ಪವಿತ್ರ ಗಂಡಕೀ ನದಿ ಮತ್ತು ದಿವ್ಯ ಸಾಲಿಗ್ರಾಮಗಳ ಪುರಾಣ ಕಥೆ
ಪರಮ ಪತಿವ್ರತೆಯಾದ ಬೃಂದಾಳ ಪತಿ ಶಂಖಚೂಡ (ಜಲಂಧರ) ಎಂಬ ಅಸುರ. ಆಕೆಯ ಪಾತಿವ್ರತ್ಯದ ಬಲದಿಂದಾಗಿ ಆತನಿಗೆ ಯಾವುದೇ ಮರಣವಿರಲಿಲ್ಲ. ದೇವತೆಗಳ ರಕ್ಷಣೆಗಾಗಿ ಮತ್ತು ಅಧರ್ಮದ ನಾಶಕ್ಕಾಗಿ ಶಂಖಚೂಡನ ಸಂಹಾರ ಮಾಡುವುದು ದೇವತೆಗಳಿಗೆ ಅನಿವಾರ್ಯವಾಗಿತ್ತು. ಇದಕ್ಕಾಗಿ ಮಹಾವಿಷ್ಣುವು ಶಂಖಚೂಡನ ರೂಪವನ್ನು ಧರಿಸಿ ಬೃಂದಾಳ ಅರಮನೆಗೆ ಬರಬೇಕಾಯಿತು.