ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಆರೋಗ್ಯ

Dr Shashikaran Umakanth Column: ಮಧುಮೇಹದ ಅವಳಿ ಜವಳಿಗಳು !

Dr Shashikaran Umakanth Column: ಮಧುಮೇಹದ ಅವಳಿ ಜವಳಿಗಳು !

ನಮ್ಮ ದೇಹದ ರಕ್ಷಣಾ ವ್ಯವಸ್ಥೆಯೇ (ಇಮ್ಯು ನಿಟಿ) ದಾರಿ ತಪ್ಪಿ, ಈ ಇನ್ಸುಲಿನ್ ಕಾರ್ಖಾನೆಯ ಮೇಲೆ ದಾಳಿ ಮಾಡಿ, ಅದನ್ನು ಸಂಪೂರ್ಣವಾಗಿ ನಾಶ ಮಾಡಿಬಿಡುತ್ತದೆ. ಕಾರ್ಖಾನೆಗೆ ಶಾಶ್ವತ ಬೀಗಮುದ್ರೆ! ಒಂದು ಹನಿ ಇನ್ಸುಲಿನ್ ಕೂಡ ಉತ್ಪಾದನೆಯಾಗುವುದಿಲ್ಲ. ಕಾರ್ಮಿಕರೆಲ್ಲಾ ಖಾಯಂ ಮುಷ್ಕರ ಹೂಡಿದ ಹಾಗೆ ಇದು.

Vishwavani Health: ಉಪಹಾರಕ್ಕೆ ಇಡ್ಲಿ ಸಾಂಬಾರ್ ಬೆಸ್ಟ್; ವೈದ್ಯರು ಹೀಗೆನ್ನುವುದೇಕೆ?

ಉಪಹಾರಕ್ಕೆ ಇಡ್ಲಿಯನ್ನೇಕೆ ತಿನ್ನಬೇಕು?

Health Tips: ಹುಷಾರಿಲ್ಲದೇ ಇದ್ದಾಗ ವೈದ್ಯರು ಎಲ್ಲ ಆಹಾರದಲ್ಲೂ ಪಥ್ಯೆ ಮಾಡಲು ಹೇಳಿದರೂ ಇಡ್ಲಿಯನ್ನು ಸೇವಿಸಿ ಎನ್ನುತ್ತಾರೆ. ಇದಕ್ಕೆ ಕಾರಣ ಹಲವು. ಇಡ್ಲಿ-ಸಾಂಬಾರ್-ಚಟ್ನಿ ಬೆಳಗಿನ ಉಪಹಾರಕ್ಕೆ ಸೂಕ್ತ ಆಹಾರ. ಇದನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಸಾಕಷ್ಟು ಲಾಭವಿದೆ. ಅವು ಯಾವುದು ಎನ್ನುವ ಕುರಿತು ಮೈಸೂರು ವಿವಿಯ ಜೆನೆಟಿಕ್ಸ್‌ ಮತ್ತು ಜಿನೋಮಿಕ್ಸ್‌ ಅಧ್ಯಯನ ವಿಭಾಗದ ಅಧ್ಯಕ್ಷೆ ಡಾ. ಸುತ್ತೂರು ಮಾಲಿನಿ ನೀಡಿರುವ ಮಾಹಿತಿ ಇಲ್ಲಿದೆ.

Health Tips: ಕರುಳಿನ ಆರೋಗ್ಯ ಸುಧಾರಿಸುವ ನೀವು ಸೇವಿಸಬೇಕಾದ ಆಹಾರಗಳಿವು

ಕರುಳಿನ ಆರೋಗ್ಯ ವೃದ್ಧಿಗೆ ತಜ್ಞರ ಸಲಹೆ ಇಲ್ಲಿದೆ

Gut Health: ಆಗಾಗ ಹೊಟ್ಟೆಯ ಸಮಸ್ಯೆ, ಹೊಟ್ಟೆ ಉಬ್ಬರ, ಆಲಸ್ಯ, ನಿದ್ರಾ ಹೀನತೆಯಿಂದ ಬಳಲುತ್ತಿದ್ದರೆ ನೀವು ಕರುಳಿನ ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ಇದಕ್ಕಾಗಿ ನಿಮ್ಮ ದಿನ ನಿತ್ಯದ ಆಹಾರದಲ್ಲಿ ಪಾಲಿಫೆನಾಲ್ ಸಮೃದ್ಧ‌ವಾಗಿರುವ ಆಹಾರಗಳನ್ನು ಸೇವಿಸಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ. ನಿಮ್ಮ ಕರುಳಿನ ಬ್ಯಾಕ್ಟೀರಿಯಾವನ್ನು ಪೋಷಿಸುವ ಹಾಗೂ ಕರುಳಿನ ಆರೋಗ್ಯ ವನ್ನು ಸುಧಾರಿಸುವ ಪಾಲಿಫಿನಾಲ್‌ಗಳಲ್ಲಿ ಸಮೃದ್ಧವಾಗಿರುವ ಆಹಾರಗಳ ಬಗ್ಗೆ ಮಾಹಿತಿ ಇಲ್ಲಿದೆ.

Dr Sadhanashree Column: ಬೇಸಿಗೆಯಿಂದ ಮಳೆಗಾಲಕ್ಕೆ: ತಪ್ಪಿಸಬೇಕಾದ ಹತ್ತು ಅಭ್ಯಾಸಗಳು

ಬೇಸಿಗೆಯಿಂದ ಮಳೆಗಾಲಕ್ಕೆ: ತಪ್ಪಿಸಬೇಕಾದ ಹತ್ತು ಅಭ್ಯಾಸಗಳು

ಆರೋಗ್ಯವನ್ನು ಕಾಪಾಡಿಕೊಳ್ಳಲು ಏನು ಮಾಡಬೇಕು ಎಂಬುದರ ಬಗ್ಗೆ ನಾವು ಸಾಕಷ್ಟು ಕೇಳುತ್ತೇವೆ. ಆದರೆ ಕೆಲವೊಮ್ಮೆ ಆರೋಗ್ಯದ ರಹಸ್ಯವು ಹೊಸದನ್ನು ಮಾಡುವುದರಲ್ಲಿ ಅಲ್ಲ, ಕೆಲವು ತಪ್ಪುಗಳನ್ನು ಮಾಡದೇ ಇರುವುದರಲ್ಲಿ ಅಡಗಿರುತ್ತದೆ. ಋತು ಬದಲಾವಣೆಯ ಈ ಸಂದರ್ಭದಲ್ಲಿ ತಪ್ಪಿಸಬೇಕಾದ ಹತ್ತು ಅಭ್ಯಾಸಗಳ ಬಗ್ಗೆ ತಿಳಿದುಕೊಳ್ಳೋಣ.

ರಕ್ತದಾನದಿಂದ ಜೀವ ಉಳಿಸುವುದು ಮಾತ್ರವಲ್ಲ! ನಿಮ್ಮ ಆರೋಗ್ಯಕ್ಕೂ ವರದಾನ!

ರಕ್ತದಾನವು ಆರೋಗ್ಯವನ್ನು ಸುಧಾರಿಸಬಹುದೇ? ತಜ್ಞರ ಸಲಹೆ ಏನು?

Health Tips: ಆರೋಗ್ಯವಂತರು ನಿಮ್ಮ ರಕ್ತವನ್ನು ರಕ್ತಹೀನರಿಗೆ ನಿಯಮಿತವಾಗಿ ದಾನ ಮಾಡುವುದರಿಂದ ತುರ್ತು ಅಗತ್ಯತೆಗಳಿಗೆ ಇದು ನೆರವಾಗುತ್ತದೆ. ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆ ಪಡೆಯುವ ರೋಗಿಗಳು, ಶಸ್ತ್ರಚಿಕಿತ್ಸೆಗೆ ಒಳಗಾಗುವವರು ಹಾಗೂ ಅಪಘಾತಕ್ಕೀಡಾದವರ ಪಾಲಿಗೆ ಇಂತಹ ರಕ್ತದಾನವೇ ನೆರವಾಗುತ್ತದೆ‌.‌. ಆದರೆ ಹೆಚ್ಚಿನ ಜನರು ಇತರರಿಗೆ ಸಹಾಯ ಮಾಡಲು ಹಿಂಜರಿಯುವುದಿಲ್ಲ, ಆದರೆ ಅನೇಕರು ಆಗಾಗ್ಗೆ "ರಕ್ತದಾನವು ನಿಜವಾಗಿಯೂ ನನಗೆ ಏನಾದರೂ ತೊಂದರೆ ಮಾಡುತ್ತದೆಯೇ"? ಎನ್ನುವ ಆತಂಕ ಇದ್ದೇ ಇರುತ್ತದೆ. ಈ ಬಗ್ಗೆ ತಜ್ಞರು ಸಲಹೆ ನೀಡಿದ್ದು ರಕ್ತದಾನ ಮಾಡುವುದರಿಂದ ನಿಮ್ಮ ದೇಹಕ್ಕೆ ವಿವಿಧ ರೀತಿಯ ಆರೋಗ್ಯ ಪ್ರಯೋಜನಗಳಿವೆ ಎಂದಿದ್ದಾರೆ. ಹಾಗಿದ್ರೆ ರಕ್ತದಾನ ಮಾಡುವುದರಿಂದ ಏನೆಲ್ಲಾ ಆರೋಗ್ಯ ಲಾಭ ಇದೆ?..

ಮಣಿಪಾಲ್ ಆಸ್ಪತ್ರೆಯಿಂದ ಮಾನವೀಯ ಕಾಳಜಿಯ ಆರೋಗ್ಯ ಸೇವೆಗೆ ಹೊಸ ಮುನ್ನುಡಿ: ಭಾರತದ ಪ್ರಥಮ 'ಚೈಲ್ಡ್ ಲೈಫ್' ವಿಚಾರ ಸಂಕಿರಣ ಯಶಸ್ವಿ

ಭಾರತದ ಪ್ರಥಮ 'ಚೈಲ್ಡ್ ಲೈಫ್' ವಿಚಾರ ಸಂಕಿರಣ ಯಶಸ್ವಿ

ಈ ಕಾರ್ಯಕ್ರಮದಲ್ಲಿ ಪ್ರಮುಖ ಮಕ್ಕಳ ವೈದ್ಯರು, ಮನಶ್ಶಾಸ್ತ್ರಜ್ಞರು, ಆರೋಗ್ಯ ರಂಗದ ಆಡಳಿತಾಧಿಕಾರಿಗಳು, ದಾದಿಯರು ಹಾಗೂ ಮಕ್ಕಳ ಜೀವನ ನಿರ್ವಹಣಾ ತಜ್ಞರು ಭಾಗವಹಿಸಿ ದ್ದರು. ಅನಾರೋಗ್ಯ ಮತ್ತು ಆಸ್ಪತ್ರೆಗೆ ದಾಖಲಾಗುವ ಸಮಯದಲ್ಲಿ ಮಕ್ಕಳು ಹಾಗೂ ಅವರ ಕುಟುಂಬಗಳು ಎದುರಿಸುವ ಭಾವನಾತ್ಮಕ ಸವಾಲುಗಳ ಕುರಿತು ವಿಸ್ತೃತ ಚರ್ಚೆ ನಡೆಯಿತು.

ಗ್ರೂಪ್ ಫಾರ್ಮಸ್ಯುಟಿಕಲ್ಸ್ ಬಿಡುಗಡೆ ಮಾಡುತ್ತಿದೆ 'ಏಬಲ್‌ಡೆಂಟ್' - ದಂತ ಆರೈಕೆ ಪರಿಸರ ವ್ಯವಸ್ಥೆ

ಗ್ರೂಪ್ ಫಾರ್ಮಸ್ಯುಟಿಕಲ್ಸ್ ಬಿಡುಗಡೆ ಮಾಡುತ್ತಿದೆ 'ಏಬಲ್‌ಡೆಂಟ್'

ಭಾರತದಲ್ಲಿ, ಬಾಯಿಯ ನೈರ್ಮಲ್ಯ ಸೇರಿದಂತೆ, ದೈನಂದಿನ ಸಹಾಯದ ಆರೈಕೆಯ ಅಗತ್ಯ ಎಲ್ಲಾ ವಯಸ್ಸಿನವರಲ್ಲಿಯೂ ವೇಗವಾಗಿ ಹೆಚ್ಚುತ್ತಿದೆ. ಪ್ರತಿ 20 ವೃದ್ಧರಲ್ಲಿ ಒಬ್ಬರು ಒಂದಲ್ಲ ಒಂದು ರೀತಿಯಅಸಮರ್ಥತೆಯೊಂದಿಗೆ ಜೀವಿಸುತ್ತಿದ್ದಾರೆ ಮತ್ತು 60 ವರ್ಷ ಮೇಲ್ಪಟ್ಟವರಲ್ಲಿ ಸುಮಾರು 40% ಜನ ಕ್ರಿಯಾತ್ಮಕ ಅಥವಾ ಆರೋಗ್ಯ-ಸಂಬಂಧಿತ ಮಿತಿಗಳನ್ನು ಎದುರಿಸು ತ್ತಿದ್ದಾರೆ.

ಮಧುಮೇಹಿಗಳಲ್ಲಿ  ಮೊದಲು ಕಣ್ಣಿನ ತೊಂದರೆ ಬರುವುದು ಯಾಕೆ? ತಜ್ಞರು ಹೇಳುವುದೇನು? Video

ಶುಗರ್ ಇದ್ದವರಿಗೆ ಮೊದಲು ಕಣ್ಣು ಕುರುಡಾಗುವುದೇಕೆ?

ಮಧುಮೇಹ ಎನ್ನುವುದು ಸೈಲೆಂಟ್ ಕಿಲ್ಲರ್. ಇದು ದೇಹದಲ್ಲಿರುವುದು ಗೊತ್ತಾಗುವುದೇ ಯಾವುದಾದರೂ ಅಂಗಾಂಗ ವೈಫಲ್ಯವಾದಾಗ. ನಮ್ಮ ದೇಹವು ಇದಕ್ಕೆ ಸಾಕಷ್ಟು ಮೊದಲೇ ಮುನ್ಸೂಚನೆಯನ್ನು ನೀಡುತ್ತದೆ. ಆದರೆ ನಾವು ಇದನ್ನು ನಿರ್ಲಕ್ಷಿಸುತ್ತೇವೆ. ಹೀಗಾಗಿ ಮಧುಮೇಹವಿದ್ದರೂ ಅನೇಕರಿಗೆ ತಿಳಿಯುವಾಗ ತಡವಾಗುತ್ತದೆ. ಹೀಗಾಗಿ ಮಧುಮೇಹಿಗಳು ನಿರಂತರ ಆರೋಗ್ಯ ತಪಾಸಣೆ ನಡೆಸಬೇಕು, ಅವು ಯಾವುದು, ಯಾಕಾಗಿ ಎನ್ನುವ ಮಧುಮೇಹ ತಜ್ಞರಾದ ಡಾ. ಸುಮನ್ ಅವರು ನೀಡಿರುವ ಮಾಹಿತಿ ಇಲ್ಲಿದೆ.

Health Tips: ತ್ವಚೆಯ ಸೌಂದರ್ಯ ಹೆಚ್ಚಿಸಬೇಕೇ? ಅಕ್ಕಿ ತೊಳೆದ ನೀರು ಕುಡಿಯಿರಿ!

ಆರೋಗ್ಯಕರ ಚರ್ಮಕ್ಕಾಗಿ ಅಕ್ಕಿ ತೊಳೆದ ನೀರು ಕುಡಿಯಿರಿ!

ಇತ್ತೀಚೆಗೆ ಬಹಳ ಟ್ರೆಂಡ್ ಆಗಿರುವುದು ಅಕ್ಕಿ ತೊಳೆದ ನೀರು ಅಥವಾ ಗಂಜಿ ನೀರು... ಅಕ್ಕಿಯನ್ನು ನೆನೆಸಿ ಅಥವಾ ಕುದಿಸಿದ ನಂತರ ಉಳಿದಿರುವ ಈ ದ್ರವವು ವಿಟಮಿನ್‌ಗಳು, ಉತ್ಕರ್ಷಣ ನಿರೋಧಕಗಳು ಮತ್ತು ಅಮೈನೋ ಆಮ್ಲಗಳ ವಿಶಿಷ್ಟ ಮಿಶ್ರಣವನ್ನು ಹೊಂದಿರುತ್ತದೆ. ಇದನ್ನು ಕೇವಲ ಮುಖಕ್ಕೆ ಹಚ್ಚುವುದು ಮಾತ್ರವಲ್ಲದೆ ಕುಡಿಯುವುದರಿಂದಲೂ ಚರ್ಮದ ಆರೋಗ್ಯವನ್ನು ರಕ್ಷಣೆ ಮಾಡಬಹುದು.

Health Tips: ನಿಮ್ಮ ಡಯಟ್‌ನಿಂದ ಈ ಆಹಾರಗಳನ್ನು ದೂರವಿಡಿ

ಡಯಟ್‌ನಲ್ಲಿ ಎಂದಿಗೂ ಈ ತಪ್ಪು ಮಾಡದಿರಿ

Diet Plan: ಆರೋಗ್ಯಪೂರ್ಣ ಜೀವನಕ್ಕಾಗಿ ಕೇವಲ ಡಯಟ್ ಮಾತ್ರವಲ್ಲ ಅದಕ್ಕೆ ಸೂಕ್ತವಾದ ಆಹಾರ ಕ್ರಮವನ್ನು ಪಾಲನೆ ಮಾಡುವುದು ಕೂಡ ಮುಖ್ಯ. ಕೆಲವು ಆಹಾರಗಳು ಹೊರ ನೋಟಕ್ಕೆ ಉತ್ತಮ ಎನಿಸಿಕೊಂಡರೂ ಎಲ್ಲರ ದೇಹಕ್ಕೆ ಹೊಂದಾಣಿಕೆಯಾಗುವುದಿಲ್ಲ. ಹಾಗಾಗಿ ಕೆಲವು ಅಭ್ಯಾಸಗಳನ್ನು ನಾವು ತ್ಯಜಿಸಬೇಕಾಗುತ್ತದೆ. ಅವೇನು ಎನ್ನುವ ವಿವರ ಇಲ್ಲಿದೆ.

ಬೆಲ್ಲ, ತಾಳೆ ಎಣ್ಣೆ ಬಗ್ಗೆ ತಪ್ಪು ಕಲ್ಪನೆ ಬೇಡ: ವಿಶ್ಲೇಷಣೆ

ಬೆಲ್ಲ, ತಾಳೆ ಎಣ್ಣೆ ಬಗ್ಗೆ ತಪ್ಪು ಕಲ್ಪನೆ ಬೇಡ: ವಿಶ್ಲೇಷಣೆ

ಇದು ಈಗ ಸುಲಭವಾಗಿ ಗುರುತಿಸಬಹುದಾದ ಒಂದು ಮಾದರಿಯಾಗಿದೆ. ಶತಮಾನಗಳಿಂದ ಜನರಿಗೆ ಆಹಾರ, ಬಟ್ಟೆ ಅಥವಾ ಇತರ ಅಗತ್ಯಗಳನ್ನು ಪೂರೈಸುತ್ತಿದ್ದ ಒಂದು ನೈಸರ್ಗಿಕ ಉತ್ಪನ್ನವನ್ನು ಏಕಾಏಕಿ ಸಮಸ್ಯೆಯಾಗಿ ತೋರಿಸಲಾಗುತ್ತದೆ. ನಂತರ ಅದರ ಬದಲಿಗೆ ಕಾರ್ಖಾನೆಯಲ್ಲಿ ತಯಾರಾದ ಹೊಸ ಉತ್ಪನ್ನವನ್ನು ಹೆಚ್ಚು ಸುರಕ್ಷಿತ, ಹೆಚ್ಚು ನೈತಿಕ ಮತ್ತು ಹೆಚ್ಚು ಆಧುನಿಕ ಎಂದು ಪ್ರಚಾರ ಮಾಡಲಾಗುತ್ತದೆ.

ಕಪ್ಪು ಬಣ್ಣದ ಆಹಾರಗಳಿಂದ ತೂಕ ಇಳಿಸಿ!

ಕಪ್ಪು ಬಣ್ಣದ ಆಹಾರಗಳು ತೂಕ ಇಳಿಕೆಗೆ ರಾಮಬಾಣ!

Health Tips: ತೂಕ ಇಳಿಸುವ ಉದ್ದೇಶವಿದ್ದವರಿಗೆ ಕಪ್ಪು ಬಣ್ಣ ಹೇಗೆ ಅನುಕೂಲ ಎಂಬುದು ತಿಳಿದಿದ್ದರೆ ಅನುಕೂಲ. ಅಂದರೆ ಕಪ್ಪು ಬಟ್ಟೆ ಹಾಕಿದರೆ ತೂಕ ಇಳಿಯುತ್ತದೆಂದೋ ಅಥವಾ ಕಪ್ಪು ಹರಳು ಧರಿಸಿ ದರೆ ತೆಳ್ಳಗಾಗುವರೆಂದೋ ಭ್ರಮಿಸಬೇಕಿಲ್ಲ. ನಾವಿಲ್ಲಿ ಹೇಳುತ್ತಿರುವುದು ಕಪ್ಪು ಬಣ್ಣದ ಆಹಾರಗಳ ಬಗ್ಗೆ. ಹೌದು, ವಿಚಿತ್ರ ಎನಿಸಿದರೂ, ಕಪ್ಪು ಬಣ್ಣದ ಆಹಾರಗಳಲ್ಲಿ ಜೀವಸತ್ವಗಳು ಮತ್ತು ಖನಿಜಗಳು ಸಾಂದ್ರವಾಗಿದ್ದು, ಕೊಬ್ಬು ಕತ್ತರಿಸುವಲ್ಲಿ ನೆರವಾಗುತ್ತವೆ. ಇಲ್ಲಿದೆ ವಿವರಗಳು.

ತೂಕ ಇಳಿಯುತ್ತಿಲ್ಲವೇ? ನೀವು ಮಾಡುತ್ತಿರುವ ಈ 7 ಡಯಟ್ ತಪ್ಪುಗಳೇ ಕಾರಣವಾಗಿರಬಹುದು!

ತೂಕ ಇಳಿಯುತ್ತಿಲ್ಲವೇ? ಈ 7 ತಪ್ಪುಗಳೇ ಕಾರಣ

Diet Mistakes: ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೂ ಫಲಿತಾಂಶ ಸಿಗುತ್ತಿಲ್ಲವೇ? ಅತಿಯಾಗಿ ಕ್ಯಾಲೊರಿ ಕಡಿಮೆ ಮಾಡುವುದು, ಊಟ ಬಿಟ್ಟು ಬಿಡುವುದು, ಪ್ರೊಟೀನ್ ಕೊರತೆ, ಒತ್ತಡದಿಂದ ಹೆಚ್ಚು ತಿನ್ನುವುದು ಸೇರಿ 7 ಸಾಮಾನ್ಯ ಡಯಟ್ ತಪ್ಪುಗಳು ತೂಕ ಇಳಿಕೆಗೆ ಅಡ್ಡಿಯಾಗಬಹುದು. ಆರೋಗ್ಯಪೂರ್ಣ ಜೀವನಶೈಲಿ ಮತ್ತು ಸಮತೋಲನಿತ ಆಹಾರವೇ ದೀರ್ಘಕಾಲಿಕ ತೂಕ ನಿಯಂತ್ರಣದ ಗುಟ್ಟು ಎಂದು ತಜ್ಞರು ಹೇಳುತ್ತಾರೆ.

ಸಿ-ಸೆಕ್ಷನ್ ಹೆರಿಗೆ ಆಯ್ಕೆಯಿಂದ ಯಾವ ರೋಗಕ್ಕೆ ಅಹ್ವಾನ? ಈ ಬಗ್ಗೆ ತಜ್ಞರು ಹೇಳೋದೇನು? Video

ಸಿ-ಸೆಕ್ಷನ್ ಹೆರಿಗೆಯಿಂದ ಬರುವ ಅಪಾಯಗಳೇನು?

ಯಾವುದೇ ಕಾರಣಕ್ಕೂ ಸಿ-ಸೆಕ್ಷನ್ ಹೆರಿಗೆಯನ್ನು ಆಯ್ಕೆ ಅಥವಾ ಶಾರ್ಟ್ ಕಟ್ ಆಗಿ ಮಾಡಿಕೊಳ್ಳಬೇಡಿ. ಇದರಿಂದ ಮುಂದೆ ಸಾಕಷ್ಟು ತೊಂದರೆಗಳು ಎದರಾಗಬಹುದು ಎನ್ನುತ್ತಾರೆ ಖ್ಯಾತ ಸ್ತ್ರೀ ರೋಗ ತಜ್ಞರಾದ ಡಾ. ರಶ್ಮಿ ಟಿ.ಎನ್. ವಿಶ್ವವಾಣಿ ಹೆಲ್ತ್ ಯೂಟ್ಯೂಬ್ ಚಾನೆಲ್ ನಲ್ಲಿ ಮಾತನಾಡಿದ ಅವರು, ಸಿ-ಸೆಕ್ಷನ್ ಹೆರಿಗೆ ಆಯ್ಕೆಯಿಂದ ಮುಂದೆ ಬರಬಹುದಾದ ತೊಂದರೆಗಳ ಬಗ್ಗೆ ವಿವರಿಸಿರುವುದು ಹೀಗೆ..

ಇತ್ತೀಚೆಗೆ ವಿಚ್ಛೇದನ ಪ್ರಕರಣಗಳು ಹೆಚ್ಚಾಗಲು ವೈಜ್ಞಾನಿಕ ಕಾರಣವೇನು?

ಇತ್ತೀಚೆಗೆ ದಂಪತಿ ಮಧ್ಯೆ ಜಗಳ ಗೆಚ್ಚಾಗಲು ಕಾರಣವೇನು?

ಇತ್ತೀಚಿನ ದಿನಗಳಲ್ಲಿ ಸಣ್ಣಪುಟ್ಟ ಕಾರಣಗಳಿಗಾಗಿ ದಂಪತಿ ನಡುವೆ ಜಗಳ, ವಿಚ್ಛೇದನ ಪ್ರಕರಣ ಹೆಚ್ಚಾಗುತ್ತಿವೆ. ಇದಕ್ಕೆ ಕಾರಣವೇನು? ಈ ಕುರಿತು ವಿಜ್ಞಾನ ಏನು ಹೇಳುತ್ತದೆ? ಎಂಬುದನ್ನು ಮೈಸೂರು ವಿಶ್ವವಿದ್ಯಾನಿಲಯದ ಜೆನೆಟಿಕ್ಸ್‌ ಮತ್ತು ಜಿನೋಮಿಕ್ಸ್‌ ಅಧ್ಯಯನ ವಿಭಾಗದ ಅಧ್ಯಕ್ಷೆ ಡಾ. ಸುತ್ತೂರು ಮಾಲಿನಿ ವಿಶ್ವವಾಣಿ ಹೆಲ್ತ್ ಯುಟ್ಯೂಬ್‌ ಚಾನೆಲ್‌ನಲ್ಲಿ ವಿವರಿಸಿದ್ದಾರೆ.

Health Tips: ದಿನವೂ ಓಟ್ಸ್ ಸೇವಿಸುತ್ತಿದ್ದೀರಾ? ಈ ವಿಚಾರ ನಿಮಗೆ ತಿಳಿದಿರಲೇ ಬೇಕು

ಓಟ್ಸ್ ಸೇವಿಸುವಾಗ ಈ ಬಗ್ಗೆ ಎಚ್ಚರ ವಹಿಸಿ

Oats: ತೂಕ ಇಳಿಕೆ ಮಾಡುವ ನಿಟ್ಟಿನಲ್ಲಿ ಹಲವರು ಓಟ್ಸ್ ಸೇವನೆಯ ಅಭ್ಯಾಸ ಮಾಡಿಕೊಂಡಿದ್ದಾರೆ. ಇದರಲ್ಲಿ ಹೆಚ್ಚಿನ ನಾರಿನ ಅಂಶ ಇದ್ದು ಹೃದಯಕ್ಕೆ ಒಳ್ಳೆಯದು ಎನ್ನುತ್ತಾರೆ ತಜ್ಞರು. ಫೈಬರ್ ಮತ್ತು ಪ್ರೋಟೀನ್‌ನ ಅತ್ಯುತ್ತಮ ಅಂಶ ಇದರಲ್ಲಿದ್ದು, ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಓಟ್ಸ್ ಪೋಷಕಾಂಶಗಳ ಗಣಿಯಾಗಿದ್ದರೂ, ಅದನ್ನು ತಯಾರಿಸುವಾಗ ಮಾಡುವ ಸಣ್ಣ ತಪ್ಪುಗಳು ದೇಹಕ್ಕೆ ತೊಂದರೆಯನ್ನು ಉಂಟು ಮಾಡುತ್ತವೆ ಎಂದು ಎಚ್ಚರಿಸುತ್ತಾರೆ ವೈದ್ಯರು. ಹಾಗಾದರೆ ಯಾವ ರೀತಿ ಓಟ್ಸ್‌ ಸೇವಿಸಬೇಕು? ಎನ್ನುವ ನಿಮ್ಮ ಪ್ರಸ್ನೆಗೆ ಇಲ್ಲಿದೆ ಉತ್ತರ.

ಬೆಲ್ಲ, ಸಕ್ಕರೆ ಸೇವಿಸದೇ ಇದ್ದರೂ ಮಧುಮೇಹ ಕಂಟ್ರೋಲ್‌ಗೆ ಸಿಗ್ತಿಲ್ವ? ಏನಂತಾರೆ ತಜ್ಞರು? Video

ಆಹಾರದ ಬಗ್ಗೆ ಮಧುಮೇಹಿಗಳಿಗೆ ಇರಲಿ ಎಚ್ಚರಿಕೆ

ಬೆಲ್ಲ, ಸಕ್ಕರೆ ಸೇವನೆ ನಿಲ್ಲಿಸಿದ್ದರೂ ಮಧುಮೇಹ ನಿಯಂತ್ರಣಕ್ಕೆ ಬರುತ್ತಿಲ್ಲ ಇದಕ್ಕೆ ಕಾರಣವೇನು?, ಆಹಾರ ಸೇವನೆಯಲ್ಲಿ ಮಧುಮೇಹಿಗಳು ಮಾಡುವ ತಪ್ಪೇನು? ಮಧುಮೇಹಿಗಳು ಆಹಾರ ಸೇವಿಸುವಾಗ ವಹಿಸಬೇಕಾದ ಎಚ್ಚರಿಕೆ ಕ್ರಮಗಳು ಯಾವುದು ? ಈ ಕುರಿತು ಆಹಾರ ತಜ್ಞರಾದ ಡಾ. ಅನಿತಾ ಅವರು ನೀಡಿರುವ ಮಾಹಿತಿ ಇಲ್ಲಿದೆ.

Dr Sadhanashree Column: ರೋಗಿಗಳು ಕೇಳಿದ ಐದು ಪ್ರಶ್ನೆಗಳು, ಆಯುರ್ವೇದ ಹೇಳಿದ ಐದು ಉತ್ತರಗಳು

ರೋಗಿಗಳು ಕೇಳಿದ ಐದು ಪ್ರಶ್ನೆಗಳು, ಆಯುರ್ವೇದ ಹೇಳಿದ ಐದು ಉತ್ತರಗಳು

ಚಿಕಿತ್ಸಾಲಯದಲ್ಲಿ ಇಂತಹ ಸಂಭಾಷಣೆಗಳು ಹೊಸದೇನಲ್ಲ. ಆರೋಗ್ಯದ ಬಗ್ಗೆ ನಾವು ನಂಬಿ ಕೊಂಡಿರುವ ಅನೇಕ ಸಂಗತಿಗಳು ವಾಸ್ತವದಲ್ಲಿ ಅರ್ಧಸತ್ಯಗಳಾಗಿರುತ್ತವೆ ಅಥವಾ ಕೆಲವೊಮ್ಮೆ ಸಂಪೂರ್ಣ ಭ್ರಮೆಗಳಾಗಿರುತ್ತವೆ. ಯಾರೋ ಹೇಳಿದ್ದು, ಎಲ್ಲೋ ಓದಿದ್ದು, ಸಾಮಾಜಿಕ ಜಾಲತಾಣ ದಲ್ಲಿ ನೋಡಿದ್ದು, ಅಥವಾ ವರ್ಷಗಳಿಂದ ಮನೆಯಲ್ಲಿ ಕೇಳಿಕೊಂಡು ಬಂದದ್ದು- ಇವೆಲ್ಲ ಸೇರಿ ನಮ್ಮ ಆರೋಗ್ಯದ ಕುರಿತ ಅನೇಕ ನಂಬಿಕೆಗಳನ್ನು ರೂಪಿಸಿವೆ.

Fitness Tips: ದೇಹ ಫಿಟ್‌ ಆಗಿರಲು ದಿನಕ್ಕೆ 10,000 ಹೆಜ್ಜೆ ನಡೆದರೆ ಸಾಕೆ? ತಜ್ಞರ ಮಾತಿಗೆ ಕಿವಿ ಕೊಡಿ

ದಿನಕ್ಕೆ 10,000 ಹೆಜ್ಜೆ ನಡೆಯುವುದು ತೂಕ ಇಳಿಕೆಗೆ ಸಹಕಾರಿಯೆ?

Walking 10,000 Steps: ನಡಿಗೆ ಹೃದಯದ ಆರೋಗ್ಯವನ್ನು ಹೆಚ್ಚಿಸಲು, ರಕ್ತದೊತ್ತಡವನ್ನು ಕಡಿಮೆ ಮಾಡಲು ಮತ್ತು ರಕ್ತ ಪರಿಚಲನೆಯನ್ನು ಸುಧಾರಿಸಲು ಪರಿಣಾಮಕಾರಿ ವ್ಯಾಯಾಮ ಎನಿಸಿಕೊಂಡಿದೆ.‌ ಅದರಲ್ಲೂ ದಿನಕ್ಕೆ ಹತ್ತು ಸಾವಿರ ಹೆಜ್ಜೆ ನಡೆಯುವುದರಿಂದ ನಿಮ್ಮ ಫಿಟ್‌ನೆಸ್ ಕಾಯ್ದುಕೊಳ್ಳಬಹುದು ಎಂದು ತಜ್ಞರು ಕೂಡ ಸಲಹೆ ನೀಡುತ್ತಾರೆ. ಹಾಗಾದರೆ ಕೇವಲ 10,000 ಹೆಜ್ಜೆ ನಡೆಯುವುದರಿಂದಲೇ ದೇಹವನ್ನು ಮತ್ತೆ ಫಿಟ್ ಆಗಿಡಬಹುದೆ?

ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳು ಬೇಗ ಮಾತಾಡ್ತಾರೆ? ಏನಂತಾರೆ ತಜ್ಞರು? Video

ಹೆಣ್ಣು ಮಕ್ಕಳು ಬೇಗ ಮಾತನಾಡುತ್ತಾರೆಯೇ?

ಗಂಡು ಮಕ್ಕಳಿಗಿಂತ ಹೆಚ್ಚಾಗಿ ಹೆಣ್ಣು ಮಕ್ಕಳು ಬೇಗ ಮಾತನಾಡುತ್ತಾರೆ ಎನ್ನುವ ನಂಬಿಕೆ ಜನರಲ್ಲಿದೆ. ಮಕ್ಕಳ ಬೆಳವಣಿಗೆಯಲ್ಲಿ ಈ ರೀತಿಯ ವ್ಯತ್ಯಾಸಗಳು ಇವೆಯೇ ? ಅವುಗಳ ಬೆಳವಣಿಗೆಯ ವಿವಿಧ ಹಂತಗಳು ಯಾವುದು, ಯಾವ ಸಮಸ್ಯೆಗಳು ಕಂಡು ಬಂದಾಗ ವೈದ್ಯರನ್ನು ಸಂಪರ್ಕಿಸಬೇಕು ಎನ್ನುವ ಕುರಿತು ತಜ್ಞರು ನೀಡಿರುವ ಸಂಪೂರ್ಣ ಮಾಹಿತಿ ಇಲ್ಲಿದೆ.

Health Tips: ಬೇಸಿಗೆಯಲ್ಲಿ ಕಬ್ಬಿನ ಹಾಲು ಕುಡಿಯುವುದು ಆರೋಗ್ಯಕರವೇ?

ಕಬ್ಬಿನ ಹಾಲು ಕುಡಿದರೆ ಆರೋಗ್ಯಕ್ಕೆ ಏನು ಲಾಭ?

ಹೊರಗಿನ ಬಿಸಿಯ ವಾತಾವರಣಕ್ಕೆ ನಮ್ಮ ದೇಹದ ಮುಕ್ಕಾಲು ಭಾಗದಷ್ಟು ನೀರಿನ ಅಂಶ ದೇಹದಿಂದ ಮಾಯವಾಗುತ್ತದೆ. ಹಾಗಾಗಿ ಸರಿಯಾದ ಪ್ರಮಾಣದಲ್ಲಿ ನೀರು ತರಕಾರಿ ಹಾಗೂ ಹಣ್ಣುಗಳ ಸೇವನೆ ಅಗತ್ಯವಾಗಿ ಬೇಕು. ಇನ್ನು ರಸ್ತೆ ಬದಿಯಲ್ಲಿ ಸಿಗುವ ಒಂದು ಗ್ಲಾಸ್ ತಣ್ಣನೆಯ ಕಬ್ಬಿನ ಹಾಲಂತು ಬಾಯಾರಿಕೆ ಮಾತ್ರವಲ್ಲ ನಮ್ಮ ದಣಿವನ್ನು ಕೂಡ ನಿವಾರಣೆ ಮಾಡುತ್ತದೆ. ದೇಹವನ್ನು ತಂಪಾಗಿಸುವ ಜೊತೆಗೆ ಆಯಾಸವನ್ನು ಕಡಿಮೆ ಮಾಡುತ್ತದೆ.. ಹಾಗಿದ್ರೆ ಕಬ್ಬಿನ ಹಾಲು ದೇಹಕ್ಕೆ ಹಿತವೇ?

ಹೃದಯ ಚಿಕಿತ್ಸೆಯಲ್ಲಿ ಹೊಸ ಕ್ರಾಂತಿ: ಭಾರತಕ್ಕೆ ಬಂತು 3D ಮ್ಯಾಪಿಂಗ್ ಆಧಾರಿತ 'ವೇರಿಪಲ್ಸ್ ಪ್ಲಾಟ್‌ಫಾರ್ಮ್'

ಭಾರತಕ್ಕೆ ಬಂತು 3D ಮ್ಯಾಪಿಂಗ್ ಆಧಾರಿತ 'ವೇರಿಪಲ್ಸ್ ಪ್ಲಾಟ್‌ಫಾರ್ಮ್'

Varipulse Platform: ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ, ಅದರಲ್ಲೂ ವಿಶೇಷವಾಗಿ 'ಏಟ್ರಿಯಲ್ ಫಿಬ್ರಿಲೇಷನ್' ಸಮಸ್ಯೆಯಿರುವ ರೋಗಿಗಳಿಗೆ ಚಿಕಿತ್ಸೆ ನೀಡಲೆಂದೇ 'ಜಾನ್ಸನ್ & ಜಾನ್ಸನ್' ಸಂಸ್ಥೆಯು ಹೊಸ ತಂತ್ರಜ್ಞಾನವೊಂದನ್ನು ಪರಿಚಯಿಸಿದೆ. ಈ ಕುರಿತ ಡಿಟೇಲ್ಸ್‌ ಇಲ್ಲಿದೆ.

Control Belly Fat: ಊಟದ ನಂತರ ನಡಿಗೆ ಅಗತ್ಯವೇ? ತಜ್ಞರು ಹೇಳೋದೇನು?

ಊಟದ ನಂತರದ ನಡಿಗೆ ತೂಕ ಇಳಿಕೆಗೆ ಕಾರಣವಾಗುತ್ತಾ?

Fitness Tips: ಬದಲಾದ ಜೀವನ ಶೈಲಿ ಮತ್ತು ಕಳಪೆ ಆಹಾರವು ಇಂದು ತೂಕ ಏರಿಕೆಗೆ ಕಾರಣವಾಗುತ್ತಿದೆ. ಅದರಲ್ಲೂ ಹೊಟ್ಟೆಯಲ್ಲಿ ತುಂಬಿರುವ ಬೊಜ್ಜು ಕಡಿಮೆ ಮಾಡುವುದು ಕಠಿಣ ಕೆಲಸ. ಇದನ್ನು ಕರಗಿಸಲು ಅನೇಕರು ಜಿಮ್, ಡಯಟ್ ಎಂದು ಪರದಾಡುತ್ತಲೇ ಇರುತ್ತಾರೆ. ಯಾಕೆಂದರೆ ಹೊಟ್ಟೆಯ ಬೊಜ್ಜು, ಮಧುಮೇಹ ಮತ್ತು ಹೃದ್ರೋಗದಂತಹ ದೀರ್ಘಕಾಲದ ಕಾಯಿಲೆಗಳ ಅಪಾಯ ಹೆಚ್ಚಿಸುತ್ತದೆ. ಹೀಗಾಗಿ ತಜ್ಞರು ಈ ಬಗ್ಗೆ ಎಚ್ಚರಿಕೆ ನೀಡಿದ್ದು, ಊಟದ ನಂತರ ಹತ್ತು ನಿಮಿಷದವರೆಗೆ ನಡೆಯುವ ಮೂಲಕ ಬೊಜ್ಜನ್ನು ಕರಗಿಸಬಹುದು ಎಂದು ಸಲಹೆ ನೀಡಿದ್ದಾರೆ.

ಮಧುಮೇಹಿಗಳಿಗೆ ಕಾಡುವ ಚರ್ಮದ ತೊಂದರೆಗಳಿಗೆ ಇದೆ ಪರಿಹಾರ Video

ಮಧುಮೇಹಿಗಳಲ್ಲಿ ಒಣ ಚರ್ಮಕ್ಕೆ ಕಾರಣವೇನು?

ಮಧುಮೇಹಿಗಳಲ್ಲಿ ಹೆಚ್ಚಾಗಿ ಚರ್ಮದ ಸಮಸ್ಯೆಗಳು ಕಂಡು ಬರುತ್ತವೆ. ಇದನ್ನು ನಿವಾರಿಸುವುದು, ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಸಾಧ್ಯವಿದೆ. ಇದಕ್ಕಾಗಿ ಸ್ವಲ್ಪ ಹೆಚ್ಚು ಕಾಳಜಿ ವಹಿಸಬೇಕು ಎನ್ನುತ್ತಾರೆ ಮಧುಮೇಹ ತಜ್ಞರಾದ ಡಾ. ಸುಮನ್. ವಿಶ್ವವಾಣಿ ಹೆಲ್ತ್ ಯೂಟ್ಯೂಬ್ ಚಾನೆಲ್ ನಲ್ಲಿ ಮಧುಮೇಹಿಗಳಲ್ಲಿ ಕಾಡುವ ಚರ್ಮದ ತೊಂದರೆ ಮತ್ತು ಅದಕ್ಕೆ ಪರಿಹಾರ ಈ ಕುರಿತು ನೀಡಿರುವ ಮಾಹಿತಿ ಇಲ್ಲಿದೆ.

Loading...