ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಯಾತ್ರಾ ಪ್ರವಾಸಿ ತಾಣ ಮುರುಡೇಶ್ವರದ ಶಿವನ ವಿಗ್ರಹವನ್ನು ವಿರೋಪ ಗೊಳಿಸಿ ಐಸಿಸ್ ಮುಖವಾಣಿಯಲ್ಲಿ ಪ್ರಕಟಿಸಿರುವುದಕ್ಕೆ ಉತ್ತರ ಕನ್ನಡ ಜಿಲ್ಲೆಯ ಜನಪ್ರತಿ ನಿಧಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್, ಮುರುಡೇಶ್ವರ ದೇವ ಸ್ಥಾನಕ್ಕೆ ಹೆಚ್ಚಿನ ಭದ್ರತೆ ಕೊಡುವ ಅವಶ್ಯಕತೆಯಿದೆ. ಹೆಚ್ಚಿನ ಎಚ್ಚರಿಕೆ ಗಮನಿಸಬೇಕಾದ ಅವಷ್ಯವಿದೆ. ಮುರುಡೇಶ್ವರದ ವಿಚಾರ ಬಹಳ ಸೂಕ್ಷ್ಮ ವಿಚಾರ, ಬಹಳ ಎಚ್ಚರಿಕೆ ವಹಿಸಬೇಕಾದ ವಿಚಾರ. ಗೃಹ ಇಲಾಖೆ ಗಮನಕ್ಕೆ ಬಂದಿದೆ. […]