ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಅಂಕಣಗಳು
Roopa Gururaj Column: ಕರುಣೆಯ ನ್ಯಾಯಾಲಯದ ದೇವರು ಶಿವಕುಮಾರ ಮಹಾಸ್ವಾಮಿಗಳು

ಕರುಣೆಯ ನ್ಯಾಯಾಲಯದ ದೇವರು ಶಿವಕುಮಾರ ಮಹಾಸ್ವಾಮಿಗಳು

ಬುದ್ಧಿಯೋರೇ, ನಾನೆಲ್ಲೂ ಹೋಗೋದಿಲ್ಲ, ನಿಮ್ಮ ಸೇವೆ ಮಾಡಿಕೊಂಡು ಮಠದಲ್ಲೇ ಇರ್ತೀನಿ, ಎಂದು ಗೋಗರೆದ. ನಂತರ ಶಿವಕುಮಾರ ಸ್ವಾಮಿಗಳು ಅವನಿಗೆ ಮಠದಲ್ಲೇ ಒಂದು ಕೆಲಸವನ್ನೂ ಕೊಟ್ಟರು. ಕರುಣೆಯ ನ್ಯಾಯಾಲಯದ ಕಾನೂನುಗಳೇ ಬೇರೆ, ತೀರ್ಮಾನವು ಕೂಡ ಬೇರೆಯೇ. ಮನೆಯಲ್ಲಿ ಚಿಕ್ಕಪುಟ್ಟ ತಪ್ಪುಗಳನ್ನು ಮಾಡಿ ಮನೆಯವರು ಸಿಕ್ಕಿಕೊಂಡಾಗ ಅವರನ್ನು ಖಂಡಿಸಿ ಅವಮಾನ ಪಡಿಸಿ ಮತ್ತಷ್ಟು ಗಾಯ ಮಾಡುವ ಬದಲು, ಅವರ ಬಳಿ ಕುಳಿತು ಏಕೆ ಈ ರೀತಿ ಮಾಡಿದರು ಎಂದು ತಿಳಿದು ಕೊಳ್ಳುವ ಪ್ರಯತ್ನ ಮಾಡಿದರೆ ಅದೆಷ್ಟೋ ವಿಷಯಗಳು ಬಗೆಹರಿಯುತ್ತವೆ

Marilinga Gowda MaliPatil Column: ಉತ್ತರದವರ ಪಾಲಿಗೆ ಕನ್ನಡಿಗರು ಸವತಿ ಮಕ್ಕಳಾ ?

ಉತ್ತರದವರ ಪಾಲಿಗೆ ಕನ್ನಡಿಗರು ಸವತಿ ಮಕ್ಕಳಾ ?

‘ಇಲ್ಲೇ ನೆಲೆಸಿದರೂ ನಾವು ಕನ್ನಡವನ್ನು ಕಲಿಯುವುದಿಲ್ಲ’ ಎಂಬ ಹಠ ಇವರದ್ದು. ವರ್ಷಗಟ್ಟಲೆ ಕನ್ನಡ ನಾಡಿನಲ್ಲಿದ್ದು, ಇಲ್ಲಿಯ ಅನ್ನ-ನೀರು ಸೇವಿಸಿದರೂ ಇವರಿಗೆ ಕನ್ನಡವೆಂದರೆ ಅಲರ್ಜಿ. ಜತೆಗೆ, ‘ಕನ್ನಡ ಕಲಿಯುವುದಿಲ್ಲ, ಏನಿವಾಗ?’ ಎಂಬ ಧಿಮಾಕು ಬೇರೆ. ಕನ್ನಡಿಗರ ತಾಳ್ಮೆಗೂ ಮಿತಿಯಿದೆ. ಕನ್ನಡ ವನ್ನು ಅಣಕಿಸಿದರೆ ಆ ತಾಳ್ಮೆ ತಪ್ಪುತ್ತದೆ.

Shashidhara Halady Column: ಪ್ರವಾಸಿಗರಿಗೆ ಗುಂಡಿಕ್ಕುವ ಮನಸ್ಥಿತಿ ಎಂಥದ್ದು ?

ಪ್ರವಾಸಿಗರಿಗೆ ಗುಂಡಿಕ್ಕುವ ಮನಸ್ಥಿತಿ ಎಂಥದ್ದು ?

ತಮ್ಮ ಊರುಗಳಿಗೆ ಬಂದವರನ್ನು ಸ್ಥಳೀಯರು ‘ಅತಿಥಿಗಳು’ ಎಂದೇ ತಿಳಿದು, ಕೈಲಾದ ವ್ಯವಸ್ಥೆ ಮಾಡಿ ಕೊಡುತ್ತಾರೆ. ಇಂದು ಪ್ರವಾಸೋದ್ಯಮದ ಹಿನ್ನೆಲೆಯಲ್ಲಿ, ಇಂಥ ವ್ಯವಸ್ಥೆ, ಸತ್ಕಾರವು ವಾಣಿಜ್ಯಕ ದೃಷ್ಟಿಕೋನವನ್ನು ಹೊಂದಿರುವುದು ನಿಜ; ಹೆಚ್ಚು ಜನ ಪ್ರವಾಸಿಗರು ಬಂದರೆ, ಹೆಚ್ಚು ಆದಾಯ ಎಂಬ ವಿಚಾರವೂ ಮುನ್ನೆಲೆಗೆ ಬಂದಿದೆ.

Keshav Prasad B Column: ಕಾಶ್ಮೀರಿಗರೇ, ʼಟೂರಿಸಂʼ ಮತ್ತು ʼಟೆರರಿಸಂʼ ಒಟ್ಟಿಗಿರಲು ಸಾಧ್ಯವೇ ?!

ಕಾಶ್ಮೀರಿಗರೇ, ʼಟೂರಿಸಂʼ ಮತ್ತು ʼಟೆರರಿಸಂʼ ಒಟ್ಟಿಗಿರಲು ಸಾಧ್ಯವೇ ?!

ಕಾಶ್ಮೀರದಲ್ಲೀಗ ಪ್ರವಾಸಿಗರು ಭಯಭೀತರಾಗಿ ದಿಕ್ಕೆಟ್ಟು ನಿರ್ಗಮಿಸುತ್ತಿರುವುದನ್ನು ಕಂಡು ಅಲ್ಲಿನ ವ್ಯಾಪಾರಿಗಳು, ಟ್ರಾವೆಲ್ ಏಜೆಂಟರು, ರೆಸ್ಟೊರೆಂಟ್ ಮಾಲೀಕರು ನಿರಾಸೆಗೊಂಡಿದ್ದಾರೆ. ಆದರೆ ಕಾಶ್ಮೀರಿ ಗರು ಒಂದನ್ನು ಮನವರಿಕೆ ಮಾಡಿಕೊಳ್ಳಲೇಬೇಕು. ಟೂರಿಸಂ ಮತ್ತು ಟೆರರಿಸಂ ಒಟ್ಟಿಗೆ ಇರಲು ಸಾಧ್ಯವೇ? ಸಾಮಾನ್ಯವಾಗಿ ಪ್ರವಾಸೋದ್ಯಮ ಇಲಾಖೆ ಎಂದರೆ ರಾಜಕಾರಣಿಗಳಿಗೆ ಅಷ್ಟಕ್ಕಷ್ಟೇ

Shishir Hegde Column: ಸಾವನ್ನು ಮುಂದೂಡುವ ಶ್ರೀಮಂತರ ಪ್ರಯೋಗಗಳು

ಸಾವನ್ನು ಮುಂದೂಡುವ ಶ್ರೀಮಂತರ ಪ್ರಯೋಗಗಳು

ಮನುಷ್ಯನಿಗೆ ಒಂದು ‘ಪರಮಮಿತಿ’ ಎಂಬುದಿದೆ. ಉದಾಹರಣೆಗೆ ಮನುಷ್ಯ ಹೆಚ್ಚೆಂದರೆ ಎಷ್ಟು ಭಾರ ಎತ್ತಬಹುದು? ಗ್ರೆಗ್ ಅರ್ನ್ಸ್‌ಟ್ ಎನ್ನುವ ಕೆನೆಡಿಯನ್ 24 ಕ್ವಿಂಟಲ್ ಎತ್ತಿದ್ದ. ಅದು 1993ರಲ್ಲಿ. ಆ ದಾಖಲೆಯನ್ನು ಇಂದಿಗೂ, ಯಾರಿಗೂ ಮುರಿಯಲಾಗಿಲ್ಲ. ವೇಗದ ಓಟ ಎಂದರೆ- ಹೆಚ್ಚೆಂದರೆ ಉಸೇನ್ ಬೋಲ್ಟನಷ್ಟು. ಉಸೇನ್ ಬೋಲ್ಟ್‌ ನ ನೂರು ಮೀಟರ್ ಓಟದ ದಾಖಲೆ 9.58 ಸೆಕೆಂಡ್. ಹಿಂದಿನ ದಾಖಲೆಯೂ ಅವನದೇ- 9.63 ಸೆಕೆಂಡ್. ಇಲ್ಲಿನ ಎರಡು ದಾಖಲೆಯ ಸಮಯದ ಅಂತರ ನೋಡಿ. 0.18 ಸೆಕೆಂಡ್- ಅಷ್ಟರಲ್ಲಿ ಉಸೇನ್ ಬೋಲ್ಟ್‌ ಕ್ರಮಿಸಿದ್ದು 1.87 ಮೀಟರ್! ಆತ ಅಷ್ಟು ವೇಗದಲ್ಲಿ ಓಡಿದ್ದು 2009ರಲ್ಲಿ. ಅದಾಗಿ ಒಂದೂ‌ ವರೆ ದಶಕವೇ ಕಳೆದಿದೆ.

Vishweshwar Bhat Column: ಟೊಯೋಟಾ ಮಾದರಿ

ಟೊಯೋಟಾ ಮಾದರಿ

1980ರ ದಶಕದಲ್ಲಿ, ಟೊಯೋಟಾದ ಕಾರ್ಖಾನೆಯಲ್ಲಿ ಒಂದು ಘಟನೆ ಸಂಭವಿಸಿತು. ಕಾರಿನ ಚಕ್ರ ಗಳನ್ನು ಅಳವಡಿಸುವ ಪ್ರಕ್ರಿಯೆಯಲ್ಲಿ ನಿರಂತರವಾಗಿ ವಿಳಂಬವಾಗುತ್ತಿತ್ತು. ಈ ಸಮಸ್ಯೆಯನ್ನು ವಿವರ ವಾಗಿ ಪರಿಶೀಲಿಸಲು ಟೊಯೋಟಾ 5 Why's ವಿಧಾನವನ್ನು ಬಳಸಿತು. ಚಕ್ರ ಅಳವಡಿಸುವ ಸಮಯ ಹೆಚ್ಚು ತೆಗೆದುಕೊಳ್ಳುತ್ತಿದೆ ಏಕೆ? ಯಂತ್ರ ಗಳು ಸರಿಯಾದ ದಾರಿಗೆ ಬಂದಿಲ್ಲ ಏಕೆ? ಯಂತ್ರದ ನಿರ್ವಹಣೆ ನಿಯತವಾಗಿಲ್ಲ ಏಕೆ? ನಿರ್ವಹಣೆ ಗಾಗಿ ನಿಗದಿತ ಕಾಲಮಿತಿ ಇಲ್ಲ ಏಕೆ? ನಿರ್ವಹಣಾ ಯೋಜನೆಯನ್ನು ಸರಿಯಾಗಿ ರೂಪಿಸಿಲ್ಲ ಏಕೆ?

Shankarnayarana Bhat Column: ಹೇಯ ಕೃತ್ಯದ ಹಿಂದಿನ ಶಕ್ತಿಗಳನ್ನು ಶಿಕ್ಷಿಸಬೇಕು

ಹೇಯ ಕೃತ್ಯದ ಹಿಂದಿನ ಶಕ್ತಿಗಳನ್ನು ಶಿಕ್ಷಿಸಬೇಕು

ಇಂದು ನಮ್ಮ ದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗ್ರಹಿಸಿದರೆ ಇದು ಅರ್ಥವಾಗು ವಂತಿದೆ. ದೇಶದಲ್ಲಿ ಶಾಂತಿ, ನೆಮ್ಮದಿ, ಪ್ರಗತಿ, ಇದ್ದರೆ ಕೆಲವರಿಗೆ ಆತಂಕ ಅಥವಾ ಭಯ. ಹೀಗಾಗಿ ಭಯೋತ್ಪಾದ ಕರಿಗೇ ಕುಮ್ಮಕ್ಕು ಕೊಡುತ್ತಿರುವುದು. ಇಲ್ಲವೆಂದರೆ, ಕಳೆದೆರಡು ವರ್ಷಗಳಿಗಿಂತ ಹೆಚ್ಚು ಕಾಲ, ಅತ್ಯಂತ ಶಾಂತವಾಗಿದ್ದು, ಕಾಶ್ಮೀರಿಗಳು ನೆಮ್ಮದಿಯ ಉಸಿರಾಡುತ್ತಿರುವಾಗ, ಒಮ್ಮಿಂ ದೊಮ್ಮೆಲೇ ದಾಳಿಗೆ ಮುಂದಾ ಗುತ್ತಿರುವ ಉಗ್ರರು ತಮ್ಮ ಇರುವಿಕೆಯ ಗುರುತು ಹಚ್ಚಿಸುತ್ತಿರು ವುದರ ಹಿಂದಿನ ಉದ್ದೇಶವೂ ಸ್ಪಷ್ಟ

Roopa Gururaj Column: ಶತಪದಿ ಹುಳದ ನೂರು ಕಾಲುಗಳ ಲೆಕ್ಕ

ಶತಪದಿ ಹುಳದ ನೂರು ಕಾಲುಗಳ ಲೆಕ್ಕ

ನಮಗೆ ಸಮಸ್ಯೆ ಎನಿಸುವ ಕೆಲವು ವಿಚಾರಗಳು ಬೇರೆಯವರಿಗೆ ವಿಷಯವೇ ಅಲ್ಲ. ಸರಿಯಾಗಿ ಮತ್ತೊ ಬ್ಬರ ಕಷ್ಟಗಳನ್ನು ನೋಡಿದಾಗ ನಮ್ಮ ಅರ್ಧ ಸಮಸ್ಯೆಗಳು ನಾವೇ ಸೃಷ್ಟಿಸಿಕೊಂಡ ತಲೆನೋವುಗಳು ಎಂದು ಅರ್ಥವಾಗುತ್ತದೆ. ಅವುಗಳ ಬಗ್ಗೆ ಅನಗತ್ಯವಾಗಿ ತಲೆಕೆಡಿಸಿಕೊಳ್ಳುವುದು ಕಡಿಮೆಯಾಗುತ್ತದೆ. ಬದುಕನ್ನು ಬಂದ ಹಾಗೆ ಸ್ವೀಕರಿಸುತ್ತಾ, ಎದುರಾದ ಚಿಕ್ಕಪುಟ್ಟ ಸಮಸ್ಯೆ ಗಳನ್ನು ಅಲ್ಲೇ ಪರಿಹರಿಸಿ ಕೊಳ್ಳುತ್ತಾ ಮುಂದೆ ಸಾಗಿದರೆ ಈಗ ಇರುವ ಅರ್ಧ ತಲೆ ನೋವುಗಳು ಇರುವುದೇ ಇಲ್ಲ

Harish Kera Column: ಹಿಂಸೆ, ರಕ್ತ, ಭಯ ಮತ್ತು ಉತ್ತರ

ಹಿಂಸೆ, ರಕ್ತ, ಭಯ ಮತ್ತು ಉತ್ತರ

ಹೆಚ್ಚಿನ ಭಯೋತ್ಪಾದಕ ದಾಳಿಗಳು ಬೆರಳೆಣಿಕೆಯಷ್ಟು ಜನರನ್ನು ಮಾತ್ರ ಕೊಲ್ಲುತ್ತವೆ. 2002ರಲ್ಲಿ ಪ್ಯಾಲೆಸ್ತೀನಿ ಭಯೋತ್ಪಾದಕರಿಂದ ಇಸ್ರೇಲ್‌ನಲ್ಲಿ ಆದ ಸಾವು ನೋವು 451. ಅದೇ ವರ್ಷ ಕಾರು ಅಪಘಾತಗಳಲ್ಲಿ 542 ಇಸ್ರೇಲಿಗಳು ಸಾವನ್ನಪ್ಪಿದ್ದರು. ಅಮೆರಿಕದ ಮೇಲೆ ಆದ 9/11 ದಾಳಿಯಲ್ಲಿ ಸುಮಾರು 3000 ಜನ ಸತ್ತರು. ಆದರೂ ಇದು ಸಾಂಪ್ರದಾಯಿಕ ಯುದ್ಧಕ್ಕೆ ಸಮವಲ್ಲ.

Gururaj Gantihole Column: ನ್ಯಾಯಾಗ v/s ಶಾಸಕಾಂಗ: ಅರ್ಥವಾಗದ ಹಿರಿಯರ ಹಿರಿ ಚರ್ಚೆಗಳು !

ನ್ಯಾಯಾಗ v/s ಶಾಸಕಾಂಗ: ಅರ್ಥವಾಗದ ಹಿರಿಯರ ಹಿರಿ ಚರ್ಚೆಗಳು !

ಭಾರತೀಯ ಸಂವಿಧಾನದಲ್ಲಿ ‘ಚೆಕ್ ಆಂಡ್ ಬ್ಯಾಲೆ’ ಎಂಬ ವಿಧಾನವಿದ್ದು, ಇದು ಸಂವಿಧಾನದ ಯಾವುದೇ ಅಂಗವು ತನ್ನದೇ ಆದ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳದ ವ್ಯವಸ್ಥೆಯಾಗಿದೆ. ಪರಿಶೀಲನೆಗಳು ಮತ್ತು ಸಮತೋಲನಗಳು ಒಂದು ಅಂಗವು ತುಂಬಾ ಶಕ್ತಿಶಾಲಿಯಾಗದಂತೆ ನೋಡಿ ಕೊಳ್ಳುತ್ತದೆ. ನಮ್ಮ ಸಂವಿಧಾನ ನಿರ್ಮಾತೃಗಳು ಅತ್ಯಂತ ಸ್ಪಷ್ಟವಾಗಿ ಮೂರೂ ಅಂಗಗಳ ಜವಾಬ್ದಾರಿ ಮತ್ತು ಕರ್ತವ್ಯಗಳನ್ನು ಪ್ರತ್ಯೇಕಿಸಿ ನೀಡಿದ್ದಾರೆ.

Dr Vijay Darda Column: ಶಿಕ್ಷಣ ವ್ಯವಸ್ಥೆಯಲ್ಲಿ ಕಳ್ಳಾಟ ದೇಶಕ್ಕೇ ಮೋಸ

ಶಿಕ್ಷಣ ವ್ಯವಸ್ಥೆಯಲ್ಲಿ ಕಳ್ಳಾಟ ದೇಶಕ್ಕೇ ಮೋಸ

ದುರದೃಷ್ಟವಶಾತ್ ಮಹಾರಾಷ್ಟ್ರ ಕೂಡ ಈಗ ಶೈಕ್ಷಣಿಕ ಹಗರಣಗಳಲ್ಲಿ ಪಾಲ್ಗೊಂಡ ರಾಜ್ಯಗಳ ಪಟ್ಟಿಗೆ ಸೇರ್ಪಡೆಯಾಗಿದೆ. ನಕಲಿ ಶಿಕ್ಷಕರನ್ನು ಶಾಲೆಗಳಿಗೆ ನೇಮಕಾತಿ ಮಾಡಿದರೆ ಅವರು ಎಂತಹ ಪ್ರಜೆಗಳನ್ನು ಸೃಷ್ಟಿ ಮಾಡಬಲ್ಲರು? ವಿದ್ಯಾರ್ಥಿಗಳಿಗೆ ಏನು ಪಾಠ ಮಾಡು ತ್ತಾರೆ? ಅವರು ಭವ್ಯ ಭಾರತದಲ್ಲಿ ಎಂತಹ ಪ್ರಜೆಗಳನ್ನು ಸೃಷ್ಟಿಸಬಲ್ಲರು? ಇಷ್ಟಕ್ಕೂ, ಶಿಕ್ಷಣಕ್ಕಿಂತ ಪವಿತ್ರವಾದುದು ನಮ್ಮ ಜೀವನದಲ್ಲಿ ಏನಿದೆ? ಆದರೆ ಈ ವಂಚಕರು ಅದನ್ನೂ ಕುಲಗೆಡಿಸುತ್ತಿದ್ದಾರೆ!

Vishweshwar Bhat Column: ವಿಶ್ವಶಾಂತಿ ಕದಡಲು ಅಮೆರಿಕ ಅಧ್ಯಕ್ಷರ ಒಂದು ಮಾತು ಸಾಕು !

ವಿಶ್ವಶಾಂತಿ ಕದಡಲು ಅಮೆರಿಕ ಅಧ್ಯಕ್ಷರ ಒಂದು ಮಾತು ಸಾಕು !

ಒಂದು ದೇಶಕ್ಕೆ ಹೋದಾಗ, ಅನುಕೂಲಕ್ಕೆ ತಕ್ಕ ಹಾಗೆ ಮಾತಾಡುವುದರಿಂದ ಸಮಸ್ಯೆಯನ್ನು ಆಹ್ವಾನಿಸಿ ಕೊಳ್ಳುತ್ತಾರೆ. ಸಿರಿಯಾ ಮೇಲೆ ಯುದ್ಧ ಸಾರುತ್ತೇನೆ ಎಂಬ ಅಮೆರಿಕ ಅಧ್ಯಕ್ಷರ ಒಂದು ಹೇಳಿಕೆ World order ಅನ್ನು ಬುಡಮೇಲು ಮಾಡುತ್ತದೆ. ಆ ಮಾತು ಹೇಳಿದ ಒಂದು ವರ್ಷದ ನಂತರವೂ ಪರಿಣಾಮ ಬುದುಗುಡುತ್ತಿರುತ್ತದೆ. ಇಡೀ ಜಗತ್ತು ಮೌನವ್ರತದಲ್ಲಿರುವುದೂ ಒಂದೇ, ಅಮೆರಿಕ ಅಧ್ಯಕ್ಷ ಮಾತಾಡು ವುದೂ ಒಂದೇ

Vishweshwar Bhat Column: ಇದು ಸೈಕಲ್‌ ದೇಶ

ಇದು ಸೈಕಲ್‌ ದೇಶ

ವಿಶ್ವದಲ್ಲಿಯೇ ನೆದರ್ ಲ್ಯಾಂಡ್ಸ್ ಗೆ ಸೈಕಲ್ ಬಳಕೆಯಲ್ಲಿ ಮೊದಲ ಸ್ಥಾನ. ಇಬ್ಬರು ಭೇಟಿಯಾದರೆ, ಸೈಕಲ್ ವಿಷಯದಿಂದಲೇ ಅವರ ಮಾತುಕತೆ ಆರಂಭವಾಗುತ್ತದೆ ಮತ್ತು ಕೊನೆಯಲ್ಲಿ ಆ ವಿಷಯ ದೊಂದಿಗೇ ಅಂತ್ಯವಾಗುತ್ತದೆ. ತಾವು ಖರೀದಿಸಿದ ಹೊಸ ಸೈಕಲ್, ಮಾರುಕಟ್ಟೆಗೆ ಬಂದ ನೂತನ ಸೈಕಲ್‌ ಗಳ ಕುರಿತು ಅಲ್ಲಿನ ಜನ ಮಾತಾಡಲು ಇಷ್ಟಪಡುತ್ತಾರೆ

Roopa Gururaj Column: ಕೆಡುಕು ಮಾಡಿದವರ ಕರ್ಮ ಮನೆಯವರನ್ನೂ ಸುತ್ತಿಕೊಳ್ಳುತ್ತದೆ

ಕೆಡುಕು ಮಾಡಿದವರ ಕರ್ಮ ಮನೆಯವರನ್ನೂ ಸುತ್ತಿಕೊಳ್ಳುತ್ತದೆ

ಆಗ ಸರಮಾದೇವಿ ಇನ್ನೊಂದು ವಿಷಯವನ್ನು ಸೀತೆಗೆ ಹೇಳುತ್ತಾಳೆ. ನನಗೊಬ್ಬಳು ಒಂಬತ್ತು ವರ್ಷದ ಮಗಳಿದ್ದಾಳೆ, ಅವಳನ್ನು ಕಂಡರೆ ನನ್ನ ಭಾವ ರಾವಣನಿಗೆ ಬಹಳ ಪ್ರೀತಿ. ದೊಡ್ಡಪ್ಪ ನನ್ನು ಕಂಡರೆ ಅವಳಿಗೂ ಬಹಳ ಆದರ, ವಿಶ್ವಾಸ. ಆದರೆ ನಿನ್ನನ್ನು ಕದ್ದು ತಂದ ಮೇಲೆ ಅವಳು ಹೇಳುತ್ತಾಳೆ, ಅಮ್ಮಾ, ದೊಡ್ಡಪ್ಪ ಸೀತೆಯನ್ನು ಕದ್ದು ತಂದ ಮೇಲೆ, ನನಗೆ ಅವರನ್ನು ಕಂಡರೆ ಇಷ್ಟವಾಗುತ್ತಿಲ್ಲ, ಅಷ್ಟೇ ಅಲ್ಲ ಅಮ್ಮಾ, ಇಚೀಚೆಗೆ ಅವರು ಒಬ್ಬರೇ ಇದ್ದಾಗ ಅವರ ಬಳಿಗೆ ಹೋಗಲು ನನಗೆ ಭಯವಾಗುತ್ತದೆ ಎನ್ನುತ್ತಾಳೆ

Laxman Gorlakatte Column: ಬಾಳ ಪಾಠಶಾಲೆಯಲ್ಲಿ ಪುಸ್ತಕಗಳೇ ಬೋಧಕರು

ಬಾಳ ಪಾಠಶಾಲೆಯಲ್ಲಿ ಪುಸ್ತಕಗಳೇ ಬೋಧಕರು

‘ಓದುವುದು’ ಒಂದು ಸುಲಭಸಾಧ್ಯವಾದ, ಉತ್ತಮವಾದ ಹವ್ಯಾಸ. ಇಲ್ಲಿ ಓದಲು ಬಂದರೆ ಸಾಕು, ಮತ್ತೇನೂ ಕೌಶಲದ ಅಥವಾ ಸಲಕರಣೆಗಳ ಅಗತ್ಯವೇ ಇರುವುದಿಲ್ಲ! ಶಿಕ್ಷಕರಾಗಲೀ ತರಬೇತಿ ಯಾಗಲೀ ಇದಕ್ಕೆ ಬೇಕಿಲ್ಲ, ಪುಸ್ತಕವೊಂದಿದ್ದರೆ ಸಾಕು. ಯಾವ ವಯಸ್ಸಿನವರಾದರೂ ಸರಿ ಬೆಳೆಸಿಕೊಳ್ಳಬಹುದಾದ ಓದುವ ಹವ್ಯಾಸಕ್ಕೆ ಹೆಚ್ಚಿನ ಖರ್ಚು ಇಲ್ಲ. ಅನೇಕ ಒಳ್ಳೆಯ ಪುಸ್ತಕಗಳು ಕೈಗೆಟುಕುವ ಬೆಲೆಗೇ ದೊರಕು ತ್ತವೆ. ದುಬಾರಿ ಬೆಲೆಯ ಪುಸ್ತಕಗಳನ್ನು ಕೊಳ್ಳಲು ಸಾಧ್ಯವಿಲ್ಲದಿದ್ದರೆ, ಅವನ್ನು ಉಚಿತವಾಗಿ ಓದಲು ಗ್ರಂಥಾಲಯಗಳಿವೆ.

Lokesh Kayarga Column: ರಾಜಕೀಯದಲ್ಲಿ ಕೂಗುಮಾರಿಗಳಿಗೆ ಹೆಚ್ಚು ಬೆಲೆ !

ರಾಜಕೀಯದಲ್ಲಿ ಕೂಗುಮಾರಿಗಳಿಗೆ ಹೆಚ್ಚು ಬೆಲೆ !

ಪಕ್ಷ ನಾಯಕರ ಬೆಂಬಲ, ಜಾತಿ ಬೆಂಬಲ ಇಲ್ಲವೇ ಕ್ಷೇತ್ರದ ಮತದಾರರ ಬೆಂಬಲ ಈ ಮೂರರ ಪೈಕಿ ಒಂದೂ ಇಲ್ಲದೇ ಹೋದರೆ ಎಷ್ಟೇ ಪ್ರಭಾವಿ ನಾಯಕರಾದರೂ ರಾಜಕೀಯದಲ್ಲಿ ದೀರ್ಘಕಾಲ ಮುಂದುವರಿಯಲು ಸಾಧ್ಯವಿಲ್ಲ. ಪಕ್ಷ ನಿಷ್ಠೆ, ಮೌಲ್ಯ, ತತ್ವ-ಸಿದ್ದಾಂತ, ವೈಯಕ್ತಿಕ ವರ್ಚಸ್ಸು ಇವು ಗಳಿಂದ ಸದ್ಯದ ಚುನಾವಣೆ ರಾಜಕೀಯವನ್ನು ಗೆಲ್ಲಲು ಸಾಧ್ಯವಿಲ್ಲ. ರಾಜಕೀಯ ಮೌಲ್ಯಗಳಿಗೆ ಹೆಸ ರಾದ ಎ.ಟಿ.ರಾಮಸ್ವಾಮಿ. ವೈಎಸ್‌ವಿ ದತ್ತ ಮುಂತಾದವರು ಜೆಡಿಎಸ್ ಮಾತ್ರವಲ್ಲ ಈಗ ಯಾವ ಪಕ್ಷದಲ್ಲೂ ಪ್ರಸ್ತುತರಾಗಲು ಸಾಧ್ಯವಿಲ್ಲ.

Ravi Hunj Column: ಆಧ್ಯಾತ್ಮಿಕ ವೀರಶೈವ ಬಸವಣ್ಣನನ್ನು ನಿರೂಪಿಸಬೇಕಿದೆ

ಆಧ್ಯಾತ್ಮಿಕ ವೀರಶೈವ ಬಸವಣ್ಣನನ್ನು ನಿರೂಪಿಸಬೇಕಿದೆ

ಕಲ್ಲಿನ ಲಿಂಗದಿಂದ ಉದ್ಭವಿಸಿದ ರೇಣುಕಾಚಾರ್ಯರು ಪೌರಾಣಿಕ ಎನ್ನುವುದು ಮೇಲೆ ಹೇಳಿದ ರೀತಿಯಲ್ಲಿ ಮಹಾಮಹಿಮ ಸಾಧಕರನ್ನು ‘ಅವತಾರ ಪುರುಷರು’ ಎಂದು ವ್ಯಾಖ್ಯಾನಿಸುವ ಜಾಗತಿಕ ಮಾನವ ಪ್ರವೃತ್ತಿಯ ಹಿನ್ನೆಲೆಯಲ್ಲಿ ಸೃಜಿಸಿದ ಪುರಾಣವಾಗಿದೆ. ಅಂದರೆ ಅಂಥ ಸಾಧಕರು ಇರಲೇ ಇಲ್ಲ ಎನ್ನಲಾಗದು. ಏಕೆಂದರೆ ಐತಿಹಾಸಿಕ ಶಿಲಾಸ್ತಂಭಗಳಲ್ಲಿ ಲಿಂಗದಿಂದ ಅವತಾರ ಪುರುಷರು ಉದ್ಭವಿ ಸುವ ಲಿಂಗೋ ದ್ಭವ ಮೂರ್ತಿಗಳು ಭಾರತದ ತುಂಬೆ ಇವೆ

Dr N Someshwara Column: ಹುಳುಗಳನ್ನು ಔಷಧವನ್ನಾಗಿ ಬಳಸಬಹುದೇ ?

ಹುಳುಗಳನ್ನು ಔಷಧವನ್ನಾಗಿ ಬಳಸಬಹುದೇ ?

ಹುಳುಗಳನ್ನು ಔಷಧವನ್ನಾಗಿ ಬಳಸಬಹುದೋ ಇಲ್ಲವೋ ಎನ್ನುವುದರ ಬಗ್ಗೆ ವಿಚಾರ ಮಾಡುವು ದಕ್ಕೆ ಮೊದಲು, ಕೆಲವು ಮೂಲ ಭೂತ ವಿಚಾರಗಳನ್ನು ನಾವು ತಿಳಿದುಕೊಳ್ಳಬೇಕಾಗುತ್ತದೆ. ವಾಸ್ತವ ದಲ್ಲಿ ನಮ್ಮ ದೇಹವೊಂದು ‘ಜ಼ೂ’ ಎನ್ನುವುದು ನಮಗೆ ತಿಳಿದಿಲ್ಲ. ನಾವು ಊಟ ಮಾಡಿದರೆ, ನಾವೊ ಬ್ಬರು ಮಾತ್ರ ಊಟವನ್ನು ಮಾಡುತ್ತಿಲ್ಲ, ನಮ್ಮ ಜತೆಯಲ್ಲಿ ಲಕ್ಷಕೋಟಿ (ಟ್ರಿಲಿಯನ್) ಗಟ್ಟಲೆ ಜೀವಿಗಳೂ ಊಟವನ್ನು ಮಾಡುತ್ತವೆ ಎಂದರೆ, ಅದು ಖಂಡಿತ ಅತಿಶಯೋಕ್ತಿಯಲ್ಲ

Vishweshwar Bhat Column: ಜಪಾನಿನಲ್ಲಿ ಹಿತವಾದ ಆಘಾತಗಳು

ಜಪಾನಿನಲ್ಲಿ ಹಿತವಾದ ಆಘಾತಗಳು

ನೀವು ಯಾವುದೇ ದೇಶಕ್ಕೆ ಹೋದರೂ ನಿಮಗೆ ಸಾಂಸ್ಕೃತಿಕ ಅಥವಾ ಸಾಮಾಜಿಕ ಆಘಾತ ಆಗು ವುದು ಸಹಜ. ಇದನ್ನು ಇಂಗ್ಲಿಷಿನಲ್ಲಿ culture shock ಅಥವಾ social shock ಎಂದು ಕರೆಯುತ್ತಾರೆ. ಅಲ್ಲಿನ ರೀತಿ-ರಿವಾಜು, ಜೀವನ ವಿಧಾನ, ಆಚರಣೆಗಳನ್ನು ನೋಡಿ ನಮಗೆ ವಿಸ್ಮಯ ವಾಗುತ್ತದೆ. ಇದನ್ನು ‘ಹಿತವಾದ ಆಘಾತ’ ಎಂದೂ ಕರೆಯಬಹುದು

Ravi Sajangadde Column: ಇದು ನಂಬಿಕೆಗೆ, ಆಚರಣೆಗೆ ಆದ ಘಾಸಿ

ಇದು ನಂಬಿಕೆಗೆ, ಆಚರಣೆಗೆ ಆದ ಘಾಸಿ

ಸಿಇಟಿ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾರ್ಥಿಗಳ ಜನಿವಾರ ತೆಗೆಸಿದ್ದಕ್ಕೆ ವ್ಯಾಪಕ ವಿರೋಧ ವ್ಯಕ್ತ ವಾಗಿರುವುದರ ಜತೆಯಲ್ಲಿ, ರಾಜ್ಯದ ಹಲವೆಡೆ ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ ಮತ್ತು ರ‍್ಯಾಲಿಗಳೂ ನಡೆದಿವೆ. ವಿದ್ಯಾರ್ಥಿಗಳ ಜನಿವಾರವನ್ನು ತೆಗೆಸಿದ ಅಧಿಕಾರಿಗಳ ನಡೆಗೆ ಸಂಬಂಧಿಸಿ ವ್ಯಕ್ತವಾಗಿರುವ ಅಭಿಪ್ರಾಯಗಳ ಪೈಕಿ ಎರಡನ್ನು ಇಲ್ಲಿ ಸಾದರಪಡಿಸಲಾಗಿದೆ.

Turuvekere Prasad Column: ʼಚಿಂವ್‌ ಚಿಂವ್‌ʼ ಗುಬ್ಬಿಯಿಂದ ದೊಡ್ಡಣ್ಣನ ʼಬೌ ಬೌʼ ಲಾಬಿಯವರೆಗೆ

ʼಚಿಂವ್‌ ಚಿಂವ್‌ʼ ಗುಬ್ಬಿಯಿಂದ ದೊಡ್ಡಣ್ಣನ ʼಬೌ ಬೌʼ ಲಾಬಿಯವರೆಗೆ

ಪ್ರಾಕೃತಿಕ ಸಂಪನ್ಮೂಲವಾಗಿದ್ದ ಕಾಡನ್ನು ಪ್ರವಾಸಿ ಸಂಪನ್ಮೂಲವನ್ನಾಗಿಸಲಾಗಿದೆ. ಮನುಷ್ಯನು ಕಾಡುಗಳನ್ನು ಕಡಿದು ರೆಸಾರ್ಟ್‌ಗಳನ್ನು ನಿರ್ಮಿಸಿ, ಕಾಡುಪ್ರಾಣಿಗಳ ಬದುಕಿನ ಸ್ವಾತಂತ್ರ್ಯವನ್ನು ಕಿತ್ತುಕೊಂಡಿದ್ದಾನೆ. ಈ ಅತಿಕ್ರಮಣದಿಂದಾಗಿ ಕಾಡುಪ್ರಾಣಿಗಳು ದಿಕ್ಕೆಟ್ಟು ನಾಡಿಗೆ ಬಂದು ಸಾಯುತ್ತಿವೆ. ಕಾಡಿನ ಪ್ರಾಕೃತಿಕ ಸೊಬಗು ಮತ್ತು ಕೋಟಿ ಕೋಟಿ ಜೀವವೈವಿಧ್ಯಗಳ ರಕ್ಷಣೆಗಿಂತ, ಬೃಹತ್ ಯೋಜನೆ, ಗಣಿಗಾರಿಕೆ, ಕೈಗಾರಿಕೆಗಳೇ ಮುಖ್ಯವಾಗಿ ಬಿಟ್ಟಿವೆ

Ravi Hunj Column: ರೇಣುಕ-ಬಸವಣ್ಣ, ಐತಿಹಾಸಿಕ- ಪೌರಾಣಿಕ, ಸತ್ಯ-ಮಿಥ್ಯ !

ರೇಣುಕ-ಬಸವಣ್ಣ, ಐತಿಹಾಸಿಕ- ಪೌರಾಣಿಕ, ಸತ್ಯ-ಮಿಥ್ಯ !

ಮೊದಲನೆಯ ಆಯಾಮದಲ್ಲಿ ಬಸವಣ್ಣನ ಪೋಷಕರು, ಹುಟ್ಟು, ಬಾಲ್ಯ, ಯೌವನ, ಉದ್ಯೋಗ, ಹೋರಾಟ, ಛಲ ಮತ್ತು ಅಂತ್ಯದ ಸಮಗ್ರ ಜೀವನ ಚಿತ್ರಣ ಸಿಕ್ಕರೆ ಎರಡನೇ ಆಯಾಮದಲ್ಲಿ ಹೆಚ್ಚಾಗಿ ಬಸವಣ್ಣನ ಆಧ್ಯಾತ್ಮಿಕ ಭಕ್ತಿ, ಸಂಘಟನಾ ಯುಕ್ತಿ, ಸಿಡಿದೇಳುವ ಪ್ರವೃತ್ತಿ ಮತ್ತು ಸಾಮಾಜಿಕ ಕಳಕಳಿಯ ಚಿತ್ರಣ ಸಿಗುತ್ತದೆ

Roopa Gururaj Column: ಶಿಸ್ತಿನ ಜೀವನ ಒಳ್ಳೆಯ ಆರೋಗ್ಯಕ್ಕೆ ಬುನಾದಿ

ಶಿಸ್ತಿನ ಜೀವನ ಒಳ್ಳೆಯ ಆರೋಗ್ಯಕ್ಕೆ ಬುನಾದಿ

ಒಂದು ಶಿಸ್ತಿನ ಜೀವನ, ಕ್ರಮಬದ್ಧವಾದ ಬದುಕು, ಮನೆಯ ಆಹಾರ, ವ್ಯಾಯಾಮ, ಸರಿಯಾದ ಸಮ ಯಕ್ಕೆ ಮಲಗಿ ಬೆಳಗ್ಗೆ ಬೇಗ ಎದ್ದು ದಿನವಿಡೀ ಮನಸು ದೇಹವನ್ನ ಚಟುವಟಿಕೆಯಿಂದ ಇರಿಸಿಕೊಂಡರೆ ನಮಗೆ ಬರುವ ಅರ್ಧ ಕಾಯಿಲೆಗಳು ಬರುವುದೇ ಇಲ್ಲ. ಅನೇಕ ರೋಗಲಕ್ಷಣಗಳು ನಮ್ಮ ಬದುಕಿನ ಶೈಲಿಯಿಂದ ಹುಟ್ಟಿಕೊಂಡವು

Rangaswamy Mookanahalli Column: ಬ್ರಾಂಡ್‌ ಗಳ ಮುಖವಾಡ ಕಳಚುತ್ತಿದೆ ಚೀನಾ !

ಬ್ರಾಂಡ್‌ ಗಳ ಮುಖವಾಡ ಕಳಚುತ್ತಿದೆ ಚೀನಾ !

ಬ್ರಾಂಡೆಡ್ ಎಂದಾಕ್ಷಣ ಅದನ್ನು ಅತ್ಯುತ್ತಮ ಎಂದುಕೊಳ್ಳುವ ನಮ್ಮ ಮಂಕುಬುದ್ಧಿ, ನಮ್ಮ ಭಾವನೆ ಅವರ ಬಂಡವಾಳವಾಗಿದೆ. ಈ ಮಾತನ್ನು ಏಕೆ ಹೇಳುತ್ತಿದ್ದೇನೆ ಎಂದರೆ, ಈ ಟಿ-ಶರ್ಟ್ ತಯಾರಾಗು ವುದು ಚೀನಾದಲ್ಲಿ, ಅದರ ಬೆಲೆ ಹೆಚ್ಚೆಂದರೆ 3 ಯುರೋ ಅಷ್ಟೇ! ಎಲ್ಲಿಯ 3 ಯುರೋ, ಎಲ್ಲಿಯ 110 ಯುರೋ?! ಇದೇ ಮಾತು ಪರ್ಫ್ಯೂಮ್‌ಗಳಿಗೂ ಅನ್ವಯವಾಗುತ್ತದೆ.