ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅಂಕಣಗಳು

Manjunath Bhandary Column: ಖರ್ಗೆಗೆ ಅಪಮಾನ: ಅಸ್ಪ್ರಶ್ಯತೆಯ ಕರಾಳ ನೆರಳು

ಖರ್ಗೆಗೆ ಅಪಮಾನ: ಅಸ್ಪ್ರಶ್ಯತೆಯ ಕರಾಳ ನೆರಳು

ಜಾತಿಯೆಂಬುದು ಕೇವಲ ಶ್ರಮ ವಿಭಜನೆಯಲ್ಲ, ಅದು ಶ್ರಮಿಕರ ವಿಭಜನೆ ಎಂದೂ, ರಾಜಕೀಯ ಸುಧಾರಣೆಗಿಂತ ಮೊದಲು ಜಾತಿಯೆಂಬ ದೈತ್ಯನನ್ನು ಸಂಹರಿಸಬೇಕೆಂದೂ ಅಂಬೇಡ್ಕರ್ ಪದೇಪದೆ ಒತ್ತಿಹೇಳಿದ್ದರು. ಹಲ್ದ್ವಾನಿಯ ಘಟನೆ, ಆ ದೈತ್ಯ ಇನ್ನೂ ಸತ್ತಿಲ್ಲ ಎಂಬುದನ್ನು ನೋವಿನಿಂದ ನೆನಪಿಸು ತ್ತದೆ. ಮಹಾತ್ಮ ಗಾಂಧೀಜಿಯವರು ಅಸ್ಪೃಶ್ಯತೆಯನ್ನು ಹಿಂದೂ ಧರ್ಮದ ಮೇಲಿನ ಕಳಂಕವೆಂದೇ ಪರಿಗಣಿಸಿದ್ದರು. ಅದನ್ನು ದೇವರು ಮತ್ತು ಮಾನವೀಯತೆಯ ವಿರುದ್ಧದ ಪಾಪ ಎಂದು ಬಣ್ಣಿಸಿ, ಹರಿಜನೋದ್ಧಾರವನ್ನು ತಮ್ಮ ಜೀವಮಾನದ ಸಂಕಲ್ಪವನ್ನಾಗಿಸಿಕೊಂಡಿದ್ದರು

Kiran Upadhyay Column: ಗಗನದಲ್ಲಿರುವಾಗ ಘನತೆ ಮರೆತರೆ ಹೇಗೆ ?

ಗಗನದಲ್ಲಿರುವಾಗ ಘನತೆ ಮರೆತರೆ ಹೇಗೆ ?

ಮೂಲಸ್ಥಾನ ದಿಂದ ಹೊರಡುವ ನೇರ ವಿಮಾನ ಬಿಟ್ಟರೆ, ಬೇರೆ ಒಂದು ಕಡೆಯಿಂದ ಇನ್ನೊಂದು ಕಡೆ ಹೋಗಬೇ ಕೆಂದರೆ, ಮೂಲಸ್ಥಾನಕ್ಕೆ ಹೋಗಿಯೇ ಮುಂದುವರಿ ಯಬೇಕು. ಇಂಥ ಸಂದರ್ಭದಲ್ಲಿ ಹೆಚ್ಚಿನಂಶ ಬೇರೆ ವಿಮಾನದಲ್ಲಿ ಪ್ರಯಾಣ ಮುಂದುವರಿಸಬೇಕು. ಅಂದು ಬಹ್ರೈನ್‌ನಿಂದ ವಿಮಾನ ಅಕಾಶಕ್ಕೆ ಹಾರಿ ಒಂದು ಗಂಟೆಗಿಂತಲೂ ಸ್ವಲ್ಪ ಹೆಚ್ಚೇ ಆಗಿತ್ತು. ನನಗಿಂತ ಮೂರೋ ನಾಲ್ಕೋ ಸಾಲು ಹಿಂದೆ ಕುಳಿತವನೊಬ್ಬ ಇದ್ದಕ್ಕಿದ್ದಂತೆ ಏರಿದ ಧ್ವನಿಯಲ್ಲಿ ಮಾತನಾಡಲು ಆರಂಭಿಸಿದ

Thimmanna Bhagwat Column: ಅತಿಯಾದ ಪರಿಸರ ವಾದ ಪ್ರಗತಿಗರ ಮಾರಕವಲ್ಲವೇ ?

ಅತಿಯಾದ ಪರಿಸರ ವಾದ ಪ್ರಗತಿಗರ ಮಾರಕವಲ್ಲವೇ ?

ಅಭಿವೃದ್ಧಿಗಾಗಿ ಪರಿಸರ ನಾಶದ ವಿಷಯದಲ್ಲಿ ದೇಶದ ಸರ್ವೋಚ್ಚ ನ್ಯಾಯಾಲಯ ಅನೇಕ ತೀರ್ಪು ಗಳನ್ನು ನೀಡಿದೆ. ವೆಲ್ಲೋರ್ ನಾಗರಿಕ ಕಲ್ಯಾಣ ಸಮಿತಿ ವರ್ಸಸ್ ಭಾರತ ಸರಕಾರ (ಚರ್ಮ ಕೈಗಾರಿಕೆ ಯಿಂದ ಜಲ ಮಾಲಿನ್ಯ), ಎಂ.ಸಿ.ಮೆಹತಾ ವರ್ಸಸ್ ಭಾರತ ಸರಕಾರ (ಗಂಗಾ ನದಿ ಮಾಲಿನ್ಯ), ಆಂಧ್ರ ಪ್ರದೇಶ ಮಾಲಿನ್ಯ ನಿಯಂತ್ರಣ ಮಾಂಡಲಿ ವರ್ಸಸ್ ಎಂ.ವೈ.ನಾಯ್ಡು ಮುಂತಾದ ಅನೇಕ ಪ್ರಕರಣ ಗಳಲ್ಲಿ ಅಭಿವೃದ್ಧಿಯ ಕಾರಣಕ್ಕೆ ಜೀವರಕ್ಷಕ ಜಲ ಮತ್ತು ಪರಿಸರ ಮಾಲಿನ್ಯವನ್ನು ಒಪ್ಪಲಾಗದು ಎಂಬ ತೀರ್ಪುಗಳನ್ನು ಸುಪ್ರೀಂ ಕೋರ್ಟು ನೀಡಿದೆ.

R T Vittalmurthy Column: ಮೇಜರ್ ಸರ್ಜರಿಯ ಸುಳಿವು ಕೊಟ್ಟರು ನಿತಿನ್‌ ಅಬಿನ್

ಮೇಜರ್ ಸರ್ಜರಿಯ ಸುಳಿವು ಕೊಟ್ಟರು ನಿತಿನ್‌ ಅಬಿನ್

ಇನ್ನು ರಾಜ್ಯ ಬಿಜೆಪಿಗೆ ಸರ್ಜರಿ ಮಾಡಲು ಪಕ್ಷದ ವರಿಷ್ಟರು ಸಜ್ಜಾಗುತ್ತಿದ್ದು, ಇದರ ಹಿನ್ನೆಲೆ ಯಲ್ಲಿಯೇ ವಿವಿಧ ನಾಯಕರ ಜತೆ ಮಾತುಕತೆ ಆರಂಭಿಸಿದ್ದಾರೆ. ಮೂಲಗಳ ಪ್ರಕಾರ, ಇಂತಹ ಕಾರಣಗಳಿಗಾಗಿಯೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ರಾಜ್ಯದ ಮೂವರು ನಾಯಕ ರನ್ನು ಕರೆಸಿ ಮಾತನಾಡಿ ದ್ದಾರೆ. ಈ ಪೈಕಿ ಒಬ್ಬರು ಕೇಂದ್ರ ಸಚಿವರಾದ ವಿ.ಸೋಮಣ್ಣ, ಮತ್ತೊಬ್ಬರು ಮಾಜಿ ಸಚಿವ ಮುರುಗೇಶ್ ನಿರಾಣಿ, ಮಗದೊಬ್ಬರು ಅರವಿಂದ ಬೆಲ್ಲದ್.

Vishweshwar Bhat Column: ಇದು ಶ್ವಾನ ಪ್ರೇಮಿಗಳ ರಾಜಧಾನಿ

Vishweshwar Bhat Column: ಇದು ಶ್ವಾನ ಪ್ರೇಮಿಗಳ ರಾಜಧಾನಿ

ಟೆಲ್ ಅವಿವ್ ನಗರವು ಇಸ್ರೇಲ್‌ನ ಆರ್ಥಿಕ ಮತ್ತು ಸಾಂಸ್ಕೃತಿಕ ರಾಜಧಾನಿ ಮಾತ್ರವಲ್ಲ, ಜಾಗತಿಕ ಮಟ್ಟ ದಲ್ಲಿ ಶ್ವಾನ ಪ್ರೇಮಿಗಳ ರಾಜಧಾನಿ ಎಂದೂ ಖ್ಯಾತಿ ಪಡೆದಿದೆ. ಮೆಡಿಟರೇನಿಯನ್ ಸಮುದ್ರದ ದಂಡೆಯಲ್ಲಿರುವ ಈ ನಗರ ನಾಯಿಗಳು ಮತ್ತು ಅವುಗಳ ಮಾಲೀಕರಿಗೆ ವಿಶ್ವದ ಅತ್ಯಂತ ಅನುಕೂಲಕರ ಮತ್ತು ಹಿತಕರ ವಾತಾವರಣವನ್ನು ಒದಗಿಸುತ್ತದೆ. ನಗರದಾದ್ಯಂತ ಹತ್ತಾರು ಸಾವಿರ ನೋಂದಾಯಿತ ನಾಯಿಗಳಿದ್ದು, ಅವುಗಳಿಗೆಂದೇ ಮೀಸಲಾದ ಡಜನ್‌ಗಟ್ಟಲೆ ಶ್ವಾನ ಉದ್ಯಾನ ವನಗಳು, ನಾಯಿ-ಸ್ನೇಹಿ ಕಡಲತೀರಗಳು ಮತ್ತು ವ್ಯಾಪಾರಿ ಮಳಿಗೆಗಳಿವೆ.

Karthik Krishna Column: ಜೀವಿತಾವಧಿ ಒಂದೇ ವರ್ಷ !

Karthik Krishna Column: ಜೀವಿತಾವಧಿ ಒಂದೇ ವರ್ಷ !

ಆಶ್ಚರ್ಯಕರವಾದ ಇನ್ನೊಂದು ಸಂಗತಿಯೆಂದರೆ, ಈ ಊಸರವಳ್ಳಿಗಳು ತಮ್ಮ ಜೀವಿತಾವಧಿಯ ಬಹುಪಾಲು, ಅಂದರೆ ಬರೋಬ್ಬರಿ 8 ರಿಂದ 9 ತಿಂಗಳುಗಳನ್ನು ಭೂಮಿಯೊಳಗೆ ಮೊಟ್ಟೆಯೊಳಗೆಯೇ ಕಳೆಯುತ್ತವೆ. ಮೊಟ್ಟೆಯಿಂದ ಹೊರ ಬಂದ ಕೂಡಲೇ ಬೇಟೆ ಶುರು ಇವುಗಳು, ಬಕಾಸುರನಂತೆ ತಿಂದು, ಕೇವಲ ಎರಡು ತಿಂಗಳಿನಲ್ಲಿ ಐದು ಪಟ್ಟು ಬೆಳೆಯುತ್ತವೆ!

Narayana Yaji Column: ಉತ್ತರ ಕನ್ನಡದಿಂದ ವಿಶ್ವವೇದಿಕೆಗೆ !

Narayana Yaji Column: ಉತ್ತರ ಕನ್ನಡದಿಂದ ವಿಶ್ವವೇದಿಕೆಗೆ !

ಇಂದು ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಸಂಪಾದಕರು ಅಥವಾ ಮಹತ್ವದ ವರದಿಗಾರರು ಉತ್ತರ ಕನ್ನಡ ಜಿಲ್ಲೆಯವರೇ; ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿ, ನೂರು ವರ್ಷಗಳ ಮೊದಲೇ ವಿಧವಾ ವಿವಾಹವಾಗಿ ಸಮಾಜ ಸುಧಾರಣೆಗೆ ನಾಂದಿ ಹಾಡಿದ ಸಿರಸಿಯ ಅಕ್ಕದಾಸರು, ಇಗ್ಗಪ್ಪ ಹೆಗಡೆ ವಿವಾಹ ಪ್ರಸಂಗ ಬರೆದ ಕರ್ಕಿಯ ಸೂರಿ ವೆಂಕಟ್ರಮಣ ಶಾಸಿ, ಬಾರ್ಡೋಲಿ ಹೋರಾಟವನ್ನು ನೆನಪಿಸಿದ ಅಂಕೋಲೆಯ ಉಪಿನ ಸತ್ಯಾಗ್ರಹ ಇವೆಲ್ಲವೂ ಈ ಜಿಲ್ಲೆಯಲ್ಲಿಯೇ ಅರಳಿದ್ದು.

ಲೋಕಲ್‌ʼನಿಂದ ಗ್ಲೋಬಲ್‌ʼವರೆಗೆ

ಲೋಕಲ್‌ʼನಿಂದ ಗ್ಲೋಬಲ್‌ʼವರೆಗೆ

ತಾವು ತಿರುಗಾಡುವ ಮೂಲಕ ಓದುಗರನ್ನೂ ಕೂಡ ತಮ್ಮೊಂದಿಗೆ ತಿರುಗಾಡಿಸುವವರು, ಲೇಖಕ ಕಿರಣ್ ಉಪಾಧ್ಯಾಯ. ಹೊರದೇಶ, ವಿದೇಶ, ಉಭಯ ದೇಶ, ಪರದೇಶ, ದೂರದೇಶ ಎಂದು ಐದು ವರ್ಷಗಳಿಂದ, ವರ್ಷಕ್ಕೊಂದು ಪುಸ್ತಕದ ಮೂಲಕ, ಕನ್ನಡದ ಓದುಗರನ್ನು ತನ್ನೊಂದಿಗೆ ತಿರುಗಾಡಿಸುತ್ತಲೇ ಇರುವ ಇವರು ಈಗ ಬಹುದೇಶಕ್ಕೆ ಕರೆದೊಯ್ಯುವ ಕೆಲಸ ಮಾಡಿದ್ದಾರೆ.

Harish Kera Column: ʼಆನೆʼ-ಮಾನವನ ಒಪ್ಪಂದದ ಕತೆ

Harish Kera Column: ʼಆನೆʼ-ಮಾನವನ ಒಪ್ಪಂದದ ಕತೆ

ಒಮ್ಮೆ ಕೇರಳದ ತೇಕ್ಕಡಿಯ ಫಾರೆಸ್ಟ್ ಹೌಸೊಂದರಲ್ಲಿ ತಂಗಿದ್ದೆವು. ವಿಶಾಲವಾದ ಹಜಾರ. ಅಮಾವಾಸ್ಯೆ ಯ ಆಸುಪಾಸಿನ ರಾತ್ರಿ. ಕಾಡಿನ ಕತ್ತಲೆ ಹೇಗಿರುತ್ತದೆಂದು ವಿವರಿಸಬೇಕಿಲ್ಲ. ಬಂಗಲೆಯ ಸುತ್ತಲಿನ ಆಕಾಶದಿಂದ ತೂರಿ ಬರುತ್ತಿದ್ದ ನಕ್ಷತ್ರಗಳ ಕ್ಷೀಣ ಬೆಳಕು. ಬಂಗಲೆಯನ್ನು ಸುತ್ತುವರಿದಿದ್ದ ದೊಡ್ಡ ದೊಡ್ಡ ಮರಗಳು. ಕತ್ತಲನ್ನು ನಿರುಕಿಸುತ್ತ ಕುಳಿತಿದ್ದೆವು. ಕೀಟಗಳ ಚೀರು, ಇರುಳು ಹಕ್ಕಿಗಳ ಕೂಗು ಬಿಟ್ಟರೆ ಮತ್ತೆಲ್ಲೂ ಯಾವ ಚಲನೆಯೂ ಇಲ್ಲ, ಯಾವ ಸದ್ದೂ ಇಲ್ಲ.

Hari Paraak Column: ಶಾಲೆಗೆ ಎಲ್ಲರಿಗಿಂತ ಮುಂಚೆ ಬರೋ ಮೇಷ್ಟ್ರು ಲಗೂ ಗುರು

ಶಾಲೆಗೆ ಎಲ್ಲರಿಗಿಂತ ಮುಂಚೆ ಬರೋ ಮೇಷ್ಟ್ರು ಲಗೂ ಗುರು

ಯಶ್ ಅವರ ಟಾಕ್ಸಿಕ್ ಸಿನಿಮಾ ಬಿಡುಗಡೆಯ ಸಮಯ ಇದು. ಈಗ ಅದು ಸದ್ದು ಮಾಡೋದು ಸಹಜ. ಅಲ್ಲದೆ ಚಿತ್ರದ ಟ್ರೈಲರ್ ಬೇರೆ ಬಿಡುಗಡೆ ಆಗಿದೆ. ಕೆಲವರು ಸೂಪರ್ ಅಂದ್ರೆ ಇನ್ನು ಕೆಲವರು ಹಿಂಸಾ ತ್ಮಕ, ಅಶ್ಲೀಲ ಅಂತ ರಾಗ ತೆಗೆಯುತ್ತಿದ್ದಾರೆ. ಈ ರಾಗ ತೆಗೆಯುವವರ ಗುಂಪಿಗೆ ನಟಿ, ಸಾರಿ, ಒಂದು ಕಾಲದ ನಟಿ ರಿಷಿಕಾ ಸಿಂಗ್ ಕೂಡಾ ಸೇರಿಕೊಂಡು ಅಪಸ್ವರದ ಈ ರಾಗವನ್ನು ಸಿಂಗ್ ಮಾಡುತ್ತಿದ್ದಾರೆ

Srivathsa Joshi Column: ಇದೊಂದು ರೀತಿಯಲ್ಲಿ ರಂಜನೀಯ ರಂಧ್ರಾನ್ವೇಷಣೆ

ಇದೊಂದು ರೀತಿಯಲ್ಲಿ ರಂಜನೀಯ ರಂಧ್ರಾನ್ವೇಷಣೆ

ಸದಾ ಗೊಣಗುವುದು, ವ್ಯಂಗ್ಯವಾಡುವುದು, ಸಣ್ಣಪುಟ್ಟ ತಪ್ಪುಗಳನ್ನೂ ಭೂತಗನ್ನಡಿ ಹಿಡಿದು ನೋಡುವುದು, ನೆಗೆಟಿವ್ ಆಗಿ ವಿಮರ್ಶಿಸುವುದು ಅವರ ಜಾಯಮಾನ. ಮೈಮನವೆಲ್ಲ ತುಂಬಿ ತುಳುಕುವ ಸಿನಿಕತನ. ‘ಕೂಟವನ್ನು ಕೊಲ್ಲುವುದು ಹೇಗೆ?’ ಎಂಬ ಹಾಸ್ಯಲೇಖನವೊಂದರಲ್ಲಿ ಅಮೆರಿಕ ನ್ನಡಿಗ ಲೇಖಕ ಡಾ.ಮೈ.ಶ್ರೀ ನಟರಾಜ ಇದನ್ನು ಚೆನ್ನಾಗಿ ಲೇವಡಿ ಮಾಡಿದ್ದಾರೆ.

Dr D C Nanjunda Column: ಸಾಮಾಜಿಕ ಮಾಧ್ಯಮದಲ್ಲಿ ಹೊಸ ಡಿಜಿಟಲ್‌ ಜಾತಿಗಳ ಸದ್ದು !

ಸಾಮಾಜಿಕ ಮಾಧ್ಯಮದಲ್ಲಿ ಹೊಸ ಡಿಜಿಟಲ್‌ ಜಾತಿಗಳ ಸದ್ದು !

ಒಂದು ಉದ್ಯೋಗದ ಮಾಹಿತಿ, ವಿದ್ಯಾರ್ಥಿವೇತನ, ಸರಕಾರಿ ನೇಮಕಾತಿಯ ಮಾಹಿತಿ ಅಥವಾ ತರಬೇತಿ ಅವಕಾಶ ಎಲ್ಲವೂ ಇಲ್ಲಿ ಮುಖ್ಯವಾಗುತ್ತದೆ. ಆದರೆ ಇಂತಹ ಜಾಲಗಳ ಪರಿಣಾಮ ಸದಾ ಸಕಾರಾತ್ಮಕ ವಾಗಿರುವುದಿಲ್ಲ. ಒಂದು ಕಡೆ ಜಾತಿ ಆಧಾರಿತ ಡಿಜಿಟಲ್ ಜಾಲಗಳು ಬಡ ವಿದ್ಯಾರ್ಥಿಗಳಿಗೆ ಮಾರ್ಗ ದರ್ಶನ, ವಿದ್ಯಾರ್ಥಿವೇತನದ ಮಾಹಿತಿ, ಉದ್ಯೋಗದ ಮಾಹಿತಿ ಮತ್ತು ವೃತ್ತಿಪರ ಸಂಪರ್ಕಗಳನ್ನು ಒದಗಿಸಿ ಸಾಮಾಜಿಕ ಚಲನೆಗೆ ಸಹಾಯ ಮಾಡಬಹುದು.

Vinayaka M Bhat Column: ದಂಡಂ ದಶಗುಣಂ ಅಂದರೆ ದಂಡನೆಯ ದಶವಿಧವೇ ?

ದಂಡಂ ದಶಗುಣಂ ಅಂದರೆ ದಂಡನೆಯ ದಶವಿಧವೇ ?

ನಮ್ಮ ಕಡೆಗೆ ಊಟ ಮಾಡಲು ಬಳಸುವುದನ್ನು ಬಟ್ಟಲೆಂತಲೂ, ನೀರು ಅಥವಾ ಉಳಿದ ದ್ರವ ಪದಾರ್ಥ ಗಳನ್ನು ಕುಡಿಯಲು ಬಳಸುವ ಪಾತ್ರೆಯನ್ನು ತಟ್ಟೆಯೆಂತಲೂ ಕರೆಯುತ್ತಾರೆ. ಅದೇ ಹಳೆಮೈಸೂರು ಭಾಗಕ್ಕೆ ಬಂದರೆ ಇದು ತಿರುಗಾಮುರುಗಾ ಆಗಿ ಬಿಡುತ್ತದೆ. ಊಟ ಮಾಡಲು ತಟ್ಟೆ, ಸಾರು ಕುಡಿಯಲು ಬಟ್ಟಲು ಎನ್ನುತ್ತಾರೆ. ಇರಲಿ, ಪ್ರಸ್ತುತ ‘ದಂಡಂ ದಶಗುಣಂ’ ಎನ್ನುವ ಮಾತನ್ನೇ ನೋಡುವುದಾದರೆ, ಈ ಪದಪುಂಜವನ್ನು ದಂಡನೆಯ/ ಶಿಕ್ಷೆಯ ಭಾವದಿಂದಲೇ ಅನಾದಿಯಿಂದ ಬಳಸಿಕೊಂಡು ಬರಲಾಗಿದೆ.

‌Vishweshwar Bhat Column: ಪದ ಪಯಣ: ಒಂದು ಸಾಮಾನ್ಯ ಮಾತು ಬಳಕೆಗೆ ಬಂದ ಕುತೂಹಲ ಕಥೆ

ಪದ ಪಯಣ: ಒಂದು ಸಾಮಾನ್ಯ ಮಾತು ಬಳಕೆಗೆ ಬಂದ ಕುತೂಹಲ ಕಥೆ

ಸಾಮಾನ್ಯವಾಗಿ ವೈದ್ಯಕೀಯ ಅಥವಾ ಸಾಂಪ್ರದಾಯಿಕ ಭಾಷೆಯಲ್ಲಿ ‘ಭ್ರಮೆ’ (Delusion) ಎನ್ನುವುದು ನಕಾರಾತ್ಮಕ ಅಥವಾ ಮಾನಸಿಕ ಸಮಸ್ಯೆಗೆ ಸಂಬಂಧಿಸಿದ ಪದ. ಆದರೆ, ಇಂಟರ್ನೆಟ್ ಜಗತ್ತಿನಲ್ಲಿ ‘ಡೆಲೂಲು’ ಪದವನ್ನು ಸಂಪೂರ್ಣವಾಗಿ ನಕಾರಾತ್ಮಕವಾಗಿ ಬಳಸಲಾಗುವುದಿಲ್ಲ. ಬದಲಿಗೆ, ಇದನ್ನು ತಮಾಷೆಯಾಗಿ, ಸ್ವಯಂ-ಹಾಸ್ಯವಾಗಿ (self- deprecating humor) ಅಥವಾ ಕೆಲವೊಮ್ಮೆ ತೀವ್ರವಾದ ಆತ್ಮವಿಶ್ವಾಸವನ್ನು (Overconfidence/ Manifestation) ಸೂಚಿಸಲು ಬಳಸಲಾಗುತ್ತದೆ

ಇರುವೆಯ ಹಾದಿಯೇ ಮಾದರಿ

ಇರುವೆಯ ಹಾದಿಯೇ ಮಾದರಿ

ಇರುವೆ ಅತ್ಯಂತ ಚಿಕ್ಕ ಜೀವಿ. ನಮ್ಮ ಕಾಲಡಿಗೆ ಸಿಕ್ಕಿ ಕ್ಷಣ ಮಾತ್ರದಲ್ಲಿ ಪ್ರಾಣ ಕಳೆದುಕೊಳ್ಳುವಂತ ಹುದು. ಇರುವೆ ಚಿಕ್ಕದಾದರೂ ಅದು ನಮಗೆ ಹೇಳಿಕೊಡುವ ಪಾಠ ಬಹು ದೊಡ್ಡದು.‘ಗಚ್ಛನ್ ಪಿಪೀಲಿಕೋ ಯಾತಿ ಯೋಜನಾನಾಂ ಶತಾನ್ಯಪಿ | ಅಗಚ್ಛನ್ ವೈನತೇಯೋಪಿ ಪದಮೇಕಂ ನ ಗಚ್ಛತಿ’ ಎಂಬ ಮಾತಿದೆ.

ಸ್ವಾತಂತ್ರ್ಯ ಕದನಕ್ಕೆ ಮುನ್ನುಡಿ ಬರೆದ ಮಂಗಲ್‌ ಪಾಂಡೆ

ಸ್ವಾತಂತ್ರ್ಯ ಕದನಕ್ಕೆ ಮುನ್ನುಡಿ ಬರೆದ ಮಂಗಲ್‌ ಪಾಂಡೆ

ಮಂಗಲ್ ಪಾಂಡೆ 1849ರಲ್ಲಿ ಸುಮಾರು 22ನೇ ವಯಸ್ಸಿನಲ್ಲಿ, ಈ ಇಂಡಿಯಾ ಕಂಪನಿಯ ಸೇನೆಗೆ ಸೇರಿದರು. 34ನೇ ಬೆಂಗಾಲ್ ನೆಟಿವ್ ಇನ್-ಫ್ಯಾಂಟ್ರಿಯಲ್ಲಿ ಸಿಪಾಯಿಯಾಗಿ ಸೇವೆ ಸಲ್ಲಿಸಿದರು. ಅವರು ಬ್ರಿಟಿಷರ ಸೇನೆಯಲ್ಲಿ ಕೆಲಸ ಮಾಡುತ್ತಿದ್ದರೂ, ಭಾರತೀಯ ಸೈನಿಕರ ಧಾರ್ಮಿಕ ಭಾವನೆಗಳಿಗೆ ಮತ್ತು ಸ್ವಾಭಿಮಾನಕ್ಕೆ ಧಕ್ಕೆ ಉಂಟುಮಾಡುವ ನೀತಿಗಳ ಬಗ್ಗೆ ಅಸಮಾಧಾನ ಹೆಚ್ಚುತ್ತಿತ್ತು.

ಸ್ವಾತಂತ್ರ್ಯದ ಒಡಲಿನೊಳಗೆ ಸಮಸ್ಯೆಗಳ ಸಂಭ್ರಮ!

ಸ್ವಾತಂತ್ರ್ಯದ ಒಡಲಿನೊಳಗೆ ಸಮಸ್ಯೆಗಳ ಸಂಭ್ರಮ!

ಜಾತ್ಯತೀತ ದೇಶವೆಂದು ಹೇಳಿ ಜಾತಿಯನ್ನು ಬಲಿಷ್ಠ ಮಾಡುತ್ತಿದ್ದೇವೆ. ಯುವ ಸಮುದಾಯವನ್ನು ಧರ್ಮದ ಆಧಾರದಲ್ಲಿ ರಾಜಕಾರಣಿಗಳು ಬಲಿಕೊಡುತ್ತಿದ್ದಾರೆ. ಮಠಮಾನ್ಯಗಳು ಜಾಗೃತಾವಸ್ಥೆ ಯಲ್ಲಿರದೆ ಜಾತಿಯ ಕೂಪಗಳಾಗಿವೆ. ಪ್ರಶ್ನೆ ಪತ್ರಿಕೆಗಳ ಸೋರಿಕೆಯಿಂದ ಆತ್ಮಹತ್ಯೆಯ ದಾರಿ ಹಿಡಿದಿದ್ದಾರೆ. ಬಂಡವಾಳಶಾಹಿಗಳು, ಸಿನಿಮಾ ನಟರು, ಸಾಮಾಜಿಕ ಜಾಲತಾಣಗಳು ಯುವಕರ ವಿಚಾರಗಳಿಗೆ ಮನೋವೈಕಲ್ಯದ ಸೋಂಕು ತಗುಲಿಸುತ್ತಿದ್ದಾರೆ.

ಸ್ವಾತಂತ್ರ್ಯ ಸದಾ ಹರಿವ ನದಿಯಂತೆ

ಸ್ವಾತಂತ್ರ್ಯ ಸದಾ ಹರಿವ ನದಿಯಂತೆ

ಇಂದಿನ ಜಾಗತೀಕರಣ ಮತ್ತು ಡಿಜಿಟಲ್ ಯುಗದಲ್ಲಿ ಯುವಜನತೆ ಜಗತ್ತಿನ ಯಾವುದೇ ಮೂಲೆಯ ಸಂಸ್ಕೃತಿ ಮತ್ತು ತಂತ್ರಜ್ಞಾನದೊಂದಿಗೆ ಕ್ಷಣಾರ್ಧದಲ್ಲಿ ಸಂಪರ್ಕ ಸಾಧಿಸುತ್ತಿದೆ. ಈ ಮುಕ್ತ ವಾತಾ ವರಣದಲ್ಲಿ ಸ್ವಾತಂತ್ರ್ಯದ ಪರಿಕಲ್ಪನೆ ಅತ್ಯಂತ ವಿಶಾಲವಾಗಿ ಬೆಳೆದಿದೆ. ಯುವಕರು ಇಂದು ತಮ್ಮ ವೃತ್ತಿಜೀವನವನ್ನು ಆಯ್ಕೆ ಮಾಡಿಕೊಳ್ಳುವಲ್ಲಿ, ತಮ್ಮ ಬದುಕಿನ ಹಾದಿಯನ್ನು ರೂಪಿಸಿ ಕೊಳ್ಳುವಲ್ಲಿ ಮತ್ತು ತಮ್ಮ ಕನಸುಗಳಿಗೆ ರೆಕ್ಕೆಗಳನ್ನು ಕಟ್ಟಿಕೊಳ್ಳುವಲ್ಲಿ ಹೆಚ್ಚಿನ ಸ್ವಾತಂತ್ರ್ಯವನ್ನು ಬಯಸುತ್ತಿದ್ದಾರೆ.

Leena Joshi Column: ಗಡಿಯಾಚೆ ಉಳಿದ ಮರಳಿ ಹೋಗದೂರು

Leena Joshi Column: ಗಡಿಯಾಚೆ ಉಳಿದ ಮರಳಿ ಹೋಗದೂರು

ಅವಿಭಜಿತ ಭಾರತದ ಲಾಹೋರ್ ನಲ್ಲಿ ಅವರದ್ದು ದೊಡ್ಡ ಅವಿಭಕ್ತ ಕುಟುಂಬ. ಅಜ್ಜನಿಗೆ ನಾಲ್ಕು ಜನ ಅಣ್ಣತಮ್ಮಂದಿರು. ದೊಡ್ಡ ಹವೇಲಿ, ಸುಮಾರು ನಲವತ್ತು ಜನರ ತುಂಬು ಕುಟುಂಬ. ಅಜ್ಜ, ಅಜ್ಜಿ, ಅಮ್ಮ, ಚಿಕ್ಕಮ್ಮಂದಿರು, ಚಿಕ್ಕಪ್ಪಂದಿರು, ಸೋದರತ್ತೆಯರು. ದೊಡ್ಡ ಮಟ್ಟದ ವ್ಯಾಪಾರ, ಕಣ್ಣಿಗೆ ಕಾಣುವಷ್ಟು ದೂರ ಹೊಲಗದ್ದೆಗಳು. ಮನೆಯಲ್ಲೂ, ಹೊಲದಲ್ಲೂ ಕೆಲಸ ಮಾಡುತ್ತಿದ್ದವರು ಬಹುತೇಕ ಸ್ಥಳೀಯ ಮುಸ್ಲಿಮರು.

Ravi Sajangadde Column: ಕೆಂಪುಕೋಟೆಯಿಂದ ಮೊಳಗಲಿದೆ ವಂದೇ ಮಾತರಂ

ಕೆಂಪುಕೋಟೆಯಿಂದ ಮೊಳಗಲಿದೆ ವಂದೇ ಮಾತರಂ

ಭಾರತದ ‘ಅಮೃತ ಕಾಲ’ದ ಈ ಸಂಭ್ರಮದ ಸಮಯದಲ್ಲಿ, ಸ್ವಾತಂತ್ರ್ಯ ಚಳುವಳಿಯ ಮೂಲ ಮಂತ್ರ ಗಳಲ್ಲಿ ಒಂದಾಗಿದ್ದ ‘ವಂದೇ ಮಾತರಂ’ಗೆ ಇಂತಹ ಅತ್ಯುನ್ನತ ರಾಷ್ಟ್ರೀಯ ಗೌರವ ಲಭಿಸುತ್ತಿರುವುದು ಹೆಮ್ಮೆ, ಭಕ್ತಿ ಮತ್ತು ರೋಮಾಂಚನಕಾರಿ ವಿಚಾರ! 1875ರಲ್ಲಿ ರಚನೆಯಾದ ‘ವಂದೇ ಮಾತರಂ’ ಗೀತೆ, ಬ್ರಿಟಿಷ್ ಆಡಳಿತದ ವಿರುದ್ಧದ ಹೋರಾಟದಲ್ಲಿ ಕೋಟ್ಯಂತರ ಕ್ರಾಂತಿಕಾರಿಗಳಿಗೆ ಆತ್ಮಬಲ- ಆತ್ಮ ಸ್ಥೈರ್ಯ ನೀಡಿ ದೇಶಪ್ರೇಮವನ್ನು ಬಡಿದೆಬ್ಬಿಸಿತ್ತು.

Mohan Vishwa Column: 1947ರ ವಿಭಜನೆಯ ರಕ್ತಸಿಕ್ತ ಅಧ್ಯಾಯ

Mohan Vishwa Column: 1947ರ ವಿಭಜನೆಯ ರಕ್ತಸಿಕ್ತ ಅಧ್ಯಾಯ

ವಿಭಜನೆಯ ಇತಿಹಾಸವು ಒಟ್ಟಾರೆ ಮಾನವೀಯ ದುರಂತವಾಗಿದ್ದರೂ, ಪಾಕಿಸ್ತಾನಕ್ಕೆ ಸೇರಿದ ಪ್ರದೇಶ ಗಳಿಂದ ಹಿಂದೂ ಸಿಖ್ ಜನಸಂಖ್ಯೆಯ ನಿರ್ಗಮನ ಅತ್ಯಂತ ಮಹತ್ವದ ಅಧ್ಯಾಯಗಳಲ್ಲಿ ಒಂದಾಗಿದೆ. 1940ರ ಲಾಹೋರ್ ನಿರ್ಣಯದ ನಂತರ ಮುಸ್ಲಿಂ ಲೀಗ್ ಪ್ರತ್ಯೇಕ ಮುಸ್ಲಿಂ ರಾಷ್ಟ್ರದ ಬೇಡಿಕೆಯನ್ನು ಇಟ್ಟಿತ್ತು. 1946ರ ಚುನಾವಣೆಗಳು ಮತ್ತು ನಂತರದ ರಾಜಕೀಯ ಬೆಳವಣಿಗೆಗಳು ಪರಿಸ್ಥಿತಿಯನ್ನು ಇನ್ನಷ್ಟು ತೀವ್ರಗೊಳಿಸಿದವು.

Vivek Bhat Column: ಭಾರತೀಯ ಪೌರತ್ವ ಪರೀಕ್ಷೆ ಇದ್ದರೆ ನೀವು ಪಾಸ್‌ ಆಗ್ತೀರಾ ?

ಭಾರತೀಯ ಪೌರತ್ವ ಪರೀಕ್ಷೆ ಇದ್ದರೆ ನೀವು ಪಾಸ್‌ ಆಗ್ತೀರಾ ?

ನಾವು ಬೇರೆ ದೇಶಗಳ ಬಗ್ಗೆ ಮಾತಾಡುತ್ತೇವೆ. ಆದರೆ ನಮ್ಮ ದೇಶದ ಬಗ್ಗೆ ನಮಗೆ ಎಷ್ಟು ಗೊತ್ತು? ಪ್ರತಿ ಆಗ 15ಕ್ಕೆ ವಾಟ್ಸ್ಯಾಪ್‌ನಲ್ಲಿ ತ್ರಿವರ್ಣ ಧ್ವಜ ಕಳಿಸಿ ಜೈ ಹಿಂದ್ ಹಾಕುತ್ತೇವೆ. ದೇಶಭಕ್ತಿ ಅಂದರೆ ವಾಟ್ಸ್ಯಾಪ್ ಸ್ಟೇಟಸ್ ಅಲ್ಲ. ದೇಶಭಕ್ತಿ ಅಂದರೆ ನಮ್ಮ ದೇಶವನ್ನು ತಿಳಿದುಕೊಳ್ಳುವುದು. ಒಂದು ಕನಿಷ್ಠ ಕುತೂಹಲ ನಮ್ಮ ದೇಶದ ಬಗ್ಗೆ ಇರಲಿ. ಅಷ್ಟು ಇದ್ದರೆ ಸಾಕು.

Vishweshwar Bhat Column: ಅಮೆರಿಕ ಅಧ್ಯಕ್ಷರ ಹೆಸರಿನಲ್ಲಿ ನಗರ

Vishweshwar Bhat Column: ಅಮೆರಿಕ ಅಧ್ಯಕ್ಷರ ಹೆಸರಿನಲ್ಲಿ ನಗರ

ಲೈಬೀರಿಯಾ ವಸಾಹತಿನ ಸ್ಥಾಪನೆಗೆ ಮತ್ತು ಕಪ್ಪು ವರ್ಣೀಯರಿಗೆ ಮರುಭೂಮಿ ನೀಡುವ ಯೋಜನೆ ಯಲ್ಲಿ ಜೇಮ್ಸ್ ಮೊನ್ರೋ ವಹಿಸಿದ ಪ್ರಮುಖ ಪಾತ್ರವನ್ನು ಗೌರವಿಸಲು, ನಗರಕ್ಕೆ ‘ಮೊನ್ರೋವಿಯಾ’ ಎಂದು ಮರುನಾಮಕರಣ ಮಾಡಲಾಯಿತು. ಮೊನ್ರೋ ಅವರ ರಾಜಕೀಯ ಹಾಗೂ ಆರ್ಥಿಕ ಬೆಂಬಲ ವಿಲ್ಲದಿದ್ದರೆ ಈ ಯೋಜನೆಯು ಸಾಕಾರಗೊಳ್ಳುತ್ತಿರಲಿಲ್ಲ ಎಂಬುದು ಅಂದಿನ ಅಮೆರಿಕನ್- ಲೈಬೀರಿಯನ್ನರ ಭಾವನೆಯಾಗಿತ್ತು.

Roopa Gururaj Column: ಶಂಕರರ ಮಾತೃಭಕ್ತಿಗೊಲಿದು ದಾರಿ ಬದಲಿಸಿದ ಪೂರ್ಣಾ ನದಿ

ಶಂಕರರ ಮಾತೃಭಕ್ತಿಗೊಲಿದು ದಾರಿ ಬದಲಿಸಿದ ಪೂರ್ಣಾ ನದಿ

ಊಟದ ಹೊತ್ತು ಮೀರುತ್ತಾ, ತಾಯಿಯನ್ನು ಕಾಣದೆ ಅವಳನ್ನು ಅರಸುತ್ತಾ ಹೋದ ಬಾಲ ಶಂಕರನಿಗೆ ದಾರಿಯಲ್ಲಿ ಕಂಡ ದೃಶ್ಯ ಆಘಾತ ಉಂಟು ಮಾಡಿತ್ತು. ಈ ಸ್ಥಿತಿಯಲ್ಲಿ ತಾಯಿಯನ್ನು ಕಂಡ ಶಂಕರನ ಪುಟ್ಟ ಹೃದಯ ಕಂಪಿಸಿ ಹೋಗಿತ್ತು. ತಾಯಿಯನ್ನು ಎಚ್ಚರಿಸಿ ಮನೆಗೆ ಕರೆ ತಂದರೂ ಶಂಕರನಿಗೆ ನೆಮ್ಮದಿ ಇಲ್ಲದಾಗಿತ್ತು

Loading...