ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ವಾಣಿಜ್ಯ

ಕಬ್ಬಿಣಾಂಶದ ಕೊರತೆ ಎದುರಿಸುತ್ತಿರುವ ಮಕ್ಕಳಿಗಾಗಿ “ಐರನ್‌ ಶಕ್ತಿ ಸಾಲ್ಟ್‌” ಬಿಡುಗಡೆ ಮಾಡಿದ ಐಟಿಸಿ

“ಐರನ್‌ ಶಕ್ತಿ ಸಾಲ್ಟ್‌” ಬಿಡುಗಡೆ ಮಾಡಿದ ಐಟಿಸಿ

ಮಕ್ಕಳು ಮತ್ತು ವಯಸ್ಕರಿಗೆ ದೈನಂದಿನ ಕಬ್ಬಿಣದ ಅವಶ್ಯಕತೆ 11 ರಿಂದ 32 ಮಿಗ್ರಾಂ ವರೆಗೆ ಇರಲಿದೆ. ಇದು 2 ರಿಂದ 7 ಬಟ್ಟಲು ಪಾಲಕ್ ಅಥವಾ 7 ರಿಂದ 21 ಬೀಟ್‌ರೂಟ್‌ ತಿನ್ನುವುದಕ್ಕೆ ಸಮಾನ. ಆದರೆ, ಇಷ್ಟು ಪ್ರಮಾಣದಲ್ಲಿ ತಿನ್ನಲು ಸಾಧ್ಯವಿಲ್ಲ. ಪ್ರಸ್ತುತ ಐಟಿಸಿ ಪರಿಚಯಿಸಿರುವ ಐರನ್‌ ಶಕ್ತಿ ಸಾಲ್ಟ್‌ ನ ಒಂದು ಟೀ ಚಮಚದಲ್ಲಿ ಶೇ. 25ರಷ್ಟು ಕಬ್ಬಿಣಾಂಶ ಒದಗಿಸಲಿದೆ

Gold Price Today On 21th March: ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ; ಬೆಂಗಳೂರಿನಲ್ಲಿ ಬೆಲೆ ಎಷ್ಟಿದೆ?

ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ; ಬೆಂಗಳೂರಿನಲ್ಲಿ ಬೆಲೆ ಎಷ್ಟಿದೆ?

ಚಿನ್ನದ ದರದಲ್ಲಿಂದು ಭಾರೀ ಇಳಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ದರದಲ್ಲಿ ಬರೋಬ್ಬರಿ 275 ರೂ. ಇಳಿಕೆಯಾಗಿ 13,380 ರೂ. ಇದ್ದರೆ 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನ 294 ರೂ. ಇಳಿಕೆ ಕಂಡು 14,597 ರೂ. ಆಗಿದೆ.

ಏ.1ರಿಂದ  ಹೊಸ ತೆರಿಗೆ ನಿಯಮ ಜಾರಿ; ಏನೆಲ್ಲಾ ಬದಲಾಗಲಿದೆ ಗೊತ್ತಾ?

ಏ.1ರಿಂದ ಹೊಸ ತೆರಿಗೆ ನಿಯಮ ಜಾರಿ; ಏನೆಲ್ಲಾ ಇರಲಿದೆ ಗೊತ್ತಾ?

New income tax rules: ಸಂಸತ್ತು ಅಂಗೀಕರಿಸಿದ ಸರಳೀಕೃತ ನೇರ ತೆರಿಗೆ ಶಾಸನವನ್ನು ಕಾರ್ಯಗತಗೊಳಿಸಲು ಕೇಂದ್ರೀಯ ನೇರ ತೆರಿಗೆ ಮಂಡಳಿ (CBDT) ಶುಕ್ರವಾರ ಆದಾಯ ತೆರಿಗೆ ನಿಯಮಗಳು, 2026 ಅನ್ನು ಅಧಿಸೂಚನೆ ಹೊರಡಿಸಿದ್ದು, ಹೊಸ ಚೌಕಟ್ಟು ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ.

ಹೊರ್ಮುಜ್ ಜಲಸಂಧಿ ದಾಟಿ ಭಾರತಕ್ಕೆ ಬರಲು ಸಿದ್ಧವಾಗಿದೆ ಇನ್ನೆರಡು ಎಲ್‌ಪಿಜಿ ಟ್ಯಾಂಕರ್‌ಗಳು

ಭಾರತಕ್ಕೆ ಬರಲಿದೆ ಇನ್ನೆರಡು ಎಲ್‌ಪಿಜಿ ಟ್ಯಾಂಕರ್‌ಗಳು

ಇರಾನ್ ಯುದ್ಧ ಪ್ರಾರಂಭವಾದಾಗಿನಿಂದ ತೈಲ ಸರಕು ಸಾಗಾಟಕ್ಕೆ ಬಹುದೊಡ್ಡ ಅಡ್ಡಿಯಾಗಿರುವುದು ಹೊರ್ಮುಜ್ ಜಲಸಂಧಿ. ಇಸ್ರೇಲ್ ಮತ್ತು ಯುಎಸ್ ಸೇನಾ ಪಡೆಯು ಇರಾನ್ ಮೇಲೆ ನಡೆಸಿದ ದಾಳಿಗೆ ಪ್ರತಿಯಾಗಿ ಇರಾನ್ ಹೊರ್ಮುಜ್ ಜಲಸಂಧಿಯನ್ನು ಮುಚ್ಚಿ ಮಧ್ಯ ಪ್ರಾಚ್ಯ ರಾಷ್ಟ್ರಗಳ ಸರಕು ಸಾಗಣೆಗೆ ಅಡ್ಡಿ ಪಡಿಸಿದೆ. ಈ ಮೂಲಕ ಜಾಗತಿಕ ಮಾರುಕಟ್ಟೆ ಮೇಲೆ ಪರಿಣಾಮ ಉಂಟು ಮಾಡಿದೆ. ಆದರೆ ಇದೀಗ ಈ ಜಲಸಂಧಿಯಿಂದ ಎರಡು ಎಲ್‌ಪಿಜಿ ಟ್ಯಾಂಕರ್‌ಗಳು ಭಾರತಕ್ಕೆ ಬರಲು ಸಿದ್ಧವಾಗಿದೆ.

ಇರಾನ್ ದಾಳಿಯಿಂದ ಕತಾರ್ ಎಲ್‌ಎನ್‌ಜಿ ರಫ್ತಿಗೆ ಅಡ್ಡಿ: ಭಾರತ ಸೇರಿ ಹಲವು ರಾಷ್ಟ್ರಗಳ ಕಾಡಲಿದ್ಯಾ  ಇಂಧನ ಕೊರತೆ?

ಇರಾನ್ ದಾಳಿ; ಭಾರತಕ್ಕೆ ಇಂಧನ ಕೊರತೆ ಭೀತಿ

ಇರಾನ್ ಕ್ಷಿಪಣಿ ದಾಳಿಯಿಂದ ಕತಾರ್‌ನ ರಾಸ್ ಲಫ್ಫಾನ್ LNG ಘಟಕಗಳಿಗೆ ಭಾರಿ ಹಾನಿಯಾಗಿದ್ದು, ಅನಿಲ ರಫ್ತು ವ್ಯತ್ಯಯ ಉಂಟಾಗಿದೆ. ಇದರ ಪರಿಣಾಮ ಭಾರತ ಸೇರಿದಂತೆ ಏಷ್ಯಾ ಮತ್ತು ಯುರೋಪ್ ದೇಶಗಳಲ್ಲಿ ಇಂಧನ ಸಂಕಷ್ಟ ಭೀತಿ ಹೆಚ್ಚಿದೆ.

ಎಟಿಎಂನಲ್ಲಿ ಹಣ ಬಾರದೇ ಇರುವುದಕ್ಕೆ ಸಿಕ್ಕಿತು  3.28 ಲಕ್ಷ ರೂ. ಪರಿಹಾರ

ಬ್ಯಾಂಕ್ ಆಫ್ ಬರೋಡಾ ವಿರುದ್ಧ ಹೋರಾಟಕ್ಕೆ ಸಿಕ್ಕಿತು ಗೆಲುವು

ಎಟಿಎಂನಿಂದ ಹಣ ಪಡೆಯಲು ಹೋದವನಿಗೆ ಹಣ ಸಿಗಲಿಲ್ಲ. ಬ್ಯಾಂಕ್ ಖಾತೆಯಿಂದ ಹಣ ಕಡಿತಗೊಂಡಿತ್ತು. ಈ ಬಗ್ಗೆ ದೂರು ಸಲ್ಲಿಸಿದ ಸೂರತ್‌ನ ಜಿಲ್ಲಾ ಗ್ರಾಹಕ ವಿವಾದ ಪರಿಹಾರ ಆಯೋಗವು ಒಂಬತ್ತು ವರ್ಷಗಳ ಬಳಿಕ ಗ್ರಾಹಕನಿಗೆ 3.28 ಲಕ್ಷ ರೂ. ಪರಿಹಾರವನ್ನು ಪಾವತಿಸುವಂತೆ ಸಾರ್ವಜನಿಕ ವಲಯದ ಬ್ಯಾಂಕಿಗೆ ಆದೇಶಿಸಿದೆ.

ತೈಲ ಬಿಕ್ಕಟ್ಟಿನ ನಡುವೆ ಮತ್ತೊಂದು ಬರೆ; ಪ್ರತಿ ಆರ್ಡರ್‌ಗೆ 2.40 ರುಪಾಯಿ ಹೆಚ್ಚಿಸಿದ ಝೊಮೆಟೊ

ಝೊಮೆಟೊದಲ್ಲಿ ಪ್ರತಿ ಆರ್ಡರ್‌ಗೆ 2.40 ರುಪಾಯಿ ಹೆಚ್ಚಳ

Zomato hikes prices: ಆಹಾರ ವಿತರಣಾ ಸಂಸ್ಥೆ ಝೊಮೆಟೊ ಬಳಕೆದಾರರಿಗೆ ವಿಧಿಸುವ ಪ್ಲಾಟ್‌ಫಾರ್ಮ್ ಶುಲ್ಕವನ್ನು ಪ್ರತಿ ಆರ್ಡರ್‌ಗೆ 2.40 ರುಪಾಯಿಯಿಂದ 14.90 ರುಪಾಯಿಗೆ ಹೆಚ್ಚಿಸಿದೆ. ಇದರ ಪ್ರತಿಸ್ಪರ್ಧಿ ಸ್ವಿಗ್ಗಿ ತನ್ನ ಬಳಕೆದಾರರಿಂದ ಜಿಎಸ್‌ಟಿ ಸೇರಿದಂತೆ 14.99 ರುಪಾಯಿ ಆನ್‌ಲೈನ್‌ ಪ್ಲಾಟ್‌ಫಾರ್ಮ್‌ಗೆ ವಿಧಿಸುತ್ತಿದೆ. ಮೂರನೇ ಅತಿದೊಡ್ಡ ಆಹಾರ ವಿತರಣೆ ಸಂಸ್ಥೆಯಾಗಿರುವ ಮ್ಯಾಜಿಕ್‌ಪಿನ್ ಮಾತ್ರ ಸದ್ಯ ಶುಲ್ಕ ಹೆಚ್ಚಿಸಲ್ಲ ಎಂದು ಹೇಳಿದೆ.

ಇರಾನ್ ಯುದ್ಧ ಎಫೆಕ್ಟ್: 11 ವಾಯುಪ್ರದೇಶ ತಪ್ಪಿಸಲು ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ಕೇಂದ್ರದ ಸೂಚನೆ

11 ವಾಯುಪ್ರದೇಶಕ್ಕಿಲ್ಲ ಭಾರತದ ವಿಮಾನ ಎಂಟ್ರಿ

ಇಸ್ರೇಲ್ ಮತ್ತು ಯುಎಸ್ ಸೇನಾ ಪಡೆ ಮತ್ತು ಇರಾನ್ ನಡುವಿನ ಸಂಘರ್ಷ ತೀವ್ರಗೊಂಡಿರುವುದರಿಂದ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಭಾರತದ ವಿಮಾನಯಾನ ಸಂಸ್ಥೆಗಳು ಇರಾನ್, ಇಸ್ರೇಲ್, ಲೆಬನಾನ್ ಸೇರಿದಂತೆ ಹೆಚ್ಚಿನ ಅಪಾಯ ವಲಯಗಳಾದ 11 ವಾಯುಪ್ರದೇಶಗಳನ್ನು ಬಿಟ್ಟು ಪ್ರಯಾಣಿಸಲು ಕೇಂದ್ರ ಸರ್ಕಾರ ಸೂಚನೆ ನೀಡಿದೆ.

Gold Price Today On 20th March: ಮತ್ತೆ ಏರಿದ ಚಿನ್ನದ ಬೆಲೆ; ಯುಗಾದಿ ಬಳಿಕ ಬೆಂಗಳೂರಿನಲ್ಲಿ ದರ ಎಷ್ಟಿದೆ?

ಮತ್ತೆ ಏರಿದ ಚಿನ್ನದ ಬೆಲೆ; ಯುಗಾದಿ ಬಳಿಕ ಬೆಂಗಳೂರಿನಲ್ಲಿ ದರ ಎಷ್ಟಿದೆ?

ನಿನ್ನೆ ಯುಗಾದಿ ದಿನ ಭಾರೀ ಇಳಿಕೆ ಕಂಡಿದ್ದ ಚಿನ್ನದ ಬೆಲೆಯಲ್ಲಿಂದು ಕೊಂಚ ಏರಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ದರ 60 ರೂ. ಏರಿಕೆ ಕಂಡು ಬಂದಿದ್ದು, 13,835 ರೂ. ಆಗಿದೆ.

ಚೀನಾಗೆ ತೆರಳಬೇಕಿದ್ದ ಹಡಗು ಯೂ ಟರ್ನ್: ಮಾರ್ಚ್‌ 21ರಂದು ಭಾರತಕ್ಕೆ ಬರಲಿದೆ 7.7 ಲಕ್ಷ ಬ್ಯಾರೆಲ್ ತೈಲ ಹೊತ್ತ ರಷ್ಯಾದ ಟ್ಯಾಂಕರ್

ಭಾರತಕ್ಕೆ ಬರಲಿದೆ 7.7 ಲಕ್ಷ ಬ್ಯಾರೆಲ್ ತೈಲ ಹೊತ್ತ ರಷ್ಯಾದ ಟ್ಯಾಂಕರ್

Russian oil tanker: ಚೀನಾಕ್ಕೆ ತೆರಳಬೇಕಾಗಿದ್ದ, 7.7 ಲಕ್ಷ ಬ್ಯಾರೆಲ್ ಕಚ್ಚಾ ತೈಲವನ್ನು ಹೊತ್ತೊಯ್ಯುತ್ತಿದ್ದ ರಷ್ಯಾದ ಟ್ಯಾಂಕರ್ ಹಡಗು ದಕ್ಷಿಣ ಚೀನಾ ಸಮುದ್ರದಲ್ಲಿ ಯೂ ಟರ್ನ್ ತೆಗೆದುಕೊಂಡು ಇದೀಗ ಭಾರತದತ್ತ ಬರುತ್ತಿದೆ. ಫೆಬ್ರವರಿ 28ರಂದು ಯುದ್ಧ ಪ್ರಾರಂಭವಾದ ಸುಮಾರು ಮೂರು ವಾರಗಳಲ್ಲಿ, ತೈಲ ಮತ್ತು ಅನಿಲ ದಾಸ್ತಾನುಗಳನ್ನು ಹೇರಿಕೊಂಡ, ಭಾರತೀಯ ಧ್ವಜ ಹೊತ್ತ ನಾಲ್ಕು ಹಡಗುಗಳು ಈಗಾಗಲೇ ಭಾರತಕ್ಕೆ ಬಂದಿವೆ.

ತೈಲ ದರ 116 ಡಾಲರ್‌ಗೆ ಹೆಚ್ಚಳ,  ಸೆನ್ಸೆಕ್ಸ್‌ 2,500  ಅಂಕ ಮಹಾ ಪತನ ; ಚಿನ್ನ-ಬೆಳ್ಳಿ ದರ ಇಳಿಕೆ

ತೈಲ ದರ 116 ಡಾಲರ್‌ಗೆ ಹೆಚ್ಚಳ; ಸೆನ್ಸೆಕ್ಸ್‌ 2,500 ಅಂಕ ಮಹಾ ಪತನ

ಇರಾನ್‌ ಯುದ್ಧದ ಪರಿಣಾಮ ಕಚ್ಚಾ ತೈಲ ದರ ಗುರುವಾರ ಪ್ರತಿ ಬ್ಯಾರೆಲ್‌ಗೆ 116 ಡಾಲರ್‌ಗೆ ಜಿಗಿಯಿತು. ಇದರ ಬೆನ್ನಲ್ಲೇ ಜಾಗತಿಕ ಷೇರು ಮಾರುಕಟ್ಟೆ ಪತನವಾಗಿದೆ. ಸೆನ್ಸೆಕ್ಸ್‌ 2,500 ಅಂಕಗಳಿಗೂ ಹೆಚ್ಚು ನಷ್ಟಕ್ಕೀಡಾಯಿತು. ದಿನದ ಮುಕ್ತಾಯಕ್ಕೆ ಸೆನ್ಸೆಕ್ಸ್‌ 2,496 ಅಂಕ ನಷ್ಟಕ್ಕೀಡಾಗಿದ್ದು 74,207ಕ್ಕೆ ವಹಿವಾಟು ಮುಕ್ತಾಯಗೊಳಿಸಿತು.

ನವೀಕರಿಸಬಹುದಾದ ಇಂಧನದಲ್ಲಿ ಭಾರತ 3ನೇ ಅತಿದೊಡ್ಡ ರಾಷ್ಟ್ರ: ಪ್ರಲ್ಹಾದ್‌ ಜೋಶಿ

ನವೀಕರಿಸಬಹುದಾದ ಇಂಧನದಲ್ಲಿ ಭಾರತ 3ನೇ ಅತಿದೊಡ್ಡ ರಾಷ್ಟ್ರ: ಜೋಶಿ

Pralhad Joshi: ಭಾರತದಲ್ಲಿ ನವೀಕರಿಸಬಹುದಾದ ಇಂಧನ ವಲಯ ಪರ್ಯಾಯ ಇಂಧನ ಉತ್ಪಾದನಾ ಕೇಂದ್ರವಾಗಿ ರೂಪಿತವಾಗುತ್ತಿದೆ. ದಶಕದ ಹಿಂದೆ ದೂರದ ಬೆಟ್ಟದಂತಿದ್ದ ನವೀಕರಿಸಬಹುದಾದ ಇಂಧನ ಪ್ರಯಾಣ ವಾಸ್ತವದಲ್ಲಿ ಸಾಧನೆಯ ಪಥದಲ್ಲಿದೆ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್‌ ಜೋಶಿ ಸಂತಸ ವ್ಯಕ್ತಪಡಿಸಿದ್ದಾರೆ.

ಸಂಘರ್ಷ ವಾತಾವರಣದ ನಡುವೆಯೇ ತೈಲ ರಫ್ತು ಆರಂಭಿಸಿದ ಇರಾಕ್

ಇರಾಕ್ ನಿಂದ ತೈಲ ರಫ್ತು ಆರಂಭ

ಇರಾನ್ ಮತ್ತು ಇಸ್ರೇಲ್ ಹಾಗೂ ಯುಎಸ್ ಸೇನಾ ಪಡೆಗಳ ಸಂಘರ್ಷದ ಪರಿಣಾಮ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಉದ್ವಿಗ್ನತೆ ಉಂಟಾಗಿದ್ದು, ಜಾಗತಿಕ ಮಟ್ಟದಲ್ಲಿ ತೈಲ ಬಿಕ್ಕಟ್ಟಿಗೆ ಕಾರಣವಾಗಿದೆ. ಸಂಘರ್ಷದ ಆತಂಕದ ನಡುವೆಯೇ ಇದೀಗ ಇರಾಕ್ ತೈಲ ರಫ್ತು ಚಟುವಟಿಕೆಯನ್ನು ಪ್ರಾರಂಭಿಸಿದೆ. ಇದಕ್ಕಾಗಿ ಇರಾಕ್ ಗೆ ಟರ್ಕಿ ಸಾಥ್ ನೀಡಿದೆ.

ಹೊಂಡಾ ಕಾರ್ಸ್ ಇಂಡಿಯಾದಿಂದ ಬರಲಿರುವ ತನ್ನ ಮೊದಲ ಎಲೆಕ್ಟ್ರಿಕ್ ಎಸ್.ಯು.ವಿ.ಯ ಅಖಿಲ ಭಾರತ ಪರೀಕ್ಷಾ ಚಾಲನೆ ಪ್ರಾರಂಭ

ಮೊದಲ ಎಲೆಕ್ಟ್ರಿಕ್ ಎಸ್.ಯು.ವಿ.ಯ ಅಖಿಲ ಭಾರತ ಪರೀಕ್ಷಾ ಚಾಲನೆ ಪ್ರಾರಂಭ

ಅಖಿಲ ಭಾರತ ಸಾರ್ವಜನಿಕ ರಸ್ತೆ ಪರಿಶೀಲನಾ ಪರೀಕ್ಷೆಯ ಪ್ರಾರಂಭವು ನಮ್ಮ ವಿದ್ಯುದೀಕರಣದ ಪ್ರಯಾಣದಲ್ಲಿ ಪ್ರಮುಖ ಮೈಲಿಗಲ್ಲಾಗಿದೆ. ಭಾರತವು ವಿಶಿಷ್ಟ ಚಾಲನೆಯ ಮತ್ತು ವಾತಾವರಣ ಪರಿಸ್ಥಿತಿಗಳನ್ನು ಹೊಂದಿದೆ ಮತ್ತು ನಮಗೆ ನಮ್ಮ ವಿದ್ಯುತ್ ವಾಹನವನ್ನು ನೈಜ ಜಗತ್ತಿನ ಪರಿಸರ ಗಳನ್ನು ಇಡಿಯಾಗಿ ಪರೀಕ್ಷಿಸುವುದು ಬಹಳ ಮುಖ್ಯವಾಗಿದೆ.

ನವರಾತ್ರಿ, ಯುಗಾದಿ ಮತ್ತು ಈದ್ ಸಂಭ್ರಮಕ್ಕಾಗಿ Amazon.in ಇಂದ AI ಆಧಾರಿತ ಹಬ್ಬದ ಶಾಪಿಂಗ್‌

Amazon.in ಇಂದ AI ಆಧಾರಿತ ಹಬ್ಬದ ಶಾಪಿಂಗ್‌

ಸಾಂಪ್ರದಾಯಿಕ ಉಪವಾಸದ ಪದಾರ್ಥಗಳು ಮತ್ತು ಪ್ರೀಮಿಯಂ ಒಣ ಹಣ್ಣುಗಳಿಂದ ಹಿಡಿದು, ಸಾಂಪ್ರದಾಯಿಕ ಸಿಹಿತಿಂಡಿಗಳು ಮತ್ತು ಪಾನೀಯಗಳವರೆಗೆ ಎಲ್ಲವನ್ನೂ ಅಮೆಜಾನ್ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುತ್ತಿದೆ. ಗ್ರಾಹಕರು ಟಾಟಾ ಸಂಪನ್ನ, ಫಾರ್ಮ್ಲಿ, ಗೋ ದೇಸಿ, ಸ್ಟೋರಿಯಾ, ನಟ್ರಾಜ್ ನಂತಹ ಪ್ರಸಿದ್ಧ ಬ್ರಾಂಡ್‌ಗಳ ಹಬ್ಬದ ವಿಶೇಷ ಉತ್ಪನ್ನಗಳನ್ನು ಖರೀದಿಸಬಹುದು.

L40 Ultra AE ಮತ್ತು D20 Ultra ಆಲ್-ಇನ್-ವನ್ ರೋಬೋಟಿಕ್ ವ್ಯಾಕ್ಯೂಮ್‌ಗಳ ಬಿಡುಗಡೆ

D20 Ultra ಆಲ್-ಇನ್-ವನ್ ರೋಬೋಟಿಕ್ ವ್ಯಾಕ್ಯೂಮ್‌ ಬಿಡುಗಡೆ

ಭಾರತೀಯ ಗ್ರಾಹಕರು ಹೆಚ್ಚಾಗಿ ಸ್ಮಾರ್ಟ್ ಹೋಮ್ ಪರಿಹಾರಗಳನ್ನು ಸ್ವೀಕರಿಸುತ್ತಿರುವುದರಿಂದ, ಡ್ರೀಮ್ ಹೆಚ್ಚು ಸೌಕರ್ಯ, ಪರಿಣಾಮಕಾರಿತ್ವ ಮತ್ತು ವೈಯಕ್ತಿಕ ಸ್ವಚ್ಛತಾ ಅನುಭವಗಳನ್ನು ನೀಡುವ ಉತ್ಪನ್ನಗಳ ಮೂಲಕ ನವೀನತೆಯ ಮಿತಿಗಳನ್ನು ವಿಸ್ತರಿಸುತ್ತಿದೆ. ಸ್ವಯಂಚಾಲಿತ ಮೊಪ್ಪಿಂಗ್ ವ್ಯವಸ್ಥೆಗಳು, ಸ್ಮಾರ್ಟ್ ಕಾರ್ಪೆಟ್ ಪತ್ತೆಹಚ್ಚುವಿಕೆ ಮತ್ತು ಸ್ವಯಂ ಸ್ವಚ್ಛತೆ ಹಾಗೂ ನಿರ್ವಹಣಾ ಸಾಮರ್ಥ್ಯಗಳೊಂದಿಗೆ ಬಹುಕಾರ್ಯ ಡಾಕ್‌ಗಳನ್ನು ಹೊಂದಿರುವ ಈ ಹೊಸ ಉತ್ಪನ್ನಗಳು ಕೈಯಲ್ಲಿ ಕೆಲಸ ಮಾಡದೆ ಸುಲಭವಾಗಿ ಸ್ವಚ್ಛತೆ ಮಾಡುವ ಅನುಭವ ನೀಡುತ್ತವೆ.

80,886 ಮೆಟ್ರಿಕ್ ಟನ್ ಕಚ್ಚಾ ತೈಲದೊಂದಿಗೆ ಗುಜರಾತ್‌ ತಲುಪಿದ ಜಗ್‌ಲಡ್ಕಿ ಹಡಗು

ಭಾರತದ ತೈಲ ಸಮಸ್ಯೆಗೆ ಪರಿಹಾರ; ಗುಜರಾತ್‌ ತಲುಪಿತು ಮತ್ತೊಂದು ಹಡಗು

crude oil shipment: ಭಾರತದ ಧ್ವಜ ಹೊತ್ತ ಕಚ್ಚಾ ತೈಲ ಟ್ಯಾಂಕರ್ ಜಗ್‌ಲಡ್ಕಿ ಗುಜರಾತ್‌ನ ಅದಾನಿ ಬಂದರು ಮುಂದ್ರಾಗೆ ಯಶಸ್ವಿಯಾಗಿ ಆಗಮಿಸಿದೆ. ಈ ಸರಕುಗಳನ್ನು ಯುಎಇಯಿಂದ ತರಲಾಗಿದ್ದು, ಫುಜೈರಾ ಬಂದರಿನಲ್ಲಿ ಲೋಡ್ ಮಾಡಲಾಯಿತು. ಹಡಗು ಸುಮಾರು 80,886 ಮೆಟ್ರಿಕ್ ಟನ್ (MT) ಕಚ್ಚಾ ತೈಲವನ್ನು ಹೊತ್ತು ಬಂದರನ್ನು ತಲುಪಿತು.

ಸೆನ್ಸೆಕ್ಸ್‌ 633 ಅಂಕ ಏರಿಕೆ, ನಿಫ್ಟಿ 23,777ಕ್ಕೆ ಜಿಗಿತ: ಇರಾನ್‌ ಯುದ್ಧ ಬಳಿಕ ಏರಿದ ಸ್ಟಾಕ್ಸ್‌ ಯಾವುದು?

ಯುದ್ಧದ ನಡುವೆಯೂ ಸೆನ್ಸೆಕ್ಸ್-ನಿಫ್ಟಿ ಏರಿಕೆಗೆ ಕಾರಣವೇನು?

Sensex-Nifty: ಮುಂಬಯಿ ಷೇರು ಮಾರುಕಟ್ಟೆ‌ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಇವತ್ತು 633 ಅಂಕ ಏರಿಕೆಯಾಗಿದ್ದು, 76,704 ಕ್ಕೆ ಸ್ಥಿರವಾಯಿತು. ನಿಫ್ಟಿ 196 ಅಂಕ ಚೇತರಿಸಿದ್ದು 23,777ಕ್ಕೆ ದಿನದ ವಹಿ ವಾಟು ಮುಕ್ತಾಯಗೊಳಿಸಿತು. ಐಟಿ ಸ್ಟಾಕ್ಸ್‌ ಏರಿಕೆ ದಾಖಲಿಸಿದ್ದುದು ವಿಶೇಷವಾಗಿತ್ತು. ಎಟರ್ನಲ್‌, ಮಹೀಂದ್ರಾ & ಮಹೀಂದ್ರಾ ಲಾಭ ಗಳಿಸಿದರೆ, ಎಚ್‌ಡಿಎಫ್‌ಸಿ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌, ಟಾಟಾ ಸ್ಟೀಲ್‌ ನಷ್ಟಕ್ಕೀಡಾಯಿತು..

ಶ್ರೀಮಂತರಾಗಬೇಕೆ? ಈ ತಪ್ಪುಗಳನ್ನು ಮಾಡಲೇಬಾರದು

ಹಣ ಗಳಿಸುವುದು ಹೇಗೆ?

ಶ್ರೀಮಂತನಾಗುವ ಆಸೆ ಎಲ್ಲರಲ್ಲೂ ಇರುತ್ತದೆ. ಆದರೆ ನಾವು ಮಾಡುವ ಕೆಲವೊಂದು ಸಣ್ಣ ಪುಟ್ಟ ತಪ್ಪುಗಳು ನಮ್ಮನ್ನು ಶ್ರೀಮಂತ ಆಗದಂತೆ ತಡೆಯುತ್ತದೆ. ಹೀಗಾಗಿ ಶ್ರೀಮಂತನಾಗಬೇಕಾದರೆ ಕೆಲವೊಂದು ತಪ್ಪುಗಳನ್ನು ಮಾಡಲೇಬಾರದು ಎನ್ನುತ್ತಾರೆ ತಜ್ಞರು. ಅಂತಹ ತಪ್ಪುಗಳು ಯಾವುದು ಎನ್ನುವ ಕುರಿತು ಮೈಂಡ್ ಥೆರಪಿಸ್ಟ್, ವೆಲ್ತ್ ಎಕ್ಸ್‌ಪರ್ಟ್‌ ಮೈಸೂರಿನ ಸುರೇಶ ಶೈವ ʼವಿಶ್ವವಾಣಿ ಟಿವಿ ಸ್ಪೆಷಲ್‌ʼ ಯೂಟ್ಯೂಬ್‌ ಚಾನೆಲ್‌ನಲ್ಲಿ ಹೇಳಿರುವುದು ಹೀಗೆ...

ವಿಮಾನ ಯಾತ್ರಿಕರಿಗೆ ಗುಡ್ ನ್ಯೂಸ್; ಹೆಚ್ಚುವರಿ ಶುಲ್ಕವಿಲ್ಲ, ಶೇಕಡಾ 60ರಷ್ಟು ಸೀಟು ಉಚಿತ

ವಿಮಾನ ಪ್ರಯಾಣಿಕರಿಗೆ ಶುಭ ಸುದ್ದಿ

ಯುಗಾದಿಗೂ ಮುನ್ನವೇ ದೇಶದ ವಿಮಾನ ಯಾತ್ರಿಕರಿಗೆ ಶುಭ ಸುದ್ದಿಯೊಂದು ಸಿಕ್ಕಿದೆ. ಇನ್ನು ಮುಂದೆ ವಿಮಾನ ಟಿಕೆಟ್ ಬುಕ್ಕಿಂಗ್ ವೇಳೆ ಯಾವುದೇ ಗುಪ್ತ ಶುಲ್ಕವನ್ನು ವಿಧಿಸಲಾಗುವುದಿಲ್ಲ. ಪ್ರಯಾಣಿಕರಿಗೆ ಪರಿಹಾರವಾಗಿ ಹೆಚ್ಚುವರಿ ಶುಲ್ಕವಿಲ್ಲದೆ ಶೇಕಡಾ 60ರಷ್ಟು ಸೀಟು ಉಚಿತವಾಗಿ ನೀಡುವುದಾಗಿ ಭಾರತೀಯ ವಿಮಾನಯಾನ ಸಂಸ್ಥೆಯು ತಿಳಿಸಿದೆ.

ಚೀನಾಕ್ಕೆ ತೆರಳುತ್ತಿದ್ದ ರಷ್ಯಾದ ತೈಲ ಟ್ಯಾಂಕರ್ ಯೂಟರ್ನ್; ಮಂಗಳೂರಿನತ್ತ ಪಯಣ

ಚೀನಾಕ್ಕೆ ತೆರಳುತ್ತಿದ್ದ ರಷ್ಯಾದ ತೈಲ ಟ್ಯಾಂಕರ್ ಈಗ ಮಂಗಳೂರಿನತ್ತ

Russian oil tanker takes a U-turn: ಚೀನಾಕ್ಕೆ ತೆರಳುತ್ತಿದ್ದ ರಷ್ಯಾದ ತೈಲ ತುಂಬಿದ ಟ್ಯಾಂಕರ್ ದಕ್ಷಿಣ ಚೀನಾ ಸಮುದ್ರದಲ್ಲಿ ದಿಕ್ಕು ಬದಲಿದ್ದು, ಇದೀಗ ಭಾರತಕ್ಕೆ ಯೂಟರ್ನ್ ತೆಗೆದುಕೊಂಡಿದೆ. ಅಕ್ವಾ ಟೈಟಾನ್ ಮಾರ್ಚ್ 21ರಂದು ನವಮಂಗಳೂರು ಬಂದರಿಗೆ ತಲುಪಲಿದ್ದು, ಅದು ಜನವರಿ ಅಂತ್ಯದ ವೇಳೆಯಲ್ಲಿ ಬಾಲ್ಟಿಕ್ ಸಮುದ್ರದ ಬಂದರಿನಿಂದ ಉರಾಲ್ಸ್ ತೈಲ ಸರಕುಗಳನ್ನು ಲೋಡ್ ಮಾಡಿಕೊಂಡು ಹೊರಟಿತ್ತು.

Gold Price Today On 18th March: ಯುಗಾದಿ ಮುನ್ನಾ ದಿನವೇ ಗ್ರಾಹಕರಿಗೆ ಸಿಕ್ತು ಗುಡ್‌ನ್ಯೂಸ್‌; ಚಿನ್ನದ ದರದಲ್ಲಿ ಇಳಿಕೆ

ಚಿನ್ನದ ದರದಲ್ಲಿ ಮತ್ತೆ ಇಳಿಕೆ

Gold Rate Today: ಕೆಲವು ದಿನಗಳಿಂದ ಇಳಿಕೆಯ ಹಾದಿಯಲ್ಲಿರುವ ಚಿನ್ನದ ದರ ಬುಧವಾರವೂ ಕಡಿಮೆಯಾಗಿದೆ. ಇಂದು ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 30 ರುಪಾಯಿ ಇಳಿಕೆಯಾಗಿ 14,460 ರುಪಾಯಿಗೆ ಬಂದು ತಲುಪಿದೆ. ಇನ್ನು 24 ಕ್ಯಾರಟ್‌ನ 1 ಗ್ರಾಂ ಚಿನ್ನ 33 ರುಪಾಯಿ ಕಡಿಮೆಯಾಗಿದ್ದು, 15,775 ರುಪಾಯಿಗೆ ಕುಸಿದಿದೆ.

ವಾಯುಪ್ರದೇಶ ನಿರ್ಬಂಧದ ನಡುವೆ ಕತಾರ್ ಏರ್‌ವೇಸ್‌ನಲ್ಲಿ ತವರಿಗೆ ಮರಳಿದ 1,600 ಭಾರತೀಯರು

5 ಕತಾರ್ ಏರ್‌ವೇಸ್‌ ವಿಮಾನಗಳಲ್ಲಿ ತವರಿಗೆ ಮರಳಿದ ಭಾರತೀಯರು

ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಉಂಟಾಗಿರುವ ಉದ್ವಿಗ್ನತೆಯ ಪರಿಣಾಮ ವಿಶ್ವದ ಎಲ್ಲ ರಾಷ್ಟ್ರಗಳನ್ನು ತಟ್ಟಿದೆ. ಅಲ್ಲಲ್ಲಿ ಸಿಲುಕಿರುವ ವಿದೇಶಿಗರು ತವರಿಗೆ ಮರಳಲು ಕಾತರಿಸುತ್ತಿದ್ದಾರೆ. ವಾಯುಪ್ರದೇಶದ ನಿರ್ಬಂಧಗಳ ನಡುವೆ ಇದೀಗ 5 ಕತಾರ್ ಏರ್‌ವೇಸ್‌ ವಿಮಾನಗಳಲ್ಲಿ 1,600 ಭಾರತೀಯರು ತವರಿಗೆ ಮರಳಿದ್ದಾರೆ ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.

ಸಣ್ಣ ವ್ಯಾಪಾರಿಗಳಿಗೆ ಸಾಲದ ಲಭ್ಯತೆ ಹಿಂದೆಂದಿಗಿಂತ ಈಗ ಏಕೆ ಮುಖ್ಯವಾಗಿದೆ ?

ಸಣ್ಣ ವ್ಯಾಪಾರಿಗಳಿಗೆ ಸಾಲದ ಲಭ್ಯತೆ ಹಿಂದೆಂದಿಗಿಂತ ಈಗ ಏಕೆ ಮುಖ್ಯವಾಗಿದೆ ?

ಸಣ್ಣ ವ್ಯಾಪಾರಗಳು ಸಾಮಾನ್ಯವಾಗಿ ಬಿಗಿಯಾದ ನಗದು ಆವರ್ತಗಳಲ್ಲಿ ಕೆಲಸ ಮಾಡುತ್ತವೆ. ಪಾವತಿಗಳು ತಡವಾಗಿ ಬರಬಹುದು, ಆದರೆ ಬಾಡಿಗೆ, ವೇತನಗಳು ಮತ್ತು ಇನ್ವೆಂಟರಿ ವೆಚ್ಚಗಳು ಕಾಯುವುದಿಲ್ಲ. ಅಂತಹ ಸನ್ನಿವೇಶಗಳಲ್ಲಿ ಔಪಚಾರಿಕ ಸಾಲದ ಲಭ್ಯತೆಯು ಉದ್ಯಮ ಮಾಲೀಕ ರಿಗೆ ನಿರಾಳತೆ ಒದಗಿಸುತ್ತದೆ.

Loading...