ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

DK Shivakumar: ಬೇರೆಯವರ ಮುಂದೆ ಮಂಡಿಯೂರುವುದು ಕನಕಪುರದವರ ರಕ್ತದಲ್ಲಿ ಇಲ್ಲ ಎಂದ ಡಿಕೆಶಿ

ನಾನು ಇಡಿ, ಸಿಬಿಐ ಪ್ರಕರಣವನ್ನು ಹಿಂಪಡೆಯಲು ಕೇಂದ್ರ ಸಚಿವರನ್ನು ಭೇಟಿ ಮಾಡುತ್ತಿರುವುದಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದ ಕಾರಣ ನಾನು 100 ಕೋಟಿ ರೂ. ಮಾನಹಾನಿ ಪ್ರಕರಣ ದಾಖಲಿಸಿದ್ದೆ. ಇದಕ್ಕಾಗಿ 1 ಕೋಟಿ ರೂ. ಶುಲ್ಕ ಠೇವಣಿಯನ್ನು ನ್ಯಾಯಾಲಯಕ್ಕೆ ಕಟ್ಟಿದ್ದೇನೆ. ಈ ಪ್ರಕರಣವನ್ನು ಬೆಂಗಳೂರಿನಲ್ಲಿ ನಡೆಸಬೇಕು ಎಂದು ಹೈಕೋರ್ಟ್‌ನಲ್ಲಿ ಅರ್ಜಿ ಹಾಕಿದ್ದರು. ಅದು ವಜಾ ಆಗಿದೆ. ಹೀಗಾಗಿ ಇಂದು ನಾನು ಸಲ್ಲಿಸಿರುವ ದಾಖಲೆಗಳ ದೃಢಪಡಿಸಬೇಕಿತ್ತು. ಹೀಗಾಗಿ ನ್ಯಾಯಾಲಯದ ವಿಚಾರಣೆಯಲ್ಲಿ ಭಾಗಿಯಾಗಿದ್ದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಬೇರೆಯವರ ಮುಂದೆ ಮಂಡಿಯೂರುವುದು ಕನಕಪುರದವರ ರಕ್ತದಲ್ಲಿ ಇಲ್ಲ: ಡಿಕೆಶಿ

ಡಿಸಿಎಂ ಡಿ.ಕೆ. ಶಿವಕುಮಾರ್.

Profile Siddalinga Swamy Jun 4, 2025 10:53 PM

ಕನಕಪುರ: ಬೇರೆಯವರ ಮುಂದೆ ಮಂಡಿಯೂರುವುದು ಕನಕಪುರದವರ ರಕ್ತದಲ್ಲಿ ಇಲ್ಲ. ಹೀಗಾಗಿ, ನಾನು ಕೇಂದ್ರ ಸಚಿವರ ಬಳಿ ಹೋಗಿ ಇಡಿ, ಸಿಬಿಐ ಪ್ರಕರಣ ಹಿಂಪಡೆಯಬೇಕು ಎಂದು ದುಂಬಾಲು ಬೀಳುತ್ತಿರುವುದಾಗಿ ಹೇಳಿಕೆ ಕೊಟ್ಟ ಶಾಸಕ ಯತ್ನಾಳ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar)‌ ತಿಳಿಸಿದ್ದಾರೆ. ಕನಕಪುರದಲ್ಲಿ ನ್ಯಾಯಾಲಯದ ವಿಚಾರಣೆಗೆ ಹಾಜರಾದ ಬಗ್ಗೆ ಮಾಹಿತಿ ನೀಡಿದ ಅವರು, ʼನಾನು ಇಡಿ, ಸಿಬಿಐ ಪ್ರಕರಣವನ್ನು ಹಿಂಪಡೆಯಲು ಕೇಂದ್ರ ಸಚಿವರನ್ನು ಭೇಟಿ ಮಾಡುತ್ತಿರುವುದಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೇಳಿಕೆ ನೀಡಿದ ಕಾರಣ ನಾನು 100 ಕೋಟಿ ರೂ. ಮಾನಹಾನಿ ಪ್ರಕರಣ ದಾಖಲಿಸಿದ್ದೆ. ಇದಕ್ಕಾಗಿ 1 ಕೋಟಿ ರೂ. ಶುಲ್ಕ ಠೇವಣಿಯನ್ನು ನ್ಯಾಯಾಲಯಕ್ಕೆ ಕಟ್ಟಿದ್ದೇನೆ. ಈ ಪ್ರಕರಣವನ್ನು ಬೆಂಗಳೂರಿನಲ್ಲಿ ನಡೆಸಬೇಕು ಎಂದು ಹೈಕೋರ್ಟ್‌ನಲ್ಲಿ ಅರ್ಜಿ ಹಾಕಿದ್ದರು. ಅದು ವಜಾ ಆಗಿದೆ. ಹೀಗಾಗಿ ಇಂದು ನಾನು ಸಲ್ಲಿಸಿರುವ ದಾಖಲೆಗಳ ದೃಢಪಡಿಸಬೇಕಿತ್ತು. ಹೀಗಾಗಿ ನ್ಯಾಯಾಲಯದ ವಿಚಾರಣೆಯಲ್ಲಿ ಭಾಗಿಯಾಗಿದ್ದೆ ಎಂದು ಅವರು ಹೇಳಿದ್ದಾರೆ.

ರಾಜಕೀಯದಲ್ಲಿ ಈ ರೀತಿ ಮಾನಹಾನಿ ಪ್ರಕರಣ ದಾಖಲಿಸಿರುವುದು ಇದೇ ಮೊದಲೇ ಎಂದು ಕೇಳಿದಾಗ, ʼನಾನು ಈ ಹಿಂದೆ ಮಾಧ್ಯಮವೊಂದರ ಮೇಲೆ ಈ ಪ್ರಕರಣ ದಾಖಲಿಸಿದ್ದೆ. ನಂತರ ಅವರ ಜತೆ ಒಪ್ಪಂದಕ್ಕೆ ಬಂದು ಅದನ್ನು ಹಿಂಪಡೆದೆ. ಆದರೆ ಈಗ ಶಾಸಕ ಯತ್ನಾಳ್ ಅವರು ಕೊಟ್ಟಿರುವ ಹೇಳಿಕೆ ಸಹಿಸಲು ಸಾಧ್ಯವಿಲ್ಲ. ನಾನು ಬಿಜೆಪಿ ಜತೆ ಸೇರುತ್ತಿದ್ದೇನೆ, ಕೇಸ್ ವಾಪಸ್ ಪಡೆಯಲು ಬಿಜೆಪಿ ಮಂತ್ರಿಗಳನ್ನು ದುಂಬಾಲು ಬೀಳುತ್ತಿದ್ದೇನೆ ಎಂದರೆ ನನ್ನ ಕಾರ್ಯಕರ್ತರಿಗೆ ಯಾವ ಸಂದೇಶ ರವಾನೆಯಾಗಿತ್ತದೆ? ನಾನು ಎಲ್ಲವನ್ನು ಅನುಭವಿಸಿ ಆಗಿದೆ. ಕನಕಪುರದ ಜನ ನನಗೆ ಮತ ಹಾಕಿ ಗೆಲ್ಲಿಸಿಯೂ ಆಗಿದೆʼ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Pravasi Prapancha: ಪ್ರವಾಸಿಗರಿಗೆ ಮೌಲ್ಯಯುತ ಮಾರ್ಗದರ್ಶಿ ʼಪ್ರವಾಸಿ ಪ್ರಪಂಚʼ: ಸಿಎಂ ಸಿದ್ದರಾಮಯ್ಯ