ಚಿನ್ನದ ದರದಲ್ಲಿಂದು ಯಥಾಸ್ಥಿತಿ; ಬೆಲೆ ಇಲ್ಲಿದೆ
Gold Price Today: ಚಿನ್ನದ ದರದಲ್ಲಿಂದು ಯಥಾಸ್ಥಿತಿ ಕಂಡು ಬಂದಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್ನ 1 ಗ್ರಾಂ ಚಿನ್ನದ ದರದಲ್ಲಿ 14,220 ರೂ. ಇದ್ದರೆ, 24 ಕ್ಯಾರಟ್ನ 1 ಗ್ರಾಂ ಚಿನ್ನದ ದರ 15,513 ರೂ. ಇದೆ.
ಉಪಯುಕ್ತತೆ, ಆಧುನಿಕ ಶೈಲಿ ಮತ್ತು ಸ್ವಯಂ ಅಭಿವ್ಯಕ್ತಿಯನ್ನು ಮೇಳೈಸಿ ಈ ಹೊಸ ಸರಣಿಯನ್ನು ವಿನ್ಯಾಸಗೊಳಿಸಲಾಗಿದೆ. "ಕ್ಯಾರಿ ಮೋರ್, ವೇ ಲೆಸ್" (ಹೆಚ್ಚು ವಸ್ತುಗಳನ್ನು ಕೊಂಡೊಯ್ಯಿರಿ, ತೂಕ ಮಾತ್ರ ತೀರಾ ಕಡಿಮೆ) ಎಂಬ ಶೀರ್ಷಿಕೆಯೊಂದಿಗೆ ಈ ಶ್ರೇಣಿಯನ್ನು ಪರಿಚಯಿಸಲಾಗಿದ್ದು, ಬ್ಯಾಗ್ ನ ತೂಕ ಅತ್ಯಂತ ಹಗುರವಾಗಿರುವುದರಿಂದ ಆಫೀಸ್ ಕೆಲಸ, ಪ್ರಯಾಣ ಹಾಗೂ ದೈನಂದಿನ ಬಳಕೆಗೆ ಇದು ಸೂಕ್ತ ಸಂಗಾತಿಯಾಗಲಿದೆ.
ಪ್ರಸಿದ್ಧ ಟ್ರಾವೆಲ್ ಪ್ಲಾಟ್ಫಾರ್ಮ್ ಮೇಕ್ ಮೈ ಟ್ರಿಪ್ ಇದೀಗ ಕೇಂದ್ರ ಪ್ರವಾಸೋದ್ಯಮ ಸಚಿವಾಲಯದೊಂದಿಗೆ ಮಹತ್ವದ ಒಪ್ಪಂದ ಮಾಡಿಕೊಂಡಿದೆ. 'ಇನ್ಕ್ರೆಡಿಬಲ್ ಇಂಡಿಯಾ' ಮತ್ತು 'ದೇಖೋ ಅಪ್ನಾ ದೇಶ್' ಅಭಿಯಾನದ ಅಡಿಯಲ್ಲಿ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದೇ ದೇಶದ 60ಕ್ಕೂ ಹೆಚ್ಚು ನಗರಗಳಲ್ಲಿ ಬರೋಬ್ಬರಿ 350ಕ್ಕೂ ಅಧಿಕ ವಿಶೇಷ ಗೈಡೆಡ್ ಟೂರ್ಗಳನ್ನು ಆರಂಭಿಸುತ್ತಿದೆ. ಈ ಕುರಿತ ಡಿಟೇಲ್ಸ್ ಇಲ್ಲಿದೆ.
ವಾಹನದಲ್ಲಿ ಪ್ರಯಾಣಿಸುವ ಮೊದಲು ಗ್ರಾಹಕರಿಂದ ಯಾವುದೇ ರೀತಿಯ ಸಲಹೆಗಳನ್ನು ಕೇಳುವುದು ಗ್ರಾಹಕ ರಕ್ಷಣಾ ಕಾಯ್ದೆಯನ್ನು ಉಲ್ಲಂಘಿಸುತ್ತದೆ. ವಾಹನ ಬುಕ್ಕಿಂಗ್ ವೇಳೆಯಲ್ಲಿ ಗ್ರಾಹಕರಿಂದ ಯಾವುದೇ ರೀತಿಯ ಸಲಹೆಗಳನ್ನು ಕೇಳುವಂತಿಲ್ಲ. ಇದು ಗ್ರಾಹಕರನ್ನು ದಾರಿ ತಪ್ಪಿಸುತ್ತದೆ ಎಂದು ಉಬರ್, ರಾಪಿಡೊದಂತಹ ಅಪ್ಲಿಕೇಶನ್ಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ.
ಭಾರತದ ಆರ್ಥಿಕ ಅಭಿವೃದ್ಧಿಯ ನಿಟ್ಟಿನಲ್ಲಿ ರಫ್ತನ್ನು ಗಣನೀಯವಾಗಿ ಹೆಚ್ಚಳ ಮಾಡುವುದು ನಿರ್ಣಾಯಕವಾಗಿದೆ ಎಂದು ವೋಲ್ವೊ ಸಮೂಹದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಕಮಲ್ ಬಾಲಿ ಹೇಳಿದರು. ಬೆಂಗಳೂರಿನಲ್ಲಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆ (ಎಫ್ಕೆ ಸಿಸಿಐ) ಆಯೋಜಿಸಿದ್ದ, 2026ನೇ ಸಾಲಿನ 21ನೇ ರಫ್ತು ಶ್ರೇಷ್ಠತಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಭಾಗವಹಿಸಿದ್ದರು.
PR Sreejesh: ಒಲಿಂಪಿಕ್ ಪದಕ ವಿಜೇತ ಹಾಗೂ ಭಾರತೀಯ ಹಾಕಿ ತಂಡದ ಮಾಜಿ ನಾಯಕ ಪಿ.ಆರ್. ಶ್ರೀಜೇಶ್ ಅವರು ಜಾವಾ - ಯೆಜ್ಡಿ ಮೋಟಾರ್ಸೈಕಲ್ಸ್ ಇತ್ತೀಚೆಗೆ ಬಿಡುಗಡೆ ಮಾಡಿದ್ದ '2026 ಯೆಜ್ಡಿ ರೋಡ್ಸ್ಟರ್ʼ ಬೈಕ್ ಅನ್ನು ಖರೀದಿಸಿದ ಭಾರತದ ಮೊಟ್ಟಮೊದಲ ಗ್ರಾಹಕ ಎಂಬ ಹೆಗ್ಗಳಿಕೆಗೆ ಶ್ರೀಜೇಶ್ ಪಾತ್ರರಾಗಿದ್ದಾರೆ.
ರಷ್ಯಾದ ತೈಲ ಖರೀದಿಗೆ ಭಾರತದ ಮೇಲೆ ಅಮೆರಿಕ ವಿಧಿಸಿರುವ ಸುಂಕಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಕೂಡಿ ಮಾತುಕತೆ ನಡೆಸಿ ಪರಿಹಾರ ಹುಡುಕುತ್ತಾರೆ. ರಷ್ಯಾದೊಂದಿಗೆ ತೈಲ ವ್ಯವಹಾರವು ಉಕ್ರೇನ್ ಯುದ್ಧಕ್ಕೆ ನೇರವಾಗಿ ಹಣಕಾಸು ಒದಗಿಸಿದೆ ಎಂದು ಶ್ವೇತಭವನದ ಹಿರಿಯ ವ್ಯಾಪಾರ ಸಲಹೆಗಾರ ಪೀಟರ್ ನವರೊ ಹೇಳಿದ್ದಾರೆ.
Gold Price Today On August 12th 2026: ಚಿನ್ನದ ದರದಲ್ಲಿಂದು ಭಾರೀ ಏರಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್ನ 1 ಗ್ರಾಂ ಚಿನ್ನದ ದರದಲ್ಲಿ 95 ರೂ. ಏರಿಕೆಯಾಗಿ 14,195 ರೂ. ಇದ್ದರೆ, 24 ಕ್ಯಾರಟ್ನ 1 ಗ್ರಾಂ ಚಿನ್ನದ ದರದಲ್ಲಿ 104 ರೂ. ಏರಿಕೆಯಾಗಿ 15,486 ರೂ. ಇದೆ. 22 ಕ್ಯಾರಟ್ನ 8 ಗ್ರಾಂ ಚಿನ್ನದ ಬೆಲೆ 1,13,560 ರೂ. ಹಾಗೂ 10 ಗ್ರಾಂ ಚಿನ್ನಕ್ಕೆ ನೀವು 1,41,950 ರೂ. ನೀಡಿದರೆ, 100 ಗ್ರಾಂ ಚಿನ್ನಕ್ಕೆ ನೀವು 14,19,500 ರೂ. ಪಾವತಿ ಮಾಡಬೇಕಾಗುತ್ತದೆ
Bank of India: ಬ್ಯಾಂಕ್ ಖಾತೆಗಳನ್ನು ಬ್ಲಾಕ್ ಮಾಡುವುದಾಗಿ ಬ್ಯಾಂಕ್ ಆಫ್ ಇಂಡಿಯಾ ಹೆಸರಿನಲ್ಲಿ ಹರಿದಾಡುತ್ತಿರುವ ಕೆವೈಸಿ ಅಪ್ಡೇಟ್ ನೋಟಿಸ್ ನಕಲಿ ಎಂದು ಪಿಐಬಿ ಫ್ಯಾಕ್ಟ್ ಚೆಕ್ ಸ್ಪಷ್ಟಪಡಿಸಿದೆ. ನೋಟಿಸ್ನಲ್ಲಿ ಸೂಚಿಸಿರುವ ಅನಧಿಕೃತ ಆ್ಯಪ್ ಡೌನ್ಲೋಡ್ ಮಾಡದಂತೆ ಹಾಗೂ ಅನುಮಾನಾಸ್ಪದ ಲಿಂಕ್ಗಳನ್ನು ಕ್ಲಿಕ್ ಮಾಡದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ.
ಚಾಯ್ಸ್ ಇಂಟರ್ ನ್ಯಾಷನಲ್ ಸಂಸ್ಥೆಯು 214 ಶಾಖಾ ಕಚೇರಿಗಳನ್ನು ಒಳಗೊಂಡಿದೆ. 48 ಪ್ರಾಜೆಕ್ಟ್ ಆಫೀಸ್ಗಳನ್ನು ನಡೆಸುತ್ತಿದೆ. 1992ರಲ್ಲಿ ಸ್ಥಾಪಿತವಾದ 'ಚಾಯ್ಸ್ ಗ್ರೂಪ್' ಒಂದು ಹಣಕಾಸು ಸಂಸ್ಥೆಯಾಗಿದ್ದು, ವ್ಯಕ್ತಿಗಳು, ಸಂಸ್ಥೆಗಳು ಮತ್ತು ಸರ್ಕಾರಗಳಿಗೆ ಎದುರಾಗುವ ಹಣಕಾಸಿನ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮತ್ತು ಅಂತರವನ್ನು ಕಡಿಮೆ ಮಾಡುವಲ್ಲಿ ತನ್ನದೇ ಆದ ಪರಂಪರೆಯನ್ನು ಹೊಂದಿದೆ.
Gold Price Today On August 10th 2026:: ಹಲವು ದಿನಗಳಿಂದ ಏರಿಳತದಲ್ಲಿದ್ದ ಚಿನ್ನದ ದರದಲ್ಲಿಂದು ಭಾರೀ ಏರಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್ನ 1 ಗ್ರಾಂ ಚಿನ್ನದ ದರದಲ್ಲಿ 290 ರೂ. ಏರಿಕೆಯಾಗಿ 14,220 ರೂ. ಇದ್ದರೆ, 24 ಕ್ಯಾರಟ್ನ 1 ಗ್ರಾಂ ಚಿನ್ನದ ದರದಲ್ಲಿ 316 ರೂ. ಏರಿಕೆಯಾಗಿ 15,513 ರೂ. ಇದೆ.
Marat Khusnullin: ಭಾರತದ ಜತೆ ನೇರ ಸಂಪರ್ಕ ಸಾಧಿಸಲು ರೈಲು ಮಾರ್ಗ ನಿರ್ಮಿಸುವ ಸಾಧ್ಯತೆ ಬಗ್ಗೆ ರಷ್ಯಾ ಚಿಂತನೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ. ʼʼರಷ್ಯಾದಿಂದ ಹಿಂದೂ ಮಹಾಸಾಗರಕ್ಕೆ ನೇರ ರೈಲ್ವೆ ಸಂಪರ್ಕ ಜಾಲವನ್ನು ನಿರ್ಮಿಸುವ ಅಗತ್ಯವಿದೆʼʼ ಎಂದು ರಷ್ಯಾದ ಉಪ ಪ್ರಧಾನಿ ಮರಾತ್ ಖುಸ್ನುಲ್ಲಿನ್ ಪ್ರತಿಪಾದಿಸಿದ್ದಾರೆ. ಒಂದುವೇಳೆ ಈ ಯೋಜನೆ ಸಾಕಾರಗೊಂಡರೆ ಹೊರ್ಮುಜ್ ಜಲಸಂಧಿಯ ಮೇಲಿನ ಅವಲಂಬನೆ ತಪ್ಪಲಿದೆ.
ರಷ್ಯಾ ವಿರುದ್ಧ ನಿರ್ಬಂಧ ವಿಧಿಸುವ ಸೆನೆಟರ್ ಲಿಂಡ್ಸೆ ಗ್ರಹಾಂ ಅವರ ಗೌರವಾರ್ಥ ಮಸೂದೆಯನ್ನು ಅಮೆರಿಕದ ಸೆನೆಟ್ ಅನುಮೋದಿಸಿದೆ. ಈ ಮಸೂದೆಯು ರಷ್ಯಾದ ತೈಲ ಅಥವಾ ನೈಸರ್ಗಿಕ ಅನಿಲದ ವಿಶ್ವದ ಐದು ಅಗ್ರ ಖರೀದಿದಾರರ ಮೇಲೆ ಪರಿಣಾಮ ಬೀರಲಿದೆ. ಉಕ್ರೇನ್ ಯುದ್ಧ ಪ್ರಾರಂಭಿಸಿದ್ದಕ್ಕಾಗಿ ರಷ್ಯಾ ವಿರುದ್ಧ ಹೊಸ ನಿರ್ಬಂಧಗಳನ್ನು ಗ್ರಹಾಂ ಬಲವಾಗಿ ಪ್ರತಿಪಾದಿಸಿದ್ದರಿಂದ ಅವರ ಹೆಸರನ್ನು ಈ ಮಸೂದೆಗೆ ಇಡಲಾಗಿದೆ.
US Ambassador Sergio Gor: ಕರ್ನಾಟಕದೊಂದಿಗೆ ತನ್ನ ಪಾಲುದಾರಿಕೆಯನ್ನು ವಿಸ್ತರಿಸಲು ಅಮೆರಿಕ ಬದ್ಧವಾಗಿದೆ ಎಂದು ಭಾರತದಲ್ಲಿರುವ ರಾಯಭಾರಿ ಸೆರ್ಗಿಯೊ ಗೋರ್ ಹೇಳಿದರು. ಕರ್ನಾಟಕದಲ್ಲಿ 1,000 ಕ್ಕೂ ಹೆಚ್ಚು ಅಮೆರಿಕನ್ ಕಂಪನಿಗಳಿದ್ದು, ಅವು ಸ್ಥಿರವಾಗಿ ಬೆಳೆಯುತ್ತಿದೆ ಎಂದು ಅವರು ಹೇಳಿದರು.
ದೇಶದ ಸುಪ್ರಸಿದ್ದ ಆಹಾರ ವಿತರಣೆ ಕಂಪೆನಿಗಳಲ್ಲಿ ಒಂದಾದ ಸ್ವಿಗ್ಗಿಯಿಂದಾಗಿ ಹೊಟೇಲ್ ಮತ್ತು ರೆಸ್ಟೋರೆಂಟ್ ಮಾಲೀಕರು ಎದುರಿಸುತ್ತಿರುವ ಹಲವಾರು ಕಾರ್ಯಾಚರಣೆಯ ಸಮಸ್ಯೆಗಳ ಕುರಿತಾಗಿ ಸಿಇಒ ರೋಹಿತ್ ಕಪೂರ್ ಅವರಿಗೆ ಬೆಂಗಳೂರಿನ ಹೊಟೇಲ್ ಆಡಳಿತ ಮಂಡಳಿ ಪತ್ರ ಬರೆದಿದ್ದು, ಬಡ್ತಿ, ಕಮಿಷನ್, ರಿಯಾಯಿತಿ ಶುಲ್ಕಗಳು ಸೇರಿದಂತೆ ಹಲವಾರು ಸಮಸ್ಯೆಗಳ ಕುರಿತು ತಕ್ಷಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದೆ.
ಈ ಮಹತ್ವದ ಮೈಲಿಗಲ್ಲನ್ನು ಸ್ಮರಣೀಯವಾಗಿಸಲು, ಭೀಮ ತನ್ನ ಗ್ರಾಹಕರಿಗಾಗಿ ವಿಶೇಷ ವಾರ್ಷಿಕೋ ತ್ಸವದ ಕೊಡುಗೆಗಳನ್ನು ನೀಡುತ್ತಿದ್ದು. ಈ ಮೂರು ದಿನಗಳ ಸಂಭ್ರಮಾಚರಣೆಯ ಅವಧಿಯಲ್ಲಿ, ಗ್ರಾಹಕರು ವಜ್ರಾಭರಣಗಳ ಮೇಕಿಂಗ್ ಶುಲ್ಕದಲ್ಲಿ 100% ವರೆಗೆ ರಿಯಾಯಿತಿ ಹಾಗೂ ಚಿನ್ನ ಮತ್ತು ಬೆಳ್ಳಿ ಆಭರಣಗಳ ಮೇಕಿಂಗ್ ಶುಲ್ಕದಲ್ಲಿ 60% ವರೆಗೆ ರಿಯಾಯಿತಿ ಪಡೆಯಬಹುದು.
ದೇಶಾದ್ಯಂತ ಇರುವ ಎಂ.ಎಸ್ಎಂ.ಇ.ಗಳ ಪ್ರತಿಕ್ರಿಯೆ ಆಧರಿಸಿ, ಫೆಡರೇಶನ್ ಆಫ್ ಇಂಡಿಯನ್ ಮೈಕ್ರೋ ಅಂಡ್ ಸ್ಮಾಲ್ ಅಂಡ್ ಮೀಡಿಯಂ ಎಂಟರ್ಪ್ರೈಸಸ್ (ಎಫ್.ಐ.ಎಸ್.ಎಂ.ಇ) ಸಂಸ್ಥೆಯು ತೆರಿಗೆ ಜಾರಿಯನ್ನು ಸಡಿಲಗೊಳಿಸದೆ, ನಿಯಮಗಳ ಪಾಲನೆಯ ವೆಚ್ಚವನ್ನು ಕಡಿಮೆ ಮಾಡಲು, ದುಡಿಯುವ ಬಂಡವಾಳವನ್ನು ಸುಲಭವಾಗಿ ಸಿಗುವಂತೆ ಮಾಡಲು, ಪಾರದರ್ಶಕತೆ ಹೆಚ್ಚಿಸಲು ಮತ್ತು ಸ್ವಯಂ ಪ್ರೇರಿತ ತೆರಿಗೆ ಪಾವತಿ ಬಲಪಡಿಸಲು ಪ್ರಾಯೋಗಿಕ ಸುಧಾರಣೆಗಳನ್ನು ಪ್ರಸ್ತಾಪಿಸಿದೆ.
ಮೂರು ದಿನಗಳ ಕಾಲ ನಡೆದ ಹಣಕಾಸು ನೀತಿ ಸಭೆಯ ಬಳಿಕ ಭಾರತೀಯ ರಿಸರ್ವ್ ಬ್ಯಾಂಕ್ ರೆಪೊ ದರದಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ನಿರ್ಧರಿಸಿದೆ. ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷದ ನಡುವೆಯೂ ಆರ್ಬಿಐ ರೆಪೊ ದರವನ್ನು ಶೇ. 5.25ರಷ್ಟು ಕಾಯ್ದುಕೊಳ್ಳಲು ಸರ್ವಾನುಮತದಿಂದ ನಿರ್ಧರಿಸಲಾಗಿದೆ ಎಂದು ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ತಿಳಿಸಿದರು.