ಕರುಣೆಯ ನ್ಯಾಯಾಲಯದ ದೇವರು ಶಿವಕುಮಾರ ಮಹಾಸ್ವಾಮಿಗಳು
ಬುದ್ಧಿಯೋರೇ, ನಾನೆಲ್ಲೂ ಹೋಗೋದಿಲ್ಲ, ನಿಮ್ಮ ಸೇವೆ ಮಾಡಿಕೊಂಡು ಮಠದಲ್ಲೇ ಇರ್ತೀನಿ, ಎಂದು ಗೋಗರೆದ. ನಂತರ ಶಿವಕುಮಾರ ಸ್ವಾಮಿಗಳು ಅವನಿಗೆ ಮಠದಲ್ಲೇ ಒಂದು ಕೆಲಸವನ್ನೂ ಕೊಟ್ಟರು. ಕರುಣೆಯ ನ್ಯಾಯಾಲಯದ ಕಾನೂನುಗಳೇ ಬೇರೆ, ತೀರ್ಮಾನವು ಕೂಡ ಬೇರೆಯೇ. ಮನೆಯಲ್ಲಿ ಚಿಕ್ಕಪುಟ್ಟ ತಪ್ಪುಗಳನ್ನು ಮಾಡಿ ಮನೆಯವರು ಸಿಕ್ಕಿಕೊಂಡಾಗ ಅವರನ್ನು ಖಂಡಿಸಿ ಅವಮಾನ ಪಡಿಸಿ ಮತ್ತಷ್ಟು ಗಾಯ ಮಾಡುವ ಬದಲು, ಅವರ ಬಳಿ ಕುಳಿತು ಏಕೆ ಈ ರೀತಿ ಮಾಡಿದರು ಎಂದು ತಿಳಿದು ಕೊಳ್ಳುವ ಪ್ರಯತ್ನ ಮಾಡಿದರೆ ಅದೆಷ್ಟೋ ವಿಷಯಗಳು ಬಗೆಹರಿಯುತ್ತವೆ