ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕ್ರೀಡೆ

IND vs AUS: ಗಾಯಾಳು ಶ್ರೇಯಸ್‌ ಅಯ್ಯರ್‌ ಮೂರು ವಾರಗಳ ಕಾಲ ಕ್ರಿಕೆಟ್‌ನಿಂದ ಔಟ್‌! ವರದಿ

ಶ್ರೇಯಸ್‌ ಅಯ್ಯರ್‌ ಮೂರು ವಾರಗಳ ಕಾಲ ಕ್ರಿಕೆಟ್‌ನಿಂದ ಔಟ್‌! ವರದಿ

Shreyas Iyer Injury Updates: ಆಸ್ಟ್ರೇಲಿಯಾ ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲಿ ಗಾಯಕ್ಕೆ ತುತ್ತಾಗಿದ್ದ ಭಾರತ ತಂಡದ ಉಪ ನಾಯಕ ಶ್ರೇಯಸ್‌ ಅಯ್ಯರ್‌ ಅವರು ಮೂರು ವಾರಗಳ ಕಾಲ ಕ್ರಿಕೆಟ್‌ನಿಂದ ಹೊರಗುಳಿಯಲಿದ್ದಾರೆಂದು ವರದಿಯಾಗಿದೆ. ಅವರು ಫೀಲ್ಡಿಂಗ್‌ ವೇಳೆ ತಮ್ಮ ಅವರು ಪಕ್ಕೆಲಬಿನ ಗಾಯಕ್ಕೆ ತುತ್ತಾಗಿದ್ದಾರೆ.

ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ 2027ರ ಏಕದಿನ ವಿಶ್ವಕಪ್‌ ಆಡಬೇಕೆಂದ ಸುನೀಲ್‌ ಗವಾಸ್ಕರ್‌!

ರೋಹಿತ್‌, ಕೊಹ್ಲಿ 2027ರ ವಿಶ್ವಕಪ್‌ ಆಡಬೇಕೆಂದ ಗವಾಸ್ಕರ್‌!

ಆಸ್ಟ್ರೇಲಿಯಾ ವಿರುದ್ದದ ಮೂರನೇ ಪಂದ್ಯದ ಬಳಿಕೆ ಬ್ಯಾಟಿಂಗ್‌ ದಿಗ್ಗಜ ಸುನೀಲ್‌ ಗವಾಸ್ಕರ್‌ ಅವರು, 2027ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಅವರನ್ನು ನೇರವಾಗಿ ಆಡಿಸಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶನಿವಾರ ಸಿಡ್ನಿ ಪಂದ್ಯದಲ್ಲಿ ರೋಹಿತ್‌ ಶರ್ಮಾ ಶತಕ ಹಾಗೂ ಕೊಹ್ಲಿ ಅರ್ಧಶತಕವನ್ನು ಬಾರಿಸಿದ್ದರು.

ರೋಹಿತ್‌, ಕೊಹ್ಲಿ ಭವಿಷ್ಯದ ಬಗ್ಗೆ ಪ್ರಾಮಾಣಿಕ ಅಭಿಪ್ರಾಯ ವ್ಯಕ್ತಪಡಿಸಿದ ಶುಭಮನ್‌ ಗಿಲ್‌!

ರೋಹಿತ್‌, ಕೊಹ್ಲಿ ಭವಿಷ್ಯದ ಬಗ್ಗೆ ಶುಭಮನ್‌ ಗಿಲ್‌ ಹೇಳಿಕೆ!

ಆಸ್ಟ್ರೇಲಿಯಾ ವಿರುದ್ಧ ಮೂರನೇ ಹಾಗೂ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಕ್ರಮವಾಗಿ ಶತಕ ಹಾಗೂ ಅರ್ಧಶತಕವನ್ನು ಬಾರಿಸಿದ ರೋಹಿತ್‌ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ ಅವರ ಭವಿಷ್ಯದ ಬಗ್ಗೆ ಭಾರತ ತಂಡದ ನಾಯಕ ಶುಭಮನ್‌ ಗಿಲ್‌ ಪ್ರಾಮಾಣಿಕ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

IND vs AUS: ಶ್ರೇಯಸ್‌ ಅಯ್ಯರ್‌ ಗಾಯದ ಬಗ್ಗೆ ಬಿಗ್‌ ಅಪ್‌ಡೇಟ್‌ ನೀಡಿದ ಬಿಸಿಸಿಐ!

ಶ್ರೇಯಸ್‌ ಅಯ್ಯರ್‌ ಗಾಯದ ಬಗ್ಗೆ ಬಿಗ್‌ ಅಪ್‌ಡೇಟ್‌ ಕೊಟ್ಟ ಬಿಸಿಸಿಐ!

Shreyas Iyer Injury Updates: ಆಸ್ಟ್ರೇಲಿಯಾ ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲಿ ಗಾಯಕ್ಕೆ ತುತ್ತಾಗಿದ್ದ ಭಾರತ ತಂಡದ ಉಪ ನಾಯಕ ಶ್ರೇಯಸ್‌ ಅಯ್ಯರ್‌ ಅವರ ಬಗ್ಗೆ ಬಿಸಿಸಿಐ ಪ್ರತಿಕ್ರಿಯೆ ನೀಡಿವೆ. ಅವರ ಪಕ್ಕೆಲಬಿನ ಗಾಯಕ್ಕೆ ತುತ್ತಾಗಿದ್ದಾರೆ. ಗಾಯದ ತೀವ್ರತೆ ಬಗ್ಗೆ ತಿಳಿಯಲು ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಬಿಸಿಸಿಐ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿವೆ.

IND vs AUS: ಜಸ್‌ಪ್ರೀತ್‌ ಬುಮ್ರಾ ಇನ್‌, ಮೊದಲ ಟಿ20ಐ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್‌ XI

ಮೊದಲನೇ ಟಿ20ಐ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್‌ XI

ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ಸೋತಿರುವ ಭಾರತ ತಂಡ ಮುಂದಿನ 5 ಪಂದ್ಯಗಳ ಟಿ20ಐ ಸರಣಿಯನ್ನು ಗೆದ್ದುಕೊಳ್ಳಲು ಎದುರು ನೋಡುತ್ತಿದೆ. ಮೊದಲ ಪಂದ್ಯ ಅಕ್ಟೋಬರ್ 29 ರಂದು ಓವಲ್ ಮೈದಾನದಲ್ಲಿ ನಡೆಯಲಿದೆ. ಇನ್ನು ಈ ಪಂದ್ಯಕ್ಕೆ ಭಾರತ ತಂಡದ ಸಂಭಾವ್ಯ ಪ್ಲೇಯಿಂಗ್‌ XI ಅನ್ನು ಇಲ್ಲಿ ವಿವರಿಸಲಾಗಿದೆ.

IND vs AUS: ಅರ್ಧಶತಕ ಸಿಡಿಸಿ ಸಚಿನ್ ತೆಂಡೂಲ್ಕರ್‌ರ ವಿಶ್ವ ದಾಖಲೆ ಮುರಿದ ವಿರಾಟ್ ಕೊಹ್ಲಿ!

ಸಚಿನ್‌ ತೆಂಡೂಲ್ಕರ್‌ರ ವಿಶ್ವದಾಖಲೆ ಮುರಿದ ವಿರಾಟ್‌ ಕೊಹ್ಲಿ!

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಖಾತೆ ತೆರೆಯುವಲ್ಲಿ ವಿಫಲರಾಗಿದ್ದ ವಿರಾಟ್‌ ಕೊಹ್ಲಿ, ಕೊನೆಯ ಪಂದ್ಯದಲ್ಲಿ ಲಯಕ್ಕೆ ಮರಳಿ ಅಜೇಯ ಅರ್ಧಶತಕ ಬಾರಿಸಿದರು. ಆ ಮೂಲಕ ಇಂಟರ್‌ನ್ಯಾಷನಲ್‌ ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ರನ್ ಬಾರಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಈ ದಾಖಲೆ ಮೊದಲು ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿತ್ತು.

ಆಸ್ಟ್ರೇಲಿಯಾ ಅಭಿಮಾನಿಗಳಿಗೆ ಭಾವನಾತ್ಮಕ ವಿದಾಯ ಹೇಳಿದ ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ!

ಆಸ್ಟ್ರೇಲಿಯಾ ಅಭಿಮಾನಿಗಳಿಗೆ ರೋಹಿತ್‌-ಕೊಹ್ಲಿಯಿಂದ ಭಾವನಾತ್ಮಕ ವಿದಾಯ!

ರೋಹಿತ್‌ ಶರ್ಮಾ ಶತಕ ಹಾಗೂ ವಿರಾಟ್‌ ಕೊಹ್ಲಿಯ ಅರ್ಧಶತಕದ ಬಲದಿಂದ ಭಾರತ ತಂಡ, ಆಸ್ಟ್ರೇಲಿಯಾ ವಿರುದ್ಧ ಮೂರನೇ ಹಾಗೂ ಏಕದಿನ ಸರಣಿಯ ಕೊನೆಯ ಪಂದ್ಯವನ್ನು ಗೆದ್ದುಕೊಂಡಿತು. ಇದು ರೋಹಿತ್‌ ಹಾಗೂ ಕೊಹ್ಲಿ ಪಾಲಿಗೆ ಕೊನೆಯ ಆಸ್ಟ್ರೇಲಿಯಾದ ಒಡಿಐ ಪಂದ್ಯವಾಗಿದೆ. ಈ ಹಿನ್ನೆಲೆಯಲ್ಲಿ ಇವರಿಬ್ಬರೂ ಆಸ್ಟ್ರೇಲಿಯಾದ ಅಭಿಮಾನಿಗಳಿಗೆ ಭಾವನಾತ್ಮಕ ವಿದಾಯವನ್ನು ಹೇಳಿದರು.

IND vs AUS: ಅರ್ಧಶತಕ ಬಾರಿಸಿ ಕುಮಾರ ಸಂಗಕ್ಕಾರ ದಾಖಲೆ ಮುರಿದ ವಿರಾಟ್‌ ಕೊಹ್ಲಿ!

ಸಚಿನ್‌ ಒಳಗೊಂಡ ಎಲೈಟ್‌ ಲಿಸ್ಟ್‌ನಲ್ಲಿ ಎರಡನೇ ಸ್ಥಾನಕ್ಕೇರಿದ ಕೊಹ್ಲಿ!

ಆಸ್ಟ್ರೇಲಿಯಾ ವಿರುದ್ಧ ಮೂರನೇ ಹಾಗೂ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ವಿರಾಟ್‌ ಕೊಹ್ಲಿಅರ್ಧಶತಕ ಬಾರಿಸಿ ಫಾರ್ಮ್‌ಗೆ ಮರಳಿದರು. ಈ ಇನಿಂಗ್ಸ್‌ನ ಮೂಲಕ ವಿರಾಟ್‌ ಕೊಹ್ಲಿ, ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ.

IND vs  ರೋಹಿತ್‌, ಕೊಹ್ಲಿ ಅಜೇಯ ಶತಕದ ಜತೆಯಾಟ; ವೈಟ್‌ವಾಶ್‌ನಿಂದ ಪಾರಾದ ಭಾರತ

ಸಿಡ್ನಿಯಲ್ಲಿ ರೋ-ಕೊ ಬ್ಯಾಟಿಂಗ್‌ ಶೋ; ಭಾರತಕ್ಕೆ 9 ವಿಕೆಟ್‌ ಗೆಲುವು

ಪರ್ತ್‌ ಮತ್ತು ಅಡಿಲೇಡ್‌ ಪಂದ್ಯದಲ್ಲಿ ಸತತ ಶೂನ್ಯ ಸುತ್ತಿದ್ದ ಕೊಹ್ಲಿ, ಈ ಪಂದ್ಯದಲ್ಲಿ ತಾನೆದುರಿಸಿದ ಮೊದಲ ಎಸೆತದಲ್ಲೇ ಒಂದು ರನ್‌ ಕಸಿದು, ಕಿರುನಗೆಯೊಂದಿಗೆ ಇನಿಂಗ್ಸ್‌ ಆರಂಭಿಸಿದರು. ಬಳಿಕ ಚೆಂದದ ಕವರ್‌ ಡ್ರೈವ್‌, ಫುಲ್‌ ಶಾರ್ಟ್‌ ಮೂಲಕ ಚೆಂಡನ್ನು ಬೌಂಡರಿ ಗೆರೆ ದಾಟಿಸುವ ಮೂಲಕ ಅರ್ಧಶತಕ ಬಾರಿಸಿದರು. 81 ಎಸೆತ ಎದುರಿಸಿದ ಕೊಹ್ಲಿ 7 ಬೌಂಡರಿ ಮೂಲಕ 74 ರನ್‌ ಗಳಿಸಿದರು.

Rohit Sharma: ಸಚಿನ್‌ ಬಳಿಕ ಆಸೀಸ್‌ ವಿರುದ್ಧ ವಿಶೇಷ ದಾಖಲೆ ಬರೆದ ರೋಹಿತ್‌

ಆಸ್ಟ್ರೇಲಿಯಾ ವಿರುದ್ಧ ವಿಶೇಷ ದಾಖಲೆ ಬರೆದ ರೋಹಿತ್‌ ಶರ್ಮ

ಏಕದಿನ ಕ್ರಿಕೆಟ್‌ನಲ್ಲಿ ಸಿಡ್ನಿಯಲ್ಲಿ ಅತ್ಯಧಿಕ ಸಿಕ್ಸರ್‌ ಬಾರಿಸಿ ಏಷ್ಯಾದ ಮೊದಲ ಬ್ಯಾಟರ್‌ ಎಂಬ ದಾಖಲೆಯೂ ರೋಹಿತ್‌ ಪಾಲಾಯಿತು. ಒಂದು ಸಿಕ್ಸರ್‌ ಬಾರಿಸುವ ಮೂಲಕ ಅವರು ಕೀರ್ತಿಗೆ ಭಾಜನರಾದರು. ಇದಕ್ಕೂ ಮುನ್ನ ಜಯಸೂರ್ಯ ಜತೆ ಜಂಟಿ ದಾಖಲೆ ಹೊಂದಿದ್ದರು. ಸದ್ಯ ರೋಹಿತ್‌ 10*ಸಿಕ್ಸರ್‌ ಬಾರಿಸಿದ್ದಾರೆ.

ಇಂದೋರ್‌ನಲ್ಲಿ ಆಸ್ಟ್ರೇಲಿಯಾದ ಇಬ್ಬರು ಕ್ರಿಕೆಟಿಗರ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿ ಬಂಧನ

ಇಂದೋರ್‌ನಲ್ಲಿ ಆಸೀಸ್‌ ಮಹಿಳಾ ಕ್ರಿಕೆಟಿಗರ ಮೇಲೆ ಲೈಂಗಿಕ ದೌರ್ಜನ್ಯ

Women's ODI World Cup: "ಪ್ರತ್ಯಕ್ಷದರ್ಶಿಯೊಬ್ಬರು ಶಂಕಿತನ ಬೈಕ್‌ ನಂಬರ್‌ ಗಮನಿಸಿದರು. ಅವರ ಹೇಳಿಕೆ ಆಧಾರದ ಮೇಲೆ ಆರೋಪಿ ಅಕೀಲ್ ಖಾನ್ ನನ್ನು ಬಂಧಿಸಲಾಯಿತು" ಎಂದು ಅಧಿಕಾರಿ ಹೇಳಿದರು. "ಖಾನ್ ವಿರುದ್ಧ ಈ ಹಿಂದೆಯೂ ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ" ಎಂದು ಅಧಿಕಾರಿ ರಘುವಂಶಿ ಹೇಳಿದರು.

Rohit Sharma: ಕ್ಯಾಚ್‌ ಮೂಲಕ ದಾಖಲೆ ಬರೆದ ರೋಹಿತ್‌ ಶರ್ಮ

ಕೊಹ್ಲಿ, ಸಚಿನ್‌ ಜತೆ ಎಲೈಟ್‌ ಪಟ್ಟಿ ಸೇರಿದ ರೋಹಿತ್‌

Rohit Completes 100 ODI catches: ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ನಡೆಸಿದ ಆಸ್ಟ್ರೇಲಿಯಾ, ಹರ್ಷಿತ್‌ ರಾಣಾ ಘಾತಕ ಬೌಲಿಂಗ್‌ ದಾಳಿಗೆ ತತ್ತರಿಸಿ 46.4 ಓವರ್‌ಗಳಲ್ಲಿ 236ರನ್‌ಗೆ ಆಲೌಟ್‌ ಆಯಿತು. ಮೊಹಮ್ಮದ್‌ ಸಿರಾಜ್‌, ಅಪಾಯಕಾರಿ ಟ್ರಾವಿಸ್‌ ಹೆಡ್‌(29) ವಿಕೆಟ್‌ ಕೀಳುವ ಮೂಲಕ ಭಾರತಕ್ಕೆ ಮೊದಲ ಯಶಸ್ಸು ತಂದುಕೊಟ್ಟರು.

IND vs AUS 3rd ODI: ರಾಣಾ ಬೌಲಿಂಗ್‌ ದಾಳಿಗೆ ತತ್ತರಿಸಿದ ಆಸೀಸ್‌; 236ರನ್‌ಗೆ ಆಲೌಟ್‌

236ರನ್‌ಗೆ ಆಸೀಸ್‌ ಆಲೌಟ್‌; ಭಾರತಕ್ಕೆ 237 ರನ್‌ ಗೆಲುವಿನ ಗುರಿ

ಅಲೆಕ್ಸ್‌ ಕ್ಯಾರಿ ಜೀವದಾನ ಪಡೆದರೂ ಇದರ ಲಾಭವೆತ್ತಲು ವಿಫಲರಾದರು. ಒಂದು ಬೌಂಡರಿ ನೆರವಿನಿಂದ 24 ರನ್‌ ಗಳಿಸಿದರು. ಉಳಿದಂತೆ ನಾಯಕ ಮಿಚೆಲ್‌ ಮಾರ್ಷ್‌ 41, ಮ್ಯಾಥ್ಯೂ ಶಾರ್ಟ್ 30 ರನ್‌ ಬಾರಿಸಿದರು. ವಿರಾಟ್‌ ಕೊಹ್ಲಿ ಮತ್ತು ಶ್ರೇಯಸ್‌ ಅಯ್ಯರ್‌ ಹಿಡಿದ ಅದ್ಭುತ ಕ್ಯಾಚ್‌ ಪಂದ್ಯದ ಪ್ರಮುಖ ಹೈಲೆಟ್ಸ್‌ಗಳಲ್ಲಿ ಒಂದಾಗಿತ್ತು. ಶ್ರೇಯಸ್‌ ಅಯ್ಯರ್‌ ಹಿಮ್ಮುಖವಾಗಿ ಓಡಿ ಕ್ಯಾಚ್‌ ಹಿಡಿದ ವೇಳೆ ಬಿದ್ದು ಗಾಯಮಾಡಿಕೊಂಡು ಮೈದಾನ ತೊರೆದರು.

Nitish Reddy: ನಿತೀಶ್ ರೆಡ್ಡಿಗೆ ಮತ್ತೆ ಗಾಯ; ಟಿ20 ಸರಣಿಗೆ ಅನುಮಾನ

ನಿತೀಶ್ ರೆಡ್ಡಿಗೆ ಮತ್ತೆ ಗಾಯ; ಟಿ20ಗೂ ಮುನ್ನ ಭಾರತಕ್ಕೆ ಹೊಸ ಚಿಂತೆ

AUS vs IND 3rd ODI: ಪರ್ತ್‌ನಲ್ಲಿ ನಡೆದ ಸರಣಿಯ ಆರಂಭಿಕ ಪಂದ್ಯದಲ್ಲಿ ನಿತೀಶ್ ತಮ್ಮ ಏಕದಿನ ಅಂತಾರಾಷ್ಟ್ರೀಯ ಪಂದ್ಯಕ್ಕೆ ಪದಾರ್ಪಣೆ ಮಾಡಿದರು. ಮತ್ತು ಅಡಿಲೇಡ್‌ನಲ್ಲಿ ನಡೆದ ಎರಡನೇ ಏಕದಿನ ಪಂದ್ಯವನ್ನೂ ಆಡಿದರು. ಆದಾಗ್ಯೂ, ಅವರ ಗಾಯ ಮುಂಬರುವ T20I ಸರಣಿಗೆ ಅವರ ಲಭ್ಯತೆಯ ಬಗ್ಗೆ ಅನುಮಾನಗಳು ಹುಟ್ಟಿಕೊಂಡಿವೆ.

ಏಕದಿನ ವಿಶ್ವಕಪ್‌ ಸೆಮಿ ಫೈನಲ್‌ ಬಳಿಕ ಟಾಸ್‌ ಗೆಲ್ಲದ ಭಾರತ; ಇದು ಕೂಡ ದಾಖಲೆ!

India Lose 18th Toss: ಸತತ 18ನೇ ಟಾಸ್‌ ಸೋತ ಭಾರತ

ನವೆಂಬರ್ 19, 2023 ರಂದು ಅಹಮದಾಬಾದ್‌ನಲ್ಲಿ ನಡೆದ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮ್ಮಿನ್ಸ್ ರೋಹಿತ್ ಶರ್ಮಾ ವಿರುದ್ಧ ಟಾಸ್ ಗೆದ್ದಾಗ ಭಾರತದ ಟಾಸ್‌ ಸೋಲಿನ ಸರಣಿ ಆರಂಭವಾಯಿತು. ಸುಮಾರು ಎರಡು ವರ್ಷಗಳ ನಂತರವೂ ಭಾರತ ಇನ್ನೂ ಏಕದಿನ ಪಂದ್ಯಗಳಲ್ಲಿ ಒಂದೇ ಒಂದು ಟಾಸ್ ಗೆದ್ದಿಲ್ಲ.

Mohsin Naqvi: ಗುಪ್ತ ಸ್ಥಳವೊಂದರಲ್ಲಿ ಏಷ್ಯಾಕಪ್‌ ಟ್ರೋಫಿ ಅಡಗಿಸಿಟ್ಟ ಮೊಹ್ಸಿನ್ ನಖ್ವಿ

ಏಷ್ಯಾಕಪ್‌ ಟ್ರೋಫಿ ಅಡಗಿಸಿಟ್ಟ ಮೊಹ್ಸಿನ್ ನಖ್ವಿ

ಕಳೆದ ಶನಿವಾರ ಬಿಸಿಸಿಐ ಇ-ಮೇಲ್‌ ಮೂಲಕ ಏಷ್ಯಾಕಪ್ ಟ್ರೋಫಿ ನೀಡುವಂತೆ ಮತ್ತು, ಉತ್ತರಕ್ಕಾಗಿ ಕಾಯುತ್ತಿದ್ದೇವೆ ಎಂದು ಮೊಹ್ಸಿನ್ ನಖ್ವಿಗೆ ಹೇಳಿತ್ತು. ಇದಕ್ಕೆ ಉತ್ತರಿಸಿದ ನಖ್ವಿ, ಬಿಸಿಸಿಐ ಭಾರತ ತಂಡದ ಯಾರಾದರೂ ಒಬ್ಬ ಆಟಗಾರನನ್ನು ಕಳುಹಿಸಿದರೆ ಅವರ ಕೈಗೆ ಟ್ರೋಫಿ ಕೊಡಬಹುದು ಎಂದಿದ್ದರು.

IND vs AUS 3rd ODI: ಮೂರನೇ ಏಕದಿನದಲ್ಲಿಯೂ ಟಾಸ್‌ ಸೋತ ಭಾರತ; ಕನ್ನಡಿಗ ಪ್ರಸಿದ್ಧ್‌, ಕುಲ್‌ದೀಪ್‌ಗೆ ಅವಕಾಶ

ವೈಟ್‌ವಾಷ್ ತಪ್ಪಿಸುವ ಚಾಲೆಂಜ್ ಪಂದ್ಯದಲ್ಲಿ ಟಾಸ್‌ ಸೋತ ಭಾರತ

ಭಾರತ ಕೊನೆಗೂ ಈ ಪಂದ್ಯದಲ್ಲಿ ಎರಡು ಬದಲಾವಣೆ ಮಾಡಿತು. ಕುಲ್‌ದೀಪ್‌ ಯಾದವ್‌ ಮತ್ತು ಕನ್ನಡಿಗ ಪ್ರಸಿದ್ಧ್‌ ಕೃಷ್ಣ ಆಡುವ ಬಳಗದಲ್ಲಿ ಅವಕಾಶ ಪಡೆದರು. ಇವರಿಗಾಗಿ ಅರ್ಶ್‌ದೀಪ್‌ ಸಿಂಗ್‌ ಮತ್ತು ನಿತೀಶ್‌ ಕುಮಾರ್‌ ರೆಡ್ಡಿ ಜಾಗ ಬಿಟ್ಟರು. ಆಸ್ಟ್ರೇಲಿಯಾ ಒಂದು ಬದಲಾವಣೆ ಮಾಡಿತು. ಜೇವಿಯರ್ ಬಾರ್ಟ್ಲೆಟ್ ಬದಲು ನಥಾನ್‌ ಎಲ್ಲಿಸ್‌ ಆಡಲಿಳಿದರು.

Pro Kabaddi: ಇಂದಿನಿಂದ ಪ್ರೊ ಕಬಡ್ಡಿ ಪ್ಲೇ ಆಫ್‌ ಕಾದಾಟ

ಇಂದಿನಿಂದ ಪಿಕೆಎಲ್ 12ನೇ ಆವೃತ್ತಿಯ ಪ್ಲೇಆಫ್ ಫೆಸ್ಟಿವಲ್

PKL12 Grand Playoffs: ಪ್ಲೇ ಆಫ್ ಪಂದ್ಯಗಳು ಅಕ್ಟೋಬರ್ 26 ರಿಂದ ಪ್ರಾರಂಭವಾಗಲಿದ್ದು, ಅಲ್ಲಿ ಪ್ಲೇ-ಇನ್ ನ ವಿಜೇತರು ಎಲಿಮಿನೇಟರ್ 1 ನಲ್ಲಿ ಆಡಲಿದ್ದಾರೆ. ಅದೇ ದಿನ ಮಿನಿ ಕ್ವಾಲಿಫೈಯರ್ ನಲ್ಲಿ ಬೆಂಗಳೂರು ಬುಲ್ಸ್ ಮತ್ತು ತೆಲುಗು ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿವೆ. ಅಕ್ಟೋಬರ್ 27ರಂದು, ಎಲಿಮಿನೇಟರ್ 2 ಎಲಿಮಿನೇಟರ್ 1 ರ ವಿಜೇತರು ಬುಲ್ಸ್ ಮತ್ತು ಟೈಟಾನ್ಸ್ ನಡುವಿನ ಸೋತವರನ್ನು ಎದುರಿಸಲಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ ನಿವೃತ್ತಿಯ ಬಗ್ಗೆ ಸುಳಿವು ನೀಡಿದ ಕೇನ್‌ ವಿಲಿಯಮ್ಸನ್‌!

ಅಂತಾರಾಷ್ಟ್ರೀಯ ಕ್ರಿಕೆಟ್‌ ನಿವೃತ್ತಿ ಬಗ್ಗೆ ಸುಳಿವು ನೀಡಿದ ವಿಲಿಯಮ್ಸನ್‌!

2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಉಳಿದಿರುವ ನ್ಯೂಜಿಲೆಂಡ್‌ ಮಾಜಿ ನಾಯಕ ಕೇನ್‌ ವಿಲಿಮ್ಸನ್‌, ರಾಷ್ಟ್ರೀಯ ತಂಡಕ್ಕೆ ಮರಳುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ ಹಾಗೂ 2027ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿಯೂ ಆಡಬೇಕೆಂದು ಅಂದುಕೊಂಡಿದ್ದಾರೆ.

ʻಭಾರತ ತಂಡದಲ್ಲಿ ಸ್ಪರ್ಧೆ ಹೆಚ್ಚಾಗುತ್ತಿದೆʼ: ವಿರಾಟ್‌ ಕೊಹ್ಲಿಗೆ ರವಿ ಶಾಸ್ತ್ರಿ ಎಚ್ಚರಿಕೆ!

ಔಟ್‌ ಆಫ್‌ ಫಾರ್ಮ್‌ ವಿರಾಟ್‌ ಕೊಹ್ಲಿಗೆ ರವಿ ಶಾಸ್ತ್ರಿ ಎಚ್ಚರಿಕೆ!

ಆಸ್ಟ್ರೇಲಿಯಾ ವಿರುದ್ದ ಏಕದಿನ ಸರಣಿಯ ಆರಂಭಿಕ ಎರಡೂ ಪಂದ್ಯಗಳಲ್ಲಿ ಶೂನ್ಯಕ್ಕೆ ವಿಕೆಟ್‌ ಒಪ್ಪಿಸಿದ ಭಾರತ ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿಗೆ, ಮಾಜಿ ಹೆಡ್‌ ಕೋಚ್‌ ರವಿ ಶಾಸ್ತ್ರಿ ಎಚ್ಚರಿಕೆ ನೀಡಿದ್ದಾರೆ. ತಂಡದಲ್ಲಿ ಸದ್ಯ ಸ್ಪರ್ಧೆ ಹೆಚ್ಚಾಗಿದೆ, ಹಾಗಾಗಿ ನೀವು ಬಹುಬೇಗ ಫಾರ್ಮ್‌ಗೆ ಮರಳಬೇಕೆಂದು ಕಿವಿ ಮಾತು ಕೇಳಿದ್ದಾರೆ.

IND vs AUS-ʻಶ್ರೇಯಸ್‌ ಅಯ್ಯರ್‌ರನ್ನು ನೋಡಿʼ: ವಿರಾಟ್‌ ಕೊಹ್ಲಿಗೆ ಮೊಹಮ್ಮದ್‌ ಕೈಫ್‌ ಸಲಹೆ!

IND vs AUS: ವಿರಾಟ್‌ ಕೊಹ್ಲಿಗೆ ಮೊಹಮ್ಮದ್‌ ಕೈಫ್‌ ಮಹತ್ವದ ಸಲಹೆ!

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ವಿರಾಟ್ ಕೊಹ್ಲಿ ಅವರು ಸತತ ಎರಡು ಪಂದ್ಯಗಳಲ್ಲಿ ಶೂನ್ಯಕ್ಕೆ ಔಟಾಗಿರುವುದು ಅವರ ಲಯದ ಬಗ್ಗೆ ಕಳವಳ ಹುಟ್ಟುಹಾಕಿದೆ. ಈ ಹಿನ್ನೆಲೆಯಲ್ಲಿ ಮಾಜಿ ಟೀಮ್ ಇಂಡಿಯಾ ಆಟಗಾರ ಮೊಹಮ್ಮದ್ ಕೈಫ್, ಶ್ರೇಯಸ್ ಅಯ್ಯರ್ ಅವರ ಸ್ಥಿರತೆ ನೋಡಿ ಕೊಹ್ಲಿಯವರು ಕಲಿಯಬೇಕಿದೆ ಎಂದು ಹೇಳಿದ್ದಾರೆ.

Women's World Cup 2025: ಆಸ್ಟ್ರೇಲಿಯಾ ಆಟಗಾರ್ತಿಯರಿಗೆ ಹೋಟೆಲ್‌ನಲ್ಲಿ ಇಲಿಗಳ ಕಾಟ! ವಿಡಿಯೊ

Women's World Cup: ಆಸ್ಟ್ರೇಲಿಯಾ ಮಹಿಳಾ ತಂಡಕ್ಕೆ ಇಲಿಗಳ ಕಾಟ!

ಆಸ್ಟ್ರೇಲಿಯಾ ಮಹಿಳಾ ತಂಡಕ್ಕೆ ಇಲಿಗಳು ಕಾಟ ನೀಡಿವೆ. ಆಸೀಸ್‌ ಆಟಗಾರ್ತಿಯರು ತಂಗಿದ್ದ ಹೋಟೆಲ್‌ನ ಭೋಜನ ಕೊಠಡಿಯಲ್ಲಿ ಇಲಿಗಳು ಕಾಣಿಸಿಕೊಂಡಿವೆ. ಇದರಿಂದ ಆಸೀಸ್‌ ಆಟಗಾರ್ತಿಯರು ಆತಂಕಕ್ಕೆ ಒಳಗಾಗಿದ್ದಾರೆ. ಪಂದ್ಯಕ್ಕೂ ಮುನ್ನ ಭೋಜನದ ವೇಳೆ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.

IND vs AUS: ಮೂರನೇ ಏಕದಿನ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್‌ XI ವಿವರ!

IND vs AUS: ಸಿಡ್ನಿಯಲ್ಲಿ ವಿರಾಟ್‌ ಕೊಹ್ಲಿಯ ಬ್ಯಾಟಿಂಗ್‌ಗೆ ಪರೀಕ್ಷೆ!

IND vs AUS 3rd ODI Preview: ಆರಂಭಿಕ ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿದ ಬಳಿಕ ಏಕದಿನ ಸರಣಿಯನ್ನು ಈಗಾಗಲೇ ಕಳೆದುಕೊಂಡಿರುವ ಭಾರತ ತಂಡ, ಇದೀಗ ಮೂರನೇ ಹಾಗೂ ಸರಣಿಯ ಕೊನೆಯ ಪಂದ್ಯಕ್ಕೆ ಸಜ್ಜಾಗುತ್ತಿದೆ. ಈ ಪಂದ್ಯಕ್ಕೆ ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್‌ XI, ಪಿಚ್‌ ರಿಪೋರ್ಟ್‌ ಸೇರಿದಂತೆ ಪ್ರಮುಖ ಅಂಶಗಳನ್ನು ಇಲ್ಲಿ ವಿವರಿಸಲಾಗಿದೆ.

ಭಾರತದ ಸೈಕ್ಲಿಂಗ್ ಇತಿಹಾಸದಲ್ಲಿ ಹೊಸ ಅಧ್ಯಾಯ;  ಯುಸಿಐ ಮಾನ್ಯತೆ ಪಡೆದ ಪುಣೆ ಗ್ರ್ಯಾಂಡ್ ಟೂರ್!

ಯುಸಿಐ ಮಾನ್ಯತೆ ಪಡೆದ ಪುಣೆ ಗ್ರ್ಯಾಂಡ್ ಟೂರ್ 2026

‘ಪುಣೆ ಗ್ರ್ಯಾಂಡ್ ಟೂರ್ (PGT) 2026’ ಭಾರತದಲ್ಲಿ ನಡೆಯುವ ಮೊದಲ ಯೂನಿಯನ್ ಸೈಕ್ಲಿಸ್ಟ್ ಇಂಟರ್ನ್ಯಾಷನಲ್ (UCI) ಮಾನ್ಯತೆ ಪಡೆದ Class 2.2 ವರ್ಗದ ಬಹು ಹಂತದ ರಸ್ತೆ ಸೈಕ್ಲಿಂಗ್ ಸ್ಪರ್ಧೆಯಾಗಲಿದೆ. 2026ರ ಜನವರಿ 19 ರಿಂದ 23 ರವರೆಗೆ ನಡೆಯಲಿರುವ ಈ ಟೂರ್ನಿಯಲ್ಲಿ ನಾಲ್ಕು ಹಂತಗಳ ಸ್ಪರ್ಧೆ ನಡೆಯಲಿದೆ.

Loading...