ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಅಂಕಣಗಳು

‌M J Akbar Column: ಟ್ರಂಪ್‌ʼರ ಎಡವಟ್ಟುಗಳು

‌M J Akbar Column: ಟ್ರಂಪ್‌ʼರ ಎಡವಟ್ಟುಗಳು

ಒಂದು ಶತಮಾನದ ಹೋರಾಟ ಹಾಗೂ ಸಾಧನೆಯ ಬಳಿಕ ಭಾರತವಿಂದು ಆರ್ಥಿಕ ವಿಕ್ರಮದ ಮುಂಚೂಣಿಗೆ ಬಂದಿದೆ. ಟ್ರಂಪ್ ನೀಡಿದ ಮಾಹಿತಿಯಲ್ಲಿ ಎಡವಟ್ಟುಗಳೇ ತುಂಬಿವೆ. ರಷ್ಯಾದಿಂದ ಭಾರತ ಹೆಚ್ಚು ತೈಲ ಖರೀದಿಸುತ್ತಿರುವುದರಿಂದ ಭಾರತಕ್ಕೆ ಹೆಚ್ಚು ಟ್ಯಾಕ್ಸ್ ಹಾಕುತ್ತೇನೆ ಎಂದು ಟ್ರಂಪ್ ಬಡಬಡಿಸಿದ್ದರು.

‌Ravi Hunj Column: ಇದು ವಿಡಂಬನೆಯಾಚೆಗಿನ ಸತ್ಯ, ಗುರುತು ಹಾಕಿಕೊಳ್ಳಿ...

ಇದು ವಿಡಂಬನೆಯಾಚೆಗಿನ ಸತ್ಯ, ಗುರುತು ಹಾಕಿಕೊಳ್ಳಿ...

ಏನೇ ಬಳಿದು ಪೂಸಿಸಿದರೂ ಮಲತ್ರಯಗಳು ಜಲತ್ರಯವಾಗಬಲ್ಲವೇ? ಇನ್ನು ಹಾನಗಲ್ ಕುಮಾರ ಸ್ವಾಮಿಗಳ ಕುರಿತಾಗಿ, “...ಪರಳಿ ವೈಜನಾಥ ದೇವಸ್ಥಾನಕ್ಕೆ ಅಂದಿನ ಮುಖಂಡರಾದ ವಾರದ ಮಲ್ಲಪ್ಪನ ವರಿಂದ ಸಿದ್ಧರಾಮಪ್ಪ ಪಾವಟೆ ಅವರ ಕಾನೂನಿನ ನೆರವಿನಿಂದ ಲಿಂಗಾಯತರು ‘ಲಿಂಗಿ ಬ್ರಾಹ್ಮಣ’ ಎಂದು ಶೂದ್ರರಲ್ಲ ಅಂತಾ ಸಾಧಿಸಿದರು.

Rangaswamy Mookanahalli Column: ಈ ತಾಕತ್ತನ್ನು ಸರಿಯಾಗಿ ಬಳಸಿಕೊಳ್ಳಬೇಕಿದೆ !

ಈ ತಾಕತ್ತನ್ನು ಸರಿಯಾಗಿ ಬಳಸಿಕೊಳ್ಳಬೇಕಿದೆ !

ಒಂದು ದೇಶ, ಭಾಷೆಯ ಬಗ್ಗೆ ಇರುವ ಭಾವನೆಯನ್ನು ಬದಲಾಯಿಸುವ ತಾಕತ್ತು ಅದಕ್ಕಿದೆ. ಇದನ್ನ ಸರಿದಾರಿಯಲ್ಲಿ ಬಳಸುವ ಜವಾಬ್ದಾರಿ ಎಲ್ಲರ ಮೇಲಿದೆ. ಹೀಗೆ ಭಾರತೀಯ ಚಿತ್ರಗಳನ್ನ ಸ್ಪ್ಯಾನಿಷ್ ಸಬ್‌ಟೈಟ್ಲ್‌ಗಳಲ್ಲಿ ನೋಡಿದ ತೊಮಿ, ಒಂದಲ್ಲ ಎರಡು ಬಾರಿ ಭಾರತಕ್ಕೆ ಭೇಟಿ ಕೊಟ್ಟ. ನಾವೆಲ್ಲಾ ಇಲ್ಲಿನ ವ್ಯವಸ್ಥೆಯನ್ನು ಹಳಿದುಕೊಂಡು ತಿರುಗಾಡುತ್ತಿದ್ದರೆ, ಅವನ ಕಣ್ಣಿಗೆ ಇದು ಸ್ವರ್ಗವಾಗಿ ಕಂಡಿತ್ತು.

Naveen Sagar Column: ದಿ ಬೆಂಗಾಲ್‌ ಫೈಲ್ಸ್..ಲದ್ದಿ ಜೀವಿಗಳಿಗೆ ತಂದಿದೆ ಪೈಲ್ಸ್‌ !

ದಿ ಬೆಂಗಾಲ್‌ ಫೈಲ್ಸ್..ಲದ್ದಿ ಜೀವಿಗಳಿಗೆ ತಂದಿದೆ ಪೈಲ್ಸ್‌ !

ಪ್ರತ್ಯೇಕ ದೇಶ ಸಿಕ್ಕರೂ ಪಾಕಿಗಳಿಗೆ, ಬಾಂಗ್ಲನ್ನರಿಗೆ ದಾಹ ತಪ್ಪಲಿಲ್ಲ. ಆಗ ಅನಿಸಿತು- ಇಸ್ರೇಲ್ ಮತ್ತು ಭಾರತದ ಮಧ್ಯೆ ಬಹಳ ಹೋಲಿಕೆ ಇದೆ. ಆದರೆ ಇರುವ ಒಂದೇ ವ್ಯತ್ಯಾಸ ಅಂದರೆ ಇಸ್ರೇಲ್‌ ನ ಜನರಿಗೆ ದೇಶಪ್ರೇಮವಿದೆ. ನಮ್ಮಲ್ಲಿ ಕೊರತೆ ಇರೋದು ದೇಶಪ್ರೇಮದ್ದು. ಇನ್ ಫ್ಯಾಕ್ಟ್‌ ದೇಶ ಪ್ರೇಮ ಭಾರತದ ಅನ್ನ ತಿಂದ ಎಲ್ಲರಿಗೂ ಇದೆ. ಆದರೆ ಅದು ಕೆಲವೊಬ್ಬರಿಗೆ ಬೇರೆ ದೇಶದ ಮೇಲಿದೆ ಅಷ್ಟೆ.

Ranjith H Ashwath Column: ಇವಿಎಂ ಬದಿಗಿಟ್ಟು ಸಾಧಿಸಲು ಹೊರಟಿದ್ದೇನನ್ನು ?

ಇವಿಎಂ ಬದಿಗಿಟ್ಟು ಸಾಧಿಸಲು ಹೊರಟಿದ್ದೇನನ್ನು ?

ಒಂದು ವೇಳೆ ಬ್ಯಾಲೆಟ್ ಪೇಪರ್ ಬಳಸಿಕೊಂಡು ಕಾಂಗ್ರೆಸ್ಸಿಗರು ಗೆದ್ದರೆ ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕರು ಮಾಡುತ್ತಿರುವ ‘ಮತಗಳ್ಳತನ’ದ ಆರೋಪವನ್ನೇ ಮತ್ತೊಂದು ಸ್ವರೂಪದಲ್ಲಿ ಬಿಜೆಪಿಗರು ಮಾಡುತ್ತಾರೆ. ಒಂದು ವೇಳೆ ಕಾಂಗ್ರೆಸ್ ಮೇಲುಗೈ ಸಾಧಿಸಲು ಸಾಧ್ಯವಾಗದಿದ್ದರೆ ಅದಕ್ಕೆ ಮತ್ತೊಂದು ರೀತಿಯ ಟೀಕೆ ಮಾಡುವುದಂತೂ ಸತ್ಯ.

Vishweshwar Bhat Column: ಅತಿ ಹೆಚ್ಚು ಜನರಿದ್ದ ವಿಮಾನ

Vishweshwar Bhat Column: ಅತಿ ಹೆಚ್ಚು ಜನರಿದ್ದ ವಿಮಾನ

ಒಂದು ಬೋಯಿಂಗ್ 747 ವಿಮಾನವು ಸುಮಾರು 400-500 ಪ್ರಯಾಣಿ ಕರನ್ನು ಹೊತ್ತೊಯ್ಯಬಲ್ಲದು. ಆದರೆ, ಈ ತುರ್ತು ಕಾರ್ಯಾಚರಣೆಯಲ್ಲಿ ಸಾಧ್ಯವಾದಷ್ಟು ಹೆಚ್ಚು ಜನರನ್ನು ಕರೆತರಲು ವಿಮಾನ ದೊಳಗಿನ ಎಲ್ಲ ಆಸನಗಳನ್ನು ತೆಗೆದು ಹಾಕಲಾಯಿತು. ಅಧಿಕೃತ ವಾಗಿ ವಿಮಾನ ಹತ್ತುವಾಗ 1086 ಪ್ರಯಾಣಿಕರಿದ್ದರು. ಆದರೆ, ಪ್ರಯಾಣದ ಸಮಯದಲ್ಲಿ ವಿಮಾನದಲ್ಲಿಯೇ ಮಗುವೊಂದು ಜನಿಸಿದ್ದ ರಿಂದ, ವಿಮಾನವು ಇಸ್ರೇಲ್ ನಲ್ಲಿ ಇಳಿದಾಗ ಒಟ್ಟು ಪ್ರಯಾಣಿಕರ ಸಂಖ್ಯೆ 1087 ಆಗಿತ್ತು.

Roopa Gururaj Column: ಓದಿ ತಿಳಿದುಕೊಂಡವನಿಗೆ ಮೂರ್ಖತ್ವವಿಲ್ಲ

Roopa Gururaj Column: ಓದಿ ತಿಳಿದುಕೊಂಡವನಿಗೆ ಮೂರ್ಖತ್ವವಿಲ್ಲ

ಹಿರಿಯರು ಹೀಗೆನ್ನುತ್ತಾರೆ: “ಪಠತೋ ನಾಸ್ತಿ ಮೂರ್ಖತ್ವಂ, ಜಪತೋ ನಾಸ್ತಿ ಪಾತಕಂ, ಮೌನಿನಃ ಕಲಹೋ ನಾಸ್ತಿ ನಭಯಂ ಚಾಸ್ತಿ ಜಾಗ್ರತಃ"- ಅಂದರೆ, ಓದಿ ತಿಳಿದುಕೊಂಡವರಿಗೆ ಮೂರ್ಖತ್ವವಿಲ್ಲ, ಜಪ ಮಾಡುವವನಿಗೆ ಪಾಪವಿಲ್ಲ, ಮೌನವಾಗಿರುವವನಿಗೆ ಜಗಳವಿಲ್ಲ, ಎಚ್ಚರ ವಹಿಸಿದವನಿಗೆ ಭಯವಿಲ್ಲ" ಎಂದರ್ಥ

M J Akbar Column: ಅಮೆರಿಕವನ್ನು ದುರ್ಬಲಗೊಳಿಸುತ್ತಿರುವ ಸುಳ್ಳಿನ ದೇವರು

ಅಮೆರಿಕವನ್ನು ದುರ್ಬಲಗೊಳಿಸುತ್ತಿರುವ ಸುಳ್ಳಿನ ದೇವರು

ನಮಗೆಲ್ಲಾ ತಿಳಿದಿರುವಂತೆ ಸ್ವರ್ಗವು ಹೆಚ್ಚುಕಮ್ಮಿ ಅಮೆರಿಕದಂತೆಯೇ ಇದೆ. ಅದರರ್ಥ ಅಲ್ಲಿ ಪ್ರಜಾ ಪ್ರಭುತ್ವ ಇದೆ ಅಂತಾಯಿತು. ಪ್ರಜಾಪ್ರಭುತ್ವ ಅಂದರೆ ಚುನಾವಣೆ. ಪ್ರಜಾಪ್ರಭುತ್ವದಲ್ಲಿ ಯಾರೋ ಒಬ್ಬರು ಅಥವಾ ಯಾವುದೋ ಒಂದು ವ್ಯವಸ್ಥೆ ಶಾಶ್ವತವಾಗಿ ಸಿಂಹಾಸನದ ಮೇಲೆ ಕುಳಿತುಕೊಳ್ಳಲು ಅವಕಾಶ ನೀಡುವುದಕ್ಕೆ ಸಾಧ್ಯವಿಲ್ಲ.

Ravi Hunj Column: ತಾಯ್ನಾಡನ್ನು ಪ್ರೀತಿಸುವುದು ನಿನ್ನ ಧರ್ಮದ ಭಾಗ..

Ravi Hunj Column: ತಾಯ್ನಾಡನ್ನು ಪ್ರೀತಿಸುವುದು ನಿನ್ನ ಧರ್ಮದ ಭಾಗ..

ಸಮಗ್ರವಾಗಿ ಸೃಷ್ಟಿಯ ಪ್ರತಿಯೊಂದೂ ದೈವಸ್ವರೂಪ ಎನ್ನುವ ಹಿಂದೂ ಸಂಸ್ಕೃತಿಯ ಮೂಲದ ಕಾರಣ ಭಾರತೀಯ ನಾಡು-ನುಡಿಗಳನ್ನು ದೇವಿಯ ಸ್ವರೂಪದಲ್ಲಿ ನಿರೂಪಿಸಲಾಗಿದೆ ಎನ್ನುವುದು ಲೋಕಾಭಿಮತ. ಆದರೆ ಇಲ್ಲಿ ಕೇವಲ ಹಿಂದೂ ಸಂಸ್ಕೃತಿ ಯಲ್ಲದ ಸಂಸ್ಕೃತಿಯ ಜನರೂ ಇದ್ದಾರೆ ಎನ್ನುವುದಾದರೆ ಅಂಥ ಸಂಸ್ಕೃತಿಯ ಅಬ್ರಹಾಮಿಕ್ ಮತಧರ್ಮಗಳು ಈ ಬಗ್ಗೆ ಏನು ಹೇಳುತ್ತವೆ ಎನ್ನುವುದು ಪರಿಗಣಿತವಾಗುತ್ತದೆ.

Kiran Upadhyay Column: ಬಾಳಬುತ್ತಿ ಕಟ್ಟಿಕೊಡುವ ಗುರುವಿಗೊಂದು ನಮನ

ಬಾಳಬುತ್ತಿ ಕಟ್ಟಿಕೊಡುವ ಗುರುವಿಗೊಂದು ನಮನ

ಇಬ್ಬರಿಗೂ ಮೇಜಿನ ಕಡೆ ಮುಖ ಮಾಡಿ ಈಗ ಚೆಂಡು ಯಾವ ಬಣ್ಣದ್ದೆಂದು ಕೇಳಿದರು. ಈ ಬಾರಿ, ಮೊದಲು ಕಪ್ಪು ಎಂದಿದ್ದ ವಿದ್ಯಾರ್ಥಿ ಚೆಂಡು ಬಿಳಿಯ ಬಣ್ಣದ್ದೆಂದೂ, ಬಿಳಿಯದು ಎಂದಿದ್ದವ ಕಪ್ಪು ಬಣ್ಣದ್ದೆಂದೂ ವಾದ ಆರಂಭಿಸಿದರು. ಗುರುಗಳು ಇಬ್ಬರನ್ನೂ ಶಾಂತವಾಗಿಸಿ, ಚೆಂಡನ್ನು ನಿಧಾನವಾಗಿ ಗೋಲಾಕಾರವಾಗಿ ತಿರುಗಿಸಿದರು.

ಮುಡಾ ಅಕ್ರಮ ತನಿಖಾ ನಡೆ ಬಿಜೆಪಿ ಕಡೆ

ಮುಡಾ ಅಕ್ರಮ ತನಿಖಾ ನಡೆ ಬಿಜೆಪಿ ಕಡೆ

ಇಡಿ (ಜಾರಿ ನಿರ್ದೇಶನಾಲಯ) ನೀಡಿರುವ ಮಧ್ಯಂತರ ತನಿಖಾ ವರದಿಯಲ್ಲಿ ಕೂಡ ಹಿಂದಿನ ಬಿಜೆಪಿ ಅವಧಿಯಲ್ಲಿ ಅಧ್ಯಕ್ಷರು ಮತ್ತು ಅಧಿಕಾರಿಗಳು ಮಾಡಿರುವ ಅಕ್ರಮಗಳನ್ನು ಒತ್ತಿ ಹೇಳಲಾಗಿದೆ. ಇದನ್ನು ಸರಕಾರ ಈಗ ಗಂಭೀರವಾಗಿ ಪರಿಗಣಿಸಿದ್ದು ಇಡೀ ವರದಿಯನ್ನೇ ಆಧರಿಸಿ ಹಿಂದಿನ ಬಿಜೆಪಿ ಸರಕಾರದ ಕಾಲದಲ್ಲಿದ್ದ ಅಧಿಕಾರಿಗಳು ಮತ್ತು ಅಂದಿನ ಅಧ್ಯಕ್ಷರ ವಿರುದ್ಧ ಕ್ರಮಕ್ಕೆ ಮುಂದಾಗುವ ನಿಟ್ಟಿನಲ್ಲಿ ಚಿಂತನೆ ನಡೆದಿದೆ.

ಕನ್ನಡದ ವಿದ್ಯಾರ್ಥಿಗಳಿಗೆ ಉರ್ದುವಿನಲ್ಲಿ ಪಾಠ !

ಕನ್ನಡದ ವಿದ್ಯಾರ್ಥಿಗಳಿಗೆ ಉರ್ದುವಿನಲ್ಲಿ ಪಾಠ !

ಉರ್ದು ಶಿಕ್ಷಕರಿಗೆ ಕನ್ನಡ ಅಥವಾ ಇಂಗ್ಲಿಷ್ ಬಾರದಿರುವುದರಿಂದ, ಅವರು ಉರ್ದು ವಿನಲ್ಲಿಯೇ ಪಾಠ ಮಾಡುತ್ತಾರೆ ಎನ್ನುವುದು ವಿದ್ಯಾರ್ಥಿಗಳ ಆತಂಕ. ಉರ್ದು ಶಿಕ್ಷಕರಿಗೆ ಇಂಗ್ಲಿಷ್ ಸರಿಯಾಗಿ ಬರುವುದಿಲ್ಲ, ಕನ್ನಡವೂ ಗೊತ್ತಿಲ್ಲ. ಅವರು ಉರ್ದುವಿನಲ್ಲಿಯೇ ಪಾಠ ಮಾಡಿದರೆ, ನಮಗೆ ಅರ್ಥವಾಗುವುದಿಲ್ಲ.

R T Vittalmurthy Column: ವಿಜಯೇಂದ್ರ-ನಿಖಿಲ್‌ ಈಗ ಜೋಡೆತ್ತುಗಳು

R T Vittalmurthy Column: ವಿಜಯೇಂದ್ರ-ನಿಖಿಲ್‌ ಈಗ ಜೋಡೆತ್ತುಗಳು

“ಈ ಹಿಂದೆ ಮೈಸೂರು ಚಲೋ ಯಾತ್ರೆಯ ಸಂದರ್ಭದಲ್ಲಿ ಬಿಜೆಪಿ-ಜೆಡಿಎಸ್ ಮಧ್ಯೆ ಯಾವ ಒಗ್ಗಟ್ಟು ಕಾಣಿಸಿತ್ತೋ?‌ ಅದು ಮುಂದುವರಿಯಲಿ. ನೀವು ಮತ್ತು ನಿಖಿಲ್ ಕುಮಾರಸ್ವಾಮಿ ಒಗ್ಗೂಡಿ ಅಶ್ವಮೇಧ ಯಾತ್ರೆ ಶುರು ಮಾಡಿ. ಸಕ್ಸಸ್ ಆಗುತ್ತೀರಿ" ಎಂಬುದು. ಯಾವಾಗ ದೇವೇಗೌಡರು ಈ ಟಿಪ್ಸ್ ನೀಡಿದರೋ, ತರುವಾಯದಲ್ಲಿ ವಿಜಯೇಂದ್ರ ಖುಷಿಯಾಗಿದ್ದಾರೆ.

Vishweshwar Bhat Column: ಸ್ವತಂತ್ರ ವಿದ್ಯುತ್‌ ವ್ಯವಸ್ಥೆ

Vishweshwar Bhat Column: ಸ್ವತಂತ್ರ ವಿದ್ಯುತ್‌ ವ್ಯವಸ್ಥೆ

ಸಣ್ಣ ವಿದ್ಯುತ್ ವ್ಯತ್ಯಯವಾದರೂ, ಅದು ದೊಡ್ಡ ಗೊಂದಲಕ್ಕೆ ಮತ್ತು ಅಪಾಯಕ್ಕೆ ಕಾರಣವಾಗ ಬಹುದು. ಆದ್ದರಿಂದ, ವಿಮಾನ ನಿಲ್ದಾಣಗಳು ತಮ್ಮದೇ ಆದ ಸ್ವತಂತ್ರ ಮತ್ತು ಸುಭದ್ರ ವಿದ್ಯುತ್ ವ್ಯವಸ್ಥೆಗಳನ್ನು ಹೊಂದಿರುತ್ತವೆ. ಸ್ವತಂತ್ರ ವಿದ್ಯುತ್ ವ್ಯವಸ್ಥೆ ಏಕೆ ಬೇಕು? ವಿಮಾನ ನಿಲ್ದಾಣದ ಕಾರ್ಯಾಚರಣೆಗಳಿಗೆ ನಿರಂತರ ವಿದ್ಯುತ್ ಪೂರೈಕೆ ಅತ್ಯಗತ್ಯ

Narendra Parekat Column: 80ರ ಹೊಸ್ತಿಲಲ್ಲಿ ಬಿ.ಆರ್‌.ಎಲ್

Narendra Parekat Column: 80ರ ಹೊಸ್ತಿಲಲ್ಲಿ ಬಿ.ಆರ್‌.ಎಲ್

ಕನ್ನಡದ ಪ್ರೇಮಕವಿ, ಸಾಹಿತ್ಯ ಜಗತ್ತಿನ ಜಾಲಿ ಕವಿ ಎಂದೇ ಖ್ಯಾತರಾದ ಬಿ.ಆರ್.ಲಕ್ಷ್ಮಣ ರಾವ್ ಅವರು ಕನ್ನಡ ಕಾವ್ಯ ಪ್ರಪಂಚದ ಭಾವಗೀತೆಗಳ ಸರದಾರ. ಗಾಢ ಪ್ರೇಮ, ವಿರಹ, ವಿಷಾದ, ಜೀವನತತ್ವ ಹೀಗೆ ಹಲವು ವಿಷಯ ವಸ್ತುಗಳ ಕವನಗಳನ್ನು ವೈವಿಧ್ಯಮಯವಾಗಿ ನಿರೂಪಿಸಿ ಸಾಹಿತ್ಯ ಜಗತ್ತಿಗೆ ಉತ್ತಮ ಕೃತಿಗಳನ್ನು ಕೈಗಿತ್ತ ಖ್ಯಾತಿ ಅವರದ್ದಾಗಿದೆ. ಚಿರಯವ್ವನಿಗ ಬಿಆರ್‌ಎಲ್ ಇದೇ ಮಂಗಳವಾರ (ಸೆ.9) 80ಕ್ಕೆ ಕಾಲಿಡುತ್ತಿದ್ದಾರೆ

Dasara 2025: ದಸರಾ: ಹತ್ತು ದಿನ ಯುವಪಡೆಗೆ ಸಾಂಸ್ಕೃತಿಕ ಹಬ್ಬ

ದಸರಾ: ಹತ್ತು ದಿನ ಯುವಪಡೆಗೆ ಸಾಂಸ್ಕೃತಿಕ ಹಬ್ಬ

ರಾಜ್ಯದ ೨೦ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳ ತಂಡಗಳು, ಪಿಯು, ಐಟಿಐ, ವೈದ್ಯಕೀಯ, ಇಂಜಿ ನಿಯರಿಂಗ್, ನಸಿಂಗ್ ಕಾಲೇಜು ವಿದ್ಯಾರ್ಥಿಗಳಿಗೆ ಯುವ ಸಂಭ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈ ಎಲ್ಲ ವಿಶ್ವವಿದ್ಯಾಲಯಗಳು ತಲಾ ಒಂದೊಂದು ತಂಡವನ್ನು ಆಯ್ಕೆ ಮಾಡಿ ಕಳಿಸಿಕೊಡಲಿವೆ.

Srivathsa Joshi Column: ಬಾಗಿಲನು ತೆರೆದು ಬಹುಮಾನ ಕೊಡೊ ಹರಿಯೇ...

ಬಾಗಿಲನು ತೆರೆದು ಬಹುಮಾನ ಕೊಡೊ ಹರಿಯೇ...

ಅಂಥದೊಂದು ಕ್ವಿಜ್ ಶೋ ನಡೀತಿದೆ ಅಂತಿಟ್ಕೊಳ್ಳಿ. ಅದರ ಹೋಸ್ಟ್ ಅಮಿತಾಭ್ ಅಲ್ಲ, ಅವರಪ್ಪ ನನ್ನೂ ಮೀರಿಸುವಂಥವ! ಅಂದ ಹಾಗೆ ಅಮಿತಾಭ್ ಬಚ್ಚನ್‌ರ ಅಪ್ಪನ ಹೆಸರು ಹರಿವಂಶರಾಯ್ ಬಚ್ಚನ್. ಈವತ್ತಿನ ಶೀರ್ಷಿಕೆಯಲ್ಲಿ ಹೇಗೂ ‘ಹರಿ’ ಬಂದಿರುವುದರಿಂದ ಕ್ವಿಜ್ ಶೋ ಹೋಸ್ಟ್‌ನ ಹೆಸರು ಹರಿ ಎಂದೇ ಇರಲಿ. ಕ್ವಿಜ್‌ನಲ್ಲಿ ಕಟ್ಟಕಡೆಯ ಪ್ರಶ್ನೆಯನ್ನು ಸರಿಯಾಗಿ ಉತ್ತರಿಸಿದರೆ ಜಾಕ್‌ ಪಾಟ್ ಬಹುಮಾನ. ಸುವರ್ಣನಾಣ್ಯಗಳಿರುವ ದೊಡ್ಡದೊಂದು ಗಡಿಗೆ!

Yagati Raghu Naadig Column: ಕೀಚಕ ಕಳ್ಳಬೆಕ್ಕಿಗೆ ನಳಪಾಕನ ಶಕುನಿಬೋಧೆ

ಕೀಚಕ ಕಳ್ಳಬೆಕ್ಕಿಗೆ ನಳಪಾಕನ ಶಕುನಿಬೋಧೆ

ಪ್ರಾರ್ಥನೆಯಲ್ಲಿ ತೊಡಗಿದ್ದ ಆಕೆಯ ಕಂಠಸಿರಿಗೆ ಹೆಚ್ಚಿನವರು ತಲೆದೂಗುತ್ತಿದ್ದರೆ, ಸದರಿ ‘ಕಳ್ಳಬೆಕ್ಕು’ ಅವಳ ದೇಹಸಿರಿಯ ಮೇಲೆ ಕಳ್ಳಗಣ್ಣು ಹಾಕಿತ್ತು. ಕಾರ್ಯಕ್ರಮವೆಲ್ಲ ಸಂಪನ್ನಗೊಂಡು ಸಂಜೆಯ ಲಘು ಉಪಹಾರವೂ ಮುಗಿದ ನಂತರ, ಶಾರದೆ ವಿದ್ಯಾರ್ಥಿ ನಿಲಯದ ತನ್ನ ಕೋಣೆಯಲ್ಲಿದ್ದಳು. ಮ್ಯಾನೇಜರ್‌ ರಿಂದ ಆಕೆಗೆ ‘ಬುಲಾವ್’ ಬಂತು. ಅಂತೆಯೇ ಸಂಸ್ಥೆಯ ಕಚೇರಿಗೆ ಅವಳು ತೆರಳಿದಾಗ, ಮ್ಯಾನೇಜರ್, ಅಡುಗೆಭಟ್ಟ ‘ನಳಪಾಕ’ ಮುಂತಾದವರ ಜತೆಯಲ್ಲಿ ‘ಕಳ್ಳಬೆಕ್ಕು’ ಮಾತಿನಲ್ಲಿ ತೊಡಗಿತ್ತು.

Hari Paraak Column: ಮೋದಿ: ಇನ್ಮೇಲೆ ʼಡೊಲಾಂಡ್‌ʼ ಟ್ರಂಪ್‌ ಅಂತ ಯಾರನ್ನ ಕರೀಲಿ ?

ಮೋದಿ: ಇನ್ಮೇಲೆ ʼಡೊಲಾಂಡ್‌ʼ ಟ್ರಂಪ್‌ ಅಂತ ಯಾರನ್ನ ಕರೀಲಿ ?

ನಿರ್ದೇಶಕ ರವಿ ಶ್ರೀವತ್ಸ ಮೊನ್ನೆ ಪ್ರೆಸ್‌ಮೀಟ್ ಕರೆದು ತಮ್ಮ ‘ಗ್ಯಾಂಗ್ಸ್ ಆಫ್ ಯುಕೆ’ ಚಿತ್ರಕ್ಕೆ ಸೆನ್ಸಾರ್‌ ನವರು ಅಡ್ಡಗಾಲು‌ ಹಾಕಿದ್ದಾರೆ. ಸಿನಿಮಾವನ್ನ ಸಾರಾಸಗಟಾಗಿ ನಿರಾಕರಿಸಿದ್ದಾರೆ ಅಂತ ಹೇಳಿಕೊಂಡು ‘ನನ್ನ ಮೇಲೆ ನಡೆಯುತ್ತಿರುವ ದೌರ್ಜನ್ಯ ಇದು’ ಅಂತ ಗೋಳೋ ಅಂತ ಅತ್ತಿದ್ದರು. ಅದಕ್ಕೆ ಅವರಿಗೆ ಉಪೇಂದ್ರ ಅವರಂಥ ದೊಡ್ಡ ಹೆಸರುಗಳೂ ಸಪೋರ್ಟ್ ಮಾಡಿದ್ದವು.

Vinayak V Bhat Column: ಕಂಡವರೆಲ್ಲ ಮಾತಾಡುವಾಗ ಖಾವಂದರದೇಕೆ ಮೌನ ?

ಕಂಡವರೆಲ್ಲ ಮಾತಾಡುವಾಗ ಖಾವಂದರದೇಕೆ ಮೌನ ?

ಅಪರಾಧಿಯು ಧರ್ಮಸ್ಥಳ ದೇವಾಲಯದ ಪ್ರಮುಖರೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ಆಕೆಯ ಕುಟುಂಬ ಆರೋಪಿಸಿತ್ತಾದರೂ, ಸಿಬಿಐ ವಿಶೇಷ ನ್ಯಾಯಾಲಯವು ಪ್ರತಿವಾದಿಯ ವಿರುದ್ಧ ಯಾವುದೇ ಪುರಾವೆಗಳಿಲ್ಲದ ಕಾರಣ ಪ್ರಕರಣವನ್ನು ಖುಲಾಸೆಗೊಳಿಸಿತ್ತು. ಮುಂದೆ, ನೊಂದವರ ಕುಟುಂಬವು ಮತ್ತೊಂದು ಸಿಬಿಐ ತನಿಖೆಯನ್ನು ಕೇಳಿತ್ತು, ಆದರೆ ಕರ್ನಾಟಕ ಹೈಕೋರ್ಟ್ ಅವರ ಮನವಿಯನ್ನು ತಿರಸ್ಕರಿಸಿತ್ತು.

Vishweshwar Bhat Column: ಈಗಲೂ ವಾರದಲ್ಲಿ ಒಂದು ದಿನ ಇಸ್ರೇಲಿಗರು ಮೊಬೈಲ್‌ ಮುಟ್ಟುವುದಿಲ್ಲ !

ಈಗಲೂ ವಾರದಲ್ಲಿ ಒಂದು ದಿನ ಇಸ್ರೇಲಿಗರು ಮೊಬೈಲ್‌ ಮುಟ್ಟುವುದಿಲ್ಲ !

ಶಬ್ಬತ್ ದಿನದಲ್ಲಿ ಯಹೂದಿಗಳು ಬಹುತೇಕ ಎಲ್ಲ ಕೆಲಸಗಳಿಂದ ದೂರವಿದ್ದು, ವಿಶ್ರಾಂತಿ, ಪ್ರಾರ್ಥನೆ, ಕುಟುಂಬ ಜೀವನಕ್ಕೆ ಹೆಚ್ಚು ಒತ್ತುಕೊಡುತ್ತಾರೆ. ಕೆಲವರು ಅಂದು ಮೊಬೈಲ್ ಕರೆಗಳನ್ನು ಸಹ ಸ್ವೀಕರಿಸುವುದಿಲ್ಲ. ಇನ್ನು ಕೆಲವರು ವಾಟ್ಸಾಪ್ ಮತ್ತು ಇಮೇಲ್‌ಗೂ ಪ್ರತಿಕ್ರಿಯಿಸುವುದಿಲ್ಲ.

Asia Cup 2025: ಏಷ್ಯಾ ಕಪ್:‌ ಯಂಗ್‌ ಇಂಡಿಯಾ ಫೇವರಿಟ್

ಏಷ್ಯಾ ಕಪ್:‌ ಯಂಗ್‌ ಇಂಡಿಯಾ ಫೇವರಿಟ್

ಮೊದಲ ಆವೃತ್ತಿಯ ಏಷ್ಯಾಕಪ್ ಅನ್ನು ಯುಎಇ ಆಯೋಜಿಸಿತ್ತು. 1983ರ ಐಸಿಸಿ ವಿಶ್ವಕಪ್ ಕ್ರಿಕೆಟ್ ವಿಜೇತ ತಂಡವಾದ ಭಾರತವು ಮೊದಲ ಏಷ್ಯಾ ಕಪ್‌ನಲ್ಲಿ ಭಾಗವಹಿಸಿದ್ದರಿಂದ ಆ ಪಂದ್ಯಾವಳಿಗೆ ಹೆಚ್ಚಿನ ಪ್ರಾಮುಖ್ಯತೆ ದೊರೆಯಿತು. ಆದರೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಿಶ್ವಕಪ್ ವಿಜೇತ ಸಂಪೂರ್ಣ ತಂಡವನ್ನು 1984ರಲ್ಲಿ ನಡೆದಿದ್ದ ಚೊಚ್ಚಲ ಏಷ್ಯಾ ಕಪ್ ಪಂದ್ಯಾವಳಿಗೆ ಕಳುಹಿಸಿರಲಿಲ್ಲ.

ಚಾಲಕ-ನಿರ್ವಾಹಕರು ಎಲ್ಲದಕ್ಕೂ ಹೊಣೆಯಲ್ಲ

ಚಾಲಕ-ನಿರ್ವಾಹಕರು ಎಲ್ಲದಕ್ಕೂ ಹೊಣೆಯಲ್ಲ

ಟಿಕೆಟ್ ಕೊಡುವ/ಪಡೆಯುವ ಪ್ರಕ್ರಿಯೆ ತಡವಾದಲ್ಲಿ, ಮುಂದಿನ ಸ್ಟೇಜ್‌ನಲ್ಲಿ ಚೆಕಿಂಗ್ ಸ್ಕ್ವಾಡ್ ಬಂದಾಗ, ನಿರ್ವಾಹಕರು ಮೆಮೋ ಪಡೆಯಬೇಕಾಗುತ್ತದೆ ಅಥವಾ ದಂಡವನ್ನು ಪೀಕಬೇಕಾಗುತ್ತದೆ. ಇದನ್ನು ಹೆಣ್ಣುಮಕ್ಕಳು ಅರ್ಥಮಾಡಿಕೊಳ್ಳುವುದಿಲ್ಲ. ಕೆಲವೊಮ್ಮೆ, ಟಿಕೆಟ್ ಪಡೆದ ಉದ್ದೇಶಿತ ನಿಲ್ದಾಣಗಳಲ್ಲಿ ಇಳಿಯದೇ, ತಮ್ಮ ಅನುಕೂಲಕ್ಕೆ ಇನ್ನೆಲ್ಲೋ ಇಳಿಯುತ್ತಾರೆ. ಕೇಳಿದರೆ, ‘ಫ್ರೀ ತಾನೇ? ನಿಮಗೇನು ಕಷ್ಟ? ನಾವು ಎಲ್ಲಾದರೂ ಇಳಿಯಬಹುದು’ ಎಂಬ ಉಡಾಫೆಯ ಉತ್ತರ ಬರುತ್ತದೆ. ಅವರಿಗೆ ಅರ್ಥಮಾಡಿಸಲು ನಿರ್ವಾಹಕರು ಹೆಣಗುತ್ತಿರುತ್ತಾರೆ.

Ravi Sajangadde Column: ಸರಳೀಕೃತ ತೆರಿಗೆ: ವಿಕಸಿತ ಭಾರತಕ್ಕೆ ದಿಟ್ಟಹೆಜ್ಜೆ !

ಸರಳೀಕೃತ ತೆರಿಗೆ: ವಿಕಸಿತ ಭಾರತಕ್ಕೆ ದಿಟ್ಟಹೆಜ್ಜೆ !

ತೆರಿಗೆ ಇಳಿಕೆಯಿಂದಾಗಿ ಸರಕಾರಗಳ ಬೊಕ್ಕಸಕ್ಕೆ 84000 ಕೋಟಿ ರುಪಾಯಿಗಳಷ್ಟು ನಷ್ಟ ಆಗಬಹು ದೆಂದು ಅಂದಾಜಿಸಲಾಗಿದ್ದರೂ ಸರಕಾರದ ವಿಶ್ಲೇಷಣೆಗಳ ಪ್ರಕಾರ, ಅದು ಸುಮಾರು 48000 ಕೋಟಿ ಯಾಗಿದೆ. ತಿಂಗಳಿಗೆ ಸರಾಸರಿ 1.55 ಲಕ್ಷ ಕೋಟಿ ರುಪಾಯಿಗಳ ಆದಾಯವಿರುವುದರಿಂದ ಮತ್ತು ‘ಜನರ ಹಿತ ಕಾಪಾಡುವ ಧ್ಯೇಯ’ದ ಮುಂದೆ ಇದು ಸಣ್ಣ ಮೊತ್ತ!

Loading...