ಆಸ್ತಿಗಾಗಿ ನಾಲ್ವರ ಕೊಲೆ ಮಾಡಿದ ಮಗನಿಗೆ ಗಲ್ಲು, ಅಪ್ಪನಿಗೆ ಜೀವಾವಧಿ ಶಿಕ್ಷೆ
2023 ರ ಫೆಬ್ರುವರಿ 23ರಂದು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಹಾಡುವಳ್ಳಿ ಗ್ರಾಮದಲ್ಲಿ ಈ ಘೋರ ಕೊಲೆಗಳು (Murder Case) ನಡೆದಿದ್ದವು. ಆಸ್ತಿಗಾಗಿ ಮನೆಯ ಸೊಸೆ ಮಾಡಿದ ಪುಸಲಾವಣೆಯ ಪರಿಣಾಮ, ಆಕೆಯ ತಮ್ಮ ಹಾಗೂ ತಂದೆ ಇದೀಗ ಕಂಬಿಗಳ ಹಿಂದೆ ತಮ್ಮ ಕೊನೆಯ ಕ್ಷಣ ಎಣಿಸುವಂತಾಗಿದೆ.