ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಕ್ರೈಂ
ಆರೋಪಿಗಳಿಂದ 41 ಗ್ರಾಂ.ಬಂಗಾರದ ಒಡವೆಗಳು ಹಾಗೂ ನಗದು ಹಣ ಅಮಾನತ್ತು

ಮೂವರು ಕಳ್ಳರನ್ನು ಅರೆಸ್ಟ್ ಮಾಡಿದ ನಗರ ಠಾಣೆಯ ಪೊಲೀಸರು

ಕಳ್ಳತನ ಮಾಡಿರುವ ಆರೋಪಿಗಳನ್ನು ಬಂಧಿಸಿ ಅವರಿಂದ ನಗದು ಹಣ ಹಾಗೂ ಒಡವೆಗಳನ್ನು ವಶಕ್ಕೆ ಪಡೆಯುವಲ್ಲಿ ನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು ಜಗನ್ ಬಿನ್ ಸಂದ್ಯಾರಾಜನ್, ತಮಿಳುನಾಡು,ಸಾಧಿಕ್ ಪಾಷ,ಶಾಂತಿ ನಗರ ಹಾಗೂ ಟಿಪ್ಪು ಬೇಗ್ ಅಗ್ರಹಾರ ಎಂದು ಗುರುತಿಸಲಾಗಿದೆ.

Viral Video: ಹೆತ್ತ ತಾಯಿ ಎನ್ನುವುದನ್ನೂ ನೋಡದೆ ಕ್ರೂರವಾಗಿ ಹಲ್ಲೆ ನಡೆಸಿದ ಮಗ; ಮನ ಕಲಕುವ ವಿಡಿಯೊ ವೈರಲ್

ಛೇ ಎಂಥಾ ಕಟುಕ ಮಗ; ತಾಯಿ ಮೇಲೆ ಅಮಾನುಷ ಹಲ್ಲೆ

ರಾಜಸ್ಥಾನದಲ್ಲಿ ನಡೆದ ಮನಕಲಕುವ ಘಟನೆಯ ವೈರಲ್ ಆಗಿದೆ. ಹೆತ್ತಮ್ಮನಿಗೆ ಮಗ ಹೊಡೆಯುವ ದೃಶ್ಯ ಇಆಗಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ತನ್ನ ಹೆತ್ತ ತಾಯಿಗೆ ಮಗ ಥಳಿಸುತ್ತಿರುವ ವಿಡಿಯೊ ಪೊಲೀಸರ ಕೈ ಸೇರಿದೆ. ಪಾಪಿ ಮಗನನ್ನು ದೀಪು ಮೆಹ್ರಾ ಎಂದು ಗುರುತಿಸಲಾಗಿದ್ದು, ಆತನ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

Biklu Shiva murder case: ರೌಡಿಶೀಟರ್ ಬಿಕ್ಲು ಶಿವ ಹತ್ಯೆ ಪ್ರಕರಣದ ತನಿಖೆ ಸಿಐಡಿಗೆ ವರ್ಗಾವಣೆ

ಬಿಕ್ಲು ಶಿವ ಹತ್ಯೆ ಪ್ರಕರಣದ ತನಿಖೆ ಸಿಐಡಿಗೆ ವರ್ಗಾವಣೆ

Biklu Shiva murder case: ಬೆಂಗಳೂರಿನ ಹಲಸೂರು ಕೆರೆ ಬಳಿ ಜುಲೈ 15ರ ರಾತ್ರಿ ರೌಡಿಶೀಟರ್​​ ಶಿವಪ್ರಕಾಶ್​ ಅಲಿಯಾಸ್​ ಬಿಕ್ಲು ಶಿವನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆಗೈದಿದ್ದರು. ಈ ಪ್ರಕರಣದಲ್ಲಿ ಎ5 ಆರೋಪಿಯಾದ ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಬೈರತಿ ಬಸವರಾಜ್‌ಗೆ ಸಂಕಷ್ಟ ಎದುರಾಗಿದೆ.

ವರದಕ್ಷಿಣೆಗಾಗಿ ತನ್ನ 8 ತಿಂಗಳ ಮಗುವನ್ನು ತಲೆಕೆಳಗಾಗಿ ನೇತು ಹಾಕಿ ಹಳ್ಳಿಯಾದ್ಯಂತ ಮೆರವಣಿಗೆ ಮಾಡಿದ ಭೂಪ; ಎದೆ ಝಲ್ಲೆನಿಸುವ ವಿಡಿಯೊ ವೈರಲ್‌

ವರದಕ್ಷಿಣೆಗೆ ಒತ್ತಾಯಿಸಿ ಈತ ಮಾಡಿದ್ದೇನು ಗೊತ್ತೆ?

Viral News: ಉತ್ತರ ಪ್ರದೇಶದ ರಾಂಪುರ ಜಿಲ್ಲೆಯ ಸಂಜು ಎಂಬಾತ ಪತ್ನಿ ಮತ್ತು ಆಕೆಯ ಕುಟುಂಬದವರಿಂದ ವರದಕ್ಷಿಣೆ ಪಡೆಯುವ ಸಲುವಾಗಿ ತನ್ನ 8 ತಿಂಗಳ ಮಗುವನ್ನು ತಲೆಕೆಳಗಾಗಿ ಹಿಡಿದುಕೊಂಡು ಹಳ್ಳಿಯ ಬೀದಿಗಳಲ್ಲಿ ಮೆರವಣಿಗೆ ಮಾಡಿದ್ದಾನೆ. ಈ ಕೃತ್ಯದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರಿ ಆಕ್ರೋಶ ವ್ಯಕ್ತವಾಗಿದೆ.

ರಿಸೆಪ್ಶನಿಸ್ಟ್ ಮೇಲಿನ ಹಲ್ಲೆ ಪ್ರಕರಣಕ್ಕೆ ಟ್ವಿಸ್ಟ್‌; ನಿಜಕ್ಕೂ ಮೊದಲು ಹೊಡೆದಿದ್ದು ಯಾರು?

ರಿಸೆಪ್ಶನಿಸ್ಟ್ ಮೇಲಿನ ಹಲ್ಲೆ ಪ್ರಕರಣಕ್ಕೆ ಟ್ವಿಸ್ಟ್

Receptionist Assault Aase: ಮಕ್ಕಳ ಆಸ್ಪತ್ರೆಯ ವೈದ್ಯರ ಚೇಂಬರ್‌ ಒಳಗೆ ನುಗ್ಗಲು ಯತ್ನಿಸಿದ್ದ ವ್ಯಕ್ತಿಯೊಬ್ಬ ತಡೆದ ರಿಸೆಪ್ಶನಿಸ್ಟ್‌ ಮೇಲೆ ಹಲ್ಲೆ ನಡೆಸಿ ನೆಲಕ್ಕೆ ಕೆಡವಿದ್ದ ಘಟನೆ ನಡೆದಿತ್ತು. ಇದೀಗ ಈ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಮುಂಬೈ ಸಮೀಪದ ಕಲ್ಯಾಣದಲ್ಲಿನ ಶ್ರೀ ಬಾಲ್‌ ಚಿಕಿತ್ಸಾಲಯ ಎಂಬ ಮಕ್ಕಳ ಆಸ್ಪತ್ರೆಯಲ್ಲಿ ನಡೆದ ಹಲ್ಲೆಯ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Actor Darshan: ಸುಪ್ರೀಂ ಕೋರ್ಟ್‌ನಲ್ಲಿ ದರ್ಶನ್‌ಗೆ 10 ದಿನ ರಿಲೀಫ್‌, ತೀರ್ಪು ಕಾಯ್ದಿರಿಸಿದ ನ್ಯಾಯಪೀಠ

ಸುಪ್ರೀಂ ಕೋರ್ಟ್‌ನಲ್ಲಿ ದರ್ಶನ್‌ಗೆ 10 ದಿನ ರಿಲೀಫ್‌, ತೀರ್ಪು ಮುಂದೂಡಿಕೆ

Supreme Court: ದರ್ಶನ್‌ & ಗ್ಯಾಂಗ್‌ನಿಂದ ನಡೆದಿದ್ದ ರೇಣುಕಾಸ್ವಾಮಿ ಬರ್ಬರ ಹತ್ಯೆ ಪ್ರಕರಣದಲ್ಲಿ ದರ್ಶನ್ ಹಾಗೂ ಮತ್ತಿತರರ ಪರ ವಾದ ಮಂಡನೆ ಮುಕ್ತಾಯವಾಗಿದೆ. ವಾದ, ಪ್ರತಿವಾದ ಆಲಿಸಿ ಸುಪ್ರೀಂ ಕೋರ್ಟ್‌ ಆದೇಶ ಕಾಯ್ದಿರಿಸಿದೆ. ಹೀಗಾಗಿ ದರ್ಶನ್ ಮತ್ತು ಗ್ಯಾಂಗ್​ಗೆ 10 ದಿನಗಳ ಕಾಲ ತಾತ್ಕಾಲಿಕ ರಿಲೀಫ್ ದೊರೆತಿದೆ.

Digital Arrest: ಡಿಜಿಟಲ್‌ ಆರೆಸ್ಟ್‌ ಹೆಸರಿನಲ್ಲಿ ಇಬ್ಬರು ಯುವತಿಯರನ್ನು ವಿವಸ್ತ್ರಗೊಳಿಸಿ ಕಿರುಕುಳ

ಡಿಜಿಟಲ್‌ ಆರೆಸ್ಟ್‌ ಹೆಸರಿನಲ್ಲಿ ಯುವತಿಯರನ್ನು ವಿವಸ್ತ್ರಗೊಳಿಸಿ ಕಿರುಕುಳ

Cyber Crime: ಮನಿ ಲಾಂಡರಿಂಗ್ ಆರೋಪದ ನೆಪದಲ್ಲಿ ವಿಡಿಯೋ ಕರೆ ಮಾಡಿದ ಸೈಬರ್ ವಂಚಕ, ದೈಹಿಕ ತಪಾಸಣೆ ನೆಪದಲ್ಲಿ ಮಹಿಳೆಯರಿಬ್ಬರನ್ನು ಬೆತ್ತಲೆಗೊಳಿಸಿ ವಿಡಿಯೋ ಮಾಡಿ ಸತತ 9 ಗಂಟೆಗಳ ಕಾಲ ಕಿರುಕುಳ ನೀಡಿದ್ದಾನೆ. ಬಳಿಕ 58 ಸಾವಿರ ಹಣವನ್ನು ಸುಲಿಗೆ ಮಾಡಿದ್ದಲ್ಲದೆ, ಮತ್ತಷ್ಟು ಹಣ ನೀಡುವಂತೆ ಕಿರುಕುಳ ನೀಡಿದ್ದಾನೆ.

Police Firing: ಧಾರವಾಡದಲ್ಲಿ ಇಬ್ಬರು ಕಳ್ಳರಿಗೆ ಪೊಲೀಸ್‌ ಗುಂಡೇಟು, ಸೆರೆ

ಧಾರವಾಡದಲ್ಲಿ ಇಬ್ಬರು ಕಳ್ಳರಿಗೆ ಪೊಲೀಸ್‌ ಗುಂಡೇಟು, ಸೆರೆ

Dharawad: ಧಾರವಾಡ ನಗರದ ಮನೆಯೊಂದರಲ್ಲಿ ಈ ಕಳ್ಳರು ಕಳ್ಳತನ ಮಾಡಿದ್ದರು. ಬಳಿಕ ಪರಾರಿ ಆಗುವ ವೇಳೆ ಪೊಲೀಸರ ಕೈಗೆ ಇಬ್ಬರು ಕಳ್ಳರು ಸಿಕ್ಕಿ ಬಿದ್ದಿದ್ದಾರೆ. ಪಿಎಸ್ಐ ಮೇಲೆ ಹಲ್ಲಿ ನಡೆಸಿ ಕಳ್ಳರು ಪರಾರಿಗೆ ಯತ್ನಿಸಿದ್ದಾರೆ. ಈ ವೇಳೆ ಪಿಎಸ್ಐ ಮಲ್ಲಿಕಾರ್ಜುನ್ ಇಬ್ಬರ ಮೇಲೂ ಗುಂಡಿನ ದಾಳಿ ನಡೆಸಿದ್ದಾರೆ.

Lokayukta Raid: ಒಬ್ಬ ಐಎಎಸ್‌ ಸೇರಿ 8 ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ, 37.41 ಕೋಟಿ ಮೌಲ್ಯದ ಆಸ್ತಿ ಪತ್ತೆ

ಒಬ್ಬ ಐಎಎಸ್‌ ಸೇರಿ 8 ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ

ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಬುಧವಾರ ಬೆಳ್ಳಂಬೆಳಗ್ಗೆ ಸರ್ಕಾರಿ ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳು ಬಿಸಿ ಮುಟ್ಟಿಸಿದರು. ಒಬ್ಬರು ಐಐಎಸ್ ಮಹಿಳಾ ಅಧಿಕಾರಿ ಒಳಗೊಂಡಂತೆ ಎಂಟು ಮಂದಿ ಅಧಿಕಾರಿಗಳ ಮನೆಗಳ ದಾಳಿ ನಡೆಸಿದ್ಧಾರೆ.

Westarctica: ಗಾಜಿಯಾಬಾದ್‌ನಲ್ಲಿ ನಕಲಿ ‘ವೆಸ್ಟಾರ್ಕ್‌ಟಿಕಾ’ ರಾಯಭಾರ ಕಚೇರಿ ಪತ್ತೆ: ರಾಜತಾಂತ್ರಿಕ ಪ್ಲೇಟ್‌ನ ಕಾರುಗಳ ಜಪ್ತಿ

ವೆಸ್ಟಾರ್ಕ್ಟಿಕಾ ಹೆಸರಿನ ನಕಲಿ ರಾಯಭಾರ ಕಚೇರಿ ಪತ್ತೆ

ಗಾಜಿಯಾಬಾದ್‌ನಲ್ಲಿ ನಕಲಿ ರಾಯಭಾರ ಕಚೇರಿ ಕಾರ್ಯ ನಿರ್ವಹಿಸುತ್ತಿದ್ದನ್ನು ಪತ್ತೆ ಹಚ್ಚಲಾಗಿದ್ದು, ಉತ್ತರ ಪ್ರದೇಶ ವಿಶೇಷ ಕಾರ್ಯಪಡೆ ಒಬ್ಬನನ್ನು ಬಂಧಿಸಿದೆ. ಐಷಾರಾಮಿ 2 ಅಂತಸ್ತಿನ ಕಟ್ಟಡವನ್ನು ಬಾಡಿಗೆ ಕಟ್ಟಡದಲ್ಲಿ ಅಮೆರಿಕದ ನೌಕಾಪಡೆಯ ಅಧಿಕಾರಿಯೊಬ್ಬರು ಸ್ಥಾಪಿಸಿದ ಮೈಕ್ರೋನೇಷನ್ ‘ವೆಸ್ಟಾರ್ಕ್ಟಿಕಾ’ದ ರಾಯಭಾರ ಕಚೇರಿಯಾಗಿ ನಡೆಸುತ್ತಿದ್ದ ಹರ್ವರ್ಧನ್ ಜೈನ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Double murder case: ಆಂಧ್ರದಲ್ಲಿ ಬೆಂಗಳೂರಿನ ಇಬ್ಬರು ಬಿಜೆಪಿ ಮುಖಂಡರ ಕತ್ತು ಸೀಳಿ ಬರ್ಬರ ಹತ್ಯೆ!

ಆಂಧ್ರದಲ್ಲಿ ಬೆಂಗಳೂರಿನ ಇಬ್ಬರು ಬಿಜೆಪಿ ಮುಖಂಡರ ಕತ್ತು ಸೀಳಿ ಬರ್ಬರ ಹತ್ಯೆ!

Two BJP leaders killed: ಆಂಧ್ರಪ್ರದೇಶ ರಾಜ್ಯದ ಬಾಪಟ್ಲ ಜಿಲ್ಲೆಯಲ್ಲಿ ಜೋಡಿ ಕೊಲೆ ನಡೆದಿದೆ. ಮೃತರನ್ನು ಬೆಂಗಳೂರಿನ ಮಹದೇವಪುರದ ಬಿಜೆಪಿ ಯುವ ಮುಖಂಡ ಪ್ರಶಾಂತರೆಡ್ಡಿ ಹಾಗೂ ತಂದೆ ವೀರಸ್ವಾಮಿರೆಡ್ಡಿ ಎಂದು ಗುರುತಿಸಲಾಗಿದೆ. ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿ ಕೋರ್ಟ್ ಕೇಸ್ ವಿಚಾರಣೆಗೆ ಹಾಜರಾದ ವೇಳೆ, ತಂದೆ-ಮಗನನ್ನು ಅಪಹರಿಸಿ, ಹತ್ಯೆ ಮಾಡಲಾಗಿದೆ.

Vidisha Horror: ಲೀವ್‌ ಇನ್‌ ಸಂಗಾತಿಯನ್ನು ಕೊಂದು ಲಿಪ್‌ಸ್ಟಿಕ್‌ನಲ್ಲಿ ತಪ್ಪೊಪ್ಪಿಗೆ ಸಂದೇಶ ಬರೆದ ಪಾಪಿ

ಲೀವ್‌ ಇನ್‌ ಸಂಗಾತಿಯನ್ನು ಕೊಂದ ಪಾಪಿ ಸಿಕ್ಕಿ ಬಿದ್ದಿದ್ದು ಹೇಗೆ?

Madhya Pradesh News: ಮಧ್ಯ ಪ್ರದೇಶದ ವಿದಿಶಾ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಲೀವ್‌ ಇನ್‌ ಸಂಗಾತಿ ಮತ್ತು ಆಕೆಯ 3 ವರ್ಷದ ಮಗಳನ್ನು ಕೊಲೆ ಮಾಡಿರುವ ಭೀಕರ ಘಟನೆ ನಡೆದಿದೆ. ಬಳಿಕ ಗೋಡೆ ಮೇಲೆ ಲಿಪ್‌ಸ್ಟಿಕ್‌ನಲ್ಲಿ ತಪ್ಪೊಪ್ಪಿಗೆ ಸಂದೇಸ ಬರೆದಿದ್ದಾನೆ.

Bengaluru News: ಕಲಾಸಿಪಾಳ್ಯ ಬಸ್ ನಿಲ್ದಾಣದಲ್ಲಿ ಸ್ಫೋಟಕ ವಸ್ತುಗಳು ಪತ್ತೆ; ಶ್ವಾನ ದಳ, ಬಾಂಬ್ ನಿಷ್ಕ್ರಿಯ ದಳ ದೌಡು!

ಕಲಾಸಿಪಾಳ್ಯ ಬಸ್ ನಿಲ್ದಾಣದಲ್ಲಿ ಸ್ಫೋಟಕ ವಸ್ತುಗಳು ಪತ್ತೆ!

Bengaluru News: ಬೆಂಗಳೂರು ನಗರದ ಕಲಾಸಿಪಾಳ್ಯ ಖಾಸಗಿ ಬಸ್ ನಿಲ್ದಾಣದಲ್ಲಿ ಸ್ಫೋಟಕಗಳಿದ್ದ ಬ್ಯಾಗ್‌ ಪತ್ತೆಯಾಗಿದೆ. ಸ್ಫೋಟಕಗಳಿದ್ದ ಬ್ಯಾಗ್‌ ಅನ್ನು ಬಸ್ ನಿಲ್ದಾಣದಲ್ಲಿ ಇಟ್ಟು ತೆರಳಿದವರು ಯಾರು ಎನ್ನುವ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸ್ಥಳಕ್ಕೆ ಪೊಲೀಸರು, ಶ್ವಾನ ದಳ, ಬಾಂಬ್ ನಿಷ್ಕ್ರಿಯ ದಳ ದೌಡಾಯಿಸಿ, ಪರಿಶೀಲನೆ ನಡೆಸಿವೆ.

Robbery Case: ಗನ್ ತೋರಿಸಿ ನಿವೃತ್ತ NSG ಸಿಬ್ಬಂದಿಯ ಮನೆಯಲ್ಲಿ ದರೋಡೆ; ಆರೋಪಿಯ ಬಂಧನ

NSG ಸಿಬ್ಬಂದಿ ಮನೆಯಲ್ಲಿ 60 ಲಕ್ಷ ರೂ. ದರೋಡೆ

ನಿವೃತ್ತ NSG ಸಿಬ್ಬಂದಿಯೊಬ್ಬರ ಮನೆಯಲ್ಲಿ ಶನಿವಾರ ನಡೆದ 60 ಲಕ್ಷ ರೂ. ಮೌಲ್ಯದ ದರೋಡೆ (Robbery) ಪ್ರಕರಣಕ್ಕೆ ಸಂಬಂಧಿಸಿ, ಉತ್ತರ ಪ್ರದೇಶದ ನೋಯ್ಡಾದಲ್ಲಿ 35 ವರ್ಷದ ಆರೋಪಿ ಅಲೋಕ್ ಕುಮಾರ್ ಮಿಶ್ರಾನನ್ನು ಪೊಲೀಸರು ಬಂಧಿಸಿದ್ದಾರೆ. ನಿವೃತ್ತ ರಾಷ್ಟ್ರೀಯ ಭದ್ರತಾ ಪಡೆ (NSG) ಸಿಬ್ಬಂದಿಯಾದ 86 ವರ್ಷದ ಭೀಮಸೇನ್, ಈಗ ಕಿನಾರಿ ಮಾರ್ಕೆಟ್‌ನಲ್ಲಿ ಒಡವೆ ವ್ಯಾಪಾರ ನಡೆಸುತ್ತಿದ್ದಾರೆ. ಶನಿವಾರ ಅವರು ತನ್ನ ಮಗ ಸಂದೀಪ್, ಸೊಸೆ ನೀಲಂ ಮತ್ತು ಮೊಮ್ಮಗನೊಂದಿಗೆ ಮನೆಯಲ್ಲಿದ್ದಾಗ ದರೋಡೆ ನಡೆದಿದೆ.

Frude Case: 2 ಕೋಟಿ ರೂ. ಎಗರಿಸಿ ಗರ್ಲ್‌ಫ್ರೆಂಡ್‌ ಜತೆ ಪೊಲೀಸಪ್ಪ ಜೂಟ್! ಇವ್ನು ಸಿಕ್ಕಿ ಬಿದ್ದಿದ್ದೇ ರೋಚಕ

ಕೋಟಿ ಕೋಟಿ ಎಗರಿಸಿ ಪ್ರೇಯಸಿ ಜೊತೆ ಪೊಲೀಸಪ್ಪ ಜಾಲಿ ಟ್ರಿಪ್‌

ದೆಹಲಿ ಪೊಲೀಸ್ (Delhi Police) ಸಬ್ ಇನ್ಸ್‌ಪೆಕ್ಟರ್ (Sub-Inspector) ಒಬ್ಬರು 2 ಕೋಟಿ ರೂಪಾಯಿಗಳನ್ನು ಕದ್ದು ತನ್ನ ಸಬ್ ಇನ್ಸ್‌ಪೆಕ್ಟರ್ ಗೆಳತಿಯೊಂದಿಗೆ ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಉತ್ತರ-ಪೂರ್ವ ಜಿಲ್ಲೆಯ ಸೈಬರ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಅಂಕುರ್ ಮಲಿಕ್, ನಕಲಿ ದೂರುದಾರರ ಹೆಸರಿನಲ್ಲಿ ಕೋರ್ಟ್ ಆದೇಶ ಪಡೆದು ಕಳವು ಮಾಡಿದ ಹಣವನ್ನು ತನ್ನ ಪರಿಚಿತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದಾನೆ.

Road Accident: ಗೌರಿಬಿದನೂರಿನಲ್ಲಿ ಸ್ಕೂಟಿ-ಲಾರಿ ಡಿಕ್ಕಿಯಾಗಿ 5 ತಿಂಗಳ ಗರ್ಭಿಣಿ, ಪತಿ ದುರ್ಮರಣ

ಸ್ಕೂಟಿ-ಲಾರಿ ಡಿಕ್ಕಿಯಾಗಿ 5 ತಿಂಗಳ ಗರ್ಭಿಣಿ, ಪತಿ ದುರ್ಮರಣ

Gauribidanur News: ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ದಂಪತಿ, ಸಂಬಂಧಿಕರೊಬ್ಬರ ಕಾರ್ಯಕ್ರಮ ಮುಗಿಸಿಕೊಂಡು ಸ್ಕೂಟಿಯಲ್ಲಿ ವಾಪಸ್ ಮನೆಗೆ ಬರುತ್ತಿದ್ದ ವೇಳೆ ಸ್ಕೂಟಿಗೆ ಲಾರಿ ಡಿಕ್ಕಿ ಹೊಡೆದಿದೆ. ಇದರಿಂದ ಐದು ತಿಂಗಳ ಗರ್ಭಿಣಿ ಮತ್ತು ಆಕೆಯ ಪತಿ ಮೃತಪಟ್ಟಿದ್ದಾರೆ.

Rajasthan Horror: ರಾಜಸ್ಥಾನದಲ್ಲೊಂದು ದೇಶವೇ ಬೆಚ್ಚಿ ಬೀಳುವ ಘಟನೆ; ದೂರವಾದ ಪತ್ನಿಯನ್ನು ಒಲಿಸಿಕೊಳ್ಳಲು 5 ವರ್ಷದ ಮಗುವನ್ನು ಕೊಂದ ಪಾಪಿ

ದೂರವಾದ ಪತ್ನಿಯನ್ನು ಒಲಿಸಲು 5 ವರ್ಷದ ಮಗುವನ್ನು ಕೊಂದ ಪಾಪಿ

Crime News: ಮಂತ್ರವಾದಿಯೊಬ್ಬನ ಮಾತು ಕೇಳಿ ತಾಯಿ ಮನೆಗೆ ತೆರಳಿದ ಪತ್ನಿಯ ಮೇಲೆ ನಿಯಂತ್ರಣ ಸಾಧಿಸುವ ಉದ್ದೇಶದಿಂದ ಪಾಪಿಯೊಬ್ಬ ತನ್ನ 5 ವರ್ಷದ ಸೋದರಳಿಯನ್ನು ಬಲಿ ಕೊಟ್ಟಿರುವ ಈ ಅಮಾನುಷ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಆರೋಪಿಯನ್ನು ಸರಯೈ ಕಾಲನ್‌ ಗ್ರಾಮದ ಮನೋಜ್‌ ಪ್ರಜಾಪತ್‌ ಎಂದು ಗುರುತಿಸಲಾಗಿದೆ.

Racist Attack: ಜನಾಂಗೀಯ ನಿಂದನೆ- ಆಸ್ಟ್ರೇಲಿಯಾದಲ್ಲಿ ಭಾರತೀಯ ವಿದ್ಯಾರ್ಥಿ ಮೇಲೆ ಡೆಡ್ಲಿ ಅಟ್ಯಾಕ್‌!

ಆಸ್ಟ್ರೇಲಿಯಾದಲ್ಲಿ ಭಾರತೀಯ ವಿದ್ಯಾರ್ಥಿ ಮೇಲೆ ಡೆಡ್ಲಿ ಅಟ್ಯಾಕ್‌!

ಭಾರತೀಯ ವಿದ್ಯಾರ್ಥಿ (Indian Student) ಮೇಲೆ ಜನಾಂಗೀಯ ಪ್ರೇರಿತವಾಗಿ ದಾಳಿ (Racist Attack) ನಡೆಸಲಾಗಿದ್ದು, ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಆಸ್ಟ್ರೇಲಿಯಾದ (Australia) ಅಡಿಲೇಡ್‌ನಲ್ಲಿ ಜುಲೈ 19ರಂದು ಶನಿವಾರ ರಾತ್ರಿ 9.22 ರ ಸುಮಾರಿಗೆ ನಡೆದಿದೆ. ಗಾಯಗೊಂಡಿರುವ ಭಾರತೀಯ ವಿದ್ಯಾರ್ಥಿ ಚರಣ್‌ಪ್ರೀತ್ ಸಿಂಗ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ದಕ್ಷಿಣ ಆಸ್ಟ್ರೇಲಿಯಾ ಪೊಲೀಸರು ತಿಳಿಸಿದ್ದಾರೆ.

Digital Arrest: ಬೆಂಗಳೂರಿನಲ್ಲಿ ಡಿಜಿಟಲ್‌ ಅರೆಸ್ಟ್;‌  ದೈಹಿಕ ಪರೀಕ್ಷೆ ನೆಪದಲ್ಲಿ ಮಹಿಳೆಯರನ್ನು ವಿವಸ್ತ್ರಗೊಳಿಸಿದ ನಕಲಿ ಪೊಲೀಸರು!

ಡಿಜಿಟಲ್‌ ಅರೆಸ್ಟ್;‌ ಮಹಿಳೆಯರನ್ನು ವಿವಸ್ತ್ರಗೊಳಿಸಿದ ನಕಲಿ ಪೊಲೀಸರು!

Digital Arrest: ಇತ್ತೀಚೆಗೆ ಬೆಂಗಳೂರಿನಲ್ಲಿ ವೃದ್ಧ ದಂಪತಿಯ ಡಿಜಿಟಲ್‌ ಅರೆಸ್ಟ್‌ ಪ್ರಕರಣದ ಬೆನ್ನಲ್ಲೇ ಮತ್ತೊಂದು ಪ್ರಕರಣ ನಡೆದಿದೆ. ಈ ಕುರಿತು ಈಸ್ಟ್ ಸಿಇಎನ್ ಕ್ರೈಮ್ ಪೊಲೀಸರಿಗೆ ದೂರು ನೀಡಲಾಗಿದ್ದು, ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.

Blackmail Case: ಪತ್ನಿ ಸ್ನಾನ ಮಾಡುತ್ತಿರುವ ವಿಡಿಯೊ ರೆಕಾರ್ಡ್‌ ಮಾಡಿ ಪತಿ ಬ್ಲ್ಯಾಕ್‌ಮೇಲ್‌! EMI ಕಟ್ಟುವಂತೆ ಬೆದರಿಕೆ

ಪತ್ನಿಯ ಖಾಸಗಿ ವಿಡಿಯೋ ರೆಕಾರ್ಡ್‌ ಮಾಡಿ ಪತಿಯಿಂದಲೇ ಬ್ಲ್ಯಾಕ್‌ಮೇಲ್‌!

ಮಹಿಳೆಯೊಬ್ಬಳು ತನ್ನ ಪತಿಖಾಸಗಿ ಫೋಟೋ ಹಾಗೂ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ. ಪುಣೆಯ ಅಂಬೆಗಾಂವ್‌ನಲ್ಲಿ 30 ವರ್ಷದ ಮಹಿಳೆಯೊಬ್ಬರು ತಮ್ಮ ಪತಿಯ ವಿರುದ್ಧ ದೂರು ದಾಖಲಿಸಿದ್ದಾರೆ.

Murder Case: ಅನೈತಿಕ ಸಂಬಂಧದಿಂದ ಕೊಲೆ, ಕಾಂಗ್ರೆಸ್‌ ಶಾಸಕರ ಚಾಲಕನ ಬಂಧನ

ಅನೈತಿಕ ಸಂಬಂಧದಿಂದ ಕೊಲೆ, ಕಾಂಗ್ರೆಸ್‌ ಶಾಸಕರ ಚಾಲಕನ ಬಂಧನ

Chitradurga news: ಕೊಲೆ ಪ್ರಕರಣದ ಪ್ರಮುಖ ಆರೋಪಿ ಯಶವಂತ್‌, ಚಿತ್ರದುರ್ಗ ಶಾಸಕ ಬಿಜಿ ಗೋವಿಂದಪ್ಪ ಅವರ ಕಾರು ಚಾಲಕನಾಗಿದ್ದಾನೆ. ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಲಿಂಗದಳ್ಳಿ ಮತ್ತು ಹೊಸದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಹತ್ಯೆ ಪ್ರಕರಣ ನಡೆದಿದೆ.

Byrati Basavaraj: ರೌಡಿಶೀಟರ್‌ ಹತ್ಯೆ ಆರೋಪಿ ದುಬೈಗೆ ಪರಾರಿ, ಲುಕೌಟ್‌ ನೋಟೀಸ್‌ಗೆ ಸಿದ್ಧತೆ, ಇಂದು ಬೈರತಿ ವಿಚಾರಣೆ

ರೌಡಿಶೀಟರ್‌ ಹತ್ಯೆ ಆರೋಪಿಗೆ ಲುಕೌಟ್‌ ನೋಟೀಸ್‌, ಇಂದು ಬೈರತಿ ವಿಚಾರಣೆ

Murder Case: ಬಿಕ್ಲು ಶಿವ ಕೊಲೆಯಾಗಿ ಹತ್ತು ದಿನ ಕಳೆದಿದೆ. ಪ್ರಕರಣದಲ್ಲಿ ಹನ್ನೊಂದು ಜನ ಆರೋಪಿಗಳ ಬಂಧನವಾಗಿದೆ. ಆದರೆ ಎ1 ಆರೋಪಿಯಾಗಿರುವ ಜಗ್ಗ ಮಾತ್ರ ಪೊಲೀಸರ ಕೈಗೆ ಸಿಕ್ಕಿಲ್ಲ. ಆತ ಕೊಲೆಯ ಬಳಿಕ ಚೆನ್ನೈಗೆ ತೆರಳಿ ಅಲ್ಲಿಂದ ದುಬೈಗೆ ಪರಾರಿಯಾಗಿದ್ದಾನೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

KGF Babu: ಕೆಜಿಎಫ್‌ ಬಾಬುಗೆ ಆರ್‌ಟಿಒ ಶಾಕ್‌, ತೆರಿಗೆ ಕಟ್ಟದ ಐಷಾರಾಮಿ ಕಾರುಗಳ ಜಪ್ತಿ

ಕೆಜಿಎಫ್‌ ಬಾಬುಗೆ ಆರ್‌ಟಿಒ ಶಾಕ್‌, ತೆರಿಗೆ ಕಟ್ಟದ ಐಷಾರಾಮಿ ಕಾರುಗಳ ಜಪ್ತಿ

RTO raid: ಕೆಜಿಎಫ್ ಬಾಬು ಎಂದೇ ಖ್ಯಾತರಾದ ಯೂಸುಫ್ ಶರೀಫ್, ರಿಯಲ್ ಎಸ್ಟೇಟ್ ಉದ್ಯಮದಲ್ಲಿ ದೊಡ್ಡ ಹೆಸರಾಗಿದ್ದಾರೆ. 2021ರ ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅವರು, 1,744 ಕೋಟಿ ರೂಪಾಯಿಗಳ ಆಸ್ತಿಯನ್ನು ಘೋಷಿಸಿದ್ದರು. ಈ ಆಸ್ತಿಯಲ್ಲಿ ರೋಲ್ಸ್ ರಾಯ್ಸ್ ಸೇರಿದಂತೆ ಹಲವು ಐಷಾರಾಮಿ ಕಾರುಗಳು ಸೇರಿವೆ.

Supreme Court: ಜೀವನಾಂಶಕ್ಕೆ 12 ಕೋಟಿ ರೂ, BMW ಕಾರು, ಮುಂಬೈನಲ್ಲಿ ಐಷಾರಾಮಿ ಮನೆ- ಪತ್ನಿಯ ಡಿಮ್ಯಾಂಡ್ಸ್‌ ನ್ಯಾಯಾಧೀಶರೇ ಶಾಕ್‌!

ಜೀವನಾಂಶವಾಗಿ 12 ಕೋಟಿ ರೂ, BMW ಕಾರಿಗೆ ಮಹಿಳೆ ಡಿಮ್ಯಾಂಡ್‌!

ಜೀವನಾಂಶಕ್ಕೆ 12 ಕೋಟಿ ರೂ, ಮುಂಬೈನಲ್ಲಿ ಮನೆ ಕೇಳಿದ ಮಹಿಳೆಗೆ ‘ನೀವೇಕೆ ಗಳಿಸಬಾರದು? ಎಂದ ಸುಪ್ರೀಂ ಕೋರ್ಟ್ ಮಂಗಳವಾರ ತಿಳಿಸಿದೆ. ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಜೀವನಾಂಶ ವಿವಾದದ ವಿಚಾರಣೆಯಲ್ಲಿ, “ನೀವು ಉನ್ನತ ಶಿಕ್ಷಣ ಪಡೆದಿದ್ದೀರಿ, ಸ್ವತಃ ಗಳಿಸಬೇಕು, ಜೀವನಾಂಶಕ್ಕಾಗಿ ಕೇಳಬಾರದು” ಎಂದು ಮಹಿಳೆಯೊಬ್ಬರಿಗೆ ತರಾಟೆಗೆ ತೆಗೆದುಕೊಂಡರು.

Loading...