ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಮನರಂಜನೆ

Dhurandhar 2: ನಿಗೂಢವಾಗೆ ಉಳಿದ ಬಡೇ ಸಾಬ್! ಧುರಂಧರ 2ನಲ್ಲಿ ಈ ಪಾತ್ರ ನಿರ್ವಹಿಸೋದು ಯಾರು?

ನಿಗೂಢವಾಗೆ ಉಳಿದ ಬಡೇ ಸಾಬ್! ಈ ಪಾತ್ರ ನಿರ್ವಹಿಸೋದು ಯಾರು?

Dhurandhar 2: ಧುರಂಧರ್ 2 ಬಿಡುಗಡೆಗಾಗಿ ಅಭಿಮಾನಿಗಳು ಕಾಯುತ್ತಿರುವಾಗ, ಒಂದು ಹೊಸ ಸುದ್ದಿಯೊಂದು ವೈರಲ್‌ ಆಗುತ್ತಿದೆ. ಆದಿತ್ಯ ಧರ ನಿರ್ದೇಶನದ ಮತ್ತು ರಣವೀರ್ ಸಿಂಗ್ ನಾಯಕರಾಗಿರುವ ಈ ಚಿತ್ರವು ಈಗಾಗಲೇ ಭಾರಿ ಸಂಚಲನ ಮೂಡಿಸಿದೆ, ಆದರೆ ಬಡೇ ಸಾಹೇಬ್ ಪಾತ್ರದಲ್ಲಿ ನಟಿಸುವ ನಟನ ಬಗ್ಗೆ ಸಾಕಷ್ಟು ವದಂತಿಗಳು ಹಬ್ಬುತ್ತಿವೆ. ಧುರಂಧರ್ 2 ಸಿನಿಮಾದಲ್ಲಿ ಬಡೇ ಸಾಬ್ ಎಂಬ ಪಾತ್ರ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಆದರೆ ಈ ಪಾತ್ರದ ಬಗ್ಗೆ ಟೇಲರ್‌ನಲ್ಲಿ ಯಾವುದೇ ಉತ್ತರ ದೊರೆತಿಲ್ಲ. ಬಹುಶಃ ಈ ಪಾತ್ರವನ್ನು ನೇರವಾಗಿ ಸಿನಿಮಾದಲ್ಲಿಯೇ ತೋರಿಸಬಹುದು ಎನ್ನಲಾಗುತ್ತಿದೆ.

Ajith Kumar: ಮತ್ತೊಂದು ಹೊಸ ಕಾರು ಖರೀದಿಸಿದ್ರಾ ನಟ ಅಜಿತ್ ಕುಮಾರ್? ಬೆಲೆ ಎಷ್ಟು?

ಮತ್ತೊಂದು ಹೊಸ ಕಾರು ಖರೀದಿಸಿದ್ರಾ ನಟ ಅಜಿತ್ ಕುಮಾರ್?

Mahindra BE 6 Formula E car: ಇರಾನ್ ಜೊತೆಗಿನ ಅಮೆರಿಕ-ಇಸ್ರೇಲ್ ಸಂಘರ್ಷದಿಂದಾಗಿ ದುಬೈನಲ್ಲಿ ಸ್ವಲ್ಪ ಸಮಯ ಸಿಲುಕಿಕೊಂಡಿದ್ದ ತಮಿಳು ನಟ-ರೇಸರ್ ಅಜಿತ್ ಕುಮಾರ್ ಈ ವಾರದ ಆರಂಭದಲ್ಲಿ ಭಾರತಕ್ಕೆ ಮರಳಿದರು. ಭಾರತಕ್ಕೆ ಹಿಂದಿರುಗಿದ ನಂತರ, ಅವರು ಸಾಯಿಬಾಬಾ ದೇವಸ್ಥಾನಕ್ಕೆ ಭೇಟಿ ನೀಡಿದರು. ದುಬೈನಿಂದ ವಾಪಸಾದ ಅಜಿತ್ ಕುಮಾರ್‌ಗೆ ಮಹೀಂದ್ರಾ ಕಂಪನಿಯು ತನ್ನ ಹೊಚ್ಚ ಹೊಸ ಫಾರ್ಮುಲಾ E ಥೀಮ್‌ನ ಎಸ್‌ಯುವಿ ಕಾರನ್ನು ಉಡುಗೊರೆಯಾಗಿ ನೀಡಿದೆ ಎಂದು ವರದಿಯಾಗಿದೆ.

Amruthadhaare Serial: ಅಪಾಯದಲ್ಲಿ ಮಲ್ಲಿ, ಕಾವಲಾಗ್ತಾನಾ ಗೌತಮ್? ಜೈದೇವ್‌‌ಗೆ ಸೋಲು ಖಚಿತ?

Amruthadhaare Serial: ಅಪಾಯದಲ್ಲಿ ಮಲ್ಲಿ, ಕಾವಲಾಗ್ತಾನಾ ಗೌತಮ್?

Amruthadhaare Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿಗೆ ಸಂಕಷ್ಟ ಎದುರಾಗಿದೆ. ಮಲ್ಲಿ ಪರೀಕ್ಷೆ ಬರೆಯಬಾರದು ಎಂದು ಜೈದೇವ್‌ ಪಣ ತೊಟ್ಟಿದ್ದಾಗಿದೆ. ಹೀಗಾಗಿ ತೊಂದರೆ ಕೊಡುತ್ತಲೇ ಇದ್ದಾನೆ. ರಾತ್ರೋರಾತ್ರಿಯೇ ಮಲ್ಲಿಗೆ ತೊಂದರೆ ಕೊಟ್ಟ ಜೈದೇವ್‌ ಬಗ್ಗೆ, ಮಲ್ಲಿ ಕೆಂಡ ಆಗಿದ್ದಳು. ನೀನು ಉತ್ತರ ಕೊಡಬೇಕಾದದ್ದು ಇಲ್ಲಿ ಅಲ್ಲ ಎಕ್ಸಾಂ ಮೂಲಕ ಉತ್ತರ ಕೊಡಬೇಕು ಎಂದು ಭೂಮಿಕಾ ಮಲ್ಲಿಗೆ ಹೇಳಿದ್ದಾಳೆ. ಈಗ ಎಕ್ಸಾಮ್‌ (Exam) ಹೊರಡಲು ಸಿದ್ದ ಆಗಿದ್ದಾಳೆ.

Adilakshmi Purana Serial: ‘ಆದಿ ಲಕ್ಷ್ಮೀ ಪುರಾಣ’ದಿಂದ ಹೊರ ಬಂದಿದ್ದೇಕೆ? ಕಾರಣ ತಿಳಿಸಿದ ನಟಿ ರಕ್ಷಿತಾ

‘ಆದಿ ಲಕ್ಷ್ಮೀ ಪುರಾಣ’ದಿಂದ ಹೊರ ಬಂದಿದ್ದೇಕೆ? ಕಾರಣ ತಿಳಿಸಿದ ನಟಿ ರಕ್ಷಿತಾ

Adilakshmi Purana Serial: ಜೀ ಕನ್ನಡ ವಾಹಿನಿಯಲ್ಲಿ ಇತ್ತೀಚೆಗೆ ಶುರುವಾದ ಧಾರಾವಾಹಿ ಆದಿಲಕ್ಷ್ಮೀ ಪುರಾಣ . ಆದಿಲಕ್ಷ್ಮೀ ಪುರಾಣ ಧಾರಾವಾಹಿಯಿಂದ ಅಮೃತಾ ಪಾತ್ರಧಾರಿ ನಟಿ ರಕ್ಷಿತಾ ಹೊರ ಬಂದಿದ್ದರು. ಆದಿ ಲಕ್ಷ್ಮೀ ಜೋಡಿ ಜೊತೆಗೆ ಸಂಜೀವ್‌ ಮತ್ತು ಅಮೃತಾ ಜೋಡಿ ಕೂಡ ಜನಪ್ರಿಯತೆ ಪಡೆದಿತ್ತು. ಇದೇ ಪಾತ್ರಕ್ಕೆ ‘ಪಾರು’ ಖ್ಯಾತಿಯ ನಟಿ ಮಾನ್ಸಿ ಜೋಶಿ ಅವರು ಬಣ್ಣ ಹಚ್ಚಿದ್ದಾರೆ. . ಇದೀಗ ನಟಿ ರಕ್ಷಿತಾ ಸ್ವತಃ ತಾವು ಸೀರಿಯಲ್ ಬಿಡಲು ಕಾರಣ ಏನೆಂದು ತಿಳಿಸಿದ್ದಾರೆ.

Landlord Movie OTT: ಯುಗಾದಿ ಹಬ್ಬಕ್ಕೆ ಬರ್ತಿದ್ದಾನೆ ‘ಲ್ಯಾಂಡ್​​ಲಾರ್ಡ್’! ಸ್ಟ್ರೀಮಿಂಗ್‌ ಎಲ್ಲಿ?

ಯುಗಾದಿ ಹಬ್ಬಕ್ಕೆ ಬರ್ತಿದ್ದಾನೆ ‘ಲ್ಯಾಂಡ್​​ಲಾರ್ಡ್’!

Landlord Movie OTT: ದುನಿಯಾ ವಿಜಯ್ ಅವರ ‘ಲ್ಯಾಂಡ್​​ಲಾರ್ಡ್’ ಸಿನಿಮಾ ಇತ್ತೀಚೆಗಷ್ಟೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಜಡೇಶ್ ಕೆ ಹಂಪಿ ನಿರ್ದೇಶನ ಮಾಡಿದ್ದ ಈ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಸಾಧಾರಣ ಯಶಸ್ಸು ಗಳಿಸಿತ್ತು. ಜಡೇಶ್ ಕೆ ಹಂಪಿ ನಿರ್ದೇಶನದ ಈ ಚಿತ್ರ 1980ರಲ್ಲಿ ಗ್ರಾಮೀಣ ಕರ್ನಾಟಕದಲ್ಲಿ ನಡೆಯುವ ಕಥೆಯನ್ನು ಹೇಳುತ್ತದೆ. ಈ ಚಿತ್ರವು ಸಾರಥಿ ಫಿಲಂಸ್ ಲಾಂಛನದಲ್ಲಿ ನಿರ್ಮಾಣಗೊಂಡಿದೆ.

Vinay Gowda: ಸರಿಯಾಗಿ ನಾಯಿಗಳ ಹೆಸರೇ ಗೊತ್ತಿಲ್ಲ; ಇಂಥವರನ್ನ ಒದ್ದು ಓಡಿಸಬೇಕು: ಡಾಗ್‌ ಸತೀಶ್‌ ಬಗ್ಗೆ ವಿನಯ್‌ ಗೌಡ ಗರಂ

ಇಂಥವರನ್ನ ಒದ್ದು ಓಡಿಸಬೇಕು: ಡಾಗ್‌ ಸತೀಶ್‌ ಬಗ್ಗೆ ವಿನಯ್‌ ಗೌಡ ಗರಂ

Dog Satish: ಶೌಚಾಲಯದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿರುವ ದೃಶ್ಯಗಳಿಗೆ ಕಿಚ್ಚ ಸುದೀಪ್ ಅವರ ಹಾಡು ಹಾಕಿ ಡಾಗ್ ಸತೀಶ್ ಸುದೀಪ್ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದ್ದರು. ಇದಾಗಲೇ ಅವರ ಬಗ್ಗೆ ದೂರುಗಳೂ ದಾಖಲಾಗಿವೆ. , ಬಿಗ್‌ಬಾಸ್‌ ವಿಜೇತ ವಿನಯ್‌ ಗೌಡ ಅವರು ಡಾಗ್‌ ಸತೀಶ್‌ ಬಗ್ಗೆ ಸಂದರ್ಶನವೊಂದರಲ್ಲಿ ಅತ್ಯಂತ ಖಡಕ್‌ ಆಗಿ ಮಾತಾಡಿದ್ದಾರೆ.

MGR : ಎಂಜಿಆರ್ ಬಗ್ಗೆ ಕೀಳು ಮಾತು; ಜನರ ಬಳಿ ಕೈಮುಗಿದು ಕ್ಷಮೆ ಕೇಳಿದ ರಾಜೇಂದ್ರ ಪ್ರಸಾದ್

ಎಂಜಿಆರ್ ಬಗ್ಗೆ ಕೀಳು ಮಾತು; ಕ್ಷಮೆ ಕೇಳಿದ ರಾಜೇಂದ್ರ ಪ್ರಸಾದ್

actor Rajendra Prasad : ತೆಲುಗು ಚಿತ್ರರಂಗಕ್ಕೆ ನೀಡಿದ ಕೊಡುಗೆಗಳಿಗೆ ಹೆಸರುವಾಸಿಯಾದ ನಟ ರಾಜೇಂದ್ರ ಪ್ರಸಾದ್, ಇತ್ತೀಚೆಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ತಮಿಳುನಾಡಿನ ಖ್ಯಾತ ನಟ-ರಾಜಕಾರಣಿ ಎಂಜಿ ರಾಮಚಂದ್ರನ್ ಅಲಿಯಾಸ್ ಎಂಜಿಆರ್ ವಿರುದ್ಧ ನೀಡಿದ ವಿವಾದಾತ್ಮಕ ಹೇಳಿಕೆಗಳಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜೇಂದ್ರ ಪ್ರಸಾದ್, ಕಾಂತಾರಾವ್ ಅವರ ನಟನೆಯನ್ನು ಕೊಂಡಾಡುತ್ತಾ ಕಾಂತಾರಾವ್ ಮಾಡುತ್ತಿದ್ದ ಸಿನಿಮಾ, ಅವರ ಜನಪದ ಶೈಲಿನ ನಟನೆಯನ್ನು ನೋಡಿ ಎಂಜಿಆರ್ ಅಂಥಹವರೇ ಪ್ಯಾಂಟಿನಲ್ಲಿ ಮೂತ್ರವಿಸರ್ಜನೆ ಮಾಡಿಕೊಳ್ಳುತ್ತಿದ್ದರು ಎಂಬ ಹೇಳಿಕೆ ವಿವಾದವಾಗಿತ್ತು.

South OTT releases this week: ಈ ವಾರ OTTಗೆ ಎಂಟ್ರಿ ಕೊಟ್ಟ ಟಾಪ್ ಸೌತ್‌ ಸಿನಿಮಾಗಳಿವು!

ಈ ವಾರ OTTಗೆ ಎಂಟ್ರಿ ಕೊಟ್ಟ ಟಾಪ್ ಸೌತ್‌ ಸಿನಿಮಾಗಳಿವು!

South OTT releases this week: ಮಾರ್ಚ್ 2026 ರ ಎರಡನೇ ಶುಕ್ರವಾರ ಸಿನಿಮಾ ಪ್ರಿಯರಿಗೆ ಒಂದು ಹಬ್ಬದ ಸಂಭ್ರಮವಾಗಿತ್ತು, ಏಕೆಂದರೆ ವಿವಿಧ ಪ್ರಕಾರಗಳ ದಕ್ಷಿಣ ಭಾರತದ ಚಲನಚಿತ್ರಗಳು ನೆಟ್‌ಫ್ಲಿಕ್ಸ್, ಪ್ರೈಮ್ ವಿಡಿಯೋ ಮತ್ತು ಜೀ 5 ನಂತಹ OTT ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಥಮ ಪ್ರದರ್ಶನಗೊಂಡವು. ಕಪಲ್ ಫ್ರೆಂಡ್ಲಿಯಿಂದ ಹಿಡಿದು ಮಲಯಾಳಂ ಪೆನ್ನಮ್ ಪೊರಟ್ಟುಮ್ ಮತ್ತು ಹಾಸ್ಯ ಮಹಾಸಾಯುಲಕು ವಿಘ್ನಯಪ್ತಿವರೆಗೆ, ಪ್ರತಿಯೊಂದು ರೀತಿಯ ಚಲನಚಿತ್ರ ಒಟಿಟಿಗೆ ಎಂಟ್ರಿ ಕೊಟ್ಟಿದೆ. ಈ ವಾರ ಯಾವೆಲ್ಲ ಸೌತ್‌ ಸಿನಿಮಾಗಳು ಬಂದಿವೆ ನೋಡೋಣ.

Cocktail 2: 'ಧುರಂಧರ್ 2' ಜೊತೆಗೆ 'ಕಾಕ್‌ಟೇಲ್ 2' ಟೀಸರ್ ಬಿಡುಗಡೆ; ಫಸ್ಟ್ ಲುಕ್ ಪೋಸ್ಟರ್ ಔಟ್‌

'ಧುರಂಧರ್ 2' ಜೊತೆಗೆ 'ಕಾಕ್‌ಟೇಲ್ 2' ಟೀಸರ್ ಬಿಡುಗಡೆ

Cocktail 2: ಹೋಮಿ ಅದಜಾನಿಯಾ ಅವರ ಕಾಕ್‌ಟೇಲ್ 2 ಟೀಸರ್ ಆದಿತ್ಯ ಧಾರ್ ಅವರ ಧುರಂಧರ್: ದಿ ರಿವೆಂಜ್ ಜೊತೆಗೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಶಾಹಿದ್ ಕಪೂರ್, ರಶ್ಮಿಕಾ ಮಂದಣ್ಣ ಮತ್ತು ಕೃತಿ ಸನೋನ್ ಅಭಿನಯದ ಮುಂಬರುವ ಚಿತ್ರ ಕಾಕ್‌ಟೇಲ್ 2 ರ ನಿರ್ಮಾಪಕರು ಇಂದು ಫಸ್ಟ್ ಲುಕ್ ಅನ್ನು ಹಂಚಿಕೊಂಡಿದ್ದಾರೆ. ಮಾರ್ಚ್ 18 ರಂದು ಚಿತ್ರಮಂದಿರಗಳಲ್ಲಿ ಮಾತ್ರ ಟೀಸರ್ ಬಿಡುಗಡೆಯಾಗಲಿದ್ದು, ಅಭಿಮಾನಿಗಳು ಬಹುನಿರೀಕ್ಷಿತ ಚಿತ್ರದ ಮೊದಲ ನೋಟವನ್ನು ಚಿತ್ರಮಂದಿರಗಳಲ್ಲಿ ವೀಕ್ಷಿಸಲಿದ್ದಾರೆ.

‌Thalapathy Vijay: ಚಿತ್ರರಂಗಕ್ಕೆ ಗುಡ್‌ಬೈ ಹೇಳಿ ʻಟಿವಿಕೆʼ ಪಕ್ಷ ಸೇರುತ್ತಾರಾ ನಟಿ ತ್ರಿಷಾ ಕೃಷ್ಣನ್? ʻಕೊಡಿʼ ಸಿನಿಮಾ ಕಥೆ ನಿಜವಾಗುತ್ತಾ?

ಸಿನಿಮಾಗೆ ಗುಡ್‌ಬೈ ಹೇಳಿ ‘ಟಿವಿಕೆ’ ಪಕ್ಷ ಸೇರ್ತಾರಾ ನಟಿ ತ್ರಿಷಾ?

Trisha Politics Entry: ತಮಿಳು ನಟ ದಳಪತಿ ವಿಜಯ್ ಸ್ಥಾಪಿಸಿರುವ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷಕ್ಕೆ ನಟಿ ತ್ರಿಷಾ ಕೃಷ್ಣನ್ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿ ಕಾಲಿವುಡ್‌ನಲ್ಲಿ ಕೇಳಿಬಂದಿದೆ. ವಿಜಯ್ ಅವರ ಕೌಟುಂಬಿಕ ಕಲಹ ಮತ್ತು ವಿಚ್ಛೇದನದ ಚರ್ಚೆಗಳ ನಡುವೆಯೇ, ತ್ರಿಷಾ ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ ಎಂಬುದು ಈ ವದಂತಿಗೆ ಪುಷ್ಟಿ ನೀಡಿದೆ.

Neena Gupta: 66ನೇ ವಯಸ್ಸಿನಲ್ಲಿ ನೀನಾ ಗುಪ್ತಾ ಗರ್ಭಿಣಿ? ವದಂತಿ ಬಗ್ಗೆ ನಟಿ  ಹೇಳಿದ್ದೇನು?

66ನೇ ವಯಸ್ಸಿನಲ್ಲಿ ನೀನಾ ಗುಪ್ತಾ ಗರ್ಭಿಣಿ? ನಟಿ ಹೇಳಿದ್ದೇನು?

Neena Gupta: ಬಾಲಿವುಡ್​ನ ಹಿರಿಯ ನಟಿ ನೀನಾ ಗುಪ್ತಾ 66ನೇ ವಯಸ್ಸಿನಲ್ಲಿ ಪ್ರೆಗ್ನೆಂಟ್ ಆಗಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಹೈದರಾಬಾದ್‌ನಲ್ಲಿ ನಡೆದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ವಿವಾಹ ಆರತಕ್ಷತೆಯಲ್ಲಿ ಗುಪ್ತಾ ಭಾಗವಹಿಸಿದ ನಂತರ, ಫೋಟೋಗಳು ಮತ್ತು ವೀಡಿಯೊಗಳಲ್ಲಿ ನಟಿಗೆ ಬೇಬಿ ಬಂಪ್‌ ಬಂದಿದೆ ಎಂಬ ಸುದ್ದಿ ಸಾಕಷ್ಟು ವೈರಲ್‌ ಆಯ್ತು. ಈ ಎಲ್ಲಾ ಮಾತುಗಳಿಗೆ ಇದೀಗ ನಟಿ ಸತ್ಯದ ಕುರಿತು ಸ್ಪಷ್ಟನೆ ನೀಡಿದ್ದಾರೆ.

Varalaxmi Sarathkumar: ಫ್ಯಾಕ್ಟರಿ ರೀತಿ ಮಕ್ಕಳನ್ನ ಹಡೆಯಬೇಡಿ; ನಟಿ ವರಲಕ್ಷ್ಮಿ ಶರತ್‌ಕುಮಾರ್

ಫ್ಯಾಕ್ಟರಿ ರೀತಿ ಮಕ್ಕಳನ್ನ ಹಡೆಯಬೇಡಿ; ನಟಿ ವರಲಕ್ಷ್ಮಿ ಶರತ್‌ಕುಮಾರ್

Varalaxmi Sarathkumar: ನಟಿ ವರಲಕ್ಷ್ಮಿ ಶರತ್‌ಕುಮಾರ್ ತಮ್ಮ ಚೊಚ್ಚಲ ತೆಲುಗು ನಿರ್ದೇಶನದ ಎಸ್ ಸರಸ್ವತಿಯ ಪ್ರಚಾರದಲ್ಲಿ ನಿರತರಾಗಿದ್ದಾರೆ . ಸಂದರ್ಶನದಲ್ಲಿ , , ಇಂದಿನ ಕಾಲದಲ್ಲಿ ಮಕ್ಕಳನ್ನು ಸಾಕಲು ಬೇಕಾದ ಹಣಕಾಸಿನ ಯೋಜನೆಗಳ ಬಗ್ಗೆ ಗಂಭೀರವಾಗಿ ಮಾತನಾಡಿದ್ದಾರೆ. ಸಹನಟಿ ಪ್ರಿಯಾಮಣಿ ಮತ್ತು ಲಕ್ಷ್ಮಿ ಮಂಚು ಸೇರಿದಂತೆ ಕೆಲವರು ಅವರ ಮಾತನ್ನು ಒಪ್ಪಿಕೊಂಡರೆ, ಇತರರು ನಟಿಯನ್ನು ಟೀಕಿಸಿದರು.

ʻಶ್ರೀಗಂಧದ ಗುಡಿʼ ಸೀರಿಯಲ್‌ಗೆ ವಿದಾಯ ಹೇಳಿದ ಸಂಜನಾ ಬುರ್ಲಿ; ಇನ್ಮುಂದೆ ಚಂದನಾ ಪಾತ್ರದಲ್ಲಿ ಮಿಂಚೋದ್ಯಾರು?

'ಶ್ರೀಗಂಧದ ಗುಡಿ' ಸೀರಿಯಲ್‌ಗೆ ಸಂಜನಾ ಬುರ್ಲಿ ಗುಡ್‌ಬೈ; ಹೊಸ ನಟಿ ಎಂಟ್ರಿ!

Sanjana Burli: ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿ ‘ಶ್ರೀಗಂಧದ ಗುಡಿ’ಯ ನಾಯಕಿ ಸಂಜನಾ ಬುರ್ಲಿ ಅವರು ಸೀರಿಯಲ್‌ನಿಂದ ಹೊರಬಿದ್ದಿದ್ದಾರೆ. ಇತ್ತೀಚೆಗಷ್ಟೇ ವೈದ್ಯ ಸಮರ್ಥ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿರುವ ಸಂಜನಾ, ಮದುವೆಯ ತಯಾರಿಗಾಗಿ ನಟನೆಯಿಂದ ವಿರಾಮ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಇನ್ನು ಮುಂದೆ ಚಂದನಾ ಪಾತ್ರವನ್ನು ‘ಶುಭಸ್ಯ ಶೀಘ್ರಂ’ ಖ್ಯಾತಿಯ ನಟಿ ಸ್ನೇಹಾ ಮಂಜುನಾಥ್ ನಿಭಾಯಿಸಲಿದ್ದಾರೆ ಎಂಬ ಸುದ್ದಿ ಕಿರುತೆರೆ ವಲಯದಲ್ಲಿ ಭಾರಿ ಸದ್ದು ಮಾಡುತ್ತಿದೆ.

Raani Serial Kannada: ಎಲ್ಲರ ಜೊತೆಗೂ ಬೆರೆಯೋ ಚಿನಕುರುಳಿ `ರಾಣಿ' ಲೆಕ್ಕಾಚಾರದಲ್ಲೂ ಪರ್ಫೆಕ್ಟ್!

Raani : ಎಲ್ಲರ ಜೊತೆಗೂ ಬೆರೆಯೋ `ರಾಣಿ' ಲೆಕ್ಕಾಚಾರದಲ್ಲೂ ಪರ್ಫೆಕ್ಟ್!

Raani Serial: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ರಾಣಿ' ಧಾರಾವಾಹಿ ಬಗ್ಗೆ ವೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ತನ್ನ ಮುಗ್ಧ ನಟನೆಯಿಂದ ಎಲ್ಲರ ಮನಗೆದ್ದಿರುವ ಪುಟಾಣಿ ರಾಣಿ, ಈಗ ಮನೆ ಮನೆಯಲ್ಲೂ ಸದ್ದು ಮಾಡುತ್ತಿದ್ದಾಳೆ. ಪುಟಾಣಿ ರಾಣಿಯ ಪ್ರತಿಯೊಂದು ಹೆಜ್ಜೆಯೂ ಭಾವುಕ ಕ್ಷಣಗಳಿಗೆ ಸಾಕ್ಷಿಯಾಗುತ್ತಿದೆ. ಕೃಷ್ಣ ಜನ್ಮಾಷ್ಟಮಿಯ ದಿನವೇ ಹುಟ್ಟಿದ ರಾಣಿ (Raani), ತನ್ನ ಭವಿಷ್ಯದ ಬಗ್ಗೆ ದೊಡ್ಡ ಕನಸನ್ನೇ ಕಟ್ಟಿಕೊಂಡಿದ್ದಾಳೆ. ಈಗ ಮಾವನಅಂಗಡಿಯಲ್ಲಿ ತನ್ನ ಬುದ್ದಿವಂತಿಕೆ ತೋರಿದ್ದಾಳೆ.

Amruthadhaare Serial: ಮಲ್ಲಿ ಸಪೋರ್ಟ್‌ಗೆ ನಿಂತ ಗೌತಮ್ ದಿವಾನ್! ಜೈದೇವ್‌ ಕಥೆ ಏನು?

Amruthadhaare: ಮಲ್ಲಿ ಸಪೋರ್ಟ್‌ಗೆ ನಿಂತ ಗೌತಮ್ ದಿವಾನ್!

Amruthadhaare Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ ಮಲ್ಲಿಗೆ ಜೈದೇವ್‌ ಕೊಡುವ ಕಾಟ ಜೋರಾಗಿದೆ. ಹೇಗಾದ್ರೂ ಮಾಡಿ ಮಲ್ಲಿ ಎಕ್ಸಾಮ್‌ ಹೋಗದಂತೆ ತಡೆ ಮಾಡ್ತಿದ್ದಾನೆ ಜೈದೇವ್‌ . ಹಿಂದಿನ ದಿನ ಭರ್ಜರಿ ಕಾಟ ಕೊಟ್ಟಿದ್ದಲ್ಲದೇ ಈಗ ಮಲ್ಲಿ ಮೇಲೆ ರೌಡಿಗಳನ್ನು ಬಿಟ್ಟಿದ್ದಾನೆ. ಆದರೆ ಇದು ಪ್ಲ್ಯಾನ್‌ ಪ್ಲಾಪ್‌ ಆಗಿದೆ.

21 ವರ್ಷಗಳ ಬಳಿಕ 'ಆಕಾಶ್' ಸಿನಿಮಾ ರೀ-ರಿಲೀಸ್; ಪುನೀತ್‌ ರಾಜ್‌ಕುಮಾರ್‌ ಅಭಿಮಾನಿ ನಮ್ರತಾ ಗೌಡ ಏನಂದ್ರು ನೋಡಿ

'ಆಕಾಶ್' ಸಿನಿಮಾ ನೋಡಲು ಬಂದ ʻಅಪ್ಪು ಅಭಿಮಾನಿʼ ನಮ್ರತಾ ಗೌಡ ಏನಂದ್ರು?

Akash Movie Re-release: ʻಪವರ್ ಸ್ಟಾರ್ʼ ಪುನೀತ್ ರಾಜ್‌ಕುಮಾರ್ ಅವರ ಹುಟ್ಟುಹಬ್ಬದ (ಮಾ.17) ಅಂಗವಾಗಿ, ಅವರು ಅಭಿನಯಿಸಿದ್ದ ಎವರ್‌ಗ್ರೀನ್ ಹಿಟ್ ಸಿನಿಮಾ 'ಆಕಾಶ್' ಮಾರ್ಚ್ 13ರಂದು ರೀ-ರಿಲೀಸ್ ಆಗಿದೆ. ಈ ಸಿನಿಮಾಗೆ ಅಭಿಮಾನಿಗಳಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಮ್ರತಾ ಗೌಡ, ಪವಿ ಪೂವಪ್ಪ ಮತ್ತು ಸುಕೃತಾ ನಾಗ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ಚಿತ್ರಮಂದಿರಕ್ಕೆ ಬಂದು ಈ ಸಿನಿಮಾ ನೋಡಿದರು.

ಅಪ್ಪನ ಹೆಸರನ್ನು ಕೈಬಿಟ್ಟು ವಿಜಯ್‌ಗೆ ಶಾಕ್‌ ನೀಡಿದ್ರಾ ಪುತ್ರ ಜೇಸನ್ ಸಂಜಯ್‌? ತಾಯಿ ಸಂಗೀತ ಪರ ನಿಂತ ದಳಪತಿ ಮಗ

ʻದಳಪತಿʼ ವಿಜಯ್‌ಗೆ ಪುತ್ರನಿಂದಲೇ ಶಾಕ್? ಜೇಸನ್‌ ಸಂಜಯ್‌ ಮಾಡಿದ್ದೇನು?

Thalapathy Vijay: ನಟ ವಿಜಯ್ ಅವರ ಕೌಟುಂಬಿಕ ಬದುಕಿನ ಸಮಸ್ಯೆಗಳು ಈಗ ಬೀದಿಗೆ ಬಂದಿವೆ. ಪತ್ನಿ ಸಂಗೀತ ಅವರಿಂದ ದೂರವಿರುವ ಸುದ್ದಿಗಳ ನಡುವೆಯೇ, ಪುತ್ರ ಜೇಸನ್ ಸಂಜಯ್ ತಮ್ಮ ಹೆಸರಿನಲ್ಲಿದ್ದ ತಂದೆಯ ಇನಿಶಿಯಲ್ ‘V’ ತೆಗೆದುಹಾಕಿ, ತಾಯಿ ಹೆಸರಿನ ‘S’ ಸೇರಿಸಿಕೊಂಡಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ.

Ranveer Singh: ನೀವಿನ್ನೂ ʻಧುರಂಧರ್‌ 1ʼ ಸಿನಿಮಾ ನೋಡಿಲ್ವಾ? ಥಿಯೇಟರ್‌ನಲ್ಲಿ ಮಿಸ್‌ ಮಾಡಿಕೊಂಡ ಪ್ರೇಕ್ಷಕರಿಗೆ ಮತ್ತೊಂದು ಚಾನ್ಸ್‌ ಕೊಟ್ಟ ಚಿತ್ರತಂಡ

1 ಸಾವಿರ ಸ್ಕ್ರೀನ್‌ಗಳಲ್ಲಿ ‘ಧುರಂಧರ್: ಪಾರ್ಟ್ 1’ ರೀ-ರಿಲೀಸ್;‌ ಹೊಸ ದಾಖಲೆ

Dhurandhar 1 Re-Release: ರಣವೀರ್ ಸಿಂಗ್ ನಟನೆಯ 'ಧುರಂಧರ್ 2' ಮಾರ್ಚ್ 19ರಂದು ತೆರೆಗೆ ಬರಲು ಸಜ್ಜಾಗಿರುವ ಬೆನ್ನಲ್ಲೇ, ಚಿತ್ರತಂಡವು ಭಾಗ-1 ಅನ್ನು ಮಾರ್ಚ್ 13ರಂದು ವಿಶ್ವಾದ್ಯಂತ ರೀ-ರಿಲೀಸ್ ಮಾಡಿದೆ. ಈ ಚಿತ್ರವನ್ನು ಥಿಯೇಟರ್‌ನಲ್ಲಿ ಮಿಸ್ ಮಾಡಿಕೊಂಡವರಿಗೆ ಮತ್ತೊಂದು ಅವಕಾಶ ಸಿಕ್ಕಂತಾಗಿದೆ.

ಮೊನಾಲಿಸಾ ಜೊತೆ ಫರ್ಮಾನ್‌ ಖಾನ್‌ ಕಲ್ಯಾಣ; ʻಈ ಮದುವೆಗೆ ನಮ್ಮ ಒಪ್ಪಿಗೆ ಇಲ್ಲ, ಇದು ನಮಗೆ ಬೇಸರ ತರಿಸಿದೆʼ ಎಂದ ವರನ ತಂದೆ ಜಫರ್‌ ಅಲಿ

ಮೊನಾಲಿಸಾ ಜೊತೆ ಮದುವೆಯಾದ ಫರ್ಮಾನ್‌ ಖಾನ್ ಬಗ್ಗೆ ತಂದೆಗೆ ಅಸಮಾಧಾನ‌

Monalisa Marriage: ಕೇರಳದಲ್ಲಿ ನಡೆದ ಮೊನಾಲಿಸಾ ಭೋಂಸ್ಲೆ ಮತ್ತು ಫರ್ಮಾನ್ ಖಾನ್ ಅವರ ಅಂತರ್ಧರ್ಮೀಯ ವಿವಾಹಕ್ಕೆ ಈಗ ವರನ ಕಡೆಯಿಂದಲೂ ತೀವ್ರ ವಿರೋಧ ವ್ಯಕ್ತವಾಗಿದೆ. ಫರ್ಮಾನ್ ತಂದೆ ಜಫರ್ ಅಲಿ ಅವರು, "ಈ ಮದುವೆಯ ಬಗ್ಗೆ ನಮಗೆ ಮೊದಲೇ ತಿಳಿದಿರಲಿಲ್ಲ, ನಮಗೆ ಈ ಸಂಬಂಧ ಇಷ್ಟವಿಲ್ಲ" ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.

'ಧುರಂಧರ್ 2' ಬಾಕ್ಸ್ ಆಫೀಸ್ ಧಮಾಕಾ; 8300 ಪೇಯ್ಡ್‌ ಪ್ರೀಮಿಯರ್‌ ಶೋ, 4 ಲಕ್ಷ ಟಿಕೆಟ್‌ ಸೋಲ್ಡ್ ಔಟ್, 50 ಕೋಟಿ ರೂ. ಗಳಿಕೆ!

ಪೇಯ್ಡ್‌ ಪ್ರೀಮಿಯರ್ ಶೋಗಳಿಂದಲೇ 21 ಕೋಟಿ ರೂ. ಬಾಚಿದ 'ಧುರಂಧರ್ 2'!

Dhurandhar 2: ಬಾಲಿವುಡ್ ನಟ ರಣವೀರ್ ಸಿಂಗ್ ನಟನೆಯ 'ಧುರಂಧರ್ 2' ಸಿನಿಮಾ ಬಿಡುಗಡೆಗೂ ಮುನ್ನವೇ ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆಯುತ್ತಿದೆ. ಮಾರ್ಚ್ 18ರ ಪೇಯ್ಡ್ ಪ್ರೀಮಿಯರ್ ಶೋಗಳಿಗೆ ಈಗಾಗಲೇ 4 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿದ್ದು, ಭಾರತವೊಂದರಲ್ಲೇ 21.50 ಕೋಟಿ ರೂ. ಗಳಿಕೆಯಾಗಿದೆ.

Jr NTR: ತೂಕ ಇಳಿಸಿಕೊಂಡ ಜೂನಿಯರ್ ಎನ್‌ಟಿಆರ್‌; ಫ್ಯಾನ್ಸ್‌ ಶಾಕ್‌

ತೂಕ ಇಳಿಸಿಕೊಂಡ ಜೂನಿಯರ್ ಎನ್‌ಟಿಆರ್‌; ಫ್ಯಾನ್ಸ್‌ ಶಾಕ್‌

Jr NTR: ಜೂನಿಯರ್ ಎನ್‌ಟಿಆರ್‌ ಅವರು ಇತ್ತೀಚಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಇದೀಗ ಅವರ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ. ಅದು ಕೂಡ ಅವರ ತೂಕದ ಬಗ್ಗೆ. ಅನೇಕ ಅಭಿಮಾನಿಗಳು (Fans) ಕಳವಳ ವ್ಯಕ್ತಪಡಿಸಿದ್ದಾರೆ. ತಮ್ಮ ಫಿಟ್‌ನೆಸ್‌ ಬಗ್ಗೆ ವಿಶೇಷ ಗಮನ ಹರಿಸಿದ ಎನ್‌ಟಿಆರ್, 'ಟೆಂಪರ್' ಸಿನಿಮಾ ಸಮಯದಲ್ಲಿ ಪರ್ಫೆಕ್ಟ್ ಫಿಟ್ ಲುಕ್‌ನಲ್ಲಿ (Look) ಕಾಣಿಸಿಕೊಂಡು ಎಲ್ಲರನ್ನೂ ಅಚ್ಚರಿಗೊಳಿಸಿದರು. ಆ ಚಿತ್ರದ ನಂತರ ಎನ್‌ಟಿಆರ್ ಸತತ ಯಶಸ್ಸಿನ ಹಾದಿಯಲ್ಲಿದ್ದಾರೆ.

Naga Chaitanya: ಹೊಸ ಹೇರ್ ಸ್ಟೈಲ್, ರಗಡ್‌ ಲುಕ್‌; ನಾಗ ಚೈತನ್ಯ ಸಿಕ್ಸ್ ಪ್ಯಾಕ್ ಫೋಟೋ ವೈರಲ್‌

ನಾಗ ಚೈತನ್ಯ ಸಿಕ್ಸ್ ಪ್ಯಾಕ್ ಫೋಟೋ ವೈರಲ್‌

Naga Chaitanya: ದಕ್ಷಿಣ ಭಾರತದ ಜನಪ್ರಿಯ ನಟ ನಾಗ ಚೈತನ್ಯ ಅವರ ಮುಂಬರುವ ಪೌರಾಣಿಕ ಥ್ರಿಲ್ಲರ್ ಚಿತ್ರ ವೃಷಕರ್ಮ. ಈ ಚಿತ್ರಕ್ಕಾಗಿ ಸಿಕ್ಸ್ ಪ್ಯಾಕ್ ಮಾಡಿಕೊಂಡು ಗಮನ ಸೆಳೆಯುತ್ತಿದ್ದಾರೆ. ಇತ್ತೀಚಿನ ಲುಕ್‌ನ ಫೋಟೋಗಳನ್ನು (Look) ಸಾಮಾಜಿಕ ಮಾಧ್ಯಮದಲ್ಲಿ (Social Media) ಹಂಚಿಕೊಂಡಿದ್ದಾರೆ.

ʻಜನ ನಾಯಗನ್‌ʼ ಚಿತ್ರಕ್ಕೆ ಎದುರಾಯ್ತು ಮತ್ತೊಂದು ಸಂಕಷ್ಟ; 120 ಕೋಟಿ ರೂ. ಡೀಲ್‌ ಕ್ಯಾನ್ಸಲ್‌ ಆಯ್ತಾ? ಏನಿದು ಹೊಸ ಮ್ಯಾಟರ್?‌

Thalapathy Vijay: 'ಜನ ನಾಯಗನ್' 120 ಕೋಟಿ ರೂ. ಡೀಲ್ ಕ್ಯಾನ್ಸಲ್ ಆಗತ್ತಾ?

ದಳಪತಿ ವಿಜಯ್ ಅಭಿನಯದ ಕೊನೆಯ ಸಿನಿಮಾ 'ಜನ ನಾಯಗನ್'ಗೆ ಸಂಕಷ್ಟಗಳ ಸರಮಾಲೆಯೇ ಮುಂದುವರಿದಿದೆ. ಸೆನ್ಸಾರ್ ಮಂಡಳಿಯ ವಿಳಂಬದಿಂದಾಗಿ ಚಿತ್ರದ ಬಿಡುಗಡೆ ಪದೇ ಪದೇ ಮುಂದೂಡಲ್ಪಡುತ್ತಿದೆ. ಈ ವಿಳಂಬದಿಂದ ಬೇಸತ್ತಿರುವ ಅಮೆಜಾನ್ ಪ್ರೈಮ್ ವಿಡಿಯೋ, ಈ ಹಿಂದೆ ಮಾಡಿಕೊಂಡಿದ್ದ 120 ಕೋಟಿ ರೂಪಾಯಿಗಳ ಬೃಹತ್ ಒಪ್ಪಂದವನ್ನು ರದ್ದುಗೊಳಿಸಿದೆ ಎಂಬ ವದಂತಿ ದಟ್ಟವಾಗಿ ಹರಡಿದೆ.

Suryavamsha Serial : ಮುಕ್ತಾಯದ ಹಂತದಲ್ಲಿ ‘ಸೂರ್ಯವಂಶ’ ಧಾರಾವಾಹಿ; ಅನಿರುದ್ಧ್‌ ಜತ್ಕರ್‌ ಭಾವುಕ ಪೋಸ್ಟ್‌

ಮುಕ್ತಾಯದ ಹಂತದಲ್ಲಿ ‘ಸೂರ್ಯವಂಶ’ ಧಾರಾವಾಹಿ; ಅನಿರುದ್ಧ್‌ ಭಾವುಕ ಪೋಸ್ಟ್‌

Suryavamsha Serial : ಕನ್ನಡ ಕಿರುತೆರೆಯಲ್ಲಿ ಹೊಸ ಸಂಚಲನ ಸೃಷ್ಟಿಸಿದ ಧಾರಾವಾಹಿ ‘ಜೊತೆ ಜೊತೆಯಲಿ’. ಈ ಸೀರಿಯಲ್‌ನಲ್ಲಿ ಆರ್ಯವರ್ಧನ್ ಆಗಿ ಅನಿರುದ್ಧ್ ಜತ್ಕರ್‌ ಮಿಂಚಿದ್ದರು. ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅಭಿನಯದ ಸೂಪರ್‌ ಡ್ಯೂಪರ್‌ ಹಿಟ್‌ ಸಿನಿಮಾ ‘ಸೂರ್ಯವಂಶ’ . ಈ ಸಿನಿಮಾ 1999 ರಲ್ಲಿ ತೆರೆಗೆ ಬಂದಿತ್ತು. ಇದೇ ಹೆಸರಿನ ‘ಸೂರ್ಯವಂಶ’ಧಾರಾವಾಹಿ ಮೂಲಕ ಮತ್ತೆ ಕಮ್‌ ಬ್ಯಾಕ್‌ ಆಗಿದ್ದರು ಅನಿರುದ್ಧ್‌. ‘ಉದಯ ಟಿವಿ’ಯ ‘ಸೂರ್ಯವಂಶ’ ಶೀಘ್ರದಲ್ಲೇ ತನ್ನ ಪಯಣವನ್ನ ಮುಕ್ತಾಯಗೊಳಿಸಲಿದೆ. ಈ ಬಗ್ಗೆ ಸ್ವತಃ ಅನಿರುದ್ಧ್ ಅವರು‌ ಸೋಶಿಯಲ್‌ ಮೀಡಿಯಾದಲ್ಲಿ ಭಾವನಾತ್ಮಕ ಪೋಸ್ಟ್‌ ಹಂಚಿಕೊಳ್ಳುವ ಮೂಲಕ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ.

Loading...