ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಕ್ರೀಡೆ
IND vs ENG: ಭಾರತ 358 ರನ್‌ಗಳಿಗೆ ಆಲ್‌ಔಟ್‌, ಎರಡನೇ ದಿನ ಇಂಗ್ಲೆಂಡ್‌ ಮೇಲುಗೈ!

IND vs ENG: ಮ್ಯಾಂಚೆಸ್ಟರ್‌ ಟೆಸ್ಟ್‌ ಎರಡನೇ ದಿನ ಆಂಗ್ಲರು ಮೇಲುಗೈ!

ಬೆನ್‌ ಸ್ಟೋಕ್ಸ್‌ ಮಾರಕ ಬೌಲಿಂಗ್‌ ಹಾಗೂ ಝ್ಯಾಕ್‌ ಕ್ರಾವ್ಲಿ ಮತ್ತು ಬೆನ್‌ ಡಕೆಟ್‌ ಅವರ ಬ್ಯಾಟಿಂಗ್‌ ಬಲದಿಂದ ಇಂಗ್ಲೆಂಡ್‌ ತಂಡ ನಾಲ್ಕನೇ ಟೆಸ್ಟ್‌ ಪಂದ್ಯದ ಎರಡನೇ ದಿನ ಮೇಲುಗೈ ಸಾಧಿಸಿದೆ. ಭಾರತ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 358 ರನ್‌ಗಳಿಗೆ ಆಲ್‌ಔಟ್‌ ಆದ ಬಳಿಕ ಇಂಗ್ಲೆಂಡ್‌ ಬ್ಯಾಟಿಂಗ್‌ ಆರಂಭಿಸಿ ಎರಡನೇ ದಿನದಾಟದ ಅಂತ್ಯಕ್ಕೆ ಪ್ರಥಮ ಇನಿಂಗ್ಸ್‌ನಲ್ಲಿ ಒಂದು ವಿಕೆಟ್‌ ನಷ್ಟಕ್ಕೆ 225 ರನ್‌ ಗಳಿಸಿದೆ.

ಗಾಯದ  ಹೊರತಾಗಿಯೂ ಅರ್ಧಶತಕ ಬಾರಿಸಿದ ರಿಷಭ್‌ ಪಂತ್‌ಗೆ ಕ್ರಿಕೆಟ್‌ ದೇವರಿಂದ ಮೆಚ್ಚುಗೆ!

ಕೆಚ್ಚೆದೆಯ ಅರ್ಧಶತಕ ಬಾರಿಸಿದ ರಿಷಭ್‌ ಪಂತ್‌ಗೆ ಸಚಿನ್‌ ಮೆಚ್ಚುಗೆ!

ಇಂಗ್ಲೆಂಡ್‌ ವಿರುದ್ಧದ ನಾಲ್ಕನೇ ಟೆಸ್ಟ್‌ನ ಎರಡನೇ ದಿನದಾಟದ ಮೊದಲ ಸೆಷನ್​ನಲ್ಲಿ ರವೀಂದ್ರ ಜಡೇಜಾ ಮತ್ತು ಶಾರ್ದೂಲ್ ಠಾಕೂರ್ ಔಟಾದ ನಂತರ ರಿಷಭ್ ಪಂತ್ ಗಾಯದ ಹೊರತಾಗಿಯೂ ಪುನಃ ಬ್ಯಾಟಿಂಗ್ ಮಾಡಲು ಮೈದಾನಕ್ಕಿಳಿದರು. ಪಂತ್ ತನ್ನ ಕಾಲಿನ ನೋವನ್ನು ಲೆಕ್ಕಿಸದೇ ಮೈದಾನಕ್ಕೆ ಬಂದು ತಂಡಕ್ಕೆ ಅರ್ಧಶತಕದ ಕೊಡುಗೆ ನೀಡಿದ್ದು ಎಲ್ಲರ ಗಮನ ಸೆಳೆಯಿತು. ಇದರ ನಡುವೆ ಭಾರತೀಯ ಕ್ರಿಕೆಟ್‌ ದಂತಕತೆ ಸಚಿನ್‌ ತೆಂಡುಲ್ಕರ್‌ ತಮ್ಮ ಅಧೀಕೃತ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿ ರಿಷಭ್‌ ಪಂತ್‌ ಅವರನ್ನು ಹಾಡಿ ಹೊಗಳಿದ್ದಾರೆ.

IND vs ENG: ಐದನೇ ಟೆಸ್ಟ್‌ ಪಂದ್ಯದಲ್ಲಿ ರಿಷಭ್ ಪಂತ್‌ ಸ್ಥಾನಕ್ಕೆ ಯಾರು ವಿಕೆಟ್‌ ಕೀಪರ್‌?

5ನೇ ಟೆಸ್ಟ್‌ ಪಂದ್ಯದಲ್ಲಿ ರಿಷಭ್ ಪಂತ್‌ ಸ್ಥಾನಕ್ಕೆ ಯಾರು ವಿಕೆಟ್‌ ಕೀಪರ್‌?

ಭಾರತ ತಂಡದ ವಿಕೆಟ್‌ ಕೀಪರ್‌ ರಿಷಭ್‌ ಪಂತ್‌ ಗಾಯಕ್ಕೆ ತುತ್ತಾಗಿದ್ದಾರೆ. ಮ್ಯಾಂಚೆಸ್ಟರ್‌ ಟೆಸ್ಟ್‌ ಮೊದಲನೇ ದಿನ 68ನೇ ಓವರ್‌ನಲ್ಲಿ ಕ್ರಿಸ್‌ ವೋಕ್ಸ್‌ ಎಸೆತದಲ್ಲಿ ಸ್ವೀಪ್‌ ಶಾಟ್‌ ಹೊಡೆಯಲು ಯತ್ನಿಸಿದ ಪಂತ್‌, ನಿಧಾನಗತಿಯಲ್ಲಿದ್ದ ಚೆಂಡನ್ನು ಅರಿಯುವಲ್ಲಿ ವಿಫಲರಾದರು. ಇದರ ಪರಿಣಾಮ ಪಂತ್‌ ಅವರ ಪಾದಕ್ಕೆ ಗಂಭೀರ ಗಾಯವಾಗಿದೆ. ಈ ಹಿನ್ನೆಲೆಯಲ್ಲಿ ಐದನೇ ಟೆಸ್ಟ್‌ನಲ್ಲಿ ಪಂತ್‌ ಬದಲು ಯಾರು ಆಡಲಿದ್ದಾರೆಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

IND vs ENG: ಭಾರತ ಟೆಸ್ಟ್‌ ತಂಡದಲ್ಲಿ ರಿಷಭ್‌ ಪಂತ್‌ ಸ್ಥಾನಕ್ಕೆ ಸೇರ್ಪಡೆಯಾದ ಎನ್‌ ಜಗದೀಶನ್‌!

IND vs ENG: ಭಾರತ ಟೆಸ್ಟ್‌ ತಂಡಕ್ಕೆ ಸೇರ್ಪಡೆಯಾದ ಎನ್‌ ಜಗದೀಶನ್!‌

ಭಾರತ ಟೆಸ್ಟ್‌ ತಂಡದಲ್ಲಿ ಗಾಯಕ್ಕೆ ತುತ್ತಾಗಿರುವ ರಿಷಭ್‌ ಪಂತ್‌ ಅವರ ಸ್ಥಾನಕ್ಕೆ ತಮಿಳುನಾಡು ತಂಡದ ಎನ್‌ ಜಗದೀಶನ್‌ ಅವರನ್ನು ಭಾರತ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಪ್ರಸ್ತುತ ನಡೆಯುತ್ತಿರುವ ಮ್ಯಾಂಚೆಸ್ಟರ್‌ ಟೆಸ್ಟ್‌ ಮೊದಲನೇ ದಿನ ರಿಷಭ್‌ ಪಂತ್‌ ಗಂಭೀರ ಗಾಯಕ್ಕೆ ತುತ್ತಾಗಿದ್ದರು. ಇದೀಗ ಅವರು ಐದನೇ ಟೆಸ್ಟ್‌ನಿಂದ ಹೊರ ನಡೆದಿದ್ದಾರೆ.

IND vs ENG: ಅರ್ಧಶತಕ ಬಾರಿಸಿ ಎಂಎಸ್‌ ಧೋನಿ ದಾಖಲೆ ಮುರಿದ ರಿಷಭ್‌ ಪಂತ್!

ಅರ್ಧಶತಕ ಬಾರಿಸಿ ಎಂಎಸ್‌ ಧೋನಿ ದಾಖಲೆ ಮುರಿದ ರಿಷಭ್‌ ಪಂತ್!

ಗಾಯದ ಹೊರತಾಗಿಯೂ ಭಾರತ ತಂಡದ ವಿಕೆಟ್‌ ಕೀಪರ್‌ ರಿಷಭ್‌ ಪಂತ್‌ ಅವರು ಇಂಗ್ಲೆಂಡ್‌ ವಿರುದ್ಧ ನಾಲ್ಕನೇ ಟೆಸ್ಟ್‌ ಪಂದ್ಯದ ಎರಡನೇ ದಿನ ಅರ್ಧಶತಕವನ್ನು ಪೂರ್ಣಗೊಳಿಸಿದರು. ಆ ಮೂಲಕ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಅವರ ದಾಖಲೆಯನ್ನು ರಿಷಭ್‌ ಪಂತ್‌ ಮುರಿದಿದ್ದಾರೆ.

IND vs ENG 4th Test: ಭಾರತ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 358 ರನ್‌ಗಳಿಗೆ ಆಲ್‌ಔಟ್‌!

ಭಾರತ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 358 ರನ್‌ಗಳಿಗೆ ಆಲ್‌ಔಟ್‌!

IND vs ENG 4th Test: ಇಂಗ್ಲೆಂಡ್‌ ವಿರುದ್ಧ ನಾಲ್ಕನೇ ಟೆಸ್ಟ್‌ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಭಾರತ ತಂಡ 358 ರನ್‌ಗಳಿಗೆ ಆಲ್‌ಔಟ್‌ ಆಗಿದೆ. ಮೊದಲನೇ ದಿನ 264 ರನ್‌ಗಳನ್ನು ಕಲೆ ಹಾಕಿದ್ದ ಪ್ರವಾಸಿಗರು, ಎರಡನೇ ದಿನ 100 ರನ್‌ಗಳನ್ನು ಕೂಡ ಸೇರಿಸಲು ಸಾಧ್ಯವಾಗಲಿಲ್ಲ. ಭಾರತದ ಪರ ಪ್ರಥಮ ಇನಿಂಗ್ಸ್‌ನಲ್ಲಿ ಯಶಸ್ವಿ ಜೈಸ್ವಾಲ್‌, ಸಾಯಿ ಸುದರ್ಶನ್‌ ಹಾಗೂ ರಿಷಭ್‌ ಪಂತ್‌ ಅರ್ಧಶತಕಗಳನ್ನು ಬಾರಿಸಿದರು.

IND vs ENG: ನಾಲ್ಕನೇ ಟೆಸ್ಟ್‌ಗೆ ರಿಷಭ್‌ ಪಂತ್‌ ಲಭ್ಯತೆ ಬಗ್ಗೆ ಬಿಸಿಸಿಐ ಅಧಿಕೃತ ಮಾಹಿತಿ!

ನಾಲ್ಕನೇ ಟೆಸ್ಟ್‌ಗೆ ರಿಷಭ್‌ ಪಂತ್‌ ಲಭ್ಯತೆ ಬಗ್ಗೆ ಬಿಸಿಸಿಐ ಮಾಹಿತಿ!

ಭಾರತ ಹಾಗೂ ಇಂಗ್ಲೆಂಡ್‌ ತಂಡಗಳ ನಡುವೆ ಮ್ಯಾಂಚೆಸ್ಟರ್‌ನ ಓಲ್ಡ್‌ ಟ್ರಾಫರ್ಡ್‌ನಲ್ಲಿ ನಾಲ್ಕನೇ ಟೆಸ್ಟ್‌ ಪಂದ್ಯ ನಡೆಯುತ್ತಿದೆ. ಪಂದ್ಯದ ಮೊದಲನೇ ದಿನ ಭಾರತದ ವಿಕೆಟ್‌ ಕೀಪರ್‌ ರಿಷಭ್‌ ಪಂತ್‌ ಪಾದದ ಗಾಯಕ್ಕೆ ತುತ್ತಾಗಿದ್ದರು. ಇದೀಗ ಅವರು ಎರಡನೇ ದಿನ ಬ್ಯಾಟಿಂಗ್‌ಗೆ ಇಳಿದಿದ್ದಾರೆ. ಈ ಬಗ್ಗೆ ಬಿಸಿಸಿಐ ಮಹತ್ವದ ಮಾಹಿತಿ ಹಂಚಿಕೊಂಡಿದೆ.

Asia Cup 2025: ತಟಸ್ಥ ಸ್ಥಳದಲ್ಲಿ ಏಷ್ಯಾ ಕಪ್‌ ಟೂರ್ನಿಯನ್ನು ಆಯೋಜಿಸಲು ಬಿಸಿಸಿಐ ಒಪ್ಪಿಗೆ! ವರದಿ

ತಟಸ್ಥ ಸ್ಥಳದಲ್ಲಿ ಏಷ್ಯಾ ಕಪ್‌ ಟೂರ್ನಿಯನ್ನು ಆಯೋಜಿಸಲು ಬಿಸಿಸಿಐ ಒಪ್ಪಿಗೆ!

ಮುಂಬರುವ 2025ರ ಏಷ್ಯಾ ಕಪ್‌ ಟೂರ್ನಿಯು ಭಾರತದ ಆತಿಥ್ಯದಲ್ಲಿ ನಡೆಯಲಿದೆ. ಪಾಕಿಸ್ತಾನದ ಜೊತೆ ರಾಜಕೀಯ ಸಮಸ್ಯೆಗಳ ಕಾರಣ ಭಾರತ ತಂಡ, ಏಷ್ಯಾ ಕಪ್‌ ಟೂರ್ನಿಯನ್ನು ತಟಸ್ಥ ಸ್ಥಳದಲ್ಲಿ ಆಯೋಜಿಸಲು ಒಪ್ಪಿಕೊಂಡಿದೆ ಎಂದು ವರದಿಯಾಗಿದೆ. ಈ ಬಾರಿ ಟೂರ್ನಿಯನ್ನು ಟಿ20 ಸ್ವರೂಪದಲ್ಲಿ ಆಯೋಜಿಸಲಾಗುತ್ತದೆ.

China Open: 17 ವರ್ಷದ ಉನ್ನತಿ ಹೂಡಾ ವಿರುದ್ಧ ಸೋತ ಸಿಂಧು

ಸಿಂಧುಗೆ ಸೋಲಿನ ಆಘಾತ; ಕ್ವಾ. ಫೈನಲ್‌ ಪ್ರವೇಶಿಸಿದ ಉನ್ನತಿ ಹೂಡಾ

Unnati Hooda: ಶುಕ್ರವಾರ ನಡೆಯುವ ಕ್ವಾರ್ಟರ್‌ ಫೈನಲ್‌ನಲ್ಲಿ ಉನ್ನತಿ ಹೂಡಾ ಅವರು ವಿಶ್ವದ 4ನೇ ಶ್ರೇಯಾಂಕಿತೆ, ಜಪಾನ್‌ನ ಅಕಾನೆ ಯಮಾಗುಚಿ ಅವರ ಕಠಿಣ ಸವಾಲು ಎದುರಿಸಲಿದಾರೆ. ಈ ಸವಾಲನ್ನು ಗೆದ್ದದ್ದೇ ಆದಲ್ಲಿ ಹೂಡಾ ಮೇಲೆ ಪ್ರಶಸ್ತಿ ನಿರೀಕ್ಷೆಯೊಂದನ್ನು ಮಾಡಬಹುದಾಗಿದೆ.

IND vs ENG: ವಾಷಿಂಗ್ಟನ್‌ ಸುಂದರ್‌ಗೂ ಮುನ್ನ ಶಾರ್ದುಲ್‌ ಠಾಕೂರ್‌ ಆಡಿದ್ದಕ್ಕೆ ದಿನೇಶ್‌ ಕಾರ್ತಿಕ್‌ ಆಕ್ರೋಶ!

ಭಾರತ ತಂಡದ ವಿರುದ್ಧ ದಿನೇಶ್‌ ಕಾರ್ತಿಕ್‌ ಅಸಮಾಧಾನ!

ಇಂಗ್ಲೆಂಡ್‌ ವಿರುದ್ಧ ನಾಲ್ಕನೇ ಟೆಸ್ಟ್‌ ಪಂದ್ಯದ ಮೊದಲನೇ ದಿನ ವಾಷಿಂಗ್ಟನ್‌ ಸುಂದರ್‌ಗೂ ಮುನ್ನ ಶಾರ್ದುಲ್‌ ಠಾಕೂರ್‌ಗೆ ಬ್ಯಾಟಿಂಗ್‌ ನೀಡಿದ್ದರ ಭಾರತ ತಂಡದ ನಿರ್ಧಾರದ ವಿರುದ್ಧ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಮೆಂಟರ್‌ ದಿನೇಶ್‌ ಕಾರ್ತಿಕ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

2026ರಲ್ಲಿ ಭಾರತ ಮತ್ತೆ ಇಂಗ್ಲೆಂಡ್ ಪ್ರವಾಸ; ವೈಟ್-ಬಾಲ್ ಸರಣಿಯ ವೇಳಾಪಟ್ಟಿ ಪ್ರಕಟ

2026ರಲ್ಲಿ ವೈಟ್-ಬಾಲ್ ಸರಣಿಗಾಗಿ ಭಾರತ ಮತ್ತೆ ಇಂಗ್ಲೆಂಡ್ ಪ್ರವಾಸ

India to tour England 2026: ಮುಂದಿನ ವರ್ಷ ಜುಲೈ 1, 2026 ರಂದು ಡರ್ಹ್ಯಾಮ್‌ನ ರಿವರ್‌ಸೈಡ್ ಮೈದಾನದಲ್ಲಿ ಟಿ20ಐ ಆಡುವ ಮೂಲಕ ತಮ್ಮ ವೈಟ್-ಬಾಲ್ ಪ್ರವಾಸವನ್ನು ಪ್ರಾರಂಭಿಸಲಿದೆ. ಐದು ಪಂದ್ಯಗಳ ಟಿ20ಐ ಸರಣಿಯು ಮ್ಯಾಂಚೆಸ್ಟರ್, ನಾಟಿಂಗ್‌ಹ್ಯಾಮ್, ಬ್ರಿಸ್ಟಲ್ ಮತ್ತು ಸೌತಾಂಪ್ಟನ್‌ನಲ್ಲಿ ಮುಂದುವರಿಯಲಿದೆ.

ರಿಷಭ್ ಪಂತ್ ಕಾಲಿನ ಬೆರಳು ಮುರಿತ; 2 ತಿಂಗಳ ವಿಶ್ರಾಂತಿ ಸಾಧ್ಯತೆ

ರಿಷಭ್ ಪಂತ್ ಕಾಲಿನ ಬೆರಳು ಮುರಿತ; 2 ತಿಂಗಳ ವಿಶ್ರಾಂತಿ ಸಾಧ್ಯತೆ

ಮೂಳೆ ಮುರಿತಗೊಂಡ ಪಂತ್‌ ಎರಡು ತಿಂಗಳ ವಿಶ್ರಾಂತಿ ಪಡೆದರೆ ಅವರು ಭಾರತದ ವೈಟ್‌ ಬಾಲ್‌ ಸರಣಿ ಮತ್ತು ಏಷ್ಯಾ ಕಪ್ (ನಡೆದರೆ) ನಿಂದ ಹೊರಗುಳಿಯುವ ಸಾಧ್ಯತೆ ಇದೆ. ಅವರು ಅಕ್ಟೋಬರ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ತವರು ಟೆಸ್ಟ್ ಸರಣಿ ವೇಳೆಗೆ ಭಾರತ ತಂಡ ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ.

ಕ್ವಾರ್ಟರ್‌ ಫೈನಲ್‌ಗೆ ಲಗ್ಗೆಯಿಟ್ಟ ಸಾತ್ವಿಕ್‌-ಚಿರಾಗ್‌ ಜೋಡಿ; ಸೋತು ಹೊರಬಿದ್ದ ಪ್ರಣಯ್‌

China Open: ಕ್ವಾರ್ಟರ್‌ ಫೈನಲ್‌ಗೆ ಲಗ್ಗೆಯಿಟ್ಟ ಸಾತ್ವಿಕ್‌-ಚಿರಾಗ್‌ ಜೋಡಿ

ದಿನದ ಮಹಿಳಾ ಸಿಂಗಲ್ಸ್‌ ವಿಭಾಗದ ಫ್ರೀ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ದೇಶವಾಸಿಗಳಾದ ಪಿ.ವಿ. ಸಿಂಧು ಮತ್ತು ಉನ್ನತಿ ಹೂಡಾ ಮುಖಾಮುಖಿಯಾಗಲಿದಾರೆ. ಬುಧವಾರ ನಡೆದಿದ್ದ ಮೊದಲ ಸುತ್ತಿನ ಪಂದ್ಯದಲ್ಲಿ ಸಿಂಧು ಟೊಮೋಕಾ ಮಿಯಝಾಕಿ ಅವರನ್ನು 21-15, 8-21, 21-17ರಿಂದ ಪರಾಭವಗೊಳಿಸಿದ್ದರು.

Rishabh Pant: ಪಂತ್‌ ಗಾಯದ ಬಗ್ಗೆ ಹೊರಬಿತ್ತು ಅಪ್ಡೇಟ್

ಪಂತ್‌ ಗಾಯದ ಬಗ್ಗೆ ಹೊರಬಿತ್ತು ಅಪ್ಡೇಟ್

ಪಂತ್‌ ಗಾಯದ ಬಗ್ಗೆ ಮಾಹಿತಿ ನೀಡಿರುವ ಸಾಯಿ ಸುದರ್ಶನ್‌ ಮತ್ತು ನಾಯಕ ಗಿಲ್‌, ಪಂತ್‌ ಅವರನ್ನು ನೋಡುವಾಗ ಅವರು ಆಡುವುದು ಅನುಮಾನ. ಹೀಗಾಗಿ ನಾವು ಕೀಪಿಂಗ್‌ಗೆ ಜುರೇಲ್‌ ಅವರನ್ನು ಆಯ್ಕೆ ಮಾಡಬೇಕಿದೆ ಎಂದರು. ಮಾಜಿ ಕೋಚ್‌ ರವಿಶಾಸ್ತ್ರಿ ಕೂಡ ಪಂತ್‌ ಆಡುವುದು ಕಷ್ಟ ಸಾಧ್ಯ ಎಂದಿದ್ದಾರೆ.

Ayush Mhatre: ಅತಿ ವೇಗದ ಶತಕ ಬಾರಿಸಿ ದಾಖಲೆ ಬರೆದ ಆಯುಷ್‌ ಮ್ಹಾತ್ರೆ

ಅತಿ ವೇಗದ ಶತಕ ಬಾರಿಸಿ ದಾಖಲೆ ಬರೆದ ಆಯುಷ್‌ ಮ್ಹಾತ್ರೆ

2024-25ರ ಸಾಲಿನಲ್ಲಿ ದೇಶಿ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಆಯುಷ್‌ ಮ್ಹಾತ್ರೆ, ಮುಂಬೈ ಪರ 7 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು, 504 ರನ್‌ಗಳನ್ನು ದಾಖಲಿಸಿದ್ದಾರೆ. ಇನ್ನು 7 ಲಿಸ್ಟ್‌ ಎ ಪಂದ್ಯಗಳಿಂದ 4458 ರನ್‌ಗಳನ್ನು ಗಳಿಸಿದ್ದಾರೆ.

Asia Cup 2025: ಯೂಟರ್ನ್ ಹೊಡೆದ ಬಿಸಿಸಿಐ; ಏಷ್ಯಾಕಪ್‌ ಸಭೆಗೆ ಹಾಜರ್‌!

ಯೂಟರ್ನ್ ಹೊಡೆದ ಬಿಸಿಸಿಐ; ಏಷ್ಯಾಕಪ್‌ ಸಭೆಗೆ ಹಾಜರ್‌!

ವರದಿಯೊಂದರ ಪ್ರಕಾರ, ಸೆಪ್ಟೆಂಬರ್‌ 5ರಿಂದ ಏಷ್ಯಾಕಪ್‌ ಟಿ20 ಪಂದ್ಯಾವಳಿ ಆರಂಭವಾಗಲಿದ್ದು, ಬುದ್ಧ ಎದುರಾಳಿ ಭಾರತ-ಪಾಕಿಸ್ತಾನ ತಂಡಗಳು ಸೆ. 17ರಂದು ಮುಖಾಮುಖೀ ಆಗಲಿವೆ. ಸೆ. 21ರಂದು ಫೈನಲ್‌ ನಡೆಯಲಿದೆ. ಟೂರ್ನಿ ಯುಎಇಯಲ್ಲಿ ನಡೆಯುವ ನಿರೀಕ್ಷೆಯಿದೆ ಎನ್ನಲಾಗಿದೆ.

Rishabh Pant: ಗಾಯದ ಹೊರತಾಗಿಯೂ ನೂತನ ದಾಖಲೆ ಬರೆದ ರಿಷಭ್ ಪಂತ್

ಗಾಯದ ಹೊರತಾಗಿಯೂ ನೂತನ ದಾಖಲೆ ಬರೆದ ರಿಷಭ್ ಪಂತ್

England vs India 4th Test: ಮೊದಲ ದಿನದಂತ್ಯಕ್ಕೆ ಭಾರತ 4 ವಿಕೆಟ್‌ ನಷ್ಟಕ್ಕೆ 260 ರನ್‌ ಕಲೆಹಾಕಿದ್ದು, ಮೊದಲ ಇನ್ನಿಂಗ್ಸ್‌ನಲ್ಲಿ ದೊಡ್ಡ ಮೊತ್ತ ಕಲೆಹಾಕಲು ಎದುರು ನೋಡುತ್ತಿದೆ. ತಲಾ 19 ರನ್‌ ಗಳಿಸಿರುವ ರವೀಂದ್ರ ಜಡೇಜಾ ಮತ್ತು ಶಾರ್ದೂಲ್‌ ಠಾಕೂರ್‌ ಕ್ರೀಸ್‌ ಕಾಯ್ದುಕೊಂಡಿದಾರೆ.

ಚೆಸ್‌ ವಿಶ್ವಕಪ್‌ ಫೈನಲ್‌ ಪ್ರವೇಶಿಸಿ ಇತಿಹಾಸ ಬರೆದ ದಿವ್ಯಾ

ಚೆಸ್‌ ವಿಶ್ವಕಪ್‌ ಫೈನಲ್‌ ಪ್ರವೇಶಿಸಿ ಇತಿಹಾಸ ಬರೆದ ದಿವ್ಯಾ

FIDE Women's World Cup: ಭಾರತದ ಗ್ರ್ಯಾಂಡ್‌ ಮಾಸ್ಟರ್‌ ಕೊನೆರು ಹಂಪಿ ಹಾಗೂ ಅಗ್ರ ಶ್ರೇಯಾಂಕಿತೆ ಚೀನಾದ ಟಿಂಗ್‌ಜೀ ಲೀ ನಡುವೆ ನಡೆಯುತ್ತಿರುವ 2ನೇ ಸೆಮಿಫೈನಲ್‌ ಟೈ ಬ್ರೇಕರ್‌ಗೆ ಸಾಗಿದೆ. ಇಬ್ಬರ ನಡುವಿನ 2ನೇ ಸುತ್ತು ಸಹ ಡ್ರಾನಲ್ಲಿ ಕೊನೆಗೊಂಡಿತು. ಈ ಇಬ್ಬರು ಟೈ ಬ್ರೇಕರ್‌ನಲ್ಲಿ ರ್‍ಯಾಪಿಡ್‌ ಚೆಸ್‌ ಮಾದರಿಯಲ್ಲಿ ಆಡಲಿದ್ದಾರೆ.

IND vs ENG: ಜೈಸ್ವಾಲ್‌, ಸುದರ್ಶನ್‌ ಅರ್ಧಶತಕ, ಭಾರತ ತಂಡಕ್ಕೆ ಉತ್ತಮ ಆರಂಭ!

ಜೈಸ್ವಾಲ್‌, ಸುದರ್ಶನ್‌ ಅರ್ಧಶತಕ, ಭಾರತಕ್ಕೆ ಉತ್ತಮ ಆರಂಭ!

IND vs ENG 4th Test Day 1 Highlights: ಮ್ಯಾಂಚೆಸ್ಟರ್‌ನ ಓಲ್ಡ್‌ ಟ್ರಾಫರ್ಡ್‌ ಕ್ರೀಡಾಂಗಣದಲ್ಲಿ ಬುಧವಾರ ಆರಂಭವಾದ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ಹಾಗೂ ಇಂಗ್ಲೆಂಡ್‌ ತಂಡಗಳು ಕಾದಾಟ ನಡೆಸುತ್ತಿವೆ. ಈ ಪಂದ್ಯದ ಮೊದಲನೇ ದಿನ ಭಾರತ ತಂಡ ಉತ್ತಮ ಆರಂಭ ಪಡೆದಿದೆ. ಮೊದಲನೇ ದಿನದಾಟದ ಅಂತ್ಯಕ್ಕೆ ಟೀಮ್‌ ಇಂಡಿಯಾ 83 ಓವರ್‌ಗಳಿಗೆ 4 ವಿಕೆಟ್‌ ನಷ್ಟಕ್ಕೆ 264 ರನ್‌ಗಳನ್ನು ಕಲೆ ಹಾಕಿದೆ.

IND vs ENG: ಬ್ಯಾಟಿಂಗ್‌ ವೇಳೆ ಗಂಭೀರ ಗಾಯಕ್ಕೆ ತುತ್ತಾಗಿ ಮೈದಾನ ತೊರೆದ ರಿಷಭ್‌ ಪಂತ್‌!

ಗಂಭೀರ ಗಾಯಕ್ಕೆ ತುತ್ತಾಗಿ ಮೈದಾನ ತೊರೆದ ರಿಷಭ್‌ ಪಂತ್‌!

ಭಾರತ ಮತ್ತು ಇಂಗ್ಲೆಂಡ್ ನಡುವಣ ಮ್ಯಾಂಚೆಸ್ಟರ್ ಟೆಸ್ಟ್‌ನ ಮೊದಲನೇ ದಿನ ಮೂರನೇ ಸೆಷನ್‌ನಲ್ಲಿ ರಿಷಭ್ ಪಂತ್ ಅಪಾಯಕಾರಿ ಗಾಯಕ್ಕೆ ತುತ್ತಾದರು. ಈ ಗಾಯದಿಂದಾಗಿ ಅವರು ಬ್ಯಾಟಿಂಗ್‌ ಮುಂದುವರಿಸಲು ಸಾಧ್ಯವಾಗದೆ, ಮೈದಾನ ತೊರೆಯಬೇಕಾಯಿತು. ಈಗಾಗಲೇ ಹಲವು ಆಟಗಾರರ ಗಾಯದ ಸಮಸ್ಯೆಯನ್ನು ಎದುರಿಸುತ್ತಿರುವ ಭಾರತಕ್ಕೆಇದೀಗ ಪಂತ್‌ಗೆ ಗಾಯ ಇನ್ನಷ್ಟುಆತಂಕವನ್ನು ಮೂಡಿಸಿದೆ.

IND vs ENG: ಮ್ಯಾಂಚೆಸ್ಟರ್‌ನಲ್ಲಿ ಅರ್ಧಶತಕ ಸಿಡಿಸಿ ಅಪರೂಪದ ದಾಖಲೆ ಬರೆದ ಯಶಸ್ವಿ ಜೈಸ್ವಾಲ್‌!

ಅರ್ಧಶತಕ ಸಿಡಿಸಿ ವಿಶೇಷ ದಾಖಲೆ ಬರೆದ ಯಶಸ್ವಿ ಜೈಸ್ವಾಲ್‌!

ಇಂಗ್ಲೆಂಡ್‌ ವಿರುದ್ಧ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಮೊದಲನೇ ದಿನ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಯಶಸ್ವಿ ಜೈಸ್ವಾಲ್‌ ಅರ್ಧಶತಕವನ್ನು ಸಿಡಿಸಿದರು. ಆ ಮೂಲಕ ಮ್ಯಾಂಚೆಸ್ಟರ್‌ನಲ್ಲಿ ಅರ್ಧಶತಕ ಸಿಡಿಸಿದ ಎರಡನೇ ಭಾರತೀಯ ಬ್ಯಾಟ್ಸ್‌ಮನ್‌ ಎನಿಸಿಕೊಂಡರು. ಇದಕ್ಕೂ ಮುನ್ನ ಸುನೀಲ್‌ ಗವಾಸ್ಕರ್‌ ಈ ಅಂಗಣದಲ್ಲಿ ಅರ್ಧಶತಕವನ್ನು ಬಾರಿಸಿದ್ದರು.

Appu Cup Season 3: ಅಪ್ಪು ಕಪ್‌ ಸೀಸನ್‌ 3; ʼಯುವರತ್ನ ಚಾಂಪಿಯನ್ಸ್‌ʼ ತಂಡದಿಂದ ಭರ್ಜರಿ ಸಿದ್ಧತೆ

ಅಪ್ಪುಕಪ್‌ ಸೀಸನ್‌ 3; ಯುವರತ್ನ ಚಾಂಪಿಯನ್ಸ್‌ ತಂಡದಿಂದ ಭರ್ಜರಿ ಸಿದ್ಧತೆ

Appu Cup Season 3: ದಿವಂಗತ ನಟ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅವರ ಸ್ಮರಣಾರ್ಥ ಆಯೋಜಿಸುವ ʼಅಪ್ಪು ಕಪ್‌ ಸೀಸನ್‌ 3ʼ ಪಂದ್ಯಾವಳಿ ಇದೇ ವಾರಾಂತ್ಯದಲ್ಲಿ ಆರಂಭಗೊಳ್ಳಲಿದ್ದು, ʼಯುವರತ್ನ ಚಾಂಪಿಯನ್ಸ್‌ʼ ತಂಡವು ಭರ್ಜರಿಯಾಗಿ ಸಿದ್ಧತೆಯನ್ನು ನಡೆಸಿದೆ. ಈ ಕುರಿತ ವಿವರ ಇಲ್ಲಿದೆ.

IND vs ENG: ಸತತ 14 ಬಾರಿ ಟಾಸ್‌ ಸೋತು ಅನಗತ್ಯ ದಾಖಲೆ ಹೆಗಲೇರಿಸಿಕೊಂಡ ಭಾರತ!

ಸತತ 14 ಬಾರಿ ಟಾಸ್‌ ಸೋತು ಅನಗತ್ಯ ದಾಖಲೆ ಹೆಗಲೇರಿಸಿಕೊಂಡ ಭಾರತ!

ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯಲ್ಲಿ ಶುಭಮನ್ ಗಿಲ್ ಮತ್ತೊಮ್ಮೆ ಟಾಸ್ ಸೋತಿದ್ದಾರೆ. ಇದರೊಂದಿಗೆ ಭಾರತ ತಂಡ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಎಲ್ಲಾ ಸ್ವರೂಪದಲ್ಲಿಯೂ ಸತತ 14 ಬಾರಿ ಟಾಸ್‌ ಸೋತಂತಾಗಿದೆ. ಆ ಮೂಲಕ ಶುಭಮನ್‌ ಗಿಲ್‌ ನಾಯಕತ್ವದ ಟೀಮ್‌ ಇಂಡಿಯಾ ಅನಗತ್ಯ ದಾಖಲೆಯನ್ನು ಹೆಗಲೇರಿಸಿಕೊಂಡಿದೆ.

WCL 2025: ವಿರಾಟ್‌ ಕೊಹ್ಲಿಗೆ ಸ್ಥಾನ, ತಮ್ಮ ನೆಚ್ಚಿನ ವಿಶ್ವದ ಪ್ಲೇಯಿಂಗ್‌ XI ಆರಿಸಿದ ಎಬಿ ಡಿ ವಿಲಿಯರ್ಸ್‌!

WCL 2025: ತಮ್ಮ ನೆಚ್ಚಿನ ವಿಶ್ವದ ಪ್ಲೇಯಿಂಗ್‌ XI ಕಟ್ಟಿದ ಎಬಿಡಿ!

ABD Picks World XI: ವಿಶ್ವ ಚಾಂಪಿಯನ್‌ಷಿಪ್‌ ಆಫ್‌ ಲೆಜೆಂಡ್ಸ್‌ ಆಡುತ್ತಿರುವ ದಕ್ಷಿಣ ಆಫ್ರಿಕಾ ದಿಗ್ಗಜ ಎಬಿ ಡಿ ವಿಲಿಯರ್ಸ್‌, ತಮ್ಮ ನೆಚ್ಚಿನ ವಿಶ್ವದ ಪ್ಲೇಯಿಂಗ್‌ Xi ಆರಿಸಿದ್ದಾರೆ. ತಮ್ಮ ನೆಚ್ಚಿನ ತಂಡದಲ್ಲಿ ಇಬ್ಬರು ಭಾರತೀಯರಿಗೆ ಎಬಿಡಿ ಅವಕಾಶವನ್ನು ನೀಡಿದ್ದಾರೆ. ವಿರಾಟ್‌ ಕೊಹ್ಲಿ ಹಾಗೂ ವಿಕೆಟ್‌ ಕೀಪರ್‌ ಎಂಎಸ್‌ ಧೋನಿಗೆ ಸ್ಥಾನವನ್ನು ನೀಡಿದ್ದಾರೆ.

Loading...