ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅಂಕಣಗಳು

Roopa Gururaj Column: ಪವಿತ್ರ ಗಂಡಕೀ ನದಿ ಮತ್ತು ದಿವ್ಯ ಸಾಲಿಗ್ರಾಮಗಳ ಪುರಾಣ ಕಥೆ

ಪವಿತ್ರ ಗಂಡಕೀ ನದಿ ಮತ್ತು ದಿವ್ಯ ಸಾಲಿಗ್ರಾಮಗಳ ಪುರಾಣ ಕಥೆ

ಪರಮ ಪತಿವ್ರತೆಯಾದ ಬೃಂದಾಳ ಪತಿ ಶಂಖಚೂಡ (ಜಲಂಧರ) ಎಂಬ ಅಸುರ. ಆಕೆಯ ಪಾತಿವ್ರತ್ಯದ ಬಲದಿಂದಾಗಿ ಆತನಿಗೆ ಯಾವುದೇ ಮರಣವಿರಲಿಲ್ಲ. ದೇವತೆಗಳ ರಕ್ಷಣೆಗಾಗಿ ಮತ್ತು ಅಧರ್ಮದ ನಾಶಕ್ಕಾಗಿ ಶಂಖಚೂಡನ ಸಂಹಾರ ಮಾಡುವುದು ದೇವತೆಗಳಿಗೆ ಅನಿವಾರ್ಯವಾಗಿತ್ತು. ಇದಕ್ಕಾಗಿ ಮಹಾವಿಷ್ಣುವು ಶಂಖಚೂಡನ ರೂಪವನ್ನು ಧರಿಸಿ ಬೃಂದಾಳ ಅರಮನೆಗೆ ಬರಬೇಕಾಯಿತು.

Leena Joshi Column: ಭಾರತದ ರೈಲ್ವೆ ಯುದ್ಧ ಕಾಲದಲ್ಲಿ ಎಷ್ಟು ಸುರಕ್ಷಿತ ?

ಭಾರತದ ರೈಲ್ವೆ ಯುದ್ಧ ಕಾಲದಲ್ಲಿ ಎಷ್ಟು ಸುರಕ್ಷಿತ ?

ಭಾರತದಲ್ಲಿ ಡೀಸೆಲ್ ದುಬಾರಿ, ವಿದ್ಯುತ್ ಅಗ್ಗ ಎಂಬ ವಾದವನ್ನು ನಾವು ಆಗಾಗ ಕೇಳು ತ್ತೇವೆ. ಆದರೆ ಒಂದು ಮೂಲಭೂತ ಪ್ರಶ್ನೆಯನ್ನು ವಿರಳವಾಗಿ ಮಾತ್ರ ಕೇಳಲಾಗುತ್ತದೆ. ಭಾರತೀಯ ರೈಲ್ವೆಗೆ ವಿದ್ಯುತ್ ಯಾವ ದರದಲ್ಲಿ ಸಿಗುತ್ತಿದೆ? ಸಾಮಾನ್ಯ ಕೈಗಾರಿಕೆಗಳು ಪಾವತಿಸುವ ದರದ? ಅಥವಾ ಸರಕಾರದ ವಿಶೇಷ ರಿಯಾಯಿತಿ ದರದ? ಒಂದು ವೇಳೆ ರೈಲ್ವೆಗೆ ಕಡಿಮೆ ದರದಲ್ಲಿ ವಿದ್ಯುತ್ ಒದಗಿಸಲಾಗುತ್ತಿದ್ದರೆ, ಅದು ನಿಜವಾದ ವೆಚ್ಚವಲ್ಲ. ಅದು ತೆರಿಗೆದಾರರ ಹಣದಿಂದ ನೀಡಲಾಗುತ್ತಿರುವ ಪರೋಕ್ಷ ಸಹಾಯಧನ.

Mohan Vishwa Column: ಬ್ರಿಟನ್‌ ಪ್ರಧಾನಿಗಳ ರಾಜೀನಾಮೆ ಸರಮಾಲೆ

ಬ್ರಿಟನ್‌ ಪ್ರಧಾನಿಗಳ ರಾಜೀನಾಮೆ ಸರಮಾಲೆ

ಒಂದು ಕಾಲದಲ್ಲಿ ವಿಶ್ವದ ಅತ್ಯಂತ ಸ್ಥಿರ ಸಂಸದೀಯ ಪ್ರಜಾಪ್ರಭುತ್ವಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದ್ದ ಬ್ರಿಟನ್ ಇಂದು ರಾಜಕೀಯ ಅನಿಶ್ಚಿತತೆ, ನಾಯಕತ್ವದ ಬಿಕ್ಕಟ್ಟುಗಳು ಹಾಗೂ ಜನರ ನಿರಾಶೆಯ ಸಂಕೇತವಾಗಿ ಮಾರ್ಪಟ್ಟಿದೆ. ಈ ಅಸ್ಥಿರತೆಯ ಬೇರುಗಳನ್ನು 2016ರ ಬ್ರೆಕ್ಸಿಟ್‌ ಜನಮತ ಸಂಗ್ರಹದಲ್ಲಿ ಕಾಣಬಹುದು.

Vishweshwar Bhat Column: ಒಂದು ಸಣ್ಣ ಲೆಕ್ಕಾಚಾರ

Vishweshwar Bhat Column: ಒಂದು ಸಣ್ಣ ಲೆಕ್ಕಾಚಾರ

ನೀವು ಪರಿಸರದ ಬಗ್ಗೆ ಅತ್ಯಂತ ಕಾಳಜಿ ಉಳ್ಳವರಾಗಿದ್ದರೆ, ಯಾವುದೇ ಚಿತ್ರ ಅಥವಾ ಇ-ಕಾರ್ಡ್ ಲಗತ್ತಿಸದೆ (Attachment) ಕೇವಲ ಇಮೇಲ್‌ನಲ್ಲಿ ‘Happy Birthday’ ಎಂದು ಟೈಪ್ ಮಾಡಿ ಕಳುಹಿಸಿದರೆ, ಅದರ ಇಂಗಾಲದ ಹೆಜ್ಜೆಗುರುತು ಕೇವಲ 4 ಗ್ರಾಂ ಮಾತ್ರ! ಇದಕ್ಕಿಂತಲೂ ಅತ್ಯುತ್ತಮ ಮತ್ತು ಕನಿಷ್ಠ ಮಾಲಿನ್ಯದ ದಾರಿ ಎಂದರೆ ಮೊಬೈಲ್ ಮೂಲಕ ಕಳುಹಿಸುವ ಸಾಮಾನ್ಯ ಟೆಕ್ಸ್ಟ್ ಮೆಸೇಜ್ (SMS).

K V Chandramauli Column: ಕಾವೇರಿ ಸಂಕಟಕ್ಕೆ ಸಂಕಷ್ಟ ಸೂತ್ರವೇ ಮದ್ದು

ಕಾವೇರಿ ಸಂಕಟಕ್ಕೆ ಸಂಕಷ್ಟ ಸೂತ್ರವೇ ಮದ್ದು

ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಕರ್ನಾಟಕದ ಕಾವೇರಿ ಜಲಾನಯನ ಪ್ರದೇಶ ದಲ್ಲಿ ಮುಂಗಾರು ಮಳೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಚುರುಕುಗೊಂಡಿಲ್ಲ. ಪರಿಣಾಮವಾಗಿ ಕೃಷ್ಣರಾಜಸಾಗರ (ಕೆಆರ್‌ಎಸ್), ಕಬಿನಿ, ಹೇಮಾವತಿ ಮತ್ತು ಹಾರಂಗಿ ಜಲಾಶಯಗಳಿಗೆ ನಿರೀಕ್ಷಿತ ಪ್ರಮಾಣದ ನೀರು ಹರಿದು ಬಂದಿಲ್ಲ. ಈ ಹಿನ್ನೆಲೆಯಲ್ಲಿ ಲಭ್ಯವಿರುವ ನೀರು ಕುಡಿಯುವ ಉದ್ದೇಶಕ್ಕೆ ಮಾತ್ರ ಸಾಕಾಗುವಷ್ಟು ಇದೆ ಎಂದು ಕರ್ನಾಟಕ ವಾದಿಸಿದೆ.

Vishweshwar Bhat Column: ಯಾರ ಕೈಗೂ ಸಿಗದ ಜಾರ್ಜ್

Vishweshwar Bhat Column: ಯಾರ ಕೈಗೂ ಸಿಗದ ಜಾರ್ಜ್

ಆ ದಿನಗಳಲ್ಲಿ ಜಾರ್ಜ್ ಅವರು ರಹಸ್ಯವಾಗಿ ಬೆಂಗಳೂರಿಗೆ ಬಂದಾಗ ಭೇಟಿ ನೀಡಿದ ಪ್ರಮುಖ ಜಾಗಗಳಲ್ಲಿ ‘ಸಂಯುಕ್ತ ಕರ್ನಾಟಕ’ ಪತ್ರಿಕಾ ಕಚೇರಿಯೂ ಒಂದು. ಅಂದು ಕರ್ನಾಟಕದಲ್ಲಿ ದೇವರಾಜ ಅರಸು ಕಾಂಗ್ರೆಸ್ ಸರಕಾರವಿತ್ತು. ಆ ಸರಕಾರದಲ್ಲಿ ಅತ್ಯಂತ ಪ್ರಭಾವಿ ಮತ್ತು ದಕ್ಷ ಸಚಿವರಾಗಿದ್ದವರು ಎಂ.ವೈ.ಘೋರ್ಪಡೆ. ಅವರು ಸಂಡೂರಿನ ರಾಜಮನೆತನಕ್ಕೆ ಸೇರಿದವ ರಾಗಿದ್ದು, ಅತ್ಯುತ್ತಮ ಅರ್ಥಶಾಸ್ತ್ರಜ್ಞರಾಗಿದ್ದರು ಹಾಗೂ ‘ಸಂಯುಕ್ತ ಕರ್ನಾಟಕ’ ಪತ್ರಿಕೆಯನ್ನು ಮುನ್ನಡೆಸುತ್ತಿದ್ದ ಲೋಕಶಿಕ್ಷಣ ಟ್ರಸ್ಟ್‌ʼನ ಮುಖ್ಯಸ್ಥರೂ ಆಗಿದ್ದರು

Basavaraj Kannale Column: ಸುಸ್ಥಿರ ಅಭಿವೃದ್ದಿಯ ದೂರದರ್ಶಿ ನಾಯಕ ಕೆಂಪೇಗೌಡ

ಸುಸ್ಥಿರ ಅಭಿವೃದ್ದಿಯ ದೂರದರ್ಶಿ ನಾಯಕ ಕೆಂಪೇಗೌಡ

ಇಂದು ಬೆಂಗಳೂರು ವಿಶ್ವದ ಪ್ರಮುಖ ತಂತ್ರಜ್ಞಾನ ನಗರಗಳಲ್ಲಿ ಒಂದಾಗಿ ಗುರುತಿಸಿಕೂಂಡಿದೆ. ಜಾಗತೀಕರಣ, ಮಾಹಿತಿ ತಂತ್ರಜ್ಞಾನ, ಶಿಕ್ಷಣ, ವೈದ್ಯಕೀಯ ಮತ್ತು ಸಂಶೋ ಧನಾ ಕ್ಷೇತ್ರಗಳಲ್ಲಿ ಬೆಂಗಳೂರು ಸಾಧಿಸಿರುವ ಅಸಾಧಾರಣ ಪ್ರಗತಿಯ ಹಿಂದೆ ನಾಲ್ಕು ಶತಮಾನಗಳ ಹಿಂದೆ ಕೆಂಪೇಗೌಡರು ಹಾಕಿದ ದೂರದರ್ಶಿತ್ವದ ಅಡಿಪಾಯ ಅಡಗಿದೆ.

Shashidhara Halady Column: ಒಂದೇ ಓಟೆಯಿಂದ ಹಲವು ಮೊಳಕೆಗಳು ಸಾಧ್ಯವೇ?

ಒಂದೇ ಓಟೆಯಿಂದ ಹಲವು ಮೊಳಕೆಗಳು ಸಾಧ್ಯವೇ?

ಪ್ರತಿವರ್ಷ ಮಳೆಗಾಲ ಬಂದಾಕ್ಷಣ ನಮ್ಮ ಹಳ್ಳಿಯಲ್ಲಿ ತೆರೆದುಕೊಳ್ಳುತ್ತಿದ್ದ ಒಂದು ಪ್ರಪಂಚ ವಿದೆ; ನಿಜ, ‘ಪ್ರಪಂಚ’! ಮಳೆ ಬಿದ್ದು ಒಂದು ತಿಂಗಳಲ್ಲಿ ಬದಲಾಗುವ ನಮ್ಮೂರಿನ ಪರಿಸರವು ಬೇರೆಯದೇ ಲೋಕವನ್ನು ನೆನಪಿಸಬಲ್ಲದು. ಮಲೆನಾಡು ಮತ್ತು ಕರಾವಳಿಯಲ್ಲಿ ಕೆಲವು ಕಾಲವಾದರೂ ವಾಸಿಸಿದ್ದವರಿಗೆ ಗೊತ್ತು, ಅಲ್ಲಿ ಹೇಗೆ ಧಬಧಬ ಮಳೆ ಸುರಿಯುತ್ತದೆ ಎಂದು

Shishir Hegde Column: ತಲೆಯೊಳಗೆ ಇನ್ನೊಬ್ಬಳಿದ್ದಾಳೆ, ಹೆಸರು ಸಾಕ್ಷಿ !

ತಲೆಯೊಳಗೆ ಇನ್ನೊಬ್ಬಳಿದ್ದಾಳೆ, ಹೆಸರು ಸಾಕ್ಷಿ !

ಕಳೆದೆರಡು ವಾರ ನಮ್ಮ ತಲೆಯೊಳಗಿನ ಇಬ್ಬರು ಖಾಯಂ ನಿವಾಸಿಗಳ ಪರಿಚಯ ಮಾಡಿ ಕೊಂಡಿದ್ದೇವಲ್ಲ - ಒಬ್ಬ ಹಳೆಯದನ್ನು ತನಗೆ ಬೇಕಾದಂತೆ ತಿರುಚುವ ವಿಚಿತ್ರ ಇತಿಹಾಸಕಾರ, ಇನ್ನೊಬ್ಬ ಅಸಾಮಿ ಮುಂದಿನದನ್ನು ಬೇಕಾಬಿಟ್ಟಿ ಊಹಿಸುವ ಜ್ಯೋತಿಷಿ. ಹೌದು, ಇವರಿಬ್ಬರ ಬಾಯಿ ಒಂದು ಕ್ಷಣವೂ ನಿಲ್ಲುವುದಿಲ್ಲ. ಇಡೀ ಬದುಕನ್ನು ನಾವು ಇವರಿಬ್ಬರ ಗಲಾಟೆಯ ನಡುವೆಯೇ ಕಳೆಯುತ್ತೇವೆ. ಇವರಿಬ್ಬರು ಆಡಿಸಿದಂತೆ ಆಡುತ್ತೇವೆ. ಗೊತ್ತಿಲ್ಲದೆ ತಾಳ ತಪ್ಪುತ್ತೇವೆ.

Roopa Gururaj Column: ಈಶ್ವರನ ಕೃಪೆಗೆ ಪಾತ್ರರಾದ ಶಿವಗಣಗಳ‌ ಮಹತ್ವ

ಈಶ್ವರನ ಕೃಪೆಗೆ ಪಾತ್ರರಾದ ಶಿವಗಣಗಳ‌ ಮಹತ್ವ

'ಗಣ' ಎಂದರೆ ದೇವಸೇನೆ ಅಥವಾ ದೈವಿಕ ಶಕ್ತಿಗಳ ಗುಂಪು. ಪುರಾಣಗಳ ಪ್ರಕಾರ, ಈ ಗಣಗಳು ಸೃಷ್ಟಿಯ ಆದಿಯಲ್ಲಿ ಶಿವನ ವಿಭಿನ್ನ ಶಕ್ತಿಗಳಿಂದ ಮತ್ತು ಅವನ ದಿವ್ಯ ಸಂಕಲ್ಪದಿಂದ ಜನಿಸಿದವು. ಇತರ ದೇವತೆ ಗಳು ದೇವಲೋಕದಲ್ಲಿ ಯಕ್ಷ-ಗಂಧರ್ವರೊಂದಿಗೆ ವಾಸಿಸಿದರೆ, ಬ್ರಹ್ಮಾಂಡದ ಲಯಕಾರಕನಾದ ಶಿವನು ಮಾತ್ರ ಸ್ಮಶಾನವಾಸಿ, ನಿಶಾಚರ ಹಾಗೂ ಸಮಾಜದಿಂದ ಅಪವಿತ್ರರೆಂದು ಪರಿಗಣಿಸಲ್ಪಟ್ಟ ಭೂತ, ಪ್ರೇತ, ಪಿಶಾಚಿ, ಬೇತಾಳ ಮತ್ತು ಬ್ರಹ್ಮರಾಕ್ಷಸರನ್ನು ತನ್ನ ಗಣಗಳನ್ನಾಗಿ ಸ್ವೀಕರಿಸಿದ್ದಾನೆ

Keshava Prasad B Column: ಬೆಂಗಳೂರಿನಲ್ಲಿ ಟೆಕ್ಕಿ ಸಂಬಳಕ್ಕೆ ಸಮಾನವಾಗಿ ಗಳಿಸಬಲ್ಲ ಪ್ಲಂಬರ್!

ಬೆಂಗಳೂರಿನಲ್ಲಿ ಟೆಕ್ಕಿ ಸಂಬಳಕ್ಕೆ ಸಮಾನವಾಗಿ ಗಳಿಸಬಲ್ಲ ಪ್ಲಂಬರ್!

ಬೆಂಗಳೂರಿನಲ್ಲಿ ಒಬ್ಬ ಸಾಫ್ಟ್‌ವೇರ್ ಇಂಜಿನಿಯರ್ ತನ್ನ ಆರಂಭಿಕ ಘಟ್ಟದಲ್ಲಿ ವರ್ಷಕ್ಕೆ ಸರಾಸರಿ 4 ಲಕ್ಷದಿಂದ 7 ಲಕ್ಷ (ಅಂದರೆ ತಿಂಗಳಿಗೆ ಸುಮಾರು 35,000 ದಿಂದ 60,000 ರುಪಾಯಿ) ಗಳಿಸಿದರೆ, ಕಠಿಣ ಪರಿಶ್ರಮ ಮತ್ತು ವ್ಯಾಪಾರ ಚಾತುರ್ಯ ಇರುವ ಒಬ್ಬ ಎಲೆಕ್ಟ್ರೀಶಿಯನ್, ಪ್ಲಂಬರ್ ಅಥವಾ ಪಕೋಡಾ ಮಾರಾಟಗಾರರು ಇಷ್ಟೇ ಅಥವಾ ಇದಕ್ಕಿಂತಲೂ ಹೆಚ್ಚು ಗಳಿಸಬಲ್ಲರು

Vishweshwar Bhat Column: ಸೋರೆನ್ ಮತ್ತು ಪದ್ಮಭೂಷಣ

ಸೋರೆನ್ ಮತ್ತು ಪದ್ಮಭೂಷಣ

ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ‘ನೋಟಿಗಾಗಿ ಮತ’ (Vote for Cash) ಹಗರಣ ವ್ಯವಸ್ಥೆಯ ನೈತಿಕತೆಯನ್ನು ಹಲವು ಬಾರಿ ಪ್ರಶ್ನಿಸಿವೆ. 1993ರಲ್ಲಿ ಪಿ.ವಿ.ನರಸಿಂಹರಾವ್ ನೇತೃತ್ವದ ಕಾಂಗ್ರೆಸ್ ಸರಕಾರವನ್ನು ಉಳಿಸಲು ನಡೆದ ಲಂಚ ಪ್ರಕರಣ ಅತ್ಯಂತ ಮುಖ್ಯವಾದದ್ದು. ಈ ಪ್ರಕರಣದ ಮುಖ್ಯ ರೂವಾರಿಗಳಲ್ಲಿ ಒಬ್ಬರಾಗಿದ್ದವರು ಜಾರ್ಖಂಡ್‌ನ ಪ್ರಭಾವಿ ನಾಯಕ ಶಿಬು ಸೋರೆನ್.

Gururaj Gantihole Column: ಕರ್ನಾಟಕದ ಆರೋಗ್ಯ ಇಲಾಖೆಯ ರೋಗಗ್ರಸ್ತ ಆಂತರ್ಯ

ಕರ್ನಾಟಕದ ಆರೋಗ್ಯ ಇಲಾಖೆಯ ರೋಗಗ್ರಸ್ತ ಆಂತರ್ಯ

ಆಸ್ಪತ್ರೆಗಳಲ್ಲಿ ದಿನನಿತ್ಯದ ತುರ್ತು ಚಿಕಿತ್ಸೆಗೆ ಅತ್ಯಗತ್ಯವಾಗಿರುವ ಔಷಧಗಳು ಮತ್ತು ಮೂಲಭೂತ ವೈದ್ಯಕೀಯ ಪರಿಕರಗಳ ತೀವ್ರ ಅಭಾವಕ್ಕೆ ಇಲಾಖೆಯೊಳಗಿನ ಆಡಳಿತಾತ್ಮಕ ಮಂದಗತಿಯೇ ಮುನ್ನುಡಿ ಬರೆದಿದೆ. ಔಷಧಗಳ ದಾಸ್ತಾನು ಸಂಪೂರ್ಣವಾಗಿ ಖಾಲಿಯಾಗುವ ಮುನ್ನವೇ ಮುನ್ನೆಚ್ಚರಿಕೆ ಯಿಂದ ಕೈಗೊಳ್ಳಬೇಕಾದ ಟೆಂಡರ್ ಪ್ರಕ್ರಿಯೆಗಳು ತಿಂಗಳುಗಟ್ಟಲೆ ಕೆಂಪು ಪಟ್ಟಿಯ ಸಿಲುಕಿ ನನೆಗುದಿಗೆ ಬೀಳುತ್ತಿವೆ.

Harish Kera Column: ಮುದ್ದು ಪರ್ವತ ಪಿಶಾಚಿಗಳು ಕರೆಯುತ್ತಿವೆ!

Harish Kera Column: ಮುದ್ದು ಪರ್ವತ ಪಿಶಾಚಿಗಳು ಕರೆಯುತ್ತಿವೆ!

‘ರಾತ್ರಿಯಾದರೆ ಇಲ್ಲೆಲ್ಲ ಹಿಮಚಿರತೆ ಓಡಾಡುತ್ತೆ ಸರ್’ ಎಂದು ಗೈಡ್ ತಶಿ ಹೇಳಿದ. ಅವನು ಹೇಳಿದ್ದು ನಿಜ ಎಂಬಂತೆ ಊರಿನ ರೈತರ ಮನೆಯ ಹಿಂಬದಿಯ ಹಸಿ ಮಣ್ಣಿನಲ್ಲಿ ಬಿದ್ದ ಹೆಜ್ಜೆ ಗುರುತುಗಳನ್ನು ತೋರಿಸಿದ. ರೈತರು ದನ, ಯಾಕ್, ಆಡು ಸಾಕಿದ್ದರು. ಅವುಗಳನ್ನು ತಿನ್ನಲು ಹಿಮಚಿರತೆ ದನದ ಕೊಟ್ಟಿಗೆಯ ಕಡೆಗೆ ರಾತ್ರಿ ಬಿಜಯಂಗೈಯುತ್ತಿತ್ತು

Roopa Gururaj Column: ಹರಿಭಕ್ತಿಸಾರ 8: ನಿಂದನೆಯನ್ನು ಸಾಧನೆಯ ಮೆಟ್ಟಿಲಾಗಿಸುವ ಪರಿ

ಹರಿಭಕ್ತಿಸಾರ 8: ನಿಂದನೆಯನ್ನು ಸಾಧನೆಯ ಮೆಟ್ಟಿಲಾಗಿಸುವ ಪರಿ

ಯಾರು ನಮ್ಮನ್ನು ಸದಾ ನಿಂದಿಸುತ್ತಾರೋ, ಅವರು ನಮ್ಮಲ್ಲಿ ವೈರಾಗ್ಯದ ಭಾವನೆಯನ್ನು ತಾನಾಗಿಯೇ ಮೂಡಿಸುತ್ತಾರೆ. ಈ ಜಗತ್ತಿನ ಕೃತಕ ಸನ್ಮಾನಗಳ ಬೆನ್ನೇರಿ ಹೋಗುವುದು ವ್ಯರ್ಥ ಎಂಬ ಸತ್ಯವನ್ನು ನಿಂದಕರು ನಮಗೆ ನೆನಪಿಸುತ್ತಿರುತ್ತಾರೆ. ಆದ್ದರಿಂದಲೇ ಕನಕದಾಸರು ನಿಂದಕರನ್ನು "ನಮ್ಮವರು ನಿಂದಕರು" ಮತ್ತು "ವೈದಿಕರು" (ಜ್ಞಾನ ಮಾರ್ಗದರ್ಶಕರು) ಎಂದು ಕರೆಯುತ್ತಾರೆ.

Vishweshwar Bhat Column: ಫೇಸ್‌ಬುಕ್ ಕಮೆಂಟ್ ಬಾಕ್ಸ್‌ನಲ್ಲಿ ಕಾಲೆತ್ತುವ ಮಂದಿ!

ಫೇಸ್‌ಬುಕ್ ಕಮೆಂಟ್ ಬಾಕ್ಸ್‌ನಲ್ಲಿ ಕಾಲೆತ್ತುವ ಮಂದಿ!

ಒಬ್ಬ ಪತ್ರಕರ್ತ ಅಥವಾ ಸಾರ್ವಜನಿಕ ವ್ಯಕ್ತಿ ಮುಖ್ಯಮಂತ್ರಿಯಂತಹ ಅತ್ಯುನ್ನತ ಸ್ಥಾನದಲ್ಲಿರು ವವರನ್ನು ಭೇಟಿಯಾದಾಗ, ಅದರ ಹಿಂದೆ ಕೇವಲ ‘ವ್ಯಕ್ತಿಗತ ಭೇಟಿ’ಯ ಆಯಾಮವಷ್ಟೇ ಇರುವುದಿಲ್ಲ. ಪ್ರಜಾಪ್ರಭುತ್ವದ ಸುದೀರ್ಘ ಪರಂಪರೆಯಲ್ಲಿ, ಹೊಸದಾಗಿ ಅಧಿಕಾರ ವಹಿಸಿಕೊಂಡ ಜನಪ್ರತಿನಿಧಿಯನ್ನು ಗೌರವಿಸುವುದು, ಅಭಿನಂದಿಸುವುದು ಮತ್ತು ಶುಭಕೋರುವುದು ಕನಿಷ್ಠ ಸಾಂಸ್ಥಿಕ ಸೌಜನ್ಯ ಹಾಗೂ ರಾಜತಾಂತ್ರಿಕ ಶಿಷ್ಟಾಚಾರದ ಭಾಗವಾಗಿರುತ್ತದೆ.

Dr N Someshwara Column: ಬ್ರಿಟಿಷ್‌ ಸಾಮ್ರಾಜ್ಯ ವಿಸ್ತರಣೆಗೆ ಕಾರಣವಾದ ಲಿಂಬೆ !

ಬ್ರಿಟಿಷ್‌ ಸಾಮ್ರಾಜ್ಯ ವಿಸ್ತರಣೆಗೆ ಕಾರಣವಾದ ಲಿಂಬೆ !

ಸ್ಕರ್ವಿಯ ಅತ್ಯಂತ ಕುಪ್ರಸಿದ್ಧ ಲಕ್ಷಣಗಳು ಮೊದಲು ನಾವಿಕರ ಬಾಯಿಯಲ್ಲಿ ಕಂಡವು. ಹಲ್ಲು ಗಳನ್ನು ಹಿಡಿದಿಟ್ಟುಕೊಂಡಿರುವ ದವಡೆಮೂಳೆ ಊದಿಕೊಂಡವು, ರಕ್ತ ಸ್ರಾವವಾಗಲಾರಂಭಿಸಿದವು, ಬಾಯಿ ಯಿಂದ ದುರ್ವಾಸನೆಯು ಬಂದು, ಹಲ್ಲುಗಳು ಸಡಿಲವಾಗಿ, ಒಂದೊಂದಾಗಿ ಉದುರಿ ಹೋಗಿ ಬೊಚ್ಚ ಬಾಯಿಯು ಉಂಟಾಯಿತು.

Dr D C Nanjunda Column: ಇಂದಿಗೂ ಸಲ್ಲುವ ಡಾ.ಅಂಬೇಡ್ಕರ್‌ ಸಂಶೋಧನೆ

ಇಂದಿಗೂ ಸಲ್ಲುವ ಡಾ.ಅಂಬೇಡ್ಕರ್‌ ಸಂಶೋಧನೆ

ಪ್ರಾಂತ್ಯೀಯ ಹಣಕಾಸಿನ ಹಂಚಿಕೆ, ಕೇಂದ್ರ ಮತ್ತು ರಾಜ್ಯಗಳ ನಡುವೆ ಅಧಿಕಾರದ ಅಸಮ ತೋಲನ, ಹಾಗೂ ಆಡಳಿತದ ಅಸಮರ್ಥತೆಗಳನ್ನು ಅವರು ವೈಜ್ಞಾನಿಕವಾಗಿ ವಿಶ್ಲೇಷಿಸಿದ್ದರು. ಈ ಪ್ರಬಂಧದಲ್ಲಿ ಅಂಬೇಡ್ಕರ್ ಅವರು ಪ್ರಾರಂಭದಲ್ಲಿ ಅಂದಿನ ಭಾರತದಲ್ಲಿ ಹಣಕಾಸು ವ್ಯವಸ್ಥೆ ಸಂಪೂರ್ಣವಾಗಿ ಕೇಂದ್ರದ ನಿಯಂತ್ರಣದಲ್ಲಿದ್ದುದನ್ನು ವಿವರಿಸುತ್ತಾರೆ.

Janamejaya Umarji Column: ಕಾಗಜ್ ನಹೀ ದಿಖಾಯೇಂಗೆ  ಮತ್ತು ದಾಖಲೆ ತೋರಿಸಿ ದ್ವಂದ್ವ

ಕಾಗಜ್ ನಹೀ ದಿಖಾಯೇಂಗೆ ಮತ್ತು ದಾಖಲೆ ತೋರಿಸಿ ದ್ವಂದ್ವ

ಸಂಘಟನೆ ರಚಿಸುವ ಹಕ್ಕಿನ ಬಗ್ಗೆ ಸುಪ್ರೀಂ ಕೋರ್ಟ್ ಹಲವಾರು ಬಾರಿ ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಿದೆ. ದಮಯಂತಿ ನಾರಂಗ ವರ್ಸಸ್ ಯೂನಿಯನ್ ಆಫ್‌ ಇಂಡಿಯಾ (1971) ಪ್ರಕರಣದಲ್ಲಿ ಸುಪ್ರೀಂ ಕೋಟ, ಸಂಘಟನೆ ರಚಿಸುವ ಹಕ್ಕು ಮಾತ್ರವಲ್ಲ, ಅದರ ಸ್ವರೂಪವನ್ನು ಉಳಿಸಿಕೊಳ್ಳುವ ಹಕ್ಕೂ ಸದಸ್ಯರಿಗೆ ಸೇರಿದೆ ಎಂದು ತೀರ್ಪು ನೀಡಿದೆ.

Lokesh Kayarga Column: ಸರಕಾರ ನಡೆಸಲು ಶಾಸಕರು, ಸಂಸದರೂ ಬೇಕಾಗಿಲ್ಲ, ಬಿಡಿ!

ಸರಕಾರ ನಡೆಸಲು ಶಾಸಕರು, ಸಂಸದರೂ ಬೇಕಾಗಿಲ್ಲ, ಬಿಡಿ!

ನಮ್ಮ ಸಂವಿಧಾನದ 243-ಇ ಮತ್ತು 243-ಯು ವಿಧಿಗಳ ಪ್ರಕಾರ, ಸ್ಥಳೀಯ ಸಂಸ್ಥೆಗಳ (ಪಂಚಾಯತ್ ಮತ್ತು ಪೌರಾಡಳಿತ) ಅಧಿಕಾರಾವಧಿ ಮುಗಿಯುವುದಕ್ಕೆ ಕನಿಷ್ಠ ಆರು ತಿಂಗಳ ಮುಂಚಿತವಾಗಿಯೇ ಮುಂದಿನ ಚುನಾವಣೆಗೆ ಸಿದ್ಧತೆ ನಡೆಸಿ, ಅವಧಿ ಮುಗಿಯುತ್ತಿದ್ದಂತೆ ಹೊಸ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬರುವಂತೆ ನೋಡಿಕೊಳ್ಳಬೇಕಿರುವುದು ಸರಕಾರದ ಸಾಂವಿಧಾನಿಕ ಜವಾಬ್ದಾರಿ. ಆದರೆ ಕರ್ನಾಟಕದ ಇಂದಿನ ಚಿತ್ರಣವೇ ಬೇರೆ.

Roopa Gururaj Column: ಹರಿಭಕ್ತಿಸಾರ: ಲೋಕದ ನಿಂದನೆಗೆ ಕುಗ್ಗದ ಕನಕರ ಅಪರಿಮಿತ ಭಕ್ತಿ

ಹರಿಭಕ್ತಿಸಾರ: ಲೋಕದ ನಿಂದನೆಗೆ ಕುಗ್ಗದ ಕನಕರ ಅಪರಿಮಿತ ಭಕ್ತಿ

ಕಾಗಿನೆಲೆಯಲ್ಲಿ ಆದಿಕೇಶವನ ಮೂರ್ತಿಯೇ ಭಕ್ತನಿಗಾಗಿ ನಡೆದು ಬಂದಾಗ, ಅಲ್ಲಿ ನೆರೆದಿದ್ದ ಇಡೀ ಜನಸಮೂಹ ಮೂಕವಿಸ್ಮಿತರಾಗಿ ನಿಂತರು. ಜಾತಿ ಮತ್ತು ಬಾಹ್ಯ ಆಚರಣೆಗಳನ್ನೇ ಧರ್ಮವೆಂದು ನಂಬಿದ್ದ ಅಹಂಕಾರಿಗಳ ಕಣ್ಣುಗಳು ಅಂದು ತೆರೆದವು. ದಾಸರನ್ನು ನಿಂದಿಸಿದವರೆಲ್ಲಾ ತಾವೇ ಮೈಲಿಗೆ ಯ ಮನಸ್ಸಿನವರೆಂಬುದನ್ನು ಅರಿತು ಅವರ ಕಾಲಿಗೆ ಬಿದ್ದರು.

Vishweshwar Bhat Column: ಖಾದ್ರಿ ಕಪ್ರ ಎಡಿಟರ್‌ ಆಗಿದ್ದು ಹೇಗೆ ?

Vishweshwar Bhat Column: ಖಾದ್ರಿ ಕಪ್ರ ಎಡಿಟರ್‌ ಆಗಿದ್ದು ಹೇಗೆ ?

ಖ್ಯಾತ ಪತ್ರಕರ್ತ ಖಾದ್ರಿ ಶಾಮಣ್ಣ ಅವರು ‘ಕನ್ನಡ ಪ್ರಭ’ ಸಂಪಾದಕರಾಗಿದ್ದು ಹೇಗೆ? ಈ ಪ್ರಶ್ನೆಗೆ ಇತ್ತೀಚೆಗೆ ನಾನು ದಿವಂಗತ ಪತ್ರಕರ್ತ ಟಿ.ಜೆ.ಎಸ್.ಜಾರ್ಜ್ ಅವರ ‘ದಿ ಗೋಯೆಂಕಾ ಲೆಟರ್ಸ್’ ಪುಸ್ತಕ ವನ್ನು (ಪುಟ 66) ಓದುವಾಗ ಉತ್ತರ ಸಿಕ್ಕಿತು. ಈ ಕೃತಿಯಲ್ಲಿ ಜಾರ್ಜ್ ಅವರು ಗೋಯೆಂಕಾ ಅವರಿಗೆ ಬಂದ ಮತ್ತು ಅವರು ಬೇರೆಯವರಿಗೆ ಬರೆದ ಕೆಲವು ಪ್ರಮುಖ ಪತ್ರಗಳನ್ನು ಸಂಗ್ರಹಿಸಿ ಕೊಟ್ಟಿದ್ದಾರೆ.

Raghava Sharma Nidle Column: ವಿಜಯೇಂದ್ರರೊಬ್ಬರನ್ನೇ ಹೊಣೆ ಮಾಡುವುದೇಕೆ ?

ವಿಜಯೇಂದ್ರರೊಬ್ಬರನ್ನೇ ಹೊಣೆ ಮಾಡುವುದೇಕೆ ?

ದೇಶದಲ್ಲಿ ಪೊಲಿಟಿಕಲ್ ಡೈನಾಮಿಕ್ಸ್‌ಗಳು ಬದಲಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ಹಳೆತಲೆ ಗಳಿಗೆ ದೊಡ್ಡ ಹುದ್ದೆಯನ್ನು ನೀಡುವ ಮನಸ್ಸಿನಲ್ಲಂತೂ ಹೈಕಮಾಂಡ್ ಇದ್ದಂತಿಲ್ಲ. ಆದರೆ, ವಿಧಾನ ಪರಿಷತ್ ಚುನಾವಣೆಯನ್ನು ವಿಜಯೇಂದ್ರ ಮತ್ತು ವಿಪಕ್ಷ ನಾಯಕ ಆರ್.ಅಶೋಕ್ ನಿರ್ವಹಿಸಿದ ರೀತಿ ಮತ್ತು ಬಿಜೆಪಿ ಶಾಸಕರ ಅಡ್ಡಮತದಾನ ತಡೆಯುವಲ್ಲಿ ನಾಯಕತ್ವ ವಿಫಲವಾಗಿರುವುದು ದಿಕ್ಕೆಟ್ಟು ಕೂತಿರುವ ಪಕ್ಷನಿಷ್ಠ ಮತ್ತು ತಟಸ್ಥ ಕಾರ್ಯಕರ್ತ ವರ್ಗದ ನೋವನ್ನು ಮತ್ತಷ್ಟು ಗಾಢವಾಗಿಸಿದೆ

Prof R G Hegde Column: ಮಾತು ಸೋತವರು ಸುಳ್ಳು ನಾಯಕರ ದೂರವಿಡಬೇಕು

ಮಾತು ಸೋತವರು ಸುಳ್ಳು ನಾಯಕರ ದೂರವಿಡಬೇಕು

ಹೊಸ್ತಿಲುಗಳೊಳಗಿನ ಕತ್ತಲಿನಲ್ಲಿ, ಕಪ್ಪು ಪರದೆಯ ಹಿಂದಿನ ಕಣ್ಣೀರಿನಲ್ಲಿ ಪಿಸುಮಾತಾಗಿ ಅವು ಕಾಣೆಯಾಗಿವೆ. ಹೀಗೆ, ಅವರಿಗೆ ಹೇಳಲು ವಿಷಯಗಳೇ ಇಲ್ಲ. ಅವರ ಬದುಕಿನ ದೊಡ್ಡ ದುರಂತ ಇದು. ಎರಡನೆಯ ವಿಷಯ. ಈ ಸಮುದಾಯಗಳಿಗೆ ಇದ್ದಬಿದ್ದ ತಮ್ಮ ಮಾತುಗಳನ್ನು ಕೂಡ ಹೇಳಲು ಬರುವುದಿಲ್ಲ. ಅಂದರೆ ಪಶ್ಚಿಮದ ಅಥವಾ ಪಾಶ್ಚಿಮಾತ್ಯರಾಗಿ ಹೋದ ಜನರಿಗೆ ತಿಳಿಯುವಂತೆ ಹೇಳಲು ಬರುವುದಿಲ್ಲ.

Loading...