gt;2013ರ ಪ್ರಕರಣದಲ್ಲಿ ಅವರ ಕಿರಿಯ ಸಹೋದ್ಯೋಗಿಯೊಬ್ಬರು ಗೋವಾದಲ್ಲಿ ನಡೆದ ಥಿಂಕ್‌ಫೆಸ್ಟ್ ಕಾರ್ಯಕ್ರಮದ ಸಂದರ್ಭದಲ್ಲಿ ಹೊಟೇಲ್ ಲಿಫ್ಟ್‌ನಲ್ಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಯೆರೊಪಾಯಿಸಿದ್ದರು. 2021ರಲ್ಲಿ ವಿಚಾರಣಾ ನ್ಯಾಯಾಲಯವು ತೇಜ್ ಪಾಲ್ ಅವರನ್ನು ಆರೋಪದಿಂದ  ಖುಲಾಸೆಗೊಳಿಸಿತ್ತು. ಇದನ್ನು ಪ್ರಶ್ನಿಸಿ ಗೋವಾ ಸರ್ಕಾರ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ಅದರ ತೀರ್ಪನ್ನು ಗುರುವಾರ ಬಾಂಬೆ ಹೈಕೋರ್ಟ್ ನೀಡಿದೆ. &lt;/p&gt;
&lt;/div&gt;
&lt;/p&gt;]]&gt;</content:encoded></item><item><title>Chikkaballapur News: ವಿದ್ಯಾರ್ಥಿ ಪರಿಷತ್ ಅಕಾಡೆಮಿಕ್ ಹಾಗೂ ಸೇವಾ ಪರಂಪರೆಯನ್ನು ಎತ್ತಿ ಹಿಡಿಯಲಿ: ಡಾ.ಕೋಡಿ ರಂಗಪ್ಪ</title><link>https://vishwavani.news/karnataka/chikkaballapur/may-the-student-council-uphold-the-traditions-of-academic-excellence-and-service-dr-kodi-rangappa-85783.html</link><guid>https://vishwavani.news/karnataka/chikkaballapur/may-the-student-council-uphold-the-traditions-of-academic-excellence-and-service-dr-kodi-rangappa-85783.html</guid><pubDate>Thu, 06 Aug 2026 10:59:46 +0000</pubDate><description>&lt;![CDATA[ಶಾಲೆ ಹಾಗೂ ಕಾಲೇಜು ಹಂತದಲ್ಲಿನ ಚುನಾವಣೆಗಳು ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ ಗಳನ್ನು ಬೆಳೆಸಲು ಅತ್ಯುತ್ತಮ ವೇದಿಕೆಯಾಗಿವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕುಟುಂಬ, ಶಾಲೆ, ಸಮಾಜ, ಕೈಗಾರಿಕೆ ಹಾಗೂ ವಿವಿಧ ಸಂಘ-ಸಂಸ್ಥೆಗಳಿಗೆ ಸಮರ್ಥ ನಾಯಕತ್ವ ಅಗತ್ಯವಿದ್ದು, ಅದರ ಅಡಿಪಾಯ ವಿದ್ಯಾರ್ಥಿ ಜೀವನದಲ್ಲೇ ನಿರ್ಮಾಣವಾಗಬೇಕು]]&gt;</description><dc:creator>&lt;![CDATA[Ashok Nayak]]&gt;</dc:creator><category>&lt;![CDATA[ಚಿಕ್ಕಬಳ್ಳಾಪುರ]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕರ್ನಾಟಕ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/digital_election.original.jpg" class="attachment-large size-large wp-post-image" alt="Chikkaballapur News: ವಿದ್ಯಾರ್ಥಿ ಪರಿಷತ್ ಅಕಾಡೆಮಿಕ್ ಹಾಗೂ ಸೇವಾ ಪರಂಪರೆಯನ್ನು ಎತ್ತಿ ಹಿಡಿಯಲಿ: ಡಾ.ಕೋಡಿ ರಂಗಪ್ಪ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="9p9fr"&gt;&lt;b&gt;ಚಿಕ್ಕಬಳ್ಳಾಪುರ:&lt;/b&gt; ಕಾಲೇಜು ವಿದ್ಯಾರ್ಥಿ ಪರಿಷತ್ತಿನ ಸದಸ್ಯರು ಪ್ರತಿಯೊಬ್ಬ ವಿದ್ಯಾರ್ಥಿಯ ಆಶಯ ಗಳಿಗೆ ಸ್ಪಂದಿಸುವುದರ ಜೊತೆಗೆ ಸಂಸ್ಥೆಯ ಅಕಾಡೆಮಿಕ್ ಶ್ರೇಷ್ಠತೆ, ವ್ಯಕ್ತಿತ್ವ ವಿಕಸನ ಹಾಗೂ ಸೇವಾ ಮನೋಭಾವವನ್ನು ಬೆಳೆಸುವ ಚಟುವಟಿಕೆಗಳಿಗೆ ಆದ್ಯತೆ ನೀಡಬೇಕು ಎಂದು ಶಾಂತ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಡಾ.ಕೋಡಿ ರಂಗಪ್ಪ ಹೇಳಿದರು.&lt;/p&gt;&lt;p data-block-key="bcilv"&gt;ಶಾಂತ ಆರೋಗ್ಯ ವಿಜ್ಞಾನ ಕಾಲೇಜುಗಳಲ್ಲಿ ಡಿಜಿಟಲ್ ಚುನಾವಣೆಯ ಮೂಲಕ ಆಯ್ಕೆಯಾದ ವಿದ್ಯಾರ್ಥಿ ಪರಿಷತ್ ಪ್ರತಿನಿಧಿಗಳಿಗೆ ಅಭಿನಂದನೆ ಸಲ್ಲಿಸಿ ಅವರು ಮಾತನಾಡಿದರು.&lt;/p&gt;&lt;p data-block-key="4q9le"&gt;ಶಾಲೆ ಹಾಗೂ ಕಾಲೇಜು ಹಂತದಲ್ಲಿನ ಚುನಾವಣೆಗಳು ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ ಗಳನ್ನು ಬೆಳೆಸಲು ಅತ್ಯುತ್ತಮ ವೇದಿಕೆಯಾಗಿವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕುಟುಂಬ, ಶಾಲೆ, ಸಮಾಜ, ಕೈಗಾರಿಕೆ ಹಾಗೂ ವಿವಿಧ ಸಂಘ-ಸಂಸ್ಥೆಗಳಿಗೆ ಸಮರ್ಥ ನಾಯಕತ್ವ ಅಗತ್ಯವಿದ್ದು, ಅದರ ಅಡಿಪಾಯ ವಿದ್ಯಾರ್ಥಿ ಜೀವನದಲ್ಲೇ ನಿರ್ಮಾಣವಾಗಬೇಕು ಎಂದು ತಿಳಿಸಿದರು.&lt;/p&gt;&lt;p data-block-key="bh8j1"&gt;&lt;b&gt;ಇದನ್ನೂ ಓದಿ:&lt;/b&gt; &lt;a href="/crime/police-bust-illegal-prostitution-ring-in-kanampalli-two-women-and-a-customer-arrested-in-joint-operation-85657.html"&gt;Chinthamani News: ಕನಂಪಲ್ಲಿಯಲ್ಲಿ ಅಕ್ರಮ ವೇಶ್ಯಾವಾಟಿಕೆ ಜಾಲ ಭೇದಿಸಿದ ಪೊಲೀಸರು: ಜಂಟಿ ಕಾರ್ಯಾಚರಣೆಯಲ್ಲಿ ಇಬ್ಬರು ಮಹಿಳೆಯರು, ಓರ್ವ ಗ್ರಾಹಕ ಬಂಧನ&lt;/a&gt;&lt;/p&gt;&lt;p data-block-key="6f4sk"&gt;ಆತ್ಮವಿಶ್ವಾಸ, ಜವಾಬ್ದಾರಿತನ, ಸಮಯಪಾಲನೆ, ಸಂಘಟನಾ ಕೌಶಲ್ಯ, ಪರಿಣಾಮಕಾರಿ ಸಂವಹನ ಹಾಗೂ ಉತ್ತರದಾಯಿತ್ವದಂತಹ ಗುಣಗಳನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ವೃತ್ತಿಪರ ಶಿಕ್ಷಣದಲ್ಲಿ ನಾಯಕತ್ವ ತರಬೇತಿ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.&lt;/p&gt;&lt;p data-block-key="83ibr"&gt;"ನಾಳಿನ ನಾಯಕರು ಇಂದಿನ ಶಾಲೆ-ಕಾಲೇಜುಗಳಲ್ಲೇ ರೂಪುಗೊಳ್ಳುತ್ತಾರೆ" ಎಂಬ ಮಾತಿನಂತೆ, ಶಿಕ್ಷಣ ಸಂಸ್ಥೆಗಳು ಅಕಾಡೆಮಿಕ್ ಕಲಿಕೆಯೊಂದಿಗೆ ನಾಯಕತ್ವದ ಆದರ್ಶಗಳು ಮತ್ತು ಮೌಲ್ಯ ಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಬೇಕು. ಇದರಿಂದ ವಿದ್ಯಾರ್ಥಿಗಳಲ್ಲಿ ನಾಯಕತ್ವದ ಪರಿಕಲ್ಪನೆ, ಅದರ ಅಗತ್ಯತೆ ಹಾಗೂ ಉತ್ತಮ ನಾಯಕರಾಗಿ ರೂಪುಗೊಳ್ಳುವ ಬಗ್ಗೆ ಅರಿವು ಮೂಡುತ್ತದೆ ಎಂದು ಹೇಳಿದರು.&lt;/p&gt;&lt;p data-block-key="am93h"&gt;ವಿದ್ಯಾರ್ಥಿ ಪರಿಷತ್ ಚುನಾವಣೆಯನ್ನು ತಂತ್ರಜ್ಞಾನದ ನೆರವಿನಿಂದ ಡಿಜಿಟಲ್ ಸ್ವರೂಪದಲ್ಲಿ ಯಶಸ್ವಿಯಾಗಿ ಆಯೋಜಿಸಿದ ಸಹಾಯಕ ಪ್ರಾಧ್ಯಾಪಕರಾದ ಅನುಷ್, ವಿನಯ್ ಹಾಗೂ ಪ್ರಾರ್ಥನಾ ಅವರ ತಂಡವನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಲಾಯಿತು.&lt;/p&gt;&lt;p data-block-key="c26f0"&gt;ಚುನಾವಣೆಯಲ್ಲಿ ಒಟ್ಟು 1,164 ವಿದ್ಯಾರ್ಥಿಗಳು ಮತದಾನ ಮಾಡಿದ್ದು, ಪರಿಷತ್ತಿನ ಅಧ್ಯಕ್ಷರಾಗಿ ಡೆನಿಸ್ ಲಾಲು, ಉಪಾಧ್ಯಕ್ಷರಾಗಿ ಅಲ್ಫಿನ್, ಪ್ರಧಾನ ಕಾರ್ಯದರ್ಶಿಯಾಗಿ ದಿಯಾ ನಸ್ರೀನ್, ಖಜಾಂಚಿಯಾಗಿ ಕೀರ್ತನ ಕಿಶೋರ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಕುಶಲ್ ಗೌಡ ಸೇರಿದಂತೆ ವಿವಿಧ ವಿಭಾಗಗಳಿಗೆ ಒಟ್ಟು 19 ಪ್ರತಿನಿಧಿಗಳು ಆಯ್ಕೆಯಾಗಿದ್ದಾರೆ.&lt;/p&gt;&lt;p data-block-key="7mae0"&gt;ಶಾಂತ ಶಿಕ್ಷಣ ಸಂಸ್ಥೆಗಳ ಡೀನ್ ಹಾಗೂ ಪ್ರಾಧ್ಯಾಪಕ ಡಾ.ನವೀನ್ ಸೈಮನ್ ಮಾತನಾಡಿ, ಕಾಲೇಜು ಪರಿಷತ್ತಿನ ಪ್ರತಿನಿಧಿಗಳು ವಿದ್ಯಾರ್ಥಿಗಳ ಹಾಗೂ ಸಂಸ್ಥೆಯ ಸರ್ವಾಂಗೀಣ ಅಭಿವೃದ್ಧಿಗೆ ವಿಶಿಷ್ಟ ಕೊಡುಗೆ ನೀಡುವಂತೆ ಕರೆ ನೀಡಿದರು.&lt;/p&gt;&lt;p data-block-key="73p4m"&gt;ಅಭಿನಂದನಾ ಸಮಾರಂಭದಲ್ಲಿ ಬೋಧಕ ವರ್ಗದ ಶ್ರೀಧರ್, ಓಎಸ್, ಸುರೇಶ್, ಸಂದೇಶ್, ವಿನಯ್, ಮುದಸೀರ್, ಸಚಿನ್, ಅನುಷ್, ಸುಭಾಷಿಣಿ, ಬೃಂದಾ, ಬ್ಯೂಟಿ, ಪ್ರಾರ್ಥನಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ʻಯಶ್, ಕೆಲಸದ ಬಗ್ಗೆ ಅಪಾರ ಕಮಿಟ್‌ಮೆಂಟ್ ಇರುವ ನಟ’: ‘ರಾಮಾಯಣ’ ಟ್ರೇಲರ್ ನೋಡಿ ರಾಧಿಕಾ ಪಂಡಿತ್‌ಗೆ ಮೇಘನಾ ರಾಜ್ ಹೇಳಿದ್ದೇನು?</title><link>https://vishwavani.news/movies/why-meghana-raj-sarja-calls-radhika-pandit-after-watching-yash-starrer-ramayana-trailer-85782.html</link><guid>https://vishwavani.news/movies/why-meghana-raj-sarja-calls-radhika-pandit-after-watching-yash-starrer-ramayana-trailer-85782.html</guid><pubDate>Thu, 06 Aug 2026 10:58:07 +0000</pubDate><description>&lt;![CDATA[ನಟಿ ಮೇಘನಾ ರಾಜ್ ಸರ್ಜಾ ಅವರು 'ರಾಕಿಂಗ್ ಸ್ಟಾರ್' ಯಶ್ ಅವರ ವೃತ್ತಿಪರತೆ ಹಾಗೂ ಶ್ರದ್ಧೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. 'ರಾಜಾಹುಲಿ' ಸಿನಿಮಾದ ಶೂಟಿಂಗ್ ವೇಳೆ ಯಶ್ ತೋರುತ್ತಿದ್ದ ಪರ್ಫೆಕ್ಷನ್ ನೆನಪಿಸಿಕೊಂಡ ಅವರು, 'ರಾಮಾಯಣ' ಚಿತ್ರದ ಟ್ರೇಲರ್ ವೀಕ್ಷಿಸಿದ ತಕ್ಷಣ ರಾಧಿಕಾ ಪಂಡಿತ್‌ಗೆ ಕರೆ ಮಾಡಿ ಇದು 'ರಾವಣಾಯಣ' ಎಂದು ಬಣ್ಣಿಸಿದ್ದಾಗಿ ಹೇಳಿದ್ದಾರೆ.]]&gt;</description><dc:creator>&lt;![CDATA[Avinash GR]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಮನರಂಜನೆ]]&gt;</category><category>&lt;![CDATA[ಸಿನಿಮಾ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/YASH_16_hW9WNQp.original.jpg" class="attachment-large size-large wp-post-image" alt="ʻಯಶ್, ಕೆಲಸದ ಬಗ್ಗೆ ಅಪಾರ ಕಮಿಟ್‌ಮೆಂಟ್ ಇರುವ ನಟ’: ‘ರಾಮಾಯಣ’ ಟ್ರೇಲರ್ ನೋಡಿ ರಾಧಿಕಾ ಪಂಡಿತ್‌ಗೆ ಮೇಘನಾ ರಾಜ್ ಹೇಳಿದ್ದೇನು?" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="arvjk"&gt;ʻರಾಕಿಂಗ್ ಸ್ಟಾರ್ʼ ಯಶ್ ಅವರ ಶ್ರಮ, ವೃತ್ತಿಪರತೆ ಮತ್ತು ಅವರು ಸಾಧಿಸಿದ ಎತ್ತರದ ಬಗ್ಗೆ ನಟಿ ಮೇಘನಾ ರಾಜ್ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಶ್ವವಾಣಿ ಟಿವಿಗೆ ಎಕ್ಸ್‌ಕ್ಲೂಸಿವ್‌ ಸಂದರ್ಶನ ನೀಡಿರುವ ಮೇಘನಾ ರಾಜ್‌ ಸರ್ಜಾ ಅವರು ಯಶ್ ಜೊತೆ 'ರಾಜಾಹುಲಿ' ಸಿನಿಮಾದಲ್ಲಿ ಅಭಿನಯಿಸಿದ್ದ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಯಶ್ ಅವರ ಪರ್ಫೆಕ್ಷನ್ ಹಾಗೂ 'ರಾಮಾಯಣ' ಸಿನಿಮಾದಲ್ಲಿ ಅವರ ಲುಕ್ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.&lt;/p&gt;&lt;h3 data-block-key="327nh"&gt;&lt;b&gt;'ರಾಜಾಹುಲಿ' ಶೂಟಿಂಗ್‌ ನೆನಪಿಸಿಕೊಂಡ ಮೇಘನಾ&lt;/b&gt;&lt;/h3&gt;&lt;p data-block-key="2iksg"&gt;ಯಶ್ ಅವರ ಕೆಲಸದ ಮೇಲಿರುವ ಶ್ರದ್ಧೆಯ ಬಗ್ಗೆ ಮಾತನಾಡಿದ ಮೇಘನಾ ರಾಜ್, "ರಾಜಾಹುಲಿ ಸಿನಿಮಾದ 'ಫಾಲಿಂಗ್ ಇನ್ ಲವ್' ಹಾಡಿನ ಶೂಟಿಂಗ್ ವೇಳೆ ಯಶ್, ಚಿಕ್ಕಣ್ಣ ಎಲ್ಲರೂ ಇದ್ದರು. ಆ ಶಾಟ್‌ನಲ್ಲಿ ಯಶ್ ಹಾಕಿದ್ದ ಶರ್ಟ್ ಸರಿಯಾಗಿ ಐರನ್ ಆಗಿರಲಿಲ್ಲ. ಆ ಶರ್ಟ್ ಅಷ್ಟಾಗಿ ಹೈಲೈಟ್ ಆಗುತ್ತಿರಲಿಲ್ಲವಾದರೂ, ಯಶ್ ಶರ್ಟ್ ಐರನ್ ಆಗುವವರೆಗೂ ಕಾದಿದ್ದು, ಐರನ್ ಆದ ಶರ್ಟ್ ಧರಿಸಿಯೇ ಶಾಟ್ ಮುಗಿಸಿದರು. ಅವರಿಗೆ ಕೆಲಸ, ಸೀನ್, ಶಾಟ್ ಹೇಗೆ ಬರುತ್ತದೆ ಎಂಬುದಷ್ಟೇ ಚಿಂತೆ. ಪ್ರತಿಯೊಂದರಲ್ಲೂ ಪರ್ಫೆಕ್ಷನ್ ಹುಡುಕುವ ಅವರ ಕಮಿಟ್‌ಮೆಂಟ್ ನಿಜಕ್ಕೂ ಅದ್ಭುತ" ಎಂದು ಹೊಗಳಿದ್ದಾರೆ.‌&lt;/p&gt;&lt;p data-block-key="3s8j6"&gt;&lt;a href="/movies/yash-radhika-visit-shivanna-house-on-18th-march-37298.html"&gt;&lt;b&gt;Yash Meets Shivanna: ರಾಕಿಭಾಯ್‌ ಮೀಟ್ಸ್‌ ಶಿವಣ್ಣ; ಶಿವ ರಾಜ್‌ಕುಮಾರ್‌ ಆರೋಗ್ಯ ವಿಚಾರಿಸಿದ ಯಶ್‌-ರಾಧಿಕಾ ಪಂಡಿತ್‌&lt;/b&gt;&lt;/a&gt;&lt;/p&gt;&lt;h3 data-block-key="664cq"&gt;&lt;b&gt;ಕನ್ನಡ ಸಿನಿಮಾ ಗ್ಲೋಬಲ್ ಮಟ್ಟಕ್ಕೇರಿದೆ&lt;/b&gt;&lt;/h3&gt;&lt;p data-block-key="5egeh"&gt;ಬೆನಕ ಥಿಯೇಟರ್ ತಂಡದಲ್ಲಿದ್ದಾಗಿನಿಂದಲೂ ಯಶ್ ಪರಿಚಯವಿದೆ ಎಂದಿರುವ ಮೇಘನಾ, "ಯಶ್ ಯಾವಾಗಲೂ ದೊಡ್ಡ ಕನಸು ಕಾಣುತ್ತಾರೆ. ಆ ಕನಸನ್ನು ನನಸು ಮಾಡಿಕೊಳ್ಳುವ ಆಟಿಟ್ಯೂಡ್ ಅವರಲ್ಲಿದೆ. 'ಕೆಜಿಎಫ್' ಮೂಲಕ ಕನ್ನಡ ಸಿನಿಮಾ ಪ್ಯಾನ್-ಇಂಡಿಯಾ ಮಟ್ಟಕ್ಕೆ ತಲುಪಿದರೆ, ಈಗ 'ಟಾಕ್ಸಿಕ್' ಮೂಲಕ ಗ್ಲೋಬಲ್ ಮಟ್ಟಕ್ಕೆ ತಲುಪುತ್ತಿದೆ. ಒಬ್ಬ ಕನ್ನಡತಿಯಾಗಿ ನನಗೆ ಇದು ಅತ್ಯಂತ ಹೆಮ್ಮೆಯ ವಿಷಯ" ಎಂದಿದ್ದಾರೆ.&lt;/p&gt;&lt;h3 data-block-key="evnm7"&gt;&lt;b&gt;'ರಾಮಾಯಣ ಟ್ರೈಲರ್ ನೋಡಿದ ತಕ್ಷಣ ರಾಧಿಕಾಗೆ ಕಾಲ್ ಮಾಡಿದೆ!'&lt;/b&gt;&lt;/h3&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;iframe width="560" height="315" src="https://www.youtube.com/embed/s0Orcedvzec?si=fdjdlGylwVXc9Zfv" title="YouTube video player" frameborder="0" allow="accelerometer; autoplay; clipboard-write; encrypted-media; gyroscope; picture-in-picture; web-share" referrerpolicy="strict-origin-when-cross-origin" allowfullscreen&gt;&lt;/iframe&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="cr9s5"&gt;&lt;/p&gt;&lt;p data-block-key="90egk"&gt;&lt;a href="/movies/ranbir-kapoor-becomes-highest-paid-in-ramayanasee-other-cast-48189.html"&gt;&lt;b&gt;Ramayana: 'ರಾಮಾಯಣ'ದಲ್ಲಿ ನಟಿಸಲು ನೂರಾರು ಕೋಟಿ ರೂ. ಸಂಭಾವನೆ ಪಡೆದ ಯಶ್-ರಣಬೀರ್ ಕಪೂರ್‌&lt;/b&gt;&lt;/a&gt;&lt;/p&gt;&lt;h3 data-block-key="f9bho"&gt;&lt;b&gt;'ರಾಮಾಯಣ' ನೋಡಿ ರಾಧಿಕಾಗೆ ಕರೆ ಮಾಡಿದ್ದ ಮೇಘನಾ!&lt;/b&gt;&lt;/h3&gt;&lt;p data-block-key="5fikj"&gt;ಬಹುನಿರೀಕ್ಷಿತ 'ರಾಮಾಯಣ' ಸಿನಿಮಾದ ಟ್ರೇಲರ್ ಹಾಗೂ ಅದರಲ್ಲಿ ಯಶ್ ಅವರ ಲುಕ್ ಬಗ್ಗೆ ಪ್ರತಿಕ್ರಿಯಿಸಿದ ಮೇಘನಾ ರಾಜ್, "ರಾಮಾಯಣ ಟ್ರೇಲರ್ ನೋಡಿದ ಮೇಲೆ ನಾನು ರಾಧಿಕಾಗೆ ಕರೆ ಮಾಡಿ, ಇದು 'ರಾಮಾಯಣ' ಅಲ್ಲ, 'ರಾವಣಾಯಣ' ಆಗಿದೆ ಎಂದು ಹೇಳಿದೆ. ನಮ್ಮವರನ್ನು ಆ ಮಟ್ಟದ ದೊಡ್ಡ ಸ್ಕೇಲ್‌ನಲ್ಲಿ ಮತ್ತು ಅಷ್ಟೊಂದು ಅಬ್ಬರಿಸುವುದನ್ನು ನೋಡಿದಾಗ ಕನ್ನಡಿಗರಾಗಿ ನಮಗೆಲ್ಲರಿಗೂ ತುಂಬಾ ಹೆಮ್ಮೆ ಎನಿಸುತ್ತದೆ" ಎಂದು ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ದೆಹಲಿ ಹೋರಾಟದ ಬಳಿಕ ರಾಷ್ಟ್ರವ್ಯಾಪಿ ಮತ್ತೆ ಹೊಸ ಆಂದೋಲನ ಘೋಷಿಸಿದ ಸಿಜೆಪಿಯ ಅಭಿಜಿತ್ ದೀಪ್ಕೆ; ಏನಿದು ಕ್ಯಾ ಬೋಲ್ತಿ ಪಬ್ಲಿಕ್ ಅಭಿಯಾನ?</title><link>https://vishwavani.news/national/cjps-abhijeet-dipke-launches-nationwide-kya-bolti-public-campaign-to-connect-with-people-85779.html</link><guid>https://vishwavani.news/national/cjps-abhijeet-dipke-launches-nationwide-kya-bolti-public-campaign-to-connect-with-people-85779.html</guid><pubDate>Thu, 06 Aug 2026 10:57:31 +0000</pubDate><description>&lt;![CDATA[Kya Bolti Public Campaign: ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜಿತ್ ದೀಪ್ಕೆ ರಾಷ್ಟ್ರವ್ಯಾಪಿ ಸಾರ್ವಜನಿಕ ಸಂಪರ್ಕ ಅಭಿಯಾನದ ಭಾಗವಾಗಿ ಕ್ಯಾ ಬೋಲ್ಟಿ ಪಬ್ಲಿಕ್ ಆಂದೋಲನವನ್ನು ಘೋಷಿಸಿದರು. ಶಿಕ್ಷಣವು ಸುಲಭವಾಗಿ ಲಭ್ಯವಾಗಬೇಕು ಎಂದು ಒತ್ತಿ ಹೇಳಿದ ದೀಪ್ಕೆ, ಸಂವಿಧಾನ ಶಿಲ್ಪಿ ಬಿ.ಆರ್. ಅಂಬೇಡ್ಕರ್ ಅವರನ್ನು ಉಲ್ಲೇಖಿಸಿದರು.]]&gt;</description><dc:creator>&lt;![CDATA[Priyanka P]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ದೇಶ]]&gt;</category><category>&lt;![CDATA[ರಾಜಕೀಯ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Abhijeet_Dipke_1.original.jpg" class="attachment-large size-large wp-post-image" alt="ದೆಹಲಿ ಹೋರಾಟದ ಬಳಿಕ ರಾಷ್ಟ್ರವ್ಯಾಪಿ ಮತ್ತೆ ಹೊಸ ಆಂದೋಲನ ಘೋಷಿಸಿದ ಸಿಜೆಪಿಯ ಅಭಿಜಿತ್ ದೀಪ್ಕೆ; ಏನಿದು ಕ್ಯಾ ಬೋಲ್ತಿ ಪಬ್ಲಿಕ್ ಅಭಿಯಾನ?" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="x2j8f"&gt;&lt;b&gt;ನವದೆಹಲಿ, ಆ. 6:&lt;/b&gt; ಕಾಕ್ರೋಚ್ ಜನತಾ ಪಾರ್ಟಿ &lt;a href="https://vishwavani.news/national/by-election-results-today-will-the-fall-of-cjp-due-to-protests-be-a-blow-to-bjp-85482.html"&gt;&lt;b&gt;(CJP)&lt;/b&gt;&lt;/a&gt;&lt;b&gt; &lt;/b&gt;ಸಂಸ್ಥಾಪಕ ಅಭಿಜಿತ್ ದೀಪ್ಕೆ &lt;a href="https://vishwavani.news/national/cjps-abhijit-dipke-backs-jharkhand-protest-students-launch-hunger-strike-85695.html"&gt;&lt;b&gt;(Abhijeet Dipke)&lt;/b&gt;&lt;/a&gt; ರಾಷ್ಟ್ರವ್ಯಾಪಿ ಸಾರ್ವಜನಿಕ ಸಂಪರ್ಕ ಅಭಿಯಾನದ ಭಾಗವಾಗಿ ಕ್ಯಾ ಬೋಲ್ತಿ ಪಬ್ಲಿಕ್ ಆಂದೋಲನವನ್ನು ಘೋಷಿಸಿದರು. ಜನರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುವ ಗುರಿಯನ್ನು ಇದು ಹೊಂದಿದೆ ಎಂದು ಅವರು ಹೇಳಿದರು. ಈ ಅಭಿಯಾನದ ಮೊದಲ ಗಮನ ಶಿಕ್ಷಣದ ಮೇಲಿರುತ್ತದೆ ಎಂದು ದೀಪ್ಕೆ ಹೇಳಿದರು. ಹೆಚ್ಚುತ್ತಿರುವ ಶಾಲಾ, ಕಾಲೇಜು ಮತ್ತು ತರಬೇತಿ ಶುಲ್ಕಗಳು ಅನೇಕ ಕುಟುಂಬಗಳಿಗೆ ಗುಣಮಟ್ಟದ ಶಿಕ್ಷಣವನ್ನು ಭರಿಸಲು ಕಷ್ಟಪಡುವಂತಾಗಿದೆ ಎಂದು ಹೇಳಿದರು.&lt;/p&gt;&lt;p data-block-key="f9u4o"&gt;“ನಾವು ಕೈಗೆತ್ತಿಕೊಳ್ಳಲಿರುವ ಮೊದಲ ವಿಷಯ ಶಿಕ್ಷಣ ಸುಧಾರಣೆ. ದೇಶದಲ್ಲಿ ಶಿಕ್ಷಣ ಕೈಗೆಟುಕುವಂತಿಲ್ಲ. ವಾರ್ಷಿಕ ಶುಲ್ಕಗಳು 1 ನೇ ತರಗತಿಗೆ 1 ಲಕ್ಷ ರುಪಾಯಿಯಿಂದ 2 ಲಕ್ಷ ರುಪಾಯಿವರೆಗೆ ಇದೆ. ಇದು ದೇಣಿಗೆ ಹಣಕ್ಕಿಂತ ಹೆಚ್ಚು” ಎಂದು ಅವರು ಹೇಳಿದರು. ಮಧ್ಯಮ ಮತ್ತು ಕಡಿಮೆ ಆದಾಯದ ಕುಟುಂಬಗಳು ಇಂತಹ ವೆಚ್ಚಗಳನ್ನು ಹೇಗೆ ನಿರ್ವಹಿಸುತ್ತವೆ ಎಂದು ದೀಪ್ಕೆ ಪ್ರಶ್ನಿಸಿದರು.&lt;/p&gt;&lt;p data-block-key="4ekhk"&gt;&lt;a href="https://vishwavani.news/national/jharkhand-jpsc-student-protest-august-10-85702.html"&gt;&lt;b&gt;ಜೆಪಿಎಸ್‌ಸಿ ಪರೀಕ್ಷೆ ರದ್ದುಪಡಿಸಲು ಜಾರ್ಖಂಡ್‌ನಲ್ಲಿ ವಿದ್ಯಾರ್ಥಿಗಳ ಹೋರಾಟ ತೀವ್ರ&lt;/b&gt;&lt;/a&gt;&lt;/p&gt;&lt;p data-block-key="3cdm8"&gt;ಹೆಚ್ಚುತ್ತಿರುವ ಕಾಲೇಜು ಮತ್ತು ತರಬೇತಿ ಶುಲ್ಕಗಳು ಹಲವು ಕುಟುಂಬಗಳನ್ನು ಸಾಲದ ಸುಳಿಗೆ ತಳ್ಳುತ್ತಿವೆ. ಈ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಸಿಜೆಪಿಯು ಬಯಸಿದೆ ಎಂದು ಹೇಳಿದರು. ʼʼಕಾಲೇಜು ಶುಲ್ಕಗಳು ಮತ್ತು ತರಬೇತಿ ಶುಲ್ಕಗಳು ಸಹ ತುಂಬಾ ಹೆಚ್ಚಾಗುತ್ತಿವೆ. ಕುಟುಂಬಗಳನ್ನು ಸಾಲದ ಹೊರೆಗೆ ಸಿಲುಕಿಸುತ್ತಿವೆ. ನಾವು ಕುಟುಂಬಗಳನ್ನು ಇದರಿಂದ ಮುಕ್ತಗೊಳಿಸಲು ಬಯಸುತ್ತೇವೆ. ಪೋಷಕರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣವನ್ನು ನೀಡಲು ಬಯಸಿದರೆ ಅದು ಅವರಿಗೆ ಹೊರೆಯಾಗಬಾರದು” ಎಂದು ಹೇಳಿದರು.&lt;/p&gt;&lt;p data-block-key="3ifhh"&gt;ಶಿಕ್ಷಣವು ಸುಲಭವಾಗಿ ಲಭ್ಯವಾಗುವಂತೆ ಇರಬೇಕು ಎಂದು ಒತ್ತಿ ಹೇಳಿದ ದೀಪ್ಕೆ, ಸಂವಿಧಾನ ಶಿಲ್ಪಿ ಬಿ.ಆರ್. ಅಂಬೇಡ್ಕರ್ ಅವರನ್ನು ಉಲ್ಲೇಖಿಸಿದರು. “ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರಕಾರ ಇದು ಮೂಲಭೂತ ಹಕ್ಕು. ಆದರೆ ಕಳೆದ ಕೆಲವು ವರ್ಷಗಳಿಂದ, ಶಿಕ್ಷಣವು ವ್ಯಾಪಾರ ಗಳಿಸಲು ಮೂಲಭೂತ ವ್ಯವಹಾರವಾಗಿದೆ” ಎಂದು ಅವರು ಹೇಳಿದರು.&lt;/p&gt;&lt;p data-block-key="25sk9"&gt;&lt;b&gt;ಸಿಜೆಪಿ ಸಂಸ್ಥಾಪಕ ಅಭೀಜಿತ್ ದೀಪ್ಕೆ ಕುರಿತು ಜ್ಯೋತಿಷಿ ನುಡಿದ ಭವಿಷ್ಯವೇನು?&lt;/b&gt;&lt;/p&gt;&lt;p data-block-key="ejfdb"&gt;ಕಾಕ್ರೋಚ್ ಜನತಾ ಪಾರ್ಟಿಯ ಸಂಸ್ಥಾಪಕ ಅಭೀಜಿತ್ ದೀಪ್ಕೆ ಸದ್ಯ ಭಾರಿ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಭಾರತದ ಯುವ ಪೀಳಿಗೆಯ ಜತೆ ಸೇರಿ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಪ್ರತಿಭಟನೆ ನಡೆಸಿ ಸದ್ದು ಮಾಡಿದ್ದರು. ಈ ನಡುವೆ ಸಿಜೆಪಿ ಸಂಸ್ಥಾಪಕರಿಗೆ ಮುಂದಿನ ದಿನದ ಭವಿಷ್ಯವು ಕರಾಳವಾಗಿದೆ ಎಂದು ಖ್ಯಾತ ಜ್ಯೋತಿಷಿಯೊಬ್ಬರು ಎಚ್ಚರಿಕೆ ನೀಡಿದ್ದಾರೆ. ಮುಂದಿನ ವರ್ಷ ಈತನಿಗೆ ತುಂಬಾ ಒತ್ತಡದಾಯಕ ದಿನವಾಗಬಹುದು. ವಾಸ್ತವವಾಗಿ ಜೈಲಿಗೂ ಹೋಗಬಹುದು ಎಂದು ಭವಿಷ್ಯ ನುಡಿದಿದ್ದಾರೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಮಣಿಪಾಲ್ ಆಸ್ಪತ್ರೆಯಲ್ಲಿ ದೇಶದ ಮೊದಲ ಎಐ ಆಧಾರಿತ ಎಲೆಕ್ಟಾ ಇವೋ</title><link>https://vishwavani.news/health/countrys-first-ai-based-elekta-evo-at-manipal-hospital-85781.html</link><guid>https://vishwavani.news/health/countrys-first-ai-based-elekta-evo-at-manipal-hospital-85781.html</guid><pubDate>Thu, 06 Aug 2026 10:46:21 +0000</pubDate><description>&lt;![CDATA[ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಅಂಕಿಅಂಶಗಳ ಪ್ರಕಾರ, ದೇಶದಲ್ಲಿ ಪ್ರತಿ ವರ್ಷ ಸುಮಾರು 14.6 ಲಕ್ಷ ಹೊಸ ಕ್ಯಾನ್ಸರ್ ಪ್ರಕರಣಗಳು ದಾಖಲಾಗುತ್ತಿವೆ. ಈ ಹಿನ್ನೆಲೆ ಯಲ್ಲಿ ರೋಗಿಯ ಅಗತ್ಯಕ್ಕೆ ತಕ್ಕಂತೆ ಚಿಕಿತ್ಸೆಯನ್ನು ರೂಪಿಸುವ ತಂತ್ರಜ್ಞಾನಗಳ ಅಗತ್ಯ ಹೆಚ್ಚುತ್ತಿದ್ದು, ಎಲೆಕ್ಟಾ ಇವೋ ಈ ದಿಸೆಯಲ್ಲಿ ಮಹತ್ವದ ಹೆಜ್ಜೆಯಾಗಿದೆ.]]&gt;</description><dc:creator>&lt;![CDATA[Ashok Nayak]]&gt;</dc:creator><category>&lt;![CDATA[ಬೆಂಗಳೂರು ನಗರ]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕರ್ನಾಟಕ]]&gt;</category><category>&lt;![CDATA[ಆರೋಗ್ಯ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/elekto.original.jpg" class="attachment-large size-large wp-post-image" alt="ಮಣಿಪಾಲ್ ಆಸ್ಪತ್ರೆಯಲ್ಲಿ ದೇಶದ ಮೊದಲ ಎಐ ಆಧಾರಿತ ಎಲೆಕ್ಟಾ ಇವೋ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="2og62"&gt;&lt;b&gt;ಬೆಂಗಳೂರು: &lt;/b&gt;ಕ್ಯಾನ್ಸರ್ ಚಿಕಿತ್ಸೆಯಲ್ಲಿ ಹೊಸ ಮೈಲುಗಲ್ಲು ನಿರ್ಮಿಸಿರುವ ಮಣಿಪಾಲ್ ಆಸ್ಪತ್ರೆ, ಭಾರತದಲ್ಲೇ ಮೊದಲ ಬಾರಿಗೆ ಎಐ (ಕೃತಕ ಬುದ್ಧಿಮತ್ತೆ) ಆಧಾರಿತ ಅಡಾಪ್ಟಿವ್ ಸಿಟಿ-ಲಿನ್ಯಾಕ್ (CT-Linac) ವೇದಿಕೆ ಎಲೆಕ್ಟಾ ಇವೋ (Elekta Evo) ಅನ್ನು ಅಳವಡಿಸಿಕೊಂಡಿದೆ. ಈ ಅತ್ಯಾಧುನಿಕ ತಂತ್ರಜ್ಞಾನವು ವೈದ್ಯರಿಗೆ ಆನ್‌ಲೈನ್ ಅಡಾಪ್ಟಿವ್ ರೇಡಿಯೋಥೆರಪಿ (Adaptive Radiotherapy) ನೀಡಲು ನೆರವಾಗಲಿದ್ದು, ಪ್ರತಿಯೊಬ್ಬ ರೋಗಿಯ ದೇಹದಲ್ಲಿ ಚಿಕಿತ್ಸೆಯ ಅವಧಿ ಯಲ್ಲಿ ಉಂಟಾಗುವ ಬದಲಾವಣೆಗಳಿಗೆ ಅನುಗುಣವಾಗಿ ಚಿಕಿತ್ಸೆಯನ್ನು ಹೊಂದಾಣಿಕೆ ಮಾಡುವ ಮೂಲಕ ಹೆಚ್ಚು ನಿಖರ ಹಾಗೂ ವೈಯಕ್ತಿಕಗೊಳಿಸಿದ ಕ್ಯಾನ್ಸರ್ ಚಿಕಿತ್ಸೆಯನ್ನು ಸಾಧ್ಯವಾಗಿಸುತ್ತದೆ.&lt;/p&gt;&lt;p data-block-key="4a3tf"&gt;ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಅಂಕಿಅಂಶಗಳ ಪ್ರಕಾರ, ದೇಶದಲ್ಲಿ ಪ್ರತಿ ವರ್ಷ ಸುಮಾರು 14.6 ಲಕ್ಷ ಹೊಸ ಕ್ಯಾನ್ಸರ್ ಪ್ರಕರಣಗಳು ದಾಖಲಾಗುತ್ತಿವೆ. ಈ ಹಿನ್ನೆಲೆ ಯಲ್ಲಿ ರೋಗಿಯ ಅಗತ್ಯಕ್ಕೆ ತಕ್ಕಂತೆ ಚಿಕಿತ್ಸೆಯನ್ನು ರೂಪಿಸುವ ತಂತ್ರಜ್ಞಾನಗಳ ಅಗತ್ಯ ಹೆಚ್ಚುತ್ತಿದ್ದು, ಎಲೆಕ್ಟಾ ಇವೋ ಈ ದಿಸೆಯಲ್ಲಿ ಮಹತ್ವದ ಹೆಜ್ಜೆಯಾಗಿದೆ.&lt;/p&gt;&lt;p data-block-key="554na"&gt;&lt;b&gt;ಇದನ್ನೂ ಓದಿ: &lt;/b&gt;&lt;a href="/videos/these-leaves-are-makes-even-white-hair-black-85627.html"&gt;Vishwavani Health: ಬಿಳಿ ಕೂದಲನ್ನು ಕಪ್ಪು ಮಾಡುತ್ತೆ ಈ ಒಂದು ಮ್ಯಾಜಿಕ್‌ ಸೊಪ್ಪು; ಕಾಡಲ್ಲಿ ಮಾತ್ರವಲ್ಲ ನಾಡಲ್ಲೂ ಸಿಗುತ್ತೆ! ವಿಡಿಯೊ ನೋಡಿ&lt;/a&gt;&lt;/p&gt;&lt;p data-block-key="buqbs"&gt;ಮಣಿಪಾಲ್ ಆಸ್ಪತ್ರೆಯ ರೇಡಿಯೇಷನ್ ಆಂಕಾಲಜಿ ವಿಭಾಗವು ಈಗಾಗಲೇ ಈ ತಂತ್ರಜ್ಞಾನವನ್ನು ತನ್ನ ದೈನಂದಿನ ಚಿಕಿತ್ಸಾ ವ್ಯವಸ್ಥೆಯಲ್ಲಿ ಅಳವಡಿಸಿಕೊಂಡಿದೆ. ಎಲೆಕ್ಟಾ ಇವೋ ಬಳಸಿ ಸ್ಥಳೀಯ ವಾಗಿ ಮುಂದುವರಿದ ಹಂತದ ರೆಕ್ಟಲ್ ಕ್ಯಾನ್ಸರ್ ಹೊಂದಿದ್ದ ಮೊದಲ ರೋಗಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಗಿದೆ. ರೋಗಿಯು ನಿಯೋಅಡ್ಜುವೆಂಟ್ ಕೀಮೋ-ರೇಡಿಯೋಥೆರಪಿಯನ್ನು ಅತ್ಯಲ್ಪ ಅಡ್ಡಪರಿಣಾಮಗಳೊಂದಿಗೆ ಪೂರ್ಣಗೊಳಿಸಿದ್ದು, ಇದು ಈ ತಂತ್ರಜ್ಞಾನದ ಪರಿಣಾಮ ಕಾರಿತ್ವವನ್ನು ಸಾಬೀತುಪಡಿಸಿದೆ.&lt;/p&gt;&lt;p data-block-key="6r8qp"&gt;ಎಲೆಕ್ಟಾದ ಟೈಮಿಯಾ (TIMEA) ಪ್ರದೇಶದ ಮುಖ್ಯಸ್ಥ ಫಿರಾಸ್ ಅಲ್ ಹಸನ್ ಮಾತನಾಡಿ, "ಭಾರತ ದಲ್ಲಿ ಅಡಾಪ್ಟಿವ್ ರೇಡಿಯೇಷನ್ ಥೆರಪಿಯನ್ನು ಮತ್ತಷ್ಟು ವಿಸ್ತರಿಸುವಲ್ಲಿ ಇದು ಮಹತ್ವದ ಮೈಲಿಗಲ್ಲು. ಎಐ-ಸಕ್ರಿಯ ಇಮೇಜಿಂಗ್ ಮತ್ತು ಆನ್‌ಲೈನ್ ಅಡಾಪ್ಟಿವ್ ಸಾಮರ್ಥ್ಯಗಳನ್ನು ಹೊಂದಿರುವ ಎಲೆಕ್ಟಾ ಇವೋ ವೈದ್ಯರಿಗೆ ರೋಗಿಯ ಚಿಕಿತ್ಸೆಯ ಪ್ರತಿಯೊಂದು ಹಂತದಲ್ಲೂ ಹೆಚ್ಚು ನಿಖರವಾದ ನಿರ್ಧಾರಗಳನ್ನು ಕೈಗೊಳ್ಳಲು ನೆರವಾಗುತ್ತದೆ. ಈ ತಂತ್ರಜ್ಞಾನವನ್ನು ಭಾರತಕ್ಕೆ ಪರಿಚಯಿಸಲು ಮಣಿಪಾಲ್ ಆಸ್ಪತ್ರೆಯೊಂದಿಗೆ ಕೈಜೋಡಿಸಿರುವುದು ನಮಗೆ ಹೆಮ್ಮೆಯ ವಿಚಾರ" ಎಂದರು.&lt;/p&gt;&lt;p data-block-key="bpgf"&gt;ಮಣಿಪಾಲ್ ಆಸ್ಪತ್ರೆ, ಯಲಹಂಕದ ರೇಡಿಯೇಷನ್ ಆಂಕಾಲಜಿ ವಿಭಾಗದ ಲೀಡ್ ಕನ್ಸಲ್ಟೆಂಟ್ ಡಾ. ವಿಕ್ರಮ್ ಮೈಯಾ ಅವರು, "ರೋಗಿಯ ದೇಹದಲ್ಲಿ ಆಗುವ ಬದಲಾವಣೆಗಳಿಗೆ ಅನುಗುಣವಾಗಿ ಪ್ರತಿದಿನ ಚಿಕಿತ್ಸೆಯನ್ನು ಪರಿಷ್ಕರಿಸುವ ಸಾಮರ್ಥ್ಯ ಎಲೆಕ್ಟಾ ಇವೋಗೆ ಇದೆ. ಇದರಿಂದ ಟ್ಯೂಮರ್‌ ಗೆ ಹೆಚ್ಚು ನಿಖರವಾಗಿ ರೇಡಿಯೇಷನ್ ನೀಡುವುದರ ಜೊತೆಗೆ ಆರೋಗ್ಯಕರ ಅಂಗಾಂಶಗಳನ್ನು ರಕ್ಷಿಸಬಹುದು. ಸರ್ವೈಕಲ್, ರೆಕ್ಟಲ್ ಹಾಗೂ ಪ್ರೋಸ್ಟೇಟ್ ಕ್ಯಾನ್ಸರ್ ರೋಗಿಗಳ ಚಿಕಿತ್ಸೆಯಲ್ಲಿ ಆರಂಭಿಕ ಫಲಿತಾಂಶಗಳು ಅತ್ಯಂತ ಆಶಾದಾಯಕವಾಗಿದ್ದು, ಅಡ್ಡಪರಿಣಾಮಗಳು ಸಹ ಅತ್ಯಲ್ಪವಾಗಿವೆ" ಎಂದು ತಿಳಿಸಿದರು.&lt;/p&gt;&lt;p data-block-key="350ck"&gt;ಐರಿಸ್™ ಎಐ-ಆಧಾರಿತ ಇಮೇಜಿಂಗ್ ತಂತ್ರಜ್ಞಾನದಿಂದ ಕಾರ್ಯನಿರ್ವಹಿಸುವ ಎಲೆಕ್ಟಾ ಇವೋ, ಟ್ಯೂಮರ್ ಮತ್ತು ಸುತ್ತಮುತ್ತಲಿನ ಅಂಗಾಂಶಗಳನ್ನು ಅತ್ಯಂತ ಸ್ಪಷ್ಟವಾಗಿ ಗುರುತಿಸಲು ನೆರವಾಗುತ್ತದೆ. ಎಐ ನೆರವಿನ ಕಾಂಟೂರಿಂಗ್, ವೇಗದ ಚಿಕಿತ್ಸಾ ಯೋಜನೆ ಮತ್ತು ನಿಖರ ಡೋಸ್ ಲೆಕ್ಕಾಚಾರದ ಮೂಲಕ ವೈದ್ಯರಿಗೆ ಹೆಚ್ಚಿನ ಕಾರ್ಯಕ್ಷಮತೆ ಹಾಗೂ ಆತ್ಮವಿಶ್ವಾಸದೊಂದಿಗೆ ಚಿಕಿತ್ಸೆ ನೀಡಲು ಇದು ಸಹಕಾರಿಯಾಗಿದೆ.&lt;/p&gt;&lt;p data-block-key="1008l"&gt;ಪ್ರಸ್ತುತ, ಯಲಹಂಕದ ಮಣಿಪಾಲ್ ಆಸ್ಪತ್ರೆಯಲ್ಲಿ ಈ ತಂತ್ರಜ್ಞಾನವನ್ನು ಸರ್ವೈಕಲ್, ರೆಕ್ಟಲ್ ಹಾಗೂ ಪ್ರೋಸ್ಟೇಟ್ ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗೆ ಬಳಸಲಾಗುತ್ತಿದ್ದು, ಇದು ವೈಯಕ್ತಿಕಗೊಳಿಸಿದ, ಅತ್ಯಾಧುನಿಕ ಹಾಗೂ ಸುರಕ್ಷಿತ ಕ್ಯಾನ್ಸರ್ ಚಿಕಿತ್ಸೆಗೆ ಹೊಸ ದಿಕ್ಕನ್ನು ತೆರೆದಿದೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>"ಯುದ್ಧ ಬೇಡ, ಶಾಂತಿ ಬೇಕು" - ಜಯನಗರದಲ್ಲಿ ಹಿರೋಷಿಮಾ ದಿನಾಚರಣೆ</title><link>https://vishwavani.news/karnataka/bengaluru-urban/no-need-war-peace-needed-hiroshima-day-85773.html</link><guid>https://vishwavani.news/karnataka/bengaluru-urban/no-need-war-peace-needed-hiroshima-day-85773.html</guid><pubDate>Thu, 06 Aug 2026 10:39:11 +0000</pubDate><description>&lt;![CDATA[ಹಿರೋಷಿಮಾ ನಾಗಾಸಾಕಿ ಬಾಂಬ್ ದಾಳಿಯ ಭೀಕರತೆಯನ್ನು ನೆನಪಿಸಿಕೊಂಡು ವಿಶ್ವಶಾಂತಿಯ ಸಂದೇಶ ಸಾರುವ ಉದ್ದೇಶದಿಂದ ಆರ್ಟ್ ಕಲ್ಚರಲ್ ಎಜುಕೇಶನಲ್ ಎನ್ಲೈಟ್ ಫೌಂಡೇಶನ್ (ರಿ) ವತಿಯಿಂದ ಜಯನಗರದ ಆರ್.ಕೆ.ಎಸ್. ಎಜುಕೇಶನಲ್ ಸೊಸೈಟಿ (ರಿ) ಶಾಲೆ ಯಲ್ಲಿ "ಹಿರೋಷಿಮಾ ಡೇ" ಶಾಂತಿ ಅಭಿಯಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.]]&gt;</description><dc:creator>&lt;![CDATA[Ashok Nayak]]&gt;</dc:creator><category>&lt;![CDATA[ಬೆಂಗಳೂರು ನಗರ]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕರ್ನಾಟಕ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/nowar.original.jpg" class="attachment-large size-large wp-post-image" alt=""ಯುದ್ಧ ಬೇಡ, ಶಾಂತಿ ಬೇಕು" - ಜಯನಗರದಲ್ಲಿ ಹಿರೋಷಿಮಾ ದಿನಾಚರಣೆ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="1i7ws"&gt;&lt;b&gt;ಬೆಂಗಳೂರು:&lt;/b&gt; ಹಿರೋಷಿಮಾ ನಾಗಾಸಾಕಿ ಬಾಂಬ್ ದಾಳಿಯ ಭೀಕರತೆಯನ್ನು ನೆನಪಿಸಿಕೊಂಡು ವಿಶ್ವಶಾಂತಿಯ ಸಂದೇಶ ಸಾರುವ ಉದ್ದೇಶದಿಂದ ಆರ್ಟ್ ಕಲ್ಚರಲ್ ಎಜುಕೇಶನಲ್ ಎನ್ಲೈಟ್ ಫೌಂಡೇಶನ್ (ರಿ) ವತಿಯಿಂದ ಜಯನಗರದ ಆರ್.ಕೆ.ಎಸ್. ಎಜುಕೇಶನಲ್ ಸೊಸೈಟಿ (ರಿ) ಶಾಲೆ ಯಲ್ಲಿ "ಹಿರೋಷಿಮಾ ಡೇ" ಶಾಂತಿ ಅಭಿಯಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.&lt;/p&gt;&lt;p data-block-key="8cvcc"&gt;ಸಂಸ್ಥೆಯ ಸಂಸ್ಥಾಪಕಿ ಶ್ರೀಮತಿ ಅಂಬಿಕಾ. ಸಿ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದ ಮುಖ್ಯ ಧ್ಯೇಯ "ಯುದ್ಧ ಬೇಡ, ಶಾಂತಿ ಬೇಕು". ಶಾಲಾ ಮಕ್ಕಳಲ್ಲಿ ಶಾಂತಿ ಮತ್ತು ಪ್ರಕೃತಿ ಸಂರಕ್ಷಣೆ ಯ ಮಹತ್ವದ ಬಗ್ಗೆ ಅರಿವು ಮೂಡಿಸುವುದು ಇದರ ಪ್ರಮುಖ ಉದ್ದೇಶವಾಗಿತ್ತು.&lt;/p&gt;&lt;p data-block-key="ef27c"&gt;&lt;b&gt;ಇದನ್ನೂ ಓದಿ: &lt;/b&gt;&lt;a href="/karnataka/chikkaballapur/grand-event-at-sri-prasanna-veeranjaneya-yoga-kendra-felicitation-of-dr-ts-satyavathi-and-a-presentation-on-the-kailash-mansarovar-pilgrimage-85461.html"&gt;Bangalore News: ಶ್ರೀ ಪ್ರಸನ್ನ ವೀರಾಂಜನೇಯ ಯೋಗ ಕೇಂದ್ರದಲ್ಲಿ ಅದ್ದೂರಿ ಕಾರ್ಯಕ್ರಮ: ಡಾ.ಟಿ.ಎಸ್.ಸತ್ಯವತಿ ಅವರಿಗೆ ಸನ್ಮಾನ ಹಾಗೂ ಕೈಲಾಸ ಮಾನಸ ಸರೋವರ ದರ್ಶನ&lt;/a&gt;&lt;/p&gt;&lt;p data-block-key="3cbbg"&gt;ಕಾರ್ಯಕ್ರಮಕ್ಕೆ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷರಾದ ಎನ್.ಲಕ್ಷ್ಮಿಕಾಂತ್, ನ್ಯೂಕ್ಲಿಯರ್ ಫಿಸಿಕ್ಸ್ ಮತ್ತು ತಂತ್ರಜ್ಞಾನ ತಜ್ಞರಾದ ಶ್ರೀ. ಅದಿತ್ಯ. ಎಸ್, ಆರ್.ಕೆ.ಎಸ್. ಶಾಲೆಯ ಪ್ರಾಂಶುಪಾಲರಾದ ಶ್ರೀ. ವೆಂಕಟೇಶ್ ಮೂರ್ತಿ ಮತ್ತು ಶಿಕ್ಷಕ ವೃಂದದವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.&lt;/p&gt;&lt;p data-block-key="b9vg6"&gt;ಕಾರ್ಯಕ್ರಮವು ಹಿರೋಷಿಮಾ ದಾಳಿಯಲ್ಲಿ ಮೃತಪಟ್ಟವರ ನೆನಪಿಗಾಗಿ 1 ನಿಮಿಷ ಮೌನ ದೊಂದಿಗೆ ಪ್ರಾರಂಭವಾಯಿತು. ಮಾತನಾಡಿದ ಅತಿಥಿಗಳು ಪರಮಾಣು ಯುದ್ಧದ ದುಷ್ಪರಿಣಾಮ ಗಳನ್ನು ವಿವರಿಸಿ, ವಿಜ್ಞಾನವನ್ನು ಮಾನವ ಕಲ್ಯಾಣಕ್ಕಾಗಿ ಬಳಸಬೇಕೆಂದು ಕರೆ ನೀಡಿದರು. "ಇಂತಹ ದುರಂತ ಮತ್ತೆ ಮರುಕಳಿಸಬಾರದು, ಶಾಂತಿಯೇ ಜಗತ್ತಿನ ಉಳಿವು" ಎಂಬ ಸಂದೇಶವನ್ನು ಮಕ್ಕಳಿಗೆ ನೀಡಿದರು.&lt;/p&gt;&lt;p data-block-key="ch3s4"&gt;ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳು "ಶಾಂತಿಯೇ ನಮ್ಮ ಬಲ" ಎಂಬ ಘೋಷಣೆ ಕೂಗಿ ಶಾಂತಿಯ ಪ್ರತಿಜ್ಞೆ ಸ್ವೀಕರಿಸಿದರು. ಪ್ರಕೃತಿ ಸಂರಕ್ಷಣೆಯ ಸಂದೇಶವಾಗಿ ಗಿಡಗಳನ್ನು ವಿತರಿಸಲಾಯಿತು.&lt;/p&gt;
&lt;/div&gt;
&lt;/p&gt;]]&gt;</content:encoded></item></channel></rss>