ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದೇಶ

ದೇಶದಲ್ಲಿ ಎಲ್‌ಪಿಜಿ ಕೊರತೆಯಾಗಿಲ್ಲ, ವಿತರಣೆಗೆ ಬೇಕಾಗುವಷ್ಟು ಇದೆ: ಕೇಂದ್ರ ಸರ್ಕಾರ ಸ್ಪಷ್ಟನೆ

ದೇಶದಲ್ಲಿ ಎಲ್‌ಪಿಜಿ ಕೊರತೆ ಇಲ್ಲ

ಪಶ್ಚಿಮ ಏಷ್ಯಾ ಸಂಘರ್ಷದ ಪರಿಣಾಮವಾಗಿ ದೇಶದಲ್ಲಿ ಏಕಾಏಕಿ ತೈಲ, ಅಡುಗೆ ಅನಿಲ ಬೇಡಿಕೆ ಹೆಚ್ಚಿತ್ತು. ಇದರ ಪರಿಣಾಮ ವಿತರಣೆಯಲ್ಲಿ ಉಂಟಾದ ವ್ಯತ್ಯಯದಿಂದ ದೇಶಾದ್ಯಂತ ತೈಲ, ಅಡುಗೆ ಅನಿಲ ಬಿಕ್ಕಟ್ಟು ಕಾಣಿಸಿಕೊಂಡಿದೆ. ದೇಶದಲ್ಲಿ ಎಲ್‌ಪಿಜಿ ಕೊರತೆ ಇಲ್ಲ. ಈ ಕುರಿತು ವಿತರಕರಿಂದ ಯಾವುದೇ ದೂರುಗಳು ಬಂದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆಯನ್ನು ನೀಡಿದೆ.

LPG Crisis: ಮಂಗಳೂರಿಗೆ ಬಂತು 26 ಸಾವಿರ ಟನ್‌ ಎಲ್‌ಪಿಜಿ ತುಂಬಿದ ಹಡಗು

ಮಂಗಳೂರಿಗೆ ಬಂತು 26 ಸಾವಿರ ಟನ್‌ ಎಲ್‌ಪಿಜಿ ತುಂಬಿದ ಹಡಗು

ಪೆಟ್ರೋಲಿಯಂ ಡೀಲರ್‌ಗಳ ಅಂದಾಜಿನ ಪ್ರಕಾರ, ಈ ಎರಡು ಹಡಗುಗಳಿಂದ ಒಟ್ಟು ಸುಮಾರು 92,700 ಮೆಟ್ರಿಕ್ ಟನ್ ಎಲ್‌ಪಿಜಿ ಲಭ್ಯವಾಗಲಿದ್ದು, ಇದು ದೇಶದ ಅವಶ್ಯಕತೆಗೆ ಕೇವಲ 2 ದಿನಗಳ ಮಟ್ಟಿಗೆ ಮಾತ್ರ ಸಾಕಾಗಬಹುದು. ಇದನ್ನೆಲ್ಲ ಮೀರಿ, ಇನ್ನೂ 20ಕ್ಕೂ ಹೆಚ್ಚು ಭಾರತೀಯ ಹಡಗುಗಳು ಹೊರ್ಮುಜ್ ಜಲಸಂಧಿಯಲ್ಲಿ ಸಿಲುಕಿಕೊಂಡಿವೆ.

LPG crisis: ಕೆವೈಸಿ ಮಾಡಿಸದಿದ್ರೆ ಎಲ್‌ಪಿಜಿ ಸಿಲಿಂಡರ್‌ ಸಿಗಲ್ಲ!

ಕೆವೈಸಿ ಮಾಡಿಸದಿದ್ರೆ ಎಲ್‌ಪಿಜಿ ಸಿಲಿಂಡರ್‌ ಸಿಗಲ್ಲ!

ಮಾರ್ಚ್ 15ರಿಂದ ಬಯೋಮೆಟ್ರಿಕ್ ಆಧಾರ್ ದೃಢೀಕರಣ ಅಥವಾ ಕೆವೈಸಿ (KYC) ಮಾಡಿಸುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ. ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ಗ್ರಾಹಕರಿಗೆ ಮಾತ್ರ ಇನ್ನು ಮುಂದೆ ಎಲ್‌ಪಿಜಿ ಸೇವೆಗಳು ಮತ್ತು ಸಬ್ಸಿಡಿ ಸೌಲಭ್ಯಗಳು ದೊರೆಯಲಿವೆ.

ಭಾರತಕ್ಕೆ ಎಲ್‌ಪಿಜಿ ಹೊತ್ತು ತರುವ ನೌಕೆಗೆ ಮಾತ್ರ  ಹೊರ್ಮುಜ್ ಜಲಸಂಧಿಯ ದಾರಿ ಬಿಡಲು ಇರಾನ್ ಒಪ್ಪಿಗೆ

ಹೊರ್ಮುಜ್ ಜಲಸಂಧಿಯಲ್ಲಿ ಭಾರತಕ್ಕೆ ದಾರಿ ಬಿಡಲು ಒಪ್ಪಿದ ಇರಾನ್

ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಉಂಟಾಗಿರುವ ಉದ್ವಿಗ್ನತೆಯ ಪರಿಣಾಮ ಇರಾನ್ ಹೊರ್ಮುಜ್ ಜಲಸಂಧಿಯಲ್ಲಿ ಸರಕು ಸಾಗಣೆಗೆ ಅಡ್ಡಿ ಪಡಿಸಿತ್ತು. ಆದರೆ ಇದೀಗ ಅದು ಭಾರತಕ್ಕೆ ಸರಕು ಸಾಗಿಸುವ ನೌಕೆಗಳನ್ನು ಬಿಡಲು ಒಪ್ಪಿಕೊಂಡಿದೆ. ಈ ಕುರಿತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಭಾನುವಾರ ತಿಳಿಸಿದ್ದಾರೆ.

NHPC Recruitment: ಎಂಜಿನಿಯರಿಂಗ್ ಪದವೀಧರರಿಗೆ ಉದ್ಯೋಗಾವಕಾಶ; 81 ಟ್ರೈನಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಎಂಜಿನಿಯರಿಂಗ್ ಪದವೀಧರರಿಗೆ ಸರ್ಕಾರಿ ಉದ್ಯೋಗಾವಕಾಶ

Job Guide: ರಾಷ್ಟ್ರೀಯ ಜಲ ವಿದ್ಯುತ್ ನಿಗಮ (NHPC) ಸಂಸ್ಥೆಯಲ್ಲಿ 81 ಟ್ರೈನಿ ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಸಿವಿಲ್, ಎಲೆಕ್ಟ್ರಿಕಲ್ ಮತ್ತು ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವೀಧರರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಏಪ್ರಿಲ್ 6.

ನದಿ, ಕಾಡು, ಬೆಟ್ಟಗಳ ನಡುವೆ ಮತಗಟ್ಟೆ: ಎಲ್ಲರಿಗೂ ಮತದಾನದ ಹಕ್ಕು ಒದಗಿಸಲು ಚುನಾವಣಾ ಆಯೋಗದ ಸಾಹಸ

ಮತದಾನದ ಹಕ್ಕು ಒದಗಿಸಲು ಚುನಾವಣಾ ಆಯೋಗದ ಸಾಹಸ

ಭಾರತೀಯ ಚುನಾವಣಾ ಆಯೋಗವು ಅಸ್ಸಾಂ, ಕೇರಳ, ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಪುದುಚೇರಿ ವಿಧಾನಸಭಾ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದೆ. “ಯಾವ ಮತದಾರನು ಹಿಂದೆ ಉಳಿಯಬಾರದು” ಎಂಬ ಉದ್ದೇಶದೊಂದಿಗೆ ಅರಣ್ಯ, ಗುಡ್ಡ ಮತ್ತು ನದಿ ಪ್ರದೇಶಗಳಲ್ಲೂ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ. ಮತದಾನ ಏಪ್ರಿಲ್ 9ರಿಂದ ಆರಂಭವಾಗಿ ಫಲಿತಾಂಶ ಮೇ 4ರಂದು ಪ್ರಕಟವಾಗಲಿದೆ.

ಗ್ಯಾಸ್ ಸಂಪರ್ಕ ಕಡಿತಗೊಳಿಸುವುದಾಗಿ ಬೆದರಿಸಿ ವೃದ್ಧೆಗೆ ಬರೋಬ್ಬರಿ 21 ಲಕ್ಷ ರುಪಾಯಿ ವಂಚನೆ

ಗ್ಯಾಸ್ ಸಂಪರ್ಕ ಹೆಸರಲ್ಲಿ ವೃದ್ಧೆಗೆ ಬರೋಬ್ಬರಿ 21 ಲಕ್ಷ ರು. ವಂಚನೆ

Cyber Crime: ಪಿಎನ್‌ಜಿ ಗ್ಯಾಸ್ ಸಂಪರ್ಕವನ್ನು ಕಡಿತಗೊಳಿಸುವುದಾಗಿ ಬೆದರಿಕೆ ಹಾಕಿ ಮಹಿಳೆಯೊಬ್ಬರಿಗೆ 21 ಲಕ್ಷ ರುಪಾಯಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ಈ ಘಟನೆ ನಡೆದಿದೆ. ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್‌ನ ಉದ್ಯೋಗಿಯೆಂದು ಹೇಳಿಕೊಂಡು ಕಿಡಿಗೇಡಿ 61 ವರ್ಷದ ಮಹಿಳೆಗೆ ವಂಚಿಸಿದ್ದಾರೆ.

ಕೇರಳ ವಿಧಾನಸಭಾ ಚುನಾವಣೆ; ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ: ನೆಮೊಮ್‌ನಿಂದ ರಾಜೀವ್ ಚಂದ್ರಶೇಖರ್ ಕಣಕ್ಕೆ

ಕೇರಳ ಚುನಾವಣೆ: ಬಿಜೆಪಿ ಮೊದಲ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

Kerala polls: ಅಸ್ಸಾಂ, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಹಾಗೂ ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿ ವಿಧಾನಸಭೆಗಳಿಗೆ ಏಪ್ರಿಲ್ 9ರಿಂದ ಮತದಾನ ಪ್ರಕ್ರಿಯೆ ಆರಂಭವಾಗಲಿದ್ದು, ಮೇ 4ರಂದು ಮತ ಎಣಿಕೆ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಲಿಸಿದೆ. ಇದೀಗ ಬಿಜೆಪಿ 47 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದೆ. ಈ ಪಟ್ಟಿಯಲ್ಲಿ ಹಲವು ಪ್ರಭಾವಿ ನಾಯಕರಿದ್ದಾರೆ.

ಕನ್ನಡದ ಅಮರೇಶ್ ನುಗಡೋಣಿ ಸೇರಿ 24 ಲೇಖಕರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಘೋಷಣೆ

24 ಲೇಖಕರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

Sahitya Akademi Awards: ಇಂಗ್ಲಿಷ್ ಲೇಖಕಿ ಮತ್ತು ಮಾಜಿ ರಾಯಭಾರಿ ನವತೇಜ್ ಸರ್ನಾ ಮತ್ತು ಕನ್ನಡ ಬರಹಗಾರ ಅಮರೇಶ್ ನುಗಡೋಣಿ ಸೇರಿದಂತೆ 24 ಭಾಷೆಗಳ ಲೇಖಕರಿಗೆ 2025ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಘೋಷಣೆಯಾಗಿದೆ. ಮಾನ್ಯತೆ ಪಡೆದಿರುವ 24 ಭಾರತೀಯ ಭಾಷೆಗಳ ಸಾಹಿತ್ಯಕ್ಕೆ ಈ ಪ್ರಶಸ್ತಿ ನೀಡಲಾಗುತ್ತದೆ.

ಪಂಚ ವಿಧಾನಸಭೆಗಳ ಕದನಕ್ಕೆ ಮುಹೂರ್ತ ಫಿಕ್ಸ್‌; ಯಾವ ರಾಜ್ಯದಲ್ಲಿ ಯಾವ ಪಕ್ಷಗಳು ಮುನ್ನಡೆ ಸಾಧಿಸಲಿವೆ? ಚುನಾವಣೆ ಪೂರ್ವ ಸಮೀಕ್ಷೆ ಹೇಳೋದೇನು?

ಪಂಚರಾಜ್ಯಗಳಲ್ಲಿ ಯಾವ ಪಕ್ಷ ಮುನ್ನಡೆ ಸಾಧಿಸಲಿವೆ?

Five-state elections: ನಾಲ್ಕು ರಾಜ್ಯ, ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭಾ ಚುನಾವಣೆಯ ದಿನಾಂಕಗಳನ್ನು ಮಾರ್ಚ್ 15ರಂದು ಭಾರತೀಯ ಚುನಾವಣಾ ಆಯೋಗ ಅಧಿಕೃತವಾಗಿ ಘೋಷಿಸಿತು. ಚುನಾವಣಾ ಫಲಿತಾಂಶ ಮೇ 4ರಂದು ಹೊರಬೀಳಲಿದೆ. MATRIZE-IANS ಜಂಟಿಯಾಗಿ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆ ಈ ರಾಜ್ಯಗಳ ಮತದಾರರ ಮನಸ್ಥಿತಿಯತ್ತ ಬೆಳಕು ಚೆಲ್ಲಿದೆ.

ಎಲ್‌ಪಿಜಿ ಸಿಲಿಂಡರ್‌ ಬುಕಿಂಗ್‌ ನಿಯಮದಲ್ಲಿ ಬದಲಾವಣೆ; ಸಬ್ಸಿಡಿ ಪಡೆಯಲು ಇ-ಕೆವೈಸಿ ಕಡ್ಡಾಯ?

ಇ-ಕೆವೈಸಿ ಮಾಡದಿದ್ರೆ ಎಲ್‌ಪಿಜಿ ಸಬ್ಸಿಡಿ ಸಿಗೋದಿಲ್ಲ

ಗೃಹ ಬಳಕೆಯ ಅಡುಗೆ ಅನಿಲ ಬಳಸುವ ಗ್ರಾಹಕರು ಇ-ಕೆವೈಸಿ ಮಾಡುವಂತೆ ಕೇಂದ್ರ ಸರ್ಕಾರ ಹೇಳಿದೆ. ಒಂದು ವೇಳೆ ಇ-ಕೆವೈಸಿ ಮಾಡದೇ ಇದ್ದರೆ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ (ಪಿಎಂಯುವೈ) 105.1 ಮಿಲಿಯನ್‌ಗಿಂತಲೂ ಹೆಚ್ಚು ಫಲಾನುಭವಿಗಳಿಗೆ ಸಿಗುವ ಸಬ್ಸಿಡಿ ಸಿಗದೇ ಇರಬಹುದು. ಇದಕ್ಕಾಗಿ ಇ-ಕೆವೈಸಿ ಮಾಡುವಂತೆ ಸಲಹೆ ನೀಡಿದೆ.

Stock Market: ಸೆನ್ಸೆಕ್ಸ್‌ 1,000 ಅಂಕ ಜಿಗಿತ, ಕೊನೆಗೂ ಅಬ್ಬರಿಸಿದ ಗೂಳಿ; ಕಾರಣವೇನು?

ಷೇರು ಮಾರುಕಟ್ಟೆಯಲ್ಲಿ ಗೂಳಿ ಅಬ್ಬರ: ಬದಲಾವಣೆಗೆ ಕಾರಣವೇನು?

Share Market: ಸತತ ಮೂರು ದಿನಗಳಿಂದ ಕುಸಿತಕ್ಕೀಡಾಗಿದ್ದ ಬೆಂಚ್‌ಮಾರ್ಕ್‌ ಇಂಡೆಕ್ಸ್‌ ಸೆನ್ಸೆಕ್ಸ್‌ ಮತ್ತು ನಿಫ್ಟಿ ಸೋಮವಾರ ಗಣನೀಯವಾಗಿ ಚೇತರಿಸಿಕೊಂಡಿದೆ. ಉಭಯ ಸೂಚ್ಯಂಕಗಳು ಇತ್ತೀಚೆಗೆ ಇಳಿಮುಖವಾಗಿದ್ದರಿಂದ ಹೂಡಿಕೆದಾರರು ವಾಲ್ಯೂ ಬೈಯಿಂಗ್‌ ಮಾಡಿದರು. ಉತ್ತಮ ಗುಣಮಟ್ಟದ ಷೇರುಗಳನ್ನು ಖರೀದಿಸಿದರು. ಇದರ ಪರಿಣಾಮ ಸೂಚ್ಯಂಕಗಳು ಜಿಗಿದಿವೆ.

ಕೆನಡಾದಲ್ಲಿ ಕಾಲೇಜು ಸಹಪಾಠಿಗಳಿಂದಲೇ ಭಾರತೀಯ ಮೂಲದ ವಿದ್ಯಾರ್ಥಿಯ ಹತ್ಯೆ

ಕೆನಡಾದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಯ ಹತ್ಯೆ

Crime News: ಕೆನಡಾದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಯೊಬ್ಬನನ್ನು ಕಾಲೇಜು ಸಹಪಾಠಿಗಳೇ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ. 23 ವರ್ಷದ ವಿದ್ಯಾರ್ಥಿ ಗುರ್ಕಿರತ್ ಸಿಂಗ್ ಮನೋಚಾ ಅವರನ್ನು ಕೊಲೆ ಮಾಡಲಾಗಿದೆ. ಮಧ್ಯಪ್ರದೇಶದ ಮುಖ್ಯಮಂತ್ರಿ ಡಾ. ಮೋಹನ್ ಯಾದವ್ ಈ ಘಟನೆಗೆ ಸಂತಾಪ ಸೂಚಿಸಿದ್ದಾರೆ.

ಹೊರ್ಮುಜ್‌ ಜಲಸಂಧಿ ದಾಟಿ ಗುಜರಾತ್‌ ಕರಾವಳಿ ತಲುಪಿದ ಎಲ್‌ಪಿಜಿ ಹೊತ್ತ  ಶಿವಾಲಿಕ್‌ ಹಡಗು; ಅಡುಗೆ ಅನಿಲ ಸಮಸ್ಯೆಗೆ ಇನ್ನಾದರೂ ಬೀಳುತ್ತಾ ಬ್ರೇಕ್‌?

ಗುಜರಾತ್‌ ಕರಾವಳಿ ತಲುಪಿದ ಎಲ್‌ಪಿಜಿ ಹೊತ್ತ ಶಿವಾಲಿಕ್‌ ಹಡಗು

ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಆರಂಭವಾಗುತ್ತಿದ್ದಂತೆ ಇರಾನ್‌ ಹೊರ್ಮುಜ್‌ ಜಲಸಂಧಿಯನ್ನು ಸ್ಥಗಿತಗೊಳಿಸಿದೆ. ಇದರಿಂದ ಭಾರತ ಸೇರಿದಂತೆ ಹಲವು ದೇಶಗಳ ಕಚ್ಚಾ ತೈಲ, ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಅದಾಗ್ಯೂ ಭಾರತದ ಸಂಧಾನದ ಬಳಿಕ ಇತ್ತೀಚೆಗೆ ಯಶಸ್ವಿಯಾಗಿ ದಾಟಿದ್ದ ಎಲ್‌ಪಿಜಿಯನ್ನು ಹೊತ್ತ ಶಿವಾಲಿಕ್‌ ಹಡಗು ಗುಜರಾತ್‌ ಕರಾವಳಿಗೆ ಬಂದು ಮುಟ್ಟಿದೆ.

2026ರ ವಿಧಾನಸಭಾ ಚುನಾವಣೆ: ಮೂರು ರಾಜ್ಯಗಳಲ್ಲಿ ಬಿಜೆಪಿಗೆ ಕಾದಿದೆ ಅಗ್ನಿ ಪರೀಕ್ಷೆ; ಈ ಬಾರಿಯಾದರೂ ಕಮಲ ಅರಳುತ್ತಾ?

ಈ ಬಾರಿಯ ವಿಧಾನ ಸಭಾ ಚುನಾವಣೆ ಬಿಜೆಪಿ ಪಾಲಿಗೆ ಅಗ್ನಿ ಪರೀಕ್ಷೆ

ನಾಲ್ಕು ರಾಜ್ಯಗಳು, ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನ ಸಭಾ ಚುನಾವಣೆಗೆ ದಿನ ನಿಗದಿಯಾದ ಬೆನ್ನಲ್ಲೇ ಈ ಬಾರಿ ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿ ಭಾರಿ ಸವಾಲು ಎದುರಾಗಿದೆ. ಇಸ್ರೇಲ್, ಯುಎಸ್ ಸೇನಾ ಪಡೆಯು ಇರಾನ್ ಮೇಲೆ ನಡೆಸಿದ ದಾಳಿಯ ಪರಿಣಾಮ ಜಾಗತಿಕ ಮಟ್ಟದಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾಗಿದ್ದು, ಈ ನಡುವೆ ಬಿಜೆಪಿ ವಿಧಾನ ಸಭಾ ಚುನಾವಣೆಯನ್ನು ಎದುರಿಸಬೇಕಾಗಿದೆ.

ಪ್ರಧಾನಿ ಮೋದಿ ನಿರ್ಗಮಿಸಿದ 2 ದಿನಗಳ ನಂತರವೇ ಇರಾನ್ ಮೇಲೆ ದಾಳಿ ನಡೆಸಲು ಅವಕಾಶ ಸಿಕ್ಕಿತು: ಇಸ್ರೇಲ್ ಸ್ಪಷ್ಟನೆ

ಮೋದಿ ಭೇಟಿಗೂ ಇರಾನ್ ದಾಳಿಗೆ ಸಂಬಂಧವಿಲ್ಲ: ಇಸ್ರೇಲ್ ರಾಯಭಾರಿ

ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್‌ನಿಂದ ಭಾರತಕ್ಕೆ ಹಿಂದಿರುಗಿದ ಬಳಿಕವೇ ಇರಾನ್ ಮೇಲೆ ದಾಳಿ ನಡೆಸಲಾಯಿತು. ದಾಳಿಗೂ ಅವರ ಭೇಟಿಗೂ ಯಾವುದೇ ರಾಜಕೀಯ ಸಂಬಂಧ ಇಲ್ಲ ಎಂದು ಭಾರತದಲ್ಲಿನ ಇಸ್ರೇಲ್ ರಾಯಭಾರಿ ರೂವನ್ ಅಜರ್ ಸ್ಪಷ್ಟಪಡಿಸಿದ್ದಾರೆ. ದಾಳಿ ಮಿಲಿಟರಿ ಅಗತ್ಯತೆ ಮತ್ತು ಸೂಕ್ತ ಸಮಯದ ಆಧಾರದ ಮೇಲೆ ನಡೆದಿದ್ದು, ಮೋದಿ ದೇಶ ತೊರೆದ ಎರಡು ದಿನಗಳ ನಂತರವೇ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

4 ನಿಮಿಷದಲ್ಲೇ ಸ್ಥಳಕ್ಕೆ ಆಗಮಿಸಿ ವೃದ್ಧೆಯ ಪ್ರಾಣ ಉಳಿಸಿದ ಬ್ಲಿಂಕ್‌ಇಟ್‌ ಆಂಬ್ಯುಲೆನ್ಸ್

4 ನಿಮಿಷದಲ್ಲಿ ತಲುಪಿ ವೃದ್ಧೆಯ ಪ್ರಾಣ ಉಳಿಸಿದ ಬ್ಲಿಂಕಿಟ್ ಆಂಬ್ಯುಲೆನ್ಸ್

Viral Post: ಇದೀಗ ಆನ್ ಲೈನ್ ಆ್ಯಪ್ ಬ್ಲಿಂಕ್‌ಇಟ್‌ ವೈದಕೀಯ ಸೇವೆಯಲ್ಲೂ ಮುಂದಿದೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ಚಂಡೀಗಢದ ಗುರುಗ್ರಾಮದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ಧೆಯನ್ನು ಕೇವಲ 20 ನಿಮಿಷದಲ್ಲಿ ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಸಾಗಿಸುವ ಮೂಲಕ ಜೀವ ಉಳಿಸಲಾಗಿದೆ.

ಇರಾನ್ ಯುದ್ಧದ ಮಧ್ಯೆ ದಾರಿ ತಪ್ಪಿಸುವ ಪೋಸ್ಟ್‌: ಯುಎಇಯಲ್ಲಿ 19 ಮಂದಿ ಭಾರತೀಯರ ಬಂಧನ

ಯುಎಇಯಲ್ಲಿ 19 ಮಂದಿ ಭಾರತೀಯರ ಬಂಧನ

Indians Arrested in UAE: ಮಧ್ಯಪ್ರಾಚ್ಯ ಸಂಘರ್ಷದ ಮಧ್ಯೆ ದಾರಿತಪ್ಪಿಸುವ, ಕಟ್ಟುಕಥೆ ಹೊಂದಿರುವ ವಿಡಿಯೊ ತುಣುಕುಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ 19 ಮಂದಿ ಭಾರತೀಯರನ್ನು ಬಂಧಿಸಿದೆ. ಒಟ್ಟು 35 ಮಂದಿಯನ್ನು ಈ ಸಂಬಂಧ ವಶಕ್ಕೆ ಪಡೆಯಲಾಗಿದೆ.

ರಸಗುಲ್ಲ ಗಂಟಲಲ್ಲಿ ಸಿಲುಕಿ ವ್ಯಕ್ತಿ ಸಾವು; ಮದುವೆ ಮನೆಯಲ್ಲಿ ಘೋರ ದುರಂತ

ರಸಗುಲ್ಲ ಗಂಟಲಲ್ಲಿ ಸಿಲುಕಿ ವ್ಯಕ್ತಿ ಸಾವು

Tragedy at Wedding: ಜಾರ್ಖಂಡ್‌ನ ಹಳ್ಳಿಯೊಂದರಲ್ಲಿ ನಡೆದ ವಿವಾಹ ಸಂಭ್ರಮದ ಮಧ್ಯೆ 41 ವರ್ಷದ ಲಲಿತ್ ಸಿಂಗ್ ರಸಗುಲ್ಲ ತಿಂದು ಉಸಿರುಗಟ್ಟಿ ಸಾವಿಗೀಡಾದ ಆಘಾತಕಾರಿ ಘಟನೆ ನಡೆದಿದೆ. ಶುಕ್ರವಾರ (ಮಾರ್ಚ್‌ 13) ಲಲಿತ್ ಸಿಂಗ್ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದರು.

ಯುದ್ಧ ವಲಯದಿಂದ ಸುರಕ್ಷಿತವಾಗಿ ಹೊರಬಂದ 'ಜಗ್ ಲಾಡ್ಕಿ' ಹಡಗು: ಹೊರ್ಮುಜ್‌ನಲ್ಲಿ ಭಾರತಕ್ಕೆ ರಾಜತಾಂತ್ರಿಕ ಗೆಲುವು

ಯುದ್ಧ ವಲಯದಿಂದ ಸುರಕ್ಷಿತವಾಗಿ ಹೊರಬಂದ ‘ಜಗ್ ಲಾಡ್ಕಿ’

ಫುಜೈರಾ ಬಂದರಿನ ಮೇಲೆ ದಾಳಿ ನಡೆದ ಬಳಿಕ, ಭಾರತದ ‘ಜಗ್ ಲಾಡ್ಕಿ’ ಕಚ್ಚಾ ತೈಲ ಹಡಗು ಸುರಕ್ಷಿತವಾಗಿ ಹೊರ್ಮುಜ್ ಜಲಸಂಧಿಯನ್ನು ದಾಟಿದೆ. ಭಾರತ–ಇರಾನ್ ಮಾತುಕತೆಯ ಫಲವಾಗಿ ಭಾರತಕ್ಕೆ ಸುರಕ್ಷಿತ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಇದರಿಂದ ಯುದ್ಧದ ನಡುವೆಯೂ ಭಾರತದ ಇಂಧನ ಪೂರೈಕೆ ವ್ಯವಸ್ಥೆ ಮುಂದುವರಿದಿದೆ.

ಮಮತಾ ಸರ್ಕಾರಕ್ಕೆ ಭಾರೀ ಮುಖಭಂಗ; ರಾಜ್ಯ ಚುನಾವಣಾ ಅಧಿಕಾರಿಗಳನ್ನು ವಜಾಗೊಳಿಸಿದ ಎಲೆಕ್ಷನ್‌ ಕಮಿಷನ್‌

ಬಂಗಾಳದ ರಾಜ್ಯ ಚುನಾವಣಾ ಅಧಿಕಾರಿಗಳನ್ನು ವಜಾಗೊಳಿಸಿದ ಎಲೆಕ್ಷನ್‌ ಕಮಿಷನ್‌

ಪಶ್ಚಿಮ ಬಂಗಾಳ ಚುನಾವಣಾ ದಿನಾಂಕಗಳನ್ನು ಘೋಷಿಸಿದ ಬಳಿಕ ಚುನಾವಣಾ ಆಯೋಗವು ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರದ ಮುಖ್ಯ ಕಾರ್ಯದರ್ಶಿ ನಂದಿನಿ ಚಕ್ರವರ್ತಿ ಸೇರಿದಂತೆ ರಾಜ್ಯದ ಉನ್ನತ ಅಧಿಕಾರಿಗಳನ್ನು ವಜಾಗೊಳಿಸಲು ಆದೇಶಿಸಿದೆ. ವರ್ಗಾವಣೆಗೊಂಡ ಅಧಿಕಾರಿಗಳನ್ನು ಚುನಾವಣೆಗಳು ಪೂರ್ಣಗೊಳ್ಳುವವರೆಗೆ ಯಾವುದೇ ಚುನಾವಣೆಗೆ ಸಂಬಂಧಿಸಿದ ಹುದ್ದೆಗಳಲ್ಲಿ ನಿಯೋಜಿಸಲಾಗುವುದಿಲ್ಲ ಎಂದು ಆಯೋಗದ ಕಾರ್ಯದರ್ಶಿ ಸುಜೀತ್ ಕೆಆರ್ ಮಿಶ್ರಾ ಸಹಿ ಮಾಡಿದ ಸಂವಹನದಲ್ಲಿ ತಿಳಿಸಲಾಗಿದೆ.

ಇನ್‌ಸ್ಟಾಗ್ರಾಮ್‌ ಬಳಕೆದಾರರೇ ಗಮನಿಸಿ: 'ಎನ್‌ಕ್ರಿಪ್ಶನ್' ಫೀಚರ್ ಕೈಬಿಡಲು ಮಾರ್ಕ್ ಜುಕರ್‌ಬರ್ಗ್ ನಿರ್ಧಾರ

ಇನ್‌ಸ್ಟಾಗ್ರಾಮ್‌ ಫೀಚರ್‌ನಲ್ಲಿ ದೊಡ್ಡ ಬದಲಾವಣೆ

ಸೋಶಿಯಲ್ ಮೀಡಿಯಾ ದೈತ್ಯ ಮೆಟಾ ತನ್ನ ವೇದಿಕೆಯಾದ ಇನ್‌ಸ್ಟಾಗ್ರಾಮ್‌ನಲ್ಲಿ ‘ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್’ ಫೀಚರ್ ಅನ್ನು ಮೇ 8ರಿಂದ ಸ್ಥಗಿತಗೊಳಿಸುವುದಾಗಿ ಘೋಷಿಸಿದೆ. ಬಳಕೆದಾರರ ನಡುವೆ ನಡೆಯುವ ಖಾಸಗಿ ಚಾಟ್‌ಗಳನ್ನು ರಕ್ಷಿಸುತ್ತಿದ್ದ ಈ ವ್ಯವಸ್ಥೆಯನ್ನು ಬಳಕೆ ಕಡಿಮೆ ಇರುವುದರಿಂದ ಹಾಗೂ ಮಕ್ಕಳ ಸುರಕ್ಷತೆ ಸಂಬಂಧಿತ ಚಿಂತನೆಯ ಕಾರಣದಿಂದ ತೆಗೆದುಹಾಕಲಾಗುತ್ತಿದೆ. ಬಳಕೆದಾರರು ತಮ್ಮ ಹಳೆಯ ಎನ್‌ಕ್ರಿಪ್ಟ್ ಮಾಡಿದ ಚಾಟ್‌ಗಳನ್ನು ಉಳಿಸಿಕೊಳ್ಳಲು ಮೇ 8ರ ಮೊದಲು ಡೌನ್‌ಲೋಡ್ ಮಾಡಿಕೊಳ್ಳುವಂತೆ ಮೆಟಾ ಸೂಚಿಸಿದೆ.

ಘೋರ ದುರಂತ: ಬೈಕ್ ಎಂಜಿನ್‌ನಿಂದ ಹೊರಬಂದ ವಿಷ ಗಾಳಿ; ನಿದ್ದೆಯಲ್ಲೇ ಪ್ರಾಣಬಿಟ್ಟ ಅಜ್ಜ, ಮೂವರು ಮಕ್ಕಳು

ಬೈಕ್ ಎಂಜಿನ್‌ನಿಂದ ವಿಷ ಗಾಳಿ: ಹಾರಿಯೋಯ್ತು ನಾಲ್ವರ ಪ್ರಾಣಪಕ್ಷಿ

ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪುಂಗನೂರು ಪಟ್ಟಣದಲ್ಲಿ ಮನೆಯೊಳಗೆ ಇಡೀ ರಾತ್ರಿ ಬೈಕ್ ಎಂಜಿನ್ ಚಾಲನೆಯಲ್ಲಿಟ್ಟಿದ್ದರಿಂದ ಕಾರ್ಬನ್ ಮೊನಾಕ್ಸೈಡ್ ವಿಷಗಾಳಿ ಹರಡಿ ಒಂದೇ ಕುಟುಂಬದ ನಾಲ್ವರು, ಅಜ್ಜ ಮತ್ತು ಮೂವರು ಮಕ್ಕಳು — ನಿದ್ದೆಯಲ್ಲೇ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ. ಮೆಕ್ಯಾನಿಕ್ ನೀಡಿದ ಸಲಹೆಯಂತೆ ಬೈಕ್ ಅನ್ನು ಮನೆಯೊಳಗೆ ಚಾಲನೆಯಲ್ಲಿಟ್ಟಿದ್ದರಿಂದ ವಿಷಗಾಳಿ ಕೊಠಡಿಯನ್ನು ಆವರಿಸಿತು. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇಂದು ಅಥವಾ ನಾಳೆ ಭಾರತೀಯ ಬಂದರು ತಲುಪಲಿದೆ ಎಲ್‌ಪಿಜಿ

ಶೀಘ್ರದಲ್ಲೇ ಭಾರತಕ್ಕೆ ಬರಲಿದೆ ಎಲ್‌ಪಿಜಿ

ಲೈಬೀರಿಯಾ ಧ್ವಜದೊಂದಿಗೆ ಸೌದಿ ಅರೇಬಿಯಾದಿಂದ ಹೊರಟಿದ್ದ ತೈಲ ಟ್ಯಾಂಕರ್ ಹೊರ್ಮುಜ್ ಜಲಸಂಧಿ ದಾಟಿ ಬಂದಿದ್ದು, ಮುಂಬೈ ತಲುಪಿದೆ. ಹಡಗು ಟ್ರ್ಯಾಕಿಂಗ್ ದತ್ತಾಂಶದ ಪ್ರಕಾರ ತೈಲ ಟ್ಯಾಂಕರ್ ಸ್ಮಿರ್ನಿ 1 ಮಿಲಿಯನ್ ಬ್ಯಾರೆಲ್‌ಗಳಷ್ಟು ಸೌದಿ ಅರೇಬಿಯನ್ ಕಚ್ಚಾ ತೈಲವನ್ನು ಹೊತ್ತುಕೊಂಡು ಭಾರತದ ಬಂದರು ಸಮೀಪ ಬಂದಿದೆ. ಇನ್ನು ಎಲ್‌ಪಿಜಿ ಹೊತ್ತ ಟ್ಯಾಂಕರ್ ಸೋಮವಾರ ಅಥವಾ ಮಂಗಳವಾರ ಭಾರತೀಯ ಬಂದರು ತಲುಪುವ ಸಾಧ್ಯತೆ ಇದೆ.

Loading...