ದೆಹಲಿ ಬ್ಲಾಸ್ಟ್ನ ಸ್ಫೋಟಕ ಮಾಹಿತಿ ಬಹಿರಂಗ; ಬಾಂಬ್ ತಯಾರಿಸಲು ಚಾಟ್ಜಿಪಿಟಿ, ಯುಟ್ಯೂಬ್ ಬಳಕೆ: ಎನ್ಐಎ ತನಿಖೆಯಲ್ಲಿದೆ ಮುಖ್ಯ ವಿಚಾರ
Delhi Blast Accused Used AI: ದೆಹಲಿ ಕೆಂಪುಕೋಟೆ ಪ್ರದೇಶದ ಕಾರು ಸ್ಫೋಟ ಪ್ರಕರಣದ ತನಿಖೆ ನಡೆಸುತ್ತಿರುವ ಎನ್ಐಎಗೆ ಮಹತ್ವದ ಮಾಹಿತಿಯೊಂದು ದೊರೆತಿದೆ. ಆರೋಪಪಟ್ಟಿಯಲ್ಲಿರುವ ವ್ಯಕ್ತಿಯೊಬ್ಬ ಕೃತಕ ಬುದ್ಧಿಮತ್ತೆ(AI)ಯನ್ನು ದುರುಪಯೋಗಪಡಿಸಿಕೊಂಡಿದ್ದಾನೆ ಎಂಬ ವಿಚಾರ ತಿಳಿದುಬಂದಿದೆ.
ದೆಹಲಿ ಸ್ಫೋಟ (ಸಂಗ್ರಹ ಚಿತ್ರ) -
ನವದೆಹಲಿ, ಮೇ 24: ಕೆಂಪುಕೋಟೆ ಸಮೀಪದ ಕಾರು ಸ್ಫೋಟ (Delhi Blast) ಪ್ರಕರಣದ ತನಿಖೆ ನಡೆಸುತ್ತಿರುವ ಎನ್ಐಎಗೆ (NIA) ಮಹತ್ವದ ಮಾಹಿತಿಯೊಂದು ದೊರೆತಿದೆ. ಜಾಗತಿಕ ಭಯೋತ್ಪಾದಕ ಸಂಘಟನೆ ಅಲ್-ಖೈದಾದ (Al-Qaida) ಶಾಖೆಯೊಂದಿಗೆ ಸಂಪರ್ಕ ಹೊಂದಿರುವ ಆರೋಪಪಟ್ಟಿಯಲ್ಲಿರುವ ವ್ಯಕ್ತಿಯೊಬ್ಬ ಕೃತಕ ಬುದ್ಧಿಮತ್ತೆ (AI) ಚಾಟ್ಜಿಪಿಟಿಯನ್ನು ದುರುಪಯೋಗಪಡಿಸಿಕೊಂಡಿದ್ದಾನೆ ಎಂಬ ವಿಚಾರ ತಿಳಿದುಬಂದಿದೆ.
ಅದರಂತೆ ಆರೋಪಿಗಳು ಜಮ್ಮು ಮತ್ತು ಕಾಶ್ಮೀರದ ಅನಂತ್ನಾಗ್ ಜಿಲ್ಲೆಯ ಖಾಜಿಗುಂಡ್ ಕಾಡಿನಲ್ಲಿ ರಾಕೆಟ್ ಇಂಪ್ರೂವೈಸ್ಡ್ ಸ್ಫೋಟಕ ಸಾಧನಗಳನ್ನು (ಐಇಡಿ) ತಯಾರಿಸಿ ಪರೀಕ್ಷಿಸಿದ್ದಾರೆ. ಕಳೆದ ವರ್ಷ ನವೆಂಬರ್ 10ರಂದು ರಾಷ್ಟ್ರ ರಾಜಧಾನಿಯನ್ನು ಬೆಚ್ಚಿಬೀಳಿಸಿದ್ದ ಐಇಡಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಎನ್ಐಎ ಮೇ 14ರಂದು ಸಲ್ಲಿಸಿದ 7,500 ಪುಟಗಳ ಬೃಹತ್ ಆರೋಪಪಟ್ಟಿಯಲ್ಲಿ ಈ ಸಂಗತಿಗಳು ಬಹಿರಂಗಗೊಂಡಿವೆ.
ದೆಹಲಿ ಸ್ಫೋಟದ ಮತ್ತಷ್ಟು ಮಾಹಿತಿ ಬಹಿರಂಗ:
Terrorist used Chatgpt & Youtube for making IED's.
— Dear Men (@Dear_Men_Life) May 24, 2026
And also tested those IED's inside forest in Kashmir.
Ordinary people are feared that AI will replace them,
While these Terrorists are using AI to actually eliminate people.
No amount of education can cure this illness. https://t.co/8kqUbeSf3W pic.twitter.com/SmD3LtwbQI
ದೆಹಲಿಯ ವಿಶೇಷ ಎನ್ಐಎ ನ್ಯಾಯಾಲಯದ ಮುಂದೆ ಸಲ್ಲಿಸಲಾದ ಆರೋಪಪಟ್ಟಿಯಲ್ಲಿ ಐಇಡಿ ಸ್ಫೋಟಕಗಳನ್ನು ತಯಾರಿಸುವುದು ಹಾಗೂ ಬಳಸುವಲ್ಲಿ ಆರೋಪಿಗಳು ಪ್ರಯೋಗಾಲಯ ಮಟ್ಟದ ನಿಖರತೆ ಹೊಂದಿದ ಸೂಕ್ಷ್ಮ ವಿಧಾನವನ್ನು ಅನುಸರಿಸಿದ್ದರು ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಅನ್ಸಾರ್ ಘಜ್ವತ್-ಉಲ್-ಹಿಂದ್ ಸಂಘಟನೆ ಬಲಪಡಿಸಲು ದೆಹಲಿ ಸ್ಫೋಟ; ವಿಚಾರಣೆ ವೇಳೆ ಬಯಲಾಯ್ತು ಉಗ್ರ ರಹಸ್ಯ
ಆರೋಪಿ ಜಾಸಿರ್ ಬಿಲಾಲ್ ವಾನಿ 2024-25ರ ಅವಧಿಯಲ್ಲಿ ಹರಿಯಾಣದ ಫರಿದಾಬಾದ್ನಲ್ಲಿರುವ ಅಲ್ ಫಲಾಹ್ ವಿಶ್ವವಿದ್ಯಾಲಯದ ಆವರಣದಲ್ಲಿ ಎರಡು ಮೂರು ಬಾರಿ ತಂಗಿದ್ದ. ಈ ಪಿತೂರಿಗೆ ಜಾಸಿರ್ ಬಿಲಾಲ್ ವಾನಿ ಬೆಂಬಲ ನೀಡಿದ್ದನು ಎಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ. ಸ್ಫೋಟದಲ್ಲಿ ಮೂವರು ವೈದ್ಯರು ಭಾಗಿಯಾಗಿದ್ದಾರೆಂದು ತನಿಖೆಯಲ್ಲಿ ಬಹಿರಂಗವಾದ ನಂತರ, ವಿವಿಯ ಪಾತ್ರವು ಕಾನೂನು ಜಾರಿ ಸಂಸ್ಥೆಗಳ ತೀವ್ರ ಪರಿಶೀಲನೆಗೆ ಒಳಪಟ್ಟಿದೆ.
ಡಾ. ಅದೀಲ್ ಅಹ್ಮದ್ ರಾಥರ್ನನ್ನು ಮತ್ತೊಬ್ಬ ಪ್ರಮುಖ ಆರೋಪಿ ಮತ್ತು ಸ್ಫೋಟಕ ತುಂಬಿದ ಕಾರಿನ ಚಾಲಕ ಡಾ. ಉಮರ್ ಉನ್ ನಬಿಗೆ ಜಾಸಿರ್ ಪರಿಚಯಿಸಿದ್ದ. ಚಾರ್ಜ್ಶೀಟ್ನ ಪ್ರಕಾರ, ಸ್ಫೋಟದ ಪರಿಣಾಮವಾಗಿ 11 ಜನರು ಮೃತಪಟ್ಟರು, ಹಲವರು ಗಾಯಗೊಂಡರು. ಎನ್ಐಎ ತನಿಖೆ ಹೇಳುವಂತೆ, ಆದಿಲ್ ಎನ್ಪಿಕೆ ಗೊಬ್ಬರದ ರೂಪದಲ್ಲಿ ಪುಡಿ ಮಾಡಿದ ಸಕ್ಕರೆ ಮತ್ತು ಪೊಟ್ಯಾಸಿಯಮ್ ನೈಟ್ರೇಟ್ ಸೇರಿದಂತೆ ಐಇಡಿ ಪದಾರ್ಥಗಳನ್ನು ಜಾಸಿರ್ಗೆ ಪೂರೈಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎನ್ನಲಾಗಿದೆ.
ರಾಕೆಟ್ ಹೇಗೆ ತಯಾರಿಸುವುದು ಮತ್ತು ಮಿಶ್ರಣವು ಯಾವ ಪ್ರಮಾಣದಲ್ಲಿರಬೇಕು ಎಂದು ಹುಡುಕಲು ಜಾಸಿರ್ ಯುಟ್ಯೂಬ್ ಮತ್ತು ಚಾಟ್ಜಿಪಿಟಿಯ ಮೊರೆ ಹೋಗಿದ್ದ ಎಂಬ ದಾಖಲೆಗಳನ್ನು ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ. ಇದು ಭಯೋತ್ಪಾದನೆಗಾಗಿ ಡಿಜಿಟಲ್ ಮತ್ತು ಎಐ ಪ್ಲಾಟ್ಫಾರ್ಮ್ಗಳ ದುರುಪಯೋಗವನ್ನು ಎತ್ತಿ ತೋರಿಸಿದೆ.
ಜಾಸಿರ್ ರಾಕೆಟ್ ಐಇಡಿಗಳನ್ನು ತಯಾರಿಸಿ ಖಾಜಿಗುಂಡ್ ಕಾಡಿನಲ್ಲಿ ಡಾ. ಉಮರ್, ಡಾ. ಮುಜಮ್ಮಿಲ್ ಶಕೀಲ್ ಮತ್ತು ಇತರ ಸಹ-ಆರೋಪಿಗಳೊಂದಿಗೆ ಪರೀಕ್ಷಿಸಿದ್ದಾನೆ ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಕಾಶ್ಮೀರ ಮತ್ತು ದೇಶದ ಇತರ ಭಾಗಗಳಲ್ಲಿನ ಭದ್ರತಾ ಸ್ಥಾಪನೆಗಳ ಮೇಲೆ ದಾಳಿ ನಡೆಸಲು ಡ್ರೋನ್ಗಳಿಗೆ ಸ್ಫೋಟಕಗಳನ್ನು ಅಳವಡಿಸುವ ಮೂಲಕ ಶಸ್ತ್ರಾಸ್ತ್ರಗಳನ್ನು ಬಳಸಲು ಅವನು ಮುಂದಾಗಿದ್ದ ಎನ್ನಲಾಗಿದೆ.
ಅನಂತನಾಗ್ನ ಮಟ್ಟನ್ ಬಳಿಯ ಯೂಶ್ಮುರ್ಗ್ ಕಾಡಿನಲ್ಲಿ ಐಇಡಿಯನ್ನು ಪರೀಕ್ಷಿಸಲಾಗಿದೆ. ಇದರಲ್ಲಿ ಡಾ. ಉಮರ್, ಜಾಸಿರ್, ಡಾ. ಮುಜಮ್ಮಿಲ್ ಮತ್ತು ಡಾ. ಆದಿಲ್ ಸೇರಿದ್ದಾರೆ ಎಂದು ಆರೋಪಪಟ್ಟಿ ಹೇಳುತ್ತದೆ. ಆರೋಪಿಗಳು ವಿವಿಧ ರೀತಿಯ ಐಇಡಿಗಳನ್ನು ತಯಾರಿಸಿ ಪರೀಕ್ಷಿಸಿದ್ದಾರೆ ಎಂದು ಎನ್ಐಎ ಕಂಡುಹಿಡಿದಿದೆ.