<?xml version="1.0" encoding="utf-8"?>
<rss version="2.0" xmlns:atom="http://www.w3.org/2005/Atom" xmlns:content="http://purl.org/rss/1.0/modules/content/" xmlns:dc="http://purl.org/dc/elements/1.1/" xmlns:slash="http://purl.org/rss/1.0/modules/slash/" xmlns:sy="http://purl.org/rss/1.0/modules/syndication/" xmlns:wfw="http://wellformedweb.org/CommentAPI/"><channel><title>Vishwavani News - Latest Kannada News</title><link>https://vishwavani.news</link><description>Latest news and updates from Vishwavani News</description><atom:link href="https://www.vishwavani.news/feed/" rel="self"/><language>kn-IN</language><lastBuildDate>Tue, 05 May 2026 09:51:05 +0000</lastBuildDate><copyright>https://vishwavani.news/</copyright><generator>https://vishwavani.news/</generator><atom:link href="https://www.vishwavani.news/feed/" rel="self" type="application/rss+xml"/><item><title>ಇಂದಿರಾ ಗಾಂಧಿ ಕಾಲದ ಕಾಂಗ್ರೆಸ್ ದಾಖಲೆ ಸರಿಗಟ್ಟಿದ ಬಿಜೆಪಿ: ಈಗ ಕಛ್‌ನಿಂದ ಕಿಬಿತ್ತುವರೆಗೆ ಕೇಸರಿ ಅಲೆ</title><link>https://vishwavani.news/national/bjp-power-21-states-bengal-assam-historic-win-77277.html</link><guid>https://vishwavani.news/national/bjp-power-21-states-bengal-assam-historic-win-77277.html</guid><pubDate>Tue, 05 May 2026 09:51:05 +0000</pubDate><description>&lt;![CDATA[ಅಸ್ಸಾಂನಲ್ಲಿ ಸತತ ಮೂರನೇ ಬಾರಿ ಅಧಿಕಾರವನ್ನು ಕಾಪಾಡಿಕೊಂಡು, ಪಶ್ಚಿಮ ಬಂಗಾಳದಲ್ಲಿ ಮಹತ್ವದ ಗೆಲುವು ಸಾಧಿಸುವ ಮೂಲಕ ಬಿಜೆಪಿ ತನ್ನ ರಾಜಕೀಯ ಪ್ರಭಾವವನ್ನು ದೇಶದ 21 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ವಿಸ್ತರಿಸಿದೆ. 2014ರಲ್ಲಿ ಕೇವಲ ಏಳು ರಾಜ್ಯಗಳಲ್ಲಿ ಮಾತ್ರ ಅಧಿಕಾರ ಹೊಂದಿದ್ದ ಪಕ್ಷ, ಸಂಘಟನಾ ಶಕ್ತಿ, ಮೈತ್ರಿ ರಾಜಕೀಯ ಮತ್ತು ಬೂತ್ ಮಟ್ಟದ ಕಾರ್ಯತಂತ್ರಗಳ ಮೂಲಕ ದೊಡ್ಡ ಮಟ್ಟದ ಬೆಳವಣಿಗೆಯನ್ನು ಸಾಧಿಸಿದೆ. ಈ ಸಾಧನೆ ಇಂದಿರಾ ಗಾಂಧಿಯ ಕಾಲದಲ್ಲಿ ಕಾಂಗ್ರೆಸ್ ಹೊಂದಿದ್ದ ಐತಿಹಾಸಿಕ ಪ್ರಾಬಲ್ಯಕ್ಕೆ ಸಮಾನವಾಗಿದೆ. 2024ರ ಲೋಕಸಭಾ ಚುನಾವಣೆಯ ಹಿನ್ನಡೆಯ ನಂತರವೂ ಬಿಜೆಪಿ ಪುನರುತ್ಥಾನ ಸಾಧಿಸಿದ್ದು, ರಾಷ್ಟ್ರ ರಾಜಕೀಯದಲ್ಲಿ ತನ್ನ ಪ್ರಾಬಲ್ಯವನ್ನು ಮತ್ತೆ ದೃಢಪಡಿಸಿದೆ.]]&gt;</description><dc:creator>&lt;![CDATA[Sushmitha Jain]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ದೇಶ]]&gt;</category><category>&lt;![CDATA[ರಾಜಕೀಯ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/BJP_Secures_Power.original.jpg" class="attachment-large size-large wp-post-image" alt="ಇಂದಿರಾ ಗಾಂಧಿ ಕಾಲದ ಕಾಂಗ್ರೆಸ್ ದಾಖಲೆ ಸರಿಗಟ್ಟಿದ ಬಿಜೆಪಿ: ಈಗ ಕಛ್‌ನಿಂದ ಕಿಬಿತ್ತುವರೆಗೆ ಕೇಸರಿ ಅಲೆ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="e0ys3"&gt;&lt;b&gt;ಕೋಲ್ಕತ್ತಾ, ಮೇ 5: &lt;/b&gt;ಮೇ 4ರಂದು ಪ್ರಕಟವಾದ ಚುನಾವಣಾ ಫಲಿತಾಂಶದ ಬಳಿಕ ಬಿಜೆಪಿ ಅಭೂತಪೂರ್ವ ಶಕ್ತಿಯಾಗಿ ಮೂಡಿ ಬಂದಿವೆ. ಪಶ್ಚಿಮ ಬಂಗಾಳದಲ್ಲಿ (West Benagal) ತೃಣಮೂಲ ಕಾಂಗ್ರೆಸ್ (Trunamul Congress) ಅನ್ನು ಮಣಿಸಿ, ಅಸ್ಸಾಂನಲ್ಲಿ ಸತತ ಮೂರನೇ ಬಾರಿಗೆ ಭರ್ಜರಿ ಅಧಿಕಾರ ಹಿಡಿಯುವ ಮೂಲಕ ಬಿಜೆಪಿ ಹೊಸ ಇತಿಹಾಸ ನಿರ್ಮಿಸಿದೆ. ಈ ಗೆಲುವಿನೊಂದಿಗೆ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು (NDA Alliance) ದೇಶದ ಒಟ್ಟು 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಅಧಿಕಾರ ಸ್ಥಾಪಿಸಿದಂತಾಗಿದೆ. ಇದು 1970ರ ದಶಕದ ಅಂತ್ಯದಲ್ಲಿ ಇಂದಿರಾ ಗಾಂಧಿ (Indira Gandhi) ಅವರ ನೇತೃತ್ವದ ಕಾಂಗ್ರೆಸ್ ಹೊಂದಿದ್ದ ಐತಿಹಾಸಿಕ ದಾಖಲೆಯ ಮೈಲಿಗಲ್ಲನ್ನು ಈಗ ಬಿಜೆಪಿ ಸರಿಸಮ ಮಾಡಿದೆ.&lt;/p&gt;&lt;p data-block-key="561fa"&gt;2014ರಲ್ಲಿ ನರೇಂದ್ರ ಮೋದಿ ಮೊದಲ ಬಾರಿಗೆ ಪ್ರಧಾನಿಯಾದಾಗ ಬಿಜೆಪಿ ಕೇವಲ ಏಳು ರಾಜ್ಯಗಳಲ್ಲಿ ಮಾತ್ರ ಅಧಿಕಾರದಲ್ಲಿತ್ತು. ಆದರೆ ಅಮಿತ್ ಶಾ ಮತ್ತು ಜೆ.ಪಿ. ನಡ್ಡಾ ಅವರ ಸಂಘಟನಾತ್ಮಕ ಚತುರತೆ ಹಾಗೂ ಕಾರ್ಯತಂತ್ರದ ಮೈತ್ರಿಗಳ ಫಲವಾಗಿ ದೇಶದ ಶೇ. 72ರಷ್ಟು ಜನಸಂಖ್ಯೆಯನ್ನು ಬಿಜೆಪಿ ಆಳುತ್ತಿದೆ. ಉತ್ತರಾಖಂಡ, ಉತ್ತರ ಪ್ರದೇಶ, ಬಿಹಾರ ಮತ್ತು ಪಶ್ಚಿಮ ಬಂಗಾಳದ ಮೂಲಕ ಹರಿಯುವ ಪವಿತ್ರ ಗಂಗಾ ನದಿಯ ಸಂಪೂರ್ಣ ಹಾದಿಯು ಈಗ ಎನ್‌ಡಿಎ ಆಡಳಿತದ ವ್ಯಾಪ್ತಿಗೆ ಬಂದಿದೆ. ಇದು ನೆಹರೂ ಯುಗದ ನಂತರ ಭಾರತೀಯ ರಾಜಕೀಯದಲ್ಲಿ ಕಂಡುಬಂದ ಅತ್ಯಂತ ಪ್ರಬಲ ಭೌಗೋಳಿಕ ವಿಸ್ತರಣೆಯಾಗಿದೆ.&lt;/p&gt;&lt;p data-block-key="2r728"&gt;&lt;a href="/national/west-bengal-elections-tmc-worried-about-retaining-power-bjp-hopeful-about-historic-victory-77108.html"&gt;&lt;b&gt;ಪಶ್ಚಿಮ ಬಂಗಾಳ ಚುನಾವಣೆ: ಟಿಎಂಸಿಗೆ ಅಧಿಕಾರ ಉಳಿಸಿಕೊಳ್ಳುವ ಚಿಂತೆ; ಬಿಜೆಪಿಗೆ ಐತಿಹಾಸಿಕ ಗೆಲುವಿನ ನಿರೀಕ್ಷೆ&lt;/b&gt;&lt;/a&gt;&lt;/p&gt;&lt;p data-block-key="7ek5r"&gt;2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸ್ವಂತ ಬಲದ ಮೇಲೆ ಬಹುಮತ ಕಳೆದುಕೊಂಡಾಗ, ಹಲವು ವಿರೋಧ ಪಕ್ಷಗಳು ಮತ್ತು ರಾಜಕೀಯ ವಿಶ್ಲೇಷಕರು ಮೋದಿ ಅಲೆ ಮುಗಿಯಿತು ಎಂದು ವಿಶ್ಲೇಷಿಸಿದ್ದರು. ಆದರೆ ಬಿಜೆಪಿ ಈ ಹಿನ್ನಡೆಯನ್ನೇ ಸವಾಲಾಗಿ ಸ್ವೀಕರಿಸಿತು. ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಮರುಸಜ್ಜುಗೊಳಿಸಿ, ಸ್ಥಳೀಯ ಸಮಸ್ಯೆಗಳ ಮೇಲೆ ಗಮನಹರಿಸಿ ಭರ್ಜರಿ ಪುನರಾಗಮನ ಮಾಡಿದೆ. ಮಹಾರಾಷ್ಟ್ರ, ಹರಿಯಾಣ, ಬಿಹಾರ ಮತ್ತು ಒಡಿಶಾದಂತಹ ಪ್ರಮುಖ ರಾಜ್ಯಗಳಲ್ಲಿ ಜಯಭೇರಿ ಬಾರಿಸಿದ ನಂತರ, ಈಗ ಅಸ್ಸಾಂ ಮತ್ತು ಬಂಗಾಳದ ಗೆಲುವು ಬಿಜೆಪಿಯ ಪ್ರಾಬಲ್ಯವನ್ನು ದೇಶಾದ್ಯಂತ ಮರು ಸ್ಥಾಪಿಸಿದೆ.&lt;/p&gt;&lt;p data-block-key="55iid"&gt;ಒಂದೇ ದಶಕದಲ್ಲಿ ಎರಡು ಬಾರಿ 21 ರಾಜ್ಯಗಳ ಗಡಿಯನ್ನು ತಲುಪಿದ ಬಿಜೆಪಿಯ ಈ ಸಾಧನೆಯು ಅದರ ಅಚಲ ಸ್ಥಿತಿಸ್ಥಾಪಕತ್ವವನ್ನು ಎತ್ತಿ ತೋರಿಸುತ್ತದೆ. ರಾಷ್ಟ್ರ ಮಟ್ಟದ ಸಣ್ಣ ಹಿನ್ನಡೆಯನ್ನು ಎಚ್ಚರಿಕೆಯ ಗಂಟೆಯಾಗಿ ಸ್ವೀಕರಿಸಿದ ಪಕ್ಷವು, ರಾಜ್ಯಮಟ್ಟದಲ್ಲಿ ತನ್ನ ಆಡಳಿತ ವೈಖರಿಯನ್ನು ಸುಧಾರಿಸುವ ಮೂಲಕ ಮತದಾರರ ವಿಶ್ವಾಸವನ್ನು ಮರಳಿ ಗಳಿಸಿದೆ. 21 ರಾಜ್ಯಗಳ ಆಡಳಿತದ ಬೃಹತ್ ಹೊಣೆ ಹೊತ್ತಿರುವ ಬಿಜೆಪಿ, ಅಭಿವೃದ್ಧಿಯ ಮೂಲಕ ಹೊಸ ಆಡಳಿತ ಮಾದರಿಯನ್ನು ಸೃಷ್ಟಿಸಲು ಹೊರಟಿದೆ. ಈ ಐತಿಹಾಸಿಕ ವಿಜಯವು ಭಾರತೀಯ ರಾಜಕೀಯದ ಭೂಪಟದಲ್ಲಿ ಕೇಸರಿ ಪಡೆಯ ಅಧಿಪತ್ಯವನ್ನು ಮತ್ತೊಮ್ಮೆ ದೃಢವಾಗಿ ಸಾಬೀತುಪಡಿಸಿದೆ ಮತ್ತು ಪ್ರಜಾಪ್ರಭುತ್ವದ ಹೊಸ ಆಯಾಮವನ್ನು ತೆರೆದಿದೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಬೆಂಗಳೂರಿನಲ್ಲಿ ಮೇ 11ರಿಂದ ಪರಮ್ ಹಿಸ್ಟರಿ ಸೆಂಟರ್‌ನಿಂದ 'ಅನ್ವೇಷಣ 2026' ಬೇಸಿಗೆ ಶಿಬಿರ</title><link>https://vishwavani.news/karnataka/bengaluru-urban/bengaluru-news-summer-camp-from-param-history-center-in-bengaluru-from-may-11th-77275.html</link><guid>https://vishwavani.news/karnataka/bengaluru-urban/bengaluru-news-summer-camp-from-param-history-center-in-bengaluru-from-may-11th-77275.html</guid><pubDate>Tue, 05 May 2026 09:15:47 +0000</pubDate><description>&lt;![CDATA[Bengaluru News: ಪರಮ್ ಹಿಸ್ಟರಿ ಸೆಂಟರ್‌ನಿಂದ ಮೇ 11 ರಿಂದ ಮೇ 17ರವರೆಗೆ ಬೆಂಗಳೂರಿನ ಜಯನಗರದ 4ನೇ ಬ್ಲಾಕ್‌ನಲ್ಲಿರುವ 'ಯುವಪಥ' ದಲ್ಲಿ ಬೇಸಿಗೆ ಶಿಬಿರವನ್ನು ಆಯೋಜಿಸಿದೆ. ವಿಭಿನ್ನ ಮತ್ತು ಆಕರ್ಷಕ ಕಾರ್ಯಚಟುವಟಿಕೆ, ರೋಚಕ ಕಥೆಗಳು ಹಾಗೂ ನೈಜ ಅನುಭವದ ಮಾಧ್ಯಮಗಳ ಮೂಲಕ ಮಕ್ಕಳನ್ನು ನಮ್ಮ ಇತಿಹಾಸದ ಕಾಲಗರ್ಭಕ್ಕೆ ಕರೆದೊಯ್ಯುವುದು ಈ ಶಿಬಿರದ ಮುಖ್ಯ ಉದ್ದೇಶವಾಗಿದೆ.]]&gt;</description><dc:creator>&lt;![CDATA[Siddalinga Swamy]]&gt;</dc:creator><category>&lt;![CDATA[ಬೆಂಗಳೂರು ನಗರ]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕರ್ನಾಟಕ]]&gt;</category><category>&lt;![CDATA[ಶಿಕ್ಷಣ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Param_History_Center.original.jpg" class="attachment-large size-large wp-post-image" alt="ಬೆಂಗಳೂರಿನಲ್ಲಿ ಮೇ 11ರಿಂದ ಪರಮ್ ಹಿಸ್ಟರಿ ಸೆಂಟರ್‌ನಿಂದ 'ಅನ್ವೇಷಣ 2026' ಬೇಸಿಗೆ ಶಿಬಿರ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="0zjzh"&gt;&lt;b&gt;ಬೆಂಗಳೂರು, ಮೇ 5:&lt;/b&gt; ಪುಟಾಣಿಗಳ ಜ್ಞಾನದಾಹವನ್ನು ತಣಿಸಲು ಮತ್ತು ನಮ್ಮ ಭವ್ಯ ಇತಿಹಾಸದ ಬಗ್ಗೆ ಕುತೂಹಲ ಮೂಡಿಸಲು ಪರಮ್ ಹಿಸ್ಟರಿ ಸೆಂಟರ್ (Param History Center) ಅದ್ಭುತ ಬೇಸಿಗೆ ಶಿಬಿರವನ್ನು ಆಯೋಜಿಸಿದೆ. ಯುವಕ ಸಂಘದ ಸಹಯೋಗದೊಂದಿಗೆ ನಡೆಯುತ್ತಿರುವ 'ಅನ್ವೇಷಣ 2026' ಎಂಬ ಈ ವಿಶಿಷ್ಟ ಕಾರ್ಯಕ್ರಮವು ಮೇ 11 ರಿಂದ ಮೇ 17ರವರೆಗೆ ಬೆಂಗಳೂರಿನ (Bengaluru News) ಜಯನಗರದ 4ನೇ ಬ್ಲಾಕ್‌ನಲ್ಲಿರುವ 'ಯುವಪಥ' ದಲ್ಲಿ ನಡೆಯಲಿದೆ.&lt;/p&gt;&lt;p data-block-key="aqe32"&gt;ವಿಭಿನ್ನ ಮತ್ತು ಆಕರ್ಷಕ ಕಾರ್ಯಚಟುವಟಿಕೆ, ರೋಚಕ ಕಥೆಗಳು ಹಾಗೂ ನೈಜ ಅನುಭವದ ಮಾಧ್ಯಮಗಳ ಮೂಲಕ ಮಕ್ಕಳನ್ನು ನಮ್ಮ ಇತಿಹಾಸದ ಕಾಲಗರ್ಭಕ್ಕೆ ಕರೆದೊಯ್ಯುವುದು ಈ ಶಿಬಿರದ ಮುಖ್ಯ ಉದ್ದೇಶವಾಗಿದೆ. ಬರೀ ಪುಸ್ತಕದ ಪಾಠಗಳಿಗೆ ಸೀಮಿತವಾಗದೆ, ಇತಿಹಾಸವನ್ನು ಸ್ಪರ್ಶಿಸಿ, ಅನುಭವಿಸಿ ಕಲಿಯುವ ವಿನೂತನ ಮಾದರಿಯನ್ನು ಇಲ್ಲಿ ರೂಪಿಸಲಾಗಿದೆ.&lt;/p&gt;&lt;h3 data-block-key="32egv"&gt;&lt;b&gt;ಇತಿಹಾಸದೊಂದಿಗೆ ಮುಖಾಮುಖಿ: ಇಲ್ಲಿದೆ ಹತ್ತು ಹಲವು ವಿಶೇಷತೆ!&lt;/b&gt;&lt;/h3&gt;&lt;p data-block-key="f0chn"&gt;ಈ ಬಾರಿ ಶಿಬಿರದಲ್ಲಿ ಇತಿಹಾಸದ ಗಂಭೀರ ವಿಷಯಗಳನ್ನು ಮಕ್ಕಳಿಗೆ ಮೋಜಿನ ರೂಪದಲ್ಲಿ ಹೇಳಿಕೊಡಲು ಈ ಕೆಳಗಿನ ಚಟುವಟಿಕೆಯನ್ನು ಹಮ್ಮಿಕೊಳ್ಳಲಾಗಿದೆ.&lt;/p&gt;&lt;ul&gt;&lt;li data-block-key="6lpdp"&gt;ಪುರಾತತ್ವ ಉತ್ಖನನ (Archaeology Simulation): ಭೂಮಿಯ ಅಡಿಯಲ್ಲಿ ಅಡಗಿರುವ ಇತಿಹಾಸವನ್ನು ಹೊರತೆಗೆಯುವ ನೈಜ ಅನುಭವ.&lt;/li&gt;&lt;li data-block-key="4ed7c"&gt;ಪ್ರಾಚೀನ ಕಲೆ ಮತ್ತು ಕರಕುಶಲ: ಹಳೆಯ ಕಾಲದ ಆಭರಣಗಳ ತಯಾರಿಕೆ ಮತ್ತು ನೈಜವಾಗಿ ಮಣ್ಣಿನಲ್ಲಿ ಮಡಿಕೆ ಮಾಡುವ ಕಲೆ.&lt;/li&gt;&lt;li data-block-key="2irud"&gt;ಕಾಲಯಾನದ ಕಥೆಗಳು: ನಮ್ಮ ನಾಡಿನ ವೀರರ ದಂತಕಥೆಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುವ ಕಥಾ ಸೆಷನ್‌ಗಳು.&lt;/li&gt;&lt;li data-block-key="2l9kp"&gt;ಡಿಜಿಟಲ್ ಪರಿಶೋಧನೆ: ಆಧುನಿಕ ತಂತ್ರಜ್ಞಾನದ ಮೂಲಕ ಐತಿಹಾಸಿಕ ತಾಣಗಳ ವರ್ಚುವಲ್ ಭೇಟಿ.&lt;/li&gt;&lt;li data-block-key="8j8j9"&gt;ಮೋಜಿನ ಆಟಗಳು: ಇತಿಹಾಸ ಪ್ರಜ್ಞೆ ಮೂಡಿಸುವ ಒಳಾಂಗಣ ಕ್ರೀಡೆಗಳು ಹಾಗೂ ಸೃಜನಶೀಲ ಕಲೆಗಳ ಬಗ್ಗೆ ಇಲ್ಲಿ ಕಲಿಯಬಹುದಾಗಿದೆ.&lt;/li&gt;&lt;/ul&gt;&lt;p data-block-key="8n977"&gt;&lt;a href="/karnataka/bengaluru-urban/soul-of-bengaluru-artistic-sculpture-unveiled-at-bengaluru-kempegowda-international-airport-76375.html"&gt;&lt;b&gt;ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ 'ಬೆಂಗಳೂರಿನ ಆತ್ಮ' ಕಲಾತ್ಮಕ ಶಿಲ್ಪ ಅನಾವರಣ; ಟರ್ಮಿನಲ್-2ರ ಸೌಂದರ್ಯಕ್ಕೆ ಹೊಸ ಮೆರುಗು&lt;/b&gt;&lt;/a&gt;&lt;/p&gt;&lt;h3 data-block-key="en4ch"&gt;&lt;b&gt;ಶಿಬಿರದ ಸಮಯ ಮತ್ತು ವಯೋಮಿತಿ‌&lt;/b&gt;&lt;/h3&gt;&lt;p data-block-key="fela7"&gt;ಈ ಅನ್ವೇಷಣ ಶಿಬಿರವು ಪ್ರತಿದಿನ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1:20ರವರೆಗೆ ನಡೆಯಲಿದ್ದು, 6 ರಿಂದ 16 ವರ್ಷ ವಯಸ್ಸಿನ ಮಕ್ಕಳು ಈ ಜ್ಞಾನಯಜ್ಞದಲ್ಲಿ ಪಾಲ್ಗೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 9035034728, ಇಮೇಲ್: &lt;a href="mailto:events@paramexp.org"&gt;events@paramexp.org&lt;/a&gt; ಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>Gold Price Today On 5th May 2026: ಆಭರಣ ಗ್ರಾಹಕರಿಗೆ ಗುಡ್‌ನ್ಯೂಸ್‌; ಚಿನ್ನದ ದರದಲ್ಲಿ ಭಾರಿ ಇಳಿಕೆ</title><link>https://vishwavani.news/commerce/gold-price-today-on-5th-may-2026-check-retail-rates-of-24k-22k-gold-on-5-may-in-bengaluru-delhi-mumbai-and-kolkata-77276.html</link><guid>https://vishwavani.news/commerce/gold-price-today-on-5th-may-2026-check-retail-rates-of-24k-22k-gold-on-5-may-in-bengaluru-delhi-mumbai-and-kolkata-77276.html</guid><pubDate>Tue, 05 May 2026 08:35:32 +0000</pubDate><description>&lt;![CDATA[Gold Silver Rate: ಇಂದು ಚಿನ್ನದ ದರ ಇಳಿಕೆಯಾಗಿದೆ. ಮಂಗಳವಾರ ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 40 ರುಪಾಯಿ ಕಡಿಮೆಯಾಗಿದ್ದು, ಆ ಮೂಲಕ 13,675 ರುಪಾಯಿಗೆ ಇಳಿದಿದೆ. ಇನ್ನು 24 ಕ್ಯಾರಟ್‌ನ 1 ಗ್ರಾಂ ಚಿನ್ನ 44 ರುಪಾಯಿ ಅಗ್ಗವಾಗಿದ್ದು, 14,918 ರುಪಾಯಿಗೆ ಬಂದು ತಲುಪಿದೆ.]]&gt;</description><dc:creator>&lt;![CDATA[Ramesh Ballamoole]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕರ್ನಾಟಕ]]&gt;</category><category>&lt;![CDATA[ದೇಶ]]&gt;</category><category>&lt;![CDATA[ವಾಣಿಜ್ಯ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Gold_Price_Today_On_5th_May_2026.original.jpg" class="attachment-large size-large wp-post-image" alt="Gold Price Today On 5th May 2026: ಆಭರಣ ಗ್ರಾಹಕರಿಗೆ ಗುಡ್‌ನ್ಯೂಸ್‌; ಚಿನ್ನದ ದರದಲ್ಲಿ ಭಾರಿ ಇಳಿಕೆ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="7jlyd"&gt;&lt;b&gt;ಬೆಂಗಳೂರು, ಮೇ 5: &lt;/b&gt;ಪಂಚ ವಿಧಾನಸಭಾ ಚುನಾವಣೆಯ ಫಲಿತಾಂಶ ಘೋಷಣೆಯಾದ ಬೆನ್ನಲ್ಲೇ ಆಭರಣಪ್ರಿಯರಿಗೆ ಗುಡ್‌ನ್ಯೂಸ್‌ ಸಿಕ್ಕಿದೆ. ಇಂದು ಚಿನ್ನದ ದರ (ಮೇ 5) ಇಳಿಕೆಯಾಗಿದೆ (Gold Price Today On 5th May 2026). ಮಂಗಳವಾರ ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 40 ರುಪಾಯಿ ಕಡಿಮೆಯಾಗಿದ್ದು, ಆ ಮೂಲಕ 13,675 ರುಪಾಯಿಗೆ ಇಳಿದಿದೆ. ಇನ್ನು 24 ಕ್ಯಾರಟ್‌ನ 1 ಗ್ರಾಂ ಚಿನ್ನ 44 ರುಪಾಯಿ ಅಗ್ಗವಾಗಿದ್ದು, 14,918 ರುಪಾಯಿಗೆ ಬಂದು ತಲುಪಿದೆ.&lt;/p&gt;&lt;p data-block-key="5ofra"&gt;ಇನ್ನು 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,09,400 ರುಪಾಯಿ ಆಗಿದ್ದರೆ, 10 ಗ್ರಾಂಗೆ 1,36,750 ರುಪಾಯಿ ಹಾಗೂ 100 ಗ್ರಾಂಗೆ 13,67,500 ರುಪಾಯಿ ಪಾವತಿಸಬೇಕು. 24 ಕ್ಯಾರಟ್‌ 8 ಗ್ರಾಂ ಚಿನ್ನದ ಬೆಲೆ 1,19,344 ರುಪಾಯಿ, 10 ಗ್ರಾಂಗೆ 1,49,180 ರುಪಾಯಿ ಹಾಗೂ 100 ಗ್ರಾಂಗೆ 14,91,800 ರುಪಾಯಿ ಇದೆ.&lt;/p&gt;&lt;p data-block-key="5an3"&gt;ಚೆನ್ನೈಯಲ್ಲಿ 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 13,820 ರುಪಾಯಿ, 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 15,077 ರುಪಾಯಿ, ಮುಂಬೈಯಲ್ಲಿ 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 13,675 ರುಪಾಯಿ, 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 14,918 ರುಪಾಯಿ, ದೆಹಲಿಯಲ್ಲಿ 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 13,690 ರುಪಾಯಿ, 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 14,923 ರುಪಾಯಿ, ಕೋಲ್ಕತ್ತಾದಲ್ಲಿ 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 13,675 ರುಪಾಯಿ, 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 14,918 ರುಪಾಯಿ, ಹೈದರಾಬಾದ್‌ನಲ್ಲಿ 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 13,675 ರುಪಾಯಿ, 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 14,918 ರುಪಾಯಿ ಇದೆ.&lt;/p&gt;&lt;h3 data-block-key="enmh7"&gt;&lt;b&gt;ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ&lt;/b&gt;&lt;/h3&gt;
&lt;/div&gt;

    
&lt;div class="vv-table-wrapper"&gt;
    
        &lt;div class="vv-table-title"&gt;
            &lt;h3&gt;ದರ ಪಟ್ಟಿ ಹೀಗಿದೆ&lt;/h3&gt;
        &lt;/div&gt;
    
    &lt;div class="vv-table-container"&gt;
        &lt;table class="vv-table"&gt;
            
                &lt;thead class="vv-table-header"&gt;
                &lt;tr&gt;
                    
                        
                            
                            
                                &lt;th scope="col"  &gt;
                                    
                                        
                                            ನಗರ
                                        
                                    
                                &lt;/th&gt;
                            
                        
                    
                        
                            
                            
                                &lt;th scope="col"  &gt;
                                    
                                        
                                            22 ಕ್ಯಾರಟ್‌ (1 ಗ್ರಾಂ)
                                        
                                    
                                &lt;/th&gt;
                            
                        
                    
                        
                            
                            
                                &lt;th scope="col"  &gt;
                                    
                                        
                                            24 ಕ್ಯಾರಟ್‌ (1 ಗ್ರಾಂ)
                                        
                                    
                                &lt;/th&gt;
                            
                        
                    
                &lt;/tr&gt;
                &lt;/thead&gt;
            

            &lt;tbody class="vv-table-body"&gt;
            
                
                    &lt;tr&gt;
                        
                            
                                
                                
                                    
                                        &lt;td  &gt;
                                            
                                                
                                                    ಚೆನ್ನೈ
                                                
                                            
                                        &lt;/td&gt;
                                    
                                
                            
                        
                            
                                
                                
                                    
                                        &lt;td  &gt;
                                            
                                                
                                                    13,820 ರುಪಾಯಿ
                                                
                                            
                                        &lt;/td&gt;
                                    
                                
                            
                        
                            
                                
                                
                                    
                                        &lt;td  &gt;
                                            
                                                
                                                    15,077 ರುಪಾಯಿ
                                                
                                            
                                        &lt;/td&gt;
                                    
                                
                            
                        
                    &lt;/tr&gt;
                
            
                
                    &lt;tr&gt;
                        
                            
                                
                                
                                    
                                        &lt;td  &gt;
                                            
                                                
                                                    ಮುಂಬೈ
                                                
                                            
                                        &lt;/td&gt;
                                    
                                
                            
                        
                            
                                
                                
                                    
                                        &lt;td  &gt;
                                            
                                                
                                                    13,675 ರುಪಾಯಿ
                                                
                                            
                                        &lt;/td&gt;
                                    
                                
                            
                        
                            
                                
                                
                                    
                                        &lt;td  &gt;
                                            
                                                
                                                    14,918 ರುಪಾಯಿ
                                                
                                            
                                        &lt;/td&gt;
                                    
                                
                            
                        
                    &lt;/tr&gt;
                
            
                
                    &lt;tr&gt;
                        
                            
                                
                                
                                    
                                        &lt;td  &gt;
                                            
                                                
                                                    ದೆಹಲಿ
                                                
                                            
                                        &lt;/td&gt;
                                    
                                
                            
                        
                            
                                
                                
                                    
                                        &lt;td  &gt;
                                            
                                                
                                                    13,690 ರುಪಾಯಿ
                                                
                                            
                                        &lt;/td&gt;
                                    
                                
                            
                        
                            
                                
                                
                                    
                                        &lt;td  &gt;
                                            
                                                
                                                    14,923 ರುಪಾಯಿ
                                                
                                            
                                        &lt;/td&gt;
                                    
                                
                            
                        
                    &lt;/tr&gt;
                
            
                
                    &lt;tr&gt;
                        
                            
                                
                                
                                    
                                        &lt;td  &gt;
                                            
                                                
                                                    ಕೋಲ್ಕತ್ತಾ
                                                
                                            
                                        &lt;/td&gt;
                                    
                                
                            
                        
                            
                                
                                
                                    
                                        &lt;td  &gt;
                                            
                                                
                                                    13,675 ರುಪಾಯಿ
                                                
                                            
                                        &lt;/td&gt;
                                    
                                
                            
                        
                            
                                
                                
                                    
                                        &lt;td  &gt;
                                            
                                                
                                                    14,918 ರುಪಾಯಿ
                                                
                                            
                                        &lt;/td&gt;
                                    
                                
                            
                        
                    &lt;/tr&gt;
                
            
                
                    &lt;tr&gt;
                        
                            
                                
                                
                                    
                                        &lt;td  &gt;
                                            
                                                
                                                    ಹೈದರಾಬಾದ್‌
                                                
                                            
                                        &lt;/td&gt;
                                    
                                
                            
                        
                            
                                
                                
                                    
                                        &lt;td  &gt;
                                            
                                                
                                                    13,675 ರುಪಾಯಿ
                                                
                                            
                                        &lt;/td&gt;
                                    
                                
                            
                        
                            
                                
                                
                                    
                                        &lt;td  &gt;
                                            
                                                
                                                    14,918 ರುಪಾಯಿ
                                                
                                            
                                        &lt;/td&gt;
                                    
                                
                            
                        
                    &lt;/tr&gt;
                
            
            &lt;/tbody&gt;
        &lt;/table&gt;
    &lt;/div&gt;
&lt;/div&gt;

    
&lt;div class="article-paragraph"&gt;
    &lt;p data-block-key="7jlyd"&gt;&lt;a href="/commerce/good-news-for-government-employees-minimum-pension-will-increase-likely-soon-77087.html"&gt;&lt;b&gt;ಸರ್ಕಾರಿ ನೌಕರರಿಗೆ ಶುಭ ಸುದ್ದಿ: ಶೀಘ್ರದಲ್ಲೇ ಕನಿಷ್ಠ ಪಿಂಚಣಿ ಹೆಚ್ಚಳ ಸಾಧ್ಯತೆ&lt;/b&gt;&lt;/a&gt;&lt;/p&gt;&lt;h3 data-block-key="binup"&gt;&lt;b&gt;ಬೆಳ್ಳಿ ದರ&lt;/b&gt;&lt;/h3&gt;&lt;p data-block-key="f33ng"&gt;ಇತ್ತ ಬೆಳ್ಳಿ ದರದಲ್ಲಿಯೂ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಗೆ 10 ರುಪಾಯಿ ಇಳಿಕೆಯಾಗಿದ್ದು, 255 ರುಪಾಯಿಗೆ ಬಂದು ತಲುಪಿದೆ. 10 ಗ್ರಾಂ ಬೆಳ್ಳಿಗೆ 2,550 ರುಪಾಯಿ ಹಾಗೂ 1 ಕೆಜಿಗೆ 2,55,000 ರುಪಾಯಿ ಇದೆ.&lt;/p&gt;&lt;p data-block-key="2sos5"&gt; &lt;a href="https://vishwavani.news/commerce/"&gt;&lt;b&gt;ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ&lt;/b&gt;&lt;/a&gt;&lt;/p&gt;&lt;p data-block-key="166dh"&gt;&lt;a href="https://www.pravasiprapancha.com/"&gt;&lt;b&gt;ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.&lt;/b&gt;&lt;/a&gt;&lt;/p&gt;
&lt;/div&gt;
&lt;/p&gt;]]&gt;</content:encoded></item><item><title>Bengaluru Airport: ಬೆಂಗಳೂರು ವಿಮಾನ ನಿಲ್ದಾಣ ಈಗ ಮತ್ತಷ್ಟು ಸ್ಮಾರ್ಟ್‌; ಅಪಘಾತ ತಡೆಗೆ ಅತ್ಯಾಧುನಿಕ ಸುರಕ್ಷತಾ ವ್ಯವಸ್ಥೆ ಜಾರಿ</title><link>https://vishwavani.news/karnataka/bengaluru-urban/advanced-security-system-implemented-at-bangalore-airport-to-prevent-accidents-77274.html</link><guid>https://vishwavani.news/karnataka/bengaluru-urban/advanced-security-system-implemented-at-bangalore-airport-to-prevent-accidents-77274.html</guid><pubDate>Tue, 05 May 2026 08:23:16 +0000</pubDate><description>&lt;![CDATA[ವಿಮಾನಗಳು ಓಡಾಡುವ ಜಾಗದಲ್ಲಿಭದ್ರತೆ ಹೆಚ್ಚಿಸಲು 'ಸ್ಮಾರ್ಟ್ ಏರ್‌ಸೈಡ್ ಸೇಫ್ಟಿ ಸಿಸ್ಟಂʼ ಎಂಬ ಹೊಸ ತಂತ್ರಜ್ಞಾನವನ್ನು ಬೆಂಗಳೂರು ವಿಮಾನ ನಿಲ್ದಾಣವು ಜಾರಿಗೆ ತಂದಿದೆ. ಹೊಸ ವ್ಯವಸ್ಥೆಯು ಸ್ಮಾರ್ಟ್ ಕ್ಯಾಮೆರಾಗಳು ಮತ್ತು ಎಐ ತಂತ್ರಜ್ಞಾನವನ್ನು ಒಳಗೊಂಡಿದ್ದು, ಇದು ರಸ್ತೆಯಲ್ಲಿ ಓಡಾಡುವ ವಾಹನಗಳನ್ನು ಗುರುತಿಸಿ, ಏನಾದರೂ ಅಪಾಯ ಎದುರಾದರೆ ತಕ್ಷಣವೇ ಎಚ್ಚರಿಕೆ ನೀಡುತ್ತದೆ.]]&gt;</description><dc:creator>&lt;![CDATA[Prabhakara R]]&gt;</dc:creator><category>&lt;![CDATA[ಬೆಂಗಳೂರು ನಗರ]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕರ್ನಾಟಕ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Bengaluru_Airport_.original.jpg" class="attachment-large size-large wp-post-image" alt="Bengaluru Airport: ಬೆಂಗಳೂರು ವಿಮಾನ ನಿಲ್ದಾಣ ಈಗ ಮತ್ತಷ್ಟು ಸ್ಮಾರ್ಟ್‌; ಅಪಘಾತ ತಡೆಗೆ ಅತ್ಯಾಧುನಿಕ ಸುರಕ್ಷತಾ ವ್ಯವಸ್ಥೆ ಜಾರಿ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="1nndw"&gt;&lt;b&gt;ಬೆಂಗಳೂರು:&lt;/b&gt; ಇತ್ತೀಚಿನ ದಿನಗಳಲ್ಲಿ ದೇಶ, ವಿದೇಶಗಳಲ್ಲಿ ವಿಮಾನ ಅಪಘಾತಗಳು ಹೆಚ್ಚಾಗುತ್ತಿರುವ ಹೊತ್ತಿನಲ್ಲೇ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು (ಕೆಐಎ) ಪ್ರಯಾಣಿಕರ ಮತ್ತು ವಿಮಾನಗಳ ಸುರಕ್ಷತೆಗಾಗಿ ಹೊಸ ಹೆಜ್ಜೆ ಇಟ್ಟಿದೆ. ವಿಮಾನಗಳು ಓಡಾಡುವ ಜಾಗದಲ್ಲಿ (ಏರ್‌ಸೈಡ್) ಭದ್ರತೆ ಹೆಚ್ಚಿಸಲು 'ಸ್ಮಾರ್ಟ್ ಏರ್‌ಸೈಡ್ ಸೇಫ್ಟಿ ಸಿಸ್ಟಂʼ ಎಂಬ ಹೊಸ ತಂತ್ರಜ್ಞಾನವನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು (ಬಿಐಎಎಲ್‌) ಜಾರಿಗೆ ತಂದಿದೆ.&lt;/p&gt;&lt;h3 data-block-key="83h3l"&gt;&lt;b&gt;ಅಪಾಯಕಾರಿ ಜಾಗದಲ್ಲಿ ಹೊಸ ಸುರಕ್ಷತಾ ವ್ಯವಸ್ಥೆ&lt;/b&gt;&lt;/h3&gt;&lt;p data-block-key="d96lb"&gt;ವಿಮಾನ ನಿಲ್ದಾಣದೊಳಗೆ 'ಕ್ರಾಸ್ ಸರ್ವಿಸ್ ರಸ್ತೆ'ಗಳಿರುತ್ತವೆ. ಇಲ್ಲಿ ವಿಮಾನಗಳು ಮತ್ತು ಸಿಬ್ಬಂದಿಯ ವಾಹನಗಳು ಒಟ್ಟೊಟ್ಟಿಗೆ ಓಡಾಡುತ್ತಿರುತ್ತವೆ. ಹೀಗಾಗಿ ಇಲ್ಲಿ ಅಪಘಾತ ಆಗುವ ಸಾಧ್ಯತೆ ಇರುತ್ತದೆ. ಹಿಂದೆ, ಇಲ್ಲಿ ವಾಹನಗಳನ್ನು ನಿಯಂತ್ರಿಸುವ ಲೈಟ್‌ಗಳನ್ನು ಸಿಬ್ಬಂದಿಗಳೇ ಖುದ್ದಾಗಿ ಆನ್/ಆಫ್ ಮಾಡುತ್ತಿದ್ದರು. ಇದರಲ್ಲಿ ಕೆಲವೊಮ್ಮೆ ತಪ್ಪುಗಳಾಗಿ, ವಿಮಾನಗಳ ಹಾರಾಟ ತಡವಾಗುವ ಘಟನೆಗಳೂ ನಡೆಯುತ್ತಿದ್ದವು. ಇದನ್ನು ತಪ್ಪಿಸಲು ಈಗ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.&lt;/p&gt;&lt;p data-block-key="3utch"&gt;&lt;/p&gt;&lt;img alt="Bengaluru Airport  (1)" class="richtext-image full-width" height="450" src="https://cdn.vishwavani.news/media/images/Bengaluru_Airport__1.width-800.jpg" width="800"&gt;&lt;p data-block-key="a2h35"&gt;&lt;/p&gt;&lt;h3 data-block-key="fvi8s"&gt;&lt;b&gt;ಎಐ ಕ್ಯಾಮೆರಾಗಳಿಂದ ನಿಗಾ&lt;/b&gt;&lt;/h3&gt;&lt;p data-block-key="d03m5"&gt;ಹೊಸ ವ್ಯವಸ್ಥೆಯು ಸ್ಮಾರ್ಟ್ ಕ್ಯಾಮೆರಾಗಳು ಮತ್ತು ಎಐ ತಂತ್ರಜ್ಞಾನವನ್ನು ಒಳಗೊಂಡಿದ್ದು, ಇದು ರಸ್ತೆಯಲ್ಲಿ ಓಡಾಡುವ ವಾಹನಗಳನ್ನು ಗುರುತಿಸಿ, ಏನಾದರೂ ಅಪಾಯ ಎದುರಾದರೆ ತಕ್ಷಣವೇ ಎಚ್ಚರಿಕೆ ನೀಡುತ್ತದೆ. ಯಾರಾದರೂ ಟ್ರಾಫಿಕ್ ನಿಯಮ ಉಲ್ಲಂಘಿಸಿದರೆ ಕ್ಷಣಾರ್ಧದಲ್ಲಿ ಅಧಿಕಾರಿಗಳಿಗೆ ಮಾಹಿತಿ ರವಾನೆಯಾಗುತ್ತದೆ. ಅಲ್ಲದೆ, ಪ್ರತಿಯೊಂದು ಸಣ್ಣ ಅಂಶವೂ ಕಂಪ್ಯೂಟರ್‌ನಲ್ಲಿ ಡಿಜಿಟಲ್ ರೂಪದಲ್ಲಿ ದಾಖಲಾಗುತ್ತದೆ. ಇದರಿಂದ ವಿಮಾನ ನಿಲ್ದಾಣದೊಳಗಿನ ಟ್ರಾಫಿಕ್‌ ನಿರ್ವಹಣೆಯಲ್ಲಿ ಪಾರದರ್ಶಕತೆ ಹೆಚ್ಚಾಗಲಿದೆ. ಜೊತೆಗೆ ಕಾರ್ಯಕ್ಷಮತೆ ಹೆಚ್ಚಾಗಲಿದ್ದು, ನಿಖರ ಕಾರ್ಯಾಚರಣೆಯೂ ಸಾಧ್ಯವಾಗಲಿದೆ.&lt;/p&gt;&lt;h3 data-block-key="a2fjc"&gt;&lt;b&gt;ಕತ್ತಲು, ಮಂಜಿನಲ್ಲೂ ವಿಮಾನ ನಿಲ್ದಾಣ ಫುಲ್‌ ಸೇಫ್‌!&lt;/b&gt;&lt;/h3&gt;&lt;p data-block-key="8kacj"&gt;ಈ ಹೊಸ ತಂತ್ರಜ್ಞಾನವು ವಿಮಾನ ಹಾಗೂ ವಾಹನಗಳ ನಡುವೆ ಒಂದು ಸುರಕ್ಷಿತ ಅಂತರವನ್ನು ನಿರ್ವಹಿಸುತ್ತದೆ. ಇದರಿಂದ ರಾತ್ರಿ ವೇಳೆ ಅಥವಾ ಮಂಜು ಮುಸುಕಿ ಕಡಿಮೆ ಗೋಚರತೆ ಇದ್ದಾಗ ಮನುಷ್ಯರಿಂದ ನಡೆಯುವ ತಪ್ಪುಗಳು ತಪ್ಪಲಿವೆ. ಟ್ರಾಫಿಕ್ ಜಾಮ್ ಇಲ್ಲದೆ ವಿಮಾನಗಳು ಸರಿಯಾದ ಸಮಯಕ್ಕೆ ಹಾರಾಟ ನಡೆಸಲು ಇದು ಸಹಾಯ ಮಾಡಲಿದೆ. ಮುಂದಿನ ದಿನಗಳಲ್ಲಿ ಈ ಮಾಹಿತಿಯನ್ನು ಬಳಸಿಕೊಂಡು ವಿಮಾನ ನಿಲ್ದಾಣದ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲೂ ಯೋಜನೆ ರೂಪಿಸಿಕೊಳ್ಳಬಹುದಾಗಿದೆ.&lt;/p&gt;&lt;h3 data-block-key="fljfk"&gt;&lt;b&gt;ಬಿಐಎಎಲ್‌ನಿಂದ ದಾಖಲೆ ಸಂಖ್ಯೆಯ ಪ್ರಯಾಣಿಕರಿಗೆ ಸೇವೆ&lt;/b&gt;&lt;/h3&gt;&lt;p data-block-key="6j8m4"&gt;2024–25ನೇ ವರ್ಷದಲ್ಲಿ ಬಿಐಎಎಲ್‌ 4.18 ಕೋಟಿಗೂ ಹೆಚ್ಚು ಜನರಿಗೆ ಸೇವೆ ನೀಡಿದ್ದು, ದಕ್ಷಿಣ ಭಾರತದಲ್ಲಿ ಈ ಸಾಧನೆ ಮಾಡಿದ ಮೊದಲ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಭಾರತದ 3ನೇ ಅತಿ ದೊಡ್ಡ ವಿಮಾನ ನಿಲ್ದಾಣವಾಗಿರುವ ಕೆಐಎ ಮೂಲಕ ಈವರೆಗೆ 35 ಕೋಟಿಗೂ ಹೆಚ್ಚು ಜನರು ಪ್ರಯಾಣಿಸಿದ್ದಾರೆ.&lt;/p&gt;&lt;p data-block-key="2dmfm"&gt;&lt;a href="/karnataka/chikkaballapur/112th-foundation-day-of-kannada-sahitya-parishad-77235.html"&gt;Kannada Sahitya Parishad: ಕನ್ನಡ ಸಾಹಿತ್ಯ ಪರಿಷತ್ತಿನ 112ನೇ ಸಂಸ್ಥಾಪನಾ ದಿನಾಚರಣೆ&lt;/a&gt;&lt;/p&gt;&lt;p data-block-key="5plba"&gt;ಗ್ರಾಹಕರಿಗೆ ನೀಡುವ ಅತ್ಯುತ್ತಮ ಸೇವೆಗಾಗಿ ಜಾಗತಿಕ ಮಟ್ಟದ ಪ್ರತಿಷ್ಠಿತ 'ಎಸಿಐ 5-ಸ್ಟಾರ್ ಏರ್‌ಪೋರ್ಟ್ ರೇಟಿಂಗ್' ಅನ್ನು ಪಡೆದುಕೊಂಡಿರುವ ನಿಲ್ದಾಣವು, ಹಣ್ಣು, ತರಕಾರಿಯಂತಹ ಬೇಗ ಕೊಳೆಯುವ ವಸ್ತುಗಳ ಸಾಗಣೆಯಲ್ಲಿ ಸತತ 4ನೇ ವರ್ಷವೂ ಭಾರತದ ನಂ. 1 ವಿಮಾನ ನಿಲ್ದಾಣವಾಗಿ ಗುರುತಿಸಿಕೊಂಡಿದೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ನನ್ನ ಸ್ವಂತ ಮನೆಗೆ ಭೇಟಿ ನೀಡಲು ಅನುಮತಿ ಬೇಕೆ? ಪಿತೃ ಪ್ರಧಾನ ಮದುವೆ ಸಂಪ್ರದಾಯದ ವಿರುದ್ಧ ಯುವತಿ ಆಕ್ರೋಶ</title><link>https://vishwavani.news/viral/bride-rejects-kanyadaan-ritual-at-wedding-hall-video-goes-viral-77266.html</link><guid>https://vishwavani.news/viral/bride-rejects-kanyadaan-ritual-at-wedding-hall-video-goes-viral-77266.html</guid><pubDate>Tue, 05 May 2026 08:09:33 +0000</pubDate><description>&lt;![CDATA[Viral News: ಮದುವೆಯೊಂದರಲ್ಲಿ ಪಿತೃ ಪ್ರಧಾನ ಭಾರತೀಯ ವಿವಾಹ ಆಚರಣೆಯ ಬಗ್ಗೆ ಯುವತಿಯೊಬ್ಬಳು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ. ವಿವಾಹದ ವಿಧಿ ವಿಧಾನದ ಸಂದರ್ಭ ದಲ್ಲಿ ಪಾದ್ರಿಯೂ ವಧುವನ್ನು ತನ್ನ ಗಂಡನ ಒಪ್ಪಿಗೆಯಿಲ್ಲದೆ ತನ್ನ ಪೋಷಕರ ಮನೆಗೆ ಭೇಟಿ ನೀಡುವುದಿಲ್ಲ ಎಂದು ಪ್ರತಿಜ್ಞೆ ಮಾಡುವಂತೆ ಕೇಳುವಾಗ ವಧು ಮದುವೆ ಸಮಾರಂಭದಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.]]&gt;</description><dc:creator>&lt;![CDATA[Pushpa Kumari]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ವೈರಲ್‌]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/delhi_news_90.original.jpg" class="attachment-large size-large wp-post-image" alt="ನನ್ನ ಸ್ವಂತ ಮನೆಗೆ ಭೇಟಿ ನೀಡಲು ಅನುಮತಿ ಬೇಕೆ? ಪಿತೃ ಪ್ರಧಾನ ಮದುವೆ ಸಂಪ್ರದಾಯದ ವಿರುದ್ಧ ಯುವತಿ ಆಕ್ರೋಶ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="ueqcg"&gt;&lt;b&gt;ನವದೆಹಲಿ, ಮೇ‌ 5:&lt;/b&gt; ಹಿಂದೂ ಧರ್ಮದಲ್ಲಿ ಮದುವೆಗೆ ಪವಿತ್ರವಾದ ಸ್ಥಾನವಿದೆ. ವಿವಿಧ ಕಟ್ಟುಪಾಡುಗಳಾದ ಸಪ್ತಪದಿ, ಮಂಗಳಸೂತ್ರಧಾರಣೆ, ಮತ್ತು ಕನ್ಯಾದಾನದಂತಹ ಆಚರಣೆ ಹಿಂದಿನಿಂದಲೂ ಆಚರಿಸಿಕೊಂಡು ಬಂದಿದೆ. ಈ ನಡುವೆ ಮದುವೆ ಕಾರ್ಯಕ್ರಮವೊಂದರಲ್ಲಿ ಪಿತೃಪ್ರಧಾನ ಭಾರತೀಯ ವಿವಾಹ ಆಚರಣೆಯ ಬಗ್ಗೆ ಯುವತಿಯೊಬ್ಬಳು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ. ವಿವಾಹದ ವಿಧಿ ವಿಧಾನದ ಸಂದರ್ಭದಲ್ಲಿ ಪಾದ್ರಿಯೂ ವಧುವನ್ನು ತನ್ನ ಗಂಡನ ಒಪ್ಪಿಗೆಯಿಲ್ಲದೆ ತನ್ನ ಪೋಷಕರ ಮನೆಗೆ ಭೇಟಿ ನೀಡುವುದಿಲ್ಲ ಎಂದು ಪ್ರತಿಜ್ಞೆ ಮಾಡುವಂತೆ ಕೇಳುವಾಗ ವಧು ಮದುವೆ ಸಮಾರಂಭದಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ &lt;a href="/viral/mumbai-mahalaxmi-tourist-harassment-video-70676.html"&gt;(Viral News)&lt;/a&gt; ಆಗಿದೆ.&lt;/p&gt;&lt;p data-block-key="be6g6"&gt;ಹಿಂದು ವಿವಾಹದಲ್ಲಿ ಸಂಪ್ರದಾಯಗಳನ್ನು ವಧು- ವರರ ಜೀವನದ ಆತ್ಯಂತ ಮುಖ್ಯವಾದ ಭಾಗವನ್ನಾಗಿ ಆಚರಣೆ ಮಾಡಲಾಗುತ್ತದೆ. ವೈರಲ್ ವೀಡಿಯೊವೊಂದು ಭಾರತೀಯ ವಿವಾಹ ಸಂಪ್ರದಾಯಗಳ ಬಗ್ಗೆ ಹೊಸ ಚರ್ಚೆಯನ್ನು ಹುಟ್ಟು ಹಾಕಿದೆ. ಕೆಲವು ಹಿಂದಿನ ಆಚರಣೆಗಳು ಹಳೆಯ ಪಿತೃಪ್ರಧಾನ ಸಂಪ್ರದಾಯಗಳು ಇಂದಿಗೂ ಮುಖ್ಯವಾಗಬೇಕೆ? ಎಂದು ಹಲವಾರು ಪ್ರಶ್ನೆ ಮಾಡಿದ್ದಾರೆ.&lt;/p&gt;
&lt;/div&gt;

    
&lt;div class="article-paragraph"&gt;
    &lt;p data-block-key="3r1qf"&gt;ವಿಡಿಯೊದಲ್ಲಿ, ಒಬ್ಬ ಪಾದ್ರಿ ವಿವಾಹ ಭೋದನಾ ಪಠಿಸುವಾಗ ವಧುವನ್ನು ತನ್ನ ಗಂಡನ ಒಪ್ಪಿಗೆಯಿಲ್ಲದೆ ತನ್ನ ಪೋಷಕರ ಮನೆಗೆ ಭೇಟಿ ನೀಡುವುದಿಲ್ಲ ಎಂದು ಪ್ರತಿಜ್ಞೆ ಮಾಡುವಂತೆ ಕೇಳುತ್ತಾರೆ‌ ಆಗ ವಧುವು ಭಾವುಕಳಾಗಿದ್ದು ತನ್ನ ಸ್ವಂತನ ಮನೆಗೆ ಹೋಗಲು ಗಂಡನ ಅನುಮತಿ ಪಡೆಯಬೇಕೇ? ಎಂದು ಪ್ರಶ್ನಿಸಿದ್ದಾಳೆ.&lt;/p&gt;&lt;p data-block-key="4cl7a"&gt;&lt;a href="/viral/delivery-boy-gets-tired-carrying-a-heavy-parcel-video-goes-viral-68143.html"&gt;&lt;b&gt;ಛೇ ಎಂತಾ ಅಮಾನವೀಯ ಕೃತ್ಯ: ಭಾರಿ ತೂಕದ ಪಾರ್ಸೆಲ್ ಹೊತ್ತು ಹೈರಾಣಾದ ಡೆಲಿವರಿ ಬಾಯ್!&lt;/b&gt;&lt;/a&gt;&lt;/p&gt;&lt;p data-block-key="4amvb"&gt;ಆ ಘಟನೆಯನ್ನು ಅನಿತಾ ರಾಣಿ ಎಂಬ ಕಂಟೆಂಟ್ ಕ್ರಿಯೇಟರ್ ಶೇರ್ ಮಾಡಿದ್ದು ತಮ್ಮ ಜೀವನ ದಲ್ಲಿ ನಡೆದ ಘಟನೆಯನ್ನು ಕೂಡ ನೆನಪಿಸಿಕೊಂಡಿದ್ದಾರೆ. ತನ್ನ ಮಗಳ ಮದುವೆಯಲ್ಲಿ ವಿಧವೆ ಎಂಬ ಕಾರಣಕ್ಕಾಗಿ ಕನ್ಯಾದಾನ ಆಚರಣೆಯನ್ನು ಮಾಡುವ ಅವಕಾಶ ವನ್ನು ನಿರಾಕರಿಸಲಾಗಿತ್ತು. ವಿವಾಹಿತ ದಂಪತಿಗಳು ಸಮಾರಂಭ ವನ್ನು ನಡೆಸಬೇಕೆಂದು ಪಾದ್ರಿ ಒತ್ತಾಯಿಸಿದರು.. ಆದರೆ ಅನಿತಾ ಅವರು ಈ ತಾರತಮ್ಯವನ್ನು ಕಡೆಗಣಿಸಿ ತಾವೇ ಸ್ವತಃ ಮಗಳ ಕನ್ಯಾದಾನ ಮಾಡಿದ್ದರು ಎಂದು ತಿಳಿಸಿದ್ದಾರೆ.&lt;/p&gt;&lt;p data-block-key="r0kr"&gt;ತಮ್ಮ ಪೋಸ್ಟ್‌ನಲ್ಲಿ "ಆತ್ಮೀಯ ವಧು-ವರರೇ, ನಿಮ್ಮ ಸ್ವಂತ ಮದುವೆಯಲ್ಲಿ ವಿವಾಹ ವಚನ ಗಳನ್ನು ನೀವೇ ಬರೆಯಿರಿ‌ ಎಂದು ಅವರು ಸಲಹೆ ನೀಡಿದರು. ಈ ವೀಡಿಯೊ ತ್ವರಿತವಾಗಿ ವೈರಲ್ ಆಗಿದ್ದು ಬಳಕೆದಾರರು ಇದೇ ರೀತಿಯ ಪದ್ಧತಿಗಳ ಬಗ್ಗೆ ಆದ ಅನುಭವಗಳನ್ನು ಹಂಚಿ ಕೊಂಡಿದ್ದಾರೆ. ಬಳಕೆದಾರರೊಬ್ಬರು ಹೆಣ್ಣು ಮಕ್ಕಳನ್ನು ಈ ರೀತಿಯಾಗಿ ನಡೆಸಿಕೊಳ್ಳುವುದು ಸರಿಯಲ್ಲ ಎಂದು ಬರೆದಿದ್ದಾರೆ. ಮತ್ತೊಬ್ಬರು ಈ ಆಧುನಿಕ ಯುಗದಲ್ಲಿಯೂ ಸಮಾನತೆಗೆ ಮಹತ್ವವಿಲ್ಲ ಎಂದು ಬರೆದಿದ್ದಾರೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ನೋಯ್ಡಾ ಕಾಲೇಜಿನಲ್ಲಿ ಜೂನಿಯರ್ ವಿದ್ಯಾರ್ಥಿನಿ ಮೇಲೆ ಹಲ್ಲೆ: ಕಪಾಳಮೋಕ್ಷ ಮಾಡಿ ದೌರ್ಜನ್ಯ!</title><link>https://vishwavani.news/viral/ragging-by-senior-students-in-noida-college-netizens-reaction-77271.html</link><guid>https://vishwavani.news/viral/ragging-by-senior-students-in-noida-college-netizens-reaction-77271.html</guid><pubDate>Tue, 05 May 2026 08:07:11 +0000</pubDate><description>&lt;![CDATA[Viral Video: ಗ್ರೇಟರ್ ನೋಯ್ಡಾದ ಖಾಸಗಿ ವಿಶ್ವವಿದ್ಯಾಲಯದ ವಿಡಿಯೊವೊಂದು ವೈರಲ್ ಆಗಿದ್ದು ಸೀನಿಯರ್ ವಿದ್ಯಾರ್ಥಿಗಳ ಗುಂಪೊಂದು ಜೂನಿಯರ್ ವಿದ್ಯಾರ್ಥಿಗಳ ಮೇಲೆ ಹಲ್ಲೆಯನ್ನು ನಡೆಸಿದೆ. ವಿದ್ಯಾರ್ಥಿನಿಯೊಬ್ಬಳು ಜೂನಿಯರ್ ವಿದ್ಯಾರ್ಥಿನಿಗೆ ಸರಿಯಾಗಿ ನಿಂದಿಸಿ ಕಪಾಳಮೋಕ್ಷ ಮಾಡಿದ್ದಾಳೆ‌. ಸದ್ಯ ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆತಂಕವನ್ನು ವ್ಯಕ್ತ ಪಡಿಸಿದ್ದಾರೆ..]]&gt;</description><dc:creator>&lt;![CDATA[Pushpa Kumari]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ವೈರಲ್‌]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/noida_news_2.original.jpg" class="attachment-large size-large wp-post-image" alt="ನೋಯ್ಡಾ ಕಾಲೇಜಿನಲ್ಲಿ ಜೂನಿಯರ್ ವಿದ್ಯಾರ್ಥಿನಿ ಮೇಲೆ ಹಲ್ಲೆ: ಕಪಾಳಮೋಕ್ಷ ಮಾಡಿ ದೌರ್ಜನ್ಯ!" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="zy5q6"&gt;&lt;b&gt;ನೋಯ್ಡಾ, ಮೇ 5&lt;/b&gt;: ಪ್ರತಿಷ್ಠಿತ ಕಾಲೇಜಿನಲ್ಲೇ ವಿದ್ಯಾರ್ಥಿಗಳಿಂದ ರ‍್ಯಾಗಿಂಗ್​ ನಡೆದಿರುವ ಆರೋಪ ವೊಂದು ಕೇಳಿ ಬಂದಿದೆ. ಗ್ರೇಟರ್ ನೋಯ್ಡಾದ ಖಾಸಗಿ ವಿಶ್ವವಿದ್ಯಾಲಯದ ವಿಡಿಯೊವೊಂದು ವೈರಲ್ ಆಗಿದ್ದು ಸೀನಿಯರ್ ವಿದ್ಯಾರ್ಥಿಗಳ ಗುಂಪೊಂದು ಜೂನಿಯರ್ ವಿದ್ಯಾರ್ಥಿಗಳ ಮೇಲೆ ಹಲ್ಲೆಯನ್ನು ನಡೆಸಿದೆ. ವಿದ್ಯಾರ್ಥಿನಿಯೊಬ್ಬಳು ಜೂನಿಯರ್ ವಿದ್ಯಾರ್ಥಿನಿಗೆ ಸರಿಯಾಗಿ ನಿಂದಿಸಿ ಕಪಾಳಮೋಕ್ಷ ಮಾಡಿದ್ದಾಳೆ‌. ಸದ್ಯ ಈ ವಿಡಿಯೊ ವೈರಲ್&lt;a href="/viral/netizens-appreciation-for-the-advice-given-by-the-young-woman-on-choosing-a-partner-69016.html"&gt; &lt;b&gt;(Viral News)&lt;/b&gt;&lt;/a&gt; ಆಗುತ್ತಿದ್ದಂತೆ ನೆಟ್ಟಿಗರು ಆತಂಕವನ್ನು ವ್ಯಕ್ತ ಪಡಿಸಿದ್ದಾರೆ&lt;/p&gt;&lt;p data-block-key="eo3fr"&gt;ಆನ್‌ಲೈನ್‌ನಲ್ಲಿ ಈ ವಿಡಿಯೊ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಈ ದೃಶ್ಯಾವಳಿಯಲ್ಲಿ, ಸಿನಿ ಯರ್ ಕ್ಲಾಸ್ ನ ಹುಡುಗಿಯರ ಗುಂಪೊಂದು ಜೂನಿಯರ್ ವಿದ್ಯಾರ್ಥಿನಿಯ ಮೇಲೆ ಕ್ರೂರವಾಗಿ ರ‍್ಯಾಗಿಂಗ್ ಮತ್ತು ಹಲ್ಲೆಯನ್ನು ನಡೆಸಿದೆ. ಅಷ್ಟೇ ಅಲ್ಲದೆ ಆಕೆಯ ಕುಟುಂಬದ ಬಗ್ಗೆ ನಿಂದನೀಯ ಪದಗಳನ್ನು ಬಳಸಿ ದೌರ್ಜನ್ಯವನ್ನು ಎಸಗಲಾಗಿದೆ.&lt;/p&gt;&lt;h3 data-block-key="5rmee"&gt;&lt;b&gt;ವಿಡಿಯೊ ನೋಡಿ:&lt;/b&gt;&lt;/h3&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="twitter-tweet"&gt;&lt;p lang="hi" dir="ltr"&gt;बेनेट यूनिवर्सिटी ग्रेटर नोएडा में लड़कियों का गिरोह जूनियर्स को रैगिंग के नाम पर बुरी तरह पीट रहीं है। थप्पड़ मार रहे, गालियां दे रहे, परिवार की इज्जत तक पर सवाल उठा रहे। &lt;br&gt;&lt;br&gt;ये शिक्षा नहीं, गुंडागर्दी है। प्रशासन और पुलिस फौरन एक्शन ले, वरना ये कल्चर पूरे कैंपस को बर्बाद कर देगा। &lt;a href="https://t.co/pedWgNejSy"&gt;pic.twitter.com/pedWgNejSy&lt;/a&gt;&lt;/p&gt;&amp;mdash; कल्पना श्रीवास्तव  (@Lawyer_Kalpana) &lt;a href="https://twitter.com/Lawyer_Kalpana/status/2051150891542290515?ref_src=twsrc%5Etfw"&gt;May 4, 2026&lt;/a&gt;&lt;/blockquote&gt; &lt;script async src="https://platform.twitter.com/widgets.js" charset="utf-8"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="d45ug"&gt;ವೈರಲ್ ಆದ ವಿಡಿಯೊದಲ್ಲಿ ಶಾಲಾ ಕಾಲೇಜಿನ ಬಳಿ ವಿದ್ಯಾರ್ಥಿಗಳ ಗುಂಪೊಂದು ನಿಂತಿರುವುದು ಕಾಣುತ್ತದೆ.. ಸೀನಿಯರ್ ವಿದ್ಯಾರ್ಥಿನಿಯೂ ತನ್ನ ಜೂನಿಯರ್ ವಿದ್ಯಾರ್ಥಿಯ ಕೆನ್ನೆಗೆ ಹಲವು ಭಾರೀ ಬಾರಿಸಿದ್ದಾಳೆ. ಜೂನಿಯರ್ ವಿದ್ಯಾರ್ಥಿ ಪದೇ ಪದೇ ನಿರಾಕರಿಸಿದರೂ ಹಲ್ಲೆ ಮುಂದು ವರೆದಿದೆ. ಕೆಟ್ಟ ಪದಗಳಿಂದ ಆಕೆಯ ಕುಟುಂಬಕ್ಕೆ ಬೈದಿದ್ದು ಹೊಡೆಯಬೇಡಿ ಎಂದು ಬೇಡಿಕೊಂಡರೂ ಬಿಡದೇ ಕಿರುಕುಳ ನೀಡಿದ್ದಾರೆ.&lt;/p&gt;&lt;p data-block-key="88up2"&gt;&lt;a href="/viral/bjp-leaders-arrive-to-meet-bride-and-groom-later-that-stage-collapses-video-goes-viral-62046.html"&gt;&lt;b&gt;ನವ ಜೋಡಿಗಳಿಗೆ ಶುಭ ಹಾರೈಸುತ್ತಿದ್ದಾಗಲೇ ದಿಢೀರ್ ಆಗಿ ಕುಸಿದ ವೇದಿಕೆ&lt;/b&gt;&lt;/a&gt;&lt;/p&gt;&lt;p data-block-key="1gfk"&gt;ಆಕೆಯಿಂದ ಬಲವಂತವಾಗಿ ಕ್ಷಮೆ ಕೇಳುವಂತೆ ಒತ್ತಾಯಿಸಿದ್ದಾರೆ. ಸುತ್ತಲೂ ಇದ್ದ ಇತರ ವಿದ್ಯಾರ್ಥಿನಿಯರು ಈ ಕೃತ್ಯ ತಡೆಯುವ ಬದಲಾಗಿ ಬೆಂಬಲ ನೀಡುತ್ತಾ ನಿಂತಿದ್ದಾರೆ. ವೀಡಿಯೋ ವೈರಲ್ ಆಗುತ್ತಿದ್ದಂತೆ ದಾದ್ರಿ ಪೊಲೀಸ್ ಠಾಣೆ ಈ ಬಗ್ಗೆ ಪರಿಶೀಲನೆ ನಡೆಸಿದ‌ಎ. ಅಧಿಕಾರಿಗಳ ಪ್ರಕಾರ, ಘಟನೆಯು ಸುಮಾರು 10-12 ದಿನಗಳ ಹಿಂದೆ ಖಾಸಗಿ ವಿಶ್ವವಿದ್ಯಾಲಯದ ಕ್ಯಾಂಪಸ್‌ ನಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ. ಸಂಬಂಧಪಟ್ಟ ವಿದ್ಯಾರ್ಥಿ ವಿರುದ್ಧ ಅಗತ್ಯ ಶಿಸ್ತು ಕ್ರಮ ಕೈಗೊಳ್ಳಲಾಗುತ್ತಿದೆ ಎಂದಿದ್ದಾರೆ.&lt;/p&gt;&lt;p data-block-key="e86mk"&gt;ಈ ಬಗ್ಗೆ ನೆಟ್ಟಿಗರು ನಾನಾ ಬಗೆಯ ಕಾಮೆಂಟ್ ಮಾಡಿದ್ದು ಬಳಕೆದಾರರೊಬ್ಬರು ಇದು ಶಿಕ್ಷಣವಲ್ಲ‌‌‌‌‌.. ಮಾನಸಿಕ ಹಿಂಸೆ ಆಡಳಿತ ಮತ್ತು ಪೊಲೀಸರು ತಕ್ಷಣ ಕ್ರಮ ತೆಗೆದು ಕೊಳ್ಳಬೇಕು ಎಂದರು. ಮತ್ತೊಬ್ಬರು ರ‍್ಯಾಗಿಂಗ್ ಅಲ್ಲ, ಇದು ಸಂಪೂರ್ಣ ಕ್ರಿಮಿನಲ್ ಹಿಂಸೆ... ಆಡಳಿತವು ವಿದ್ಯಾರ್ಥಿ ಯನ್ನು ತಕ್ಷಣವೇ ಅಮಾನತುಗೊಳಿಸಬೇಕು, ಪೊಲೀಸರು ಎಫ್‌ಐಆರ್ ದಾಖಲಿಸಬೇಕು ಎಂದು ಕಿಡಿಕಾರಿದ್ದಾರೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಯುಎಇ ವಿರುದ್ಧ ಇರಾನ್ ಮತ್ತೆ ಕ್ಷಿಪಣಿ ದಾಳಿ, ಮೂವರು ಭಾರತೀಯರಿಗೆ ಗಾಯ: ಭಾರತ ಖಂಡನೆ</title><link>https://vishwavani.news/foreign/missile-attack-by-iran-on-the-uae-again-three-indians-injured-india-condemns-77268.html</link><guid>https://vishwavani.news/foreign/missile-attack-by-iran-on-the-uae-again-three-indians-injured-india-condemns-77268.html</guid><pubDate>Tue, 05 May 2026 08:04:55 +0000</pubDate><description>&lt;![CDATA[Missile attack by Iran: ಯುಎಇಯ ಫುಜೈರಾ ಪೆಟ್ರೋಲಿಯಂ ಕೈಗಾರಿಕಾ ವಲಯದ ಮೇಲೆ ಇರಾನ್ ನಡೆಸಿದ ದಾಳಿಯನ್ನು ಭಾರತ ಖಂಡಿಸಿದೆ. ಈ ದಾಳಿಯಲ್ಲಿ ಮೂವರು ಭಾರತೀಯ ಪ್ರಜೆಗಳು ಗಾಯಗೊಂಡಿದ್ದಾರೆ. ಇದನ್ನು ಖಂಡಿಸಿರುವ ಭಾರತ, ಸ್ವೀಕಾರ್ಹವಲ್ಲ ಎಂದು ಹೇಳಿದೆ. ದಾಳಿಯನ್ನು ತಕ್ಷಣವೇ ನಿಲ್ಲಿಸಬೇಕೆಂದು ಒತ್ತಾಯಿಸಿದೆ.]]&gt;</description><dc:creator>&lt;![CDATA[Priyanka P]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ವಿದೇಶ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/_Irans_attack.original.jpg" class="attachment-large size-large wp-post-image" alt="ಯುಎಇ ವಿರುದ್ಧ ಇರಾನ್ ಮತ್ತೆ ಕ್ಷಿಪಣಿ ದಾಳಿ, ಮೂವರು ಭಾರತೀಯರಿಗೆ ಗಾಯ: ಭಾರತ ಖಂಡನೆ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="fbxeb"&gt;&lt;b&gt;ದುಬೈ, ಮೇ 5:&lt;/b&gt; ಯುಎಇಯ (UAE) ಫುಜೈರಾ ಪೆಟ್ರೋಲಿಯಂ ಕೈಗಾರಿಕಾ ವಲಯದ ಮೇಲೆ ಇರಾನ್ &lt;a href="https://vishwavani.news/foreign/iran-us-conflict-warning-washington-not-committed-77032.html"&gt;(Iran)&lt;/a&gt; ನಡೆಸಿದ ದಾಳಿಯನ್ನು ಭಾರತ ಖಂಡಿಸಿದೆ. ಈ ದಾಳಿಯಲ್ಲಿ ಮೂವರು ಭಾರತೀಯ ಪ್ರಜೆಗಳು ಗಾಯಗೊಂಡಿದ್ದಾರೆ. ಇದನ್ನು ಸ್ವೀಕಾರಾರ್ಹವಲ್ಲ ಎಂದು ಹೇಳಿದ ಭಾರತ (India), ನಾಗರಿಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ನಡೆಸುತ್ತಿರುವ ದಾಳಿಯನ್ನು ತಕ್ಷಣವೇ ನಿಲ್ಲಿಸಬೇಕೆಂದು ಒತ್ತಾಯಿಸಿದೆ.&lt;/p&gt;&lt;p data-block-key="aqjuj"&gt;ಅಮೆರಿಕದೊಂದಿಗಿನ ಉದ್ವಿಗ್ನತೆಯ ನಡುವೆಯೇ, ಇರಾನ್- ಯುಎಇಯನ್ನು ಗುರಿಯಾಗಿಸಿಕೊಂಡು ಮತ್ತೆ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಡೆಸಿತು. ಸೋಮವಾರ (ಮೇ 4) ಫುಜೈರಾ ತೈಲ ಕೈಗಾರಿಕಾ ವಲಯದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಭಾರತೀಯರು ಗಾಯಗೊಂಡಿದ್ದಾರೆ.&lt;/p&gt;&lt;p data-block-key="dfpsq"&gt;ಫುಜೈರಾ ಮೇಲೆ ನಡೆದ ದಾಳಿಯಲ್ಲಿ ಮೂವರು ಭಾರತೀಯರು ಗಾಯಗೊಂಡಿದ್ದು ಸ್ವೀಕಾರಾರ್ಹವಲ್ಲ. ಈ ದಾಳಿಯನ್ನು ತಕ್ಷಣವೇ ನಿಲ್ಲಿಸಬೇಕು ಮತ್ತು ನಾಗರಿಕ ಮೂಲಸೌಕರ್ಯ ಮತ್ತು ಮುಗ್ಧ ನಾಗರಿಕರನ್ನು ಗುರಿಯಾಗಿಸಿ ದಾಳಿ ಮಾಡುವುದು ಸರಿಯಲ್ಲ. ಪಶ್ಚಿಮ ಏಷ್ಯಾದಾದ್ಯಂತ ಶಾಂತಿ ಮತ್ತು ಸ್ಥಿರತೆಯನ್ನು ಪುನಃಸ್ಥಾಪಿಸಲು ಭಾರತವು ಸಂವಾದ ಮತ್ತು ರಾಜತಾಂತ್ರಿಕತೆಯನ್ನು ಬೆಂಬಲಿಸುತ್ತಲೇ ಇದೆ ಎಂದು ವಿದೇಶಾಂಗ ವ್ಯವಹಾರಗಳ ವಕ್ತಾರ ರಣಧೀರ್ ಜೈಸ್ವಾಲ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.&lt;/p&gt;&lt;p data-block-key="fsrah"&gt;&lt;a href="https://vishwavani.news/foreign/we-will-rob-iranian-oil-goods-at-sea-says-donald-trump-77049.html#"&gt;ಸಮುದ್ರದಲ್ಲಿ ನಾವು ತೈಲ, ಸರಕುಗಳನ್ನು ದೋಚುತ್ತೇವೆ: ಡೊನಾಲ್ಡ್ ಟ್ರಂಪ್&lt;/a&gt;&lt;/p&gt;&lt;p data-block-key="5daug"&gt;ಅಂತಾರಾಷ್ಟ್ರೀಯ ಕಾನೂನಿಗೆ ಅನುಸಾರವಾಗಿ ಹೊರ್ಮುಜ್ ಜಲಸಂಧಿಯ ಮೂಲಕ ಮುಕ್ತ ಮತ್ತು ಅಡೆತಡೆಯಿಲ್ಲದ ಸಾಗಾಟ ಮತ್ತು ವ್ಯಾಪಾರವನ್ನು ಬೆಂಬಲಿಸುತ್ತೇವೆ. ಭಾರತವು ಸಮಸ್ಯೆಗಳ ಶಾಂತಿಯುತ ಪರಿಹಾರಕ್ಕಾಗಿ ಎಲ್ಲಾ ಪ್ರಯತ್ನಗಳನ್ನು ಬೆಂಬಲಿಸಲು ಸಿದ್ಧವಾಗಿದೆ ಎಂದು ಅವರು ಹೇಳಿದರು.&lt;/p&gt;&lt;p data-block-key="cgdjc"&gt;ಭಾರತೀಯ ಪ್ರಜೆಗಳು ಗಾಯಗೊಂಡ, ಯುಎಇ ಮೇಲೆ ಇರಾನ್ ನಡೆಸಿದ ದಾಳಿ ಸ್ವೀಕಾರಾರ್ಹವಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. “ಯುಎಇ ಮೇಲೆ ನಡೆದ ದಾಳಿಯಲ್ಲಿ ಮೂವರು ಭಾರತೀಯ ಪ್ರಜೆಗಳು ಗಾಯಗೊಂಡಿದ್ದಾರೆ. ನಾಗರಿಕರು ಮತ್ತು ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವುದನ್ನು ಬಲವಾಗಿ ಖಂಡಿಸುತ್ತೇವೆ. ಭಾರತವು ಯುಎಇಯೊಂದಿಗೆ ದೃಢವಾದ ಒಗ್ಗಟ್ಟಿನಲ್ಲಿ ನಿಂತಿದೆ. ಸಂವಾದ ಮತ್ತು ರಾಜತಾಂತ್ರಿಕತೆಯ ಮೂಲಕ ಎಲ್ಲಾ ಸಮಸ್ಯೆಗಳ ಶಾಂತಿಯುತ ಪರಿಹಾರಕ್ಕೆ ತನ್ನ ಬೆಂಬಲವನ್ನು ಪುನರುಚ್ಚರಿಸುತ್ತದೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.&lt;/p&gt;&lt;p data-block-key="5dav"&gt;ಈ ಘಟನೆಯು ಮಧ್ಯಪ್ರಾಚ್ಯ ಉದ್ವಿಗ್ನತೆಯಲ್ಲಿ ತೀವ್ರ ಏರಿಕೆಯನ್ನು ಸೂಚಿಸುತ್ತದೆ. ಹಾನಿ ನಡೆದಿದ್ದರೂ, ವಾಯು ರಕ್ಷಣಾ ವ್ಯವಸ್ಥೆಯು ಬಹು ಬೆದರಿಕೆಗಳನ್ನು ತಡೆದಿದೆ ಎಂದು ಎಮಿರಾಟಿ ಅಧಿಕಾರಿಗಳು ದೃಢಪಡಿಸಿದರು. ಅಬುಧಾಬಿಯಲ್ಲಿರುವ ಭಾರತೀಯ ರಾಯಭಾರ ಕಚೇರಿಯು, ಸಂತ್ರಸ್ತರಿಗೆ ಸಹಾಯ ಮಾಡಲು ಸ್ಥಳೀಯ ಅಧಿಕಾರಿಗಳೊಂದಿಗೆ ನಿಕಟವಾಗಿ ಸಮನ್ವಯ ಸಾಧಿಸುತ್ತಿದೆ ಎಂದು ತಿಳಿಸಿದೆ.&lt;/p&gt;&lt;p data-block-key="6e2pm"&gt;&lt;a href="https://vishwavani.news/national/trump-putin-discuss-iran-war-ukraine-ceasefire-76811.html"&gt;ಡೊನಾಲ್ಡ್‌ ಟ್ರಂಪ್–ವ್ಲಾಡಿಮಿರ್ ಪುಟಿನ್ 90 ನಿಮಿಷ ಮಾತುಕತೆ: ಇರಾನ್ ಯುದ್ಧ, ಉಕ್ರೇನ್ ಕದನ ವಿರಾಮದ ಬಗ್ಗೆ ಮಹತ್ವದ ಚರ್ಚೆ: ಜಾಗತಿಕ ಕುತೂಹಲ ಕೆರಳಿಸಿದ ನಾಯಕರ ನಡೆ&lt;/a&gt;&lt;/p&gt;&lt;p data-block-key="eu4ga"&gt;“ಫುಜೈರಾದಲ್ಲಿ ಇಂದು ನಡೆದ ದಾಳಿಯಲ್ಲಿ ಮೂವರು ಭಾರತೀಯ ಪ್ರಜೆಗಳು ಗಾಯಗೊಂಡಿದ್ದಾರೆ. ಸಂತ್ರಸ್ತ ಭಾರತೀಯ ಪ್ರಜೆಗಳ ವೈದ್ಯಕೀಯ ಆರೈಕೆ ಮತ್ತು ಕಲ್ಯಾಣವನ್ನು ಖಚಿತಪಡಿಸಿಕೊಳ್ಳಲು ನಾವು ಸ್ಥಳೀಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ”ಎಂದು ರಾಯಭಾರ ಕಚೇರಿಯು ಎಕ್ಸ್‌ ಪೋಸ್ಟ್‌ನಲ್ಲಿ ತಿಳಿಸಿದೆ.&lt;/p&gt;&lt;p data-block-key="8tfov"&gt;ಇತ್ತೀಚಿನ ದಾಳಿಯ ಸಮಯದಲ್ಲಿ ಇರಾನ್ ನಾಲ್ಕು ಕ್ರೂಸ್ ಕ್ಷಿಪಣಿಗಳನ್ನು ಉಡಾಯಿಸಿದೆ ಎಂದು ಯುಎಇ ಹೇಳಿದೆ. ರಕ್ಷಣಾ ಸಚಿವಾಲಯದ ಪ್ರಕಾರ, ಮೂರನ್ನು ವಾಯು ರಕ್ಷಣಾ ವ್ಯವಸ್ಥೆಗಳು ತಡೆಹಿಡಿದರೆ, ನಾಲ್ಕನೆಯದು ಸಮುದ್ರಕ್ಕೆ ಬಿದ್ದಿತು.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ತಮಿಳುನಾಡು ಚುನಾವಣೆ ಫಲಿತಾಂಶ: ಮೂರು ಪಕ್ಷಗಳಿಂದ ಸ್ಪರ್ಧಿಸಿ ಗೆದ್ದ ಒಂದೇ ಕುಟುಂಬದ ಸದಸ್ಯರು</title><link>https://vishwavani.news/national/tamil-nadu-election-results-members-of-the-same-family-win-after-contesting-from-three-different-parties-77272.html</link><guid>https://vishwavani.news/national/tamil-nadu-election-results-members-of-the-same-family-win-after-contesting-from-three-different-parties-77272.html</guid><pubDate>Tue, 05 May 2026 08:04:19 +0000</pubDate><description>&lt;![CDATA[Tamil Nadu Election Results: 2026ರ ತಮಿಳುನಾಡು ಮತ್ತು ಪುದುಚೇರಿ ವಿಧಾನಸಭಾ ಚುನಾವಣೆಯಲ್ಲಿ ಭಾರತದ 'ಲಾಟರಿ ಕಿಂಗ್' ಎಂದೇ ಹೆಸರು ಪಡೆದಿರುವ ಸ್ಯಾಂಟಿಯಾಗೊ ಮಾರ್ಟಿನ್ ಅವರ ಕುಟುಂಬದ ಮೂವರು ಸದಸ್ಯರು ವಿವಿಧ ಪಕ್ಷಗಳಿಂದ ಸ್ಪರ್ಧಿಸಿ ಜಯಭೇರಿ ಬಾರಿಸಿದ್ದಾರೆ. ಒಂದೇ ಕುಟುಂಬದ ಸದಸ್ಯರು ಮೂರು ಬೇರೆ-ಬೇರೆ ರಾಜಕೀಯ ಸಿದ್ಧಾಂತವುಳ್ಳ ಪಕ್ಷಗಳಿಂದ ಸ್ಪರ್ಧಿಸಿರುವುದು ವಿಶೇಷ.]]&gt;</description><dc:creator>&lt;![CDATA[Priyanka P]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ದೇಶ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Tamil_Nadu_Election_Results.original.jpg" class="attachment-large size-large wp-post-image" alt="ತಮಿಳುನಾಡು ಚುನಾವಣೆ ಫಲಿತಾಂಶ: ಮೂರು ಪಕ್ಷಗಳಿಂದ ಸ್ಪರ್ಧಿಸಿ ಗೆದ್ದ ಒಂದೇ ಕುಟುಂಬದ ಸದಸ್ಯರು" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="6yifh"&gt;&lt;b&gt;ಚೆನ್ನೈ, ಮೇ 5:&lt;/b&gt; 2026ರ ತಮಿಳುನಾಡು &lt;a href="https://vishwavani.news/national/vijay-tamil-nadu-alliance-options-government-formation-77208.html"&gt;(Tamil Nadu Election Results 2026)&lt;/a&gt; ಮತ್ತು ಪುದುಚೇರಿ ವಿಧಾನಸಭಾ ಚುನಾವಣೆಯಲ್ಲಿ (Puducherry election results) ಭಾರತದ 'ಲಾಟರಿ ಕಿಂಗ್' ಎಂದೇ ಹೆಸರು ಪಡೆದಿರುವ ಸ್ಯಾಂಟಿಯಾಗೊ ಮಾರ್ಟಿನ್ ಅವರ ಕುಟುಂಬದ ಮೂವರು ಸದಸ್ಯರು ವಿವಿಧ ಪಕ್ಷಗಳಿಂದ ಸ್ಪರ್ಧಿಸಿ ಜಯಭೇರಿ ಬಾರಿಸಿದ್ದಾರೆ. ಇದು ಭಾರತೀಯ ರಾಜಕೀಯದಲ್ಲಿ ಒಂದು ಅಪರೂಪದ ವಿದ್ಯಮಾನವಾಗಿದೆ. ಒಂದೇ ಕುಟುಂಬದ ಸದಸ್ಯರು ಮೂರು ಬೇರೆ-ಬೇರೆ ರಾಜಕೀಯ ಸಿದ್ಧಾಂತವುಳ್ಳ ಪಕ್ಷಗಳಿಂದ ಸ್ಪರ್ಧಿಸಿರುವುದು ವಿಶೇಷ.&lt;/p&gt;&lt;p data-block-key="epa0i"&gt;ತಮಿಳುನಾಡಿನ ಲಾಲ್ಗುಡಿಯಿಂದ ಎಐಎಡಿಎಂಕೆ ಅಭ್ಯರ್ಥಿ ಲೀಮಾರೋಸ್ ಮಾರ್ಟಿನ್. ಆಧವ್ ಅರ್ಜುನ, ತಮಿಳುನಾಡಿನ ವಿಕ್ಕಿವಕ್ಕಂನಿಂದ ಟಿವಿಕೆ ಅಭ್ಯರ್ಥಿಯಾದರೆ, ಜೋಸ್ ಚಾರ್ಲ್ಸ್ ಮಾರ್ಟಿನ್, ಪುದುಚೇರಿಯ ಕಾಮರಾಜ್ ನಹರ್‌ನಿಂದ ಎಲ್‌ಜೆಕೆ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದಾರೆ. ಮಾರ್ಟಿನ್ ಅವರ ಪತ್ನಿ, ಮಗ ಮತ್ತು ಅಳಿಯ ಮೂರು ವಿಭಿನ್ನ ಪಕ್ಷಗಳಿಂದ ಸ್ಪರ್ಧಿಸಿ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಜಯಗಳಿಸಿದರು.&lt;/p&gt;&lt;p data-block-key="trgh"&gt;ಲಾಟರಿ ಬ್ಯಾರನ್ ಸ್ಯಾಂಟಿಯಾಗೊ ಮಾರ್ಟಿನ್ ಅವರ ಪತ್ನಿ ಲೀಮಾರೋಸ್ ಮಾರ್ಟಿನ್ ಅವರು ಲಾಲ್ಗುಡಿ ಕ್ಷೇತ್ರದಿಂದ ಸ್ಪರ್ಧಿಸಿದರು ಮತ್ತು ತಮಿಳಗ ವೆಟ್ರಿ ಕಳಗಂ (ಟಿವಿಕೆ) ಕು ಪಾ ಕೃಷ್ಣನ್ ಅವರನ್ನು 2,500 ಕ್ಕೂ ಹೆಚ್ಚು ಮತಗಳಿಂದ (2,739) ಸೋಲಿಸಿದರು.&lt;/p&gt;&lt;p data-block-key="7sjtf"&gt;&lt;a href="https://vishwavani.news/elections/rahul-gandhi-congratulates-thalapathy-vijay-on-his-victory-congress-will-break-alliance-with-dmk-to-join-with-tvk-77265.html"&gt;ದಳಪತಿ ಗೆಲುವಿಗೆ ರಾಹುಲ್ ಗಾಂಧಿ ಅಭಿನಂದನೆ; ಟಿವಿಕೆ ಜೊತೆ ಸೇರಲು ಡಿಎಂಕೆಯೊಂದಿಗಿನ ಮೈತ್ರಿ ಮುರಿಯುತ್ತಾ ಕಾಂಗ್ರೆಸ್?&lt;/a&gt;&lt;/p&gt;&lt;p data-block-key="cjja4"&gt;ಲಾಲ್ಗುಡಿ, ಸಾಂಪ್ರದಾಯಿಕವಾಗಿ ದ್ರಾವಿಡ ಮುನ್ನೇತ್ರ ಕಳಗಂ (DMK) ಭದ್ರಕೋಟೆಯಾಗಿದ್ದು, 20 ವರ್ಷಗಳ ನಂತರ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (AIADMK) ಗೆ ಮರಳಿತು. ಡಿಎಂಕೆ ಅಭ್ಯರ್ಥಿ ಟಿ ಪಾರಿವಲ್ಲಲ್ 5,000 ಮತಗಳಿಂದ (5,230) ಸೋತರು. 2021, 2016, 2011 ಮತ್ತು 2006 ರ ತಮಿಳುನಾಡು ವಿಧಾನಸಭಾ ಚುನಾವಣೆಗಳಲ್ಲಿ ಡಿಎಂಕೆ ಈ ಸ್ಥಾನವನ್ನು ಗೆದ್ದಿತ್ತು.&lt;/p&gt;&lt;p data-block-key="5tb1h"&gt;14 ವರ್ಷಗಳ ಕಾಲ ಐಜೆಕೆ (ಇಂಡಿಯಾ ಜನನಾಯಕ ಕಚ್ಚಿ)ಯಿಂದ ಇತ್ತೀಚೆಗೆ ಪಕ್ಷಾಂತರಗೊಂಡ ಲೀಮಾ ಅವರನ್ನು ಎಐಎಡಿಎಂಕೆ ಮುಖ್ಯಸ್ಥ ಎಡಪ್ಪಾಡಿ ಕೆ ಪಳನಿಸ್ವಾಮಿ (ಇಪಿಎಸ್) ಪಕ್ಷದ ಮಹಿಳಾ ವಿಭಾಗದ ಜಂಟಿ ಕಾರ್ಯದರ್ಶಿಯಾಗಿ ನೇಮಿಸಿದ್ದಾರೆ.&lt;/p&gt;&lt;p data-block-key="3krkf"&gt;ಇನ್ನು, ಮಾರ್ಟಿನ್ ಅವರ ಅಳಿಯ ಆಧವ್ ಅರ್ಜುನಾ ಹಾಗೂ ನಟ ವಿಜಯ್ ಅವರ ತಮಿಳಗ ವೆತ್ರಿ ಕಳಗಂ (TVK) ಪಕ್ಷದ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಅವರು, ವಿಕ್ಕಿವಕ್ಕಂ ಕ್ಷೇತ್ರದಲ್ಲಿ 17,000 ಕ್ಕಿಂತ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಅರ್ಜುನ ಡಿಎಂಕೆಯ ಕಾರ್ತಿಕ್ ಮೋಹನ್ ಅವರನ್ನು 17,302 ಮತಗಳಿಂದ ಮತ್ತು ಎಐಎಡಿಎಂಕೆಯ ವಿಜಯಕುಮಾರ್ ಎಸ್‌ಆರ್ ಅವರನ್ನು 47,107 ಮತಗಳಿಂದ ಸೋಲಿಸಿದರು. ಕಳೆದ ಎರಡು ಚುನಾವಣೆಗಳಲ್ಲಿ ಡಿಎಂಕೆ ಈ ಸ್ಥಾನವನ್ನು ಗೆದ್ದಿತ್ತು.&lt;/p&gt;&lt;p data-block-key="e35pk"&gt;&lt;a href="https://vishwavani.news/byline-stories/a-new-lesson-77259.html"&gt;ಬದಲಾವಣೆ ಗಾಳಿಯಲ್ಲಿ ಹೊಸ ಪಾಠ&lt;/a&gt;&lt;/p&gt;&lt;p data-block-key="f7htk"&gt;&lt;b&gt;ಪುದುಚೇರಿಯಲ್ಲೂ ಮಿಂಚಿದ ಮಾರ್ಟಿನ್ಸ್&lt;/b&gt;&lt;/p&gt;&lt;p data-block-key="ahvug"&gt;ಲಾಟರಿ ಉದ್ಯಮಿಯ ಪುತ್ರ ಜೋಸ್ ಚಾರ್ಲ್ಸ್ ಮಾರ್ಟಿನ್ ಪುದುಚೇರಿ ಚುನಾವಣೆಯಲ್ಲಿ ತಮ್ಮದೇ ಪಕ್ಷವಾದ ಲಚ್ಚಿಯಾ ಜನನಾಯಕ ಕಚ್ಚಿ (ಎಲ್‌ಜೆಕೆ) ಯೊಂದಿಗೆ ಸ್ಪರ್ಧಿಸಿದರು. ಅವರು ಕಾಮರಾಜ್ ನಗರ ಸ್ಥಾನವನ್ನು 10,000ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದರು. ಕಾಂಗ್ರೆಸ್‌ನ ಪಿಕೆ ದೇವದಾಸ್ ಮತ್ತು ಟಿವಿಕೆಯ ಸುಮನ್ ಅವರನ್ನು ಹಿಂದಿಕ್ಕಿದರು.&lt;/p&gt;&lt;p data-block-key="9spi"&gt;ಈ ಹಿಂದೆ ಬಿಜೆಪಿಯಲ್ಲಿದ್ದ ಜೂನಿಯರ್ ಮಾರ್ಟಿನ್, ಸೀಟು ಹಂಚಿಕೆಯಲ್ಲಿ ವಿಳಂಬವಾದ ನಂತರ ಪಕ್ಷವನ್ನು ತೊರೆದಿದ್ದೇನೆ. ಆದರೆ ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿ ಮತ್ತು ಮೇಕ್ ಇನ್ ಇಂಡಿಯಾ ಕಾರ್ಯಕ್ರಮವನ್ನು ಮೆಚ್ಚುತ್ತಿದ್ದೇನೆ ಎಂದು ಹೇಳಿದರು.&lt;/p&gt;&lt;p data-block-key="dt1qk"&gt;ತಮಿಳುನಾಡು ಮತ್ತು ಪುದುಚೇರಿಯಾದ್ಯಂತ ರಾಜಕೀಯದ ಮೇಲೆ ಪ್ರಭಾವ ಬೀರಲು ತಮ್ಮ ಕುಟುಂಬ ಪ್ರಯತ್ನಿಸುತ್ತಿದೆ ಎಂಬ ಮಾತುಗಳನ್ನು ಎಲ್‌ಜೆಕೆ ಮುಖ್ಯಸ್ಥರು ಅಲ್ಲಗಳೆದರು.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಟಿವಿಕೆ ಅಭ್ಯರ್ಥಿ ವಿರುದ್ಧ ಡಿಎಂಕೆ ಸಚಿವನನ್ನು ಸೋಲಿಸಿತ್ತು ಕೇವಲ ಒಂದು ಮತ</title><link>https://vishwavani.news/elections/the-dmk-minister-was-defeated-against-the-tvk-candidate-by-just-one-vote-77270.html</link><guid>https://vishwavani.news/elections/the-dmk-minister-was-defeated-against-the-tvk-candidate-by-just-one-vote-77270.html</guid><pubDate>Tue, 05 May 2026 07:46:29 +0000</pubDate><description>&lt;![CDATA[ಕೇವಲ ಒಂದೇ ಒಂದು ಮತ ಮಸ್ಕತ್‌ ವ್ಯಕ್ತಿ ಹಾಕದೇ ಇರುತ್ತಿದ್ದರೆ ಅಲ್ಲಿನ ರಾಜಕೀಯ ಚಿತ್ರಣವೇ ಬೇರೆ ಆಗಿರುತ್ತಿತ್ತು. ತಮಿಳುನಾಡು ವಿಧಾನ ಸಭಾ ಚುನಾವಣೆಯಲ್ಲಿ ಡಿಎಂಕೆ ಸಚಿವನ ಸೋಲಿಗೆ ಕಾರಣವಾಗಿದ್ದು ಕೇವಲ ಒಂದು ಮತ ಎಂದರೆ ಅಚ್ಚರಿಯಾಗಲೇಬೇಕು.  ಇದರಿಂದಾಗಿಯೇ ಟಿವಿಕೆ ಅಭ್ಯರ್ಥಿ ಗೆದ್ದರು. ಇಂದು ಒಂದು ಮತದ ಮಹತ್ವದ ಕಥೆಯನ್ನು ಈಗ ಹೇಳುತ್ತಿದೆ.]]&gt;</description><dc:creator>&lt;![CDATA[ವಿದ್ಯಾ ಇರ್ವತ್ತೂರು]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ದೇಶ]]&gt;</category><category>&lt;![CDATA[ಚುನಾವಣೆ]]&gt;</category><category>&lt;![CDATA[ರಾಜಕೀಯ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/dmtv.original.jpg" class="attachment-large size-large wp-post-image" alt="ಟಿವಿಕೆ ಅಭ್ಯರ್ಥಿ ವಿರುದ್ಧ ಡಿಎಂಕೆ ಸಚಿವನನ್ನು ಸೋಲಿಸಿತ್ತು ಕೇವಲ ಒಂದು ಮತ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="odrbg"&gt;&lt;b&gt;ಚೆನ್ನೈ:&lt;/b&gt; ಈ ಬಾರಿ ನಡೆದ ಪಂಚ ರಾಜ್ಯಗಳ ಚುನಾವಣೆಯಲ್ಲಿ (assembly election 2026) ಹೆಚ್ಚು ಗಮನ ಸೆಳೆದದ್ದು ಪಶ್ಚಿಮ ಬಂಗಾಳ (west bengal) ಮತ್ತು ತಮಿಳುನಾಡು (tamil nadu). ಅದರಲ್ಲೂ ತಮಿಳುನಾಡು ವಿಧಾನಸಭಾ ಚುನಾವಣಾ (tamil nadu assembly election) ಫಲಿತಾಂಶ ಹಲವು ಅಚ್ಚರಿಗಳನ್ನು ನೀಡಿದೆ. ಅದರಲ್ಲಿ ತಿರುಪ್ಪತ್ತೂರು ವಿಧಾನಸಭಾ ಕ್ಷೇತ್ರದಲ್ಲಿ (Tiruppattur Assembly Constituency) ನಡೆದ ಒಂದು ಮತದ ಕಥೆಯು ಕೂಡ ಸೇರಿಕೊಂಡಿದೆ. ಇಲ್ಲಿ ಡಿಎಂಕೆ ಸಚಿವ ಕೆ.ಆರ್. ಪೆರಿಯಕರುಪ್ಪನ್ ಅವರು ತಮಿಳಗ ವೆಟ್ರಿ ಕಳಗಂ (TVK) ನ ಸೀನಿವಾಸ ಸೇತುಪತಿ ವಿರುದ್ಧ ಕೇವಲ ಒಂದೇ ಒಂದು ಮತದಿಂದ ಸೋಲು ಅನುಭವಿಸಿದ್ದಾರೆ. ಇದು ಈಗ ಅತೀ ಕಡಿಮೆ ಅಂತರದ ಸೋಲು ಮತ್ತು ಗೆಲುವು ಎಂದು ಕೂಡ ದಾಖಲಾಗಿದೆ.&lt;/p&gt;&lt;p data-block-key="7mrud"&gt;ತಮಿಳುನಾಡಿನಾದ್ಯಂತ ಈ ಬಾರಿಯ ವಿಧಾನ ಸಭಾ ಚುನಾವಣೆಯು ಆಶ್ಚರ್ಯದ ಫಲಿತಾಂಶಕ್ಕೆ ಕಾರಣವಾಗಿದೆ. ತಿರುಪ್ಪತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ರಾಜ್ಯದ ಸಹಕಾರಿ ಸಚಿವರಾಗಿದ್ದ ಕೆ.ಆರ್. ಪೆರಿಯಕರುಪ್ಪನ್ ಅವರು 83,375 ಮತಗಳನ್ನು ಗಳಿಸಿದ್ದು, ಕೇವಲ ಒಂದು ಮತದ ಅಂತರದಿಂದ ಸೋತಿದ್ದಾರೆ. ಇದು ಅತೀ ಕಡಿಮೆ ಅಂತರದ ಸೋಲು ಎಂದೇ ಚುನಾವಣಾ ಇತಿಹಾಸದಲ್ಲಿ ದಾಖಲಾಗಿದೆ.&lt;/p&gt;&lt;p data-block-key="9mk1g"&gt;&lt;a href="/movies/vijay-makes-first-appearance-after-tvk-scripts-historic-performance-in-2026-greets-fans-77256.html"&gt;&lt;b&gt;Vijay: ತಮಿಳುನಾಡಲ್ಲಿ ದಳಪತಿ ಕೀರ್ತಿ ಪತಾಕೆ; ಮೊದಲ ಬಾರಿಗೆ ಫ್ಯಾನ್ಸ್‌ ಮುಂದೆ ಬಂದ ವಿಜಯ್‌!&lt;/b&gt;&lt;/a&gt;&lt;/p&gt;&lt;p data-block-key="15md1"&gt;ಪೆರಿಯಕರುಪ್ಪನ್ ಅವರ ವಿರುದ್ಧ ಸ್ಪರ್ಧಿಸಿದ್ದ ಟಿವಿಕೆಯ ಸೀನಿವಾಸ ಸೇತುಪತಿ ಕೇವಲ ಒಂದು ಮತದಿಂದ ಅವರನ್ನು ಹಿಂದಿಕ್ಕಿದರು. ಇದು ಪ್ರಜಾಪ್ರಭುತ್ವದಲ್ಲಿ ಪ್ರತಿಯೊಂದು ಮತದ ಮೌಲ್ಯದ ಕುರಿತು ಚರ್ಚೆಯನ್ನು ಹುಟ್ಟು ಹಾಕಿದೆ. ಈ ಫಲಿತಾಂಶಕ್ಕೆ ಕಾರಣವಾಗಿದ್ದು ಮಸ್ಕತ್‌ನಿಂದ ಮತ ಚಲಾಯಿಸಲೆಂದೇ ಬಂದಿರುವ ಮತದಾರ ಮಣಿಕಂಠನ್ ಶಿವನಾಥಮ್.&lt;/p&gt;&lt;p data-block-key="5t3s6"&gt;ತಿರುಪ್ಪತ್ತೂರು ವಿಧಾನಸಭಾ ಕ್ಷೇತ್ರದ ಫಲಿತಾಂಶ ಘೋಷಣೆಯಾದ ಮೇಲೆ ಶಿವನಾಥಮ್ ಅವರು ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಈ ಕುರಿತು ಬರೆದಿದ್ದು, ಹೆಮ್ಮೆ ವ್ಯಕ್ತಪಡಿಸಿದ್ದಾರೆ.&lt;/p&gt;&lt;p data-block-key="34ca9"&gt;ಮತದಾನಕ್ಕೆ ಕೆಲವು ದಿನಗಳ ಮೊದಲು ಅವರು ಊರಿಗೆ ಬಂದಿದ್ದು, ತಮ್ಮ ಪ್ರಯಾಣದ ಯೋಜನೆ, ಟಿವಿಕೆ ಪಕ್ಷದ ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದರು. ಇದೀಗ ಕಡಿಮೆ ಅಂತರದ ಟಿವಿಕೆ ಅಭ್ಯರ್ಥಿಯ ಗೆಲುವು ಚುನಾವಣಾ ಫಲಿತಾಂಶಗಳ ಮೇಲೆ ಒಂದು ಮತ ಹೇಗೆ ಪ್ರಭಾವ ಬೀರುತ್ತದೆ ಎಂಬುದನ್ನು ತೋರಿಸಿದೆ ಎಂದು ಹೇಳಿದ್ದಾರೆ.&lt;/p&gt;&lt;p data-block-key="4opia"&gt;&lt;a href="/elections/rahul-gandhi-congratulates-thalapathy-vijay-on-his-victory-congress-will-break-alliance-with-dmk-to-join-with-tvk-77265.html"&gt;&lt;b&gt;ದಳಪತಿ ಗೆಲುವಿಗೆ ರಾಹುಲ್ ಗಾಂಧಿ ಅಭಿನಂದನೆ; ಟಿವಿಕೆ ಜೊತೆ ಸೇರಲು ಡಿಎಂಕೆಯೊಂದಿಗಿನ ಮೈತ್ರಿ ಮುರಿಯುತ್ತಾ ಕಾಂಗ್ರೆಸ್?&lt;/b&gt;&lt;/a&gt;&lt;/p&gt;&lt;p data-block-key="8c7ui"&gt;ಭಾರತೀಯ ಚುನಾವಣಾ ಇತಿಹಾಸದಲ್ಲೇ ತಿರುಪತ್ತೂರಿನ ಸ್ಪರ್ಧೆಯು ತೀವ್ರ ಪೈಪೋಟಿ ಮತ್ತು ಕಡಿಮೆ ಅಂತರದ ಗೆಲುವನ್ನು ದಾಖಲಿಸಿದೆ. ಇಂತಹ ಫಲಿತಾಂಶಗಳು ಅನಿರೀಕ್ಷಿತ ಮತ್ತು ಪ್ರತಿಯೊಬ್ಬ ವ್ಯಕ್ತಿಯ ಮತ ಕೂಡ ಎಷ್ಟು ಮಹತ್ವದ್ದಾಗಿರುತ್ತದೆ ಎಂಬುದನ್ನು ಸಾರಿದೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>Biocon successor: ಬಯೋಕಾನ್ ಮುಂದಿನ ಉತ್ತರಾಧಿಕಾರಿ ಘೋಷಿಸಿದ ಕಿರಣ್ ಮಜುಂದಾರ್ ಶಾ; ಯಾರು ಈ ಕ್ಲೇರ್ ಮಜುಂದಾರ್?</title><link>https://vishwavani.news/commerce/kiran-mazumdar-shaw-announced-as-the-next-successor-of-biocon-who-is-claire-mazumdar-77273.html</link><guid>https://vishwavani.news/commerce/kiran-mazumdar-shaw-announced-as-the-next-successor-of-biocon-who-is-claire-mazumdar-77273.html</guid><pubDate>Tue, 05 May 2026 07:43:15 +0000</pubDate><description>&lt;![CDATA[Who is Claire Mazumdar?: ಬಯೋಕಾನ್‌ ಕಂಪನಿಯು ಮುಂದಿನ ಹಂತದ ಪ್ರಗತಿಗಾಗಿ ಸುಧಾರಿತ ಜೈವಿಕ ತಂತ್ರಜ್ಞಾನ ಮತ್ತು ಕಾರ್ಯಾಚರಣೆಗಳಲ್ಲಿ ಕೃತಕ ಬುದ್ಧಿಮತ್ತೆಯ ಸಂಯೋಜನೆಯ ಮೇಲೆ ಗಮನ ಕೇಂದ್ರೀಕರಿಸುತ್ತಿರುವ ಸಂದರ್ಭದಲ್ಲಿ ನಾಯಕತ್ವ ಬದಲಾವಣೆ ಆಗಲಿರುವುದು ಗಮನಾರ್ಹವಾಗಿದೆ.]]&gt;</description><dc:creator>&lt;![CDATA[Prabhakara R]]&gt;</dc:creator><category>&lt;![CDATA[ಬೆಂಗಳೂರು ನಗರ]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕರ್ನಾಟಕ]]&gt;</category><category>&lt;![CDATA[ವಾಣಿಜ್ಯ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Claire_Mazumdar.original.jpg" class="attachment-large size-large wp-post-image" alt="Biocon successor: ಬಯೋಕಾನ್ ಮುಂದಿನ ಉತ್ತರಾಧಿಕಾರಿ ಘೋಷಿಸಿದ ಕಿರಣ್ ಮಜುಂದಾರ್ ಶಾ; ಯಾರು ಈ ಕ್ಲೇರ್ ಮಜುಂದಾರ್?" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="2ww7k"&gt;&lt;b&gt;ಬೆಂಗಳೂರು:&lt;/b&gt; ಭಾರತದ ಅತಿ ಪ್ರಮುಖ ಜೈವಿಕ ತಂತ್ರಜ್ಞಾನ ಸಂಸ್ಥೆಯಾದ ‘ಬಯೋಕಾನ್’ (Biocon) ಸಂಸ್ಥಾಪಕಿ ಕಿರಣ್ ಮಜುಂದಾರ್ ಶಾ ಅವರು ತಮ್ಮ ಸಂಸ್ಥೆಯ ಮುಂದಿನ ಉತ್ತರಾಧಿಕಾರಿಯನ್ನು ಹೆಸರಿಸಿದ್ದಾರೆ. ತಮ್ಮ ಸಹೋದರನ ಮಗಳಾದ ಕ್ಲೇರ್ ಮಜುಂದಾರ್ (Claire Mazumdar) ಅವರನ್ನು ಬಯೋಕಾನ್ ಸಾಮ್ರಾಜ್ಯವನ್ನು ಮುನ್ನಡೆಸಲು ಆಯ್ಕೆ ಮಾಡಿದ್ದಾರೆ.&lt;/p&gt;&lt;p data-block-key="7q2ek"&gt;ಸಂದರ್ಶನವೊಂದರಲ್ಲಿ ಕಿರಣ್‌ ಮಜುಂದಾರ್‌ ಶಾ ಅವರು ಕಂಪನಿಯ ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡಿದ್ದಾರೆ. ಕಂಪನಿಯು ಮುಂದಿನ ಹಂತದ ಪ್ರಗತಿಗಾಗಿ ಸುಧಾರಿತ ಜೈವಿಕ ತಂತ್ರಜ್ಞಾನ ಮತ್ತು ಕಾರ್ಯಾಚರಣೆಗಳಲ್ಲಿ ಕೃತಕ ಬುದ್ಧಿಮತ್ತೆಯ ಸಂಯೋಜನೆಯ ಮೇಲೆ ಗಮನ ಕೇಂದ್ರೀಕರಿಸುತ್ತಿರುವ ಸಂದರ್ಭದಲ್ಲಿ ನಾಯಕತ್ವ ಹಸ್ತಾಂತರ ಆಗಲಿರುವುದು ಗಮನಾರ್ಹ.&lt;/p&gt;&lt;h3 data-block-key="8usij"&gt;&lt;b&gt;ಕ್ಲೇರ್ ಮಜುಂದಾರ್ ಯಾರು?&lt;/b&gt;&lt;/h3&gt;&lt;p data-block-key="9atts"&gt;37 ವರ್ಷದ ಕ್ಲೇರ್ ಮಜುಂದಾರ್ ಅವರು ಪ್ರಸ್ತುತ ಅಮೆರಿಕ ಮೂಲದ ‘ಬಿಕಾರಾ ಥೆರಪಿಟಿಕ್ಸ್’ (Bicara Therapeutics) ಎಂಬ ಜೈವಿಕ ಔಷಧ ಕಂಪನಿಯ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದು ಬಯೋಕಾನ್‌ನಿಂದಲೇ ಆರಂಭವಾದ, ನಾಸ್ಡಾಕ್ ಲಿಸ್ಟೆಡ್‌ ಸಂಸ್ಥೆಯಾಗಿದೆ. ತಮಗೆ ಮಕ್ಕಳಿಲ್ಲದ ಕಾರಣ, ಕಂಪನಿಯ ಭವಿಷ್ಯ ಮತ್ತು ಮಾಲೀಕತ್ವದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಲು ಕ್ಲೇರ್ ಅವರೇ ಸೂಕ್ತ ವ್ಯಕ್ತಿ ಎಂದು ಕಿರಣ್ ಅವರು ನಿರ್ಧರಿಸಿದ್ದಾರೆ. ಕ್ಲೇರ್ ಅವರ ನಾಯಕತ್ವ ಮತ್ತು ಜಾಗತಿಕ ಮಟ್ಟದಲ್ಲಿ ಬಯೋಟೆಕ್ ವ್ಯವಹಾರವನ್ನು ಬೆಳೆಸಿದ ರೀತಿಗೆ ಕಿರಣ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.&lt;/p&gt;&lt;h3 data-block-key="53ne4"&gt;&lt;b&gt;ಕ್ಲೇರ್ ಮಜುಂದಾರ್ ಅವರ ಶೈಕ್ಷಣಿಕ ಹಿನ್ನೆಲೆ&lt;/b&gt;&lt;/h3&gt;&lt;p data-block-key="cob64"&gt;ಕ್ಲೇರ್ ಅವರು ಮೆಸಾಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಂತಹ ವಿಶ್ವವಿಖ್ಯಾತ ಶಿಕ್ಷಣ ಸಂಸ್ಥೆಗಳಲ್ಲಿ ಎಂಜಿನಿಯರಿಂಗ್, ವೈದ್ಯಕೀಯ ಮತ್ತು ಬ್ಯುಸಿನೆಸ್ ಮ್ಯಾನೇಜ್ಮೆಂಟ್​ನಲ್ಲಿ ಪದವಿ ಪಡೆದಿದ್ದಾರೆ. ಕ್ಲೇರ್ ಅವರ ಕುಟುಂಬದ ಇತರ ಸದಸ್ಯರೂ ಕೂಡ ಉನ್ನತ ಹುದ್ದೆಗಳಲ್ಲಿಇದ್ದಾರೆ. ಸಹೋದರ ಎರಿಕ್ ಮಜುಂದಾರ್ ಅವರು ಕ್ಯಾಲಿಫೋರ್ನಿಯಾ ಇನ್ಸ್​ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಐ ತಜ್ಞರಾಗಿದ್ದಾರೆ. ಪತಿ ಥಾಮಸ್ ರಾಬರ್ಟ್ಸ್ ಅವರು ಅಮೆರಿಕದ ಮೆಸಾಚುಸೆಟ್ಸ್ ಜೆನರಲ್‌ ಹಾಸ್ಪಿಟಲ್‌ನಲ್ಲಿ ಕ್ಯಾನ್ಸರ್ ತಜ್ಞರಾಗಿದ್ದಾರೆ.&lt;/p&gt;&lt;p data-block-key="div7t"&gt;ಬಯೋಕಾನ್ ಸಂಸ್ಥೆಯು ಈಗ ಕೃತಕ ಬುದ್ಧಿಮತ್ತೆ (AI) ಮತ್ತು ಸುಧಾರಿತ ಜೈವಿಕ ಔಷಧಗಳ ಸಂಶೋಧನೆಯತ್ತ ಹೆಚ್ಚು ಗಮನಹರಿಸುತ್ತಿದ್ದು, ಕ್ಲೇರ್ ಅವರ ತಾಂತ್ರಿಕ ಜ್ಞಾನವು ಕಂಪನಿಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಸಹಾಯ ಮಾಡಲಿದೆ ಎಂದು ನಿರೀಕ್ಷಿಸಲಾಗಿದೆ.&lt;/p&gt;&lt;p data-block-key="f7iia"&gt;ಕಿರಣ್ ಮಜುಂದಾರ್ ಶಾ (73) ಅವರು ಸುಮಾರು ನಾಲ್ಕು ದಶಕಗಳ ಹಿಂದೆ ಬಯೋಕಾನ್ ಸ್ಥಾಪಿಸಿ ಭಾರತದ ಅತಿದೊಡ್ಡ ಬಯೋಟೆಕ್ ಕಂಪನಿಯಾಗಿ ಬೆಳೆಸಿದ್ದಾರೆ. ಸ್ವರ್ಗಸ್ಥರಾಗಿರುವ ಅವರ ಪತಿ ಜಾನ್ ಶಾ ಅವರು ಈ ಹಿಂದೆ ಸಮೂಹದ ಉಪಾಧ್ಯಕ್ಷರಾಗಿದ್ದರು.&lt;/p&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="twitter-tweet"&gt;&lt;p lang="en" dir="ltr"&gt;Claire will transition into my role at the right time so not planning to hang up my boots just yet!! &lt;a href="https://t.co/pidlRfRZRs"&gt;https://t.co/pidlRfRZRs&lt;/a&gt;&lt;/p&gt;&amp;mdash; Kiran Mazumdar-Shaw (@kiranshaw) &lt;a href="https://twitter.com/kiranshaw/status/2051543260565479664?ref_src=twsrc%5Etfw"&gt;May 5, 2026&lt;/a&gt;&lt;/blockquote&gt; &lt;script async src="https://platform.twitter.com/widgets.js" charset="utf-8"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="3rff8"&gt;&lt;a href="/karnataka/bengaluru-urban/shop-with-curated-ai-finds-with-amazon-indias-great-summer-sale-2026-from-may-8th-77173.html"&gt;ಮೇ.8 ರಿಂದ ಅಮೆಜಾನ್ ಇಂಡಿಯಾದ ಗ್ರೇಟ್ ಸಮ್ಮರ್ ಸೇಲ್ 2026 ನೊಂದಿಗೆ ಕ್ಯುರೇಟೆಡ್ AI ಫೈಂಡ್ ಗಳಿಂದ ಮಾಡಿ ಶಾಪಿಂಗ್&lt;/a&gt;&lt;/p&gt;&lt;h3 data-block-key="8bc86"&gt;&lt;b&gt;ಕಿರಣ್‌ ಮಜುಂದಾರ್‌ ಪ್ರತಿಕ್ರಿಯೆ ಏನು?&lt;/b&gt;&lt;/h3&gt;&lt;p data-block-key="5p64j"&gt;ಇನ್ನು ಕಂಪನಿಯ ನಾಯಕತ್ವ ಬದಲಾವಣೆ ಬಗ್ಗೆ ಪ್ರತಿಕ್ರಿಯಿಸಿರುವ ಕಿರಣ್‌ ಮಜುಂದಾರ್‌ ಅವರು, ತಾವು ತತ್​ಕ್ಷಣಕ್ಕೆ ಬಯೋಕಾನ್​ನ ಜವಾಬ್ದಾರಿ ಬಿಡುತ್ತಿಲ್ಲ. ಕ್ಲೇರ್ ಅವರು ನನ್ನ ಸ್ಥಾನಕ್ಕೆ ಸೂಕ್ತ ಸಮಯದಲ್ಲಿ ಬರುತ್ತಾರೆ ಎಂದು ಎಕ್ಸ್ ಪೋಸ್ಟ್​ನಲ್ಲಿ ಸ್ಪಷ್ಟಪಡಿಸಿದ್ದಾರೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>Kalita Majhi: ಮನೆಗೆಲಸ ಮಾಡುತ್ತಿದ್ಧ ಮಹಿಳೆ ಈಗ ಬಂಗಾಳದ ಶಾಸಕಿ!; ಯಾರು ಈ ಕಲಿತಾ ಮಾಝಿ?</title><link>https://vishwavani.news/national/who-is-kalita-majhi-from-domestic-help-to-mla-bjp-candidate-scripts-remarkable-win-in-bengals-ausgram-77269.html</link><guid>https://vishwavani.news/national/who-is-kalita-majhi-from-domestic-help-to-mla-bjp-candidate-scripts-remarkable-win-in-bengals-ausgram-77269.html</guid><pubDate>Tue, 05 May 2026 07:15:00 +0000</pubDate><description>&lt;![CDATA[Who is Kalita Majhi?: 294 ಸದಸ್ಯ ಬಲದ ವಿಧಾನಸಭೆಯಲ್ಲಿ 206 ಸ್ಥಾನಗಳನ್ನು ಗಳಿಸಿದ ಬಿಜೆಪಿಯ ಭರ್ಜರಿ ಗೆಲುವಿನ ಮಧ್ಯೆ ಮಾಝಿಯವರ ಗೆಲುವು ಕೂಡ ಗಮನಸೆಳೆದಿದೆ. ಬಿಜೆಪಿಯ ಈ ಗೆಲುವು ರಾಜ್ಯದಲ್ಲಿ ತೃಣಮೂಲ ಕಾಂಗ್ರೆಸ್‌ನ 15 ವರ್ಷಗಳ ಆಳ್ವಿಕೆಯನ್ನು ಕೊನೆಗೊಳಿಸಿತು.]]&gt;</description><dc:creator>&lt;![CDATA[Abhilash BC]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ದೇಶ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Who_is_Kalita_Majhi_.original.jpg" class="attachment-large size-large wp-post-image" alt="Kalita Majhi: ಮನೆಗೆಲಸ ಮಾಡುತ್ತಿದ್ಧ ಮಹಿಳೆ ಈಗ ಬಂಗಾಳದ ಶಾಸಕಿ!; ಯಾರು ಈ ಕಲಿತಾ ಮಾಝಿ?" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="kp3r4"&gt;&lt;b&gt;ಕೋಲ್ಕತಾ, ಮೇ 5:&lt;/b&gt; ಇಡೀ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ತೀವ್ರ ಹಣಾಹಣಿಗೆ ಸಾಕ್ಷಿಯಾಗಿದ್ದ ಭವಾನಿಪುರ ಕ್ಷೇತ್ರದಲ್ಲಿ ಬಿಜೆಪಿಯ ಸುವೇಂದು ಅಧಿಕಾರಿ ಎದುರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ 15,105 ಮತಗಳಿಂದ ಪರಾಭವ ಕಂಡಿದ್ದಾರೆ. ಜತೆಗೆ ಅವರ ಪಕ್ಷವೂ ಅಧಿಪತನ ಕಂಡಿದೆ. ರಾಜ್ಯದಲ್ಲಿ ಮೊದಲ ಸಲ ಅಧಿಕಾರದ ಗದ್ದುಗೆ ಏರಿದೆ. ರಾಜ್ಯ ವಿಧಾನಸಭೆಯ 294 ಸ್ಥಾನಗಳ ಪೈಕಿ 293 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಭರ್ಜರಿ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಈ ಮಧ್ಯೆ ಮನೆ ಕೆಲಸ ಮಾಡಿ ತಿಂಗಳಿಗೆ ಕೇವಲ 2,500 ರೂ. ಸಂಪಾದಿಸುತ್ತಿದ್ದ ಸಾಮಾನ್ಯ ಮಹಿಳೆ ಕಲಿತಾ ಮಾಝಿ ಶಾಸಕಿಯಾಗಿ ವಿಧಾನಸಭೆ ಪ್ರವೇಶಿಸಲು ಸಜ್ಜಾಗಿದ್ದಾರೆ.&lt;/p&gt;&lt;p data-block-key="9un44"&gt;ಗುಸ್ಕಾರ ಪುರಸಭೆಯ ನಿವಾಸಿಯಾದ ಮಾಝಿ, ರಾಜಕೀಯಕ್ಕೆ ಪ್ರವೇಶಿಸುವ ಮೊದಲು ನಾಲ್ಕು ಮನೆಗಳಲ್ಲಿ ಮನೆ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದರು. ಅವರು ಈ ಹಿಂದೆ 2021 ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು ಆದರೆ ತೃಣಮೂಲ ಕಾಂಗ್ರೆಸ್‌ನ ಅಭೇದಾನಂದ ಥಂಡರ್ ವಿರುದ್ಧ 11,815 ಮತಗಳಿಂದ ಸೋತರು. ಆದರೆ ಎರಡನೇ ಬಾರಿಯೂ ಅವರ ಮೇಲೆ ವಿಶ್ವಾವಿಟ್ಟ ಬಿಜೆಪಿ ಅವರನ್ನು ಮತ್ತೆ ಇದೇ ಕ್ಷೇತ್ರದಿಂದ ಕಣಕ್ಕಿಳಿಸಿತು. ಈ ಬಾರಿ ಅವರು 1,07,692 ಮತಗಳನ್ನು ಪಡೆದು, ಶ್ಯಾಮ ಪ್ರಸನ್ನ ಲೋಹರ್ ಅವರನ್ನು 12,535 ಮತಗಳ ಅಂತರದಿಂದ ಸೋಲಿಸಿದರು.&lt;/p&gt;&lt;p data-block-key="31gkc"&gt;294 ಸದಸ್ಯ ಬಲದ ವಿಧಾನಸಭೆಯಲ್ಲಿ 206 ಸ್ಥಾನಗಳನ್ನು ಗಳಿಸಿದ ಬಿಜೆಪಿಯ ಭರ್ಜರಿ ಗೆಲುವಿನ ಮಧ್ಯೆ ಮಾಝಿಯವರ ಗೆಲುವು ಕೂಡ ಗಮನಸೆಳೆದಿದೆ. ಬಿಜೆಪಿಯ ಈ ಗೆಲುವು ರಾಜ್ಯದಲ್ಲಿ ತೃಣಮೂಲ ಕಾಂಗ್ರೆಸ್‌ನ 15 ವರ್ಷಗಳ ಆಳ್ವಿಕೆಯನ್ನು ಕೊನೆಗೊಳಿಸಿತು. ಈ ಗೆಲುವಿನ ಪ್ರಮಾಣವು ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ರಚನಾತ್ಮಕ ಬದಲಾವಣೆಯನ್ನು ಸೂಚಿಸುತ್ತದೆ.&lt;/p&gt;&lt;p data-block-key="9ndhm"&gt;&lt;a href="/elections/rahul-gandhi-congratulates-thalapathy-vijay-on-his-victory-congress-will-break-alliance-with-dmk-to-join-with-tvk-77265.html"&gt;ದಳಪತಿ ಗೆಲುವಿಗೆ ರಾಹುಲ್ ಗಾಂಧಿ ಅಭಿನಂದನೆ; ಟಿವಿಕೆ ಜೊತೆ ಸೇರಲು ಡಿಎಂಕೆಯೊಂದಿಗಿನ ಮೈತ್ರಿ ಮುರಿಯುತ್ತಾ ಕಾಂಗ್ರೆಸ್?&lt;/a&gt;&lt;/p&gt;&lt;p data-block-key="bjmk9"&gt;ಈ ಜನಾದೇಶವು ರಾಷ್ಟ್ರೀಯ ಮಹತ್ವವನ್ನು ಹೊಂದಿದೆ, 1972 ರ ನಂತರ ಮೊದಲ ಬಾರಿಗೆ ಪಶ್ಚಿಮ ಬಂಗಾಳವು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಅದೇ ಪಕ್ಷದ ಆಳ್ವಿಕೆಗೆ ಒಳಪಡಲಿದೆ. ಮಮತಾ ಬ್ಯಾನರ್ಜಿಯವರ ತವರು ಕ್ಷೇತ್ರವಾದ ಭವಾನಿಪುರ ತೀವ್ರ ಕುತೂಹಲಕ್ಕೆ ಕಾರಣವಾಗಿತ್ತು. 2021ರ ಚುನಾವಣೆಯಲ್ಲಿ ನಂದಿಗ್ರಾಮದಲ್ಲಿ ಸುವೇಂದು ಎದುರು ಸೋತಿದ್ದ ಮಮತಾ, ಆ ಬಳಿಕ ಭವಾನಿಪುರದಿಂದ ಸ್ಪರ್ಧಿಸಿ, ಗೆಲುವು ಸಾಧಿಸಿ ಮುಖ್ಯಮಂತ್ರಿ ಕುರ್ಚಿಯನ್ನು ಉಳಿಸಿಕೊಂಡಿದ್ದರು. ಈ ಬಾರಿಯೂ ಅದೇ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದರು. ಅವರು ಈ ಬಾರಿಕನಿಷ್ಟ ಶಾಸಕ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿಯೂ ವಿಫಲರಾಗಿದ್ದಾರೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>Kannada New Movie: ಸ್ಯಾಂಡಲ್‌ವುಡ್‌ಗೆ ʻಲವ್‌ ಸೀಸನ್ಸ್‌ʼ ಎಂಟ್ರಿ: ಲಿರಿಕಲ್ ವೀಡಿಯೋ ಸಾಂಗ್ ಔಟ್‌</title><link>https://vishwavani.news/movies/kannada-new-movie-love-seasons-entry-into-sandalwood-lyrical-video-song-out-77267.html</link><guid>https://vishwavani.news/movies/kannada-new-movie-love-seasons-entry-into-sandalwood-lyrical-video-song-out-77267.html</guid><pubDate>Tue, 05 May 2026 06:22:51 +0000</pubDate><description>&lt;![CDATA[Kannada New Movie:  ಕೃತ್ವಿಕ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾದ (Cinema) ಮೊದಲ ಲಿರಿಕಲ್ ವೀಡಿಯೋ ಸಾಂಗ್ ಇದೀಗ ಬಿಡುಗಡೆಗೊಂಡಿದೆ. ಈ ಮೂಲಕ ಮಧುರವಾದ ಸಾಹಿತ್ಯ, ಸಂಗೀತದ ಗೀತೆಯ ಮೂಲಕ ಲವ್ ಸೀಸನ್ಸ್ ಮ್ಯೂಸಿಕ್ ಹಂಗಾಮಕ್ಕೆ ಚಾಲನೆ ಸಿಕ್ಕಂತಾಗಿದೆ.
ಎನ್‌.ಆರ್‌ ಸ್ಟುಡಿಯೋ ಯೂಟ್ಯೂಬ್‌ ಚಾನೆಲ್‌ನಲ್ಲಿ ಮಳೆಯಾಗೋ ಮೊದಲೇ ಕೊಡೆ ಹಿಡಿದು ಬರುವೆ, ನಗು ಮುಗಿವಾ ಮೊದಲೇ ಹೊಸ ಖುಷಿಯ ಕೊಡುವೆ ಎಂಬ ಮೋಹಕ ಸಾಲುಗಳನ್ನು ಕಾಂತಾರಾ ಖ್ಯಾತಿಯ ಪ್ರಮೋದ್ ಮರವಂತೆ ಬರೆದಿದ್ದಾರೆ.]]&gt;</description><dc:creator>&lt;![CDATA[Yashaswi Devadiga]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಮನರಂಜನೆ]]&gt;</category><category>&lt;![CDATA[ಸಿನಿಮಾ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Kannada_New_Movie_Love_Seasons_entry_into_Sanda.original.jpg" class="attachment-large size-large wp-post-image" alt="Kannada New Movie: ಸ್ಯಾಂಡಲ್‌ವುಡ್‌ಗೆ ʻಲವ್‌ ಸೀಸನ್ಸ್‌ʼ ಎಂಟ್ರಿ: ಲಿರಿಕಲ್ ವೀಡಿಯೋ ಸಾಂಗ್ ಔಟ್‌" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="byp1d"&gt;ಒಂದು ವಿಭಿನ್ನ ಪ್ರೇಮ ಕಥನವೆಂಬ ಸುಳಿವಿನ ಮೂಲಕ ಪ್ರೇಕ್ಷಕರನ್ನು ಸೆಳೆದಿದ್ದ ಚಿತ್ರ ಲವ್ ಸೀಸನ್ಸ್ (Love seasons). ಕೃತ್ವಿಕ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾದ (Cinema) ಮೊದಲ ಲಿರಿಕಲ್ ವೀಡಿಯೋ ಸಾಂಗ್ ಇದೀಗ ಬಿಡುಗಡೆಗೊಂಡಿದೆ. ಈ ಮೂಲಕ ಮಧುರವಾದ ಸಾಹಿತ್ಯ, ಸಂಗೀತದ ಗೀತೆಯ ಮೂಲಕ ಲವ್ ಸೀಸನ್ಸ್ ಮ್ಯೂಸಿಕ್ ಹಂಗಾಮಕ್ಕೆ ಚಾಲನೆ ಸಿಕ್ಕಂತಾಗಿದೆ.&lt;/p&gt;&lt;p data-block-key="da8t8"&gt;ಎನ್‌.ಆರ್‌ ಸ್ಟುಡಿಯೋ ಯೂಟ್ಯೂಬ್‌ ಚಾನೆಲ್‌ನಲ್ಲಿ ಮಳೆಯಾಗೋ ಮೊದಲೇ ಕೊಡೆ ಹಿಡಿದು ಬರುವೆ, ನಗು ಮುಗಿವಾ ಮೊದಲೇ ಹೊಸ ಖುಷಿಯ ಕೊಡುವೆ ಎಂಬ ಮೋಹಕ ಸಾಲುಗಳನ್ನು ಕಾಂತಾರಾ ಖ್ಯಾತಿಯ ಪ್ರಮೋದ್ ಮರವಂತೆ ಬರೆದಿದ್ದಾರೆ.&lt;/p&gt;&lt;p data-block-key="87lf7"&gt;&lt;b&gt;ಇದನ್ನೂ ಓದಿ:&lt;/b&gt; &lt;a href="/movies/actress-rajini-amritavarshini-fame-film-chamber-stepped-up-against-rajini-77253.html"&gt;Actress Rajini: 'ಅಮೃತವರ್ಷಿಣಿ' ರಜಿನಿ ವಿರುದ್ಧ ಫಿಲ್ಮ್‌ ಚೇಂಬರ್ ಮೆಟ್ಟಿಲೇರಿದ ಚಿತ್ರತಂಡ!&lt;/a&gt;&lt;/p&gt;&lt;p data-block-key="1dg46"&gt;ವೀರ್ ಸಮರ್ಥ್ ಸಂಗೀತ ಸಂಯೋಜಿಸಿರುವ ಗೀತೆಗೆ ಸರೆಗಮಪ ಸೀಸನ್ ೧೦ ಸ್ಪರ್ಧಿಯಾಗಿ ಪ್ರಸಿದ್ಧಿ ಪಡೆದಿದ್ದ ಪ್ರಜ್ಞಾ ಮರಾಠೆ ಮತ್ತು ಅರ್ಮಾನ್ ಮಲಿಕ್ ಧ್ವನಿಯಾಗಿದ್ದಾರೆ. ಈ ಹಿಂದೆ ಟೀಸರ್ ಬಿಡುಗಡೆಯ ಸಂದರ್ಭದಲ್ಲಿಯೇ ವೀರ್ ಸಮರ್ಥ್ ಈ ಸಿನಿಮಾದ ಹಾಡುಗಳ ಬಗ್ಗೆ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದರು. ಇದೀಗ ಬಿಡುಗಡೆಗೊಂಡಿರೋ ಹಾಡು ಆ ಮಾತುಗಳನ್ನು ನಿಜವಾಗಿಸಿದಂತಿದೆ.&lt;/p&gt;&lt;p data-block-key="53po3"&gt;ಎನ್.ಆರ್ ಸ್ಟುಡಿಯೋಸ್ ಬ್ಯಾನರ್‌ನಡಿಯಲ್ಲಿ ಎನ್.ಆರ್ ಮಂಜುನಾಥ (ನೀಲೇರಿ) ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಕೃತ್ವಿಕ್ ನಿರ್ದೇಶನ, ವೀರ್ ಸಮರ್ಥ್ ಸಂಗೀತ ಸಂಗೀತ ನಿದೇಶನ ಈ ಚಿತ್ರಕ್ಕಿದೆ. ಕೆ.ಕಲ್ಯಾಣ್, ಪ್ರಮೋದ್ ಮರವಂತೆ ಮುಂತಾದವರು ಸಾಹಿತ್ಯ ಬರೆದಿದ್ದಾರೆ. ಅವಿನಾಶ ಶಾಸ್ತ್ರಿ ಛಾಯಾಗ್ರಹಣ, ಮಧು ತುಂಬಕೆರೆ ಸಂಕಲನ, ಭಜರಂಗಿ ಮೋಹನ್ ನೃತ್ಯ ಸಂಯೋಜನೆಯಿರುವ ಈ ಚಿತ್ರದಲ್ಲಿ ಮುಕುಂದ ರಾಮಸ್ವಾಮಿ ನಾಯಕನಾಗಿ ನಟಿಸಿದ್ದಾರೆ.&lt;/p&gt;&lt;p data-block-key="1a24f"&gt;&lt;b&gt;ಇದನ್ನೂ ಓದಿ:&lt;/b&gt; &lt;a href="/movies/amruthadhaare-serial-jaidev-in-critical-condition-gowtham-bhoomika-shock-77261.html"&gt;Amruthadhaare Serial: ಜೈದೇವ್‌ ಬೀದಿ ಪಾಲು; ಪಾಪದ ಕೊಡ ತುಂಬಿ ಬದುಕಾಯಿತು ಮಣ್ಣು ಪಾಲು!&lt;/a&gt;&lt;/p&gt;&lt;p data-block-key="bhsuv"&gt;ದಿಯಾ ಕೀರ್ತಿ, ಚಂದನಾ ಗೌಡ ಮತ್ತು ಶ್ವೇತಾ ಕೊಗ್ಲೂರು ನಾಯಕಿಯರಾಗಿ ಜೊತೆಯಾಗಿದ್ದಾರೆ. ಮಂಡ್ಯ ರಮೇಶ್, ರಾಜೇಶ್ ನಟರಂಗ, ಸಂಗೀತಾ ಅನಿಲ್, ಜಯತೀರ್ಥ, ಚೇತನ್ ದುರ್ಗ, ಕಾಮಿಡಿ ಕಿಲಾಡಿ ಸದಾನಂದ, ಹುಲಿ ಕಾರ್ತಿಕ್, ಬೇಬಿ ರಿತು ಸಿಂಗ್ ಮುಂತಾದವರ ತಾರಾಗಣವಿದೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ದಳಪತಿ ಗೆಲುವಿಗೆ ರಾಹುಲ್ ಗಾಂಧಿ ಅಭಿನಂದನೆ; ಟಿವಿಕೆ ಜೊತೆ ಸೇರಲು ಡಿಎಂಕೆಯೊಂದಿಗಿನ ಮೈತ್ರಿ ಮುರಿಯುತ್ತಾ ಕಾಂಗ್ರೆಸ್?</title><link>https://vishwavani.news/elections/rahul-gandhi-congratulates-thalapathy-vijay-on-his-victory-congress-will-break-alliance-with-dmk-to-join-with-tvk-77265.html</link><guid>https://vishwavani.news/elections/rahul-gandhi-congratulates-thalapathy-vijay-on-his-victory-congress-will-break-alliance-with-dmk-to-join-with-tvk-77265.html</guid><pubDate>Tue, 05 May 2026 05:56:53 +0000</pubDate><description>&lt;![CDATA[ಭಾರಿ ಗದ್ದಲದ ನಡುವೆ ಅಧಿಕಾರದ ಗದ್ದುಗೆ ಏರಲು ಈಗ ತಮಿಳಗ ವೆಟ್ರಿ ಕಳಗಂ (ಟಿವಿಕೆ)  ಪಕ್ಷದ ನಾಯಕ ದಳಪತಿ ವಿಜಯ್ ಅವರಿಗೆ ಬಹುಮತದ ಸವಾಲು ಎದುರಾಗಿದೆ. ಈ ನಡುವೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಶುಭಾಶಯ ಸಂದೇಶಗಳನ್ನು ಅವರಿಗೆ ಕಳುಹಿಸಿದ್ದು, ಕಾಂಗ್ರೆಸ್ ಮತ್ತು ಟಿವಿಕೆ ಮೈತ್ರಿ ಮಾಡಿಕೊಳ್ಳುತ್ತದೆ ಎನ್ನಲಾಗುತ್ತಿದೆ.]]&gt;</description><dc:creator>&lt;![CDATA[ವಿದ್ಯಾ ಇರ್ವತ್ತೂರು]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ದೇಶ]]&gt;</category><category>&lt;![CDATA[ಚುನಾವಣೆ]]&gt;</category><category>&lt;![CDATA[ರಾಜಕೀಯ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/rahulvijay.original.jpg" class="attachment-large size-large wp-post-image" alt="ದಳಪತಿ ಗೆಲುವಿಗೆ ರಾಹುಲ್ ಗಾಂಧಿ ಅಭಿನಂದನೆ; ಟಿವಿಕೆ ಜೊತೆ ಸೇರಲು ಡಿಎಂಕೆಯೊಂದಿಗಿನ ಮೈತ್ರಿ ಮುರಿಯುತ್ತಾ ಕಾಂಗ್ರೆಸ್?" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="ektxc"&gt;&lt;b&gt;ಚೆನ್ನೈ: &lt;/b&gt;ತಮಿಳುನಾಡಿನ (tamilnadu) ವಿಧಾನ ಸಭಾ ಚುನಾವಣೆಯಲ್ಲಿ (assembly election) ಭರ್ಜರಿ ಗೆಲುವು ಸಾಧಿಸಿರುವ ನಟ ವಿಜಯ್ ದಳಪತಿ (Thalapathy Vijay) ಅವರ ಪಕ್ಷಕ್ಕೆ ಸರ್ಕಾರ ರಚನೆಗೆ ಬಹುಮತದ ಸವಾಲು ಎದುರಾಗಿದೆ. ಈ ನಡುವೆ ಕಾಂಗ್ರೆಸ್ ನಾಯಕ (congress leader) ರಾಹುಲ್ ಗಾಂಧಿ (rahul gandhi) ಅವರು ವಿಜಯ್ ಜೊತೆ ಮಾತನಾಡಿ ಶುಭ ಹಾರೈಸಿರುವುದಾಗಿ ತಿಳಿಸಿದ್ದಾರೆ. ತಮಿಳುನಾಡಿನಲ್ಲಿ ಸರ್ಕಾರ ರಚನೆಗೆ ಕಾಂಗ್ರೆಸ್  ಬೆಂಬಲ ನೀಡಲಿದೆ ಎನ್ನುವ ಊಹಾಪೋಹಗಳ ನಡುವೆಯೇ ರಾಹುಲ್ ಗಾಂಧಿ ಅವರ ಅಭಿನಂದನಾ ಸಂದೇಶ ವಿಜಯ್ ಅವರನ್ನು ತಲುಪಿದೆ. &lt;/p&gt;&lt;p data-block-key="6b4d1"&gt;ಮೊದಲ ಬಾರಿಗೆ ಚುನಾವಣಾ ಕಣಕ್ಕೆ ಇಳಿದು ಭರ್ಜರಿ ಗೆಲುವು ಸಾಧಿಸಿರುವ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಗೆಲುವಿಗೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಸೋಮವಾರ  ನಟ ವಿಜಯ್ ಅವರನ್ನು ಅಭಿನಂದಿಸಿದರು. ಅಲ್ಲದೇ ತಮಿಳುನಾಡು ವಿಜಯ್ ಅವರ ಪಕ್ಷವನ್ನು ಬೆಂಬಲಿಸುವುದು ಯುವಕರ ಹೆಚ್ಚುತ್ತಿರುವ ಧ್ವನಿಯ ಪ್ರತಿಬಿಂಬವಾಗಿದೆ ಎಂದು ಹೇಳಿದರು. &lt;/p&gt;&lt;p data-block-key="9pv9n"&gt;&lt;a href="/byline-stories/a-new-lesson-77259.html"&gt;&lt;b&gt;ಬದಲಾವಣೆ ಗಾಳಿಯಲ್ಲಿ ಹೊಸ ಪಾಠ&lt;/b&gt;&lt;/a&gt;&lt;/p&gt;&lt;p data-block-key="36vva"&gt;ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಾದ ಎಕ್ಸ್ ನಲ್ಲಿ ಈ ಕುರಿತು ಹೇಳಿಕೊಂಡಿದ್ದು, ನಾನು ತಿರು ವಿಜಯ್ ಅವರೊಂದಿಗೆ ಮಾತನಾಡಿದ್ದೇನೆ. ಟಿವಿಕೆಯ ಅದ್ಭುತ ಫಲಿತಾಂಶಕ್ಕಾಗಿ ಅವರನ್ನು ಅಭಿನಂದಿಸಿದ್ದೇನೆ. ಈ ಜನಾದೇಶವು ಯುವಜನರ ಹೆಚ್ಚುತ್ತಿರುವ ಧ್ವನಿಯನ್ನು ಪ್ರತಿಬಿಂಬಿಸುತ್ತದೆ. ಅದನ್ನು ನಿರ್ಲಕ್ಷಿಸಲಾಗುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲದೇ  ತಮಿಳುನಾಡು ಮತ್ತು ಪುದುಚೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಅಭಿಯಾನಕ್ಕೆ ಧನ್ಯವಾದಗಳು ಎಂದು ತಿಳಿಸಿದ್ದಾರೆ. &lt;/p&gt;&lt;p data-block-key="fuf5h"&gt;ಕಾಂಗ್ರೆಸ್ ಪಕ್ಷವು ತಮಿಳುನಾಡು ಮತ್ತು ಪುದುಚೇರಿಯ ಜನರನ್ನು ರಕ್ಷಿಸಲು ಬದ್ಧವಾಗಿದೆ. ಅದಕ್ಕಾಗಿ ತನ್ನ ಸೇವೆಯನ್ನು ಮುಂದುವರಿಸುವುದಾಗಿ ಪುನರುಚ್ಚರಿಸುತ್ತೇನೆ ಎಂದು ಹೇಳಿದ್ದಾರೆ. &lt;/p&gt;&lt;p data-block-key="fnh1d"&gt;ರಾಹುಲ್ ಗಾಂಧಿ ಅವರ ಅಭಿನಂದನಾ ಸಂದೇಶ ಬಂದ ಮೇಲೆ ತಮಿಳುನಾಡಿನಲ್ಲಿ ಟಿವಿಕೆ ಪಕ್ಷದ ಸರ್ಕಾರ ರಚನೆಗೆ ಕಾಂಗ್ರೆಸ್ ಸಹಾಯ ಮಾಡಬಹುದು ಎನ್ನಲಾಗುತ್ತಿದೆ. ಟಿವಿಕೆ ಪಕ್ಷವು 100ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೂ ಪಕ್ಷ ಬಹುಮತದ ಗಡಿ ದಾಟಲು ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ಇತರ ಪಕ್ಷಗಳೊಂದಿಗೆ  ಟಿವಿಕೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. &lt;/p&gt;&lt;p data-block-key="5k64h"&gt;ಮೊದಲ ಬಾರಿಗೆ ಚುನಾವಣಾ ಕಣಕ್ಕೆ ಇಳಿದ ಟಿವಿಕೆ ನಾಯಕ ವಿಜಯ್ ಅವರು ತಿರುಚಿರಾಪಳ್ಳಿ (ಪೂರ್ವ) ಮತ್ತು ಪೆರಂಬೂರು ಎರಡೂ ಸ್ಥಾನಗಳಲ್ಲಿ ಗೆದಿದ್ದು, ಅವರ ಪಕ್ಷ ಒಟ್ಟು 108 ಸ್ಥಾನಗಳನ್ನು ಗೆದ್ದಿದೆ. 234 ವಿಧಾನಸಭಾ ಸ್ಥಾನಗಳನ್ನು ಹೊಂದಿರುವ ತಮಿಳುನಾಡಿನಲ್ಲಿ ಸರ್ಕಾರ ರಚನೆಗೆ 118 ಬಹುಮತ ಬೇಕಾಗಿದ್ದು, ಟಿವಿಕೆಗೆ ಇನ್ನು 10 ಸ್ಥಾನಗಳ ಬೆಂಬಲದ ಅಗತ್ಯವಿದೆ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಡಿಎಂಕೆ ಮೈತ್ರಿ ಮಾಡಿಕೊಂಡರೂ ಎರಡೂ ಪಕ್ಷಗಳು ಒಟ್ಟು 64 ಸ್ಥಾನಗಳನ್ನು ಮಾತ್ರ ಪಡೆಯಲು ಸಾಧ್ಯವಾಗಿದೆ. ಇದರಲ್ಲಿ ಕಾಂಗ್ರೆಸ್ ಪಾಲು ಕೇವಲ ಐದು.&lt;/p&gt;&lt;p data-block-key="98g8q"&gt;&lt;a href="/national/after-bengal-sweep-who-will-bjp-pick-as-chief-minister-77249.html"&gt;&lt;b&gt;ಬಂಗಾಳದಲ್ಲಿ ಸರ್ಕಾರ ರಚಿಸಲು ಬಿಜೆಪಿ ಸಜ್ಜು; ಮುಖ್ಯಮಂತ್ರಿ ರೇಸ್‌ನಲ್ಲಿ ಯಾರೆಲ್ಲ ಇದ್ದಾರೆ?&lt;/b&gt;&lt;/a&gt;&lt;/p&gt;&lt;p data-block-key="1ul1o"&gt;ಟಿವಿಕೆ ಆಡಳಿತ ನಡೆಸುವ ನಿರ್ಧಾರ ಮಾಡಿದರೆ ನಟ ವಿಜಯ್ ಮುಖ್ಯಮಂತ್ರಿಯಾಗುವುದು ಬಹುತೇಕ ಖಚಿತವಾಗಿದೆ. ಟಿವಿಕೆಯು ಸರ್ಕಾರ ರಚನೆಗೆ ಸಣ್ಣ ಪಕ್ಷಗಳ ಬೆಂಬಲ ಪಡೆಯಬಹುದು ಅಥವಾ ಡಿಎಂಕೆ ಮತ್ತು ಟಿವಿಕೆ ಜೊತೆ ಸೇರಲೂ ಬಹುದು. ಒಂದು ವೇಳೆ ಟಿವಿಕೆಯನ್ನು ಕಾಂಗ್ರೆಸ್ ಬೆಂಬಲಿಸಲು ಬಯಸಿದರೆ ಅದು ಡಿಎಂಕೆ ಮೈತ್ರಿಕೂಟವನ್ನು ಕೈಬಿಡುವ ಯೋಜನೆ ಕೂಡ ಹೊಂದಿದೆ. ಒಟ್ಟಿನಲ್ಲಿ ಈಗ ತಮಿಳುನಾಡು ರಾಜಕೀಯ ಸಾಕಷ್ಟು ಅಚ್ಚರಿಯ ಘಟನೆಗಳಿಗೆ ಕಾರಣವಾಗಬಹುದು ಎನ್ನಲಾಗುತ್ತಿದೆ. &lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಪತ್ನಿಯನ್ನು ಕೊಂದು, 2 ವರ್ಷದ ಮಗುವನ್ನು ಕಾಡಿನಲ್ಲಿ ಬಿಟ್ಟು ಹೋದ ಆರೋಪಿ</title><link>https://vishwavani.news/crime/the-accused-killed-his-wife-and-abandoned-his-2-year-old-child-in-the-forest-77262.html</link><guid>https://vishwavani.news/crime/the-accused-killed-his-wife-and-abandoned-his-2-year-old-child-in-the-forest-77262.html</guid><pubDate>Tue, 05 May 2026 05:55:33 +0000</pubDate><description>&lt;![CDATA[Crime News: ವ್ಯಕ್ತಿಯೊಬ್ಬ ಪತ್ನಿಯನ್ನು ಕೊಲೆ ಮಾಡಿ, 2 ವರ್ಷದ ಪುತ್ರನನ್ನು ಕಾಡಿನಲ್ಲಿ ಬಿಟ್ಟು ಹೋದ ಘಟನೆ ಮಧ್ಯಪ್ರದೇಶದ ರೈಸೇನ್ ಮತ್ತು ವಿದಿಶಾ ಜಿಲ್ಲೆಗಳ ನಡುವೆ ನಡೆದಿದೆ. ಈ ಆಘಾತಕಾರಿ ಕೃತ್ಯದ ಬಗ್ಗೆ ಮಾಹಿತಿ ಪಡೆದ ತಕ್ಷಣ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿದರು. ಇದು ರಾಯ್ಸೆನ್ ಮತ್ತು ವಿದಿಶಾ ಜಿಲ್ಲೆಗಳಲ್ಲಿ ರಾತ್ರಿಯಿಡೀ ಬೃಹತ್ ಶೋಧ ಕಾರ್ಯಾಚರಣೆಗೆ ಕಾರಣವಾಯಿತು.]]&gt;</description><dc:creator>&lt;![CDATA[Priyanka P]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ದೇಶ]]&gt;</category><category>&lt;![CDATA[ಕ್ರೈಂ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Crime_News_3OFrQOb.original.jpg" class="attachment-large size-large wp-post-image" alt="ಪತ್ನಿಯನ್ನು ಕೊಂದು, 2 ವರ್ಷದ ಮಗುವನ್ನು ಕಾಡಿನಲ್ಲಿ ಬಿಟ್ಟು ಹೋದ ಆರೋಪಿ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="1kiz9"&gt;&lt;b&gt;ಭೋಪಾಲ್, ಮೇ 5:&lt;/b&gt; ವ್ಯಕ್ತಿಯೊಬ್ಬ ಪತ್ನಿಯನ್ನು ಕೊಲೆ ಮಾಡಿ, 2 ವರ್ಷದ ಪುತ್ರನನ್ನು ಕಾಡಿನಲ್ಲಿ ಬಿಟ್ಟು ಹೋದ ಘಟನೆ ಮಧ್ಯಪ್ರದೇಶದ (Madhya Pradesh) ರೈಸೇನ್ ಮತ್ತು ವಿದಿಶಾ ಜಿಲ್ಲೆಗಳ ನಡುವೆ ನಡೆದಿದೆ. ಪತ್ನಿಯ ಸಂಬಂಧ ಮತ್ತು ಚಾರಿತ್ರ್ಯದ ಮೇಲಿನ ಅನುಮಾನ ಹೊಂದಿದ್ದ ಆರೋಪಿ, ಹೈದರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಆಕೆಯ ತಲೆಯನ್ನು ಕಲ್ಲಿನಿಂದ ಜಜ್ಜಿ, ಮಗುವನ್ನು ದಟ್ಟ ಕಾಡಿನಲ್ಲಿ ಬಿಟ್ಟು ಪರಾರಿಯಾಗಿದ್ದಾನೆ &lt;a href="https://vishwavani.news/crime/accused-who-killed-four-children-and-a-woman-dies-in-a-police-shooting-77172.html"&gt;(Crime News)&lt;/a&gt;.&lt;/p&gt;&lt;p data-block-key="ep7ql"&gt;ಈ ಆಘಾತಕಾರಿ ಕೃತ್ಯದ ಬಗ್ಗೆ ಮಾಹಿತಿ ಪಡೆದ ತಕ್ಷಣ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿದರು. ಇದು ರಾಯ್ಸೆನ್ ಮತ್ತು ವಿದಿಶಾ ಜಿಲ್ಲೆಗಳಲ್ಲಿ ರಾತ್ರಿಯಿಡೀ ಬೃಹತ್ ಶೋಧ ಕಾರ್ಯಾಚರಣೆಗೆ ಕಾರಣವಾಯಿತು. 10 ಗಂಟೆಗಳ ನಿರಂತರ ಪ್ರಯತ್ನದ ನಂತರ, ಮಗು ಜೀವಂತವಾಗಿ ಪತ್ತೆಯಾಗಿದ್ದು, ಪೊಲೀಸ್ ತಂಡಕ್ಕೆ ಅಪಾರ ಸಮಾಧಾನ ತಂದಿತು.&lt;/p&gt;&lt;p data-block-key="fti7k"&gt;ಬೇಗಂಗಂಜ್‌ನ ಹಿಮೋಟಿಯಾ ಗ್ರಾಮದ ಆರೋಪಿ ರಾಜೇಂದ್ರ ಅಹಿರ್ವಾರ್, ಎರಡು ದಿನಗಳ ಹಿಂದೆ ಮೊಬೈಲ್ ಫೋನ್ ಖರೀದಿಸುವ ನೆಪದಲ್ಲಿ ತನ್ನ ಪತ್ನಿ ಜ್ಯೋತಿ ಮತ್ತು ಅವರ ಮಗನನ್ನು ಹೊರಗೆ ಕರೆದುಕೊಂಡು ಹೋಗಿದ್ದ ಎಂದು ಪೊಲೀಸ್ ವರಿಷ್ಠಾಧಿಕಾರಿ ರೋಹಿತ್ ಕಾಶ್ವಾನಿ ದೃಢಪಡಿಸಿದ್ದಾರೆ.&lt;/p&gt;&lt;p data-block-key="3beki"&gt;&lt;a href="https://vishwavani.news/karnataka/four-children-drown-while-trying-to-catch-ducks-in-chikkamagaluru-77248.html"&gt;&lt;b&gt;ಬಾತುಕೋಳಿ ಹಿಡಿಯಲು ಹೋಗಿ ಕೆರೆಯಲ್ಲಿ ಮುಳುಗಿ ನಾಲ್ವರು ಮಕ್ಕಳ ದುರ್ಮರಣ&lt;/b&gt;&lt;/a&gt;&lt;/p&gt;&lt;p data-block-key="264t3"&gt;ಆದರೆ, ಬೇಗಂಗಂಜ್ ಕಡೆಗೆ ಹೋಗುವ ಬದಲು, ಆರೋಪಿಯು ಕಾಡಿನತ್ತ ತಿರುಗಿದನು. ಅಲ್ಲಿ ಅವನು ಜ್ಯೋತಿಯ ಮೇಲೆ ದಾಳಿ ಮಾಡಿದ್ದಾನೆ. ಕಲ್ಲಿನಿಂದ ಜಜ್ಜಿದ್ದಾನೆ. ಇದರಿಂದಾಗಿ ಅವಳು ಮೃತಪಟ್ಟಳು. ಅವನ ಕೋಪ ಅಲ್ಲಿಗೆ ಮುಗಿಯಲಿಲ್ಲ. ಅವನು ತನ್ನ ಮಗನನ್ನು ಅರಣ್ಯದಲ್ಲಿ ಬಿಟ್ಟು ಓಡಿಹೋದನು.&lt;/p&gt;&lt;p data-block-key="cigtq"&gt;ಕುಟುಂಬವು ಮನೆಗೆ ಮರಳದಿದ್ದಾಗ, ಸಂಬಂಧಿಕರು ಪೊಲೀಸರಿಗೆ ಮಾಹಿತಿ ನೀಡಿದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ರಾಜೇಂದ್ರನನ್ನು ಬಂಧಿಸಿದರು. ಪೊಲೀಸ್ ವಿಚಾರಣೆಯ ಸಮಯದಲ್ಲಿ, ಅವನು ಕೊಲೆ ಮಾಡಿದುದಾಗಿ ಒಪ್ಪಿಕೊಂಡನು ಮತ್ತು ಮಗುವನ್ನು ಕಾಡಿನಲ್ಲಿ ಬಿಟ್ಟಿದ್ದಾಗಿ ಬಹಿರಂಗಪಡಿಸಿದನು.&lt;/p&gt;&lt;p data-block-key="6p04r"&gt;ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಹನ್ನೆರಡು ಪೊಲೀಸ್ ಠಾಣೆಗಳಿಂದ ಪೊಲೀಸ್ ಪಡೆಗಳನ್ನು ಸಜ್ಜುಗೊಳಿಸಿದರು. ಟಾರ್ಚ್‌ಗಳು, ಡ್ರೋನ್‌ಗಳು ಮತ್ತು ಶ್ವಾನ ದಳಗಳೊಂದಿಗೆ ಅವರು ರಾತ್ರಿಯಿಡೀ ಕಾಡನ್ನು ಜಾಲಾಡಿದರು. ಮುಂಜಾನೆ ವೇಳೆ ಮಗು ಪೊದೆಗಳ ಬಳಿ ಕಂಡುಬಂದಿತು. ಹಸಿವು ಮತ್ತು ಬಾಯಾರಿಕೆಯಿಂದ ಭೀತಿಗೊಂಡಿದ್ದ ಮತ್ತು ದುರ್ಬಲವಾಗಿದ್ದ. ಅದೃಷ್ಟವಶಾತ್ ಮಗು ಸುರಕ್ಷಿತವಾಗಿತ್ತು.&lt;/p&gt;&lt;p data-block-key="avje5"&gt;ತಕ್ಷಣವೇ ಮಗುವಿಹೆ ನೀರು ನೀಡಿ ವೈದ್ಯಕೀಯ ಆರೈಕೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ರಾಜೇಂದ್ರ ವಿರುದ್ಧ ಕೊಲೆ ಮತ್ತು ಸಾಕ್ಷ್ಯಗಳನ್ನು ಮರೆಮಾಚುವ ಪ್ರಕರಣ ದಾಖಲಾಗಿದ್ದು, ಪತ್ನಿಯ ನಡವಳಿಕೆಯ ಮೇಲಿನ ಅನುಮಾನದಿಂದ ಈ ಅಪರಾಧ ನಡೆದಿದೆ ಎಂದು ರಾಜೇಂದ್ರ ಒಪ್ಪಿಕೊಂಡಿದ್ದಾನೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ತಪ್ಪಿದ ಭಾರೀ ದುರಂತ; ರಸ್ತೆ ಮಧ್ಯದಲ್ಲಿಯೇ ಹೊತ್ತಿ ಉರಿದ KSRTC ಬಸ್</title><link>https://vishwavani.news/karnataka/haveri/ksrtc-bus-gutted-after-tyre-burst-near-ranebennur-77264.html</link><guid>https://vishwavani.news/karnataka/haveri/ksrtc-bus-gutted-after-tyre-burst-near-ranebennur-77264.html</guid><pubDate>Tue, 05 May 2026 05:25:33 +0000</pubDate><description>&lt;![CDATA[ಬಸ್ ಚಾಲಕ ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಆದರೆ ಕೆಲವೇ ಕ್ಷಣಗಳಲ್ಲಿ ಬೆಂಕಿ ತೀವ್ರತೆ ಹೆಚ್ಚಾಗಿ ಇಡೀ ಬಸ್‌ನ್ನು ಆವರಿಸಿಕೊಂಡಿದೆ.  ಕೆಲವೇ ಕ್ಷಣಗಳಲ್ಲಿ ಕೆಸ್‌ ಆರ್‌ಟಿಸಿ ಪಲ್ಲಕ್ಕಿ ಬಸ್‌ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಸದ್ಯ ರಾಣೇಬೆನ್ನೂರು ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.]]&gt;</description><dc:creator>&lt;![CDATA[Abhilash BC]]&gt;</dc:creator><category>&lt;![CDATA[ಹಾವೇರಿ]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕರ್ನಾಟಕ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/bus_burnt_E4KrHQV.original.jpg" class="attachment-large size-large wp-post-image" alt="ತಪ್ಪಿದ ಭಾರೀ ದುರಂತ; ರಸ್ತೆ ಮಧ್ಯದಲ್ಲಿಯೇ ಹೊತ್ತಿ ಉರಿದ KSRTC ಬಸ್" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="heoj7"&gt;&lt;b&gt;ಹಾವೇರಿ, ಮೇ 5:&lt;/b&gt; ಬೆಂಗಳೂರಿನಿಂದ ಗದಗದತ್ತ ಹೊರಟಿದ್ದ ಕೆಎಸ್‌ಆರ್‌ಟಿಸಿ ಸಾರಿಗೆ ಬಸ್ ಬೆಂಕಿಗಾಹುತಿಯಾಗಿದೆ. ಚಾಲಕನ ಸಮಯಪ್ರಜ್ಞೆಯಿಂದಾಗಿ ಬಸ್‌ನಲ್ಲಿದ್ದ ಎಲ್ಲಾ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಸ್‌ನಲ್ಲಿ ಒಟ್ಟು 17 ಜನರು ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ. ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ದೇವರಗುಡ್ಡ ಗ್ರಾಮದ ಬಳಿ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಈ ಅವಘಡ ಸಂಭವಿಸಿದೆ. ಬಸ್‌ನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಚಾಲಕ ಪಕ್ಕೀರಪ್ಪ ಎಲ್ಲಾ ಪ್ರಯಾಣಿಕರನ್ನು ಕೆಳಗೆ ಇಳಿಸಿ ರಕ್ಷಣೆ ಮಾಡಿದ್ದಾರೆ.&lt;/p&gt;&lt;p data-block-key="9h2mj"&gt;ಬಸ್ ಚಾಲಕ ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಆದರೆ ಕೆಲವೇ ಕ್ಷಣಗಳಲ್ಲಿ ಬೆಂಕಿ ತೀವ್ರತೆ ಹೆಚ್ಚಾಗಿ ಇಡೀ ಬಸ್‌ನ್ನು ಆವರಿಸಿಕೊಂಡಿದೆ.  ಕೆಲವೇ ಕ್ಷಣಗಳಲ್ಲಿ ಕೆಸ್‌ ಆರ್‌ಟಿಸಿ ಪಲ್ಲಕ್ಕಿ ಬಸ್‌ ಸಂಪೂರ್ಣ ಬೆಂಕಿಗಾಹುತಿಯಾಗಿದೆ. &lt;/p&gt;&lt;p data-block-key="1ddcm"&gt;ಈ ಘಟನೆ ರಾಣೆಬೇನ್ನೂರು ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹೀಗಾಗಿ ಸ್ಥಳೀಯ ಪೊಲೀಸರು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಂಕಿ ಕಾಣಿಸಿಕೊಳ್ಳಲು ಕಾರಣವೇನು, ತಾಂತ್ರಿಕ ದೋಷವೋ, ಎಂಜಿನ್ ಭಾಗದಲ್ಲಿ ಸಮಸ್ಯೆಯೋ ಅಥವಾ ಬೇರೆ ಯಾವುದೇ ಕಾರಣವೋ ಎಂಬುದರ ಬಗ್ಗೆ ಪೊಲೀಸರು ಹಾಗೂ ಸಂಬಂಧಪಟ್ಟ ಇಲಾಖೆ ಮುಂದಿನ ತನಿಖೆ ನಡೆಸುವ ನಿರೀಕ್ಷೆ ಇದೆ.&lt;/p&gt;&lt;h3 data-block-key="dfrod"&gt;&lt;b&gt;ಕೆರೆಯಲ್ಲಿ ಮುಳುಗಿ ನಾಲ್ವರು ಮಕ್ಕಳ ದುರ್ಮರಣ&lt;/b&gt;&lt;/h3&gt;&lt;p data-block-key="e5026"&gt;ಪತ್ಯೇಕ ಘಟನೆಯೊಂದರಲ್ಲಿ  ಬಾತುಕೋಳಿ ಹಿಡಿಯುವುದಕ್ಕೆ ಹೋದ ನಾಲ್ವರು ಮಕ್ಕಳು ಕೆರೆಯಲ್ಲಿ ಮುಳುಗಿ ಮೃತಪಟ್ಟ ಧಾರುಣ ಘಟನೆ ಚಿಕ್ಕಮಗಳೂರು ತಾಲೂಕಿನ ಅರಳುಗುಪ್ಪೆ ಗ್ರಾಮದ ಕಾರಂಜಿ ಕೆರೆಯಲ್ಲಿ ನಡೆದಿದೆ. ಅರಳುಗುಪ್ಪೆ ಗ್ರಾಮದ ಅಬ್ದುಲ್ ರೆಹಮಾನ್ (13), ನಾಯಜ್ (12), ಶಿವಮೊಗ್ಗದ ಮೈದಿಹಾ (9), ಅರಮಾನ್ (8) ಮೃತಪಟ್ಟ ಮಕ್ಕಳು. ಅರಳುಗುಪ್ಪೆಯ 4 ವರ್ಷದ ಅರ್ಮನ್ ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆಗಾಗಿ ಚಿಕ್ಕಮಗಳೂರಿನ ಮಲ್ಲೇಗೌಡ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ರಜೆಯಲ್ಲಿ ಸಂಬಂಧಿಕರ ಮನೆಗೆ ಬಂದಾಗ ಈ ದುರ್ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. &lt;/p&gt;&lt;p data-block-key="8dt40"&gt;&lt;a href="/crime/12-year-old-tourist-sabiha-dies-after-drowning-in-srinivasa-sagar-77233.html"&gt;ಶ್ರೀನಿವಾಸ ಸಾಗರದಲ್ಲಿ ಮುಳುಗಿ 12 ವರ್ಷದ ಪ್ರವಾಸಿ ಸಬಿಹಾ ಸಾವು&lt;/a&gt;&lt;/p&gt;&lt;p data-block-key="6f5pe"&gt;ಕೆರೆ ಪಾತ್ರದಲ್ಲಿ ಈ ಮಕ್ಕಳು ಆಟವಾಡುವಾಗ ಈ ದುರ್ಘಟನೆ ನಡೆದಿದೆ. ಆಟವಾಡುತ್ತಿರುವಾಗ ತಮ್ಮೊಂದಿಗಿದ್ದ ಬಾತುಕೋಳಿ ನೀರಿಗಿಳಿದಿದೆ ಎಂದು ಅದನ್ನು ಹಿಡಿಯಲು ಹೋದ ಬಾಲಕಿ ನೀರಿಗೆ ಬಿದ್ದಿದ್ದಾಳೆ. ಈ ಬಾಲಕಿಯನ್ನು ರಕ್ಷಿಸಲು ಹೋದ ಒಬ್ಬರ ಹಿಂದೊಬ್ಬರಂತೆ ಮಕ್ಕಳು ನೀರಿಗಿಳಿದು ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಮೇಟಿ ಬಿಡದ ಮತದಾರ, ವೀರಣ್ಣ ಹರೋಹರ</title><link>https://vishwavani.news/byline-stories/the-voter-who-never-gave-up-veeranna-harohara-77263.html</link><guid>https://vishwavani.news/byline-stories/the-voter-who-never-gave-up-veeranna-harohara-77263.html</guid><pubDate>Tue, 05 May 2026 05:04:05 +0000</pubDate><description>&lt;![CDATA[ಆರಂಭದಲ್ಲಿ ಕೈ ಟಿಕೆಟ್ ವಿಚಾರವಾಗಿ ಮೇಟಿ ಕುಟುಂಬದಲ್ಲಿ ಉಂಟಾದ ಗೊಂದಲ ಕಾಂಗ್ರೆಸ್ ಗೆ ಕೊಂಚ ಹಿನ್ನಡೆ ಉಂಟುಮಾಡಿದ್ದರೂ ಕೊನೆಗೆ ಸಿಎಂ ಸಿದ್ದರಾಮಯ್ಯನವರ ಸಂಧಾನದ ಫಲವಾಗಿ ಉಮೇಶ್ ಮೇಟಿಯನ್ನು ಅಭ್ಯರ್ಥಿಯನ್ನಾಗಿ ಘೋಷಿಸಲಾಯಿತು. ಜತೆಗೆ ಖುದ್ದಾಗಿ ಸಿಎಂ ಸಿದ್ದರಾಮಯ್ಯ ಬಾಗಲಕೋಟೆ ಮತಕ್ಷೇತ್ರದ ಅಭ್ಯರ್ಥಿ ಪರವಾಗಿ ಹಳ್ಳಿ, ಹಳ್ಳಿಯಲ್ಲೂ ಪ್ರಚಾರ ಮಾಡಿದ್ದರ ಕಾರಣಕ್ಕೆ ಕಾಂಗ್ರೆಸ್ 20 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದೆ.]]&gt;</description><dc:creator>&lt;![CDATA[Ashok Nayak]]&gt;</dc:creator><category>&lt;![CDATA[ಬಾಗಲಕೋಟೆ]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕರ್ನಾಟಕ]]&gt;</category><category>&lt;![CDATA[ಬೈಲೈನ್‌ ಸ್ಟೋರೀಸ್‌]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Screenshot_1_1bu64dF.original.jpg" class="attachment-large size-large wp-post-image" alt="ಮೇಟಿ ಬಿಡದ ಮತದಾರ, ವೀರಣ್ಣ ಹರೋಹರ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="rd35p"&gt;&lt;b&gt;ವಿನಾಯಕ ಮಠಪತಿ ಬಾಗಲಕೋಟೆ &lt;/b&gt;&lt;/p&gt;&lt;p data-block-key="6ppt5"&gt;&lt;b&gt;ಉಪ ಕಣದಲ್ಲಿ ಸಿಎಂ ಕಮಾಲ್ &lt;/b&gt;&lt;/p&gt;&lt;p data-block-key="1i1k5"&gt;&lt;b&gt;ಕಾಂಗ್ರೆಸ್ ಕೈ ಹಿಡಿದ ಸಚಿವ ಸತೀಶ್ ಅಹಿಂದ ಅಸ್ತ್ರ&lt;/b&gt;&lt;/p&gt;&lt;p data-block-key="57t6c"&gt;ಒಂದು ಕಡೆ ಆಪ್ತ ಸ್ನೇಹಿತನ ಪುತ್ರ ಚುನಾವಣಾ ಕಣದಲ್ಲಿ ಮತ್ತೊಂದೆಡೆ ತಮ್ಮದೇ ಕುರುಬ ಸಮುದಾಯದ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವ ಒತ್ತಡ, ಇವೆರಡನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದ ಸಿಎಂ ಸಿದ್ದರಾಮಯ್ಯನ ತಮ್ಮ ಸಂಪೂರ್ಣ ಶಕ್ತಿಯನ್ನು ವಿನಿಯೋಗಿಸುವ ಮೂಲಕ ಉಮೇಶ್ ಮೇಟಿ ಅವರನ್ನು ಗೆಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ. &lt;/p&gt;&lt;p data-block-key="4emk6"&gt;ಜತೆಗೆ ಅಹಿಂದ ವರ್ಗ ತಮ್ಮ ಬೆನ್ನಿಗೆ ಈಗಲೂ ಗಟ್ಟಿಯಾಗಿದೆ ಎಂಬುದನ್ನು ತಮ್ಮ ರಾಜಕೀಯ ಎದುರಾಳಿಗಳಿಗೆ ತಿಳಿಸುವಲ್ಲಿ ಸಿಎಂ ಸಿದ್ದರಾಮಯ್ಯ ಸಫಲರಾಗಿದ್ದಾರೆ. ದಿ.ಎಚ್.ವೈ ಮೇಟಿ ನಿಧನದಿಂದ ತೆರವಾದ ಬಾಗಲಕೋಟೆ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆ ಸಾಕಷ್ಟು ಕುತೂಹಲ ಮೂಡಿಸಿತ್ತು. &lt;/p&gt;&lt;p data-block-key="c4ono"&gt;ಆರಂಭದಲ್ಲಿ ಕೈ ಟಿಕೆಟ್ ವಿಚಾರವಾಗಿ ಮೇಟಿ ಕುಟುಂಬದಲ್ಲಿ ಉಂಟಾದ ಗೊಂದಲ ಕಾಂಗ್ರೆಸ್ ಗೆ ಕೊಂಚ ಹಿನ್ನಡೆ ಉಂಟುಮಾಡಿದ್ದರೂ ಕೊನೆಗೆ ಸಿಎಂ ಸಿದ್ದರಾಮಯ್ಯನವರ ಸಂಧಾನದ ಫಲವಾಗಿ ಉಮೇಶ್ ಮೇಟಿಯನ್ನು ಅಭ್ಯರ್ಥಿಯನ್ನಾಗಿ ಘೋಷಿಸಲಾಯಿತು. ಜತೆಗೆ ಖುದ್ದಾಗಿ ಸಿಎಂ ಸಿದ್ದರಾಮಯ್ಯ ಬಾಗಲಕೋಟೆ ಮತಕ್ಷೇತ್ರದ ಅಭ್ಯರ್ಥಿ ಪರವಾಗಿ ಹಳ್ಳಿ, ಹಳ್ಳಿಯಲ್ಲೂ ಪ್ರಚಾರ ಮಾಡಿದ್ದರ ಕಾರಣಕ್ಕೆ ಕಾಂಗ್ರೆಸ್ 20 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದೆ. &lt;/p&gt;&lt;p data-block-key="c3r67"&gt;&lt;b&gt;ಇದನ್ನೂ ಓದಿ: &lt;/b&gt;&lt;a href="/elections/karnataka-bypoll-results-2026-congress-candidate-umesh-meti-wins-in-the-bagalkot-by-election-77165.html"&gt;Bagalkot By-Election Results 2026: ಬಾಗಲಕೋಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಉಮೇಶ್‌ ಮೇಟಿ ಜಯಭೇರಿ&lt;/a&gt;&lt;/p&gt;&lt;p data-block-key="a44vu"&gt;ಇತ್ತ ಬಿಜೆಪಿ ಸಂಘಟಿತ ಪ್ರಯತ್ನ ನಡೆಸಿದರೂ ಆಡಳಿತಾರೂಢ ಪಕ್ಷದ ನಾಯಕರ ವೇಗ ತಡೆಯು ವಲ್ಲಿ ವಿಫಲವಾಗಿದೆ. ರಾಜ್ಯ ಬಿಜೆಪಿ ಘಟಾನುಘಟಿ ನಾಯಕರ ದಂಡು ಬಾಗಲಕೋಟೆ ಯಲ್ಲಿ ಬೀಡುಬಿಟ್ಟು ಪ್ರಚಾರ ನಡೆಸಿದರು. ತಮ್ಮ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರನ್ನು ಗೆಲ್ಲಿಸು ವಲ್ಲಿ ಸಫಲವಾಗಿಲ್ಲ. ಜತೆಗೆ ಬಿಜೆಪಿಯಿಂದ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅಬ್ಬರದ ಪ್ರಚಾರ ನಡೆಸಿದರೂ ಬಾಗಲಕೋಟೆಯಲ್ಲಿ ಯಾವುದೇ ಪ್ರಯೋಜನವಾಗಿಲ್ಲ. &lt;/p&gt;&lt;p data-block-key="4kk91"&gt;&lt;b&gt;ಕಲ್ಲು ತೂರಾಟ ಘಟನೆ ಪರಿಣಾಮ ಶೂನ್ಯ: &lt;/b&gt;ಶಿವಾಜಿ ಮೆರವಣಿಗೆ ಮೇಲೆ ಕಲ್ಲು ತೂರಾಟ ಪ್ರಕರಣ ಉಪಚುನಾವಣೆಯಲ್ಲಿ ಬಿಜೆಪಿಗೆ ಲಾಭವಾಗುತ್ತದೆ ಎಂಬ ನಿರೀಕ್ಷೆ ಹಲವರಲ್ಲಿತ್ತು. ಇದಕ್ಕೆ ಪೂರಕವೆಂಬತೆ ಘಟನೆ ನಡೆದ ಬಾಗಲಕೋಟೆ ನಗರದ ಪ್ರದೇಶದಲ್ಲಿ ಬಿಜೆಪಿಗೆ ಲೀಟ್ ಸಿಕ್ಕಿದೆ. ಆದರೆ ಬಿಜೆಪಿ ನಾಯಕರು ಅಂದುಕೊಂಡ ಪ್ರಮಾಣದಲ್ಲಿ ಮತದಾರು ಕಮಲದತ್ತ ಒಲವು ತೋರಿಸಿಲ್ಲ. ಜೊತೆಗೆ ಬಾಗಲಕೋಟೆ ಗ್ರಾಮೀಣ ಭಾಗದಲ್ಲಿ ಕಾಂಗ್ರೆಸ್ ಗೆ ಭರ್ಜರಿ ಬೆಂಬಲ ವ್ಯಕ್ತವಾದ ಹಿನ್ನೆಲೆ ಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ 21,861 ಮತಗಳ ಬೃಹತ್ ಅಂತರದ ಗೆಲುವು ಸಾಧಿಸಲು ಸಹಕಾರಿಯಾಗಿದೆ.&lt;/p&gt;&lt;p data-block-key="26geh"&gt;&lt;b&gt;ಸಿ.ಸಿ.ಪಾಟೀಲ್ ಹೇಳಿಕೆಯಿಂದ ಬಿಜೆಪಿ ಅಭ್ಯರ್ಥಿಗೆ ನಷ್ಟ &lt;/b&gt;&lt;/p&gt;&lt;p data-block-key="20bn3"&gt;ಬಾಗಲಕೋಟೆ ಉಪ ಚುನಾವಣೆ ಸಂದರ್ಭದಲ್ಲಿ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ಶಾಸಕ ಸಿ.ಸಿ ಪಾಟೀಲ್ ಅವರು ಕುರುಬ ಹಾಗೂ ಮುಸ್ಲಿಂ ಸಮುದಾಯದ ಕುರಿತು ಅನುಚಿತ ಪದಬಳಕೆ ಮಾಡಿ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಹಾಲುಮತ ಮುದಾಯದ ಮುಖಂಡರು ಪ್ರತಿಭಟನೆ ನಡೆಸಿ ಸಿ.ಸಿ. ಪಾಟೀಲ್ ವಿರುದ್ಧ ಆಕ್ರೋಶ ಹೊರ ಹಾಕಿದ್ದರು. ಚುನಾವಣೆ ಸಂದರ್ಭದಲ್ಲಿ ತಮ್ಮ ಹೇಳಿಕೆಯಿಂದ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದ ಸಿ.ಸಿ ಪಾಟೀಲ್ ಹಾಲುಮತ ಹಾಗೂ ಮುಸ್ಲಿಂ ಸಮುದಾಯದ ಕ್ಷಮೆ ಕೇಳಿದರು. ಆದರೆ ಸಿ.ಸಿ. ಪಾಟೀಲ್ ಹೇಳಿಕೆಯನ್ನು ಪ್ರಚಾರದ ವೇಳೆ ಜನರ ಮುಂದಿಡುವ ಮೂಲಕ ಕಾಂಗ್ರೆಸ್ ನಾಯಕರು ಇದರ ಲಾಭ ಪಡೆಯುವಲ್ಲಿ ಯಶಸ್ವಿಯಾದರು.&lt;/p&gt;&lt;p data-block-key="cka79"&gt;&lt;b&gt;ಫಲ ಕೊಟ್ಟ ಗೋಕಾಕ್ ಸಾಹುಕಾರ್ ಅಹಿಂದ ಅಸ್ತ್ರ&lt;/b&gt; &lt;/p&gt;&lt;p data-block-key="bfm59"&gt;ಬಾಗಲಕೋಟೆ ಮತಕ್ಷೇತ್ರದಲ್ಲಿ ಒಂದು ಲಕ್ಷಕ್ಕೂ ಅಧಿಕ ಅಹಿಂದ ವರ್ಗದ ಮತದಾರರಿದ್ದು ಭಾಗಶಃ ಇವರನ್ನು ಕಾಂಗ್ರೆಸ್ ನತ್ತ ಸೆಳೆಯುವಲ್ಲಿ ಸಚಿವ ಸತೀಶ್ ಜಾರಕಿಹೊಳಿ ಪಾತ್ರ ಬಹುಮುಖ್ಯವಾಗಿದೆ.  ಬಾಗಲಕೋಟೆ ಕಾಂಗ್ರೆಸ್ ಚುನಾವಣಾ ಉಸ್ತುವಾರಿಯಾಗಿದ್ದ ಸತೀಶ್ ಜಾರಕಿಹೊಳಿ ಬಾಗಲಕೋಟೆ ಮತಕ್ಷೇತ್ರದಲ್ಲಿರುವ ಅಹಿಂದ ವರ್ಗದ ಮುಖಂಡರನ್ನು ಖುzಗಿ ಭೇಟಿ ಮಾಡಿ ಅವರನ್ನು ವಿಶ್ವಾಸಕ್ಕೆ ಪಡೆದುಕೊಂಡರು. ಜತೆಗೆ ಎಲ್ಲರಿಗೂ ಸ್ಥಳೀಯ ಮಟ್ಟದಲ್ಲಿ ಜವಾಬ್ದಾರಿ ನೀಡಿ ಪ್ರತಿ ಮತವೂ ಕಾಂಗ್ರೆಸ್ ಪಕ್ಷಕ್ಕೆ ಬರುವಂತೆ ರಣತಂತ್ರ ಹೆಣೆಯುವಲ್ಲಿ ಯಶಸ್ವಿಯಾಗಿದ್ದಾರೆ. &lt;/p&gt;&lt;p data-block-key="6nkvt"&gt;ಇವರ ಜತೆಗೆ ಸಚಿವರಾದ ಆರ್.ಬಿ.ತಿಮ್ಮಾಪುರ, ಶಿವಾನಂದ ಪಾಟೀಲ, ಎಂ.ಬಿ.ಪಾಟೀಲ, ಶಾಸಕ ವಿಜಯಾನಂದ ಕಾಶಪ್ಪನ್ನವರ ಸೇರಿ ಹಲವರು ಈ ಚುನಾವಣೆಯಲ್ಲಿ ಕೆಲಸ ಮಾಡಿದ್ದರ ಪರಿಣಾಮ ಕಾಂಗ್ರೆಸ್ ಇಷ್ಟೊಂದು ಬೃಹತ್ ಅಂತರ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಬದಲಾವಣೆ ಗಾಳಿಯಲ್ಲಿ ಹೊಸ ಪಾಠ</title><link>https://vishwavani.news/byline-stories/a-new-lesson-77259.html</link><guid>https://vishwavani.news/byline-stories/a-new-lesson-77259.html</guid><pubDate>Tue, 05 May 2026 04:50:30 +0000</pubDate><description>&lt;![CDATA[ಕೇರಳದಲ್ಲಿ ಮೂರು ಅವಧಿಯಿಂದ ಅಧಿಕಾರದಲ್ಲಿದ್ದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವ ದ ಎಡರಂಗದ ಎಲ್‌ಡಿಎಫ್ ಪಕ್ಷದಿಂದ ಅಧಿಕಾರ ಕಸಿದು ಕಾಂಗ್ರೆಸ್ ನೇತೃತ್ವದ ಯುಡಿಎಫ್‌ ಗದ್ದುಗೆ ಏರುತ್ತಿದೆ. ಕೇರಳದಲ್ಲೂ ಬಿಜೆಪಿ ಮೊದಲ ಬಾರಿಗೆ ಮೂರು ಸ್ಥಾನ ಗೆದ್ದಿದೆ. ಈ ನಾಲ್ಕು ರಾಜ್ಯಗಳ ಫಲಿತಾಂಶ, ದೇಶ ಬದಲಾವಣೆಯತ್ತ ವಾಲುತ್ತಿರುವುದಕ್ಕೆ ಉದಾಹರಣೆ.]]&gt;</description><dc:creator>&lt;![CDATA[Ashok Nayak]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ದೇಶ]]&gt;</category><category>&lt;![CDATA[ಬೈಲೈನ್‌ ಸ್ಟೋರೀಸ್‌]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/West_Bengal_Assembly_Election.original.jpg" class="attachment-large size-large wp-post-image" alt="ಬದಲಾವಣೆ ಗಾಳಿಯಲ್ಲಿ ಹೊಸ ಪಾಠ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="4i1ld"&gt;&lt;b&gt;ಶೋಭಾ ಮಳವಳ್ಳಿ‌&lt;/b&gt;&lt;/p&gt;&lt;p data-block-key="8prb8"&gt;&lt;b&gt;ಪ್ರತಿ ಚುನಾವಣೆಯೂ ರಾಜಕೀಯ ಪಕ್ಷಗಳಿಗೆ, ಜನವಿರೋಧಿ ರಾಜಕಾರಣಿಗಳು, ಸರಕಾರ ಗಳಿಗೆ ಪಾಠ ಕಲಿಸುತ್ತಲೇ ಇರುತ್ತದೆ. ಆದರೆ ಈ ಆಡಳಿತ ಪಕ್ಷ ಪರಾಜಯ ಕಂಡ ಮೂರು ರಾಜ್ಯಗಳಲ್ಲಿ ಆಡಳಿತ ವಿರೋಧಿ ಅಲೆ ಒಂದೇ ಅಲ್ಲ ದೇಶದ ಭದ್ರತೆ, ಹಿಂದೂಗಳ ನಿರ್ಲಕ್ಷ್ಯ, ಕುಟುಂಬ ರಾಜಕಾರಣದ ಬಗ್ಗೆ ಹೇವರಿಕೆ ಎಲ್ಲವೂ ಫಲಿತಾಂಶವಾಗಿ ಹೊರಹೊಮ್ಮಿದೆ. ಮೌನವಾಗಿದ್ದ ಮತದಾರರ ಲೆಕ್ಕಾಚಾರ ಗ್ರಹಿಸುವಲ್ಲಿ ವಿಫಲವಾದ ಟಿಎಂಸಿ, ಡಿಎಂಕೆ ಮತ್ತು ಎಲ್‌ಡಿಎಫ್ ಸೋಲಿಗೆ ಕೊರಳೊಡ್ಡುವಂತಾಗಿದೆ.&lt;/b&gt;&lt;/p&gt;&lt;p data-block-key="1icmc"&gt;ದೇಶದ ಇತಿಹಾಸದ ಮೊದಲ ಬಾರಿಗೆ ಎಡಪಕ್ಷಗಳಿಗೆ ಸೋಲುಣಿಸಿದ್ದಾನೆ ಮತದಾರ. ಒಣ ಸಿದ್ಧಾಂತ, ಪಾಳೇಗಾರಿಕೆ ಕುಟುಂಬ ರಾಜಕಾರಣ, ಅಧಿಕಾರದ ಬಲ, ತೋಳ್ಬಲ, ದರ್ಪ, ಧರ್ಮದ ಧ್ರುವೀಕರಣ ಎಲ್ಲವನ್ನು ಒಂದೇ ಏಟಿಗೆ ಒರೆಸಿ ಹಾಕಿದ್ದಾನೆ. ಮತದಾರ.&lt;/p&gt;&lt;p data-block-key="bum8e"&gt;ಇದಕ್ಕೆ ಇಂದಿನ ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶವೇ ನಿಚ್ಚಳ ಉದಾಹರಣೆ. ಆಡಳಿತ ವಿರೋಧಿ ಅಲೆಯ ಹೊಡೆತಕ್ಕೆ ಸಿಕ್ಕಿ ಪಶ್ಚಿಮ ಬಂಗಾಳ ಧೂಳೀಪಟವಾದರೆ, ತಮಿಳು ನಾಡಿನಲ್ಲಿ ಕರುಣಾನಿಧಿ ಕುಟುಂಬ ರಾಜಕಾರಣದ ಬೇರು ಕುಸಿದು ಬಿದ್ದಿದೆ. ಅತ್ತ ಪುದುಚೇರಿಯಲ್ಲಿ ಎನ್ ಡಿಎ ಮೈತ್ರಿ ಕೂಟ ಮತ್ತೆ ಅಧಿಕಾರ ಹಿಡಿಯುವತ್ತ ದಾಪುಗಾಲಿಟ್ಟಿದೆ.&lt;/p&gt;&lt;p data-block-key="aku1h"&gt;ಕೇರಳದಲ್ಲಿ ಮೂರು ಅವಧಿಯಿಂದ ಅಧಿಕಾರದಲ್ಲಿದ್ದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಎಡರಂಗದ ಎಲ್‌ಡಿಎಫ್ ಪಕ್ಷದಿಂದ ಅಧಿಕಾರ ಕಸಿದು ಕಾಂಗ್ರೆಸ್ ನೇತೃತ್ವದ ಯುಡಿಎಫ್‌ ಗದ್ದುಗೆ ಏರುತ್ತಿದೆ. ಕೇರಳದಲ್ಲೂ ಬಿಜೆಪಿ ಮೊದಲ ಬಾರಿಗೆ ಮೂರು ಸ್ಥಾನ ಗೆದ್ದಿದೆ. ಈ ನಾಲ್ಕು ರಾಜ್ಯಗಳ ಫಲಿತಾಂಶ, ದೇಶ ಬದಲಾವಣೆಯತ್ತ ವಾಲುತ್ತಿರುವುದಕ್ಕೆ ಉದಾಹರಣೆ.&lt;/p&gt;&lt;p data-block-key="6q151"&gt;&lt;b&gt;ದೀದಿ ಅಬ್ಬರ ಅಂತ್ಯ:&lt;/b&gt; ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸವೇ ನೆನಪಿಟ್ಟುಕೊಳ್ಳುವಂಥ ಹೊಸ ಕ್ರಾಂತಿಗೆ ಬಿಜೆಪಿ ಮುನ್ನುಡಿ ಬರೆದಿದೆ. 34 ವರ್ಷಗಳ ಎಡಪಂಥೀಯ ಆಡಳಿತವನ್ನು ಅಂತ್ಯ ಗೊಳಿಸಿದ್ದಲ್ಲದೇ, ‘ನಾ ಮಾಟೇ ಶಾಸನ’ ಎಂಬಂಥ ಸಿಎಂ ಮಮತಾ ಬ್ಯಾನರ್ಜಿಯ 15 ವರ್ಷಗಳ ಸುದೀರ್ಘ ಆಡಳಿತವೂ ಕೊನೆಗೊಂಡಿದೆ.&lt;/p&gt;&lt;p data-block-key="b1362"&gt;&lt;b&gt;ಇದನ್ನೂ ಓದಿ:&lt;/b&gt; &lt;a href="/politics/kerala-assembly-election-2026-bjp-wins-three-seats-nemom-chathannoor-kazhakoottam-77228.html"&gt;Assembly Election Result 2026: ಕೇರಳಂನಲ್ಲಿ ಇತಿಹಾಸ ಬರೆದ ಬಿಜೆಪಿ; ಇದೇ ಮೊದಲ ಬಾರಿಗೆ ಮೂರು ಕ್ಷೇತ್ರಗಳಲ್ಲಿ ಜಯಭೇರಿ&lt;/a&gt;&lt;/p&gt;&lt;p data-block-key="1v5r5"&gt;ಮಾಂ, ಮಾತೃಭೂಮಿ, ಔರ್ ಲೋಗ್’ ಎನ್ನುತ್ತಲೇ ಬಂಗಾಳವನ್ನು ಹಿಡಿತದಲ್ಲಿಟ್ಟುಕೊಂಡಿದ್ದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ವಿರುದ್ಧ ಪರಿವರ್ತನೆಯ ಗಾಳಿ ಬಲವಾಗಿಯೇ ಬೀಸಿದೆ.&lt;/p&gt;&lt;p data-block-key="unk3"&gt;ಬಂಗಾಳದಲ್ಲಿ ಮೊದಲ ಬಾರಿಗೆ ಬಿಜೆಪಿ ಗದ್ದುಗೆ ಏರುತ್ತಿದೆ. ಭ್ರಷ್ಟಾಚಾರದ ಆರೋಪಗಳನ್ನು ನಿರಾಕರಿಸುತ್ತಲೇ ಇದ್ದದ್ದು ಮಮತಾ ಬ್ಯಾನರ್ಜಿಗೆ ದುಬಾರಿಯಾಯಿತು. ಶಿಕ್ಷಕರ ನೇಮಕಾತಿ ಹಗರಣ ಮತ್ತು ಆರ್.ಜಿ ಕರ್ ಮೆಡಿ ಕಲ್ ಕಾಲೇಜಿನ ಅತ್ಯಾಚಾರ ಪ್ರಕರಣ ನಿಭಾಯಿ ಸಿದ ರೀತಿ ಬಂಗಾಳದ ಜನರನ್ನು ಕೆರಳಿಸಿತ್ತು.&lt;/p&gt;&lt;p data-block-key="3je1r"&gt;ಕೈಗಾರಿಕಾ ವಿರೋಧಿ ನೀತಿಗಳು, ಹೆಚ್ಚುತ್ತಿರುವ ನಿರುದ್ಯೋಗ, ಮುಖ್ಯವಾಗಿ ಬಾಂಗ್ಲಾ ಅಕ್ರಮ ವಲಸಿಗರ ಹಿತ ಕಾಯುವ ನೀತಿಗಳು, ಯುವಜನತೆಯನ್ನು ಭಯಭೀತಗೊಳಿಸಿತ್ತು. ಅಷ್ಟೇ ಅಲ್ಲ, ಮಮತಾ ಬ್ಯಾನರ್ಜಿಯ ವೋಟ್ ಬ್ಯಾಂಕ್ ಆಗಿದ್ದ ಮಹಿಳಾ ಮತದಾರರೂ ಸಹ ಕೈಕೊಟ್ಟಿದ್ದಾರೆ.&lt;/p&gt;&lt;p data-block-key="dk23r"&gt;ಮತಾ ಬ್ಯಾನರ್ಜಿಯ ‘ಲಕ್ಷ್ಮಿ ಭಂಡಾರ್’ ಯೋಜನೆಗೆ ಪ್ರತಿಯಾಗಿ ಬಿಜೆಪಿ ಘೋಷಿಸಿದ ಮಹಿಳೆಯ ರಿಗೆ ಮಾಸಿಕ 3000 ರು. ಮತ್ತು ಉಚಿತ ಬಸ್ ಪ್ರಯಾಣದ ಭರವಸೆ ಮಹಿಳೆಯರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಎಸ್‌ಸಿ/ ಎಸ್‌ಟಿ ಮತ್ತು ಮತುಮಾ ಸಮುದಾಯಗಳೂ ಈ ಬಾರಿ ಮಮತಾ ಅವರನ್ನು ಕೈ ಬಿಟ್ಟು ಕಮಲ ಹಿಡಿದಿರುವುದು ಅಚ್ಚರಿಯೇನಲ್ಲ.&lt;/p&gt;&lt;p data-block-key="8bsma"&gt;ಮುಸ್ಲಿಂ ಬಾಹುಳ್ಯ ಪ್ರದೇಶಗಳಲ್ಲೂ ಬಿಜೆಪಿಯೇ ಮುನ್ನಡೆ ಸಾಧಿಸಿದ್ದು ನೋಡಿದರೆ, ದಲಿತ ಮತ್ತು ಅಲ್ಪಸಂಖ್ಯಾತರೂ ದೀದಿಯ ಅಬ್ಬರಕ್ಕೆ ರೋಸಿ ಹೋಗಿದ್ದರು ಎಂದೇ ವ್ಯಾಖ್ಯಾನಿಸಲಾಗಿದೆ. ಇದೆಲ್ಲಕ್ಕಿಂತ ಬಹುಮುಖ್ಯವಾಗಿದ್ದು ಎಸ್‌ಐಆರ್ ಪ್ರಕ್ರಿಯೆ. ಚುನಾವಣಾ ಆಯೋಗ, ಮತದಾರರ ಪಟ್ಟಿಯಿಂದ ಸುಮಾರು 91 ಲಕ್ಷಕ್ಕೂ ಹೆಚ್ಚು ನಕಲಿ ಮತದಾರರ ಹೆಸರುಗಳನ್ನು ತೆಗೆದು ಹಾಕಿದ್ದು ಬಿಜೆಪಿಗೆ ಪ್ಲಸ್ ಆದರೆ ದೀದಿಗೆ ಒಳ ಏಟು ಕೊಟ್ಟಿದೆ. ಬಿಜೆಪಿ ಜತೆಗಿನ ನಿರಂತರ ಸಂಘರ್ಷ, ಸತತ ಸಮರ ಸಾರಿದರೂ, ಮತದಾರರ ಮನಗೆಲ್ಲುವಲ್ಲಿ ಮಮತಾ ಸೋತಿzರೆ ಅನ್ನೋದು ಸ್ಪಷ್ಟ.&lt;/p&gt;&lt;p data-block-key="29skk"&gt;&lt;b&gt;ತಮಿಳುನಾಡಲ್ಲಿ ಜೆನ್ ಜೀ ಕ್ರಾಂತಿ..:&lt;/b&gt; ತಮಿಳುನಾಡಿನ ಫಲಿತಾಂಶ ಇಡೀ ದೇಶವನ್ನೇ ದಕ್ಷಿಣದತ್ತ ತಿರುಗಿ ನೋಡುವಂತೆ ಮಾಡಿದೆ. ಡಿಎಂಕೆ ಪಕ್ಷದ ಪತನ, ದ್ರಾವಿಡ ಸಿದ್ಧಾಂತಿಗಳಿಗೆ ಮುಖಭಂಗ ಉಂಟು ಮಾಡಿದೆ. ತಮಿಳುನಾಡು ಸಿಎಂ ಸ್ಟಾಲಿನ್ ಕುಟುಂಬ ರಾಜಕಾರಣ, ಪಕ್ಷದ ಹಿರಿಯ ನಾಯಕರನ್ನು ಮೂಲೆಗುಂಪು ಮಾಡಿ, ಮಗ ಉದಯನಿಧಿ ಸ್ಟಾಲಿನ್ ಗೆ ಡಿಸಿಎಂ ಪಟ್ಟ ಕಟ್ಟಿದಾ ಗಲೇ, ಡಿಎಂಕೆ ಪತನ ಆರಂಭವಾಗಿತ್ತು.&lt;/p&gt;&lt;p data-block-key="b4pjv"&gt;ತಮಿಳುನಾಡಿನ ಮಾಧ್ಯಮಗಳನ್ನು ಕೈಗೊಂಬೆಯಾಗಿಸಿಕೊಂಡಿದ್ದ ಸ್ಟಾಲಿನ್, ಆಡಳಿತ ವಿರೋಧಿ ಯ ಅಲೆ ಏಳದಂತೆ ಎಚ್ಚರಿಕೆ ವಹಿಸಿದ್ದರು. ಆದರೆ, ಸ್ಟಾಲಿನ್ ಸರಕಾರದ ಹಿಂದೂ ವಿರೋಧಿ ನೀತಿಗಳು, ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಹಿಂದೂ ಧರ್ಮವನ್ನು ಡೆಂಗ್ಯೂ, ಮಲೇರಿಯಾಗೆ ಹೋಲಿಸುತ್ತಾ, ಹಿಂದೂ ವಿರೋಧಿ ಹೇಳಿಕೆಗಳನ್ನು ನೀಡುತ್ತಲೇ ಬಂದ ಉದಯನಿಧಿ ಸ್ಟಾಲಿನ್, ಸನಾತನ ಧರ್ಮವನ್ನು ತೊಡೆದುಹಾಕಬೇಕು ಎನ್ನುವಷ್ಟರ ಮಟ್ಟಿಗೆ ಮುಂದುವರಿದಿದ್ದ. ಇದಕ್ಕೆಲ್ಲ ತುಪ್ಪ ಸುರಿಯುವಂತೆ ಮಾಡಿದ್ದು, ಮುರುಗನ್ ದೇವಸ್ಥಾನದ ಕಾರ್ತಿಕ ದೀಪ ವಿವಾದ.&lt;/p&gt;&lt;p data-block-key="4vfiu"&gt;ತಿರುಪಾರಂಕುಂದ್ರಂ (ಮಧುರೈ ಹತ್ತಿರ) ಮುರುಗನ್ ದೇವಸ್ಥಾನದ ಬೆಟ್ಟದ ಮೇಲೆ ದೀಪ ಹಚ್ಚಲು ಮದ್ರಾಸ್ ಹೈಕೋರ್ಟ್ ಅನುಮತಿ ನೀಡಿದರೂ ಡಿಎಂಕೆ ಸರಕಾರ ಕಾನೂನು ನೆಪವೊಡ್ಡಿ ತಡೆ ಹಿಡಿಯಿತು. ಇದು ಹಿಂದೂಗಳ ಸಿಟ್ಟಿಗೆ ಕಾರಣವಾಯಿತು. ಸ್ಟಾಲಿನ್ ಸರಕಾರದ ಹಿಂದೂ ವಿರೋಧಿ ನೀತಿಗಳಿಂದ ಬೇಸತ್ತ ತಮಿಳರ ಪಾಲಿಗೆ ಆಶಾಕಿರಣ ಅನಿಸಿದ್ದು ದಳಪತಿ ವಿಜಯ.&lt;/p&gt;&lt;p data-block-key="2n470"&gt;ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಕಟ್ಟಿದ ವಿಜಯ್ ಪರ ಅಭಿಮಾನಿಗಳ ಬೆಂಬಲದ ದೊಡ್ಡ ಅಲೆ ಎದ್ದಾಗ ವಿಚಲಿತಗೊಂಡ ಡಿಎಂಕೆ, ವಿಜಯ್ ಗೆ ಇನ್ನಿಲ್ಲದ ಕಾಟ ಕೊಟ್ಟಿತ್ತು. ‘ಜನನಾಯಗನ್’ ಚಿತ್ರಕ್ಕೆ ತಡೆಯೊಡ್ಡಿದ್ದು, ಕರೂರು ಕಾಲ್ತುಳಿತದ ವಿಚಾರಣೆಗಳು ವಿಜಯ್ ಅಭಿಮಾನಿಗಳ ಸಿಟ್ಟಿಗೆ ಕಾರಣವಾಗಿತ್ತು. ಇದರಿಂದ ಡಿಎಂಕೆ ವಿರುದ್ಧ ಜೆನ್ ಜೀ ತಿರುಗಿಬಿದ್ದಿತ್ತು.&lt;/p&gt;&lt;p data-block-key="4qnj"&gt;ಸಮೀಕ್ಷೆಗಳಲ್ಲಿ ಮೂರನೇ ಸ್ಥಾನದಲ್ಲಿದ್ದ ಟಿವಿಕೆಯ ವಿಜಯ, ಈಗ್ ತಮಿಳುನಾಡಿನಲ್ಲಿ ಎಬ್ಬಿಸಿದ ಸುನಾಮಿಗೆ ಸ್ಟಾಲಿನ್ ನೇತೃತ್ವದ ಡಿಎಂಕೆ ಕೊಚ್ಚಿ ಹೋಗಿದೆ. ತಮಿಳರು ಸಿನಿಮಾ ಪ್ರಿಯರು ಎಂಬುದು ಮತ್ತೊಮ್ಮೆ ಸಾಬೀತಾದರೂ, ವಿಜಯ್ ರಾಜಕೀಯ ನಡೆಯಲ್ಲೂ ತಂತ್ರಗಾರಿಕೆ ಇತ್ತು.&lt;/p&gt;&lt;p data-block-key="cd6ti"&gt;ಬಿಜೆಪಿಯ ಮೈತ್ರಿ ಪ್ರಸ್ತಾಪ ತಿರಸ್ಕರಿಸಿ ಎಲ್ಲ 234 ಕ್ಷೇತ್ರಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವ ಲೆಕ್ಕಾಚಾರದಲ್ಲಿ ವಿಜಯ್ ಗೆದ್ದಿದ್ದಾರೆ. ಅತ್ತ ಎಐಎಡಿಎಂಕೆ ಮತ್ತು ಬಿಜೆಪಿ ಮಿತ್ರಪಕ್ಷದ ಸಾಧನೆ ಯೂ, ಡಿಎಂಕೆಗೆ ನುಗ್ಗಲಾರದ ತುತ್ತಾಗಿದೆ. ಕೊನೆ ಕ್ಷಣದಲ್ಲಿ ಎಐಡಿಎಂಕೆಗೆ ಕೈಕೊಟ್ಟು ಡಿಎಂಕೆ ಸೇರಿದ ನಾಯಕರೂ ಕೈಕೈ ಹಿಚುಕಿ ಕೊಳ್ಳುವಂತಾಗಿದೆ..&lt;/p&gt;&lt;p data-block-key="7bb3u"&gt;&lt;b&gt;ಅಸ್ಸಾಂನಲ್ಲಿ ಅಭಿವೃದ್ಧಿ ಮತ್ತು ಹಿಂದುತ್ವ.!!:&lt;/b&gt; ಅಸ್ಸಾಂನಲ್ಲಿ ಬಿಜೆಪಿ ಗೆಲುವಿಗೆ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ವರ್ಚಸ್ಸು, ಆಡಳಿತದಲ್ಲಿ ಬಿಗಿ ಹಿಡಿತವೇ ಕಾರಣ. ಹಿಂದುತ್ವದ ಫೈರ್‌ ಬ್ರಾಂಡ್ ಆಗಿ, ಅಸ್ಸಾಂ ಹಿಂದೂಗಳ ಭರವಸೆಯ ನಾಯಕ ಎನಿಸಿರುವ ಹೇಮಂತ್ ಬಿಸ್ವಾ ಸೋಲಿಸುವುದು ಇನ್ನು ಕನಸಿನ ಮಾತು ಎನಿಸುವಂತೆ ಮಾಡಿದೆ ಈ ಚುನಾವಣೆ.&lt;/p&gt;&lt;p data-block-key="315fg"&gt;ಅಭಿವೃದ್ಧಿ ಜತೆ ಜತೆಗೆ ಹಿಂದುತ್ವದ ವಿಚಾರಗಳನ್ನು ಪ್ರತಿಪಾದಿಸುತ್ತಾ, ಹಿಂದೂಗಳ ರಕ್ಷಣೆ, ಧಾರ್ಮಿಕ ಕೇಂದ್ರಗಳ ಸಂರಕ್ಷಣೆ, ಮತಗಳ ಧ್ರುವೀಕರಣಕ್ಕೆ ಕಾರಣವಾಯಿತು. ಮುಖ್ಯವಾಗಿ ದಶಕಗಳಿಂದ ನಡೆಯುತ್ತಿದ್ದ ಬೋಡೋಲ್ಯಾಂಡ್ ಮತ್ತು ಉಲ್ಪಾ ಬಂಡುಕೋರರೊಂದಿಗೆ ಶಾಂತಿ ಒಪ್ಪಂದ, ಗಡಿ ವಿವಾದಗಳ ಇತ್ಯರ್ಥ ಜನರ ವಿಶ್ವಾಸ ಹೆಚ್ಚಲು ಕಾರಣವಾಯಿತು.&lt;/p&gt;&lt;p data-block-key="dkmu0"&gt;ಉದ್ಯೋಗ ಸೃಷ್ಟಿಯ ಭರವಸೆಯೂ ಜೆನ್ ಜೀ ಸೆಳೆಯಿತು. ಇದೆಲ್ಲದರ ಜತೆಗೆ, ಬಿಜೆಪಿಗೆ ಪ್ರಬಲ್ ವಿರೋಧ ಪಕ್ಷದ ಭಯವೇ ಇಲ್ಲದಂತಾಗಿತ್ತು. ವಿರೋಧ್ ಪಕ್ಷದಲ್ಲಿನ ನಾಯಕತ್ವ ಕೊರತೆ, ಎನ್ ಡಿಎ ಗೆಲುವಿನ ಹಾದಿ ಸರಾಗಗೊಳಿಸಿತು.&lt;/p&gt;&lt;p data-block-key="9ms0t"&gt;&lt;b&gt;ಪುದುಚೇರಿಯಲ್ಲಿ ನಡೆಯದ ಡಿಎಂಕೆ ಆಟ..!:&lt;/b&gt; ಪುದುಚೇರಿಯಲ್ಲಿ ಎನ್‌ಡಿಎ ಮೈತ್ರಿಕೂಟ ಎರಡನೇ ಬಾರಿಗೆ ಅಧಿಕಾರದ ಗದ್ದುಗೆ ಹಿಡಿದಿದೆ. ಎನ್‌ಡಿಎ ಮೈತ್ರಿಗೆ 17 ಸ್ಥಾನ ದಕ್ಕಿದ್ದು ಮತ್ತೆ ಅಧಿಕಾರಕ್ಕೇರಿದೆ. ಪುದುಚೇರಿಯಲ್ಲೂ ಅಧಿಕಾರ ಹಿಡಿಯುವ ಕಾಂಗ್ರೆಸ್, ಡಿಎಂಕೆ ಮೈತ್ರಿಗೆ ತೀವ್ರ ಹಿನ್ನಡೆಯಾಗಿದೆ. ಎಐಎನ್ ಆರ್‌ಸಿ, ಬಿಜೆಪಿ ಮತ್ತು ಎಐಎಡಿಎಂಕೆ ಮೈತ್ರಿಕೂಟಕ್ಕೆ ಎಸ್. ರಂಗಸ್ವಾಮಿ ನಾಯಕತ್ವವೇ ಗಟ್ಟಿ. ಹಿಂದುತ್ವ, ಅಭಿವೃದ್ಧಿ, ಜನಪರ ಯೋಜನೆಗಳು ಎನ್‌ಡಿಎ ಕೈ ಹಿಡಿದಿವೆ. ಈ ನಾಲ್ಕು ರಾಜ್ಯಗಳಲ್ಲಿ ಆಡಳಿತ ವಿರೋಧಿ ಜತೆಗೆ ಸಿದ್ಧಾಂತದ ತಾಕಲಾಟವೂ ಸೇರಿತ್ತು.&lt;/p&gt;&lt;p data-block-key="50l0m"&gt;ಫಲಿತಾಂಶದ ನಿರ್ಣಾಯಕ ಎನಿಸಿರುವ ಮಹಿಳೆಯರು ಮತ್ತು ಜೆನ್‌ಜೀ ಸಿದ್ಧಾಂತ, ಆದ್ಯತೆಗಳು ಮತ್ತು ನಿರೀಕ್ಷೆಗಳನ್ನು ಬಹುತೇಕ ಪಕ್ಷಗಳು ನಿರ್ಲಕ್ಷಿಸಿಕೊಂಡೇ ಬಂದಿವೆ. ಧರ್ಮ ಮತ್ತು ರಾಜಕೀಯ ಒಂದೇ ನಾಣ್ಯದ ಎರಡು ಮುಖಗಳು. ಪ್ರಜಾಪ್ರಭುತ್ವ, ಸಂವಿಧಾನ ಏನೇ ಮಾತನಾ ಡಿದರೂ ಧರ್ಮವೇ ರಾಜಕಾರಣವನ್ನು ನಿಯಂತ್ರಿಸುತ್ತದೆ. ಈ ದೇಶದ ಮಣ್ಣಿನಲ್ಲಿರುವ್ ಧರ್ಮದ ಬಗೆಗಿನ ಭಾವನಾ ತ್ಮಕತೆಯನ್ನು ಬದಲಿಸಲು ಸದ್ಯಕ್ಕಂತೂ ಸಾಧ್ಯವಿಲ್ಲ. ಅದಕ್ಕೆ ಈ ಫಲಿತಾಂಶವೇ ಸಾಕ್ಷಿ.&lt;/p&gt;&lt;p data-block-key="1vn5n"&gt;&lt;b&gt;ಕೇರಳದಲ್ಲಿ ಎಡಪಂಥೀಯರಿಗೆ ಶಾಕ್!&lt;/b&gt;&lt;/p&gt;&lt;p data-block-key="8g7d2"&gt;ಚುನಾವಣೆ ಫಲಿತಾಂಶವು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಎಡರಂಗದ ಮೈತ್ರಿಕೂಟಕ್ಕೆ ಭಾರಿ ಆಘಾತ ನೀಡಿದೆ. ಆಡಳಿತ ವಿರೋಧಿ ಅಲೆಯಲ್ಲಿ ಎಲ್‌ಡಿಎಫ್ ಕೊಚ್ಚಿ ಹೋಗಿದೆ. ಉದ್ಯೋಗಾವಕಾಶಗಳಿಲ್ಲದೇ ನಲುಗಿದ ಯುವ ಸಮೂಹ, ಕಾಂಗ್ರೆಸ್ ನೇತೃತ್ವದ ಯುಡಿಎಫ್‌ʼಗೆ ಜೈ ಎಂದಿದೆ. ಹತ್ತು ವರ್ಷದ ಎಲ್‌ಡಿಎಫ್ ಆಡಳಿತದ ನಂತರ ಕೇರಳ ಜನರು, ಈ ಬಾರಿ‌ ಬದಲಾವಣೆಗೆ ಮತ ಹಾಕಿದ್ದಾರೆ. ಈ ಬಾರಿಯೂ ಬಿಜೆಪಿಯ ಅಧಿಕಾರದ ಕನಸು ನನಸಾಗ ದಿದ್ದರೂ, ಪಕ್ಷದ ನೆಲಮಟ್ಟದ ಬೇರುಗಟ್ಟಿಯಾಗುತ್ತಿದೆ.&lt;/p&gt;&lt;p data-block-key="esii"&gt;ಮತ್ತೊಂದು ಗಮನಾರ್ಹ ವಿಷಯ, ಎಲ್‌ಡಿಎಫ್‌ʼಗೆ ಬಂಡಾಯ ನಾಯಕರೇ ಪೆಟ್ಟು ಕೊಟ್ಟಿರು ವುದು. ಕಾಂಗ್ರೆಸ್ ನೇತೃತ್ವದಲ್ಲಿ ಯುಡಿಎಫ್ ಬೆಂಬಲ ಪಡೆದ ಹಿರಿಯ ನಾಯಕ ಸುಧಾಕರನ್ ಸೇರಿ ಹಲವು‌ ನಾಯಕರು ಪಿಣ ರಾಯಿ ವಿಜಯ್ ವಿರುದ್ಧ ಬಂಡೆದ್ದು ಕಣಕ್ಕಿಳಿದಿದ್ದು, ಎಲ್‌ಡಿಎಫ್‌ʼಗೆ ಬಿಸಿತುಪ್ಪವೇ ಆಯ್ತು.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>Amruthadhaare Serial:  ಜೈದೇವ್‌ ಬೀದಿ ಪಾಲು; ಪಾಪದ ಕೊಡ ತುಂಬಿ ಬದುಕಾಯಿತು ಮಣ್ಣು ಪಾಲು!</title><link>https://vishwavani.news/movies/amruthadhaare-serial-jaidev-in-critical-condition-gowtham-bhoomika-shock-77261.html</link><guid>https://vishwavani.news/movies/amruthadhaare-serial-jaidev-in-critical-condition-gowtham-bhoomika-shock-77261.html</guid><pubDate>Tue, 05 May 2026 04:33:27 +0000</pubDate><description>&lt;![CDATA[Amruthadhaare Serial: ಜೈದೇವ್‌ ಕತೆ ಅದೋಗತಿ ಆಗಿದೆ. ಇದ್ದ ದಿಯಾ ಕೂಡ ಈಗ ಸಪೋರ್ಟ್‌ಗೆ ಇಲ್ಲವಾಗಿದ್ದಾಳೆ. ಬಂಗಾರ, ಹಣ ಎಲ್ಲವನ್ನೂ ದೋಚಿಕೊಂಡು ಬಂದು ಪಾರ್ಟಿ ಮಾಡಿದ್ದಾಳೆ. ಅಲ್ಲಿಗೆ ನೇರವಾಗಿ ಬಂದ ಜೈದೇವ್‌ನನ್ನು ಮನೆಯಿಂದ ಆಚೆ ಹಾಕಿದ್ದಾಳೆ. ಅದಕ್ಕೂ ಸುಮ್ಮನಾಗದ ಜೈದೇವ್‌ ಕಂಪೌಂಡ್‌ ಹಾರಿ ದಿಯಾ ಪಾರ್ಟಿ ಮಾಡುತ್ತಿರುವ ಜಾಗಕ್ಕೆ ಬಂದಿದ್ದಾನೆ.]]&gt;</description><dc:creator>&lt;![CDATA[Yashaswi Devadiga]]&gt;</dc:creator><category>&lt;![CDATA[TV Serials]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಮನರಂಜನೆ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/amruthadhaare_serial_ffXZZRJ.original.jpg" class="attachment-large size-large wp-post-image" alt="Amruthadhaare Serial:  ಜೈದೇವ್‌ ಬೀದಿ ಪಾಲು; ಪಾಪದ ಕೊಡ ತುಂಬಿ ಬದುಕಾಯಿತು ಮಣ್ಣು ಪಾಲು!" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="hka30"&gt;ಜೀ ಕನ್ನಡ ವಾಹಿನಿಯಲ್ಲಿ (Zee Kannada serial) ಪ್ರಸಾರ ಕಾಣುತ್ತಿರುವ &lt;a href="/movies/today-amruthadhaare-serial-mahasanchike-a-romantic-episode-74364.html"&gt;ಅಮೃತಧಾರೆ&lt;/a&gt;ಯಲ್ಲಿ (amruthadhaare serial ) ಅನ್ಯಾಯದ ಹಾದಿಯಲ್ಲಿ ಮೆರೆದ ಜೆಡಿ ಬೀದಿ ಪಾಲು ಆಗಿದ್ದಾನೆ. ಪಾಪದ ಕೊಡ ತುಂಬಿ ಬದುಕು ಮಣ್ಣು ಪಾಲು ಆಗಿದೆ. ಅತ್ತ ಗೌತಮ್‌ ದಿವಾನ್‌ (Gowtham diwan) ಕುಟುಂಬ ಮತ್ತೆ ತಮ್ಮ ಮನೆಗೆ ಮರಳಿ ಹೋಗುತ್ತಿದೆ.&lt;/p&gt;&lt;h3 data-block-key="9ohbu"&gt;&lt;b&gt; ಜೈದೇವ್‌ ಈಗ ಬೀದಿ ಪಾಲು&lt;/b&gt;&lt;/h3&gt;&lt;p data-block-key="drbq2"&gt;ಜೈದೇವ್‌ ಕತೆ ಅದೋಗತಿ ಆಗಿದೆ. ಇದ್ದ ದಿಯಾ ಕೂಡ ಈಗ ಸಪೋರ್ಟ್‌ಗೆ ಇಲ್ಲವಾಗಿದ್ದಾಳೆ. ಬಂಗಾರ, ಹಣ ಎಲ್ಲವನ್ನೂ ದೋಚಿಕೊಂಡು ಬಂದು ಪಾರ್ಟಿ ಮಾಡಿದ್ದಾಳೆ. ಅಲ್ಲಿಗೆ ನೇರವಾಗಿ ಬಂದ ಜೈದೇವ್‌ನನ್ನು ಮನೆಯಿಂದ ಆಚೆ ಹಾಕಿದ್ದಾಳೆ. ಅದಕ್ಕೂ ಸುಮ್ಮನಾಗದ ಜೈದೇವ್‌ ಕಂಪೌಂಡ್‌ ಹಾರಿ ದಿಯಾ ಪಾರ್ಟಿ ಮಾಡುತ್ತಿರುವ ಜಾಗಕ್ಕೆ ಬಂದಿದ್ದಾನೆ.&lt;/p&gt;&lt;p data-block-key="4enkg"&gt;&lt;b&gt;ಇದನ್ನೂ ಓದಿ: &lt;/b&gt;&lt;a href="/movies/actress-rajini-amritavarshini-fame-film-chamber-stepped-up-against-rajini-77253.html"&gt;Actress Rajini: 'ಅಮೃತವರ್ಷಿಣಿ' ರಜಿನಿ ವಿರುದ್ಧ ಫಿಲ್ಮ್‌ ಚೇಂಬರ್ ಮೆಟ್ಟಿಲೇರಿದ ಚಿತ್ರತಂಡ!&lt;/a&gt;&lt;/p&gt;&lt;p data-block-key="9s7f5"&gt;ಅಷ್ಟೇ ಅಲ್ಲ ದಿಯಾ ಕೂಡ ಕೂಗಾಡಿದ್ದಾಳೆ. ತನಗೂ ಜೈದೇವ್‌ ಸಂಬಂಧ ಇಲ್ಲ ಎಂದಿದ್ದಾಳೆ. ಒಟ್ಟಾರೆಯಾಗಿ ಜೈದೇವ್‌ ಈಗ ಬೀದಿ ಪಾಲಾಗಿದ್ದಾನೆ.&lt;/p&gt;&lt;p data-block-key="1jk76"&gt;ಗೌತಮ್‌ ದಿವಾನ್‌ ಆಸ್ತಿ ಹರಾಜಿಗೆ ಬಂದಿತ್ತು. ಅಖಿಲಾಂಡೇಶ್ವರಿ ಸಹಾಯದಿಂದ ಗೌತಮ್‌ ಮತ್ತೆ ಆಸ್ತಿಯನ್ನು ಮರಳಿ ಪಡೆದಿದ್ದಾನೆ. ಗೌತಮ್‌ ದಿವಾನ್‌ ಈ ರೀತಿ ಆಸ್ತಿ ಖರೀದಿ ಮಾಡಿದ್ದು ಜಯದೇವ್‌ಗೆ ಆಶ್ಚರ್ಯ ಆಗಿದೆ. ಇಷ್ಟೆಲ್ಲ ಹಣವನ್ನು ಅವನು ಹೇಗೆ ತಂದನು ಎಂದು ಯೋಚನೆ ಮಾಡುತ್ತಿರುವಾಗಲೇ, ಗೌತಮ್‌ ದಿವಾನ್‌ ಅವನನ್ನು ಮನೆಯಿಂದ ಹೊರಗಡೆ ಹಾಕಿದ್ದಾನೆ.&lt;/p&gt;&lt;p data-block-key="5oeeh"&gt;&lt;/p&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="instagram-media" data-instgrm-captioned data-instgrm-permalink="https://www.instagram.com/reel/DX6-SVNiWSy/?utm_source=ig_embed&amp;amp;utm_campaign=loading" data-instgrm-version="14" style=" background:#FFF; border:0; border-radius:3px; box-shadow:0 0 1px 0 rgba(0,0,0,0.5),0 1px 10px 0 rgba(0,0,0,0.15); margin: 1px; max-width:540px; min-width:326px; padding:0; width:99.375%; width:-webkit-calc(100% - 2px); width:calc(100% - 2px);"&gt;&lt;div style="padding:16px;"&gt; &lt;a href="https://www.instagram.com/reel/DX6-SVNiWSy/?utm_source=ig_embed&amp;amp;utm_campaign=loading" style=" background:#FFFFFF; line-height:0; padding:0 0; text-align:center; text-decoration:none; width:100%;" target="_blank"&gt; &lt;div style=" display: flex; flex-direction: row; align-items: center;"&gt; &lt;div style="background-color: #F4F4F4; border-radius: 50%; flex-grow: 0; height: 40px; margin-right: 14px; width: 40px;"&gt;&lt;/div&gt; &lt;div style="display: flex; flex-direction: column; flex-grow: 1; justify-content: center;"&gt; &lt;div style=" background-color: #F4F4F4; border-radius: 4px; flex-grow: 0; height: 14px; margin-bottom: 6px; width: 100px;"&gt;&lt;/div&gt; &lt;div style=" background-color: #F4F4F4; border-radius: 4px; flex-grow: 0; height: 14px; width: 60px;"&gt;&lt;/div&gt;&lt;/div&gt;&lt;/div&gt;&lt;div style="padding: 19% 0;"&gt;&lt;/div&gt; &lt;div style="display:block; height:50px; margin:0 auto 12px; width:50px;"&gt;&lt;svg width="50px" height="50px" viewBox="0 0 60 60" version="1.1" xmlns="https://www.w3.org/2000/svg" xmlns:xlink="https://www.w3.org/1999/xlink"&gt;&lt;g stroke="none" stroke-width="1" fill="none" fill-rule="evenodd"&gt;&lt;g transform="translate(-511.000000, -20.000000)" fill="#000000"&gt;&lt;g&gt;&lt;path d="M556.869,30.41 C554.814,30.41 553.148,32.076 553.148,34.131 C553.148,36.186 554.814,37.852 556.869,37.852 C558.924,37.852 560.59,36.186 560.59,34.131 C560.59,32.076 558.924,30.41 556.869,30.41 M541,60.657 C535.114,60.657 530.342,55.887 530.342,50 C530.342,44.114 535.114,39.342 541,39.342 C546.887,39.342 551.658,44.114 551.658,50 C551.658,55.887 546.887,60.657 541,60.657 M541,33.886 C532.1,33.886 524.886,41.1 524.886,50 C524.886,58.899 532.1,66.113 541,66.113 C549.9,66.113 557.115,58.899 557.115,50 C557.115,41.1 549.9,33.886 541,33.886 M565.378,62.101 C565.244,65.022 564.756,66.606 564.346,67.663 C563.803,69.06 563.154,70.057 562.106,71.106 C561.058,72.155 560.06,72.803 558.662,73.347 C557.607,73.757 556.021,74.244 553.102,74.378 C549.944,74.521 548.997,74.552 541,74.552 C533.003,74.552 532.056,74.521 528.898,74.378 C525.979,74.244 524.393,73.757 523.338,73.347 C521.94,72.803 520.942,72.155 519.894,71.106 C518.846,70.057 518.197,69.06 517.654,67.663 C517.244,66.606 516.755,65.022 516.623,62.101 C516.479,58.943 516.448,57.996 516.448,50 C516.448,42.003 516.479,41.056 516.623,37.899 C516.755,34.978 517.244,33.391 517.654,32.338 C518.197,30.938 518.846,29.942 519.894,28.894 C520.942,27.846 521.94,27.196 523.338,26.654 C524.393,26.244 525.979,25.756 528.898,25.623 C532.057,25.479 533.004,25.448 541,25.448 C548.997,25.448 549.943,25.479 553.102,25.623 C556.021,25.756 557.607,26.244 558.662,26.654 C560.06,27.196 561.058,27.846 562.106,28.894 C563.154,29.942 563.803,30.938 564.346,32.338 C564.756,33.391 565.244,34.978 565.378,37.899 C565.522,41.056 565.552,42.003 565.552,50 C565.552,57.996 565.522,58.943 565.378,62.101 M570.82,37.631 C570.674,34.438 570.167,32.258 569.425,30.349 C568.659,28.377 567.633,26.702 565.965,25.035 C564.297,23.368 562.623,22.342 560.652,21.575 C558.743,20.834 556.562,20.326 553.369,20.18 C550.169,20.033 549.148,20 541,20 C532.853,20 531.831,20.033 528.631,20.18 C525.438,20.326 523.257,20.834 521.349,21.575 C519.376,22.342 517.703,23.368 516.035,25.035 C514.368,26.702 513.342,28.377 512.574,30.349 C511.834,32.258 511.326,34.438 511.181,37.631 C511.035,40.831 511,41.851 511,50 C511,58.147 511.035,59.17 511.181,62.369 C511.326,65.562 511.834,67.743 512.574,69.651 C513.342,71.625 514.368,73.296 516.035,74.965 C517.703,76.634 519.376,77.658 521.349,78.425 C523.257,79.167 525.438,79.673 528.631,79.82 C531.831,79.965 532.853,80.001 541,80.001 C549.148,80.001 550.169,79.965 553.369,79.82 C556.562,79.673 558.743,79.167 560.652,78.425 C562.623,77.658 564.297,76.634 565.965,74.965 C567.633,73.296 568.659,71.625 569.425,69.651 C570.167,67.743 570.674,65.562 570.82,62.369 C570.966,59.17 571,58.147 571,50 C571,41.851 570.966,40.831 570.82,37.631"&gt;&lt;/path&gt;&lt;/g&gt;&lt;/g&gt;&lt;/g&gt;&lt;/svg&gt;&lt;/div&gt;&lt;div style="padding-top: 8px;"&gt; &lt;div style=" color:#3897f0; font-family:Arial,sans-serif; font-size:14px; font-style:normal; font-weight:550; line-height:18px;"&gt;View this post on Instagram&lt;/div&gt;&lt;/div&gt;&lt;div style="padding: 12.5% 0;"&gt;&lt;/div&gt; &lt;div style="display: flex; flex-direction: row; margin-bottom: 14px; align-items: center;"&gt;&lt;div&gt; &lt;div style="background-color: #F4F4F4; border-radius: 50%; height: 12.5px; width: 12.5px; transform: translateX(0px) translateY(7px);"&gt;&lt;/div&gt; &lt;div style="background-color: #F4F4F4; height: 12.5px; transform: rotate(-45deg) translateX(3px) translateY(1px); width: 12.5px; flex-grow: 0; margin-right: 14px; margin-left: 2px;"&gt;&lt;/div&gt; &lt;div style="background-color: #F4F4F4; border-radius: 50%; height: 12.5px; width: 12.5px; transform: translateX(9px) translateY(-18px);"&gt;&lt;/div&gt;&lt;/div&gt;&lt;div style="margin-left: 8px;"&gt; &lt;div style=" background-color: #F4F4F4; border-radius: 50%; flex-grow: 0; height: 20px; width: 20px;"&gt;&lt;/div&gt; &lt;div style=" width: 0; height: 0; border-top: 2px solid transparent; border-left: 6px solid #f4f4f4; border-bottom: 2px solid transparent; transform: translateX(16px) translateY(-4px) rotate(30deg)"&gt;&lt;/div&gt;&lt;/div&gt;&lt;div style="margin-left: auto;"&gt; &lt;div style=" width: 0px; border-top: 8px solid #F4F4F4; border-right: 8px solid transparent; transform: translateY(16px);"&gt;&lt;/div&gt; &lt;div style=" background-color: #F4F4F4; flex-grow: 0; height: 12px; width: 16px; transform: translateY(-4px);"&gt;&lt;/div&gt; &lt;div style=" width: 0; height: 0; border-top: 8px solid #F4F4F4; border-left: 8px solid transparent; transform: translateY(-4px) translateX(8px);"&gt;&lt;/div&gt;&lt;/div&gt;&lt;/div&gt; &lt;div style="display: flex; flex-direction: column; flex-grow: 1; justify-content: center; margin-bottom: 24px;"&gt; &lt;div style=" background-color: #F4F4F4; border-radius: 4px; flex-grow: 0; height: 14px; margin-bottom: 6px; width: 224px;"&gt;&lt;/div&gt; &lt;div style=" background-color: #F4F4F4; border-radius: 4px; flex-grow: 0; height: 14px; width: 144px;"&gt;&lt;/div&gt;&lt;/div&gt;&lt;/a&gt;&lt;p style=" color:#c9c8cd; font-family:Arial,sans-serif; font-size:14px; line-height:17px; margin-bottom:0; margin-top:8px; overflow:hidden; padding:8px 0 7px; text-align:center; text-overflow:ellipsis; white-space:nowrap;"&gt;&lt;a href="https://www.instagram.com/reel/DX6-SVNiWSy/?utm_source=ig_embed&amp;amp;utm_campaign=loading" style=" color:#c9c8cd; font-family:Arial,sans-serif; font-size:14px; font-style:normal; font-weight:normal; line-height:17px; text-decoration:none;" target="_blank"&gt;A post shared by Zee Kannada (@zeekannada)&lt;/a&gt;&lt;/p&gt;&lt;/div&gt;&lt;/blockquote&gt;
&lt;script async src="//www.instagram.com/embed.js"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="7939o"&gt;&lt;/p&gt;&lt;h3 data-block-key="dmvu7"&gt;&lt;b&gt;ಗಾಬರಿ ಆಗಿದ್ದಾರೆ ಭೂಮಿಕಾ ಹಾಗೂ ಗೌತಮ್‌&lt;/b&gt;&lt;/h3&gt;&lt;p data-block-key="cgptu"&gt;ಗೌತಮ್‌ ಮನೆಯವರೆಲ್ಲರೂ ಈಗ ಒಳ್ಳೆಯ ದಿನ ನೋಡಿ ಮತ್ತೆ ಅದೇ ಮನೆಗೆ ಹೋಗುತ್ತಿದ್ದಾರೆ. ಶಾಸ್ತಿಗಳು ಬಂದಿದ್ದಾರೆ. ಆದರೆ ಒಂದು ಆಘಾತ ಕೊಡುವ ವಿಚಾರವನ್ನು ಭೂಮಿ ಮತ್ತು ಗೌತಮ್‌ ಮುಂದೆ ಹೇಳಿದ್ದಾರೆ. ನಿಮಗೆ ಜನಿಸಿದ ಹೆಣ್ಣು ಮಗುವಿನಿಂದ ನಿಮಗೆ ಕಂಟಕ ಇದೆ ಎಂದು ಜಾತಕದಲ್ಲಿ ಇದೆ. ನಿಮಗೆ ತುಂಬಾ ಹತ್ತಿರದಲ್ಲಿ ಇರೋರೆ ನಿಮಗೆ ಸಮಸ್ಯೆ ಕಾಡುವ ಸಂಭವ ಇದೆ. ಕೆಲವೊಂದಿಷ್ಟು ಹಾಗೇಯೇ ನಾವು ಮುಗಿದು ಹೋಯ್ತು ಅಂತ ಅಂದುಕೊಂಡಿರ್ತಿವಿ. ಆದರೆ ಮುಗಿದು ಹೋಗಲ್ಲ ಎಂದಿದ್ದಾರೆ. ಶಾಸ್ತ್ರಿಗಳ ಈ ಮಾತು ಕೇಳಿ ಗಾಬರಿ ಆಗಿದ್ದಾರೆ ಭೂಮಿಕಾ ಹಾಗೂ ಗೌತಮ್‌.&lt;/p&gt;&lt;p data-block-key="ak2f8"&gt;ಗೌತಮ್‌ ದಿವಾನ್‌ ಈಗ ಜಯದೇವ್‌ನನ್ನು ಮನೆಯಿಂದ ಹೊರಗಡೆ ಹಾಕಿದಮೇಲೂ ಕೂಡ ಅವನಿಗೆ ಬುದ್ಧಿಯೇ ಬಂದಿಲ್ಲ. ಇನ್ನೊಂದು ಕಡೆ ದಿಯಾ ಕೂಡ ಅವನಿಗೆ ಚಳ್ಳೆಹಣ್ಣು ತಿನ್ನಿಸಿ ಓಡಿ ಹೋಗಿದ್ದಾಳೆ. ಮುಂದೆ ಜಯದೇವ್‌, ಗೌತಮ್‌ ಕುಟುಂಬಕ್ಕೆ ತೊಂದರೆ ಕೊಡ್ತಾನಾ? ಅಥವಾ ಶಕುಂತಲಾ, ಜಯದೇವ್‌ ಆಡಿದ ಮತ್ತೆ ನಾಟಕ ಮಾಡಿದ್ರಾ ಅನ್ನೋ ಎಂಬ ಪ್ರಶ್ನೆ ವೀಕ್ಷರಲ್ಲಿ ಇದೆ.&lt;/p&gt;&lt;p data-block-key="21cnr"&gt;&lt;b&gt;ಇದನ್ನೂ ಓದಿ: &lt;/b&gt;&lt;a href="/movies/serial/amruthadhaare-serial-when-everything-was-going-well-gautam-dewan-faced-a-new-problem-bhumika-was-shocked-77063.html"&gt;Amruthadhaare Serial: ಎಲ್ಲ ಸರಿ ಹೋಗೋ ಹೊತ್ತಲ್ಲೇ ಗೌತಮ್‌ ದಿವಾನ್‌ಗೆ ಹೊಸ ಸಂಕಷ್ಟ; ಶಾಕ್‌ ಆದ್ಲು ಭೂಮಿಕಾ!&lt;/a&gt;&lt;/p&gt;&lt;p data-block-key="btu3h"&gt;ಅಮೃತಧಾರೆ’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಬಂಗಾಳದಲ್ಲಿ ಸತತ 2ನೇ ಅವಧಿಗೆ ಶಾಸಕರಾಗಿ ಆಯ್ಕೆಯಾದ ಆರ್‌ಸಿಬಿ ಮಾಜಿ ವೇಗಿ</title><link>https://vishwavani.news/sports/bjps-ashoke-dinda-defeats-tmcs-chandan-mondal-by-16241-votes-77260.html</link><guid>https://vishwavani.news/sports/bjps-ashoke-dinda-defeats-tmcs-chandan-mondal-by-16241-votes-77260.html</guid><pubDate>Tue, 05 May 2026 04:30:17 +0000</pubDate><description>&lt;![CDATA[Assembly Elections Results 2026: 2009ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದ ಅಶೋಕ್ ದಿಂಡಾ, 13 ಏಕದಿನ ಮತ್ತು9 ಟಿ20ಐ ಪಂದ್ಯಗಳಲ್ಲಿ ತಂಡವನ್ನು ಪ್ರತಿನಿಧಿಸಿದ್ದಾರೆ. ಇದರ ಜೊತೆಗೆ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ವಿವಿಧ ಫ್ರಾಂಚೈಸಿ ಪರ ಆಡಿರುವ ಅವರು 68 ವಿಕೆಟ್ ಪಡೆದಿದ್ದಾರೆ. ಕನ್ನಡಿಗರ ನೆಚ್ಚಿನ ತಂಡ ಆರ್‌ಸಿಬಿ ಪರವೂ ಆಡಿದ್ದಾರೆ.]]&gt;</description><dc:creator>&lt;![CDATA[Abhilash BC]]&gt;</dc:creator><category>&lt;![CDATA[ಕ್ರಿಕೆಟ್‌]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ದೇಶ]]&gt;</category><category>&lt;![CDATA[ಕ್ರೀಡೆ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Ashoke_Dinda.original.jpg" class="attachment-large size-large wp-post-image" alt="ಬಂಗಾಳದಲ್ಲಿ ಸತತ 2ನೇ ಅವಧಿಗೆ ಶಾಸಕರಾಗಿ ಆಯ್ಕೆಯಾದ ಆರ್‌ಸಿಬಿ ಮಾಜಿ ವೇಗಿ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="9hw08"&gt;&lt;b&gt;ಕೋಲ್ಕತಾ, ಮೇ 5:&lt;/b&gt; 50 ವರ್ಷಗಳ ಬಳಿಕ ಪಶ್ಚಿಮ ಬಂಗಾಳ(Assembly Elections Results 2026)ದಲ್ಲಿ ಕಮಲ ಅರಳಿದೆ. ವಿಧಾನಸಭೆ ಚುನಾವಣೆಯಲ್ಲಿ 200ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲುವ ಮೂಲಕ ಮಮತಾ ಬ್ಯಾನರ್ಜಿಯಂತಹ ದೈತ್ಯ ಶಕ್ತಿಯನ್ನು ಮಣಿಸಿ ಬಿಜೆಪಿ ಅಧಿಕಾರಕ್ಕೆ ಏರಿದೆ. ಭಾರತ ಕ್ರಿಕೆಟ್ ತಂಡದ ಪರ ಆಡಿದ್ದ ಅಶೋಕ್ ದಿಂಡಾ(Ashoke Dinda) ಅವರು ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ದಾಖಲಿಸಿದ್ದಾರೆ.&lt;/p&gt;&lt;p data-block-key="ei7qg"&gt;ಪೂರ್ವ ಮಿಡ್ನಾಪುರ ಜಿಲ್ಲೆಯ ಮೊಯ್ನಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅಶೋಕ್ ದಿಂಡಾ, ತಮ್ಮ ಹತ್ತಿರದ ಪ್ರತಿಸ್ಪರ್ಧಿ ಟಿಎಂಸಿ ಅಭ್ಯರ್ಥಿ ಚಂದನ್ ಮಂಡಲ್ ವಿರುದ್ಧ 16,241 ಮತಗಳ ಅಂತರದಲ್ಲಿ ಗೆಲುವು ದಾಖಲಿಸಿದ್ದಾರೆ. ಕಳೆದ ಬಾರಿಯೂ ಅವರು ಬಿಜೆಪಿಯಿಂದ ಶಾಸಕರಾಗಿ ಆಯ್ಕೆಯಾಗಿದ್ದರು. 42 ವರ್ಷದ ಅಶೋಕ್ ದಿಂಡಾ 2021ರಲ್ಲಿ ಮೊಯ್ನಾ ಕ್ಷೇತ್ರದಿಂದ ಸ್ಪರ್ಧಿಸಿ ಟಿಎಂಸಿಯ ಸಂಗ್ರಾಮ್ ಕುಮಾರ್ ದೋಲೈ ಅವರನ್ನು 1,260ಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಸೋಲಿಸಿದ್ದರು.&lt;/p&gt;&lt;p data-block-key="5n7a2"&gt;2009ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದ ಅಶೋಕ್ ದಿಂಡಾ, 13 ಏಕದಿನ ಮತ್ತು9 ಟಿ20ಐ ಪಂದ್ಯಗಳಲ್ಲಿ ತಂಡವನ್ನು ಪ್ರತಿನಿಧಿಸಿದ್ದಾರೆ. ಇದರ ಜೊತೆಗೆ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ವಿವಿಧ ಫ್ರಾಂಚೈಸಿ ಪರ ಆಡಿರುವ ಅವರು 68 ವಿಕೆಟ್ ಪಡೆದಿದ್ದಾರೆ. ಕನ್ನಡಿಗರ ನೆಚ್ಚಿನ ತಂಡ ಆರ್‌ಸಿಬಿ ಪರವೂ ಆಡಿದ್ದಾರೆ. ಜೊತೆಗೆ 116 ಪ್ರಥಮ ದರ್ಜೆ ಪಂದ್ಯಗಳು ಮತ್ತು 98 ಲಿಸ್ಟ್ ಎ ಪಂದ್ಯಗಳನ್ನು ಆಡಿರುವ ಅಶೋಕ್ ದಿಂಡಾ ಕ್ರಮವಾಗಿ 420 ಮತ್ತು 151 ವಿಕೆಟ್‌ಗಳನ್ನು ಕಬಳಿಸಿದ್ದಾರೆ.&lt;/p&gt;&lt;p data-block-key="9g7q5"&gt;&lt;a href="/national/mamata-banerjee-bengal-election-defeat-loot-bjp-win-2026-77242.html"&gt;"ಲೂಟಿ, ಲೂಟಿ, ಲೂಟಿ. ನಾವು ಮತ್ತೆ ಪುಟಿದೇಳುತ್ತೇವೆ": ಬಂಗಾಳದ ಆಘಾತಕಾರಿ ಸೋಲಿಗೆ ಮಮತಾ ಬ್ಯಾನರ್ಜಿ ಹತಾಶೆ&lt;/a&gt;&lt;/p&gt;&lt;p data-block-key="8k8it"&gt;ಬಂಗಾಳದಲ್ಲಿ 2014ರ ನಂತರ ಬಿಜೆಪಿ ತಳಮಟ್ಟದಿಂದ ನೆಲೆ ಕಾಣಲು ಆರಂಭಿಸಿತು. 2019ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಅದು ಗೋಚರವಾಯಿತು. 2021ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಇನ್ನೇನು ಗೆದ್ದೇ ಬಿಟ್ಟಿತು ಎನ್ನುವಂತಹ ವಾತಾವರಣ ಕಂಡುಬಂತಾದರೂ ಅಲ್ಪಮತಗಳ ಅಂತರದ ಸೋಲುಗಳು ಮಮತಾ ದೀದಿಯನ್ನು ಅಧಿಕಾರಕ್ಕೇರಿಸಿದ್ದವು.&lt;/p&gt;&lt;p data-block-key="935m3"&gt;'ಬಿಜೆಪಿಯಿಂದ ರಾಜ್ಯದಲ್ಲಿ 100 ಸ್ಥಾನ ಲೂಟಿ, ಇದು ಅಕ್ರಮ. ಇದರ ವಿರುದ್ಧ ನಾವು ಪುಟಿದೇಳುತ್ತೇವೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ‘ಬಿಜೆಪಿ 100 ಕ್ಕೂ ಹೆಚ್ಚು ಸ್ಥಾನಗಳನ್ನು ಲೂಟಿ ಮಾಡಿದೆ. ಚುನಾವಣಾ ಆಯೋಗವು ಬಿಜೆಪಿಯ ಆಯೋಗ. ಇದು ಲೂಟಿ, ಲೂಟಿ, ಲೂಟಿ. ನಾವು ಮತ್ತೆ ಪುಟಿದೇಳುತ್ತೇವೆ’ ಎಂದು ಕಿಡಿಕಾರಿದರು.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ರಾಜ್ಯದ ಹಲವೆಡೆ ಭಾರೀ ಮಳೆ ಸೂಚನೆ; ದಕ್ಷಿಣ ಒಳನಾಡಿಗೆ ಯೆಲ್ಲೋ ಅಲರ್ಟ್‌ ಘೋಷಣೆ</title><link>https://vishwavani.news/weather/heavy-rain-forecast-in-many-parts-of-the-state-yellow-alert-declared-for-southern-interior-77258.html</link><guid>https://vishwavani.news/weather/heavy-rain-forecast-in-many-parts-of-the-state-yellow-alert-declared-for-southern-interior-77258.html</guid><pubDate>Tue, 05 May 2026 04:08:00 +0000</pubDate><description>&lt;![CDATA[Karnataka Weather:  ಕೆಲ ದಿನಗಳಿಂದ ರಾಜ್ಯದ ಹಲವೆಡೆ ಉತ್ತಮ ಮಳೆಯಾಗುತ್ತಿದ್ದು, ಇಂದೂ ಸಹ ಮುಂದುವರಿಯಲಿದೆ. ಬೆಂಗಳೂರಿನಲ್ಲಿ ಮುಂದಿನ ಮೂರು ದಿನಗಳ ಕಾಲ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.]]&gt;</description><dc:creator>&lt;![CDATA[Vishakha Bhat Heggar]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕರ್ನಾಟಕ]]&gt;</category><category>&lt;![CDATA[ಹವಾಮಾನ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Karnataka_Weather_5_g4Q3YZB.original.jpg" class="attachment-large size-large wp-post-image" alt="ರಾಜ್ಯದ ಹಲವೆಡೆ ಭಾರೀ ಮಳೆ ಸೂಚನೆ; ದಕ್ಷಿಣ ಒಳನಾಡಿಗೆ ಯೆಲ್ಲೋ ಅಲರ್ಟ್‌ ಘೋಷಣೆ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="80rii"&gt;&lt;b&gt;ಬೆಂಗಳೂರು&lt;/b&gt;: ಕೆಲ ದಿನಗಳಿಂದ ರಾಜ್ಯದ ಹಲವೆಡೆ ಉತ್ತಮ ಮಳೆಯಾಗುತ್ತಿದ್ದು, ಇಂದೂ ಸಹ ಮುಂದುವರಿಯಲಿದೆ. &lt;b&gt;(Karnataka Weather) &lt;/b&gt;ಬೆಂಗಳೂರಿನಲ್ಲಿ ಮುಂದಿನ ಮೂರು ದಿನಗಳ ಕಾಲ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದೆಲ್ಲೆಡೆ ಮುಂದಿನ ನಾಲ್ಕು ದಿನ ಮಳೆಯಾಗಲಿದ್ದು, ದಕ್ಷಿಣ ಒಳನಾಡಿನ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. &lt;/p&gt;&lt;p data-block-key="a1ild"&gt;ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಒಣ ಹವೆಯಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉತ್ತರ ಕರ್ನಾಟಕದ ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಂಭವವಿದೆ. ಇನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ತಿಳಿಸಲಾಗಿದೆ. ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಬಳ್ಳಾರಿ, ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ತುಮಕೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ 30-40 ಕಿ. ಮೀ ವೇಗದ ಗಾಳಿಯೊಂದಿಗೆ ಗುಡುಗು ಸಹಿತ ಜೋರು ಮಳೆಯಾಗಲಿದೆ. &lt;/p&gt;&lt;p data-block-key="3jaae"&gt;ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೇ 5 ರಿಂದ 11 ರ ತನಕ ಏಳೂ ದಿನ ಹಗುರ ಮಳೆ ಮತ್ತು ಗುಡುಗು ಸಾಧ್ಯ. ಉಡುಪಿಯಲ್ಲಿ ಮೇ 5 ರಿಂದ 7 ರ ತನಕ ಒಣ ಹವೆ ಇದ್ದು ಮೇ 8 ರಿಂದ ಮಳೆ ಆರಂಭ; ಉತ್ತರ ಕನ್ನಡ ಜಿಲ್ಲೆಯಲ್ಲಿ ಮೇ 8 ರಿಂದ ಮಳೆ-ಗುಡುಗು ಶುರು. ಮೇ 4 ರಿಂದ 8 ರ ತನಕ ಕರಾವಳಿಯಲ್ಲಿ ಮಳೆ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.  ದಕ್ಷಿಣ ಒಳನಾಡಿನಲ್ಲಿ ಮೇ 6 ಮತ್ತು 7 ರಂದು ಕೆಲವು ಸ್ಥಳಗಳಲ್ಲಿ 64.5 ಮಿ.ಮೀ ಮೀರಿ ಭಾರೀ ಮಳೆಯಾಗುವ  ಸಾಧ್ಯತೆಯಿದ್ದು, ಈ ಅವಧಿಯಲ್ಲಿ 30-40 ಕಿ.ಮೀ ವೇಗದ ಚಂಡಮಾರುತದ ಗಾಳಿಯೂ ಬೀಸಲಿದೆ.&lt;/p&gt;&lt;p data-block-key="5u9o9"&gt;ಮೇ 7 ಮತ್ತು 8 ರಂದು ಬೆಳಗಾವಿ, ಉತ್ತರ ಕನ್ನಡ, ಧಾರವಾಡ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದ್ದು, ಇವುಗಳನ್ನು ಹೊರತುಪಡಿಸಿ ರಾಜ್ಯದ ಉಳಿದೆಲ್ಲಾ ಜಿಲ್ಲೆಗಳಲ್ಲಿ ಮಳೆ ಮುಂದುವರಿಯಲಿದ್ದು, ಎಲ್ಲೋ ಅಲರ್ಟ್ ಜಾರಿಯಲ್ಲಿರುತ್ತದೆ. ಬೀದರ್, ಕಲಬುರ್ಗಿ, ವಿಜಯಪುರ, ಯಾದಗಿರಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಸಾಧಾರಣ ಮಳೆಯ ನಿರೀಕ್ಷೆಯಿದೆ. &lt;/p&gt;&lt;p data-block-key="3roep"&gt;&lt;/p&gt;&lt;p data-block-key="bs1ob"&gt;&lt;/p&gt;
&lt;/div&gt;
&lt;/p&gt;]]&gt;</content:encoded></item><item><title>Vishwavani Editorial: ಬಿಜೆಪಿ ತ್ರಿವಿಕ್ರಮ, ದ್ರಾವಿಡ ಗರ್ವಭಂಗ</title><link>https://vishwavani.news/sampadakeeya/%E0%B2%AC%E0%B2%9C%E0%B2%AA-%E0%B2%A4%E0%B2%B0%E0%B2%B5%E0%B2%95%E0%B2%B0%E0%B2%AE-%E0%B2%A6%E0%B2%B0%E0%B2%B5%E0%B2%A1-%E0%B2%97%E0%B2%B0%E0%B2%B5%E0%B2%AD%E0%B2%97-77257.html</link><guid>https://vishwavani.news/sampadakeeya/%E0%B2%AC%E0%B2%9C%E0%B2%AA-%E0%B2%A4%E0%B2%B0%E0%B2%B5%E0%B2%95%E0%B2%B0%E0%B2%AE-%E0%B2%A6%E0%B2%B0%E0%B2%B5%E0%B2%A1-%E0%B2%97%E0%B2%B0%E0%B2%B5%E0%B2%AD%E0%B2%97-77257.html</guid><pubDate>Tue, 05 May 2026 04:03:03 +0000</pubDate><description>&lt;![CDATA[ಜನಸಂಘದ ಮೂಲಪುರುಷರಾದ ಶ್ಯಾಮಪ್ರಸಾದ ಮುಖರ್ಜಿ ಅವರ ನೆಲದಲ್ಲಿ ಬಿಜೆಪಿ ಅಧಿಕಾರ ಕ್ಕೇರಿದೆ. ಮೂರು ಅವಧಿಗಳಿಂದ ಆಡಳಿತದಲ್ಲಿದ್ದ ಮಮತಾ ಬ್ಯಾನರ್ಜಿ ಅವರು ಮೊದಲ ಅವಧಿಯಲ್ಲಿ ಅಭಿವೃದ್ಧಿ ಮಂತ್ರ ಪಠಿಸಿದರೂ ನಂತರದ ಎರಡು ಅವಧಿಗಳಲ್ಲಿ ಅದನ್ನು ಪೂರ್ತಿ ಕೈಬಿಟ್ಟು ಪಕ್ಷದ ಕಾರ‍್ಯಕರ್ತರ ಗೂಂಡಾಗಿರಿ, ಒಕ್ಕೂಟ ಸರ್ಕಾರದ ಜೊತೆಗೆ ನಿರಂತರ ಸಂಘರ್ಷಗಳಲ್ಲಿ ತೊಡಗಿಕೊಂಡು, ಮತಎಣಿಕೆ- ಮತದಾರರ ಯಾದಿ ತಿದ್ದುಪಡಿಯಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನವನ್ನೂ ಧಿಕ್ಕರಿಸುವ ಉದ್ಧಟತನ ತೋರಿದರು.]]&gt;</description><dc:creator>&lt;![CDATA[Ashok Nayak]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಸಂಪಾದಕೀಯ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/West_Bengal_Assembly_Election.original.jpg" class="attachment-large size-large wp-post-image" alt="Vishwavani Editorial: ಬಿಜೆಪಿ ತ್ರಿವಿಕ್ರಮ, ದ್ರಾವಿಡ ಗರ್ವಭಂಗ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="378s7"&gt;ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಕೆಲವು ನಿರೀಕ್ಷಿತ, ಜತೆಗೆ ಅನಿರೀಕ್ಷಿತ ಫಲಗಳನ್ನೂ ನೀಡಿದೆ. ಮೂರು ರಾಜ್ಯಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಪಶ್ಚಿಮ ಬಂಗಾಳದಲ್ಲಿ, ಹದಿನೈದು ವರ್ಷಗಳಿಂದ ಬಿಗಿ ಹಿಡಿತ ಇಟ್ಟುಕೊಂಡಿದ್ದ ದೀದಿಯನ್ನು ಬಿಜೆಪಿ ಮಣಿಸಿದೆ. &lt;/p&gt;&lt;p data-block-key="cd7ls"&gt;ಜನಸಂಘದ ಮೂಲಪುರುಷರಾದ ಶ್ಯಾಮಪ್ರಸಾದ ಮುಖರ್ಜಿ ಅವರ ನೆಲದಲ್ಲಿ ಬಿಜೆಪಿ ಅಧಿಕಾರಕ್ಕೇರಿದೆ. ಮೂರು ಅವಧಿಗಳಿಂದ ಆಡಳಿತದಲ್ಲಿದ್ದ ಮಮತಾ ಬ್ಯಾನರ್ಜಿ ಅವರು ಮೊದಲ ಅವಧಿಯಲ್ಲಿ ಅಭಿವೃದ್ಧಿ ಮಂತ್ರ ಪಠಿಸಿದರೂ ನಂತರದ ಎರಡು ಅವಧಿಗಳಲ್ಲಿ ಅದನ್ನು ಪೂರ್ತಿ ಕೈಬಿಟ್ಟು ಪಕ್ಷದ ಕಾರ‍್ಯಕರ್ತರ ಗೂಂಡಾಗಿರಿ, ಒಕ್ಕೂಟ ಸರ್ಕಾರದ ಜೊತೆಗೆ ನಿರಂತರ ಸಂಘರ್ಷಗಳಲ್ಲಿ ತೊಡಗಿಕೊಂಡು, ಮತಎಣಿಕೆ- ಮತದಾರರ ಯಾದಿ ತಿದ್ದುಪಡಿಯಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನವನ್ನೂ ಧಿಕ್ಕರಿಸುವ ಉದ್ಧಟತನ ತೋರಿದರು.&lt;/p&gt;&lt;p data-block-key="eibm9"&gt;ಜೊತೆಗೆ ಬಾಂಗ್ಲಾ ನಿರಾಶ್ರಿತರ ಓಲೈಕೆ. ಇವೆಲ್ಲವನ್ನೂ ಮತದಾರ ಗ್ರಹಿಸಿ ಚೆನ್ನಾಗಿಯೇ ಪಾಠ ಕಲಿಸಿದ್ದಾನೆ. ಇದರ ಜೊತೆಗೆ ಆಡಳಿತ ವಿರೋಧಿ ಅಲೆ, ಬಿಜೆಪಿಯ ತಂತ್ರಗಾರಿಕೆ, ಬಾಂಗ್ಲಾ ನಿರಾಶ್ರಿತರನ್ನು ಮತದಾರರ ಯಾದಿಯಿಂದ ಹೊರಗಿಟ್ಟಿರುವುದು ಕೂಡ ಫಲ ನೀಡಿದಂತಿದೆ. &lt;/p&gt;&lt;p data-block-key="fsb8r"&gt;&lt;b&gt;ಇದನ್ನೂ ಓದಿ: &lt;/b&gt;&lt;a href="/sampadakeeya/the-reins-are-welcome-for-online-play-76988.html"&gt;Vishwavani Editorial: ಆನ್‌ಲೈನ್ ಆಟಕ್ಕೆ ಲಗಾಮು ಸ್ವಾಗತಾರ್ಹ&lt;/a&gt;&lt;/p&gt;&lt;p data-block-key="2q9pp"&gt;ಇನ್ನು ತಮಿಳುನಾಡಿನ ಫಲಿತಾಂಶ ತುಸು ಅಚ್ಚರಿ ತರುವಂಥದ್ದು. ಇಲ್ಲಿ ದ್ರಾವಿಡ ಪಕ್ಷಗಳ ರಾಜಕಾರಣವನ್ನು ಮತದಾರ ತಿರಸ್ಕರಿಸಿದ್ದಾನೆ. ಟಿವಿಕೆ ಪಕ್ಷವನ್ನು ಸ್ಥಾಪಿಸಿದ ಸಿನಿಮಾ ನಟ ವಿಜಯ ಅವರ ಗೆಲುವು, ಪಡೆದ ಸ್ಥಾನಗಳ ಸಂಖ್ಯೆ ಗಮನಾರ್ಹ. ಜೆನ್ ಝೀ ಮತದಾರರನ್ನು ವಿಜಯ್ ಸೆಳೆದಂತಿದೆ. ಕೇರಳದ ಮತದಾರರು ಅಧಿಕಾರಸ್ಥರನ್ನು ಬದಲಿಸುವ ಜಾಣತನ ತೋರಿಸಿದ್ದಾರೆ. &lt;/p&gt;&lt;p data-block-key="63r78"&gt;ಪಿಣರಾಯಿ ವಿಜಯನ್ ವರ್ಚಸ್ಸು ಮಂಕಾಗಿದ್ದು, ಕಾಂಗ್ರೆಸ್ ನೇತೃತ್ವದ ಯುಡಿಎಫ್‌ ಅನ್ನು ಆರಿಸಿಕೊಂಡಿದ್ದಾನೆ. ಇದರೊಂದಿಗೆ ಭಾರತದಲ್ಲಿದ್ದ ಕೊನೆಯ ಕಮ್ಯುನಿಸ್ಟ್ ಪಕ್ಷವನ್ನೂ ಮತದಾರ ಕೆಳಗಿಳಿಸಿದ್ದಾನೆ. ಪುದುಚೇರಿ ಹಾಗೂ ಅಸ್ಸಾಂಗಳ ಫಲಿತಾಂಶ ನಿರೀಕ್ಷಿತವೇ. ಯಾಕೆಂದರೆ ಅಲ್ಲಿ ಎನ್‌ಡಿಎಗೆ ಪ್ರಬಲವಾದ ಪ್ರತಿರೋಧ ಇರಲಿಲ್ಲ. ಅಧಿಕಾರದ ದುರುಪಯೋಗ, ಧ್ರುವೀಕರಣ ರಾಜಕೀಯದಿಂದ ಮತದಾರರು ಬೇಸತ್ತಿರುವುದು ಪ.ಬಂಗಾಳ, ತಮಿಳುನಾಡು, ಕೇರಳಗಳಲ್ಲಿ ದಾಖಲಾಗಿದೆ. &lt;/p&gt;&lt;p data-block-key="eg8hu"&gt;ಕರ್ನಾಟಕದ ೨ ವಿಧಾನಸಭೆ ಕ್ಷೇತ್ರ ಉಪಚುನಾವಣೆಯಲ್ಲಿ ಆಡಳಿತ ಕಾಂಗ್ರೆಸ್‌ಗೆ ಮತದಾರ ಜೈ ಎಂದಿದ್ದು, ಅದರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಾಯಕತ್ವ ಅಬಾಧಿತವಾಗಿದೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>Ranjith H Ashwath Column: ಕೈ ಮೌನದಾಟದ ಹಿಂದಿನ ಗುಟ್ಟೇನು ?</title><link>https://vishwavani.news/ankanagalu/what-is-the-secret-behind-the-silent--77254.html</link><guid>https://vishwavani.news/ankanagalu/what-is-the-secret-behind-the-silent--77254.html</guid><pubDate>Tue, 05 May 2026 03:54:48 +0000</pubDate><description>&lt;![CDATA[ತಮ್ಮ ಮಾತಿನಿಂದಲೇ ರಾಜಕೀಯವನ್ನು ಹಾಳು ಮಾಡಿಕೊಂಡಿರುವ ಅನೇಕ ನಾಯಕರನ್ನು ನೋಡಿ ದ್ದೇವೆ. ಆದರೆ ಮಾತನ್ನು ಎಲ್ಲಿ ಎಷ್ಟರ ಮಟ್ಟಿಗೆ ಆಡಬೇಕು? ಯಾವ ಸಮಯದಲ್ಲಿ ಮೌನ ವಾಗಿರಬೇಕು ಎನ್ನುವುದೇ ರಾಜಕೀಯ ಪಠ್ಯದ ಮೊದಲ ಪಾಠ. ಮಾತು-ಮೌನ ಎನ್ನುವ ಅಸ್ತ್ರ- ಪ್ರತ್ಯಸ್ತ್ರದ ನಡುವೆ ಇರುವ ಸಣ್ಣ ಅಂತರವನ್ನು ಅರಿಯುವುದೇ ಮುತ್ಸದ್ದಿ ರಾಜಕಾರಣಿಯ ಮೊದಲ ಗುಣ ಎನ್ನುವುದು ರಾಜಕೀಯ ಮೊಗಸಾಲೆಯಲ್ಲಿರುವ ಮಾತು.]]&gt;</description><dc:creator>&lt;![CDATA[ರಂಜಿತ್​ ಎಚ್​ ಅಶ್ವತ್ಥ್]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಅಂಕಣಗಳು]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Ranjith_h_A_05.original.jpg" class="attachment-large size-large wp-post-image" alt="Ranjith H Ashwath Column: ಕೈ ಮೌನದಾಟದ ಹಿಂದಿನ ಗುಟ್ಟೇನು ?" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="vf0su"&gt;&lt;b&gt;ಅಶ್ವತ್ಥಕಟ್ಟೆ&lt;/b&gt;&lt;/p&gt;&lt;p data-block-key="eh907"&gt;‘ಮಾತು ಬೆಳ್ಳಿ-ಮೌನ ಬಂಗಾರ’ ಎನ್ನುವುದು ನಾಣ್ಣುಡಿಯಿದ್ದರೂ, ರಾಜಕೀಯದಲ್ಲಿರುವವರಿಗೆ ಮಾತ್ರ ಮಾತೇ ಬಂಡವಾಳ. ಮಾತೊಂದಿದ್ದರೆ ಯಾರನ್ನಾದರೂ ಗೆಲ್ಲಬಹುದು, ರಾಜಕೀಯವಾಗಿ ಯಾವ ಹಂತಕ್ಕಾದರೂ ಹೋಗಬಹುದು ಎನ್ನುವುದಕ್ಕೆ ಹಲವು ಉದಾಹರಣೆಗಳಿವೆ. ಈ ಮಾತು ಎನ್ನುವುದು ಸಾರ್ವಜನಿಕ ಜೀವನದಲ್ಲಿ ಅಸ್ತ್ರ ಎನ್ನುವುದು ಎಷ್ಟು ದಿಟವೋ, ಅದೇ ಮಾತು ಅನೇಕ ಸಮಯದಲ್ಲಿ ತಿರುಗುಬಾಣವಾಗಿರುವುದನ್ನು ನೋಡಿದ್ದೇವೆ.&lt;/p&gt;&lt;p data-block-key="8kns2"&gt;ತಮ್ಮ ಮಾತಿನಿಂದಲೇ ರಾಜಕೀಯವನ್ನು ಹಾಳು ಮಾಡಿಕೊಂಡಿರುವ ಅನೇಕ ನಾಯಕರನ್ನು ನೋಡಿದ್ದೇವೆ. ಆದರೆ ಮಾತನ್ನು ಎಲ್ಲಿ ಎಷ್ಟರ ಮಟ್ಟಿಗೆ ಆಡಬೇಕು? ಯಾವ ಸಮಯದಲ್ಲಿ ಮೌನ ವಾಗಿರಬೇಕು ಎನ್ನುವುದೇ ರಾಜಕೀಯ ಪಠ್ಯದ ಮೊದಲ ಪಾಠ. ಮಾತು-ಮೌನ ಎನ್ನುವ ಅಸ್ತ್ರ- ಪ್ರತ್ಯಸ್ತ್ರದ ನಡುವೆ ಇರುವ ಸಣ್ಣ ಅಂತರವನ್ನು ಅರಿಯುವುದೇ ಮುತ್ಸದ್ದಿ ರಾಜಕಾರಣಿಯ ಮೊದಲ ಗುಣ ಎನ್ನುವುದು ರಾಜಕೀಯ ಮೊಗಸಾಲೆಯಲ್ಲಿರುವ ಮಾತು.&lt;/p&gt;&lt;p data-block-key="628hq"&gt;ಸದ್ಯ ನಾಯಕನ ಬದಲಾವಣೆ, ಸಚಿವ ಸಂಪುಟ ಪುನಾರಚನೆ, ಮುಖ್ಯಮಂತ್ರಿ ಬದಲಾವಣೆ ಸೇರಿದಂತೆ ಹತ್ತು ಹಲವು ಗೊಂದಲದ ಗೂಡಾಗಿರುವ ಕರ್ನಾಟಕ ಕಾಂಗ್ರೆಸ್‌ನಲ್ಲಿಯೂ ಇದೇ ಮಾತು-ಮೌನದ ನಡುವೆ ಗುದ್ದಾಟ ನಡೆಯುತ್ತಿದೆ.&lt;/p&gt;&lt;p data-block-key="5r66d"&gt;ನಾಯಕತ್ವ ಬದಲಾವಣೆಯ ಆರಂಭದಲ್ಲಿ ‘ಮಾತಿಗೆ- ಪ್ರತಿಮಾತು’ ನಡೆಯುತ್ತಿತ್ತು. ಆದರೀಗ ಮಾತಿಗೆ ಮೌನದ ಉತ್ತರ, ಮೌನವಾಗಿದ್ದರೆ ಮಾತಿನಿಂದ ತಿವಿಯುವ ತಂತ್ರಗಾರಿಕೆ ನಡೆಯುತ್ತಿರುವು ದನ್ನು ನೋಡಬಹುದಾಗಿದೆ. ನಾಯಕತ್ವ ಬದಲಾವಣೆಯ ವಿಷಯ ಮುನ್ನಲೆಗೆ ಬಂದ ಸಮಯ ದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಆಪ್ತರ ನಡುವಿನ ಮಾತಿನ ಮೇಲಾಟ, ಕಳೆದ ಒಂದು ತಿಂಗಳಿಂದ ತಕ್ಕಮಟ್ಟಿಗೆ ತಗ್ಗಿದೆ.&lt;/p&gt;&lt;p data-block-key="f1j8"&gt;ಅದರಲ್ಲಿಯೂ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಇಬ್ಬರೂ ನಾಯಕತ್ವ ಬದಲಾವಣೆ ವಿಷಯದಲ್ಲಿ ‘ಮೌನ’ಕ್ಕೆ ಶರಣಾಗಿರುವ ಹಿಂದಿನ ಗುಟ್ಟೇನು ಎನ್ನುವುದೇ ಈಗಿರುವ ಬಹುದೊಡ್ಡ ಪ್ರಶ್ನೆಯಾಗಿದೆ.&lt;/p&gt;&lt;p data-block-key="bt08q"&gt;&lt;b&gt;ಇದನ್ನೂ ಓದಿ: &lt;/b&gt;&lt;a href="/ankanagalu/taking-an-exam-is-not-just-about-passing0-76599.html"&gt;Ranjith H Ashwath Column: ಪರೀಕ್ಷೆ ನಡೆಸೋದು ಬರೀ ಪಾಸ್‌ ಮಾಡೋಕಲ್ಲ !&lt;/a&gt;&lt;/p&gt;&lt;p data-block-key="fp2gd"&gt;ಸಿದ್ದರಾಮಯ್ಯ ನೇತೃತ್ವದಲ್ಲಿ ಅಧಿಕಾರಕ್ಕೆ ಏರಿದ ರಾಜ್ಯ ಕಾಂಗ್ರೆಸ್ ಸರಕಾರಕ್ಕೆ ಎರಡುವರೆ ವರ್ಷ ತುಂಬು ಹೊಸ್ತಿಲಿನಲ್ಲಿ ಡಿ.ಕೆ.ಶಿವಕುಮಾರ್ ಹಾಗೂ ಆಪ್ತರಿಂದ ಈ ಗೊಂದಲ ಶುರುವಾಗಿತ್ತು. ಮಾಡಿದ್ದ ಕೆಲಸಕ್ಕೆ ಕೂಲಿ ಕೇಳುತ್ತೇವೆ ಎನ್ನುವ ಮಾತು ಆ ಕಡೆಯಿಂದ ಬರುತ್ತಿದ್ದಂತೆ ಸಿದ್ದರಾಮಯ್ಯ ಆಪ್ತರು, ದಲಿತ ಸಿಎಂ, ಸಿದ್ದರಾಮಯ್ಯ ಪೂರ್ಣಾವಧಿ ಮುಖ್ಯಮಂತ್ರಿ ಎನ್ನುವ ಹೇಳಿಕೆಯನ್ನು ಶುರುಮಾಡಿದ್ದರು.&lt;/p&gt;&lt;p data-block-key="8agqe"&gt;ಈ ವಿಷಯದಲ್ಲಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಕೆ.ಸಿ.ವೇಣುಗೋಪಾಲ್ ಅದಾದ ಬಳಿಕ ಸ್ವತಃ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಮೌನವಾಗಿರಿ ಎನ್ನುವ ಸಂದೇಶ ನೀಡಿದ್ದರೂ ಮಾತಿನ ಮೇಲಾಟಕ್ಕೆ ಬ್ರೇಕ್ ಬಿದ್ದಿರಲಿಲ್ಲ.&lt;/p&gt;&lt;p data-block-key="3c9i0"&gt;ಸುಮಾರು ನಾಲ್ಕೈದು ತಿಂಗಳಿನಿಂದ ಶುರುವಾದ ಮುಖ್ಯಮಂತ್ರಿ ಬದಲಾವಣೆಯ ಚರ್ಚೆ ಅಲ್ಲಿಂದ ಮುಂದಕ್ಕೆ ಹೋಗಿಲ್ಲ ಎನ್ನುವುದು ವಾಸ್ತವ. ಆದರೆ ಈ ಅವಧಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮ ಯ್ಯ ಅವರು, ‘ನಾನೇ ಐದು ವರ್ಷ ಮುಖ್ಯಮಂತ್ರಿ’ ಎನ್ನುವ ಹೇಳಿಕೆಯಿಂದ ‘ಹೈಕಮಾಂಡ್ ಹೇಳಿದ ಕ್ಷಣವೇ ರಾಜೀನಾಮೆ ನೀಡುವೆ’ ಎನ್ನುವ ತನಕ ಬಂದು ನಿಂತರೆ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ದಿನಕ್ಕೊಂದು ಗೂಡಾರ್ಥದ ಹೇಳಿಕೆಗಳನ್ನು ನೀಡುತ್ತಾ ವಿಷಯ ಜೀವಂತವಾಗಿಡುವ ಪ್ರಯತ್ನ ನಿರಂತರವಾಗಿ ಮಾಡಿಕೊಂಡು ಬಂದಿದ್ದಾರೆ.&lt;/p&gt;&lt;p data-block-key="cfs5v"&gt;ಈ ನಡುವೆ ಪಂಚರಾಜ್ಯ ಚುನಾವಣೆಯ ನೆಪದಲ್ಲಿ ಈ ಎಲ್ಲವನ್ನು ಬದಿಗಿಟ್ಟು ಚುನಾವಣೆ ಕೆಲಸ ಮಾಡಿ ಎನ್ನುವ ಸಂದೇಶವನ್ನು ಹೈಕಮಾಂಡ್ ನೀಡಿದ ಬಳಿಕ ಮೌನಕ್ಕೆ ನಾಯಕರಿಬ್ಬರು ಶರಣಾದರು. ನಾಯಕರು ಮೌನಕ್ಕೆ ಶರಣಾದರೂ ಅವರ ಬೆಂಬಲಿಗರು, ಆಪ್ತರು ವಿವಾದವನ್ನು ಜೀವಂತವಾಗಿಡಲು ದಿನಕ್ಕೊಂದು ಹೇಳಿಕೆ ನೀಡಿಕೊಂಡೇ ಬಂದಿದ್ದಾರೆ.&lt;/p&gt;&lt;p data-block-key="ddq9c"&gt;ಡಿ.ಕೆ.ಶಿವಕುಮಾರ್ ಆಪ್ತರು, ಡಿಕೆ ಜನ್ಮದಿನಕ್ಕೆ ಬರ್ತ್‌ಡೇ ‘ಗಿಫ್ಟ್’ ಸಿಗಲಿದೆ ಎಂದು ಹೇಳಿ‌ ಕೊಳ್ಳುತ್ತಿದ್ದರೆ, ಇನ್ನೊಂದೆಡೆ ಸಿದ್ದರಾಮಯ್ಯ ಅವರು ಅಹಿಂದ ಯಾತ್ರೆ, ಸರಕಾರಕ್ಕೆ ಮೂರು ವರ್ಷ ಎನ್ನುವ ಸಂಭ್ರಮಾಚರಣೆಗೆ ಸಕಲ ಸಿದ್ಧತೆ ಆರಂಭಿಸಿದ್ದಾರೆ. ಎರಡೂ ಕಡೆಯಿಂದ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದರೂ, ಸಿದ್ದು-ಡಿಕೆ ಮಾತ್ರ ಇದಕ್ಕೂ ನಮಗೂ ಸಂಬಂಧವಿಲ್ಲ ಎನ್ನುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ.&lt;/p&gt;&lt;p data-block-key="avkb6"&gt;ಸಿದ್ದರಾಮಯ್ಯನವರಂತೂ ಕಳೆದೊಂದು ವಾರದಿಂದ ಯಾವುದೇ ಪ್ರತಿಕ್ರಿಯೆ ನೀಡದೇ ‘ಮೌನ’ ವಾಗಿದ್ದುಕೊಂಡೇ ತಮ್ಮ ದಾಳವನ್ನು ಉರುಳಿಸುವಲ್ಲಿ ನಿರತರಾಗಿದ್ದಾರೆ. ಆದರೆ ಈಗ ಹೂಡಿರುವ ದಾಳ ಯಾರಿಗೆ ಲಾಭ ಎನ್ನುವುದು ಮಾತ್ರ ತಿಳಿಯುತ್ತಿಲ್ಲ.&lt;/p&gt;&lt;p data-block-key="dj8fr"&gt;ಮುಖ್ಯಮಂತ್ರಿ ಸಿದ್ದರಾಮಯ್ಯ ಅಥವಾ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಬ್ಬರೂ ತಮ್ಮ ತಮ್ಮ ನಡೆಯ ಗುಟ್ಟನ್ನು ಬಿಟ್ಟುಕೊಡುತ್ತಿಲ್ಲ. ತಮ್ಮ ಆಪ್ತರ ಮೂಲಕ ದಾಳಗಳನ್ನು ಉರುಳಿಸು ತ್ತಿದ್ದರೂ, ಆ ದಾಳಗಳು ಸರಿಯಾದ ದಾರಿಯಲ್ಲಿಯೇ ಸಾಗುತ್ತಿವೆಯೇ ಎನ್ನುವ ಬಗ್ಗೆ ಸ್ಪಷ್ಟನೆ ಆಪ್ತರಿಗೂ ನೀಡುತ್ತಿಲ್ಲ.&lt;/p&gt;&lt;p data-block-key="38dfd"&gt;ಅದರಲ್ಲಿಯೂ ಕಳೆದ ವಾರ ದೆಹಲಿಗೆ ತೆರಳಿದ್ದ ಡಿ.ಕೆ.ಶಿವಕುಮಾರ್, ತಮ್ಮೊಂದಿಗೆ ತಮ್ಮ ಸಹೋದರ ಡಿ.ಕೆ.ಸುರೇಶ್ ಅವರ ಹೊರತಾಗಿಯೂ ಇನ್ಯಾರನ್ನು ಕರೆದುಕೊಂಡು ಹೋಗದೇ ಇರುವುದು, ಅಲ್ಲಿ ಯಾವ ನಾಯಕರನ್ನು ಭೇಟಿಯಾಗಿದ್ದಾರೆ ಎನ್ನುವ ಬಗ್ಗೆ ಸ್ಪಷ್ಟನೆ ನೀಡದೇ ಇರುವುದರ ಹಿಂದೆ ರಾಜಕೀಯ ಲೆಕ್ಕಾಚಾರಗಳಿವೆ ಎನ್ನುವುದು ಸ್ಪಷ್ಟ.&lt;/p&gt;&lt;p data-block-key="6ogft"&gt;ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರನ್ನು ಭೇಟಿಯಾಗುವ ಕಾರಣಕ್ಕೆ ದೆಹಲಿಗೆ ತೆರಳು ತ್ತಿರುವುದಾಗಿ ಡಿ.ಕೆ.ಶಿವಕುಮಾರ್ ತಮ್ಮ ಆಪ್ತರ ಬಳಿ ಹೇಳಿಕೊಂಡು ಹೋಗುವಾಗಲೇ ಅವರಿಗೆ ಅಲ್ಲಿ ರಾಹುಲ್ ಸಿಗುವುದಿಲ್ಲ ಎನ್ನುವ ಖಾತ್ರಿ ಇತ್ತು. ಆದರೂ ದೆಹಲಿಗೆ ಹೋಗಿದ್ದು, ಎರಡು ದಿನ ಅಲ್ಲಿಯೇ ಉಳಿದುಕೊಳ್ಳುವುದರ ಹಿಂದಿನ ಕಾರಣವೇ ಮೌನವಾಗಿಯೇ ‘ಸಂದೇಶ’ ರವಾನೆ ಮಾಡುವುದಾಗಿತ್ತು.&lt;/p&gt;&lt;p data-block-key="undr"&gt;ಪಂಚರಾಜ್ಯ ಚುನಾವಣಾ ಫಲಿತಾಂಶದ ಹೊಸ್ತಿಲಿನಲ್ಲಿ ಕರ್ನಾಟಕ ನಾಯಕತ್ವದ ಬಗ್ಗೆ ಚರ್ಚಿಸಿ ದರೆ ಅದು ಪಕ್ಷದ ನಾಯಕರ ಮನಸ್ಸಿಗೆ ನಾಟುವುದಿಲ್ಲ ಎನ್ನುವುದು ಡಿಕೆಶಿಗೆ ತಿಳಿದಿರಲಿಲ್ಲ ಎಂದೇನಿಲ್ಲ. ಆದರೂ ದೆಹಲಿ ಭೇಟಿಯ ಹಿಂದೆ ನೀಡಬೇಕಾಗಿರುವ ಸಂದೇಶವನ್ನು ನೀಡಿ ವಾಪಸಾಗುವುದಷ್ಟೇ ಆಗಿತ್ತು.&lt;/p&gt;&lt;p data-block-key="a22dr"&gt;ದೆಹಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ, ಕೆ.ಸಿ. ವೇಣುಗೋಪಾಲ್ ಭೇಟಿಯ ಹಿಂದೆ ಇದೇ ರಣತಂತ್ರ ವಿತ್ತು ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ. ಡಿಕೆ ಸಹೋದರರು ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಚರ್ಚಿಸುವ ವೇಳೆ, 2023ರ ಚುನಾವಣೆಯ ಬಳಿಕ ಖರ್ಗೆ ನಿವಾಸದಲ್ಲಿ ನಡೆದ ಗೌಪ್ಯ ಸಭೆಯ ವೇಳೆ ನೀಡಿದ್ದ ‘ಭರವಸೆ’ಗಳನ್ನು ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ.&lt;/p&gt;&lt;p data-block-key="8s51q"&gt;ಮುಖ್ಯಮಂತ್ರಿ ಸ್ಥಾನದ ಮೇಲೆ ಕ್ಲೇಮ್ ಮಾಡುತ್ತಿರುವ ಡಿ.ಕೆ.ಶಿವಕುಮಾರ್ ಅವರು, ರಾಹುಲ್ ಗಾಂಧಿ ಅವರು ಮೈಸೂರಿಗೆ ಆಗಮಿಸಿದಾಗ ವಿಷಯ ಪ್ರಸ್ತಾಪಿಸಿದ್ದು, ‘ವಿಲ್ ಕಾಲ್ ಯೂ ಸೂನ್’ ಎನ್ನುವ ಭರವಸೆಯನ್ನು ರಾಹುಲ್ ನೀಡಿದ್ದು ಸಾರ್ವಜನಿಕ ವಲಯದಲ್ಲಿರುವ ವಿಷಯ. ಆದರೆ ದೆಹಲಿ ಮೂಲಗಳ ಪ್ರಕಾರ, ರಾಹುಲ್ ಗಾಂಧಿ ಅವರ ಮಟ್ಟದಲ್ಲಿ ಈವರೆಗೆ ನಾಯಕತ್ವ ಬದಲಾವಣೆ ವಿಷಯದ ಬಗ್ಗೆ ಗಂಭೀರ ಚರ್ಚೆಗಳೇ ನಡೆದಿಲ್ಲ. ನನ್ನ ಬಳಿ ಯಾವುದೇ ಚರ್ಚೆಗಳು ನಡೆಯದೇ ಇರುವಾಗ ಅದರ ಬಗ್ಗೆ ನಾನೇಕೆ ತಲೆಕೆಡಿಸಿಕೊಳ್ಳಲಿ ಎನ್ನುವ ಮನಸ್ಥಿತಿಯಲ್ಲಿ ರಾಹುಲ್ ಗಾಂಧಿ ಇದ್ದರಂತೆ.&lt;/p&gt;&lt;p data-block-key="63g3h"&gt;ಇದಕ್ಕೆ ಪೂರಕ ಎನ್ನುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ‘ಸಿಎಂ ಬದಲಾವಣೆ ಪ್ರಸ್ತಾಪವೇ ಇಲ್ಲ’ ಎಂದು ಕಲಬುರಗಿಯಲ್ಲಿ ಹೇಳಿದ್ದಾರೆ. ಶಾಸಕ, ಸಚಿವರ ಪರೇಡ್, ಡಿಕೆಶಿ-ಸಿದ್ದರಾಮಯ್ಯ ಮೌನದಾಟದ ನಡುವೆ ಮುಖ್ಯಮಂತ್ರಿ ಬದಲಾವಣೆ ವಿಷಯದಲ್ಲಿ ಹೈಕಮಾಂಡ್ ನಿಲುವೇನು ಎನ್ನುವ ಕುತೂಹಲ ಅನೇಕರಲ್ಲಿತ್ತು. ಆದರೆ ಈ ಎಲ್ಲ ಕುತೂಹಲಗಳಿಗೆ ಕಲಬುರಗಿ ಯಿಂದಲೇ ಸ್ಪಷ್ಟನೆ ನೀಡಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿ ಬದಲಾವಣೆ ವಿಷಯದಲ್ಲಿ ಯಾವುದೇ ಚರ್ಚೆಗಳು ನಡೆದಿಲ್ಲ ಎಂದಿದ್ದರು.&lt;/p&gt;&lt;p data-block-key="es5dr"&gt;ಅದಾದ ಮರುದಿನವೇ ‘ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಬಗ್ಗೆ ಸದ್ಯಕ್ಕೆ ಯಾವುದೇ ದಿನಾಂಕ ನಿಗದಿಯಾಗಿಲ್ಲ. ಈ ಕುರಿತ ಅಂತಿಮ ನಿರ್ಧಾರವನ್ನು ಪಕ್ಷದ ಹೈಕಮಾಂಡ್ ತೆಗೆದು ಕೊಳ್ಳಲಿದೆ’ ಎನ್ನುವ ಮೂಲಕ ಈ ವಿಷಯ ಸದ್ಯಕ್ಕೆ ಅಪ್ರಸ್ತುತ ಎನ್ನುವ ಸಂದೇಶ ರವಾನಿಸಿದ್ದಾರೆ.&lt;/p&gt;&lt;p data-block-key="d6tcj"&gt;ಮಲ್ಲಿಕಾರ್ಜುನ ಖರ್ಗೆ ಅವರು ಈ ಹೇಳಿಕೆ ನೀಡುವ ಮೊದಲು ಡಿ.ಕೆ.ಶಿವಕುಮಾರ್ ಅವರು ದೆಹಲಿಯಲ್ಲಿ ನಿಂತು ‘ನಾನು ಇಲ್ಲಿ ಗಾಳಿ ಕುಡಿಯಲು ಬಂದಿಲ್ಲ. ಪಕ್ಷದ ನಾಯಕರನ್ನು ಭೇಟಿ ಯಾಗಲು ಬಂದಿದ್ದೇನೆ. ಯಾರನ್ನು ಭೇಟಿಯಾದೆ ಎನ್ನುವುದನ್ನು ಬಹಿರಂಗಪಡಿಸುವುದಿಲ್ಲ’ ಎನ್ನುವ ಮೂಲಕ ನಾಯಕತ್ವ ಬದಲಾವಣೆಯ ವಿಷಯ ಜೀವಂತವಾಗಿಡುವ ಪ್ರಯತ್ನವನ್ನು ಮಾಡಿದ್ದರು. ಇದರೊಂದಿಗೆ ಸಿದ್ದರಾಮಯ್ಯ ಬಣಕ್ಕಿಂತ ಒಂದು ಹೆಜ್ಜೆ ಮುಂದಿದ್ದೇವೆ ಎನ್ನುವ ಸಂದೇಶ ರವಾನಿಸಲು ಪ್ರಯತ್ನಿಸಿದ್ದರು.&lt;/p&gt;&lt;p data-block-key="7ms8b"&gt;ಇದರ ಬೆನ್ನಲ್ಲೇ, ಸತೀಶ್ ಜಾರಕಿಹೊಳಿ, ಮಹದೇವಪ್ಪ ದೆಹಲಿ ಪರೇಡ್ ನಡೆಸಿ ‘ಅಹಿಂದ’ ವರ್ಗದವರನ್ನು ಪಕ್ಷದ ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಿ ಎಂದರೆ, ಬೆಂಗಳೂರಿನಲ್ಲಿಯೇ ಕೂತು ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಿಎಂ ಮಾಡಿದರೆ ಅಭ್ಯಂತರವಿಲ್ಲ ಎನ್ನುವ ಸಂದೇಶವನ್ನು ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರ ಮೂಲಕ ಪಕ್ಷದ ಹೈಕಮಾಂಡ್‌ಗೆ ಕಳುಹಿಸುವ ಪ್ರಯತ್ನ ಮಾಡಿದರು.&lt;/p&gt;&lt;p data-block-key="fe6ih"&gt;ಇಷ್ಟೆಲ್ಲ ಚರ್ಚೆಗಳ ಹೊರತಾಗಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೌನಕ್ಕೆ ಶರಣಾಗಿರುವುದು ಹಲವು ರೀತಿಯ ವಿಶ್ಲೇಷಣೆಗೆ ಮುನ್ನುಡಿ ಬರೆದಿದೆ ಎಂದರೆ ತಪ್ಪಾಗುವುದಿಲ್ಲ. ಈ ಎಲ್ಲದರ ಹೊರತಾಗಿಯೂ ಪಂಚರಾಜ್ಯ ಚುನಾವಣೆಯಲ್ಲಿ ತಕ್ಕಮಟ್ಟಿಗೆ ಸೀಟುಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದರೆ ಆ ಖುಷಿಯಲ್ಲಿ ಯಾವುದಾದರೂ ತೀರ್ಮಾನ ಕೈಗೊಳ್ಳುವ ರಿಸ್ಕ್ ತೆಗೆದು ಕೊಳ್ಳುವ ಸಾಧ್ಯತೆಯಿತ್ತು.&lt;/p&gt;&lt;p data-block-key="88t5q"&gt;ಅದರಲ್ಲಿಯೂ ಅಸ್ಸಾಂ ವಿಧಾನಸಭಾ ಚುನಾವಣಾ ಉಸ್ತುವಾರಿಯಾಗಿದ್ದ ಡಿ.ಕೆ.ಶಿವಕುಮಾರ್, ಆ ಗೆಲುವನ್ನೇ ಮುಂದಿಟ್ಟುಕೊಂಡು ಮತ್ತೊಮ್ಮೆ ಕೂಲಿ ಕೇಳುವ ಮಹತ್ವಾಕಾಂಕ್ಷೆ ಹೊಂದಿದ್ದರು. ಆದರೆ ಅಸ್ಸಾಂನಲ್ಲಿ 16-17ರ ಆಸುಪಾಸಿಗೆ ಬಂದು ನಿಂತಿರುವುದರಿಂದ ಆ ಕೂಲಿಯನ್ನು ಕೇಳಲು ಸಾಧ್ಯವಿಲ್ಲ.&lt;/p&gt;&lt;p data-block-key="9jgpj"&gt;ಪಂಚರಾಜ್ಯ ಚುನಾವಣೆಯ ಫಲಿತಾಂಶದ ಬಗ್ಗೆ ಕಾಂಗ್ರೆಸ್ ನಾಯಕರು ಯಾವುದೇ ಹೇಳಿಕೆ ನೀಡಲಿ, ಪಶ್ಚಿಮ ಬಂಗಾಳ, ಅಸ್ಸಾಂ ಪುದುಚೇರಿಯಲ್ಲಿ ಕಾಂಗ್ರೆಸ್ ಯಾವುದೇ ನಿರೀಕ್ಷೆಯನ್ನಿಟ್ಟು ಕೊಂಡಿರಲಿಲ್ಲ. ಇನ್ನು ಕೇರಳದಲ್ಲಿ ನಿರೀಕ್ಷೆಯಂತೆ ಯುಡಿಎಫ್ ಮೈತ್ರಿಯಲ್ಲಿ ಅಧಿಕಾರದ ಗದ್ದುಗೆ ಹಿಡಿದಿದೆ.&lt;/p&gt;&lt;p data-block-key="et213"&gt;ತಮಿಳುನಾಡಿನಲ್ಲಿ ಎಲ್ಲರ ನಿರೀಕ್ಷೆ‌ ಮೀರಿ ವಿಜಯ್ ಪಕ್ಷ ಅಧಿಕಾರದ ಗದ್ದುಗೆ ಹಿಡಿದಿರುವುದರಿಂದ ಕಾಂಗ್ರೆಸ್‌ಗೆ ಬಹುದೊಡ್ಡ ಲಾಸ್ ಎನ್ನುವುದೇನು ಆಗಿಲ್ಲ. ಆದರೆ ಈ ಚುನಾವಣೆಯ ಫಲಿತಾಂಶ ವನ್ನು ಮುಂದಿಟ್ಟುಕೊಂಡು ಕರ್ನಾಟಕ ರಾಜಕೀಯ ವಿಷಯದಲ್ಲಿ ಹೈಕಮಾಂಡ್ ಕೆಲ ದಿನಗಳ ‘ಮೌನ’ ಮುಂದುವರೆಸಿದರೂ ಅಚ್ಚರಿ ಪಡಬೇಕಿಲ್ಲ.&lt;/p&gt;&lt;p data-block-key="e153d"&gt;ಏಕೆಂದರೆ, ದೇಶದ ಬಹುಪಾಲು ರಾಜ್ಯಗಳಲ್ಲಿ ನೆಲೆ ಕಳೆದುಕೊಂಡಿರುವ ಕಾಂಗ್ರೆಸ್ ಪಾಲಿಗೆ ಕರ್ನಾಟಕ ‘ಆಮ್ಲಜನಕ’ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಕರ್ನಾಟಕ ಹೊರತುಪಡಿಸಿ ತೆಲಂಗಾಣ, ಹಿಮಾಚಲ ಪ್ರದೇಶದಲ್ಲಿ ಸ್ವತಂತ್ರವಾಗಿ ಅಧಿಕಾರದಲ್ಲಿದೆ. ಆದರೆ ‘ಸಂಪನ್ಮೂಲ’ದ ಲೆಕ್ಕದಲ್ಲಿ ತೆಲಂಗಾಣ, ಹಿಮಾಚಲ ಪ್ರದೇಶ ರಾಜ್ಯಗಳು ಹೇಳಿಕೊಳ್ಳುವಷ್ಟು ಸ್ಥಿತಿಯಲ್ಲಿಲ್ಲ. ಆದ್ದರಿಂದ ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರಕಾರಕ್ಕೆ ಸಣ್ಣ ಏರುಪೇರಾದರೂ ಅದರ ನೇರ ಹೊಡೆತ ಕಾಂಗ್ರೆಸ್‌ನ ಒಟ್ಟಾರೆ ಲೆಕ್ಕಾಚಾರದ ಮೇಲೆ ಆಗುತ್ತದೆ.&lt;/p&gt;&lt;p data-block-key="ct3b7"&gt;ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ಗೆ ಪೂರಕವಾಗಿರುವ ಇನ್ನೊಂದು ರಾಜ್ಯ ಕಾಣಿಸುತ್ತಿಲ್ಲ. ಆದ್ದರಿಂದ ಕರ್ನಾಟಕದಲ್ಲಿ ನಾಯಕತ್ವ ಬದಲಾಯಿಸಿದರೂ, ಬದಲಾಯಿಸದಿದ್ದರೂ ಸಮಸ್ಯೆ. ಇದೇ ರೀತಿ ಸಂಪುಟ ಪುನಾರಚನೆ ಮಾಡಿದರೂ ಹೊಡೆತ, ಮಾಡದೇ ಮುಂದೂಡಿದರೂ ಹೊಡೆತ ಎನ್ನುವ ಅರಿವು ದೆಹಲಿ ನಾಯಕರಿಗೆ. ಅದರಿಂದ ಆಗಬಹುದಾದ ಲಾಭ-ನಷ್ಟವನ್ನು ಭರಿಸುವ, ನಿಭಾಯಿಸುವ ಶಕ್ತಿ ಇಂದಿನ ಹೈಕಮಾಂಡ್‌ಗೆ ಇದೆಯೇ? ಎನ್ನುವುದೇ ಈಗಿರುವ ಯಕ್ಷಪ್ರಶ್ನೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>Vijay: ತಮಿಳುನಾಡಲ್ಲಿ ದಳಪತಿ ಕೀರ್ತಿ ಪತಾಕೆ; ಮೊದಲ ಬಾರಿಗೆ ಫ್ಯಾನ್ಸ್‌ ಮುಂದೆ ಬಂದ ವಿಜಯ್‌!</title><link>https://vishwavani.news/movies/vijay-makes-first-appearance-after-tvk-scripts-historic-performance-in-2026-greets-fans-77256.html</link><guid>https://vishwavani.news/movies/vijay-makes-first-appearance-after-tvk-scripts-historic-performance-in-2026-greets-fans-77256.html</guid><pubDate>Tue, 05 May 2026 03:53:16 +0000</pubDate><description>&lt;![CDATA[Vijay: ನಟ-ರಾಜಕಾರಣಿ ವಿಜಯ್ ಅವರ ಟಿವಿಕೆ (TVK) ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಮುಂಚೂಣಿಯಲ್ಲಿದೆ. ದಶಕಗಳಿಂದ ರಾಜ್ಯದ ಎರಡು ಪ್ರಮುಖ ಪಕ್ಷಗಳಾದ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಮತ್ತು ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಎರಡನ್ನೂ ಸೋಲಿಸುವ ಮೂಲಕ ಟಿವಿಕೆ ಗೆದ್ದಿದೆ.  ಸೋಮವಾರ ಸಂಜೆ, ಚೆನ್ನೈನಲ್ಲಿರುವ  ತಮ್ಮ ಪೋಷಕರ ನಿವಾಸದ ಹೊರಗೆ ನೂರಾರು ಬೆಂಬಲಿಗರನ್ನು ಸ್ವಾಗತಿಸಲು ವಿಜಯ್ ಮೊದಲ ಬಾರಿಗೆ ಕಾಣಿಸಿಕೊಂಡರು.]]&gt;</description><dc:creator>&lt;![CDATA[Yashaswi Devadiga]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಮನರಂಜನೆ]]&gt;</category><category>&lt;![CDATA[ಸಿನಿಮಾ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Vijay_makes_first_appearance_after_TVK_scripts_.original.jpg" class="attachment-large size-large wp-post-image" alt="Vijay: ತಮಿಳುನಾಡಲ್ಲಿ ದಳಪತಿ ಕೀರ್ತಿ ಪತಾಕೆ; ಮೊದಲ ಬಾರಿಗೆ ಫ್ಯಾನ್ಸ್‌ ಮುಂದೆ ಬಂದ ವಿಜಯ್‌!" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="s4ksr"&gt;ತಮಿಳುನಾಡು ರಾಜಕೀಯಕ್ಕೆ &lt;a href="/movies/vijay-sangeeta-divorce-case-tamil-nadu-court-postpones-hearing-for-the-second-time-75852.html"&gt;ನಟ ವಿಜಯ್&lt;/a&gt; (Actor-turned politician Vijay) ಭರ್ಜರಿಯಾಗಿಯೇ ಎಂಟ್ರಿ ಕೊಟ್ಟಿದ್ದಾರೆ. 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ನಟ-ರಾಜಕಾರಣಿ ವಿಜಯ್ ಅವರ ಟಿವಿಕೆ (TVK) ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಮುಂಚೂಣಿಯಲ್ಲಿದೆ. ದಶಕಗಳಿಂದ ರಾಜ್ಯದ ಎರಡು ಪ್ರಮುಖ ಪಕ್ಷಗಳಾದ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಮತ್ತು ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಎರಡನ್ನೂ ಸೋಲಿಸುವ ಮೂಲಕ ಟಿವಿಕೆ ಗೆದ್ದಿದೆ.  ಸೋಮವಾರ ಸಂಜೆ, ಚೆನ್ನೈನಲ್ಲಿರುವ (Chennai) ತಮ್ಮ ಪೋಷಕರ ನಿವಾಸದ ಹೊರಗೆ ನೂರಾರು ಬೆಂಬಲಿಗರನ್ನು ಸ್ವಾಗತಿಸಲು ವಿಜಯ್ ಮೊದಲ ಬಾರಿಗೆ ಕಾಣಿಸಿಕೊಂಡರು.&lt;/p&gt;&lt;h3 data-block-key="ai49e"&gt;&lt;b&gt;ಬೆಂಬಲಿಗರತ್ತ ಕೈ ಬೀಸುತ್ತಿರುವ ವಿಜಯ್&lt;/b&gt;&lt;/h3&gt;&lt;p data-block-key="dcgpq"&gt;ಬಿಳಿ ಶರ್ಟ್ ಧರಿಸಿದ್ದ ವಿಜಯ್, ಜನಸಮೂಹದತ್ತ ಕೈ ಬೀಸಿ ಮುಗುಳ್ನಕ್ಕರು, ಜನರು ಜೋರಾಗಿ ಅವರಿಗೆ ಜಯಕಾರ ಹಾಕಿದರು. ಚೆನ್ನೈನಲ್ಲಿರುವ ತಮ್ಮ ನಿವಾಸದ ಹೊರಗೆ ನೆರೆದಿದ್ದ ನೂರಾರು ಜನರ ಬೆಂಬಲವನ್ನು ಅವರು ಕೈಜೋಡಿಸಿ ಶ್ಲಾಘಿಸಿದರು.&lt;/p&gt;&lt;p data-block-key="8ietn"&gt;&lt;b&gt;ಇದನ್ನೂ ಓದಿ: &lt;/b&gt;&lt;a href="/ankanagalu/i-was-the-one-who-stopped-the-fight-between-toxic-and-dhurandar-2-trump-71437.html"&gt;H‌ari Paraak Column: ಟಾಕ್ಸಿಕ್‌, ಧುರಂದರ್-2‌ ಮಧ್ಯೆ ಯುದ್ದ ನಿಲ್ಸಿದ್ದು ನಾನೇ: ಟ್ರಂಪ್&lt;/a&gt;&lt;b&gt; &lt;/b&gt;&lt;/p&gt;&lt;p data-block-key="erjdn"&gt;ಸಾಮಾಜಿಕ ಮಾಧ್ಯಮಗಳಲ್ಲಿ ಹಲವಾರು ಚಲನಚಿತ್ರ ವ್ಯಕ್ತಿಗಳಿಂದ ಅವರಿಗೆ ಅಭಿನಂದನಾ ಸಂದೇಶಗಳು ಬಂದವು. ಎ.ಆರ್. ರೆಹಮಾನ್ , "ತಮಿಳಗ ವೆಟ್ರಿ ಕಳಗಂಗೆ ಹೃತ್ಪೂರ್ವಕ ಅಭಿನಂದನೆಗಳು! ನಮ್ಮ ಪ್ರೀತಿಯ ಶ್ರೀ ವಿಜಯ್ ಅವರಿಗೆ, ಭ್ರಷ್ಟಾಚಾರ ಮುಕ್ತ ರಾಜಕೀಯ, ಸಾಮಾಜಿಕ ನ್ಯಾಯ ಮತ್ತು ಸಮಾನತೆಯನ್ನು ಪ್ರತಿಪಾದಿಸುವ, ತಮಿಳುನಾಡನ್ನು ಮುಂಚೂಣಿಗೆ ಕೊಂಡೊಯ್ಯುವ ಅನುಕರಣೀಯ ನಾಯಕರಾಗಿ ನೀವು ಉದಯಿಸಿ ಅಭಿವೃದ್ಧಿ ಹೊಂದಬೇಕೆಂದು ಹಾರೈಸುತ್ತೇನೆ.  ಚೆನ್ನೈ ಅನ್ನು ಕಲೆ ಮತ್ತು ಸಮೃದ್ಧಿಯಿಂದ ತುಂಬಿರುವ ನಗರವಾಗಿ ಪರಿವರ್ತಿಸುವ ನಿಮ್ಮ ಪ್ರಯತ್ನವು ಪ್ರಕಾಶಮಾನವಾಗಿ ಬೆಳಗಲಿ!" ಎಂದು ಬರೆದಿದ್ದಾರೆ.&lt;/p&gt;&lt;p data-block-key="3u7n8"&gt;&lt;/p&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="twitter-tweet"&gt;&lt;p lang="en" dir="ltr"&gt;&lt;a href="https://twitter.com/hashtag/WATCH?src=hash&amp;amp;ref_src=twsrc%5Etfw"&gt;#WATCH&lt;/a&gt; | Tamil Nadu | TVK chief Vijay acknowleges the crowd present outside his parents house in Chennai. His party has secured maximum lead in Tamil Nadu elections. &lt;a href="https://t.co/3gkkRNyYfS"&gt;pic.twitter.com/3gkkRNyYfS&lt;/a&gt;&lt;/p&gt;&amp;mdash; ANI (@ANI) &lt;a href="https://twitter.com/ANI/status/2051291519274147959?ref_src=twsrc%5Etfw"&gt;May 4, 2026&lt;/a&gt;&lt;/blockquote&gt; &lt;script async src="https://platform.twitter.com/widgets.js" charset="utf-8"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="45g9j"&gt;&lt;/p&gt;&lt;p data-block-key="dnc17"&gt;"ತಮಿಳುನಾಡು ಚುನಾವಣೆಯಲ್ಲಿ ಅದ್ಭುತ ಗೆಲುವು ಸಾಧಿಸಿದ ವಿಜಯ್‌ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ತಮಿಳುನಾಡನ್ನು ನಿರಂತರ ಪ್ರಗತಿಯತ್ತ ಕೊಂಡೊಯ್ಯುವಲ್ಲಿ ನೀವು ಉತ್ತಮ ಯಶಸ್ಸನ್ನು ಬಯಸುತ್ತೀರಿ" ಎಂದು ರಾಮ್ ಚರಣ್ ಬರೆದಿದ್ದಾರೆ.&lt;/p&gt;&lt;p data-block-key="c63lh"&gt;ಫೆಬ್ರವರಿ 2024 ರಲ್ಲಿ, ವಿಜಯ್ ಅವರು 2026 ರ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದರು. ಅವರು ಟಿವಿಕೆ ಪಕ್ಷವನ್ನು ಪ್ರಾರಂಭಿಸಿದರು ಮತ್ತು ಅಕ್ಟೋಬರ್ 2024 ರಲ್ಲಿ ತಮ್ಮ ಮೊದಲ ಸಾರ್ವಜನಿಕ ರ್ಯಾಲಿಯನ್ನು ನಡೆಸಿದರು. ಅಂದಿನಿಂದ, ನಟ ತಮಿಳುನಾಡಿನ ಅನೇಕ ಪ್ರದೇಶಗಳಲ್ಲಿ ರ್ಯಾಲಿಗಳನ್ನು ನಡೆಸಲು ಮತ್ತು ತಮ್ಮ ಪ್ರಣಾಳಿಕೆಯನ್ನು ನೇರವಾಗಿ ಜನರೊಂದಿಗೆ ಹಂಚಿಕೊಳ್ಳಲು ಪ್ರವಾಸ ಮಾಡಿದ್ದಾರೆ. ಅವರ ರ್ಯಾಲಿಗಳಲ್ಲಿ ಭಾರಿ ಜನಸಂದಣಿ ಕಂಡುಬಂದಿದೆ, ಕರೂರಿನಲ್ಲಿ ಕಾಲ್ತುಳಿತದಿಂದಾಗಿ 41 ಜನರು ಸಾವನ್ನಪ್ಪಿದ ದುರಂತ ಸಂಭವಿಸಿದೆ.&lt;/p&gt;&lt;p data-block-key="abh4p"&gt;&lt;b&gt;ಇದನ್ನೂ ಓದಿ: &lt;/b&gt;&lt;a href="/movies/actress-rajini-amritavarshini-fame-film-chamber-stepped-up-against-rajini-77253.html"&gt;Actress Rajini: 'ಅಮೃತವರ್ಷಿಣಿ' ರಜಿನಿ ವಿರುದ್ಧ ಫಿಲ್ಮ್‌ ಚೇಂಬರ್ ಮೆಟ್ಟಿಲೇರಿದ ಚಿತ್ರತಂಡ!&lt;/a&gt;&lt;/p&gt;&lt;p data-block-key="a75rd"&gt;ವಿಜಯ್ ತಮಿಳುನಾಡಿನ ಮುಂದಿನ ಮುಖ್ಯಮಂತ್ರಿಯಾಗುವ ಸಾಧ್ಯತೆ ಇರುವುದರಿಂದ, ಅವರು ಸಿನಿಮಾದಿಂದ ಹಿಂದೆ ಸರಿಯುವ ನಿರೀಕ್ಷೆಯಿದೆ. ಅವರ ಅಂತಿಮ ಚಿತ್ರ ಜನ ನಾಯಗನ್ ಇನ್ನೂ ಸಿಬಿಎಫ್‌ಸಿಯಿಂದ ಪ್ರಮಾಣೀಕರಿಸಲ್ಪಟ್ಟಿಲ್ಲ, ಜನವರಿಯಿಂದ ವಿಳಂಬವಾಗಿದೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>15 ವರ್ಷಗಳ ಮಮತಾ ಬ್ಯಾನರ್ಜಿ ಸರ್ಕಾರ ಪತನಕ್ಕೆ ಮೆಸ್ಸಿ ಕಾರಣವಂತೆ!</title><link>https://vishwavani.news/sports/bjp-agent-messi-fans-have-field-day-after-party-sweeps-bengal-elections-77255.html</link><guid>https://vishwavani.news/sports/bjp-agent-messi-fans-have-field-day-after-party-sweeps-bengal-elections-77255.html</guid><pubDate>Tue, 05 May 2026 03:38:21 +0000</pubDate><description>&lt;![CDATA[Bengal elections: ಸತತ 2 ವರ್ಷಗಳಿಂದ, ಬಂಗಾಳ ಗೆಲ್ಲಲು ಬಿಜೆಪಿಯ ಚುನಾವಣಾ ರಣತಂತ್ರಗಾರ ಅಮಿತ್‌ ಶಾ ಹೆಣೆದ ಕಾರ್ಯತಂತ್ರ, ಬಿಜೆಪಿಯ ತಳಮಟ್ಟದ ಕಾರ್ಯಕರ್ತರು ಕಳೆದ 2 ತಿಂಗಳಲ್ಲಿ ರಾಜ್ಯವ್ಯಾಪಿ 1.50 ಲಕ್ಷಕ್ಕೂ ಹೆಚ್ಚು ಸಮುದಾಯ ಸಭೆ ನಡೆಸಿ ಮಮತಾ ಸರ್ಕಾರದ ವೈಫಲ್ಯ, ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲಿನ ದಾಳಿ ಪ್ರಸ್ತಾಪಿಸಿ, ಹಿಂದೂಗಳನ್ನು ಬಡಿದೆಬ್ಬಿಸಿದ್ದು, ಮಮತಾ ಸರ್ಕಾರದ ಓಲೈಕೆ ರಾಜಕಾರಣದ ಬಗ್ಗೆ ಗಮನ ಸೆಳೆದಿದ್ದು ಬಿಜೆಪಿ ಗೆಲುವಿಗೆ ದೊಡ್ಡ ಮಟ್ಟದಲ್ಲಿ ನೆರವು ನೀಡಿದೆ.]]&gt;</description><dc:creator>&lt;![CDATA[Abhilash BC]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ದೇಶ]]&gt;</category><category>&lt;![CDATA[ಕ್ರೀಡೆ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Lionel_Messi_2_p6HJU9Q.original.jpg" class="attachment-large size-large wp-post-image" alt="15 ವರ್ಷಗಳ ಮಮತಾ ಬ್ಯಾನರ್ಜಿ ಸರ್ಕಾರ ಪತನಕ್ಕೆ ಮೆಸ್ಸಿ ಕಾರಣವಂತೆ!" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="9pln6"&gt;&lt;b&gt;ಕೋಲ್ಕತಾ, ಮೇ 5: &lt;/b&gt;15 ವರ್ಷಗಳಿಂದ ಪಶ್ಚಿಮ ಬಂಗಾಳ(Bengal elections)ವನ್ನು ಅಕ್ಷರಶಃ ಆಳಿದ್ದ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ(Mamata Banerjee) ಅಧಿಪತ್ಯ ಕೊನೆಗೊಂಡಿದೆ. ಸಾರಸ್ಯವೆಂದರೆ ಮಮತಾರ ಈ ಅಧಿಪತನಕ್ಕೆ ಅರ್ಜೆಂಟೀನಾದ ಫುಟ್‌ಬಾಲ್ ತಾರೆ ಲಯೊನೆಲ್ ಮೆಸ್ಸಿ(Lionel Messi) ಕಾರಣ ಎಂದು ನೆಟ್ಟಿಗರು ಹೇಳಿದ್ದಾರೆ.&lt;/p&gt;&lt;p data-block-key="cuhtj"&gt;ಹೌದು ಕಳೆದ ವರ್ಷ ಲಯೊನೆಲ್ ಮೆಸ್ಸಿ ನಾಲ್ಕು ದಿನಗಳ ಭಾರತ ಪ್ರವಾಸವನ್ನು ಕೈಗೊಂಡಿದ್ದರು. ಈ ವೇಳೆ ಅವರು ಕೋಲ್ಕತಾಗೂ ಭೇಟಿ ನೀಡಿದ್ದರು. ಇದು ಮೆಸ್ಸಿ ಅವರ ಎರಡನೇ ಭೇಟಿಯಾಗಿತ್ತು. 2011ರಲ್ಲಿ ಮೆಸ್ಸಿ ಮೊದಲ ಬಾರಿಗೆ ಕೊಲ್ಕತಾಗೆ ಭೇಟಿ ನೀಡಿದಾಗ ಪಶ್ಚಿಮ ಬಂಗಾಳದಲ್ಲಿ ಬಹುಕಾಲ ಆಡಳಿತ ನಡೆಸಿದ್ದ ಸಿಪಿಎಂ ಅಧಿಕಾರ ಪತನಗೊಂಡು ಮಮತಾ ಬ್ಯಾನರ್ಜಿಯ ಟಿಎಂಸಿ ಸರ್ಕಾರ ಆಡಳಿತಕ್ಕೆ ಬಂದಿತು. ಇದಾದ ಬಳಿಕ ಟಿಎಂಸಿ ಸತತವಾಗಿ ಅಧಿಕಾರ ನಡೆಸುತ್ತಲೇ ಬಂದಿತ್ತು. ಇದೀಗ ಮೆಸ್ಸಿ ಎರಡನೇ ಭೇಟಿ ವೇಳೆ ಮತ್ತೊಂದು ಹೊಸ ಸರ್ಕಾರ ಅಧಿಕಾರಕ್ಕೆ ಬಂದಿದೆ.  ಬಿಜೆಪಿ, ರಾಜ್ಯದಲ್ಲಿ ಮೊದಲ ಸಲ ಅಧಿಕಾರದ ಗದ್ದುಗೆ ಏರಿದೆ. ಈ ಕಾಕತಾಳಿಯ ಘಟನೆಯನ್ನು ಹೋಲಿಕೆ ಮಾಡಿ ನೆಟ್ಟಿಗರು ಮಮತಾ ಸೋಲಿಗೆ ಮೆಸ್ಸಿ ಕಾರಣ ಎಂದು ಹೇಳಿದ್ದಾರೆ. &lt;/p&gt;&lt;p data-block-key="br33b"&gt;ಬಂಗಾಳ ರಾಜ್ಯ ವಿಧಾನಸಭೆಯ 294 ಸ್ಥಾನಗಳ ಪೈಕಿ 293 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಭರ್ಜರಿ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಬಾಂಗ್ಲನ್ನರ ಅಕ್ರಮ ಒಳನುಸುಳುವಿಕೆ, ಹಿಂದೂಗಳ ಮೇಲಿನ ದೌರ್ಜನ್ಯ ತಡೆಯುವಲ್ಲಿ ಮಮತಾ ವಿಫಲ ಎಂಬ ಆರೋಪ, ಆಡಳಿತದಲ್ಲಿನ ಭ್ರಷ್ಟಾಚಾರದ ಆರೋಪ, ಅತಿಯಾದ ಓಲೈಕೆ ರಾಜಕಾರಣ, ವೈದ್ಯಕೀಯ ವಿದ್ಯಾರ್ಥಿನಿಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಟಿಎಂಸಿ ನಾಯಕರ ಕೀಳು ಹೇಳಿಕೆ, ಅಭಿವೃದ್ಧಿಯಲ್ಲಿ ಕುಂಠಿತ, ಸತತ 15 ವರ್ಷಗಳ ಆಡಳಿತ ವಿರೋಧಿ ಅಲೆಗೆ ಸಿಕ್ಕ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಧಿಕಾರ ಕಳೆದುಕೊಂಡಿದ್ದಾರೆ.&lt;/p&gt;&lt;p data-block-key="fvrk1"&gt;&lt;a href="/ankanagalu/goodbye-to-didi-hello-to-modi-77245.html"&gt;Raghava Sharma Nidle Column: ದೀದಿಗೆ ಗುಡ್‌ಬೈ , ಮೋದಿಗೆ ಹಾಯ್ ಹಾಯ್..!&lt;/a&gt;&lt;/p&gt;&lt;p data-block-key="6isr4"&gt;ಸತತ 2 ವರ್ಷಗಳಿಂದ, ಬಂಗಾಳ ಗೆಲ್ಲಲು ಬಿಜೆಪಿಯ ಚುನಾವಣಾ ರಣತಂತ್ರಗಾರ ಅಮಿತ್‌ ಶಾ ಹೆಣೆದ ಕಾರ್ಯತಂತ್ರ, ಬಿಜೆಪಿಯ ತಳಮಟ್ಟದ ಕಾರ್ಯಕರ್ತರು ಕಳೆದ 2 ತಿಂಗಳಲ್ಲಿ ರಾಜ್ಯವ್ಯಾಪಿ 1.50 ಲಕ್ಷಕ್ಕೂ ಹೆಚ್ಚು ಸಮುದಾಯ ಸಭೆ ನಡೆಸಿ ಮಮತಾ ಸರ್ಕಾರದ ವೈಫಲ್ಯ, ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲಿನ ದಾಳಿ ಪ್ರಸ್ತಾಪಿಸಿ, ಹಿಂದೂಗಳನ್ನು ಬಡಿದೆಬ್ಬಿಸಿದ್ದು, ಮಮತಾ ಸರ್ಕಾರದ ಓಲೈಕೆ ರಾಜಕಾರಣದ ಬಗ್ಗೆ ಗಮನ ಸೆಳೆದಿದ್ದು ಬಿಜೆಪಿ ಗೆಲುವಿಗೆ ದೊಡ್ಡ ಮಟ್ಟದಲ್ಲಿ ನೆರವು ನೀಡಿದೆ. &lt;/p&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="twitter-tweet"&gt;&lt;p lang="en" dir="ltr"&gt;Messi came to Kolkata in 2011 and changed the West Bengal government.&lt;br&gt;&lt;br&gt;Messi came to Kolkata again in 2025 and changed the WB govt again.&lt;br&gt;&lt;br&gt;Goat has unreal powers  &lt;a href="https://t.co/52MqRtyxXx"&gt;pic.twitter.com/52MqRtyxXx&lt;/a&gt;&lt;/p&gt;&amp;mdash; sohom (@AwaaraHoon) &lt;a href="https://twitter.com/AwaaraHoon/status/2051234471459090553?ref_src=twsrc%5Etfw"&gt;May 4, 2026&lt;/a&gt;&lt;/blockquote&gt; &lt;script async src="https://platform.twitter.com/widgets.js" charset="utf-8"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="9v6r9"&gt;ಟಿಎಂಸಿಯ ಮಾಜಿ ನಾಯಕ ಹಾಗೂ ಮಮತಾ ಅವರ ಆಪ್ತ ಸಹಾಯಕನಾಗಿದ್ದ ಸುವೇಂದು ಅಧಿಕಾರಿ ಬಂಗಾಳದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಶ್ರಮಿಸಿದವರಲ್ಲಿ ಪ್ರಮುಖರು. , ಸುವೇಂದು ಅವರು ತಳಮಟ್ಟದ ಸಂಪರ್ಕ ಹೊಂದಿದ್ದು, ಈ ಬಾರಿ ಮಮತಾ ಭದ್ರಕೋಟೆ ಎನಿಸಿಕೊಂಡಿದ್ದ ಭವಾನಿಪುರದಲ್ಲಿಯೇ ಅವರಿಗೆ ಸೋಲುಣಿಸಿದ್ದಾರೆ. ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಸುವೇಂದು 2021 ರಲ್ಲಿ ಲಂಚ ಪ್ರಕರಣವೊಂದರದಲ್ಲಿ ಸಿಲುಕಿದ್ದರು. ಹೀಗಾಗಿ ಬಿಜೆಪಿ ಇವರನ್ನು ಮುಖ್ಯಮಂತ್ರಿಯಾಗಿ ನೇಮಕ ಮಾಡುವುದು ಕೊಂಚ ಅನುಮಾನ ಎನ್ನಲಾಗುತ್ತಿದೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>Naveen Sagar Column: ಶತಕವಂಚಿತ ರಾಹುಲ್‌ ಗಾಂಧಿಯೇ ಅಸಲಿ ಧುರಂಧರ್‌ !</title><link>https://vishwavani.news/ankanagalu/the-century-deprived-rahul-gandhi-is-the-real-dhurandhar-77252.html</link><guid>https://vishwavani.news/ankanagalu/the-century-deprived-rahul-gandhi-is-the-real-dhurandhar-77252.html</guid><pubDate>Tue, 05 May 2026 03:15:08 +0000</pubDate><description>&lt;![CDATA[ವಿಜಯ್ ರಾಜಕೀಯಕ್ಕೆ ಬರಲು, ಹೊಸ ಪಕ್ಷ ಕಟ್ಟಲು ಬಿಜೆಪಿಯ ತಂತ್ರಗಾರಿಕೆ ಇತ್ತು ಎಂದೆಲ್ಲ ಬಣ್ಣಿಸಲು ಪ್ರಾರಂಭಿಸಿದ್ದಾರೆ. ಆದರೆ ಅದು ತಲೆಬುಡವಿಲ್ಲದ ಕಥೆ. ವಿಜಯ್ ಎಂದಿಗೂ ಬಿಜೆಪಿಯ ಸಿದ್ಧಾಂತವನ್ನು ಪ್ರತಿಪಾದಿಸಿಲ್ಲ, ಬೆಂಬಲಿಸಿಯೂ ಇಲ್ಲ. ಆತನಿಂದ ಮುಂದೆಯೂ ಬಿಜೆಪಿ ಪರ ನಿಲುವು ಕಾಣುವುದು ಅನುಮಾನ.]]&gt;</description><dc:creator>&lt;![CDATA[ನವೀನ್‌ ಸಾಗರ್‌]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಅಂಕಣಗಳು]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/N_V_5.original.jpg" class="attachment-large size-large wp-post-image" alt="Naveen Sagar Column: ಶತಕವಂಚಿತ ರಾಹುಲ್‌ ಗಾಂಧಿಯೇ ಅಸಲಿ ಧುರಂಧರ್‌ !" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="5qwus"&gt;&lt;b&gt;ಪದಸಾಗರ&lt;/b&gt;&lt;/p&gt;&lt;p data-block-key="fdvel"&gt;ಪಂಚರಾಜ್ಯಗಳ ಚುನಾವಣೆಯ ಫಲಿತಾಂಶ ಹೊರ ಬಿದ್ದಿದೆ. ಕೆಲವು ಕಡೆ ನಿರೀಕ್ಷೆಗಳು ಫಲ ಕೊಟ್ಟಿದ್ದರೆ, ಕೆಲವು ಕಡೆ ನಿರೀಕ್ಷೆಯಂತೆ ನಡೆದಿದೆ. ಒಂದು ಕಡೆ ನಿರೀಕ್ಷೆ ತಲೆಕೆಳಗಾಗಿದೆ. ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಹಾಗೂ ಕಮ್ಯುನಿಸ್ಟರ ನಂತರ ಅತಿ ಹೆಚ್ಚು ವರ್ಷ ಅಧಿಕಾರ ನಡೆಸಿದ್ದ ಮಮತಾ ದೀದಿಯ ದುರಾ ಡಳಿತ ಕೊನೆಗೊಂಡಿದೆ.&lt;/p&gt;&lt;p data-block-key="4k4fq"&gt;ತಮಿಳುನಾಡಿನಲ್ಲಿ ಹಿಂದೂ ಧರ್ಮ ವಿರೋಧಿ, ಭ್ರಷ್ಟ ಮತ್ತು ಗೂಂಡಾ ಸರಕಾರ ಎಂದೇ ಕೆಂಗಣ್ಣಿಗೆ ಗುರಿಯಾಗಿದ್ದ ಡಿಎಂಕೆ, ಆಡಳಿತ ವಿರೋಧಿ ಅಲೆಯ ಜತೆಗೆ ನಟ ವಿಜಯ್‌ನ ಅಬ್ಬರಕ್ಕೆ ತರಗೆಲೆಯಂತೆ ಉದುರಿಹೋಗಿದೆ. ಈ ನಡುವೆ ಬಿಜೆಪಿ ಬೆಂಬಲಿಗರು, ವಿಜಯ್‌ರನ್ನು ಬಿಜೆಪಿಯ ಸೀಕ್ರೆಟ್ ಏಜೆಂಟ, ಧುರಂಧರ್ ಎಂದು ಬಿಂಬಿಸುತ್ತಿದ್ದಾರೆ.&lt;/p&gt;&lt;p data-block-key="ctsjv"&gt;ವಿಜಯ್ ರಾಜಕೀಯಕ್ಕೆ ಬರಲು, ಹೊಸ ಪಕ್ಷ ಕಟ್ಟಲು ಬಿಜೆಪಿಯ ತಂತ್ರಗಾರಿಕೆ ಇತ್ತು ಎಂದೆಲ್ಲ ಬಣ್ಣಿಸಲು ಪ್ರಾರಂಭಿಸಿದ್ದಾರೆ. ಆದರೆ ಅದು ತಲೆಬುಡವಿಲ್ಲದ ಕಥೆ. ವಿಜಯ್ ಎಂದಿಗೂ ಬಿಜೆಪಿಯ ಸಿದ್ಧಾಂತವನ್ನು ಪ್ರತಿಪಾದಿಸಿಲ್ಲ, ಬೆಂಬಲಿಸಿಯೂ ಇಲ್ಲ. ಆತನಿಂದ ಮುಂದೆಯೂ ಬಿಜೆಪಿ ಪರ ನಿಲುವು ಕಾಣುವುದು ಅನುಮಾನ.&lt;/p&gt;&lt;p data-block-key="e3k69"&gt;ರಾಜಕೀಯ ಕಾರಣಗಳಿಗೆ ತಾತ್ಕಾಲಿಕ ಮೈತ್ರಿ ಏರ್ಪಡಬಹುದೇ ಹೊರತು ಅದಕ್ಕಿಂತ ಹೆಚ್ಚು ವಿಜಯ್‌ನಿಂದ ಬಿಜೆಪಿ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಆತನ ಪಕ್ಷ ತಮಿಳುನಾಡಿಗೆ ಸೀಮಿತ ಗೊಳ್ಳುವ ಪ್ರಬಲ ಪ್ರಾದೇಶಿಕ ಪಕ್ಷವಾಗಿ ಬೆಳೆಯುತ್ತದೆ, ರಾಷ್ಟ್ರ ರಾಜಕಾರಣದಲ್ಲಿ ನಿರ್ಣಾಯಕ ಪಾತ್ರ ವಹಿಸುವ ಪ್ರಯತ್ನ ಮಾಡುತ್ತದೆಯೇ ವಿನಾ, ಬಿಜೆಪಿ ಅಥವಾ ಕಾಂಗ್ರೆಸ್‌ನಂಥ ರಾಷ್ಟ್ರೀಯ ಪಕ್ಷಗಳ ಮರ್ಜಿಗೆ ಬೀಳುವುದಿಲ್ಲ.&lt;/p&gt;&lt;p data-block-key="74ebh"&gt;&lt;b&gt;ಇದನ್ನೂ ಓದಿ:&lt;/b&gt; &lt;a href="/ankanagalu/dont-fall-into-the-trap-of-marketing-executives-from-hell-76594.html"&gt;Naveen Sagar Column: ನರಕದ ಮಾರ್ಕೆಟಿಂಗ್‌ ಎಕ್ಸಿಕ್ಯೂಟಿವ್‌ʼಗಳ ಬಲೆಗೆ ಬೀಳದಿರಿ !&lt;/a&gt;&lt;/p&gt;&lt;p data-block-key="a8d15"&gt;ಏತನ್ಮಧ್ಯೆ ರಾಹುಲ್ ಗಾಂಧಿ ತಮ್ಮ ಚುನಾವಣಾ ಸೋಲಿನ ಸಂಖ್ಯೆ ಬರೋಬ್ಬರಿ ತೊಂಬತ್ತೊಂಬ ತ್ತಕ್ಕೆ ಏರಿಸಿಕೊಂಡು ಶತಕವಂಚಿತರಾಗಿದ್ದಾರೆ. ಕೇರಳದಲ್ಲೂ ಸೋಲು ಕಂಡು ಬಿಟ್ಟಿದ್ದರೆ, ಇದೇ ಚುನಾವಣೆಯಲ್ಲಿ ಅವರು ಶತಸೋಲುಗಳ ಸರದಾರನಾಗಿ ದಾಖಲೆ ಬರೆಯು ತ್ತಿದ್ದರು.&lt;/p&gt;&lt;p data-block-key="48lkb"&gt;ಬಿಜೆಪಿ ಪಾಲಿನ ಅಸಲಿ ಧುರಂಧರ್ ಯಾರು ಅಂದರೆ ರಾಹುಲ್ ಗಾಂಧಿ. ರಾಹುಲ್ ಗಾಂಧಿಯ ರಾಜಕೀಯ ಭಾಷಣಗಳು, ರಾಜತಾಂತ್ರಿಕ ನಡೆಗಳು, ಶತ್ರು ರಾಷ್ಟ್ರಗಳ ಜತೆಗಿನ ಗುಪ್ತ ಭೇಟಿ, ಮಾತುಕತೆಗಳು, ಹಾಸ್ಯಾಸ್ಪದ ವಾದ ಪ್ರತಿವಾದಗಳು, ತೀರಾ ಕೆಳಮಟ್ಟದ ನಾಯಕತ್ವ ಗುಣ ಎಲ್ಲವೂ ಬಿಜೆಪಿ ಪಾಲಿಗೆ ವರವಾಗುತ್ತಲೇ ಹೋಗುತ್ತಿದೆ.&lt;/p&gt;&lt;p data-block-key="40e8e"&gt;ರಾಹುಲ್ ಗಾಂಧಿ ಸಕ್ರಿಯ ರಾಜಕಾರಣದಲ್ಲಿ ಇರುವ ತನಕವೂ ಬಿಜೆಪಿಗೆ ಸೋಲಿನ ಭಯವೇ ಇಲ್ಲ ಎಂಬಂತಾಗಿ ಹೋಗಿದೆ. ರಾಹುಲ್ ಗಾಂಧಿ ಪ್ರತಿಬಾರಿ ಚುನಾವಣೆಗಳ ನಂತರ ಅಥವಾ ರಿಸಲ್ಟಿನ ಆಸುಪಾಸಿನಲ್ಲಿ ಭಾರತ ಬಿಟ್ಟು ಹಾರುತ್ತಾರೆ. ಅಲ್ಲಿಂದ ಬರುವಾಗ ಹೊಸತೊಂದು ಟೂಲ್ ಕಿಟ್ ಹೊತ್ತು ತರುತ್ತಾರೆ ಅಥವಾ ಅಲ್ಲಿಂದಲೇ ಟೂಲ್ ಕಿಟ್ ಓಪನ್ ಮಾಡುತ್ತಾರೆ. ಪ್ರಸ್ತುತ ಚುನಾವಣಾ ಫಲಿತಾಂಶಗಳು ಹೊರಬೀಳುವ ಹೊತ್ತಲ್ಲಿ ರಾಹುಲ್ ಮಸ್ಕತ್‌ನಲ್ಲಿ ಕೂತು ಕತ್ತಿ ಮಸೆಯುತ್ತಿದ್ದಾ ರೆಂಬ ಸುದ್ದಿಯಿದೆ.&lt;/p&gt;&lt;p data-block-key="cp5o2"&gt;ಎರಡು ಮೂರು ದಿನಗಳ ಹಿಂದೆ ರಾಹುಲ್ ಗಾಂಧಿ, ನಿಕೋಬಾರ್ ದ್ವೀಪದಲ್ಲಿ ಕಾಣಿಸಿಕೊಂಡರು. ಏಕಾಏಕಿ ರಾಹುಲ್ ಗಾಂಧಿ ನಿಕೋಬಾರ್ ದ್ವೀಪ ಹೊಕ್ಕು ಭಾವಾವೇಶದಲ್ಲಿ ವಿಡಿಯೋ ಮಾಡಿದ್ದು ಯಾಕೆ? ಇಂಥವೆಲ್ಲ ರಾಹುಲ್ ಗಾಂಧಿಯ ತಲೆಗೆ ತುಂಬಿಸುವವರಾರು? ಹೊಸ ಹೊಸ ವಿಷಯ ಹೆಕ್ಕಿ ಕೊಡುವವರಾರು? ಇದ್ಯಾವುದೂ ರಾಹುಲ್ ಗಾಂಧಿಗೆ ಸ್ವಂತವಾಗಿ ಹೊಳೆಯುವ ವಿಷಯಗಳಂತೂ ಅಲ್ಲ.&lt;/p&gt;&lt;p data-block-key="4cgq5"&gt;ರಾಹುಲ್ ಗಾಂಧಿಗೆ ಸ್ವಂತವಾಗಿ ಹೇಳಲು ಬರೋದು ಕೆಲವೇ ಮಾತುಗಳು. ಮೋದೀಜಿಗೆ ನಾನಂದರೆ ಭಯ, ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಲಾರರು. ಮೋದಿಜಿ ಅಂಬಾನಿಗೆ ಅದಾನಿಗೆ ದೇಶವನ್ನು ಮಾರಿದ್ದಾರೆ.&lt;/p&gt;&lt;p data-block-key="76lk7"&gt;ಮೋದೀಜಿಗೆ ಸಂವಿಧಾನದ ಮೇಲೆ ಗೌರವ ಇಲ್ಲ. ಇಂಥವು ಬಿಟ್ಟು ಇನ್ಯಾವುದೂ ರಾಹುಲ್ ಗಾಂಧಿಯ ಸ್ವಂತ ಮಾತುಗಳಲ್ಲ. ಹಾಗೊಮ್ಮೆ ಸ್ವಂತ ಮಾತಾಡಲು ಬಾಯಿಬಿಟ್ಟರೆ ಬಣ್ಣಗೇಡು ಖಚಿತ. ಹೀಗಿರುವಾಗ ರಾಹುಲ್ ಗಾಂಧಿಯನ್ನು ಆಪರೇಟ್ ಮಾಡುತ್ತಿರುವುದು ಚೀನಾ ಎಂಬ ಒಂದು ಅನುಮಾನ ಬಲಗೊಳ್ಳುತ್ತಿದೆ.&lt;/p&gt;&lt;p data-block-key="635v4"&gt;ರಾಹುಲ್ ಗಾಂಧಿ ಬಿಜೆಪಿಯ ಧುರಂಧರ್ ಅಲ್ಲ, ಚೀನಾದ ಧುರಂಧರ್ ಎನ್ನಲಾಗುತ್ತಿದೆ. ರಾಹುಲ್ ಗಾಂಧಿಯನ್ನು ಗಂಭೀರವಾಗಿ ತೆಗೆದುಕೊಳ್ಳದಿರಬಹುದು, ಆದರೆ ಚೀನಾವನ್ನು ಗಂಭೀರವಾಗಿ ತೆಗೆದುಕೊಳ್ಳಲೇಬೇಕು. ಇದಕ್ಕೆ ಪೂರಕವಾಗಿ ಸುಮಾರು ಹದಿನೇಳು ವರ್ಷಗಳ ಇತಿಹಾಸ ಕೆದಕ ಬೇಕಾಗುತ್ತದೆ. ರಾಹುಲ್ ಚೈನಾ ಕೈಗೊಂಬೆಯಾಗಿ ಭಾರತದ ವಿರುದ್ಧವೇ ಕೆಲಸ ಮಾಡು ತ್ತಿದ್ದಾರೆ ಎಂದನಿಸುವುದಕ್ಕೆ ಹಲವು ಪುರಾವೆಗಳು ಕಾಣಸಿಗುತ್ತವೆ.&lt;/p&gt;&lt;p data-block-key="e3h0e"&gt;2008, ಆಗ 7ರಂದು ಚೀನಾದ ಕಮ್ಯುನಿಸ್ಟ್ ಪಾರ್ಟಿಯೊಂದಿಗೆ ನಮ್ಮ ಕಾಂಗ್ರೆಸ್ ಒಂದು ಒಪ್ಪಂದಕ್ಕೆ‌ ಸಹಿ ಹಾಕುತ್ತದೆ. ಅಂಥದ್ದೇನಿತ್ತು ಅವರು ಸಹಿ ಮಾಡಿದ MOUದಲ್ಲಿ ಎಂದು ಇಂದಿಗೂ ಯಾರಿಗೂ ಗೊತ್ತಿಲ್ಲ. ಒಡಿಶಾದ ನಿಯಾಮಗಿರಿ ಪ್ರದೇಶದಲ್ಲಿ ವೇದಾಂತ ಕಂಪೆನಿ ಅಲ್ಯೂಮಿನಿಯಂ ರಿಫೈನರಿ ನಿರ್ಮಿಸಲು ಮುಂದಾಗಿತ್ತು.&lt;/p&gt;&lt;p data-block-key="9i1av"&gt;ಅಲ್ಯೂಮಿನಿಯಂ ರಕ್ಷಣಾ ಸಾಧನಗಳು ಮತ್ತು ವಿದ್ಯುತ್ ಕ್ಷೇತ್ರಕ್ಕೆ ಅತ್ಯಂತ ಮುಖ್ಯವಾದ ಲೋಹ. ಈ ಯೋಜನೆ ಭಾರತವನ್ನು ಸ್ವಾವಲಂಬಿಯಾಗಿಸಬಹುದಿತ್ತು. ಆದರೆ ರಾಹುಲ್ ಗಾಂಧಿ &lt;b&gt;ಎನ್ಜಿಒ &lt;/b&gt;ಗಳನ್ನು ಮತ್ತು ಪರಿಸರವಾದಿಗಳನ್ನು ಎತ್ತಿಕಟ್ಟಿ ರಿಫೈನರಿ ಆಗದಂತೆ ತಡೆಯುತ್ತಾರೆ. ಚೀನಾದ ಮೇಲಿನ ಭಾರತದ ಅವಲಂಬನೆ ಮುಂದುವರಿಯುತ್ತದೆ.&lt;/p&gt;&lt;p data-block-key="3j7ah"&gt;2005. ಸೆಮಿಕಂಡಕ್ಟರ್ ಕ್ಷೇತ್ರ ಆಗಷ್ಟೇ ಕಣ್ಣುತೆರೆಯ ಲಾರಂಭಿಸಿತ್ತು. ಒಂದು ಪ್ರಮುಖ ಬಹುರಾಷ್ಟ್ರೀಯ ಕಂಪನಿ ಭಾರತದಲ್ಲಿ ಸೆಮಿಕಂಡಕ್ಟರ್ ಘಟಕ ಸ್ಥಾಪಿಸಲು ಮುಂದಾಗಿತ್ತು. ಆದರೆ ಅದಕ್ಕೆ ಮನಮೋಹನ್ ಸಿಂಗ್ ಅವರ ಹಿಂದಿದ್ದ ಅಸಲಿ ಕೈಗಳು ಅನೇಕ ಆಡಳಿತಾತ್ಮಕ ತೊಂದ ರೆಗಳನ್ನುನೀಡತೊಡಗಿದವು. ಅಮೆರಿಕದಿಂದ ಆಮದು ಮಾಡಿಕೊಂಡ ಉಪಕರಣಗಳಿಗೆ ಭಾರಿ ಮೊತ್ತದ ಆಮದು ಶುಲ್ಕ, ಇನ್ನಿತರ ಶುಲ್ಕಗಳನ್ನು ಹಾಕಿ ಥರಥರದ ಕಾಟ ಕೊಡಲಾಯಿತು.&lt;/p&gt;&lt;p data-block-key="6g41n"&gt;ಭಾರತದ ಸಹವಾಸವೇ ಬೇಡ ಎನ್ನುವಂತಾದಾಗ, ಚೀನಾ ರೆಡ್ ಕಾರ್ಪೆಟ್ ಹಾಸಿ ಅವರನ್ನು ಕರೆದು ಪ್ರಾಜೆಕ್ಟ್ ಶುರುಮಾಡಿಸಿತು. ಭಾರೀ ಆಮದು ಸುಂಕಗಳು, ವಿಳಂಬ ಶುಲ್ಕಗಳು ಮತ್ತು ಸರ್ಕಾರದ ‌ ಸಹಕಾರದ ಕೊರತೆಯಿಂದಾಗಿ ಕಂಪನಿ ಯೋಜನೆಯನ್ನು ಚೀನಾಕ್ಕೆ ಸ್ಥಳಾಂತರಿಸಿತು.&lt;/p&gt;&lt;p data-block-key="7qqcb"&gt;ಇದರೊಂದಿಗೆ ಭಾರತ ಒಂದು ದೊಡ್ಡ ತಾಂತ್ರಿಕ ಅವಕಾಶವನ್ನು ಕಳೆದುಕೊಂಡಿತು. ಭಾರತದ ನಷ್ಟ, ಚೀನಾದ ಲಾಭವಾಯಿತು. ಹೀಗಾಗಲು ಕಾರಣವಾದ ಧುರಂಧರ್ ಯಾರು? 2017 ಜುಲೈ ಎಂಟು. ಭಾರತ ಮತ್ತು ಚೀನಾ ಸೇನೆಗಳು ಸಿಕ್ಕಿಂನ ಡೋಕ್ಲಾಂ ಪ್ರದೇಶದಲ್ಲಿ ಮುಖಾಮುಖಿ ಯಾದವು.&lt;/p&gt;&lt;p data-block-key="1ship"&gt;ಸುಮಾರು ಮೂರು ದಿನಗಳ ಕಾಲ ನಡೆದ ಈ ಚಕಮಕಿಯ ಸಮಯದಲ್ಲಿ ರಾಹುಲ್ ಗಾಂಧಿ ದೇಶದ ಪರ ನಿಲ್ಲುವ ಬದಲು ಸರಕಾರದ ವಿರುದ್ಧ ಸತತ ವಾಗ್ದಾಳಿ ಮಾಡುತ್ತಿದ್ದರು. ಈ ಚಕಮಕಿಯ ಬಗ್ಗೆ ಪಾರದರ್ಶಕತೆ ಬೇಕು, ಚೀನಾ ಜತೆ ಸಂಬಂಧ ಕೆಡಿಸ್ಕೊಳ್ಳಬಾರದು ಅಂತೆಲ್ಲ ರಾಹುಲ್ ತಮ್ಮ ವಾಗ್ದಾಳಿಯಲ್ಲಿ ಬಡಬಡಿಸಿದ್ದಲ್ಲದೇ, ಜನರಿಗೆ ಸ್ಪಷ್ಟ ಚಿತ್ರಣ ಕೊಡಿ ಅಂತೆಲ್ಲ ಆಗ್ರಹ ಮಾಡಿದ್ದರು.&lt;/p&gt;&lt;p data-block-key="adr11"&gt;ಇಲ್ಲಿ ಗಮನಿಸಬೇಕಾದ ವಿಷಯ ಏನೆಂದರೆ ರಾಹುಲ್, ಆ ಸಮಯದಲ್ಲಿ ಚೀನಾ ‌ ರಾಯಭಾರಿ ಯನ್ನು ರಹಸ್ಯವಾಗಿ ಭೇಟಿಯಾಗಿದ್ದರು. ಇದನ್ನು ಶತಾಯಗತಾಯ ಅಲ್ಲಗಳೆದಿದ್ದ ವರು, ನಂತರ ಅನ್ಯಮಾರ್ಗವಿಲ್ಲದೇ ಭೇಟಿ ಮಾಡಿ ಮಾತನಾಡಿದ್ದು ನಿಜ ಎಂದು ಒಪ್ಪಿಕೊಂಡರು.&lt;/p&gt;&lt;p data-block-key="bthoj"&gt;ಮೇ 2018. ತಮಿಳುನಾಡಿನ ಸ್ಟೆರ್ಲೈಟ್ ಕಾರ್ಖಾನೆ ತನ್ನ ಸಾಮರ್ಥ್ಯವನ್ನು ವರ್ಷಕ್ಕೆ 400000 ಟನ್‌ನಿಂದ 800000 ಟನ್‌ಗೆ ಹೆಚ್ಚಿಸಲು ನಿರ್ಧರಿಸಿತು. ಆದರೆ ಇದಕ್ಕೆ ಭಾರೀ ವಿರೋಧ ಶುರು ವಾಯಿತು. ಹದಿಮೂರು ಪ್ರತಿಭಟನಾಕಾರರ ಸಾವೂ ಆಯ್ತು. ಇದರ ಹಿಂದೆ ನಿಂತು ಬೆಂಬಲ ಕೊಡುತ್ತಿದ್ದ ರಾಹುಲ್ ನಂತರ ಮುಂದೆ ನಿಂತು ಪ್ರತಿಭಟಿಸಿದರು.&lt;/p&gt;&lt;p data-block-key="14pfv"&gt;ದೇಶದ ಅತ್ಯುತ್ತಮ ತಾಮ್ರದ ಕಾರ್ಖಾನೆ ಮುಚ್ಚಿಯೇ ಹೋಯ್ತು. ಅತಿ ದೊಡ್ಡ ರಫ್ತುದಾರನಾಗಿದ್ದ ಭಾರತ, ತಾಮ್ರ ಆಮದು ಮಾಡಿಕೊಳ್ಳುವ ಪರಿಸ್ಥಿತಿ ತಲುಪಿತು. ಅಂದಹಾಗೆ, ನಾವು ನಂತರ ತಾಮ್ರಕ್ಕೆ ಅವಲಂಬಿಸಿದ್ದು ಚೀನಾವನ್ನು. ಇವತ್ತಿಗೆ ತಾಮ್ರ ಶುದ್ಧೀಕರಣದಲ್ಲಿ ಚೀನಾ ನಂಬರ್ ಒನ್. ಚೀನಾಗೆ ನಮ್ಮ ತಾಮ್ರ ಪ್ರಾಬಲ್ಯವನ್ನು ಉಡುಗೊರೆ ಕೊಡಿಸಿದ್ದು ರಾಹುಲ್ ಗಾಂಧಿ.&lt;/p&gt;&lt;p data-block-key="17ci9"&gt;ಇನ್ನು ರಫೆಲ್ ಯುದ್ಧ ವಿಮಾನ ಖರೀದಿಗೆ 2016ರಿಂದ ಯಾವ ಪರಿ ಸರಕಾರದ ವಿರುದ್ಧ ರಾಹುಲ್ ಮುಗಿಬಿದ್ದರು ಎಂಬುದು ಇಡೀ ದೇಶ ಕಂಡಿದೆ. ಚೀನಾ ಆಕ್ರಮಣಕ್ಕೆ ಉತ್ತರ ಕೊಡಲು ಅಥವಾ ಭವಿಷ್ಯದ ಯಾವುದೇ ನೆರೆ ದೇಶಗಳ ದಾಳಿಗೆ ಉತ್ತರಿಸಲು ರಫೆಲ್‌ನ ಅಗತ್ಯ ಭಾರತಕ್ಕಿತ್ತು. ಇಲ್ಲದ ಕಥೆ ಕಟ್ಟಿ ಅದನ್ನು ತಡೆಯಲು ಹೋಗಿ, ಮೋದಿ ಸರಕಾರದ ಇಮೇಜಿಗೆ ಮಸಿಬಳಿಯಲು ಪ್ರಯತ್ನಿಸಿ ರಾಹುಲ್ ಸೋತರು.&lt;/p&gt;&lt;p data-block-key="f68rk"&gt;ಒಂದು ವೇಳೆ ರಾಹುಲ್ ಗಾಂಧಿಗೆ ಮಣಿದಿದ್ದರೆ, ಅದು ಚೀನಾಗೆ ಸಿಗಬಹುದಾಗಿದ್ದ ಇನ್ನೊಂದು ಗೆಲುವಾಗುತ್ತಿತ್ತು. ಕೋವಿಡ್ ಸಮಯದಲ್ಲೂ ರಾಹುಲ್ ತಮ್ಮ ಚೀನಾಪ್ರೇಮ ಬಿಡಲಿಲ್ಲ. ಚೀನಾ ದಿಂದ ಹರಡಿದ್ದ ಕೋವಿಡ್‌ಗೆ ಚೀನಾ ತಾನು ಕೊಡುವ ವ್ಯಾಕ್ಸಿನ್ನನ್ನೇ ಇಡೀ ಜಗತ್ತುಕೊಳ್ಳಬೇಕು ಎಂದು ಬಯಸಿತ್ತು. ರಾಹುಲ್ ಬಯಕೆಯೂ ಅದೇ ಆಗಿತ್ತು. ಆದರೆ ಭಾರತ ಸ್ವಾವಲಂಬಿಯಾಗಿ ಕೋವಿಡ್ ವ್ಯಾಕ್ಸಿನ್ ರೆಡಿ ಮಾಡಿತು.&lt;/p&gt;&lt;p data-block-key="4kr21"&gt;ಉತ್ತಮ ಗುಣಮಟ್ಟದ ವ್ಯಾಕ್ಸಿನನ್ನು ಪರದೇಶಗಳಿಗೆ ಕೊಡಮಾಡಿತು. ಇದನ್ನು ಕಟುವಾಗಿ ವಿರೋಧಿಸಿ, ಇದಕ್ಕೂ ಭ್ರಷ್ಟಾಚಾರ ಮತ್ತು ವೈಫಲ್ಯದ ಬಣ್ಣ ಹಚ್ಚಲು ನೋಡಿದ್ದು ಒನ್ಸ್ ಅಗೇನ್ ರಾಹುಲ್ ಗಾಂಧಿ. ಚೀನಾಗೆ ನಷ್ಟವಾದರೆ ರಾಹುಲ್ ಗಾಂಧಿಗೇಕೆ ಅಷ್ಟೊಂದು ದುಃಖ? ಇನ್ನು ಸೇನೆಯ ವಿಚಾರದಲ್ಲೂ ಕೀಳು ರಾಜಕೀಯ ಬಿಡಲಿಲ್ಲ.&lt;/p&gt;&lt;p data-block-key="5op8t"&gt;ಚೀನಾ ಸಿಂಪಥೈಸಿಂಗ್ ಬಿಡಲಿಲ್ಲ. 2022ರಲ್ಲಿ ಅಗ್ನಿಪಥ್ ಮೂಲಕ ಅಗ್ನಿವೀರರ ನೇಮಕಾತಿ ಶುರು ಮಾಡಿದಾಗ, ಅದನ್ನು ವಿರೋಧಿಸಿ ಜನರನ್ನು ಎತ್ತಿಕಟ್ಟುವ ಪ್ರಯತ್ನ ನಡೆಸಿದ್ದು ರಾಹುಲ್ ಗಾಂಧಿ. ಚೀನಾ ತನ್ನ ಸೇನೆಯನ್ನು ಆಧುನಿಕ &lt;b&gt;ಶಸ್ತ್ರಾಸ್ತ್ರ&lt;/b&gt;ಗಳಿಂದ ತಂತ್ರಜ್ಞಾನದಿಂದ ಬಲಗೊಳಿಸುತ್ತಿತ್ತು.&lt;/p&gt;&lt;p data-block-key="8lgqu"&gt;ನಾವು ಅದರ ಎದುರು ನಿಲ್ಲಲು ಅವರಷ್ಟೇ ಸನ್ನದ್ಧರಾಗಬೇಕಿತ್ತು. ಆದರೆ &lt;b&gt;ಡಿಫೆನ್ಸ್‌&lt;/b&gt; ಬಜೆಟ್ ಮುಕ್ಕಾಲು ಪಾಲು ಸಂಬಳ ಪಿಂಚಣಿ ಅಂತಲೇ ಹೋಗುತ್ತಿತ್ತು. ಹೀಗಾಗಿ ಅಗ್ನಿವೀರರ ನೇಮಕಾತಿ ಪ್ರಾರಂಭವಾಗಿತ್ತು. ಇದರಲ್ಲಿ ಅಗ್ನಿವೀರರಿಗೂ ಲಾಭವೇ ಇತ್ತು. ಅದನ್ನು ವಿರೋಧಿಸಿ, ರಾಹುಲ್ ಪರೋಕ್ಷ ಸಹಕಾರ ಕೊಟ್ಟಿದ್ದು ಚೀನಾಗೆ ಎಂದು ಬಿಡಿಸಿ ಹೇಳಬೇಕಿಲ್ಲ.&lt;/p&gt;&lt;p data-block-key="f0f7l"&gt;ನ್ಯೂಕ್ಲಿಯರ್ ಪವರ್ ಪ್ರಾಜೆಕ್ಟಿನ ವಿರುದ್ಧ ನಿಂತಿದ್ದ ಪಿಎಂಎಎನ್‌ಇ ಜತೆ, ಭಾರತ್ ಜೋಡೋ ಯಾತ್ರೆ ಸಮಯದಲ್ಲಿ ಕೈಗೂಡಿಸಿದ್ದೂ ಇದೇ ರಾಹುಲ್ ಗಾಂಧಿ. ಚೀನಾದ ಇಂಡಸ್ಟ್ರಿಯಲ್ ಪವರ್‌ಗೆ ಉತ್ತರವಾಗಿ ನಿಂತದ್ದು ಅದಾನಿ ಗ್ರೂಪ್. ರಾಹುಲ್ ಗಾಂಧಿಗೆ ಅದಾನಿ ಮೇಲೆ ಯಾಕಷ್ಟು ದ್ವೇಷ? ಉತ್ತರ ಚೀನಾಗೆ ಗೊತ್ತಿರಬಹುದಲ್ಲವೇ? ಇಷ್ಟು ಸಾಲದೆಂಬಂತೆ, ಚೀನಾವನ್ನು ಹಲವು ಜಾಗತಿಕ ವೇದಿಕೆಗಳಲ್ಲಿ ರಾಹುಲ್ ಗಾಂಧಿ ಹಾಡಿ ಹೊಗಳುತ್ತಲೇ ಬಂದರು.&lt;/p&gt;&lt;p data-block-key="3qt0k"&gt;ಹೂಡಿಕೆದಾರರಿಗೆ ಭಾರತಕ್ಕಿಂತ ಚೀನಾ &lt;b&gt;ಬೆಸ್ಟ್&lt;/b&gt; ಎಂಬ ಸಂದೇಶವನ್ನೂ ಗುಪ್ತವಾಗಿ ನೀಡುತ್ತಲೇ ಬಂದರು.‌ ಈಗ ಲೇಟೆ ಅಂದರೆ ಗ್ರೇಟ್ ನಿಕೋಬಾರ್ ಪ್ರಾಜೆಕ್ಟ್. ದೇಶದ ಆರ್ಥಿಕತೆಗೆ, ಅದಕ್ಕಿಂತ ಹೆಚ್ಚಾಗಿ ದೇಶದ ರಕ್ಷಣೆಯ‌ ದೃಷ್ಟಿಯಿಂದ ರೂಪುಗೊಳ್ಳುತ್ತಿರುವ ಮಹತ್ವಾಕಾಂಕ್ಷೆಯ ಯೋಜನೆ ಇದು.&lt;/p&gt;&lt;p data-block-key="3ibau"&gt;ಅಂತಾರಾಷ್ಟ್ರೀಯ ಹಬ್ ಆಗುವ ಸಾಮರ್ಥ್ಯ ಹೊಂದಿರುವ ಈ ಜಾಗ ಜಾಗತಿಕ ವ್ಯಾಪಾರದಲ್ಲಿ ಭಾರತದ ಪಾತ್ರವನ್ನು ಹೆಚ್ಚಿಸಲಿದೆ. ಎಲ್ಲಕ್ಕಿಂತ ಹೆಚ್ಚಾಗಿ ಇದು ಚೀನಾ ವಿರುದ್ಧ ದೇಶವನ್ನು ರಕ್ಷಿಸಿಕೊಳ್ಳಲು ಬೇಕಾಗಿರುವ ಅಗತ್ಯದ ನಡೆಯಾಗಿದೆ. ಚೀನಾಗೆ ಈ ಯೋಜನೆ ಕೈಗೂಡುವುದು ಯಾವ ಕಾರಣಕ್ಕೂ ಇಷ್ಟವಿಲ್ಲ.&lt;/p&gt;&lt;p data-block-key="br6gt"&gt;ಇಂಥ ಸಮಯದಲ್ಲಿ ಚೀನಾದ ಮನದಾಳದ ಮಾತಿಗೆ ಸ್ಪಂದಿಸಿ ಹೋರಾಟಕ್ಕಿಳಿದಿರುವುದು ರಾಹುಲ್ ಗಾಂಧಿ. ಆದಿವಾಸಿಗಳ ಬಗ್ಗೆ ಕಾಳಜಿ ತೋರುವ ನೆಪದಲ್ಲಿ, ಪ್ರಾಣಿ ಮತ್ತು ಪರಿಸರದ ಪ್ರೇಮ ಮೆರೆಯುತ್ತಿರುವ ರಾಹುಲ್ ಗಾಂಧಿ ಗ್ರೇಟ್ ನಿಕೋಬಾರ್ ಯೋಜನೆ ಕೈಬಿಡಬೇಕೆಂದು ಹೊಸ ಹಾರಾಟ ಶುರುಮಾಡಿದ್ದಾರೆ.&lt;/p&gt;&lt;p data-block-key="82lg"&gt;ತಮ್ಮ ಇಂಥ ಪ್ರತಿ ಹೋರಾಟದ ಹಿಂದೆಯೂ ತಣ್ಣಗೆ ಹರಿಯುವ ಚೀನಾ ಪ್ರೇಮ ಇರುವುದು ದೇಶವಾಸಿಗಳಿಗೆ ತಿಳಿಯುವುದಿಲ್ಲವೇ? ಅಥವಾ ಚೀನಾದಿಂದ ಬಂದಿರುವ ಸೂಚನೆ ಮೇರೆಗೆ ಹೋರಾಟ ರೂಪುಗೊಳ್ಳುತ್ತಿದೆ ಎಂದು ಜಿಯೋಪೊಲಿಟಿಕ್ಸ್ ಗಮನಿಸುವವರಿಗೆ ಅರ್ಥವಾಗುವು‌ ದಿಲ್ಲವೇ? ಇಂಥ ನಡೆಗಳು ಹಿಂದಿನ ಕಾಲದಲ್ಲಿ ಬಹುಶಃ ತಿಳಿಯುತ್ತಿರಲಿಲ್ಲ. ಆದರೆ ಈಗ ಬದಲಾದ ಪರಿಸ್ಥಿತಿಯಲ್ಲಿ ರಾಹುಲ್ ಗಾಂಧಿಯ ಪ್ರತಿ ನಡೆಯೂ ಬಹಳ ನೀಟಾಗಿ ಎಕ್ಸ್‌ʼಪೋಸ್ ಆಗುತ್ತಿವೆ.&lt;/p&gt;&lt;p data-block-key="64etg"&gt;ಹೀಗಾಗಿ ಅವರ ಯಾವ ಹೋರಾಟಕ್ಕೂ ಜಯ ಸಿಗುತ್ತಿಲ್ಲ. ಚೀನಾ ಪರ ಧುರಂಧರ್ ಆಗಲು ಪ್ರಯತ್ನಿಸಿ ಕೊನೆಗೆ ಬಿಜೆಪಿ ಪರವಿರುವ ಧುರಂಧರ್ ಆಗಿ ಬಿಜೆಪಿಯನ್ನು ಗೆಲ್ಲಿಸುತ್ತಿದ್ದಾರೆ. ರಾಹುಲ್‌ರ ಈ ಮನಸ್ಥಿತಿ ಮತ್ತು ದೇಶವಿರೋಧಿ ಆಲೋಚನೆ ಶುಭಸೂಚಕವಂತೂ ಅಲ್ಲ.&lt;/p&gt;&lt;p data-block-key="fubto"&gt;ರಾಹುಲ್ ಚುನಾವಣಾ ಸೋಲು ಗೆಲುವುಗಳ ಆಚೆಗೆ, ದೇಶದ ಅಭಿವೃದ್ಧಿ ಪರ, ರಕ್ಷಣೆ ಪರ ನಿಲುವು ತೋರಿಸಿದರೆ, ಕಳೆದುಹೋಗುತ್ತಿರುವ ಇಮೇಜು ಕೊಂಚವಾದರೂ ಉಳಿಯಬಹುದು.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>Astro Tips: ಒತ್ತಡದಿಂದ ಮನಸ್ಸು ಅಶಾಂತವಾಗಿದೆಯೇ?  ಹಾಗಾದ್ರೆ ಪ್ರತಿನಿತ್ಯ ಈ ಶಾಂತಿ ಮಂತ್ರಗಳನ್ನು ಜಪಿಸಿ</title><link>https://vishwavani.news/religious/shanti-mantras-mental-peace-stress-relief-77250.html</link><guid>https://vishwavani.news/religious/shanti-mantras-mental-peace-stress-relief-77250.html</guid><pubDate>Tue, 05 May 2026 03:14:36 +0000</pubDate><description>&lt;![CDATA[ಶಾಂತಿ ಮಂತ್ರಗಳು ಮನಸ್ಸಿಗೆ ಆಳವಾದ ಶಾಂತಿ ಮತ್ತು ನೆಮ್ಮದಿಯನ್ನು ನೀಡುವ ಶಕ್ತಿಯುತ ಸಾಧನಗಳಾಗಿವೆ ಎಂದು ನಂಬಲಾಗುತ್ತದೆ. ಇವುಗಳ ನಿಯಮಿತ ಜಪವು ಆತಂಕ, ಒತ್ತಡ ಹಾಗೂ ಮಾನಸಿಕ ಅಶಾಂತಿಯನ್ನು ಕಡಿಮೆ ಮಾಡಲು ಸಹಕಾರಿ. ಮಂತ್ರಗಳ ಧ್ವನಿಕಂಪನಗಳು ಮನಸ್ಸನ್ನು ಶುದ್ಧಗೊಳಿಸಿ, ಸಕಾರಾತ್ಮಕ ಚಿಂತನೆಗೆ ಉತ್ತೇಜನ ನೀಡುತ್ತವೆ. ದಿನನಿತ್ಯ ಕೆಲವು ನಿಮಿಷಗಳ ಕಾಲ ಶಾಂತಿ ಮಂತ್ರಗಳನ್ನು ಪಠಿಸುವುದರಿಂದ ಮನಸ್ಸಿನ ಸ್ಥಿರತೆ ಹೆಚ್ಚಾಗಿ, ಜೀವನದಲ್ಲಿ ಸಮತೋಲನ ಮತ್ತು ಸಂತೋಷವನ್ನು ಅನುಭವಿಸಬಹುದು.]]&gt;</description><dc:creator>&lt;![CDATA[Sushmitha Jain]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಲೈಫ್‌ಸ್ಟೈಲ್‌]]&gt;</category><category>&lt;![CDATA[ಧಾರ್ಮಿಕ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/1000484214.original.png" class="attachment-large size-large wp-post-image" alt="Astro Tips: ಒತ್ತಡದಿಂದ ಮನಸ್ಸು ಅಶಾಂತವಾಗಿದೆಯೇ?  ಹಾಗಾದ್ರೆ ಪ್ರತಿನಿತ್ಯ ಈ ಶಾಂತಿ ಮಂತ್ರಗಳನ್ನು ಜಪಿಸಿ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="ogbah"&gt;&lt;b&gt;ಬೆಂಗಳೂರು:&lt;/b&gt; ಜ್ಯೋತಿಷ್ಯಶಾಸ್ತ್ರದ ನಂಬಿಕೆಗಳ ಪ್ರಕಾರ, ಮಂತ್ರ ಜಪ ಮತ್ತು ಧ್ಯಾನವು ಮನಸ್ಸಿನ ಸಮತೋಲನವನ್ನು ಸಾಧಿಸಲು ಹಾಗೂ ದೈನಂದಿನ ಒತ್ತಡವನ್ನು ಕಡಿಮೆ ಮಾಡಲು ಪರಿಣಾಮಕಾರಿ ವಿಧಾನಗಳಾಗಿವೆ. ಮಂತ್ರಗಳನ್ನು ಪ್ರತಿನಿತ್ಯ ಜಪಿಸುವುದರಿಂದ ಅದರಲ್ಲಿ ಅಡಕವಾಗಿರುವ ಶಕ್ತಿ ಮಾನಸಿಕ ಹಾಗೂ ದೈಹಿಕ ನೆಮ್ಮದಿ ಮೇಲೆ ಪ್ರಭಾವ ಬೀರುತ್ತದೆ ಎಂದು ಶಾಸ್ತ್ರಗಳಲ್ಲಿ ಉಲ್ಲೇಖವಾಗಿದೆ. ಕೆಲವರು ಈ ಮಂತ್ರಗಳು ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿದೆ ಎಂದು ಹೇಳುತ್ತಾರೆ. ವಿಶೇಷವಾಗಿ ಶಾಂತಿ ಮಂತ್ರಗಳು ಮನಸ್ಸಿಗೆ ನೆಮ್ಮದಿ, ಸ್ಥಿರತೆ ನೀಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಹಾಗಾದರೆ, ಜ್ಯೋತಿಷ್ಯ ಶಾಸ್ತ್ರದಲ್ಲಿ &lt;a href="/religious/worship-these-deities-along-with-lord-shiva-on-monday-for-special-blessings-75781.html"&gt;&lt;b&gt;(Astro Tips)&lt;/b&gt;&lt;/a&gt; ಸೂಚಿಸಿರುವ ಆ ಶಾಂತಿ ಮಂತ್ರಿಗಳು ಯಾವುವು..? ಮತ್ತು ಅವುಗಳ ಮಹತ್ವ ಏನು ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ..&lt;/p&gt;&lt;h3 data-block-key="eo9d4"&gt;&lt;b&gt;ಶಾಂತಿ ಮಂತ್ರಗಳ ಮಹತ್ವ&lt;/b&gt;&lt;/h3&gt;&lt;p data-block-key="14tkb"&gt;ಮಂತ್ರಗಳಲ್ಲಿ ಅನೇಕ ವಿಧಗಳಿವೆ. ಕೆಲವು ನಿರ್ದಿಷ್ಟ ದೇವತೆಗಳಿಗೆ ಸಮರ್ಪಿತವಾಗಿದ್ದು, ಇತರ ಕೆಲವು ಮಂತ್ರಗಳು ಮನಸ್ಸಿನ ಶಾಂತಿ, ಆತ್ಮಶುದ್ಧಿ ಮತ್ತು ಮೋಕ್ಷವನ್ನು ಸಾಧಿಸಲು ಉದ್ದೇಶಿತವಾಗಿವೆ. ಇಂತಹ ಮಂತ್ರಗಳನ್ನು ಶಾಂತಿ ಮಂತ್ರಗಳು ಎಂದು ಕರೆಯಲಾಗುತ್ತದೆ. ಇವುಗಳನ್ನು ನಿಯಮಿತವಾಗಿ ಜಪಿಸುವುದರಿಂದ ಜೀವನದಲ್ಲಿ ಧನಾತ್ಮಕ ಬದಲಾವಣೆಗಳನ್ನು ಕಾಣಬಹುದು ಎಂದು ನಂಬಲಾಗುತ್ತದೆ. ಆತಂಕ, ಒತ್ತಡ ಹಾಗೂ ಖಿನ್ನತೆ ಇತ್ಯಾದಿ ಸಮಸ್ಯೆಗಳಿಂದ ದೂರವಿರಲು ಸಹ ಇವು ನೆರವಾಗುತ್ತವೆ.&lt;br/&gt;ಇದಲ್ಲದೆ, ಮದುವೆ, ಗೃಹಪ್ರವೇಶ, ಶಿಶು ಜನನ ಮುಂತಾದ ಶುಭಕಾರ್ಯಗಳಲ್ಲಿ ಶಾಂತಿ ಮಂತ್ರಗಳನ್ನು ಜಪಿಸುವುದು ಶುಭಕರವೆಂದು ಪರಿಗಣಿಸಲಾಗುತ್ತದೆ. ಇದು ಕುಟುಂಬದವರ ಆಶೀರ್ವಾದ ಮತ್ತು ಉತ್ತಮ ಶಕ್ತಿಯನ್ನು ಆಕರ್ಷಿಸುತ್ತದೆ ಎಂದು ಹೇಳಲಾಗುತ್ತದೆ.&lt;/p&gt;&lt;p data-block-key="fgguj"&gt;&lt;a href="/religious/astro-tips-lucky-signs-before-leaving-home-wealth-success-75378.html"&gt;Astro Tips: ಮನೆಯಿಂದ ಹೊರಡುವಾಗ ಈ ಸಂಕೇತಗಳು ಕಂಡರೆ ಅದೃಷ್ಟ ನಿಮ್ಮದಾಗುತ್ತದೆ!&lt;/a&gt;&lt;/p&gt;&lt;h3 data-block-key="d4ebk"&gt;&lt;b&gt;ಶಾಂತಿ ಮಂತ್ರಗಳು ಹೀಗಿವೆ ನೋಡಿ:&lt;/b&gt;&lt;/h3&gt;&lt;p data-block-key="u9fl"&gt;ಓಂ ದ್ಯೌ ಶಾಂತಿ ರಂತರಿಕ್ಷ ಗ್ವಾಂ ಶಾಂತಿಃ&lt;br/&gt;&lt;br/&gt;ಪೃಥ್ವೀ ಶಾಂತಿ ರಪಃ ಶಾಂತಿ ರೋಷದ್ಧಾಯಃ ಶಾಂತಿಃ&lt;br/&gt;-ವನಸ್ಪತಾಯಃ ಶಾಂತಿ ವಿಶ್ವೇದ್ ದೇವಾಃ ಶಾಂತಿ ಬ್ರಹ್ಮ ಶಾಂತಿಃ&lt;br/&gt;&lt;br/&gt;ಸರ್ವಾಗ್ವಾಂ ಶಾಂತಿಃ ಶಾಂತಿ ರೇವಾ ಶಾಂತಿಃ ಸ ಮಾ ಶಾಂತಿ ರೇಧಿ&lt;br/&gt;&lt;br/&gt;ಓಂ ಶಾಂತಿಃ ಶಾಂತಿಃ ಶಾಂತಿಃ ಓಂ&lt;/p&gt;&lt;h3 data-block-key="9q2o5"&gt;&lt;b&gt;ಶಾಂತಿ ಮಂತ್ರಗಳ ಪ್ರಯೋಜನ:&lt;/b&gt;&lt;/h3&gt;&lt;p data-block-key="17fm2"&gt;ಮನಸ್ಸಿನ ಶುದ್ಧೀಕರಣಕ್ಕೆ ಸಹಾಯಕ.&lt;br/&gt;ಶಾಂತ ಮನೋಭಾವವನ್ನು ಉಂಟುಮಾಡುತ್ತದೆ.&lt;br/&gt;ನೋವು ಮತ್ತು ದುಃಖವನ್ನು ಕಡಿಮೆ ಮಾಡುತ್ತದೆ.&lt;br/&gt;ಮಾನಸಿಕ ಗಾಯಗಳಿಂದ ಚೇತರಿಸಿಕೊಳ್ಳಲು ನೆರವಾಗುತ್ತದೆ.&lt;br/&gt;ಮನಸ್ಸಿನ ದೃಢತೆ ಮತ್ತು ಸ್ಥೈರ್ಯವನ್ನು ಹೆಚ್ಚಿಸುತ್ತದೆ.&lt;/p&gt;&lt;h3 data-block-key="47l60"&gt;&lt;b&gt;ಯಾವಾಗ ಜಪಿಸಬೇಕು..?&lt;/b&gt;&lt;/h3&gt;&lt;p data-block-key="hcin"&gt;ಬೆಳಿಗ್ಗೆ ಬೇಗನೆ (ಸುಮಾರು 6ರಿಂದ 8 ಗಂಟೆಯೊಳಗೆ) ಮಂತ್ರ ಜಪಿಸುವುದು ಅತ್ಯುತ್ತಮ ಸಮಯವೆಂದು ಪರಿಗಣಿಸಲಾಗಿದೆ. ದೈನಂದಿನ ಕಾರ್ಯಗಳನ್ನು ಮುಗಿಸಿದ ನಂತರ ಜಪಿಸಲು ಆರಂಭಿಸುವುದು ಉತ್ತಮ. ಮುಂಜಾನೆ ಸಾಧ್ಯವಾಗದಿದ್ದರೆ, ಸಂಜೆ ಅಥವಾ ರಾತ್ರಿ ಮಲಗುವ ಮೊದಲು ಜಪಿಸಬಹುದು. ಮುಖ್ಯವಾಗಿ, ಪ್ರತಿದಿನ ಒಂದೇ ಸಮಯದಲ್ಲಿ ಜಪಿಸುವ ಅಭ್ಯಾಸ ಬೆಳೆಸಿಕೊಳ್ಳುವುದು ಅತ್ಯಂತ ಮುಖ್ಯ.&lt;br/&gt;ನಿಯಮಿತವಾಗಿ ಶಾಂತಿ ಮಂತ್ರಗಳನ್ನು ಪಠಿಸುವುದರಿಂದ ಮನಸ್ಸಿಗೆ ಶಾಂತಿ ದೊರೆಯುವುದರ ಜೊತೆಗೆ ದೈಹಿಕ ಮತ್ತು ಮಾನಸಿಕ ಆರೋಗ್ಯವೂ ಸುಧಾರಿಸುತ್ತದೆ. ಶಾಂತ ಮನಸ್ಸು ಸಕಾರಾತ್ಮಕ ಚಿಂತನೆಗೆ ದಾರಿ ಮಾಡಿಕೊಡುತ್ತದೆ. ಆದ್ದರಿಂದ ಮನಸ್ಸನ್ನು ಸದಾ ಸಮತೋಲನದಲ್ಲಿ ಇಡುವುದು ಅತ್ಯಗತ್ಯ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>Actress Rajini: 'ಅಮೃತವರ್ಷಿಣಿ' ರಜಿನಿ ವಿರುದ್ಧ ಫಿಲ್ಮ್‌ ಚೇಂಬರ್ ಮೆಟ್ಟಿಲೇರಿದ ಚಿತ್ರತಂಡ!</title><link>https://vishwavani.news/movies/actress-rajini-amritavarshini-fame-film-chamber-stepped-up-against-rajini-77253.html</link><guid>https://vishwavani.news/movies/actress-rajini-amritavarshini-fame-film-chamber-stepped-up-against-rajini-77253.html</guid><pubDate>Tue, 05 May 2026 03:02:19 +0000</pubDate><description>&lt;![CDATA[Actress Rajini: ರಜಿನಿ ಅವರು ತಾವು ನಟಿಸಿರುವ ಸಿನಿಮಾದ ಪ್ರಚಾರಕ್ಕೆ ಸಹಕರಿಸುತ್ತಿಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿದೆ.  ಸಿನಿಮಾದ ನಿರ್ದೇಶಕ ಮತ್ತು ನಿರ್ಮಾಪಕರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ (ಫಿಲ್ಮ್‌ ಚೇಂಬರ್‌) (Film chamber) ಅಧಿಕೃತವಾಗಿ ದೂರು ನೀಡಿದ್ದಾರೆ.]]&gt;</description><dc:creator>&lt;![CDATA[Yashaswi Devadiga]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಮನರಂಜನೆ]]&gt;</category><category>&lt;![CDATA[ಸಿನಿಮಾ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Actress_Rajini_Amritavarshini_fame_Film_Chamber.original.jpg" class="attachment-large size-large wp-post-image" alt="Actress Rajini: 'ಅಮೃತವರ್ಷಿಣಿ' ರಜಿನಿ ವಿರುದ್ಧ ಫಿಲ್ಮ್‌ ಚೇಂಬರ್ ಮೆಟ್ಟಿಲೇರಿದ ಚಿತ್ರತಂಡ!" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="qc3eo"&gt;'ಅಸುರನ ಕೈಯಲ್ಲಿ ಪಾರಿಜಾತ' ಚಿತ್ರದಲ್ಲಿ ʻಅಮೃತವರ್ಷಿಣಿʼ ಧಾರಾವಾಹಿ ಖ್ಯಾತಿಯ &lt;a href="/photo-gallery/actress-rajini-married-to-boyfriend-special-post-goes-viral-60514.html"&gt;ರಜಿನಿ&lt;/a&gt; (rajini actress) ಅವರು ನಟಿಸಿದ್ದಾರೆ. ಈ ಸಿನಿಮಾವನ್ನ ವಿಘ್ನೇಶ್‌ ನಿರ್ದೇಶಿಸಿದ್ದು, ಕಾರ್ತಿಕ್‌ (Karthik) ಅವರು ಮೀಕ್ಷಾ ಬ್ಯಾನರ್‌ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಸಿನಿಮಾ ಬಹುತೇಕ ಸಿದ್ದವಾಗಿದ್ದು, ಇದೇ ಮೇ 22ರಂದು ತೆರೆಕಾಣಲು ಸಜ್ಜಾಗಿದೆ. ರಜಿನಿ ಅವರು ತಾವು ನಟಿಸಿರುವ ಸಿನಿಮಾದ ಪ್ರಚಾರಕ್ಕೆ ಸಹಕರಿಸುತ್ತಿಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿದೆ.  ಸಿನಿಮಾದ ನಿರ್ದೇಶಕ ಮತ್ತು ನಿರ್ಮಾಪಕರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ (ಫಿಲ್ಮ್‌ ಚೇಂಬರ್‌) (Film chamber) ಅಧಿಕೃತವಾಗಿ ದೂರು ನೀಡಿದ್ದಾರೆ.&lt;/p&gt;&lt;h3 data-block-key="2ov8j"&gt;&lt;b&gt; ಫಿಲಂ ಚೇಂಬರ್​​ಗೆ ದೂರು &lt;/b&gt;&lt;/h3&gt;&lt;p data-block-key="f2gep"&gt;ಈಚೆಗಷ್ಟೇ ಮದುವೆಯಾಗಿರುವ ‘ಅಮೃತವರ್ಷಿಣಿ’ ಸೀರಿಯಲ್​ ನಟಿ ರಜಿನಿ ವಿರುದ್ಧ ಸಿನಿಮಾದ ನಿರ್ದೇಶಕ ಮತ್ತು ನಿರ್ಮಾಪಕರುಗಳು ಫಿಲಂ ಚೇಂಬರ್​​ಗೆ ದೂರು ನೀಡಿದ್ದಾರೆ. &lt;/p&gt;&lt;p data-block-key="cft4g"&gt;&lt;b&gt;ಇದನ್ನೂ ಓದಿ: &lt;/b&gt;&lt;a href="/movies/ss-rajamouli-and-mahesh-babu-varanasi-film-shoot-faces-water-crisis-77149.html"&gt;Varanasi Movie:  ರಾಜಮೌಳಿ 'ವಾರಣಾಸಿ' ಚಿತ್ರಕ್ಕೆ ನೀರಿನ ಸಮಸ್ಯೆ; ಶೂಟಿಂಗ್ ಸ್ಥಗಿತ&lt;/a&gt;&lt;/p&gt;&lt;p data-block-key="8bl5p"&gt;ಚಿತ್ರತಂಡದ ಫೋನ್‌ ಕರೆಗಳನ್ನು ರಜಿನಿ ಸ್ವೀಕರಿಸುತ್ತಿಲ್ಲ ಮತ್ತು ನಿರ್ದೇಶಕರ ನಂಬರ್‌ ಅನ್ನ ಬ್ಲಾಕ್‌ ಮಾಡಿದ್ದಾರೆ ಎಂದು ವಿಘ್ನೇಶ್‌ ಆಕ್ರೋಶ ಹೊರಹಾಕಿದ್ದಾರೆ. ಸಿನಿಮಾದ ಪ್ರಚಾರಕ್ಕೆ ಬರುವಂತೆ ನಟಿಯನ್ನು ಕರೆದರೆ ಹೆಚ್ಚುವರಿ ಹಣ ಕೇಳುತ್ತಿದ್ದಾರೆ ಎಂದು ನಿರ್ದೇಶಕ ವಿಘ್ನೇಶ್ ಹೇಳಿದ್ದಾರೆ.&lt;/p&gt;&lt;p data-block-key="6kror"&gt;&lt;/p&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="instagram-media" data-instgrm-captioned data-instgrm-permalink="https://www.instagram.com/reel/DXqQDDqkzyz/?utm_source=ig_embed&amp;amp;utm_campaign=loading" data-instgrm-version="14" style=" background:#FFF; border:0; border-radius:3px; box-shadow:0 0 1px 0 rgba(0,0,0,0.5),0 1px 10px 0 rgba(0,0,0,0.15); margin: 1px; max-width:540px; min-width:326px; padding:0; width:99.375%; width:-webkit-calc(100% - 2px); width:calc(100% - 2px);"&gt;&lt;div style="padding:16px;"&gt; &lt;a href="https://www.instagram.com/reel/DXqQDDqkzyz/?utm_source=ig_embed&amp;amp;utm_campaign=loading" style=" background:#FFFFFF; line-height:0; padding:0 0; text-align:center; text-decoration:none; width:100%;" target="_blank"&gt; &lt;div style=" display: flex; flex-direction: row; align-items: center;"&gt; &lt;div style="background-color: #F4F4F4; border-radius: 50%; flex-grow: 0; height: 40px; margin-right: 14px; width: 40px;"&gt;&lt;/div&gt; &lt;div style="display: flex; flex-direction: column; flex-grow: 1; justify-content: center;"&gt; &lt;div style=" background-color: #F4F4F4; border-radius: 4px; flex-grow: 0; height: 14px; margin-bottom: 6px; width: 100px;"&gt;&lt;/div&gt; &lt;div style=" background-color: #F4F4F4; border-radius: 4px; flex-grow: 0; height: 14px; width: 60px;"&gt;&lt;/div&gt;&lt;/div&gt;&lt;/div&gt;&lt;div style="padding: 19% 0;"&gt;&lt;/div&gt; &lt;div style="display:block; height:50px; margin:0 auto 12px; width:50px;"&gt;&lt;svg width="50px" height="50px" viewBox="0 0 60 60" version="1.1" xmlns="https://www.w3.org/2000/svg" xmlns:xlink="https://www.w3.org/1999/xlink"&gt;&lt;g stroke="none" stroke-width="1" fill="none" fill-rule="evenodd"&gt;&lt;g transform="translate(-511.000000, -20.000000)" fill="#000000"&gt;&lt;g&gt;&lt;path d="M556.869,30.41 C554.814,30.41 553.148,32.076 553.148,34.131 C553.148,36.186 554.814,37.852 556.869,37.852 C558.924,37.852 560.59,36.186 560.59,34.131 C560.59,32.076 558.924,30.41 556.869,30.41 M541,60.657 C535.114,60.657 530.342,55.887 530.342,50 C530.342,44.114 535.114,39.342 541,39.342 C546.887,39.342 551.658,44.114 551.658,50 C551.658,55.887 546.887,60.657 541,60.657 M541,33.886 C532.1,33.886 524.886,41.1 524.886,50 C524.886,58.899 532.1,66.113 541,66.113 C549.9,66.113 557.115,58.899 557.115,50 C557.115,41.1 549.9,33.886 541,33.886 M565.378,62.101 C565.244,65.022 564.756,66.606 564.346,67.663 C563.803,69.06 563.154,70.057 562.106,71.106 C561.058,72.155 560.06,72.803 558.662,73.347 C557.607,73.757 556.021,74.244 553.102,74.378 C549.944,74.521 548.997,74.552 541,74.552 C533.003,74.552 532.056,74.521 528.898,74.378 C525.979,74.244 524.393,73.757 523.338,73.347 C521.94,72.803 520.942,72.155 519.894,71.106 C518.846,70.057 518.197,69.06 517.654,67.663 C517.244,66.606 516.755,65.022 516.623,62.101 C516.479,58.943 516.448,57.996 516.448,50 C516.448,42.003 516.479,41.056 516.623,37.899 C516.755,34.978 517.244,33.391 517.654,32.338 C518.197,30.938 518.846,29.942 519.894,28.894 C520.942,27.846 521.94,27.196 523.338,26.654 C524.393,26.244 525.979,25.756 528.898,25.623 C532.057,25.479 533.004,25.448 541,25.448 C548.997,25.448 549.943,25.479 553.102,25.623 C556.021,25.756 557.607,26.244 558.662,26.654 C560.06,27.196 561.058,27.846 562.106,28.894 C563.154,29.942 563.803,30.938 564.346,32.338 C564.756,33.391 565.244,34.978 565.378,37.899 C565.522,41.056 565.552,42.003 565.552,50 C565.552,57.996 565.522,58.943 565.378,62.101 M570.82,37.631 C570.674,34.438 570.167,32.258 569.425,30.349 C568.659,28.377 567.633,26.702 565.965,25.035 C564.297,23.368 562.623,22.342 560.652,21.575 C558.743,20.834 556.562,20.326 553.369,20.18 C550.169,20.033 549.148,20 541,20 C532.853,20 531.831,20.033 528.631,20.18 C525.438,20.326 523.257,20.834 521.349,21.575 C519.376,22.342 517.703,23.368 516.035,25.035 C514.368,26.702 513.342,28.377 512.574,30.349 C511.834,32.258 511.326,34.438 511.181,37.631 C511.035,40.831 511,41.851 511,50 C511,58.147 511.035,59.17 511.181,62.369 C511.326,65.562 511.834,67.743 512.574,69.651 C513.342,71.625 514.368,73.296 516.035,74.965 C517.703,76.634 519.376,77.658 521.349,78.425 C523.257,79.167 525.438,79.673 528.631,79.82 C531.831,79.965 532.853,80.001 541,80.001 C549.148,80.001 550.169,79.965 553.369,79.82 C556.562,79.673 558.743,79.167 560.652,78.425 C562.623,77.658 564.297,76.634 565.965,74.965 C567.633,73.296 568.659,71.625 569.425,69.651 C570.167,67.743 570.674,65.562 570.82,62.369 C570.966,59.17 571,58.147 571,50 C571,41.851 570.966,40.831 570.82,37.631"&gt;&lt;/path&gt;&lt;/g&gt;&lt;/g&gt;&lt;/g&gt;&lt;/svg&gt;&lt;/div&gt;&lt;div style="padding-top: 8px;"&gt; &lt;div style=" color:#3897f0; font-family:Arial,sans-serif; font-size:14px; font-style:normal; font-weight:550; line-height:18px;"&gt;View this post on Instagram&lt;/div&gt;&lt;/div&gt;&lt;div style="padding: 12.5% 0;"&gt;&lt;/div&gt; &lt;div style="display: flex; flex-direction: row; margin-bottom: 14px; align-items: center;"&gt;&lt;div&gt; &lt;div style="background-color: #F4F4F4; border-radius: 50%; height: 12.5px; width: 12.5px; transform: translateX(0px) translateY(7px);"&gt;&lt;/div&gt; &lt;div style="background-color: #F4F4F4; height: 12.5px; transform: rotate(-45deg) translateX(3px) translateY(1px); width: 12.5px; flex-grow: 0; margin-right: 14px; margin-left: 2px;"&gt;&lt;/div&gt; &lt;div style="background-color: #F4F4F4; border-radius: 50%; height: 12.5px; width: 12.5px; transform: translateX(9px) translateY(-18px);"&gt;&lt;/div&gt;&lt;/div&gt;&lt;div style="margin-left: 8px;"&gt; &lt;div style=" background-color: #F4F4F4; border-radius: 50%; flex-grow: 0; height: 20px; width: 20px;"&gt;&lt;/div&gt; &lt;div style=" width: 0; height: 0; border-top: 2px solid transparent; border-left: 6px solid #f4f4f4; border-bottom: 2px solid transparent; transform: translateX(16px) translateY(-4px) rotate(30deg)"&gt;&lt;/div&gt;&lt;/div&gt;&lt;div style="margin-left: auto;"&gt; &lt;div style=" width: 0px; border-top: 8px solid #F4F4F4; border-right: 8px solid transparent; transform: translateY(16px);"&gt;&lt;/div&gt; &lt;div style=" background-color: #F4F4F4; flex-grow: 0; height: 12px; width: 16px; transform: translateY(-4px);"&gt;&lt;/div&gt; &lt;div style=" width: 0; height: 0; border-top: 8px solid #F4F4F4; border-left: 8px solid transparent; transform: translateY(-4px) translateX(8px);"&gt;&lt;/div&gt;&lt;/div&gt;&lt;/div&gt; &lt;div style="display: flex; flex-direction: column; flex-grow: 1; justify-content: center; margin-bottom: 24px;"&gt; &lt;div style=" background-color: #F4F4F4; border-radius: 4px; flex-grow: 0; height: 14px; margin-bottom: 6px; width: 224px;"&gt;&lt;/div&gt; &lt;div style=" background-color: #F4F4F4; border-radius: 4px; flex-grow: 0; height: 14px; width: 144px;"&gt;&lt;/div&gt;&lt;/div&gt;&lt;/a&gt;&lt;p style=" color:#c9c8cd; font-family:Arial,sans-serif; font-size:14px; line-height:17px; margin-bottom:0; margin-top:8px; overflow:hidden; padding:8px 0 7px; text-align:center; text-overflow:ellipsis; white-space:nowrap;"&gt;&lt;a href="https://www.instagram.com/reel/DXqQDDqkzyz/?utm_source=ig_embed&amp;amp;utm_campaign=loading" style=" color:#c9c8cd; font-family:Arial,sans-serif; font-size:14px; font-style:normal; font-weight:normal; line-height:17px; text-decoration:none;" target="_blank"&gt;A post shared by Rajini (@rajiniiofficial)&lt;/a&gt;&lt;/p&gt;&lt;/div&gt;&lt;/blockquote&gt;
&lt;script async src="//www.instagram.com/embed.js"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="7rek3"&gt;&lt;/p&gt;&lt;p data-block-key="7sfjc"&gt;ರಜಿನಿ ಅವರು ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡ ಸಂಭಾವನೆಯನ್ನ ಪಡೆದಿದ್ದಾರೆ. ಸಿನಿಮಾದದ ಪ್ರಚಾರಕ್ಕಾಗಿ ಬರಲು ನಟಿ ರಜಿನಿ ಅವರು ಹೆಚ್ಚುವರಿ ಹಣದ ಬೇಡಿಕೆ ಇಟ್ಟಿದ್ದಾರೆ. ಸಿನಿಮಾ ರೀಲ್ಸ್‌ಗಳನ್ನ ಸೋಷಿಯಲ್‌ ಮೀಡಿಯಾಗಳಲ್ಲಿ ಹಂಚಿಕೊಳ್ಳಲು ಕೇಳಿದಾಗಲೂ, ಅದಕ್ಕೆ ಪ್ರತ್ಯೇಕ ಹಣ ನೀಡುವಂತೆ ಕೇಳುತ್ತಿದ್ದಾರೆ ಎನ್ನಲಾಗಿದೆ.&lt;/p&gt;&lt;p data-block-key="8jfm6"&gt;ಚಿಕ್ಕ ವಯಸ್ಸಿಗೆ ನಟನೆ ಆರಂಭಿಸಿದ ರಜಿನಿ ಅವರು ತುಮಕೂರು ಮೂಲದವರು. ಬಾಲ್ಯದಲ್ಲಿಯೇ ಸಾಕಷ್ಟು ಕಷ್ಟಗಳನ್ನ ಅನುಭವಿಸಿದ ನಟಿಗೆ ‘ಅಮೃತವರ್ಷಿಣಿ’ ಧಾರಾವಾಹಿ ದೊಡ್ಡ ಬ್ರೇಕ್‌ ತಂದುಕೊಟ್ಟಿತ್ತು. &lt;/p&gt;&lt;p data-block-key="3eva2"&gt;&lt;b&gt;ಇದನ್ನೂ ಓದಿ: &lt;/b&gt;&lt;a href="/movies/naagin-7-air-unedited-vfx-scene-with-blue-screen-in-its-latest-episode-77211.html"&gt;Naagin 7: ಇದೊಂದು ಕಾರಣಕ್ಕೆ ಸಖತ್‌ ಟ್ರೋಲ್‌ ಆಯ್ತು ನಾಗಿನ್ ಸೀರಿಯಲ್‌!&lt;/a&gt;&lt;/p&gt;&lt;p data-block-key="c2qks"&gt;ಧಾರಾವಾಹಿ ಮುಕ್ತಯವಾಗಿ ದಶಕ ಕಳೆದರು ಇಂದಿಗೂ ಇವರನ್ನ ಅಮೃತಾ ಪಾತ್ರದಲ್ಲಿಯೇ ವೀಕ್ಷಕರು ಗುರುತಿಸುವುದು.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>MI vs LSG: ಜೈ ಶ್ರೀರಾಮ್ ನೋಟ್ ಬರೆದು ಚೊಚ್ಚಲ ಐಪಿಎಲ್ ವಿಕೆಟ್ ಸಂಭ್ರಮಿಸಿದ ಮುಂಬೈ ಸ್ಪಿನ್ನರ್</title><link>https://vishwavani.news/sports/mis-raghu-sharma-celebrates-maiden-ipl-wicket-with-emotional-note-77251.html</link><guid>https://vishwavani.news/sports/mis-raghu-sharma-celebrates-maiden-ipl-wicket-with-emotional-note-77251.html</guid><pubDate>Tue, 05 May 2026 02:32:48 +0000</pubDate><description>&lt;![CDATA[IPL 2026: ಹ್ಯಾಟ್ರಿಕ್‌ ಸೋಲಿನ ಬಳಿಕ ಮುಂಬೈ ತಂಡವು ಗೆಲುವಿನ ಹಳಿಗೆ ಮರಳಿತು. ಲಖನೌ ವಿರುದ್ಧ 6 ವಿಕೆಟ್‌ ಅಂತರದ ಗೆಲುವು ಸಾಧಿಸಿತು.  ಗುರಿ ಬೆನ್ನಟ್ಟಿದ ಮುಂಬೈ 18.4 ಓವರ್‌ಗಳಲ್ಲಿ 4 ವಿಕೆಟ್‌ಗೆ 229 ರನ್‌ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು. ಗೆದ್ದರೂ  ತಂಡದ ಪ್ಲೇ ಆಫ್‌ ಹಾದಿ ಕಠಿಣವಾಗಿದೆ.]]&gt;</description><dc:creator>&lt;![CDATA[Abhilash BC]]&gt;</dc:creator><category>&lt;![CDATA[ಕ್ರಿಕೆಟ್‌]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕ್ರೀಡೆ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Raghu_Sharma.original.jpg" class="attachment-large size-large wp-post-image" alt="MI vs LSG: ಜೈ ಶ್ರೀರಾಮ್ ನೋಟ್ ಬರೆದು ಚೊಚ್ಚಲ ಐಪಿಎಲ್ ವಿಕೆಟ್ ಸಂಭ್ರಮಿಸಿದ ಮುಂಬೈ ಸ್ಪಿನ್ನರ್" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="9zlji"&gt;ಮುಂಬಯಿ, ಮೇ 5: ಸೋಮವಾರ ರಾತ್ರಿ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಲಖನೌ ಸೂಪರ್ ಜೈಂಟ್ಸ್(MI vs LSG) ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಪರ ತಮ್ಮ ಚೊಚ್ಚಲ ಐಪಿಎಲ್(IPL 2026) ವಿಕೆಟ್ ಪಡೆದ ನಂತರ ರಘು ಶರ್ಮಾ(Raghu Sharma) ಭಾವನಾತ್ಮಕ ಸಂಭ್ರಮಾಚರಣೆ ಮಾಡಿದರು. ತಮ್ಮ ಎರಡನೇ ಐಪಿಎಲ್ ಪಂದ್ಯದಲ್ಲಿ, ರಘು, ಅಕ್ಷತ್ ರಘುವಂಶಿ ಅವರನ್ನು ಔಟ್ ಮಾಡುವ ಮೂಲಕ ತಮ್ಮ ಖಾತೆಯನ್ನು ತೆರೆದರು. ಇದೇ ವೇಳೆ ಜೈ ಶ್ರೀರಾಮ್ ಬರೆದ ಈ ಚೀಟಿಯನ್ನು ಪ್ರದರ್ಶಿಸುವ ಮೂಲಕ ಗಮನ ಸೆಳೆದರು. ಅವರ ಈ ಸಂಭ್ರಮಾಚರಣೆ ಭಾರಿ ವೈರಲ್ ಆಗಿದೆ.&lt;/p&gt;&lt;p data-block-key="4sg5s"&gt;33 ವರ್ಷದ ರಘುವಂಶಿ ಚೊಚ್ಚಲ ಐಪಿಎಲ್‌ ಪಡೆಯುತ್ತಿದ್ದಂತೆ, ತನ್ನ ಜೇಬಿನಿಂದ ಒಂದು ಚೀಟಿಯನ್ನು ಹೊರತೆಗೆದು ಅದನ್ನು ಪ್ರದರ್ಶಿಸುವ ಮೂಲಕ ಆಚರಿಸಿದರು. ಈ ಚೀಟಿಯಲ್ಲಿ ʼರಾಧೆ ರಾಧೆ, ಗುರದೇವನ ದೈವಿಕ ಕೃಪೆ ಹಾಗೂ ಆಶೀರ್ವಾದದಿಂದ ನನ್ನ ನೋವಿನ 15 ವರ್ಷಗಳು ಇಂದು ಅಂತ್ಯಗೊಂಡಿದೆ. ನನಗೆ ಮಹತ್ವದ ವೇದಿಕೆಯಲ್ಲಿ ಈ ಅವಕಾಶ ನೀಡಿದ ಮುಂಬೈ ಇಂಡಿಯನ್ಸ್ ತಂಡಕ್ಕೆ ಎಂದೆಂದಿಗೂ ಕೃತಜ್ಞನಾಗಿದ್ದೇನೆ. ಜೈ ಶ್ರೀರಾಮ್ʼ ಎಂದು ಬರೆದಿತ್ತು.&lt;/p&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="twitter-tweet"&gt;&lt;p lang="en" dir="ltr"&gt;&lt;a href="https://twitter.com/hashtag/RaghuSharma?src=hash&amp;amp;ref_src=twsrc%5Etfw"&gt;#RaghuSharma&lt;/a&gt; makes a statement with that wicket &lt;br&gt;&lt;br&gt;Years of hard work and belief are finally paying off. &lt;a href="https://twitter.com/hashtag/TATAIPL?src=hash&amp;amp;ref_src=twsrc%5Etfw"&gt;#TATAIPL&lt;/a&gt; Revenge Week 2026 ➡️ &lt;a href="https://twitter.com/hashtag/MIvLSG?src=hash&amp;amp;ref_src=twsrc%5Etfw"&gt;#MIvLSG&lt;/a&gt; | LIVE NOW &lt;a href="https://t.co/hc4PVkY1Pc"&gt;https://t.co/hc4PVkY1Pc&lt;/a&gt; &lt;a href="https://t.co/QFbQB1OeRg"&gt;pic.twitter.com/QFbQB1OeRg&lt;/a&gt;&lt;/p&gt;&amp;mdash; Star Sports (@StarSportsIndia) &lt;a href="https://twitter.com/StarSportsIndia/status/2051323265164227064?ref_src=twsrc%5Etfw"&gt;May 4, 2026&lt;/a&gt;&lt;/blockquote&gt; &lt;script async src="https://platform.twitter.com/widgets.js" charset="utf-8"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="9zlji"&gt;ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ರಘು ಶರ್ಮಾ ಸ್ಥಿರ ಪ್ರದರ್ಶನ ನೀಡಿ 4 ಓವರ್‌ಗೆ 36 ರನ್‌ ನೀಡಿ 1 ವಿಕೆಟ್‌ ಕಿತ್ತರು. ಪ್ರಥಮ ದರ್ಜೆ, ಲಿಸ್ಟ್ ಎ ಮತ್ತು ಟಿ 20 ಕ್ರಿಕೆಟ್‌ನಲ್ಲಿ ಕೇವಲ 30 ಪಂದ್ಯಗಳನ್ನು ಆಡಿರುವ ರಘು, ಹಲವು ವರ್ಷಗಳಿಂದ ತಮ್ಮ ಹೋರಾಟಗಳನ್ನು ಸಹಿಸಿಕೊಂಡಿದ್ದಾರೆ. ಜಲಂಧರ್‌ನಲ್ಲಿ ಜನಿಸಿದ ಲೆಗ್ ಸ್ಪಿನ್ನರ್ ಪಂಜಾಬ್ ಮತ್ತು ಪುದುಚೇರಿಯನ್ನು ಪ್ರತಿನಿಧಿಸಿದರು. 2017–18 ರ ರಣಜಿ ಟ್ರೋಫಿಯಲ್ಲಿ ಪ್ರಥಮ ದರ್ಜೆಗೆ ಪದಾರ್ಪಣೆ ಮಾಡಿದರು. ಅವರು ರೆಡ್-ಬಾಲ್ ಕ್ರಿಕೆಟ್‌ನಲ್ಲಿ ಪ್ರಭಾವಶಾಲಿಯಾಗಿದ್ದು, 12 ಪಂದ್ಯಗಳಲ್ಲಿ 57 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದರಲ್ಲಿ ಅನೇಕ ಐದು ವಿಕೆಟ್‌ಗಳು ಮತ್ತು ಹತ್ತು ವಿಕೆಟ್‌ಗಳು ಸೇರಿವೆ.&lt;/p&gt;&lt;p data-block-key="2n736"&gt;&lt;a href="/sports/helpless-rishabh-pant-left-praying-for-luck-as-lsg-sink-deeper-after-mi-defeat-77246.html"&gt;MI vs LSG: 'ಅದೃಷ್ಟದ ಅವಶ್ಯಕತೆಯಿದೆ'; ಸತತ ಸೋಲಿನ ಬೆನ್ನಲ್ಲೇ ಪಂತ್‌ ಹತಾಶ ನುಡಿ&lt;/a&gt;&lt;/p&gt;&lt;p data-block-key="d63ot"&gt;ಸೀಮಿತ ಓವರ್‌ಗಳ ಸ್ವರೂಪಗಳಲ್ಲಿ, ಅವರು 2024–25ರ ವಿಜಯ್ ಹಜಾರೆ ಟ್ರೋಫಿಯಲ್ಲಿ ಎಂಟು ಪಂದ್ಯಗಳಲ್ಲಿ 14 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಗಮನ ಸೆಳೆದರು. 2025 ರಲ್ಲಿ ಮುಂಬೈ ಇಂಡಿಯನ್ಸ್ ಅವರನ್ನು ಮಧ್ಯ-ಋತುವಿನ ಬದಲಿಯಾಗಿ ಸಹಿ ಮಾಡಿದಾಗ ಅವರ ಪ್ರಗತಿ ಸಾಧ್ಯವಾಯಿತು. ಈ ಹಿಂದೆ ಫ್ರಾಂಚೈಸಿಯೊಂದಿಗೆ ನೆಟ್ ಬೌಲರ್ ಆಗಿ ಸೇವೆ ಸಲ್ಲಿಸಿದ್ದರು.&lt;/p&gt;&lt;h3 data-block-key="4hclb"&gt;&lt;b&gt;ಪಂದ್ಯ ಗೆದ್ದ ಮುಂಬೈ&lt;/b&gt;&lt;/h3&gt;&lt;p data-block-key="1jg6"&gt;ಹ್ಯಾಟ್ರಿಕ್‌ ಸೋಲಿನ ಬಳಿಕ ಮುಂಬೈ ತಂಡವು ಗೆಲುವಿನ ಹಳಿಗೆ ಮರಳಿತು. ಲಖನೌ ವಿರುದ್ಧ 6 ವಿಕೆಟ್‌ ಅಂತರದ ಗೆಲುವು ಸಾಧಿಸಿತು.  ಗುರಿ ಬೆನ್ನಟ್ಟಿದ ಮುಂಬೈ 18.4 ಓವರ್‌ಗಳಲ್ಲಿ 4 ವಿಕೆಟ್‌ಗೆ 229 ರನ್‌ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು. ಗೆದ್ದರೂ  ತಂಡದ ಪ್ಲೇ ಆಫ್‌ ಹಾದಿ ಕಠಿಣವಾಗಿದೆ. &lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಬಂಗಾಳದಲ್ಲಿ ಸರ್ಕಾರ ರಚಿಸಲು ಬಿಜೆಪಿ ಸಜ್ಜು; ಮುಖ್ಯಮಂತ್ರಿ ರೇಸ್‌ನಲ್ಲಿ ಯಾರೆಲ್ಲ ಇದ್ದಾರೆ?</title><link>https://vishwavani.news/national/after-bengal-sweep-who-will-bjp-pick-as-chief-minister-77249.html</link><guid>https://vishwavani.news/national/after-bengal-sweep-who-will-bjp-pick-as-chief-minister-77249.html</guid><pubDate>Tue, 05 May 2026 02:07:41 +0000</pubDate><description>&lt;![CDATA[West Bengal New CM: ಪಶ್ಚಿಮ ಬಂಗಾಳದ ಚುನಾವಣೆಯ ಫಲಿತಾಂಶ ರಾಜಕೀಯದಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. ಮಮತಾ ಬ್ಯಾನರ್ಜಿಯ ಭದ್ರಕೋಟೆಯನ್ನು ಒಡೆದು ಬಿಜೆಪಿ ಅಧಿಕಾರಕ್ಕೆ ಬಂದಿದೆ. 200 ಕ್ಕೂ ಅಧಿಕ ಕ್ಷೇತ್ರವನ್ನು ಗೆಲ್ಲುವ ಮೂಲಕ ಬಂಗಾಳದಲ್ಲಿ ಸರ್ಕಾರ ರಚಿಸಲು ಭಾರತೀಯ ಜನತಾ ಪಕ್ಷ ಸಜ್ಜಾಗಿದೆ.]]&gt;</description><dc:creator>&lt;![CDATA[Vishakha Bhat Heggar]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ದೇಶ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/West_Bengal_Election_5.original.jpg" class="attachment-large size-large wp-post-image" alt="ಬಂಗಾಳದಲ್ಲಿ ಸರ್ಕಾರ ರಚಿಸಲು ಬಿಜೆಪಿ ಸಜ್ಜು; ಮುಖ್ಯಮಂತ್ರಿ ರೇಸ್‌ನಲ್ಲಿ ಯಾರೆಲ್ಲ ಇದ್ದಾರೆ?" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="h1dru"&gt;&lt;b&gt;ಕೊಲ್ಕತ್ತಾ:&lt;/b&gt; ಪಶ್ಚಿಮ ಬಂಗಾಳದ ಚುನಾವಣೆಯ ಫಲಿತಾಂಶ&lt;b&gt; (West Bengal New CM)&lt;/b&gt; ರಾಜಕೀಯದಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. ಮಮತಾ ಬ್ಯಾನರ್ಜಿಯ ಭದ್ರಕೋಟೆಯನ್ನು ಒಡೆದು ಬಿಜೆಪಿ ಅಧಿಕಾರಕ್ಕೆ ಬಂದಿದೆ. 200 ಕ್ಕೂ ಅಧಿಕ ಕ್ಷೇತ್ರವನ್ನು ಗೆಲ್ಲುವ ಮೂಲಕ ಬಂಗಾಳದಲ್ಲಿ ಸರ್ಕಾರ ರಚಿಸಲು ಭಾರತೀಯ ಜನತಾ ಪಕ್ಷ ಸಜ್ಜಾಗಿದೆ. ಇದೀಗ ಬಂಗಾಳದಲ್ಲಿ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಕುತೂಹಲ ಮೂಡಿದ್ದು, ಹಲವು ದಿಗ್ಗಜರ ಹೆಸರು ಕೇಳಿ ಬರುತ್ತದೆ.&lt;/p&gt;&lt;p data-block-key="fu7j8"&gt;ಕಳೆದ 15 ವರ್ಷಗಳಿಂದ ಅಧಿಕಾರದಲ್ಲಿ ಮಮತಾ ಬ್ಯಾನರ್ಜಿ ಬಿಜೆಪಿ ಎದುರು ಈ ಬಾರಿ ಸೋಲನ್ನು ಕಂಡಿದ್ದಾರೆ. ಹೊಸ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲು ಇದೀಗ ಬಿಜೆಪಿ ಸಿದ್ದವಾಗಿದ್ದು, ಮಹಿಳೆಯರಿಗೆ ಹೆಚ್ಚಿನ ಸ್ಥಾನ ಮಾನ ನೀಡಬಹುದು ಎಂದು ಹೇಳಲಾಗುತ್ತಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ತಮ್ಮ ಪ್ರಚಾರದ ಸಮಯದಲ್ಲಿ, ಬಿಜೆಪಿ ಅಧಿಕಾರಕ್ಕೆ ಬಂದರೆ ಬಂಗಾಳದವರನ್ನೇ ಮುಖ್ಯಮಂತ್ರಿಯನ್ನಾಗಿ ನೇಮಿಸುತ್ತೇವೆ ಎಂದು ಒತ್ತಿ ಒತ್ತಿ ಹೇಳಿದ್ದರು.&lt;/p&gt;&lt;p data-block-key="97l2n"&gt;ಪ್ರಚಾರದ ಸಮಯದಲ್ಲಿಯೂ ಬಂಗಾಳದ ಮಹಿಳೆಯರ ಸುರಕ್ಷತೆಯ ಕುರಿತು ಬಿಜಿಪಿ ಪ್ರಣಾಳಿಕೆ ಹೊರಡಿಸಿತ್ತು. ಈ ಬಾರಿ ವಿಶೇಷವಾಗಿ ಮಹಿಳಾ ಮತದಾರರನ್ನು ಸೆಳೆಯುವಲ್ಲಿ ಪಕ್‌ ಸಫಲವಾಗಿದೆ. ಹೀಗಾಗಿ ಬಂಗಾಳದಲ್ಲಿ ಮಹಿಳಾ ಮುಖ್ಯಮಂತ್ರಿಯನ್ನು ನೇಮಿಸುವ ಸಾಧ್ಯತೆ ಹೆಚ್ಚಿದೆ. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಸದ್ಯ ದೆಹಲಿಯಲ್ಲಿ ರೇಖಾ ಗುಪ್ತ ಮಾತ್ರ ಮಹಿಳಾ ಮುಖ್ಯಮಂತ್ರಿಯಾಗಿದ್ದಾರೆ. ಈ ಪಟ್ಟಿಗೆ ಇದೀಗ ಪಶ್ಚಿಮ ಬಂಗಾಳ ಸೇರುವ ಸಾಧ್ಯತೆ ಇದೆ.&lt;/p&gt;&lt;h3 data-block-key="35rbc"&gt;&lt;b&gt;ಅಗ್ನಿಮಿತ್ರ ಪಾಲ್ ಮತ್ತು ರೂಪಾ ಗಂಗೂಲಿ&lt;/b&gt;&lt;/h3&gt;&lt;p data-block-key="3brhn"&gt;ಇನ್ನು ಬಂಗಾಳದ ಪ್ರಮುಖ ಬಿಜೆಪಿ ನಾಯಕಿಯರನ್ನು ನೋಡುವುದಾದರೆ ಅಗ್ನಿಮಿತ್ರ ಪಾಲ್ ಮತ್ತು ರೂಪಾ ಗಂಗೂಲಿ ಮುಂಚೂಣಿಯಲ್ಲಿದ್ದಾರೆ. ರೂಪಾ ಗಂಗೂಲಿ ಮಹಾಭಾರತದ ದ್ರೌಪದಿ ಪಾತ್ರದಲ್ಲಿ ಇಡೀ ದೇಶಕ್ಕೆ ಚಿರಪರಿಚಿತರು. ಅವರು ರಾಜ್ಯಸಭಾ ಸಂಸದೆಯೂ ಆಗಿದ್ದಾರೆ. ಸೋನಾರ್ಪುರ್ ದಕ್ಷಿಣ ಶಾಸಕಿಯಾಗಿದ್ದರೆ, ಬಂಗಾಳ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆಯಾಗಿ ಎರಡು ವರ್ಷ ಸೇವೆ ಸಲ್ಲಿಸಿದ್ದರಿಂದ ತಳಮಟ್ಟದ ಸಂಪರ್ಕವನ್ನು ಹೊಂದಿದ್ದಾರೆ.&lt;/p&gt;&lt;p data-block-key="81n4n"&gt;ಫ್ಯಾಷನ್ ಡಿಸೈನರ್ ಆಗಿರುವ ಅಗ್ನಿಮಿತ್ರ ಪಾಲ್, ಬಂಗಾಳದ ಬಿಜೆಪಿಯ ಪ್ರಮುಖ ಮಹಿಳಾ ನಾಯಕಿಯರಲ್ಲಿ ಒಬ್ಬರು. ಬಿಜೆಪಿ ಮಹಿಳಾ ಮೋರ್ಚಾದ ಬಂಗಾಳ ಘಟಕದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸಿದ್ದರು. ಅಷ್ಟೇ ಅಲ್ಲದೇ ಗ್ರಾಮೀಣ ಭಾಗದಲ್ಲಿ ಪಾಲ್‌ ಅವರಿಗೆ ಸಂಪರ್ಕ ಹೆಚ್ಚಿದೆ. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮಮತಾ ಬ್ಯಾನರ್ಜಿ ಮೇಲೆ ಕಟುವಾಗಿ ಟೀಕೆ ಮಾಡುವ ಮೂಲಕವೇ ಮತ್ತಷ್ಟು ಫೇಮಸ್‌ ಆಗಿದ್ದರು.&lt;/p&gt;&lt;h3 data-block-key="64aie"&gt;&lt;b&gt;ಸುವೇಂದು ಅಧಿಕಾರಿ&lt;/b&gt;&lt;/h3&gt;&lt;p data-block-key="5clrm"&gt;ಟಿಎಂಸಿಯ ಮಾಜಿ ನಾಯಕ ಹಾಗೂ ಮಮತಾ ಅವರ ಆಪ್ತ ಸಹಾಯಕನಾಗಿದ್ದ ಸುವೇಂದು ಅಧಿಕಾರಿ ಬಂಗಾಳದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಶ್ರಮಿಸಿದವರಲ್ಲಿ ಪ್ರಮುಖರು. , ಸುವೇಂದು ಅವರು ತಳಮಟ್ಟದ ಸಂಪರ್ಕ ಹೊಂದಿದ್ದು, ಈ ಬಾರಿ ಮಮತಾ ಭದ್ರಕೋಟೆ ಎನಿಸಿಕೊಂಡಿದ್ದ ಭವಾನಿಪುರದಲ್ಲಿಯೇ ಅವರಿಗೆ ಸೋಲುಣಿಸಿದ್ದಾರೆ. ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಸುವೇಂದು 2021 ರಲ್ಲಿ ಲಂಚ ಪ್ರಕರಣವೊಂದರದಲ್ಲಿ ಸಿಲುಕಿದ್ದರು. ಹೀಗಾಗಿ ಬಿಜೆಪಿ ಇವರನ್ನು ಮುಖ್ಯಮಂತ್ರಿಯಾಗಿ ನೇಮಕ ಮಾಡುವುದು ಕೊಂಚ ಅನುಮಾನ ಎನ್ನಲಾಗುತ್ತಿದೆ.&lt;/p&gt;&lt;p data-block-key="7b48v"&gt;&lt;a href="/national/mamata-banerjee-bengal-election-defeat-loot-bjp-win-2026-77242.html"&gt;"ಲೂಟಿ, ಲೂಟಿ, ಲೂಟಿ. ನಾವು ಮತ್ತೆ ಪುಟಿದೇಳುತ್ತೇವೆ": ಬಂಗಾಳದ ಆಘಾತಕಾರಿ ಸೋಲಿಗೆ ಮಮತಾ ಬ್ಯಾನರ್ಜಿ ಹತಾಶೆ&lt;/a&gt;&lt;/p&gt;&lt;h3 data-block-key="duuln"&gt;&lt;b&gt;ಸಮಿಕ್ ಭಟ್ಟಾಚಾರ್ಯ&lt;/b&gt;&lt;/h3&gt;&lt;p data-block-key="3hji"&gt;ಬಂಗಾಳ ಬಿಜೆಪಿ ಮುಖ್ಯಸ್ಥರಾದ ಸಮಿಕ್ ಭಟ್ಟಾಚಾರ್ಯ ಆರ್‌ಎಸ್‌ಎಸ್‌ ಮೂಲದವರು. ಪಕ್ಷದೊಳಗೆ ಒಮ್ಮತ ಮೂಡಿಸುವ ವ್ಯಕ್ತಿ ಎಂದು ಇವರನ್ನು ಪರಿಗಣಿಸಲಾಗುತ್ತದೆ. ತೆರೆಮರೆಯಲ್ಲಿ ಕೆಲಸ ಮಾಡಲು ಹೆಸರುವಾಸಿಯಾಗಿರುವ ಭಟ್ಟಾಚಾರ್ಯ, ಸಾಮಾಜಿಕ ಕಾರ್ಯಕ್ರಮಗಳನ್ನು ಏರ್ಪಡಿಸಿ ತಳದಿಂದ ಪಕ್ಷ ಕಟ್ಟುವ ಕೆಲಸದಲ್ಲಿ ತೊಡಗಿಕೊಂಡವರಲ್ಲಿ ಒಬ್ಬರು.&lt;/p&gt;&lt;p data-block-key="ek375"&gt;&lt;/p&gt;&lt;p data-block-key="8jhm3"&gt;&lt;/p&gt;&lt;p data-block-key="8rgb8"&gt;&lt;/p&gt;&lt;p data-block-key="76n8p"&gt;&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಬಾತುಕೋಳಿ ಹಿಡಿಯಲು ಹೋಗಿ ಕೆರೆಯಲ್ಲಿ ಮುಳುಗಿ ನಾಲ್ವರು ಮಕ್ಕಳ ದುರ್ಮರಣ</title><link>https://vishwavani.news/karnataka/four-children-drown-while-trying-to-catch-ducks-in-chikkamagaluru-77248.html</link><guid>https://vishwavani.news/karnataka/four-children-drown-while-trying-to-catch-ducks-in-chikkamagaluru-77248.html</guid><pubDate>Tue, 05 May 2026 01:51:00 +0000</pubDate><description>&lt;![CDATA[Chikkamagaluru: ಶಾಸಕ ಎಚ್.ಡಿ.ತಮ್ಮಯ್ಯ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿರುವ ಮಗುವಿನ ಆರೋಗ್ಯ ವಿಚಾರಿಸಿದರಲ್ಲದೆ ಮೃತ ಮಕ್ಕಳ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಕೆರೆಗಳ ಬಳಿ ಯಾವ ರೀತಿ ಮುಂಜಾಗ್ರತ ಕ್ರಮ ಕೈಗೊಳ್ಳಬಹುದು ಎಂಬ ಬಗ್ಗೆ ಜಿಲ್ಲಾಧಿಕಾರಿ ಜೊತೆ ಚರ್ಚೆ ನಡೆಸಿದ್ದೇನೆ ಎಂದರು.]]&gt;</description><dc:creator>&lt;![CDATA[Abhilash BC]]&gt;</dc:creator><category>&lt;![CDATA[ಚಿಕ್ಕಮಗಳೂರು]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕರ್ನಾಟಕ]]&gt;</category><category>&lt;![CDATA[ಕ್ರೈಂ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Representational_Image.original.jpg" class="attachment-large size-large wp-post-image" alt="ಬಾತುಕೋಳಿ ಹಿಡಿಯಲು ಹೋಗಿ ಕೆರೆಯಲ್ಲಿ ಮುಳುಗಿ ನಾಲ್ವರು ಮಕ್ಕಳ ದುರ್ಮರಣ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="af9rg"&gt;&lt;b&gt;ಚಿಕ್ಕಮಗಳೂರು, ಮೇ 5: &lt;/b&gt;ಬಾತುಕೋಳಿ ಹಿಡಿಯುವುದಕ್ಕೆ ಹೋದ ನಾಲ್ವರು ಮಕ್ಕಳು ಕೆರೆಯಲ್ಲಿ ಮುಳುಗಿ ಮೃತಪಟ್ಟ ಧಾರುಣ ಘಟನೆ ಚಿಕ್ಕಮಗಳೂರು ತಾಲೂಕಿನ ಅರಳುಗುಪ್ಪೆ ಗ್ರಾಮದ ಕಾರಂಜಿ ಕೆರೆಯಲ್ಲಿ ನಡೆದಿದೆ. ಅರಳುಗುಪ್ಪೆ ಗ್ರಾಮದ ಅಬ್ದುಲ್ ರೆಹಮಾನ್ (13), ನಾಯಜ್ (12), ಶಿವಮೊಗ್ಗದ ಮೈದಿಹಾ (9), ಅರಮಾನ್ (8) ಮೃತಪಟ್ಟ ಮಕ್ಕಳು. ಅರಳುಗುಪ್ಪೆಯ 4 ವರ್ಷದ ಅರ್ಮನ್ ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆಗಾಗಿ ಚಿಕ್ಕಮಗಳೂರಿನ ಮಲ್ಲೇಗೌಡ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ರಜೆಯಲ್ಲಿ&lt;b&gt; &lt;/b&gt;ಸಂಬಂಧಿಕರ ಮನೆಗೆ ಬಂದಾಗ ಈ ದುರ್ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. &lt;/p&gt;&lt;p data-block-key="br79b"&gt; ಕೆರೆ ಪಾತ್ರದಲ್ಲಿ ಈ ಮಕ್ಕಳು ಆಟವಾಡುವಾಗ ಈ ದುರ್ಘಟನೆ ನಡೆದಿದೆ. ಆಟವಾಡುತ್ತಿರುವಾಗ ತಮ್ಮೊಂದಿಗಿದ್ದ ಬಾತುಕೋಳಿ ನೀರಿಗಿಳಿದಿದೆ ಎಂದು ಅದನ್ನು ಹಿಡಿಯಲು ಹೋದ ಬಾಲಕಿ ನೀರಿಗೆ ಬಿದ್ದಿದ್ದಾಳೆ. ಈ ಬಾಲಕಿಯನ್ನು ರಕ್ಷಿಸಲು ಹೋದ ಒಬ್ಬರ ಹಿಂದೊಬ್ಬರಂತೆ ಮಕ್ಕಳು ನೀರಿಗಿಳಿದು ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. &lt;/p&gt;&lt;p data-block-key="62d3l"&gt;&lt;a href="/crime/12-year-old-tourist-sabiha-dies-after-drowning-in-srinivasa-sagar-77233.html"&gt;ಶ್ರೀನಿವಾಸ ಸಾಗರದಲ್ಲಿ ಮುಳುಗಿ 12 ವರ್ಷದ ಪ್ರವಾಸಿ ಸಬಿಹಾ ಸಾವು&lt;/a&gt;&lt;/p&gt;&lt;p data-block-key="f8rvt"&gt;ಶಾಸಕ ಎಚ್.ಡಿ.ತಮ್ಮಯ್ಯ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿರುವ ಮಗುವಿನ ಆರೋಗ್ಯ ವಿಚಾರಿಸಿದರಲ್ಲದೆ ಮೃತ ಮಕ್ಕಳ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಕೆರೆಗಳ ಬಳಿ ಯಾವ ರೀತಿ ಮುಂಜಾಗ್ರತ ಕ್ರಮ ಕೈಗೊಳ್ಳಬಹುದು ಎಂಬ ಬಗ್ಗೆ ಜಿಲ್ಲಾಧಿಕಾರಿ ಜೊತೆ ಚರ್ಚೆ ನಡೆಸಿದ್ದೇನೆ. ಕ್ಷೇತ್ರದಲ್ಲಿ ಈ ರೀತಿ ಹಲವು ಕೆರೆಗಳಿವೆ. ಮಕ್ಕಳ ಸುರಕ್ಷತೆಗೆ ಇಲ್ಲಿ ಯಾವ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಚಿಂತನೆ ನಡೆಸುತ್ತೇವೆ ಎಂದರು.&lt;/p&gt;&lt;h3 data-block-key="d0l2f"&gt;&lt;b&gt;ಶ್ರೀನಿವಾಸ ಸಾಗರದಲ್ಲಿ ಮುಳುಗಿ 12 ವರ್ಷದ ಪ್ರವಾಸಿ ಸಬಿಹಾ ಸಾವು&lt;/b&gt;&lt;/h3&gt;&lt;p data-block-key="4s9m1"&gt;ಪ್ರತ್ಯೇಕ ಪ್ರಕರಣವೊಂದರಲ್ಲಿ,  ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕು ತಳದ ಗ್ರಾಮದ ವಾಸಿ 12 ವರ್ಷದ ಸಬಿಹಾ ಶ್ರೀನಿವಾಸ ಸಾಗರದಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ. ತಾಲೂಕಿನ ಶ್ರೀನಿವಾಸ ಸಾಗರಕ್ಕೆ ದೂರದ ಗದಗ ಹಾವೇರಿ ಜಿಲ್ಲೆಯಿಂದ ಪ್ರವಾಸಕ್ಕೆಂದು ಬಂದಿದ್ದ 10 ಮಂದಿ ಪ್ರವಾಸಿಗರ ಪೈಕಿ 12 ವರ್ಷದ ಸಬೀಹಾ ಈಜಾಡುತ್ತಾ ಆಳದ ಮಡುವಿಗೆ ಇಳಿದಾಗ ಈ ಸಾವು ಸಂಭವಿಸಿದೆ. &lt;/p&gt;&lt;p data-block-key="7kisf"&gt;ಬಿಸಿಲು ಹೆಚ್ಚಿದ್ದ ಕಾರಣ ನೀರಲ್ಲಿ ಈಜಾಡಲು ತೆರಳಿದಾಗ ಈ ಅವಘಡ ನಡೆದಿದೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿಯ ಹುಡುಕಾಟದ ನಂತರ ನೀರಿನಲ್ಲಿ ಮುಳುಗಿದ್ದ ಸಬಿಹಾಳ ಮೃತದೇಹ ಪತ್ತೆಯಾಗಿದೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>Vishweshwar Bhat Column: ಒಂದು ಗಾದೆಯ ಕುರಿತು</title><link>https://vishwavani.news/ankanagalu/about-a-proverb-77247.html</link><guid>https://vishwavani.news/ankanagalu/about-a-proverb-77247.html</guid><pubDate>Tue, 05 May 2026 01:46:40 +0000</pubDate><description>&lt;![CDATA[ಒಂದು ಮರ ಬೆಳೆದು ಹೆಮ್ಮರವಾಗಲು ಸಮಯ ಬೇಕು. ಹಾಗೆಯೇ ನಮ್ಮ ಯಶಸ್ಸು ಕೂಡ ರಾತ್ರೋ ರಾತ್ರಿ ಸಿಗುವಂಥದ್ದಲ್ಲ. ಅದಕ್ಕೆ ತಾಳ್ಮೆ ಮತ್ತು ನಿರಂತರ ಪ್ರಯತ್ನದ ಅಗತ್ಯವಿದೆ. ಇಂದು ನೀವು ಹಾಕುವ ಒಂದು ಸಣ್ಣ ಹೆಜ್ಜೆ ಅಥವಾ ನೀವು ಬಿತ್ತುವ ಒಂದು ಬೀಜ, ಭವಿಷ್ಯದಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಗುತ್ತದೆ.]]&gt;</description><dc:creator>&lt;![CDATA[ವಿಶ್ವೇಶ್ವರ ಭಟ್‌]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಅಂಕಣಗಳು]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/images_onJa2vG.original.jpg" class="attachment-large size-large wp-post-image" alt="Vishweshwar Bhat Column: ಒಂದು ಗಾದೆಯ ಕುರಿತು" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="3w023"&gt;&lt;b&gt;ಸಂಪಾದಕರ ಸದ್ಯಶೋಧನೆ&lt;/b&gt;&lt;/p&gt;&lt;p data-block-key="a8886"&gt;ಚೀನಾದಲ್ಲಿ ಒಂದು ಸುಪ್ರಸಿದ್ಧ ಗಾದೆಯಿದೆ. ‘ಒಂದು ಮರವನ್ನು ನೆಡಲು ಅತ್ಯಂತ ಸೂಕ್ತವಾದ ಸಮಯ 20 ವರ್ಷಗಳ ಹಿಂದೆ ಆಗಿತ್ತು. ಎರಡನೇ ಅತ್ಯಂತ ಸೂಕ್ತ ಸಮಯ ಈಗ’. ಈ ಸಾಲುಗಳು ಕೇವಲ ಗಿಡ-ಮರಗಳ ಬಗ್ಗೆ ಮಾತ್ರವಲ್ಲ, ನಮ್ಮ ಜೀವನದ ಪ್ರತಿಯೊಂದು ನಿರ್ಧಾರ ಮತ್ತು ಗುರಿಗಳ ಬಗ್ಗೆಯೂ ಬೆಳಕು ಚೆಲ್ಲುತ್ತವೆ. &lt;/p&gt;&lt;p data-block-key="dqfc4"&gt;ನಾವೆಲ್ಲರೂ ಆಗಾಗ ‘ಅಯ್ಯೋ, ನಾನು ಈ ಕೆಲಸವನ್ನು ಮೊದಲೇ ಮಾಡಬೇಕಿತ್ತು’ ಎಂದು ಪಶ್ಚಾತ್ತಾಪ ಪಡುತ್ತೇವೆ. ಇಪ್ಪತ್ತು ವರ್ಷಗಳ ಹಿಂದೆ ಒಂದು ಮರವನ್ನು ನೆಟ್ಟಿದ್ದರೆ, ಇಂದು ಅದು ನಮಗೆ ನೆರಳು, ತಂಪುಗಾಳಿ ಮತ್ತು ಹಣ್ಣುಗಳನ್ನು ನೀಡುತ್ತಿತ್ತು. ಹಾಗೆಯೇ, ಬಾಲ್ಯದಲ್ಲಿ ಒಂದು ಕಲೆಯನ್ನು ಕಲಿತಿದ್ದರೆ ಅಥವಾ ಯೌವನದಲ್ಲಿ ಒಂದು ಉಳಿತಾಯದ ಯೋಜನೆಯನ್ನು ಆರಂಭಿಸಿದ್ದರೆ, ಇಂದು ನಾವು ಅದರ ಫಲವನ್ನು ಉಣ್ಣಬಹುದಿತ್ತು. ಆದರೆ ಕಳೆದುಹೋದ ಕಾಲ ಮರಳಿ ಬಾರದು. &lt;/p&gt;&lt;p data-block-key="e9u1o"&gt;ಕಳೆದುಹೋದ ಸಮಯದ ಬಗ್ಗೆ ಚಿಂತಿಸುತ್ತಾ ಕುಳಿತುಕೊಳ್ಳುವುದು ವ್ಯರ್ಥ. ನಾವು ಇಪ್ಪತ್ತು ವರ್ಷಗಳ ಹಿಂದೆ ಆ ಕೆಲಸವನ್ನು ಮಾಡಲಿಲ್ಲ ಎಂಬ ಕಾರಣಕ್ಕೆ, ಇಂದೂ ಕೂಡ ಮಾಡದೇ ಬಿಟ್ಟರೆ, ಮುಂದಿನ ಇಪ್ಪತ್ತು ವರ್ಷಗಳ ನಂತರವೂ ನಾವು ಇದೇ ಪಶ್ಚಾತ್ತಾಪವನ್ನು ಪಡಬೇಕಾಗುತ್ತದೆ. &lt;/p&gt;&lt;p data-block-key="8vok5"&gt;&lt;b&gt;ಇದನ್ನೂ ಓದಿ: &lt;/b&gt;&lt;a href="/ankanagalu/japanese-names0-76957.html"&gt;Vishweshwar Bhat Column: ಜಪಾನಿಯರ ಹೆಸರುಗಳು&lt;/a&gt;&lt;/p&gt;&lt;p data-block-key="6v4as"&gt;ಹೊಸದನ್ನು ಕಲಿಯಲು ಅಥವಾ ಒಳ್ಳೆಯದನ್ನು ಮಾಡಲು ಇಂದೇ ಮೊದಲ ದಿನ. ನಮ್ಮ ಕೈಯಲ್ಲಿರುವುದು ಇಂದಿನ ಈ ಕ್ಷಣ ಮಾತ್ರ. ನಾಳೆ ಎಂಬುದು ಅನಿಶ್ಚಿತ, ನಿನ್ನೆ ಎಂಬುದು ಇತಿಹಾಸ. ಈ ಗಾದೆಯಲ್ಲಿ ಮರವನ್ನು ಉದಾಹರಣೆಯಾಗಿ ನೀಡಿರುವುದು ಅರ್ಥಪೂರ್ಣವಾಗಿದೆ. &lt;/p&gt;&lt;p data-block-key="6peo7"&gt;ಒಂದು ಮರ ಬೆಳೆದು ಹೆಮ್ಮರವಾಗಲು ಸಮಯ ಬೇಕು. ಹಾಗೆಯೇ ನಮ್ಮ ಯಶಸ್ಸು ಕೂಡ ರಾತ್ರೋರಾತ್ರಿ ಸಿಗುವಂಥದ್ದಲ್ಲ. ಅದಕ್ಕೆ ತಾಳ್ಮೆ ಮತ್ತು ನಿರಂತರ ಪ್ರಯತ್ನದ ಅಗತ್ಯವಿದೆ. ಇಂದು ನೀವು ಹಾಕುವ ಒಂದು ಸಣ್ಣ ಹೆಜ್ಜೆ ಅಥವಾ ನೀವು ಬಿತ್ತುವ ಒಂದು ಬೀಜ, ಭವಿಷ್ಯದಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಗುತ್ತದೆ. &lt;/p&gt;&lt;p data-block-key="a523f"&gt;‘ನಾಳೆ ಮಾಡೋಣ’ ಎನ್ನುವ ಮನೋಭಾವವೇ ಪ್ರಗತಿಗೆ ದೊಡ್ಡ ಶತ್ರು. ಹಿಂದೆ ಮಾಡದ ತಪ್ಪನ್ನು ಈಗ ತಿದ್ದಿಕೊಳ್ಳಲು ಅವಕಾಶವಿದೆ. ಇಂದು ಮಾಡುವ ಸಣ್ಣ ಹೂಡಿಕೆ ಅಥವಾ ಓದು ಭವಿಷ್ಯದ ಬದುಕನ್ನು ಹಸನುಗೊಳಿಸುತ್ತದೆ. ಹಳೆಯ ಕಾಲದ ಬಗ್ಗೆ ವ್ಯಥೆ ಪಡುವುದಕ್ಕಿಂತ, ಭವಿಷ್ಯದ ಇಪ್ಪತ್ತು ವರ್ಷಗಳ ನಂತರ ‘ಅಂದು ನಾನು ಸರಿಯಾದ ನಿರ್ಧಾರ ತಳೆದೆ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವಂತೆ ಇಂದು ಕೆಲಸ ಮಾಡುವುದು ಜಾಣತನ. ಸಮಯ ಯಾರೊಬ್ಬರಿಗೂ ಕಾಯುವುದಿಲ್ಲ. &lt;/p&gt;&lt;p data-block-key="6eqaa"&gt;ನದಿ ಹರಿದು ಹೋದಂತೆ ಕಾಲವೂ ಉರುಳುತ್ತದೆ. ಆದರೆ ಆ ಹರಿವಿನಲ್ಲಿ ನಾವು ಹೇಗೆ ಈಜುತ್ತೇವೆ ಎಂಬುದು ಮುಖ್ಯ. ಆದ್ದರಿಂದ, ನೀವು ಯಾವುದನ್ನಾದರೂ ಸಾಧಿಸಬೇಕು ಎಂದುಕೊಂಡಿದ್ದರೆ, ಅದು ಓದಿರಲಿ, ಬರವಣಿಗೆಯಿರಲಿ ಅಥವಾ ಪರಿಸರ ಸೇವೆಯಿರಲಿ... ಅದಕ್ಕೆ ಸಕಾಲ ‘ಈಗ’. ಇಂದೇ ಮರ ನೆಡಿ, ಇಂದೇ ಕನಸಿನತ್ತ ಹೆಜ್ಜೆ ಹಾಕಿ. ನಾವು ಇಂದು ಯಾವುದನ್ನು ‘ಈಗ’ ಎಂದು ಕರೆಯು ತ್ತಿದ್ದೇವೆಯೋ, ಅದು ಇನ್ನು 20 ವರ್ಷಗಳ ನಂತರ ‘ಹಿಂದಿನ ಕಾಲ’ ಎಂದೆನಿಸಿಕೊಳ್ಳುತ್ತದೆ. &lt;/p&gt;&lt;p data-block-key="at45n"&gt;ಇಂದು ನಾವು ಸೋಮಾರಿತನದಿಂದ ಕಾಲಹರಣ ಮಾಡಿದರೆ, 2046ರಲ್ಲಿ ಕುಳಿತು ‘2026ರಲ್ಲಿ ನಾನು ಆ ಕೆಲಸ ಮಾಡಬೇಕಿತ್ತು’ ಎಂದು ಮತ್ತೆ ಇದೇ ಗಾದೆಯನ್ನು ನೆನಪಿಸಿಕೊಳ್ಳಬೇಕಾಗುತ್ತದೆ. ಆ ಚಕ್ರ ವನ್ನು ಮುರಿಯಲು ಇಂದೇ ಶುಭ ಮುಹೂರ್ತ. ಯಾವುದೇ ಶುಭ ಕಾರ್ಯಕ್ಕೆ ಅಥವಾ ಪ್ರಗತಿಗೆ ‘ಈ ಕ್ಷಣ’ಕ್ಕಿಂತ ಉತ್ತಮವಾದ ಸಮಯ ಬೇರೊಂದಿಲ್ಲ. &lt;/p&gt;&lt;p data-block-key="19ls0"&gt;‘ಇಂದಿನ ನಿರ್ಧಾರವೇ ನಾಳೆಯ ನೆರಳು’ ಎಂಬುದು ಬದುಕಿನ ಕರ್ಮ ಸಿದ್ಧಾಂತದ ಪ್ರತಿಫಲನ. ನಾವು ಇಂದು ತೆಗೆದುಕೊಳ್ಳುವ ಪ್ರತಿಯೊಂದು ಸಣ್ಣ ನಿರ್ಧಾರವೂ ನಮ್ಮ ಭವಿಷ್ಯದ ಆಕೃತಿ ಯನ್ನು ಕೆತ್ತುತ್ತದೆ. ನಾವು ಇಂದು ಯಾವ ಬೀಜ ಬಿತ್ತುತ್ತೇವೆಯೋ, ನಾಳೆ ಅದೇ ಮರವಾಗಿ ಬೆಳೆದು ನಮಗೆ ನೆರಳು ನೀಡುತ್ತದೆ. &lt;/p&gt;&lt;p data-block-key="8jhgq"&gt;ನೀವು ಬೇವಿನ ಬೀಜ ಬಿತ್ತಿ ಮಾವಿನ ಹಣ್ಣನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಹಾಗೆಯೇ ಇಂದು ನೀವು ಕಷ್ಟಪಟ್ಟು ಓದುವ ನಿರ್ಧಾರ ಮಾಡಿದರೆ, ನಾಳೆ eನದ ನೆರಳು ಸಿಗುತ್ತದೆ. ಇಂದು ಸೋಮಾರಿತನ ಆರಿಸಿಕೊಂಡರೆ, ನಾಳೆ ಬಿಸಿಲಲ್ಲಿ (ಕಷ್ಟದಲ್ಲಿ) ನಿಲ್ಲಬೇಕಾಗುತ್ತದೆ. ನಮ್ಮ ಜೀವನ ನಾವು ಮಾಡುವ ಆಯ್ಕೆಗಳ ಮೊತ್ತ. ಬೆಳಗ್ಗೆ ಎದ್ದ ಕ್ಷಣದಿಂದ ರಾತ್ರಿ ಮಲಗುವವರೆಗೆ ನಾವು ತೆಗೆದುಕೊಳ್ಳುವ ಸಣ್ಣ ನಿರ್ಧಾರಗಳು (ಏನು ತಿನ್ನಬೇಕು, ಯಾರ ಜತೆ ಇರಬೇಕು, ಸಮಯವನ್ನು ಹೇಗೆ ಬಳಸಬೇಕು) ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತವೆ. &lt;/p&gt;&lt;p data-block-key="7jcr3"&gt;ಇಂದು ವ್ಯಾಯಾಮ ಮಾಡುವ ನಿರ್ಧಾರ, ವೃದ್ಧಾಪ್ಯದಲ್ಲಿ ಲವಲವಿಕೆಯ ಬದುಕನ್ನು ನೀಡುತ್ತದೆ. ಇಂದು ಅನಗತ್ಯ ಖರ್ಚು ಕಡಿಮೆ ಮಾಡುವ ನಿರ್ಧಾರ, ಭವಿಷ್ಯದ ಆರ್ಥಿಕ ಸಂಕಷ್ಟದ ಸಮಯ ದಲ್ಲಿ ಆಸರೆಯಾಗುತ್ತದೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>Raghava Sharma Nidle Column: ದೀದಿಗೆ ಗುಡ್‌ಬೈ , ಮೋದಿಗೆ ಹಾಯ್ ಹಾಯ್..!</title><link>https://vishwavani.news/ankanagalu/goodbye-to-didi-hello-to-modi-77245.html</link><guid>https://vishwavani.news/ankanagalu/goodbye-to-didi-hello-to-modi-77245.html</guid><pubDate>Tue, 05 May 2026 01:30:09 +0000</pubDate><description>&lt;![CDATA[ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಅಧಿಪತ್ಯ ಕೊನೆಗೊಳಿಸಿ, ಕೇಸರಿಪಡೆ ದಿಗ್ವಿಜಯ ಸಾಧಿಸುವ ಮೂಲಕ ಗಡಿ ರಾಜ್ಯದಲ್ಲಿ ಹೊಸ ರಾಜಕೀಯ ಇತಿಹಾಸವೊಂದು ಸೃಷ್ಟಿಯಾಗಿದೆ. ಟಿಎಂಸಿ ನಾಯಕಿ, ಸಿಎಂ ಮಮತಾ ಬ್ಯಾನರ್ಜಿ ಹಿಂದೆಂದೂ ಕಾಣದ ರೀತಿಯಲ್ಲಿ ಮುಗ್ಗರಿಸಿದ್ದು, ಟಿಎಂಸಿಯ ಹಿಂಸಾಚಾರದ ರಾಜಕಾರಣವನ್ನು ಮತದಾರರು ತಿರಸ್ಕರಿಸಿದ್ದಾರೆ]]&gt;</description><dc:creator>&lt;![CDATA[ಕೆ. ರಾಘವ ಶರ್ಮ ನಿಡ್ಲೆ]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ದೇಶ]]&gt;</category><category>&lt;![CDATA[ಅಂಕಣಗಳು]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/modi_and_Mamata.original.jpg" class="attachment-large size-large wp-post-image" alt="Raghava Sharma Nidle Column: ದೀದಿಗೆ ಗುಡ್‌ಬೈ , ಮೋದಿಗೆ ಹಾಯ್ ಹಾಯ್..!" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="1eht8"&gt;&lt;b&gt;ಗ್ರೌಂಡ್‌ ರಿಪೋರ್ಟ್&lt;/b&gt;&lt;/p&gt;&lt;p data-block-key="a815d"&gt;&lt;b&gt;ಮಮತಾ ಭದ್ರಕೋಟೆ ಭೇದಿಸಿದ ಕೇಸರಿಪಡೆ&lt;/b&gt;&lt;/p&gt;&lt;p data-block-key="4tpme"&gt;&lt;b&gt;ಮೌನವಾಗಿದ್ದುಕೊಂಡೇ ತೃಣಮೂಲ ಕಾಂಗ್ರೆಸ್‌ಗೆ ಗುದ್ದಿದ ಬಂಗಾಳಿ ಮತದಾರ&lt;/b&gt;&lt;/p&gt;&lt;p data-block-key="80k2c"&gt;ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಅಧಿಪತ್ಯ ಕೊನೆಗೊಳಿಸಿ, ಕೇಸರಿಪಡೆ ದಿಗ್ವಿಜಯ ಸಾಧಿಸುವ ಮೂಲಕ ಗಡಿ ರಾಜ್ಯದಲ್ಲಿ ಹೊಸ ರಾಜಕೀಯ ಇತಿಹಾಸವೊಂದು ಸೃಷ್ಟಿಯಾಗಿದೆ. ಟಿಎಂಸಿ ನಾಯಕಿ, ಸಿಎಂ ಮಮತಾ ಬ್ಯಾನರ್ಜಿ ಹಿಂದೆಂದೂ ಕಾಣದ ರೀತಿಯಲ್ಲಿ ಮುಗ್ಗರಿಸಿದ್ದು, ಟಿಎಂಸಿಯ ಹಿಂಸಾಚಾರದ ರಾಜಕಾರಣವನ್ನು ಮತದಾರರು ತಿರಸ್ಕರಿಸಿದ್ದಾರೆ. ದೀದಿ ಪಕ್ಷದ ರಾಜಕೀಯ ಕುಸಿತ ಹಾಗೂ ಬಿಜೆಪಿಯ ಐತಿಹಾಸಿಕ ಗೆಲುವಿಗೆ ಕಾರಣವಾದ 16 ಪ್ರಮುಖ ಅಂಶಗಳನ್ನು &lt;b&gt;ವಿಶ್ವವಾಣಿ ವಿಶೇಷ ಪ್ರತಿನಿಧಿ ರಾಘವ ಶರ್ಮ ನಿಡ್ಲೆ&lt;/b&gt; ಇಲ್ಲಿ ದಾಖಲಿಸಿದ್ದಾರೆ.&lt;/p&gt;&lt;p data-block-key="3li85"&gt;&lt;b&gt;೧. ಹಿಂದುಗಳ ಕ್ರೋಢೀಕರಣ:&lt;/b&gt; ಐತಿಹಾಸಿಕವಾಗಿ ಬಂಗಾಳದ ಮತದಾರರು ಹಿಂದು-ಮುಸ್ಲಿಂ ಎಂಬ ಪ್ರತ್ಯೇಕ ಭಾವನೆಯಿಂದ ಮತದಾನ ಮಾಡಿದ್ದು ಕಡಿಮೆ. ಆದರೆ, ಮೊದಲ ಬಾರಿಗೆ ಬಿಜೆಪಿ ಹಿಂದು ಮತಗಳ ಕ್ರೋಢೀಕರಣ ಮಾಡುವಲ್ಲಿ ಯಶಸ್ವಿಯಾಗಿದೆ. ಬಂಗಾಳದಲ್ಲಿ ಹಿಂದುಗಳು ಅಪಾಯದಲ್ಲಿದ್ದಾರೆ, ಟಿಎಂಸಿ ಮುಸ್ಲಿಂ ತುಷ್ಟೀಕರಣ ರಾಜಕೀಯ ಮಾಡುತ್ತಿದೆ ಎಂಬ ನರೇಟಿವ್ ಅನ್ನು ವ್ಯವಸ್ಥಿತವಾಗಿ ಹಬ್ಬಿಸಿದ ಬಿಜೆಪಿ, ಹಿಂದುಗಳ ಹಬ್ಬಗಳನ್ನು ಸಂಘ ಮತ್ತು ಪಕ್ಷದ ಕಾರ್ಯಕರ್ತರ ಮೂಲಕ ರಾಜ್ಯಾದ್ಯಂತ ಆಚರಿಸುತ್ತಾ ಮನೆ-ಮನಗಳನ್ನು ತಲುಪಿತು. ಬಂಗಾಳಿ ಅಸ್ಮಿತೆ ಜತೆಗೆ ಹಿಂದು ಅಸ್ಮಿತೆಯೂ ನಿಧಾನವಾಗಿ ಬೇರೂರುವಂತೆ ಬಿಜೆಪಿ ಮಾಡಿತು.&lt;/p&gt;&lt;p data-block-key="c0539"&gt;&lt;b&gt;೨. ಹತ್ಯೆಗಳ ಸಂಚಲನ:&lt;/b&gt; ಬಾಂಗ್ಲಾದೇಶದಲ್ಲಿ ಹಿಂದುಗಳ ಮಾರಣಹೋಮ ನಡೆದ ಘಟನೆಗಳು ಬಂಗಾಳದ ಹಿಂದುಗಳಲ್ಲಿ ಆತಂಕ ಸೃಷ್ಟಿ ಮಾಡಿದ್ದಾಗಲೇ 2026 ಬಂಗಾಳ ಚುನಾವಣೆಯಲ್ಲಿ ಬಿಜೆಪಿಗೆ ಅವಕಾಶವಿದೆ ಎನ್ನುವುದನ್ನು ದಿಲ್ಲಿ ನಾಯಕರು ಆಗ್ರಹಿಸಿದ್ದರು. ಹಿಂದುಗಳ ಹತ್ಯೆ ಯಾದಾಗ ಅದನ್ನು ಬಾಂಗ್ಲಾದೇಶದ ಮುಸ್ಲಿಮರು ಸಂಭ್ರಮಿಸಿದ ವಿಚಾರಗಳು ಬಂಗಾಳದ ಹಿಂದು ಗಳನ್ನು ವಿಚಲಿತಗೊಳಿಸಿದ್ದರಿಂದ, ಬಿಜೆಪಿ ಕಾರ್ಯಕರ್ತರು ಬಂಗಾಳದ ಹಿಂದುಗಳ ಮಧ್ಯೆ ರಾಷ್ಟ್ರ ಜಾಗೃತಿಯ ಅಭಿಯಾನ ನಡೆಸಿದರು. ಚುನಾವಣೆ ಆರಂಭವಾಗುತ್ತಿದ್ದಂತೆ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಮತ್ತು ಬಿಜೆಪಿ ಸ್ಥಳೀಯ ಮುಖಂಡ ಸುವೇಂದು ಅಧಿಕಾರಿ ‘ಅಕ್ರಮ ನುಸುಳುಕೋರ ರಿಂದ ಬಂಗಾಳವನ್ನು ರಕ್ಷಿಸಿ’ ಎಂಬ ಕರೆ ಕೊಡಲು ಆರಂಭಿಸಿದರು.&lt;/p&gt;&lt;p data-block-key="1fhu4"&gt;&lt;b&gt;೩. ಮೋದಿ-ಶಾ ಚರೀಷ್ಮಾ:&lt;/b&gt; ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಚುನಾವಣೆಯುದ್ದಕ್ಕೂ ರಾಜ್ಯದ ಉದ್ದಗಲ ಪ್ರವಾಸ ಮಾಡಿ ಪ್ರಚಾರ ಮಾಡಿದ್ದಲ್ಲದೆ, ಶ್ರೀಸಾಮಾನ್ಯ ರೊಂದಿಗೆ ನೇರ ಸಂಪರ್ಕ ಸಾಧಿಸಿದರು. ಡಬಲ್ ಎಂಜಿನ್ ಸರಕಾರದಿಂದ ಮಾತ್ರ ಅರಾಜಕತೆ ಮುಕ್ತ ಬಂಗಾಳದ ಅಭಿವೃದ್ಧಿ ಸಾಧ್ಯ ಎನ್ನುತ್ತಾ ಜನರ ಮನವೊಲಿಸಿದರು. 2021ರ ಚುನಾವಣೆ 7 ಹಂತಗಳಲ್ಲಿ ನಡೆದಿದ್ದರಿಂದ ಟಿಎಂಸಿಗೆ ತನ್ನ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಕಾಲವಕಾಶ ದೊರೆತಿತ್ತು. ಆದರೆ, ಹಾಲಿ ಚುನಾವಣೆ ಕೇವಲ 2 ಹಂತಗಳಲ್ಲಿ ನಡೆದದ್ದು ಕೂಡ ಬಿಜೆಪಿಗೆ ಲಾಭವಾಗಿ ಪರಿಣಮಿಸಿತು.&lt;/p&gt;&lt;p data-block-key="ejdn0"&gt;&lt;b&gt;ಇದನ್ನೂ ಓದಿ: &lt;/b&gt;&lt;a href="/ankanagalu/shouldnt-didi-thank-you-for-the-fear-free-elections-76688.html"&gt;Raghava Sharma Nidle Column: ಭಯಮುಕ್ತ ಚುನಾವಣೆಗೆ ದೀದಿ ಥ್ಯಾಂಕ್ಸ್‌ ಹೇಳಬೇಡವೇ ?&lt;/a&gt;&lt;/p&gt;&lt;p data-block-key="43mbj"&gt;&lt;b&gt;೪. ಗೂಂಡಾಗಿರಿಯ ತಿರಸ್ಕಾರ:&lt;/b&gt; ರಾಜಕೀಯ ಹಿಂಸಾಚಾರದ ಕರಾಳ ಇತಿಹಾಸವುಳ್ಳ ಬಂಗಾಳದಲ್ಲಿ ಜನರು ಗೂಂಡಾ ಸಂಸ್ಕೃತಿಯಿಂದ ಬೇಸತ್ತಿದ್ದರು. ಟಿಎಂಸಿ ಪ್ರೇರಿತ ಗೂಂಡಾಗಿರಿಯಿಂದಾಗಿ ಸಂತ್ರಸ್ತ ಕುಟುಂಬಗಳ ರೋದನ ತಟಸ್ಥ ಮತದಾರರನ್ನೂ ವಿಚಲಿತಗೊಳಿಸಿತ್ತು. ಹಿಂಸಾಚಾರದ ರಾಜಕಾರಣದ ಪರಿಣಾಮ ಮತದಾರರು ಮುಕ್ತ ಮನಸ್ಸಿನಿಂದ ಮಾತನಾಡುವ ವಾತಾವರಣ ಇರಲಿಲ್ಲ. ಟಿಎಂಸಿ ಹೊರತುಪಡಿಸಿದ ಪಕ್ಷಗಳನ್ನು ಬೆಂಬಲಿಸುವ ವರನ್ನು ಗುರುತಿಸಿ ದಾಳಿ ಮಾಡಲಾಗುತ್ತಿತ್ತು. ಈ ಘಟನೆಗಳಿಂದ ಜನ ರೋಸಿ ಹೋಗಿದ್ದರು ಮತ್ತು ಸಂತ್ರಸ್ತರು ಒಂದು ಕಡೆಯಿಂದ ಮತ್ತೊಂದು ಕಡೆಗೆ ಅನಿವಾರ್ಯವಾಗಿ ವಲಸೆ ಹೋಗಬೇಕಾಗಿತ್ತು. ಈ ಬಾರಿ ಹಿಂಸಾ ಚಾರ ರಾಜಕೀಯ ತಿರಸ್ಕರಿಸಿದ ಮತದಾರರು, ರಾಜ್ಯದಲ್ಲಿ ಶಾಂತಿ ನೆಲೆಸಲು ಬಿಜೆಪಿ ಶ್ರಮಿಸ ಬೇಕು ಎಂಬ ಸಂದೇಶವನ್ನು ಮತದಾನದ ಮೂಲಕ ನೀಡಿ, ಟಿಎಂಸಿಯನ್ನು ತಿರಸ್ಕರಿಸಿದರು.&lt;/p&gt;&lt;p data-block-key="4vsma"&gt;&lt;b&gt;೫. ಕೇಸರಿಗೆ ಮಹಿಳೆಯರ ಶ್ರೀರಕ್ಷೆ:&lt;/b&gt; ಟಿಎಂಸಿ ಸರಕಾರ ರಾಜ್ಯದ 25-65 ವಯಸ್ಸಿನ ಮಹಿಳೆಯರಿಗೆ ಲಕ್ಷ್ಮಿ ಭಂಡಾರ್ ಯೋಜನೆ ಅಡಿಯಲ್ಲಿ ಮಾಸಿಕ ರು. 1500 ನೀಡುತ್ತಿದ್ದುದರಿಂದ ಬಿಜೆಪಿ ಅದಕ್ಕೆ ಪರ್ಯಾಯವಾಗಿ ರು. 3000 ನೀಡುವ ಯೋಜನೆಯನ್ನು ಪ್ರಣಾಳಿಕೆಯಲ್ಲಿ ಪ್ರಕಟಿಸಿತು. ಆದರೆ, ಮಾಸಿಕ ನೆರವಿನಾಚೆ ಯೋಚನೆ ಮಾಡಿದ ಬಹುಪಾಲು ಮಹಿಳಾ ಮತದಾರರಲ್ಲಿ, ರಾಜ್ಯದ ಬಾಲಕಿ, ಯುವತಿ, ಮಹಿಳೆಯರಿಗೆ ಕಿಡಿಗೇಡಿಗಳಿಂದ ಭದ್ರತೆ ಬೇಕಿದೆ. ಅವರಿಗೆ ಭದ್ರತೆ ಒದಗಿಸುವಲ್ಲಿ ಟಿಎಂಸಿ ವಿಫಲವಾಗಿದೆ ಎಂಬ ಭಾವನೆ ಬಲವಾಗಿ ಬೇರೂರಿತ್ತು. ಲಕ್ಷ್ಮಿ ಭಂಡಾರ್ ಯೋಜನೆ ಕಾರಣಕ್ಕಾಗಿ ಒಂದಿಷ್ಟು ಮಹಿಳಾ ಮತವರ್ಗ ದೀದಿಯನ್ನು ಬೆಂಬಲಿಸಿದ್ದರೂ, ಬಹುಪಾಲು ಮಹಿಳೆ ಯರಿಗೆ ಭದ್ರತೆಯ ವಿಷಯದಲ್ಲಿ (ಮುಖ್ಯವಾಗಿ ವಿದ್ಯಾವಂತ ವರ್ಗ) ಪರಿವರ್ತನೆ ಅನಿವಾರ್ಯ ವಾಗಿತ್ತು ಎನ್ನುವುದು ಫಲಿತಾಂಶದಲ್ಲಿ ಕಂಡಿದೆ.&lt;/p&gt;&lt;p data-block-key="56iml"&gt;&lt;b&gt;೬. ಸುವೇಂದು ಆಕ್ರಮಣಕಾರಿತ್ವ:&lt;/b&gt; 2021ರ ವಿಧಾನಸಭೆ ಚುನಾವಣೆಯಲ್ಲಿ ನಂದಿಗ್ರಾಮ ವಿಧಾನಸಭೆ ಕ್ಷೇತ್ರದಲ್ಲಿ ಸಿಎಂ ಮಮತಾ ಬ್ಯಾನರ್ಜಿ ಅವರನ್ನು ಸೋಲಿಸಿ ಪರಾಕ್ರಮ ಮೆರೆದಿದ್ದ ಸುವೇಂದು ಅಧಿಕಾರಿ, ಈ ಚುನಾವಣೆಯಲ್ಲಿ ನಂದಿಗ್ರಾಮದಲ್ಲಿ ಸ್ಪರ್ಧಿಸುವ ಜತೆಗೆ ಭವಾನಿಪುರ ದಲ್ಲೂ ಸ್ಪರ್ಧಿಸಿದ್ದರಿಂದ ಮಮತಾ ದೀದಿ ರಾಜಕೀಯ ಒತ್ತಡಕ್ಕೆ ಸಿಲುಕಿದ್ದರು. ದೀದಿ ರಾಜ್ಯಾದ್ಯಂತ ಪ್ರವಾಸ ಮಾಡಿದರೂ, ಅವರ ಒಳಮನಸ್ಸು ಭವಾನಿಪುರದ ಬಗ್ಗೆಯೇ ಯೋಚಿಸುತ್ತಿತ್ತು. ಮೇಲಾಗಿ, ಮಮತಾ ಬ್ಯಾನರ್ಜಿ ಮತ್ತು ಟಿಎಂಸಿ ಸರಕಾರವನ್ನು ಸುವೇಂದು ತಮ್ಮ ಆಕ್ರಮಣಕಾರಿ ಧೋರಣೆ ಯಿಂದಲೇ ಎದುರಿಸಿ, ವಾಗ್ಬಾಣಗಳ ಮೂಲಕ ಬಿಜೆಪಿ ಕಾರ್ಯಕರ್ತರ ಮನೋಬಲ ವೃದ್ಧಿಸಿದರು. ಒಂದೊಮ್ಮೆ ಟಿಎಂಸಿಯಲ್ಲಿದ್ದುಕೊಂಡು ಜಾತ್ಯತೀತ ಮಂತ್ರ ಜಪಿಸಿದ್ದ ಸುವೇಂದು, ತಮ್ಮ ಸೈದ್ಧಾಂತಿಕ ರೂಪಾಂತರದೊಂದಿಗೆ ಕೇಸರಿ ಕಾರ್ಯಕರ್ತರಿಗೂ ಹತ್ತಿರವಾಗಿದ್ದರು.&lt;/p&gt;&lt;p data-block-key="etcs9"&gt;&lt;b&gt;೭. ದಿಕ್ಕು ಬದಲಿಸಿದ ಆರ್‌ಜಿ ಕರ್ ಘಟನೆ:&lt;/b&gt; 15 ವರ್ಷಗಳ ಆಡಳಿತಾವಧಿಯಲ್ಲಿ ಸಿಎಂ ಮಮತಾ ಬ್ಯಾನರ್ಜಿ ಅವರ ವರ್ಚಸ್ಸಿಗೆ ತೀವ್ರವಾಗಿ ಹಾನಿ ಮಾಡಿದ್ದು ಕೋಲ್ಕತ್ತಾದ ಆರ್‌ಜಿ ಕರ್ ಆಸ್ಪತ್ರೆ ಯಲ್ಲಿ ವೈದ್ಯೆ ವಿದ್ಯಾರ್ಥಿನಿಯ ಅತ್ಯಾಚಾರ-ಕೊಲೆ ಪ್ರಕರಣ. ವಿದ್ಯಾರ್ಥಿನಿ ಹತ್ಯೆ-ಅತ್ಯಾಚಾರ ಮಾಡಿದ ವ್ಯಕ್ತಿಯನ್ನು ಸರಕಾರ ರಕ್ಷಣೆ ಮಾಡುತ್ತಿದೆಯೇ ಎಂಬಷ್ಟರ ಮಟ್ಟಿಗೆ ರಾಜ್ಯದಲ್ಲಿ ಚರ್ಚೆ ಗಳು ನಡೆದು, ಸರಕಾರದ ಬಗ್ಗೆ ಮತ್ತು ಮುಖ್ಯವಾಗಿ ಸಿಎಂ ಮಮತಾ ಬಗ್ಗೆ ಜನರಲ್ಲಿ ಆಕ್ರೋಶ ದುಪ್ಪಟ್ಟಾಗಿತ್ತು. ಈ ಪ್ರಕರಣವನ್ನು ರಾಜಕೀಯ ವಿಸ್ತರಣೆಗೆ ಬಳಸಿಕೊಂಡ ಬಿಜೆಪಿ, ಸಂತ್ರಸ್ತೆಯ ತಾಯಿ ರತ್ನಾ ದೇಬನಾಥ್ ಅವರಿಗೆ ಪಾಣಿಹಾಟಿ ವಿಧಾನಸಭೆ ಕ್ಷೇತ್ರದಿಂದ ಟಿಕೆಟ್ ನೀಡಿ, ಅವರ ಹೋರಾಟಕ್ಕೆ ರಾಜಕೀಯ ಬಲ ನೀಡಿತು. ಈ ಪ್ರಕರಣವನ್ನು ಬಿಜೆಪಿ ರಾಜಕೀಯ ಗೊಳಿಸಿದೆ ಎಂಬ ಅಪಸ್ವರಗಳು ಪಾಣಿಹಾಟಿಯಲ್ಲಿ ಕೇಳಿ ಬಂದರೂ, ರತ್ನಾ ದೇಬನಾಥ್ ಅವರ ಗೆಲುವಿಗೆ ಇದು ಅಡ್ಡಿ ಮಾಡಲಿಲ್ಲ. ರತ್ನಾ ದೇಬನಾಥ್ ಅವರ ಚಿತ್ರ ಮುಂದಿಟ್ಟುಕೊಂಡೇ ಬಿಜೆಪಿ ಮಹಿಳಾ ಪರ ರಣನೀತಿ ಅನುಸರಿಸಿತು.&lt;/p&gt;&lt;p data-block-key="avq19"&gt;&lt;b&gt;೮. ಬಾಂಗ್ಲಾದೇಶಿಯರ ಭಯ:&lt;/b&gt; ಬಂಗಾಳದಲ್ಲಿ ಬಾಂಗ್ಲಾದೇಶೀಯರಿಗಿರುವಷ್ಟು ಮಾನ್ಯತೆ ಮೂಲ ನಿವಾಸಿಗಳಿಗೆ ಇಲ್ಲ ಎಂಬ ಆಕ್ರೋಶವೂ ಟಿಎಂಸಿ ಕುಸಿತಕ್ಕೆ ಕಾರಣ. ಇಂತಹ ಆಕ್ರೋಶ ತುಂಬಿದ ಮಾತುಗಳು ರಾಜ್ಯದ ಹಲವು ಜಿಗಳಲ್ಲಿ ಕೇಳಿಬಂದವು. ಇದೇ ಕಾರಣಕ್ಕೆ ಗಡಿ ಭಾಗದ ಕ್ಷೇತ್ರಗಳಲ್ಲಿ ಬಿಜೆಪಿ ಅಮೋಘ ವಿಜಯ ದಾಖಲಿಸಿತು. ಬಾಂಗ್ಲಾದೇಶಿಯರನ್ನು ಭಾರತದಿಂದ ಓಡಿಸಬೇಕು ಎಂಬ ಬಿಜೆಪಿಯ ಪೊಲಿಟಿಕಲ್ ನರೇಟಿವ್ ರಾಜ್ಯದ ಜನರನ್ನು ತಲುಪಿತು ಮತ್ತು ಅಕ್ರಮ ನುಸುಳು ಕೋರರು ರಾಜ್ಯ ಮತ್ತು ದೇಶದ ಸಂಪನ್ಮೂಲಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಆದರೆ, ಮೂಲ ನಿವಾಸಿಗಳು ಸಂತ್ರಸ್ತರಾಗಿದ್ದಾರೆ ಎಂಬ ಮತದಾರನ ಬೇಸರ ಟಿಎಂಸಿ ವಿರೋಧಿ ಮತಗಳಾಗಿ ಬದಲಾದವು.&lt;/p&gt;&lt;p data-block-key="dmaau"&gt;&lt;b&gt;೯. ಯುವ ಜನಾಂಗದ ಬೆಂಬಲ:&lt;/b&gt; ಪಶ್ಚಿಮ ಬಂಗಾಳವನ್ನು ಕರ್ನಾಟಕ, ತ.ನಾಡು, ಮಹಾರಾಷ್ಟ್ರ, ಗುಜರಾತ್, ಆಂಧ್ರಪ್ರದೇಶದಂತಹ ರಾಜ್ಯಗಳಿಗೆ ಹೋಲಿಸಿದ ಯುವ ಮತದಾರರು, ನಮ್ಮ ರಾಜ್ಯ ಏಕೆ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದೆ ಎಂಬುದನ್ನೇ ಪ್ರಶ್ನೆ ಮಾಡುತ್ತಿದ್ದರು. ಕಂಪನಿ, ಫ್ಯಾಕ್ಟರಿ, ಉದ್ಯಮ ಸಂಸ್ಥೆಗಳ ಕೊರತೆ ಯಿಂದಾಗಿ ಯುವಕರು ಬೇರೆ ರಾಜ್ಯಕ್ಕೆ ವಲಸೆ ಹೋಗುತ್ತಿರುವುದು ಜನರನ್ನು ಚಿಂತೆಗೀಡು ಮಾಡಿತ್ತು. ಬೇರೆ ರಾಜ್ಯಗಳಿಂದ ಮತದಾನಕ್ಕಾಗಿ ಬಂಗಾಳಕ್ಕೆ ಬಂದಿದ್ದ ವಲಸಿಗ ಮತವರ್ಗ ಕೂಡ ಬಂಗಾಳದಲ್ಲಿ ಪರಿವರ್ತನೆ ಅನಿವಾರ್ಯ ಎಂಬ ಮಾತುಗಳನ್ನಾಡು ತ್ತಿತ್ತು. ವಿದ್ಯಾವಂತ ಯುವಕರ ಮಧ್ಯೆ ಉದ್ಯೋಗ ಸ್ನೇಹಿ ವಾತಾವರಣಕ್ಕಾಗಿ ಬದಲಾವಣೆ ಅನಿವಾರ್ಯ ಎಂಬ ಚರ್ಚೆಗಳಾಗುತ್ತಿದ್ದುದನ್ನು ಬಿಜೆಪಿ ತನ್ನ ಪರವಾದ ಅಲೆ ವೃದ್ಧಿಸಲು ಬಳಸಿಕೊಂಡಿತು.&lt;/p&gt;&lt;p data-block-key="39avq"&gt;&lt;b&gt;10. ಎಸ್‌ಐಆರ್ ಪರಿಣಾಮ:&lt;/b&gt; ಮತದಾರ ಪಟ್ಟಿಯ ತೀವ್ರ ಪರಿಷ್ಕರಣೆಯಿಂದಾಗಿ (ಎಸ್‌ಐಆರ್) 94 ಲಕ್ಷ ಮತದಾರರ ಹೆಸರನ್ನು ಅಳಿಸಿ ಹಾಕಲಾಯಿತು. ಇದರಲ್ಲಿ 27 ಲಕ್ಷ ಮಂದಿ ಪಟ್ಟಿಯಲ್ಲಿ ಮರು ಸೇರ್ಪಡೆಗಾಗಿ ಅರ್ಜಿ ಸಲ್ಲಿಸಿದ್ದು, ವಿಚಾರಣೆ ನಡೆಯುತ್ತಿದೆ. ಆದರೆ, ಉಳಿದ 67 ಲಕ್ಷ ನಕಲಿ ಮತದಾರರ ಹೆಸರನ್ನು ಶಾಶ್ವತವಾಗಿ ಅಳಿಸಿ ಹಾಕಲಾಯಿತು. ಇದರಿಂದಾಗಿ ಹಲವು ಕ್ಷೇತ್ರಗಳ ರಾಜಕೀಯ ಚಿತ್ರಣವೇ ಬದಲಾಯಿತು. ಮತದಾನ ಪ್ರಮಾಣದಲ್ಲೂ ಏರಿಕೆಯಾಯಿತು. ಎಸ್‌ಐಆರ್ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಸರಕಾರಿ ದಾಖಲೆಗಳಿಲ್ಲದೆ ಬಂಗಾಳದಲ್ಲಿ ನೆಲೆಸಿದ್ದ ಅನೇಕ ಬಾಂಗ್ಲಾದೇಶಿ ಪ್ರಜೆಗಳು ಗಡಿ ಮೂಲಕ ಬಾಂಗ್ಲಾದೇಶಕ್ಕೆ ವಾಪಸ್ ತೆರಳಿದರು. ಎಸ್‌ಐಆರ್ ಪ್ರಕ್ರಿಯೆ ವಿರೋಧಿಸಿ, ನ್ಯಾಯಾಲಯದ ಆದೇಶಗಳಿಗೂ ಬಗ್ಗದೆ ಟಿಎಂಸಿ ಮುಖಂಡರು ನಡೆಸಿದ ಹೈಡ್ರಾಮಗಳೂ ಮತದಾರರ ಮನಸ್ಸಿನ ಮೇಲೆ ವ್ಯಾಪಕ ಪರಿಣಾಮ ಬೀರಿದವು.&lt;/p&gt;&lt;p data-block-key="5fedm"&gt;&lt;b&gt;11. ಬಂಗಾಳಿ ಅಸ್ಮಿತೆಯಾಚೆ ಮತ:&lt;/b&gt; ಮೂರು ಅವಧಿಗಳಿಂದ ತನ್ನನ್ನು ಬಂಗಾಳಿ ಅಸ್ಮಿತೆಯ ಪ್ರತಿನಿಧಿ ಎಂದು ಬಿಂಬಿಸಿಕೊಳ್ಳುತ್ತಿದ್ದ ಸಿಎಂ ಮಮತಾ, ಈ ಬಾರಿ ಕೂಡ ಬಿಜೆಪಿಯನ್ನು ಉತ್ತರ ಭಾರತದ ಪೊಲಿಟಿಕಲ್ ಪಾರ್ಟಿ ಎಂದು ಬಿಂಬಿಸಿ, ಬಂಗಾಳಿ ಸಂಸ್ಕೃತಿ, ಪರಂಪರೆ ಮತ್ತು ಗುರುತನ್ನು ಇವರು ಹಾಳು ಮಾಡಲಿದ್ದಾರೆ ಎಂದು ಪ್ರಚಾರ ನಡೆಸಿದರು.&lt;/p&gt;&lt;p data-block-key="cbj8c"&gt;ಮೋದಿ-ಅಮಿತ್ ಶಾ ಬಂಗಾಳವನ್ನು ಹತ್ತಿಕ್ಕಲಿದ್ದಾರೆ ಎಂದೂ ಎಚ್ಚರಿಸಲಾಯಿತು. ಆದರೆ, ದೀದಿಯ ಈ ತಂತ್ರಗಾರಿಕೆಯನ್ನು ಜನ ಈ ಬಾರಿ ಒಪ್ಪಲಿಲ್ಲ. ಬಂಗಾಳಿಗರನ್ನು ಕಾಪಾಡುವುದು ಬಂಗಾಳಿ ಅಸ್ಮಿತೆ ಒಂದೇ ಅಲ್ಲ. ಅಭಿವೃದ್ಧಿ ಮತ್ತು ರಕ್ಷಣೆಗೆ ಅಸ್ಮಿತೆಯಾಚೆಗೂ ಯೋಚಿಸುವುದು ಅನಿವಾರ್ಯ ಎನ್ನುವುದನ್ನು ಚುನಾವಣಾ ತೀರ್ಪಿನಲ್ಲಿ ಮತದಾರ ಸ್ಪಷ್ಟಪಡಿಸಿದ್ದಾನೆ.&lt;/p&gt;&lt;p data-block-key="97mec"&gt;&lt;b&gt;12. ಸೈಲೆಂಟ್ ವೋಟರ್ಸ್:&lt;/b&gt; ನನ್ನಂತೆ ಅನೇಕ ಪತ್ರಕರ್ತರು ಬಂಗಾಳಿ ಮತದಾರರನ್ನು ಮಾತನಾಡಿಸಿ, ಅವರ ಮನದಾಳ ಅರಿಯುವ ಯತ್ನ ಮಾಡಿದ್ದರು. 10 ಮಂದಿ ಜತೆ ಮಾತಾಡಿದರೆ ಅವರಲ್ಲಿ 2-3 ಮಂದಿ ಮಾತ್ರ ರಾಜಕೀಯ ಒಲವು-ನಿಲುವುಗಳ ಬಗ್ಗೆ ಹೇಳುತ್ತಿದ್ದರು. ಉಳಿದವರದ್ದು ಗಾಢ ಮೌನ. ಹೀಗಾಗಿ, ಯಾರೆಲ್ಲ ಮೌನವಾಗಿದ್ದರೋ ಅವರು ಬದಲಾವಣೆಗೆ ಮತ ಹಾಕುವ ಬಗ್ಗೆ ನಿರ್ಣಯಿಸಿದ್ದರು ಎನ್ನುವುದು ಈಗ ದೃಢವಾಗಿದೆ. ಟಿಎಂಸಿ ಗೂಂಡಾ ರಾಜಕಾರಣದ ಭಯ, ಆತಂಕದಿಂದಾಗಿ ಅವರು ತಮ್ಮ ಮನಸ್ಸಿನ ಆಶಯಗಳನ್ನು ಹಂಚಿಕೊಳ್ಳಲಿಲ್ಲ. ಜನರು ಮುಕ್ತವಾಗಿ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳದ್ದರಿಂದ ಮತದಾರನ ಮನದೊಳಗೇನಿದೆ ಎನ್ನುವುದು ಸುಲಭದಲ್ಲಿ ಅರ್ಥವಾಗುತ್ತಿರಲಿಲ್ಲ. ಆದರೆ, ಮತದಾರರು ತಮ್ಮ ಮೌನದ ಮೂಲಕವೇ ಟಿಎಂಸಿಗೆ ಸಂದೇಶ ರವಾನಿಸಿದರು ಎನ್ನುವುದನ್ನು ಫಲಿತಾಂಶ ತೋರಿಸಿದೆ.&lt;/p&gt;&lt;p data-block-key="70ffs"&gt;&lt;b&gt;13. ಎಡ-ಕಾಂಗ್ರೆಸ್ ವೋಟುಗಳ ಶಿಫ್ಟ್:&lt;/b&gt; ಟಿಎಂಸಿ ದಬ್ಬಾಳಿಕೆ‌ ರಾಜಕಾರಣದಿಂದ ಬೇಸತ್ತಿದ್ದ ಎಡಪಕ್ಷಗಳ ಮತ್ತು ಕಾಂಗ್ರೆಸ್‌ನ ಕೆಲವೊಂದಿಷ್ಟು ಮತದಾರರು ಈ ಸಲ ಟಿಎಂಸಿ ಸೋಲಲೇಬೇಕು ಎಂಬ ಕಾರಣಕ್ಕಾಗಿ ಬಿಜೆಪಿಗೆ ಮತ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ಕೆಲ ಮತದಾರರು ಟಿಎಂಸಿಯನ್ನು ಸೋಲಿಸುವ ರಾಜಕೀಯ ಸಾಮರ್ಥ್ಯ ಕಾಂಗ್ರೆಸ್ ಅಥವಾ ಎಡಪಕ್ಷಗಳಲ್ಲಿ ಇಲ್ಲ ಎಂಬ ವಾಸ್ತವ ಒಪ್ಪಿಕೊಂಡು, ತಾವು ಬಿಜೆಪಿ ತತ್ವ-ಸಿದ್ಧಾಂತದ ವಿರೋಧಿಗಳಾಗಿದ್ದರೂ, ಟಿಎಂಸಿ ಯನ್ನು ಹತ್ತಿಕ್ಕಲು ಬಿಜೆಪಿಗೆ ಮತ ಹಾಕುವುದು ಅನಿವಾರ್ಯ ಎಂದು ಆಲೋಚಿಸಿದ್ದರು. ಇದು ಬಿಜೆಪಿಯ ಸಂಖ್ಯಾಬಲ ಮತ್ತಷ್ಟು ಹೆಚ್ಚಿಸಿತು.&lt;/p&gt;&lt;p data-block-key="ed2bn"&gt;&lt;b&gt;14. ಚುನಾವಣೆ ಆಯೋಗದ ಸಾಹಸ:&lt;/b&gt; ರಾಜ್ಯದಲ್ಲಿ ಮೊದಲ ಬಾರಿಗೆ ಮುಕ್ತ, ನ್ಯಾಯಸಮ್ಮತ ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ಬಿಗಿ ನಿಯಮಗಳನ್ನು ಜಾರಿ ಮಾಡಿತು. ಇದುವರೆಗಿನ ಚುನಾವಣೆಗಳು ಹಿಂಸಾಚಾರವಿಲ್ಲದೆ ನಡೆದ ಉದಾಹರಣೆಯೇ ಇಲ್ಲ. ಆದರೆ, ಪಕ್ಷಪಾತ ಧೋರಣೆಯುಳ್ಳ ಅಿಕಾರಿಗಳನ್ನು ನಿರ್ದಾಕ್ಷಿಣ್ಯವಾಗಿ ಅಮಾನತುಗೊಳಿಸಿದ ಚುನಾವಣಾ ಆಯೋಗ, ಬೂತ್‌ಗಳಲ್ಲಿ ಮತದಾರರ ಮೇಲೆ ರಾಜಕೀಯ ಪಕ್ಷಗಳ ಪ್ರಭಾವ ಬೀರದಂತೆ ಎಚ್ಚರಿಕೆ ವಹಿಸಿತು. ಬೂತ್‌ಗಳ 100 ಮೀಟರ್ ಅಂತರದಲ್ಲಿ ಮತದಾರ, ಪ್ರಿಸೈಡಿಂಗ್ ಆಫಿಸರ್ ಮತ್ತು ಸೇನಾ ಸಿಬ್ಬಂದಿ ಬಿಟ್ಟು ಬೇರೆ ಯಾರೂ ಬರುವಂತಿರಲಿಲ್ಲ. 100 ಮೀಟರ್ ದೂರದಲ್ಲಿ ವೋಟರ್ ಕಾರ್ಡು ಪರಿಶೀಲನೆಗಾಗಿ ಬಿಎಲಒಗಳು ಕುಳಿತಿದ್ದರು. ಇವೆಲ್ಲವೂ ನ್ಯಾಯಯುತ ಚುನಾವಣೆ ನಡೆಸಲು ಸಹಕಾರಿಯಾದವು.&lt;/p&gt;&lt;p data-block-key="3n7sh"&gt;&lt;b&gt;15. ಧೈರ್ಯ ತುಂಬಿದ ಸೇನೆ:&lt;/b&gt; ಮತದಾನಕ್ಕೆ ಮುನ್ನ ಸಿಆರ್‌ಪಿಎಫ್‌ ಸೇರಿ ವಿವಿಧ ಭದ್ರತಾ ಪಡೆಗಳ ಸೇನಾ ಸಿಬ್ಬಂದಿ ಗ್ರಾಮ, ಪಟ್ಟಣಗಳಲ್ಲಿ ಜನರು, ಸಮುದಾಯಗಳನ್ನು ತಲುಪಿ ಅವರಲ್ಲಿ ಧೈರ್ಯ ತುಂಬುವ ಕೆಲಸ ಮಾಡಿದರು. ಯಾವ ಭಯವಿಲ್ಲದೆ ಮತದಾನಕ್ಕೆ ಬನ್ನಿ, ನಿಮ್ಮ ಮಕ್ಕಳಂತೆ ನಾವು ರಕ್ಷಣೆ ನೀಡುತ್ತೇವೆ ಎಂದು ಮನೋಬಲ ವೃದ್ಧಿಸಿದರು. ಹೀಗಾಗಿ, ಜನರು ಭಯಮುಕ್ತ ಪರಿಸರದಲ್ಲಿ ಮತದಾನ ಮಾಡಲು ಸಾಧ್ಯವಾಯಿತು. ಭಯಮುಕ್ತ ವಾತಾವರಣ ಕೂಡ ಜನ ಪರಿವರ್ತನೆಗೆ ಮತ ಹಾಕಲು ಪ್ರೇರೇಪಣೆಯಾಯಿತು..! ರಾಜ್ಯವೊಂದರ ಚುನಾವಣೆಗೆ 2.5 ಲಕ್ಷ ಸೇನಾ ಸಿಬ್ಬಂದಿ ರಕ್ಷಣೆಗಾಗಿ ನಿಯೋಜನೆಗೊಂಡ ಮೇಲೂ ಸಣ್ಣಪುಟ್ಟ ಹಿಂಸಾಚಾರ ಘಟನೆಗಳು ಸಂಭವಿದವು ಎಂದರೆ ಈ ಹಿಂದಿನ ಚುನಾವಣೆಗಳು ಹೇಗೆ ನಡೆಯುತ್ತಿದ್ದವು ಎನ್ನುವು ದನ್ನು ನೀವು ಊಹಿಸಬಹುದು..!&lt;/p&gt;&lt;p data-block-key="6bkvr"&gt;&lt;b&gt;16. ಆರ್‌ಎಸ್‌ಎಸ್ ಗ್ರೌಂಡ್‌ವರ್ಕ್:&lt;/b&gt; 2021ರ ವಿಧಾನಸಭೆ ಚುನಾವಣೆ ಸೋಲಿನ ಹೊರತಾಗಿಯೂ ಆರ್‌ಎಸ್‌ಎಸ್ ತನ್ನ ಗ್ರೌಂಡ್ ವರ್ಕ್ ಅನ್ನು ಬಂಗಾಳದಲ್ಲಿ ವಿಸ್ತರಿಸುತ್ತಲೇ ಇತ್ತು. ರಾಜ್ಯದ ವಿವಿಧೆಡೆ ಹಿಂದು ಜಾಗೃತಿ ಸಭೆ, ಅಭಿಯಾನ, ಜಾಗರಣೆಗಳನ್ನು ನಡೆಸುತ್ತಾ ರಾಷ್ಟ್ರೀಯ ವಿಚಾರ ಧಾರೆಗಳ ಬೀಜಗಳನ್ನು ಬಿತ್ತುತ್ತಾ ಜನರನ್ನು ತಲುಪಿತು. ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸುದೀರ್ಘ ಕಾರ್ಯಾಚರಣೆ ಮತ್ತು ಕಾರ್ಯಕರ್ತರ ತಾಳ್ಮೆಯ ಫಲವಾಗಿ ಬಂಗಾಳವನ್ನು ಗೆಲ್ಲಲು ಕೇಸರಿಪಡೆಗೆ ಸಾಧ್ಯವಾಗಿದೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>MI vs LSG: 'ಅದೃಷ್ಟದ ಅವಶ್ಯಕತೆಯಿದೆ'; ಸತತ ಸೋಲಿನ ಬೆನ್ನಲ್ಲೇ ಪಂತ್‌ ಹತಾಶ ನುಡಿ</title><link>https://vishwavani.news/sports/helpless-rishabh-pant-left-praying-for-luck-as-lsg-sink-deeper-after-mi-defeat-77246.html</link><guid>https://vishwavani.news/sports/helpless-rishabh-pant-left-praying-for-luck-as-lsg-sink-deeper-after-mi-defeat-77246.html</guid><pubDate>Tue, 05 May 2026 01:28:02 +0000</pubDate><description>&lt;![CDATA[IPL 2026: ಲಕ್ನೋ ಸೂಪರ್ ಜೈಂಟ್ಸ್ ತಂಡವು ಮೇ 7 ರ ಗುರುವಾರ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ರಜತ್ ಪಾಟಿದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸುವಾಗ ಸಾಕಷ್ಟು ಆತ್ಮಾವಲೋಕನ ಮಾಡಿಕೊಳ್ಳಬೇಕಾಗುತ್ತದೆ.]]&gt;</description><dc:creator>&lt;![CDATA[Abhilash BC]]&gt;</dc:creator><category>&lt;![CDATA[ಕ್ರಿಕೆಟ್‌]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕ್ರೀಡೆ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Rishabh_Pant_5_UzPEFEn.original.jpg" class="attachment-large size-large wp-post-image" alt="MI vs LSG: 'ಅದೃಷ್ಟದ ಅವಶ್ಯಕತೆಯಿದೆ'; ಸತತ ಸೋಲಿನ ಬೆನ್ನಲ್ಲೇ ಪಂತ್‌ ಹತಾಶ ನುಡಿ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="rx0xo"&gt;ಮುಂಬಯಿ, ಮೇ 5: ಸೋಮವಾರ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026(IPL 2026) ರ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್(MI vs LSG) ವಿರುದ್ಧ ಆರು ವಿಕೆಟ್‌ಗಳ ಸೋಲಿನ ನಂತರ ಲಖನೌ ಸೂಪರ್‌ ಜೈಂಟ್ಸ್‌ ನಾಯಕ ರಿಷಭ್ ಪಂತ್ ತಂಡವು ಋತುವಿನ ಉಳಿದ ಐದು ಪಂದ್ಯಗಳನ್ನು ಆಡುವಾಗ ಸ್ವಲ್ಪ ಅದೃಷ್ಟದ ಅವಶ್ಯಕತೆಯಿದೆ ಎಂದು ಹೇಳಿದರು.&lt;/p&gt;&lt;p data-block-key="246in"&gt;ಪಂದ್ಯದ ಬಳಿಕ ಮಾತನಾಡಿದ ಪಂತ್‌, ತಂಡವು ಪರಿಸ್ಥಿತಿಯನ್ನು ಸರಿಪಡಿಸಬೇಕಾದರೆ ಸ್ವಲ್ಪ ಅದೃಷ್ಟವನ್ನು ಉಳಿಸಿಕೊಂಡರೆ ಉತ್ತಮ ಪ್ರದರ್ಶನ ನೀಡಬಹುದು ಎಂದು ಹೇಳಿದರು. "ನಮಗೆ ಸ್ವಲ್ಪ ಅದೃಷ್ಟ ಬೇಕು ಅಂತ ನಾನು ಭಾವಿಸುತ್ತೇನೆ. ನಾನು ಹೇಳ ಹೊರಟಿರುವುದು ಅದೊಂದೇ ವಿಷಯ. (ಅದೃಷ್ಟವನ್ನು ಹೇಗೆ ಕಂಡುಹಿಡಿಯುವುದು?) ಹೌದು, ಅದರ ಸುತ್ತಲೂ ಬಹಳಷ್ಟು ಆಶೀರ್ವಾದ ಕೆಲಸ ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ. ಮತ್ತು ಇದು ಖಂಡಿತವಾಗಿಯೂ ನಮ್ಮಿಂದ ಸ್ವಲ್ಪ ಹೆಚ್ಚಿನ ಪ್ರಯತ್ನವನ್ನು ತೆಗೆದುಕೊಳ್ಳುತ್ತದೆ," ಎಂದು ಪಂದ್ಯದ ನಂತರ ಪ್ರಸಾರಕರೊಂದಿಗೆ ಮಾತನಾಡುತ್ತಾ ಪಂತ್ ಹೇಳಿದರು.&lt;/p&gt;&lt;p data-block-key="546el"&gt;ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಸೂಪರ್ ಜೈಂಟ್ಸ್ ಐದು ವಿಕೆಟ್ ನಷ್ಟಕ್ಕೆ 228 ರನ್ ಗಳಿಸಿತು, ಮುಂಬೈ ಎಂಟು ಎಸೆತಗಳು ಬಾಕಿ ಇರುವಾಗ ಅದನ್ನು ಬೆನ್ನಟ್ಟಿ ಗೆಲುವು ಸಾಧಿಸಿತು. ಸೂಪರ್ ಜೈಂಟ್ಸ್ ತಂಡವು ಗುರಿಯಿಟ್ಟುಕೊಂಡಿದ್ದ ಮೊತ್ತಕ್ಕಿಂತ ಕಡಿಮೆ ರನ್ ಗಳಿಸಿದೆ ಎಂದು ರಿಷಭ್ ಪಂತ್ ಒಪ್ಪಿಕೊಂಡರು ಮತ್ತು ತಂಡಕ್ಕಾಗಿ ನಿರಂತರವಾಗಿ ಪ್ರದರ್ಶನ ನೀಡುತ್ತಿರುವ ಬೌಲರ್‌ಗಳನ್ನು ದೂಷಿಸುವುದು ಅನ್ಯಾಯವಾಗುತ್ತದೆ ಎಂದು ಹೇಳಿದರು.&lt;/p&gt;&lt;p data-block-key="fsf1m"&gt;&lt;a href="/sports/cricket/rohit-sharma-ryan-rickelton-put-on-a-show-as-mumbai-indians-beat-lucknow-super-giants-to-remain-in-77244.html"&gt;MI vs LSG: ರೋಹಿತ್‌-ರಿಕೆಲ್ಟನ್‌ ಅಬ್ಬರ, ಲಖನೌ ಎದುರು ಗೆದ್ದು ಬೀಗಿದ ಮುಂಬೈ ಇಂಡಿಯನ್ಸ್‌!&lt;/a&gt;&lt;/p&gt;&lt;p data-block-key="3uhd9"&gt;"ನೋಡಿ, ಖಂಡಿತ, ನಾವು 10-15 ರನ್‌ಗಳ ಕಡಿಮೆ ಗಳಿಸಿದ್ದೆವು ಏಕೆಂದರೆ ಈ ಪಿಚ್‌ನಲ್ಲಿ 220-230 ರನ್‌ ಖಚಿತವಾಗಿತ್ತು. ಆದರೆ ಅದೇ ಸಮಯದಲ್ಲಿ, ಇಂತಹ ವಿಕೆಟ್‌ನಲ್ಲಿ, ನೀವು ಯಾವಾಗಲೂ ಬೌಲರ್‌ಗಳನ್ನು ದೂಷಿಸಲು ಸಾಧ್ಯವಿಲ್ಲ. ಅವರು ನಮಗಾಗಿ ಅದ್ಭುತ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಖಂಡಿತವಾಗಿಯೂ ಅವರ ಬಗ್ಗೆ ಹೆಚ್ಚಿನದನ್ನು ಹೇಳಲು ಸಾಧ್ಯವಿಲ್ಲ" ಎಂದು ಪಂತ್ ಹೇಳಿದರು.&lt;/p&gt;&lt;p data-block-key="fodah"&gt;ಲಕ್ನೋ ಸೂಪರ್ ಜೈಂಟ್ಸ್ ತಂಡವು ಮೇ 7 ರ ಗುರುವಾರ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ರಜತ್ ಪಾಟಿದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸುವಾಗ ಸಾಕಷ್ಟು ಆತ್ಮಾವಲೋಕನ ಮಾಡಿಕೊಳ್ಳಬೇಕಾಗುತ್ತದೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಕರ್ನಾಟಕದ ಸೂರ್ಯಕಾಂತಿ ಬೆಳೆಗಾರರ ಬೆನ್ನಿಗೆ ನಿಂತ ಕೇಂದ್ರ; ಬೆಂಬಲ ಬೆಲೆಯಲ್ಲಿ 9023 ಮೆ.ಟನ್‌ ಖರೀದಿಗೆ ಅಸ್ತು</title><link>https://vishwavani.news/politics/central-government-approves-purchase-of-sunflower-at-rs-7721-per-quintal-support-price-scheme-77236.html</link><guid>https://vishwavani.news/politics/central-government-approves-purchase-of-sunflower-at-rs-7721-per-quintal-support-price-scheme-77236.html</guid><pubDate>Mon, 04 May 2026 18:01:09 +0000</pubDate><description>&lt;![CDATA[Pralhad Joshi: ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ ಅವರ ಮನವಿ ಮೇರೆಗೆ ಕೇಂದ್ರ ಸರ್ಕಾರ ರಾಜ್ಯದ ಸೂರ್ಯಕಾಂತಿ ಬೆಳೆಗಾರರ ಬೆನ್ನಿಗೆ ನಿಂತಿದೆ. ಸಚಿವ ಜೋಶಿ ಅವರ ಮಾರ್ಗದರ್ಶನದಂತೆ ಕೇಂದ್ರ ಕೃಷಿ ಸಚಿವಾಲಯ ಇದೀಗ ಕ್ವಿಂಟಲ್‌ಗೆ  7721 ರುಪಾಯಿ ಬೆಂಬಲ ಬೆಲೆ ಯೋಜನೆಯಲ್ಲಿ ಸೂರ್ಯಕಾಂತಿ ಖರೀದಿಗೆ ಅನುಮೋದನೆ ನೀಡಿದೆ.]]&gt;</description><dc:creator>&lt;![CDATA[Siddalinga Swamy]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕರ್ನಾಟಕ]]&gt;</category><category>&lt;![CDATA[ರಾಜಕೀಯ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Pralhad_Joshi_13.original.jpg" class="attachment-large size-large wp-post-image" alt="ಕರ್ನಾಟಕದ ಸೂರ್ಯಕಾಂತಿ ಬೆಳೆಗಾರರ ಬೆನ್ನಿಗೆ ನಿಂತ ಕೇಂದ್ರ; ಬೆಂಬಲ ಬೆಲೆಯಲ್ಲಿ 9023 ಮೆ.ಟನ್‌ ಖರೀದಿಗೆ ಅಸ್ತು" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="4kx1e"&gt;&lt;b&gt;ನವದೆಹಲಿ, ಮೇ 4:&lt;/b&gt; ಬೆಲೆ ಕುಸಿತದಿಂದ ಕಂಗೆಟ್ಟಿದ್ದ ಕರ್ನಾಟಕದ ಸೂರ್ಯಕಾಂತಿ ಬೆಳೆಗಾರರ ನೆರವಿಗೆ ಮುಂದಾದ ಕೇಂದ್ರ ಸರ್ಕಾರ (&lt;b&gt;Central Government&lt;/b&gt;) ಇದೀಗ ಬೆಂಬಲ ಬೆಲೆಯಲ್ಲಿ 9,023 MT ಸೂರ್ಯಕಾಂತಿ ಖರೀದಿಗೆ ಅಸ್ತು ಎಂದಿದೆ. ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ &lt;a href="/politics/why-did-the-siddaramaiah-government-increase-petrol-and-diesel-prices-several-times-says-union-minister-pralhad-joshi-77023.html"&gt;&lt;b&gt;ಪ್ರಲ್ಹಾದ್‌ ಜೋಶಿ&lt;/b&gt;&lt;/a&gt; (Pralhad Joshi) ಅವರ ಮನವಿ ಮೇರೆಗೆ ಕೇಂದ್ರ ಸರ್ಕಾರ ಈ ಮಹತ್ವದ ನಿರ್ಧಾರ ತೆಗೆದುಕೊಂಡು ರಾಜ್ಯದ ಸೂರ್ಯಕಾಂತಿ ಬೆಳೆಗಾರರ ಬೆನ್ನಿಗೆ ನಿಂತಿದೆ. ಸಚಿವ ಪ್ರಲ್ಹಾದ್‌ ಜೋಶಿ ಅವರ ಮಾರ್ಗದರ್ಶನದಂತೆ ಕೇಂದ್ರ ಕೃಷಿ ಸಚಿವಾಲಯ ಇದೀಗ ಕ್ವಿಂಟಲ್ ಗೆ ₹ 7721 ಬೆಂಬಲ ಬೆಲೆ ಯೋಜನೆಯಲ್ಲಿ ಸೂರ್ಯಕಾಂತಿ ಖರೀದಿಗೆ ಅನುಮೋದನೆ ನೀಡಿದೆ.&lt;/p&gt;&lt;p data-block-key="8n1kq"&gt;&lt;/p&gt;&lt;p data-block-key="bpngd"&gt;ರಾಜ್ಯದ ಪ್ರಸ್ತಾವನೆಯಂತೆ ಸೂರ್ಯಕಾಂತಿ ಬೆಳೆಗಾರರಿಗೆ ಆಸರೆಯಾಗುವಂತೆ ಸಚಿವ ಪ್ರಲ್ಹಾದ ಜೋಶಿ ಅವರು ಈ ಹಿಂದೆ ಕೇಂದ್ರ ಕೃಷಿ ಸಚಿವರು ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಗಮನ ಸೆಳೆದಿದ್ದರು.&lt;/p&gt;&lt;p data-block-key="frij1"&gt;&lt;/p&gt;&lt;p data-block-key="2r2id"&gt;&lt;/p&gt;
&lt;/div&gt;

    
&lt;figure class="article-image text-center mb-4"&gt;
    &lt;img alt="Pralhad Joshi" class="img-fluid" height="720" src="https://cdn.vishwavani.news/media/images/Pralhad_Joshi_yCfj2pn.max-1280x720.format-webp.webp" width="1280"&gt;
    
&lt;/figure&gt;

    
&lt;div class="article-paragraph"&gt;
    &lt;p data-block-key="dlf2t"&gt;&lt;/p&gt;&lt;p data-block-key="eihmn"&gt;&lt;/p&gt;&lt;h3 data-block-key="1s3im"&gt;&lt;b&gt;ಕೃಷಿ ಸಚಿವರಿಗೆ ಜೋಶಿ ಪತ್ರ&lt;/b&gt;&lt;/h3&gt;&lt;p data-block-key="9aop6"&gt;&lt;/p&gt;&lt;p data-block-key="267cm"&gt;ಸೂರ್ಯಕಾಂತಿ ಕರ್ನಾಟಕದ ಪ್ರಮುಖ ಎಣ್ಣೆ ಬೀಜಗಳಲ್ಲಿ ಒಂದಾಗಿದ್ದು, 0.59 ಲಕ್ಷ ಹೆಕ್ಟೇರ್‌ನಲ್ಲಿ 0.44 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆ ಹೊಂದಿದೆ. ಆದರೆ, ಪ್ರಸ್ತುತ ಮಾರುಕಟ್ಟೆಯಲ್ಲಿ ಸರ್ಕಾರ ನಿಗದಿಪಡಿಸಿದ ₹ 7721 ಕನಿಷ್ಠ ಬೆಲೆಗಿಂತ ಕಡಿಮೆಯಿದೆ. ಹಾಗಾಗಿ ಬೆಂಬಲ ಬೆಲೆಯಲ್ಲಿ ಸೂರ್ಯಕಾಂತಿ ಖರೀದಿಸಿ ರಾಜ್ಯದ ರೈತರ ನೆರವಿಗೆ ಧಾವಿಸಬೇಕೆಂದು ಸಚಿವ ಪ್ರಲ್ಹಾದ್ ಜೋಶಿ‌, ಕೃಷಿ ಸಚಿವರಿಗೆ ಪತ್ರ ಬರೆದು ಒತ್ತಾಯಿಸಿದ್ದರು.&lt;/p&gt;&lt;p data-block-key="3bh9h"&gt;&lt;/p&gt;&lt;p data-block-key="a2l3j"&gt;ಮುಂದಿನ ದಿನಗಳಲ್ಲಿ ಸೂರ್ಯಕಾಂತಿ ಬೆಲೆ ಮತ್ತಷ್ಟು ಕುಸಿಯುವ ಆತಂಕವಿದೆ. ಹಾಗಾಗಿ ತಕ್ಷಣವೇ ನೆರವಾಗುವಂತೆ ಕೋರಿದ್ದರು. ಸಚಿವ ಜೋಶಿ ಅವರ ಮನವಿ ಪುರಸ್ಕರಿಸಿ ಕೇಂದ್ರ ಸರ್ಕಾರ ಇದೀಗ ರಾಜ್ಯದಿಂದ 9,023 ಮೆಟ್ರಿಕ್ ಟನ್ ಸೂರ್ಯಕಾಂತಿ ಖರೀದಿಗೆ ಅಸ್ತು ಎಂದಿದೆ.&lt;/p&gt;&lt;p data-block-key="emiap"&gt;&lt;/p&gt;&lt;h3 data-block-key="8oiq6"&gt;&lt;b&gt;ಕೃಷಿ ಸಚಿವರಿಂದ ಪತ್ರ&lt;/b&gt;&lt;/h3&gt;&lt;p data-block-key="fqind"&gt;&lt;/p&gt;&lt;p data-block-key="5e3o2"&gt;ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಈ ಸಂಬಂಧ ಜೋಶಿ ಅವರಿಗೆ ಪತ್ರ ಬರೆದು ಮಾಹಿತಿ ಹಂಚಿಕೊಂಡಿದ್ದಾರೆ. ತಮ್ಮ ಒತ್ತಾಸೆಯಂತೆ ಕರ್ನಾಟಕದಿಂದ ಬೆಂಬಲ ಬೆಲೆಯಲ್ಲಿ ಸೂರ್ಯಕಾಂತಿ ಖರೀದಿಗೆ ಅನುಮೋದನೆ ನೀಡಿದ್ದಾಗಿ ತಿಳಿಸಿದ್ದಾರೆ.‌&lt;/p&gt;&lt;p data-block-key="56mtk"&gt;&lt;/p&gt;&lt;p data-block-key="5h06k"&gt;&lt;a href="/politics/why-did-the-siddaramaiah-government-increase-petrol-and-diesel-prices-several-times-says-union-minister-pralhad-joshi-77023.html"&gt;&lt;b&gt;Pralhad Joshi: ಸಿದ್ದರಾಮಯ್ಯ ಸರ್ಕಾರ ಹಲವು ಬಾರಿ ಪೆಟ್ರೋಲ್, ಡಿಸೇಲ್ ಬೆಲೆ ಹೆಚ್ಚಿಸಿದ್ದೇಕೆ?: ಪ್ರಲ್ಹಾದ್‌ ಜೋಶಿ ಪ್ರಶ್ನೆ&lt;/b&gt;&lt;/a&gt;&lt;/p&gt;&lt;p data-block-key="mdq1"&gt;&lt;/p&gt;&lt;h3 data-block-key="aa9o4"&gt;&lt;b&gt;ರೈತರಿಗೆ ಸೂಕ್ತ ಬೆಲೆ ನೀಡುವಲ್ಲಿ ಬದ್ಧ&lt;/b&gt;&lt;/h3&gt;&lt;p data-block-key="9bdd5"&gt;&lt;/p&gt;&lt;p data-block-key="3uurj"&gt;ಪ್ರಧಾನಿ ನರೇಂದ್ರ ಮೋದಿ ಅವರು ಯಾವತ್ತೂ ರೈತರಿಗೆ ಸೂಕ್ತ ಬೆಲೆ ದೊರಕಿಸಿಕೊಡುವಲ್ಲಿ ಬದ್ಧರಾಗಿದ್ದಾರೆ. ಮಾರುಕಟ್ಟೆಯಲ್ಲಿ ಬೆಲೆ ಕುಸಿತ ಎದುರಿಸುತ್ತಿರುವ ರೈತರಿಗೆ ಈ ಮೂಲಕ ಆಸರೆಯಾಗಿದ್ದಾರೆ ಎಂದಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಇದಕ್ಕಾಗಿ ಪ್ರಧಾನಿ ಮತ್ತು ಕೃಷಿ ಸಚಿವರಿಗೆ ಧನ್ಯವಾದ ಹೇಳಿದ್ದಾರೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ದೇಶದಲ್ಲೇ ಕಾಂಗ್ರೆಸ್ ಅಸ್ತಿತ್ವ ಶೂನ್ಯ; ಮುಂದೆ ಕರ್ನಾಟಕದಲ್ಲೂ ಮನೆಗೆ: ಜೋಶಿ ಭವಿಷ್ಯ!</title><link>https://vishwavani.news/politics/union-minister-pralhad-joshi-respond-about-karnataka-by-elections-and-five-states-election-results-77238.html</link><guid>https://vishwavani.news/politics/union-minister-pralhad-joshi-respond-about-karnataka-by-elections-and-five-states-election-results-77238.html</guid><pubDate>Mon, 04 May 2026 18:00:21 +0000</pubDate><description>&lt;![CDATA[Pralhad Joshi: ದೆಹಲಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಪಂಚರಾಜ್ಯ ಚುನಾವಣೆ ಫಲಿತಾಂಶ ಕುರಿತು ಪ್ರತಿಕ್ರಿಯಿಸಿದ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ ಅವರು, ದುರಾಡಳಿತ, ಮಿತಿಮೀರಿದ ತುಷ್ಟೀಕರಣ, ಭ್ರಷ್ಟಾಚಾರ, ಗೂಂಡಾಗಿರಿ ವಿರುದ್ಧ ಅತ್ಯಂತ ಸ್ಪಷ್ಟ ಜನಾದೇಶ ಇದಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ NDA-BJP ಆಡಳಿತಕ್ಕೆ ಬಹುದೊಡ್ಡ ಗೆಲುವು ತಂದುಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.]]&gt;</description><dc:creator>&lt;![CDATA[Siddalinga Swamy]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕರ್ನಾಟಕ]]&gt;</category><category>&lt;![CDATA[ದೇಶ]]&gt;</category><category>&lt;![CDATA[ರಾಜಕೀಯ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Pralhad_Joshi_FSDRjVX.original.jpg" class="attachment-large size-large wp-post-image" alt="ದೇಶದಲ್ಲೇ ಕಾಂಗ್ರೆಸ್ ಅಸ್ತಿತ್ವ ಶೂನ್ಯ; ಮುಂದೆ ಕರ್ನಾಟಕದಲ್ಲೂ ಮನೆಗೆ: ಜೋಶಿ ಭವಿಷ್ಯ!" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="3dcyl"&gt;&lt;b&gt;ನವದೆಹಲಿ, ಮೇ 4:&lt;/b&gt; ಕೇರಳ ಬಿಟ್ಟರೆ ದೇಶದಲ್ಲಿ ಕಾಂಗ್ರೆಸ್ ಅಸ್ತಿತ್ವ ಶೂನ್ಯ. ಮುಂಬರುವ ಚುನಾವಣೆಯಲ್ಲಿ ಕರ್ನಾಟಕದಲ್ಲಿಯೂ ಇದೇ ಸ್ಥಿತಿ ಎದುರಾಗಲಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ &lt;a href="/politics/why-did-the-siddaramaiah-government-increase-petrol-and-diesel-prices-several-times-says-union-minister-pralhad-joshi-77023.html"&gt;&lt;b&gt;ಪ್ರಲ್ಹಾದ್‌ ಜೋಶಿ&lt;/b&gt;&lt;/a&gt; (Pralhad Joshi)‌ ಭವಿಷ್ಯ ನುಡಿದರು. ದೆಹಲಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಪಂಚರಾಜ್ಯ ಚುನಾವಣೆ ಫಲಿತಾಂಶ ಕುರಿತು ಪ್ರತಿಕ್ರಿಯಿಸಿ, ದುರಾಡಳಿತ, ಮಿತಿಮೀರಿದ ತುಷ್ಟೀಕರಣ, ಭ್ರಷ್ಟಾಚಾರ, ಗೂಂಡಾಗಿರಿ ವಿರುದ್ಧ ಅತ್ಯಂತ ಸ್ಪಷ್ಟ ಜನಾದೇಶ ಇದಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ NDA-BJP ಆಡಳಿತಕ್ಕೆ ಬಹುದೊಡ್ಡ ಗೆಲುವು ತಂದುಕೊಟ್ಟಿದ್ದಾರೆ ಎಂದು ಹೇಳಿದರು.&lt;/p&gt;&lt;p data-block-key="e63lk"&gt;ಅಸ್ಸಾಂ, ಪಶ್ಚಿಮ ಬಂಗಾಳ ಮತ್ತು ಪುದುಚೆರಿಯಲ್ಲಿ NDAಗೆ ಅಭೂತಪೂರ್ವ ಗೆಲುವು ಸಿಕ್ಕಿದೆ. ಮೋದಿ ಅವರ 12 ವರ್ಷಗಳ ಸಮರ್ಥ ಆಡಳಿತ, ಅದ್ಭುತ ಕಾರ್ಯ ಕಂಡು ಬಿಜೆಪಿಗೆ ಮನ್ನಣೆ ನೀಡಿದ್ದಾರೆ. ಕೇರಳದಲ್ಲಿ ನಮಗೆ ಯಶಸ್ಸು ಸಿಕ್ಕಿಲ್ಲ. ಆದರೆ, ಕಮ್ಯುನಿಸ್ಟ್ ಮತ್ತು ಕಾಂಗ್ರೆಸ್ ಮುಕ್ತವಾಗಿದೆ ಎಂದು ವ್ಯಾಖ್ಯಾನಿಸಿದರು.&lt;/p&gt;&lt;p data-block-key="fmgf6"&gt;&lt;a href="/politics/why-did-the-siddaramaiah-government-increase-petrol-and-diesel-prices-several-times-says-union-minister-pralhad-joshi-77023.html"&gt;&lt;b&gt;Pralhad Joshi: ಸಿದ್ದರಾಮಯ್ಯ ಸರ್ಕಾರ ಹಲವು ಬಾರಿ ಪೆಟ್ರೋಲ್, ಡಿಸೇಲ್ ಬೆಲೆ ಹೆಚ್ಚಿಸಿದ್ದೇಕೆ?: ಪ್ರಲ್ಹಾದ್‌ ಜೋಶಿ ಪ್ರಶ್ನೆ&lt;/b&gt;&lt;/a&gt;&lt;/p&gt;&lt;h3 data-block-key="eqkl"&gt;&lt;b&gt;ದೇಶಾದ್ಯಂತ ಕಾಂಗ್ರೆಸ್ ಶೂನ್ಯ&lt;/b&gt;&lt;/h3&gt;&lt;p data-block-key="4ufm1"&gt;ಒಂದು ರಾಷ್ಟ್ರೀಯ ಪಕ್ಷವಾಗಿ ಕಾಂಗ್ರೆಸ್ ದೇಶಾದ್ಯಂತ ಶೂನ್ಯಕ್ಕೆ ತಳ್ಳಲ್ಪಟ್ಟಿದೆ. ಕೇರಳ ಬಿಟ್ಟರೆ ಬೇರೆಲ್ಲೆಡೆ ಅಸ್ತಿತ್ವ ಕಳೆದುಕೊಂಡಿದೆ. ಪಶ್ಚಿಮ ಬಂಗಾಳ-0, ತಮಿಳುನಾಡು-0, ಅಸ್ಸಾಂ-22-24 ಸ್ಥಾನ ಗೆದ್ದಿದೆ ಅಷ್ಟೇ. ಕಾಂಗ್ರೆಸ್‌ನ ತುಷ್ಟೀಕರಣದ ಪರಮಾವಧಿ, ಭ್ರಷ್ಟಾಚಾರ, ಬಹುಸಂಖ್ಯಾತ ಹಿಂದೂಗಳ ತಿರಸ್ಕಾರ, ವೋಟ್ ಬ್ಯಾಂಕ್ ರಾಜಕಾರಣಕ್ಕೆ ಜನ ತಕ್ಕ ಪಾಠ ಕಲಿಸಿದ್ದಾರೆ ಎಂದು ಜೋಶಿ ವಿಶ್ಲೇಷಿಸಿದರು.&lt;/p&gt;&lt;p data-block-key="2ob1k"&gt;ತಮಿಳುನಾಡಲ್ಲಿ ವಿಜಯ್ ಜತೆ ಹೋಗುತ್ತೇವೆ ಎಂದಿದ್ದಾರೆ. ಅಲ್ಲಿ ಹೋಗಲು ಅವರಲ್ಲೇನೂ ಉಳಿದಿಲ್ಲ. ಇನ್ನೇನು ಹೋಗುತ್ತಾರೆ? ಇನ್ನು ಕೇರಳದಲ್ಲಿ ದೇಶ ಇಬ್ಭಾಗ ಮಾಡುವ ಮನಸ್ಥಿತಿಯ ಮುಸ್ಲಿಂ ಲೀಗ್ ಜತೆ ಒಪ್ಪಂದದೊಂದಿಗೆ ಹಿಂದೂ ವಿರೋಧಿಯಾಗಿ ವರ್ತಿಸಿದ್ದರ ಪರಿಣಾಮ ದೇಶದೆಲ್ಲೆಡೆಯೂ ಕಾಂಗ್ರೆಸ್ ಧೂಳೀಪಟವಾಗಿದೆ ಎಂದು ಟೀಕಿಸಿದರು.&lt;/p&gt;&lt;h3 data-block-key="655s7"&gt;&lt;b&gt;ಪ್ರಧಾನಿ ನಿಂದನೆ ಮುಳುವು&lt;/b&gt;&lt;/h3&gt;&lt;p data-block-key="12uis"&gt;ಕಾಂಗ್ರೆಸ್ ಇಷ್ಟರ ಮಟ್ಟಿಗೆ ನೆಲಕಚ್ಚಲು ಸದಾ ನೆಗೆಟಿವ್ ಪ್ರಚಾರ, ಪ್ರಧಾನಿ ಮೋದಿ ಅವರ ನಿಂದನೆಯಲ್ಲಿ ತೊಡಗಿದ್ದೇ ಮುಳುವಾಗಿದೆ. ಜನಪ್ರಿಯ ಪ್ರಧಾನಿ ಅವರನ್ನು ವಿಷಸರ್ಪ, ಟೆರರಿಸ್ಟ್ ಎಂದೆಲ್ಲಾ ನಿಂದಿಸಿತ್ತು. ಜನ ಅದಕ್ಕೆಲ್ಲ ತಕ್ಕ ಉತ್ತರ ಕೊಟ್ಟಿದ್ದಾರೆ. ಅನಾಗರಿಕ ರಾಜಕೀಯ ಸಂಸ್ಕೃತಿ, ರೌಡಿಸಂ, ತುಷ್ಟೀಕರಣ, ಹಿಂದೂ ವಿರೋಧಿ ನಡೆ ಒಪ್ಪುವುದಿಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದಾರೆ, ಎಚ್ಚರಿಕೆ ಕೊಟ್ಟಿದ್ದಾರೆ ಎಂದರು.&lt;/p&gt;&lt;p data-block-key="f1fk4"&gt;ಪಶ್ಚಿಮ ಬಂಗಾಳದಲ್ಲಿ ಜನ ಹೊರಬಂದು ಮತದಾನಕ್ಕೂ ಹೆದರುತ್ತಿದ್ದರು. ನಾಮಿನೇಷನ್‌ಗೂ ಬಿಡುತ್ತಿರಲಿಲ್ಲ. ಅಷ್ಟರ ಮಟ್ಟಿಗೆ ರೌಡಿಸಂ ಇತ್ತು. ಆದರೆ, ಕಟ್ಟುನಿಟ್ಟಿನ ಕಾನೂನು ಸುವ್ಯವಸ್ಥೆ ರೂಪಿಸಿದ್ದರ ಪರಿಣಾಮ ಇಂದು ಜನ ಧೈರ್ಯದಿಂದ ಮತದಾನ ಮಾಡಿದ್ದಾರೆ. ರೌಡಿಸಂ ಮೆಟ್ಟಿ ನಿಂತು ಚುನಾವಣೆಯಲ್ಲಿ ಭಾಗಿಯಾದರು. ಇದಕ್ಕಾಗಿ ಅಲ್ಲಿನ ಜನಕ್ಕೆ ವಿಶೇಷ ಅಭಿನಂದನೆ ಸಲ್ಲಿಸುತ್ತೇನೆ ಎಂದರು.&lt;/p&gt;&lt;h3 data-block-key="5l2s5"&gt;&lt;b&gt;ಕರ್ನಾಟಕದಲ್ಲೂ ಮನೆಗೆ ಕಳಿಸ್ತಾರೆ&lt;/b&gt;&lt;/h3&gt;&lt;p data-block-key="cdvj2"&gt;ಕರ್ನಾಟಕದಲ್ಲಿ ಕಾಂಗ್ರೆಸ್ ದುರಾಡಳಿತ, ಭ್ರಷ್ಟಾಚಾರ, ತುಷ್ಟೀಕರಣ ಪರಾಕಾಷ್ಠೆ ಮಿತಿಮೀರಿದೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಕರ್ನಾಟಕದ ಜನರೂ ಕಾಂಗ್ರೆಸ್ ಅನ್ನು ಮನೆಗೆ ಕಳಿಸುತ್ತಾರೆ ಎಂದು ಸಚಿವರು ಇದೇ ವೇಳೆ ಭವಿಷ್ಯ ನುಡಿದರು.&lt;/p&gt;&lt;h3 data-block-key="6qav9"&gt;&lt;b&gt;ತಡರಾತ್ರಿ ಕೊಟ್ಟಿದ್ದಾರೆ ಫಲಿತಾಂಶ&lt;/b&gt;&lt;/h3&gt;&lt;p data-block-key="b8i9g"&gt;ಶೃಂಗೇರಿ ವಿಧಾನಸಭೆ ಕ್ಷೇತ್ರದ ಅಂಚೆ ಮತ ಮರು ಎಣಿಕೆ ಫಲಿತಾಂಶವನ್ನು ಲೀಗಲ್ ನೋಟಿಸ್ ಜಾರಿ ಮಾಡಿದ ಬಳಿಕ ರಾತ್ರೋರಾತ್ರಿ ಈ ಮೇಲ್ ಅಲ್ಲಿ ಫಲಿತಾಂಶದ ಪತ್ರ ರವಾನಿಸಿದ್ದಾರೆ. ಪಕ್ಷದ ಬೆಂಬಲದಿಂದ ಬಿಜೆಪಿ ಅಭ್ಯರ್ಥಿ ಜೀವರಾಜ್ ಅವರು ನಡೆಸಿದ ಸತತ ಹೋರಾಟ ಮತ್ತು ನ್ಯಾಯಕ್ಕೆ ಸಂದ ಜಯ ಇದಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಹೇಳಿದರು.&lt;/p&gt;&lt;p data-block-key="5u89a"&gt;&lt;a href="/politics/state-congress-government-has-shown-its-true-character-by-allocating-rs-600-crore-for-the-development-of-muslim-colonies-says-union-minister-pralhad-joshi-77025.html"&gt;&lt;b&gt;ಮುಸ್ಲಿಂ ಕಾಲೋನಿಗಳ ಅಭಿವೃದ್ಧಿಗೆ 600 ಕೋಟಿ ಮೀಸಲು; ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಜೋಶಿ ಕಿಡಿ&lt;/b&gt;&lt;/a&gt;&lt;/p&gt;&lt;h3 data-block-key="50eju"&gt;&lt;b&gt;ಡಿಸಿಎಂ ಬೇಜವಾಬ್ದಾರಿ ಹೇಳಿಕೆ&lt;/b&gt;&lt;/h3&gt;&lt;p data-block-key="8ond"&gt;ಕಳೆದ ಮೂರು ವರ್ಷದಿಂದ ಕಾಂಗ್ರೆಸ್ ಸರ್ಕಾರವೇ ಇದೆ. ಕೋಲಾರದಲ್ಲಿ ಕಾಂಗ್ರೆಸ್ ಗೆದ್ದರೆ ಸಂಭ್ರಮಿಸಿದರು. ಶೃಂಗೇರಿಯಲ್ಲಿ ಬಿಜೆಪಿ ಗೆದ್ದರೆ ಕ್ಷುಲ್ಲಕ ಆರೋಪ ಮಾಡುತ್ತಾರೆ. ಹಾಗಾದರೆ, ಇಲ್ಲಾದ ಮತ ಎಣಿಕೆ ಲೋಪಕ್ಕೆ AC, DC ಅವರನ್ನು ಸಸ್ಪೆಂಡ್ ಮಾಡುತ್ತಾರೆಯೇ? ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಪ್ರಶ್ನಿಸಿದ್ದಾರೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>MI vs LSG: ರೋಹಿತ್‌-ರಿಕೆಲ್ಟನ್‌ ಅಬ್ಬರ, ಲಖನೌ ಎದುರು ಗೆದ್ದು ಬೀಗಿದ ಮುಂಬೈ ಇಂಡಿಯನ್ಸ್‌!</title><link>https://vishwavani.news/sports/cricket/rohit-sharma-ryan-rickelton-put-on-a-show-as-mumbai-indians-beat-lucknow-super-giants-to-remain-in-77244.html</link><guid>https://vishwavani.news/sports/cricket/rohit-sharma-ryan-rickelton-put-on-a-show-as-mumbai-indians-beat-lucknow-super-giants-to-remain-in-77244.html</guid><pubDate>Mon, 04 May 2026 17:58:29 +0000</pubDate><description>&lt;![CDATA[MI vs LSG Match Highlights: ರಯಾನ್‌ ರಿಕೆಲ್ಟನ್‌ ಹಾಗೂ ರೋಹಿತ್‌ ಶರ್ಮಾ ಅವರ ಸ್ಪೋಟಕ ಬ್ಯಾಟಿಂಗ್‌ ಬಲದಿಂದ ಮುಂಬೈ ಇಂಡಿಯನ್ಸ್‌ ತಂಡ, 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಂದ್ಯದಲ್ಲಿ ಲಖನೌ ಸೂಪರ್‌ ಜಯಂಟ್ಸ್‌ ಎದುರು 6 ವಿಕೆಟ್‌ ಗೆಲುವು ಪಡೆಯಿತು. ಆ ಮೂಲಕ ಮುಂಬೈ ಪ್ಲೇಆಫ್ಸ್‌ ಹಾದಿಯನ್ನು ಜೀವಂತವಾಗಿರಿಸಿಕೊಂಡಿದೆ.]]&gt;</description><dc:creator>&lt;![CDATA[Ramesh Kote]]&gt;</dc:creator><category>&lt;![CDATA[ಕ್ರಿಕೆಟ್‌]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕ್ರೀಡೆ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/MI_vs_LSG_Match_Highlights_zL2zjrD.original.jpg" class="attachment-large size-large wp-post-image" alt="MI vs LSG: ರೋಹಿತ್‌-ರಿಕೆಲ್ಟನ್‌ ಅಬ್ಬರ, ಲಖನೌ ಎದುರು ಗೆದ್ದು ಬೀಗಿದ ಮುಂಬೈ ಇಂಡಿಯನ್ಸ್‌!" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="bw8c6"&gt;&lt;b&gt;ಮುಂಬೈ:&lt;/b&gt; ರಯಾನ್‌ ರಿಕೆಟಲ್ಟನ್‌ (Ryan Rickelton) ಹಾಗೂ ರೋಹಿತ್‌ ಶರ್ಮಾ (Rohit Sharma) ಅವರ ಸ್ಪೋಟಕ ಅರ್ಧಶತಕಗಳ ಬಲದಿಂದ ಮುಂಬೈ ಇಂಡಿಯನ್ಸ್‌ ತಂಡ, 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯ 47ನೇ ಪಂದ್ಯದಲ್ಲಿ (MI vs SLG) ಲಖನೌ ಸೂಪರ್‌ ಜಯಂಟ್ಸ್‌ ಎದುರು 6 ವಿಕೆಟ್‌ಗಳ ಗೆಲುವು ಪಡೆಯಿತು. ಆ ಮೂಲಕ ಐದು ಬಾರಿ ಚಾಂಪಿಯನ್ಸ್‌ಗೆ ಮೂರನೇ ಗೆಲುವು ಲಭಿಸಿದರೂ ಟೂರ್ನಿಯ ಪ್ಲೇಆಫ್ಸ್‌ ಹಾದಿ ಕಠಿಣವಾಗಿದೆ. ಏಕೆಂದರೆ ಇನ್ನುಳಿದ ನಾಲ್ಕೂ ಪಂದ್ಯಗಳಲ್ಲಿ ಗೆದ್ದರೂ ನಾಕ್‌ಔಟ್‌ ಪ್ರವೇಶ ಇತರೆ ತಂಡಗಳ ಫಲಿತಾಂಶವನ್ನು ಅವಲಂಬಿಸಿದೆ. ಇನ್ನು ಈ ಪಂದ್ಯವನ್ನು ಸೋತ ಎಲ್‌ಎಸ್‌ಜಿ ಪ್ಲೇಆಫ್ಸ್‌ನಿಂದ ಬಹುತೇಕ ಹೊರಬಿದ್ದಿದೆ.&lt;/p&gt;&lt;p data-block-key="8p5ac"&gt;ಎಲ್‌ಎಸ್‌ಜಿ ನೀಡಿದ್ದ 229 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಮುಂಬೈ ಇಂಡಿಯನ್ಸ್‌ ತಂಡಕ್ಕೆ ಆರಂಭಿಕರಾದ  ರಯಾನ್‌ ರಿಕೆಲ್ಟನ್‌ ಹಾಗೂ ರೋಹಿತ್‌ ಶರ್ಮಾ 143 ರನ್‌ಗಳ ಜೊತೆಯಾಟದ ಮೂಲಕ ಭರ್ಜರಿ ಆರಂಭವನ್ನು ತಂದುಕೊಟ್ಟರು. ರಿಕೆಲ್ಟನ್‌ ಸ್ಪೋಟಕ ಬ್ಯಾಟ್‌ ಮಾಡಿ 32 ಎಸೆತಗಳಲ್ಲಿ  8 ಸಿಕ್ಸರ್‌ ಹಾಗೂ 6 ಬೌಂಡರಿಗಳೊಂದಿಗೆ 83 ರನ್‌ ಚಚ್ಚಿದರೆ, ಇವರಿಗೆ ಮತ್ತೊಂದು ತುದಿಯಲ್ಲಿ ಸಾಥ್‌ ನೀಡುತ್ತಿದ್ದ ರೋಹಿತ್‌ ಶರ್ಮಾ ತಮ್ಮ ಕಮ್‌ಬ್ಯಾಕ್‌ ಇನಿಂಗ್ಸ್‌ನಲ್ಲಿ 44 ಎಸೆತಗಳಲ್ಲಿ 7 ಸಿಕ್ಸರ್‌ ಹಾಗೂ 6 ಬೌಂಡರಿಗಳೊಂದಿಗೆ 84 ರನ್‌ಗಳನ್ನು ಸಿಡಿಸಿದರು. ಆ ಮೂಲಕ ಮುಂಬೈ ಗೆಲುವಿನಲ್ಲಿ ಮಹತ್ತರ ಪಾತ್ರವನ್ನು ವಹಿಸಿದರು.&lt;/p&gt;&lt;p data-block-key="d7se3"&gt;&lt;a href="/sports/cricket/ipl-2026-lsg-posted-901-after-six-overs-their-best-ever-powerplay-score-in-the-ip-77225.html"&gt;&lt;b&gt;LSG vs MI ಪಂದ್ಯದ ಪವರ್‌ಪ್ಲೇನಲ್ಲಿ ವಿಶೇಷ ದಾಖಲೆ ಬರೆದ ಲಖನೌ ಸೂಪರ್‌ ಜಯಂಟ್ಸ್‌!&lt;/b&gt;&lt;/a&gt;&lt;/p&gt;&lt;p data-block-key="4in21"&gt;ತಿಲಕ್‌ ವರ್ಮಾ ಹಾಗೂ ನಾಯಕ ಸೂರ್ಯಕುಮಾರ್‌ ಯಾದವ್‌ ಕ್ರಮವಾಗಿ  11 ಮತ್ತು 12 ರನ್‌ಗಳನ್ನು ಗಳಿಸಿ ವಿಕೆಟ್‌ ಒಪ್ಪಿಸಿದರು. ಆದರೆ, ನಮನ್‌ ಧಿರ್‌ ಅವರು ಕೊನೆಯಲ್ಲಿ ಅಜೇಯ 23 ರನ್‌ ಗಳಿಸಿದರು ಹಾಗೂ ವಿಲ್‌ ಜ್ಯಾಕ್ಸ್‌ (10*) ಸಿಕ್ಸರ್‌ ಮೂಲಕ ಮುಂಬೈ ತಂಡವನ್ನು ಗೆಲುವಿನ ದಡ ಸೇರಿಸಿದರು. ಅಂತಿಮವಾಗಿ ಮುಂಬೈ 18.4 ಓವರ್‌ಗಳಿಗೆ 4 ವಿಕೆಟ್‌ ಕಳೆದುಕೊಂಡು ಗೆದ್ದು ಬೀಗಿತು.&lt;/p&gt;&lt;p data-block-key="dih91"&gt;&lt;/p&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="twitter-tweet"&gt;&lt;p lang="en" dir="ltr"&gt;MAXIMUM IMPACT on RETURN &lt;br&gt;&lt;br&gt;Rohit Sharma with a superb 27-ball FIFTY &lt;br&gt;&lt;br&gt;Updates ▶️ &lt;a href="https://t.co/elXSOvaeig"&gt;https://t.co/elXSOvaeig&lt;/a&gt; &lt;a href="https://twitter.com/hashtag/TATAIPL?src=hash&amp;amp;ref_src=twsrc%5Etfw"&gt;#TATAIPL&lt;/a&gt; | &lt;a href="https://twitter.com/hashtag/KhelBindaas?src=hash&amp;amp;ref_src=twsrc%5Etfw"&gt;#KhelBindaas&lt;/a&gt; | &lt;a href="https://twitter.com/hashtag/MIvLSG?src=hash&amp;amp;ref_src=twsrc%5Etfw"&gt;#MIvLSG&lt;/a&gt; &lt;a href="https://t.co/vcn23G7MDz"&gt;pic.twitter.com/vcn23G7MDz&lt;/a&gt;&lt;/p&gt;&amp;mdash; IndianPremierLeague (@IPL) &lt;a href="https://twitter.com/IPL/status/2051344137153335572?ref_src=twsrc%5Etfw"&gt;May 4, 2026&lt;/a&gt;&lt;/blockquote&gt; &lt;script async src="https://platform.twitter.com/widgets.js" charset="utf-8"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="41vu9"&gt;&lt;/p&gt;&lt;h3 data-block-key="e8sfl"&gt;&lt;b&gt;ಲಖನೌಗೆ ಸ್ಪೋಟಕ ಆರಂಭ&lt;/b&gt;&lt;/h3&gt;&lt;p data-block-key="52lpe"&gt;ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಲಖನೌ ಸೂಪರ್‌ ಜಯಂಟ್ಸ್‌ ತಂಡಕ್ಕೆ ಬ್ಯಾಟಿಂಗ್‌ ಸ್ನೇಹಿ ವಾಂಖೆಡೆ ಕ್ರೀಡಾಂಗಣದಲ್ಲಿ ದೊಡ್ಡ ಮೊತ್ತವನ್ನು ಕಲೆ ಹಾಕಬೇಕಾದ ಸವಾಲು ಎದುರಾಗಿತ್ತು. ಅದರಂತೆ ಆರಂಭಿಕರಾದ ಜಾಶ್‌ ಇಂಗ್ಲಿಸ್‌ ಹಾಗೂ ಮಿಚೆಲ್‌ ಮಾರ್ಷ್‌ ಆರಂಭದಲ್ಲಿ ಅಬ್ಬರಿಸಿದ್ದರು. ಹೊಸ ಆಟಗಾರ ಇಂಗ್ಲಿಸ್‌ 5 ಎಸೆತಗಳಲ್ಲಿ 13 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ನಂತರ ಮಿಚೆಲ್‌ ಮಾರ್ಷ್‌ ಜೊತೆಗೂಡಿದ ನಿಕೂಲಸ್‌ ಪೂರನ್‌ ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದರು. ಈ ಇಬ್ಬರು ಎರಡನೇ ವಿಕೆಟ್‌ಗೆ  ಕೇವಲ 34 ಎಸೆತಗಳಲ್ಲಿ 94 ರನ್‌ ಚಚ್ಚಿದರು. ಆ ಮೂಲಕ ಲಖನೌ ಕೇವಲ 8 ಓವರ್‌ಗಳಿಗೆ 123 ರನ್‌ ಕಲೆ ಹಾಕಿ ಸ್ಪೋಟಕ ಆರಂಭ ಪಡೆದಿತ್ತು.&lt;/p&gt;&lt;p data-block-key="6a9me"&gt;&lt;/p&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="twitter-tweet" data-media-max-width="560"&gt;&lt;p lang="en" dir="ltr"&gt;A knock that had the Wankhede roaring for more &lt;br&gt;&lt;br&gt; Ryan Rickelton made it look too easy out there &lt;br&gt;&lt;br&gt;Updates ▶️ &lt;a href="https://t.co/elXSOvaeig"&gt;https://t.co/elXSOvaeig&lt;/a&gt; &lt;a href="https://twitter.com/hashtag/TATAIPL?src=hash&amp;amp;ref_src=twsrc%5Etfw"&gt;#TATAIPL&lt;/a&gt; | &lt;a href="https://twitter.com/hashtag/KhelBindaas?src=hash&amp;amp;ref_src=twsrc%5Etfw"&gt;#KhelBindaas&lt;/a&gt; | &lt;a href="https://twitter.com/hashtag/MIvLSG?src=hash&amp;amp;ref_src=twsrc%5Etfw"&gt;#MIvLSG&lt;/a&gt; &lt;a href="https://t.co/NL2QJ0ePRK"&gt;pic.twitter.com/NL2QJ0ePRK&lt;/a&gt;&lt;/p&gt;&amp;mdash; IndianPremierLeague (@IPL) &lt;a href="https://twitter.com/IPL/status/2051358821453627733?ref_src=twsrc%5Etfw"&gt;May 4, 2026&lt;/a&gt;&lt;/blockquote&gt; &lt;script async src="https://platform.twitter.com/widgets.js" charset="utf-8"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="bgdpq"&gt;&lt;/p&gt;&lt;h3 data-block-key="3ltr8"&gt;&lt;b&gt;ನಿಕೋಲಸ್‌ ಪೂರನ್‌ ಅರ್ಧಶತಕ&lt;/b&gt;&lt;/h3&gt;&lt;p data-block-key="b7ref"&gt;ಸತತ ಬ್ಯಾಟಿಂಗ್‌ ವೈಫಲ್ಯದಿಂದ ಭಾರಿ ಟೀಕೆಗಳಿಗೆ ಗುರಿಯಾಗಿದ್ದ ನಿಕೋಲಸ್‌ ಪೂರನ್‌, ಈ ಪಂದ್ಯದಲ್ಲಿ ತಮ್ಮ ನೈಜ ಆಟವನ್ನು ಪ್ರದರ್ಶಿಸಿದರು. ಅವರು ಆಡಿದ ಕೇವಲ 16 ಎಸೆತಗಳಲ್ಲಿ ಲಖನೌ ಪರ ಎರಡನೇ ವೇಗದ ಅರ್ಧಶತಕ ಬಾರಿಸಿ ಈ ಋತುವಿನ ಮೊದಲ ಅರ್ಧಶತಕವನ್ನು ತಲುಪಿದರು. ಅಂತಿಮವಾಗಿ ಇವರು 21 ಎಸೆತಗಳಲ್ಲಿ 8 ಸಿಕ್ಸರ್‌ ಹಾಗೂ ಒಂದು ಬೌಂಡರಿಯೊಂದಿಗೆ 300ರ ಸ್ಟ್ರೈಕ್‌ ರೇಟ್‌ನಲ್ಲಿ 63 ರನ್‌ ಗಳಿಸಿದ ಬಳಿಕ ಕಾರ್ಬಿನ್‌ ಬಾಷ್‌ಗೆ ವಿಕೆಟ್‌ ಒಪ್ಪಿಸಿದರು. ಇವರ ಜೊತೆ ದೀರ್ಘಾವಧಿ ಬ್ಯಾಟ್‌ ಮಾಡಿದ್ದ ಮಿಚೆಲ್‌ ಮಾರ್ಷ್‌ 25 ಎಸೆತಗಳಲ್ಲಿ 44 ರನ್‌ ಗಳಿಸಿದ ಬಳಿಕ ಕಾರ್ಬಿನ್‌ ಬಾಷ್‌ಗೆ ಔಟ್‌ ಆದರು. &lt;/p&gt;&lt;p data-block-key="du323"&gt;&lt;/p&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="twitter-tweet"&gt;&lt;p lang="en" dir="ltr"&gt;1⃣6⃣- ball FIFTY &lt;br&gt;&lt;br&gt;    &lt;br&gt;&lt;br&gt;His first of this season &lt;br&gt;&lt;br&gt;Updates ▶️ &lt;a href="https://t.co/elXSOvaeig"&gt;https://t.co/elXSOvaeig&lt;/a&gt; &lt;a href="https://twitter.com/hashtag/TATAIPL?src=hash&amp;amp;ref_src=twsrc%5Etfw"&gt;#TATAIPL&lt;/a&gt; | &lt;a href="https://twitter.com/hashtag/KhelBindaas?src=hash&amp;amp;ref_src=twsrc%5Etfw"&gt;#KhelBindaas&lt;/a&gt; | &lt;a href="https://twitter.com/hashtag/MIvLSG?src=hash&amp;amp;ref_src=twsrc%5Etfw"&gt;#MIvLSG&lt;/a&gt; &lt;a href="https://t.co/OMxinwxoOY"&gt;pic.twitter.com/OMxinwxoOY&lt;/a&gt;&lt;/p&gt;&amp;mdash; IndianPremierLeague (@IPL) &lt;a href="https://twitter.com/IPL/status/2051311371623796740?ref_src=twsrc%5Etfw"&gt;May 4, 2026&lt;/a&gt;&lt;/blockquote&gt; &lt;script async src="https://platform.twitter.com/widgets.js" charset="utf-8"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="3ffv5"&gt;&lt;/p&gt;&lt;h3 data-block-key="2t7fj"&gt;&lt;b&gt;228 ರನ್‌ ಕಲೆ ಹಾಕಿದ ಎಲ್‌ಎಸ್‌ಜಿ&lt;/b&gt;&lt;/h3&gt;&lt;p data-block-key="1avbg"&gt;ಕಾರ್ಬಿನ್‌ ಬಾಷ್‌ 9ನೇ ಓವರ್‌ನಲ್ಲಿ ಕ್ರೀಸ್‌ನಲ್ಲಿ ನೆಲೆಯೂರಿದ್ದ ಈ ಇಬ್ಬರನ್ನು ಔಟ್‌ ಮಾಡುವ ಮೂಲಕ ಮುಂಬೈ ಕಮ್‌ಬ್ಯಾಕ್‌ಗೆ ನೆರವು ನೀಡಿದರು. ನಂತರ ವಿಲ್‌ ಜ್ಯಾಕ್ಸ್‌ ನಾಯಕ ರಿಷಭ್‌ ಪಂತ್‌ ಅವರನ್ನು ಔಟ್‌ ಮಾಡಿದರು. ರಘು ಶರ್ಮಾ, ಅಕ್ಷತ್‌ ರಘುವಂಶಿಯನ್ನು ಪೆವಿಲಿಯನ್‌ಗೆ ಕಳುಹಿಸಿದರು. ಆರಂಭಿಕ 11 ಓವರ್‌ಗಳಲ್ಲಿ ಸ್ಪೋಟಕ ಬ್ಯಾಟ್‌ ಮಾಡಿದ್ದ ಲಖನೌ, ಕೊನೆಯ 9 ಓವರ್‌ಗಳಲ್ಲಿ ರನ್‌ ವೇಗವನ್ನು ಮುಂದುವರಿಸುವಲ್ಲಿ ವಿಫಲವಾಯಿತು. ಆದರೆ, ಏಡೆನ್‌ ಮಾರ್ಕ್ರಮ್‌ (31*) ಹಾಗೂ ಹಿಮ್ಮತ್‌ ಸಿಂಗ್‌ (40*) ಅವರು 47 ಎಸೆತಗಳಲ್ಲಿ 68 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ಅಂತಿಮವಾಗಿ ಎಲ್‌ಎಸ್‌ಜಿ 20  ಓವರ್‌ಗಳಿಗೆ 5 ವಿಕೆಟ್‌ ನಷ್ಟಕ್ಕೆ 228 ರನ್‌ಗಳನ್ನು ಗಳಿಸಿತು.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಅಸ್ಸಾಂನಲ್ಲಿ ಸತತ 3ನೇ ಬಾರಿಗೆ ಬಿಜೆಪಿಗೆ ಭರ್ಜರಿ ಜಯ; ಇದು 'ಐತಿಹಾಸಿಕ ಗೆಲುವು' ಎಂದ ಹಿಮಂತ ಬಿಸ್ವಾ ಶರ್ಮಾ</title><link>https://vishwavani.news/national/bjp-hat-trick-win-assam-himanta-sarma-historic-victory-77243.html</link><guid>https://vishwavani.news/national/bjp-hat-trick-win-assam-himanta-sarma-historic-victory-77243.html</guid><pubDate>Mon, 04 May 2026 17:34:05 +0000</pubDate><description>&lt;![CDATA[ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸತತ ಮೂರನೇ ಬಾರಿ ಭರ್ಜರಿ ಜಯ ಸಾಧಿಸಿ ಇತಿಹಾಸ ನಿರ್ಮಿಸಿದೆ. ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಈ ಗೆಲುವನ್ನು ‘ಐತಿಹಾಸಿಕ’ ಎಂದು ಕರೆದಿದ್ದು, ಜನರಿಗೆ ಧನ್ಯವಾದ ಸಲ್ಲಿಸಿ ಚುನಾವಣಾ ಭರವಸೆಗಳನ್ನು ಈಡೇರಿಸುವುದಾಗಿ ತಿಳಿಸಿದ್ದಾರೆ. ಎನ್‌ಡಿಎ ಮೈತ್ರಿಕೂಟ 100ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ರಾಜ್ಯದಲ್ಲಿ ತನ್ನ ಪ್ರಾಬಲ್ಯವನ್ನು ಮತ್ತಷ್ಟು ಬಲಪಡಿಸಿದೆ.]]&gt;</description><dc:creator>&lt;![CDATA[Sushmitha Jain]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ದೇಶ]]&gt;</category><category>&lt;![CDATA[ರಾಜಕೀಯ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/1000484083.original.png" class="attachment-large size-large wp-post-image" alt="ಅಸ್ಸಾಂನಲ್ಲಿ ಸತತ 3ನೇ ಬಾರಿಗೆ ಬಿಜೆಪಿಗೆ ಭರ್ಜರಿ ಜಯ; ಇದು 'ಐತಿಹಾಸಿಕ ಗೆಲುವು' ಎಂದ ಹಿಮಂತ ಬಿಸ್ವಾ ಶರ್ಮಾ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="5o7tx"&gt;&lt;b&gt;ದಿಸ್‌ಪುರ, ಮೇ 4: &lt;/b&gt;ಅಸ್ಸಾಂ ವಿಧಾನಸಭಾ ಚುನಾವಣೆ (Assembly Election)ಯಲ್ಲಿ ಬಿಜೆಪಿ  ಸೋಮವಾರ ಸ್ಪಷ್ಟ ಬಹುಮತದೊಂದಿಗೆ ಅತಿದೊಡ್ಡ ವಿಜಯವನ್ನು ದಾಖಲಿಸಿದೆ. ಒಟ್ಟು 126 ಸ್ಥಾನಗಳಲ್ಲಿ ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳು 82ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸುವ ಮೂಲಕ ಸತತ ಮೂರನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲು ಸಜ್ಜಾಗಿವೆ. ಈ ಭರ್ಜರಿ ಫಲಿತಾಂಶವು ರಾಜ್ಯದಲ್ಲಿ ಕೇಸರಿ ಪಡೆಯ ಅಧಿಪತ್ಯವನ್ನು ಮತ್ತಷ್ಟು ಭದ್ರಪಡಿಸಿದೆ.&lt;/p&gt;&lt;p data-block-key="5ufjn"&gt;"ನಾವು ಸಾಧಿಸಿರುವ ಈ ಬೃಹತ್ ಬಹುಮತವು ನಿಜಕ್ಕೂ ಐತಿಹಾಸಿಕವಾಗಿದೆ. ಅಸ್ಸಾಂನ ಜನತೆಗೆ ಬಿಜೆಪಿ ಮತ್ತು ನಮ್ಮ ಮಿತ್ರಪಕ್ಷಗಳ ಪರವಾಗಿ ನಾನು ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಚುನಾವಣಾ ಪ್ರಣಾಳಿಕೆಯಲ್ಲಿ ನಾವು ನೀಡಿದ ಪ್ರತಿಯೊಂದು ಭರವಸೆಗಳನ್ನು ನಿಗದಿತ ಅವಧಿಯಲ್ಲಿ ಈಡೇರಿಸುತ್ತೇವೆʼʼ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ವಿಜಯೋತ್ಸವದ ಸಂದರ್ಭದಲ್ಲಿ ತಿಳಿಸಿದರು. ಹಾಲಿ ಸರ್ಕಾರವು ಅಧಿಕೃತವಾಗಿ ರಾಜೀನಾಮೆ ನೀಡಿ, ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಿದ ನಂತರ ಹೊಸ ಸರ್ಕಾರ ರಚನೆಯ ಸಾಂವಿಧಾನಿಕ ಪ್ರಕ್ರಿಯೆಗಳು ಆರಂಭವಾಗಲಿವೆ ಎಂದು ಅವರು ಮಾಧ್ಯಮಗಳಿಗೆ ವಿವರಿಸಿದರು.&lt;/p&gt;&lt;p data-block-key="evli3"&gt;&lt;a href="/politics/cm-siddaramaiah-congratulates-congress-candidates-who-won-in-the-bagalkot-davanagere-by-elections-77209.html"&gt;&lt;b&gt;ಬಾಗಲಕೋಟೆ, ದಾವಣಗೆರೆ ಕ್ಷೇತ್ರ ಉಪ ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಸಿಎಂ ಅಭಿನಂದನೆ&lt;/b&gt;&lt;/a&gt;&lt;/p&gt;&lt;p data-block-key="9uuq"&gt;ಚುನಾವಣಾ ಆಯೋಗದ ಅಧಿಕೃತ ಮಾಹಿತಿಯಂತೆ, ಬಿಜೆಪಿ ಸ್ಪರ್ಧಿಸಿದ್ದ 90 ಸ್ಥಾನಗಳ ಪೈಕಿ 69ರಲ್ಲಿ ನೇರ ಗೆಲುವು ಸಾಧಿಸಿದ್ದು, ಉಳಿದ ಹಲವು ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಬಿಜೆಪಿಯ ಮಿತ್ರಪಕ್ಷಗಳಾದ ಅಸೋಂ ಗಣ ಪರಿಷತ್ ಮತ್ತು ಬೋಡೋಲ್ಯಾಂಡ್ ಪೀಪಲ್ಸ್ ಫ್ರಂಟ್ ತಲಾ ಹತ್ತು ಸ್ಥಾನಗಳಲ್ಲಿ ಗೆಲುವು ದಾಖಲಿಸಿವೆ. ಈ ಮೂಲಕ ಎನ್‌ಡಿಎ ಮೈತ್ರಿಕೂಟದ ಒಟ್ಟು ಬಲವು 102ಕ್ಕೆ ಏರಿಕೆಯಾಗಿದೆ. ಬಿಜೆಪಿ ಏಕಾಂಗಿಯಾಗಿ ರಾಜ್ಯದಲ್ಲಿ ಶೇ. 40ರಷ್ಟು ಮತಗಳನ್ನು ಪಡೆದಿದ್ದರೆ, ಕಾಂಗ್ರೆಸ್ ಕೇವಲ ಶೇ. 29ರಷ್ಟು ಮತಗಳನ್ನು ಪಡೆಯುವಲ್ಲಿ ಶಕ್ತವಾಗಿದೆ.&lt;/p&gt;&lt;p data-block-key="fm3kr"&gt;ಕಾಂಗ್ರೆಸ್ ನೇತೃತ್ವದ ಆರು ಪಕ್ಷಗಳ ಮೈತ್ರಿಕೂಟವು ಕೇವಲ 21 ಸ್ಥಾನಗಳನ್ನು ಗಳಿಸುವಲ್ಲಿ ಮಾತ್ರ ಯಶಸ್ವಿಯಾಗಿದೆ. ಜಲಕ್ಬಾರಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಹಿಮಂತ ಬಿಸ್ವಾ ಶರ್ಮಾ ಸತತ ಆರನೇ ಬಾರಿಗೆ ಗೆಲುವು ಸಾಧಿಸಿ ತಮ್ಮ ಜನಪ್ರಿಯತೆಯನ್ನು ಸಾಬೀತುಪಡಿಸಿದ್ದಾರೆ. ಬಿಜೆಪಿಯ ಈ ಅಭೂತಪೂರ್ವ ಗೆಲುವಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಯೋಜನೆಗಳು ಮತ್ತು ಶರ್ಮಾ ಅವರ ದಕ್ಷ ಆಡಳಿತವೇ ಮೂಲ ಕಾರಣ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. &lt;/p&gt;&lt;p data-block-key="bofog"&gt;ಒಟ್ಟಾರೆಯಾಗಿ, ಅಸ್ಸಾಂನಲ್ಲಿ ಬಿಜೆಪಿಯ ಈ ಐತಿಹಾಸಿಕ ಜಯವು ಈಶಾನ್ಯ ಭಾರತದ ರಾಜಕೀಯ ಭೂಪಟದಲ್ಲಿ ಪಕ್ಷದ ಭವಿಷ್ಯವನ್ನು ಮತ್ತಷ್ಟು ಉಜ್ವಲಗೊಳಿಸಿದೆ. ಈ ಫಲಿತಾಂಶವು ರಾಜ್ಯದ ಜನತೆಗೆ ಹೊಸ ಭರವಸೆ ಮತ್ತು ಅಭಿವೃದ್ಧಿಯ ಮುನ್ಸೂಚನೆಯನ್ನು ನೀಡಿದೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>"ಲೂಟಿ, ಲೂಟಿ, ಲೂಟಿ. ನಾವು ಮತ್ತೆ ಪುಟಿದೇಳುತ್ತೇವೆ": ಬಂಗಾಳದ ಆಘಾತಕಾರಿ ಸೋಲಿಗೆ ಮಮತಾ ಬ್ಯಾನರ್ಜಿ ಹತಾಶೆ</title><link>https://vishwavani.news/national/mamata-banerjee-bengal-election-defeat-loot-bjp-win-2026-77242.html</link><guid>https://vishwavani.news/national/mamata-banerjee-bengal-election-defeat-loot-bjp-win-2026-77242.html</guid><pubDate>Mon, 04 May 2026 17:27:48 +0000</pubDate><description>&lt;![CDATA[ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಭಾರಿ ಹಿನ್ನಡೆ ಅನುಭವಿಸಿದ ಮಮತಾ ಬ್ಯಾನರ್ಜಿ, ಫಲಿತಾಂಶವನ್ನು ;ಲೂಟಿʼ ಎಂದು ಕರೆದಿದ್ದಾರೆ. ಬಿಜೆಪಿ ಐತಿಹಾಸಿಕ ಮುನ್ನಡೆ ಸಾಧಿಸಿದ ಹಿನ್ನೆಲೆಯಲ್ಲಿ, ಚುನಾವಣಾ ಆಯೋಗ ಮತ್ತು ಕೇಂದ್ರದ ಮೇಲೆ ತೀವ್ರ ಆರೋಪ ಮಾಡಿರುವ ಮಮತಾ, ತೃಣಮೂಲ ಕಾಂಗ್ರೆಸ್ ಮತ್ತೆ ಬಲವಾಗಿ ಪುನಃ ಏಳುತ್ತದೆ ಎಂದು ಹೇಳಿದ್ದಾರೆ.]]&gt;</description><dc:creator>&lt;![CDATA[Sushmitha Jain]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ದೇಶ]]&gt;</category><category>&lt;![CDATA[ರಾಜಕೀಯ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Mamata__Banerjee_1.original.jpg" class="attachment-large size-large wp-post-image" alt=""ಲೂಟಿ, ಲೂಟಿ, ಲೂಟಿ. ನಾವು ಮತ್ತೆ ಪುಟಿದೇಳುತ್ತೇವೆ": ಬಂಗಾಳದ ಆಘಾತಕಾರಿ ಸೋಲಿಗೆ ಮಮತಾ ಬ್ಯಾನರ್ಜಿ ಹತಾಶೆ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="64jby"&gt;ಕೋಲ್ಕತ್ತಾ, ಮೇ 4: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಆಘಾತಕಾರಿ ಫಲಿತಾಂಶದಿಂದ ಕೆರಳಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee), ಈ ಸೋಲಿಗೆ "ಲೂಟಿ, ಲೂಟಿ, ಲೂಟಿ" ಕಾರಣ ಎಂದು ನೇರ ಆರೋಪ ಮಾಡಿದ್ದಾರೆ. ತಮ್ಮ ಪಕ್ಷ ತೃಣಮೂಲ ಕಾಂಗ್ರೆಸ್ (Trinamool Congress) ಶೀಘ್ರದಲ್ಲೇ ಮತ್ತೆ ಪುಟಿದೇಳಲಿದೆ ಎಂದು ಅವರು ದೃಢವಾಗಿ ಅಭಿಪ್ರಾಯ ಪಟ್ಟಿದ್ದಾರೆ. ನಾಲ್ಕನೇ ಬಾರಿಗೆ ಅಧಿಕಾರ ಹಿಡಿಯುವ ಮಹತ್ವಾಕಾಂಕ್ಷೆ ಹೊಂದಿದ್ದ ಮಮತಾ, ಕೇಂದ್ರ ಚುನಾವಣಾ ಆಯೋಗವನ್ನು "ಬಿಜೆಪಿ ಆಯೋಗ" ಎಂದು ಕರೆಯುವ ಮೂಲಕ ತೀವ್ರವಾಗಿ ಟೀಕಿಸಿಸಿದ್ದಾರೆ. ಬಿಜೆಪಿ ಭರ್ಜರಿ ಮುನ್ನಡೆ ಸಾಧಿಸುತ್ತಿದ್ದಂತೆ ಮಮತಾ ಈ ಕಿಡಿ ಕಾರಿದ್ದಾರೆ. ಅಚ್ಚರಿ ಎಂದರೆ ಬಿಜೆಪಿ ನಾಯಕ ಸುವೇಂದು ಅದಿಕಾರಿ ವಿರುದ್ಧ ಭವಾನಿಪುರದಲ್ಲಿ ಮಮತಾ ಸೋಲುಂಡಿದ್ದಾರೆ.&lt;/p&gt;&lt;p data-block-key="5ebec"&gt;ಕೇಂದ್ರದ ಆಡಳಿತಾರೂಢ ಬಿಜೆಪಿಗೆ ಪಶ್ಚಿಮ ಬಂಗಾಳವು ದೀರ್ಘಕಾಲದವರೆಗೆ ಗೆಲ್ಲಲಾಗದ ಅಸಾಧ್ಯವಾದ ಕೋಟೆಯಾಗಿತ್ತು. ಆದರೆ ಈ ಬಾರಿ ಬಿಜೆಪಿ ಬರೋಬ್ಬರಿ 114 ಸ್ಥಾನಗಳನ್ನು ಗೆದ್ದು, ಇನ್ನೂ 92 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಳ್ಳುವ ಮೂಲಕ ಭರ್ಜರಿ ಐತಿಹಾಸಿಕ ಜಯ ದಾಖಲಿಸಿದೆ. "ಬಿಜೆಪಿಯು 100ಕ್ಕೂ ಹೆಚ್ಚು ಸ್ಥಾನಗಳನ್ನು ಲೂಟಿ ಮಾಡಿದೆ. ಕೇಂದ್ರ ಪಡೆಗಳು, ಪ್ರಧಾನಿ ಮತ್ತು ಗೃಹ ಸಚಿವರ ನೆರವಿನೊಂದಿಗೆ ಚುನಾವಣಾ ಆಯೋಗವು ಸಂಪೂರ್ಣವಾಗಿ ಅಕ್ರಮ ಎಸಗಿದೆ. ಇದೊಂದು ಅನೈತಿಕ ಗೆಲುವೇ ಹೊರತು ನೈತಿಕ ಗೆಲುವಲ್ಲ," ಎಂದು ಮಮತಾ ಮಾಧ್ಯಮಗಳ ಮುಂದೆ ಗುಡುಗಿದರು.&lt;/p&gt;&lt;p data-block-key="7r5se"&gt;ಭವಾನಿಪುರ ಕ್ಷೇತ್ರದಲ್ಲಿ ಮಮತಾ ಅವರನ್ನು ಅವರ ಮಾಜಿ ಬೆಂಬಲಿಗ ಸುವೇಂದು ಅಧಿಕಾರಿ ಸೋಲಿಸಿದ್ದಾರೆ ಈ ಬಾರಿ ಬಂಗಾಳದಲ್ಲಿ ಶೇ. 92ಕ್ಕಿಂತ ಹೆಚ್ಚಿನ ದಾಖಲೆಯ ಮತದಾನವಾಗಿತ್ತು, ಇದು ಇಡೀ ದೇಶದಲ್ಲೇ ಅತ್ಯಂತ ಹೆಚ್ಚಿನ ಮತದಾನದ ಪ್ರಮಾಣವಾಗಿದೆ.&lt;/p&gt;&lt;p data-block-key="co32s"&gt;&lt;a href="/national/bjp-releases-modimay-bharat-map-saffron-wave-reaches-west-bengal-77215.html"&gt;&lt;b&gt;ʼಮೋದಿಮಯ್ ಭಾರತ್ʼ ನಕ್ಷೆ ಬಿಡುಗಡೆ ಮಾಡಿದ ಬಿಜೆಪಿ: ಪಶ್ಚಿಮ ಬಂಗಾಳವನ್ನು ತಲುಪಿದೆ ಕೇಸರಿ ಅಲೆ&lt;/b&gt;&lt;/a&gt;&lt;/p&gt;&lt;p data-block-key="274qd"&gt;ಮತ್ತೊಂದೆಡೆ ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, "ಗಂಗಾ ನದಿಯು ಬಿಹಾರದಿಂದ ಗಂಗಾಸಾಗರದವರೆಗೆ ಹರಿಯುತ್ತದೆ. ಇಂದು ಬಂಗಾಳದ ಗೆಲುವಿನೊಂದಿಗೆ ಗಂಗೋತ್ರಿಯಿಂದ ಗಂಗಾಸಾಗರದವರೆಗೆ ಕಮಲ ಸರ್ವತ್ರವಾಗಿ ಅರಳಿದೆ" ಎಂದು ಹರ್ಷ ವ್ಯಕ್ತಪಡಿಸಿದರು. ಅಸ್ಸಾಂನಲ್ಲಿ ಸತತ ಮೂರನೇ ಬಾರಿಗೆ ಬಿಜೆಪಿ ಜಯಗಳಿಸಿದ್ದನ್ನು ಅವರು ಹೆಮ್ಮೆಯಿಂದ ಸ್ಮರಿಸಿದರು.&lt;/p&gt;&lt;p data-block-key="epvne"&gt;"ನಾಗರಿಕ ದೇವೋ ಭವ" ಎಂಬ ಮಂತ್ರದೊಂದಿಗೆ ಜನಸೇವೆಯಲ್ಲಿ ತೊಡಗಿರುವುದೇ ಬಿಜೆಪಿಯ ಸರಣಿ ಗೆಲುವಿನ ರಹಸ್ಯʼʼ ಎಂದು ಮೋದಿ ತಿಳಿಸಿದರು. ಈ ಫಲಿತಾಂಶವು ಭಾರತದ ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಸಂದ ಮಹಾನ್ ಜಯವಾಗಿದೆ ಎಂದು ಬಣ್ಣಿಸಿದ ಅವರು, "ಇಂದಿನಿಂದ ಬಂಗಾಳವು ಭಯದಿಂದ ಮುಕ್ತವಾಗಿದೆ ಮತ್ತು ಹೊಸ ಅಭಿವೃದ್ಧಿಯತ್ತ ಸಾಗಿದೆ. ಬಂಗಾಳದಲ್ಲಿ ಈಗ ನಿಜವಾದ ಬದಲಾವಣೆ ಅಥವಾ ಪರಿಬೋರ್ತನ್ ಆಗಿದೆ" ಎಂದು ಘೋಷಿಸಿದರು. ಈ ಚುನಾವಣಾ ಫಲಿತಾಂಶವು ಭಾರತೀಯ ರಾಜಕೀಯ ಇತಿಹಾಸದಲ್ಲಿ ಒಂದು ಹೊಸ ಅಧ್ಯಾಯವನ್ನು ಬರೆದಿದೆ ಮತ್ತು ಪ್ರಜಾಪ್ರಭುತ್ವದ ಶಕ್ತಿಯನ್ನು ಸಾಬೀತುಪಡಿಸಿದೆ ಎಂದು ಅಭಿಪ್ರಾಯಪಟ್ಟರು.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಮೇ.9, 10 ರಂದು ರಾಜ್ಯಮಟ್ಟದ ಬ್ರಾಹ್ಮಣ ವಧು- ವರಾನ್ವೇಷಣಾ ಸಮಾವೇಶ ಹಾಗೂ ಶ್ರೀನಿವಾಸ ಕಲ್ಯಾಣೋತ್ಸವ</title><link>https://vishwavani.news/karnataka/bengaluru-urban/state-level-brahmin-bride-and-groom-meeting-and-srinivasa-kalyanotsava-on-may-9th-and-10th-77241.html</link><guid>https://vishwavani.news/karnataka/bengaluru-urban/state-level-brahmin-bride-and-groom-meeting-and-srinivasa-kalyanotsava-on-may-9th-and-10th-77241.html</guid><pubDate>Mon, 04 May 2026 16:44:53 +0000</pubDate><description>&lt;![CDATA[ಸಮಾವೇಶ ಹಾಗೂ ಕಲ್ಯಾಣ ಪ್ರಾಪ್ತಿಗಾಗಿ ಶ್ರೀನಿವಾಸ ಕಲ್ಯಾಣೋತ್ಸವವನ್ನು ಬನಶಂಕರಿ ಎರಡನೇ ಹಂತ, ಬಸವನಗುಡಿ ಯಲಿರುವ (ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ) "ಗಾಯತ್ರಿ ಭವನದಲ್ಲಿ ನಡೆಯಲಿದೆ ಎರಡು ದಿನಗಳ ಕಾಲ ಬೆಳಗ್ಗೆ 9 ರಿಂದ ಸಂಜೆ 5ರವರೆಗೆ ವಧು-ವರಾನ್ವೇಷಣಾ ಸಮಾವೇಶ ಆಯೋಜಿಸಲಾಗಿದೆ.]]&gt;</description><dc:creator>&lt;![CDATA[Ashok Nayak]]&gt;</dc:creator><category>&lt;![CDATA[ಬೆಂಗಳೂರು ನಗರ]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕರ್ನಾಟಕ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/WhatsApp_Image_2026-05-02_at_11.18.11.original.jpg" class="attachment-large size-large wp-post-image" alt="ಮೇ.9, 10 ರಂದು ರಾಜ್ಯಮಟ್ಟದ ಬ್ರಾಹ್ಮಣ ವಧು- ವರಾನ್ವೇಷಣಾ ಸಮಾವೇಶ ಹಾಗೂ ಶ್ರೀನಿವಾಸ ಕಲ್ಯಾಣೋತ್ಸವ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="unbm0"&gt;&lt;b&gt;ಬೆಂಗಳೂರು:&lt;/b&gt; ಬ್ರಾಹ್ಮಣ ವಿವಿಧ ಸಂಘಟನೆಗಳು ಬೆಂಗಳೂರು, ಮಂಗಳಸೂತ್ರ ಫೌಂಡೇಶನ್, ಸಪ್ತ ಪದಿ ಫೌಂಡೇಶನ್ ಟ್ರಸ್ಟ್, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಬೆಂಗಳೂರು ಸಹಕಾರ ದೊಂದಿಗೆ ರಾಜ್ಯಮಟ್ಟದ ಬ್ರಾಹ್ಮಣ ವಧು-ವರಾನ್ವೇಷಣ ಸಮಾವೇಶ ಮೇ.9 ಹಾಗೂ 10 ರಂದು ಹಮ್ಮಿಕೊಳ್ಳಲಾಗಿದೆ.&lt;/p&gt;&lt;p data-block-key="4o6"&gt;&lt;b&gt;ಇದನ್ನೂ ಓದಿ: &lt;/b&gt;&lt;a href="/karnataka/bengaluru-urban/new-political-revolution-in-tamil-nadu-under-the-leadership-of-actor-vijaya-thalapathy-s-sangamesh-77239.html"&gt;Bangalore News: ನಟ ವಿಜಯ ದಳಪತಿ ನಾಯಕತ್ವದಲ್ಲಿ ತಮಿಳುನಾಡಿನಲ್ಲಿ ಹೊಸ ರಾಜಕೀಯ ಕ್ರಾಂತಿ: ಎಸ್.ಸಂಗಮೇಶ್&lt;/a&gt;&lt;/p&gt;&lt;p data-block-key="f5jsv"&gt;ಸಮಾವೇಶ ಹಾಗೂ ಕಲ್ಯಾಣ ಪ್ರಾಪ್ತಿಗಾಗಿ ಶ್ರೀನಿವಾಸ ಕಲ್ಯಾಣೋತ್ಸವವನ್ನು ಬನಶಂಕರಿ ಎರಡನೇ ಹಂತ, ಬಸವನಗುಡಿ ಯಲಿರುವ (ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ) "ಗಾಯತ್ರಿ ಭವನದಲ್ಲಿ ನಡೆಯಲಿದೆ ಎರಡು ದಿನಗಳ ಕಾಲ ಬೆಳಗ್ಗೆ 9 ರಿಂದ ಸಂಜೆ 5ರವರೆಗೆ ವಧು-ವರಾನ್ವೇಷಣಾ ಸಮಾವೇಶ ಆಯೋಜಿಸಲಾಗಿದೆ.&lt;/p&gt;&lt;p data-block-key="94v4e"&gt;ಆಸಕ್ತರು 1 ಪೋಸ್ಟ್ ಕಾರ್ಡ್ ಸೈಜ್ ಫೋಟೋ 1ಬಯೋಡೇಟಾ1 ಜಾತಕದೊಂದಿಗೆ ಭಾಗವಹಿಸ ಬಹುದು. ಮಾಹಿತಿಗಾಗಿ 9449425536 / 8088843300. ಸಂಚಾಲಕರಾದ ಶ್ರೀನಿವಾಸ್ ರವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>MI vs LSG: 300ರ ಸ್ಟ್ರೈಕ್‌ ರೇಟ್‌ನೊಂದಿಗೆ ವೈಭವ್‌ ಸೂರ್ಯವಂಶಿ ದಾಖಲೆ ಮುರಿದ ನಿಕೋಲಸ್‌ ಪೂರನ್‌!</title><link>https://vishwavani.news/sports/cricket/ipl-2026-nicholas-pooran-surpasses-vaibhav-sooryavanshi-with-quickfire-knock-against-mumbai-indians-77240.html</link><guid>https://vishwavani.news/sports/cricket/ipl-2026-nicholas-pooran-surpasses-vaibhav-sooryavanshi-with-quickfire-knock-against-mumbai-indians-77240.html</guid><pubDate>Mon, 04 May 2026 16:34:03 +0000</pubDate><description>&lt;![CDATA[2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಸತತ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿ ಟೀಕೆಗಳಿಗೆ ಗುರಿಯಾಗಿದ್ದ ಲಖನೌ ಸೂಪರ್‌ ಜಯಂಟ್ಸ್‌ ತಂಡದ ನಿಕೋಲಸ್‌ ಪೂರನ್‌, ಮುಂಬೈ ಇಂಡಿಯನ್ಸ್‌ ವಿರುದ್ಧ ಸ್ಪೋಟಕ ಅರ್ಧಶತಕ ಸಿಡಿಸಿ ಭರ್ಜರಿ ಫಾರ್ಮ್‌ಗೆ ಮರಳಿದ್ದಾರೆ. ಅವರು ಈ ಇನಿಂಗ್ಸ್‌ ಅನ್ನು 300ರ ಸ್ಟ್ರೈಕ್‌ ರೇಟ್‌ನಲ್ಲಿ ಆಡಿ ವಿಶೇಷ ದಾಖಲೆಯನ್ನು ಬರೆದಿದ್ದಾರೆ.]]&gt;</description><dc:creator>&lt;![CDATA[Ramesh Kote]]&gt;</dc:creator><category>&lt;![CDATA[ಕ್ರಿಕೆಟ್‌]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕ್ರೀಡೆ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Nicholas_Pooran-Vaibhav_Sooryavanshi.original.jpg" class="attachment-large size-large wp-post-image" alt="MI vs LSG: 300ರ ಸ್ಟ್ರೈಕ್‌ ರೇಟ್‌ನೊಂದಿಗೆ ವೈಭವ್‌ ಸೂರ್ಯವಂಶಿ ದಾಖಲೆ ಮುರಿದ ನಿಕೋಲಸ್‌ ಪೂರನ್‌!" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="526gm"&gt;&lt;b&gt;ಮುಂಬೈ:&lt;/b&gt; ಇಂಡಿಯನ್‌ ಪ್ರೀಮಿಯರ್‌ ಲೀಗ್‌ 2026ರ ಸಾಲಿನ ಟೂರ್ನಿಯಲ್ಲಿ ಸತತ ಬ್ಯಾಟಿಂಗ್‌ ವೈಫಲ್ಯ ಅನುಭವಿಸುವ ಮೂಲಕ ಟೀಕೆಗಳಿಗೆ ಗುರಿಯಾಗಿದ್ದ ಲಖನೌ ಸೂಪರ್‌ ಜಯಂಟ್ಸ್‌ ತಂಡದ ಬ್ಯಾಟ್ಸ್‌ಮನ್‌ ನಿಕೋಲಸ್‌ ಪೂರನ್‌, ಈ ಸೀಸನ್‌ನಲ್ಲಿ ತಮ್ಮ ಮೊದಲ ಅರ್ಧಶತಕವನ್ನು ಬಾರಿಸಿದ್ದಾರೆ. ಐದು ಬಾರಿ ಚಾಂಪಿಯನ್ಸ್‌ ಮುಂಬೈ ಇಂಡಿಯನ್ಸ್‌ ಎದುರಿನ ಟೂರ್ನಿಯ 47ನೇ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಎಲ್‌ಎಸ್‌ಜಿ ಪರ ಅವರು ಸ್ಪೋಟಕ ಬ್ಯಾಟಿಂಗ್‌ ನಡೆಸಿ ಭರ್ಜರಿ ಫಾರ್ಮ್‌ಗೆ ಮರಳಿದರು. ಆ ಮೂಲಕ ತಮ್ಮ ತಂಡದ ಮಾಲೀಕರಾದ ಸಂಜೀವ್‌ ಗೋಯಾಂಕ ಅವರ ಸಂತಸಕ್ಕೆ ಕಾರಣರಾದರು.&lt;/p&gt;&lt;p data-block-key="f0go"&gt;ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಸೋಮವಾರ ನಡೆದಿದ್ದ ಈ ಪಂದ್ಯದಲ್ಲಿ ಮಿಚೆಲ್‌ ಮಾರ್ಷ್‌ ಜೊತೆಗೆ ಇನಿಂಗ್ಸ್‌ ಆರಂಭಿಸಿದ್ದ ಹೊಸ ಆಟಗಾರ ಜಾಶ್‌ ಇಂಗ್ಲಿಸ್‌ 13 ರನ್‌ ಗಳಿಸಿ ಬೇಗ ವಿಕೆಟ್‌ ಒಪ್ಪಿಸಿದರು. ಈ ವೇಳೆ ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ಪೂರನ್‌, ತಮ್ಮ ಅಪಾಯಕಾರಿ ಬ್ಯಾಟಿಂಗ್‌ ಮೂಲಕ ಧೂಳೆಬ್ಬಿಸಿದರು ಹಾಗೂ ಮುಂಬೈ ಬೌಲರ್‌ಗಳನ್ನು ಬಲವಾಗಿ ದಂಡಿಸಿದರು. ಅವರು ಕೇವಲ 16 ಎಸೆತಗಳಲ್ಲಿಯೇ ಅರ್ಧಶತಕವನ್ನು ಪೂರ್ಣಗೊಳಿಸಿದರು. ಆ ಮೂಲಕ ಲಖನೌ ತಂಡದ ಪರ ಎರಡನೇ ವೇಗದ ಅರ್ಧಶತಕ ಬಾರಿಸಿದರು. ಮೊದಲನೇ ವೇಗದ ಅರ್ಧಶತಕ ಕೂಡ ಇವರ ಹೆಸರನಲ್ಲಿದೆ.&lt;/p&gt;&lt;p data-block-key="fcf6h"&gt;&lt;a href="/sports/cricket/ipl-2026-lsg-posted-901-after-six-overs-their-best-ever-powerplay-score-in-the-ip-77225.html"&gt;&lt;b&gt;LSG vs MI ಪಂದ್ಯದ ಪವರ್‌ಪ್ಲೇನಲ್ಲಿ ವಿಶೇಷ ದಾಖಲೆ ಬರೆದ ಲಖನೌ ಸೂಪರ್‌ ಜಯಂಟ್ಸ್‌!&lt;/b&gt;&lt;/a&gt;&lt;/p&gt;&lt;h3 data-block-key="8dhmt"&gt;&lt;b&gt;ವೈಭವ್‌ ಸೂರ್ಯವಂಶಿ ದಾಖಲೆ ಮುರಿದ ಪೂರನ್‌&lt;/b&gt;&lt;/h3&gt;&lt;p data-block-key="66lhc"&gt;ತಮ್ಮ ಕಮ್‌ಬ್ಯಾಕ್‌ ಇನಿಂಗ್ಸ್‌ನಲ್ಲಿ ಒಟ್ಟು ಆಡಿದ 21 ಎಸೆತಗಳಲ್ಲಿ ವಿಂಡೀಸ್‌ ಬ್ಯಾಟ್ಸ್‌ಮನ್‌ 63 ರನ್‌ಗಳನ್ನು ಚಚ್ಚಿದರು. ಇದರಲ್ಲಿ ಅವರು ಬರೋಬ್ಬರಿ 8 ಸಿಕ್ಸರ್‌ ಹಾಗೂ ಒಂದು ಬೌಂಡರಿಗಳನ್ನು ಬಾರಿಸಿದ್ದರು. ಅಂದ ಹಾಗೆ ಅವರು 300ರ ಸ್ಟ್ರೈಕ್‌ ರೇಟ್‌ನಲ್ಲಿ ರನ್‌ ಸಿಡಿಸಿದ್ದು ವಿಶೇಷವಾಗಿತ್ತು. ಆ ಮೂಲಕ ಐಪಿಎಲ್‌ ಟೂರ್ನಿಯಲ್ಲಿ 20ಕ್ಕೂ ಕಡಿಮೆ ಎಸೆತಗಳಲ್ಲಿ ಅತಿ ಹೆಚ್ಚು ಅರ್ಧಶತಕಗಳನ್ನು ಸಿಡಿಸಿದ ಬ್ಯಾಟ್ಸ್‌ಮನ್‌ಗಳ ಎಲೈಟ್‌ ಲಿಸ್ಟ್‌ನಲ್ಲಿ 15ರ ವಯಸ್ಸಿನ ವೈಭವ್‌ ಸೂರ್ಯವಂಶಿಯನ್ನು ನಿಕೋಲಸ್‌ ಪೂರನ್‌ ಹಿಂದಿಕ್ಕಿದ್ದಾರೆ.&lt;/p&gt;&lt;p data-block-key="7t19g"&gt;&lt;/p&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="twitter-tweet"&gt;&lt;p lang="en" dir="ltr"&gt;1⃣6⃣- ball FIFTY &lt;br&gt;&lt;br&gt;    &lt;br&gt;&lt;br&gt;His first of this season &lt;br&gt;&lt;br&gt;Updates ▶️ &lt;a href="https://t.co/elXSOvaeig"&gt;https://t.co/elXSOvaeig&lt;/a&gt; &lt;a href="https://twitter.com/hashtag/TATAIPL?src=hash&amp;amp;ref_src=twsrc%5Etfw"&gt;#TATAIPL&lt;/a&gt; | &lt;a href="https://twitter.com/hashtag/KhelBindaas?src=hash&amp;amp;ref_src=twsrc%5Etfw"&gt;#KhelBindaas&lt;/a&gt; | &lt;a href="https://twitter.com/hashtag/MIvLSG?src=hash&amp;amp;ref_src=twsrc%5Etfw"&gt;#MIvLSG&lt;/a&gt; &lt;a href="https://t.co/OMxinwxoOY"&gt;pic.twitter.com/OMxinwxoOY&lt;/a&gt;&lt;/p&gt;&amp;mdash; IndianPremierLeague (@IPL) &lt;a href="https://twitter.com/IPL/status/2051311371623796740?ref_src=twsrc%5Etfw"&gt;May 4, 2026&lt;/a&gt;&lt;/blockquote&gt; &lt;script async src="https://platform.twitter.com/widgets.js" charset="utf-8"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="8ud2m"&gt;&lt;/p&gt;&lt;p data-block-key="eoefa"&gt;ರಾಜಸ್ಥಾನ್‌ ರಾಯಲ್ಸ್‌ ಓಪನರ್‌ ನಾಲ್ಕು ಬಾರಿ 20ಕ್ಕೂ ಕಡಿಮೆ ಎಸೆತಗಳಲ್ಲಿ ಅರ್ಧಶತಕವನ್ನು ಸಿಡಿಸಿದ್ದಾರೆ. ಆದರೆ, ಲಖನೌ ಬ್ಯಾಟರ್‌ ಪೂರನ್‌ ಐದು ಬಾರಿ ಈ ಸಾಧನೆಗೆ ಭಾಜನರಾಗಿದ್ದಾರೆ. ಈ ಪಟ್ಟಿಯಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ಆರಂಭಿಕ ಅಭಿಷೇಕ್‌ ಶರ್ಮಾ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಇವರು ಒಟ್ಟು ಆರು ಬಾರಿ 20ಕ್ಕೂ ಕಡಿಮೆ ಎಸೆತಗಳಲ್ಲಿ ಅರ್ಧಶತಕವನ್ನು ಬಾರಿಸಿದ್ದಾರೆ.&lt;/p&gt;&lt;h3 data-block-key="5n0ho"&gt;&lt;b&gt;ಐಪಿಎಲ್‌ ಟೂರ್ನಿಯಲ್ಲಿ 20ಕ್ಕಿಂತ ಕಡಿಮೆ ಎಸೆತಗಳಲ್ಲಿ ಅತಿ ಹೆಚ್ಚು 50 ರನ್‌ ಗಳಿಸಿದ ಬ್ಯಾಟರ್ಸ್‌&lt;/b&gt;&lt;/h3&gt;&lt;p data-block-key="7hunn"&gt;6 - ಅಭಿಷೇಕ್ ಶರ್ಮಾ&lt;/p&gt;&lt;p data-block-key="6dhma"&gt;5 - ನಿಕೋಲಸ್ ಪೂರನ್&lt;/p&gt;&lt;p data-block-key="dg94a"&gt;4 - ವೈಭವ್ ಸೂರ್ಯವಂಶಿ&lt;/p&gt;&lt;h3 data-block-key="22nr1"&gt;&lt;b&gt;ಲಖನೌ ಪರ ವೇಗದ ಅರ್ಧಶತಕ ಸಿಡಿಸಿದ ಆಟಗಾರರು&lt;/b&gt;&lt;/h3&gt;&lt;p data-block-key="6ivi3"&gt;15 ಎಸೆತಗಳಲ್ಲಿ - ನಿಕೋಲಸ್ ಪೂರನ್ vs ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು, ಬೆಂಗಳೂರು, 2023&lt;/p&gt;&lt;p data-block-key="bnd3c"&gt;16 ಎಸೆತಗಳಲ್ಲಿ- ನಿಕೋಲಸ್ ಪೂರನ್ vs ಮುಂಬೈ ಇಂಡಿಯನ್ಸ್‌, ವಾಂಖೆಡೆ, 2026*&lt;/p&gt;&lt;p data-block-key="8plsk"&gt;18 ಎಸೆತಗಳಲ್ಲಿ- ನಿಕೋಲಸ್ ಪೂರನ್ vs ಸನ್‌ರೈಸರ್ಸ್‌ ಹೈದರಾಬಾದ್‌, ಹೈದರಾಬಾದ್, 2025&lt;/p&gt;&lt;p data-block-key="6h53a"&gt;19 ಎಸೆತಗಳಲ್ಲಿ- ನಿಕೋಲಸ್ ಪೂರನ್ vs ಮುಂಬೈ ಇಂಡಿಯನ್ಸ್‌, ವಾಂಖೆಡೆ, 2024&lt;/p&gt;&lt;p data-block-key="er4q4"&gt;20 ಎಸೆತಗಳಲ್ಲಿ- ಕೈಲ್ ಮೇಯರ್ಸ್ vs ಪಂಜಾಬ್‌ ಕಿಂಗ್ಸ್‌, ಮೊಹಾಲಿ, 2023&lt;/p&gt;&lt;p data-block-key="3gao4"&gt;20 ಎಸೆತಗಳಲ್ಲಿ- ನಿಕೋಲಸ್ ಪೂರನ್ vs ಡೆಲ್ಲಿ ಕ್ಯಾಪಿಟಲ್ಸ್‌, ದೆಹಲಿ, 2024&lt;/p&gt;
&lt;/div&gt;
&lt;/p&gt;]]&gt;</content:encoded></item><item><title>Bangalore News: ನಟ ವಿಜಯ ದಳಪತಿ ನಾಯಕತ್ವದಲ್ಲಿ ತಮಿಳುನಾಡಿನಲ್ಲಿ ಹೊಸ ರಾಜಕೀಯ ಕ್ರಾಂತಿ: ಎಸ್.ಸಂಗಮೇಶ್</title><link>https://vishwavani.news/karnataka/bengaluru-urban/new-political-revolution-in-tamil-nadu-under-the-leadership-of-actor-vijaya-thalapathy-s-sangamesh-77239.html</link><guid>https://vishwavani.news/karnataka/bengaluru-urban/new-political-revolution-in-tamil-nadu-under-the-leadership-of-actor-vijaya-thalapathy-s-sangamesh-77239.html</guid><pubDate>Mon, 04 May 2026 16:32:45 +0000</pubDate><description>&lt;![CDATA[ಸಾಮಾಜಿಕ ನ್ಯಾಯದ ಇತಿಹಾಸವನ್ನು ಮರುಬರೆಯುವ ಸಮಯ ಬಂದಿದೆ. ಮಾದಿಗರ ಹೆಮ್ಮೆಯ ಮಗ ತಮಿಳುನಾಡಿನ ಮುಖ್ಯಮಂತ್ರಿಯಾಗುವುದು ಕೇವಲ ಕನಸು ಅಲ್ಲ – ಅದು ನಮ್ಮ ಗೌರವ, ನಮ್ಮ ಹಕ್ಕು, ವಿಜಯ ಹೋರಾಟಕ್ಕೆ ಸಿಕ್ಕ ಜಯ!” ಮುಂದಿನ ಬೆಂಗಳೂರು ಜಿಬಿಎ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಟಿವಿಕೆ ಪಕ್ಷ ಪ್ರವೇಶಿಸುವುದು ಖಚಿತವಾಗಿದ್ದು, ಸಂಘಟಿತ ಯುವಶಕ್ತಿ ಮತ್ತು ಹಿಂದುಳಿದ ವರ್ಗಗಳ ಭಾರೀ ಬೆಂಬಲದ ಹಿನ್ನೆಲೆ ಟಿವಿಕೆ ಅಭ್ಯರ್ಥಿಗಳು ಗಮನಾರ್ಹ ಸಾಧನೆ ಮಾಡಲಿದ್ದಾರೆ]]&gt;</description><dc:creator>&lt;![CDATA[Ashok Nayak]]&gt;</dc:creator><category>&lt;![CDATA[ಬೆಂಗಳೂರು ನಗರ]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕರ್ನಾಟಕ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/WhatsApp_Image_2026-05-04_at_21.32.50_1.original.jpg" class="attachment-large size-large wp-post-image" alt="Bangalore News: ನಟ ವಿಜಯ ದಳಪತಿ ನಾಯಕತ್ವದಲ್ಲಿ ತಮಿಳುನಾಡಿನಲ್ಲಿ ಹೊಸ ರಾಜಕೀಯ ಕ್ರಾಂತಿ: ಎಸ್.ಸಂಗಮೇಶ್" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="llt1p"&gt;&lt;b&gt;ಬೆಂಗಳೂರು: &lt;/b&gt;ದಶಕಗಳಿಂದ ಹಿಂದುಳಿದ ಸಮುದಾಯಗಳ ಮೇಲೆ ನಡೆಯುತ್ತಿರುವ ಅನ್ಯಾಯಕ್ಕೆ ಅಂತ್ಯ ಹಾಡಬೇಕಾದ ಸಮಯ ಬಂದಿದೆ. ಸಾಮಾಜಿಕ ನ್ಯಾಯ, ಸಮಾನ ಹಕ್ಕುಗಳು ಹಾಗೂ ತಳಹದಿ ವರ್ಗಗಳ ಸಬಲೀಕರಣಕ್ಕಾಗಿ ನಡೆಯುತ್ತಿರುವ ಹೋರಾಟಕ್ಕೆ ಇಂದು ಹೊಸ ದಿಕ್ಕು ಸಿಕ್ಕಿದ್ದು, ಆ ಪರಿವರ್ತನೆಯ ಶಕ್ತಿಯಾಗಿ ಖ್ಯಾತ ನಟ ವಿಜಯ ದಳಪತಿ ಹೊರಹೊಮ್ಮಿದ್ದಾರೆ ಎಂದು ಕರ್ನಾಟಕ ರಾಜ್ಯ ಯುವ ಸಮೂಹದ ರಾಜ್ಯಾಧ್ಯಕ್ಷ ಎಸ್.ಸಂಗಮೇಶ್ ಹೇಳಿದ್ದಾರೆ. &lt;/p&gt;&lt;p data-block-key="6a72t"&gt;“ಇದು ಕೇವಲ ರಾಜಕೀಯವಲ್ಲ – ಹೋರಾಟ. ಇದು ಕೇವಲ ಮಾತಲ್ಲ – ದಮನಿತ ವರ್ಗಗಳ ಸ್ವಾಭಿಮಾನದ ಘರ್ಜನೆ. ದಶಕಗಳಿಂದ ತುಳಿಯಲ್ಪಟ್ಟ ಜನರ ನೋವಿಗೆ ಉತ್ತರ ನೀಡುವ ಸಮಯ ಬಂದಿದೆ. ಆ ಹೋರಾಟಕ್ಕೆ ದಿಕ್ಕು ತೋರಿಸುವ ನಾಯಕತ್ವ ವಿಜಯ ದಳಪತಿ ಅವರದು,” ಎಂದಿದ್ದಾರೆ.&lt;/p&gt;&lt;p data-block-key="adjve"&gt;&lt;b&gt;ಇದನ್ನೂ ಓದಿ: &lt;/b&gt;&lt;a href="/karnataka/bengaluru-urban/riya-diamonds-launches-indias-first-lab-grown-diamond-engagement-ring-studio-in-bengaluru-76462.html"&gt;Bangalore News: ರಿಯಾ ಡೈಮಂಡ್ಸ್ ಬೆಂಗಳೂರಿನಲ್ಲಿ ಭಾರತದ ಮೊದಲ ಪ್ರಯೋಗಾಲಯದಲ್ಲಿ ಬೆಳೆದ ವಜ್ರ ನಿಶ್ಚಿತಾರ್ಥ ಉಂಗುರ ಸ್ಟುಡಿಯೋ ಪ್ರಾರಂಭ&lt;/a&gt;&lt;/p&gt;&lt;p data-block-key="eho43"&gt;ತಮಿಳುನಾಡಿನ ರಾಜಕೀಯದಲ್ಲಿ ಇಂದು ಉಂಟಾಗುತ್ತಿರುವ ಬದಲಾವಣೆ ಸಾಮಾನ್ಯವಲ್ಲ. ಇದು ದಮನಿತ ವರ್ಗಗಳ ಎದ್ದೇಳುವ ಧ್ವನಿ. “ಸ್ವಾಭಿಮಾನಕ್ಕಾಗಿ, ಸಮಾನತೆಗೆ – ಈಗ ಅಧಿಕಾರವೂ ತಳಹದಿ ವರ್ಗಗಳ ಕೈಗೆ ಬರಬೇಕು,” ಎಂದು ಹೇಳಿದ್ದಾರೆ. &lt;/p&gt;&lt;p data-block-key="4gga"&gt;ಈ ಕುರಿತು ಹೇಳಿಕೆ ನೀಡಿರುವ ಅವರು, ಯುವಜನರ ಆಶೋತ್ತರಗಳು, ಹಿಂದುಳಿದವರ ಹಕ್ಕುಗಳು ಮತ್ತು ಸಮಾನತೆಯ ಕನಸುಗಳನ್ನು ಒಟ್ಟುಗೂಡಿಸುವ ಶಕ್ತಿ ವಿಜಯ ದಳಪತಿ ಅವರಲ್ಲಿದ್ದು, ಸಮಾಜದ ಪ್ರತಿಯೊಂದು ವರ್ಗವನ್ನೂ ಜೊತೆಗೂಡಿಸಿಕೊಂಡು ಸಾಗುವ ದೃಢಸಂಕಲ್ಪ ಹೊಂದಿ ದ್ದಾರೆ.&lt;/p&gt;
&lt;/div&gt;

    
&lt;figure class="article-image text-center mb-4"&gt;
    &lt;img alt="Vijay" class="img-fluid" height="720" src="https://cdn.vishwavani.news/media/images/Vijay_Rn6Yo1B.max-1280x720.format-webp.webp" width="1152"&gt;
    
&lt;/figure&gt;

    
&lt;div class="article-paragraph"&gt;
    &lt;p data-block-key="8q320"&gt;ಸಾಮಾಜಿಕ ನ್ಯಾಯದ ಇತಿಹಾಸವನ್ನು ಮರುಬರೆಯುವ ಸಮಯ ಬಂದಿದೆ. ಮಾದಿಗರ ಹೆಮ್ಮೆಯ ಮಗ ತಮಿಳುನಾಡಿನ ಮುಖ್ಯಮಂತ್ರಿಯಾಗುವುದು ಕೇವಲ ಕನಸು ಅಲ್ಲ – ಅದು ನಮ್ಮ ಗೌರವ, ನಮ್ಮ ಹಕ್ಕು, ವಿಜಯ ಹೋರಾಟಕ್ಕೆ ಸಿಕ್ಕ ಜಯ!” ಮುಂದಿನ ಬೆಂಗಳೂರು  ಜಿಬಿಎ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಟಿವಿಕೆ ಪಕ್ಷ ಪ್ರವೇಶಿಸುವುದು ಖಚಿತವಾಗಿದ್ದು, ಸಂಘಟಿತ ಯುವಶಕ್ತಿ ಮತ್ತು ಹಿಂದುಳಿದ ವರ್ಗಗಳ ಭಾರೀ ಬೆಂಬಲದ ಹಿನ್ನೆಲೆ ಟಿವಿಕೆ ಅಭ್ಯರ್ಥಿಗಳು ಗಮನಾರ್ಹ ಸಾಧನೆ ಮಾಡಲಿದ್ದಾರೆ ಎಂದು ಎಸ್ ಸಂಗಮೇಶ್ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>624 ಕೋಟಿ ರೂ. ಸಂಪತ್ತಿನ ಒಡೆಯ ನಟ, ರಾಜಕಾರಣಿ ದಳಪತಿ ವಿಜಯ್</title><link>https://vishwavani.news/national/actor-politician-thalapathy-vijay-is-the-owner-of-a-wealth-of-rs-624-crore-77237.html</link><guid>https://vishwavani.news/national/actor-politician-thalapathy-vijay-is-the-owner-of-a-wealth-of-rs-624-crore-77237.html</guid><pubDate>Mon, 04 May 2026 15:53:43 +0000</pubDate><description>&lt;![CDATA[ತಮಿಳುನಾಡು ವಿಧಾನ ಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸುವುದರೊಂದಿಗೆ ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ ಪಕ್ಷವು ದಶಕಗಳ ಕಾಲ ಆಡಳಿತ ನಡೆಸಿದ್ದ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳಿಗೆ ಸೋಲುಣಿಸಿದೆ. ಈ ಮೂಲಕ ವಿಜಯ್ ಅವರು ತಮಿಳುನಾಡು ರಾಜಕೀಯದಲ್ಲಿ ಪೂರ್ಣ ಪ್ರಮಾಣದ ರಾಜಕಾರಣಿಯಾಗಿ ಹೊರಹೊಮ್ಮಿದ್ದು, ಇವರ ಒಟ್ಟು ಆಸ್ತಿ ಎಷ್ಟಿದೆ ? ಎನ್ನುವ ಕುರಿತು ವಿವರ ಇಲ್ಲಿದೆ.]]&gt;</description><dc:creator>&lt;![CDATA[ವಿದ್ಯಾ ಇರ್ವತ್ತೂರು]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ದೇಶ]]&gt;</category><category>&lt;![CDATA[ಚುನಾವಣೆ]]&gt;</category><category>&lt;![CDATA[ರಾಜಕೀಯ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/vijb.original.jpg" class="attachment-large size-large wp-post-image" alt="624 ಕೋಟಿ ರೂ. ಸಂಪತ್ತಿನ ಒಡೆಯ ನಟ, ರಾಜಕಾರಣಿ ದಳಪತಿ ವಿಜಯ್" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="dn6sl"&gt;&lt;b&gt;ಚೆನ್ನೈ:&lt;/b&gt; ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ (Tamilnadu assembly election) ನಟ ವಿಜಯ್ (Thalapathy Vijay) ಅವರ ತಮಿಳಗ ವೆಟ್ರಿ ಕಳಗಂ (Tamil Vetri Kalagam) ಪಕ್ಷವು 111 ಸ್ಥಾನಗಳಲ್ಲಿ ಮುನ್ನಡೆ (&lt;a href="/politics/minister-lakshmi-hebbalkar-respond-about-karnataka-by-elections-result-77214.html"&gt;Election Results 2026&lt;/a&gt;) ಸಾಧಿಸುವ ಮೂಲಕ ರಾಜ್ಯದ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಈ ಮೂಲಕ ರಾಜ್ಯದಲ್ಲಿ ದಶಕಗಳ ಕಾಲ ಆಡಳಿತ ನಡೆಸಿದ್ದ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳಿಗೆ ಸೋಲುಣಿಸಿ ತಮಿಳುನಾಡು ರಾಜಕೀಯದಲ್ಲಿ ಪೂರ್ಣ ಪ್ರಮಾಣದ ರಾಜಕಾರಣಿಯಾಗಿ ಹೊರಹೊಮ್ಮಿರುವ ನಟ ವಿಜಯ್ ಅವರು ಒಟ್ಟು 624 ಕೋಟಿ ರೂ. ಮೌಲ್ಯದ ಸಂಪತ್ತು ಹೊಂದಿದ್ದಾರೆ.&lt;/p&gt;&lt;p data-block-key="9fps9"&gt;ವಿಜಯ್ ಅವರು ಕಳೆದ ಮಾರ್ಚ್ ಅಂತ್ಯದಲ್ಲಿ ಸಲ್ಲಿಸಿರುವ ಚುನಾವಣಾ ಅಫಿಡವಿಟ್ ನಲ್ಲಿ 624 ಕೋಟಿ ರೂ. ನಿವ್ವಳ ಮೌಲ್ಯದ ಸಂಪತ್ತನ್ನು ಘೋಷಿಸಿದ್ದಾರೆ. ಅವರ ಆಸ್ತಿಗಳು ಹೆಚ್ಚಾಗಿ ಬ್ಯಾಂಕ್ ಠೇವಣಿ, ರಿಯಲ್ ಎಸ್ಟೇಟ್ ನಲ್ಲಿದೆ. ಸುಮಾರು 404 ಕೋಟಿ ರೂ. ಚರ ಆಸ್ತಿ ಮತ್ತು 220 ಕೋಟಿ ರೂ. ಮೌಲ್ಯದ ಸ್ಥಿರ ಆಸ್ತಿಗಳನ್ನು ಹೊಂದಿರುವುದಾಗಿ ಅವರು ತಿಳಿಸಿದ್ದಾರೆ.&lt;/p&gt;&lt;p data-block-key="1ss8e"&gt;&lt;a href="/movies/chiranjeevi-kamal-haasan-suriya-and-others-congratulate-thalapathy-vijay-for-tvk-win-in-tamilnadu-election-2026-77220.html"&gt;&lt;b&gt;ತಮಿಳುನಾಡು ರಾಜಕಾರಣದಲ್ಲಿ ʻಸೀಟಿʼ ಊದಿಕೊಂಡೇ ಸುನಾಮಿ ಎಬ್ಬಿಸಿದ ನಟ ವಿಜಯ್; ‌ʻದಳಪತಿʼ ಗೆಲುವಿಗೆ ಸಂಭ್ರಮಿಸಿದ ಚಿತ್ರರಂಗ&lt;/b&gt;&lt;/a&gt;&lt;/p&gt;&lt;p data-block-key="3cov8"&gt;ಸಾಲಿಗ್ರಾಮದಲ್ಲಿರುವ ಭಾರತೀಯ ಸಾಗರೋತ್ತರ ಬ್ಯಾಂಕ್ ನಲ್ಲಿರುವ ಒಂದೇ ಖಾತೆಯಲ್ಲಿ 213 ಕೋಟಿ ರೂ. ಗಳಿಗಿಂತ ಹೆಚ್ಚಿನ ಬ್ಯಾಲೆನ್ಸ್ ಹೊಂದಿರುವ ಅವರು 2024-25ನೇ ಹಣಕಾಸು ವರ್ಷದಲ್ಲಿ ಒಟ್ಟು 184.53 ಕೋಟಿ ರೂ. ಆದಾಯವನ್ನು ಘೋಷಿಸಿದ್ದರು.&lt;/p&gt;&lt;p data-block-key="9hech"&gt;ನಾಲ್ಕು ಬ್ಯಾಂಕುಗಳಲ್ಲಿ ಸ್ಥಿರ ಠೇವಣಿ ಹೊಂದಿರುವ ಅವರು ಇವುಗಳಲ್ಲಿ ಒಟ್ಟು 100 ಕೋಟಿ ರೂ. ಅನ್ನು ಹೊಂದಿದ್ದಾರೆ. ಇವುಗಳಲ್ಲಿ ಆಕ್ಸಿಸ್ ಬ್ಯಾಂಕಿನಲ್ಲಿ 40 ಕೋಟಿ ರೂ., ಇಂಡಿಯನ್ ಓವರ್‌ಸೀಸ್ ಬ್ಯಾಂಕಿನಲ್ಲಿ 25 ಕೋಟಿ ರೂ., ಎಚ್‌ಡಿಎಫ್‌ಸಿ ಬ್ಯಾಂಕಿನಲ್ಲಿ 20 ಕೋಟಿ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 15 ಕೋಟಿ ರೂ. ಇವೆ.&lt;/p&gt;&lt;p data-block-key="19fqo"&gt;ಜಯ ನಗರ ಪ್ರಾಪರ್ಟಿ ಪ್ರೈವೇಟ್ ಲಿಮಿಟೆಡ್‌ನಲ್ಲಿ ಸುಮಾರು 19.69 ಲಕ್ಷ ರೂ., ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ನ 9,600 ರೂ., ಸನ್ ಪೇಪರ್ ಮಿಲ್ ಲಿಮಿಟೆಡ್ ನ ರೂ. 25,000 ರೂ. ಮೌಲ್ಯದ ಷೇರುಗಳನ್ನು ಹೊಂಡಿರುವ ಅವರ ಷೇರು ಮಾರುಕಟ್ಟೆ ಮೌಲ್ಯ 20 ಲಕ್ಷ ರೂ. ಗಿಂತಲೂ ಕಡಿಮೆ ಇದೆ.&lt;/p&gt;&lt;p data-block-key="36t6m"&gt;ಸರಿಸುಮಾರು 220 ಕೋಟಿ ರೂ. ಗಳ ಸ್ಥಿರ ಆಸ್ತಿ ವಸತಿ, ವಾಣಿಜ್ಯ ಮತ್ತು ಕೃಷಿ ಆಸ್ತಿಗಳನ್ನು ಅವರು ಹೊಂದಿದ್ದಾರೆ. ಇವರ ಆದಾಯ ಮೂಲ ಮುಖ್ಯವಾಗಿ ಸ್ವ-ಉದ್ಯೋಗ, ಬಡ್ಡಿ, ಆಸ್ತಿಗಳ ಬಾಡಿಗೆ ಆದಾಯ ಸೇರಿದೆ.&lt;/p&gt;&lt;p data-block-key="45aap"&gt;ವಿಜಯ್ ಅವರು ಹೊಂದಿರುವ ವಾಹನಗಳಲ್ಲಿ 2024 ಟೊಯೋಟಾ ಲೆಕ್ಸಸ್ 350, 2024 ಬಿಎಂಡಬ್ಲ್ಯೂ ಐ7, 2024 ಟೊಯೋಟಾ ವೆಲ್‌ಫೈರ್, 2020 ಬಿಎಂಡಬ್ಲ್ಯೂ 530, 2024 ಮಾರುತಿ ಸ್ವಿಫ್ಟ್ ಮತ್ತು 2025 ಟಿವಿಎಸ್ ಎಕ್ಸ್‌ಎಲ್ ಸೂಪರ್ ಬೈಕ್ ಸೇರಿದೆ. ಒಟ್ಟು 1.2 ಕೋಟಿ ಮೌಲ್ಯದ 883 ಗ್ರಾಂ ಚಿನ್ನ ಮತ್ತು ಬೆಳ್ಳಿ ವಸ್ತುಗಳನ್ನು ಘೋಷಿಸಿಕೊಂಡಿರುವ ಅವರ ಪತ್ನಿ ಸಂಗೀತ ವಿಜಯ್‌ ಬಳಿ 12.6 ಕೋಟಿ ರೂ, ಮಕ್ಕಳಾದ ಜೇಸನ್ ಸಂಜಯ್‌ ಬಳಿ 8.78 ಲಕ್ಷ ರೂ ಮತ್ತು ದಿವ್ಯಾ ಸಾಶಾ ಬಳಿ 4.6 ಲಕ್ಷ ರೂ. ಮೌಲ್ಯದ ಚಿನ್ನಾಭರಣವಿರುವುದಾಗಿ ತಿಳಿಸಿದ್ದಾರೆ.&lt;/p&gt;&lt;p data-block-key="e3g7v"&gt;&lt;a href="/national/vijay-tamil-nadu-alliance-options-government-formation-77208.html"&gt;&lt;b&gt;ತಮಿಳುನಾಡು ರಾಜಕೀಯದಲ್ಲಿ ಸಂಚಲನ ಮೂಡಿಸಿದ ಟಿವಿಕೆಯ ವಿಜಯ್ ಮುಂದಿದೆ ಹಲವು ಆಯ್ಕೆಗಳು: ಯಾರ ಕೈಹಿಡಿಯಲಿದ್ದಾರೆ 'ಜನನಾಯಕ'?&lt;/b&gt;&lt;/a&gt;&lt;/p&gt;&lt;p data-block-key="5mnq4"&gt;ಇನ್ನು ವಿಜಯ್ ಅವಾರ್ಯ್ ಯಾವುದೇ ಸಾಲ ಹೊಂದಿಲ್ಲ. ಅವರ ಪತ್ನಿ ಸಂಗೀತಾ ಅವರು ಒಟ್ಟು 15.76 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. ಇದರಲ್ಲಿ 15.51 ಕೋಟಿ ರೂ. ಮೌಲ್ಯದ ಚರ ಆಸ್ತಿ ಮತ್ತು 25 ಲಕ್ಷ ರೂ. ಮೌಲ್ಯದ ಸ್ಥಿರ ಆಸ್ತಿ ಸೇರಿವೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>Assembly Election Result 2026: ಕೇರಳಂನಲ್ಲಿ ಇತಿಹಾಸ ಬರೆದ ಬಿಜೆಪಿ; ಇದೇ ಮೊದಲ ಬಾರಿಗೆ ಮೂರು ಕ್ಷೇತ್ರಗಳಲ್ಲಿ ಜಯಭೇರಿ</title><link>https://vishwavani.news/politics/kerala-assembly-election-2026-bjp-wins-three-seats-nemom-chathannoor-kazhakoottam-77228.html</link><guid>https://vishwavani.news/politics/kerala-assembly-election-2026-bjp-wins-three-seats-nemom-chathannoor-kazhakoottam-77228.html</guid><pubDate>Mon, 04 May 2026 15:42:19 +0000</pubDate><description>&lt;![CDATA[Assembly Election Result 2026: 2026ರ ಕೇರಳಂ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮೂರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ಇತಿಹಾಸ ನಿರ್ಮಿಸಿದೆ. ನೇಮಂ, ಚಾತನ್ನೂರು ಮತ್ತು ಕಳಕೂಟ್ಟಂ ಕ್ಷೇತ್ರಗಳಲ್ಲಿ ಕಮಲ ಅರಳಿದ್ದು, ರಾಜ್ಯ ರಾಜಕೀಯದಲ್ಲಿ ಮೂರನೇ ಶಕ್ತಿಯಾಗಿ ತನ್ನ ಅಸ್ತಿತ್ವವನ್ನು ಬಲಪಡಿಸಿದೆ. ಇದೇ ವೇಳೆ ಯುಡಿಎಫ್ ಭರ್ಜರಿ ಗೆಲುವು ಸಾಧಿಸಿ ಅಧಿಕಾರಕ್ಕೆ ಮರಳಿದ್ದು, ಎಲ್‌ಡಿಎಫ್‌ ಭಾರಿ ಸೋಲು ಕಂಡಿದೆ.]]&gt;</description><dc:creator>&lt;![CDATA[Sushmitha Jain]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ದೇಶ]]&gt;</category><category>&lt;![CDATA[ರಾಜಕೀಯ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/1000483376.original.png" class="attachment-large size-large wp-post-image" alt="Assembly Election Result 2026: ಕೇರಳಂನಲ್ಲಿ ಇತಿಹಾಸ ಬರೆದ ಬಿಜೆಪಿ; ಇದೇ ಮೊದಲ ಬಾರಿಗೆ ಮೂರು ಕ್ಷೇತ್ರಗಳಲ್ಲಿ ಜಯಭೇರಿ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="x1txz"&gt;&lt;b&gt;ತಿರುವನಂತಪುರಂ, ಮೇ 4:&lt;/b&gt; 2026ರ ಕೇರಳಂ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ಸಾಧನೆ ಮಾಡಿದ್ದು, ರಾಜ್ಯದ ಮೂರು ಪ್ರಮುಖ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ತನ್ನ ಅಸ್ತಿತ್ವವನ್ನು ಬಲಪಡಿಸಿಕೊಂಡಿದೆ. ಈ ಹಿಂದೆ ಕೇವಲ ಒಂದು ಬಾರಿ (2016ರಲ್ಲಿ ನೇಮಂ) ಮಾತ್ರ ಗೆಲುವು ಕಂಡಿದ್ದ ಬಿಜೆಪಿಗೆ, ಈ ಬಾರಿಯ ಫಲಿತಾಂಶವು ದೊಡ್ಡ ಬ್ರೇಕ್‌ಥ್ರೂ ನೀಡಿದೆ. ಎಲ್‌ಡಿಎಫ್ ಸರ್ಕಾರದ ವಿರುದ್ಧದ ಆಡಳಿತ ವಿರೋಧಿ ಅಲೆಯ ಲಾಭ ಪಡೆದ ಕೇಸರಿ ಪಡೆ, ಈ ಬಾರಿ ಮೂರು ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ.&lt;/p&gt;&lt;h3 data-block-key="7kk06"&gt;&lt;b&gt;ಗೆದ್ದ ಅಭ್ಯರ್ಥಿಗಳು ಮತ್ತು ಕ್ಷೇತ್ರಗಳು&lt;/b&gt;&lt;/h3&gt;&lt;p data-block-key="6mk1n"&gt;&lt;b&gt;ನೇಮಂ:&lt;/b&gt; ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಮತ್ತು ಮಾಜಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಸುಮಾರು 3,000ಕ್ಕೂ ಹೆಚ್ಚು ಮತಗಳ ಅಂತರದಿಂದ ಭರ್ಜರಿ ಜಯ ಸಾಧಿಸಿದ್ದಾರೆ. 2021ರಲ್ಲಿ ಕಳೆದುಕೊಂಡಿದ್ದ ಈ ಕ್ಷೇತ್ರವನ್ನು ಮರಳಿ ಪಡೆಯುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ನೇಮಂ ಕ್ಷೇತ್ರ ರಾಜ್ಯ ರಾಜಧಾನಿ ತಿರುವನಂತಪುರಂನಲ್ಲಿದೆ.&lt;/p&gt;&lt;p data-block-key="besbl"&gt;&lt;b&gt;ಚಾತನ್ನೂರು:&lt;/b&gt; ಬಿಜೆಪಿಯ ಬಿ.ಬಿ. ಗೋಪಕುಮಾರ್ ಸಿಪಿಐ ಅಭ್ಯರ್ಥಿ ಆರ್. ರಾಜೇಂದ್ರನ್ ಅವರ ವಿರುದ್ಧ 4,000ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದು ಅಚ್ಚರಿ ಮೂಡಿಸಿದ್ದಾರೆ. ಇದು ಕೊಲ್ಲಂ ಜಿಲ್ಲೆಯಲ್ಲಿ ಬಿಜೆಪಿ ಸಾಧಿಸಿದ ಮೊದಲ ಜಯವಾಗಿದೆ.&lt;/p&gt;&lt;p data-block-key="9mosf"&gt;&lt;b&gt;ಕಳಕೂಟ್ಟಂ:&lt;/b&gt; ಮಾಜಿ ಕೇಂದ್ರ ಸಚಿವ ವಿ. ಮುರಳೀಧರನ್ ಎಲ್‌ಡಿಎಫ್‌ನ ಕಡಕಂಪಳ್ಳಿ ಸುರೇಂದ್ರನ್ ವಿರುದ್ಧ ರೋಚಕ ಜಯ ಸಾಧಿಸಿದ್ದಾರೆ. ಕೇವಲ 200ಕ್ಕೂ ಹೆಚ್ಚು ಮತಗಳ ಅಂತರದಿಂದ ಈ ಗೆಲುವು ದಕ್ಕಿದೆ. ಇದು ಕೂಡ ತಿರುವನಂತಪುರಂ ಜಿಲ್ಲೆಯಲ್ಲಿದೆ.&lt;/p&gt;&lt;h3 data-block-key="an668"&gt;&lt;b&gt;ಇತರ ಪ್ರಮುಖ ಫಲಿತಾಂಶಗಳು&lt;/b&gt;&lt;/h3&gt;&lt;p data-block-key="8c5qf"&gt;ಪಾಲಕ್ಕಾಡ್‌ನಲ್ಲಿ ಬಿಜೆಪಿಯ ಶೋಭಾ ಸುರೇಂದ್ರನ್ ಕಾಂಗ್ರೆಸ್ ಅಭ್ಯರ್ಥಿ ಮತ್ತು ನಟ ರಮೇಶ್ ಪಡಿಶರೋಡಿ ವಿರುದ್ಧ ಸುಮಾರು 12,000 ಮತಗಳಿಂದ ಸೋಲನುಭವಿಸಿದ್ದಾರೆ. ಕಾಸರಗೋಡಿನಲ್ಲಿ ಬಿಜೆಪಿಯ ಎಂ.ಎಲ್. ಅಶ್ವಿನಿ ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದು, ಯುಡಿಎಫ್‌ನ ಕಳ್ಳತ್ರ ಮಹಿನ್ 22,000ಕ್ಕೂ ಹೆಚ್ಚು ಮತಗಳಿಂದ ಜಯಗಳಿಸಿದ್ದಾರೆ. ತಿರುವಲ್ಲಾ ಕ್ಷೇತ್ರದಲ್ಲಿ ಅನುಪ್ ಆಂಟನಿ ಆರಂಭಿಕ ಮುನ್ನಡೆ ಸಾಧಿಸಿದ್ದರೂ, ಅಂತಿಮವಾಗಿ ಯುಡಿಎಫ್‌ನ ವರ್ಗೀಸ್ ಮಾಮೆನ್ ಗೆಲುವು ಸಾಧಿಸಿದರು.&lt;/p&gt;&lt;p data-block-key="6ec8q"&gt;ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ 100ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಹತ್ತು ವರ್ಷಗಳ ನಂತರ ಅಧಿಕಾರಕ್ಕೆ ಮರಳಿದೆ. ಆಡಳಿತಾರೂಢ ಎಲ್‌ಡಿಎಫ್ ಹೀನಾಯ ಸೋಲು ಕಂಡಿದ್ದು, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಂಪುಟದ 13 ಸಚಿವರು ಈ ಚುನಾವಣೆಯಲ್ಲಿ ಪರಾಭವಗೊಂಡಿದ್ದಾರೆ. ಬಿಜೆಪಿಯ ಈ ಮೂರು ಸ್ಥಾನಗಳ ಗೆಲುವು ಕೇರಳದ ರಾಜಕೀಯ ಇತಿಹಾಸದಲ್ಲಿ ಹೊಸ ಸಂಚಲನ ಮೂಡಿಸಿದ್ದು, ಸಾಂಪ್ರದಾಯಿಕ ದ್ವಿಪಕ್ಷೀಯ ರಾಜಕಾರಣದ ನಡುವೆ ಮೂರನೇ ಶಕ್ತಿಯಾಗಿ ಬಿಜೆಪಿ ಬೆಳೆಯುತ್ತಿರುವುದಕ್ಕೆ ಸಾಕ್ಷಿ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>Kannada Sahitya Parishad: ಕನ್ನಡ ಸಾಹಿತ್ಯ ಪರಿಷತ್ತಿನ 112ನೇ ಸಂಸ್ಥಾಪನಾ ದಿನಾಚರಣೆ</title><link>https://vishwavani.news/karnataka/chikkaballapur/112th-foundation-day-of-kannada-sahitya-parishad-77235.html</link><guid>https://vishwavani.news/karnataka/chikkaballapur/112th-foundation-day-of-kannada-sahitya-parishad-77235.html</guid><pubDate>Mon, 04 May 2026 15:41:19 +0000</pubDate><description>&lt;![CDATA[ಕನ್ನಡ ಸಾಹಿತ್ಯ ಪರಿಷತ್ತು, ಚಿಕ್ಕಬಳ್ಳಾಪುರ ಜಿಲ್ಲೆ ಹಾಗೂ ತಾಲ್ಲೂಕು ಸಹಯೋಗದಲ್ಲಿ ಶಾಂತಿ ನಿಕೇತನ್ಸ್ ಪದವಿ ಪೂರ್ವ ಕಾಲೇಜು, ಚಿಕ್ಕಬಳ್ಳಾಪುರ ಇವರ ಸಂಯುಕ್ತಾ ಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ 112ನೇ ಸಂಸ್ಥಾಪನಾ ದಿನಾಚರಣೆಯನ್ನು ಮೇ 5 ರಂದು ಬೆಳಿಗ್ಗೆ 9.30 ಗಂಟೆಗೆ ನಗರದ ಶಾಂತಿನಿಕೇತನ್ಸ್ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದೆ.]]&gt;</description><dc:creator>&lt;![CDATA[Ashok Nayak]]&gt;</dc:creator><category>&lt;![CDATA[ಚಿಕ್ಕಬಳ್ಳಾಪುರ]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕರ್ನಾಟಕ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/KSP_ok.original.jpg" class="attachment-large size-large wp-post-image" alt="Kannada Sahitya Parishad: ಕನ್ನಡ ಸಾಹಿತ್ಯ ಪರಿಷತ್ತಿನ 112ನೇ ಸಂಸ್ಥಾಪನಾ ದಿನಾಚರಣೆ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="75mav"&gt;&lt;b&gt;ಚಿಕ್ಕಬಳ್ಳಾಪುರ : &lt;/b&gt;ಕನ್ನಡ ಸಾಹಿತ್ಯ ಪರಿಷತ್ತು(&lt;b&gt;Kannada Sahitya Parishad&lt;/b&gt;), ಚಿಕ್ಕಬಳ್ಳಾಪುರ ಜಿಲ್ಲೆ ಹಾಗೂ ತಾಲ್ಲೂಕು ಸಹಯೋಗದಲ್ಲಿ ಶಾಂತಿನಿಕೇತನ್ಸ್ ಪದವಿ ಪೂರ್ವ ಕಾಲೇಜು, ಚಿಕ್ಕಬಳ್ಳಾಪುರ ಇವರ ಸಂಯುಕ್ತಾ ಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ 112ನೇ ಸಂಸ್ಥಾಪನಾ ದಿನಾಚರಣೆ ಯನ್ನು ಮೇ 5 ರಂದು ಬೆಳಿಗ್ಗೆ 9.30 ಗಂಟೆಗೆ ನಗರದ ಶಾಂತಿನಿಕೇತನ್ಸ್ ಪದವಿ ಪೂರ್ವ ಕಾಲೇಜಿ ನಲ್ಲಿ ಆಯೋಜಿಸಲಾಗಿದೆ.&lt;/p&gt;&lt;p data-block-key="589s"&gt;ಜಿಲ್ಲಾಧಿಕಾರಿ ಜಿ.ಪ್ರಭು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದಾರೆ.&lt;/p&gt;&lt;p data-block-key="2efa2"&gt;ಮುಖ್ಯ ಅತಿಥಿಗಳಾಗಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಬಿ.ಕೆ ರವಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಸ್.ಎಸ್.ಮಹೇಶ್ ಕುಮಾರ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಅತಿಕ್ ಪಾಷಾ ರವರು ಭಾಗವಹಿಸಲಿದ್ದಾರೆ.&lt;/p&gt;&lt;p data-block-key="d67j5"&gt;ಅಧ್ಯಕ್ಷತೆಯನ್ನು ಶಾಂತಿನಿಕೇತನ್ ಪದವಿ ಪೂರ್ವ ಕಾಲೇಜಿನ ಸಂಸ್ಥಾಪಕ ಪ್ರಾಂಶುಪಾಲರಾದ ಡಾ.ಕುಮಾರ್. ವಿ.ಎನ್ ವಹಿಸಲಿದ್ದಾರೆ.&lt;/p&gt;&lt;p data-block-key="9loto"&gt;&lt;b&gt;ಇದನ್ನೂ ಓದಿ: &lt;/b&gt;&lt;a href="/karnataka/chikkaballapur/kannada-sahithya-parishad-2-28331.html"&gt;Kannada Sahithya Parishad: ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರೆಲ್ಲರ ಅಸ್ಮಿತೆ : ಜಿಲ್ಲಾಧ್ಯಕ್ಷ ಕೋಡಿರಂಗಪ್ಪ &lt;/a&gt;&lt;/p&gt;&lt;p data-block-key="finue"&gt;ಪ್ರಾಸ್ತಾವಿಕ ನುಡಿಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಕೋಡಿರಂಗಪ್ಪ ರವರು ನಡೆಸಿಕೊಡಲಿದ್ದಾರೆ.&lt;/p&gt;&lt;p data-block-key="1c9vf"&gt;ಪ್ರಬಂಧ ರಚನೆ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆಯನ್ನು ಚಿಕ್ಕಬಳ್ಳಾಪುರ ವಿಶ್ವವಿದ್ಯಾ ಲಯ ಶಿಕ್ಷಣ ಕಾಲೇಜಿನ ಡೀನ್ ಮತ್ತು ಪ್ರಾಂಶುಪಾಲರಾದ ಡಾ.ಜಿ.ಪಿ.ಬಾಹುಬಲಿ ನೆರವೇರಿಸ ಲಿದ್ದಾರೆ.&lt;/p&gt;&lt;p data-block-key="9m6ee"&gt;ಗೌರವ ಉಪಸ್ಥಿತಿಯನ್ನು 10ನೇ ಜಿಲ್ಲಾ ಸಮ್ಮೇಳನದ ಸರ್ವಾಧ್ಯಕ್ಷರಾದ ಗೋಪಾಲಗೌಡ ಕಲ್ವಮಂಜಲಿ, ಜಿಲ್ಲಾ ಕ.ಸಾ.ಪ. ಗೌರವ ಕೋಶಾಧ್ಯಕ್ಷರಾದ ಎಂ ಚನ್ನಮಲ್ಲಿಕಾರ್ಜುನಯ್ಯ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ರವಿಕುಮಾರ್, ಜಿ.ಕಾ, ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಕಾಗತಿ ನಾಗರಾಜಪ್ಪ, ಚಿಕ್ಕಬಳ್ಳಾಪುರ ತಾಲ್ಲೂಕು ಕ.ಸಾ.ಪ.ಅಧ್ಯಕ್ಷರಾದ ಯಲುವಹಳ್ಳಿ ಸೊಣ್ಣೇಗೌಡ, ಜಿಲ್ಲಾ ಕಾರ್ಯಕಾರಿ ಸಮಿತಿ ಸು ದಾ. ವೆಂಕಟೇಶ್, ಶಿಡ್ಲಘಟ್ಟ ತಾಲ್ಲೂಕು ಕ.ಸಾ.ಪ. ಅಧ್ಯಕ್ಷರು ಪಟೇಲ್ ನಾರಾಯಣಸ್ವಾಮಿ, ವಿಶ್ವವಿದ್ಯಾಲಯ ಶಿಕ್ಷಣ ಕಾಲೇಜಿನ ಸಹ ಪ್ರಾಧ್ಯಾಪಕರಾದ ಡಾ. ಎಂ. ಶಂಕರ್, ಜಿಲ್ಲಾ ಕ.ಸಾ.ಪ. ಸಮಿತಿ ಸದಸ್ಯರಾದ ಕಲಾ ನಾಗರಾಜ್, ಮಂಚನಬಲೆ ಶ್ರೀನಿವಾಸ್, ನಂದಿ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಮೀರಾ, ಜಿಲ್ಲಾ ಕ.ಸಾ.ಪ ಗೌರವ ಜಂಟಿ ಕಾರ್ಯದರ್ಶಿಗಳಾದ ಟಿ.ವಿ. ಚಂದ್ರಶೇಖರ್, ಪಾ.ಮು.ಚಲಪತಿಗೌಡ, ಎಸ್.ಎನ್.ಅಮೃತ್ ಕುಮಾರ್, ತಾಲ್ಲೂಕು ಕ.ಸಾ.ಪ ಗೌರವ ಕಾರ್ಯದರ್ಶಿ ಕೆ.ಎಂ.ರೆಡ್ಡಪ್ಪ ಭಾಗವಹಿಸಲಿದ್ದಾರೆ.&lt;/p&gt;&lt;p data-block-key="60civ"&gt;ಕಾರ್ಯಕ್ರಮ ನಿರ್ವಹಣೆಯನ್ನು ಜಿಲ್ಲಾ ಕ.ಸಾ.ಪ ಗೌರವ ಜಂಟಿ ಕಾರ್ಯದರ್ಶಿಗಳಾದ ಎಸ್. ಸತೀಶ್ ನೆರವೇರಿಸಲಿದ್ದಾರೆ.&lt;/p&gt;&lt;p data-block-key="8poto"&gt;ಚಿಕ್ಕಬಳ್ಳಾಪುರ ಜಿಲ್ಲೆ ಮತ್ತು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕಗಳ ಕಾರ್ಯಕಾರಿ ಸದಸ್ಯರುಗಳು ಭಾಗವಹಿಸಲಿದ್ದಾರೆ. &lt;/p&gt;
&lt;/div&gt;
&lt;/p&gt;]]&gt;</content:encoded></item><item><title>Tamil Nadu Election: ದಳಪತಿ ವಿಜಯ್‌ಗೆ ವಿಶೇಷ ಸಂದೇಶ ರವಾನಿಸಿದ ವರುಣ್‌ ಚಕ್ರವರ್ತಿ!</title><link>https://vishwavani.news/sports/cricket/kkr-star-varun-chakravarthy-sends-special-message-as-vijay-and-tvk-sweep-tamil-nadu-election-77234.html</link><guid>https://vishwavani.news/sports/cricket/kkr-star-varun-chakravarthy-sends-special-message-as-vijay-and-tvk-sweep-tamil-nadu-election-77234.html</guid><pubDate>Mon, 04 May 2026 15:34:28 +0000</pubDate><description>&lt;![CDATA[Varun Chakravarthy: ಕೋಲ್ಕತಾ ನೈಟ್ ರೈಡರ್ಸ್ ಸ್ಪಿನ್ನರ್ ವರುಣ್ ಚಕ್ರವರ್ತಿ ಸಾಮಾಜಿಕ ಜಾಲತಾಣಗಳ ಮೂಲಕ ವಿಶೇಷ ಸಂದೇಶ ಹಂಚಿಕೊಂಡಿದ್ದಾರೆ. ತಮಿಳುನಾಡು ಚುನಾವಣೆಯಲ್ಲಿ ನಟ ವಿಜಯ್ ಮತ್ತು ಅವರ ರಾಜಕೀಯ ಪಕ್ಷ ‘ತಮಿಳಗ ವೆಟ್ರಿ ಕಳಗಂ’ (ಟಿವಿಕೆ) ಭರ್ಜರಿ ಜಯ ಸಾಧಿಸಿದ ಹಿನ್ನೆಲೆಯಲ್ಲಿ ಅವರು ಅಭಿನಂದನೆಗಳನ್ನು ತಿಳಿಸಿದ್ದಾರೆ.]]&gt;</description><dc:creator>&lt;![CDATA[Ramesh Kote]]&gt;</dc:creator><category>&lt;![CDATA[ಕ್ರಿಕೆಟ್‌]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕ್ರೀಡೆ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Varun_Chakravarthy-Vijay.original.jpg" class="attachment-large size-large wp-post-image" alt="Tamil Nadu Election: ದಳಪತಿ ವಿಜಯ್‌ಗೆ ವಿಶೇಷ ಸಂದೇಶ ರವಾನಿಸಿದ ವರುಣ್‌ ಚಕ್ರವರ್ತಿ!" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="xeghs"&gt;&lt;b&gt;ನವದೆಹಲಿ:&lt;/b&gt; ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ ವಿಜಯ್ ಹಾಗೂ ಅವರ ರಾಜಕೀಯ ಪಕ್ಷ ‘ತಮಿಳಗ ವೆಟ್ರಿ ಕಳಗಂ’ (TVK) ಭರ್ಜರಿ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡದ ಸ್ಪಿನ್ನರ್ ವರುಣ್ ಚಕ್ರವರ್ತಿ (Varun Chakravarthy) ಸಾಮಾಜಿಕ ಜಾಲತಾಣಗಳಲ್ಲಿ ವಿಶೇಷ ಸಂದೇಶ ಹಂಚಿಕೊಂಡಿದ್ದಾರೆ. ಟಿವಿಕೆ ಪಕ್ಷವು 100ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಹೇಳಲಾಗುತ್ತಿದ್ದು, ವಿಜಯ್ (Vijay) ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗುವ ಸಾಧ್ಯತೆ ಹೆಚ್ಚಿದೆ.&lt;/p&gt;&lt;p data-block-key="202r8"&gt;ವರುಣ್ ಚಕ್ರವರ್ತಿ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ವಿಜಯ್ ಅವರೊಂದಿಗೆ ತೆಗೆಸಿಕೊಂಡ ಹಳೆಯ ಫೋಟೋವನ್ನು ಹಂಚಿಕೊಂಡು “ಅಣ್ಣ” ಎಂಬ ಶೀರ್ಷಿಕೆಯನ್ನು ನೀಡಿದ್ದಾರೆ. ಭಾರತೀಯ ಕ್ರಿಕೆಟ್ ತಂಡದ ಸ್ಪಿನ್ನರ್ ಆಗಿರುವ ವರುಣ್ ಚಕ್ರವರ್ತಿ, ತಾವು ವಿಜಯ್ ಹಾಗೂ ಖ್ಯಾತ ನಟ ರಜನಿಕಾಂತ್ ಅವರ ಅಭಿಮಾನಿ ಎಂಬುದನ್ನು ಈ ಹಿಂದೆ ಬಹಿರಂಗಪಡಿಸಿದ್ದರು.&lt;/p&gt;&lt;p data-block-key="8unnj"&gt;&lt;a href="/national/vijays-father-talk-about-tvks-landmark-win-what-he-said-77182.html"&gt;&lt;b&gt;"ಇಡೀ ತಮಿಳುನಾಡಿಗೇ ಆತ ಮಗ ಇದ್ದಂತೆ"; ಟಿವಿಕೆ ಗೆಲುವಿನ ಬಳಿಕ ವಿಜಯ್‌ ತಂದೆ ಹೇಳಿದ್ದೇನು?&lt;/b&gt;&lt;/a&gt;&lt;/p&gt;&lt;h3 data-block-key="91k26"&gt;&lt;b&gt;ಇನ್‌ಸ್ಟಾಗ್ರಾಮ್‌ನಲ್ಲಿ ವರುಣ್ ಏನು ಪೋಸ್ಟ್ ಮಾಡಿದ್ದಾರೆ?&lt;/b&gt;&lt;/h3&gt;&lt;p data-block-key="dvde1"&gt;ಭಾರತದ ಸ್ಪಿನ್ನರ್ ವರುಣ್ ಚಕ್ರವರ್ತಿ, ಜನಪ್ರಿಯ ಸಾಮಾಜಿಕ ಮಾಧ್ಯಮ ವೇದಿಕೆಯಾದ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ವಿಜಯ್ ಜೊತೆಗಿನ ಹಳೆಯ ಫೋಟೋವನ್ನು ಹಂಚಿಕೊಂಡಿದ್ದಾರೆ ಮತ್ತು ಅದಕ್ಕೆ "ಅಣ್ಣಾ" (ಅಂದರೆ 'ಅಣ್ಣ' ಎಂದರ್ಥ) ಎಂದು ಶೀರ್ಷಿಕೆ ನೀಡಿದ್ದಾರೆ. ಭಾರತೀಯ ಕ್ರಿಕೆಟಿಗ ವರುಣ್ ಚಕ್ರವರ್ತಿ ಈ ಹಿಂದೆ ವಿಜಯ್ ಮತ್ತು ದಂತಕಥೆಯ ನಟ ರಜನಿಕಾಂತ್ ಅವರ ದೊಡ್ಡ ಅಭಿಮಾನಿ ಎಂದು ಹೇಳಿಕೊಂಡಿದ್ದಾರೆ.&lt;/p&gt;&lt;p data-block-key="7hn78"&gt;&lt;/p&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="twitter-tweet"&gt;&lt;p lang="hi" dir="ltr"&gt;Instagram story of Varun Chakaravarthy for Thalapathy Vijay.  &lt;a href="https://t.co/KvRJETiga8"&gt;pic.twitter.com/KvRJETiga8&lt;/a&gt;&lt;/p&gt;&amp;mdash; Johns. (@CricCrazyJohns) &lt;a href="https://twitter.com/CricCrazyJohns/status/2051258964218978371?ref_src=twsrc%5Etfw"&gt;May 4, 2026&lt;/a&gt;&lt;/blockquote&gt; &lt;script async src="https://platform.twitter.com/widgets.js" charset="utf-8"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="3287t"&gt;&lt;/p&gt;&lt;h3 data-block-key="13ebq"&gt;&lt;b&gt;ಎಸ್‌ಆರ್‌ಎಚ್‌ ವಿರುದ್ಧ ಪಂದ್ಯ ಶ್ರೇಷ್ಠ ಪ್ರಶಸ್ತಿ&lt;/b&gt;&lt;/h3&gt;&lt;p data-block-key="bqhv6"&gt;ಮೇ 3 ರಂದು ನಡೆದಿದ್ದ 2026ರ ಐಪಿಎಲ್ ಟೂರ್ನಿಯ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಹೈದರಾಬಾದ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಕಾದಾಟ ನಡೆಸಿತ್ತು. ಈ ಪಂದ್ಯವನ್ನು ಕೋಲ್ಕತ್ತಾ 7 ವಿಕೆಟ್‌ಗಳಿಂದ ಗೆದ್ದುಕೊಂಡಿತು. ಈ ಪಂದ್ಯದಲ್ಲಿ ವರುಣ್ ಚಕ್ರವರ್ತಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿ 36 ರನ್‌ಗಳಿಗೆ 3 ವಿಕೆಟ್‌ಗಳನ್ನು ಕಬಳಿಸಿದ್ದರು. ಇದಕ್ಕಾಗಿ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಲಾಗಿತ್ತು.&lt;/p&gt;&lt;p data-block-key="b9pho"&gt;ವರುಣ್ ಚಕ್ರವರ್ತಿ ತಮ್ಮ 4 ಓವರ್‌ಗಳ ಸ್ಪೆಲ್‌ನಲ್ಲಿ 36 ರನ್‌ಗಳಿಗೆ 3 ವಿಕೆಟ್‌ಗಳನ್ನು ಕಬಳಿಸಿದರು. ಅವರು ಟ್ರಾವಿಸ್ ಹೆಡ್, ಸ್ಮರಣ್‌ ರವಿಚಂದ್ರನ್ ಮತ್ತು ಅನಿಕೇತ್ ವರ್ಮಾ ಅವರನ್ನು ಔಟ್ ಮಾಡಿದ್ದರು. ಗಮನಾರ್ಹವಾಗಿ, ಕೋಲ್ಕತಾ ನೈಟ್ ರೈಡರ್ಸ್ ಐಪಿಎಲ್‌ ಟೂರ್ನಿಯಲ್ಲಿ ಸತತ ಮೂರು ಪಂದ್ಯಗಳನ್ನು ಗೆದ್ದಿದೆ. ಕೆಕೆಆರ್‌ ತಂಡದ ಮುಂದಿನ ಪಂದ್ಯ ಮೇ 8 ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆಯಲಿದೆ.&lt;/p&gt;&lt;p data-block-key="7hrnd"&gt;&lt;/p&gt;
&lt;/div&gt;

    
&lt;div class="article-paragraph"&gt;
    &lt;p data-block-key="3optv"&gt;&lt;a href="/sports/cricket/ajinkya-rahane-names-kkrs-game-changer-as-team-registers-3-consecutive-wins-77212.html"&gt;&lt;b&gt;IPL 2026: ಕಳೆದ 3 ಪಂದ್ಯಗಳಲ್ಲಿ ಕೆಕೆಆರ್‌ಗೆ ಗೇಮ್‌ ಚೇಂಜರ್‌ ಯಾರೆಂದು ತಿಳಿಸಿದ ಅಜಿಂಕ್ಯ ರಹಾನೆ!&lt;/b&gt;&lt;/a&gt;&lt;/p&gt;&lt;p data-block-key="9m1iu"&gt;34ರ ಪ್ರಾಯದ ವರುಣ್ ಚಕ್ರವರ್ತಿ 2019 ರಲ್ಲಿ ಐಪಿಎಲ್‌ ಟೂರ್ನಿಗೆ ಪದಾರ್ಪಣೆ ಮಾಡಿದ್ದರು. ಅಂದಿನಿಂದ, ಅವರು ಐಪಿಎಲ್‌ ಟೂರ್ನಿಯಲ್ಲಿ ಆಡಿದ 91 ಪಂದ್ಯಗಳನ್ನು ಆಡಿದ್ದಾರೆ ಮತ್ತು 110 ವಿಕೆಟ್‌ಗಳನ್ನು ಪಡೆದಿದ್ದಾರೆ. ಕೆಕೆಆರ್ ಜೊತೆಗೆ ಅವರು ಪಂಜಾಬ್ ಕಿಂಗ್ಸ್‌ ಪರ ಕೂಡ ಆಡಿದ್ದಾರೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಶ್ರೀನಿವಾಸ ಸಾಗರದಲ್ಲಿ ಮುಳುಗಿ 12 ವರ್ಷದ ಪ್ರವಾಸಿ ಸಬಿಹಾ ಸಾವು</title><link>https://vishwavani.news/crime/12-year-old-tourist-sabiha-dies-after-drowning-in-srinivasa-sagar-77233.html</link><guid>https://vishwavani.news/crime/12-year-old-tourist-sabiha-dies-after-drowning-in-srinivasa-sagar-77233.html</guid><pubDate>Mon, 04 May 2026 15:30:47 +0000</pubDate><description>&lt;![CDATA[ಗದಗ್ ಜಿಲ್ಲೆ ಶಿರಹಟ್ಟಿ ತಾಲೂಕಿನಿಂದ ಆಗಮಿಸಿದ್ದ ಹಜರತ್ ಅಲಿ ಮಾತನಾಡಿ ನಾವು 15 ಮಂದಿ ಚಿಂತಾಮಣಿ ತಾಲೂಕಿನ ಪುರಾಣಪ್ರಸಿದ್ಧ ಸ್ಥಳಗಳನ್ನು ನೋಡಿಕೊಂಡು ಹೋಗಲು ಪ್ರವಾಸಕ್ಕೆ ಬಂದಿದ್ದೆವು. ಇದೇ ವೇಳೆ ಹತ್ತಿರದಲ್ಲಿ ಯಾವುದಾದರೂ ಜಲಾಶಯಗಳಿಗೆ ಭೇಟಿ ನೀಡೋಣ ಎಂದು ಹೆಣ್ಣು ಮಕ್ಕಳು ಒತ್ತಾಯ ಮಾಡಿದರು.]]&gt;</description><dc:creator>&lt;![CDATA[Ashok Nayak]]&gt;</dc:creator><category>&lt;![CDATA[ಚಿಕ್ಕಬಳ್ಳಾಪುರ]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕರ್ನಾಟಕ]]&gt;</category><category>&lt;![CDATA[ಕ್ರೈಂ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/drowned.original.jpg" class="attachment-large size-large wp-post-image" alt="ಶ್ರೀನಿವಾಸ ಸಾಗರದಲ್ಲಿ ಮುಳುಗಿ 12 ವರ್ಷದ ಪ್ರವಾಸಿ ಸಬಿಹಾ ಸಾವು" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="42o1k"&gt;&lt;b&gt;ಚಿಕ್ಕಬಳ್ಳಾಪುರ: &lt;/b&gt;ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕು ತಳದ ಗ್ರಾಮದ ವಾಸಿ 12 ವರ್ಷದ ಸಬಿಹಾ ಶ್ರೀನಿವಾಸ ಸಾಗರದಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ. ತಾಲೂಕಿನ ಶ್ರೀನಿವಾಸ ಸಾಗರಕ್ಕೆ ದೂರದ ಗದಗ ಹಾವೇರಿ ಜಿಲ್ಲೆಯಿಂದ ಪ್ರವಾಸಕ್ಕೆಂದು ಬಂದಿದ್ದ 10 ಮಂದಿ ಪ್ರವಾಸಿಗರ ಪೈಕಿ 12 ವರ್ಷದ ಸಬೀಹಾ ಈಜಾಡುತ್ತಾ ಆಳದ ಮಡುವಿಗೆ ಇಳಿದಾಗ ಈ ಸಾವು ಸಂಭವಿಸಿದೆ.&lt;/p&gt;&lt;p data-block-key="3ch18"&gt;&lt;b&gt;ಇದನ್ನೂ ಓದಿ: &lt;/b&gt;&lt;a href="/crime/bengaluru-crime-news-husband-killed-wife-and-took-his-life-by-hanging-76112.html"&gt;Bengaluru Crime news: ಬೆಂಗಳೂರಿನ ಮನೆಯಲ್ಲಿ ದಂಪತಿ ಶವಗಳು ಪತ್ತೆ; ಕೊಲೆ ಮಾಡಿ ಆತ್ಮಹತ್ಯೆ ಶಂಕೆ&lt;/a&gt;&lt;/p&gt;&lt;p data-block-key="7821e"&gt;ಗದಗ್ ಜಿಲ್ಲೆ ಶಿರಹಟ್ಟಿ ತಾಲೂಕಿನಿಂದ ಆಗಮಿಸಿದ್ದ ಹಜರತ್ ಅಲಿ ಮಾತನಾಡಿ, ನಾವು 15 ಮಂದಿ ಚಿಂತಾಮಣಿ ತಾಲೂಕಿನ ಪುರಾಣಪ್ರಸಿದ್ಧ ಸ್ಥಳಗಳನ್ನು ನೋಡಿಕೊಂಡು ಹೋಗಲು ಪ್ರವಾಸಕ್ಕೆ ಬಂದಿದ್ದೆವು.ಇದೇ ವೇಳೆ ಹತ್ತಿರದಲ್ಲಿ ಯಾವುದಾದರೂ ಜಲಾಶಯಗಳಿಗೆ ಭೇಟಿ ನೀಡೋಣ ಎಂದು ಹೆಣ್ಣು ಮಕ್ಕಳು ಒತ್ತಾಯ ಮಾಡಿದರು. ಆಗ ಗೂಗಲ್‌ನಲ್ಲಿ ಹುಡುಕಾಟ ಮಾಡಿದಾಗ ಶ್ರೀನಿವಾಸ ಸಾಗರದ ಮಾಹಿತಿ ಪಡೆದು ಇಲ್ಲಿಗೆ ಬಂದೆವು. ಬಿಸಿಲು ಹೆಚ್ಚಿದ್ದ ಕಾರಣ ನೀರಲ್ಲಿ ಈಜಾಡಲು ತೆರಳಿ ದಾಗ ಈ ಅವಘಡ ನಡೆದಿದೆ. ಮೂರು ಮಂದಿ ಹೆಣ್ಣುಮಕ್ಕಳನ್ನು ನಾನು ಕಾಪಾಡಿದೆ. ಆದರೆ ಈ ಸಬಿಹಾ ಎಂಬ ಹೆಣ್ಣು ಮಗಳನ್ನು ಕಾಪಾಡಲು ಆಗಲಿಲ್ಲ ಎಂದು ದುಃಖಿತರಾದರು.&lt;/p&gt;&lt;p data-block-key="1c8p6"&gt;ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿಯ ಹುಡುಕಾಟದ ನಂತರ ನೀರಿನಲ್ಲಿ ಮುಳುಗಿದ್ದ ಸಬಿಹಾಳ ಮೃತದೇಹ ಪತ್ತೆಯಾಗಿದೆ. ಈವೇಳೆ ಸಬಿಹಾ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. &lt;/p&gt;
&lt;/div&gt;
&lt;/p&gt;]]&gt;</content:encoded></item><item><title>Chikkaballapur News: ಕುಡಿಯುವ ನೀರಿನ ಪೂರೈಕೆ ಕೆಲಸವನ್ನು ಮೊದಲ ಆದ್ಯತೆಯಾಗಿ ಮಾಡಬೇಕು: ಜಿಲ್ಲಾಧಿಕಾರಿ ಜಿ.ಪ್ರಭು ತಾಕೀತು</title><link>https://vishwavani.news/karnataka/chikkaballapur/drinking-water-supply-work-should-be-made-a-top-priority-district-collector-g-prabhu-urges-77232.html</link><guid>https://vishwavani.news/karnataka/chikkaballapur/drinking-water-supply-work-should-be-made-a-top-priority-district-collector-g-prabhu-urges-77232.html</guid><pubDate>Mon, 04 May 2026 15:17:25 +0000</pubDate><description>&lt;![CDATA[ಜಿಲ್ಲೆಯ 32 ಗ್ರಾಮಗಳು, 12 ವಾರ್ಡ್ಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು ಮುಂದಿನ ದಿನಗಳಲ್ಲಿ 107 ಗ್ರಾಮಗಳಲ್ಲಿ 20 ವಾರ್ಡ್ಗಳಲ್ಲಿ ಸಮಸ್ಯೆ ಎದುರಾಗಬಹುದು. ಹೀಗಾಗಿ ಕುಡಿಯುವ ನೀರಿನ ಪೂರೈಕೆಯ ಕಾರ್ಯಗಳನ್ನು ಮೊದಲ ಆದ್ಯತೆಯಾಗಿ ಪರಿಗಣಿಸಿ ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸಲು ತಹಸೀಲ್ದಾರ್, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿಗಳು, ಸ್ಥಳೀಯಾ ಡಳಿತ ಸಂಸ್ಥೆಗಳ ಮುಖ್ಯಸ್ಥರಿಗೆ ಜಿಲ್ಲಾಧಿಕಾರಿಗಳು ಕ್ರಮ ವಹಿಸಲು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು.]]&gt;</description><dc:creator>&lt;![CDATA[Ashok Nayak]]&gt;</dc:creator><category>&lt;![CDATA[ಚಿಕ್ಕಬಳ್ಳಾಪುರ]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕರ್ನಾಟಕ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/2k.original.jpg" class="attachment-large size-large wp-post-image" alt="Chikkaballapur News: ಕುಡಿಯುವ ನೀರಿನ ಪೂರೈಕೆ ಕೆಲಸವನ್ನು ಮೊದಲ ಆದ್ಯತೆಯಾಗಿ ಮಾಡಬೇಕು: ಜಿಲ್ಲಾಧಿಕಾರಿ ಜಿ.ಪ್ರಭು ತಾಕೀತು" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="tkzkh"&gt;&lt;b&gt;ಚಿಕ್ಕಬಳ್ಳಾಪುರ: &lt;/b&gt;ಕುಡಿಯುವ ನೀರಿನ ಪೂರೈಕೆಯ ಕೆಲಸ ಕಾರ್ಯಗಳನ್ನು ಮೊದಲ ಆದ್ಯತೆಯ ಕೆಲಸಗಳೆಂದು ಪರಿಗಣಿಸಿ ಅಭಿಯಾನದ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಪ್ರಭು ತಿಳಿಸಿದರು.&lt;/p&gt;&lt;p data-block-key="340da"&gt;ನಗರ ಹೊರವಲಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ "ಜಿಲ್ಲಾ ಮಟ್ಟದ ವಿಪತ್ತು ನಿರ್ವಹಣಾ ಸಮಿತಿ ಸಭೆ"ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.&lt;/p&gt;&lt;p data-block-key="ad8qm"&gt;ಜಿಲ್ಲೆಯ 32 ಗ್ರಾಮಗಳು, 12 ವಾರ್ಡ್ಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು ಮುಂದಿನ ದಿನ ಗಳಲ್ಲಿ 107 ಗ್ರಾಮಗಳಲ್ಲಿ 20 ವಾರ್ಡ್ಗಳಲ್ಲಿ ಸಮಸ್ಯೆ ಎದುರಾಗಬಹುದು. ಹೀಗಾಗಿ ಕುಡಿಯುವ ನೀರಿನ ಪೂರೈಕೆಯ ಕಾರ್ಯಗಳನ್ನು ಮೊದಲ ಆದ್ಯತೆಯಾಗಿ ಪರಿಗಣಿಸಿ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಲು ತಹಸೀಲ್ದಾರ್, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿಗಳು, ಸ್ಥಳೀಯಾಡಳಿತ ಸಂಸ್ಥೆಗಳ ಮುಖ್ಯಸ್ಥರಿಗೆ ಜಿಲ್ಲಾಧಿಕಾರಿಗಳು ಕ್ರಮ ವಹಿಸಲು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು.&lt;/p&gt;&lt;p data-block-key="fevcm"&gt;&lt;b&gt;ಇದನ್ನೂ ಓದಿ: &lt;/b&gt;&lt;a href="/karnataka/chikkaballapur/summer-camps-are-helpful-in-developing-creativity-skills-and-personality-in-children-during-the-vacation-period-pdo-lokesh-77045.html"&gt;Chikkaballapur News: ಬೇಸಿಗೆ ಶಿಬಿರಗಳು ರಜಾ ಅವಧಿಯಲ್ಲಿ ಮಕ್ಕಳಲ್ಲಿ ಸೃಜನಶೀಲತೆ, ಕೌಶಲ್ಯ, ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿ : ಪಿಡಿಒ ಲೋಕೇಶ್ ಬಣ್ಣನೆ&lt;/a&gt;&lt;/p&gt;&lt;p data-block-key="7vd41"&gt;&lt;b&gt;ನೋಡಲ್ ಅಧಿಕಾರಿಗಳಿಗೆ ಹೊಣೆ&lt;/b&gt;&lt;/p&gt;&lt;p data-block-key="dei88"&gt;ಕುಡಿಯುವ ನೀರಿನ ಸಮಸ್ಯೆ ಎದುರಾಗಿರುವ ಹೋಬಳಿಗಳಿಗೆ ಒಬ್ಬ ಜಿಲ್ಲಾ ಮಟ್ಟದ ಅಧಿಕಾರಿ ಯನ್ನು ನೇಮಕ ಮಾಡಲಾಗಿದೆ. ಈ ರೀತಿ ನಿಯೋಜನೆ ಆಗಿರುವ ನೋಡಲ್ ಅಧಿಕಾರಿಗಳು ತಮ್ಮ ಕಾರ್ಯ ವ್ಯಾಪ್ತಿಯ ಗ್ರಾಮಗಳಿಗೆ ವಾರಕ್ಕೆ ಒಂದೆರಡು ಬಾರಿ ಖುದ್ದಾಗಿ ಭೇಟಿ ನೀಡಬೇಕು. ಯಾವ ಯಾವ ಗ್ರಾಮಗಳಿಗೆ ಯಾವ ರೀತಿ ನೀರು ಪೂರೈಸಲಾಗುತ್ತಿದೆ. ಖಾಸಗಿ ಕೊಳವೆ ಬಾವಿಗಳು ಎಷ್ಟಿವೆ. ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆಯೇ ಎಂಬುದನ್ನು ಕೂಲಂಕಷವಾಗಿ ಪರಿಶೀಲಿಸ ಬೇಕು ಎಮದು ತಾಕೀತು ಮಾಡಿದರು.&lt;/p&gt;&lt;p data-block-key="1f6vg"&gt;&lt;b&gt;24 ಗಂಟೆ ಕೆಲಸ ಮಾಡಬೇಕು!!&lt;/b&gt;&lt;/p&gt;&lt;p data-block-key="18mpd"&gt;ಒಂದು ವೇಳೆ ಕುಡಿಯುವ ನೀರಿನ ಸಮಸ್ಯೆಯ ಬೀಕರತೆ ಹೆಚ್ಚಾದಲ್ಲಿ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದಾಗಿ ಪೂರ್ವ ಯೋಜಿತವಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳ ಬೇಕು. ಸ್ಥಳೀಯ ಜಲಗಾರರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ತಹಸೀಲ್ದಾರವರೊಂದಿಗೆ ಸಮಲೋಚಿಸಿ ನೀರಿನ ಪೂರೈಕೆ ಯಲ್ಲಿ ವ್ಯತ್ಯಯ ಆಗದಂತೆ ಕ್ರಮವಹಿಸಬೇಕು. ಹೊಸದಾಗಿ ನೀರಿನ ಸಮಸ್ಯೆ ಯಾವುದೇ ಗ್ರಾಮ ದಲ್ಲಿ ಎದುರಾದಲ್ಲಿ 24 ಗಂಟೆಯ ಒಳಗಾಗಿ ಪರಿಹರಿಸುವಂತೆ ಸನ್ನದ್ದರಾಗಿರಬೇಕು. ಜೊತೆಗೆ ತಮ್ಮ ಕಾರ್ಯ ವ್ಯಾಪ್ತಿಯ ಗ್ರಾಮಗಳಲ್ಲಿರುವ ಶುದ್ದ ನೀರಿನ ಘಟಕಗಳೆಷ್ಟು, ಅದರಲ್ಲಿ ಕಾರ್ಯ ನಿರ್ವಹಣೆಯಲ್ಲಿರುವುದು ಎಷ್ಟು ಮತ್ತು ರಿಪೇರಿಗೆ ಬಂದಿರುವುದು ಎಷ್ಟು ಎಂಬುದರ ಬಗ್ಗೆ ಮಾಹಿತಿ ಪಡೆದು ತಿಳಿಸಬೇಕು ಎಂದು ನೋಡಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು.&lt;/p&gt;
&lt;/div&gt;

    
&lt;figure class="article-image text-center mb-4"&gt;
    &lt;img alt="drinking water dc" class="img-fluid" height="720" src="https://cdn.vishwavani.news/media/images/drinking_water_dc.max-1280x720.format-webp.webp" width="1280"&gt;
    
&lt;/figure&gt;

    
&lt;div class="article-paragraph"&gt;
    &lt;p data-block-key="arj4o"&gt;&lt;b&gt;ಅಸಡ್ಡೆ ಸಹಿಸುವುದಿಲ್ಲ?&lt;/b&gt;&lt;/p&gt;&lt;p data-block-key="9pe5j"&gt;ನಗರ ಪ್ರದೇಶದ ವಾರ್ಡ್ಗಳ ವ್ಯಾಪ್ತಿಯಲ್ಲಿ ಪ್ರತಿ ದಿನ ನೀರು ಪೂರೈಕೆ ಮಾಡಲು ಆಧ್ಯತೆ ನೀಡಬೇಕು. ನೀರಿನ ಲಭ್ಯತೆ ಆಧರಿಸಿ ಕನಿಷ್ಠ ವಾರಕ್ಕೆ ಎರಡು ಬಾರಿಯಾದರೂ ಪೂರೈಕೆ ಮಾಡಬೇಕು. ಅಸಡ್ಡೆ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.&lt;/p&gt;&lt;p data-block-key="2g6lr"&gt;&lt;b&gt;ಅನುಮತಿ ಕಡ್ಡಾಯ!!&lt;/b&gt;&lt;/p&gt;&lt;p data-block-key="duek4"&gt;ಜಿಲ್ಲೆಯ ಯಾವುದೇ ಗ್ರಾಮಗಳಲ್ಲಿನ ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ವ್ಯಕ್ತಿ ಅಥವಾ ಸಂಘ ಸಂಸ್ಥೆಗಳು ಶುದ್ದ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಬೇಕಾದರೂ ಸ್ಥಳೀಯ ಗ್ರಾ.ಪಂ  ಅನುಮತಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ಗ್ರಾ.ಪಂ ಮಟ್ಟದ ಅಧಿಕಾರಿಗಳು, ಸಿಬ್ಬಂದಿ ನಿಗಾ ವಹಿಸುವಂತೆ ಸೂಚನೆ ನೀಡಿದರು.&lt;/p&gt;&lt;p data-block-key="4rcor"&gt;&lt;b&gt;ಜಲಜೀವನ್ ಮಾಹಿತಿ ?&lt;/b&gt;&lt;br/&gt;ಜಲಜೀವನ್ ಮಿಷನ್ ಅಭಿಯಾನದಡಿ ಜಿಲ್ಲೆಯಲ್ಲಿ ಈ ವರೆಗೆ ಎಷ್ಟು ಕೊಳವೆ ಬಾವಿಗಳನ್ನು ಕೊರೆಯಲಾಗಿದೆ, ಎಷ್ಟು ಯಶಸ್ವಿಯಾಗಿವೆ, ಎಷ್ಟು ವಿದ್ಯುತ್ ಸಂಪರ್ಕ ಪಡೆದಿವೆ. ವಿದ್ಯುತ್ ಸಂಪರ್ಕ ಪಡೆಯಲು ಎಷ್ಟು ಬಾಕಿ ಇವೆ ಎಂಬ ವಿವರವನ್ನು ನೀಡಬೇಕು. ಒಂದೆರಡು ದಿನಗಳಲ್ಲಿ ವಿದ್ಯುತ್ ಸಂಪರ್ಕ ಪಡೆಯಲು ಬಾಕಿ ಇರುವ ಕಾಮಗಾರಿಗಳನ್ನು ಪೂರ್ಣಗೊಳಿಸಿ ಕೊಳವೆ ಬಾವಿ ನೀರು ಪೂರೈಕೆ ಸೇವೆಯನ್ನು ಜನರಿಗೆ ಮುಕ್ತಗೊಳಿಸಬೇಕು ಎಂದು ಗ್ರಾಮೀಣ ಕುಡಿಯುವ ನೀರು ಪೂರೈಕೆ ಇಲಾಖೆಯ ಕಾರ್ಯಪಾಲಕ ಅಭಿಯಂತರರಿಗೆ ಸೂಚನೆ ನೀಡಿದರು.&lt;/p&gt;&lt;p data-block-key="bk612"&gt;&lt;b&gt;ಪರಿಹಾರಕ್ಕೆ ಸೂಚನೆ!!&lt;/b&gt;&lt;br/&gt;ಕಳೆದ ಒಂದೆರಡು ದಿನಗಳಲ್ಲಿ ಜಿಲ್ಲೆಯಲ್ಲಿ ಆಗಿರುವ ಸಣ್ಣ ಪ್ರಮಾಣದ ಗಾಳಿ ಮಳೆಗೆ 48 ಹೆಕ್ಟೇರ್ ಪ್ರದೇಶದ ತೋಟಗಾರಿಕಾ ಬೆಳೆಗಳು ನಾಶವಾಗಿದ್ದು, ಆ ಎಲ್ಲ ಸಂತ್ರಸ್ತ ರೈತರಿಗೆ ಪರಿಹಾರ ನೀಡಲು ಅಗತ್ಯ ಕ್ರಮ ಕೈಗೊಳ್ಳಲು ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರಿಗೆ ಸೂಚನೆ ನೀಡಿದರು.&lt;/p&gt;&lt;p data-block-key="vh70"&gt;&lt;b&gt;ಪಾಸ್ಟಿಕ್ ಬೆಂಕಿ ನಿಷೇಧ!!&lt;/b&gt;&lt;br/&gt;ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳನ್ನು ಸಂಪರ್ಕಿಸುವ ಬಹುತೇಕ ರಸ್ತೆಗಳ ಇಕ್ಕೆಲಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯವು ವಿಪರೀತವಾಗಿ ಬಿದ್ದಿರುವುದು ಕಂಡುಬರುತ್ತಿದೆ. ಕೆಲವೆಡೆ ಕಿಡಿಗೇಡಿಗಳು ಬೆಂಕಿ ಇಟ್ಟು ಅವೈಜ್ಞಾನಿಕವಾಗಿ ವರ್ತಿಸುವುದು ಗಮನಕ್ಕೆ ಬಂದಿದೆ. ಇಂತಹ ಘಟನೆಗಳು ಯಾವುದೇ ಕಾರಣಕ್ಕೂ ಜರುಗಬಾರದು. ಸ್ಥಳೀಯಾಡಳಿತ ಸಂಸ್ಥೆಗಳು ಕೂಡಲೇ ಎಚ್ಚೆತ್ತುಕೊಂಡು ಸಮರ್ಪಕ ವಿವೇವಾರಿಗೆ ಕ್ರಮ ವಹಿಸಬೇಕು. ಬೆಂಕಿ ಇಡುವವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದರು.&lt;/p&gt;&lt;p data-block-key="flede"&gt;ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್, ಉಪವಿಭಾಗಾಧಿಕಾರಿ ಡಿ.ಹೆಚ್.ಅಶ್ವಿನ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಅತಿಕ್ ಪಾಷಾ ಸೇರಿದಂತೆ ಎಲ್ಲಾ ತಾಲ್ಲೂಕು ತಹಸೀಲ್ದಾರರು, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿಗಳು, ಸ್ಥಳೀಯಾಡಳಿತ ಸಂಸ್ಥೆಗಳ ಪೌರಾಯುಕ್ತರು, ಮುಖ್ಯಾಧಿಕಾರಿಗಳು ಹಾಜರಿದ್ದರು.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>Madhugiri News: ಮಧುಗಿರಿಯಲ್ಲಿ ರಸ್ತೆಗಳ ಅವ್ಯವಸ್ಥೆ, ಕುಡಿಯುವ ನೀರಿನ ಸಮಸ್ಯೆ ಪರಿಹರಿಸಿ; ಸ್ಥಳೀಯರ ಆಗ್ರಹ</title><link>https://vishwavani.news/karnataka/tumakuru/madhugiri-news-many-public-problems-in-madhugiri-town-local-residents-demand-necessary-action-77221.html</link><guid>https://vishwavani.news/karnataka/tumakuru/madhugiri-news-many-public-problems-in-madhugiri-town-local-residents-demand-necessary-action-77221.html</guid><pubDate>Mon, 04 May 2026 15:16:24 +0000</pubDate><description>&lt;![CDATA[ಮಧುಗಿರಿ ಪಟ್ಟಣದ ಪುರಸಭೆ ವ್ಯಾಪ್ತಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ದನ -ಕರುಗಳಿಗೆ ಪೂರೈಸಬೇಕಾದ ಗೋಕಟ್ಟೆಯ ನೀರು, ಬೇಸಿಗೆಯಲ್ಲಿ ಜನತೆಯ ಜೀವನಾಡಿಯಾಗಿರುವ ತೆಂಗಿನ ಮರದ ಬಾವಿಗೆ ಸಾಗುವ ರಸ್ತೆ ಅಭಿವೃದ್ಧಿಯಾಗದಿರುವುದು, ನಿರ್ವಹಣೆಯಾಗದ ಉದ್ಯಾನವನ ಹಾಗೂ ಖಾಸಗಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲವಾಗಿದೆ.]]&gt;</description><dc:creator>&lt;![CDATA[Siddalinga Swamy]]&gt;</dc:creator><category>&lt;![CDATA[ತುಮಕೂರು]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕರ್ನಾಟಕ]]&gt;</category><category>&lt;![CDATA[ಜಿಲ್ಲೆ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Madhugiri_News_Zxq5E7o.original.jpg" class="attachment-large size-large wp-post-image" alt="Madhugiri News: ಮಧುಗಿರಿಯಲ್ಲಿ ರಸ್ತೆಗಳ ಅವ್ಯವಸ್ಥೆ, ಕುಡಿಯುವ ನೀರಿನ ಸಮಸ್ಯೆ ಪರಿಹರಿಸಿ; ಸ್ಥಳೀಯರ ಆಗ್ರಹ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="53xao"&gt;&lt;b&gt;ಮಧುಗಿರಿ, ಮೇ 4:&lt;/b&gt; ಅಪೂರ್ಣಗೊಂಡ ರಸ್ತೆ, ಕುಡಿಯುವ ನೀರು, ಉದ್ಯಾನವನದ ಸ್ವಚ್ಛತೆಯ ಕೊರತೆ ಸೇರಿದಂತೆ ಮಧುಗಿರಿ ಪಟ್ಟಣದಲ್ಲಿ (&lt;b&gt;Madhugiri News&lt;/b&gt;) ನಾನಾ ಸಮಸ್ಯೆಗಳಿಂದ ಜನರು ಸಮಸ್ಯೆ ಅನುಭವಿಸುವಂತಾಗಿದೆ. ಪುರಸಭೆ ವ್ಯಾಪ್ತಿಯ ಗೋಕಟ್ಟೆಯಲ್ಲಿ ನೀರಿಲ್ಲ, ಬೇಸಿಗೆಯಲ್ಲಿ ಜನತೆಯ ಜೀವನಾಡಿಯಾಗಿರುವ ತೆಂಗಿನ ಮರದ ಬಾವಿಗೆ ಸಾಗುವ ರಸ್ತೆ ಅಭಿವೃದ್ಧಿಯಾಗದಿರುವುದು, ನಿರ್ವಹಣೆಯಾಗದ ಉದ್ಯಾನವನ ಹಾಗೂ ಖಾಸಗಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲವಾಗಿದೆ. ಇದರಿಂದ ಪಟ್ಟಣದ ಜನತೆಗೆ ಸಮಸ್ಯೆ ಅನುಭವಿಸುವಂತಾಗಿದೆ. &lt;/p&gt;&lt;p data-block-key="26qlv"&gt;ಪಟ್ಟಣದ ಜನತೆಯ ಜೀವನಾಡಿಯಾಗಿರುವ ತೆಂಗಿನ ಮರದ ಬಾವಿಗೆ ಸಾಗುವ ರಸ್ತೆ ಅಭಿವೃದ್ಧಿ ಪಡಿಸಲೆಂದು ಕಳೆದ ಹಲವು ದಿನಗಳ ಹಿಂದೆ ಜಲ್ಲಿ ಹರಡಿ, ಡಾಂಬರು ಹಾಕದ ಹಿನ್ನೆಲೆ ವಾಹನ ಸವಾರರು ಪರದಾಡುವಂತಾಗಿದೆ.&lt;/p&gt;
&lt;/div&gt;

    
&lt;figure class="article-image text-center mb-4"&gt;
    &lt;img alt="Tumkur News" class="img-fluid" height="720" src="https://cdn.vishwavani.news/media/images/Tumkur_News_mNEWQHA.max-1280x720.format-webp.webp" width="1280"&gt;
    
&lt;/figure&gt;

    
&lt;div class="article-paragraph"&gt;
    &lt;p data-block-key="2ilct"&gt;ಇನ್ನು ವೃದ್ಧರಂತೂ ಈ ರಸ್ತೆಯಲ್ಲಿ ಸಂಚರಿಸಬೇಕಾದರೆ ಜೀವ ಕೈಯಲ್ಲಿಟ್ಟುಕೊಂಡು ಸಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ರಸ್ತೆ ಅಭಿವೃದ್ಧಿಯನ್ನು ಶೀಘ್ರವಾಗಿ ಕೈಗೊಳ್ಳಬೇಕೆಂಬುದು ಸ್ಥಳೀಯ ನಿವಾಸಿಗಳ ಒತ್ತಾಯವಾಗಿದೆ.&lt;/p&gt;&lt;h3 data-block-key="brjjm"&gt;&lt;b&gt;ಸೂಕ್ತ ನಿರ್ವಹಣೆಯಾಗದ ಉದ್ಯಾನವನ&lt;/b&gt;&lt;/h3&gt;&lt;p data-block-key="715do"&gt;ಪಟ್ಟಣದ ಮಹಾತ್ಮ ಗಾಂಧಿ ಉದ್ಯಾನವನದಲ್ಲಿ ಸೂಕ್ತ ನಿರ್ವಹಣೆ ಕೈಗೊಳ್ಳದೇ ಇರುವುದರಿಂದ ಸ್ವಚ್ಛತೆ ಮಾಯವಾಗಿದೆ. ಎಲ್ಲೆಂದರಲ್ಲಿ ಕೋಳಿ ಮೊಟ್ಟೆಗಳ ತ್ಯಾಜ್ಯ, ಕಸದ ರಾಶಿ ಎದ್ದು ಕಾಣುತ್ತದೆ. ಸ್ವಚ್ಛತೆಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂಬುದು ಸ್ಥಳೀಯ ನಿವಾಸಿಗಳ ಆಗ್ರಹವಾಗಿದೆ.&lt;/p&gt;&lt;p data-block-key="9vng1"&gt;ಇನ್ನು ದನ- ಕರುಗಳಿಗಾಗಿ ಉಪ ವಿಭಾಗಾಧಿಕಾರಿ ಕಛೇರಿ ಹಿಂಭಾಗದಲ್ಲಿರುವ ಅಶ್ವತ್ಥ ಕಟ್ಟೆಯಲ್ಲಿ ಗೋಕಟ್ಟೆ ನಿರ್ಮಾಣವಾಗಿ ಅದಕ್ಕೆ ನೀರು ತುಂಬುವ ಕೆಲಸ ಪುರಸಭೆ ಅವರದ್ದೇ ಆಗಿದೆ. ಕಳೆದ 20 ದಿನಗಳಿಂದ ಈ ಗೋಕಟ್ಟೆಯು ನೀರಿಲ್ಲದೆ ಒಣಗಿಹೋಗಿದೆ.&lt;/p&gt;&lt;p data-block-key="9apb6"&gt;ಪಟ್ಟಣದ ಎಲ್ಐಸಿ ಕಚೇರಿ ಮುಂಭಾಗದಲ್ಲಿನ ಜಾಮಿಯಾ ಮಸೀದಿಯ ಮುಂಭಾಗದ ರಸ್ತೆ ಚರಂಡಿ ನೀರು ಕಟ್ಟಿಕೊಂಡು ಇತ್ತೀಚೆಗೆ ಬಂದ ಮಳೆಯಿಂದಾಗಿ ಕೊಳಚೆ ನೀರು ಮನೆ ಒಳಗೆ ನುಗ್ಗಿ ಸುತ್ತಮುತ್ತಲಿನ ನಿವಾಸಿಗಳು ತೀವ್ರ ತೊಂದರೆ ಅನುಭವಿಸುವಂತಾಗಿದೆ.&lt;/p&gt;&lt;p data-block-key="ai14d"&gt;&lt;a href="/karnataka/bengaluru-urban/wind-and-rain-damage-bescom-infrastructure-in-bescom-area-including-bengaluru-city-76846.html"&gt;&lt;b&gt;ಸಾರ್ವಜನಿಕರೇ ಗಮನಿಸಿ; ಮಳೆ ಸಂಬಂಧಿತ ಸಮಸ್ಯೆ ನಿವಾರಣೆಗೆ ಸಹಾಯವಾಣಿ ಆರಂಭಿಸಿದ ಬೆಸ್ಕಾಂ&lt;/b&gt;&lt;/a&gt;&lt;/p&gt;&lt;p data-block-key="8cagg"&gt;ಇನ್ನು ಖಾಸಗಿ ಬಸ್ ನಿಲ್ದಾಣದಲ್ಲಿ ಇರುವ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ಹೋಗಿದ್ದು, ದುರಸ್ತಿಗೊಂಡಿಲ್ಲ. ಇದರಿಂದ ಪ್ರಯಾಣಿಕರಿಗೆ ಕುಡಿಯುವ ನೀರಿನ ತೊಂದರೆ ಅನುಭವಿಸುವಂತಾಗಿದೆ. ಪಟ್ಟಣದಲ್ಲಿ ದಿನೇ ದಿನೇ ಸೊಳ್ಳೆಗಳ ಕಾಟ ಹೆಚ್ಚಾಗುತ್ತಿದ್ದು, ಫಾಗಿಂಗ್  ವ್ಯವಸ್ಥೆಯನ್ನು ಕೈಗೊಳ್ಳಬೇಕು ಹಾಗೂ ಹಲವು ಸಮಸ್ಯೆಗಳ ಪರಿಹಾರಕ್ಕೆ ಕೂಡಲೇ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>MLA S.R.Vishwanath: ಡಾ.ಬಿ.ಆರ್.ಅಂಬೇಡ್ಕರ್ ಸೇರಿದಂತೆ ಮಹಾನ್ ಪುರುಷರು, ಸಂತರು ಒಂದು ಜಾತಿ, ಧರ್ಮಕ್ಕೆ ಸೀಮಿತವಾದವರಲ್ಲ: ಶಾಸಕ ಎಸ್.ಆರ್.ವಿಶ್ವನಾಥ್</title><link>https://vishwavani.news/karnataka/chikkaballapur/great-men-saints-including-dr-br-ambedkar-are-not-limited-to-one-caste-religion-mla-sr-vishwanath0-77231.html</link><guid>https://vishwavani.news/karnataka/chikkaballapur/great-men-saints-including-dr-br-ambedkar-are-not-limited-to-one-caste-religion-mla-sr-vishwanath0-77231.html</guid><pubDate>Mon, 04 May 2026 15:09:05 +0000</pubDate><description>&lt;![CDATA[ಅಂಬೇಡ್ಕರ್ ಭಾರತಕ್ಕೆ ನೀಡಿದ ಸಂವಿಧಾನದಿಂದ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರಕಾರದ ಸೌಲಭ್ಯ ಹಾಗೂ ಸಮಾನವಾದ ಹಕ್ಕು ಸಿಗುತ್ತಿದೆ. ಆದರೆ, ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಕಾಂಗ್ರೆಸ್‌ ನವರು ಮೊದಲಿನಿಂದಲೂ ಅಪಮಾನಿಸಿಕೊಂಡೇ ಬಂದರು. ಅವರ ನಿಧನದ ನಂತರವೂ ಅವರಿಗೆ ದಿಲ್ಲಿಯಲ್ಲಿ ಸ್ಮಾರಕ ನಿರ್ಮಾಣಕ್ಕೆ ಜಾಗ ಕೊಡಲಿಲ್ಲ]]&gt;</description><dc:creator>&lt;![CDATA[Ashok Nayak]]&gt;</dc:creator><category>&lt;![CDATA[ಚಿಕ್ಕಬಳ್ಳಾಪುರ]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕರ್ನಾಟಕ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/gowrr.original.jpg" class="attachment-large size-large wp-post-image" alt="MLA S.R.Vishwanath: ಡಾ.ಬಿ.ಆರ್.ಅಂಬೇಡ್ಕರ್ ಸೇರಿದಂತೆ ಮಹಾನ್ ಪುರುಷರು, ಸಂತರು ಒಂದು ಜಾತಿ, ಧರ್ಮಕ್ಕೆ ಸೀಮಿತವಾದವರಲ್ಲ: ಶಾಸಕ ಎಸ್.ಆರ್.ವಿಶ್ವನಾಥ್" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="so0fg"&gt;&lt;b&gt;ಗೌರಿಬಿದನೂರು:&lt;/b&gt; ಡಾ ಬಿ.ಆರ್.ಅಂಬೇಡ್ಕರ್ ಸೇರಿದಂತೆ ಮಹಾನ್ ಪುರುಷರು, ಸಂತರು ಒಂದು ಜಾತಿ, ಧರ್ಮಕ್ಕೆ ಸೀಮಿತವಾದವರಲ್ಲ, ಅವರೆಲ್ಲರೂ ಸಮಾನತೆಯ ಹರಿಕಾರರು ಎಂದು ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್(&lt;b&gt;Yelahanka MLA S.R.Vishwanath&lt;/b&gt;) ತಿಳಿಸಿದರು.&lt;/p&gt;&lt;p data-block-key="4g2t7"&gt;ನಗರದ ಮಹಾತ್ಮಗಾಂಧಿ ವೃತ್ತದಲ್ಲಿ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ವೃತ್ತದಲ್ಲಿನ ಅಂಬೇಡ್ಕರ್ ಸ್ತೂಪಕ್ಕೆ ಪುಷ್ಪನಮನ ಸಲ್ಲಿಸಿದ ನಂತರ ಮಾತನಾಡಿದರು.&lt;/p&gt;&lt;p data-block-key="cof9r"&gt;ಅಂಬೇಡ್ಕರ್ ಭಾರತಕ್ಕೆ ನೀಡಿದ ಸಂವಿಧಾನದಿಂದ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರಕಾರದ ಸೌಲಭ್ಯ ಹಾಗೂ ಸಮಾನವಾದ ಹಕ್ಕು ಸಿಗುತ್ತಿದೆ. ಆದರೆ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಕಾಂಗ್ರೆಸ್‌ನವರು ಮೊದಲಿನಿಂದಲೂ ಅಪಮಾನಿಸಿಕೊಂಡೇ ಬಂದರು. ಅವರ ನಿಧನದ ನಂತರವೂ ಅವರಿಗೆ ದಿಲ್ಲಿಯಲ್ಲಿ ಸ್ಮಾರಕ ನಿರ್ಮಾಣಕ್ಕೆ ಜಾಗ ಕೊಡಲಿಲ್ಲ. ಇದು ಕಾಂಗ್ರೆಸ್ ಪಕ್ಷದ ವೈಖರಿ ಯಾಗಿದೆ ಎಂದು ಕಿಡಿಕಾರಿದರು.&lt;/p&gt;&lt;p data-block-key="eorei"&gt;&lt;b&gt;ಇದನ್ನೂ ಓದಿ:&lt;/b&gt; &lt;a href="/karnataka/chikkaballapur/teacher-student-meeting-of-anna-fatima-teachers-training-institute-77226.html"&gt;Gauribidabur News: ಅಣ್ಣೆ ಫಾತಿಮಾ ಶಿಕ್ಷಕರ ತರಬೇತಿ ಸಂಸ್ಥೆಯ ಗುರು ಶಿಷ್ಯರ ಸಮಾಗಮ&lt;/a&gt;&lt;/p&gt;&lt;p data-block-key="25v2m"&gt;ಪ್ರಧಾನಿ ಮೋದಿ ಅವರು ಡಾ.ಬಿ.ಆರ್.ಅಂಬೇಡ್ಕರ್ ಅವರ ಸ್ಮಾರಕ ಸೇರಿದಂತೆ ಅವರು ನೆನಪಿಗಾಗಿ ದೇಶದ ಐದು ಸ್ಥಳಗಳನ್ನು ಅಭಿವೃದ್ಧಿಪಡಿಸಿ ಪ್ರವಾಸಿತಾಣವಾಗಿಸಿದ್ದಾರೆ. ಇದು ಬಿಜೆಪಿಯ ನಿಜವಾದ ಮಾನವೀಯತೆಗೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.&lt;/p&gt;&lt;p data-block-key="29ep0"&gt;ಬಿಜೆಪಿ ಪಕ್ಷದ ಮುಖಂಡ ರವಿನಾರಾಯಣರೆಡ್ಡಿ ಮಾತನಾಡಿ, ಮುಂದಿನ ದಿನಗಳಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯನ್ನು ತಾಲೂಕಿನಲ್ಲಿ ನಾಡಹಬ್ಬವನ್ನಾಗಿ ಆಚರಿಸಲಾಗುವುದು. ಅಂಬೇಡ್ಕರ್ ಅವರು ನಮ್ಮ ದೇಶಕ್ಕೆ ನೀಡಿದ ಸಂವಿಧಾನದಿಂದ ಪ್ರತಿಯೊಬ್ಬ ನಾಗರಿಕನೂ ಸಹ ನೆಮ್ಮದಿಯಿಂದ ಜೀವನ ಮಾಡುವಂತಹ ವಾತಾವರಣ ನಿರ್ಮಾಣವಾಗಿದೆ ಎಂದರು.&lt;/p&gt;&lt;p data-block-key="7q9ao"&gt;ಕಾರ್ಯಕ್ರಮದಲ್ಲಿ ಡಾ,ಎಚ್.ಎಸ್ ಶಶಿಧರ್, ದಲಿತ ಮುಖಂಡ ಎಚ್.ಎನ್. ಸನಂದಕುಮಾರ್, ಮುಖಂಡರಾದ ಭಾಗ್ಯನಗರದ ಮುನಿರಾಜು, ಜಯಣ್ಣ ಮಾತನಾಡಿದರು.&lt;/p&gt;&lt;p data-block-key="5hsq5"&gt;ಕಾರ್ಯಕ್ರಮಕ್ಕೂ ಮುನ್ನ, ಬಿಜೆಪಿ ಪಕ್ಷದ ಸಾವಿರಾರು ಮಂದಿ ಕಾರ್ಯಕರ್ತರು ನಗರದ ಎಪಿಎಂಸಿ ವೃತ್ತದಿಂದ ಬೃಹತ್ ಬೈಕ್ ರ್ಯಾಲಿ ಮೂಲಕ ನಗರದ ಬಿಎಚ್ ರಸ್ತೆಯಲ್ಲಿ ಸಾಗಿ ಮುಖ್ಯ ರಸ್ತೆಯ ಮೂಲಕ ಎಂಜಿ ವೃತ್ತದಲ್ಲಿ ಸಮಾರೋಪಗೊಂಡರು. ನಗರದೆಲ್ಲಡೆ ಅಂಬೇಡ್ಕರ್ ಭಾವಚಿತ್ರ ವಿರುವ ನೀಲಿ ಧ್ವಜಗಳು ಹಾಗೂ ಭಾರತೀಯ ಜನತಾ ಪಾರ್ಟಿಯ ಧ್ವಜಗಳನ್ನು ರರಾಜಿಸುತ್ತಿದ್ದವು. ಕಾರ್ಯ ಕರ್ತರು ಉತ್ಸಾಹದಿಂದ ತಮ್ಮ ನಾಯಕ ಎಂ.ರವಿನಾರಾಯಣರೆಡ್ಡಿ ಪರವಾಗಿ ಜಯಘೋಷಗಳನ್ನು ಮುಗಿಲೆತ್ತರಕ್ಕೆ ಮಾರ್ಧನಿಸುವಂತೆ ಕೂಗುತ್ತಾ ಸಾಗುತ್ತಿದ್ದು ಕಂಡು ಬಂತು.&lt;/p&gt;&lt;p data-block-key="dsga5"&gt;ಕಾರ್ಯಕ್ರಮದಲ್ಲಿ ಬಿಜೆಪಿ ಪಕ್ಷದ ಮುಖಂಡರಾದ ವೇಮಾರೆಡ್ಡಿ, ಬಿ.ಎನ್.ರಂಗನಾಥ್, ಮುನಿ ಲಕ್ಷ್ಮಮ್ಮ, ಭರತ್ ರೆಡ್ಡಿ,ಜಯಣ್ಣ,ನಾರಾಯಣಸ್ವಾಮಿ, ಶ್ರೀಧರ್ ರೆಡ್ಡಿ, ಮಲ್ಲಿಕಾರ್ಜುನ, ರಂಗನಾಥ ಗೌಡ, ಮಂಜುನಾಥರೆಡ್ಡಿ, ನರಸಿಂಹಯ್ಯ ಮತ್ತಿತರರು ಹಾಜರಿದ್ದರು.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>Kannada Movie: ಎಸ್ ಕೆ ಸುನೀಲ್ ಕುಮಾರ್ ನಿರ್ದೇಶನದ `ಮಕ್ಕಳ ಸೈನ್ಯೆ' ತೆರೆಗೆ ಯಾವಾಗ?</title><link>https://vishwavani.news/movies/kannada-movie-when-will-makkal-sainiye-directed-by-s-k-sunil-kumar-be-released-77229.html</link><guid>https://vishwavani.news/movies/kannada-movie-when-will-makkal-sainiye-directed-by-s-k-sunil-kumar-be-released-77229.html</guid><pubDate>Mon, 04 May 2026 15:04:59 +0000</pubDate><description>&lt;![CDATA[Kannada Movie:  ಸಂಕಲನಕಾರರಾಗಿ ಕಾರ್ಯ ನಿರ್ವಹಿಸಿರುವ  ಎಸ್ ಕೆ ಸುನೀಲ್ ಕುಮಾರ್   ಚೊಚ್ಚಲ ನಿರ್ದೇಶನದ " "ಮಕ್ಕಳ ಸೈನ್ಯೆ"  ತೆರೆಗೆ ಬರುತ್ತಿದೆ. ಈ ಕುರಿತು ಹೆಚ್ಚಿನ ಮಾಹಿತಿ ನೀಡಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು.  ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆಯ ಅಕ್ಕಿ ಹೆಬ್ಬಾಳಿನಲ್ಲಿ ಚಿತ್ರೀಕರಣ ನಡೆದಿದೆ. ಹಿರಿಯ ಸಾಹಿತಿ ದೊಡ್ಡರಂಗೇ ಗೌಡ ಅವರು ಗೀತರಚನೆ ಮಾಡಿದ್ದಾರೆ.]]&gt;</description><dc:creator>&lt;![CDATA[Yashaswi Devadiga]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಮನರಂಜನೆ]]&gt;</category><category>&lt;![CDATA[ಸಿನಿಮಾ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/makkala_sainye_1.original.jpg" class="attachment-large size-large wp-post-image" alt="Kannada Movie: ಎಸ್ ಕೆ ಸುನೀಲ್ ಕುಮಾರ್ ನಿರ್ದೇಶನದ `ಮಕ್ಕಳ ಸೈನ್ಯೆ' ತೆರೆಗೆ ಯಾವಾಗ?" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="dyu11"&gt;ಆಗ ಒಂದು ಕಾಲ ಇತ್ತು. ಮಕ್ಕಳಿಗಾಗಿಯೇ ಕೆಲವು ಸಿನಿಮಾಗಳನ್ನು (Cinema) ಮಾಡಲಾಗುತ್ತಿತ್ತು. ಸಿಂಹದ ಮರಿ ಸೈನ್ಯ, ಪುಟಾಣಿ ಏಜೆಂಟ್‌ 123, ಬೇಬಿ ಶಾಮಲಿ ಅವರ ಸಿನಿಮಾಗಳು ಹೀಗೆ ಮಕ್ಕಳನ್ನೇ ಕೇಂದ್ರ ಬಿಂದುವಾಗಿಸಿಕೊಂಡು ತೆರೆ ಕಂಡ ಅದೆಷ್ಟೋ ಸಿನಿಮಾಗಳು ಸಖತ್‌ ಹಿಟ್‌ ಆಗಿದ್ದವು. ಇನ್ನು ಅಂದಿಗೆ ಬಾಲ ನಟ-ನಟಿಯರಾಗಿ ನಟಿಸುತ್ತಿದ್ದವರು ಇಂದಿಗೂ ಸಿನಿ ಪ್ರಿಯರಿಗೆ ಫೇವರೇಟ್‌. ಸಂಕಲನಕಾರರಾಗಿ ಕಾರ್ಯ ನಿರ್ವಹಿಸಿರುವ  ಎಸ್ ಕೆ ಸುನೀಲ್ ಕುಮಾರ್ (S K Sunil Kumar) ಚೊಚ್ಚಲ ನಿರ್ದೇಶನದ " "ಮಕ್ಕಳ ಸೈನ್ಯೆ"  ತೆರೆಗೆ ಬರುತ್ತಿದೆ. ಈ ಕುರಿತು ಹೆಚ್ಚಿನ ಮಾಹಿತಿ ನೀಡಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು.   &lt;/p&gt;&lt;p data-block-key="cnq7h"&gt;"ಮಕ್ಕಳ ಸೈನ್ಯೆ" ಚಿತ್ರ ಮೇ 22 ರಂದು ತೆರೆಗೆ ಬರುತ್ತಿದೆ. ಎಪ್ಪತ್ತರ ದಶಕದಲ್ಲಿ ಬಂದಿದ್ದ "ಸಿಂಹದ ಮರಿ ಸೈನ್ಯ" ಚಿತ್ರದ ನಂತರ ಆ ರೀತಿಯ ಮಕ್ಕಳ ಚಿತ್ರ ಬಂದಿರಲಿಲ್ಲ. ಅದೇ ರೀತಿಯ ಕಥೆ ಈ ಚಿತ್ರದಲ್ಲಿರುತ್ತದೆ. ಚಿತ್ರದಲ್ಲಿ ಸ್ನೇಹ, ಸಾಹಸ, ತಂದೆ - ಮಗಳ ಬಾಂಧವ್ಯ ಹಾಗೂ ಸನಾತನ ಎಂಬ ನಾಲ್ಕು ಭಾಗಗಳಿರುತ್ತದೆ. ಮಕ್ಕಳು ಮೊದಲ ಬಾರಿಗೆ ನಟಿಸಿದ್ದಾರೆ ಅಂತ ಹೇಳುವ ಹಾಗಿಲ್ಲ. ಅಷ್ಟು ಅದ್ಭುತವಾಗಿ ನಟಿಸಿದ್ದಾರೆ. &lt;/p&gt;&lt;p data-block-key="46ofh"&gt;&lt;b&gt;ಇದನ್ನೂ ಓದಿ: &lt;/b&gt;&lt;a href="/ankanagalu/i-was-the-one-who-stopped-the-fight-between-toxic-and-dhurandar-2-trump-71437.html"&gt;H‌ari Paraak Column: ಟಾಕ್ಸಿಕ್‌, ಧುರಂದರ್-2‌ ಮಧ್ಯೆ ಯುದ್ದ ನಿಲ್ಸಿದ್ದು ನಾನೇ: ಟ್ರಂಪ್&lt;/a&gt;&lt;/p&gt;&lt;p data-block-key="81b0n"&gt;ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆಯ ಅಕ್ಕಿ ಹೆಬ್ಬಾಳಿನಲ್ಲಿ ಚಿತ್ರೀಕರಣ ನಡೆದಿದೆ. ಹಿರಿಯ ಸಾಹಿತಿ ದೊಡ್ಡರಂಗೇ ಗೌಡ ಅವರು ಗೀತರಚನೆ ಮಾಡಿದ್ದಾರೆ. ಸನ್ನಿರಾಜ್ ಸಂಗೀತ ನೀಡಿದ್ದಾರೆ. ಮಕ್ಕಳ ಚಿತ್ರವಾದರೂ ಯಾವುದೇ  ಕಮರ್ಷಿಯಲ್ ಚಿತ್ರಗಳಿಗೂ ಕಡಿಮೆ ಇಲ್ಲದ ರೀತಿಯಲ್ಲೇ ಚಿತ್ರ ಮೂಡಿ ಬಂದಿದೆ. ಚಿತ್ರ ಮೇ 22ರಂದು ಬಿಡುಗಡೆಯಾಗುತ್ತಿದೆ. &lt;/p&gt;&lt;p data-block-key="c7d9s"&gt;&lt;/p&gt;&lt;img alt="makkala sainye" class="richtext-image left" height="281" src="https://cdn.vishwavani.news/media/images/makkala_sainye.width-500.jpg" width="500"&gt;&lt;p data-block-key="82gui"&gt;ಚಿತ್ರಕ್ಕೆ ನಾನೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದೇನೆ.  ಮುನಿಸ್ವಾಮಿ ಅವರು ನಿರ್ಮಾಣ ಮಾಡಿದ್ದಾರೆ. ಸಂಗೀತ ಅವರು ಸಹ ನಿರ್ದೇಶನ ಮಾಡಿದ್ದಾರೆ. "ಮಕ್ಕಳ ಸೈನ್ಯೆ"ಗೆ  ಸವಾಲಿಗೆ ಸವಾಲ್ ಎಂಬ ಅಡಿಬರಹವಿದೆ ಎಂದು ನಿರ್ದೇಶಕ ಸುನೀಲ್ ಕುಮಾರ್ ತಿಳಿಸಿದರು.  &lt;/p&gt;&lt;p data-block-key="c9f3i"&gt;&lt;b&gt;ಇದನ್ನೂ ಓದಿ:  &lt;/b&gt;&lt;a href="/movies/naagin-7-air-unedited-vfx-scene-with-blue-screen-in-its-latest-episode-77211.html"&gt;Naagin 7: ಇದೊಂದು ಕಾರಣಕ್ಕೆ ಸಖತ್‌ ಟ್ರೋಲ್‌ ಆಯ್ತು ನಾಗಿನ್ ಸೀರಿಯಲ್‌!&lt;/a&gt;&lt;/p&gt;&lt;p data-block-key="fns61"&gt;ನಿರ್ಮಾಪಕ ಮುನಿಸ್ವಾಮಿ ಹಾಗೂ ಚಿತ್ರದಲ್ಲಿ ನಟಿಸಿರುವ ಮಹಾಲಕ್ಷ್ಮಿ, ಗಗನ, ಸೋನಾಕ್ಷಿ, ಶಶಾಂಕ್, ರಾಬರ್ಟ್, ರುದ್ರಪ್ಪ ಮುಂತಾದವರು "ಮಕ್ಕಳ ಸೈನ್ಯೆ" ಚಿತ್ರದ ಕುರಿತು ಮಾತನಾಡಿದರು&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಮುಸ್ಲಿಮರ ಅಸಮಾಧಾನದ ನಡುವೆ ದಾವಣಗೆರೆ ದಕ್ಷಿಣದಲ್ಲಿ ಸಮರ್ಥ್‌ ಗೆದ್ದಿದ್ದೇಗೆ?; ಬಾಗಲಕೋಟೆಯಲ್ಲಿ ಮೇಟಿ ಗೆಲುವಿಗೆ ಪ್ರಮುಖ ಕಾರಣಗಳು</title><link>https://vishwavani.news/karnataka/bagalkot/what-were-the-factors-that-led-to-congresss-victory-in-the-davangere-south-and-bagalkot-by-elections-77227.html</link><guid>https://vishwavani.news/karnataka/bagalkot/what-were-the-factors-that-led-to-congresss-victory-in-the-davangere-south-and-bagalkot-by-elections-77227.html</guid><pubDate>Mon, 04 May 2026 15:01:40 +0000</pubDate><description>&lt;![CDATA[Karnataka By-Election Results 2026: ಪಂಚ ರಾಜ್ಯ ಚುನಾವಣೆ ಜತೆಗೆ ರಾಜ್ಯದ ಎರಡು ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶವೂ ಸೋಮವಾರ ಹೊರಬಿದ್ದಿದೆ. ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಗೆಲುವು ಕಂಡಿದ್ದಾರೆ. ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಪಕ್ಷದ ಗೆಲುವಿಗೆ ಕಾರಣವಾದ ಪ್ರಮುಖ ಅಂಶಗಳು ಇಲ್ಲಿವೆ.]]&gt;</description><dc:creator>&lt;![CDATA[Prabhakara R]]&gt;</dc:creator><category>&lt;![CDATA[ದಾವಣಗೆರೆ]]&gt;</category><category>&lt;![CDATA[ಬಾಗಲಕೋಟೆ]]&gt;</category><category>&lt;![CDATA[ಬೆಂಗಳೂರು ನಗರ]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕರ್ನಾಟಕ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/By-Election_Results_1.original.jpg" class="attachment-large size-large wp-post-image" alt="ಮುಸ್ಲಿಮರ ಅಸಮಾಧಾನದ ನಡುವೆ ದಾವಣಗೆರೆ ದಕ್ಷಿಣದಲ್ಲಿ ಸಮರ್ಥ್‌ ಗೆದ್ದಿದ್ದೇಗೆ?; ಬಾಗಲಕೋಟೆಯಲ್ಲಿ ಮೇಟಿ ಗೆಲುವಿಗೆ ಪ್ರಮುಖ ಕಾರಣಗಳು" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="gsw9x"&gt;&lt;b&gt;ದಾವಣಗೆರೆ/ ಬಾಗಲಕೋಟೆ:&lt;/b&gt; ರಾಜ್ಯದ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಉಪ ಚುನಾವಣೆಯಲ್ಲಿ (Karnataka By-Election Results 2026) ಕಾಂಗ್ರೆಸ್‌ ಪಕ್ಷ ಭರ್ಜರಿ ಜಯ ದಾಖಲಿಸುವ ಮೂಲಕ ಬಿಜೆಪಿಗೆ ಟಕ್ಕರ್‌ ನೀಡಿದೆ. ಇನ್ನು ವಿಶೇಷವಾಗಿ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಟಿಕೆಟ್‌ ಗೊಂದಲ, ಮುಸ್ಲಿಂ ಮುಖಂಡರ ಅಸಮಾಧಾನದಿಂದ ಕೈ ಅಭ್ಯರ್ಥಿ ಸಮರ್ಥ್‌ ಶಾಮನೂರು ಗೆಲುವು ಕಷ್ಟ ಎಂದು ವಿಶ್ಲೇಷಿಸಲಾಗಿತ್ತು. ಆದರೆ, ಈ ಎಲ್ಲಾ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡಿ ಕಾಂಗ್ರೆಸ್‌ ಅಭ್ಯರ್ಥಿ ಗೆದ್ದಿದ್ದಾರೆ.&lt;/p&gt;&lt;p data-block-key="e79pb"&gt;ಈ ಉಪ ಚುನಾವಣೆ ಗೆಲುವು ಸಿಎಂ ಸಿದ್ದರಾಮಯ್ಯಗೆ ಆನೆ ಬಲ ತಂದುಕೊಟ್ಟಿದೆ. ಆದರೆ, ದಾವಣಗೆರೆ ದಕ್ಷಿಣದಲ್ಲಿ ಗೆಲುವು ಅಷ್ಟು ಸುಲಭವಾಗಿರಲಿಲ್ಲ. ತಮ್ಮ ಸಮಾಜದ ಅಭ್ಯರ್ಥಿಗೆ ಟಿಕೆಟ್‌ ನೀಡದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಪಕ್ಷದ ವಿರುದ್ಧ ಮುಸ್ಲಿಂ ಮುಖಂಡರು ತಿರುಗಿಬಿದ್ದಿದ್ದರು. ಇದರಿಂದ ಕಾಂಗ್ರೆಸ್‌ ಪಕ್ಷದ ನಾಯಕರಿಗೆ ಒಳ ಏಟಿನ ಆತಂಕವಿತ್ತು. ಇದು ಚುನಾವಣೆಯಲ್ಲಿ ಎಸ್‌ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆಗೆ 18 ಸಾವಿರ ಮತಗಳು ಬಂದಿರುವುದನ್ನು ನೋಡಿದರೆ ತಿಳಿಯುತ್ತದೆ.&lt;/p&gt;&lt;p data-block-key="5atvs"&gt;ಕ್ಷೇತ್ರದಲ್ಲಿ ಎಸ್‌ಡಿಪಿಐ ಸ್ಪರ್ಧೆಯಿಂದ ಮುಸ್ಲಿಂ ಮತಗಳು ವಿಭಜನೆಯಾಗಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಒಂದು ವೇಳೆ ಕಾಂಗ್ರೆಸ್‌ ಪಕ್ಷದ ವಿರುದ್ಧ ಅಸಮಾಧಾನಗೊಂಡ ಮತದಾರರು ಬಿಜೆಪಿಗೆ ಬೆಂಬಲ ಸೂಚಿಸಿದ್ದರೆ ಕೈ ಅಭ್ಯರ್ಥಿ ಸಮರ್ಥ್‌ ಸೋಲಿನ ಸುಳಿಯಲ್ಲಿ ಸಿಲುಕಬೇಕಿತ್ತು. ಹೀಗಾಗಿ ಈ ಪರಿಣಾಮಗಳನ್ನು ಮನಗಂಡ ಸಿಎಂ ಸಿದ್ದರಾಮಯ್ಯ ಅವರು ಸ್ವತಃ ಅಖಾಡಕ್ಕೆ ಇಳಿದು, ಮುಸ್ಲಿಂ ನಾಯಕರ ಮುನಿಸು ಶಮನ ಮಾಡಲು ಪ್ರಯತ್ನಿಸಿದರು. ಸಚಿವ ಜಮೀರ್‌ ಅಹ್ಮದ್‌ರನ್ನು ಕ್ಷೇತ್ರಕ್ಕೆ ಕರೆಸಿ ಪ್ರಚಾರ ಮಾಡಿಸಿದ್ದು, ಅಹಿಂದ ಮತಗಳು ಚದುರಿಹೋಗದಂತೆ ನೋಡಿಕೊಂಡಿದ್ದರಿಂದ ಕೈ ಅಭ್ಯರ್ಥಿ ಗೆಲುವು ಸಾಧ್ಯವಾಗಿದೆ.&lt;/p&gt;&lt;p data-block-key="e76va"&gt;&lt;a href="/national/bjp-releases-modimay-bharat-map-saffron-wave-reaches-west-bengal-77215.html"&gt;ʼಮೋದಿಮಯ್ ಭಾರತ್ʼ ನಕ್ಷೆ ಬಿಡುಗಡೆ ಮಾಡಿದ ಬಿಜೆಪಿ: ಪಶ್ಚಿಮ ಬಂಗಾಳವನ್ನು ತಲುಪಿದೆ ಕೇಸರಿ ಅಲೆ&lt;/a&gt;&lt;/p&gt;&lt;h3 data-block-key="crp7m"&gt;&lt;b&gt;ಬಾಗಲಕೋಟೆಯಲ್ಲಿ ಉಮೇಶ್‌ ಮೇಟಿಗೆ ಗೆಲುವಿಗೆ ಕಾರಣವಾದ ಅಂಶಗಳು&lt;/b&gt;&lt;/h3&gt;&lt;p data-block-key="e7240"&gt;ಬಾಗಲಕೋಟೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ವಿರುದ್ಧ ಕಾಂಗ್ರೆಸ್‌ ಅಭ್ಯರ್ಥಿ ಉಮೇಶ್‌ ಮೇಟಿ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಬಿಜೆಪಿಯ ವೀರಣ್ಣ ಚರಂತಿಮಠ್​​ಗೆ 76,587 ಮತಗಳು ಬಿದ್ದಿದ್ದರೆ, ಕಾಂಗ್ರೆಸ್​​ ಅಭ್ಯರ್ಥಿ ಉಮೇಶ್​​ ಮೇಟಿ ಪರ 98,919 ಮತ​​ ಚಲಾವಣೆ ಆಗಿವೆ. ಹೀಗಾಗಿ 22,332 ಮತಗಳ ಅಂತರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜಯಭೇರಿ ಬಾರಿಸಿದ್ದಾರೆ. ಕ್ಷೇತ್ರದಲ್ಲಿ ಮೇಟಿ ಗೆಲುವಿಗೆ ಕಾರಣವಾದ ಅಂಶಗಳು ಇಲ್ಲಿವೆ.&lt;/p&gt;&lt;ul&gt;&lt;li data-block-key="434bi"&gt;&lt;b&gt;ಅನುಕಂಪದ ಅಲೆ:&lt;/b&gt; ಎಚ್.ವೈ.ಮೇಟಿ ಅವರ ನಿಧನದಿಂದಾಗಿ ಎದುರಾದ ಈ ಚುನಾವಣೆಯಲ್ಲಿ ಅವರ ಪುತ್ರ ಉಮೇಶ್ ಮೇಟಿ ಪರವಾಗಿ ಕ್ಷೇತ್ರದಲ್ಲಿ ಅನುಕಂಪದ ಅಲೆ ಕಂಡುಬಂದಿತ್ತು.&lt;/li&gt;&lt;li data-block-key="4vmo8"&gt;&lt;b&gt;ಸಿದ್ದರಾಮಯ್ಯ ಪ್ರಭಾವ:&lt;/b&gt; ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಾಗಲಕೋಟೆ ಪ್ರತಿಷ್ಠೆಯ ಕಣವಾಗಿತ್ತು. ಸ್ವತಃ ಸಿದ್ದರಾಮಯ್ಯ ಅವರು ಕ್ಷೇತ್ರದಲ್ಲಿ ವ್ಯಾಪಕ ಪ್ರಚಾರ ನಡೆಸಿದ್ದು ಕಾಂಗ್ರೆಸ್ ಗೆಲುವಿಗೆ ಪ್ರಮುಖ ಕಾರಣವಾಗಿದೆ.&lt;/li&gt;&lt;li data-block-key="eqce"&gt;&lt;b&gt;ಅಹಿಂದ ಮತಗಳ ಕ್ರೋಡೀಕರಣ:&lt;/b&gt; ಕುರುಬ ಸಮಾಜದ ಪ್ರಮುಖ ನಾಯಕತ್ವದ ಜತೆಗೆ ಅಹಿಂದ ವರ್ಗದ ಮತಗಳು ಈ ಬಾರಿ ಕಾಂಗ್ರೆಸ್‌ಗೆ ಗಟ್ಟಿಯಾಗಿ ಬೆಂಬಲ ನೀಡಿರುವುದು ಕಾಂಗ್ರೆಸ್ ಗೆಲುವಿಗೆ ಕಾರಣವಾಗಿದೆ.&lt;/li&gt;&lt;li data-block-key="4oaja"&gt;&lt;b&gt;ಸಚಿವ ಸತೀಶ್‌ ಜಾರಕಿಹೊಳಿ ತಂತ್ರಗಾರಿಕೆ:&lt;/b&gt; ಕ್ಷೇತ್ರದ ಚುನಾವಣೆ ಉಸ್ತುವಾರಿ ವಹಿಸಿದ್ದ ಸಚಿವ ಸತೀಶ್ ಜಾರಕಿಹೊಳಿ ಅವರ ಸಮರ್ಥ ಸಂಘಟನೆ ಮತ್ತು ತಂತ್ರಗಾರಿಕೆ ಪಕ್ಷಕ್ಕೆ ವರವಾಗಿದೆ.&lt;/li&gt;&lt;/ul&gt;
&lt;/div&gt;
&lt;/p&gt;]]&gt;</content:encoded></item><item><title>Gauribidabur News: ಅಣ್ಣೆ ಫಾತಿಮಾ ಶಿಕ್ಷಕರ ತರಬೇತಿ ಸಂಸ್ಥೆಯ ಗುರು ಶಿಷ್ಯರ ಸಮಾಗಮ</title><link>https://vishwavani.news/karnataka/chikkaballapur/teacher-student-meeting-of-anna-fatima-teachers-training-institute-77226.html</link><guid>https://vishwavani.news/karnataka/chikkaballapur/teacher-student-meeting-of-anna-fatima-teachers-training-institute-77226.html</guid><pubDate>Mon, 04 May 2026 15:01:35 +0000</pubDate><description>&lt;![CDATA[ಅಣ್ಣೆ ಫಾತಿಮಾ ಶಿಕ್ಷಕರ ತರಬೇತಿ ಸಂಸ್ಥೆ ಮೂರು ದಶಕಗಳ  ಕಾಲ ಉತ್ಕೃಷ್ಟ ಶಿಕ್ಷಣ ನೀಡಿ, ಗುಣಮಟ್ಟ ದ ಶಿಕ್ಷಕರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದೆ. ಸಂಸ್ಥೆ ನಮಗೆ ಅನ್ನ, ನಿಮಗೆ ಅಕ್ಷರ ನೀಡಿದೆ. ಆದ್ದರಿಂದ ನಾವು ಸಂಸ್ಥೆಗೆ ಕೃತಜ್ಞರಾಗಿ ಸಮಾಜದಲ್ಲಿ ಉತ್ತಮ ಕೆಲಸಗಳನ್ನು ಮಾಡಬೇಕಾಗಿದೆ. ಗುರು ಶಿಷ್ಯರ ಪರಂಪರೆ ಹೀಗೆ ಮುಂದುವರೆಯಬೇಕು. ತಾವುಗಳು ಸಂಸ್ಥೆಯಿಂದ ಪಡೆದಿರುವ ಮೌಲ್ಯಯುತ ಶಿಕ್ಷಣ ಮತ್ತು  ಸಂಸ್ಕಾರವನ್ನು ಸಮಾಜಕ್ಕೆ ನೀಡಬೇಕು.]]&gt;</description><dc:creator>&lt;![CDATA[Ashok Nayak]]&gt;</dc:creator><category>&lt;![CDATA[ಚಿಕ್ಕಬಳ್ಳಾಪುರ]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕರ್ನಾಟಕ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/anne_phatima.original.jpg" class="attachment-large size-large wp-post-image" alt="Gauribidabur News: ಅಣ್ಣೆ ಫಾತಿಮಾ ಶಿಕ್ಷಕರ ತರಬೇತಿ ಸಂಸ್ಥೆಯ ಗುರು ಶಿಷ್ಯರ ಸಮಾಗಮ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="lrzho"&gt;&lt;b&gt;ಗೌರಿಬಿದನೂರು:&lt;/b&gt; ಪಟ್ಟಣದ ಮುನೇಶ್ವರ ಬಡಾವಣೆಯ ತೀರ್ಥ ಶಾಲೆಯಲ್ಲಿ ಅಣ್ಣೆ ಫಾತಿಮಾ ಶಿಕ್ಷಕರ ತರಬೇತಿ ಸಂಸ್ಥೆಯ ಗುರು ಶಿಷ್ಯರ ಸಮಾಗಮ ಕಾರ್ಯಕ್ರಮ ಆಯೋಜಿಸಲಾಗಿತ್ತು. &lt;/p&gt;&lt;p data-block-key="au5fh"&gt;ಪ್ರಾಂಶುಪಾಲರಾಗಿ ಕೆಲಸ ನಿರ್ವಹಿಸಿದ್ದ ಪ್ರೊ. ಕೆ.ವಿ. ಪ್ರಕಾಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಣ್ಣೆ ಫಾತಿಮಾ ಶಿಕ್ಷಕರ ತರಬೇತಿ ಸಂಸ್ಥೆ ಮೂರು ದಶಕಗಳ  ಕಾಲ ಉತ್ಕೃಷ್ಟ ಶಿಕ್ಷಣ ನೀಡಿ, ಗುಣಮಟ್ಟದ ಶಿಕ್ಷಕರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದೆ. ಸಂಸ್ಥೆ ನಮಗೆ ಅನ್ನ, ನಿಮಗೆ ಅಕ್ಷರ ನೀಡಿದೆ. ಆದ್ದರಿಂದ ನಾವು ಸಂಸ್ಥೆಗೆ ಕೃತಜ್ಞರಾಗಿ ಸಮಾಜದಲ್ಲಿ ಉತ್ತಮ ಕೆಲಸಗಳನ್ನು ಮಾಡಬೇಕಾಗಿದೆ. ಗುರು ಶಿಷ್ಯರ ಪರಂಪರೆ ಹೀಗೆ ಮುಂದುವರೆಯಬೇಕು. ತಾವುಗಳು ಸಂಸ್ಥೆಯಿAದ ಪಡೆದಿರುವ ಮೌಲ್ಯಯುತ ಶಿಕ್ಷಣ ಮತ್ತು  ಸಂಸ್ಕಾರವನ್ನು ಸಮಾಜಕ್ಕೆ ನೀಡಬೇಕು. ನೈತಿಕತೆ ಯಿಂದ ಕೆಲಸ ಮಾಡಿ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಬೇಕು. ಇದೊಂದು ಗುರು ಶಿಷ್ಯರ ಭಾವನಾತ್ಮಕ ಬೆಸುಗೆಯ ಕಾರ್ಯಕ್ರಮವಾಗಿದೆ ಎಂದು ತಿಳಿಸಿದರು.&lt;/p&gt;&lt;p data-block-key="avnv2"&gt;&lt;b&gt;ಇದನ್ನೂ ಓದಿ: &lt;/b&gt;&lt;a href="/karnataka/chikkaballapur/brahma-chariot-festival-in-dpalya-77050.html"&gt;Gauribidanur News: ಡಿ.ಪಾಳ್ಯದಲ್ಲಿ ಬ್ರಹ್ಮ ರಥೋತ್ಸವ&lt;/a&gt;&lt;/p&gt;&lt;p data-block-key="fqet1"&gt;ಉಪನ್ಯಾಸಕರಾದ ನಾಗಭೂಷಣ್ ರೆಡ್ಡಿ ಮಾತನಾಡಿ, ಗುರು ಹಿರಿಯರ ಆಶೀರ್ವಾದ ಗಳೊಂದಿಗೆ ತಮ್ಮ ಜೀವನವನ್ನು ಸಾರ್ಥಕ ಮಾಡಿಕೊಂಡಿದ್ದಕ್ಕೆ ನಮಗೆ ತುಂಬಾ ಸಂತೋಷವಾಗಿದೆ ಎಂದು ತಿಳಿಸಿದರು.&lt;/p&gt;&lt;p data-block-key="f1t0m"&gt;ಉಪನ್ಯಾಸಕ ಲಕ್ಷ್ಮಣ್ ಮೂರ್ತಿ, ಸಿದ್ದಯ್ಯ ಮತ್ತು ನವೀನ್ ಕುಮಾರ್ ಮಾತನಾಡಿ, ವಿದ್ಯಾರ್ಥಿ ಜೀವನ ಶ್ರೇಷ್ಠವಾದದ್ದು, ನಾವುಗಳು ನೀಡಿರುವ ಶಿಸ್ತಿನ ಶಿಕ್ಷಣವನ್ನು ಜೀವನದಲ್ಲಿ ಅಳವಡಿಸಿಕೊಳ್ಳ ಬೇಕೆಂದು ಕರೆ ಕೊಟ್ಟರು.&lt;/p&gt;&lt;p data-block-key="cfia5"&gt;ಕಾರ್ಯಕ್ರಮದಲ್ಲಿ ಉಪನ್ಯಾಸಕಿ ಎಂ. ಶೋಭಾ, ಸಹಾಯಕಿ ಉಡುಮಲೋಡು ಲಲಿತಮ್ಮ, ಹಿರಿಯ ವಿದ್ಯಾರ್ಥಿಗಳಾದ ಮಂಜುನಾಥ್, ಗಂಗಪ್ಪ, ರವಿಕುಮಾರ್, ಶಿವಶಂಕರ್, ಕಡಬೂರು ಗೌರಿ, ನಾಗಮಣಿ ಪವಿತ್ರಾ, ಶರ್ಮಾ, ಸುನಿಲ್ ಕುಮಾರ್, ನಂದೀಶ್, ರಾಮಚಂದ್ರ, ಜಯಣ್ಣ, ಕೆಂಪರಾಜ್ ಉಪಸ್ಥಿತರಿದ್ದರು.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>LSG vs MI ಪಂದ್ಯದ ಪವರ್‌ಪ್ಲೇನಲ್ಲಿ ವಿಶೇಷ ದಾಖಲೆ ಬರೆದ ಲಖನೌ ಸೂಪರ್‌ ಜಯಂಟ್ಸ್‌!</title><link>https://vishwavani.news/sports/cricket/ipl-2026-lsg-posted-901-after-six-overs-their-best-ever-powerplay-score-in-the-ip-77225.html</link><guid>https://vishwavani.news/sports/cricket/ipl-2026-lsg-posted-901-after-six-overs-their-best-ever-powerplay-score-in-the-ip-77225.html</guid><pubDate>Mon, 04 May 2026 14:56:41 +0000</pubDate><description>&lt;![CDATA[ಮುಂಬೈ ಇಂಡಿಯನ್ಸ್‌ ಎದುರು 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಂದ್ಯದಲ್ಲಿ ಲಖನೌ ಸೂಪರ್‌ ಜಯಂಟ್ಸ್‌ ತಂಡ ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿತು. ಮಿಚೆಲ್‌ ಮಾರ್ಷ್‌ ಹಾಗೂ ನಿಕೋಲಸ್‌ ಪೂರನ್‌ ಅವರು ಅಬ್ಬರಿಸಿ ಪವರ್‌ಪ್ಲೇನಲ್ಲಿ 90 ರನ್‌ಗಳನ್ನು ಕಲೆ ಹಾಕಿದರು. ಇದು ಎಲ್‌ಎಸ್‌ಜಿ ಪಾಲಿಗೆ ಪವರ್‌ಪ್ಲೇನಲ್ಲಿ ಅತ್ಯಧಿಕ ಮೊತ್ತವಾಗಿದೆ.]]&gt;</description><dc:creator>&lt;![CDATA[Ramesh Kote]]&gt;</dc:creator><category>&lt;![CDATA[ಕ್ರಿಕೆಟ್‌]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕ್ರೀಡೆ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Nicholas_Pooran_fifty.original.jpg" class="attachment-large size-large wp-post-image" alt="LSG vs MI ಪಂದ್ಯದ ಪವರ್‌ಪ್ಲೇನಲ್ಲಿ ವಿಶೇಷ ದಾಖಲೆ ಬರೆದ ಲಖನೌ ಸೂಪರ್‌ ಜಯಂಟ್ಸ್‌!" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="91zj6"&gt;&lt;b&gt;ಮುಂಬೈ:&lt;/b&gt; ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಮುಂಬೈ ಇಂಡಿಯನ್ಸ್‌ ವಿರುದ್ಧದ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯ ಪಂದ್ಯದಲ್ಲಿ(MI vs LSG) ಲಖನೌ ಸೂಪರ್‌ ಜಯಂಟ್ಸ್‌ ತಂಡ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಯಿತು. ಮಿಚೆಲ್‌ ಮಾರ್ಷ್‌ ಅವರ ಜೊತೆಗೆ ಇನಿಂಗ್ಸ್‌ ಆರಂಭಿಸಿದ ಹೊಸ ಆಟಗಾರ ಜಾಶ್‌ ಇಂಗ್ಲಿಸ್‌ 5 ಎಸೆತಗಳಲ್ಲಿ 13 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ನಂತರ ಮಿಚೆಲ್‌ಗೆ ಜೊತೆಯಾದ ನಿಕೋಲಸ್‌ ಪೂರನ್‌ (Nicholas Pooran) ಸ್ಪೋಟಕ ಅರ್ಧಶತಕವನ್ನು ಬಾರಿಸಿದರು. ಪವರ್‌ಪ್ಲೇನಲ್ಲಿ ಎಲ್‌ಎಸ್‌ಜಿ ತಂಡ ಒಂದು ವಿಕೆಟ್‌ ನಷ್ಟಕ್ಕೆ 90 ರನ್‌ಗಳನ್ನು ಕಲೆ ಹಾಕಿತು. ಇದು ಐಪಿಎಲ್‌ ಟೂರ್ನಿಯಲ್ಲಿ ಲಖನೌ ಪವರ್‌ಪ್ಲೇನಲ್ಲಿ ಗಳಿಸಿದ ಅತ್ಯಧಿಕ ಮೊತ್ತವಾಗಿದೆ.&lt;/p&gt;&lt;p data-block-key="bskjf"&gt;ಲಖನೌ ತಂಡ ಪವರ್‌ಪ್ಲೇನಲ್ಲಿ ದೊಡ್ಡ ಮೊತ್ತವನ್ನು ಕಲೆ ಹಾಕಲು ಮುಖ್ಯ ಕಾರಣರಾದರು ನಿಕೋಲಸ್‌ ಪೂರನ್‌ ಹಾಗೂ ಮಿಚೆಲ್‌ ಮಾರ್ಷ್‌. ಜಾಶ್‌ ಇಂಗ್ಲಿಷ್‌ ಔಟ್‌ ಆದ ಬಳಿಕ ಈ ಇಬ್ಬರೂ ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದರು. ಇವರು ಪವರ್‌ಪ್ಲೇನಲ್ಲಿ 61 ರನ್‌ಗಳನ್ನು ಕಲೆ ಹಾಕಿದರು. ಅದರಲ್ಲಿಯೂ ವಿಶೇಷವಾಗಿ ನಿಕೋಲಸ್‌ ಪೂರನ್‌ 12 ಎಸೆತಗಳಲ್ಲಿ 39 ರನ್‌ ಚಚ್ಚಿದರೆ, ಮಿಚೆಲ್‌ ಮಾರ್ಷ್‌ 20 ಎಸೆತಗಳಲ್ಲಿ 35 ರನ್‌ ಗಳಿಸಿದರು. ಅಂತಿಮವಾಗಿ ಈ ಜೋಡಿ ಎರಡನೇ ವಿಕೆಟ್‌ಗೆ 34 ಎಸೆತಗಳಲ್ಲಿ 94 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ತಮ್ಮ ತಂಡಕ್ಕೆ ಭರ್ಜರಿ ಆರಂಭವನ್ನು ತಂದುಕೊಟ್ಟಿತು.&lt;/p&gt;&lt;p data-block-key="dfjtq"&gt;&lt;a href="/sports/cricket/why-hardik-pandya-is-not-playing-for-mi-vs-lsg-and-suryakumar-yadav-is-leading-77222.html"&gt;&lt;b&gt;MI vs LSG ಪಂದ್ಯದಿಂದ ಹಾರ್ದಿಕ್‌ ಪಾಂಡ್ಯಗೆ ಕೊಕ್‌! ಕಾರಣ ತಿಳಿಸಿದ ಸೂರ್ಯಕುಮಾರ್‌ ಯಾದವ್‌!&lt;/b&gt;&lt;/a&gt;&lt;/p&gt;&lt;h3 data-block-key="8bhd"&gt;&lt;b&gt;ಲಖನೌ ಸೂಪರ್‌ ಜಯಂಟ್ಸ್‌ ತಂಡದ ಪವರ್‌ಪ್ಲೇನಲ್ಲಿ ಅತ್ಯಧಿಕ ಮೊತ್ತ&lt;/b&gt;&lt;/h3&gt;&lt;p data-block-key="ahslu"&gt;90/1 vs ಮುಂಬೈ ಇಂಡಿಯನ್ಸ್‌, ವಾಂಖೆಡೆ, 2026*&lt;/p&gt;&lt;p data-block-key="5scb5"&gt;80/1 vs ಚೆನ್ನೈ ಸೂಪರ್‌ ಕಿಂಗ್ಸ್‌, ಚೆನ್ನೈ, 2023&lt;/p&gt;&lt;p data-block-key="4ipeu"&gt;77/1 vs ಸನ್‌ರೈಸರ್‌ಸ್‌ ಹೈದರಾಬಾದ್‌, ಹೈದರಾಬಾದ್‌, 2025&lt;/p&gt;&lt;p data-block-key="ahsbq"&gt;74/2 vs ಪಂಜಾಬ್‌ ಕಿಂಗ್ಸ್‌, ಮೊಹಾಲಿ, 2023&lt;/p&gt;&lt;p data-block-key="chpd"&gt;72/0 vs ಗುಜರಾತ್‌ ಟೈಟನ್ಸ್‌, ಅಹಮದಾಬಾದ್‌, 2023&lt;/p&gt;&lt;h3 data-block-key="f160j"&gt;&lt;b&gt;ನಿಕೋಲಸ್‌ ಪೂರನ್‌ ಸ್ಪೋಟಕ ಫಿಫ್ಟಿ&lt;/b&gt;&lt;/h3&gt;&lt;p data-block-key="9dcbi"&gt;ಈ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ನಿಕೋಲಸ್‌ ಪೂರನ್‌, ತಮ್ಮ ಬ್ಯಾಟಿಂಗ್‌ನಲ್ಲಿ ತುಂಬಾ ವಿಭಿನ್ನವಾಗಿ ಕಂಡು ಬಂದರು. ಆ ಮೂಲಕ ಸೀಸನ್‌ನಲ್ಲಿ ಮೊದಲ ಅರ್ಧಶತಕವನ್ನು ಪೂರೈಸಿದರು. ಅವರು ಆಡಿದ 16 ಎಸೆತಗಳಲ್ಲಿ ಅರ್ಧಶತಕವನ್ನು ಸಿಡಿಸಿದರು. ಆ ಮೂಲಕ ಎಲ್‌ಎಸ್‌ಜಿ ಪರ ಎರಡನೇ ವೇಗದ ಅರ್ಧಶತಕವನ್ನು ಬಾರಿಸಿದರು. ಅಂತಿಮವಾಗಿ ಇವರು ಆಡಿದ 21 ಎಸೆತಗಳಲ್ಲಿ ಬರೋಬ್ಬರಿ 8 ಸಿಕ್ಸರ್‌ ಹಾಗೂ ಒಂದು ಬೌಂಡರಿ ಸಹಿತ 63 ರನ್‌ ಗಳಿಸಿದ ಬಳಿಕ ಕಾರ್ಬಿನ್‌ ಬಾಷ್‌ಗೆ ವಿಕೆಟ್‌ ಒಪ್ಪಿಸಿದರು. ಅವರು 300ರ ಸ್ಟ್ರೈಕ್‌ ರೇಟ್‌ನಲ್ಲಿ ರನ್‌ ಗಳಿಸಿದ್ದು ವಿಶೇಷ. &lt;/p&gt;&lt;p data-block-key="f7iua"&gt;&lt;/p&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="twitter-tweet"&gt;&lt;p lang="en" dir="ltr"&gt;300 SR. 8 sixes. Sab ki taraf se aaj flying kiss, Nicky P ❤️ &lt;a href="https://t.co/PbeRgLBPB5"&gt;pic.twitter.com/PbeRgLBPB5&lt;/a&gt;&lt;/p&gt;&amp;mdash; Lucknow Super Giants (@LucknowIPL) &lt;a href="https://twitter.com/LucknowIPL/status/2051314348451315961?ref_src=twsrc%5Etfw"&gt;May 4, 2026&lt;/a&gt;&lt;/blockquote&gt; &lt;script async src="https://platform.twitter.com/widgets.js" charset="utf-8"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="7ucgt"&gt;&lt;/p&gt;&lt;h3 data-block-key="1p1f0"&gt;&lt;b&gt;ಎಲ್‌ಎಸ್‌ಜಿ ಪರ ವೇಗದ ಅರ್ಧಶತಕ ಸಿಡಿಸಿದ ಬ್ಯಾಟರ್ಸ್‌&lt;/b&gt;&lt;/h3&gt;&lt;p data-block-key="f0mm4"&gt;15 - ನಿಕೋಲಸ್ ಪೂರನ್ vs ಆರ್‌ಸಿಬಿ, ಬೆಂಗಳೂರು, 2023&lt;/p&gt;&lt;p data-block-key="fmh4f"&gt;16 - ನಿಕೋಲಸ್ ಪೂರನ್ vs ಎಂಐ, ವಾಂಖೆಡೆ, 2026*&lt;/p&gt;&lt;p data-block-key="2733t"&gt;18 - ನಿಕೋಲಸ್ ಪೂರನ್ vs ಎಸ್‌ಆರ್‌ಎಚ್‌, ಹೈದರಾಬಾದ್, 2025&lt;/p&gt;&lt;p data-block-key="4imc0"&gt;19 - ನಿಕೋಲಸ್ ಪೂರನ್ vs ಎಂಐ, ವಾಂಖೆಡೆ, 2024&lt;/p&gt;&lt;p data-block-key="cceai"&gt;20 - ಕೈಲ್ ಮೇಯರ್ಸ್ vs ಪಿಬಿಕೆಎಸ್‌, ಮೊಹಾಲಿ, 2023&lt;/p&gt;&lt;p data-block-key="f7vbo"&gt;20 - ನಿಕೋಲಸ್ ಪೂರನ್ vs ಡಿಸಿ, ದೆಹಲಿ, 2024&lt;/p&gt;
&lt;/div&gt;
&lt;/p&gt;]]&gt;</content:encoded></item><item><title>Protest for Drinking water: ಬಾಯಾರಿದ ಚಿಂತಾಮಣಿ 22ನೇ ವಾರ್ಡ್: ರಸ್ತೆಗಿಳಿದು ಆಡಳಿತಕ್ಕೆ ಬಿಸಿ ಮುಟ್ಟಿಸಿದ ಜನತೆ</title><link>https://vishwavani.news/karnataka/chikkaballapur/thirsty-chintamani-ward-22-people-took-to-the-streets-to-express-their-anger-at-the-administration-77224.html</link><guid>https://vishwavani.news/karnataka/chikkaballapur/thirsty-chintamani-ward-22-people-took-to-the-streets-to-express-their-anger-at-the-administration-77224.html</guid><pubDate>Mon, 04 May 2026 14:53:30 +0000</pubDate><description>&lt;![CDATA[ವಾರ್ಡ್ನ ಪುರುಷರು,ಮಹಿಳೆಯರು ಮತ್ತು ಮಕ್ಕಳು ರಸ್ತೆಯಲ್ಲೇ ಕುಳಿತು ಸಂಚಾರಕ್ಕೆ ಅಡ್ಡಿ ಪಡಿಸಿದರು. ಸಾರ್ವಜನಿಕ ಸಾರಿಗೆ ಬಸ್‌ಗಳನ್ನು ತಡೆದು ನಿಲ್ಲಿಸಿದ ಪ್ರತಿಭಟನಾಕಾರರು, ಅಧಿಕಾರಿ ಗಳ ವಿರುದ್ಧ ಘೋಷಣೆಗಳನ್ನು ಕೂಗಿದರು."ನಮಗೆ ಕುಡಿಯುವ ನೀರು ಕೊಡಿ ಇಲ್ಲವೇ ಅಧಿಕಾರ ಬಿಟ್ಟು ತೊಲಗಿ" ಎಂದು ಆಕ್ರೋಶ ವ್ಯಕ್ತಪಡಿಸಿದರು.]]&gt;</description><dc:creator>&lt;![CDATA[Ashok Nayak]]&gt;</dc:creator><category>&lt;![CDATA[ಚಿಕ್ಕಬಳ್ಳಾಪುರ]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕರ್ನಾಟಕ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/4cmt.original.jpg" class="attachment-large size-large wp-post-image" alt="Protest for Drinking water: ಬಾಯಾರಿದ ಚಿಂತಾಮಣಿ 22ನೇ ವಾರ್ಡ್: ರಸ್ತೆಗಿಳಿದು ಆಡಳಿತಕ್ಕೆ ಬಿಸಿ ಮುಟ್ಟಿಸಿದ ಜನತೆ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="n7g6j"&gt;&lt;b&gt;ಚಿಂತಾಮಣಿ:&lt;/b&gt; ನಗರದ ವಾರ್ಡ್ ಸಂಖ್ಯೆ 22ರಲ್ಲಿ ಕಳೆದ ಹಲವು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ತಲೆದೂರಿದ್ದು,ಇದರಿಂದ ಆಕ್ರೋಶಗೊಂಡ ನಿವಾಸಿಗಳು ಖಾಲಿ ಕೊಡಗಳೊಂದಿಗೆ ರಸ್ತೆ ತಡೆ ನಡೆಸಿ ಬೃಹತ್ ಪ್ರತಿಭಟನೆ ನಡೆಸಿದರು.&lt;/p&gt;&lt;p data-block-key="f46lk"&gt;ವಾರ್ಡ್ನ ಪುರುಷರು,ಮಹಿಳೆಯರು ಮತ್ತು ಮಕ್ಕಳು ರಸ್ತೆಯಲ್ಲೇ ಕುಳಿತು ಸಂಚಾರಕ್ಕೆ ಅಡ್ಡಿ ಪಡಿಸಿದರು. ಸಾರ್ವಜನಿಕ ಸಾರಿಗೆ ಬಸ್‌ಗಳನ್ನು ತಡೆದು ನಿಲ್ಲಿಸಿದ ಪ್ರತಿಭಟನಾಕಾರರು, ಅಧಿಕಾರಿ ಗಳ ವಿರುದ್ಧ ಘೋಷಣೆಗಳನ್ನು ಕೂಗಿದರು."ನಮಗೆ ಕುಡಿಯುವ ನೀರು ಕೊಡಿ ಇಲ್ಲವೇ ಅಧಿಕಾರ ಬಿಟ್ಟು ತೊಲಗಿ"ಎಂದು ಆಕ್ರೋಶ ವ್ಯಕ್ತಪಡಿಸಿದರು.&lt;/p&gt;&lt;p data-block-key="4ht0l"&gt;&lt;b&gt;ಇದನ್ನೂ ಓದಿ:&lt;/b&gt; &lt;a href="/karnataka/chikkaballapur/huge-victory-for-congress-candidates-celebrations-by-kai-workers-in-chintamani-77223.html"&gt;Chinthamani News: ಕಾಂಗ್ರೆಸ್ ಅಭ್ಯರ್ಥಿಗಳ ಭರ್ಜರಿ ಗೆಲುವು: ಚಿಂತಾಮಣಿಯಲ್ಲಿ ಕೈ ಕಾರ್ಯಕರ್ತರಿಂದ ಸಂಭ್ರಮ&lt;/a&gt;&lt;/p&gt;&lt;p data-block-key="1qq4c"&gt;ಪ್ರತಿಭಟನೆಯಲ್ಲಿ ಮಾತನಾಡಿದ ಸ್ಥಳೀಯ ನಿವಾಸಿಗಳು,"ಹಲವು ವಾರಗಳಿಂದ ನೀರಿನ ಸರಬ ರಾಜು ಸರಿಯಾಗಿ ಆಗುತ್ತಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಅನಿವಾರ್ಯವಾಗಿ ನಾವು ರಸ್ತೆಗಿಳಿಯ ಬೇಕಾಗಿದೆ," ಎಂದು ತಿಳಿಸಿದರು.&lt;/p&gt;&lt;p data-block-key="3a1mj"&gt;ರಸ್ತೆ ತಡೆಯಿಂದಾಗಿ ಕಿಲೋಮೀಟರ್‌ಗಟ್ಟಲೆ ವಾಹನ ಸವಾರರು ಪರದಾಡುವಂತಾಯಿತು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ನಂತರ ಸಂಬAಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬಂದು ನೀರಿನ ಸಮಸ್ಯೆ ಬಗೆಹರಿ ಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಯಿತು.&lt;/p&gt;&lt;p data-block-key="74bjo"&gt;ನಗರಸಭೆ ಅಧಿಕಾರಿಗಳು ಶೀಘ್ರವೇ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಇನ್ನೂ ತೀವ್ರವಾದ ಹೋರಾಟ ನಡೆಸುವುದಾಗಿ ವಾರ್ಡ್ ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>Election Results 2026: ನಮ್ಮದು ಜನಪರ ಸರ್ಕಾರ ಎನ್ನುವುದಕ್ಕೆ ಫಲಿತಾಂಶ ಸಾಕ್ಷಿ: ಹೆಬ್ಬಾಳ್ಕರ್</title><link>https://vishwavani.news/politics/minister-lakshmi-hebbalkar-respond-about-karnataka-by-elections-result-77214.html</link><guid>https://vishwavani.news/politics/minister-lakshmi-hebbalkar-respond-about-karnataka-by-elections-result-77214.html</guid><pubDate>Mon, 04 May 2026 14:41:26 +0000</pubDate><description>&lt;![CDATA[Laxmi Hebbalkar: ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವು ಜನರು ನಮ್ಮ ಜನಪರ ಆಡಳಿತವನ್ನು ಸ್ವೀಕರಿಸಿರುವುದಕ್ಕೆ ಸ್ಪಷ್ಟ ಉದಾಹರಣೆ. ಇದು ಕೇವಲ ರಾಜಕೀಯ ಗೆಲುವಲ್ಲ, ಜನ ವಿಶ್ವಾಸದ ಗೆಲುವಾಗಿದೆ ಎಂದು  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.]]&gt;</description><dc:creator>&lt;![CDATA[Siddalinga Swamy]]&gt;</dc:creator><category>&lt;![CDATA[ಬೆಳಗಾವಿ]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕರ್ನಾಟಕ]]&gt;</category><category>&lt;![CDATA[ಚುನಾವಣೆ]]&gt;</category><category>&lt;![CDATA[ರಾಜಕೀಯ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Laxmi_Hebbalkar_MbbPmgF.original.jpg" class="attachment-large size-large wp-post-image" alt="Election Results 2026: ನಮ್ಮದು ಜನಪರ ಸರ್ಕಾರ ಎನ್ನುವುದಕ್ಕೆ ಫಲಿತಾಂಶ ಸಾಕ್ಷಿ: ಹೆಬ್ಬಾಳ್ಕರ್" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="i3e95"&gt;&lt;b&gt;ಬೆಳಗಾವಿ, ಮೇ 4:&lt;/b&gt; ಕರ್ನಾಟಕದಲ್ಲಿ ನಮ್ಮ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಕೇವಲ ಘೋಷಣೆಗಳಲ್ಲ, ಜನರ ದಿನನಿತ್ಯದ ಬದುಕಿಗೆ ನಿಜವಾದ ಬೆಂಬಲವಾಗಿ ಪರಿಣಮಿಸಿವೆ. ಜನರ ಕಷ್ಟ, ನೋವು, ಅಗತ್ಯಗಳಿಗೆ ಸ್ಪಂದಿಸಿದ ನಮ್ಮ ಸರ್ಕಾರಕ್ಕೆ ಜನರು ಇದೀಗ ಉಪಚುನಾವಣೆ ಫಲಿತಾಂಶಗಳ ಮೂಲಕ ಸ್ಪಷ್ಟವಾದ ಮನ್ನಣೆ ನೀಡಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ &lt;a href="/politics/message-from-minister-laxmi-hebbalkar-to-the-people-of-the-karnataka-on-the-occasion-of-international-womens-day-71425.html"&gt;&lt;b&gt;ಲಕ್ಷ್ಮಿ ಹೆಬ್ಬಾಳ್ಕರ್&lt;/b&gt;&lt;/a&gt; (Laxmi Hebbalkar) ಹೇಳಿದ್ದಾರೆ.&lt;/p&gt;&lt;p data-block-key="9bqea"&gt;ಈ ಕುರಿತು ಹೇಳಿಕೆ ನೀಡಿರುವ ಅವರು, ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವು ಜನರು ನಮ್ಮ ಜನಪರ ಆಡಳಿತವನ್ನು ಸ್ವೀಕರಿಸಿರುವುದಕ್ಕೆ ಸ್ಪಷ್ಟ ಉದಾಹರಣೆ. ಇದು ಕೇವಲ ರಾಜಕೀಯ ಗೆಲುವಲ್ಲ, ಜನ ವಿಶ್ವಾಸದ ಗೆಲುವಾಗಿದೆ ಎಂದಿದ್ದಾರೆ.&lt;/p&gt;&lt;p data-block-key="b91bb"&gt;ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳು ಮನೆಮನೆಗೂ ತಲುಪಿ, ಮಹಿಳೆಯರು, ಯುವಕರು, ಬಡವರು, ರೈತರು ಸೇರಿದಂತೆ ಪ್ರತಿಯೊಂದು ವರ್ಗದ ಜನರಿಗೆ ಸಹಾಯವಾಗಿವೆ. ಇದೇ ಕಾರಣಕ್ಕೆ ಜನರು ಕಾಂಗ್ರೆಸ್ ಪಕ್ಷದ ಪರವಾಗಿ ನಿಂತಿದ್ದಾರೆ.‌ ಬಿಜೆಪಿಯ ವಿರುದ್ಧ ಜನರು ಸ್ಪಷ್ಟ ಸಂದೇಶ ನೀಡಿದ್ದಾರೆ. ಸುಳ್ಳು ಪ್ರಚಾರ ಮತ್ತು ಜನವಿರೋಧಿ ನೀತಿಗಳಿಗೆ ಕರ್ನಾಟಕದ ಜನರು ತಕ್ಕ ಉತ್ತರ ನೀಡಿದ್ದಾರೆ ಎಂದು ಹೆಬ್ಬಾಳ್ಕರ್ ಹೇಳಿದ್ದಾರೆ.&lt;/p&gt;&lt;p data-block-key="a4sgn"&gt;&lt;a href="/politics/cm-siddaramaiah-congratulates-congress-candidates-who-won-in-the-bagalkot-davanagere-by-elections-77209.html"&gt;&lt;b&gt;ಬಾಗಲಕೋಟೆ, ದಾವಣಗೆರೆ ಕ್ಷೇತ್ರ ಉಪ ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಸಿಎಂ ಅಭಿನಂದನೆ&lt;/b&gt;&lt;/a&gt;&lt;/p&gt;&lt;p data-block-key="5jgdj"&gt;ಇದು ನಮ್ಮ ಸರ್ಕಾರದ ಕೆಲಸಕ್ಕೆ ಸಿಕ್ಕಿರುವ ಜನರ ಸರ್ಟಿಫಿಕೇಟ್. ಮುಂದೆಯೂ ಇದೇ ರೀತಿಯಾಗಿ ಜನಪರ ಯೋಜನೆಗಳನ್ನು ಇನ್ನಷ್ಟು ಬಲಪಡಿಸಿ, ಜನರ ವಿಶ್ವಾಸವನ್ನು ಉಳಿಸಿಕೊಂಡು ಸಾಗುವುದು ನಮ್ಮ ಬದ್ಧತೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>Wedding Fashion 2026: ಟ್ರೆಡಿಷನಲ್ ಕೂದಲ ವಿನ್ಯಾಸಕ್ಕೆ ಸಾಥ್ ನೀಡುತ್ತಿರುವ ಹೇರ್ ಜ್ಯುವೆಲರಿಗಳು</title><link>https://vishwavani.news/photo-gallery/wedding-fashion-2026-various-designs-hair-jewelry-has-now-entered-the-wedding-fashion-jewelry-world-77206.html</link><guid>https://vishwavani.news/photo-gallery/wedding-fashion-2026-various-designs-hair-jewelry-has-now-entered-the-wedding-fashion-jewelry-world-77206.html</guid><pubDate>Mon, 04 May 2026 14:37:30 +0000</pubDate><description>&lt;![CDATA[ಮದುವೆಯ ಸಂಭ್ರಮ ಹೆಚ್ಚಿಸಲು ಹೆಣ್ಣುಮಕ್ಕಳಿಗೆ ಇಷ್ಟವಾಗುವಂತಹ ನಾನಾ ವಿನ್ಯಾಸದ ಹೇರ್ ಜ್ಯುವೆಲರಿಗಳು ಇದೀಗ ವೆಡ್ಡಿಂಗ್ ಫ್ಯಾಷನ್ ಜ್ಯುವೆಲರಿ ಲೋಕಕ್ಕೆ ಲಗ್ಗೆ ಇಟ್ಟಿವೆ. ಜತೆಗೆ ನೋಡಲು ಆಕರ್ಷಕವಾಗಿ ಕಾಣುವ ಇವು ಸಾಂಪ್ರದಾಯಿಕ ಶೈಲಿಗೆ ಹೊಂದುವಂತಹ ನಾನಾ ಡಿಸೈನ್‌ನಲ್ಲಿ ಬಿಡುಗಡೆಗೊಂಡಿವೆ. ಈ ಕುರಿತಂತೆ ಇಲ್ಲಿವೆ ಡಿಟೇಲ್ಸ್.]]&gt;</description><dc:creator>&lt;![CDATA[ಶೀಲಾ ಸಿ ಶೆಟ್ಟಿ]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಲೈಫ್‌ಸ್ಟೈಲ್‌]]&gt;</category><category>&lt;![CDATA[ಫೋಟೋ ಗ್ಯಾಲರಿ]]&gt;</category><category>&lt;![CDATA[ಫ್ಯಾಷನ್‌ ಲೋಕ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Wedding_Fashion_2026_AbbQL3h.original.jpg" class="attachment-large size-large wp-post-image" alt="Wedding Fashion 2026: ಟ್ರೆಡಿಷನಲ್ ಕೂದಲ ವಿನ್ಯಾಸಕ್ಕೆ ಸಾಥ್ ನೀಡುತ್ತಿರುವ ಹೇರ್ ಜ್ಯುವೆಲರಿಗಳು" /&gt;&lt;/figure&gt;&lt;p&gt;
&lt;/p&gt;]]&gt;</content:encoded></item><item><title>Chinthamani News: ಕಾಂಗ್ರೆಸ್ ಅಭ್ಯರ್ಥಿಗಳ ಭರ್ಜರಿ ಗೆಲುವು: ಚಿಂತಾಮಣಿಯಲ್ಲಿ ಕೈ ಕಾರ್ಯಕರ್ತರಿಂದ ಸಂಭ್ರಮ</title><link>https://vishwavani.news/karnataka/chikkaballapur/huge-victory-for-congress-candidates-celebrations-by-kai-workers-in-chintamani-77223.html</link><guid>https://vishwavani.news/karnataka/chikkaballapur/huge-victory-for-congress-candidates-celebrations-by-kai-workers-in-chintamani-77223.html</guid><pubDate>Mon, 04 May 2026 14:35:23 +0000</pubDate><description>&lt;![CDATA[ರಾಜ್ಯದಲ್ಲಿ ನಡೆದ ಉಪ ಚುನಾವಣಾ ಫಲಿತಾಂಶದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ದಾವಣಗೆರೆ ಮತ್ತು ಬಾಗಲಕೋಟೆ ಕ್ಷೇತ್ರಗಳಲ್ಲಿ ಭರ್ಜರಿ ಜಯ ದಾಖಲಿಸಿದ್ದಾರೆ.ಈ ಗೆಲುವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಚಿಂತಾಮಣಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನಗರದ ತಾಲೂಕು ಆಫೀಸ್ ಮುಂಭಾಗ ಪಟಾಕಿ ತಿಳಿಸಿ ಸಿಹಿ ಹಂಚಿ ಸಂಭ್ರಮ ಮಾಡಿದರು.]]&gt;</description><dc:creator>&lt;![CDATA[Ashok Nayak]]&gt;</dc:creator><category>&lt;![CDATA[ಚಿಕ್ಕಬಳ್ಳಾಪುರ]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕರ್ನಾಟಕ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/cc_MA6zTlM.original.jpg" class="attachment-large size-large wp-post-image" alt="Chinthamani News: ಕಾಂಗ್ರೆಸ್ ಅಭ್ಯರ್ಥಿಗಳ ಭರ್ಜರಿ ಗೆಲುವು: ಚಿಂತಾಮಣಿಯಲ್ಲಿ ಕೈ ಕಾರ್ಯಕರ್ತರಿಂದ ಸಂಭ್ರಮ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="1nxpt"&gt;&lt;b&gt;ಚಿಂತಾಮಣಿ&lt;/b&gt;: ರಾಜ್ಯದಲ್ಲಿ ನಡೆದ ಉಪ ಚುನಾವಣಾ ಫಲಿತಾಂಶ(&lt;b&gt;By-election result)&lt;/b&gt;ದ ಹಿನ್ನೆಲೆ ಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ದಾವಣಗೆರೆ ಮತ್ತು ಬಾಗಲಕೋಟೆ ಕ್ಷೇತ್ರಗಳಲ್ಲಿ ಭರ್ಜರಿ ಜಯ ದಾಖಲಿಸಿದ್ದಾರೆ. ಈ ಗೆಲುವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಚಿಂತಾಮಣಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನಗರದ ತಾಲೂಕು ಆಫೀಸ್ ಮುಂಭಾಗ ಪಟಾಕಿ ತಿಳಿಸಿ ಸಿಹಿ ಹಂಚಿ ಸಂಭ್ರಮ ಮಾಡಿದರು.&lt;/p&gt;&lt;p data-block-key="99fgh"&gt;ದಾವಣಗೆರೆ ಮತ್ತು ಬಾಗಲಕೋಟೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದ ಬೆನ್ನಲ್ಲೇ ಚಿಂತಾಮಣಿ ಯ ರಸ್ತೆಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿದರು.&lt;/p&gt;&lt;p data-block-key="8rh9v"&gt;ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಸಚಿವರಾದ ಡಾ.ಎಂ.ಸಿ.ಸುಧಾಕರ್ (&lt;b&gt;Dr M C Sudhakar&lt;/b&gt;)ಅವರ ಭಾವಚಿತ್ರವಿರುವ ಬ್ಯಾನರ್‌ಗಳನ್ನು ಹಿಡಿದ ಕಾರ್ಯಕರ್ತರು, ಪಕ್ಷದ ಬಾವುಟಗಳನ್ನು ಬೀಸುತ್ತಾ ಘೋಷಣೆಗಳನ್ನು ಕೂಗಿದರು.&lt;/p&gt;&lt;p data-block-key="1f7k4"&gt;&lt;b&gt;ಇದನ್ನೂ ಓದಿ: &lt;/b&gt;&lt;a href="/karnataka/davanagere/congress-candidate-samarth-shamanur-wins-in-davanagere-south-by-election-77175.html"&gt;Davanagere South By-Election Results: ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ ಗೆಲುವಿನ ನಗೆ ಬೀರಿದ ಕಾಂಗ್ರೆಸ್‌ ಅಭ್ಯರ್ಥಿ ಸಮರ್ಥ್‌ ಶಾಮನೂರು&lt;/a&gt;&lt;/p&gt;&lt;p data-block-key="cf0lj"&gt;ಗೆಲುವಿನ ಕುರಿತು ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮುರುಗುಮಲ್ಲ ಲಕ್ಷ್ಮೀನಾರಾ ಯಣ ರೆಡ್ಡಿ, ಮುಖಂಡರಾದ ಶೇಕ್ ಸಾಧಿಕ್ ರಜ್ವಿ ಇದು ಜನರ ಗೆಲುವು ಮತ್ತು ಪಕ್ಷದ ಸಂಘಟಿತ ಹೋರಾಟಕ್ಕೆ ಸಂದ ಜಯ ಎಂದು ಬಣ್ಣಿಸಿದರು.&lt;/p&gt;&lt;p data-block-key="hq23"&gt;2028 ರಲ್ಲಿ ಬರುವ ಚುನಾವಣೆಯಲ್ಲಿ ಚಿಂತಾಮಣಿ ವಿಧಾನಸಭಾ ಕ್ಷೇತ್ರದಿಂದ ಡಾ.ಎಂ.ಸಿ. ಸುಧಾಕರ್ ಅವರು ಭಾರಿ ಬಹುಮತದೊಂದಿಗೆ ಜಯಗಳಿಸುವುದು ನಿಶ್ಚಿತ ಎಂದು ಹೇಳಿದರು.&lt;/p&gt;&lt;p data-block-key="7i7d0"&gt;ಕ್ಷೇತ್ರದ ಅಭಿವೃದ್ಧಿ ಮತ್ತು ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳ ಮೇಲೆ ಜನರಿಗೆ ನಂಬಿಕೆಯಿದೆ ಡಾ. ಸುಧಾಕರ್ ಅವರ ನೇತೃತ್ವದಲ್ಲಿ ಕ್ಷೇತ್ರವು ಹೊಸ ಆಯಾಮ ಪಡೆಯಲಿದೆ ಎಂದು ತಿಳಿಸಿದರು.&lt;/p&gt;&lt;p data-block-key="3f5rq"&gt;ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಅಧ್ಯಕ್ಷರಾದ ಶ್ರೀನಾಥ್ ಬಾಬು, ಕಾಂಗ್ರೆಸ್ ಮುಖಂಡರಾದ ರೇಖಾ ಉಮೇಶ್, ಸಿ ಕೆ ಎಲ್ ಚಾಂದ್ ಪಾಷ, ಅಂಜನಪ್ಪ, ಆರ್ ಎಂ ಜೆ ಶ್ರೀನಿವಾಸ್, ಮಾದ ಮಂಗಲ ಚಂದ್ರಪ್ಪ, ಶ್ರೀನಿವಾಸ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>4 ರಾಜ್ಯ, 1 ಕೇಂದ್ರಾಡಳಿತ ಪ್ರದೇಶದ ಚುನಾವಣಾ ಫಲಿತಾಂಶ; ಯಾವ ರಾಜ್ಯದಲ್ಲಿ ಯಾರು ಅಧಿಕಾರಕ್ಕೆ ಬಂದ್ರು?</title><link>https://vishwavani.news/national/election-results-for-four-states-and-one-union-territory-who-is-leading-here-is-a-brief-overview-77216.html</link><guid>https://vishwavani.news/national/election-results-for-four-states-and-one-union-territory-who-is-leading-here-is-a-brief-overview-77216.html</guid><pubDate>Mon, 04 May 2026 14:29:01 +0000</pubDate><description>&lt;![CDATA[Election Results 2026: 2026ರ ನಾಲ್ಕು ರಾಜ್ಯಗಳು (ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳಂ, ಅಸ್ಸಾಂ) ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ (ಪುದುಚೇರಿ) ವಿಧಾನಸಭಾ ಚುನಾವಣೆಗಳ ಫಲಿತಾಂಶ ಇಂದು (ಮೇ 4) ಪ್ರಕಟವಾಗಿದ್ದು, ಭಾರತೀಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದೆ. ಈ ಚುನಾವಣಾ ಫಲಿತಾಂಶಗಳ ಒಂದು ಸಂಕ್ಷಿಪ್ತ ನೋಟ ಇಲ್ಲಿದೆ:]]&gt;</description><dc:creator>&lt;![CDATA[Priyanka P]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ದೇಶ]]&gt;</category><category>&lt;![CDATA[ರಾಜಕೀಯ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/elections_2026.original.jpg" class="attachment-large size-large wp-post-image" alt="4 ರಾಜ್ಯ, 1 ಕೇಂದ್ರಾಡಳಿತ ಪ್ರದೇಶದ ಚುನಾವಣಾ ಫಲಿತಾಂಶ; ಯಾವ ರಾಜ್ಯದಲ್ಲಿ ಯಾರು ಅಧಿಕಾರಕ್ಕೆ ಬಂದ್ರು?" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="nj4gl"&gt;&lt;b&gt;ನವದೆಹಲಿ, ಮೇ 4:&lt;/b&gt; 2026ರ ನಾಲ್ಕು ರಾಜ್ಯಗಳು (ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳಂ, ಅಸ್ಸಾಂ) ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ (ಪುದುಚೇರಿ) ವಿಧಾನಸಭಾ ಚುನಾವಣೆಗಳ ಫಲಿತಾಂಶ ಇಂದು (ಮೇ 4) ಪ್ರಕಟವಾಗಿದ್ದು, ಭಾರತೀಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದೆ. ಪಶ್ಚಿಮ ಬಂಗಾಳದಲ್ಲಿ ಸಿಎಂ ಮಮತಾ ಬ್ಯಾನರ್ಜಿಯ &lt;a href="https://vishwavani.news/national/bjps-massive-victory-in-west-bengal-mamata-banerjee-still-claims-we-will-definitely-win-77186.html"&gt;&lt;b&gt;(Mamatha Banerjee)&lt;/b&gt;&lt;/a&gt; ಅವರ15 ವರ್ಷದ ಆಳ್ವಿಕೆ ಅಂತ್ಯ ಕಂಡರೆ, ತಮಿಳುನಾಡಿನಲ್ಲಿ ಮುಖ್ಯಮಂತ್ರಿ, ಡಿಎಂಕೆ ನಾಯಕ ಎಂ.ಕೆ. ಸ್ಟಾಲಿನ್ (MK Stalin) ಸೋಲುಂಡಿದ್ದಾರೆ. ಕೇರಳಂನಲ್ಲಿ ಎಡರಂಗ ನೆಲಕಚ್ಚಿದ್ದು, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಜಯಭೇರಿ ಬಾರಿಸಿದೆ. ಅತ್ತ ಅಸ್ಸಾಂನಲ್ಲೂ ಕಮಲ ಅರಳಿದೆ. ಪುದುಚೇರಿಯಲ್ಲೂ ಎನ್‌ಡಿಎ ಗೆಲುವಿನತ್ತ ಮುಖ ಮಾಡಿದೆ. ಈ ಚುನಾವಣಾ ಫಲಿತಾಂಶಗಳ ಒಂದು ಸಂಕ್ಷಿಪ್ತ ನೋಟ ಇಲ್ಲಿದೆ:&lt;/p&gt;&lt;h3 data-block-key="2plrk"&gt;&lt;b&gt;ಪಶ್ಚಿಮ ಬಂಗಾಳ ಚುನಾವಣೆ ಫಲಿತಾಂಶ&lt;/b&gt;&lt;/h3&gt;&lt;p data-block-key="1gfio"&gt;2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ 200 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.  ಮತಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಅಡಿಯಲ್ಲಿ ಮತದಾರರ ಹೆಸರನ್ನು ದಾಖಲೆ ಸಂಖ್ಯೆಯಲ್ಲಿ ಡಿಲೀಟ್‌ ಮಾಡಿದ ನಂತರದ ಮೊದಲ ಚುನಾವಣೆಯಲ್ಲಿ, 15 ವರ್ಷಗಳ ಅಧಿಕಾರದ ನಂತರ ತೃಣಮೂಲ ಕಾಂಗ್ರೆಸ್‌ ಪಕ್ಷ ಸೋಲಿನತ್ತ ಮುಖ ಮಾಡಿದೆ.&lt;/p&gt;&lt;p data-block-key="d9ueu"&gt;ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ 294 ಸ್ಥಾನಗಳಿವೆ. ಸರ್ಕಾರ ರಚಿಸಲು 148 ಸ್ಥಾನಗಳ ಸರಳ ಬಹುಮತದ ಅಗತ್ಯವಿದೆ. ಯಾವುದೇ ಪಕ್ಷ ಅಥವಾ ಮೈತ್ರಿ ಪಕ್ಷಗಳು ಚುನಾವಣೆಯಲ್ಲಿ ಗೆಲ್ಲಲು ಈ ಮ್ಯಾಜಿಕ್ ನಂಬರ್ ಗಳಿಸಬೇಕು.&lt;/p&gt;&lt;p data-block-key="1hvro"&gt;&lt;a href="https://vishwavani.news/elections/bjp-releases-modimay-bharat-map-saffron-wave-reaches-west-bengal-77215.html"&gt;&lt;b&gt;ಮೋದಿಮಯ್ ಭಾರತ್ʼ ನಕ್ಷೆ ಬಿಡುಗಡೆ ಮಾಡಿದ ಬಿಜೆಪಿ: ಪಶ್ಚಿಮ ಬಂಗಾಳವನ್ನು ತಲುಪಿದೆ ಕೇಸರಿ ಅಲೆ&lt;/b&gt;&lt;/a&gt;&lt;/p&gt;&lt;p data-block-key="3kh0n"&gt;ಇನ್ನು ಯಾವುದೆಲ್ಲ ಪಕ್ಷಗಳು ಮುನ್ನಡೆ ಸಾಧಿಸಿವೆ ಎಂಬುದು ನೋಡೋದಾದ್ರೆ, ಬಿಜೆಪಿಯು 204 ಸ್ಥಾನ, ಟಿಎಂಸಿ 84, ಕಾಂಗ್ರೆಸ್ 2, ಆಮ್ ಜನತಾ ಉನ್ನಯನ್ ಪಾರ್ಟಿ 2, ಸಿಪಿಐ (ಎಂ) 1, ಇತರರು 1 ಸ್ಥಾನ ಗಳಿಸಿದ್ದಾರೆ. ಬಿಜೆಪಿಯು ಮ್ಯಾಜಿಕ್ ನಂಬರ್ ದಾಟಿದ್ದು, ಮೊದಲ ಬಾರಿಗೆ ಬಂಗಾಳದಲ್ಲಿ ಕಮಲ ಅರಳಿದೆ. ಟಿಎಂಸಿಗೆ ಹೀನಾಯ ಸೋಲುಂಟಾಗಿದ್ದರೂ, ಭವಾನಿಪುರ ಕ್ಷೇತ್ರದಲ್ಲಿ ಮಮತಾ ಬ್ಯಾನರ್ಜಿ ಬಿಜೆಪಿಯ ಸುವೇಂದು ಅಧಿಕಾರಿ ವಿರುದ್ಧ ಸುಮಾರು 5,000 ಮತಗಳ ಅಂತರದಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ.&lt;/p&gt;&lt;h3 data-block-key="969kp"&gt;&lt;b&gt;ತಮಿಳುನಾಡು ಚುನಾವಣೆ ಫಲಿತಾಂಶ&lt;/b&gt;&lt;/h3&gt;&lt;p data-block-key="acnud"&gt;ತಮಿಳುನಾಡಿನಲ್ಲಿ ದಶಕಗಳ ಕಾಲ ಆಳಿದ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳಿಗೆ ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) ಮಣ್ಣು ಮುಕ್ಕಿಸಿದೆ. ಆಡಳಿತಾರೂಢ ಡಿಎಂಕೆಗೆ ಭಾರಿ ಹಿನ್ನಡೆಯಾಗಿ, ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ತಮ್ಮ ಭದ್ರಕೋಟೆಯಾದ ಕೊಳತ್ತೂರು ಕ್ಷೇತ್ರದಲ್ಲೇ ಟಿವಿಕೆ ಅಭ್ಯರ್ಥಿ ವಿ.ಎಸ್. ಬಾಬು ವಿರುದ್ಧ ಸೋಲು ಕಂಡಿದ್ದಾರೆ.&lt;/p&gt;&lt;p data-block-key="6ecda"&gt;ವಿಜಯ್ ನೇತೃತ್ವದ ಟಿವಿಕೆ ಪಕ್ಷವು ತನ್ನ ಮೊದಲ ಚುನಾವಣೆಯಲ್ಲಿ ಗೆಲುವಿನತ್ತ ಸಾಗುತ್ತಿರುವಂತೆ ತೋರುತ್ತಿದೆ. ಪಕ್ಷವು 111 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದರೆ, ಆಡಳಿತ ಪಕ್ಷ ಡಿಎಂಕೆ ಕೇವಲ 71 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಭಾರತೀಯ ಚುನಾವಣಾ ಆಯೋಗದ ಪ್ರಕಾರ, ವಿಜಯ್ ಅವರ ಟಿವಿಕೆ ಇದುವರೆಗೆ 22 ಸ್ಥಾನಗಳನ್ನು, ಎಂಕೆ ಸ್ಟಾಲಿನ್ ಅವರ ಡಿಎಂಕೆ 8 ಸ್ಥಾನಗಳನ್ನು ಗೆದ್ದಿದೆ.&lt;/p&gt;&lt;p data-block-key="5f6mk"&gt;ತಮಿಳಗ ವೆಟ್ರಿ ಕಳಗಂ 109 ಸ್ಥಾನಗಳನ್ನು ಪಡೆದರೆ, ಎಐಎಡಿಎಂಕೆ 64, ಡಿಎಂಕೆ 44, ಕಾಂಗ್ರೆಸ್ 5, ಬಿಜೆಪಿ 3, ಇತರರು 09 ಸ್ಥಾನ ಗಳಿಸಿದ್ದಾರೆ. ಒಟ್ಟು ವಿಧಾನಸಭಾ ಸ್ಥಾನಗಳು 234. ಸರ್ಕಾರ ರಚಿಸಲು 118 ಸ್ಥಾನಗಳ ಅಗತ್ಯವಿದ್ದು, ಸದ್ಯಕ್ಕೆ ವಿಜಯ್ ಅವರ ಟಿವಿಕೆ ಪಕ್ಷವು ಬಹುಮತಕ್ಕೆ ಕೇವಲ 9 ಸ್ಥಾನಗಳ ಅಂತರದಲ್ಲಿದೆ.&lt;/p&gt;&lt;h3 data-block-key="882sp"&gt;&lt;b&gt;ಅಸ್ಸಾಂ ಫಲಿತಾಂಶ&lt;/b&gt;&lt;/h3&gt;&lt;p data-block-key="d4vr0"&gt;ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ನೇತೃತ್ವದ ಬಿಜೆಪಿ ಮೈತ್ರಿಕೂಟವು ಸತತ ಮೂರನೇ ಬಾರಿಗೆ ಭರ್ಜರಿ ಬಹುಮತದೊಂದಿಗೆ ಅಧಿಕಾರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಸ್ಪಷ್ಟ ಬಹುಮತ ಸಾಧಿಸಿವೆ. ಸರ್ಕಾರ ರಚಿಸಲು ಬೇಕಾದ ಮ್ಯಾಜಿಕ್ ನಂಬರ್ 64. ಬಿಜೆಪಿ ನೇತೃತ್ವದ ಎನ್‌ಡಿಎ ಗೆಲುವಿನತ್ತ ಧಾವಿಸುತ್ತಿದ್ದು, 100 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.&lt;/p&gt;&lt;p data-block-key="7vuj2"&gt;&lt;a href="https://vishwavani.news/national/vijay-tamil-nadu-alliance-options-government-formation-77208.html"&gt;&lt;b&gt;ತಮಿಳುನಾಡು ರಾಜಕೀಯದಲ್ಲಿ ಸಂಚಲನ ಮೂಡಿಸಿದ ಟಿವಿಕೆಯ ವಿಜಯ್ ಮುಂದಿದೆ ಹಲವು ಆಯ್ಕೆಗಳು&lt;/b&gt;&lt;/a&gt;&lt;/p&gt;&lt;h3 data-block-key="e3m4h"&gt;&lt;b&gt;ಕೇರಳಂ ಚುನಾವಣೆ ಫಲಿತಾಂಶ&lt;/b&gt;&lt;/h3&gt;&lt;p data-block-key="e0l0v"&gt;ಕೇರಳಂ ವಿಧಾನಸಭಾ ಚುನಾವಣೆ 2026ರ ಫಲಿತಾಂಶವು ರಾಜಕೀಯ ಸಂಚಲನ ಮೂಡಿಸಿದೆ. ಕಳೆದ 10 ವರ್ಷಗಳಿಂದ ಆಡಳಿತ ನಡೆಸುತ್ತಿದ್ದ ಎಲ್‌ಡಿಎಫ್‌ (LDF) ಮೈತ್ರಿಕೂಟವನ್ನು ಜನರು ತಿರಸ್ಕರಿಸಿದ್ದು, ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ (UDF) ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಮರಳಿದೆ. ಯುಡಿಎಫ್ - ಕಾಂಗ್ರೆಸ್ ಮೈತ್ರಿಕೂಟ 99 ಸ್ಥಾನಗಳು, ಎಲ್‌ಡಿಎಫ್- ಎಡರಂಗ ಮೈತ್ರಿಕೂಟಕ್ಕೆ 38, ಬಿಜೆಪಿ/ಎನ್‌ಡಿಎಗೆ 3 ಲಭಿಸಿದೆ. ಒಟ್ಟು 140 ಸ್ಥಾನಗಳಲ್ಲಿ ಸರ್ಕಾರ ರಚಿಸಲು ಬೇಕಾದ ಮ್ಯಾಜಿಕ್ ನಂಬರ್ 79. ಕಾಂಗ್ರೆಸ್ ನೇತೃತ್ವದ ಯುಡಿಎಫ್‌ 99 ಸ್ಥಾನಗಳನ್ನು ಗೆಲ್ಲುವ ಸೂಚನೆ ನೀಡುವ ಮೂಲಕ ಸ್ಪಷ್ಟ ಬಹುಮತ ಪಡೆದಿದೆ. ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸರ್ಕಾರ ರಚಿಸಲು ಸಜ್ಜಾಗಿದ್ದು, ಎಡಪಕ್ಷಗಳು ಸತತ ಮೂರನೇ ಅವಧಿಗೆ ಅಧಿಕಾರ ಹಿಡಿಯುವ ಪ್ರಯತ್ನಕ್ಕೆ ಬ್ರೇಕ್ ಹಾಕಿದೆ.&lt;/p&gt;&lt;h3 data-block-key="et024"&gt;&lt;b&gt;ಪುದುಚೇರಿ ಫಲಿತಾಂಶ&lt;/b&gt;&lt;/h3&gt;&lt;p data-block-key="1sq8h"&gt;30 ಸದಸ್ಯ ಬಲದ ಚುನಾಯಿತ ವಿಧಾನಸಭೆಯಲ್ಲಿ, ಸರ್ಕಾರ ರಚಿಸಲು ಅಗತ್ಯವಿರುವ ಅರ್ಧದಷ್ಟು ಸ್ಥಾನಗಳು 16. ಎನ್. ರಂಗಸ್ವಾಮಿ ನೇತೃತ್ವದ ಎನ್‌ಡಿಎ (NDA) ಮೈತ್ರಿಕೂಟ ಸತತ ಎರಡನೇ ಬಾರಿಗೆ ಅಧಿಕಾರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಎನ್‌ಡಿಎ ಮೈತ್ರಿಕೂಟ 18, ಇಂಡಿಯಾ ಮೈತ್ರಿಕೂಟ 6, ತಮಿಳಗ ವೆಟ್ರಿ ಕಳಗಂ 2, ಪಕ್ಷೇತರರು 4 ಸ್ಥಾನಗಲಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಮ್ಯಾಜಿಕ್ ಸಂಖ್ಯೆಯನ್ನು ಎನ್‌ಡಿಎ ದಾಟಿದೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>MI vs LSG ಪಂದ್ಯದಿಂದ ಹಾರ್ದಿಕ್‌ ಪಾಂಡ್ಯಗೆ ಕೊಕ್‌!  ಕಾರಣ ತಿಳಿಸಿದ ಸೂರ್ಯಕುಮಾರ್‌ ಯಾದವ್‌!</title><link>https://vishwavani.news/sports/cricket/why-hardik-pandya-is-not-playing-for-mi-vs-lsg-and-suryakumar-yadav-is-leading-77222.html</link><guid>https://vishwavani.news/sports/cricket/why-hardik-pandya-is-not-playing-for-mi-vs-lsg-and-suryakumar-yadav-is-leading-77222.html</guid><pubDate>Mon, 04 May 2026 14:27:55 +0000</pubDate><description>&lt;![CDATA[Why Hardik Pandya not Playing against LSG: ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಇದೀಗ ಮುಂಬೈ ಇಂಡಿಯನ್ಸ್‌ ಹಾಗೂ ಲಖನೌ ಸೂಪರ್‌ ಜಯಂಟ್ಸ್‌ ತಂಡಗಳು ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಟಾಸ್‌ ಗೆದ್ದು ಮುಂಬೈ, ಮೊದಲು ಬೌಲಿಂಗ್‌ ಆಯ್ಕೆ ಮಾಡಿಕೊಂಡಿತು. ಈ ಪಂದ್ಯದಲ್ಲಿ ಹಾರ್ದಿಕ್‌ ಅನುಪಸ್ಥಿತಿಯಲ್ಲಿ ಸೂರ್ಯಕುಮಾರ್‌‌ ಯಾದವ್ ನಾಯಕನಾಗಿ ಆಡುತ್ತಿದ್ದಾರೆ.]]&gt;</description><dc:creator>&lt;![CDATA[Ramesh Kote]]&gt;</dc:creator><category>&lt;![CDATA[ಕ್ರಿಕೆಟ್‌]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕ್ರೀಡೆ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Hardik_Pandya_VE7FsPQ.original.jpg" class="attachment-large size-large wp-post-image" alt="MI vs LSG ಪಂದ್ಯದಿಂದ ಹಾರ್ದಿಕ್‌ ಪಾಂಡ್ಯಗೆ ಕೊಕ್‌!  ಕಾರಣ ತಿಳಿಸಿದ ಸೂರ್ಯಕುಮಾರ್‌ ಯಾದವ್‌!" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="hmpps"&gt;&lt;b&gt;ಮುಂಬೈ:&lt;/b&gt; ಲಖನೌ ಸೂಪರ್ ಜಯಂಟ್ಸ್‌ (LSG) ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (MI) ತಂಡದ ನಾಯಕತ್ವವನ್ನು ಸೂರ್ಯಕುಮಾರ್ ಯಾದವ್ ವಹಿಸಿಕೊಂಡಿದ್ದಾರೆ. ಪ್ಲೇಆಫ್ ಅವಕಾಶಗಳು ಬಹುತೇಕ ಕೈತಪ್ಪಿರುವ ಹಿನ್ನೆಲೆಯಲ್ಲಿ, ಮುಂಬೈ ತಮ್ಮ ಸೀಸನ್‌ ಅನ್ನು ಕಮ್‌ಬ್ಯಾಕ್‌ ಮಾಡುವ ಮೂಲಕ ಮುಗಿಸಲು ಪ್ರಯತ್ನಿಸುತ್ತಿದೆ. 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026)) ಪಂದ್ಯವು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿದ್ದು, ಹಾರ್ದಿಕ್ ಪಾಂಡ್ಯ ಪ್ಲೇಯಿಂಗ್ ಇಲೆವನ್‌ನಲ್ಲಿ ಸ್ಥಾನ ಪಡೆದಿಲ್ಲ. ಇದಕ್ಕೆ ಕಾರಣವೇನೆಂದು ಹಂಗಾಮಿ ನಾಯಕ ಸೂರ್ಯಕುಮಾರ್‌ ಯಾದವ್‌ ಟಾಸ್‌ ವೇಳೆ ತಿಳಿಸಿದ್ದಾರೆ.&lt;/p&gt;&lt;p data-block-key="1icq9"&gt;ಭಾರತದ ಟಿ20ಐ ನಾಯಕ ಸೂರ್ಯಕುಮಾರ್ ಯಾದವ್ ಟಾಸ್ ಗೆದ್ದು ಮೊದಲು ಬೌಲ್ ಮಾಡಲು ತೀರ್ಮಾನಿಸಿದರು. ಮತ್ತೊಂದು ಪ್ರಮುಖ ಬೆಳವಣಿಗೆಯಾಗಿ‌ ಮಾಜಿ ನಾಯಕ ರೋಹಿತ್ ಶರ್ಮಾ ಪ್ಲೇಯಿಂಗ್ ಇಲೆವನ್‌ಗೆ ಮರಳಿದ್ದಾರೆ. ತಂಡದಲ್ಲಿ ಒಟ್ಟು ನಾಲ್ಕು ಬದಲಾವಣೆಗಳನ್ನು ಮಾಡಲಾಗಿದೆ. ರೋಹಿತ್ ಶರ್ಮಾ ತಂಡಕ್ಕೆ ಮರಳಿದರೆ, ಕಾರ್ಬಿನ್ ಬಾಷ್ ಅವರು ಟ್ರೆಂಟ್ ಬೌಲ್ಟ್ ಅವರ ಸ್ಥಾನಕ್ಕೆ ಮರಳಿದ್ದಾರೆ. ಮಾಜಿ ನಾಯಕ ರೋಹಿತ್ ಶರ್ಮಾ ಇಂಪ್ಯಾಕ್ಟ್ ಸಬ್ ಆಗಿ ಮಾತ್ರ ಆಡಿಸಲಾಗುತ್ತದೆ. ಹಾಗಾಗಿ ರಾಬಿನ್ ಮಿನ್ಜ್ ಅವರನ್ನು ಕೈಬಿಡಲಾಗಿದೆ. ರಾಜ್ ಬಾವಾ ಅವರು ಹಾರ್ದಿಕ್ ಪಾಂಡ್ಯ ಸ್ಥಾನವನ್ನು ಪಡೆದಿದ್ದು, ದೀಪಕ್ ಚಹರ್ ಅವರು ಕ್ರಿಶ್ ಭಗತ್ ಬದಲು ಪ್ಲೇಯಿಂಗ್ ಇಲೆವನ್‌ಗೆ ಮರಳಿದ್ದಾರೆ.&lt;/p&gt;&lt;p data-block-key="5lh8g"&gt;&lt;a href="/sports/cricket/ipl-2026-no-ms-dhoni-in-chennai-super-kings-next-game-after-legend-skips-delhi-trip-77217.html"&gt;&lt;b&gt;IPL 2026: ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಸಿಎಸ್‌ಕೆಯ ಪಂದ್ಯಕ್ಕೂ ಎಂಎಸ್‌ ಧೋನಿ ಇಲ್ಲ!&lt;/b&gt;&lt;/a&gt;&lt;/p&gt;&lt;p data-block-key="8ldc2"&gt;ಮುಂಬೈ ಇಂಡಿಯನ್ಸ್ ಮತ್ತು ಲಖನೌ ಸೂಪರ್ ಜಯಂಟ್ಸ್‌ ನಡುವಿನ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಬದಲು ಸೂರ್ಯಕುಮಾರ್ ಯಾದವ್ ನಾಯಕತ್ವ ವಹಿಸಿರುವುದಕ್ಕೆ ಕಾರಣ, ಹಾರ್ದಿಕ್ ಆರೋಗ್ಯವಾಗಿಲ್ಲವೆಂದು ತಿಳಿದುಬಂದಿದೆ.&lt;/p&gt;&lt;p data-block-key="7unlh"&gt;ಟಾಸ್ ವೇಳೆ ಸೂರ್ಯಕುಮಾರ್ ಯಾದವ್ ಈ ವಿಷಯವನ್ನು ಬಹಿರಂಗಪಡಿಸಿದ್ದು, ಹಾರ್ದಿಕ್ ಅನಾರೋಗ್ಯದಿಂದ ಬಳಲುತ್ತಿರುವುದರಿಂದ ಅವರು ಪ್ಲೇಯಿಂಗ್ ಇಲೆವನ್‌ನಲ್ಲಿಲ್ಲ ಎಂದು ಹೇಳಿದ್ದಾರೆ. ಗುಜರಾತ್ ಟೈಟನ್ಸ್ ಮಾಜಿ ನಾಯಕ ಹಾರ್ದಿಕ್ ಅವರ ನಾಯಕತ್ವದ ಭವಿಷ್ಯ ಬಗ್ಗೆ ಕೆಲ ಅನುಮಾನಗಳು ಮೂಡಿದರೂ, ಐಪಿಎಲ್‌ನ ಐದು ಬಾರಿ ಚಾಂಪಿಯನ್ಸ್‌ ಮುಂಬೈ ಇಂಡಿಯನ್ಸ್ ತಂಡದಿಂದ ಟೂರ್ನಿಯ ಮಧ್ಯದಲ್ಲಿ ನಾಯಕತ್ವ ಬದಲಾವಣೆ ಮಾಡುವ ಯಾವುದೇ ಸೂಚನೆ ಇಲ್ಲ.&lt;/p&gt;&lt;p data-block-key="cssra"&gt;&lt;/p&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="twitter-tweet"&gt;&lt;p lang="en" dir="ltr"&gt; 4 changes in today&amp;#39;s playing XI  &lt;br&gt;&lt;br&gt;➡️ Bawa, Raghu, Chahar &amp;amp; Bosch&lt;br&gt;⬅️ HP, Minz, Krish &amp;amp; Boult &lt;br&gt;&lt;br&gt;Hardik misses out due to back spasm. &lt;a href="https://t.co/EWFiCzBm5o"&gt;pic.twitter.com/EWFiCzBm5o&lt;/a&gt;&lt;/p&gt;&amp;mdash; Mumbai Indians (@mipaltan) &lt;a href="https://twitter.com/mipaltan/status/2051299287980765607?ref_src=twsrc%5Etfw"&gt;May 4, 2026&lt;/a&gt;&lt;/blockquote&gt; &lt;script async src="https://platform.twitter.com/widgets.js" charset="utf-8"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="4tvfh"&gt;&lt;/p&gt;&lt;h3 data-block-key="56fgo"&gt;&lt;b&gt;ಹಾರ್ದಿಕ್‌ ಪಾಂಡ್ಯಗೆ ಬೆನ್ನು ನೋವು&lt;/b&gt;&lt;/h3&gt;&lt;p data-block-key="e5pra"&gt;ಮುಂಬೈ ಇಂಡಿಯನ್ಸ್ ತಂಡದ ಅಧಿಕೃತ ಪ್ರಕಟಣೆಯ ಪ್ರಕಾರ, “ಹಾರ್ದಿಕ್ ಬೆನ್ನು ನೋವಿನ ಕಾರಣದಿಂದ ಈ ಪಂದ್ಯದಿಂದ ವಿಶ್ರಾಂತಿ ಪಡೆಯುತ್ತಿದ್ದಾರೆ," ಎಂದು ತಿಳಿಸಲಾಗಿದೆ.&lt;/p&gt;&lt;p data-block-key="18rvr"&gt;ಈ ಸೀಸನ್‌ನಲ್ಲಿ ಹಾರ್ದಿಕ್ ಪಾಂಡ್ಯ ತಪ್ಪಿಸಿಕೊಂಡಿರುವುದು ಇದು ಎರಡನೇ ಪಂದ್ಯವಾಗಿದ್ದು, ಈ ಎರಡೂ ಸಂದರ್ಭಗಳಲ್ಲಿ ಸೂರ್ಯಕುಮಾರ್ ಯಾದವ್ ತಂಡವನ್ನು ಮುನ್ನಡೆಸಿದ್ದಾರೆ. ಇದಕ್ಕೂ ಮೊದಲು ಅವರು ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ವಿರುದ್ಧದ ಹೊರಗಿನ ಪಂದ್ಯಕ್ಕೂ ಅನಾರೋಗ್ಯದ ಕಾರಣದಿಂದ ಗೈರಾಗಿದ್ದರು. ಅದು ಸೀಸನ್‌ನ ಎರಡನೇ ಪಂದ್ಯವಾಗಿದ್ದು, ನವದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದಿದ್ದ ಆ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಆರು ವಿಕೆಟ್‌ಗಳಿಂದ ಸೋಲನುಭವಿಸಿತ್ತು.&lt;/p&gt;&lt;p data-block-key="dsm54"&gt;ಲಖನೌ ಸೂಪರ್ ಜಯಂಟ್ಸ್ ತಂಡದ ವಿಷಯಕ್ಕೆ ಬಂದರೆ, ಅವರು ಮೂರು ಬದಲಾವಣೆಗಳನ್ನು ಮಾಡಿದ್ದಾರೆ. ಜಾಶ್‌ ಇಂಗ್ಲಿಸ್ ಫ್ರಾಂಚೈಸಿಗಾಗಿ ತಮ್ಮ ಮೊದಲ ಪಂದ್ಯವನ್ನು ಆಡುತ್ತಿದ್ದಾರೆ. ಜೊತೆಗೆ ಅಕ್ಷತ್ ರಘುವಂಶಿ ಕೂಡ ಐಪಿಎಲ್‌ನಲ್ಲಿ ತನ್ನ ಮೊದಲ ಪಂದ್ಯವನ್ನು ಆಡುತ್ತಿದ್ದಾರೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ತಮಿಳುನಾಡು ರಾಜಕಾರಣದಲ್ಲಿ ʻಸೀಟಿʼ ಊದಿಕೊಂಡೇ ಸುನಾಮಿ ಎಬ್ಬಿಸಿದ ನಟ ವಿಜಯ್; ‌ʻದಳಪತಿʼ ಗೆಲುವಿಗೆ ಸಂಭ್ರಮಿಸಿದ ಚಿತ್ರರಂಗ</title><link>https://vishwavani.news/movies/chiranjeevi-kamal-haasan-suriya-and-others-congratulate-thalapathy-vijay-for-tvk-win-in-tamilnadu-election-2026-77220.html</link><guid>https://vishwavani.news/movies/chiranjeevi-kamal-haasan-suriya-and-others-congratulate-thalapathy-vijay-for-tvk-win-in-tamilnadu-election-2026-77220.html</guid><pubDate>Mon, 04 May 2026 14:17:25 +0000</pubDate><description>&lt;![CDATA[ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ ವಿಜಯ್ ಅವರ 'ಟಿವಿಕೆ' ಪಕ್ಷವು ಐತಿಹಾಸಿಕ ಗೆಲುವು ಸಾಧಿಸುತ್ತಿರುವ ಬೆನ್ನಲ್ಲೇ ಭಾರತೀಯ ಚಿತ್ರರಂಗ ಸಂಭ್ರಮಿಸುತ್ತಿದೆ. ಮೊದಲ ಪ್ರಯತ್ನದಲ್ಲೇ ಅಧಿಕಾರದ ಗದ್ದುಗೆ ಏರುತ್ತಿರುವ ನಟ ವಿಜಯ್ ಅವರಿಗೆ ಮೆಗಾಸ್ಟಾರ್ ಚಿರಂಜೀವಿ, ಕಮಲ್ ಹಾಸನ್, ಸೂರ್ಯ ಮತ್ತು ನಾನಿ ಸೇರಿದಂತೆ ಹಲವು ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.]]&gt;</description><dc:creator>&lt;![CDATA[Avinash GR]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ದೇಶ]]&gt;</category><category>&lt;![CDATA[ಮನರಂಜನೆ]]&gt;</category><category>&lt;![CDATA[ಸಿನಿಮಾ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Vijay_1_mYhDTiI.original.jpg" class="attachment-large size-large wp-post-image" alt="ತಮಿಳುನಾಡು ರಾಜಕಾರಣದಲ್ಲಿ ʻಸೀಟಿʼ ಊದಿಕೊಂಡೇ ಸುನಾಮಿ ಎಬ್ಬಿಸಿದ ನಟ ವಿಜಯ್; ‌ʻದಳಪತಿʼ ಗೆಲುವಿಗೆ ಸಂಭ್ರಮಿಸಿದ ಚಿತ್ರರಂಗ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="r5o5q"&gt;ತಮಿಳುನಾಡು ಚುನಾವಣೆಯಲ್ಲಿ ಟಿವಿಕೆ ಪಕ್ಷವು ಭರ್ಜರಿ ಗೆಲುವಿನತ್ತ ದಾಪುಗಾಲು ಹಾಕುತ್ತಿದೆ. ಇಷ್ಟು ದಿನ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಿದ್ದ ನಟ ʻದಳಪತಿʼ ವಿಜಯ್, ಈಗ ಚುನಾವಣಾ ಕಣದಲ್ಲಿ ಧೂಳೆಬ್ಬಿಸುತ್ತಿದ್ದಾರೆ. ತಮಿಳುನಾಡಿನ ಚುನಾವಣಾ ಕಣದಲ್ಲಿ ಸುನಾಮಿ ಎಬ್ಬಿಸಿದ್ದಾರೆ. ರಾಜಕೀಯಕ್ಕೆ ಕಾಲಿಟ್ಟ ಮೊದಲ ಪ್ರಯತ್ನದಲ್ಲೇ ಸ್ವಂತವಾಗಿ ಸರ್ಕಾರ ರಚಿಸುವತ್ತ ವಿಜಯ್ ಹೆಜ್ಜೆ ಹಾಕುತ್ತಿರುವುದಕ್ಕೆ ಚಿತ್ರರಂಗದ ಗಣ್ಯರು ಸೋಶಿಯಲ್‌ ಮೀಡಿಯಾ ಮೂಲಕ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.&lt;/p&gt;&lt;h3 data-block-key="ehl87"&gt;&lt;b&gt;ಶುಭ ಹಾರೈಸಿದ ಕಮಲ್‌ ಹಾಸನ್&lt;/b&gt;&lt;/h3&gt;&lt;p data-block-key="3r584"&gt;ಡಿಎಂಕೆ ಜೊತೆ ಕೈಜೋಡಿಸಿರುವ ನಟ ಕಮಲ್‌ ಹಾಸನ್ ಅವರು, ದಳಪತಿ ವಿಜಯ್‌ಗೆ ಶುಭ ಹಾರೈಸಿದ್ದಾರೆ. "ವಿಜಯಶಾಲಿ ತಮಿಳಗ ವೆಟ್ರಿ ಕಳಗಂ ನಾಯಕ ವಿಜಯ್ ಮತ್ತು ಅವರ ಪಕ್ಷದ ಸದಸ್ಯರಿಗೆ ನನ್ನ ಅಭಿನಂದನೆಗಳು. ಅವರು ಜನರ ವಿಶ್ವಾಸವನ್ನು ಗಳಿಸಿದ್ದಾರೆ ಮತ್ತು ತಮ್ಮ ಮೊದಲ ಚುನಾವಣೆಯಲ್ಲಿಯೇ ಅದ್ಭುತ ಗೆಲುವು ಸಾಧಿಸಿದ್ದಾರೆ. ಅವರ ಸಾರ್ವಜನಿಕ ಸೇವೆಯು ಅಭಿವೃದ್ಧಿ ಹೊಂದಲಿ ಎಂದು ನನ್ನ ಶುಭಾಶಯಗಳು" ಎಂದು ಕಮಲ್‌ ಹಾಸನ್‌ ತಿಳಿಸಿದ್ದಾರೆ.&lt;/p&gt;&lt;h3 data-block-key="bqmic"&gt;&lt;b&gt;ʻಮೆಗಾ ಸ್ಟಾರ್‌ʼ ಚಿರಂಜೀವಿ ಏನಂದ್ರು?&lt;/b&gt;&lt;/h3&gt;&lt;p data-block-key="2nk38"&gt;ಪ್ರೀತಿಯ ವಿಜಯ್‌, ನಿಮ್ಮ ಮೊದಲ ಚುನಾವಣೆಯಲ್ಲಿ ಈ ಅತ್ಯುತ್ತಮ ಮತ್ತು ಅರ್ಹವಾದ ಗೆಲುವಿಗೆ ಹೃತ್ಪೂರ್ವಕ ಅಭಿನಂದನೆಗಳು. ನೀವು ನಿರಂತರ ಉತ್ಸಾಹ ಮತ್ತು ಉದ್ದೇಶದಿಂದ ಸ್ಫೂರ್ತಿ, ನಾಯಕತ್ವ ಮತ್ತು ಸೇವೆಯನ್ನು ಮುಂದುವರಿಸಲಿ. ತಮಿಳುನಾಡು ರಾಜ್ಯ ಮತ್ತು ಅದರ ಜನರಿಗೆ ನಿಮ್ಮ ಸಾರ್ವಜನಿಕ ಸೇವೆಗಾಗಿ ನನ್ನ ಶುಭಾಶಯಗಳು" ಎಂದು ತೆಲುಗು ನಟ ಚಿರಂಜೀವಿ ಹೇಳಿದ್ದಾರೆ. ಅವರ ಸೋದರಳಿಯ, ನಟ ಸಾಯಿ ಧರಮ್‌ ತೇಜ್‌ ಅವರು, "ವಿಸಿಲ್ ಪೋಡು ವಿಜಯ್ ಅಣ್ಣ. ಇದು ನಿಮ್ಮ ಸಂಕಲ್ಪ ಮತ್ತು ಶ್ರಮಕ್ಕೆ ಸಿಕ್ಕ ಐತಿಹಾಸಿಕ ಗೆಲುವು. ಒಬ್ಬ ನಟ ಅಥವಾ ದೇವರಿಗಿಂತ ಮಿಗಿಲಾಗಿ ಜನ ಪ್ರೀತಿಯಿಂದ ಎಲ್ಲ ಅಂದಾಜುಗಳನ್ನು ತಲೆಕೆಳಗೆ ಮಾಡಿದಾಗ ಸಿಗುವ ಆನಂದವೇ ಬೇರೆ. ತಮಿಳುನಾಡು ಜನರು ಬಯಸಿದ ಬದಲಾವಣೆಯನ್ನು ನೀವು ತರುತ್ತೀರಿ ಎಂದು ಆಶಿಸುತ್ತೇನೆ" ಎಂದು ಟ್ವೀಟ್‌ ಮಾಡಿದ್ದಾರೆ.&lt;/p&gt;&lt;h3 data-block-key="ct0mn"&gt;&lt;b&gt;ʻಮೆಗಾ ಸ್ಟಾರ್‌ʼ ಟ್ವೀಟ್&lt;/b&gt;&lt;/h3&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="twitter-tweet"&gt;&lt;p lang="en" dir="ltr"&gt;Dear &lt;a href="https://twitter.com/actorvijay?ref_src=twsrc%5Etfw"&gt;@actorvijay&lt;/a&gt;,&lt;br&gt;Hearty congratulations on this outstanding and well-deserved victory in your first election &lt;br&gt;&lt;br&gt;May you continue to inspire, lead, and serve with unwavering passion and purpose. &lt;br&gt;&lt;br&gt;My best wishes to you for your public service to the state of Tamil Nadu and…&lt;/p&gt;&amp;mdash; Chiranjeevi Konidela (@KChiruTweets) &lt;a href="https://twitter.com/KChiruTweets/status/2051278742388117843?ref_src=twsrc%5Etfw"&gt;May 4, 2026&lt;/a&gt;&lt;/blockquote&gt; &lt;script async src="https://platform.twitter.com/widgets.js" charset="utf-8"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="506ns"&gt;&lt;/p&gt;&lt;h3 data-block-key="3l2sm"&gt;&lt;b&gt;ನಾನಿ ಮಾಡಿದ ಟ್ವೀಟ್‌ನಲ್ಲಿ ಏನಿದೆ?&lt;/b&gt;&lt;/h3&gt;&lt;p data-block-key="3uu19"&gt;ವಿಜಯ್‌ಗೆ ಅಭಿನಂದನೆ ಸಲ್ಲಿಸಿರುವ ತೆಲುಗು ನಟ ನಾನಿ, ಆಂಧ್ರಪ್ರದೇಶದಲ್ಲಿ ಪವನ್ ಕಲ್ಯಾಣ್‌ಗೆ ಸಿಕ್ಕ ಗೆಲುವನ್ನು ಉಲ್ಲೇಖಿಸಿದ್ದಾರೆ. "ವಿಜಯ್ ಸರ್, ನಿಮಗೆ ಅಭಿನಂದನೆಗಳು. ಮೊದಲು ನಿಮ್ಮ ಬಗ್ಗೆ ಸಂದೇಹ ವ್ಯಕ್ತಪಡಿಸಿದರು, ಆದರೆ ನೀವು ವಿಜೇತರಾಗಿ ನಿಂತಿದ್ದೀರಿ. ನಮ್ಮ ಮನೆಯಲ್ಲಿ (ಆಂಧ್ರಪ್ರದೇಶ) ನಡೆದದ್ದು ಈಗ ಪಕ್ಕದ ಮನೆಯಲ್ಲಿ (ತಮಿಳುನಾಡು) ನಡೆಯುತ್ತಿದೆ. ಅಂಡರ್‌ಡಾಗ್ ಗೆಲ್ಲುವುದೇ ಅಸಲಿ ಸಿನಿಮಾ ಅಥವಾ ಅಸಲಿ ರಾಜಕೀಯ ಅಂದುಕೊಳ್ಳಬೇಕಾ? ತಮಿಳುನಾಡು ಜನರು ತಮ್ಮ ನಿರ್ಧಾರವನ್ನು ಸ್ಪಷ್ಟಪಡಿಸಿದ್ದಾರೆ" ಎಂದು ನಾನಿ ಹೇಳಿದ್ದಾರೆ.&lt;/p&gt;&lt;p data-block-key="4nkp0"&gt;&lt;a href="/movies/tamil-nadu-election-results-2026-live-tvk-president-thalapathy-vijay-filmography-and-political-journey-77168.html"&gt;&lt;b&gt;TVK: ಮೊದಲ ಸಿನಿಮಾದಲ್ಲೇ ನಟ ವಿಜಯ್ ಭವಿಷ್ಯ ನಿರ್ಧಾರವಾಗಿತ್ತಾ? ʻದಳಪತಿʼ ಲೆಕ್ಕಾಚಾರದ ಮುಂದೆ ಎಲ್ಲವೂ ಉಲ್ಟಾಪಲ್ಟಾ!&lt;/b&gt;&lt;/a&gt;&lt;/p&gt;&lt;p data-block-key="604f2"&gt;"ತಮ್ಮ ಮೊದಲ ಚುನಾವಣಾ ಸ್ಪರ್ಧೆಯಲ್ಲೇ ಜನರಲ್ಲಿ ಅಗಾಧವಾದ ಪ್ರಭಾವ ಬೀರಿ ಈ ಗೆಲುವು ಸಾಧಿಸಿದ್ದಕ್ಕಾಗಿ ವಿಜಯ್ ಅವರಿಗೆ ಅಭಿನಂದನೆಗಳು. ನೀವು ಚಿತ್ರೋದ್ಯಮದಿಂದ ಬಂದವರು ಎಂಬುದು ಮತ್ತಷ್ಟು ಸಂತೋಷ ತಂದಿದೆ, ನಿಮ್ಮ ಸಾರ್ವಜನಿಕ ಸೇವೆ ಬೆಳಗಲಿ ಎಂದು ಹಾರೈಸುತ್ತೇನೆ ಸರ್.."‌ ಎಂದು ನಟ ಶಿವಕಾರ್ತಿಕೇಯನ್‌ ಹೇಳಿದರೆ, "ಇದೊಂದು ವೈರಲ್ ಕ್ರಾಂತಿ. ಜನರೇ ಸರ್ವೋಚ್ಚ ಎಂದು ನೀವು ನಿರೂಪಿಸಿದ್ದೀರಿ" ಎಂದು ನಟಿ ವರಲಕ್ಷ್ಮಿ ಶರತ್‌ಕುಮಾರ್ ಹೇಳಿದ್ದಾರೆ. ಸಂಗೀತ ನಿರ್ದೇಶಕ ಜಿ ವಿ ಪ್ರಕಾಶ್‌ ಕುಮಾರ್‌, "ಇಂತಹ ಗೆಲುವು ಹಿಂದೆಂದೂ ಕಂಡಿಲ್ಲ, ಮುಂದೆಯೂ ಬರಲಿಕ್ಕಿಲ್ಲ" ಎಂದು ಕೊಂಡಾಡಿದ್ಧಾರೆ.&lt;/p&gt;&lt;h3 data-block-key="3o7v8"&gt;&lt;b&gt;ನಟ ಸೂರ್ಯ ಅವರ ಟ್ವೀಟ್&lt;/b&gt;&lt;/h3&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="twitter-tweet"&gt;&lt;p lang="ta" dir="ltr"&gt;மக்களின் அன்பும் ஆதரவும் கிடைப்பது வரம். நண்பர் விஜய் மீது தமிழ்நாடு பெரிய நம்பிக்கை வைத்திருக்கிறது. தமிழக அரசியலில் புதிய அத்தியாயத்தை தொடங்கவிருக்கும் அவருக்கு என் மனப்பூர்வமான வாழ்த்துகள்.&lt;/p&gt;&amp;mdash; Suriya Sivakumar (@Suriya_offl) &lt;a href="https://twitter.com/Suriya_offl/status/2051278185770487967?ref_src=twsrc%5Etfw"&gt;May 4, 2026&lt;/a&gt;&lt;/blockquote&gt; &lt;script async src="https://platform.twitter.com/widgets.js" charset="utf-8"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="ejv0k"&gt;&lt;/p&gt;&lt;h3 data-block-key="dqfi0"&gt;&lt;b&gt;ವಿಜಯ್ ಮೇಲೆ ತಮಿಳುನಾಡು ನಂಬಿಕೆ ಇಟ್ಟಿದೆ&lt;/b&gt;&lt;/h3&gt;&lt;p data-block-key="dqgv1"&gt;"ಜನರ ಪ್ರೀತಿ ಮತ್ತು ಬೆಂಬಲ ಪಡೆಯುವುದು ಒಂದು ಆಶೀರ್ವಾದ. ನನ್ನ ಸ್ನೇಹಿತ ವಿಜಯ್ ಮೇಲೆ ತಮಿಳುನಾಡು ಅಪಾರ ನಂಬಿಕೆ ಇಟ್ಟಿದೆ. ತಮಿಳುನಾಡು ರಾಜಕೀಯದಲ್ಲಿ ಹೊಸ ಅಧ್ಯಾಯ ಆರಂಭಿಸಲಿರುವ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು" ಎಂದು ನಟ ಸೂರ್ಯ ಹೇಳಿದರೆ, ತೆಲುಗು ನಟ ವಿಜಯ್‌ ದೇವರಕೊಂಡ, "ವಿಜಯ್‌ ಅವರೇ, ತಮಿಳುನಾಡಿನ ಜನರು ಮತ ಚಲಾಯಿಸಲು ಮತ್ತು ತಮ್ಮ ಪರವಾಗಿ ನಿಲ್ಲಲು ಬಲವಾಗಿ ಬಂದಿದ್ದಕ್ಕಾಗಿ ನನ್ನ ಮೆಚ್ಚುಗೆ ಮತ್ತು ಅಭಿನಂದನೆಗಳು. ತಮಿಳುನಾಡಿನ ಎಲ್ಲಾ ಜನರು ಮತ್ತು ಹೊಸ ಮುಖ್ಯಮಂತ್ರಿಗೆ ಎಲ್ಲಾ ಸಮೃದ್ಧಿ ಮತ್ತು ಸಾಮೂಹಿಕ ಬೆಳವಣಿಗೆಯನ್ನು ಹಾರೈಸುತ್ತೇನೆ. ತಮಿಳು ರಾಜಕೀಯದ ಈ ಹೊಸ ಹಂತ, ಹೊಸ ಮುಖವನ್ನು ನೋಡಲು ಉತ್ಸುಕನಾಗಿದ್ದೇನೆ" ಎಂದು ಹೇಳಿದ್ದಾರೆ.&lt;/p&gt;
&lt;/div&gt;
&lt;/p&gt;]]&gt;</content:encoded></item></channel></rss>