ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಕ್ರೈಂ
Tumkur News: ಕಾಲ್ತುಳಿತದಲ್ಲಿ ಮೃತಪಟ್ಟ ಮನೋಜ್‌ ಕುಟುಂಬಕ್ಕೆ ಮತ್ತೊಂದು ಆಘಾತ; ಮೊಮ್ಮಗನ ಅಗಲಿಕೆ ನೋವಲ್ಲಿ ಅಜ್ಜಿಯೂ ಸಾವು

ಮನೋಜ್‌ ಕುಟುಂಬಕ್ಕೆ ಮತ್ತೊಂದು ಆಘಾತ; ಅಜ್ಜಿಯೂ ಸಾವು

Tumkur News: ತುಮಕೂರಿನ ದೇವರಾಜ್ ಕುಂಟುಂಬಕ್ಕೆ ಆಘಾತದ ಮೇಲೆ ಆಘಾತ ಎದುರಾಗಿದೆ. ಕಾಲ್ತುಳಿತ ದುರಂತದಲ್ಲಿ ಮಗನನ್ನು ಕಳೆದುಕೊಂಡ ನೋವಲ್ಲಿದ್ದ ದೇವರಾಜ್ ಅವರ ತಾಯಿ ದೇವಿರಮ್ಮ ಕೂಡ ಮೃತಪಟ್ಟಿದ್ದಾರೆ. ಮನೋಜ್ ಸಾವಿನಿಂದ ತೀವ್ರವಾಗಿ ನೊಂದಿದ್ದ ಅಜ್ಜಿ ನಿಧನರಾಗಿದ್ದಾರೆ.

Indore Couple Missing: ನನ್ನನ್ನು ಕಿಡ್ನಾಪ್‌ ಮಾಡಲಾಗಿತ್ತು...ವಿಚಾರಣೆ ವೇಳೆ ಸೋನಂ ಹೊಸ ನಾಟಕ; ಅತ್ತ ಬಾಯ್‌ಫ್ರೆಂಡ್‌ ಅರೆಸ್ಟ್‌

ನನ್ನನ್ನು ಕಿಡ್ನಾಪ್‌ ಮಾಡಲಾಗಿತ್ತು.... ವಿಚಾರಣೆ ವೇಳೆ ಸೋನಂ ಹೊಸ ನಾಟಕ

ಮೇಘಾಲಯದಲ್ಲಿ ಮಿಸ್ಸಿಂಗ್‌ ಮೇಘಾಲಯಕ್ಕೆ ಹನಿಮೂನ್‌ಗೆ ಹೋದ ಇಂದೋರ್‌ ದಂಪತಿ ಮಿಸ್ಸಿಂಗ್‌ ಪ್ರಕರಣದಲ್ಲಿ ಪತ್ನಿಯೇ ತನ್ನ ಪತಿಯನ್ನು ಕೊಲೆ ಮಾಡಿದ್ದಾಳೆ ಎಂಬ ಸತ್ಯ ಬೆಳಕಿಗೆ ಬಂದಿದೆ. ಸದ್ಯ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಇದೀಗ ಆಕೆ ಉಲ್ಟಾ ಹೊಡೆದಿದ್ದಾಳೆ.

Self Harming: ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಯುವ ಮಾಡೆಲ್‌;  ಕೇಸ್‌ ಬಗ್ಗೆ ಪೊಲೀಸರು ಹೇಳಿದ್ದೇನು?

ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಯುವ ಮಾಡೆಲ್‌!

ಗುಜರಾತ್‌ನ (Gujarat) ಸೂರತ್‌ನಲ್ಲಿ (Surat) 23 ವರ್ಷದ ಯುವ ಮಾಡೆಲ್ ಅಂಜಲಿ ವರ್ಮೋರಾ (Anjali Varmora) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭಾನುವಾರ ವರದಿಯಾಗಿದೆ. ಅಥ್ವಾ (Athwa) ಪ್ರದೇಶದ ತನ್ನ ನಿವಾಸದಲ್ಲಿ ಅಂಜಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Indore couple missing: ಮಗನನ್ನು ಬಲಿ ಪಡೆದ ಹಂತಕಿ ಸೊಸೆ ಸೋನಂ ಬಗ್ಗೆ ಅತ್ತೆ ಬಿಚ್ಚಿಟ್ಟ ʻಆ ಸತ್ಯʼ ಏನು?

ಹನಿಮೂನ್ ಹೆಸ್ರಲ್ಲಿ ಮಗನ ಬಲಿ ಪಡೆದ ಸೊಸೆ ಬಗ್ಗೆ ಅತ್ತೆ ಹೇಳಿದ್ದೇನು?

ಕಳೆದ ಮೇ 23ರಂದು ಇಂದೋರ್‌ ಮೂಲದ ದಂಪತಿ ಮೇಘಾಲಯಲಕ್ಕೆ ಹನಿಮೂನ್‌ಗೆಂದು ಹೋಗಿ ನಿಗೂಢವಾಗಿ ಕಣ್ಮರೆಯಾಗಿದ್ದರು. ಈ ಹಿನ್ನಲೆ ಕುಟುಂಬಸ್ಥರ ದೂರಿನಾಧಾರದ ಮೇಲೆ ಪ್ರಕರಣದ ಬೆನ್ನತ್ತಿದ್ದ ಪೋಲಿಸರು ಕಾಣೆಯಾಗಿದ್ದ ರಾಜಾ ರಘುವಂಶಿಯವರ ಶವವನ್ನು ಪತ್ತೆ ಹಚ್ಚಿದ್ದರು. ನಂತರ ಸೋನಂಗಾಗಿ ಪೋಲಿಸರು ತಮ್ಮ ಕಾರ್ಯಚರಣೆ ಮುಂದುವರೆಸಿದ್ದರು. ಆದರೆ ಇದೀಗ ಪತಿ ರಾಜಾ ರಘುವಂಶಿ ಹತ್ಯೆಗೆ ಸೋನಂ ಸಂಚು ರೂಪಿಸಿರುವ ನಾಟಕ ಬಯಲಾಗಿದೆ.

Murder Case: ಹೋಟೆಲ್‌ನಲ್ಲಿ ಪ್ರಿಯತಮೆಯ ಇರಿದು ಕೊಂದು ಪ್ರಿಯಕರ ಪರಾರಿ

ಹೋಟೆಲ್‌ನಲ್ಲಿ ಪ್ರಿಯತಮೆಯ ಇರಿದು ಕೊಂದು ಪ್ರಿಯಕರ ಪರಾರಿ

Murder Case: ಜೂನ್ 6 ರಂದು ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಸಿ ಟಿವಿ ಕ್ಯಾಮೆರಾ ಆಧರಿಸಿ ಜೋಡಿಯ ವಿವರಗಳನ್ನು ಪತ್ತೆಹಚ್ಚಲಾಗಿದೆ. ಕೊಲೆಗಾರನ ತಲಾಶ್‌ನಲ್ಲಿ ಪೊಲೀಸರು ತೊಡಗಿದ್ದಾರೆ.

UP Couple missing: ಇಂದೋರ್‌ ಕೇಸ್‌ ಬೆನ್ನಲ್ಲೇ ಹನಿಮೂನ್‌ಗೆ ಹೋಗಿದ್ದ ಮತ್ತೊಂದು ಜೋಡಿ ಮಿಸ್ಸಿಂಗ್‌! ಏನಿದು ಘಟನೆ?

ಹನಿಮೂನ್‌ಗೆಂದು ಹೋಗಿದ್ದ ಯುಪಿ ದಂಪತಿಯೂ ಮಿಸ್ಸಿಂಗ್‌!

ಮೇಘಾಲಯದಲ್ಲಿ ಇಂದೋರ್‌ ದಂಪತಿ ಮಿಸ್ಸಿಂಗ್‌ ಕೇಸ್‌ ದೇಶಾದ್ಯಂತ ಸಂಚಲನ ಸೃಷ್ಟಿಸಿರುವ ನಡುವೆಯೇ ಇದೀಗ ಮತ್ತೊಂದು ಹನಿಮೂನ್‌ ಜೋಡಿ ನಿಗೂಢವಾಗಿ ಕಣ್ಮರೆಯಾಗಿರುವ ಘಟನೆ ವರದಿಯಾಗಿದೆ. ಸಿಕ್ಕಿಂಗೆ ಹನಿಮೂನ್‌ಗೆಂದು ತೆರಳಿದ್ದ ಉತ್ತರ ಪ್ರದೇಶದ ದಂಪತಿ ಭಾರೀ ಅಪಘಾತದ ನಂತರ ಕಣ್ಮರೆಯಾಗಿದ್ದಾರೆ ಎನ್ನಲಾಗಿದೆ.

Indore Couple Missing: ಮೇಘಾಲಯ ಮಿಸ್ಸಿಂಗ್‌ ಕೇಸ್‌; ಟೂರ್‌ ಗೈಡ್‌ ಕೊಟ್ಟ ಆ ಸುಳಿವಿನಿಂದ ಬಯಲಾಯ್ತು ಘೋರ ಕೃತ್ಯ!

ಮೇಘಾಲಯ ಮಿಸ್ಸಿಂಗ್‌ ಕೇಸ್‌-ಟೂರ್‌ ಗೈಡ್‌ ಕೊಟ್ಟ ಆ ಸುಳಿವೇನು?

ಇಂದೋರ್‌ ದಂಪತಿ ಮಿಸ್ಸಿಂಗ್‌ ಪ್ರಕರಣದಲ್ಲಿ(Indore Couple Missing) ಬಿಗ್‌ ಟ್ವಿಸ್ಟ್‌ ಸಿಕ್ಕಿದ್ದು, ಪತ್ನಿಯೇ ಪತಿಯ ಹತ್ಯೆಗೆ ಸುಪಾರಿ ಕೊಟ್ಟಿದ್ದಳೆಂಬ ಭಯಾನಕ ಸಂಗತಿ ಬಯಲಾಗಿದೆ. ಕಳೆದ ಎರಡು ವಾರಗಳಿಂದ ನಾಪತ್ತೆಯಾಗಿದ್ದ ಹಂತಕಿ ಮತ್ತು ಆಕೆಯ ಮೂವರು ಸಹಚರರನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಟೂರ್‌ ಗೈಡ್‌ ಕೊಟ್ಟ ಮಹತ್ವದ ಸುಳಿವೊಂದು ಈ ಪ್ರಕರಣ ಭೇದಿಸುವಲ್ಲಿ ಪೊಲೀಸರಿಗೆ ಬಹಳ ಸಹಾಯ ಮಾಡಿತ್ತು.

Crime News: ಬಾಲಕಿಗೆ ಅಶ್ಲೀಲ ಸಂದೇಶ, ಮೂವರು ಬಾಲಕರನ್ನು ಕಂಬಕ್ಕೆ ಕಟ್ಟಿ ಥಳಿತ

ಬಾಲಕಿಗೆ ಅಶ್ಲೀಲ ಸಂದೇಶ, ಮೂವರು ಬಾಲಕರನ್ನು ಕಂಬಕ್ಕೆ ಕಟ್ಟಿ ಥಳಿತ

Crime News: ಬಾಲಕರ ಪೋಷಕರು ಮತ್ತು ಸಂಬಂಧಿಕರು 55 ಗ್ರಾಮಸ್ಥರ ವಿರುದ್ಧ ದೌರ್ಜನ್ಯ ಪ್ರಕರಣ ದಾಖಲಿಸಿದ್ದರೆ, ಗ್ರಾಮಸ್ಥರು ಮೂವರು ಬಾಲಕರ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸಿದ್ದಾರೆ. ಬಾಲಕರು ದಲಿತ ಸಮುದಾಯಕ್ಕೆ ಸೇರಿದವರು. ಜಾತಿ ಸಂಘರ್ಷ ಬೆದರಿಕೆ ಇರುವುದರಿಂದ ಗ್ರಾಮದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.

Indore Couple Missing: ಇಂದೋರ್‌ ದಂಪತಿ ಮಿಸ್ಸಿಂಗ್‌ ಕೇಸ್‌ನಲ್ಲಿ ಬಿಗ್‌ ಟ್ವಿಸ್ಟ್‌; ಪತಿಯ ಹತ್ಯೆಗೆ ಪತ್ನಿಯಿಂದಲೇ ಸುಪಾರಿ; ಹಂತಕಿ ಅರೆಸ್ಟ್‌

ಹನಿಮೂನ್‌ ಕಪಲ್‌ ಮಿಸ್ಸಿಂಗ್‌-ಪತಿಯ ಹತ್ಯೆಗೆ ಪತ್ನಿಯಿಂದಲೇ ಸುಪಾರಿ!

ಇಂದೋರ್‌ ದಂಪತಿ ಮಿಸ್ಸಿಂಗ್‌ ಪ್ರಕರಣದಲ್ಲಿ(Indore Couple Missing) ಬಿಗ್‌ ಟ್ವಿಸ್ಟ್‌ ಸಿಕ್ಕಿದ್ದು, ಪತ್ನಿಯೇ ಪತಿಯ ಹತ್ಯೆಗೆ ಸುಪಾರಿ ಕೊಟ್ಟಿದ್ದಳೆಂಬ ಭಯಾನಕ ಸಂಗತಿ ಬಯಲಾಗಿದೆ. ಕಳೆದ ಎರಡು ವಾರಗಳಿಂದ ನಾಪತ್ತೆಯಾಗಿದ್ದ ಹಂತಕಿ ಮತ್ತು ಆಕೆಯ ಮೂವರು ಸಹಚರರನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ.

Murder Case: ಮಗಳನ್ನು ನೀರಿನಲ್ಲಿ ಮುಳುಗಿಸಿ ಕೊಂದ ಹೆತ್ತ ತಾಯಿ: ತಂದೆಯಿಂದ ದೂರು

ಮಗಳನ್ನು ನೀರಿನಲ್ಲಿ ಮುಳುಗಿಸಿ ಕೊಂದ ಹೆತ್ತ ತಾಯಿ: ತಂದೆಯಿಂದ ದೂರು

Murder Case: ಗಂಡ ಹೆಂಡತಿ ಜಗಳವಾಡಿ ಬೇರೆಯಾಗಿದ್ದು, ಮಗಳು ತಂದೆಯ ಜೊತೆಗೆ ಇದ್ದಳು. ಮಗಳನ್ನು ಕರೆದುಕೊಂಡು ಊರಿಗೆ ಬಂದ ತಾಯಿ, ಅಲ್ಲಿನ ಕೆರೆಯಲ್ಲಿ ಮಗಳನ್ನು ಮುಳುಗಿಸಿದ್ದಾಳೆ. ಗ್ರಾಮಸ್ಥರು ರಕ್ಷಿಸಲು ಯತ್ನಿಸಿ ವಿಫಲರಾಗಿದ್ದಾರೆ. ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾಗಿ ತಾಯಿ ಹೇಳಿದ್ದಾಳೆ.

Murder Case: ಲೈಂಗಿಕ ಕ್ರಿಯೆಗೆ ಸಹಕರಿಸದ ಬಾಲಕಿಯ ಕೊಂದು ಸೂಟ್‌ಕೇಸ್‌ನಲ್ಲಿ ತುಂಬಿ ಎಸೆದ ದುರುಳರ ಬಂಧನ

ಬಾಲಕಿಯ ಕೊಂದು ಸೂಟ್‌ಕೇಸ್‌ನಲ್ಲಿ ತುಂಬಿ ಎಸೆದ ದುರುಳರ ಬಂಧನ

Murder Case: ಆರೋಪಿ ಬಿಹಾರದಿಂದ ಬಾಲಕಿಯನ್ನು ಮರುಳುಗೊಳಿಸಿ ಕರೆದುಕೊಂಡು ಬಂದಿದ್ದ. ಅತ್ಯಾಚಾರ ಎಸಗಿ ಬಳಿಕ ಬಿಯರ್‌ ಬಾಟಲಿ, ರಾಡ್‌ಗಳಿಂದ ಹಲ್ಲೆ ಮಾಡಿ ಕೊಂದು ಸಂಬಂಧಿಗಳ ಸಹಾಯದಿಂದ ಸೂಟ್‌ಕೇಸ್‌ನಲ್ಲಿ ತುರುಕಿ ರೈಲ್ವೆ ಹಳಿ ಪಕ್ಕ ಎಸೆದಿದ್ದಾನೆ. ಕೃತ್ಯ ಎಸಗಿದ ಎಲ್ಲರೂ ಬಿಹಾರದ ವಲಸೆ ಕಾರ್ಮಿಕರು.

Manipur Violence: ಮಣಿಪುರದಲ್ಲಿ ಎಟಿ ನಾಯಕನ ಬಂಧನ ಖಂಡಿಸಿ ಉಗ್ರ ಪ್ರತಿಭಟನೆ; ಪೆಟ್ರೋಲ್‌ ಸುರಿದುಕೊಂಡು ಬೆಂಬಲಿಗರಿಂದ  ಬೆದರಿಕೆ

ಮಣಿಪುರ ಜನಾಂಗೀಯ ಘರ್ಷಣೆ ತನಿಖೆಗೆ ಎದುರಾಗುತ್ತಿದೆ ಭಾರಿ ವಿರೋಧ

ಮೈಥಿ ಮತ್ತು ಕುಕಿ ಸಮುದಾಯಗಳ ಘರ್ಷಣೆಯಲ್ಲಿ ಪಾಲ್ಗೊಂಡಿರುವ ಆರೋಪದಲ್ಲಿ ಭದ್ರತಾ ಪಡೆಗಳು ಎಟಿ ನಾಯಕ ಕಾನನ್ ಸಿಂಗ್ ಅವರನ್ನು ಶನಿವಾರ ಬಂಧಿಸಿತ್ತು. ಇದಾದ ಬಳಿಕ ಶನಿವಾರ ರಾತ್ರಿ ಮಣಿಪುರದ ರಾಜಧಾನಿ ಇಂಫಾಲ್‌ನಲ್ಲಿ ಪ್ರತಿಭಟನೆಗಳು ಭುಗಿಲೆದ್ದವು. ಈ ವೇಳೆ ಯುವಕರ ಗುಂಪೊಂದು ತಮ್ಮ ತಲೆಗೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳುವುದಾಗಿ ಬೆದರಿಕೆ ಹಾಕಿದೆ.

Bengaluru stampede: ಕಾಲ್ತುಳಿತ ದುರಂತ; ಕುಣಿಗಲ್‌ನ ಮನೋಜ್ ಕುಟುಂಬಕ್ಕೆ 25 ಲಕ್ಷ ಪರಿಹಾರದ ಚೆಕ್‌ ಹಸ್ತಾಂತರಿಸಿದ ಡಿಸಿ

ಕುಣಿಗಲ್‌ನ ಮನೋಜ್ ಕುಟುಂಬಕ್ಕೆ 25 ಲಕ್ಷ ಪರಿಹಾರದ ಚೆಕ್‌ ಹಸ್ತಾಂತರ

Bengaluru stampede: ನಮಗೆ ಆದಂತೆ ಮುಂದೆ ಬೇರೆ ಯಾರಿಗೂ ಆಗುವುದು ಬೇಡ. ಸರ್ಕಾರ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ನನ್ನ ಮಗ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಎಂದು ಪರಿಹಾರ ಹಣ ಸ್ವೀಕರಿಸಿದ ವೇಳೆ ಮನೋಜ್‌ ತಂದೆ ದೇವರಾಜು ದುಃಖ ತೋಡಿಕೊಂಡಿದ್ದಾರೆ.

Suhas Shetty Murder Case: ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಖೆಯನ್ನು ಎನ್‌ಐಎಗೆ ವಹಿಸಿದ ಕೇಂದ್ರ ಸರ್ಕಾರ

ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಖೆ ಎನ್‌ಐಎ ಹೆಗಲಿಗೆ

Suhas Shetty Murder Case: ಮೇ 1ರಂದು ಮಂಗಳೂರಿನ ಬಜಪೆಯ ಕಿನ್ನಿಪದವು ಎಂಬಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್‌ ಶೆಟ್ಟಿ ಕೊಲೆಯಾಗಿತ್ತು. ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಹತ್ಯೆ ಮಾಡಿದ್ದರು. ಇದರ ತನಿಖೆ ನಡೆಸುತ್ತಿದ್ದ ಸಿಸಿಬಿ, ಈವರೆಗೆ ಒಟ್ಟು 12 ಆರೋಪಿಗಳನ್ನು ಬಂಧಿಸಿದೆ.

Murder attempt: ಅಕ್ರಮ ಸಂಬಂಧಕ್ಕೆ ಅಡ್ಡಿ ಅಂತ ಕುಟುಂಬಸ್ಥರಿಗೆ ಊಟದಲ್ಲಿ ವಿಷ ಹಾಕಿದ ಮಹಿಳೆ ಅರೆಸ್ಟ್‌!

ಅಕ್ರಮ ಸಂಬಂಧಕ್ಕೆ ಅಡ್ಡಿ ಅಂತ ಕುಟುಂಬಸ್ಥರಿಗೆ ವಿಷ ಹಾಕಿದ ಮಹಿಳೆ!

Murder attempt: ತನ್ನ ಅನೈತಿಕ ಸಂಬಂಧಕ್ಕೆ ಪತಿ, ಮಕ್ಕಳು ಹಾಗೂ ಅತ್ತೆ-ಮಾವ ಅಡ್ಡಿಯಾಗಬಹುದೆಂದು, ಎಲ್ಲರನ್ನೂ ಸಾಮೂಹಿಕವಾಗಿ ಕೊಲೆ ಮಾಡಲು ಮಹಿಳೆ ಯೋಜನೆ ರೂಪಿಸಿದ್ದಳು. ಕುಟುಂಬಸ್ಥರಿಗೆ ಆರೋಗ್ಯದಲ್ಲಿ ಸಮಸ್ಯೆ ಉಂಟಾದಾಗ ವಿಷಪ್ರಾಷನ ಮಾಡಿರುವ ಕೃತ್ಯ ಬೆಳಕಿಗೆ ಬಂದಿದೆ.

Second Marriage: 2ನೇ ಮದುವೆಯಾಗುತ್ತಿದ್ದ ಪತಿಗೆ ಮಂಟಪದಲ್ಲೇ ಚಪ್ಪಲಿಯಿಂದ ಬಾರಿಸಿದ ಪತ್ನಿ!

2ನೇ ಮದುವೆಯಾಗುತ್ತಿದ್ದ ಪತಿಗೆ ಮಂಟಪದಲ್ಲೇ ಚಪ್ಪಲಿಯಿಂದ ಬಾರಿಸಿದ ಪತ್ನಿ!

Chitradurga News: ಚಿತ್ರದುರ್ಗ ನಗರದಲ್ಲಿ ಈ ಘಟನೆ ನಡೆದಿದೆ. ಗಂಡ ಎರಡನೇ ಮದುವೆಯಾಗುತ್ತಿರುವ ವಿಷಯ ತಿಳಿದು ಮೊದಲ ಪತ್ನಿ ಕುಟುಂಬಸ್ಥರು ಮದುವೆ ಮಂಟಪಕ್ಕೇ ತೆರಳಿ ಮದುವೆ ನಿಲ್ಲಿಸಿದ್ದಾರೆ. ಈ ವೇಳೆ ಗಂಡನಿಗೆ ಪತ್ನಿ ಧರ್ಮದೇಟು ನೀಡಿದ್ದಾಳೆ.

Self Harming: ಅಲ್ಲಾನಿಗೆ ಮೇಕೆ ಬದಲು ನನ್ನ ತ್ಯಾಗ ಮಾಡುತ್ತೇನೆ ಎಂದು ಹೇಳಿ ವ್ಯಕ್ತಿ ಆತ್ಮಹತ್ಯೆ

ಮೇಕೆ ಬದಲು ತನ್ನನ್ನು ತಾನೇ ಬಲಿ ಕೊಟ್ಟುಕೊಂಡ ವೃದ್ಧ!

ಬಕ್ರೀದ್ ಹಬ್ಬದ ಸಲುವಾಗಿ ಶನಿವಾರ ಬೆಳಗ್ಗೆ ಸುಮಾರು 10 ಗಂಟೆಗೆ ಸುಲ್ತಾನ್ ಸೈಯದ್ ಮಖ್ದೂಮ್ ಅಶ್ರಫ್ ಶಾ ಅವರ ದರ್ಗಾದಲ್ಲಿ ಈದ್ ಪ್ರಾರ್ಥನೆಯನ್ನು ಸಲ್ಲಿಸಿ ಬಂದ ಇಶ್ ಮೊಹಮ್ಮದ್ ಅನ್ಸಾರಿ ಅವರು ತಮ್ಮ ಮನೆಯ ಪಕ್ಕದ ಗುಡಿಸಲಿನಲ್ಲಿ ಚಾಕುವಿನಿಂದ ಕತ್ತು ಸೀಳಿಕೊಂಡು ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾರೆ.

Hassan News: ಮಕ್ಕಳಿದ್ದ ಆಟೋವನ್ನು ನ್ಯೂಟ್ರಲ್‌ ಮಾಡಿ ಹಿಂದಕ್ಕೆ ತಳ್ಳಿದ ಬೈಕ್‌ ಸವಾರ; ಮುಂದೇನಾಯ್ತು?

ಮಕ್ಕಳಿದ್ದ ಆಟೋವನ್ನು ನ್ಯೂಟ್ರಲ್‌ ಮಾಡಿ ಹಿಂದಕ್ಕೆ ತಳ್ಳಿದ ಬೈಕ್‌ ಸವಾರ!

Hassan News: ರಸ್ತೆ ಬದಿಯ ಪಾರ್ಕಿಂಗ್ ಸ್ಥಳದಲ್ಲಿ ಯುವಕ ಬೈಕ್ ನಿಲ್ಲಿಸಿದ್ದನು. ಬೈಕ್​ ಹಿಂದೆ ಆಟೋ ಪಾರ್ಕ್​ ಮಾಡಲಾಗಿತ್ತು. ಇದರಿಂದ ಸಿಟ್ಟಿಗೆದ್ದ ಯುವಕ ಆಟೋವನ್ನು ನ್ಯೂಟ್ರಲ್​ ಮಾಡಿ ಹಿಂದೆ ತಳ್ಳಿದ್ದಾನೆ. ಇದರಿಂದ ಆಟೋ ಹಿಂದಕ್ಕೆ ಹೋಗಿದೆ. ಹಾಸನ ಜಿಲ್ಲೆಯ ಬೇಲೂರು ಪಟ್ಟಣದಲ್ಲಿ ಘಟನೆ ನಡೆದಿದೆ.

Indore Couple missing: ಇಂದೋರ್‌ ಜೋಡಿ ಮಿಸ್ಸಿಂಗ್‌ ಕೇಸ್‌ನಲ್ಲಿ ಮಹತ್ವದ ಸುಳಿವು; ಆ ದಿನ ಅವರ ಜೊತೆಗಿದ್ದ ಆ ಮೂವರು ಯಾರು?

ಇಂದೋರ್ ದಂಪತಿ ನಾಪತ್ತೆ ಕೇಸ್‌; ಮಹತ್ವ ಸುಳಿವು ಪತ್ತೆ

ಮೇಘಾಲಯದ ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯಲ್ಲಿ ಹನಿಮೂನ್ ನಡೆಸುತ್ತಿದ್ದ ರಾಜಾ ರಘುವಂಶಿ ಮತ್ತು ಅವರ ಪತ್ನಿ ಸೋನಮ್ ಸೊಹ್ರಾದಲ್ಲಿ (Indore Couple missing) ನಾಪತ್ತೆಯಾಗಿದ್ದರು. ರಾಜಾ ರಘುವಂಶಿ ಅವರ ಶವ ಪತ್ತೆಯಾಗಿದ್ದು, ಸೋನಮ್ ಇನ್ನೂ ಕಾಣೆಯಾಗಿದ್ದಾರೆ. ಅವರನ್ನು ಪತ್ತೆಹಚ್ಚಲು ಶೋಧ ಕಾರ್ಯಾಚರಣೆ ಮುಂದುವರಿದಿದೆ.

Moral Policing: ಬೈಕ್‌ನಲ್ಲಿ ಹೋಗುತ್ತಿದ್ದ ಹಿಂದೂ ಯುವಕ, ಮುಸ್ಲಿಂ ಯುವತಿ ಮೇಲೆ ನೈತಿಕ ಪೊಲೀಸ್‌ ಗಿರಿ

ಹಿಂದೂ ಯುವಕ, ಮುಸ್ಲಿಂ ಯುವತಿ ಮೇಲೆ ನೈತಿಕ ಪೊಲೀಸ್‌ ಗಿರಿ

Moral Policing: ರಾಮನಗರ ಹೊರವಲಯದ ಬೆಂಗಳೂರು-ಮೈಸೂರು ಹಳೇ ಹೆದ್ದಾರಿಯಲ್ಲಿ ಘಟನೆ ನಡೆದಿದೆ. ನೈತಿಕ ಪೊಲೀಸ್‌ ಗಿರಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದರಿಂದ ರಾಮನಗರ ಗ್ರಾಮಾಂತರ ಪೊಲೀಸರು, ಒಬ್ಬನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

Renukaswamy Murder Case: ರೇಣುಕಾಸ್ವಾಮಿ ಕೊಲೆಯಾಗಿ ಇಂದಿಗೆ ಒಂದು ವರ್ಷ; ಪುತ್ರನನ್ನು ನೆನೆದು ಪೋಷಕರು ಕಣ್ಣೀರು

ರೇಣುಕಾಸ್ವಾಮಿ ಕೊಲೆಯಾಗಿ ಇಂದಿಗೆ ಒಂದು ವರ್ಷ

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣ ನಡೆದು ಇಂದಿಗೆ ಒಂದು ವರ್ಷ ಸಂದಿದೆ. ಸ್ಟಾರ್‌ ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌, ಪವಿತ್ರ ಗೌಡ ಸೇರಿದಂತೆ ಅನೇಕರು ಈ ಪ್ರಕರಣದಲ್ಲಿ ಕಂಬಿ ಎಣಿಸುವಂತಾಗಿತ್ತು. ಇದೀಗ ಮಗ ತಮ್ಮನ್ನಗಲಿ ಒಂದು ವರ್ಷ ಸಂದಿರುವ ಹಿನ್ನೆಲೆಯಲ್ಲಿ ರೇಣುಕಾಸ್ವಾಮಿ ಅವರ ತಾಯಿ ಮಾಧ್ಯಮಗಳ ಜೊತೆ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.

Physical assault: ಐಸಿಯುನಲ್ಲೇ ನಡೀತು ಹೀನ ಕೃತ್ಯ! ಮತ್ತು ಬರೋ ಇಂಜೆಕ್ಷನ್‌ ಕೊಟ್ಟು ಮಹಿಳೆ ಮೇಲೆ ಅತ್ಯಾಚಾರ

ಶಾಕಿಂಗ್‌! ಐಸಿಯುನಲ್ಲಿದ್ದ ಮಹಿಳೆ ಮೇಲೆ ಅತ್ಯಾಚಾರ

ಐಸಿಯು ವಾರ್ಡ್ (ICU Ward) ನಲ್ಲಿ ದಾಖಲಾಗಿದ್ದ 32 ವರ್ಷದ ಮಹಿಳೆಗೆ ನಿದ್ರೆ ಬರುವ ಇಂಜೆಕ್ಷನ್ ನೀಡಿ ನರ್ಸಿಂಗ್ ಸಿಬ್ಬಂದಿಯೊಬ್ಬ (Nursing Staff) ಅತ್ಯಾಚಾರ (Physical assault) ನಡೆಸಿರುವ ಘಟನೆ ರಾಜಸ್ಥಾನದ (Rajasthan) ಅಲ್ವಾರ್ ನಲ್ಲಿರುವ ವೈದ್ಯಕೀಯ ಕಾಲೇಜಿನಲ್ಲಿ ಜೂನ್ 4ರಂದು ರಾತ್ರಿ ನಡೆದಿದೆ. ಮಹಿಳೆಯು ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಲು ಆಸ್ಪತ್ರೆಗೆ ದಾಖಲಾಗಿದ್ದರು.

Physical assault: ರಾಜ್ಯವನ್ನೇ ಬೆಚ್ಚಿ ಬೀಳಿಸೋ ಘಟನೆ; ಬಾಲಕಿ ಮೇಲೆ ಗ್ಯಾಂಗ್‌ರೇಪ್‌

ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ

Haveri Horror: ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಂಕಾಪುರ ಠಾಣೆ ವ್ಯಾಪ್ತಿಯಲ್ಲಿ ಬಾಲಕಿಯನ್ನು ಪ್ರೀತಿಸುತ್ತಿದ್ದ ಯುವಕನ ಇಬ್ಬರು ಸ್ನೇಹಿತರೇ ಬೆದರಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ. ಇನ್ನು ಆರೋಪಿಗಳನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ.

Bengaluru stampede: ಇಂಥ ಪರಿಸ್ಥಿತಿ ಯಾರಿಗೂ ಬೇಡ; ಭೂಮಿಕ್‌ ಸಮಾಧಿ ಮೇಲೆ ಬಿದ್ದು ತಂದೆ ಗೋಳಾಟ

ಇಂಥ ಪರಿಸ್ಥಿತಿ ಯಾರಿಗೂ ಬೇಡ; ಭೂಮಿಕ್‌ ಸಮಾಧಿ ಮೇಲೆ ಬಿದ್ದು ತಂದೆ ಆಕ್ರಂದನ

Bengaluru stampede: ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಮೃತಪಟ್ಟಿದ್ದ ಯುವಕ ಭೂಮಿಕ್‌ ಮೃತದೇಹದ ಶವಪರೀಕ್ಷೆಯನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಲಾಗಿತ್ತು. ಅದೇ ದಿನ, ಬೇಲೂರಿನ ಕುಪ್ಪಗೋಡಿನಲ್ಲಿರುವ ಲಕ್ಷ್ಮಣ್ ಅವರು ಖರೀದಿಸಿದ್ದ ಜಮೀನಿನಲ್ಲೇ ಅವರ ಅಂತ್ಯಕ್ರಿಯೆ ನಡೆಸಲಾಗಿತ್ತು. ಸಮಾಧಿ ಪೂಜೆಗೆ ತೆರಳಿದಾಗ ತಂದೆ ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.