ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ವಿದೇಶ

"ಇದು ಹೇಡಿಗಳ ಕೃತ್ಯ"; ಕಾಬೂಲ್‌ ಆಸ್ಪತ್ರೆಯ ಮೇಲಿನ ದಾಳಿಗೆ ಪಾಕ್‌ ವಿರುದ್ಧ ಭಾರತ ವಾಗ್ದಾಳಿ

ಕಾಬೂಲ್‌ ಆಸ್ಪತ್ರೆಯ ಮೇಲಿನ ದಾಳಿಗೆ ಪಾಕ್‌ ವಿರುದ್ಧ ಭಾರತ ವಾಗ್ದಾಳಿ

Pak Airstrike on Kabul: ಕಾಬೂಲ್‌ನ ಆಸ್ಪತ್ರೆಯ ಮೇಲೆ ನಡೆದ ವಾಯುದಾಳಿಗಳ ಬಗ್ಗೆ ಪಾಕಿಸ್ತಾನವನ್ನು ಭಾರತ ಮಂಗಳವಾರ ತೀವ್ರವಾಗಿ ಖಂಡಿಸಿದೆ, ಈ ಘಟನೆಯನ್ನು ನಾಗರಿಕರನ್ನು ಗುರಿಯಾಗಿಸಿಕೊಂಡು ನಡೆಸಲಾದ "ಹೇಡಿತನ" ಮತ್ತು "ಮನಸ್ಸಿಗೆ ವಿರುದ್ಧವಾದ" ಕೃತ್ಯ ಎಂದು ಹೇಳಿದೆ.

ಕಾಬೂಲ್ ಆಸ್ಪತ್ರೆಯ ಮೇಲೆ ವೈಮಾನಿಕ ದಾಳಿ ನಡೆಸಿದ ಪಾಕಿಸ್ತಾನ: ಭೀಕರ ಸ್ಫೋಟದ ವಿಡಿಯೊ ಇಲ್ಲಿದೆ

ಕಾಬೂಲ್ ಆಸ್ಪತ್ರೆಯ ಮೇಲೆ ವೈಮಾನಿಕ ದಾಳಿ ನಡೆಸಿದ ಪಾಕಿಸ್ತಾನ

Pakistan Conducts Airstrike: ಅಫ್ಘಾನಿಸ್ತಾನದ ಕಾಬೂಲ್‌ನಲ್ಲಿರುವ ಮಾದಕವಸ್ತು ಪುನರ್ವಸತಿ ಆಸ್ಪತ್ರೆಯ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ ನಡೆಸಿದೆ ಎಂದು ಆರೋಪಿಸಲಾಗಿದೆ. ದೊಡ್ಡ ಸ್ಫೋಟವುಂಟಾಗಿ ಬೆಂಕಿಯ ಜ್ವಾಲೆ ಮೇಲೇರುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಆದರೆ, ಈ ಆರೋಪವನ್ನು ಪಾಕಿಸ್ತಾನ ನಿರಾಕರಿಸಿದೆ.

Pakistan Afghan War: ಕಾಬೂಲ್‌ ಆಸ್ಪತ್ರೆಯ ಮೇಲೆ ಪಾಕ್‌ ವಿಮಾನ ದಾಳಿ, 400 ಜನ ಸಾವು

ಕಾಬೂಲ್‌ ಆಸ್ಪತ್ರೆಯ ಮೇಲೆ ಪಾಕ್‌ ವಿಮಾನ ದಾಳಿ, 400 ಜನ ಸಾವು

ತಾಲಿಬಾನ್ ಸರ್ಕಾರದ ಉಪ ವಕ್ತಾರ ಹಮ್ದುಲ್ಲಾ ಫಿತ್ರತ್ ಅವರ ಪ್ರಕಾರ, ದಾಳಿಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 400ಕ್ಕೆ ಏರಿಕೆಯಾಗಿದ್ದು, 250ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಆರೋಗ್ಯ ಸಚಿವಾಲಯದ ವಕ್ತಾರ ಶರಾಫತ್ ಜಮಾನ್ ಮಾತನಾಡಿ, ಆಸ್ಪತ್ರೆಯ ಎಲ್ಲಾ ವಿಭಾಗಗಳು ನಾಶವಾಗಿವೆ.

ಕೆಫೆಯಲ್ಲಿನ ವಿಡಿಯೊ ಫೇಕ್‌ ಎಂದವರಿಗೆ ಬೆಂಜಮಿನ್‌ ನೆತನ್ಯಾಹು ತಿರುಗೇಟು; ಮತ್ತೊಂದು ವಿಡಿಯೊ ಹರಿಯಬಿಟ್ಟ ಇಸ್ರೇಲ್‌ ಪ್ರಧಾನಿ

ಬದುಕಿರುವುದಕ್ಕೆ ಮತ್ತೊಂದು ಸಾಕ್ಷಿ ಕೊಟ್ಟ ಬೆಂಜಮಿನ್‌ ನೆತನ್ಯಾಹು

Benjamin Netanyahu: ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಮತ್ತೊಂದು ವಿಡಿಯೊ ಪೋಸ್ಟ್‌ ಮಾಡುವ ಮೂಲಕ ತಾವು ಜೀವಂತವಾಗಿರುವುದನ್ನು ಸಾರಿ ಹೇಳಿದ್ದಾರೆ. ಹೊಸ ವಿಡಿಯೊದಲ್ಲಿ ನೆತನ್ಯಾಹು ಹಸಿರು ಮತ್ತು ಪರ್ವತದ ಹಿನ್ನೆಲೆ ಹೊಂದಿರುವ ಪ್ರದೇಶದಲ್ಲಿ ನಾಗರಿಕರೊಂದಿಗೆ ಬೆರೆತು ಮಾತನಾಡುತ್ತಿರುವುದು ಕಂಡು ಬಂದಿದೆ. ಸದ್ಯ ಈ ವಿಡಿಯೊ ವೈರಲ್‌ ಆಗಿದೆ.

ಹೊರ್ಮುಜ್ ಜಲಸಂಧಿ ರಕ್ಷಣೆಗೆ ಅಮೆರಿಕದ ಜತೆ ನಿಲ್ಲುತ್ತಾ ಚೀನಾ?

ಇರಾನ್ ವಿರುದ್ಧ ಸಂಘರ್ಷಕ್ಕೆ ಇಳಿಯುತ್ತ ಚೀನಾ?

ಯುಎಸ್ ಮತ್ತು ಇಸ್ರೇಲ್ ಸೇನಾ ಪಡೆಯು ಇರಾನ್ ಮೇಲೆ ದಾಳಿ ನಡೆಸಿದ ಬಳಿಕ ಇರಾನ್ ಹೊರ್ಮುಜ್ ಜಲಸಂಧಿಯನ್ನು ಮುಚ್ಚಿ ಜಾಗತಿಕ ವ್ಯಾಪಾರ ಚಟುವಟಿಕೆಯ ಮೇಲೆ ಗಮನಾರ್ಹ ಪರಿಣಾಮ ಬೀರಿದೆ. ಹೀಗಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ಜಲಸಂಧಿಯ ದಾರಿಯನ್ನು ಸುರಕ್ಷಿತಗೊಳಿಸಲು ಚೀನಾ ಸೇರಿದಂತೆ ಹಲವಾರು ರಾಷ್ಟ್ರಗಳ ಬೆಂಬಲ ಕೋರಿದ್ದರು. ಇದಕ್ಕೆ ಈಗ ಚೀನಾ ಮೊದಲ ಪ್ರತಿಕ್ರಿಯೆ ನೀಡಿದೆ.

ಭಾರತಕ್ಕೆ ಎಲ್‌ಪಿಜಿ ಹೊತ್ತು ತರುವ ನೌಕೆಗೆ ಮಾತ್ರ  ಹೊರ್ಮುಜ್ ಜಲಸಂಧಿಯ ದಾರಿ ಬಿಡಲು ಇರಾನ್ ಒಪ್ಪಿಗೆ

ಹೊರ್ಮುಜ್ ಜಲಸಂಧಿಯಲ್ಲಿ ಭಾರತಕ್ಕೆ ದಾರಿ ಬಿಡಲು ಒಪ್ಪಿದ ಇರಾನ್

ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಉಂಟಾಗಿರುವ ಉದ್ವಿಗ್ನತೆಯ ಪರಿಣಾಮ ಇರಾನ್ ಹೊರ್ಮುಜ್ ಜಲಸಂಧಿಯಲ್ಲಿ ಸರಕು ಸಾಗಣೆಗೆ ಅಡ್ಡಿ ಪಡಿಸಿತ್ತು. ಆದರೆ ಇದೀಗ ಅದು ಭಾರತಕ್ಕೆ ಸರಕು ಸಾಗಿಸುವ ನೌಕೆಗಳನ್ನು ಬಿಡಲು ಒಪ್ಪಿಕೊಂಡಿದೆ. ಈ ಕುರಿತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಭಾನುವಾರ ತಿಳಿಸಿದ್ದಾರೆ.

ಇರಾನ್‌ನ ದುಷ್ಟರಿಗೆ ತಕ್ಕ ಪಾಠ ಕಲಿಸುತ್ತೇನೆ: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಎಚ್ಚರಿಕೆ

ಇರಾನ್‌ನ ವಿಕೃತ ದುಷ್ಟರಿಗೆ ತಕ್ಕ ಪಾಠ: ಟ್ರಂಪ್‌ ಎಚ್ಚರಿಕೆ

Donald Trump Warns: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ಗೆ ತೀವ್ರ ಎಚ್ಚರಿಕೆ ನೀಡಿದ್ದು, ಅವರನ್ನು ದುಷ್ಟರು ಎಂದು ಕರೆದಿದ್ದಾರೆ. ಅಮೆರಿಕವು ಇರಾನ್ ಆಡಳಿತವನ್ನು ಮಿಲಿಟರಿಯನ್ನು ಮತ್ತು ಆರ್ಥಿಕವಾಗಿಯೂ ನಾಶಪಡಿಸುತ್ತಿದೆ ಎಂದು ಗುಡುಗಿದ್ದು, ಯುದ್ಧ ತೀವ್ರ ಸ್ವರೂಪ ಪಡೆಯುವ ಸೂಚನೆ ನೀಡಿದ್ದಾರೆ.

ಕೆನಡಾದಲ್ಲಿ ಕಾಲೇಜು ಸಹಪಾಠಿಗಳಿಂದಲೇ ಭಾರತೀಯ ಮೂಲದ ವಿದ್ಯಾರ್ಥಿಯ ಹತ್ಯೆ

ಕೆನಡಾದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಯ ಹತ್ಯೆ

Crime News: ಕೆನಡಾದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಯೊಬ್ಬನನ್ನು ಕಾಲೇಜು ಸಹಪಾಠಿಗಳೇ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ. 23 ವರ್ಷದ ವಿದ್ಯಾರ್ಥಿ ಗುರ್ಕಿರತ್ ಸಿಂಗ್ ಮನೋಚಾ ಅವರನ್ನು ಕೊಲೆ ಮಾಡಲಾಗಿದೆ. ಮಧ್ಯಪ್ರದೇಶದ ಮುಖ್ಯಮಂತ್ರಿ ಡಾ. ಮೋಹನ್ ಯಾದವ್ ಈ ಘಟನೆಗೆ ಸಂತಾಪ ಸೂಚಿಸಿದ್ದಾರೆ.

ಹೊರ್ಮುಜ್‌ ಜಲಸಂಧಿ ದಾಟಿ ಗುಜರಾತ್‌ ಕರಾವಳಿ ತಲುಪಿದ ಎಲ್‌ಪಿಜಿ ಹೊತ್ತ  ಶಿವಾಲಿಕ್‌ ಹಡಗು; ಅಡುಗೆ ಅನಿಲ ಸಮಸ್ಯೆಗೆ ಇನ್ನಾದರೂ ಬೀಳುತ್ತಾ ಬ್ರೇಕ್‌?

ಗುಜರಾತ್‌ ಕರಾವಳಿ ತಲುಪಿದ ಎಲ್‌ಪಿಜಿ ಹೊತ್ತ ಶಿವಾಲಿಕ್‌ ಹಡಗು

ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಆರಂಭವಾಗುತ್ತಿದ್ದಂತೆ ಇರಾನ್‌ ಹೊರ್ಮುಜ್‌ ಜಲಸಂಧಿಯನ್ನು ಸ್ಥಗಿತಗೊಳಿಸಿದೆ. ಇದರಿಂದ ಭಾರತ ಸೇರಿದಂತೆ ಹಲವು ದೇಶಗಳ ಕಚ್ಚಾ ತೈಲ, ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಅದಾಗ್ಯೂ ಭಾರತದ ಸಂಧಾನದ ಬಳಿಕ ಇತ್ತೀಚೆಗೆ ಯಶಸ್ವಿಯಾಗಿ ದಾಟಿದ್ದ ಎಲ್‌ಪಿಜಿಯನ್ನು ಹೊತ್ತ ಶಿವಾಲಿಕ್‌ ಹಡಗು ಗುಜರಾತ್‌ ಕರಾವಳಿಗೆ ಬಂದು ಮುಟ್ಟಿದೆ.

ಪ್ರಧಾನಿ ಮೋದಿ ನಿರ್ಗಮಿಸಿದ 2 ದಿನಗಳ ನಂತರವೇ ಇರಾನ್ ಮೇಲೆ ದಾಳಿ ನಡೆಸಲು ಅವಕಾಶ ಸಿಕ್ಕಿತು: ಇಸ್ರೇಲ್ ಸ್ಪಷ್ಟನೆ

ಮೋದಿ ಭೇಟಿಗೂ ಇರಾನ್ ದಾಳಿಗೆ ಸಂಬಂಧವಿಲ್ಲ: ಇಸ್ರೇಲ್ ರಾಯಭಾರಿ

ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್‌ನಿಂದ ಭಾರತಕ್ಕೆ ಹಿಂದಿರುಗಿದ ಬಳಿಕವೇ ಇರಾನ್ ಮೇಲೆ ದಾಳಿ ನಡೆಸಲಾಯಿತು. ದಾಳಿಗೂ ಅವರ ಭೇಟಿಗೂ ಯಾವುದೇ ರಾಜಕೀಯ ಸಂಬಂಧ ಇಲ್ಲ ಎಂದು ಭಾರತದಲ್ಲಿನ ಇಸ್ರೇಲ್ ರಾಯಭಾರಿ ರೂವನ್ ಅಜರ್ ಸ್ಪಷ್ಟಪಡಿಸಿದ್ದಾರೆ. ದಾಳಿ ಮಿಲಿಟರಿ ಅಗತ್ಯತೆ ಮತ್ತು ಸೂಕ್ತ ಸಮಯದ ಆಧಾರದ ಮೇಲೆ ನಡೆದಿದ್ದು, ಮೋದಿ ದೇಶ ತೊರೆದ ಎರಡು ದಿನಗಳ ನಂತರವೇ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

Iran Israel War: ಇರಾನ್‌ನ ಮೃತ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಬಳಸುತ್ತಿದ್ದ ವಿಮಾನ ಧ್ವಂಸಗೊಳಿಸಿದ ಇಸ್ರೇಲ್‌

ಅಯತೊಲ್ಲಾ ಅಲಿ ಖಮೇನಿಯ ವಿಮಾನ ಧ್ವಂಸಗೊಳಿಸಿದ ಇಸ್ರೇಲ್‌

ಮೂರೂವರೆ ದಶಕಗಳ ಕಾಲ ಇರಾನ್‌ನ ಅನಭಿಷಕ್ತ ದೊರೆಯಾಗಿ ಮೆರೆದ ಸುಪ್ರಿಂ ನಾಯಕ 86 ವರ್ಷದ ಅಯತೊಲ್ಲಾ ಅಲಿ ಖಮೇನಿ ಅವರನ್ನು ಇಸ್ರೇಲ್‌-ಅಮೆರಿಕ ಜಂಟಿ ಕಾರ್ಯಾಚರಣೆ ಮೂಲಕ ಫೆಬ್ರವರಿ 28ರಂದು ಹೊಡೆದುರುಳಿಸಿದ್ದು, ಅವರು ಬಳಸುತ್ತಿದ್ದ ವಿಮಾನವನ್ನೂ ಧ್ವಂಸಗೊಳಿಸಲಾಗಿದೆ. ಆ ಮೂಲಕ ಮಹತ್ವದ ಮೇಲುಗೈ ಸಾಧಿಸಿದ್ದಾಗಿ ಇಸ್ರೇಲ್‌ ಹೇಳಿದೆ.

ಇರಾನ್ ಯುದ್ಧದ ಮಧ್ಯೆ ದಾರಿ ತಪ್ಪಿಸುವ ಪೋಸ್ಟ್‌: ಯುಎಇಯಲ್ಲಿ 19 ಮಂದಿ ಭಾರತೀಯರ ಬಂಧನ

ಯುಎಇಯಲ್ಲಿ 19 ಮಂದಿ ಭಾರತೀಯರ ಬಂಧನ

Indians Arrested in UAE: ಮಧ್ಯಪ್ರಾಚ್ಯ ಸಂಘರ್ಷದ ಮಧ್ಯೆ ದಾರಿತಪ್ಪಿಸುವ, ಕಟ್ಟುಕಥೆ ಹೊಂದಿರುವ ವಿಡಿಯೊ ತುಣುಕುಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ 19 ಮಂದಿ ಭಾರತೀಯರನ್ನು ಬಂಧಿಸಿದೆ. ಒಟ್ಟು 35 ಮಂದಿಯನ್ನು ಈ ಸಂಬಂಧ ವಶಕ್ಕೆ ಪಡೆಯಲಾಗಿದೆ.

ಇನ್‌ಸ್ಟಾಗ್ರಾಮ್‌ ಬಳಕೆದಾರರೇ ಗಮನಿಸಿ: 'ಎನ್‌ಕ್ರಿಪ್ಶನ್' ಫೀಚರ್ ಕೈಬಿಡಲು ಮಾರ್ಕ್ ಜುಕರ್‌ಬರ್ಗ್ ನಿರ್ಧಾರ

ಇನ್‌ಸ್ಟಾಗ್ರಾಮ್‌ ಫೀಚರ್‌ನಲ್ಲಿ ದೊಡ್ಡ ಬದಲಾವಣೆ

ಸೋಶಿಯಲ್ ಮೀಡಿಯಾ ದೈತ್ಯ ಮೆಟಾ ತನ್ನ ವೇದಿಕೆಯಾದ ಇನ್‌ಸ್ಟಾಗ್ರಾಮ್‌ನಲ್ಲಿ ‘ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್’ ಫೀಚರ್ ಅನ್ನು ಮೇ 8ರಿಂದ ಸ್ಥಗಿತಗೊಳಿಸುವುದಾಗಿ ಘೋಷಿಸಿದೆ. ಬಳಕೆದಾರರ ನಡುವೆ ನಡೆಯುವ ಖಾಸಗಿ ಚಾಟ್‌ಗಳನ್ನು ರಕ್ಷಿಸುತ್ತಿದ್ದ ಈ ವ್ಯವಸ್ಥೆಯನ್ನು ಬಳಕೆ ಕಡಿಮೆ ಇರುವುದರಿಂದ ಹಾಗೂ ಮಕ್ಕಳ ಸುರಕ್ಷತೆ ಸಂಬಂಧಿತ ಚಿಂತನೆಯ ಕಾರಣದಿಂದ ತೆಗೆದುಹಾಕಲಾಗುತ್ತಿದೆ. ಬಳಕೆದಾರರು ತಮ್ಮ ಹಳೆಯ ಎನ್‌ಕ್ರಿಪ್ಟ್ ಮಾಡಿದ ಚಾಟ್‌ಗಳನ್ನು ಉಳಿಸಿಕೊಳ್ಳಲು ಮೇ 8ರ ಮೊದಲು ಡೌನ್‌ಲೋಡ್ ಮಾಡಿಕೊಳ್ಳುವಂತೆ ಮೆಟಾ ಸೂಚಿಸಿದೆ.

ಇರಾನ್ ಡ್ರೋನ್ ದಾಳಿ: ದುಬೈ ವಿಮಾನ ನಿಲ್ದಾಣದ ಬಳಿ ಭಾರಿ ಬೆಂಕಿ; ವಿಮಾನಗಳ ಹಾರಾಟ ಸ್ಥಗಿತ

ಇರಾನ್ ಡ್ರೋನ್ ದಾಳಿ: ದುಬೈ ವಿಮಾನ ನಿಲ್ದಾಣದ ಬಳಿ ಭಾರಿ ಬೆಂಕಿ

Iran Drone Strike: ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಡ್ರೋನ್ ಇಂಧನ ಟ್ಯಾಂಕ್‌ಗೆ ಅಪ್ಪಳಿಸಿದ ಕಾರಣ ಬೆಂಕಿ ಕಾಣಿಸಿಕೊಂಡಿದೆ. ಈ ಘಟನೆಯ ಬಳಿಕ ತುರ್ತು ಸೇವಾ ತಂಡಗಳು ತಕ್ಷಣವೇ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದವು. ದುಬೈ ನಾಗರಿಕ ರಕ್ಷಣಾ ತಂಡಗಳು ತಕ್ಷಣ ಪ್ರತಿಕ್ರಿಯಿಸಿ ಬೆಂಕಿಯನ್ನು ನಂದಿಸುವ ಕೆಲಸ ಮಾಡುತ್ತಿವೆ ಎಂದು ಅದು ಹೇಳಿದೆ.

ಅಫ್ಘಾನಿಸ್ತಾನದ ತಾಲಿಬಾನ್ ಸೇನಾ ಶಿಬಿರದ ಮೇಲೆ ಬಾಂಬ್ ದಾಳಿ ನಡೆಸಿದ ಪಾಕಿಸ್ತಾನ

ಅಫ್ಘಾನಿಸ್ತಾನದ ಮೇಲೆ ಮತ್ತೆ ಪಾಕಿಸ್ತಾನ ದಾಳಿ

ಅಫ್ಘಾನಿಸ್ತಾನದ ಕಂದಹಾರ್ ಪ್ರಾಂತ್ಯದೊಳಗೆ ಪಾಕಿಸ್ತಾನವು ಶನಿವಾರ ರಾತ್ರಿಯಿಡೀ ವಾಯುದಾಳಿ ನಡೆಸಿದೆ. ತಾಲಿಬಾನ್ ಸೇನಾ ಶಿಬಿರದ ಮೇಲೆ ಆಪರೇಷನ್ ಗಜಬ್ ಲಿಲ್-ಹಕ್ ಅಡಿಯಲ್ಲಿ ದಾಳಿ ನಡೆಸಿರುವ ಪಾಕಿಸ್ತಾನ ಈ ಮೂಲಕ ಶುಕ್ರವಾರ ಪಾಕಿಸ್ತಾನದ ಮೂರು ಸ್ಥಳಗಳ ಮೇಲೆ ಅಫ್ಘಾನಿಸ್ತಾನ ನಡೆಸಿದ ದಾಳಿಗೆ ಪ್ರತೀಕಾರ ತೀರಿಸಿಕೊಂಡಿತ್ತು.

ಬೆಂಜಮಿನ್‌ ನೆತನ್ಯಾಹು ಬದುಕಿದ್ದಾರೆ; ಇಸ್ರೇಲ್‌ ಪ್ರಧಾನಿ ಹಂಚಿಕೊಂಡ ವಿಡಿಯೊ ಮೂಲಕ ಸಿಕ್ತು ಪುರಾವೆ

ಕಾಫಿ ಹೀರುತ್ತ ಸಾವಿನ ವದಂತಿ ತಳ್ಳಿ ಹಾಕಿದ ಬೆಂಜಮಿನ್‌ ನೆತನ್ಯಾಹು

Benjamin Netanyahu: ಇರಾನ್‌ ದಾಳಿಯಲ್ಲಿ ತಾವು ಮೃತಪಟ್ಟಿಲ್ಲ ಎಂದು ವಿಡಿಯೊ ಮೂಲಕ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಸ್ಪಷ್ಟಪಡಿಸಿದ್ದಾರೆ. ತಮ್ಮ ಎಕ್ಸ್‌ ಖಾತೆಯಲ್ಲಿ ಇಸ್ರೇಲ್‌ ಪ್ರಧಾನಿ ಕಾಫಿ ಕುಡಿಯುವ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಇದರೊಂದಿಗೆ ತಾವು ಆರೋಗ್ಯದಿಂದ ಇರುವುದಾಗಿ ಸಂದೇಶ ಸಾರಿದ್ದಾರೆ.

ದುಬೈ, ಕುವೈತ್ ವಿಮಾನ ನಿಲ್ದಾಣದ ಮೇಲೆ ಇರಾನ್ ದಾಳಿ: ಕೇಳಿಬಂತು ಭಾರಿ ಸ್ಫೋಟದ ಸದ್ದು

ದುಬೈ, ಕುವೈತ್ ವಿಮಾನ ನಿಲ್ದಾಣದ ಮೇಲೆ ಇರಾನ್ ದಾಳಿ

Gulf Airports Hit by Iran Attack: ಮಧ್ಯಪ್ರಾಚ್ಯ ಯುದ್ಧವು 16ನೇ ದಿನಕ್ಕೆ ಕಾಲಿಟ್ಟಿರುವ ನಡುವೆಯೇ ಇರಾನ್ ಬಳಿಕ, ಇದೀಗ ದುಬೈಯ ಮರೀನಾ ಮತ್ತು ಅಲ್ ಸುಫೌಹ್ ಪ್ರದೇಶಗಳಲ್ಲಿ ಭಾರಿ ಸ್ಫೋಟದ ಸದ್ದು ಕೇಳಿಬಂದಿದೆ. ಮತ್ತೊಂದೆಡೆ, ಕೆಲವು ಡ್ರೋನ್‌ಗಳು ಕುವೈತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ದಾಳಿ ನಡೆಸಿವೆ.

ಹೊರ್ಮುಜ್ ಬಳಿಕ ಮತ್ತೂಂದು ಜಲಮಾರ್ಗವನ್ನು ಮುಚ್ಚುತ್ತಾ ಇರಾನ್?

ಮತ್ತೂಂದು ಜಲಮಾರ್ಗವನ್ನು ಮುಚ್ಚುತ್ತಾ ಇರಾನ್?

ಇಸ್ರೇಲ್, ಯುಎಸ್ ಸೇನಾ ಪಡೆಯು ನಡೆಸಿದ ದಾಳಿಗೆ ಪ್ರತಿಯಾಗಿ ಇರಾನ್ ಹೊರ್ಮುಜ್ ಜಲಸಂಧಿಯನ್ನು ಮುಚ್ಚಿತ್ತು. ಇದರ ಗಂಭೀರ ಪರಿಣಾಮ ಜಾಗತಿಕ ಮಾರುಕಟ್ಟೆಯ ಮೇಲೆ ಬಿದ್ದಿದೆ. ವಿಶ್ವದ ಅನೇಕ ರಾಷ್ಟ್ರಗಳಿಗೆ ತೈಲ ಬಿಕ್ಕಟ್ಟು, ಸರಕು ಪೂರೈಕೆ, ಆಮದು ಸಮಸ್ಯೆ ಎದುರಾಗಿದೆ. ಆದರೆ ಇದೀಗ ಇರಾನ್ ಮತ್ತೊಂದು ಜಲಮಾರ್ಗವನ್ನು ಮುಚ್ಚಲು ನಿರ್ಧರಿಸಿದೆ. ಅದು ಯಾವುದು, ಇದರ ಪರಿಣಾಮ ಏನು? ಇಲ್ಲಿದೆ ಮಾಹಿತಿ.

ದಾಳಿಯಲ್ಲಿ ನೆತನ್ಯಾಹು ಹತ್ಯೆ?  ಹಿಂಸಿಸಿ ಕೊಲ್ಲುತ್ತೇವೆ ಎಂದ ಇರಾನ್‌ಗೆ ಇಸ್ರೇಲ್‌ ಪಿಎಂ ಕಚೇರಿ ಹೇಳಿದ್ದೇನು?

ನೆತನ್ಯಾಹು ಸಾವಿನ ವರದಿಗಳನ್ನು ತಳ್ಳಿಹಾಕಿದ ಪಿಎಂ ಕಚೇರಿ

Netanyahu death rumours: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕ್ಷೇಮವಾಗಿದ್ದಾರೆ ಎಂದು ಅವರ ಕಚೇರಿ ಸ್ಪಷ್ಟಪಡಿಸಿದೆ. ನೆತನ್ಯಾಹು ಸಾವಿನ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಅವೆಲ್ಲಾ ಸುಳ್ಳು ಸುದ್ದಿ. ಪ್ರಧಾನಿ ಕ್ಷೇಮವಾಗಿದ್ದಾರೆ ಎಂದು ಪ್ರಧಾನಿ ಕಚೇರಿ ಸ್ಪಷ್ಟಪಡಿಸಿದೆ. ಆದರೂ ನೆತನ್ಯಾಹು ಎಲ್ಲಿದ್ದಾರೆ ಎಂದು ಹಲವರು ಪ್ರಶ್ನಿಸಿದ್ದಾರೆ.

ಮಾತುಕತೆಗೆ ಇರಾನ್ ಸಿದ್ಧವಾದರೂ ನಮಗೆ ಯುದ್ಧ ತೃಪ್ತಿ ಕೊಟ್ಟಿಲ್ಲ ಎಂದ ದೊಡ್ಡಣ್ಣ

ಇರಾನ್‌ನ ಖಾರ್ಗ್ ದ್ವೀಪದ ಮೇಲೆ ದಾಳಿ: ಡೊನಾಲ್ಡ್ ಟ್ರಂಪ್ ಎಚ್ಚರಿಕೆ

ಕಳೆದ ಎರಡು ವಾರಗಳಿಂದ ಇರಾನ್ ಮೇಲೆ ನಿರಂತರ ಆಕ್ರಮಣ ಮಾಡುತ್ತಿರುವ ಅಮೆರಿಕಗೆ ಯುದ್ಧ ಇನ್ನೂ ತೃಪ್ತಿ ಕೊಟ್ಟಿಲ್ಲವಂತೆ. ಅದಕ್ಕಾಗಿ ಇರಾನ್‌ನ ಖಾರ್ಗ್ ದ್ವೀಪದ ಮೇಲೆ ಮತ್ತಷ್ಟು ದಾಳಿ ಮಾಡಲು ಸಿದ್ಧತೆ ನಡೆಸುತ್ತಿರುವುದಾಗಿ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಹೀಗಾಗಿ ಇರಾನ್ ಈಗ ಮಾತುಕತೆಗೆ ಸಿದ್ಧವಾಗಿದ್ದರೂ ಕೂಡ ಯುದ್ಧ ನಿಲ್ಲುವ ಲಕ್ಷಣ ಕಾಣುತ್ತಿಲ್ಲ.

LPG vs PNG: ದೇಶದಲ್ಲಿ ಎಲ್‌ಪಿಜಿಗೆ ಕೊರತೆಯಾಗಿದ್ದರೂ ಪಿಎನ್‌ಜಿ ಪೂರೈಕೆ ಸರಾಗ; ಇದು ಸಾಧ್ಯವಾಗಿದ್ದು ಹೇಗೆ? ಏನು ಇವೆರಡರ ವ್ಯತ್ಯಾಸ?

ದೇಶದಲ್ಲಿ ಎಲ್‌ಪಿಜಿಗೆ ಕೊರತೆಯಾಗಿದ್ದರೂ ಪಿಎನ್‌ಜಿ ಪೂರೈಕೆ ಸರಾಗ; ಹೇಗೆ?

ಹೊರ್ಮುಜ್‌ ಜಲಸಂಧಿ ಸ್ಥಗಿತಗೊಂಡಿದ್ದು, ಇಂಧನ, ಅಡುಗೆ ಅನಿಲ ಸರಾಗ ಸಾಗಾಟಕ್ಕೆ ತಡೆ ಬಿದ್ದಿದೆ. ಇದರಿಂದ ಭಾರತದಲ್ಲೂ ದ್ರವೀಕೃತ ಪೆಟ್ರೋಲಿಯಂ ಅನಿಲ ಸಿಲಿಂಡರ್‌ಗೆ ಕೊರತೆ ಉಂಟಾಗಿದೆ. ಮತ್ತೊಂದೆಡೆ ದೇಶದಲ್ಲಿ ಪೈಪ್ಡ್ ನ್ಯಾಚುರಲ್ ಗ್ಯಾಸ್ ಪೂರೈಕೆ ಸರಾಗವಾಗಿದೆ. ಹಾಗಾದರೆ ಪಿಎನ್‌ಜಿಗೆ ಸಮಸ್ಯೆ ಆಗಿಲ್ಲವೇಕೆ? ನಿಮ್ಮೆಲ್ಲ ಪ್ರಶ್ನೆಗೆ ಇಲ್ಲಿದೆ ಉತ್ತರ.

ಅಫ್ಘಾನಿಸ್ತಾನದ ಮೇಲಿನ ಪಾಕಿಸ್ತಾನದ ವೈಮಾನಿಕ ದಾಳಿಗೆ ಭಾರತ ಖಂಡನೆ

ಅಫ್ಘಾನಿಸ್ತಾನದ ಮೇಲಿನ ಪಾಕ್‌ ದಾಳಿ ಖಂಡಿಸಿದ ಭಾರತ

Pakistan's Air Strikes: ಅಫ್ಘಾನಿಸ್ತಾನದ ಮೇಲೆ ವೈಮಾನಿಕ ದಾಳಿ ನಡೆಸಿ 16 ನಾಗರಿಕರ ಸಾವಿಗೆ ಕಾರಣವಾದ ಪಾಕಿಸ್ತಾನದ ನಡೆಯನ್ನು ಭಾರತ ತೀವ್ರವಾಗಿ ಖಂಡಿಸಿದೆ. ಪವಿತ್ರ ರಂಜಾನ್‌ ಮಾಸದಲ್ಲಿ ಅಫ್ಘಾನಿಸ್ತಾನದ ಮೇಲೆ ದಾಳಿ ನಡೆಸಿದ ಪಾಕಿಸ್ತಾನವನ್ನು ಭಾರತ ತರಾಟೆಗೆ ತೆಗೆದುಕೊಂಡಿದೆ.

ಗಾಯಾಳು ಇರಾನ್‌ ಸರ್ವೋಚ್ಚ ನಾಯಕ ಮೊಜ್ತಾಬಾ ರಕ್ಷಣೆಗೆ ರಹಸ್ಯ ಸೈನ್ಯ ನೋಪೋ ನಿಯೋಜನೆ; ಈ ಭದ್ರತಾ ಪಡೆ ಎಷ್ಟು ಬಲಿಷ್ಠ ಗೊತ್ತೆ?

ಗಾಯಗೊಂಡ ಮೊಜ್ತಾಬಾ ಖಮೇನಿ ಸುತ್ತ ಬಿಗಿ ಭದ್ರತೆ

NOPO: ಇರಾನ್‌ನ ಸರ್ವೋಚ್ಚ ನಾಯಕನನ್ನು ಮೊಜ್ತಾಬಾ ಖಮೇನಿ ಅವರನ್ನು ರಕ್ಷಿಸಲು ನಿಯೋಜಿಸಲಾದ ರಹಸ್ಯ ಭದ್ರತಾ ಪಡೆ ನೋಪೋ ಮತ್ತೆ ಚರ್ಚೆಗೆ ಬಂದಿದೆ. ಅಮೆರಿಕ–ಇಸ್ರೇಲ್ ದಾಳಿಯ ಬಳಿಕ ತೀವ್ರವಾಗಿ ಗಾಯಗೊಂಡಿರುವ ಮೊಜ್ತಾಬಾ ಖಮೇನಿ ಅವರ ಭದ್ರತೆಯನ್ನು ಇದೇ ಪಡೆ ನಿರ್ವಹಿಸುತ್ತಿದೆ ಎಂದು ವರದಿಗಳು ಹೇಳುತ್ತಿವೆ. 1991ರಲ್ಲಿ ಸ್ಥಾಪನೆಯಾದ ಈ ವಿಶೇಷ ಪಡೆ ನೇರವಾಗಿ ಸರ್ವೋಚ್ಚ ನಾಯಕತ್ವಕ್ಕೆ ವರದಿ ನೀಡುವ ಅತ್ಯಂತ ಶಕ್ತಿಶಾಲಿ ಮತ್ತು ರಹಸ್ಯ ಕಾರ್ಯಾಚರಣೆ ನಡೆಸುವ ಭದ್ರತಾ ಘಟಕವೆಂದು ಪರಿಗಣಿಸಲಾಗಿದೆ.

ಮೋದಿಯನ್ನು ಪ್ರೀತಿಸುತ್ತೇನೆ, ಶೀಘ್ರದಲ್ಲೇ ಭಾರತಕ್ಕೆ ಬರುತ್ತೇನೆ ಎಂದ ಡೊನಾಲ್ಡ್ ಟ್ರಂಪ್

ಭಾರತ, ಮೋದಿಯನ್ನು ಪ್ರೀತಿಸುತ್ತೇನೆ: ಡೊನಾಲ್ಡ್ ಟ್ರಂಪ್

ವಿವಾದಾತ್ಮಕ ಹೇಳಿಕೆ, ಕಠಿಣ ನಿಲುವಿಂದ ವಿಶ್ವದ ಗಮನ ಸೆಳೆಯುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ತಾನು ಭಾರತ ಮತ್ತು ಮೋದಿಯನ್ನು ಇಷ್ಟ ಪಡುತ್ತೇನೆ, ಶೀಘ್ರದಲ್ಲೇ ಭಾರತಕ್ಕೆ ಭೇಟಿ ನೀಡುವುದಾಗಿ ಹೇಳಿದ್ದಾರೆ. ಟ್ರಂಪ್ ಅವರ ಈ ಸಂದೇಶವನ್ನು ಅವರ ಆಪ್ತ ಲಾರಾ ಲೂಮರ್ ಅವರು ಇಂಡಿಯಾ ಟುಡೇ ಕಾನ್ಕ್ಲೇವ್ 2026 ರಲ್ಲಿ ಶನಿವಾರ ಓದಿ ಹೇಳಿದರು.

Loading...