ಕಳಕಳಿ ಸಂದೀಪ್ ಶರ್ಮಾ ಮೂಟೇರಿ ಬರದ ಕಾವಿನ ಜೊತೆಗೆ ಬೇಸಿಗೆಯ ಧಗೆಗೆ ಬೆಂಗಳೂರು ಈಗ ಕೆಂಡದಂತೆ ಬೇಯುತ್ತಿದೆ. ಹಲವು ಕೆರೆಗಳಿಂದ ಆವೃತವಾಗಿದ್ದ ಸಮೃದ್ಧ ಬೆಂಗಳೂರು ಇಂಥ ದಯನೀಯ ಸ್ಥಿತಿಗೆ ತಲುಪಿದ ಬಗೆಯನ್ನು ಅವಲೋಕಿಸಬೇಕಿದೆ. ಹಿಂದಿನ ನಾಲ್ಕು ದಶಕಗಳಲ್ಲಿ ಈ ನಗರವು ಸುಮಾರು ಹತ್ತು ಪಟ್ಟು ವಿಸ್ತಾರವಾಗಿ ಇದೀಗ ಎಂಟುನೂರು ಚದರ ಕಿ.ಮೀಗೂ ಹೆಚ್ಚು ಮಿಕ್ಕಿ ಬೆಳೆಯುತ್ತಿದೆ. ಈ ಕಿರು ಅವಧಿಯಲ್ಲಿ ಜನಸಂಖ್ಯೆಯು ಸುಮಾರು ಆರು ಪಟ್ಟು ಹೆಚ್ಚಾಗಿ ಒಂದೂವರೆ ಕೋಟಿಗೆ ತಲುಪುತ್ತಿದೆ. ಆರ್ಥಿಕ ಉದಾರೀಕರಣದ ನಂತರವಂತೂ ಶಿಕ್ಷಣ, […]