ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಆರೋಗ್ಯ

‌ಬೆಂಗಳೂರು ಮಹಿಳೆಯರ ಮೇಲೆ ಉದ್ಯೋಗ, ಹಣಕಾಸು ಒತ್ತಡ: ಎಂಪವರ್ ಮಾಹಿತಿ

ಬೆಂಗಳೂರು ಮಹಿಳೆಯರ ಮೇಲೆ ಉದ್ಯೋಗ, ಹಣಕಾಸು ಒತ್ತಡ: ಎಂಪವರ್ ಮಾಹಿತಿ

ನಗರ ಮಟ್ಟದ ಒಣನೋಟವು ದಕ್ಷಿಣ ವಲಯದಾದ್ಯಂತದ ವಿಶಾಲ ಮಾದರಿಯ ಭಾಗವಾಗಿದ್ದು, ಎಂಪವರ್ ಕಾರ್ಯಕ್ರಮಗಳು ಒಟ್ಟಾರೆಯಾಗಿ 12,591 ಮಹಿಳಾ ಫಲಾನುಭವಿಗಳನ್ನು ಕೌನ್ಸೆಲಿಂಗ್ ಸೇವೆಗಳು ಮತ್ತು ಸಹಾಯವಾಣಿಗಳ ಮೂಲಕ ತಲುಪಿವೆ, ಜೊತೆಗೆ ದೊಡ್ಡ ಮಟ್ಟದಲ್ಲಿ ಮಾನಸಿಕ ಆರೋಗ್ಯದ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ.

ಕುತ್ತಿಗೆ ನೋವಿನ ಸಮಸ್ಯೆಯೇ? ಇದಕ್ಕೆ ಮನಸ್ಸಿನ ಒತ್ತಡವೂ ಕಾರಣವಾಗಿರಬಹುದು; ಪರಿಹಾರ ಇಲ್ಲಿದೆ

ಕುತ್ತಿಗೆ ನೋವೇ? ಮನಸ್ಸಿನ ಒತ್ತಡವೂ ಕಾರಣವಾಗಿರಬಹುದು

Health Tips: ಮಾನಸಿಕ ಒತ್ತಡಕ್ಕೂ ಕುತ್ತಿಗೆಗೂ ಸಂಬಂಧ ಇದೆ ಎನ್ನುವುದನ್ನು ಅಧ್ಯಯನಗಳು ದೃಢಪಡಿಸಿವೆ. ನಮ್ಮ ದೇಹದಲ್ಲಿ ಒತ್ತಡ ಹೆಚ್ಚಾದಷ್ಟಕ್ಕೂ ಶರೀರ ಫೈಟ್‌-ಫ್ಲೈಟ್‌ ಎನ್ನುವ ಅವಸ್ಥೆಗೆ ತಲುಪುತ್ತದೆ. ಹೀಗಿರುವಾಗ ಸ್ನಾಯುಗಳ ಮೇಲಿನ ಒತ್ತಡ ಏರುತ್ತದೆ. ದೀರ್ಘ ಕಾಲ ಒತ್ತಡ ಶಮನಕ್ಕೆ ಯಾವುದೇ ಮಾರ್ಗವನ್ನು ಅನುಸರಿಸದಿದ್ದರೆ, ತಡೆಯಲಾರದಂಥ ಕುತ್ತಿಗೆ ನೋವು ಕಾಡುತ್ತದೆ. ಮಾತ್ರವಲ್ಲ, ಒತ್ತಡ ಹೆಚ್ಚಿದಾಗ ನಿದ್ದೆಗೆಡುವುದು, ಉರಿಯೂತ ಹೆಚ್ಚುವಂಥ ಆಹಾರಗಳನ್ನು ತಿನ್ನುವುದು, ಯಾವ್ಯಾವುದೋ ಭಂಗಿಗಳಲ್ಲಿ ಕುಳಿತುಕೊಳ್ಳುವುದು ಸಹ ಹೆಚ್ಚಾಗುತ್ತದೆ. ಇವೆಲ್ಲವುಗಳ ಕೃಪೆಯಿಂದ ಕುತ್ತಿಗೆ ನೋವು ಅಸಹನೀಯ ಎನ್ನುವಷ್ಟಾಗುತ್ತದೆ. ಇದಕ್ಕೆ ಮದ್ದುಂಟೇ?

ಶುಂಠಿಯ ಆರೋಗ್ಯ ಲಾಭಗಳ ಬಗ್ಗೆ ನಿಮಗೆ ತಿಳಿದಿದೆಯೇ?

ಶುಂಠಿ ಘಾಟು, ಘಮಕ್ಕೆ ಮಾತ್ರವಲ್ಲ, ಔಷಧಿಗೂ ಬೇಕು!

Health Tips: ಅಡುಗೆಯಲ್ಲಿ ಸಾಧಾರಣವಾಗಿ ಬಳಕೆಯಾಗುವಂಥ ಮೂಲಿಕೆಯಿದು, ಆದರೆ ಔಷಧಿ ಯಾಗಿ ಅಲ್ಲ. ಘಾಟು, ಘಮ, ರುಚಿ ಮುಂತಾದವನ್ನು ಹೆಚ್ಚಿಸುವ ಉದ್ದೇಶದಿಂದ ಶುಂಠಿ ಅಡುಗೆಯಲ್ಲಿ ಬಳಕೆಯಾಗುತ್ತದೆ. ಆದರೆ ಶುಂಠಿ ರಸ, ಕಷಾಯ, ಚಹಾ ಇಂಥವೆಲ್ಲ ಇತ್ತೀಚಿನ ದಿನಗಳಲ್ಲಿ ಬಹು ಬೇಡಿಕೆಯನ್ನು ಪಡೆದುಕೊಂಡಿವೆ. ಇದರಲ್ಲಿರುವ ಸತ್ವಗಳು ಮತ್ತು ಅದರ ಪರಿಣಾಮಗಳು ಅರಿವಿಗೆ ಬರುತ್ತಿವೆ. ಏನಿದೆ ಶುಂಠಿಯಲ್ಲಿ ಅಂಥದ್ದು?

Health Tips: ಮೆಮೊರಿ ಪವರ್‌ ಹೆಚ್ಚಿಸಿಕೊಳ್ಳಲು ಇಲ್ಲಿದೆ ಸಿಂಪಲ್‌ ಟಿಪ್ಸ್‌

ಅಜ್ಜಿಗಿದ್ದ ನೆನಪಿನ ಶಕ್ತಿ ಈಗಿನ ಮಕ್ಕಳಿಗೆ ಯಾಕಿಲ್ಲ ಗೊತ್ತಾ?

ವಿವಿಧ ಬಗೆಯ ಕೆಲಸಗಳನ್ನು ಮಾಡುವುದು, ಕೆಲಸದಲ್ಲಿ ಆಗಾಗ ಬದಲಾವಣೆ ಕಂಡುಕೊಳ್ಳುವುದರಿಂದ ಮಾನಸಿಕವಾಗಿ ಸದೃಢರಾಗಬಹುದು. ಒಂದೇ ರೀತಿಯ ಕೆಲಸ ಮಾಡುವ ಬದಲು ವಿವಿಧ ಬಗೆಯ ಕೆಲಸ ಹಾಗೂ ಕೆಲಸದಲ್ಲಿ ಬದಲಾವಣೆ ಕಂಡುಕೊಳ್ಳುವುದರಿಂದ ಹೇಗೆ ನಮ್ಮ ಆರೋಗ್ಯ ಸುಧಾರಣೆ ಕಾಣುತ್ತದೆ? ಯಾವೆಲ್ಲ ರೀತಿಯಲ್ಲಿ ಜೀವನದಲ್ಲಿ ಉನ್ನತ ಸ್ಥಾನ ಪಡೆದುಕೊಳ್ಳಬಹುದು? ಎನ್ನುವುದರ ಕುರಿತು ಪ್ರೊ. ಸುತ್ತೂರು ಮಾಲಿನಿ ತಿಳಿಸಿದ್ದಾರೆ.

Health Tips: ವೃದ್ಧಾಪ್ಯದಲ್ಲಿ ವ್ಯಾಯಾಮ ಅಗತ್ಯ ಯಾಕೆ?

ಹಿರಿಯರಿಗೆ ಪ್ರತಿದಿನ ಎಷ್ಟು ವ್ಯಾಯಾಮ ಬೇಕು?

ವ್ಯಾಯಾಮ ಎಲ್ಲಾ ವಯೋಮಾನದವರಿಗೂ ಕಡ್ಡಾಯ ಎನ್ನುವುದು ಎಲ್ಲರಿಗೂ ಗೊತ್ತು. ಮೊಬೈಲ್‌ ಗೀಳಿರುವ ಮಕ್ಕಳಿಂದ ಹಿಡಿದು, ರಾಮಾ-ಶಿವಾ ಎನ್ನುವ ಹಿರಿಯರವರೆಗೆ ಎಲ್ಲರಿಗೂ ಅವರವರ ವಯಸ್ಸಿಗೆ ಸರಿಯಾಗುವ ವ್ಯಾಯಾಮಗಳು ಬೇಕು. ಹಾಗಾದರೆ 60ವರ್ಷ ಮೀರಿದವರಿಗೆ ಎಂಥಾ ವ್ಯಾಯಾಮ ಬೇಕಾಗುತ್ತದೆ ಅಥವಾ ಸಾಕಾಗುತ್ತದೆ?

ವಿಶ್ವ ಕಿಡ್ನಿ ದಿನಾಚರಣೆ: ಸ್ಪರ್ಶ್‌ ಆಸ್ಪತ್ರೆ ಆಯೋಜಿಸಿದ್ದ “ಆರೋಗ್ಯಕಿಡ್ನಿ ಓಟ”ದಲ್ಲಿ 7 ಸಾವಿರ ಮಂದಿ ಭಾಗಿ

“ಆರೋಗ್ಯಕಿಡ್ನಿ ಓಟ”ದಲ್ಲಿ 7 ಸಾವಿರ ಮಂದಿ ಭಾಗಿ

ಜಡ ಜೀವನಶೈಲಿ, ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಸ್ಥೂಲಕಾಯತೆಯು ಭಾರತದಲ್ಲಿ ದೀರ್ಘಕಾಲದ ಮೂತ್ರಪಿಂಡ ಕಾಯಿಲೆಗೆ ಪ್ರಮುಖ ಕಾರಣವಾಗಿದೆ. ಸ್ವಯಂ ಅರಿವು, ಜಾಗೃತಿ ಮತ್ತು ಆರಂಭಿಕ ತಡೆಗಟ್ಟುವಿಕೆ ಬಹಳ ನಿರ್ಣಾಯಕವಾಗಿದೆ ಎಂಬುದನ್ನು ಈ ಸಂದರ್ಭದಲ್ಲಿ ಮನವರಿಕೆ ಮಾಡಿಕೊಡಲಾಯಿತು.

ಕರ್ನಾಟಕ, ತಮಿಳುನಾಡಿನ 10,000 ವಿದ್ಯಾರ್ಥಿಗಳಿಗೆ ಮಾನಸಿಕ ಆರೋಗ್ಯ ಶಿಕ್ಷಣ ಒದಗಿಸಲು ಕಾರ್ಯಾಗಾರ

10,000 ವಿದ್ಯಾರ್ಥಿಗಳಿಗೆ ಮಾನಸಿಕ ಆರೋಗ್ಯ ಶಿಕ್ಷಣ

ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಲ್ಲಿ ವೈಯಕ್ತಿಕ ಹಾಗೂ ಸಮುದಾಯ ಮಾನಸಿಕ ಆರೋಗ್ಯವನ್ನು ಉತ್ತೇಜಿಸುವ ಅಗತ್ಯವನ್ನು ಗುರುತಿಸಿ, ತಂತ್ರಜ್ಞಾನ ಸಂಸ್ಥೆ ಟೆಕಿಯಾನ್ ಮತ್ತು ಸರ್ಕಾರೇತರ ಸಂಸ್ಥೆ ಮೈಂಡ್ ಆ್ಯಂಡ್‌ ಮ್ಯಾಟರ್ ಸಹಭಾಗಿತ್ವದಲ್ಲಿ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ 10,000ಕ್ಕೂ ಹೆಚ್ಚು ವಿದ್ಯಾರ್ಥಿಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಉದ್ದೇಶ ಹೊಂದಿದೆ.

ಸ್ಟ್ರಾಬೆರಿಯ ಆರೋಗ್ಯ ಲಾಭಗಳ ಬಗ್ಗೆ ನೀವು ತಿಳಿಯಲೇ ಬೇಕು!

ಸ್ಟ್ರಾಬೆರಿಯ ಆರೋಗ್ಯ ಲಾಭ ತಿಳಿದಿದೆಯೇ?

Health Tips: ವಿಟಮಿನ್‌ ಸಿ ಹೇರಳವಾಗಿರುವ ಸ್ಟ್ರಾಬೆರಿಯ ಈ ಹಣ್ಣಿನಲ್ಲಿ ನಾರು ಸಹ ಭರಪೂರ ಇರುತ್ತದೆ. ರಸಭರಿತವಾಗಿದ್ದು, ತಿಂದಷ್ಟಕ್ಕೂ ದಾಹ ತಣಿಸುತ್ತದೆ. ತನ್ನದೇ ವಿಶಿಷ್ಟ ಪರಿಮಳ ಹೊಂದಿರುವ ಈ ಬೆರ್ರಿಯನ್ನು ಇಷ್ಟಪಟ್ಟು ತಿನ್ನುವವರು ಬಹಳಷ್ಟು ಜನರಿದ್ದಾರೆ. ತರಹೇವಾರಿ ಪೋಷಕಾಂಶಗಳನ್ನು ಹೊಂದಿರುವ ಈ ಹಣ್ಣನ್ನು ತಿನ್ನುವುದರ ಲಾಭಗಳೇನು ಎಂಬುದನ್ನು ತಿಳಿಯೋಣ.

ಹಾರ್ಮೋನುಗಳ ಸಮತೋಲನಕ್ಕೆ ಈ ಸರಳ, ನೈಸರ್ಗಿಕ ಮಾರ್ಗ ಫಾಲೋ ಮಾಡಿ

ಹಾರ್ಮೋನುಗಳನ್ನು ಸರಿದೂಗಿಸಲು ಇಲ್ಲಿದೆ ಟಿಪ್ಸ್

Health Tips: ಹಾರ್ಮೋನುಗಳನ್ನು ಸಮತೋಲನದಲ್ಲಿ ಇರಿಸುವುದು ದೇಹಸ್ವಾಸ್ಥ್ಯಕ್ಕೆ ಅಗತ್ಯ. ಚೋದಕಗಳ ಸಮತೋಲನದಲ್ಲಿ ವ್ಯತ್ಯಾಸವಾದರೆ ಸರಿಪಡಿಸುವುದು ಹೇಗೆ? ನಮ್ಮ ನಿಯಂತ್ರಣದಲ್ಲಿ ಇಲ್ಲದಿರುವ ವಿಷಯಗಳನ್ನು ಸರಿಪಡಿಸಿಕೊಳ್ಳುವುದಾದರೂ ಯಾವ ರೀತಿಯಲ್ಲಿ? ಯಾವುದೇ ಔಷಧಗಳನ್ನು ತೆಗೆದುಕೊಳ್ಳಬೇಕಾದರೆ ವೈದ್ಯರ ಸಲಹೆ ಬೇಕೆಬೇಕು. ಆದರೆ ಔಷಧಿಯ ಹೊರತಾಗಿ ಕೆಲವು ನೈಸರ್ಗಿಕ ಉಪಕ್ರಮಗಳ ಮೂಲಕ ಹಾರ್ಮೋನುಗಳ ಸಮತೋಲನಕ್ಕೆ ಪ್ರಯತ್ನಿಸಬಹುದೇ? ಇಲ್ಲಿದೆ ಮಾಹಿತಿ.

ಗ್ಯಾಸ್‌ ಉಳಿಸಬೇಕೇ? ಹಳೆಯಕಾಲದ ಪಾತ್ರೆಗಳಿದ್ದರೆ ಬಳಸಲು ಇದು ಸಕಾಲ; ಉತ್ತಮ ಆರೋಗ್ಯಕ್ಕೂ ಇವು ಪೂರಕ

ಗ್ಯಾಸ್ ಉಳಿಸಲು ಈ ಟಿಪ್ಸ್ ಬಳಸಿ

Tips to Save Gas: ಮನೆಯಲ್ಲಿರುವ ಅಡುಗೆ ಅನಿಲ ಇನ್ನೆಷ್ಟು ದಿನಕ್ಕೆ ಬರಬಹುದು ಎಂದು ಲೆಕ್ಕ ಹಾಕುವಂತಾಗುತ್ತದೆ. ಇಂಧನ ಬಳಕೆಯನ್ನು ಉಳಿಸಲು ಏನೇನು ಮಾಡಬಹುದು ಎಂದು ಯೋಚಿಸು ವಂತಾಗುತ್ತದೆ. ಎಂಥಾ ಅಡುಗೆಯಿಂದ ಇಂಧನ ಇಳಿಸಬಹುದು ಎನ್ನುವುದರ ಜತೆಗೆ ಎಂತಹ ಪಾತ್ರೆ ಇದಕ್ಕೆ ಸೂಕ್ತ ಎನ್ನುವುದನ್ನೂ ಯೋಚಿಸಬೇಡವೇ?

ಬೆನ್ನಿನ ಆರೋಗ್ಯಕ್ಕೆ ಯಾವ ಭಂಗಿಯೂ ಸೂಕ್ತವಲ್ಲ: ಯಾಕೆ ಗೊತ್ತೆ?

ಬೆನ್ನು ನೋವಿನ ಸಮಸ್ಯೆಯೇ? ಇದಕ್ಕೆ ಏನು ಮಾಡಬೇಕು?

Health Tips: ಬೆಳಗಿನ ಹೊತ್ತು ಕಂಪ್ಯೂಟರ್‌ ಮುಂದೆ ಕೂತರೆ, ಮುಗಿಯದ ಮೀಟಿಂಗ್‌ಗಳು, ಕಾಡುತ್ತಿರುವ ಡೆಡ್‌ಲೈನ್‌ಗಳು, ಕಾಯುತ್ತಿರುವ ಕೆಲಸಗಳು… ಇವೆಲ್ಲವುಗಳ ನಡುವೆ ಕುರ್ಚಿಯಿಂದ ಏಳುವುದನ್ನು ಮುಂದೂಡುತ್ತೇವೆ; ಕೈಕಾಲು ಸಡಿಲ ಮಾಡಿಕೊಳ್ಳುವುದು ದೂರವೇ ಉಳಿಯಿತು; ವ್ಯಾಯಾಮ ಮಾಡುವುದಂತೂ ಅಸಂಭವ. ಹೀಗಿದ್ದಾಗ ಬೆನ್ನಿನ ಅವಸ್ಥೆ ಏನಾಗಬೇಕು? ಬೆನ್ನು ಹುರಿಯ ತೊಂದರೆಗಳು ಮೂವತ್ತರ ಹರೆಯಕ್ಕೇ ಕಾಡುತ್ತಿರುವ ಕಾರಣಗಳು ನಮ್ಮ ಜೀವನಶೈಲಿಯಲ್ಲೇ ಇವೆಯಲ್ಲವೇ? ಇದಕ್ಕೆ ಪರಿಹಾರವೇನು?

ಹೆಚ್ಚುತ್ತಿದೆ ಯುವಜನರಲ್ಲಿ ಮರೆವಿನ  ಕಾಯಿಲೆ; ಏನು ಪರಿಹಾರ?

ಯುವಜನರಲ್ಲಿ ಮರೆವಿನ ಸಮಸ್ಯೆ: ಇದಕ್ಕೆ ಕಾರಣವೇನು?

Health Tips: ಇಂದಿನ ಯುವಕರಲ್ಲಿ ಸದಾ ಕಾಲ ಅಬ್ಸೆಂಟ್‌ ಮೈಂಡ್‌, ಸಣ್ಣ ಪುಟ್ಟ ವಿಷಯಗಳನ್ನು ಸಹ ಬಹುಬೇಗ ಮರೆತು ಬಿಡುತ್ತಾರೆ. ಇದಕ್ಕೆ ಕಾರಣ ಏನು? ಚಿಕ್ಕ ವಯಸ್ಸಿನ ಯಾವ ಸಂಗತಿಗಳು ಸಣ್ಣ ವಯಸ್ಸಿನಲ್ಲೇ ಮರೆವಿನ ಸಮಸ್ಯೆಗೆ ಕಾರಣವಾಗುತ್ತದೆ? ಎನ್ನುವ ವಿಚಾರಗಳನ್ನು ಪ್ರೊ. ಸುತ್ತೂರು ಮಾಲಿನಿ ಅವರು ಮಾಹಿತಿ ನೀಡಿದ್ದಾರೆ..

WHO: ಭಾರತದ ಮಕ್ಕಳಲ್ಲಿ ಉಂಟಾಗುವ ಸ್ಥೂಲಕಾಯತೆ ತಡೆಗಟ್ಟಲು ಡಬ್ಲ್ಯೂಎಚ್‌ಒ ಫೌಂಡೇಶನ್ ಮತ್ತು ನೋವೋ ನಾರ್ಡಿಸ್ಕ್ ಸಹಭಾಗಿತ್ವ

'ಡಬ್ಲ್ಯೂಎಚ್‌ಒ ಫೌಂಡೇಶನ್' -'ನೋವೋ ನಾರ್ಡಿಸ್ಕ್' ಸಂಸ್ಥೆಗಳ ಸಹಭಾಗಿತ್ವ

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಇಂದು ಜಾಗತಿಕವಾಗಿ ಅಪೌಷ್ಟಿಕತೆಗಿಂತಲೂ, ಅತಿಯಾದ ತೂಕ ಮತ್ತು ಸ್ಥೂಲಕಾಯತೆ ಹೆಚ್ಚಿನ ಸಾವುಗಳಿಗೆ ಕಾರಣವಾಗುತ್ತಿವೆ. ಇದು ಹೃದಯ ರಕ್ತನಾಳದ ಕಾಯಿಲೆಗಳು ಮತ್ತು ಟೈಪ್ 2 ಮಧುಮೇಹ ಸೇರಿದಂತೆ ಹಲವಾರು ಸಾಂಕ್ರಾಮಿಕ ವಲ್ಲದ ರೋಗಗಳಿಗೆ ನೇರ ಸಂಬಂಧ ಹೊಂದಿದೆ.

ಇಂದು ಧೂಮಪಾನ ರಹಿತ ದಿನ: ನಿಮ್ಮನ್ನೇ ಸುಡದಿರಲಿ ಈ ಅಪಾಯಕಾರಿ ಚಟ

ಧೂಮಪಾನ ರಹಿತ ದಿನ: ಈ ಬಗ್ಗೆ ಎಚ್ಚರವಿರಲಿ

No Smoking Day: ಧೂಮಪಾನದಿಂದ ಉಂಟಾಗುವ ದುಷ್ಪರಿಣಾಮಗಳ ಅರಿವಿದ್ದೂ ವ್ಯಸನಿಗಳಾಗುವವರ ಸಂಖ್ಯೆ ವಿಶ್ವದೆಲ್ಲೆಡೆ ಹೆಚ್ಚುತ್ತಿದೆ. ಹಾಗಾಗಿಯೇ ಪ್ರತಿ ವರ್ಷದ ಮಾರ್ಚ್‌ 2ನೇ ಬುಧವಾರವನ್ನು ʻಧೂಮಪಾನ ರಹಿತ ದಿನʼ ಎಂದು ಗುರುತಿಸಲಾಗಿದೆ. ಹೌದು, ಧೂಮಪಾನ ಮತ್ತು ತಂಬಾಕು ಚಟಗಳ ವಿರುದ್ಧದ ಅಭಿಯಾನದ ಹಿನ್ನೆಲೆಯಲ್ಲಿ ಈ ದಿನ ಹುಟ್ಟಿಕೊಂಡಿದ್ದು, ವಿಶ್ವದ ಎಲ್ಲ ದೇಶಗಳಲ್ಲಿ ಇದನ್ನು ಆಚರಿಸುವ ಅನಿವಾರ್ಯತೆಯೂ ಎದುರಾಗಿದೆ.

ಗ್ಯಾಸ್ಟ್ರಿಕ್‌ ಸಣ್ಣ ಆರೋಗ್ಯ ಸಮಸ್ಯೆಯೆಂದು ನಿರ್ಲಕ್ಷ್ಯ ಮಾಡಬೇಡಿ: ಈ ಬಗ್ಗೆ ವೈದ್ಯರು ಹೇಳೋದೇನು?

ಗ್ಯಾಸ್ಟ್ರಿಕ್‌ ಸಮಸ್ಯೆಗೆ ಮುಖ್ಯ ಕಾರಣವೇನು?

Health Tips: ಆಧುನಿಕ ಆಹಾರ ಪದ್ಧತಿಯಿಂದಾಗಿ ಗ್ಯಾಸ್ಟ್ರಿಕ್ ಸಮಸ್ಯೆ ಪ್ರತಿಯೊಬ್ಬರನ್ನು ಕಾಡಲು ಶುರು ಮಾಡಿದೆ. ಏನೇ ತಿಂದರೂ ಕೆಲವರಿಗೆ ಹೊಟ್ಟೆ ಉಬ್ಬರಿಸಿಕೊಳ್ಳುವುದು, ಜಡತ್ವ, ಗ್ಯಾಸ್, ತೇಗು ಹೀಗೆ ಹಲವು ಸಮಸ್ಯೆ ಕಂಡುಬರುತ್ತದೆ. ಗ್ಯಾಸ್ಟ್ರಿಕ್‌ನಿಂದ ಯಾವೆಲ್ಲ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ? ಯಾವ ರೀತಿಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು? ಗ್ಯಾಸ್ಟ್ರಿಕ್‌ ನಿರ್ಲಕ್ಷ್ಯ ಮಾಡಿದ್ರೆ ಎಂತಹ ಸಮಸ್ಯೆಗಳನ್ನು ಎದುರಿಸಬೇಕಾಗುವುದು? ಮುಂತಾದ ಸಂದೇಹಗಳಿಗೆ ʼವಿಶ್ವವಾಣಿ ಹೆಲ್ತ್‌ʼ ಚಾನೆಲ್‌ನ ಆಯುರ್ವೇದ ತಜ್ಞ ಡಾ. ಮಲ್ಲಿಕಾರ್ಜುನ್‌ ಡಂಬಳ ಉತ್ತರ ನೀಡಿದ್ದಾರೆ.

Liver Cancer: ಸ್ಥೂಲತೆಯು ಹೆಚ್ಚುತ್ತಿರುವ ಜಗತ್ತಿನಲ್ಲಿ ಯಕೃತ್ ಕ್ಯಾನ್ಸರ್ ಅಪಾಯ ಕಡಿಮೆ ಮಾಡಲು ಸರಿಯಾದ ಕೊಬ್ಬನ್ನು ಆಯ್ಕೆ ಮಾಡೋಣ

ಯಕೃತ್ ಕ್ಯಾನ್ಸರ್ ಅಪಾಯ ತಪ್ಪಿಸಲು ಸರಿಯಾದ ಕೊಬ್ಬನ್ನು ಆರಿಸಿ

ಇದು ಕೇವಲ ಮಧುಮೇಹ ಅಥವಾ ಹೃದಯ ರೋಗಗಳಷ್ಟೇ ಅಲ್ಲ, ನಮ್ಮ ದೇಹದ ಮುಖ್ಯ ಅಂಗಗಳ ಮೇಲೂ ಪರಿಣಾಮ ಬೀರುತ್ತದೆ. ವಿಶೇಷವಾಗಿ ಯಕೃತ್‌ನಲ್ಲಿ ಕೊಬ್ಬು ಸೇರುವ ಸ್ಥಿತಿಯನ್ನು “ಫ್ಯಾಟಿ ಲಿವರ್” ಎಂದು ಕರೆಯಲಾಗುತ್ತದೆ. ಆರಂಭದಲ್ಲಿ ಇದು ಹೆಚ್ಚಿನ ಲಕ್ಷಣ ಗಳನ್ನು ತೋರಿಸದೆ ಇರಬಹುದು, ಆದರೆ ಸಮಯ ಕಳೆದಂತೆ ಯಕೃತ್‌ನಲ್ಲಿ ಉರಿಯೂತ ಮತ್ತು ಹಾನಿ ಉಂಟಾಗಿ ಅದು ಗಂಭೀರವಾಗಬಹುದು.

Health Tips: ಕೇಸರಿ ಸೇವನೆಯಿಂದ ಆರೋಗ್ಯಕ್ಕೆ ಏನೆಲ್ಲಾ ಲಾಭ ಗೊತ್ತಾ?

ಕೇಸರಿಯ ಸದ್ಗುಣಗಳ ಬಗ್ಗೆ ನಿಮಗೆ ಗೊತ್ತೆ?

ಜಗತ್ತಿನ ದುಬಾರಿ ಮಸಾಲೆಗಳಲ್ಲಿ ಒಂದಾಗಿರುವ ಕೇಸರಿಯನ್ನು ʻಕೆಂಪು ಕನಕʼ ಎಂದು ಕರೆಯಲಾಗುತ್ತದೆ. ಒಮ್ಮೆ ಸಿಟ್ಟು, ಮತ್ತೆ ಬೇಸರ, ಹಾಗೆಯೇ ಖುಷಿ, ಅಲ್ಲಿಯೇ ಕಿರಿಕಿರಿ… ನಿಮ್ಮ ಮೂಡ್‌ ಹೀಗೆಲ್ಲ ಏರಿಳಿತವಾಗುತ್ತಿದ್ದರೆ ನಿಯಮಿತವಾಗಿ ಕೇಸರಿಯಲ್ಲಿ ಅಲ್ಪ ಪ್ರಮಾಣದಲ್ಲಿ ಬಳಸುವುದು ಸೂಕ್ತ ಎನ್ನುತ್ತವೆ ಅ‍ಧ್ಯಯನಗಳು.. ಇದನ್ನು ಮಿತ ಪ್ರಮಾಣದಲ್ಲಿ ಬಳಸುವುದರಿಂದ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಲಾಭವಿದೆ. ಏನವು ಎಂಬುದನ್ನು ನೋಡೋಣ.

ವಸಡಿನ ರಕ್ತಸ್ರಾವ ನಮ್ಮ ಆರೋಗ್ಯದ ಬಗ್ಗೆ ಏನು ಹೇಳುತ್ತದೆ?

ವಸಡಿನ ರಕ್ತಸ್ರಾವ ನಮ್ಮ ಆರೋಗ್ಯದ ಬಗ್ಗೆ ಏನು ಹೇಳುತ್ತದೆ?

ವಸಡುಗಳ ರಕ್ತಸ್ರಾವವು ವಸಡಿನ ರೋಗದ ಮೊದಲ ಸೂಚನೆಯಾಗಿದ್ದು, ಇದನ್ನು ಜಿಂಜಿ ವೈಟಿಸ್ ಎಂದು ಕರೆಯಲಾಗುತ್ತದೆ. ಕಾಲ ಕಳೆದಂತೆ ಹಲ್ಲುಗಳ ಮೇಲೆ ಸಂಗ್ರಹವಾಗುವ ಕಲೆಯಿಂದ ವಸಡಿಗೆ ಕಿರಿಕಿರಿ ಮತ್ತು ಊತ ಉಂಟಾಗುತ್ತದೆ. ಬಹುತೇಕ ಹಲ್ಲು ಉಜ್ಜುವಾಗ ರಕ್ತಸ್ರಾವ ಪ್ರಾರಂಭವಾಗುತ್ತದೆ. ಈ ಹಂತದಲ್ಲಿ ನಿರ್ಲಕ್ಷಿಸಿದರೆ ಸಮಸ್ಯೆ ಹೆಚ್ಚು ಆಳವಾಗಿ ಪೆರಿಯೋಡಾಂಟಿಟಿಸ್ ಆಗಿ ಬದಲಾಗುತ್ತದೆ.

ತಡವಾಗಿ ಮಲಗುತ್ತಿದ್ದೀರಾ? ಹಾಗಾದರೆ ಈ ಸಮಸ್ಯೆ ಕಾಡುವುದು ನಿಶ್ಚಿತ

ನಿದ್ರೆ ದೇಹಕ್ಕೆ ಅತೀ ಅಗತ್ಯ ಯಾಕೆ?

Health Tips: ಇತ್ತೀಚೆಗೆ ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿರುವವರಸಂಖ್ಯೆ ಹೆಚ್ಚಾಗಿದೆ.‌ ಬಿಡುವಿಲ್ಲದ ಕೆಲಸ, ಜೀವನ ಶೈಲಿ, ಆಹಾರ ಇತ್ಯಾದಿಯಿಂದ ನಿದ್ರಾಹೀನತೆ ಸಮಸ್ಯೆ ಉಂಟಾಗುತ್ತಿದೆ. ಈ ರೀತಿ ನಿದ್ದೆಯ ಅವಧಿ ಕಡಿಮೆಯಾಗುವುದು ಮೆದುಳಿನ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಹಾಗಾಗಿ ಸರಿಯಾಗಿ ನಿದ್ದೆ ಬರದಿರಲು ಕಾರಣವೇನು? ಯಾವ ರೀತಿಯ ಪರಿಹಾರ ಇದಕ್ಕಿದೆ? ಎಂದು ಪ್ರೊ. ಸುತ್ತೂರು ಮಾಲಿನಿ ʼವಿಶ್ವವಾಣಿ ಹೆಲ್ತ್‌ʼ ಯೂಟ್ಯೂಬ್‌ ಚಾನೆಲ್‌ಗೆ ತಿಳಿಸಿದ್ದಾರೆ.

ತೂಕ ಇಳಿಸಿಕೊಳ್ಳಲು ಮಾತ್ರವಲ್ಲ ಹೆಚ್ಚಿಸಿಕೊಳ್ಳಲೂ ಬೇಕು ಶಿಸ್ತು; ಯಾವೆಲ್ಲ ಆಹಾರ ಸೇವಿಸಬೇಕು ಎನ್ನುವ ಟಿಪ್ಸ್‌ ಇಲ್ಲಿದೆ

ತೂಕ ಹೆಚ್ಚಿಸಲು ಇಲ್ಲಿದೆ ಸೂಕ್ತ ಟಿಪ್ಸ್

Health Tips: ಉತ್ತಮ ತೂಕ ಹೊಂದಿದ್ದರೆ ಉತ್ತಮ ಆರೋಗ್ಯವೂ ಇರುತ್ತದೆ. ತೂಕ ಹೆಚ್ಚುವುದೆಂದರೆ ದೇಹದಲ್ಲಿ ಕೊಬ್ಬು ಹೆಚ್ಚುವುದಲ್ಲ, ಸ್ನಾಯುಗಳನ್ನು ಹೆಚ್ಚಿಸಿಕೊಳ್ಳುವುದು. ಹಣ್ಣು ತಿಂದು ತೂಕ ಇಳಿಸಿಕೊಳ್ಳುವ ಬಗ್ಗೆ ಚರ್ಚೆ ಆಗುತ್ತಿರುವಾಗ, ಅವುಗಳನ್ನೇ ತಿಂದು ತೂಕ ಹೆಚ್ಚಿಸಿಕೊಳ್ಳಲು ಸಾಧ್ಯವೇ ಎಂಬ ಪ್ರಶ್ನೆ ಸಹಜ. ಯಾವೆಲ್ಲ ಹಣ್ಣುಗಳು ತೂಕ ಏರಿಕೆಗೆ ನೆರವಾಗುತ್ತವೆ ಮತ್ತು ಹೇಗೆ ಎಂಬುದನ್ನು ತಿಳಿಯೋಣ.

ಋತು ಬದಲಾವಣೆಯಲ್ಲಿ ಚರ್ಮದ ಆರೈಕೆ ಹೇಗಿರಬೇಕು?

ಹವಾಮಾನ ಬದಲಾವಣೆ ವೇಳೆ ಚರ್ಮದ ಆರೈಕೆ ಹೇಗಿರಬೇಕು?

Skin Care: ನಮ್ಮ ಚರ್ಮದ ಆರೈಕೆ ಅದರಷ್ಟಕ್ಕೆ ಅದೇ ಆಗುವಂಥದ್ದಲ್ಲ. ಇದಕ್ಕೆ ನಮ್ಮ ಪ್ರಯತ್ನ ಬೇಕೇ ಬೇಕಾಗುತ್ತದೆ. ಅಂದರೆ, ಚಳಿಗಾಲಕ್ಕೆಂದು ಅನುಸರಿಸುತ್ತಿದ್ದ ಚರ್ಮದ ಆರೈಕೆಯ ಕ್ರಮಗಳಲ್ಲಿ ಇನ್ನೀಗ ಬದಲಾವಣೆ ಅಗತ್ಯ. ಋತು ಬದಲಾವಣೆಯ ಈ ಸಮಯದಲ್ಲಿ ಚರ್ಮವನ್ನು ನಯವಾಗಿಡುವುದಕ್ಕೆ ಏನು ಮಾಡಬೇಕು?

Skin Tips: ಮೇಕಪ್‌ನಿಂದ ಚರ್ಮ ಸುಕ್ಕಾಗುವುದೇ? ಇದಕ್ಕೆ ಪರಿಹಾರವೇನು?

ಮೇಕಪ್ ಮಾಡುವುದರಿಂದ ಮುಖ ಸುಕ್ಕಾಗುವುದೇ?

ಮೇಕಪ್‌ ಮಾಡುವುದು ಬಹಳಷ್ಟು ಜನರ ದೈನಂದಿನ ಕಾರ್ಯಗಳಲ್ಲಿ ಒಂದು. ನಗರಗಳು ದೊಡ್ಡದಾಗುತ್ತ ಹೋದಷ್ಟೂ ಸಾವಿಲ್ಲದ ಮನೆಯ ಸಾಸಿವೆ ಹುಡುಕುವುದೂ ಮೇಕಪ್‌ ಇಲ್ಲದ ಮುಖ ಹುಡುಕುವುದೂ ಒಂದೇ ಎಂಬಂತಾಗುತ್ತದೆ. ಮುಖಕ್ಕೆ ಮೇಕಪ್‌ ಮಾಡುವುದಕ್ಕೆ ಕಾರಣಗಳು ಏನೇ ಇರಲಿ, ಅಂತೂ ಪ್ರಸಾದನಗಳು ಬೇಕಾಗುತ್ತವೆ. ಇವುಗಳ ಬೆನ್ನಿಗೇ ಪ್ರಶ್ನೆಯೊಂದು ಎದುರಾಗುತ್ತದೆ. ಮುಖಕ್ಕೆ ಸದಾ ಮೇಕಪ್‌ ಮಾಡುತ್ತಿದ್ದರೆ ಚರ್ಮಕ್ಕೆ ಬೇಗ ವಯಸ್ಸಾಗುತ್ತದೆಯೇ? ತ್ವಚೆ ಸುಕ್ಕಾಗುತ್ತದೆಯೇ? ನಿಮ್ಮೆಲ್ಲ ಗೊಂದಲಕ್ಕೆ ಇಲ್ಲಿದೆ ಉತ್ತರ.

ಪೋಷಕಾಂಶಗಳ ಭಂಡಾರ ಸಿಹಿ ರಸದ ಈ ಪೀಚ್‌ ಹಣ್ಣು; ತೂಕ ಇಳಿಕೆ, ಹೃದಯ ಆರೋಗ್ಯಕ್ಕೆ ಪೂರಕ

ಪೀಚ್‌ ಹಣ್ಣಿನ ಬಗ್ಗೆ ನಿಮಗೆಷ್ಟು ಗೊತ್ತು?

Health Tips: ಈ ಹಣ್ಣಿನ ಹೆಸರು ʻಪೀಚ್‌ʼ ಹೌದಾದರೂ, ಪೋಷಕಾಂಶಗಳಲ್ಲಿ ಇದೇನು ಪೀಚಲ್ಲ; ಸಾಕಷ್ಟು ದೊಡ್ಡ ದಾಸ್ತಾನನ್ನೇ ಹೊಂದಿದೆ. ಬೇಸಗೆಯ ದಾಹ ತಣಿಸಲೆಂದೇ ದೊರೆಯುವ ಸಿಹಿಯಾದ, ರಸಭರಿತವಾಗಿ ಈ ಹಣ್ಣನ್ನು ಆಗಾಗ ಮೆಲ್ಲುವುದು ಆರೋಗ್ಯಕ್ಕೂ ಹಿತಕರ. ಸಿಹಿ ರುಚಿಯ, ರಸಭರಿತವಾದ ಈ ಹಣ್ಣು ಬಹಳಷ್ಟು ಪೋಷಕಾಂಶಗಳನ್ನು ಹೊಂದಿದೆ. ಹಲವು ವಿಟಮಿನ್‌, ಉತ್ಕರ್ಷಣ ನಿರೋಧಕ, ನಾರು ಸೇರಿದಂತೆ ಹಲವು ರೀತಿಯಲ್ಲಿ ದೇಹಕ್ಕೆ ಪೋಷಣೆ ಒದಗಿಸಬಲ್ಲದು ಈ ಹಣ್ಣು.

ಪದೇ ಪದೆ ಕಾಡುವ ಹೊಟ್ಟೆನೋವಿಗೆ ಕಾರಣವೇನು? ಪರಿಹಾರ ಹೇಗೆ? ಇಲ್ಲಿದೆ ತಜ್ಞರ ಸಲಹೆ

ಇರಿಟೇಬಲ್ ಬೋವೆಲ್ ಸಿಂಡ್ರೋಮ್ ಬಗ್ಗೆ ಎಚ್ಚರ ವಹಿಸಿ

Health Tips: : IBS ಎಂದರೆ ಇರಿಟೇಬಲ್‌ ಬವಲ್‌ ಸಿಂಡ್ರೋಮ್‌ ಎಂದರ್ಥ. ಅಂದ್ರೆ ಹೊಟ್ಟೆ ಮತ್ತು ಕರುಳಲ್ಲಿ ಆಗುವ ಸಾಮಾನ್ಯವಾದ ಕಾರ್ಯಾತ್ಮಕ ಸಮಸ್ಯೆ. ಇದು ಅಪಾಯಕಾರಿ ಆರೋಗ್ಯ ಸಮಸ್ಯೆಯೇನೂ ಅಲ್ಲ. ಆದರೆ ಆಗಾಗ ಹೊಟ್ಟೆ ನೋವಿನ ಸಮಸ್ಯೆಗೆ ಕಾರಣವಾಗಬಹುದು. ಈ ಸಮಸ್ಯೆ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಕಾಡುವುದು ಸಾಮಾನ್ಯ. ಇದಕ್ಕೆ ಯಾವೆಲ್ಲ ಚಿಕಿತ್ಸಾ ಕ್ರಮಗಳಿವೆ? ಪದೇ ಪದೆ ಕಾಡುವ ಹೊಟ್ಟೆ ನೋವಿಗೆ ಯಾವ ಬಗೆಯ ಆಹಾರ ಸೇವಿಸಬೇಕು? ಎನ್ನುವುದರ ಬಗ್ಗೆ ಖ್ಯಾತ ಆಯುರ್ವೇದ ತಜ್ಞ ಡಾ. ಮಲ್ಲಿಕಾರ್ಜುನ್‌ ಡಂಬಳ ಮಾಹಿತಿ ನೀಡಿದ್ದಾರೆ.

Loading...