ಖರ್ಗೆಗೆ ಅಪಮಾನ: ಅಸ್ಪ್ರಶ್ಯತೆಯ ಕರಾಳ ನೆರಳು
ಜಾತಿಯೆಂಬುದು ಕೇವಲ ಶ್ರಮ ವಿಭಜನೆಯಲ್ಲ, ಅದು ಶ್ರಮಿಕರ ವಿಭಜನೆ ಎಂದೂ, ರಾಜಕೀಯ ಸುಧಾರಣೆಗಿಂತ ಮೊದಲು ಜಾತಿಯೆಂಬ ದೈತ್ಯನನ್ನು ಸಂಹರಿಸಬೇಕೆಂದೂ ಅಂಬೇಡ್ಕರ್ ಪದೇಪದೆ ಒತ್ತಿಹೇಳಿದ್ದರು. ಹಲ್ದ್ವಾನಿಯ ಘಟನೆ, ಆ ದೈತ್ಯ ಇನ್ನೂ ಸತ್ತಿಲ್ಲ ಎಂಬುದನ್ನು ನೋವಿನಿಂದ ನೆನಪಿಸು ತ್ತದೆ. ಮಹಾತ್ಮ ಗಾಂಧೀಜಿಯವರು ಅಸ್ಪೃಶ್ಯತೆಯನ್ನು ಹಿಂದೂ ಧರ್ಮದ ಮೇಲಿನ ಕಳಂಕವೆಂದೇ ಪರಿಗಣಿಸಿದ್ದರು. ಅದನ್ನು ದೇವರು ಮತ್ತು ಮಾನವೀಯತೆಯ ವಿರುದ್ಧದ ಪಾಪ ಎಂದು ಬಣ್ಣಿಸಿ, ಹರಿಜನೋದ್ಧಾರವನ್ನು ತಮ್ಮ ಜೀವಮಾನದ ಸಂಕಲ್ಪವನ್ನಾಗಿಸಿಕೊಂಡಿದ್ದರು