ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ತಾಜಾ ಸುದ್ದಿ

M J Akbar Column: ಇರಾನ್‌ʼನ ಅಲಿ ಖಮೇನಿ ಸಾವಿನ ನಂತರದ ಜಗತ್ತು

ಇರಾನ್‌ʼನ ಅಲಿ ಖಮೇನಿ ಸಾವಿನ ನಂತರದ ಜಗತ್ತು

ಯುದ್ಧ ಆರಂಭಿಸುವ ನಿರ್ಧಾರದ ಹಿಂದೆ ಲಾಜಿಕ್ ಇರಬೇಕು, ಇಲ್ಲದಿದ್ದರೆ ಅದರಿಂದ ನಷ್ಟವೇ ಹೆಚ್ಚು ಎಂಬುದು ಅನುಭವಿ ಜನರಲ್‌ಗಳಿಗೆ ತಿಳಿದಿದೆಯಾದರೂ, ಸೋಲಿನ ಆತಂಕದಿಂದ ಭಯಗೊಂಡು ಯುದ್ಧ ಘೋಷಿಸುವ ಅಥವಾ ಅದ್ಭುತವಾದ ಜಯದ ಕನಸಿನೊಂದಿಗೆ ಯುದ್ಧ ಸಾರುವ ಆತುರಗೆಟ್ಟ ಬಲಿಷ್ಠ ನಾಯಕರು ಯಾವಾಗಲೂ ತರ್ಕಬದ್ಧವಾಗಿ ಯೋಚಿಸುತ್ತಾರೆ ಎಂದೇನೂ ಇಲ್ಲ.

ಐಪಿಎಲ್‌ಗೆ ಸೇರ್ಪಡೆಯಾದ ಮುಜರಬಾನಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಪಾಕ್‌ ನಿರ್ಧಾರ

ಮುಜರಬಾನಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಪಾಕ್‌ ಕ್ರಿಕೆಟ್‌ ನಿರ್ಧಾರ

Blessing Muzarabani: ಟಿ20 ವಿಶ್ವಕಪ್‌ನಲ್ಲಿ ಮುಜರಬಾನಿ ಉತ್ತಮ ಉತ್ತಮ ಪ್ರದರ್ಶನ ನೀಡಿದ್ದರು. ತಂಡ ಸೂಪರ್ 8 ಹಂತವನ್ನು ತಲುಪಲು ಸಹಾಯ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಮುಜರಬಾನಿ ಆರು ಪಂದ್ಯಗಳಲ್ಲಿ 13 ವಿಕೆಟ್‌ಗಳನ್ನು ಕಬಳಿಸಿದರು. ಕೇವಲ ಒಂದು ವಿಕೆಟ್‌ ಅಂತರದಿಂದ ಜಂಟಿಯಾಗಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಳ್ಳವ ಅವಕಾಶದಿಂದ ವಂಚಿತರಾದರು.

Dhurandhar 2: ನಿಗೂಢವಾಗೆ ಉಳಿದ ಬಡೇ ಸಾಬ್! ಧುರಂಧರ 2ನಲ್ಲಿ ಈ ಪಾತ್ರ ನಿರ್ವಹಿಸೋದು ಯಾರು?

ನಿಗೂಢವಾಗೆ ಉಳಿದ ಬಡೇ ಸಾಬ್! ಈ ಪಾತ್ರ ನಿರ್ವಹಿಸೋದು ಯಾರು?

Dhurandhar 2: ಧುರಂಧರ್ 2 ಬಿಡುಗಡೆಗಾಗಿ ಅಭಿಮಾನಿಗಳು ಕಾಯುತ್ತಿರುವಾಗ, ಒಂದು ಹೊಸ ಸುದ್ದಿಯೊಂದು ವೈರಲ್‌ ಆಗುತ್ತಿದೆ. ಆದಿತ್ಯ ಧರ ನಿರ್ದೇಶನದ ಮತ್ತು ರಣವೀರ್ ಸಿಂಗ್ ನಾಯಕರಾಗಿರುವ ಈ ಚಿತ್ರವು ಈಗಾಗಲೇ ಭಾರಿ ಸಂಚಲನ ಮೂಡಿಸಿದೆ, ಆದರೆ ಬಡೇ ಸಾಹೇಬ್ ಪಾತ್ರದಲ್ಲಿ ನಟಿಸುವ ನಟನ ಬಗ್ಗೆ ಸಾಕಷ್ಟು ವದಂತಿಗಳು ಹಬ್ಬುತ್ತಿವೆ. ಧುರಂಧರ್ 2 ಸಿನಿಮಾದಲ್ಲಿ ಬಡೇ ಸಾಬ್ ಎಂಬ ಪಾತ್ರ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಆದರೆ ಈ ಪಾತ್ರದ ಬಗ್ಗೆ ಟೇಲರ್‌ನಲ್ಲಿ ಯಾವುದೇ ಉತ್ತರ ದೊರೆತಿಲ್ಲ. ಬಹುಶಃ ಈ ಪಾತ್ರವನ್ನು ನೇರವಾಗಿ ಸಿನಿಮಾದಲ್ಲಿಯೇ ತೋರಿಸಬಹುದು ಎನ್ನಲಾಗುತ್ತಿದೆ.

ಹಾರ್ಮೊಜ್‌ನಿಂದ ಭಾರತದತ್ತ ಹೊರಟ ಮತ್ತೆರಡು ಎಲ್‌ಪಿಜಿ ಹಡಗು; ನೌಕಾಪಡೆಯಿಂದ ಬೆಂಗಾವಲು

ಶಿವಾಲಿಕ್‌ ಬಳಿಕ ಭಾರತದತ್ತ ಹೊರಟ ಮತ್ತೆರಡು ಎಲ್‌ಪಿಜಿ ಹಡಗು

40,000 ಮೆಟ್ರಿಕ್ ಟನ್‌ಗಳಿಗೂ ಹೆಚ್ಚು ದ್ರವೀಕೃತ ಪೆಟ್ರೋಲಿಯಂ ಅನಿಲ (LPG)ವನ್ನು ಹೊತ್ತ ಭಾರತೀಯ LPG ವಾಹಕ ಶಿವಾಲಿಕ್ , ಹಾರ್ಮುಜ್ ಜಲಸಂಧಿಯನ್ನು ದಾಟಿ ಮುಕ್ತ ಸಮುದ್ರಕ್ಕೆ ಯಶಸ್ವಿಯಾಗಿ ಸಾಗಿದೆ ಎಂದು ಮೂಲಗಳು ತಿಳಿಸಿದೆ. ಭಾರತೀಯ ಕಾಲಮಾನ ಬೆಳಿಗ್ಗೆ 9.30 ರ ಸುಮಾರಿಗೆ ಮತ್ತೊಂದು ಎಲ್‌ಪಿಜಿ ಹಡಗು ಜಲಸಂಧಿಯ ಮೂಲಕ ಹಾದುಹೋಗುವ ನಿರೀಕ್ಷೆಯಿದೆ.

Sirsi News: ಸಮಾಜದ ಪ್ರಗತಿಯಲ್ಲಿ ಮಹಿಳೆಯರ ಪಾತ್ರ ಅನನ್ಯ: ಶಿರಸಿ ರಂಗಧಾಮದಲ್ಲಿ ಲೋಗೋ ಬಿಡುಗಡೆಗೊಳಿಸಿ ಶಾಸಕ ಭೀಮಣ್ಣ ನಾಯ್ಕ

ಸಮಾಜದ ಪ್ರಗತಿಯಲ್ಲಿ ಮಹಿಳೆಯರ ಪಾತ್ರ ಅನನ್ಯ

ಕಳೆದ ಐದು ದಶಕಗಳಿಂದ ಆದರ್ಶ ವನಿತಾ ಸಮಾಜವು ಮಹಿಳೆಯರನ್ನು ಸಂಘಟಿಸುವಲ್ಲಿ ಮತ್ತು ಅವರಲ್ಲಿನ ಸುಪ್ತ ಪ್ರತಿಭೆ ಗಳನ್ನು ಹೊರ ತರುವಲ್ಲಿ ಶ್ಲಾಘನೀಯ ಕೆಲಸ ಮಾಡುತ್ತಿದೆ. ಸುವರ್ಣ ಮಹೋತ್ಸವದ ಈ ಸಂಭ್ರಮವು ಸಂಸ್ಥೆಯ ಸುದೀರ್ಘ ಮತ್ತು ಅರ್ಥಪೂರ್ಣ ಪಯಣಕ್ಕೆ ಸಾಕ್ಷಿಯಾಗಿದೆ

ಎಲ್‌ಪಿಜಿ ಬಿಕ್ಕಟ್ಟು; ಐಪಿಎಲ್ ನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆಯೇ?

ಸದ್ಯಕ್ಕೆ ಎಲ್‌ಪಿಜಿ ಬಿಕ್ಕಟ್ಟು ಐಪಿಎಲ್‌ಗೆ ಅಡ್ಡಿಯಿಲ್ಲ; ಬಿಸಿಸಿಐ

LPG crisis: ತಮಿಳುನಾಡು, ಅಸ್ಸಾಂ, ಪಶ್ಚಿಮ ಬಂಗಾಳದ ಚುನಾವಣೆ ಇನ್ನೂ ಘೋಷಣೆಯಾಗಿಲ್ಲ. ಚುನಾವಣೆ ವೇಳೆ ಆ ನಗರಗಳಲ್ಲಿ ಪಂದ್ಯ ನಡೆಸುವುದು ಸೂಕ್ತವಲ್ಲದ ಕಾರಣ ಈಗ ಕೇವಲ 20 ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಐಪಿಎಲ್‌ ಆಡಳಿತ ಮಂಡಳಿ ಘೋಷಿಸಿದೆ. ಮಾ.28ರಂದು ಟೂರ್ನಿಗೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚಾಲನೆ ಸಿಗಲಿದೆ.

Ajith Kumar: ಮತ್ತೊಂದು ಹೊಸ ಕಾರು ಖರೀದಿಸಿದ್ರಾ ನಟ ಅಜಿತ್ ಕುಮಾರ್? ಬೆಲೆ ಎಷ್ಟು?

ಮತ್ತೊಂದು ಹೊಸ ಕಾರು ಖರೀದಿಸಿದ್ರಾ ನಟ ಅಜಿತ್ ಕುಮಾರ್?

Mahindra BE 6 Formula E car: ಇರಾನ್ ಜೊತೆಗಿನ ಅಮೆರಿಕ-ಇಸ್ರೇಲ್ ಸಂಘರ್ಷದಿಂದಾಗಿ ದುಬೈನಲ್ಲಿ ಸ್ವಲ್ಪ ಸಮಯ ಸಿಲುಕಿಕೊಂಡಿದ್ದ ತಮಿಳು ನಟ-ರೇಸರ್ ಅಜಿತ್ ಕುಮಾರ್ ಈ ವಾರದ ಆರಂಭದಲ್ಲಿ ಭಾರತಕ್ಕೆ ಮರಳಿದರು. ಭಾರತಕ್ಕೆ ಹಿಂದಿರುಗಿದ ನಂತರ, ಅವರು ಸಾಯಿಬಾಬಾ ದೇವಸ್ಥಾನಕ್ಕೆ ಭೇಟಿ ನೀಡಿದರು. ದುಬೈನಿಂದ ವಾಪಸಾದ ಅಜಿತ್ ಕುಮಾರ್‌ಗೆ ಮಹೀಂದ್ರಾ ಕಂಪನಿಯು ತನ್ನ ಹೊಚ್ಚ ಹೊಸ ಫಾರ್ಮುಲಾ E ಥೀಮ್‌ನ ಎಸ್‌ಯುವಿ ಕಾರನ್ನು ಉಡುಗೊರೆಯಾಗಿ ನೀಡಿದೆ ಎಂದು ವರದಿಯಾಗಿದೆ.

ಇರಾನ್‌-ಇಸ್ರೇಲ್‌ ಯುದ್ಧ: ಖಾರ್ಗ್ ದ್ವೀಪದ ಮೇಲೆ ಅಮೆರಿಕದಿಂದ ಬಾಂಬ್‌ ದಾಳಿ

ಖಾರ್ಗ್ ದ್ವೀಪದ ಮೇಲೆ ಅಮೆರಿಕದಿಂದ ಬಾಂಬ್‌ ದಾಳಿ

ಇರಾನ್‌ನ ಕಾರ್ಯತಂತ್ರದ ಖಾರ್ಗ್ ದ್ವೀಪದ ಮೇಲೆ ಅಮೆರಿಕದ ಪಡೆಗಳು ಪ್ರಬಲ ಬಾಂಬ್ ದಾಳಿ ನಡೆಸಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ದ್ವೀಪದಲ್ಲಿರುವ ಪ್ರತಿಯೊಂದು ಮಿಲಿಟರಿ ಗುರಿಯೂ ನಾಶವಾಗಿದೆ, ಮುಂದೆ ಅದರ ಪ್ರಮುಖ ತೈಲ ಮೂಲಸೌಕರ್ಯವನ್ನು ಗುರಿಯಾಗಿಸಬಹುದು ಎಂದು ಎಚ್ಚರಿಸಿದ್ದಾರೆ.

Amruthadhaare Serial: ಅಪಾಯದಲ್ಲಿ ಮಲ್ಲಿ, ಕಾವಲಾಗ್ತಾನಾ ಗೌತಮ್? ಜೈದೇವ್‌‌ಗೆ ಸೋಲು ಖಚಿತ?

Amruthadhaare Serial: ಅಪಾಯದಲ್ಲಿ ಮಲ್ಲಿ, ಕಾವಲಾಗ್ತಾನಾ ಗೌತಮ್?

Amruthadhaare Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿಗೆ ಸಂಕಷ್ಟ ಎದುರಾಗಿದೆ. ಮಲ್ಲಿ ಪರೀಕ್ಷೆ ಬರೆಯಬಾರದು ಎಂದು ಜೈದೇವ್‌ ಪಣ ತೊಟ್ಟಿದ್ದಾಗಿದೆ. ಹೀಗಾಗಿ ತೊಂದರೆ ಕೊಡುತ್ತಲೇ ಇದ್ದಾನೆ. ರಾತ್ರೋರಾತ್ರಿಯೇ ಮಲ್ಲಿಗೆ ತೊಂದರೆ ಕೊಟ್ಟ ಜೈದೇವ್‌ ಬಗ್ಗೆ, ಮಲ್ಲಿ ಕೆಂಡ ಆಗಿದ್ದಳು. ನೀನು ಉತ್ತರ ಕೊಡಬೇಕಾದದ್ದು ಇಲ್ಲಿ ಅಲ್ಲ ಎಕ್ಸಾಂ ಮೂಲಕ ಉತ್ತರ ಕೊಡಬೇಕು ಎಂದು ಭೂಮಿಕಾ ಮಲ್ಲಿಗೆ ಹೇಳಿದ್ದಾಳೆ. ಈಗ ಎಕ್ಸಾಮ್‌ (Exam) ಹೊರಡಲು ಸಿದ್ದ ಆಗಿದ್ದಾಳೆ.

Toll price hike: ವಾಹನ ಚಾಲಕರಿಗೆ ಶಾಕ್‌: ಏಪ್ರಿಲ್‌ನಿಂದ ಟೋಲ್‌ ದರ ಏರಿಕೆ, ನಗದು ಸಂಪೂರ್ಣ ರದ್ದು

ವಾಹನ ಚಾಲಕರಿಗೆ ಶಾಕ್‌: ಏಪ್ರಿಲ್‌ನಿಂದ ಟೋಲ್‌ ದರ ಏರಿಕೆ, ನಗದು ರದ್ದು

ಏಪ್ರಿಲ್ 1, 2026 ರಿಂದ ಹೊಸ ದರಗಳು ಜಾರಿಗೆ ಬರಲಿವೆ. ವಾರ್ಷಿಕ ಪಾಸ್ ದರವು ಸುಮಾರು ₹3,000 ರಿಂದ ₹3,075 ಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ. ರಾಜ್ಯದ ಸುಮಾರು 66 ಟೋಲ್ ಪ್ಲಾಜಾಗಳಲ್ಲಿ ಶೇ. 3ರಿಂದ 5% ರಷ್ಟು ದರ ಏರಿಕೆಯಾಗುವ ಸಾಧ್ಯತೆಯಿದೆ. ಟೋಲ್ ಪ್ಲಾಜಾಗಳಲ್ಲಿ ನಗದು (Cash) ವ್ಯವಹಾರವನ್ನು ಸಂಪೂರ್ಣವಾಗಿ ನಿಲ್ಲಿಸಿ, ಕೇವಲ FASTag ಮತ್ತು UPI ಮೂಲಕ ಮಾತ್ರ ಪಾವತಿಗೆ ಅವಕಾಶ ನೀಡುವ ಪ್ರಸ್ತಾಪವಿದೆ.

ಅರ್ಹತಾ ಪಂದ್ಯದಲ್ಲಿ ಇಟಲಿ ಮಣಿಸಿದ ಭಾರತ ಮಹಿಳಾ ಹಾಕಿ ತಂಡಕ್ಕೆ ವಿಶ್ವಕಪ್ ಅರ್ಹತೆ

ವಿಶ್ವಕಪ್ ಅರ್ಹತೆ ಪಡೆದ ಭಾರತದ ಮಹಿಳಾ ಹಾಕಿ ತಂಡ

FIH Hockey World Cup Qualifiers: ಎರಡನೇ ಕ್ವಾರ್ಟರ್‌ನಲ್ಲಿ ಭಾರತ 18ನೇ ನಿಮಿಷದಲ್ಲಿ ಮೊದಲ ಪೆನಾಲ್ಟಿ ಕಾರ್ನರ್ ಗಿಟ್ಟಿಸುವಲ್ಲಿ ಯಶಸ್ವಿಯಾಯಿತು. ಆದರೆ ನವನೀತ್ ಕೌರ್ ಅವರ ಹೊಡೆತವನ್ನು ತಡೆಯುವಲ್ಲಿ ಇಟಲಿ ಗೋಲ್‌ಕೀಪರ್ ಲೂಸಿಯಾ ಐನೆಸ್ ಕಾರುಸೊ ಯಶಸ್ವಿಯಾದರು.

ಮೊಜ್ತಬಾ ಖಮೇನಿ ಬಗ್ಗೆ ಮಾಹಿತಿ ಕೊಟ್ಟವರಿಗೆ 10 ಮಿಲಿಯನ್ ಡಾಲರ್ ಬಹುಮಾನ ಘೋಷಿಸಿದ ಅಮೆರಿಕ!

ಮೊಜ್ತಬಾ ಖಮೇನಿ ಬಗ್ಗೆ ಮಾಹಿತಿ ಕೊಟ್ಟವರಿಗೆ 10 ಮಿಲಿಯನ್ ಡಾಲರ್ ಬಹುಮಾನ

ಇರಾನ್‌ನ ಹೊಸ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿ ಮತ್ತು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಗೆ ಸಂಬಂಧಿಸಿದ ಹಲವಾರು ಇತರ ಹಿರಿಯ ಅಧಿಕಾರಿಗಳ ಬಗ್ಗೆ ಮಾಹಿತಿ ನೀಡಿದವರಿಗೆ ಅಮೆರಿಕವು 10 ಮಿಲಿಯನ್ ಡಾಲರ್ ಅಥವಾ ಪ್ರಸ್ತುತ ವಿನಿಮಯ ದರದಲ್ಲಿ 92,47,48,000 ರೂ.ಗಳ ಬಹುಮಾನವನ್ನು ಘೋಷಿಸಿದೆ.

Adilakshmi Purana Serial: ‘ಆದಿ ಲಕ್ಷ್ಮೀ ಪುರಾಣ’ದಿಂದ ಹೊರ ಬಂದಿದ್ದೇಕೆ? ಕಾರಣ ತಿಳಿಸಿದ ನಟಿ ರಕ್ಷಿತಾ

‘ಆದಿ ಲಕ್ಷ್ಮೀ ಪುರಾಣ’ದಿಂದ ಹೊರ ಬಂದಿದ್ದೇಕೆ? ಕಾರಣ ತಿಳಿಸಿದ ನಟಿ ರಕ್ಷಿತಾ

Adilakshmi Purana Serial: ಜೀ ಕನ್ನಡ ವಾಹಿನಿಯಲ್ಲಿ ಇತ್ತೀಚೆಗೆ ಶುರುವಾದ ಧಾರಾವಾಹಿ ಆದಿಲಕ್ಷ್ಮೀ ಪುರಾಣ . ಆದಿಲಕ್ಷ್ಮೀ ಪುರಾಣ ಧಾರಾವಾಹಿಯಿಂದ ಅಮೃತಾ ಪಾತ್ರಧಾರಿ ನಟಿ ರಕ್ಷಿತಾ ಹೊರ ಬಂದಿದ್ದರು. ಆದಿ ಲಕ್ಷ್ಮೀ ಜೋಡಿ ಜೊತೆಗೆ ಸಂಜೀವ್‌ ಮತ್ತು ಅಮೃತಾ ಜೋಡಿ ಕೂಡ ಜನಪ್ರಿಯತೆ ಪಡೆದಿತ್ತು. ಇದೇ ಪಾತ್ರಕ್ಕೆ ‘ಪಾರು’ ಖ್ಯಾತಿಯ ನಟಿ ಮಾನ್ಸಿ ಜೋಶಿ ಅವರು ಬಣ್ಣ ಹಚ್ಚಿದ್ದಾರೆ. . ಇದೀಗ ನಟಿ ರಕ್ಷಿತಾ ಸ್ವತಃ ತಾವು ಸೀರಿಯಲ್ ಬಿಡಲು ಕಾರಣ ಏನೆಂದು ತಿಳಿಸಿದ್ದಾರೆ.

Lokayukta Raid: ಉಡುಪಿ ಅಬಕಾರಿ ಡಿಸಿ ಮೇಲೆ ಲೋಕಾಯುಕ್ತ ದಾಳಿ: 6 ಮನೆ, 11 ನಿವೇಶನ, ಕೋಟಿ ಕೋಟಿ ಅಕ್ರಮ ಆಸ್ತಿ ಪತ್ತೆ!

ಉಡುಪಿ ಅಬಕಾರಿ ಡಿಸಿ ಮೇಲೆ ಲೋಕಾಯುಕ್ತ ದಾಳಿ: ಕೋಟಿ ಕೋಟಿ ಆಸ್ತಿ ಪತ್ತೆ!

ಪ್ರಸ್ತುತ, ದಾಳಿಯ ವೇಳೆ ಪತ್ತೆಯಾದ 31 ಎಕರೆ ಕೃಷಿ ಜಮೀನು, 6 ಮನೆಗಳು ಮತ್ತು 11 ನಿವೇಶನಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಅಧಿಕಾರಿಗಳು ಕೂಲಂಕಷವಾಗಿ ಪರಿಶೀಲಿಸುತ್ತಿದ್ದಾರೆ. ಈ ಆಸ್ತಿಗಳು ಅವರ ಮತ್ತು ಅವರ ಕುಟುಂಬದ ಹೆಸರಿನಲ್ಲಿ ಹೇಗೆ ಬಂತು ಎಂಬುದಕ್ಕೆ ಅಬಕಾರಿ ಡಿಸಿ ಶ್ರೀನಿವಾಸ್ ಅವರಿಂದ ವಿವರ ಕೇಳಲಾಗುತ್ತಿದೆ.

Astro Tips: ಶನಿವಾರ ಈ ಸರಳ ಪರಿಹಾರಗಳಿಂದ ಶನಿ ದೋಷ- ಹಣಕಾಸಿನ ಸಮಸ್ಯೆ ದೂರ!

ಶನಿ ದೋಷ ನಿವಾರಣೆಗೆ ಶನಿವಾರದ ಸರಳ ಪರಿಹಾರ

ಶನಿವಾರ ಶನಿದೇವರ ಪೂಜೆ ಮಾಡುವುದರಿಂದ ಶನಿ ದೋಷದ ಪರಿಣಾಮ ಕಡಿಮೆಯಾಗುತ್ತದೆ ಎಂದು ನಂಬಲಾಗಿದೆ. ಕಪ್ಪು ಎಳ್ಳಿನ ಅರ್ಘ್ಯ, ಶಿವ ಪೂಜೆ ಹಾಗೂ ಹನುಮಂತನ ಆರಾಧನೆ ಮಾಡಿದರೆ ಹಣಕಾಸಿನ ಸಮಸ್ಯೆಗಳು ದೂರವಾಗಬಹುದು ಎಂದು ಧಾರ್ಮಿಕ ನಂಬಿಕೆ ಹೇಳುತ್ತದೆ.

KSRTC buses: ಪ್ರಯಾಣಿಕರಿಗೆ ಗುಡ್ ನ್ಯೂಸ್: ಕೆಎಸ್‌ಆರ್‌ಟಿಸಿಯ ಹೊಸ 115 ಬಸ್‌ಗಳಿಗೆ ಹಸಿರು ನಿಶಾನೆ

ಕೆಎಸ್‌ಆರ್‌ಟಿಸಿ ಹೊಸ 115 ಬಸ್‌ಗಳಿಗೆ ಸಚಿವರಿಂದ ಹಸಿರು ನಿಶಾನೆ

45 ಸಾಮಾನ್ಯ ಬಸ್ಸುಗಳ ಜತೆಗೆ 70 ಪಲ್ಲಕ್ಕಿ ಸ್ಲೀಪರ್‌ ಬಸ್ಸುಗಳನ್ನು ಬಿಡಲಾಗಿದೆ. ವಿಶೇಷವಾಗಿ ದೂರ ಪ್ರಯಾಣಿಸುವ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಆಧುನಿಕ ಸೌಲಭ್ಯಗಳೊಂದಿಗೆ ಈ ಪಲ್ಲಕ್ಕಿ ಬಸ್‌ಗಳನ್ನು ವಿನ್ಯಾಸಗೊಳಿಸಲಾಗಿದೆ. ಈ ನೂತನ ಸ್ಲೀಪರ್ ಬಸ್‌ಗಳಲ್ಲಿ ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ವಿಶೇಷ ವಿನ್ಯಾಸ ಮಾಡಲಾಗಿದೆ.

Vishwavani Editorial: ಈ ಬಾರಿಯ ಯುಗಾದಿ ಹೀಗೇನಾ?

Vishwavani Editorial: ಈ ಬಾರಿಯ ಯುಗಾದಿ ಹೀಗೇನಾ?

ಹಬ್ಬ-ಹರಿದಿನಗಳ ಸಂದರ್ಭದಲ್ಲಿ ‘ವಿನಾಕಾರಣ’ ಬೆಲೆಯೇರಿಕೆ ಆಗುವಂಥ ಬೆಳವಣಿಗೆ ಯನ್ನು ನಮ್ಮ ಜನರು ಈಗಾಗಲೇ ಸಾಕಷ್ಟು ಬಾರಿ ಕಂಡಿದ್ದಾರೆ; ಆದರೆ ಈ ಬಾರಿಯದು ಕೊಂಚ ವಿಲಕ್ಷಣ ಕಾರಣ. ಯಾವುದೋ ಒಂದಿಷ್ಟು ದೇಶಗಳ ‘ದ್ವೇಷ-ಮತ್ಸರ’ಗಳಿಗೆ, ಯುದ್ಧದ ಸಹಭಾಗಿಗಳಲ್ಲದವರೂ ಬೆಲೆ ತೆರಬೇಕಾಗಿ ಬಂದಿರುವುದು ವಿಷಾದನೀಯ.

SSLC Exam: ಮಾ.18ರಿಂದ SSLC ಪರೀಕ್ಷೆ-1 ಆರಂಭ: ಬೆಂಗಳೂರಿನ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ನಿಷೇಧಾಜ್ಞೆ

ಮಾ.18ರಿಂದ SSLC ಪರೀಕ್ಷೆ: ಬೆಂಗಳೂರಿನ ಪರೀಕ್ಷಾ ಕೇಂದ್ರ ಸುತ್ತ ನಿಷೇಧಾಜ್ಞೆ

ಪರೀಕ್ಷೆಗಳನ್ನು ಸುಗಮವಾಗಿ ಹಾಗೂ ಸುವ್ಯವಸ್ಥಿತವಾಗಿ ನಡೆಸುವ ಸಲುವಾಗಿ ಪರೀಕ್ಷಾ ದಿನಗಳಂದು ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀಟರ್ ಪ್ರದೇಶವನ್ನು ನಿಷೇಧಿತ ಸ್ಥಳವೆಂದು ಘೋಷಿಸುವಂತೆ ಹಾಗೂ ನಿಷೇಧಿತ ಪ್ರದೇಶದಲ್ಲಿ ಜೆರಾಕ್ಸ್ / ಸೈಬರ್/ ಕಂಪ್ಯೂಟರ್ ಸೆಂಟರ್‌ಗಳನ್ನು ಮುಚ್ಚುವಂತೆ ಕೋರಲಾಗಿರುತ್ತದೆ.

Mohan Vishwa Column: ಇಂಧನ ನಿರ್ವಹಣೆ: ಯುಪಿಎ V/s ಎನ್ʼಡಿಎ

Mohan Vishwa Column: ಇಂಧನ ನಿರ್ವಹಣೆ: ಯುಪಿಎ V/s ಎನ್ʼಡಿಎ

ಸರಕಾರಿ ನೌಕರರು ಅಥವಾ ದೊಡ್ಡ ವ್ಯವಹಾರಸ್ಥರ ಮನೆಯಲ್ಲಿ ಮಾತ್ರ ಅಡುಗೆ ಅನಿಲ ಹೆಚ್ಚಾಗಿ ಕಾಣಿಸುತ್ತಿತ್ತು. ನಂತರದ ದಿನಗಳಲ್ಲಿ ನಗರ ಪ್ರದೇಶಗಳಲ್ಲಿ ಅಡುಗೆ ಅನಿಲದ ಬಳಕೆ ಯಲ್ಲಿ ಏರಿಕೆಯಾದರೂ, ವರ್ಷಕ್ಕೆ ಮೂರರಿಂದ ಐದು ಸಿಲಿಂಡರ್ ಮಾತ್ರ ಸಿಗುತ್ತಿತ್ತು. ಹಳ್ಳಿ ಜನರಿಗೆ ಅದೂ ಸಿಗುತ್ತಿರಲಿಲ್ಲ.

LPG crisis: ಗ್ಯಾಸ್‌ ಬುಕ್ಕಿಂಗ್‌ಗೆ ಹೊಸ ನಿಯಮ: ಗ್ರಾಮೀಣ ಪ್ರದೇಶದಲ್ಲಿ 45 ದಿನ ಕಾಯಬೇಕು

ಗ್ಯಾಸ್‌ ಬುಕ್ಕಿಂಗ್‌ಗೆ ಹೊಸ ನಿಯಮ: ಗ್ರಾಮೀಣ ಪ್ರದೇಶದಲ್ಲಿ 45 ದಿನ ಕಾಯಬೇಕು

ದೇಶದಲ್ಲಿ ಎಲ್‌ಪಿಜಿ ದಾಸ್ತಾನು ಸಾಕಷ್ಟಿದೆ. ಆದರೆ ಅನಗತ್ಯವಾಗಿ ಜನರು ಬುಕ್ಕಿಂಗ್ ಮಾಡುತ್ತಿರುವುದರಿಂದ ವಿತರಣಾ ಜಾಲದ ಮೇಲೆ ಒತ್ತಡ ಬೀಳುತ್ತಿದೆ. ಈ ಹೊಸ ನಿಯಮದಿಂದಾಗಿ ನಿಜವಾದ ಅಗತ್ಯವಿರುವವರಿಗೆ ಸಕಾಲದಲ್ಲಿ ಗ್ಯಾಸ್ ತಲುಪಲಿದೆ ಎಂದು ಪೆಟ್ರೋಲಿಯಂ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

Ravi Sajangadde Column: ಕ್ರಿಕೆಟ್‌ ಆತಿಥ್ಯಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣ ಮತ್ತೆ ಸಜ್ಜು !

ಕ್ರಿಕೆಟ್‌ ಆತಿಥ್ಯಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣ ಮತ್ತೆ ಸಜ್ಜು !

ಹಲವಾರು ಇವೆಂಟ್‌ಗಳ ಕೇಂದ್ರಬಿಂದುವಾಗಿದ್ದ ಚಿನ್ನಸ್ವಾಮಿ ಕ್ರೀಡಾಂಗಣವು ಜನರಿಲ್ಲದೆ, ಯಾವುದೇ ಸಮಾರಂಭ-ಮನರಂಜನಾ ಕಾರ್ಯಕ್ರಮಗಳು ನಡೆಯದೆ ಖಾಲಿ ಹೊಡೆದು, ಬಿಕೋ ಎನ್ನುತ್ತಿತ್ತು. ವೆಂಕಟೇಶ್ ಪ್ರಸಾದ್ ಅಧ್ಯಕ್ಷತೆಯಲ್ಲಿ ಕೆಎಸ್‌ಸಿಎಗೆ ಹೊಸ ಆಡಳಿತ ಮಂಡಳಿ ಬಂದು ಮೂರು ತಿಂಗಳಾದವು. ಆ ತಂಡದ ನಿರಂತರ ಮಾತುಕತೆ, ಪ್ರಯತ್ನದ ಫಲವಾಗಿ ಕೊನೆಗೂ ಈ ಬಾರಿಯ ಐಪಿಎಲ್ ಪಂದ್ಯಾವಳಿಯ ಕೆಲವು ಪಂದ್ಯಗಳನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಸಲು ಅನುಮತಿ ದೊರಕಿದೆ!

Vishweshwar Bhat Column: ಟೆನಿಸ್‌ ಆಟಗಾರರು ಏಕೆ ಕೂಗುತ್ತಾರೆ ?

Vishweshwar Bhat Column: ಟೆನಿಸ್‌ ಆಟಗಾರರು ಏಕೆ ಕೂಗುತ್ತಾರೆ ?

ದೇಹದಾರ್ಢ್ಯ ಪಟುಗಳು ಭಾರ ಎತ್ತುವಾಗ ಉಸಿರನ್ನು ಹಿಡಿದಿಟ್ಟುಕೊಳ್ಳುತ್ತಾರೆ, ಇದನ್ನು ‘ವಲ್ಸಾಲ್ವಾ ಮ್ಯಾನ್ಯೂವರ್’ ಎನ್ನಲಾಗುತ್ತದೆ. ಟೆನಿಸ್‌ನಲ್ಲಿ ಚೆಂಡನ್ನು ಹೊಡೆಯುವಾಗ ಇದೇ ಪ್ರಕ್ರಿಯೆ ನಡೆಯುತ್ತದೆ. ಶ್ವಾಸಕೋಶದಲ್ಲಿನ ಗಾಳಿಯನ್ನು ಬಲವಂತವಾಗಿ ಹೊರ ಹಾಕುವಾಗ ಧ್ವನಿಪೆಟ್ಟಿಗೆಯ ಮೂಲಕ ಹಾದುಹೋಗುವ ಗಾಳಿಯು ಶಬ್ದವನ್ನು ಉಂಟು ಮಾಡುತ್ತದೆ.

Roopa Gururaj Column: ಆದಿ ಶಂಕರಾಚಾರ್ಯ ಮತ್ತು ಮಂಡನ ಮಿಶ್ರ ಸಂವಾದ

ಆದಿ ಶಂಕರಾಚಾರ್ಯ ಮತ್ತು ಮಂಡನ ಮಿಶ್ರ ಸಂವಾದ

ಶಂಕರಾಚಾರ್ಯರು ಮೊದಲು, ಕರ್ಮ ಮೀಮಾಂಸೆಯ ದೈತ್ಯ ವಿದ್ವಾಂಸರಾದ ಕುಮಾ ರಿಲ ಭಟ್ಟರನ್ನು ಭೇಟಿಯಾಗಲು ಹೋಗಿದ್ದರು. ಆದರೆ ಭಟ್ಟರು ಆಗ ಅಂತ್ಯಕಾಲ ದಲ್ಲಿದ್ದರು. ಅವರು ಶಂಕರರಿಗೆ, “ನನ್ನ ಸಿದ್ಧಾಂತವನ್ನು ಸಮರ್ಥವಾಗಿ ಮಂಡಿಸಬಲ್ಲ ಮತ್ತು ನಿನ್ನ ಅದ್ವೈತ ಸಿದ್ಧಾಂತಕ್ಕೆ ಸರಿಯಾದ ಸವಾಲು ನೀಡಬಲ್ಲ ಒಬ್ಬನೇ ವ್ಯಕ್ತಿ ಎಂದರೆ ಅದು ಮಂಡನ ಮಿಶ್ರ.

ಸ್ಟ್ರಾಬೆರಿಯ ಆರೋಗ್ಯ ಲಾಭಗಳ ಬಗ್ಗೆ ನೀವು ತಿಳಿಯಲೇ ಬೇಕು!

ಸ್ಟ್ರಾಬೆರಿಯ ಆರೋಗ್ಯ ಲಾಭ ತಿಳಿದಿದೆಯೇ?

Health Tips: ವಿಟಮಿನ್‌ ಸಿ ಹೇರಳವಾಗಿರುವ ಸ್ಟ್ರಾಬೆರಿಯ ಈ ಹಣ್ಣಿನಲ್ಲಿ ನಾರು ಸಹ ಭರಪೂರ ಇರುತ್ತದೆ. ರಸಭರಿತವಾಗಿದ್ದು, ತಿಂದಷ್ಟಕ್ಕೂ ದಾಹ ತಣಿಸುತ್ತದೆ. ತನ್ನದೇ ವಿಶಿಷ್ಟ ಪರಿಮಳ ಹೊಂದಿರುವ ಈ ಬೆರ್ರಿಯನ್ನು ಇಷ್ಟಪಟ್ಟು ತಿನ್ನುವವರು ಬಹಳಷ್ಟು ಜನರಿದ್ದಾರೆ. ತರಹೇವಾರಿ ಪೋಷಕಾಂಶಗಳನ್ನು ಹೊಂದಿರುವ ಈ ಹಣ್ಣನ್ನು ತಿನ್ನುವುದರ ಲಾಭಗಳೇನು ಎಂಬುದನ್ನು ತಿಳಿಯೋಣ.

Loading...