ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕ್ರೀಡೆ

IPL trade buzz:ಹಾರ್ದಿಕ್‌ ಪಾಂಡ್ಯಗಾಗಿ ಮುಂಬೈ ಇಂಡಿಯನ್ಸ್‌ ಜೊತೆ ಕೆಕೆಆರ್‌, ಆರ್‌ಆರ್‌ ಚರ್ಚೆ!

ಹಾರ್ದಿಕ್‌ ಪಾಂಡ್ಯಗಾಗಿ ರಾಜಸ್ಥಾನ್‌-ಕೋಲ್ಕತಾ ನಡುವೆ ಪೈಪೋಟಿ!

ಕೋಲ್ಕತಾ ನೈಟ್‌ ರೈಡರ್ಸ್ ಮತ್ತು ರಾಜಸ್ಥಾನ್‌ ರಾಯಲ್ಸ್‌ ತಂಡಗಳು ಮುಂಬೈ ಇಂಡಿಯನ್ಸ್‌ ತಂಡದೊಂದಿಗೆ ಹಾರ್ದಿಕ್‌ ಪಾಂಡ್ಯ ಅವರನ್ನು ಟ್ರೇಡ್‌ ಮಾಡಿಕೊಳ್ಳಲು ಚರ್ಚೆ ನಡೆಸುತ್ತಿವೆ. ಇದೇ ವೇಳೆ ಆರ್‌ಆರ್‌ ತಂಡವು ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್‌ ಅವರನ್ನು ಒಳಗೊಂಡ ವಿನಿಮಯ ಒಪ್ಪಂದದ ಸಾಧ್ಯತೆಯನ್ನು ಪರಿಶೀಲಿಸುತ್ತಿದೆ ಎಂದು ಹೇಳಾಗುತ್ತಿದೆ.

ಆರ್‌ಸಿಬಿಯ ಸ್ಟಾರ್‌ ಆಲ್‌ರೌಂಡರ್‌ ಜೇಕಬ್ ಬೆಥೆಲ್ ಮನಗೆದ್ದ ಕನ್ನಡತಿ ಯಾರು? ಐಪಿಎಲ್‌ ವೇಳೆ ಡೇಟಿಂಗ್‌?

ಕನ್ನಡತಿ ಜೊತೆ ಆರ್‌ಸಿಬಿ ಸ್ಟಾರ್‌ ಆಲ್‌ರೌಂಡರ್‌ ಡೇಟಿಂಗ್‌?

ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ವೇಳೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಆಲ್‌ರೌಂಡರ್‌ ಜೇಕಬ್‌ ಬೆಥೆಲ್‌ ಅವರು ಕನ್ನಡತಿಯೊಬ್ಬರನ್ನು ಡೇಟ್‌ ಮಾಡಿದ್ದರು ಎಂಬ ಸುದ್ದಿ ಇದೀಗ ಎಲ್ಲೆಡೆ ಹರಡುತ್ತಿದೆ. ಈ ಬಗ್ಗೆ ಹೆಚ್ಚಿನ ಆಸಕ್ತದಾಯಕ ವಿಷಯಗಳನ್ನು ಇಲ್ಲಿ ವಿವರಿಸಲಾಗಿದೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ರೋಹಿತ್‌ ಶರ್ಮಾ!

ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಹಿಟ್‌ಮ್ಯಾನ್‌ ರೋಹಿತ್‌ ಶರ್ಮಾ!

ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ರೋಹಿತ್‌ ಶರ್ಮಾ ಅವರು ದೇಶದ ಅತ್ಯುತ್ತಮ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾಗಿರುವ ಪದ್ಮಶ್ರೀ ಪ್ರಶಸ್ತಿಯನ್ನು ರಾಷ್ಟಪತಿ ದ್ರೌಪರಿ ಮುರ್ಮು ಅವರಿಂದ ಜೂನ್‌ 23 ರಂದು ಸ್ವೀಕರಿಸಿದ್ದಾರೆ. ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.

ʻನನಗೆ ಕ್ರಿಕೆಟ್‌ ಕಿಟ್‌ ಕೊಡಿಸಲು ಆಭರಣಗಳನ್ನು ಮಾರಿದ್ದರುʼ: ಅಮ್ಮನ ತ್ಯಾಗವನ್ನು ನೆನೆದ ಕ್ರಾಂತಿ ಗೌಡ್‌!

ʻಅಮ್ಮ ಆಭರಣಗಳನ್ನು ಮಾರಿ ಕಿಟ್‌ ಕೊಡಿಸಿದ್ದರುʼ: ಕ್ರಾಂತಿ ಗೌಡ್‌!

ಭಾರತ ತಂಡದ ಪರ 2026ರ ಮಹಿಳಾ ಟಿ20 ವಿಶ್ವಕಪ್‌ ಟೂರ್ನಿಯನ್ನು ಆಡುತ್ತಿರುವ ಕ್ರಾಂತಿ ಗೌಡ್‌ ಅವರು ತಮ್ಮ ಕಷ್ಟದ ದಿನಗಳನ್ನು ಸ್ಮರಿಸಿಕೊಂಡಿದ್ದಾರೆ. ಕ್ರಿಕೆಟ್‌ ಕಿಟ್‌ ಕೊಡಿಸಲು ತಮ್ಮ ಅಮ್ಮ ತನ್ನಲ್ಲಿದ್ದ ಅಭರಣಗಳನ್ನು ಮಾರಿ ನನಗೆ ಕ್ರಿಕೆಟ್‌ ಕೊಡಿಸಿದ್ದರು ಎಂದು ಕ್ರಾಂತಿ ಗೌಡ್‌ ಹೇಳಿದ್ದಾರೆ.

2027ರ ಏಕದಿನ ವಿಶ್ವಕಪ್‌ಗೆ ಕೊಹ್ಲಿ, ರೋಹಿತ್‌ ಅನುಮಾನ ಎಂದವರಿಗೆ ಕ್ಲಾಸ್‌ ತೆಗೆದುಕೊಂಡ ಆರ್‌ ಅಶ್ವಿನ್!

ಏಕದಿನ ವಿಶ್ವಕಪ್‌ಗೆ ರೋಹಿತ್‌, ಕೊಹ್ಲಿಯನ್ನು ಬೆಂಬಲಿಸಿದ ಅಶ್ವಿನ್‌!

2027ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಆಡುವುದರ ಬಗ್ಗೆ ಅನುಮಾನವನ್ನು ವ್ಯಕ್ತಪಡಸಿದವೃ ವಿರುದ್ಧ ಸ್ಪಿನ್‌ ದಿಗ್ಗಜ ರವಿಚಂದ್ರನ್‌ ಅಶ್ವಿನ್‌ ಕಿಡಿಕಾರಿದ್ದಾರೆ. ಮುಂದಿನ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡಕ್ಕೆ ಈ ಇಬ್ಬರೂ ಕೀ ಆಟಗಾರರು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಶುಭಮನ್‌ ಗಿಲ್‌ ಹುಟ್ಟು ನಾಯಕರಲ್ಲ, ಕಲಿಯುವುದು ಸಾಕಷ್ಟಿದೆ: ಮನೋಜ್‌ ತಿವಾರಿ!

ಶುಭಮನ್‌ ಗಿಲ್‌ ಹುಟ್ಟು ನಾಯಕರಲ್ಲ: ಮನೋಜ್‌ ತಿವಾರಿ!

ಶುಭಮನ್‌ ಗಿಲ್‌ ತಮ್ಮ ನಾಯಕತ್ವದಲ್ಲಿ ಇದೇ ಮೊದಲ ಬಾರಿ ಭಾರತ ತಂಡಕ್ಕೆ ಏಕದಿನ ಸರಣಿಯನ್ನು ಗೆದ್ದುಕೊಟ್ಟಿದ್ದಾರೆ. ಇತ್ತೀಚೆಗೆ ಮುಗಿದಿದ್ದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಟೀಮ್‌ ಇಂಡಿಯಾ 3-0 ಅಂತರದಲ್ಲಿ ಕ್ಲೀನ್‌ ಸ್ವೀಪ್‌ ಮಾಡಿಕೊಂಡಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಕ್ರಿಕೆಟಿಗ ಮನೋಜ್‌ ತಿವಾರಿ, ಶುಭಮನ್‌ ಗಿಲ್‌ ನಾಯಕತ್ವದಲ್ಲಿ ಇನ್ನಷ್ಟು ಕಲಿಯಬೇಕಾಗಿದೆ ಎಂದು ಸಲಹೆ ನೀಡಿದ್ದಾರೆ.

ಮಹಿಳಾ ಟಿ20 ಬೌಲಿಂಗ್‌ ಶ್ರೇಯಾಂಕದಲ್ಲಿ ನಂ.1 ಸ್ಥಾನ ಪಡೆದ ಶ್ರೀ ಚರಣಿ

ಮಹಿಳಾ ಟಿ20 ಬೌಲಿಂಗ್‌ ಶ್ರೇಯಾಂಕದಲ್ಲಿ ನಂ.1 ಸ್ಥಾನ ಪಡೆದ ಶ್ರೀ ಚರಣಿ

ICC T20 Rankings: ಇಂಗ್ಲೆಂಡ್ ತಂಡದ ಆಟಗಾರ್ತಿ ಚಾರ್ಲಿ ಡೀನ್ ಮೂರು ಪಂದ್ಯಗಳಿಂದ ಐದು ವಿಕೆಟ್‌ಗಳನ್ನು ಪಡೆದ ನಂತರ ಎರಡನೇ ಸ್ಥಾನಕ್ಕೆ ಏರಿದ್ದಾರೆ. ಮಾಜಿ ವಿಶ್ವದ ನಂ. 1 ಸೋಫಿ ಎಕ್ಲೆಸ್ಟೋನ್ ಕೂಡ ನಾಲ್ಕು ಸ್ಥಾನ ಜಿಗಿದು ಒಟ್ಟಾರೆಯಾಗಿ ನಾಲ್ಕನೇ ಸ್ಥಾನಕ್ಕೆ ತಲುಪಿದ್ದಾರೆ.

ತ್ರಿಕೋನ ಎ ಸರಣಿ ಮುಗಿದ ಬೆನ್ನಲ್ಲೆ 56  ಬಾಲ್‌ಗಳಲ್ಲಿ 136 ರನ್‌ ಚಚ್ಚಿದ ತಿಲಕ್‌ ವರ್ಮಾ!

56 ಬಾಲ್‌ಗಳಲ್ಲಿ 136 ರನ್‌ ಚಚ್ಚಿದ ತಿಲಕ್‌ ವರ್ಮಾ!

ಶ್ರೀಲಂಕಾದಲ್ಲಿ ತ್ರಿಕೋನ ಎ ಸರಣಿಯನ್ನು ಗೆದ್ದ ಒಂದು ದಿನದ ಬೆನ್ನಲ್ಲೆ ಭಾರತ ತಂಡದ ಬ್ಯಾಟ್ಸ್‌ಮನ್‌ ತಿಲಕ್‌ ವರ್ಮಾ, ಸ್ಪೋಟಕ ಶತಕವನ್ನು ಬಾರಿಸಿದ್ದಾರೆ. ಅವರು ಆಡಿದ ಕೇವಲ 56 ಎಸೆತಗಳಲ್ಲಿ 136 ರನ್‌ ಸಿಡಿಸಿ ಟಿಜಿ20 ಟೂರ್ನಿಯಲ್ಲಿ ತಮ್ಮ ತಂಡ ಮೆಡಕ್‌ ಫಾಲ್ಕನ್ಸ್‌ ತಂಡವನ್ನು ಗೆಲ್ಲಿಸಿದ್ದಾರೆ.

ಮುಂದಿನ ಐಪಿಎಲ್‌ಗೂ ಮುನ್ನವೇ ಡೆಲ್ಲಿ ತಂಡ ಸೇರಿದ ರಿಷಭ್‌ ಪಂತ್‌

ರಿಷಭ್‌ ಪಂತ್‌ ಡೆಲ್ಲಿಗೆ, ಕುಲ್‌ದೀಪ್‌ ಯಾದವ್‌ ಲಖನೌ ಸೇರ್ಪಡೆ

IPL 2027: ಐಪಿಎಲ್ 2025ರ ಮಿನಿ ಹರಾಜಿನಲ್ಲಿ, ಪಂತ್ ಅವರನ್ನು ಎಲ್‌ಎಸ್‌ಜಿ ದಾಖಲೆಯ 27 ಕೋಟಿ ರೂ.ಗೆ ಖರೀದಿಸಿತ್ತು. ಇದು ಐಪಿಎಲ್ ಇತಿಹಾಸದಲ್ಲಿಯೇ ಅತಿ ಹೆಚ್ಚು ಬಿಡ್ ಆಗಿತ್ತು. ಆದಾಗ್ಯೂ, ವಹಿವಾಟಿನ ನಂತರ, ಅವರು 15 ಕೋಟಿ ರೂ. ಮೌಲ್ಯದ ಪರಿಷ್ಕೃತ ಒಪ್ಪಂದದ ಮೇಲೆ ಡಿಸಿಗೆ ಮರಳಿದ್ದಾರೆ.

IND vs IRE: ಗಾಯಾಳು ನಿತೀಶ್‌ ಕುಮಾರ್‌ ರೆಡ್ಡಿ ಸ್ಥಾನಕ್ಕೆ ಸುರ್ಯಾಂಶ್‌ ಶೆಡ್ಗೆಗೆ ಸ್ಥಾನ!

ಗಾಯಾಳು ನಿತೀಶ್‌ ಕುಮಾರ್ ರೆಡ್ಡಿ ಸ್ಥಾನಕ್ಕೆ ಸುರ್ಯಾಂಶ್‌ ಶೆಡ್ಗೆ!

ನಿತೀಶ್‌ ಕುಮಾರ್‌ ರೆಡ್ಡಿ ಅವರು ಗಾಯಕ್ಕೆ ತುತ್ತಾದ ಕಾರಣ ಐರ್ಲೆಂಡ್‌ ಹಾಗೂ ಇಂಗ್ಲೆಂಡ್‌ ವಿರುದ್ದದ ಟಿ20ಐ ಸರಣಿಗಳಿಂದ ಹೊರ ನಡೆದಿದ್ದಾರೆ. ಅವರ ಸ್ಥಾನಕ್ಕೆ ಯುವ ಆಲ್‌ರೌಂಡರ್‌ ಸುರ್ಯಾಂಶ್‌ ಶೆಡ್ಗೆ ಅವರು ಆಯ್ಕೆಯಾಗಿದ್ದಾರೆ. ಈ ವಿಷಯವನ್ನು ಬಿಸಿಸಿಐ ತಮ್ಮ ಸೋಶಿಯಲ್‌ ಮೀಡಿಯಾ ಖಾತೆಗಳಲ್ಲಿ ತಿಳಿಸಿದೆ.

ಭಾರತ vs ಐರ್ಲೆಂಡ್ ಟಿ20; ಮುಖಾಮುಖಿ, ರನ್‌, ವಿಕೆಟ್‌ ದಾಖಲೆ ಹೇಗಿದೆ?

ಭಾರತ vs ಐರ್ಲೆಂಡ್ ಟಿ20; ಮುಖಾಮುಖಿ, ರನ್‌, ವಿಕೆಟ್‌ ದಾಖಲೆ ಹೇಗಿದೆ?

India vs Ireland T20Is: ಅತ್ಯಧಿಕ ವಿಕೆಟ್‌ ಕಿತ್ತ ದಾಖಲೆ ಜಸ್‌ಪ್ರೀತ್‌ ಬುಮ್ರಾ ಹೆಸರಿನಲ್ಲಿದೆ. ಆಡಿದ ನಾಲ್ಕು ಪಂದ್ಯಗಳಲ್ಲಿ 4.26 ರ ಅತ್ಯುತ್ತಮ ಎಕಾನಮಿಯಲ್ಲಿ ಎಂಟು ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಕುಲದೀಪ್ ಯಾದವ್ ಮತ್ತು ಯುಜ್ವೇಂದ್ರ ಚಾಹಲ್ ತಲಾ ಏಳು ವಿಕೆಟ್‌ಗಳನ್ನು ಗಳಿಸಿದ್ದಾರೆ.

ಕಳಪೆ ಪ್ರದರ್ಶನದ ಮಧ್ಯೆಯೂ ಸಿಎಸ್‌ಕೆ ಮುಖ್ಯ ಕೋಚ್ ಆಗಿ ಸ್ಟೀಫನ್ ಫ್ಲೆಮಿಂಗ್ ಮುಂದುವರಿಕೆ

ಸಿಎಸ್‌ಕೆ ಮುಖ್ಯ ಕೋಚ್ ಆಗಿ ಸ್ಟೀಫನ್ ಫ್ಲೆಮಿಂಗ್ ಮುಂದುವರಿಕೆ

Stephen Fleming: 2025 ರ ಋತುವಿನಲ್ಲಿ CSK ಅಂಕಪಟ್ಟಿಯ ಕೊನೆಯ ಸ್ಥಾನದಲ್ಲಿತ್ತು ಮತ್ತು ಇತ್ತೀಚೆಗೆ ಮುಕ್ತಾಯಗೊಂಡ ಅಭಿಯಾನದಲ್ಲಿ ಎಂಟನೇ ಸ್ಥಾನವನ್ನು ಗಳಿಸುವಲ್ಲಿ ಯಶಸ್ವಿಯಾಯಿತು. ಆದಾಗ್ಯೂ, ಫ್ರಾಂಚೈಸಿ ಫ್ಲೆಮಿಂಗ್‌ ಕಾರ್ಯ ವೈಕರಿಯಲ್ಲಿ ಬದ್ಧವಾಗಿದೆ, ಅವರ ಒಪ್ಪಂದವನ್ನು ವಾರ್ಷಿಕವಾಗಿ ನವೀಕರಿಸಲಾಗುತ್ತದೆ ಎನ್ನಲಾಗಿದೆ.

'ಬಾಲ್ಯದ ಕನಸು ನನಸಾದ ಕ್ಷಣ'; ಟೀಮ್‌ ಇಂಡಿಯಾ ಜೆರ್ಸಿ ಧರಿಸಿ ಭಾವುಕರಾದ ವೈಭವ್‌ ಸೂರ್ಯವಂಶಿ

ಟೀಮ್‌ ಇಂಡಿಯಾ ಜೆರ್ಸಿ ಧರಿಸಿ ಭಾವುಕರಾದ ವೈಭವ್‌ ಸೂರ್ಯವಂಶಿ

Vaibhav Sooryavanshi: ಯುನೈಟೆಡ್ ಕಿಂಗ್‌ಡಮ್‌ನಲ್ಲಿ ನಡೆಯಲಿರುವ ಏಳು ಟಿ20 ಪಂದ್ಯಗಳಿಗೆ ಭಾರತದ ತಂಡದಲ್ಲಿ ಸೂರ್ಯವಂಶಿ ಸ್ಥಾನ ಪಡೆದಿದ್ದಾರೆ, ಇದರಲ್ಲಿ ಐರ್ಲೆಂಡ್ ವಿರುದ್ಧದ ಎರಡು ಪಂದ್ಯಗಳು ಮತ್ತು ಜೂನ್ 26 ರಂದು ಬೆಲ್‌ಫಾಸ್ಟ್‌ನಲ್ಲಿ ಪ್ರಾರಂಭವಾಗುವ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಸರಣಿಯೂ ಸೇರಿದೆ.

ಐರ್ಲೆಂಡ್‌, ಇಂಗ್ಲೆಂಡ್‌ ಟಿ20 ಸರಣಿಯಿಂದ ಹೊರಬಿದ್ದ ನಿತೀಶ್ ಕುಮಾರ್ ರೆಡ್ಡಿ

ಐರ್ಲೆಂಡ್‌, ಇಂಗ್ಲೆಂಡ್‌ ಟಿ20 ಸರಣಿಯಿಂದ ಹೊರಬಿದ್ದ ನಿತೀಶ್ ರೆಡ್ಡಿ

Nitish Kumar Reddy: ರೆಡ್ಡಿ ಇದುವರೆಗೆ ಭಾರತ ಪರ 10 ಟೆಸ್ಟ್, ಆರು ಏಕದಿನ ಮತ್ತು ನಾಲ್ಕು ಟಿ20 ಪಂದ್ಯಗಳನ್ನು ಆಡಿದ್ದಾರೆ. ಅಫ್ಘಾನಿಸ್ತಾನ ಏಕದಿನ ಸರಣಿಯ ಸಮಯದಲ್ಲಿ, ಅವರು ಎರಡು ಪಂದ್ಯಗಳಲ್ಲಿ ಆಡಿದ್ದರು ಆದರೆ ಲಕ್ನೋದಲ್ಲಿ ನಡೆದ ಎರಡನೇ ಪಂದ್ಯವನ್ನು ತಪ್ಪಿಸಿಕೊಂಡರು.

ಕೌಂಟಿ ಕ್ರಿಕೆಟ್‌ನಲ್ಲೂ ಕಮಾಲ್‌ ಮಾಡಿದ ಮಾನವ್ ಸುತಾರ್; 5 ವಿಕೆಟ್‌ ಗೊಂಚಲು ಸಾಧನೆ

ಕೌಂಟಿಯಲ್ಲಿ ಚೊಚ್ಚಲ 5 ವಿಕೆಟ್‌ ಗೊಂಚಲು ಪಡೆದ ಮಾನವ್ ಸುತಾರ್

Manav Suthar: ಕೌಂಟಿ ಕ್ರಿಕೆಟ್‌ನಲ್ಲಿ ಎರಡು ಪಂದ್ಯಗಳನ್ನು ಆಡಲು ಒಪ್ಪಂದ ಮಾಡಿಕೊಂಡಿದ್ದ ಸುತಾರ್, ಸೋಮರ್‌ಸೆಟ್‌ ತಂಡದ ಪರ ತಾವಾಡಿದ ಎರಡನೇ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ 46.5 ಓವರ್‌ಗಳಲ್ಲಿ 100 ರನ್‌ಗಳಿಗೆ 5 ವಿಕೆಟ್‌ಗಳನ್ನು ಪಡೆದರು. ಒಟ್ಟಾರೆ ಪಂದ್ಯದಲ್ಲಿ ಏಳು ವಿಕೆಟ್‌ಗಳನ್ನು ಪಡೆದರು. ಮೊದಲ ಇನ್ನಿಂಗ್ಸ್‌ನಲ್ಲಿ 18 ಓವರ್‌ಗಳಲ್ಲಿ 50 ರನ್‌ಗಳಿಗೆ 2 ವಿಕೆಟ್‌ಗಳನ್ನು ಪಡೆದಿದ್ದರು.

ಮೆಸ್ಸಿ,ಎಂಬಾಪೆ ಮ್ಯಾಜಿಕ್‌; ಫಿಫಾ ನಾಕೌಟ್‌ಗೆ ಲಗ್ಗೆಯಿಟ್ಟ ಅರ್ಜೆಂಟೀನಾ, ಫ್ರಾನ್ಸ್‌

ಫಿಫಾ ವಿಶ್ವಕಪ್‌ ನಾಕೌಟ್‌ಗೆ ಲಗ್ಗೆಯಿಟ್ಟ ಅರ್ಜೆಂಟೀನಾ, ಫ್ರಾನ್ಸ್‌

FIFA World Cup 2026: ಭಾರತೀಯ ಕಾಲಮಾನ ಮಂಗಳವಾರ ಬೆಳಗ್ಗೆ ನಡೆದ ಫಿಫಾ ವಿಶ್ವಕಪ್‌ ಪಂದ್ಯದಲ್ಲಿ ಕಿಲಿಯನ್‌ ಎಂಬಾಪೆ ಬಾರಿಸಿದ 2 ಗೋಲುಗಳ ನೆರವಿನಿಂದ ಇರಾಕ್‌ ವಿರುದ್ಧ ಫ್ರಾನ್ಸ್‌ 3-0 ಅಂತರದ ಜಯ ಸಾಧಿಸಿ ನಾಕೌಟ್ ಹಂತಕ್ಕೆ ಲಗ್ಗೆ ಇಟ್ಟಿದೆ.

IND vs ENG: ಹ್ಯಾರಿ ಬ್ರೂಕ್‌ಗೆ ನಾಯಕತ್ವ, ಭಾರತ ವಿರುದ್ಧದ ಟಿ20ಐ ಸರಣಿಗೆ ಇಂಗ್ಲೆಂಡ್‌ ತಂಡ ಪ್ರಕಟ!

ಭಾರತ ವಿರುದ್ಧದ ಟಿ20ಐ ಸರಣಿಗೆ ಇಂಗ್ಲೆಂಡ್‌ ತಂಡ ಪ್ರಕಟ!

ಜುಲೈ ಒಂದರಿಂದ ಆರಂಭವಾಗಲಿರುವ ಭಾರತದ ವಿರುದ್ಧದ ಐದು ಪಂದ್ಯಗಳ ಟಿ20ಐ ಸರಣಿಗೆ 17 ಸದಸ್ಯರ ಇಂಗ್ಲೆಂಡ್ ತಂಡವನ್ನು ಪ್ರಕಟವಾಗಿದೆ. ಹ್ಯಾರಿ ಬ್ರೂಕ್ ತಂಡವನ್ನು ಮುನ್ನಡೆಸಲಿದ್ದಾರೆ. ಆದರೆ ಸಸೆಕ್ಸ್‌ ತಂಡದ 21 ವಯಸ್ಸಿನ ಯುವ ಆಲ್‌ರೌಂಡರ್ ಜೇಮ್ಸ್ ಕೋಲ್ಸ್‌ಗೆ ಅವಕಾಶ ನೀಡಲಾಗಿದೆ.

ಸಂಜು ಇನ್‌, ವೈಭವ್‌ ಔಟ್‌! ಐರ್ಲೆಂಡ್‌ ವಿರುದ್ಧ ಮೊದಲ ಟಿ20ಐಗೆ ಭಾರತದ ಸಂಭಾವ್ಯ ಪ್ಲೇಯಿಂಗ್‌ XI

IND vs IRE: ಮೊದಲನೇ ಟಿ20ಐಗೆ ಭಾರತದ ಸಂಭಾವ್ಯ ಪ್ಲೇಯಿಂಗ್‌ XI

ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯನ್ನು ಮುಗಿಸಿಕೊಂಡಿರುವ ಭಾರತ ತಂಡ ಇದೀಗ ಐರ್ಲೆಂಡ್‌ ವಿರುದ್ಧದ ಎರಡು ಪಂದ್ಯಗಳ ಟಿ20ಐ ಸರಣಿಗೆ ಸಜ್ಜಾಗುತ್ತಿದೆ. ಜೂನ್‌ 26 ರಂದು ಐರ್ಲೆಂಡ್‌ ವಿರುದ್ಧದ ಟಿ20ಐ ಸರಣಿಯನ್ನು ಶ್ರೇಯಸ್‌ ಅಯ್ಯರ್‌ ನಾಯಕತ್ವದ ಭಾರತ ತಂಡ ಆಡಲಿದೆ. ಮೊದಲನೇ ಟಿ20ಐಗೆ ಭಾರತ ಸಂಭಾವ್ಯ ಪ್ಲೇಯಿಂಗ್‌ XI ಅನ್ನು ಇಲ್ಲಿ ವಿವರಿಸಲಾಗಿದೆ.

ಭಾರತೀಯ ಕ್ರಿಕೆಟ್‌ಗೆ ರೋಜರ್‌ ಫೆಡರರ್‌ ಯಾರೆಂದು ಬಹಿರಂಗಪಡಿಸಿದ ಸಂಜು ಸ್ಯಾಮ್ಸನ್‌!

ಕ್ರಿಕೆಟ್‌ನ ರೋಜರ್‌ ಫೆಡರರ್‌ ಯಾರೆಂದು ತಿಳಿಸಿದ ಸಂಜು ಸ್ಯಾಮ್ಸನ್‌!

2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯನ್ನು ಮುಗಿಸಿಕೊಂಡು ಇಂಗ್ಲೆಂಡ್‌ ಪ್ರವಾಸಕ್ಕೆ ಸಜ್ಜಾಗುತ್ತಿರುವ ಸಂಜು ಸ್ಯಾಮ್ಸನ್, ಎಂಎಸ್ ಧೋನಿಯನ್ನು ಶಾಂತ ಮತ್ತು ಸಂಯಮದ ರೋಜರ್ ಫೆಡರರ್‌ಗೆ ಹೋಲಿಸಿದರೆ, ವಿರಾಟ್ ಕೊಹ್ಲಿಯನ್ನು ಆಕ್ರಮಣಕಾರಿ ಕಾರ್ಲೋಸ್ ಆಲ್ಕರಾಝ್‌ಗೆ ಹೋಲಿಸಿದ್ದಾರೆ.

ʻಅವು ನನ್ನ ರನ್‌ಗಳಲ್ಲʼ: 14,000 ಟೆಸ್ಟ್‌ ರನ್‌ ಗಳಿಸಿದ ಬಗ್ಗೆ ಜೋ ರೂಟ್‌ ಪ್ರತಿಕ್ರಿಯೆ!

14,000 ಟೆಸ್ಟ್‌ ರನ್‌ ಗಳಿಸಿದ ಬಗ್ಗೆ ಜೋ ರೂಟ್‌ ಪ್ರತಿಕ್ರಿಯೆ!

ಇಂಗ್ಲೆಂಡ್‌ ತಂಡದ ಹಿರಿಯ ಬ್ಯಾಟ್ಸ್‌ಮನ್‌ ಜೋ ರೂಟ್‌ ಅವರು ತಮ್ಮ ಟೆಸ್ಟ್‌ ವೃತ್ತಿ ಜೀವನದಲ್ಲಿ 14000 ರನ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಬಳಿಕ ಈ ಸಾಧನೆ ಮಾಡಿದ ಎರಡನೇ ಬ್ಯಾಟ್ಸ್‌ಮನ್‌ ಎಂಬ ದಾಖಲೆಯನ್ನು ಅವರು ಬರೆದಿದ್ದಾರೆ.

IND vs ENG ಒಡಿಐ ಸರಣಿಗೆ ಆಯ್ಕೆಯಾಗದ ಭಾರತದ ಟಾಪ್‌ 5 ಆಟಗಾರರು!

IND vs ENG ಒಡಿಐ ಸರಣಿಗೆ ಆಯ್ಕೆಯಾಗದ ಭಾರತದ ಟಾಪ್‌ 5 ಆಟಗಾರರು!

ಭಾರತ ಕ್ರಿಕೆಟ್ ತಂಡ ಇದೀಗ ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಯಲ್ಲಿ ಆಡುತ್ತಿದೆ. ಈ ಸರಣಿಗೆ ಟೀಮ್ ಇಂಡಿಯಾವನ್ನು ಆಯ್ಕೆ ಮಾಡಲಾಗಿದ್ದು, ಹಲವು ಸ್ಟಾರ್‌ ಆಟಗಾರರನ್ನು ಕೈ ಬಿಡಲಾಗಿದೆ. ಇದರಲ್ಲಿ ಅಗ್ರ ಐವರು ಆಟಗಾರರ ಬಗ್ಗೆ ಇಲ್ಲಿ ವಿವರಿಸಲಾಗಿದೆ.

ಮುಂಬೈ ಇಂಡಿಯನ್ಸ್‌ ತೊರೆದು ರಾಜಸ್ಥಾನ್‌ ಸೇರಲು ಮುಂದಾದ ಹಾರ್ದಿಕ್‌ ಪಾಂಡ್ಯ!

ರಾಜಸ್ಥಾನ್‌ಗೆ ಪಾಂಡ್ಯ, ಮುಂಬೈಗೆ ಜೈಸ್ವಾಲ್‌; ವ್ಯಾಪಾರ ಒಪ್ಪಂದ?

IPL 2027: ಮೂಲಗಳ ಪ್ರಕಾರ ಹಾರ್ದಿಕ್‌ ಪಾಂಡ್ಯಗೆ ಬದಲಿಯಾಗಿ ರಾಜಸ್ಥಾನ್‌ ತಂಡದಿಂದ ಯಶಸ್ವಿ ಜೈಸ್ವಾಲ್ ಅವರನ್ನು ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಸಿದ್ಧವಾಗಿದೆ ಎನ್ನಲಾಗಿದೆ. ಮುಂಬೈ ರಣಜಿ ಟ್ರೋಫಿ ತಂಡಕ್ಕೂ ಆಡುವ ಜೈಸ್ವಾಲ್‌ಗೆ, ಮುಂಬೈ ಇಂಡಿಯನ್ಸ್ ಸೇರಲು ಉತ್ಸುಕರಾಗಿದ್ದಾರೆ ಎನ್ನಲಾಗಿದೆ.

ʻಹಲವರು ರೋಹಿತ್‌ ಶರ್ಮಾ ವೈಫಲ್ಯಕ್ಕೆ ಕಾಯುತ್ತಿದ್ದಾರೆʼ: ಮೊಹಮ್ಮದ್‌ ಕೈಫ್‌ ಅಚ್ಚರಿ ಹೇಳಿಕೆ!

ʻಹಲವರು ರೋಹಿತ್‌ ಶರ್ಮಾ ವೈಫಲ್ಯಕ್ಕೆ ಕಾಯುತ್ತಿದ್ದಾರೆʼ: ಕೈಫ್‌

2027ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡದ ಪರ ಆಡಲು ಎದುರು ನೋಡುತ್ತಿರುವ ಹಿರಿಯ ಬ್ಯಾಟ್ಸ್‌ಮನ್‌ ರೋಹಿತ್‌ ಶರ್ಮಾ ಅವರನ್ನು ಮಾಜಿ ಕ್ರಿಕೆಟಿಗ ಮೊಹಮ್ಮದ್‌ ಕೈಫ್‌ ಬೆಂಬಲ ವ್ಯಕ್ತಪಡಿಸಿದ್ದಾರೆ. ಬಹುತೇಕ ಮಂದಿ ರೋಹಿತ್‌ ಶರ್ಮಾ ಅವರ ವೈಫಲ್ಯಕ್ಕೆ ಕಾಯುತ್ತಿದ್ದಾರೆಂದು ಅವರು ಅಚ್ಚರಿ ಹೇಳಿಕೆ ನೀಡಿದ್ದಾರೆ.

ʻವೈಭವ್‌ ಸೂರ್ಯವಂಶಿ ಎಲ್ಲರನ್ನೂ ಮುಜುಗರಕ್ಕೀಡು ಮಾಡುತ್ತಿದ್ದಾರೆʼ: ಆಕಾಶ್‌ ಚೋಪ್ರಾ!

ವೈಭವ್‌ ಸೂರ್ಯವಂಶಿ ಬಗ್ಗೆ ಆಕಾಶ್‌ ಚೋಪ್ರಾ ದೊಡ್ಡ ಹೇಳಿಕೆ!

ವೈಭವ್‌ ಸೂರ್ಯವಂಶಿ ಅವರು ತಮ್ಮ ಶೈಲಿಯಲ್ಲಿ ಸ್ಪೋಟಕ ಬ್ಯಾಟಿಂಗ್‌ ಮೂಲಕ ಎಲ್ಲರನ್ನೂ ಮುಜುಗರಕ್ಕೀಡು ಮಾಡುತ್ತಿದ್ದಾರೆಂದು ಭಾರತ ಟೆಸ್ಟ್‌ ತಂಡದ ಮಾಜಿ ಆರಂಭಿಕ ಆಕಾಶ್‌ ಚೋಪ್ರಾ ಹೇಳಿದ್ದಾರೆ. ಶ್ರೀಲಂಕಾ ಎ ವಿರುದ್ಧದ ಪಂದ್ಯದಲ್ಲಿ ಅವರು ಕೇವಲ 29 ಎಸೆತಗಳಲ್ಲಿ 94 ರನ್‌ಗಳನ್ನು ಸಿಡಿಸಿ ಭಾರತ ಎಗೆ ಗೆಲುವು ತಂದುಕೊಟ್ಟಿದ್ದರು.

Loading...