ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವಿದೇಶ

ಕೆಟ್ಟ ಸುದ್ದಿ; ಅಮೆರಿಕ- ಇರಾನ್‌ ಕದನ ವಿರಾಮ ಮಾತುಕತೆ ವಿಫಲ ಎಂದ ಜೆಡಿ ವ್ಯಾನ್ಸ್‌

ಅಮೆರಿಕ- ಇರಾನ್‌ ಕದನ ವಿರಾಮ ಮಾತುಕತೆ ವಿಫಲ ಎಂದ ಜೆಡಿ ವ್ಯಾನ್ಸ್‌

ಇಸ್ಲಾಮಾಬಾದ್‌ನಲ್ಲಿ ನಡೆದ ಸುದೀರ್ಘ 21 ಗಂಟೆಗಳ ಹೈ-ವೋಲ್ಟೇಜ್ ರಾಜತಾಂತ್ರಿಕ ಸಂಘರ್ಷ ಅಂತಿಮವಾಗಿ ಯಾವುದೇ ಫಲಿತಾಂಶವಿಲ್ಲದೆ ಅಂತ್ಯಗೊಂಡಿದೆ. ಇಡೀ ಜಗತ್ತು ಕುತೂಹಲದಿಂದ ಕಾಯುತ್ತಿದ್ದ ಅಮೆರಿಕ-ಇರಾನ್ ನೇರ ಮಾತುಕತೆ ವಿಫಲವಾಗಿದ್ದು, ಅಮೆರಿಕದ ನಿಯೋಗವು ಅತೃಪ್ತಿಯಿಂದಲೇ ಪಾಕಿಸ್ತಾನವನ್ನು ತೊರೆಯಲು ನಿರ್ಧರಿಸಿದೆ.

ಸಾಮಾಜಿಕ ಮಾಧ್ಯಮಗಳ ಮೂಲಕ ಭಾರತದಲ್ಲಿ ಭಯೋತ್ಪಾದನಾ ಜಾಲ ವಿಸ್ತರಣೆ; ಬಯಲಾಯಿತು ಪಾಕಿಸ್ತಾನದ ಉಗ್ರರ ಸಂಚು

ಉತ್ತರಪ್ರದೇಶದಲ್ಲಿ ಇಬ್ಬರು ಭಯೋತ್ಪಾದಕರ ಬಂಧನ

ಸಾಮಾಜಿಕ ಮಾಧ್ಯಮ ಬಳಕೆಯು ಈಗ ಅಪಾಯಕಾರಿಯಾಗಿ ಪರಿಣಮಿಸಿದೆ. ಇದನ್ನು ಬಳಸಿಕೊಂಡು ಪಾಕಿಸ್ತಾನದ ಭಯೋತ್ಪಾದಕರು ಭಯೋತ್ಪಾದನೆಯ ಜಾಲವನ್ನು ವಿಸ್ತರಿಸುತ್ತಿರುವುದು ಈಗ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದಲ್ಲಿ ಇಬ್ಬರು ಭಯೋತ್ಪಾದಕರನ್ನು ಬಂಧಿಸಲಾಗಿದ್ದು, ಈ ಮೂಲಕ ಹಲವು ರಹಸ್ಯವಾಗಿದ್ದ ಮಾಹಿತಿಗಳು ಬೆಳಕಿಗೆ ಬಂದಿದೆ.

ಇರಾನ್ ಮಾಜಿ ಸರ್ವಾಧಿಕಾರಿ ಖಮೇನಿ ಭಾರತೀಯ ಮೂಲದವರೆ?  ಭಾರತದ ಈ ಗ್ರಾಮದ ನಂಟು ಬೆಳೆದಿದ್ದೇಗೆ?

ಇರಾನ್ ಮಾಜಿ ಸರ್ವಾಧಿಕಾರಿ ಖಮೇನಿ ಭಾರತೀಯ ಮೂಲದವರೆ?

ಉತ್ತರ ಪ್ರದೇಶದ ಕಿಂತೂರು ಗ್ರಾಮವು ಖೊಮೇನಿ ಅವರ ವಂಶದ ಮೂಲವಾಗಿ ಪ್ರಸಿದ್ಧಿ ಪಡೆದಿದೆ. ಅವರ ಅಜ್ಜ ಸೈಯದ್ ಅಹ್ಮದ್ ಮುಸಾವಿ ಹಿಂದಿ ಭಾರತದಿಂದ ಇರಾನ್‌ಗೆ ವಲಸೆ ಹೋಗಿ ಅಲ್ಲಿ ನೆಲೆಸಿದ ಪರಿಣಾಮ, ಈ ಗ್ರಾಮವು ಭಾರತ ಮತ್ತು ಇರಾನ್ ನಡುವಿನ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಬಾಂಧವ್ಯದ ಪ್ರಮುಖ ಕೊಂಡಿಯಾಗಿ ಇಂದಿಗೂ ಗುರುತಿಸಿಕೊಂಡಿದೆ.

ವಿಮಾನದ ಸೀಟುಗಳಲ್ಲಿ ಮಕ್ಕಳ ರಕ್ತಸಿಕ್ತ ಬ್ಯಾಗ್, ಪುಟ್ಟ ಶೂಗಳು! ಇಸ್ಲಾಮಾಬಾದ್‌ಗೆ  ತೆರಳಿದ ವಿಮಾನದಲ್ಲಿತ್ತು ಕಣ್ಣೀರ ಕಥೆ

ಮಿನಾಬ್ ಸ್ಮರಣೆಯಲ್ಲಿ ಪಾಕ್‌ಗೆ ಹಿಂದಿರುಗಿದ ಇರಾನ್ ನಿಯೋಗ

ಅಮೆರಿಕದೊಂದಿಗೆ ಶಾಂತಿ ಮಾತುಕತೆಗಾಗಿ ಪಾಕಿಸ್ತಾನಕ್ಕೆ ತೆರಳಿದ ಇರಾನ್ ನಿಯೋಗ, ಮಿನಾಬ್ ದಾಳಿಯಲ್ಲಿ ಸಾವನ್ನಪ್ಪಿದ ಮಕ್ಕಳ ನೆನಪಿಗಾಗಿ ರಕ್ತಸಿಕ್ತ ಶಾಲಾ ಬ್ಯಾಗ್‌ಗಳು, ಶೂಗಳು ಮತ್ತು ಚಿತ್ರಗಳನ್ನು ವಿಮಾನದಲ್ಲಿ ತೆಗೆದುಕೊಂಡು ಹೋಗಿ ಜಗತ್ತಿನ ಗಮನ ಸೆಳೆದಿದೆ. ‘Minab168’ ಹೆಸರಿನ ಈ ಸಂಕೇತಾತ್ಮಕ ಕ್ರಮ ಯುದ್ಧದ ಭೀಕರ ಮಾನವೀಯ ನಷ್ಟವನ್ನು ಒತ್ತಿಹೇಳುತ್ತದೆ.

ಇರಾನ್‌ನ ನೂತನ ಸರ್ವೋಚ್ಛ ನಾಯಕನಿಗೆ ಗಂಭೀರ ಗಾಯ; ಮುಖ ವಿರೂಪಗೊಂಡಿದೆ, ಕಾಲುಗಳಿಗೆ ಪೆಟ್ಟು?

ಮೊಜ್ತಬಾ ಖಮೇನಿಗೆ ತೀವ್ರವಾದ, ವಿರೂಪಗೊಂಡ ಗಾಯಗಳಿವೆ: ವರದಿ

Mojtaba Khamenei has suffered injuries: ಇರಾನ್ ವಿರುದ್ಧದ ಇಸ್ರೇಲ್-ಅಮೆರಿಕ ಜಂಟಿ ಯುದ್ಧದಲ್ಲಿ ಗಂಭೀರ ಗಾಯಗೊಂಡಿದ್ದ ಇರಾನ್‌ನ ನೂತನ ಸರ್ವೋಚ್ಛ ನಾಯಕ ಮೊಜ್ತಬಾ ಖಮೇನಿಗೆ ತೀವ್ರವಾದ, ವಿರೂಪಗೊಂಡ ಗಾಯಗಳಿವೆ ಎಂದು ವರದಿಯೊಂದು ತಿಳಿಸಿವೆ. ಫೆಬ್ರವರಿ 28 ರಂದು, ಕೇಂದ್ರ ಟೆಹರಾನ್‌ನಲ್ಲಿರುವ ಸುಪ್ರೀಂ ಲೀಡರ್‌ನ ಕಚೇರಿ ಮೇಲೆ ದಾಳಿ ನಡೆದಿತ್ತು.

ಇರಾನ್ ಕದನ ವಿರಾಮದ ನಡುವೆ ದೇಶದ ಇಂಧನ ಭದ್ರತೆ ಕುರಿತ ಮಾತುಕತೆಗಾಗಿ ಯುಎಇಗೆ ತೆರಳಿದ ಜೈಶಂಕರ್

ಕದನ ವಿರಾಮದ ಸಂದರ್ಭದಲ್ಲಿ ಯುಎಇಗೆ ತೆರಳಿದ ಜೈಶಂಕರ್

ಇರಾನ್ ಯುದ್ಧ ಪ್ರಾರಂಭವಾದ ಬಳಿಕ ವಿಶ್ವದಲ್ಲೇ ಭಾರತ ಅತೀ ಹೆಚ್ಚಿನ ಪ್ರಮಾಣದಲ್ಲಿ ಇಂಧನ ಬಿಕ್ಕಟ್ಟನ್ನು ಎದುರಿಸಿತ್ತು. ಇದರ ಪರಿಣಾಮ ಮುಂದಿನ ಹಲವಾರು ದಿನಗಳವರೆಗೆ ಮುಂದುವರಿಯುವ ಸಾಧ್ಯತೆ ಇದೆ. ದೇಶದ ಇಂಧನ ಭದ್ರತೆಯನ್ನು ಖಚಿತ ಪಡಿಸಿಕೊಳ್ಳಲು ಇದೀಗ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಶನಿವಾರ ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ತೆರಳಿದ್ದಾರೆ.

ಮುಟ್ಟುಗೋಲು ಹಾಕಿರುವ ಇರಾನ್‌ ಆಸ್ತಿಗಳನ್ನು ಬಿಡಲು ಅಮೆರಿಕ ಒಪ್ಪಿಗೆ!

ಮುಟ್ಟುಗೋಲು ಹಾಕಿರುವ ಇರಾನ್‌ ಆಸ್ತಿಗಳನ್ನು ಬಿಡಲು ಅಮೆರಿಕ ಒಪ್ಪಿಗೆ!

ಅಮೆರಿಕ ಹಾಗೂ ಇರಾನ್‌ ನಡುವೆ ಶಾಂತಿ ಮಾತುಕತೆ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ನಡೆಯುತ್ತಿದೆ. ಕತಾರ್ ಮತ್ತು ಇತರ ವಿದೇಶಿ ಬ್ಯಾಂಕುಗಳಲ್ಲಿ ಇರಿಸಲಾಗಿರುವ ಇರಾನಿನ ಮುಟ್ಟುಗೋಲು ಹಾಕಿಕೊಂಡಿರುವ ಆಸ್ತಿಗಳನ್ನು ಬಿಡುಗಡೆ ಮಾಡಲು ಅಮೆರಿಕ ಒಪ್ಪಿಕೊಂಡಿದೆ ಎಂದು ಇರಾನಿನ ಮೂಲಗಳು ತಿಳಿಸಿದೆ.

ನಾಳೆ ಪಾಕಿಸ್ತಾನದಲ್ಲಿ ಇರಾನ್‌- ಅಮೆರಿಕ ಶಾಂತಿ ಮಾತುಕತೆ; ಇಸ್ಲಾಮಾಬಾದ್‌ಗೆ ಆಗಮಿಸಿದ ಜೆಡಿ ವ್ಯಾನ್ಸ್

ನಾಳೆ ಪಾಕಿಸ್ತಾನದಲ್ಲಿ ಇರಾನ್‌- ಅಮೆರಿಕ ಶಾಂತಿ ಮಾತುಕತೆ

ಇರಾನ್ ಜೊತೆ ಶಾಂತಿ ಮಾತುಕತೆಗಳನ್ನು ಪ್ರಾರಂಭಿಸುವ ಗುರಿಯನ್ನು ಹೊಂದಿರುವ ಉನ್ನತ ಮಟ್ಟದ ಅಮೇರಿಕನ್ ನಿಯೋಗದ ನೇತೃತ್ವ ವಹಿಸಲು ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಶುಕ್ರವಾರ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಿದ್ದಾರೆ. ಸದ್ಯ ಪಾಕಿಸ್ತಾನದಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ.

ಅಮೆರಿಕ-ಇರಾನ್ ಶಾಂತಿ ಒಪ್ಪಂದ: ಸಂಧಾನಕಾರನಾಗಿ ಪಾಕಿಸ್ತಾನದ ಪಾತ್ರ ಅನಿವಾರ್ಯತೆಯೇ ಅಥವಾ ಆಯ್ಕೆಯೇ?

ಅಮೆರಿಕ-ಇರಾನ್ ಶಾಂತಿ ಒಪ್ಪಂದ: ಪಾಕಿಸ್ತಾನದ ಪಾತ್ರವೇನು..?

ಅಮೆರಿಕ-ಇರಾನ್ ನಡುವಿನ ಕದನ ವಿರಾಮದಲ್ಲಿ ಪಾಕಿಸ್ತಾನದ ಪಾತ್ರ ಮಹತ್ವ ಪಡೆದಿದೆ. ಆರ್ಥಿಕ ಸಂಕಷ್ಟ, ತೈಲದ ಅವಲಂಬನೆ ಮತ್ತು ಜಾಗತಿಕ ಒತ್ತಡಗಳಿಂದಾಗಿ ಪಾಕಿಸ್ತಾನ ಮಧ್ಯಸ್ಥಿಕೆ ವಹಿಸಬೇಕಾದ ಪರಿಸ್ಥಿತಿ ಉಂಟಾಯಿತು. ಈ ಸಂಧಾನವು ರಾಜತಾಂತ್ರಿಕ ಯಶಸ್ಸಾ ಅಥವಾ ಕೇವಲ ರಾಜಕೀಯ ಅವಶ್ಯಕತೆಯ ಫಲವೋ ಎಂಬ ಚರ್ಚೆ ಮುಂದುವರಿದಿದೆ.

ಟ್ರಂಪ್‌ ಮನವಿಗೂ ಕ್ಯಾರೇ ಎನ್ನದ ಇಸ್ರೇಲ್‌; ಲೆಬನಾನ್‌ನ 2 ಪಟ್ಟಣಗಳ ಮೇಲೆ ವೈಮಾನಿಕ ದಾಳಿ

ಲೆಬನಾನ್‌ನ 2 ಪಟ್ಟಣಗಳ ಮೇಲೆ ವೈಮಾನಿಕ ದಾಳಿ ಮಾಡಿದ ಇಸ್ರೇಲ್‌

ಏರ್ಪಟ್ಟಿರುವ ಕದನ ವಿರಾಮದ ಮಧ್ಯೆ ಇಸ್ರೇಲ್‌ ಮತ್ತೆ ಲೆಬನಾನ್‌ ಮೇಲೆ ದಾಳಿ ನಡೆಸಿದೆ. ಇಸ್ರೇಲಿ ಜೆಟ್‌ಗಳು ಕನಿಷ್ಠ ಎರಡು ಲೆಬನಾನ್ ಪಟ್ಟಣಗಳ ಮೇಲೆ ವಾಯುದಾಳಿ ನಡೆಸಿವೆ ಎಂದು ತಿಳಿದು ಬಂದಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಕೇಳಿದ ನಂತರ ಸ್ವಲ್ಪ ಸಮಯದ ವಿರಾಮದ ನಂತರ ಹೊಸ ದಾಳಿಗಳು ನಡೆದವು.

'ದುಷ್ಟ ಕ್ಯಾನ್ಸರ್ ಇಸ್ರೇಲ್' ಎಂದ ಪಾಕಿಸ್ತಾನಿ ರಕ್ಷಣಾ ಸಚಿವನಿಗೆ ಇಸ್ರೇಲ್ ತಿರುಗೇಟು

ಪಾಕಿಸ್ತಾನ ವಿರುದ್ಧ ಇಸ್ರೇಲ್ ಕೆಂಡಾಮಂಡಲ

ಇಸ್ರೇಲ್ ಅನ್ನು ದುಷ್ಟ ಕ್ಯಾನ್ಸರ್ ಎಂದು ಕರೆದ ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಅವರಿಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಿರುಗೇಟು ನೀಡಿದ್ದಾರೆ. ಇಸ್ರೇಲ್ ಅನ್ನು ನಿರ್ಮೂಲನೆ ಮಾಡುವ ಅವರ ಹೇಳಿಕೆ ಅತಿರೇಕದ್ದಾಗಿದೆ. ಇದು ಯಾವುದೇ ಸರ್ಕಾರ ಸಹಿಸಬಹುದಾದ ಹೇಳಿಕೆಯಲ್ಲ ಎಂದು ಹೇಳಿದ್ದಾರೆ.

ಅಮೆರಿಕ ಅಧಿಕಾರಿಗಳೊಂದಿಗೆ ಮಾತನಾಡಲು ಇಸ್ಲಾಮಾಬಾದ್‌ಗೆ ನಿಯೋಗ; ಇರಾನ್ ಹೇಳಿದ್ದೇನು?

ಇರಾನ್ ನಿಯೋಗ ಇಸ್ಲಾಮಾಬಾದ್‌ಗೆ ಭೇಟಿ?

ಯುಎಸ್ ಮತ್ತು ಇಸ್ರೇಲ್ ಸೇನಾ ಪಡೆಯು ಇರಾನ್ ಮೇಲೆ ದಾಳಿ ಪ್ರಾರಂಭಿಸಿದ ಸರಿಸುಮಾರು ಒಂದೂವರೆ ತಿಂಗಳ ಬಳಿಕ ಎರಡೂ ಪಕ್ಷಗಳು ಕದನ ವಿರಾಮ ಮಾತುಕತೆಗೆ ಮುಂದಾಗಿವೆ. ಈ ನಿಟ್ಟಿನಲ್ಲಿ ಅಮೆರಿಕ ಅಧಿಕಾರಿಗಳೊಂದಿಗೆ ಮಾತನಾಡಲು ಇರಾನ್ ನಿಯೋಗವು ಇಸ್ಲಾಮಾಬಾದ್‌ಗೆ ಆಗಮಿಸಿದೆ ಎನ್ನಲಾಗಿದ್ದರೂ ಇದನ್ನು ಇರಾನ್ ನಿರಾಕರಿಸಿದೆ.

ಪ್ರಧಾನಿ ಶೆಹಬಾಜ್ ಷರೀಫ್‌ಗೆ ನೊಬೆಲ್ ಶಾಂತಿ ಪ್ರಶಸ್ತಿ? ಅಮೆರಿಕ-ಇರಾನ್ ಕದನ ವಿರಾಮದ ನಂತರ ಪಾಕಿಸ್ತಾನದಲ್ಲಿ ಕೇಳಿಬಂತು ಒತ್ತಾಯ

ಪಾಕ್ ಪ್ರಧಾನಿ ಶೆಹಬಾಜ್ ಷರೀಫ್‌ಗೆ ನೊಬೆಲ್ ಶಾಂತಿ ಪ್ರಶಸ್ತಿ?

Nobel Peace Prize for Shehbaz Sharif?: ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಬೇಕೇ ಎಂದು ಪಾಕಿಸ್ತಾನ ಮತ್ತು ವಿದೇಶಗಳಲ್ಲಿ ಧ್ವನಿಗಳು ಕೇಳಲು ಪ್ರಾರಂಭಿಸಿವೆ. ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಕೂಡ ಇದೇ ರೀತಿ ಮಾತನಾಡುತ್ತಾ, ಪಾಕ್ ಪ್ರಧಾನಿ ಷರೀಫ್ ಅವರ ಮನವಿಗೆ ಪ್ರತಿಕ್ರಿಯೆಯಾಗಿ ಟೆಹರಾನ್ ಕದನ ವಿರಾಮವನ್ನು ಒಪ್ಪಿಕೊಂಡಿದೆ ಎಂದು ಹೇಳಿದರು.

ಇರಾನ್‌- ಅಮೆರಿಕ ಕದನ ವಿರಾಮ ಮಾತುಕತೆ; 2 ದಿನ ಪಾಕಿಸ್ತಾನದಲ್ಲಿ ಸಾರ್ವತ್ರಿಕ ರಜೆ ಘೋಷಣೆ!

ಕದನ ವಿರಾಮ ಮಾತುಕತೆ; 2 ದಿನ ಪಾಕಿಸ್ತಾನದಲ್ಲಿ ಸಾರ್ವತ್ರಿಕ ರಜೆ ಘೋಷಣೆ!

ಏಪ್ರಿಲ್ 10 ರಿಂದ ಆರಂಭವಾಗಲಿರುವ ಅಮೆರಿಕ ಮತ್ತು ಇರಾನ್ ನಡುವಿನ ಮೊದಲ ಸುತ್ತಿನ ನೇರ ಮಾತುಕತೆಗೆ ಪಾಕಿಸ್ತಾನ ಸಿದ್ಧತೆ ನಡೆಸುತ್ತಿರುವುದರಿಂದ ರಾಜಧಾನಿಯನ್ನು ಬಿಗಿ ಭದ್ರತಾ ವ್ಯವಸ್ಥೆಯಲ್ಲಿ ಇರಿಸಲಾಗಿದೆ ಎಂದು ಪಾಕಿಸ್ತಾನದ ಸರ್ಕಾರಿ ಮಾಧ್ಯಮ ಗುರುವಾರ ವರದಿ ಮಾಡಿದೆ.

ಹೊರ್ಮುಜ್ ಜಲಸಂಧಿಯನ್ನು ಹಾದುಹೋಗುವ ಟ್ಯಾಂಕರ್‌ಗಳಿಗೆ ಶುಲ್ಕದ ಬರೆ; ಪ್ರತಿ ಬ್ಯಾರೆಲ್‌ಗೆ 1 ಡಾಲರ್‌ ವಿಧಿಸಿದ ಇರಾನ್‌

ಟ್ಯಾಂಕರ್‌ಗಳಿಗೆ ಪ್ರತಿ ಬ್ಯಾರೆಲ್‌ಗೆ $1 ಶುಲ್ಕ ವಿಧಿಸಲಿದೆ ಇರಾನ್

Strait of Hormuz: ಇರಾನ್ ತನ್ನ ತೈಲ ಟ್ಯಾಂಕರ್‌ಗಳನ್ನು ಆಯಕಟ್ಟಿನ ಹೊರ್ಮುಜ್ ಜಲಸಂಧಿಯ (Strait of Hormuz) ಮೂಲಕ ಹಾದುಹೋಗಲು ಹಡಗು ಕಂಪನಿಗಳಿಂದ ಕ್ರಿಪ್ಟೋಕರೆನ್ಸಿಯಲ್ಲಿ ಟೋಲ್‌ಗಳನ್ನು ಕೇಳಲಿದೆ ಎಂದು ವರದಿ ತಿಳಿಸಿದೆ. ಹಾದುಹೋಗುವ ಯಾವುದೇ ಹಡಗಿನಿಂದ ಟೋಲ್ ಸಂಗ್ರಹಿಸಲು ಇರಾನ್ ಬಯಸುತ್ತದೆ ಎಂದು ಅಲ್ಲಿನ ಅಧಿಕಾರಿ ತಿಳಿಸಿದ್ದಾರೆ.

ಕದನ ವಿರಾಮ ಮಾತುಕತೆ: ಇರಾನ್‌ನ ಆಶಯ ಪಟ್ಟಿ ಕಸದ ಬುಟ್ಟಿ ಸೇರಿದೆ ಎಂದ ಡೊನಾಲ್ಡ್ ಟ್ರಂಪ್ ಆಪ್ತೆ

ಇರಾನ್‌ನ ಪ್ರಸ್ತಾಪಗಳು ಸಂಪೂರ್ಣ ತಿರಸ್ಕೃತ: ಅಮೆರಿಕ

ಅಮೆರಿಕ, ಇಸ್ರೇಲ್ ಸೇನಾ ಪಡೆಯು ಇರಾನ್ ವಿರುದ್ಧ ನಡೆಸುತ್ತಿರುವ ಸಂಘರ್ಷಕ್ಕೆ ತಾತ್ಕಾಲಿಕವಾಗಿ ವಿರಾಮ ಹೇಳಲಾಗಿದೆ. ಕದನ ವಿರಾಮ ಮಾತುಕತೆಯ ವೇಳೆ ಇರಾನ್ 10 ಅಂಶಗಳ ಪ್ರಸ್ತಾಪವನ್ನು ಮುಂದಿಟ್ಟಿದ್ದು, ಇದನ್ನು ಸಂಪೂರ್ಣವಾಗಿ ತಿರಸ್ಕರಿಸಲಾಗಿದೆ ಎಂದು ಬುಧವಾರ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ತಿಳಿಸಿದ್ದಾರೆ.

ಅಮೆರಿಕದಿಂದ ಮೂರು ನಿಯಮಗಳ ಉಲ್ಲಂಘನೆ: ಕದನ ವಿರಾಮ ಮಾತುಕತೆ ಅಸಮಂಜಸ ಎಂದ ಇರಾನ್

ಅಮೆರಿಕ ನಿಯಮ ಉಲ್ಲಂಘನೆ; ಕದನ ವಿರಾಮ ಅಸಮಂಜಸ ಎಂದ ಇರಾನ್

ಮೊಹಮ್ಮದ್ ಬಾಗರ್ ಘಾಲಿಬಾಫ್ ಅವರು ಅಮೆರಿಕದೊಂದಿಗೆ ನಡೆಯುತ್ತಿರುವ ಕದನ ವಿರಾಮ ಮತ್ತು ಮಾತುಕತೆಗಳನ್ನು “ಅಸಮಂಜಸ” ಎಂದು ಕರೆದಿದ್ದಾರೆ. ಇಸ್ರೇಲ್‌ನ ಲೆಬನಾನ್ ಮೇಲಿನ ದಾಳಿ, ಅಮೆರಿಕದ ಡ್ರೋನ್ ಪ್ರವೇಶ ಮತ್ತು ಯುರೇನಿಯಂ ಪುಷ್ಟೀಕರಣ ವಿಚಾರದಲ್ಲಿ ಅಮೆರಿಕದ ನಿರಾಕರಣೆಗಳನ್ನು ಅವರು ಉಲ್ಲಂಘನೆ ಎಂದು ಆರೋಪಿಸಿದ್ದಾರೆ. ಡೊನಾಲ್ಡ್ ಟ್ರಂಪ್ ಇದನ್ನು ಪ್ರತ್ಯೇಕ ವಿಷಯ ಎಂದು ಹೇಳಿದರೆ, ಬೆಂಜಮಿನ್ ನೆತನ್ಯಾಹು ಲೆಬನಾನ್‌ನಲ್ಲಿ ಸೈನಿಕ ಕ್ರಮ ಮುಂದುವರಿಸುವುದಾಗಿ ಹೇಳಿದ್ದಾರೆ. ಈ ಭಿನ್ನಾಭಿಪ್ರಾಯಗಳು ಶಾಂತಿ ಪ್ರಕ್ರಿಯೆಗೆ ಅಡ್ಡಿಯಾಗುತ್ತಿವೆ.

ಹಿಜ್ಬುಲ್ಲಾ ಮುಖ್ಯಸ್ಥನ ಆಪ್ತ ಸಹಾಯಕನನ್ನೇ ಹೊಡೆದುರುಳಿಸಿದ ಇಸ್ರೇಲ್‌; ಮತ್ತೆ ಯುದ್ಧ ಶುರುವಾಗುತ್ತಾ?

ಹಿಜ್ಬುಲ್ಲಾ ಮುಖ್ಯಸ್ಥನ ಆಪ್ತ ಕಾರ್ಯದರ್ಶಿಯನ್ನೇ ಹೊಡೆದುರುಳಿಸಿದ ಇಸ್ರೇಲ್‌

ಬೈರುತ್‌ನಲ್ಲಿ ನಡೆದ ದಾಳಿಯಲ್ಲಿ ಹಿಜ್ಬೊಲ್ಲಾ ಮುಖ್ಯಸ್ಥ ನಯೀಮ್ ಖಾಸಿಮ್ ವೈಯಕ್ತಿಕ ಕಾರ್ಯದರ್ಶಿ ಅಲಿ ಯೂಸುಫ್ ಹರ್ಷಿಯನ್ನು ಹತ್ಯೆ ಮಾಡಿರುವುದಾಗಿ ಇಸ್ರೇಲಿ ಸೇನೆ ಹೇಳಿಕೊಂಡಿದೆ. ಹೆಜ್ಬೊಲ್ಲಾ-ಸಂಬಂಧಿತ ಮೂಲಸೌಕರ್ಯ ಮತ್ತು ಲಾಜಿಸ್ಟಿಕಲ್ ಜಾಲಗಳನ್ನು ಗುರಿಯಾಗಿಸಿಕೊಂಡು ನಡೆಸಲಾಗುತ್ತಿರುವ ವಿಶಾಲ ಕಾರ್ಯಾಚರಣೆಯ ಭಾಗವಾಗಿ ಈ ದಾಳಿ ನಡೆದಿದೆ .

ಅಮೆರಿಕ-ಇರಾನ್ ಕದನ ವಿರಾಮ: ಪಾಕಿಸ್ತಾನದ ಪಾತ್ರ ಕೇವಲ 'ಪೋಸ್ಟ್ ಮ್ಯಾನ್' ಕೆಲಸವೇ ಅಥವಾ ನಿಜವಾದ ಸಂಧಾನಕಾರನೇ?

ಅಮೆರಿಕ–ಇರಾನ್ ಕದನ ವಿರಾಮ: ಚೀನಾದ ಪಾತ್ರವೇನು..?

ಅಮೆರಿಕ ಮತ್ತು ಇರಾನ್ ನಡುವೆ ನಡೆದಿರುವ ಎರಡು ವಾರಗಳ ಕದನ ವಿರಾಮದಲ್ಲಿ ಪಾಕಿಸ್ತಾನವು ಪ್ರಮುಖ ಸಂಧಾನಕಾರನಾಗಿ ಹೇಳಿಕೊಳ್ಳುತ್ತಿದ್ದರೂ, ತಜ್ಞರ ಪ್ರಕಾರ ಅದು ಕೇವಲ ‘ಸಂದೇಶವಾಹಕ’ ಪಾತ್ರದಲ್ಲೇ ಸೀಮಿತವಾಗಿದೆ. ನಿಜವಾದ ಒತ್ತಡ ಮತ್ತು ಪ್ರಭಾವ ಚೀನಾದಿಂದ ಬಂದಿದೆ, ಏಕೆಂದರೆ ಹಾರ್ಮುಜ್ ಜಲಸಂಧಿ ಮುಚ್ಚುವಿಕೆಯು ಅದರ ಆರ್ಥಿಕ ಹಿತಾಸಕ್ತಿಗೆ ಹೊಡೆತ ನೀಡಿತ್ತು. ಪಾಕಿಸ್ತಾನ ತನ್ನ ಆರ್ಥಿಕ ಸಂಕಷ್ಟದಿಂದ ಹೊರಬರಲು ಈ ಅವಕಾಶವನ್ನು ಬಳಸಿಕೊಳ್ಳುತ್ತಿದೆ ಎಂಬ ವಿಶ್ಲೇಷಣೆ ಕೂಡ ಇದೆ. ಒಟ್ಟಿನಲ್ಲಿ, ಈ ಕದನ ವಿರಾಮದಲ್ಲಿ ಪಾಕಿಸ್ತಾನದ ಪಾತ್ರ ಸೀಮಿತವಾಗಿದ್ದು, ಭವಿಷ್ಯದಲ್ಲಿ ಪರಿಸ್ಥಿತಿಯನ್ನು ನಿಭಾಯಿಸುವ ಸಾಮರ್ಥ್ಯವೂ ಅದರ ಬಳಿ ಇಲ್ಲ ಎಂಬ ಆತಂಕ ವ್ಯಕ್ತವಾಗಿದೆ.

ಇರಾನ್ ಯುದ್ಧ ಕದನ ವಿರಾಮ: ಹಾರ್ಮುಜ್ ಜಲಸಂಧಿಯಲ್ಲಿ ಸಿಲುಕಿರುವ ಭಾರತದ ತೈಲ, ಅನಿಲದ ಲೆಕ್ಕಾಚಾರ

ಹಾರ್ಮುಜ್‌ನಲ್ಲಿ ಬಾಕಿಯಾದ ಭಾರತ ಹಡಗುಗಳು

ಇರಾನ್-ಅಮೆರಿಕ ಕದನ ವಿರಾಮದ ನಂತರ ಹಾರ್ಮುಜ್ ಜಲಸಂಧಿ ಭಾಗಶಃ ತೆರೆಯಲ್ಪಟ್ಟರೂ, ಭಾರತದ ಹಲವಾರು ತೈಲ ಮತ್ತು ಎಲ್‌ಪಿಜಿ ಹಡಗುಗಳು ಇನ್ನೂ ಸಿಲುಕಿಕೊಂಡಿವೆ. ಸುಮಾರು 68,000 ಮೆಟ್ರಿಕ್ ಟನ್ ಎಲ್‌ಪಿಜಿ ಮತ್ತು 4.23 ಲಕ್ಷ ಮೆಟ್ರಿಕ್ ಟನ್ ಕಚ್ಚಾ ತೈಲ ಸಾಗಣೆ ವಿಳಂಬವಾಗಿದ್ದು, ಸರ್ಕಾರ ಹಡಗುಗಳನ್ನು ಸುರಕ್ಷಿತವಾಗಿ ಹೊರತೆಗೆದಲು ಪ್ರಯತ್ನಿಸುತ್ತಿದೆ.

ಕದನ ವಿರಾಮ ಜಾರಿಯಾದರೂ ಬಗೆಹರಿದಿಲ್ಲ ಸಮಸ್ಯೆ; ಹಾರ್ಮೊಜ್‌ನಲ್ಲಿ ಅನುಮತಿ ಪಡೆಯದ ಹಡಗು ನಾಶ ಎಂದ ಇರಾನ್‌

ಹಾರ್ಮೊಜ್‌ನಲ್ಲಿ ಅನುಮತಿ ಪಡೆಯದ ಹಡಗು ನಾಶ ಎಂದ ಇರಾನ್‌!

ಕಳೆದ ಐದು ವಾರಗಳಿಂದ ನಡೆಯುತ್ತಿದ್ದ ನಡೆಯುತ್ತಿದ್ದ ಇರಾನ್‌-ಇಸ್ರೇಲ್‌- ಅಮೆರಿಕ ಯುದ್ಧಕ್ಕೆ ಕೊಂಚ ತಡೆ ಬಿದ್ದಿದೆ. ಇಂದು ಉಭಯ ದೇಶಗಳು 15 ದಿನಗಳ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿವೆ.ಇದೀಗ ಹಾರ್ಮೊಜ್‌ ಜಲಸಂಧಿಯನ್ನು ದಾಟುವ ಎಲ್ಲಾ ಹಡಗುಗಳು ಇರಾನ್‌ ನೌಕಾಪಡೆಯ ಅನುಮತಿ ಪಡೆದು ದಾಟಬೇಕು ಇಲ್ಲವೇ ನಾಶಪಡಿಸುತ್ತೇವೆ ಎಂದು ಇರಾನ್‌ ತಿಳಿಸಿದೆ.

ಹೊರ್ಮುಜ್ ಜಲಸಂಧಿ ದಾಟಲು ಶುಲ್ಕ ಇಲ್ಲ; ಇರಾನ್‌ ಬೇಡಿಕೆಗೆ ಓಮನ್ ವಿರೋಧ

ಹೊರ್ಮುಜ್ ಜಲಸಂಧಿ ದಾಟಲು ಶುಲ್ಕ ಇಲ್ಲ: ಓಮನ್

Oman opposes Iran’s demand: ಹೊರ್ಮುಜ್ ಜಲಸಂಧಿ (Strait of Hormuz) ಮೂಲಕ ಸಾಗುವ ಹಡಗುಗಳ ಮೇಲೆ ತೆರಿಗೆ ವಿಧಿಸಲು ಟೆಹರಾನ್ ಮತ್ತು ಓಮನ್ ಎರಡಕ್ಕೂ ಅವಕಾಶ ನೀಡುವ ನಿಬಂಧನೆಯನ್ನು ಹೊಂದಿತ್ತು. ಆದರೆ, ಈ ಬೇಡಿಕೆಯನ್ನು ಓಮನ್ ವಿರೋಧಿಸಿದೆ. ಯಾವುದೇ ಟೋಲ್ ವಿಧಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಮುರಿದು ಬಿತ್ತಾ ಕದನ ವಿರಾಮ?  ಇರಾನ್‌ನ ತೈಲ ಸಂಸ್ಕರಣಾಗಾರದ ಮೇಲೆ ದಾಳಿ ಆರೋಪ

ಇರಾನ್‌ನ ತೈಲ ಸಂಸ್ಕರಣಾಗಾರದ ಮೇಲೆ ಮತ್ತೆ ದಾಳಿ ಆರೋಪ

ಇರಾನ್ ಮತ್ತು ಅಮೆರಿಕ ನಡುವೆ ಎರಡು ವಾರಗಳ ಕದನ ವಿರಾಮ ಜಾರಿಗೆ ಬಂದ ಕೆಲವೇ ಗಂಟೆಗಳ ನಂತರ, ಬುಧವಾರ ಇರಾನ್‌ನ ಲಾವನ್ ದ್ವೀಪದಲ್ಲಿರುವ ತೈಲ ಸಂಸ್ಕರಣಾಗಾರದ ಮೇಲೆ ಇರಾನ್ ಅಧಿಕಾರಿಗಳು "ಶತ್ರು ದಾಳಿ" ಎಂದು ಬಣ್ಣಿಸಿದ್ದಾರೆ .

ಕದನ ವಿರಾಮ ಜಾರಿಯಾದರೂ ನಿಂತಿಲ್ಲ ಬೆದರಿಕೆ; ಲೆಬನಾನ್‌ ಮೇಲೆ ದಾಳಿ ಮಾಡಿದ್ರೆ ಬಾಂಬ್‌ ಸ್ಫೋಟದ ಎಚ್ಚರಿಕೆ ನೀಡಿದ ಇರಾನ್

ಲೆಬನಾನ್‌ ಮೇಲೆ ದಾಳಿ ಮಾಡಿದ್ರೆ ಬಾಂಬ್‌ ಸ್ಫೋಟದ ಎಚ್ಚರಿಕೆ ನೀಡಿದ ಇರಾನ್

ಅಮೆರಿಕ-ಇರಾನ್ ಕದನ ವಿರಾಮದ ಅಡಿಯಲ್ಲಿ ಲೆಬನಾನ್ ಒಳಗೊಳ್ಳುತ್ತದೆಯೇ ಎಂಬ ಬಗ್ಗೆ ಸಂಘರ್ಷದ ಹೇಳಿಕೆಗಳ ನಡುವೆ, ದಕ್ಷಿಣ ಲೆಬನಾನ್‌ನಲ್ಲಿ ಯುದ್ಧ ಮುಂದುವರಿದರೆ ಟೆಲ್ ಅವೀವ್ ಮೇಲೆ ದಾಳಿ ಮಾಡಬಹುದು ಎಂದು ಇರಾನ್‌ನ ರಾಷ್ಟ್ರೀಯ ಭದ್ರತಾ ಮಂಡಳಿ ಎಚ್ಚರಿಸಿದೆ.

Loading...