ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಅಂಕಣಗಳು

K V Chandramouli Column: ದೂರದೃಷ್ಟಿಯಿಂದಲೇ ವಿಶ್ಲೇಷಣೆ

K V Chandramouli Column: ದೂರದೃಷ್ಟಿಯಿಂದಲೇ ವಿಶ್ಲೇಷಣೆ

ಇಂಥ ಪ್ರತಿಕ್ರಿಯೆಗಳು ಬರಹಗಾರರ ಮೇಲೆ, ಸಾರ್ವಜನಿಕರಿಗೆ ನಿಖರ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಒದಗಿಸುವ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸುತ್ತವೆ. ಇದೇ ಸಂದರ್ಭ ದಲ್ಲಿ, ಓದುಗರಿಗೆ ಪ್ರತಿವಿಚಾರಗಳನ್ನು ವ್ಯಕ್ತಪಡಿಸಲು ಮತ್ತು ಲೇಖಕರಿಗೆ ಸ್ಪಷ್ಟೀಕರಣ ನೀಡಲು ಸಮಾನ ಅವಕಾಶವನ್ನು ಒದಗಿಸುವ ಕನ್ನಡದ ದೈನಿಕಗಳಲ್ಲಿ ‘ವಿಶ್ವವಾಣಿ’ ಪತ್ರಿಕೆ ಪ್ರಮುಖ ವೇದಿಕೆಯಾಗಿರುವುದು ಅಭಿನಂದನೀಯ.

Shreekantha Chaukimath Column: ರಾಜಕೀಯದಾಟದಲ್ಲಿ ವೀರಶೈವ ಲಿಂಗಾಯತರು ಕಾರ್ಡ್‌ʼಗಳಾ ?

ರಾಜಕೀಯದಾಟದಲ್ಲಿ ವೀರಶೈವ ಲಿಂಗಾಯತರು ಕಾರ್ಡ್‌ʼಗಳಾ ?

ಒಬ್ಬ ರಾಜಕೀಯ ನಾಯಕ ತನ್ನ ಹಳೆಯ ವ್ಯಸನವನ್ನು ನೆನಪಿಸಿಕೊಳ್ಳುವ ಕ್ಷಣದಲ್ಲಿ, ನಾವು ಇನ್ನೊಂದು ಪ್ರಶ್ನೆ ಕೇಳಲೇಬೇಕು- ನಿರ್ಧಾರಗಳನ್ನು ರೂಪಿಸುವ ಮನಸ್ಥಿತಿ ಯಾವುದು? ವ್ಯಕ್ತಿಯ ಮನೋವೈಶಿಷ್ಟ್ಯಗಳು ರಾಜಕೀಯ ಕ್ರಮಗಳಲ್ಲಿ ಪ್ರತಿಫಲಿಸು ತ್ತವೆಯೇ? ಈ ಪ್ರಶ್ನೆಯ ಹಾದಿಯನ್ನು ಹಿಡಿದಾಗ, ಇಸ್ಪೀಟ್ ಆಟದ ಮನೋವಿಜ್ಞಾನವನ್ನು ನೋಡದೇ ಇರಲು ಸಾಧ್ಯ ವಿಲ್ಲ.

Dr Sadhanashree Column: ಬೇವಿನ ಕಹಿ ರುಚಿಯೊಳಗಿನ ಮಧುರ ರಹಸ್ಯವನ್ನು ಬಲ್ಲಿರಾ ?

ಬೇವಿನ ಕಹಿ ರುಚಿಯೊಳಗಿನ ಮಧುರ ರಹಸ್ಯವನ್ನು ಬಲ್ಲಿರಾ ?

ನಮ್ಮ ಸಂಸ್ಕೃತಿಯಲ್ಲಿ ಬೇವಿನ ಮರಕ್ಕೂ ಅದರ ಎಲೆಗೂ ನೀಡಿರುವ ಮಹತ್ವವನ್ನು ಇದು ಸ್ಪಷ್ಟವಾಗಿ ತೋರಿಸುತ್ತದೆ. ಭಾರತೀಯ ಹಬ್ಬಗಳನ್ನು ಗಮನಿಸಿದರೆ ಅವು ಕೇವಲ ಆಚರಣೆ ಗಳಲ್ಲ; ಅವು ನಮ್ಮ ಆರೋಗ್ಯಕರ ಜೀವನಶೈಲಿಗೆ ಮಾರ್ಗದರ್ಶಿಗಳೂ ಆಗಿವೆ. ಋತು ಬದಲಾವಣೆಯ ಸಂದರ್ಭಗಳಲ್ಲಿ ದೇಹದೊಳಗಿನ ದೋಷಗಳ ಸಮತೋಲನವನ್ನು ಕಾಪಾಡಿ ಕೊಳ್ಳಲು ಯಾವ ರೀತಿಯ ಆಹಾರ ಮತ್ತು ಆಚರಣೆಗಳನ್ನು ಪಾಲಿಸಬೇಕು ಎಂಬುದನ್ನು ಹಬ್ಬಗಳ ಮೂಲಕ ನಮ್ಮ ಪೂರ್ವಜರು ತಿಳಿಸಿ ಕೊಟ್ಟಿದ್ದಾರೆ.

Dr Vijay Darda Column: ಯುದ್ಧವನ್ನು ಯಾರ ಗೆದ್ದರೂ ಗೋಳು ಜನಸಾಮಾನ್ಯರದ್ದೇ !

ಯುದ್ಧವನ್ನು ಯಾರ ಗೆದ್ದರೂ ಗೋಳು ಜನಸಾಮಾನ್ಯರದ್ದೇ !

ಅನಿಲ ಕೊರತೆಯ ವಿಷಯದಲ್ಲಿ ಸಾಕಷ್ಟು ರಾಜಕಾರಣ ಕೂಡ ನಡೆಯುತ್ತಿದೆ. ಸರಕಾರ ಅದನ್ನು ನೋಡಿಕೊಳ್ಳುತ್ತದೆ. ಜನರ ಸಹಕಾರದಿಂದ ಈ ಸಮಸ್ಯೆಯೂ ಬಗೆಹರಿಯುತ್ತದೆ ಎಂದು ಆಶಿಸೋಣ. ನನಗೆ ಚಿಂತೆಯಿರುವುದು ರಸ್ತೆ ಬದಿಯ ಸಣ್ಣಪುಟ್ಟ ಹೋಟೆಲ್ ಅಥವಾ ಢಾಬಾಗಳ ಬಗ್ಗೆ. ಅವುಗಳನ್ನು ನಡೆಸುವವರು ಬಡವರು ಮತ್ತು ಅಲ್ಲಿ ತಿನ್ನುವವರು ಕೂಡ ಜನಸಾಮಾನ್ಯರು.

‌Mohan Vishwa Column: ನೋಟ್‌ ಬ್ಯಾನ್ ನೆನಪಿಸಿದ ದುರಂಧರ್‌

‌Mohan Vishwa Column: ನೋಟ್‌ ಬ್ಯಾನ್ ನೆನಪಿಸಿದ ದುರಂಧರ್‌

ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರನ್ನು ನುಸುಳಿಸಿ ಭಾರತದಲ್ಲಿ ದುಷ್ಕೃತ್ಯ ಗಳನ್ನು ನಡೆಸಲು ಪಾಕಿಸ್ತಾನಕ್ಕೆ ಬೇಕಿದ್ದ ಹಣದ ಮೂಲ ನಕಲಿ ನೋಟುಗಳು. ಈ ನಕಲಿ ನೋಟಿನ ಬಹುದೊಡ್ಡ ಜಾಲವನ್ನು ಹೊಂದಿದ್ದ ಪಾಕಿಸ್ತಾನದ ಏಜೆಂಟ್‌ಗಳು ಸಾವಿರಾರು ಕೋಟಿ ರು. ಮೌಲ್ಯದ ನಕಲಿ ನೋಟುಗಳನ್ನು ‘ಹವಾಲಾ’ ವ್ಯವಸ್ಥೆಯ ಮೂಲಕ ಭಾರತದ ವಿವಿಧೆಡೆಗೆ ಕಳುಹಿಸುತ್ತಿದ್ದರು.

Vishweshwar Bhat Column: ಸರ್ಕ್ಯುಲರ್ ಫೈರಿಂಗ್ ಸ್ಕ್ವಾಡ್ ಅಂದ್ರೆ ?

Vishweshwar Bhat Column: ಸರ್ಕ್ಯುಲರ್ ಫೈರಿಂಗ್ ಸ್ಕ್ವಾಡ್ ಅಂದ್ರೆ ?

ಕಾಂಗ್ರೆಸ್ ಸಂಸದ ಶಶಿ ತರೂರ್ ಆಗಾಗ ‘Circular Firing Squad’ ಎಂಬ ಪದವನ್ನು ಬಳಸುವು ದನ್ನು ಗಮನಿಸಿರಬಹುದು. ಕೆಲವು ರಾಜತಾಂತ್ರಿಕರು ಮತ್ತು ರಾಜಕೀಯ ವಿಶ್ಲೇಷಕರು ಸಹ ಈ ಪದವನ್ನು ಹೆಚ್ಚಾಗಿ ಬಳಸುತ್ತಾರೆ. ವೃತ್ತಾಕಾರದ ಫೈರಿಂಗ್ ಸ್ಕ್ವಾಡ್ ಅಥವಾ ವೃತ್ತಾಕಾರದ ಗುಂಡಿನ ದಾಳಿ ನಡೆಸುವವರು ಎಂಬುದು ಒಂದು ರೂಪಕ.

Roopa Gururaj Column: ವಿಶ್ವಾಮಿತ್ರನ ಪ್ರತಿಸೃಷ್ಟಿ, ತ್ರಿಶಂಕು ಸ್ವರ್ಗ

Roopa Gururaj Column: ವಿಶ್ವಾಮಿತ್ರನ ಪ್ರತಿಸೃಷ್ಟಿ, ತ್ರಿಶಂಕು ಸ್ವರ್ಗ

ವಿಶ್ವಾಮಿತ್ರರು ಸೃಷ್ಟಿಸಿದ ಹೊಸ ನಕ್ಷತ್ರಗಳು ಮತ್ತು ಲೋಕವು ಹಾಗೆಯೇ ಉಳಿಯುವಂತಾ ಯಿತು. ತ್ರಿಶಂಕುವು ಭೂಮಿ ಮತ್ತು ಸ್ವರ್ಗದ ನಡುವೆ ಇರುವ ಆ ಹೊಸ ಲೋಕದ ಇರಬೇಕೆಂದು ನಿರ್ಧಾರವಾಯಿತು. ಅಂದಿನಿಂದ ತ್ರಿಶಂಕು ಆ ಎರಡೂ ಲೋಕಗಳ ನಡುವೆ ತೂಗುತ್ತಾ ಉಳಿದನು.

ಚಂದ್ರದರ್ಶನ ʼಹಿರಿಯರಿಗೆ ನಮಸ್ಕಾರʼ !

ಚಂದ್ರದರ್ಶನ ʼಹಿರಿಯರಿಗೆ ನಮಸ್ಕಾರʼ !

ಮಾವಿನ ಮರದಲ್ಲಿರುವ ಎಲೆಯನ್ನು ನೀಂಟಿ ನೀಂಟಿ ತಿಂದು ಧ್ವನಿಯ ಮಾಧುರ್ಯ ವನ್ನು ಹೆಚ್ಟಿಸಿಕೊಂಡು ಇಂಪಾದ ದ್ವನಿಯನ್ನು ಹೊರಡಿಸುವದರಲ್ಲಿ ಕೋಗಿಲೆ ತೃಪ್ತಿಯನ್ನು ಕಾಣುತ್ತದೆ. ಇದೇ ಸಮಯದಲ್ಲಿ ಮರ-ಗಿಡ- ಬಳ್ಳಿಗಳು ಹಚ್ಚ ಹಸುರಿನಿಂದ ಕೂಡಿ ಕೊಂಡು ಮೈ-ಮನ ದುಂಬಿರುತ್ತವೆ.

Vidyashankar Sharma Column: ʼವಿನಯʼವೇ ಭೂಷಣ

ʼವಿನಯʼವೇ ಭೂಷಣ

ವಿನಮ್ರತೆಯನ್ನು ರೂಢಿಸಿಕೊಳ್ಳಲು ನಮ್ಮಲ್ಲಿ ಕೆಲ ಬದಲಾವಣೆಗಳನ್ನು ತಂದುಕೊಳ್ಳ ಬೇಕಾ ಗುತ್ತದೆ. ಮೊದಲನೆಯದಾಗಿ, ನಾವು ಒಳ್ಳೆಯ ಕೇಳುಗರಾಗಬೇಕು. ಇದು ವಿನಯವಂತಿಕೆಯ ಬಹುಮುಖ್ಯ ಲಕ್ಷಣವಾಗಿದೆ. ನಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುವುದು, ಸರಳತೆಯ ಕಡೆಗೆ ನಾವು ಇಡಬಹುದಾದ ದೊಡ್ಡ ಹೆಜ್ಜೆ. ಈ ಹೆಜ್ಜೆಯಿಡಲು ಧೈರ್ಯ ಬೇಕಾಗುತ್ತದೆ.

ಹೊಸ ಯುಗದ ಕಾವ್ಯಾತ್ಮಕ ಉದಯ

ಹೊಸ ಯುಗದ ಕಾವ್ಯಾತ್ಮಕ ಉದಯ

ವಸಂತ ಋತುವಿನ ಮೃದುವಾದ ಗಾಳಿ, ಹಸಿರು ಚಿಗುರುಗಳ ನಗು, ಹೂಗಳ ಸುಗಂಧ-ಇವೆಲ್ಲವೂ ಯುಗಾದಿಯ ಆಗಮನವನ್ನು ಕಾವ್ಯಾತ್ಮಕವಾಗಿ ಸಾರುತ್ತವೆ. ಯುಗಾದಿ ದಿನವು ಜೀವನದ ಒಂದು ತತ್ವಶಾಸ್ತ್ರೀಯ ಪಾಠವನ್ನು ನೀಡುತ್ತದೆ. ಬೇವು-ಬೆಲ್ಲದ ಸಂಯೋಜನೆ, ಕಹಿ ಮತ್ತು ಸಿಹಿಯ ಸಮ್ಮಿಳನವಾಗಿ, ಜೀವನದಲ್ಲಿ ಬರುವ ಸುಖ-ದುಃಖಗಳ ಪ್ರತೀಕ ವಾಗಿದೆ.

ಪರಾಭವ ನಾಮ ಸಂವತ್ಸರಕ್ಕೆ ಸ್ವಾಗತ

ಪರಾಭವ ನಾಮ ಸಂವತ್ಸರಕ್ಕೆ ಸ್ವಾಗತ

ಯುಗಾದಿಯಂದು ಸೂರ್ಯೋದಯದ ಸಮಯದಲ್ಲಿಯೇ ಬ್ರಹ್ಮದೇವ ಸೃಷ್ಟಿಯ ಕಾರ್ಯ ವನ್ನು ಆರಂಭಿಸಿದರು, ಕಾಲಗಣನೆ ಆರಂಭವಾದ ದಿನ ಮತ್ತು ನಾರಾಯಣನ ಏಳನೇ ಪ್ರಸಿದ್ಧ ಅವತಾರವಾದ ಶ್ರೀರಾಮ ತನ್ನ ಸಹೋದರ ಲಕ್ಷ್ಮಣ ಮತ್ತು ಪತ್ನಿ ಸೀತೆಯೊಟ್ಟಿಗೆ 14 ವರ್ಷಗಳ ವನವಾಸ ಮುಗಿಸಿ, ಮರಳಿ ಅಯೋಧ್ಯೆಗೆ ಬಂದು ರಾಜನಾಗಿ ಪಟ್ಟಾಭಿಷಿಕ್ತನಾದ ದಿನ, ಅಂದರೆ ರಾಮರಾಜ್ಯ ಆರಂಭವಾದ ದಿನವೆಂದು ಪುರಾಣ ಗ್ರಂಥಗಳಲ್ಲಿ ಉಲ್ಲೇಖವಿದೆ

ಚೈತ್ರಮಾಸ, ವಸಂತ ಋತುವಿನ ಮೊದಲ ದಿನ

ಚೈತ್ರಮಾಸ, ವಸಂತ ಋತುವಿನ ಮೊದಲ ದಿನ

ಸೌರಮಾನ ಯುಗಾದಿ ಸಾಮಾನ್ಯವಾಗಿ ಈಗ ಇದು ಏಪ್ರಿಲ್ 14 ಅಥವಾ 15ನೇ ತಾರೀಖಿಗೆ ಬೀಳುತ್ತದೆ. ಕರಾವಳಿಯವರು ಸೌರಮಾನ ಯುಗಾದಿ ಎಂದು ಹೊಸ ವರ್ಷವನ್ನು ಆಚರಿಸು ತ್ತಾರೆ. ಮಹಾರಾಷ್ಟ್ರದಲ್ಲಿ ಗುಡಿಪಾಡ್ ಪಾಡ್ಯಮಿ ದಿವಸ ಗುಡಿಯನ್ನು ಏರಿಸುವು ದೇ ಗುಡಿಪಾಡ್ವ. ಒಂದು ಕೋಲಿಗೆ ವಸ್ತ್ರವನ್ನು ಕಟ್ಟಿ, ಹೂವಿನ ಹಾರವನ್ನು ಏರಿಸಿ ‘ಗುಡಿ’ ಎಂದು ಮೂಲೆಯಲ್ಲಿ ಇರಿಸುವರು.

ನವಭಾವದ ನವಬದುಕನು ಹೊಸ ಯುಗಾದಿ ತೆರೆಯಲಿ

ನವಭಾವದ ನವಬದುಕನು ಹೊಸ ಯುಗಾದಿ ತೆರೆಯಲಿ

ಯುಗಾದಿ ಹಬ್ಬವು ದಕ್ಷಿಣ ಭಾರತದ ಜನರಿಗೆ ಅತ್ಯಂತ ಶ್ರೇಷ್ಠ ಹಬ್ಬವಾಗಿದ್ದು, ಜೀವನದ ಹೊಸ ಆರಂಭದ ಸಂಕೇತವಾಗಿದೆ, ಚೈತ್ರ ಮಾಸದ ಮಾಸದ ಮೊದಲ ದಿನದಂದು, ಬರುವ ಈ ಹಬ್ಬ ವಸಂತ ಋತುವಿನ, ಆಗಮನವನ್ನು ಸೂಚಿಸುತ್ತದೆ. ಯುಗಾದಿ ಎಂಬುದು ‘ಯುಗ ಮತ್ತು ಆದಿ’ ಎಂಬ ಸಂಸ್ಕೃತ ಶಬ್ದಗಳಿಂದ ಉಗಮವಾಗಿದೆ. ಕನ್ನಡದಲ್ಲಿ ಹೊಸ ವರ್ಷದ ಆರಂಭ ಎಂದೇ ಇದರ ಅರ್ಥ.

Harish Kera Column: ಯುದ್ಧ ಎಂದರೆ ಎಲ್ಲರಿಗೂ ಬಹಳ ಇಷ್ಟ !

Harish Kera Column: ಯುದ್ಧ ಎಂದರೆ ಎಲ್ಲರಿಗೂ ಬಹಳ ಇಷ್ಟ !

ಇರಾನ್-ಇಸ್ರೇಲ್-ಅಮೆರಿಕ ಯುದ್ಧದಿಂದ ನೇರ ಲಾಭ ಮಾಡಿಕೊಂಡವರು ಯಾರು ಎಂಬು ದನ್ನು ತಿಳಿಯಲು ಹೆಚ್ಚು ತಿಣುಕಾಡಬೇಕಿಲ್ಲ. ಕೊಲ್ಲಿ ಸಂಘರ್ಷದಿಂದಾಗಿ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ 100 ಡಾಲರ್ ದಾಟಿದೆ. ಹೀಗಾಗಿ ಈ ವರ್ಷ ಅಮೆರಿಕದ ತೈಲ ಉತ್ಪಾದಕರು ಹೆಚ್ಚುವರಿ 63 ಶತಕೋಟಿ ಡಾಲರ್ ಲಾಭ ಗಳಿಸಲಿದ್ದಾರೆ ಎಂದು ಇಂಧನ ಸಂಶೋಧನಾ ಸಂಸ್ಥೆ ರಿಸ್ಟಾಡ್ ಎನರ್ಜಿ ಲೆಕ್ಕ ಹಾಕಿದೆ.

Roopa Gururaj Column: ಸಾವಿತ್ರಿ ಬುದ್ಧಿವಂತಿಕೆಯಿಂದ, ಪತಿಯ ಮೃತ್ಯುವನ್ನೇ ಗೆದ್ದ ಕಥೆ

ಸಾವಿತ್ರಿ ಬುದ್ಧಿವಂತಿಕೆಯಿಂದ, ಪತಿಯ ಮೃತ್ಯುವನ್ನೇ ಗೆದ್ದ ಕಥೆ

ಕಾಡಿನಲ್ಲಿ ಕಟ್ಟಿಗೆ ಕತ್ತರಿಸುತ್ತಿದ್ದಾಗ ಸತ್ಯವಾನನು ಸಾವಿತ್ರಿಯ ಮಡಿಲ ಪ್ರಾಣಬಿಟ್ಟನು. ಸಾಕ್ಷಾತ್ ಮೃತ್ಯುದೇವತೆಯಾದ ಯಮಧರ್ಮರಾಯನು ಸತ್ಯವಾನನ ಪ್ರಾಣವನ್ನು ತೆಗೆದು ಕೊಂಡು ದಕ್ಷಿಣಾಭಿಮುಖವಾಗಿ ಸಾಗತೊಡಗಿದನು. ಸಾಮಾನ್ಯ ಮಾನವರಿಗೆ ಯಮನನ್ನು ನೋಡುವುದೇ ಅಸಾಧ್ಯ, ಇನ್ನು ಅವನನ್ನು ಹಿಂಬಾಲಿಸುವುದು ದೂರದ ಮಾತು. ಆದರೆ ಸಾವಿತ್ರಿ ಯಮನನ್ನೇ ಹಿಂಬಾಲಿಸಿದಳು.

Gururaj Gantihole Column: ಯುಡಿಐಡಿ: ದಿವ್ಯಾಂಗರ ಗುರುತೋ? ಗೌರವವೋ ?

Gururaj Gantihole Column: ಯುಡಿಐಡಿ: ದಿವ್ಯಾಂಗರ ಗುರುತೋ? ಗೌರವವೋ ?

ಯುಡಿಐಡಿ ಯೋಜನೆಯ ಹಿನ್ನೆಲೆ ಗಮನಿಸಿದಾಗ, ಹಿಂದೆ ಭಾರತದಲ್ಲಿ ವಿಶೇಷಚೇತನರಿಗೆ ನೀಡಲಾಗುತ್ತಿದ್ದ ಪ್ರಮಾಣಪತ್ರಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತಿತ್ತು. ಇದರಿಂದ ಹಲವು ಸಮಸ್ಯೆಗಳು ಉಂಟಾಗುತ್ತಿತ್ತು. ಒಂದೇ ವ್ಯಕ್ತಿಗೆ ಹಲವು ಪ್ರಮಾಣಪತ್ರಗಳು, ಸೇವೆಗಳ ದುರುಪಯೋಗ, ನಿಖರ ಡೇಟಾ ಲಭ್ಯವಿಲ್ಲ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಸಮನ್ವಯ ಕೊರತೆ ಮುಂತಾದ ಈ ಸಮಸ್ಯೆಗಳನ್ನು ನಿವಾರಿಸಲು, ಭಾರತ ಸರ್ಕಾರವು ಯುಡಿಐಡಿ ಯೋಜನೆಯನ್ನು ಆರಂಭಿಸಿತು.

Vishweshwar Bhat Column: ಇರಾನಿನ ಸಾವಿರ ವರ್ಷಗಳ ನಾಗರಿಕತೆಯೂ, ಐವತ್ತು ವರ್ಷಗಳ ಸಂಕೋಲೆಯೂ

ಇರಾನಿನ ಸಾವಿರ ವರ್ಷಗಳ ನಾಗರಿಕತೆಯೂ,

ಅಮೆರಿಕವನ್ನು ಬೆಂಬಲಿಸುವ ರಾಷ್ಟ್ರಗಳ ಮೇಲೆ ಇರಾನ್ ಪ್ರತೀಕಾರದ ಕ್ರಮಗಳನ್ನು ತೆಗೆದು ಕೊಳ್ಳಬಹುದು ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಆದರೆ ವಿಚಿತ್ರ ಅಂದರೆ ಇರಾನ್ ನಲ್ಲಿ ವಸ್ತುಸ್ಥಿತಿ ಮೇಲ್ನೋಟಕ್ಕೆ ಕಾಣುವಂತೆ ಸರಿ ಇಲ್ಲ. ತಮ್ಮ ದೇಶದ ಮೇಲೆ ದಾಳಿ ನಡೆಯುತ್ತಿರು ವಾಗ, ದೇಶಪ್ರೇಮ ಎಂಬ ಒಂದು ಅಂಶ ಇಡೀ ದೇಶವಾಸಿಗಳನ್ನು ಒಂದೆಡೆ ಹಿಡಿದಿಟ್ಟಿದೆ.

Vishweshwar Bhat Column: ಬಿಗ್ ಮ್ಯಾಕ್ ಇಂಡೆಕ್ಸ್ ಎಂದರೇನು?

Vishweshwar Bhat Column: ಬಿಗ್ ಮ್ಯಾಕ್ ಇಂಡೆಕ್ಸ್ ಎಂದರೇನು?

ಭಾರತದಲ್ಲಿ ಅದೇ ಬರ್ಗರ್ ಬೆಲೆ 200 ರುಪಾಯಿ ಇದೆ ಎಂದುಕೊಳ್ಳೋಣ. ಹಾಗಿದ್ದಲ್ಲಿ, ಪಿಪಿಪಿ ಸಿದ್ಧಾಂತದ ಪ್ರಕಾರ ಒಂದು ಡಾಲರ್ ಮೌಲ್ಯವು 40 ರುಪಾಯಿ ಆಗಿರಬೇಕು. ಆದರೆ, ಮಾರುಕಟ್ಟೆಯಲ್ಲಿ ಒಂದು ಡಾಲರ್ ಮೌಲ್ಯ 80 ರುಪಾಯಿ ಆಗಿದ್ದರೆ, ಭಾರತೀಯ ರುಪಾಯಿ ಯು ಡಾಲರ್ ಎದುರು ‘ಅಂಡರ್‌ವ್ಯಾಲ್ಯೂಡ್’ (ಕಡಿಮೆ ಮೌಲ್ಯದ ಸ್ಥಿತಿಯಲ್ಲಿ) ಇದೆ ಎಂದು ಅರ್ಥ.

Dr N Someshwara Column: ಅವರು ನಕ್ಕು ನಕ್ಕು ಸಾಯುತ್ತಿದ್ದರು !

Dr N Someshwara Column: ಅವರು ನಕ್ಕು ನಕ್ಕು ಸಾಯುತ್ತಿದ್ದರು !

ನಗು ಎಂದರೆ ಸುಮ್ಮನೆಯ ನಗು ವಲ್ಲ. ಗಹಗಹಿಸುವ ನಗು. ಇದು ಸಹಜ ನಗುವಲ್ಲ. ರೋಗಗ್ರಸ್ತ ನಗು. ನಿರಂತರವಾಗಿ ಗಹಗಹಿಸಿ ನಗುತ್ತಲೇ ಇರುತ್ತಾನೆ. ನಗುವು ನಿಲ್ಲುವುದೇ ಇಲ್ಲ. ಹಗಲೂ ರಾತ್ರಿ ನಗುತ್ತಲೇ ಇರುತ್ತಾನೆ. ದೇಹವು ಸೊರಗಿ ಸೊರಗಿ ಬರೀ ಮೂಳೆಗಳು ಕಾಣುತ್ತಿದ್ದರೂ ನಗು ಮಾತ್ರ ನಿಲ್ಲುವುದಿಲ್ಲ. ಹೀಗೆ ತಿಂಗಳುಗಟ್ಟಲೆ ನಕ್ಕು ನಕ್ಕು ಒಂದು ದಿನ ಸಾಯುತ್ತಾನೆ. ಹಾಗಾಗಿ ಪಾಶ್ಚಾತ್ಯ ಪತ್ರಕರ್ತರು ಈ ಕಾಯಿಲೆಯನ್ನು ‘ಲಾಫಿಂಗ್ ಡಿಸೀಸ್’ ಎಂದು ಕರೆದರು.

Janamejaya Umarji Column: ಶರಣರ ಬಯಕೆ ಲಿಂಗಾಂಗ ಸಾಮರಸ್ಯವೋ ? ಸಮಸಮಾಜವೋ ?

ಶರಣರ ಬಯಕೆ ಲಿಂಗಾಂಗ ಸಾಮರಸ್ಯವೋ ? ಸಮಸಮಾಜವೋ ?

ಉದಾತ್ತ ಲಿಂಗಾಯತವನ್ನು ಒಡೆಯ ಹೊರಟಿರುವವರೇ ವಿಶ್ವಗುರು ಜಗಜ್ಯೋತಿ ಭಕ್ತ ಭಂಡಾರಿ ಬಸವಣ್ಣನವರಿಗೆ ತಾವೇ ಒಂದು ಬಿರುದುಕೊಟ್ಟು ಅದನ್ನೇ ದೊಡ್ಡ ಸಾಧನೆ ಎಂದು ಪ್ರಚಾರ ಮಾಡಲು ಹೊರಟಿದ್ದಾರೆ. ಈಗ ಶ್ರೀಮನ್ನಿರಂಜನ ಪ್ರಣವ ಸ್ವರೂಪಿ ಜಗದ್ಗುರುಗಳನ್ನು, ಕೇವಲ ‘ಪೂಜ್ಯ’, ‘ಡಾ.’ ಶಬ್ದಗಳಿಗೆ ಇದೇ ಮಾರ್ಕ್ಸ್‌ವಾದಿಗಳೇ ಸೀಮಿತಗೊಳಿಸಿದ್ದಾರೆ.

G N Bhat Column: ಬನ್ನಂಜೆ: ಶ್ರವಣ, ಮನನ ಮತ್ತು ಧ್ಯಾನದ ಮೂರ್ತರೂಪ

ಬನ್ನಂಜೆ: ಶ್ರವಣ, ಮನನ ಮತ್ತು ಧ್ಯಾನದ ಮೂರ್ತರೂಪ

ಮಹೇಶ್ವರತೀರ್ಥ, ತನಿಶ್ಲೋಕಿ, ಶ್ರೀಧರ, ವೀರರಾಘವ ಮೊದಲಾದವರೂ ಇದ್ದಾರೆ. ಇವರ ವ್ಯಾಖ್ಯಾನದ ವಿಷಯ ಒಂದು ಕಡೆ ಇರಲಿ. ಇವರ ಹೆಸರೇ ಅನೇಕರಿಗೆ ಗೊತ್ತಿಲ್ಲ. ಇಂಥ ಹಿನ್ನೆಲೆಯಲ್ಲಿ ವಿದ್ಯಾವಾಚ ಸ್ಪತಿ ಬನ್ನಂಜೆ ಗೋವಿಂದಾಚಾರ್ಯರು ಮತ್ತು ಪ್ರೊ. ಕೆ.ಎಸ್.ನಾರಾಯಣಾ ಚಾರ್ಯರು ಡಿವಿಜಿ ಯವರು ಹೇಳಿದ ಮಾತಿನ ಕೊರತೆಯನ್ನು ನೀಗಿಸುವಲ್ಲಿ ಎಣೆಯಿಲ್ಲದ ಪಾತ್ರವನ್ನು ವಹಿಸಿದ್ದಾರೆ.

Leena Joshi Column: ಒಪ್ಪಂದ ಮಾಡಿಕೊಂಡಿದ್ದಕ್ಕೆ ಹತ್ಯೆಯಾದ ಈಜಿಪ್ಟ್‌ ಅಧ್ಯಕ್ಷ

ಒಪ್ಪಂದ ಮಾಡಿಕೊಂಡಿದ್ದಕ್ಕೆ ಹತ್ಯೆಯಾದ ಈಜಿಪ್ಟ್‌ ಅಧ್ಯಕ್ಷ

ಒಪ್ಪಂದದ ಪ್ರಕಾರ 1967ರ ಆರು ದಿನಗಳ ಯುದ್ಧದ ಸಮಯದಲ್ಲಿ ಇಸ್ರೇಲ್ ವಶಪಡಿಸಿಕೊಂಡಿದ್ದ ಸಿನಾಯ್ ಪರ್ಯಾಯ ದ್ವೀಪದಿಂದ ಇಸ್ರೇಲ್ ತನ್ನ ಸೈನ್ಯ ಮತ್ತು ನಾಗರಿಕರನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳಬೇಕಿತ್ತು. ಈ ಒಪ್ಪಂದವು ಸೂಯೆಜ್ ಕಾಲುವೆಯ ಮೂಲಕ ಇಸ್ರೇಲಿ ಹಡಗುಗಳ ಮುಕ್ತ ಸಾಗಣೆಗೆ ಮತ್ತು ತಿರಾನ್ ಜಲಸಂಧಿ ಹಾಗೂ ಅಕಾಬಾ ಕೊಲ್ಲಿಯನ್ನು ಅಂತಾರಾಷ್ಟ್ರೀಯ ಜಲಮಾರ್ಗ ಗಳೆಂದು ಗುರುತಿಸಲು ಅವಕಾಶ ಮಾಡಿಕೊಟ್ಟಿತು.

Raghava Sharma Nidle Column: ದೀದಿ...ಅವರು ಒಂದೇ ಸೆಕೆಂಡಿನಲ್ಲಿ ಮುಗಿಸುವುದು ಯಾರನ್ನು ?

ದೀದಿ...ಅವರು ಒಂದೇ ಸೆಕೆಂಡಿನಲ್ಲಿ ಮುಗಿಸುವುದು ಯಾರನ್ನು ?

“ತೃಣಮೂಲ ಕಾಂಗ್ರೆಸ್ ಸರಕಾರ ಇರುವುದರಿಂದಲೇ ನೀವು ಸುರಕ್ಷಿತವಾಗಿದ್ದು, ಒಂದೇ ವೇಳೆ ನಮ್ಮ ಸರಕಾರ ಇಲ್ಲದೇ ಹೋಗಿದ್ದರೆ ಆ ಸಮುದಾಯದವರು ಒಂದೇ ಸೆಕೆಂಡಿನಲ್ಲಿ ನಿಮ್ಮನ್ನು ಮುಗಿಸಿ ಬಿಡು ತ್ತಿದ್ದರು" ಎಂಬ ಪ್ರಚೋದನಕಾರಿ ಹಾಗೂ ಬೆದರಿಕೆ ಹಾಕುವ ರೀತಿಯ ಅವರ ಭಾಷಣ ರಾಜ್ಯಾದ್ಯಂತ ಚರ್ಚೆಯಾಗುತ್ತಿದೆ.

Vishweshwar Bhat Column: ಸೈನಿಕರು ಡ್ರಗ್ಸ್‌ ಸೇವಿಸಿದಾಗ..

Vishweshwar Bhat Column: ಸೈನಿಕರು ಡ್ರಗ್ಸ್‌ ಸೇವಿಸಿದಾಗ..

ತನ್ನದೇ ದೇಶದ ನಿರಪರಾಧಿ ಯುವಜನತೆಯನ್ನು, ಮಹಿಳೆಯರನ್ನು ಮತ್ತು ಮುಗ್ಧ ನಾಗರಿಕರನ್ನು ಸಾಯಿಸಲು ಸರಕಾರವು ತನ್ನ ಸೈನಿಕರನ್ನೇ ‘ಯಾಂತ್ರಿಕ ಕೊಲೆಗಡುಕ’ರನ್ನಾಗಿ ಬದಲಿಸುತ್ತಿದೆ. ಏನಿದು ಕ್ಯಾಪ್ಟಗನ್? ಕ್ಯಾಪ್ಟಗನ್ ಎನ್ನುವುದು ಒಂದು ಪ್ರಬಲವಾದ ಉತ್ತೇಜಕ ಔಷಧ. ಇದನ್ನು ವೈಜ್ಞಾನಿಕ ವಾಗಿ ‘ಫೆನೆಥಿಲ್ಲೈನ್’ ಎಂದು ಕರೆಯಲಾಗುತ್ತದೆ.

Loading...