ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕ್ರೀಡೆ

IND vs SL: ಭಾರತ ಟೆಸ್ಟ್‌ ತಂಡದಲ್ಲಿ ಸಾಯಿ ಸುದರ್ಶನ್‌ ಸ್ಥಾನವನ್ನು ತುಂಬಬಲ್ಲ ಮೂವರು ಆಟಗಾರರು!

ಭಾರತ ತಂಡದಲ್ಲಿ ಸಾಯಿ ಸುದರ್ಶನ್‌ ಸ್ಥಾನವನ್ನು ತುಂಬಬಲ್ಲ ಮೂವರು!

ಭಾರತ ಹಾಗೂ ಶ್ರೀಲಂಕಾ ತಂಡಗಳ ನಡುವಣ ಮೂರು ಪಂದ್ಯಗಳ ಟೆಸ್ಟ್‌ ಸರಣಿಗೂ ಮುನ್ನ ಪ್ರವಾಸಿ ಟೀಮ್‌ ಇಂಡಿಯಾಗೆ ಭಾರಿ ಹಿನ್ನಡೆಯಾಗಿದೆ. ಸಾಯಿ ಸುದರ್ಶನ್‌ ಅವರು ಗಾಯದಿಂದ ಸಂಪೂರ್ಣವಾಗಿ ಗುಣಮುಖರಾಗಿಲ್ಲ, ಹಾಗಾಗಿ ಟೆಸ್ಟ್‌ ಸರಣಿಯಿಂದ ಹೊರ ಬಿದ್ದಿದ್ದಾರೆ. ಅವರ ಸ್ಥಾನವನ್ನು ತುಂಬಬಲ್ಲ ಮೂವರು ಆಟಗಾರರನ್ನು ಇಲ್ಲಿ ವಿವರಿಸಲಾಗಿದೆ.

IND vs SL: ಭಾರತ ತಂಡದ ವೇಗದ ಬೌಲರ್‌ಗಳಿಗೆ ಉಪಯುಕ್ತ ಸಲಹೆ ನೀಡಿದ ಜಾವಗಲ್‌ ಶ್ರೀನಾಥ್‌!

ಭಾರತ ತಂಡದ ವೇಗಿಗಳಿಗೆ ಉಪಯುಕ್ತ ಸಲಹೆ ನೀಡಿದ ಶ್ರೀನಾಥ್‌!

ಭಾರತ ತಂಡದಲ್ಲಿ ವೇಗದ ಬೌಲರ್‌ಗಳ ವರ್ಕ್‌ಲೋಡ್‌ ಮ್ಯಾನೇಜ್‌ಮೆಂಟ್‌ ಬಗ್ಗೆ ಮಾಜಿ ವೇಗದ ಬೌಲರ್‌ ಜಾವಗಲ್‌ ಶ್ರೀನಾಥ್‌ ಬೆಳಕು ಚೆಲ್ಲಿದ್ದಾರೆ. ಪಂದ್ಯದಲ್ಲಿ ಏಕಾ ಏಕಿಯಾಗಿ ವೇಗದ ಬೌಲರ್‌ಗಳಿಗೆ ದೀರ್ಘಾವಧಿ ಸ್ಪೆಲ್‌ಗಳನ್ನು ನೀಡಬಾರದು. ಬೌಲರ್‌ಗಳು ಪ್ರತ್ಯೇಕವಾಗಿ ಕಾರ್ಯತಂತ್ರ ರೂಪಿಸಿದೆ, ಒಗ್ಗಟ್ಟಾಗಿ ರಣತಂತ್ರ ರೂಪಿಸಿ ಆಡಿದರೆ ತಂಡಕ್ಕೆ ಸಕ್ಸಸ್‌ ತಂದುಕೊಡಬಹುದು ಎಂದಿದ್ದಾರೆ.

'6, 6, 0, 6, 6': ಕೊನೆಯ ಓವರ್‌ನಲ್ಲಿ 4 ಸಿಕ್ಸರ್‌ ಬಾರಿಸಿದ ಗುರ್ನೂರ್‌ ಬ್ರಾರ್‌! ವಿಡಿಯೊ

ಕೊನೆಯ ಓವರ್‌ನಲ್ಲಿ 4 ಸಿಕ್ಸರ್‌ ಬಾರಿಸಿದ ಗುರ್ನೂರ್‌ ಬ್ರಾರ್‌! ವಿಡಿಯೊ

ಶ್ರೀಲಂಕಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಭಾರತದ ವೇಗದ ಬೌಲರ್‌ ಗುರ್ನೂರ್‌ ಬ್ರಾರ್‌ ತಮ್ಮ ಬ್ಯಾಟಿಂಗ್‌ ಸಾಮರ್ಥ್ಯವನ್ನೂ ಪ್ರದರ್ಶಿಸಿದ್ದಾರೆ. ಬ್ರಾರ್‌ ಸ್ಫೋಟಕ ಬ್ಯಾಟಿಂಗ್‌ ನಡೆಸಿ ಒಂದೇ ಓವರ್‌ನಲ್ಲಿ ನಾಲ್ಕು ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ ಗಮನ ಸೆಳೆದಿದ್ದಾರೆ. ಅವರ ಬ್ಯಾಟಿಂಗ್‌ ಆರ್ಭಟವನ್ನು ವೀಕ್ಷಿಸಿದ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ ಎದ್ದು ನಿಂತು ಚಪ್ಪಾಳೆ ತಟ್ಟಿದರು. ಈ ವಿಡಿಯೊ ವೈರಲ್‌ ಆಗಿದೆ.

IND vs SL XI: ದೇವದತ್‌ ಪಡಿಕ್ಕಲ್‌ ಭರ್ಜರಿ ಶತಕ, ಎರಡನೇ ದಿನ ಸಿಂಹಳೀಯರಿಗೆ ತಿರುಗೇಟು ನೀಡಿದ ಭಾರತ!

IND vs SL XI: ಎರಡನೇ ದಿನ ಸಿಂಹಳೀಯರಿಗೆ ಭಾರತ ತಿರುಗೇಟು!

ಭಾರತ ಹಾಗೂ ಶ್ರೀಲಂಕಾ XI ತಂಡದ ನಡುವಣ ಅಭ್ಯಾಸ ಪಂದ್ಯ ಎರಡನೇ ದಿನವನ್ನು ಮುಗಿಸಿದೆ. ಮೊದಲನೇ ದಿನ ಹಿನ್ನಡೆ ಅನುಭವಿಸಿದ್ದ ಭಾರತ ತಂಡ, ಎರಡನೇ ದಿನ ದೇವದತ್‌ ಪಡಿಕ್ಕಲ್‌ ಹಾಗೂ ರವೀಂದ್ರ ಜಡೇಜಾ ಅವರ ಬ್ಯಾಟಿಂಗ್‌ ಬಲದಿಂದ ಭರ್ಜರಿಯಾಗಿ ಕಮ್‌ಬ್ಯಾಕ್‌ ಮಾಡಿದೆ. ಎರಡನೇ ದಿನದಾಟದ ಅಂತ್ಯಕ್ಕೆ ಭಾರತ ಪ್ರಥಮ ಇನಿಂಗ್ಸ್‌ನಲ್ಲಿ 90 ಓವರ್‌ಗಳಿಗೆ 6 ವಿಕೆಟ್‌ಗಳ ನಷ್ಟಕ್ಕೆ 357 ರನ್‌ ಗಳಿಸಿದ್ದು, ಕೇವಲ 6 ರನ್‌ ಹಿನ್ನಡೆಯಲ್ಲಿದೆ.

2026-27ರ ದೇಶಿ ಋತುವಿನ ನಿಮಿತ್ತ ಕರ್ನಾಟಕ ಕ್ರಿಕೆಟ್‌ ತಂಡಕ್ಕೆ ವಿನಯ್‌ ಕುಮಾರ್‌ ಹೆಡ್‌ ಕೋಚ್‌?

ಕರ್ನಾಟಕ ಕ್ರಿಕೆಟ್‌ ತಂಡಕ್ಕೆ ವಿನಯ್‌ ಕುಮಾರ್‌ ಹೆಡ್‌ ಕೋಚ್‌?

2026-27ರ ಸಾಲಿನ ದೇಶಿ ಕ್ರಿಕೆಟ್‌ ಋತುವಿನ ನಿಮಿತ್ತ ಕರ್ನಾಟಕ ಕ್ರಿಕೆಟ್‌ ತಂಡಕ್ಕೆ ಹೆಡ್‌ ಕೋಚ್‌ ಆಗಿ ಭಾರತ ತಂಡದ ಮಾಜಿ ವೇಗಿ ವಿನಯ್‌ ಕುಮಾರ್‌ ಅವರನ್ನು ನೇಮಿಸುವ ಸಾಧ್ಯತೆ ಇದೆ. ಇನ್ನು ಕೆಲವೇ ದಿನಗಳಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ ಈ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸಲಿದೆ ಎಂದು ವರದಿಯಾಗಿದೆ.

ಏಕದಿನ ವಿಶ್ವಕಪ್‌ ಟೂರ್ನಿಗೆ ನೇರ ಅರ್ಹತೆ ಪಡೆಯುವಲ್ಲಿ ವೆಸ್ಟ್‌ ಇಂಡೀಸ್‌ ಮತ್ತೊಮ್ಮೆ ವಿಫಲ!

ಏಕದಿನ ವಿಶ್ವಕಪ್‌ಗೆ ನೇರ ಅರ್ಹತೆ ಪಡೆಯುವಲ್ಲಿ ವಿಂಡೀಸ್‌ ಮತ್ತೊಮ್ಮೆ ವಿಫಲ!

2027ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಗೆ ನೇರ ಅರ್ಹತೆ ಪಡೆಯುವಲ್ಲಿ ವೆಸ್ಟ್‌ ಇಂಡೀಸ್‌ ತಂಡ ಮತ್ತೊಮ್ಮೆ ವಿಫಲವಾಗಿದೆ. ಐರ್ಲೆಂಡ್‌ ವಿರುದ್ಧ ಅಫ್ಘಾನಿಸ್ತಾನ ತಂಡ ಎರಡನೇ ಏಕದಿನ ಪಂದ್ಯವನ್ನು ಗೆದ್ದ ಬಳಿಕ ಈ ವಿಂಡೀಸ್‌ ತಂಡಕ್ಕೆ ಭಾರಿ ಹಿನ್ನಡೆಯಾಗಿದೆ. ಅರ್ಹತಾ ಸುತ್ತಿನ ಮೂಲಕ ವಿಂಡೀಸ್‌ ಏಕದಿನ ವಿಶ್ಕಪ್‌ ಟೂರ್ನಿಗೆ ಮರಳಬೇಕಾಗಿದೆ.

ಲಂಕಾ ಎದುರಿನ ಅಭ್ಯಾಸ ಪಂದ್ಯ; ಶತಕ ಬಾರಿಸಿ ಮಿಂಚಿದ ದೇವದತ್ತ ಪಡಿಕ್ಕಲ್‌

ಲಂಕಾ ಎದುರಿನ ಅಭ್ಯಾಸ ಪಂದ್ಯ; ಶತಕ ಬಾರಿಸಿದ ಪಡಿಕ್ಕಲ್‌

Devdutt Padikkal: ಪಡಿಕ್ಕಲ್‌ ಚುರುಕಿನ ಬ್ಯಾಟಿಂಗ್‌ ಮಾಡುತ್ತಿದ್ದರೆ ಮತ್ತೊಂದು ತುದಿಯಲ್ಲಿ ರಾಹುಲ್‌ ನೈಜ ಟೆಸ್ಟ್‌ ಶೈಲಿಯಲ್ಲಿ ಬ್ಯಾಟಿಂಗ್‌ ನಡೆಸುತ್ತಿದ್ದರು. ಆದರೆ 40 ರನ್‌ ಗಳಿಸಿದ ವೇಳೆ ವಿಕೆಟ್‌ ಕಳೆದುಕೊಂಡರು. ರಾಹುಲ್‌ ಮತ್ತು ಪಡ್ಡಿಕ್ಕಲ್‌ ಎರಡನೇ ವಿಕೆಟ್‌ಗೆ 96ರನ್‌ ಗಳಿಸಿದರು. ಪಡಿಕ್ಕಲ್‌ ಶತಕ ಬಾರಿಸಿದ ಬಳಿಕ ರಿಟರ್ಡ್‌ ಹರ್ಟ್‌ ಆದರು. 121 ಎಸೆತ ಎದುರಿಸಿದ ಅವರು 14 ಬೌಂಡರಿಯೊಂದಿಗೆ 103 ರನ್‌ ಗಳಿಸಿದರು.

SL vs IND: ಭಾರತ ತಂಡಕ್ಕೆ ಆಘಾತ, ಶ್ರೀಲಂಕಾ ಟೆಸ್ಟ್‌ ಸರಣಿಯಿಂದ ಸಾಯಿ ಸುದರ್ಶನ್‌ ಔಟ್‌!

ಭಾರತ ತಂಡಕ್ಕೆ ಆಘಾತ, ಶ್ರೀಲಂಕಾ ಟೆಸ್ಟ್‌ ಸರಣಿಯಿಂದ ಸಾಯಿ ಸುದರ್ಶನ್‌ ಔಟ್‌!

ಶ್ರೀಲಂಕಾ ವಿರುದ್ಧದ ಮುಂಬರುವ ಟೆಸ್ಟ್‌ ಸರಣಿಯಿಂದ ಭಾರತದ ಬ್ಯಾಟರ್‌ ಸಾಯಿ ಸುದರ್ಶನ್‌ ಗಾಯದ ಕಾರಣ ಹೊರಗುಳಿದಿದ್ದಾರೆ. ಆ ಮೂಲಕ ಟೆಸ್ಟ್‌ ಸರಣಿಗೂ ಮುನ್ನ ಪ್ರವಾಸಿ ಭಾರತ ತಂಡಕ್ಕೆ ಮತ್ತೊಂದು ಆಘಾತವಾಗಿದೆ. ಸುದರ್ಶನ್‌ ಅನುಪಸ್ಥಿತಿಯಿಂದ ಮೂರನೇ ಕ್ರಮಾಂಕ ಖಾಲಿಯಾಗಿದ್ದು, ಅವರ ಸ್ಥಾನದಲ್ಲಿ ಕನ್ನಡಿಗ ದೇವದತ್‌ ಪಡಿಕ್ಕಲ್‌ ಆಡುವ ಸಾಧ್ಯತೆ ಇದೆ.

IPL 2027: ಜಾಶ್‌ ಹೇಝಲ್‌ವುಡ್‌ ಔಟ್‌, 20ನೇ ಆವೃತ್ತಿಯ ಟೂರ್ನಿಗೆ ಆಸೀಸ್‌ ಆಟಗಾರರು ಅಲಭ್ಯ?

2027ರ ಐಪಿಎಲ್‌ ಟೂರ್ನಿಗೆ ಆಸೀಸ್‌ ಆಟಗಾರರು ಅಲಭ್ಯ?

ಮುಂದಿನ 12 ತಿಂಗಳ ಅವಧಿಯಲ್ಲಿ ಆಸ್ಟ್ರೇಲಿಯಾ ತಂಡ 20 ಟೆಸ್ಟ್‌ ಪಂದ್ಯಗಳು ಹಾಗೂ 14 ವೈಟ್-ಬಾಲ್ ಪಂದ್ಯಗಳನ್ನು ಆಡಲಿದೆ. ಭಾರತದ ವಿರುದ್ಧದ ಐದು ಪಂದ್ಯಗಳ ಟೆಸ್ಟ್‌ ಸರಣಿ ಮತ್ತು ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ನಡುವಿನ ಅವಧಿಯಲ್ಲಿ 2027ರ ಐಪಿಎಲ್‌ ವೇಳಾಪಟ್ಟಿ ಎದುರಾಗಲಿದೆ. ಹಾಗಾಗಿ ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಆ್ಯಶಸ್‌ ಸರಣಿಗೆ ಸಜ್ಜಾಗಲಿದೆ.

ಕೊರಿಯಾ ಮಾಸ್ಟರ್ಸ್; ಫೈನಲ್‌ ಪ್ರವೇಶಿಸಿದ ಅಶ್ಮಿತಾ ಚಲಿಹಾ

ಕೊರಿಯಾ ಮಾಸ್ಟರ್ಸ್; ಫೈನಲ್‌ ಪ್ರವೇಶಿಸಿದ ಅಶ್ಮಿತಾ ಚಲಿಹಾ

Korea Masters 2026: ರಕ್ಷಿತಾ ವಿರುದ್ಧ ಮೊದಲ ಗೇಲ್‌ನಲ್ಲಿ ಹಿಡಿತ ಸಾಧಿಸಿದ ಅಶ್ಮಿತಾ 21-13 ರಿಂದ ಪಂದ್ಯವನ್ನು ಮುಗಿಸಿದರು. ಆದರೆ ಎರಡನೇ ಗೇಮ್‌ನಲ್ಲಿ ತಿರುಗಿ ಬಿದ್ದ ರಕ್ಷಿತಾ 21-16 ಅಂತರದಿಂದ ಗೆದ್ದು ಸಮಬಲ ಸಾಧಿಸಿದರು. ನಿರ್ಣಾಯ ಮೂರನೇ ಸುತ್ತಿನ ಗೇಮ್‌ನಲ್ಲಿ ಮತ್ತೆ ಪುಡಿದೆದ್ದ ಅಶ್ಮಿತಾ, ಮೊದಲ ಗೇಮ್‌ನಂತೆ 21-13 ರಿಂದ ಅಂತರದಲ್ಲಿ ಗೆಲುವು ಸಾಧಿಸಿ ಫೈನಲ್‌ಗೆ ಮುನ್ನಡೆದರು.

'ನಾನು ಫಿಟ್‌ ಆಗದಿರಬಹುದು'; ಸರ್ಫರಾಜ್ ಖಾನ್ ನಿಗೂಢ ಪೋಸ್ಟ್ ವೈರಲ್

ಸರ್ಫರಾಜ್ ಖಾನ್ ನಿಗೂಢ ಪೋಸ್ಟ್ ವೈರಲ್

Sarfaraz Khan: ಸರ್ಫರಾಜ್ ಬಗ್ಗೆ ಫಿಟ್ನೆಸ್ ಕೂಡ ಪದೇ ಪದೇ ಚರ್ಚೆಯಾಗುತ್ತಿತ್ತು, ಆದರೆ ಮುಂಬೈ ಬ್ಯಾಟ್ಸ್‌ಮನ್ ಅಂದಿನಿಂದ ಗಮನಾರ್ಹ ಪರಿವರ್ತನೆಗೆ ಒಳಗಾಗಿದ್ದಾರೆ, ತೂಕ ಇಳಿಸಿಕೊಂಡಿದ್ದಾರೆ ಮತ್ತು ಅವರ ಸ್ಥಿತಿ ಸುಧಾರಿಸಿದ್ದಾರೆ. ಹೀಗಿದ್ದರೂ ಅವರಿಗೆ ಭಾರತ ಟೆಸ್ಟ್‌ ತಂಡದಲ್ಲಿ ಸ್ಥಾನ ಸಿಗುತ್ತಿಲ್ಲ.

ವಿಶ್ವ ಅಥ್ಲೆಟಿಕ್ಸ್ U20 ಚಾಂಪಿಯನ್‌ಶಿಪ್‌;  ಬೆಳ್ಳಿ ಗೆದ್ದು ಭಾರತದ ಪದಕ ಖಾತೆ ತೆರೆದ ಆಶಿಶ್ ಯಾದವ್

ವಿಶ್ವ ಅಥ್ಲೆಟಿಕ್ಸ್ U20 ಚಾಂಪಿಯನ್‌ಶಿಪ್‌; ಬೆಳ್ಳಿ ಗೆದ್ದ ಆಶಿಶ್ ಯಾದವ್

World Athletics U20 Championships: ಆಶಿಶ್ ಮೊದಲ ಎರಡು ಎಸೆತಗಳಲ್ಲಿ 70 ಮೀ. ಮೀರಿ ಹೋಗಲು ವಿಫಲರಾದರು. ಆದರೆ ಅವರು ಮೂರನೇ ಎಸೆತದೊಂದಿಗೆ ತಮ್ಮ ಲಯ ಕಂಡುಕೊಂಡು ತಮ್ಮ ವೃತ್ತಿಜೀವನದ ಅತಿದೊಡ್ಡ ಪದಕವನ್ನು ಪಡೆದುಕೊಂಡರು. ಕಾಮನ್‌ವೆಲ್ತ್ ಆಫ್ ಡೊಮಿನಿಕಾದ ಅಡಿಸನ್ ಜೇಮ್ಸ್ 73.89 ಮೀ. ಪ್ರಯತ್ನದಿಂದ ಕಂಚಿನ ಪದಕ ಗೆದ್ದರು.

ರಿಷಭ್‌ ಪಂತ್‌ ತಡರಾತ್ರಿಯ ಮನವಿಗೆ ಸ್ಪಂದಿಸಿದ ಸಿಎಂ ಪುಷ್ಕರ್ ಸಿಂಗ್ ಧಾಮಿ

ಪಂತ್‌ ತಡರಾತ್ರಿಯ ಮನವಿಗೆ ಸ್ಪಂದಿಸಿದ ಉತ್ತರಾಖಂಡ ಸಿಎಂ

Pushkar Singh Dhami: ಎರಡು ಪಂದ್ಯಗಳ ಟೆಸ್ಟ್ ಸರಣಿಗಾಗಿ ಭಾರತ ತಂಡದೊಂದಿಗೆ ಪ್ರಸ್ತುತ ಶ್ರೀಲಂಕಾದಲ್ಲಿರುವ ಪಂತ್, ಶನಿವಾರ ಮುಂಜಾನೆ X ನಲ್ಲಿನ ಪೋಸ್ಟ್‌ನಲ್ಲಿ ಧಮಿಯನ್ನು ಟ್ಯಾಗ್ ಮಾಡಿದ್ದರು. ದೆಹಲಿಯಿಂದ ಉತ್ತರಾಖಂಡಕ್ಕೆ ತನ್ನ ನೆಲೆಯನ್ನು ಸ್ಥಳಾಂತರಿಸಲು ಮತ್ತು ಅಲ್ಲಿ ತನ್ನ ಮೊದಲ ಮನೆಯನ್ನು ನಿರ್ಮಿಸಲು ಸೂಕ್ತವಾದ ಭೂಮಿಯನ್ನು ಹುಡುಕಲು ಕಳೆದ ಮೂರು ವರ್ಷಗಳಿಂದ ಪ್ರಯತ್ನಿಸುತ್ತಿದ್ದೇನೆ ಎಂದು ಹೇಳಿದರು.

'ದಯವಿಟ್ಟು ಭೂಸ್ವಾಧೀನಕ್ಕೆ ಸಹಾಯ ಮಾಡಿ'; ಉತ್ತರಾಖಂಡ ಸಿಎಂಗೆ ರಿಷಭ್ ಪಂತ್ ತಡರಾತ್ರಿ ಮನವಿ

ಉತ್ತರಾಖಂಡ ಸಿಎಂಗೆ ತಡರಾತ್ರಿ ವಿಶೇಷ ಮನವಿ ಮಾಡಿದ ರಿಷಭ್ ಪಂತ್

Rishabh Pant: ಉತ್ತರಾಖಂಡದವರಾದ ಪಂತ್, ದೇಶೀಯ ಕ್ರಿಕೆಟ್‌ನಲ್ಲಿ ದೆಹಲಿಯನ್ನು ಪ್ರತಿನಿಧಿಸುವಾಗ ಉತ್ತಮ ಸಾಧನೆ ಮಾಡಿದರು. ರಾಷ್ಟ್ರ ರಾಜಧಾನಿಯಲ್ಲಿ ಕ್ರಿಕೆಟ್ ಆಡುವ ಮೂಲಕ ತಮ್ಮ ಭಾರತೀಯ ವೃತ್ತಿಜೀವನಕ್ಕೆ ಅಡಿಪಾಯ ಹಾಕಿದ್ದರೂ, ಈಗ ಅವರು ತಮ್ಮ ಸ್ಥಳೀಯ ಸ್ಥಳಕ್ಕೆ ಹಿಂದಿರುಗಿ ರಾಜ್ಯದಲ್ಲಿ ತಮ್ಮ ಮೊದಲ ಮನೆಯನ್ನು ನಿರ್ಮಿಸಲು ಬಯಸುತ್ತಿದ್ದಾರೆ.

ʻಅವರ ಮೇಲೆ ತುಂಬಾ ಕೋಪ ಬಂದಿತ್ತುʼ: ಸಂಜಯ್‌ ಮಾಂಜ್ರೇಕರ್‌ ಜತೆ ಮಾತು ಬಿಟ್ಟಿದ್ದೇಕೆಂದು ತಿಳಿಸಿದ ಆರ್‌ ಅಶ್ವಿನ್‌!

ಸಂಜಯ್‌ ಮಾಂಜ್ರೇಕರ್‌ ಜತೆ ಮಾತು ಬಿಟ್ಟಿದ್ದೇಕೆಂದು ತಿಳಿಸಿದ ಅಶ್ವಿನ್‌!

ಟೀಮ್‌ ಇಂಡಿಯಾ ಮಾಜಿ ಕ್ರಿಕೆಟಿಗ ಹಾಗೂ ಪ್ರಸ್ತುತ ಕ್ರಿಕೆಟ್‌ ನಿರೂಪಕ ಸಂಜಯ್‌ ಮಾಂಜ್ರೇಕರ್‌ ಒಂದಲ್ಲ ಒಂದು ವಿಷಯದಲ್ಲಿ ಆಟಗಾರರಿಗೆ ಬೇಸರ ಮೂಡಿಸಿದ್ದಾರೆ. ರವೀಂದ್ರ ಜಡೇಜಾಗೆ 2019ರಲ್ಲಿ ಬೇಸರ ತರಿಸಿದ್ದ ಮಾಂಜ್ರೇಕರ್‌, ಆರ್‌ ಅಶ್ವಿನ್‌ಗೂ ಅವರ ವೃತ್ತಿ ಜೀವನದ ಆರಂಭದಲ್ಲಿ ಕೋಪ ಬರುವಂತೆ ಹೇಳಿಕೆಯನ್ನು ನೀಡಿದ್ದರು. ಇದೀಗ ಆ ಸಂಗತಿಯನ್ನು ಸ್ಪಿನ್‌ ದಿಗ್ಗಜ ಅಶ್ವಿನ್‌ ಬಹಿರಂಗಪಡಿಸಿದ್ದಾರೆ.

IND vs SL ಟೆಸ್ಟ್‌ ಸರಣಿಯ ಪಂದ್ಯಗಳಿಗೆ ಗಾಲೆ, ಕೊಲಂಬೊ ಕ್ರೀಡಾಂಗಣಗಳಲ್ಲಿ ಉಚಿತ ಪ್ರವೇಶ!

IND vs SL ಟೆಸ್ಟ್‌ ಸರಣಿಯ ಪಂದ್ಯಗಳ ವೀಕ್ಷಣೆಗೆ ಉಚಿತ ಪ್ರವೇಶ!

ಭಾರತ ಹಾಗೂ ಶ್ರೀಲಂಕಾ ನಡುವಣ ಎರಡು ಪಂದ್ಯಗಳ ಟೆಸ್ಟ್‌ ಸರಣಿಯ ಆರಂಭಕ್ಕೆ ಇನ್ನೂ ಒಂದು ವಾರ ಬಾಕಿ ಇದೆ. ಇದರ ನಡುವೆ ಶ್ರೀಲಂಕಾ ಕ್ರಿಕೆಟ್‌ ಮಂಡಳಿ ಅಲ್ಲಿನ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡಿದೆ. ಟೆಸ್ಟ್‌ ಸರಣಿಯ ಎರಡೂ ಪಂದ್ಯಗಳನ್ನು ವೀಕ್ಷಿಸಲು ಅಭಿಮಾನಿಗಳು ಉಚಿತವಾಗಿ ಸ್ಟೇಡಿಯಂಗಳಿಗೆ ಪ್ರವೇಶ ಮಾಡಬಹುದು ಎಂದು ತಿಳಿಸಿದೆ. ಹಾಗಾಗಿ ಈ ಗಾಲೆ ಹಾಗೂ ಕೊಲಂಬೊ ಸ್ಟೇಡಿಯಂಗಳಲ್ಲಿ ಅಭಿಮಾನಿಗಳು ಉಚಿತವಾಗಿ ಪಂದ್ಯಗಳನ್ನು ವೀಕ್ಷಿಸಬಹುದು.

IND vs SLXI Warm-up Match: ಮೊದಲನೇ ದಿನ ಶ್ರೀಲಂಕಾ ಇಲೆವೆನ್‌ ತಂಡಕ್ಕೆ ಮುನ್ನಡೆ!

ಮೊದಲನೇ ದಿನ ಶ್ರೀಲಂಕಾ ಇಲೆವೆನ್‌ ತಂಡಕ್ಕೆ ಮುನ್ನಡೆ!

IND vs SL XI Warm-up Match Day 1: ಭಾರತೀಯ ಬೌಲರ್‌ಗಳ ಕಠಿಣ ಹೋರಾಟದ ಹೊರತಾಗಿಯೂ ನಿಶಾನ್‌ ಮಧುಷ್ಕ ಹಾಗೂ ರವಿಂದು ರಸಂತ ಅವರ ಅರ್ಧಶತಕಗಳ ಬಲಿದಂದ ಶ್ರೀಲಂಕಾ ಇಲೆವೆನ್‌ ತಂಡ, ಅಭ್ಯಾಸ ಪಂದ್ಯದ ಮೊದಲನೇ ದಿನ ಪ್ರವಾಸಿ ಭಾರತದ ಎದುರು ಮುನ್ನಡೆ ಪಡೆದಿದೆ. ಮೊದಲನೇ ದಿನದಾಟದ ಅಂತ್ಯಕ್ಕೆ 8 ವಿಕೆಟ್‌ ನಷ್ಟಕ್ಕೆ 363 ರನ್‌ಗಳನ್ನು ಕಲೆ ಹಾಕಿದೆ.

ಅಲಾನ್‌ ಬಾರ್ಡರ್‌ ಪದಕ ಗೆದ್ದ ಟ್ರಾವಿಸ್‌ ಹೆಡ್‌, ಕ್ರಿಕೆಟ್‌ ಆಸ್ಟ್ರೇಲಿಯಾದ ಪ್ರಶಸ್ತಿ ವಿಜೇತರ ವಿವರ!

ಸತತ ಎರಡನೇ ಬಾರಿ ಅಲಾನ್‌ ಬಾರ್ಡರ್‌ ಪದಕ ಗೆದ್ದ ಟ್ರಾವಿಸ್‌ ಹೆಡ್‌!

ಬ್ರಿಸ್ಬೇನ್‌ನಲ್ಲಿ ನಡೆದಿದ್ದ ಕ್ರಿಕೆಟ್‌ ಆಸ್ಟ್ರೇಲಿಯಾದ ವಾರ್ಷಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಏಕೈಕ ಮತದಿಂದ ಅಪಾಯಕಾರಿ ಆರಂಭಿಕ ಬ್ಯಾಟ್ಸ್‌ಮನ್‌ ಟ್ರಾವಿಸ್‌ ಹೆಡ್‌, ಅಲೆಕ್ಸ್‌ ಕೇರಿ ಅವರನ್ನು ಹಿಂದಿಕ್ಕಿ ಪ್ರತಿಷ್ಠಿತ ಅಲಾನ್‌ ಬಾರ್ಡರ್‌ ಪದಕವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ವರ್ಷದ ಟೆಸ್ಟ್‌ ಆಟಗಾರ ಪ್ರಶಸ್ತಿಯನ್ನು ಮಿಚೆಲ್‌ ಸ್ಟಾರ್ಕ್‌ ಗೆದ್ದಿದ್ದಾರೆ. ವರ್ಷದ ಒಡಿಐ ಆಟಗಾರ ಪ್ರಶಸ್ತಿಗೆ ಮಿಚೆಲ್‌ ಮಾರ್ಷ್‌ ಹಾಗೂ ವರ್ಷದ ಟಿ20ಐ ಆಟಗಾರ ಪ್ರಶಸ್ತಿಯನ್ನು ಟಿಮ್‌ ಡೇವಿಡ್‌ ಪಡೆದಿದ್ದಾರೆ.

CWG 2026: ಚಿನ್ನದ ಪದಕ ಗೆದ್ದ ತನ್ನ ಪಯಣದಲ್ಲಿ ವಿರಾಟ್‌ ಕೊಹ್ಲಿಯ ಪಾತ್ರವನ್ನು ರಿವೀಲ್‌ ಮಾಡಿದ ಸಾಕ್ಷಿ ಚೌಧರಿ!

ಚಿನ್ನ ಗೆದ್ದ ತಮ್ಮ ಪಯಣದಲ್ಲಿ ಕೊಹ್ಲಿಯ ಪಾತ್ರವನ್ನು ನೆನೆದ ಸಾಕ್ಷಿ ಚೌಧರಿ!

2026ರ ಕಾಮನ್‌ವೆಲ್ತ್‌ ಕ್ರೀಡಾಕೂಟದ 51 ಕೆಜಿ ಬಾಕ್ಸಿಂಗ್‌ ವಿಭಾಗದಲ್ಲಿ ಚಿನ್ನದ ಪದಕ ವಿಜೇತೆ ಸಾಕ್ಷಿ ಚೌಧರಿ ಅವರು ಆಧುನಿಕ ಕ್ರಿಕೆಟ್‌ ದಿಗ್ಗಜ ವಿರಾಟ್‌ ಕೊಹ್ಲಿಗೆ ಧನ್ಯವಾದವನ್ನು ಅರ್ಪಿಸಿದ್ದಾರೆ. ಏಕೆಂದರೆ ಈ ಮಹತ್ವದ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಪಯಣದಲ್ಲಿ ಕಿಂಗ್‌ ಕೊಹ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದಾರೆಂದು ಅವರು ರಿವೀಲ್‌ ಮಾಡಿದ್ದಾರೆ.

ʻಸಿಎಸ್‌ಕೆ ತಂಡದಲ್ಲಿದ್ದಾಗ ಈ ವೇಗಿ ನನಗೆ ಬೌಲ್‌ ಮಾಡಲು ನಿರಾಕರಿಸಿದ್ದರುʼ: ಚೇತೇಶ್ವರ್‌ ಪೂಜಾರ!

ತಮಗೆ ಬೌಲ್‌ ಮಾಡಲು ನಿರಾಕರಿಸಿದ್ದ ವೇಗಿಯನ್ನು ನೆನೆದ ಚೇತೇಶ್ವರ್‌ ಪೂಜಾರ!

ಭಾರತ ಟೆಸ್ಟ್‌ ತಂಡದ ಮಾಜಿ ಬ್ಯಾಟ್ಸ್‌ಮನ್‌ ಚೇತೇಶ್ವರ್‌ ಪೂಜಾರ ಅವರು ಆಸಕ್ತಿದಾಯಕ ಸಂಗತಿಯೊಂದನ್ನು ನೆನಪಿಸಿಕೊಂಡಿದ್ದಾರೆ. ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದಲ್ಲಿದ್ದಾಗ, ತಮಗೆ ಬೌಲ್‌ ಮಾಡಲು ನಿರಾಕರಿಸಿದ್ದ ವೇಗದ ಬೌಲರ್‌ ಅನ್ನು ಪೂಜಾರ ರಿವೀಲ್‌ ಮಾಡಿದ್ದಾರೆ. ಆಸ್ಟ್ರೇಲಿಯಾದ ವೇಗಿ ಯಾರೆಂದು ಇಲ್ಲಿ ವಿವರಿಸಲಾಗಿದೆ.

ರಾಜ್ಯ ಮಟ್ಟದ ಕಿರಿಯರ ಅಥ್ಲೆಟಿಕ್ಸ್‌ಗೆ ಚಿಕ್ಕಬಳ್ಳಾಪುರ ಜಿಲ್ಲಾ ತಂಡ ಆಯ್ಕೆ

ರಾಜ್ಯ ಮಟ್ಟದ ಕಿರಿಯರ ಅಥ್ಲೆಟಿಕ್ಸ್‌ಗೆ ಚಿಕ್ಕಬಳ್ಳಾಪುರ ಜಿಲ್ಲಾ ತಂಡ ಆಯ್ಕೆ

18 ವರ್ಷದ ಬಾಲಕಿಯರ ವಿಭಾಗದಲ್ಲಿ 100 ಮೀಟರ್ ಓಟಕ್ಕೆ ಸುಪ್ರಿತಾ, 200 ಮೀಟರ್ ಓಟಕ್ಕೆ ಭಗವತಿ, 400 ಮೀಟರ್ ಓಟಕ್ಕೆ ಮಧುಶ್ರೀ ಹಾಗೂ ಭಾರ್ಗವಿ, 1000 ಮೀಟರ್ ಓಟಕ್ಕೆ ಮಧುಶ್ರೀ, ಮಿಡ್ಲಿ ರಿಲೇ ಸ್ಪರ್ಧೆಗೆ ಸುಪ್ರಜಾ, ಭಾರ್ಗವಿ, ಮಧುಶ್ರೀ ಹಾಗೂ ರೋಶಿನಿ ಮತ್ತು ಉದ್ದ ಜಿಗಿತಕ್ಕೆ ಸುಪ್ರಜಾ ಆಯ್ಕೆ ಯಾಗಿದ್ದಾರೆ.

ನಿವೃತ್ತಿ ಘೋಷಿಸಿದ ಒಂದೇ ವಾರಕ್ಕೆ ಯುರೋಪಿಯನ್ ಟಿ20 ಪ್ರೀಮಿಯರ್ ಲೀಗ್ ಸೇರಿದ ಅಜಿಂಕ್ಯ ರಹಾನೆ

ಯುರೋಪಿಯನ್ ಟಿ20 ಪ್ರೀಮಿಯರ್ ಲೀಗ್ ಸೇರಿದ ಅಜಿಂಕ್ಯ ರಹಾನೆ

Ajinkya Rahane: ರಹಾನೆ ಕಳೆದ ತಿಂಗಳ ಕೊನೆಯಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ ಕೂಡಲೇ ಇದೀಗ ಅವರಿಗೆ ಫ್ರಾಂಚೈಸಿ ಲೀಗ್‌ನಲ್ಲಿ ಆಡುವ ಅವಕಾಶ ಸಿಕ್ಕಿತು ಎಂದು ಬಹಿರಂಗಪಡಿಸಿದರು ಮತ್ತು ಆಮ್ಸ್ಟರ್‌ಡ್ಯಾಮ್ ಫ್ಲೇಮ್ಸ್ ಸಹ-ಮಾಲೀಕ ಸ್ಟೀವ್ ವಾ ಅವರ ವೈಯಕ್ತಿಕ ವಿಧಾನವು ಈ ಪ್ರಸ್ತಾಪವನ್ನು ಸ್ವೀಕರಿಸಲು ಮನವೊಲಿಸಿತು ಎಂದು ಹೇಳಿದರು.

ತಮ್ಮ ಕ್ರಿಕೆಟ್‌ ವೃತ್ತಿ ಜೀವನದ ಅತ್ಯಂತ ಕಠಿಣ ಅವಧಿಯನ್ನು ಬಹಿರಂಗಪಡಿಸಿದ ಅಜಿಂಕ್ಯ ರಹಾನೆ!

ತಮ್ಮ ವೃತ್ತಿ ಜೀವನದ ಕಠಿಣ ಅವಧಿಯನ್ನು ಹೆಸರಿಸಿದ ಅಜಿಂಕ್ಯ ರಹಾನೆ!

ಎಲ್ಲಾ ಸ್ವರೂಪದ ಕ್ರಿಕೆಟ್‌ಗೆ ಇತ್ತೀಚೆಗೆ ನಿವೃತ್ತಿ ಘೋಷಿಸಿದ್ದ ಭಾರತದ ಮಾಜಿ ನಾಯಕ ಅಜಿಂಕ್ಯ ರಹಾನೆ, ತಮ್ಮ ಕ್ರಿಕೆಟ್‌ ವೃತ್ತಿ ಜೀವನದ ಅತ್ಯಂತ ಕಠಿಣ ಅವಧಿ ಯಾವುದೆಂದು ಬಹಿರಂಗಪಡಿಸಿದ್ದಾರೆ. ಪ್ಲೇಯಿಂಗ್‌ Xiನಲ್ಲಿ ಆಡದೆ ಭಾರತ ತಂಡದ ಜೊತೆ ಪ್ರಯಾಣ ಮಾಡುವುದು ಕಠಿಣ ಸಂಗತಿ ಎಂದು ರಹಾನೆ ತಿಳಿಸಿದ್ದಾರೆ.

ಶ್ರೀಲಂಕಾ ಸರಣಿ ಗೆದ್ದರೆ ಭಾರತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಪಡೆಯಬಹುದೇ?

ಲಂಕಾ ಸರಣಿ ಗೆದ್ದರೆ ಭಾರತ ವಿಶ್ವ ಟೆಸ್ಟ್ ಫೈನಲ್‌ಗೆ ಅರ್ಹತೆ ಪಡೆಯಬಹುದೇ?

World Test Championship Final: ಶ್ರೀಲಂಕಾ ವಿರುದ್ಧ ಭಾರತ 2-0 ಅಂತರದಲ್ಲಿ ಸರಣಿ ಗೆದ್ದರೆ, ಅಂಕಗಳ ಶೇಕಡಾವಾರು 57.58 ಕ್ಕೆ ಏರುತ್ತದೆ. ಸರಣಿಯಿಂದ ಗಳಿಸಿದ 24 ಅಂಕಗಳು 11 ಟೆಸ್ಟ್‌ಗಳ ನಂತರ ಅವರ ಸಂಖ್ಯೆಯನ್ನು 76 ಕ್ಕೆ ಏರಿಸುತ್ತದೆ. ಸೋಲು ಕಂಡ ಶ್ರೀಲಂಕಾದ ಗೆಲುವಿನ ಶೇಕಡಾವಾರು ಪ್ರಮಾಣವು 27.78 ಕ್ಕೆ ಇಳಿಯುತ್ತದೆ.

Loading...