ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವಿದೇಶ

ಜೋರ್ಡನ್‌ನಲ್ಲಿರುವ ಅಮೆರಿಕ ಸೇನಾ ನೆಲೆ ಮೇಲೆ ಇರಾನ್ ದಾಳಿ? F-35 ಸೇರಿ ಹಲವು ಯುದ್ಧವಿಮಾನಗಳು ಧ್ವಂಸ!

ಜೋರ್ಡನ್‌ನಲ್ಲಿ ಅಮೆರಿಕ ನೆಲೆ ಮೇಲೆ ಇರಾನ್ ದಾಳಿ?

ಜೋರ್ಡನ್‌ನ ಅಲ್-ಅಜ್ರಾಕ್ ವಾಯುನೆಲೆಯಲ್ಲಿರುವ ಅಮೆರಿಕ ಸೇನಾ ವಿಭಾಗದ ಮೇಲೆ ಕ್ಷಿಪಣಿ ಹಾಗೂ ಡ್ರೋನ್ ದಾಳಿ ನಡೆಸಿರುವುದಾಗಿ ಇರಾನ್ ಹೇಳಿಕೊಂಡಿದೆ. ಈ ದಾಳಿಯಲ್ಲಿ F-35, F-16 ಸೇರಿದಂತೆ ಹಲವು ಯುದ್ಧವಿಮಾನಗಳು ಮತ್ತು ಸೇನಾ ಉಪಕರಣಗಳು ನಾಶವಾಗಿದ್ದು, ಅಮೆರಿಕದ ಸೈನಿಕರಿಗೆ ಸಾವುನೋವು ಸಂಭವಿಸಿದೆ ಎಂದು ಇರಾನ್ ಹೇಳಿಕೊಂಡಿದೆ.

ಅಮೆರಿಕ ಮತದಾರರ ವೈಯಕ್ತಿಕ ಮಾಹಿತಿಯನ್ನು ಹ್ಯಾಕ್ ಮಾಡಿತ್ತಾ ಚೀನಾ; ಡ್ರ್ಯಾಗನ್ ದೇಶದ ವಿರುದ್ಧ ಟ್ರಂಪ್‌ ಆರೋಪ

ಚೀನಾದಿಂದ ಯುಎಸ್ ಮತದಾರರ ಮಾಹಿತಿ ಹ್ಯಾಕ್

2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಅವಧಿಯಲ್ಲಿ ಚೀನಾವು ಯುಎಸ್ ಮತದಾರರ ಮಾಹಿತಿಗಳನ್ನು ಹ್ಯಾಕ್ ಮಾಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪಿಸಿದ್ದಾರೆ. ಶ್ವೇತಭವನದಿಂದ ದೂರದರ್ಶನದ ಪ್ರೈಮ್-ಟೈಮ್ ಭಾಷಣದಲ್ಲಿ ಶುಕ್ರವಾರ ಅವರು ಈ ಮಾಹಿತಿ ನೀಡಿ, 220 ಮಿಲಿಯನ್ ಯುಎಸ್ ಮತದಾರರ ವೈಯಕ್ತಿಕ ಮಾಹಿತಿಯನ್ನು ಬೀಜಿಂಗ್ ಅಕ್ರಮವಾಗಿ ಪಡೆದುಕೊಂಡಿದೆ ಎಂದು ಹೇಳಿದರು.

Tit-For-Tat Strike: ಮುಂದುವರಿದ ಅಮೆರಿಕ - ಇರಾನ್ ಸಂಘರ್ಷ; ವಿಮಾನ, ರೈಲು ನಿಲ್ದಾಣ,  ಸೇತುವೆಗಳೇ ಟಾರ್ಗೆಟ್

ಇರಾನ್ ಮೇಲೆ ಮತ್ತಷ್ಟು ಹೊಸ ದಾಳಿ ನಡೆಸಿದ ಅಮೆರಿಕ

ಅಮೆರಿಕ ಸೇನಾ ಪಡೆಗಳು ಇರಾನ್ ಮೇಲೆ ಗುರುವಾರ ಮತ್ತಷ್ಟು ದಾಳಿ ನಡೆಸಿದೆ. ಟಿಟ್ -ಫಾರ್-ಟ್ಯಾಟ್ ದಾಳಿಯಲ್ಲಿ ಇರಾನ್ ನ ಮೂಲ ಸೌಕರ್ಯಗಳ ಮೇಲೆ ಗುರಿ ಇಡಲಾಗಿದೆ. ವಿಮಾನ ನಿಲ್ದಾಣ, ರೈಲು ನಿಲ್ದಾಣ, ಸೇತುವೆಗಳನ್ನು ನಾಶ ಮಾಡಲಾಗಿದೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ. ಇದಕ್ಕೆ ಪ್ರತಿಯಾಗಿ ಇರಾನ್ ಕೂಡ ಯುಎಸ್ ಮಿತ್ರರಾಷ್ಟ್ರಗಳ ಮೇಲೆ ದಾಳಿ ನಡೆಸಿದೆ.

ಕತಾರ್‌ ಶಾಲೆಗಳಲ್ಲಿ ಕನ್ನಡ ಭಾಷೆ ಅನುಷ್ಠಾನಕ್ಕೆ ಭಾರತೀಯ ರಾಯಭಾರ ಕಚೇರಿ ಬೆಂಬಲ: ಹರೀಶ್ ಪಾಂಡೆ

ಕತಾರ್‌ ಶಾಲೆಗಳಲ್ಲಿ ಕನ್ನಡಭಾಷೆ ಅನುಷ್ಠಾನಕ್ಕೆ ಬೆಂಬಲ: ಹರೀಶ್ ಪಾಂಡೆ

ಕತಾರ್‌ನ ಸ್ಥಳೀಯ ಶಾಲೆಗಳಲ್ಲಿ ಕನ್ನಡ ಭಾಷೆಯನ್ನು ಪಠ್ಯಕ್ರಮದ ಭಾಗವಾಗಿ ಅನುಷ್ಠಾನಗೊಳಿಸಲು ಭಾರತೀಯ ರಾಯಭಾರ ಕಚೇರಿಯಿಂದ ಅಗತ್ಯವಿರುವ ಎಲ್ಲಾ ರೀತಿಯ ಆಡಳಿತಾತ್ಮಕ ಮತ್ತು ಸಾಂಸ್ಥಿಕ ಬೆಂಬಲವನ್ನು ನೀಡುವುದಾಗಿ ಭಾರತೀಯ ರಾಯಭಾರ ಕಚೇರಿಯ ಪ್ರಥಮ ಕಾರ್ಯದರ್ಶಿ (ಶಿಕ್ಷಣ ಮತ್ತು ಸಾಂಸ್ಕೃತಿಕ) ಹರೀಶ್ ಪಾಂಡೆ ತಿಳಿಸಿದ್ದಾರೆ.

Star Fashion 2026: ಫ್ಯಾಷನ್ ಫಾಲೋವರ್‌ಗಳ ಹುಬ್ಬೇರಿಸಿದ ಜೆನ್ನಿಫರ್ ಲೋಪೆಜ್ ಗೋಲ್ಡನ್‌ ಡ್ರೆಸ್

ಫ್ಯಾಷನ್ ಫಾಲೋವರ್‌ಗಳ ಹುಬ್ಬೇರಿಸಿದ ಜೆನ್ನಿಫರ್ ಲೋಪೆಜ್ ಗೋಲ್ಡನ್‌ ಡ್ರೆಸ್

ಡಾಲ್ಚೆ & ಗಬ್ಬಾನ ಆಲ್ಟಾ ಮೋಡಾ ಕಲೆಕ್ಷನ್‌ನ ಫ್ಯಾಷನ್‌ ಇವೆಂಟ್‌ನಲ್ಲಿ ಖ್ಯಾತ ಹಾಲಿವುಡ್‌ ನಟಿ, ಗಾಯಕಿ ಜೆನ್ನಿಫರ್ ಲೋಪೆಜ್ ಧರಿಸಿದ್ದ ಜೇಮ್ಸ್ ಸ್ಟೋನ್ಸ್‌ನಿಂದ ವಿನ್ಯಾಸಗೊಂಡ ಗೋಲ್ಡನ್ ಡ್ರೆಸ್ ಫ್ಯಾಷನ್ ಫಾಲೋವರ್‌ಗಳ ಹುಬ್ಬೇರಿಸಿದೆ. ಇದ್ಯಾವ ಬಗೆಯ ಡ್ರೆಸ್? ಏನಿದರ ಸ್ಪೆಷಾಲಿಟಿ? ಫ್ಯಾಷನಿಸ್ಟಾಗಳು ಹೇಳುವುದೇನು? ಇಲ್ಲಿದೆ ಡಿಟೇಲ್ಸ್.

ಟೆಹರಾನ್‌ನಲ್ಲಿ ಡೊನಾಲ್ಡ್‌ ಟ್ರಂಪ್ ಶವಪೆಟ್ಟಿಗೆಯ ಬೃಹತ್ ಹೋರ್ಡಿಂಗ್‌: ಅಮೆರಿಕಕ್ಕೆ ಬಹಿರಂಗ ಸವಾಲು ಹಾಕಿದ ಇರಾನ್‌; ಮತ್ತೊಂದು ಹಂತಕ್ಕೆ ಹೋಗುತ್ತ ಸಂಘರ್ಷ?

ಟ್ರಂಪ್ ಶವಪೆಟ್ಟಿಗೆಯ ಚಿತ್ರ ಪ್ರದರ್ಶಿಸಿದ ಇರಾನ್

Donald Trump: ಇರಾನ್ ರಾಜಧಾನಿ ಟೆಹರಾನ್‌ನಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಶವಪೆಟ್ಟಿಗೆಯಲ್ಲಿ ಚಿತ್ರಿಸಿರುವ ಬೃಹತ್ ಹೋರ್ಡಿಂಗ್ ಅಳವಡಿಸಲಾಗಿದೆ. ʼWe Will Kill Trumpʼ ಎಂಬ ಸಂದೇಶವಿರುವ ಈ ಹೋರ್ಡಿಂಗ್ ಅಮೆರಿಕ–ಇರಾನ್ ನಡುವಿನ ಉದ್ವಿಗ್ನತೆಯ ಮಧ್ಯೆ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ.

ಉಕ್ರೇನ್ ದಾಳಿಯಿಂದ ರಷ್ಯಾಗೆ ಇಂಧನ ಬಿಕ್ಕಟ್ಟು: ಪೆಟ್ರೋಲ್ ಪೂರೈಸುವಂತೆ ಭಾರತಕ್ಕೆ ಮನವಿ; ಏನಿದು ಹೊಸ ಬೆಳವಣಿಗೆ?

ಭಾರತದಿಂದ ಪೆಟ್ರೋಲ್ ಕೇಳಿದ ರಷ್ಯಾ; ಏನಿದು ರಿವರ್ಸ್‌ ಎಕಾನಮಿ?

Russia-Ukraine War: ಉಕ್ರೇನ್ ದಾಳಿಯಿಂದ ರಷ್ಯಾದ ತೈಲ ಸಂಸ್ಕರಣಾ ಘಟಕಗಳಿಗೆ ಭಾರಿ ಹಾನಿಯಾಗಿದ್ದು, ದೇಶದಲ್ಲಿ ಪೆಟ್ರೋಲ್ ಬಿಕ್ಕಟ್ಟು ಎದುರಾಗಿದೆ. ಈ ಹಿನ್ನೆಲೆಯಲ್ಲಿ ರಷ್ಯಾದ ಪ್ರಮುಖ ತೈಲ ಕಂಪನಿಗಳು ಭಾರತದಿಂದ ಹೆಚ್ಚಿನ ಪ್ರಮಾಣದಲ್ಲಿ ಪೆಟ್ರೋಲ್ ಪೂರೈಸುವಂತೆ ಮನವಿ ಮಾಡಿವೆ ಎಂದು ವರದಿಯಾಗಿದೆ.

ʼʼಭಾರತದಲ್ಲಿ ಇಂತಹ ದಿನ ಯಾವಾಗ ಬರುತ್ತದೆ?ʼʼ ಮುಂಜಾನೆ 3 ಗಂಟೆಗೆ ಜರ್ಮನಿಯಲ್ಲಿ ಒಬ್ಬಂಟಿಯಾಗಿ ನಿರ್ಭೀತಿಯಿಂದ ಮಹಿಳೆ

ಜರ್ಮನಿಯಲ್ಲಿನ ಮಹಿಳೆಯರ ಸುರಕ್ಷತೆ ಬಗ್ಗೆ ಮೆಚ್ಚುಗೆ ಸೂಚಿಸಿದ ಭಾರತೀಯ ಮಹಿಳೆ

Viral Video: ವಿದೇಶದಲ್ಲಿ ಮಹಿಳೆಯರ ಸುರಕ್ಷತೆ ಹೇಗಿದೆ ಎಂಬುದನ್ನು ಜರ್ಮನಿಯಲ್ಲಿ ವಾಸವಾಗಿರುವ ಭಾರತೀಯ ಮಹಿಳೆಯೊಬ್ಬರು ಅನುಭವ ಹಂಚಿಕೊಂಡಿದ್ದಾರೆ. ಬರ್ಲಿನ್‌ನಲ್ಲಿ ಮುಂಜಾನೆ 3 ಗಂಟೆಗೆ ಒಬ್ಬಂಟಿಯಾಗಿ ಮನೆಗೆ ನಡೆದುಕೊಂಡು ಹೋಗುತ್ತಿದ್ದ ವಿಡಿಯೊ ಹಂಚಿಕೊಂಡು, ʼʼಇಲ್ಲಿ ನಾವು ಸ್ವಾತಂತ್ರ್ಯವಾಗಿದ್ದೇವೆ. ಯಾರ ಭಯವಿಲ್ಲದೆ ಒಬ್ಬಂಟಿಯಾಗಿ ಪ್ರಯಾಣಿಸಬಹುದುʼʼ ಎಂದಿದ್ದಾರೆ. ಈ ಘಟನೆಯನ್ನು ಭಾರತದ ಸ್ಥಿತಿಯೊಂದಿಗೆ ಇದೀಗ ಹೋಲಿಸಲಾಗುತ್ತಿದೆ.

ಫೇಸ್‌ಬುಕ್‌ನಲ್ಲಿ ಶುರುವಾದ ಪ್ರೀತಿ ಜೈಲಿನಲ್ಲಿ ಅಂತ್ಯ: ವೀಸಾ ಇಲ್ಲದೆ ಪ್ರಿಯತಮೆಗಾಗಿ ಗಡಿ ದಾಟಿದ ಉತ್ತರ ಪ್ರದೇಶದ ʼಅಮರ ಪ್ರೇಮಿʼ ವ್ಯಕ್ತಿ ಈಗ ಪಾಕಿಸ್ತಾನದಲ್ಲಿ ಖೈದಿ

ಫೇಸ್‌ಬುಕ್‌ನಲ್ಲಿ ಶುರುವಾದ ಪ್ರೀತಿ ಪಾಕಿಸ್ತಾನದ ಜೈಲಿನಲ್ಲಿ ಅಂತ್ಯ

Love ends in prison: ಫೇಸ್‌ಬುಕ್‌ನಲ್ಲಿ ಪರಿಚಯವಾದ ಸ್ನೇಹ ಪ್ರೀತಿಗೆ ತಿರುಗಿದ ಕೊನೆಗೆ ಉತ್ತರ ಪ್ರದೇಶದ ವ್ಯಕ್ತಿಯೊಬ್ಬ ಪಾಕಿಸ್ತಾನದ ಜೈಲು ಪಾಲಾಗಿದ್ದಾನೆ. ಎರಡು ದೇಶಗಳ ನಡುವೆ ನೆಲೆಸಿದ್ದ ಇಬ್ಬರ ಪ್ರೀತಿಯ ಕಥೆಯು ಅಂತ್ಯಾವಾಗಿದ್ದು ಹೀಗೆ. ಆತನನ್ನು ಬಿಡುಗಡೆ ಮಾಡಿಸುವಂತೆ ಕುಟುಂಬವು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ.

ದಾಖಲೆ ಬರೆಯಲಿರುವ ಎಲ್ ನಿನೋ? ಭಾರತದಲ್ಲಿ ಮಳೆ ಕೊರತೆ ಹೆಚ್ಚುವ ಸಾಧ್ಯತೆ

ಭಾರತಕ್ಕೆ ಎಲ್ ನಿನೋ ಶಾಕ್; ಕೃಷಿಗೆ ಕಾದಿದೆಯೇ ಸಂಕಷ್ಟ?

El Nino: 2026ರಲ್ಲಿ ರೂಪುಗೊಳ್ಳುತ್ತಿರುವ ಎಲ್ ನಿನೋ ಆಧುನಿಕ ಇತಿಹಾಸದಲ್ಲೇ ಅತ್ಯಂತ ಪ್ರಬಲವಾಗುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ಎಚ್ಚರಿಸಿದ್ದಾರೆ. ಇದರ ಪರಿಣಾಮ ಭಾರತದಲ್ಲಿ ಮುಂಗಾರು ದುರ್ಬಲವಾಗುವ ಸಾಧ್ಯತೆ ಹೆಚ್ಚಿದ್ದು, ಮಳೆ ಕೊರತೆಯಿಂದ ಕೃಷಿ ಹಾಗೂ ಬೀಜ ಬಿತ್ತನೆ ಮೇಲೆ ಈಗಾಗಲೇ ಪರಿಣಾಮ ಕಾಣಿಸುತ್ತಿದೆ.

''ನೀನು ಮುಸ್ಲಿಮಾ?ʼʼ ಧರ್ಮ ಕೇಳಿ ಭಾರತ ಮೂಲದ ಮುಸ್ಲಿಂ ವ್ಯಕ್ತಿಯ ಮೇಲೆ ಅಮೆರಿಕದಲ್ಲಿ ಚಾಕು ದಾಳಿ

ಅಮೆರಿಕದಲ್ಲಿ ಭಾರತೀಯ ಮುಸ್ಲಿಂ ವ್ಯಕ್ತಿಯ ಮೇಲೆ ದಾಳಿ

ಅಮೆರಿಕದ ಉಟಾ ರಾಜ್ಯದ ವೆಸ್ಟ್ ವ್ಯಾಲಿ ಸಿಟಿಯ ವ್ಯಾಲಿ ಫೇರ್ ಮಾಲ್‌ನಲ್ಲಿ ಭಾರತ ಮೂಲದ ಮುಸ್ಲಿಂ ಉದ್ಯೋಗಿಯ ಮೇಲೆ ಧರ್ಮ ಕೇಳಿದ ಬಳಿಕ ಚಾಕು ದಾಳಿ ನಡೆಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಯುವಕ ಚಿಕಿತ್ಸೆ ಪಡೆಯುತ್ತಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ರಷ್ಯಾ ತೈಲ ಆಮದಿನ ಮೇಲೆ ಸುಂಕ ಇಳಿಸಿದ ಅಮೆರಿಕ; ಭಾರತ, ಚೀನಾಕ್ಕೆ  ಬಿಗ್ ರಿಲೀಫ್

ರಷ್ಯಾ ತೈಲ ಆಮದು ಸುಂಕ ಇಳಿಕೆ: ಭಾರತಕ್ಕೆ ಬಿಗ್ ರಿಲೀಫ್

ಸುಮಾರು ಒಂದು ವರ್ಷದಿಂದ ರಷ್ಯಾ ತೈಲ ಆಮದಿನ ಮೇಲೆ ಭಾರತಕ್ಕೆ ಸುಂಕ ಬೆದರಿಕೆ ಒಡ್ಡುತ್ತಿದ್ದ ಅಮೆರಿಕ ಈಗ ಬಿಗ್ ರಿಲೀಫ್ ನೀಡಿದೆ. ರಷ್ಯಾ ತೈಲ ಆಮದಿನ ಮೇಲೆ ಶೇಕಡಾ 500ರಷ್ಟು ಸುಂಕ ಬೆದರಿಕೆಯೊಡ್ಡುತ್ತಿದ್ದ ಅಮೆರಿಕ ಈಗ ಅದನ್ನು ಶೇಕಡಾ 100ಕ್ಕೆ ಇಳಿಕೆ ಮಾಡಿದೆ. ಇದರಿಂದ ಭಾರತ ಮತ್ತು ಚೀನಾಕ್ಕೆ ಬಹುದೊಡ್ಡ ರಿಲೀಫ್ ಸಿಕ್ಕಂತಾಗಿದೆ.

ಮಾಜಿ ಪ್ರಧಾನಿ ಶೇಖ್ ಹಸೀನಾ ವಾಪಸಾತಿಗೆ ಬಾಂಗ್ಲಾದೇಶ ಸ್ವಾಗತ!

ಮಾಜಿ ಪ್ರಧಾನಿ ಶೇಖ್ ಹಸೀನಾ ವಾಪಸಾತಿಗೆ ಬಾಂಗ್ಲಾದೇಶ ಸ್ವಾಗತ

Sheikh Hasina: ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರು ಢಾಕಾಗೆ ಮರಳುವ ಯೋಜನೆಯನ್ನು ಬಾಂಗ್ಲಾದೇಶ ಸ್ವಾಗತಿಸಿದೆ. ಅವರು ಈ ಘೋಷಣೆ ಮಾಡಿರುವುದನ್ನು ನಾವು ಸ್ವಾಗತಿಸುತ್ತೇವೆ. ನ್ಯಾಯ ದೊರಕಬೇಕು ಎಂಬುದು ನಮ್ಮ ಉದ್ದೇಶ ಎಂದು ಬಾಂಗ್ಲಾದೇಶ ಪ್ರಧಾನಿ ತಾರಿಕ್ ರೆಹಮಾನ್ ಅವರ ಸಲಹೆಗಾರರಾದ ಜಹೇದ್ ಉರ್ ರೆಹಮಾನ್ ಹೇಳಿದರು.

ಅಮೆರಿಕದ ಒಪ್ಪಂದದಿಂದ ಹಿಂದೆ ಸರಿದ ಇರಾನ್; ಮತ್ತೆ ಪೂರ್ಣ ಪ್ರಮಾಣದ ಯುದ್ಧದ ಆತಂಕ

ಅಮೆರಿಕದ ಒಪ್ಪಂದದಿಂದ ಹಿಂದೆ ಸರಿದ ಇರಾನ್

ಕದನ ಮುಕ್ತಾಯ ಮಾತುಕತೆಗಳು ಅಂತಿಮ ಹಂತದಲ್ಲಿರುವಾಗಲೇ ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷ ಭುಗಿಲೆದ್ದಿದೆ. ಹೊರ್ಮುಜ್ ಜಲ ಮಾರ್ಗದ ಮೇಲೆ ನಿಯಂತ್ರಣ ಸಾಧಿಸಲು ಪ್ರಯತ್ನಿಸುತ್ತಿರುವ ಇರಾನ್ ಈಗ ಅಮೆರಿಕದ ಒಪ್ಪಂದದಿಂದ ಹಿಂದೆ ಸರಿದಿದೆ. ಹೀಗಾಗಿ ಮತ್ತೆ ಪೂರ್ಣ ಪ್ರಮಾಣದ ಯುದ್ಧ ಪ್ರಾರಂಭವಾಗುವ ಆತಂಕ ಎದುರಾಗಿದೆ.

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪಿದ ಭಾರತೀಯ ಮೂಲದ ನಾಸಾ ಗಗನಯಾತ್ರಿ ಅನಿಲ್ ಮೆನನ್

ಬಾಹ್ಯಾಕಾಶ ತಲುಪಿದ ಭಾರತೀಯ ಮೂಲದ ಗಗನಯಾತ್ರಿ ಅನಿಲ್ ಮೆನನ್

ಭಾರತೀಯ ಮೂಲದ ನಾಸಾ ಗಗನಯಾತ್ರಿ ಅನಿಲ್ ಮೆನನ್ ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿದ್ದಾರೆ. ಸೋಯುಜ್ ಎಂಎಸ್-29 ಬಾಹ್ಯಾಕಾಶ ನೌಕೆಯಲ್ಲಿ ಅವರು ಮಂಗಳವಾರ ಬಾಹ್ಯಾಕಾಶಕ್ಕೆ ಹಾರಿದ್ದು, ಅದು ಬುಧವಾರ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿದೆ. ಈ ಕುರಿತು ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಉಕ್ರೇನ್‌ ವಿರುದ್ಧ ರಷ್ಯಾ ಅಣ್ವಸ್ತ್ರ ಬಳಸದಂತೆ ತಡೆದಿದ್ದು ಪ್ರಧಾನಿ ನರೇಂದ್ರ ಮೋದಿ: ಮಹತ್ವದ ಮಾಹಿತಿ ಹಂಚಿಕೊಂಡ ಪೋಲೆಂಡ್‌

ಉಕ್ರೇನ್‌ ವಿರುದ್ಧ ರಷ್ಯಾ ಅಣ್ವಸ್ತ್ರ ಬಳಸದಂತೆ ತಡೆದಿದ್ದು ಮೋದಿ

Russia-Ukraine War: ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧವನ್ನು ನಿಲ್ಲಿಸಲು ಭಾರತದ ಪ್ರಧಾನಿ ನರೇಂದ್ರ ಮೋದಿ ಪ್ರಯತ್ನ ನಡೆಸಿರುವುದು ಮತ್ತೊಮ್ಮೆ ಸಾಬೀತಾಗಿದೆ. ರಷ್ಯಾ-ಉಕ್ರೇನ್ ಯುದ್ಧ ಕುರಿತು ಮಾತನಾಡಿರುವ ಪೋಲೆಂಡ್‌ನ ಉಪ ವಿದೇಶಾಂಗ ಸಚಿವ ವ್ಲಾಡಿಸ್ಲಾವ್ ಟಿಯೋಫಿಲ್ ಬಾರ್ಟೋಸ್ಜೆವ್ಸ್ಕಿ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಪರಮಾಣು ಶಸ್ತ್ರಾಸ್ತ್ರ ಬಳಸದಂತೆ ಮೋದಿ ಮನವೊಲಿಸಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ.

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಮತ್ತೆ ಹಿಂಸಾಚಾರ: ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ, 6 ನಾಗರಿಕರ ಸಾವು

PoKಯಲ್ಲಿ ಗುಂಡಿನ ದಾಳಿ: 6 ಮಂದಿ ಬಲಿ

Pakistan-occupied Kashmir: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ರಾವಲಕೋಟ್‌ನಲ್ಲಿ ಪ್ರತಿಭಟನಾಕಾರರ ಮೇಲೆ ಪಾಕಿಸ್ತಾನದ ಭದ್ರತಾ ಪಡೆಗಳು ಗುಂಡಿನ ದಾಳಿ ನಡೆಸಿದ್ದು, 6 ಮಂದಿ ನಾಗರಿಕರು ಮೃತಪಟ್ಟಿದ್ದಾರೆ. ಈ ನಡುವೆ ಅಮೆರಿಕದ ವೈಟ್ ಹೌಸ್ ಎದುರು ಪಿಒಕೆ ಮೂಲದ ಜನರು ಪ್ರತಿಭಟನೆ ನಡೆಸಿ ಅಂತಾರಾಷ್ಟ್ರೀಯ ಸಮುದಾಯ ಮಧ್ಯ ಪ್ರವೇಶಿಸುವಂತೆ ಆಗ್ರಹಿಸಿದ್ದಾರೆ. ಘಟನೆಗೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಪಾಕಿಸ್ತಾನ ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತಿದೆ ಎಂದು ಆರೋಪಿಸಿದೆ.

ಬಾಂಗ್ಲಾದೇಶಕ್ಕೆ ಮರಳಿದರೆ ಪದಚ್ಯುತ ಪ್ರಧಾನಿ ಶೇಖ್ ಹಸೀನಾಗೆ ಜೈಲು ವಾಸ ಫಿಕ್ಸ್‌; ಎಚ್ಚರಿಕೆ ನೀಡಿದ ಸಚಿವೆ

ಶೇಖ್ ಹಸೀನಾ ಮರಳಿದರೆ ಜೈಲು ವಾಸ ಫಿಕ್ಸ್: ಸಚಿವೆ ಎಚ್ಚರಿಕೆ

Sheikh Hasina: ಪದಚ್ಯುತ ಪ್ರಧಾನಿ ಮತ್ತು ನಿಷೇಧಿಸಲ್ಪಟ್ಟ ಅವಾಮಿ ಲೀಗ್ ನಾಯಕಿ ಶೇಖ್ ಹಸೀನಾ ಈ ವರ್ಷದ ಅಂತ್ಯದ ವೇಳೆಗೆ ಬಾಂಗ್ಲಾದೇಶಕ್ಕೆ ಮರಳುವ ಇಂಗಿತ ವ್ಯಕ್ತಪಡಿಸಿದ್ದಾರೆ. ಅವರು ದೇಶಕ್ಕೆ ಮರಳಿದರೆ ಜೈಲಿಗೆ ಕಳುಹಿಸುವುದಾಗಿ ಅಲ್ಲಿನ ರಾಜ್ಯ ಸಚಿವೆಯೊಬ್ಬರು ಎಚ್ಚರಿಕೆ ನೀಡಿದ್ದಾರೆ.

ನೇಪಾಳದಲ್ಲಿ ಮತ್ತೆ ಸಿಡಿದೆದ್ದ ಜೆನ್‌ ಝೀಗಳು; ತಾವೇ ಆಯ್ಕೆ ಮಾಡಿದ ಪ್ರಧಾನಿ ಬಾಲೇಂದ್ರ ಶಾ ವಿರುದ್ಧ ಬೀದಿಗಿಳಿದು ಹೋರಾಟ

ನೇಪಾಳದ ಪ್ರಧಾನಿ ವಿರುದ್ಧ ಮತ್ತೆ ಬೀದಿಗಿಳಿದ ಜೆನ್ ಝೀಗಳು

Gen Z Returns to the Streets: ನೇಪಾಳದ ಪ್ರಧಾನಿ ಬಾಲೇಂದ್ರ ಶಾ ನೇತೃತ್ವದ ಸರ್ಕಾರದ ವಿರುದ್ಧ ಯುವ ಜನತೆ ಮತ್ತೆ ಪ್ರತಿಭಟನೆ ನಡೆಸುತ್ತಿದೆ. ದೇಶದ ಬಹುಪಾಲು ಯುವ ಜನರು ಮತ್ತೆ ಕಾಠ್ಮಂಡು ಬೀದಿಗಿಳಿದಿದ್ದಾರೆ.

ವಿಶ್ವಸಂಸ್ಥೆ ಮುಖ್ಯಸ್ಥರನ್ನು ಭೇಟಿಯಾದ ಸಚಿವ ಎಸ್. ಜೈಶಂಕರ್; ಭದ್ರತಾ ಮಂಡಳಿ ಶಾಶ್ವತವಲ್ಲದ ಸ್ಥಾನಕ್ಕಾಗಿ ಔಪಚಾರಿಕ ಅಭಿಯಾನಕ್ಕೂ ಮುನ್ನ ಮಹತ್ವದ ಸಭೆ

ವಿಶ್ವಸಂಸ್ಥೆ ಮುಖ್ಯಸ್ಥರನ್ನು ಭೇಟಿ ಮಾಡಿದ ಜೈಶಂಕರ್

2028-29ರ ಶಾಶ್ವತವಲ್ಲದ ಭದ್ರತಾ ಮಂಡಳಿಯ ಸ್ಥಾನಕ್ಕಾಗಿ ಭಾರತ ಔಪಚಾರಿಕವಾಗಿ ಅಭಿಯಾನ ಪ್ರಾರಂಭಿಸಿದ ಬೆನ್ನಲ್ಲೇ ನ್ಯೂಯಾರ್ಕ್‌ನಲ್ಲಿ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರನ್ನು ಜೈಶಂಕರ್ ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಅವರು ಮಧ್ಯಪ್ರಾಚ್ಯ, ಉಕ್ರೇನ್ ಬಿಕ್ಕಟ್ಟುಗಳ ಬಗ್ಗೆ ಚರ್ಚೆ ನಡೆಸಿದರು.

ಪ್ರಾಚೀನತೆಯಿಂದ ಆಧುನಿಕತೆಯತ್ತ ಭಾರತ-ಇಂಡೋನೇಷ್ಯಾ ಸಹಭಾಗಿತ್ವ

ಪ್ರಾಚೀನತೆಯಿಂದ ಆಧುನಿಕತೆಯತ್ತ ಭಾರತ-ಇಂಡೋನೇಷ್ಯಾ ಸಹಭಾಗಿತ್ವ

ಇಂಡೋನೇಷ್ಯಾದ ಸಂಸ್ಕೃತಿಯ ಹೆಗ್ಗುರುತಾಗಿರುವ ಐತಿಹಾಸಿಕ ಮಹತ್ತ್ವದ ಪ್ರಂಬಾನನ್ ಹಿಂದೂ ದೇವಾಲಯದ ಸಂರಕ್ಷಣೆಯಲ್ಲಿ ಭಾರತ ನೀಡುತ್ತಿರುವ ನೆರವು, ಸಾಂಸ್ಕೃತಿಕ ಪರಂಪರೆ ಯನ್ನು ಕಾಪಾಡುವ ಭಾರತದ ಬದ್ಧತೆಯನ್ನು ಎತ್ತಿ ತೋರಿಸುತ್ತದೆ. ಇಂಡೋನೇಷ್ಯಾದ ಅಧ್ಯಕ್ಷ ಪ್ರಬೊವೊ ಸುಬಿಯಾಂತೊ ಅವರ ಭಾರತೀಯ ಡಿಎನ್‌ಎ ಕುರಿತಾದ ಹೇಳಿಕೆಗಳು ಎರಡೂ ದೇಶಗಳ ನಡುವಿನ ಆಳವಾದ ಸಾಂಸ್ಕೃತಿಕ ಮತ್ತು ಭಾವನಾತ್ಮಕ ಸಂಪರ್ಕಕ್ಕೆ ಸಾಕ್ಷಿಯಾಗಿವೆ.

ಹಾರ್ಮೊಜ್‌ನಲ್ಲಿ ಮತ್ತೆ ಅಮೆರಿಕ- ಇರಾನ್‌ ಸಂಘರ್ಷ; ಟ್ಯಾಂಕರ್‌ ಮೇಲೆ ದಾಳಿ, ಓರ್ವ ಭಾರತೀಯ ಸಾವು, 8 ಮಂದಿಗೆ ಗಾಯ

ಹಾರ್ಮೊಜ್‌ನಲ್ಲಿ ಮತ್ತೆ ಅಮೆರಿಕ- ಇರಾನ್‌ ಸಂಘರ್ಷ; ಓರ್ವ ಭಾರತೀಯ ಸಾವು

America- Iran: ಇರಾನ್‌ ಹಾಗೂ ಅಮೆರಿಕದ ನಡುವೆ ಮತ್ತೆ ಸಂಘರ್ಷ ಶುರುವಾಗಿದ್ದು, ಹಾರ್ಮೊಜ್‌ ಜಲಸಂಧಿಯಲ್ಲಿ ದಾಳಿಗಳು ನಡೆಯುತ್ತಿವೆ. ಇದೀಗ ಎರಡು ಯುಎಇ ರಾಷ್ಟ್ರೀಯ ಟ್ಯಾಂಕರ್‌ಗಳ ಮೇಲೆ ಇರಾನ್ ದಾಳಿ ಮಾಡಿದ್ದು, ಘಟನೆಯಲ್ಲಿ ಓರ್ವ ಭಾರತೀಯ ಸಾವನ್ನಪ್ಪಿದ್ದಾರೆ.

Viral Video: "ಅತ್ಯಂತ ಮುರ್ಖತನದ ನಿರ್ಧಾರ"; 1.9 ಕೋಟಿ ರುಪಾಯಿಯ ಮೈಕ್ರೋಸಾಫ್ಟ್ ಉದ್ಯೋಗ ತ್ಯಜಿಸಿ ಅವಲತ್ತುಕೊಂಡ ಯುವಕ

ಮೈಕ್ರೋಸಾಫ್ಟ್ ಕೆಲಸ ಬಿಟ್ಟು ತಪ್ಪು ಮಾಡಿದೆ ಎಂದ ಯುವಕ

ಪ್ರತಿಷ್ಠಿತ ಕಂಪನಿಯಲ್ಲಿ ಹೆಚ್ಚಿನ ಪ್ಯಾಕೇಜ್ ಹೊಂದಿದ ಕೆಲಸ ಸಿಗುವುದೇ ಅಪರೂಪ. ಇಂತಹ ಉದ್ಯೋಗವನ್ನು ಬಿಟ್ಟು ಬರುವ ನಿರ್ಧಾರವನ್ನು ಯಾರೂ ತೆಗೆದುಕೊಳ್ಳುವುದಿಲ್ಲ. ಆದರೆ ಸ್ವಿಟ್ಜರ್ಲೆಂಡ್‌ನ ಮೈಕ್ರೋಸಾಫ್ಟ್ ಕಂಪನಿಯಲ್ಲಿದ್ದ ಕ್ರಿಶ್ಚಿಯನ್ ಹಾರ್ಮ್ಸ್, ವರ್ಷಕ್ಕೆ ಸುಮಾರು 1.9 ಕೋಟಿ ರುಪಾಯಿ ಸಂಬಳ ಹೊಂದಿದ್ದ ಕೆಲಸಕ್ಕೆ ರಾಜೀನಾಮೆ ನೀಡಿದ್ದ. ಆದರೆ ಇದೀಗ ಈ ನಿರ್ಧಾರ ತೆಗೆದುಕೊಂಡಿದ್ದೇ ತಪ್ಪು ಎಂದು ಪಶ್ಚತಾಪ ಪಡುತ್ತಿದ್ದಾನೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ವಿದ್ಯಾರ್ಥಿಗಳ ಅಮೋಘ ಸಾಧನೆ; ಫಿಸಿಕ್ಸ್‌ ಒಲಿಂಪಿಯಾಡ್‌ನಲ್ಲಿ ಐವರಿಗೆ ಗೋಲ್ಡ್ ಮೆಡಲ್‌

ಫಿಸಿಕ್ಸ್‌ ಒಲಿಂಪಿಯಾಡ್‌ನಲ್ಲಿ ಭಾರತಕ್ಕೆ 5 ಚಿನ್ನದ ಪದಕ

56ನೇ ಅಂತಾರಾಷ್ಟ್ರೀಯ ಫಿಸಿಕ್ಸ್‌ ಒಲಿಂಪಿಯಾಡ್ (IPhO 2026) ಸ್ಪರ್ಧೆಯಲ್ಲಿ ಭಾರತದ ಐವರು ವಿದ್ಯಾರ್ಥಿಗಳು ಚಿನ್ನದ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಕೊಲಂಬಿಯಾದಲ್ಲಿ ನಡೆದ ಈ ಸ್ಪರ್ಧೆಯಲ್ಲಿ 80ಕ್ಕೂ ಹೆಚ್ಚು ದೇಶಗಳ 380ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಸಾಧನೆಯೊಂದಿಗೆ ಭಾರತ ಜಂಟಿಯಾಗಿ ವಿಶ್ವ ನಂ.1 ಸ್ಥಾನ ಪಡೆದಿದೆ. HBCSE ತರಬೇತಿ ನೀಡಿದ ಭಾರತೀಯ ತಂಡದ ಸಾಧನೆಗೆ ದೇಶಾದ್ಯಂತ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.

Loading...