ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಅಂಕಣಗಳು
ಹೈಸ್ಕೂಲ್ ಮಕ್ಕಳಿಗೆ ಅ, ಆ, ಇ, ಈ ಪಾಠ

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಕನ್ನಡ ಓದಲೂ ಬರಲ್ಲ!

ಹಳೆಗನ್ನಡ ಪದ್ಯವನ್ನು ನಿರರ್ಗಳವಾಗಿ ಓದುತ್ತಾ ಇಂಗ್ಲಿಷ್ ವ್ಯಾಕರಣವನ್ನು ನಿರ್ಭೀತವಾಗಿ ಕಲಿಯ ಬೇಕಾದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಕನ್ನಡದ ವರ್ಣಮಾಲೆ ಅ, ಆ, ಇ, ಈ, ಇಂಗ್ಲಿಷ್ ಅಲ್ಫಾಬೆಟ್‌ ಗಳಾದ ಎ, ಬಿ, ಸಿ, ಡಿಯನ್ನೇ ಸರಿಯಾಗಿ ಓದಲು, ಬರೆಯಲು ಬರುವುದಿಲ್ಲ ಎನ್ನುವ ಕಳವಳಕಾರಿ ವಿಷಯ ಹೊರ ಬಿದ್ದಿದೆ.

ಎನ್ನ ಬಸವಣ್ಣನ ಮಲಿನಗೊಳಿಸದಿರಿ

ಎನ್ನ ಬಸವಣ್ಣನ ಮಲಿನಗೊಳಿಸದಿರಿ

ಸಂಬಂಧಿಸಿದ ಎಲ್ಲ ಮಠಾಧೀಶರಲ್ಲಿ, ಮುಖಂಡರಲ್ಲಿ, ವಿದ್ವಾಂಸರಲ್ಲಿ ನನ್ನ ವಿನಂತಿ ಇಷ್ಟೇ: ನಾನು ನಂಬಿರುವ ಬಸವಣ್ಣ, ಜೀವನಾದರ್ಶವನ್ನು ಸರಳವಾಗಿ ತಿಳಿಸಿ ಕೊಟ್ಟ, ರೂಪಿಸಿಕೊಟ್ಟ, ಪ್ರತಿಪಾದಿಸಿದ ಶರಣ ಮಹಾನುಭಾವ. ಆತನನ್ನು ಕುಗ್ಗಿಸಿ, ತಿರುಚಿ, ನಿಮ್ಮ ನಿಮ್ಮ ಮೂಗಿನ ನೇರಕ್ಕೆ ಹೊಂದಿಸಬೇಡಿ. ನಿಮ್ಮ ನಿಮ್ಮ ಉದ್ದೇಶಸಾಧನೆಗಾಗಿ ಆತನನ್ನು ಮಲಿನಗೊಳಿಸಬೇಡಿ. ಆತನು ಮಾನವಕುಲಕ್ಕೆ ಜೀವನಾ ದರ್ಶವನ್ನು ತೋರಿದ-ಸಾರಿದ ಶರಣನಾಗಿ ಉಳಿಯಲು ಬಿಡಿ.

ಭಾಷಿ ಅಲ್ಲ ಬದ್ಕ್ ವಿಶ್ವ ಕುಂದಾಪ್ರ ಕನ್ನಡ ದಿನ

ಭಾಷಿ ಅಲ್ಲ ಬದ್ಕ್ ವಿಶ್ವ ಕುಂದಾಪ್ರ ಕನ್ನಡ ದಿನ

ಕುಂದಾಪ್ರ ಕನ್ನಡವೆಂಬ ಭಾಷೆ, ಮಣ್ಣಿನ ಗುಣ,ಸಾಹಿತ್ಯಸಂಸ್ಕೃತಿಯ ಇಂಪು ವಿಶ್ವದಾದ್ಯಂತ ಪಸರಿಸುವ ದೃಷ್ಟಿಯಿಂದ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯನ್ನು ಆಚರಿಸುವ ನಿರ್ಧಾರವನ್ನು ಅಂದು ತೆಗೆದುಕೊಳ್ಳಲಾಯಿತು. ಸಾಮಾಜಿಕ ಜಾಲತಾಣದ ಮೂಲಕ ವ್ಯಾಪಕ ಪ್ರಚಾರ ಗಿಟ್ಟಿಸಿಕೊಂಡ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯು ಇಂದು ಕೇವಲ ಆ ಭಾಷೆ ಮಾತನಾಡುವ ಕುಂದಾಪುರ, ಬೈಂದೂರು, ಕಾರ್ಕಳ, ಭಟ್ಕಳ,ಉಡುಪಿ ಹಾಗೂ ಬ್ರಹ್ಮಾವರ ತಾಲ್ಲೂಕಿಗಳಿಗಷ್ಟೇ ಸೀಮಿತವಾಗಿರದೇ, ಸಾಗರದಾಚೆಯೂ ಕೂಡ ಸಂಭ್ರಮದಿಂದ ಆಚರಿಸುತ್ತಿದ್ದಾರೆ.

AndhraPradesh DCM Pawan kalyan Interview: ಇತಿಹಾಸದ ಬಗ್ಗೆ ನಮ್ಮೆಲ್ಲರಲ್ಲೂ ಅರಿವಿರಬೇಕು: ಪವರ್‌ ಫುಲ್‌ ಪವನ್

ಇತಿಹಾಸದ ಬಗ್ಗೆ ನಮ್ಮೆಲ್ಲರಲ್ಲೂ ಅರಿವಿರಬೇಕು

ಕನ್ನಡ ಮತ್ತು ತೆಲುಗು ಭಾಷೆಯ ಲಿಪಿಗಳು ಒಂದಕ್ಕೊಂದು ಬಹಳಷ್ಟು ಸಾಮ್ಯತೆ ಹೊಂದಿವೆ. ಸಾಂಸ್ಕೃತಿಕವಾಗಿ ವಿಜಯನಗರ ಸಾಮ್ರಾಜ್ಯವು ಆಂಧ್ರಪ್ರದೇಶಕ್ಕೂ ವ್ಯಾಪಿಸಿತ್ತು. ಹೀಗಾಗಿ ಎರಡೂ ರಾಜ್ಯಗಳ ಮಧ್ಯೆ ಬಹಳಷ್ಟು ಸಾಂಸ್ಕೃತಿಕವಾಗಿ ನಂಟಿದೆ. ನಾನು ಸಿನಿಮಾ ಮೂಲಕ ಎಲ್ಲ ಜನರನ್ನೂ ತಲುಪಲು ಸಾಧ್ಯವಾಗಿರಲಿಲ್ಲ. ಹೀಗಾಗಿ ನನಗೆ ರಾಜಕೀಯ ಪ್ರವೇಶ ಮಾಡುವುದು ಒದಗಿ ಬಂದ ಅವಕಾಶ.

Dr Vijay Darda Column: ಅವರೇನು ಕಾರ್ಯಕರ್ತರೋ ಅಥವಾ ಗೂಂಡಾಗಳೋ ?

ಅವರೇನು ಕಾರ್ಯಕರ್ತರೋ ಅಥವಾ ಗೂಂಡಾಗಳೋ ?

ಪಾಸ್ ಇಲ್ಲದ ಯಾರನ್ನೂ ಒಳಗೆ ಬಿಡದಂತೆ ಬಿಗಿ ಭದ್ರತೆ ಕೈಗೊಳ್ಳುತ್ತೇವೆಂದು ಸರ್ಕಾರಗಳೂ ಹೇಳಿ ದ್ದವು. ಆದರೆ ಮಹಾರಾಷ್ಟ್ರದಲ್ಲಿ ನಡೆದ ಘಟನೆ ಎಲ್ಲರೂ ಕಳವಳಗೊಳ್ಳುವಂತೆ ಮಾಡಿದೆ. ವಿಧಾನ ಭವನಕ್ಕೆ ಅಕ್ರಮವಾಗಿ ಪ್ರವೇಶಿಸಲು 5000 ರೂ.ಗಳಿಂದ 10000 ರೂ.ಗಳಿಗೆ ಎಂಟ್ರಿ ಪಾಸ್‌ ಗಳನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪಗಳೂ ಕೇಳಿ ಬರುತ್ತಿವೆ.

Gururaj Gantihole Column: ಇಂಡಿಯನ್‌ ಮ್ಯಾನ್‌ ಎಂಬ ನಂಬಿಕೆ ಬೆಸೆಯುವ ಬಸ್‌ !

ಇಂಡಿಯನ್‌ ಮ್ಯಾನ್‌ ಎಂಬ ನಂಬಿಕೆ ಬೆಸೆಯುವ ಬಸ್‌ !

ಸ್ನೇಹತ್ವದ ಅತಿದೊಡ್ಡ ಪ್ರತೀಕವೆಂಬಂತೆ ಭಾರತವು QUAD (ಅಮೇರಿಕ, ಆಸ್ಟ್ರೇಲಿಯಾ ಮತ್ತು ಜಪಾನ್) ರಾಷ್ಟ್ರಗಳೊಂದಿಗೆ ಸಮೀಪದ ಪ್ರದೇಶಗಳಲ್ಲಿ ಸಂಚಾರ ಮತ್ತು ಪರಿಕಲ್ಪನೆಗಳ ಕೇಂದ್ರ ಯೋಜನೆಗಳನ್ನು ರೂಪಿಸಲು ಮುಂದಾಳತ್ವ ವಹಿಸಿದೆ. ಇಷ್ಟೆಲ್ಲ ಸ್ನೇಹ, ನಂಬಿಕೆ, ಸಂಬಂಧಗಳ ಬೆಸುಗೆ ಬಯಸುತ್ತಿರುವ ಭಾರತದಿಂದ 50ರ ದಶಕದ ಜಗತ್ತಿನ ಒಂದು ಮಾದರಿ ಮಹಾನಂಬಿಕೆಯ ಮಾಹಾಯಾನದ ಬಸ್ ಆರಂಭಿಸಿತ್ತು ಎಂದರೆ ಸೋಜಿಗವೇ ಸರಿ!

Vishweshwar Bhat Column: ಕಣ್ಣಿಗೆ ಕಾಣದ ಮೌಲ್ಯಗಳೇ ಸಂಸ್ಥೆಗಳ ನಡೆಸುವ ತೋರುದೀಪ !

ಕಣ್ಣಿಗೆ ಕಾಣದ ಮೌಲ್ಯಗಳೇ ಸಂಸ್ಥೆಗಳ ನಡೆಸುವ ತೋರುದೀಪ !

ಯಾವುದೇ ಮಾನವ ಸಮುದಾಯದ ಅದೃಶ ಸಂಪತ್ತೆಂದರೆ ಮೌಲ್ಯಗಳು. ಅದು ಸಂಸ್ಥೆಯಾಗಿರ ಬಹುದು, ಸಾಮಾಜಿಕ ಸಂಘಟನೆಯಿರಬಹುದು ಅಥವಾ ದೇಶವಿರಬಹುದು ಅವುಗಳಿಗೆ ಮೌಲ್ಯಗಳೇ ಮುಖ್ಯ. ಮೌಲ್ಯಗಳಲ್ಲಿ ಸ್ವಲ್ಪ ಬದಲಾವಣೆಯಾದರೆ ಅಥವಾ ಮೌಲ್ಯಗಳಲ್ಲಿ ತುಸು ಏರುಪೇರಾದರೆ ಸರ್ವತ್ರ ಅದರ ಪರಿಣಾಮ ಕಂಡುಬರುತ್ತದೆ. ಫ್ರೆಂಚ್ ಕ್ರಾಂತಿ ಇರಬಹುದು, ಅಮೆರಿಕದ ನಾಗರಿಕ ಹಕ್ಕುಗಳ ಚಳವಳಿ ಇರಬಹುದು, ಬ್ರಿಟನ್‌ನ ಕೈಗಾರಿಕಾ ಕ್ರಾಂತಿ ಇರಬಹುದು,

Vishweshwar Bhat Column: ಇದೊಂದು ಪುಟ್ಟ ಪ್ರಪಂಚ

ಇದೊಂದು ಪುಟ್ಟ ಪ್ರಪಂಚ

ಇಲ್ಲಿ ನಡೆಯುವ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಇದು ನಿಜಕ್ಕೂ ಒಂದು ಪುಟ್ಟ ಜಗತ್ತೇ ಅನ್ನಿಸುತ್ತದೆ. ವಿಮಾನ ನಿಲ್ದಾಣಗಳು ಜಾಗತಿಕ ಸಂಪರ್ಕದ ಕೇಂದ್ರಬಿಂದುಗಳಾಗಿವೆ. ಇಲ್ಲಿ ಜಗತ್ತಿನ ನಾನಾ ಮೂಲೆಗಳಿಂದ ಬರುವ ಜನರು ಭೇಟಿಯಾಗುತ್ತಾರೆ. ವಿವಿಧ ದೇಶಗಳ ಪ್ರಯಾಣಿಕರು, ವಿವಿಧ ಭಾಷೆಗಳನ್ನು ಮಾತನಾಡುವವರು, ವಿಭಿನ್ನ ಉಡುಪುಗಳನ್ನು ಧರಿಸಿದವರು, ಬೇರೆ ಬೇರೆ ಸಂಸ್ಕೃತಿಗಳ ಹಿನ್ನೆಲೆಯುಳ್ಳವರು ಇಲ್ಲಿ ಒಂದೆಡೆ ಸೇರುತ್ತಾರೆ.

Roopa Gururaj Column: ಕ್ಷಮಿಸುವುದು ಕೂಡ ಸಿಟ್ಟಿನ ಲಕ್ಷಣವೇ ಎಂದ ಬುದ್ಧ

ಕ್ಷಮಿಸುವುದು ಕೂಡ ಸಿಟ್ಟಿನ ಲಕ್ಷಣವೇ ಎಂದ ಬುದ್ಧ

ನಾವು ಯಾರಿಗಾದರೂ ಸಹಾಯ ಮಾಡಿದ್ದೀವಿ ಎಂದು ಹೇಳಿಕೊಳ್ಳುವುದು, ಕ್ಷಮಿಸಿದ್ದೀವಿ ಎಂದು ಸಮಾಧಾನ ಮಾಡುವುದು ಎಲ್ಲವೂ ನಾವು ಮಾಡಿದ ಕೆಲಸವನ್ನ ಮತ್ತೆ ಎತ್ತಿ ಹಿಡಿಯುವಂತಹವು. ಇಂತಹ ಕ್ರಿಯೆಗಳಿಂದ ಮಾಡಿದ ಕೆಲಸದ ಮಹತ್ವ ಕೂಡ ಕಳೆದು ಹೋಗುತ್ತದೆ. ಬದುಕನ್ನು ಅರ್ಥ ಮಾಡಿಕೊಂಡು ಮಾಗಿದಷ್ಟೂ ಹೆಚ್ಚು ಜಾಗೃತರಾಗುತ್ತಾ ಹೋಗುತ್ತೇವೆ.

Harish Kera Column: ಇಷ್ಟೊಂದು ಮಿನುಗುತಾರೆ, ಎಲ್ಲಿವರೆಗೆ ಇರುತಾರೆ?

ಇಷ್ಟೊಂದು ಮಿನುಗುತಾರೆ, ಎಲ್ಲಿವರೆಗೆ ಇರುತಾರೆ?

ʼನಾನು ಲೈಟ್‌ ಆರಿಸಲು ಹೇಳಲು ಎರಡು ಕಾರಣ- ಒಂದು, ಬಲ್ಬಿನ ಬೆಳಕು ಇದ್ದರೆ ಇಷ್ಟು ಸೊಗಸಾಗಿ ಇವು ಕಾಣುವುದಿಲ್ಲ, ಎರಡನೆಯದು, ಅವು ಲೈಟಿನ ಬೆಳಕಿಗೆ ಕಕ್ಕಾಬಿಕ್ಕಿ ಆಗಿಬಿಡುತ್ತವೆ. ಈಗ ಅವುಗಳ ಮಿಲನದ ಸಮಯ. ನೋಡಿ ಅಲ್ಲಿ, ಕೆಳಗೆ ನೆಲದಲ್ಲಿ ಹೊಳೆಯುತ್ತಿರುವುದೆಲ್ಲ ಹೆಣ್ಣು ಮಿಂಚು ಹುಳ ಗಳು. ಮೇಲೆ ಹಾರಾಡುತ್ತಿರುವವು ಗಂಡು ಹುಳಗಳು. ಈ ಕತ್ತಲಿನಲ್ಲಿ ಮಿನುಗುವ ಬೆಳಕಿನ ಮೂಲಕ ಅವು ಒಂದಕ್ಕೊಂದು ಸಂದೇಶ ಕಳಿಸುತ್ತವೆ.

ಹಬ್ಬದ ಸನಿಹದಲ್ಲಿ ವೀಳ್ಯದೆಲೆ ಬೆಲೆ ಪಾತಾಳಕ್ಕೆ

ಹಬ್ಬದ ಸನಿಹದಲ್ಲಿ ವೀಳ್ಯದೆಲೆ ಬೆಲೆ ಪಾತಾಳಕ್ಕೆ

ಕರ್ನಾಟಕದಲ್ಲಿ ಪ್ರತೀ ವರ್ಷ ಅಂದಾಜು 28.77 ಲಕ್ಷ ಹೆಕ್ಟರ್ ನಲ್ಲಿ ವೀಳ್ಯದೆಲೆ ಬೆಳೆಯಲಾಗುತ್ತದೆ, ಹವಾಮಾನಕ್ಕನುಗುಣವಾಗಿ 20.62 ಲಕ್ಷ ಟನ್ ಉತ್ಪಾದನೆಯಾಗುತ್ತದೆ. ಪ್ರಸಕ್ತ ಸಾಲಿನ ಫೆಬ್ರುವರಿ ಮತ್ತು ಮಾರ್ಚ್‌ನಲ್ಲಿ ಒಂದು ಉತ್ತಮ ದರ್ಜೆ ವೀಳ್ಯದೆಲೆ ಹೊರೆಯ ದರ 14000 ರು.ಗೂ ಏರಿತ್ತು, ಆದರೆ ಈಗ ಅದರ ಬೆಲೆ ಕೇವಲ 2000 ರು.ಗೆ ಕುಸಿದಿದೆ. ಅಂದರೆ ಒಂದು ಹೊರೆಗೆ 12 ಸಾವಿರ ರು. ಕಡಿಮೆಯಾಗಿದೆ.

Dr Sathish K Patil Column: ಬಿಹಾರದಲ್ಲಿ ಮತ್ತೆ ನಿತೀಶ್‌ ಕುಮಾರ್‌ ಅಧಿಪತ್ಯವೇ ?

ಬಿಹಾರದಲ್ಲಿ ಮತ್ತೆ ನಿತೀಶ್‌ ಕುಮಾರ್‌ ಅಧಿಪತ್ಯವೇ ?

ನಿತೀಶ್ ಕುಮಾರ್ ಇಲ್ಲದೆಯೇ ಬಿಹಾರದಲ್ಲಿ ಯಾವ ಮೈತ್ರಿಕೂಟವೂ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎನ್ನುವ ವಾತಾವರಣವಿದೆ. ಎರಡನೆಯ ಅಂಶವೆಂದರೆ, ನಿತೀಶರು ಮಾಡಿರುವ ಅಭಿವೃದ್ಧಿ ಕಾರ್ಯ ಗಳು. ನಿರುದ್ಯೋಗಿ ಯುವಜನರಿಗೆ ಮಾಸಿಕ 1000 ರು. ನಿರುದ್ಯೋಗ ಭತ್ಯೆ ಮತ್ತು ಅವರಿಗೆ ಉದ್ಯೋಗಾವ ಕಾಶ ಕಲ್ಪಿಸಲೆಂದು ‘ಬಿಹಾರ ಯೂತ್ ಕಮಿಷನ್’ ಸ್ಥಾಪಿಸುವ ನಿರ್ಧಾರ, ಬಡವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆಂದು 4 ಲಕ್ಷ ರು.ವರೆಗೆ ಸಹಾಯಧನ ಇವೇ ಮುಂತಾದ ಉಪಕ್ರಮಗಳ ಮೂಲಕ ಈ ಬಾರಿಯ ಚುನಾವಣೆಯಲ್ಲಿ ಯುವ ಮತದಾರರನ್ನು ಸೆಳೆಯುವ ತಂತ್ರ ನಿತೀಶರದ್ದು.

Surendra Pai Column: ಸಿಬಿಎಸ್‌ಸಿ ಮಾದರಿಯ ಅಳವಡಿಕೆಯಿಂದ ಯಾರಿಗೆ ಲಾಭ ?

ಸಿಬಿಎಸ್‌ಸಿ ಮಾದರಿಯ ಅಳವಡಿಕೆಯಿಂದ ಯಾರಿಗೆ ಲಾಭ ?

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಕಳೆದ ಹಲವು ವರ್ಷಗಳ ತನ್ನ ಆಡಳಿತ ವೈ-ಲ್ಯವನ್ನು ಮುಚ್ಚಿಹಾಕಲು, ಸಿಬಿಎಸ್‌ಇ ಪರೀಕ್ಷಾ ಮಾದರಿಯನ್ನು ಅಳವಡಿಸಿ ಕೊಳ್ಳುವ ಪ್ರಸ್ತಾವವನ್ನು ಇದೀಗ ಸರಕಾರಕ್ಕೆ ಸಲ್ಲಿಸಿದೆ. ಈ ಪ್ರಸ್ತಾವದಲ್ಲಿ, ವಿದ್ಯಾರ್ಥಿಯು ಆಂತರಿಕ ಅಂಕ ದೊಂದಿಗೆ ಒಟ್ಟಾರೆ 100ಕ್ಕೆ 33 ಅಂಕ ಪಡೆದರೆ ತೇರ್ಗಡೆ, ಕನ್ನಡ ಸೇರಿದಂತೆ ಪ್ರಥಮ ಭಾಷೆಗೆ 125ಕ್ಕೆ ಬದಲಾಗಿ 120 ಅಂಕಕ್ಕೆ ಪರೀಕ್ಷೆ, ಬಹು ಆಯ್ಕೆ ಹಾಗೂ ಒಂದು ಅಂಕದ ಪ್ರಶ್ನೆಗೆ ಹೆಚ್ಚು ಆದ್ಯತೆ ಎಂಬ ಮೂರು ಪ್ರಮುಖ ಅಂಶಗಳಿವೆ.

D‌r N Someshwara Column: ವೈದ್ಯ ವಿಜ್ಞಾನದ ಮುಂಗೋಳಿ: ಇಮ್‌ ಹೋಟೆಪ್

ವೈದ್ಯ ವಿಜ್ಞಾನದ ಮುಂಗೋಳಿ: ಇಮ್‌ ಹೋಟೆಪ್

ಸಕ್ಕಾರದಲ್ಲಿರುವ ಜೋಸರ್ ಮೆಟ್ಟಿಲಿನ ಪಿರಮಿಡ್ಡಿನ ವಾಸ್ತುಶಿಲ್ಪಿಯಾಗಿದ್ದ. ಇವುಗಳ ಜತೆಯಲ್ಲಿ ಇವನು ವಿದ್ವಾಂಸನಾಗಿದ್ದ, ಪುರೋಹಿತನಾಗಿದ್ದ ಹಾಗೂ ಸಮಸ್ತ ದೈಹಿಕ-ಮಾನಸಿಕ ಬೇನೆಗಳಿಗೆ ಉಪಶಮನವನ್ನು ನೀಡಬಲ್ಲವನಾಗಿದ್ದ. ‘ಇಮ್‌ಹೋಟೆಪ್’ ಎಂದರೆ ‘ಶಾಂತಿಯ ಜತೆಯಲ್ಲಿ ಬರು ವವನು’ ಎಂಬ ಅರ್ಥವನ್ನು ಧ್ವನಿಸುತ್ತಿತ್ತು.

Vishweshwar Bhat Column: ವಿಮಾನ ನಿಲ್ದಾಣ ನಿದ್ರಿಸುವುದಿಲ್ಲ

ವಿಮಾನ ನಿಲ್ದಾಣ ನಿದ್ರಿಸುವುದಿಲ್ಲ

ಅತ್ಯಾವಶ್ಯಕ ಸರಕುಗಳು, ಔಷಧಿಗಳು, ತಾಜಾ ಆಹಾರ ಪದಾರ್ಥಗಳು, ಇಲೆಕ್ಟ್ರಾನಿಕ್ಸ್ ಮತ್ತು ಇ-ಕಾಮರ್ಸ್ ವಸ್ತುಗಳು ನಿರಂತರವಾಗಿ ಸಾಗಣೆಯಾಗುತ್ತಿರುತ್ತವೆ. ಈ ಸರಕು ಸಾಗಣೆ ಕಾರ್ಯಾಚರಣೆಗಳು ಹೆಚ್ಚಾಗಿ ರಾತ್ರಿಯಲ್ಲಿ ನಡೆಯುತ್ತವೆ. ಏಕೆಂದರೆ ಆಗ ಪ್ರಯಾಣಿಕರ ವಿಮಾನಗಳ ದಟ್ಟಣೆ ಕಡಿಮೆ ಯಾಗಿರುತ್ತದೆ ಮತ್ತು ವಿಮಾನ ನಿಲ್ದಾಣದ ರನ್‌ವೇ ಮತ್ತು ಗೇಟ್‌ಗಳು ಸರಕು ವಿಮಾನಗಳಿಗೆ ಹೆಚ್ಚು ಲಭ್ಯವಿರುತ್ತವೆ. ‌ತುರ್ತು ವೈದ್ಯಕೀಯ ಹಾರಾಟಗಳು ( Medical Evacuations), ಮಾನವೀಯ ನೆರವು ವಿಮಾನ ಗಳು ಮತ್ತು ಮಿಲಿಟರಿ ಕಾರ್ಯಾಚರಣೆಗಳು ದಿನದ 24 ಗಂಟೆಯೂ ಸಿದ್ಧವಾಗಿರಬೇಕು.

Roopa Gururaj Column: ನಾಗರ ಪಂಚಮಿ ಹಬ್ಬದ ಐತಿಹ್ಯ

ನಾಗರ ಪಂಚಮಿ ಹಬ್ಬದ ಐತಿಹ್ಯ

ರಾಜನು ಬ್ರಾಹ್ಮಣನಿಗೆ ನೀಡಿದ ವರವನ್ನು ನಿರಾಕರಿಸುವಂತೆ ಇರಲಿಲ್ಲ, ಹಾಗಾಗಿ ಋಷಿಗಳು ಮಾಡು ತ್ತಿದ ಸರ್ಪ ಯಜ್ಞವನ್ನು ನಿಲ್ಲಿಸಲಾಯಿತು. ಇಂದ್ರ, ತಕ್ಷಕ ಮತ್ತು ಅವನ ಇತರ ಸರ್ಪ ಜನಾಂಗದ ಜೀವಗಳನ್ನು ಉಳಿಸಲಾಯಿತು. ಆ ದಿನ, ಹಿಂದೂ ಪಂಚಾಂಗದ ಪ್ರಕಾರ, ಶ್ರಾವಣ ಶುಕ್ಲ ಪಂಚಮಿ ಯ ದಿನ. ಅಂದಿನಿಂದ ಈ ದಿನವು ನಾಗಗಳ ಹಬ್ಬದ ದಿನವಾಗಿದೆ, ಏಕೆಂದರೆ ಈ ದಿನದಲ್ಲಿ ಅವುಗಳ ಪ್ರಾಣ ಉಳಿದಿದ ದಿನ.

Lokesh Kaayarga Column: ಈ ಸಾವನ್ನು ಖಂಡಿತವಾಗಿಯೂ ತಪ್ಪಿಸಬಹುದು !

ಈ ಸಾವನ್ನು ಖಂಡಿತವಾಗಿಯೂ ತಪ್ಪಿಸಬಹುದು !

ಬೆಂಕಿ, ನೀರಿನ ಜತೆ ಸರಸವಾಡಬಾರದೆನ್ನುವುದು ನಮ್ಮ ಹಿರಿಯರ ಅನುಭವದ ಮಾತು. ನೀರಿನ ವಿಚಾರದಲ್ಲಂತೂ ಇದು ಅಕ್ಷರಶ: ಸತ್ಯ. ಪ್ರತಿದಿನವೂ ಅದೆಷ್ಟೋ ಮಂದಿ ಆಕಸ್ಮಿಕವಾಗಿ ನೀರಲ್ಲಿ ಮುಳುಗಿ ಸಾವನ್ನಪ್ಪುವುದನ್ನು ಕಂಡಾಗ ನಮ್ಮ ಹಿರಿಯರ ಮಾತು ಅದೆಷ್ಟು ನಿಜ ಎನಿಸುತ್ತದೆ. ನಮ್ಮ ರಾಜ್ಯದಲ್ಲಿ ಪ್ರತಿದಿನ ಆರರಿಂದ ಏಳು ಮಂದಿ ನೀರಲ್ಲಿ ಮುಳುಗಿ ಮೃತಪಟ್ಟ ಘಟನೆಗಳು ವರದಿಯಾಗುತ್ತಿವೆ. ಸ್ವಲ್ಪವೇ ಈಜು ಗೊತ್ತಿದ್ದರೂ ಇವರಲ್ಲಿ ಹೆಚ್ಚಿನವರು ಬದುಕುಳಿಯುತ್ತಿದ್ದರು. ಅವರ ಕುಟುಂಬಕ್ಕೆ ಆಧಾರವಾಗಿ ಉಳಿಯುತ್ತಿದ್ದರು.

Devi Maheshwara Hampinaidu Column: ಆಪರೇಷನ್‌ ಸಿಂದೂರ ಮತ್ತು ಗುಜರಿ ಬಾಬಾ !

ಆಪರೇಷನ್‌ ಸಿಂದೂರ ಮತ್ತು ಗುಜರಿ ಬಾಬಾ !

ಹಿಂದೂ ಹೆಣ್ಣು ಮಕ್ಕಳ ‘ಸಿಂದೂರ ತಿಲಕ’ವನ್ನು ಅಳಿಸುವ ಏಕೈಕ ಉದ್ದೇಶದ ಜಿಹಾದಿ ಮತ್ತು ಕ್ರೈಸ್ತ ಮಿಷನರಿ ಮತಾಂತರ ದಂಧೆಗಳನ್ನು ದೇಶದೊಳಗೆ ಮೊದಲು ಮಟ್ಟಹಾಕಬೇಕಿದೆ. ಇದಕ್ಕೆ ಬೇರೆಯದೇ ತೆರನಾದ ‘ಆಪರೇಷನ್ ಸಿಂದೂರ’ ಕಾರ್ಯಾಚರಣೆಯ ಅಗತ್ಯವಿದೆ. ಆಳುಗರು ಈ ನಿಟ್ಟಿನಲ್ಲಿ ಕಟಿಬದ್ಧರಾಗಬೇಕಷ್ಟೇ....

Thimmanna Bhagwat Column: ಪವರ್‌ ಆಫ್‌ ಅಟಾರ್ನಿ ದುರುಪಯೋಗ ಮತ್ತು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ

ಪವರ್‌ ಆಫ್‌ ಅಟಾರ್ನಿ ದುರುಪಯೋಗ ಮತ್ತು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ

ಖೊಟ್ಟಿ ಸಹಿ ಮೂಲಕ GPA ರಚಿಸಿ ಆಸ್ತಿಗಳ ವರ್ಗಾವಣೆಗೆ ಯತ್ನಿಸಿದ ಅನೇಕ ಪ್ರಕರಣಗಳಿವೆ. ಉದಾ: ‘ದಿಲ್ಲಿ ಸರಕಾರ ವರ್ಸಸ್ ಜನ್ಮಯ ಸಿಂಗ್’, ‘ಗುರುಚರಣ್ ಸಿಂಗ್ ವರ್ಸಸ್ ದಿಲ್ಲಿ ಸರಕಾರ’ ಮುಂತಾದವು. ತಂದೆ ತಾಯಿಯರ, ಸೋದರರ ಸಹಿ ಫೋರ್ಜರಿ ಮಾಡಿ GPA ರಚಿಸಿ ನೋಟರಿಯ ಸಹಿ ಮತ್ತು ಮುದ್ರೆಗಳನ್ನೂ ಫೋರ್ಜರಿ ಮಾಡಿದ ಪ್ರಕರಣಗಳಿವೆ.

Rangaswamy Mookanahalli Column: ಆಷಾಢದಲ್ಲಿ ಮೈಸೂರಿನ ಅಂದವೇ ಬೇರೆ !

ಆಷಾಢದಲ್ಲಿ ಮೈಸೂರಿನ ಅಂದವೇ ಬೇರೆ !

ಆಷಾಢ ಮಾಸದಲ್ಲಿ ಮೈಸೂರು ಇದಕ್ಕಿದ್ದಂತೆ ಬದಲಾಗಿ ಬಿಡುತ್ತದೆ. ಮೈಸೂರಿನ ಗಲ್ಲಿಗಲ್ಲಿಗಳಲ್ಲಿ ಆಷಾಢ ಶುಕ್ರವಾರ ಅನ್ನದಾನ ಮಾಡುವುದು ಅತಿ ಸಾಮಾನ್ಯ ವಿಷಯವಾಗಿದೆ. ತಾಯಿ ಚಾಮುಂಡೇ ಶ್ವರಿಯು ಶಕ್ತಿದೇವತೆಯಾಗಿರುವ ಕಾರಣ ಮಾಂಸಾಹಾರವನ್ನು ಕೂಡ ಹೇರಳವಾಗಿ ಮಾಡಿ ಹಂಚಲಾಗುತ್ತದೆ. ಮೈಸೂರಿಗೆ ಹೊಸದಾಗಿ ಬಂದು ನೆಲೆ ನಿಂತ ಮೊದಲ ಆಷಾಢದಲ್ಲಿ ಇದನ್ನು ನೋಡಿ ಅಚ್ಚರಿಪಟ್ಟಿದ್ದೆ. ಇದೇನೋ ಅಬ್ಬರು, ಇಬ್ಬರು ಮಾಡಿಸುತ್ತಾರೆ ಎಂದು ಕೊಂಡಿದ್ದೆ.

Ranjith H Ashwath Column: ನಾಯಕರ ಮೇಲಾಟ: ಕಾರ್ಯಕರ್ತರಿಗೆ ಒದ್ದಾಟ

ನಾಯಕರ ಮೇಲಾಟ: ಕಾರ್ಯಕರ್ತರಿಗೆ ಒದ್ದಾಟ

ಪಕ್ಷದ ನಾಯಕರ ನಡುವಿನ ತಿಕ್ಕಾಟವಿದ್ದರೂ, ಇದರಲ್ಲಿ ಅತಿಹೆಚ್ಚು ಸಮಸ್ಯೆಗೆ ಒಳಗಾಗಿದ್ದು ಮಾತ್ರ ಸಂಘಟನೆ. ಏಕೆಂದರೆ, ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಇತ್ತ ಪಕ್ಷವನ್ನೂ ಬಿಟ್ಟುಕೊಡಲಾಗದೇ, ಅತ್ತ ನಾಯಕರನ್ನೂ ಬಿಟ್ಟುಕೊಡಲಾಗದ ಸ್ಥಿತಿ ನಿರ್ಮಾಣವಾಗಿತ್ತು. ಉದಾಹರಣೆಗೆ, ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಲಿಂಬಾವಳಿ ಅಥವಾ ಜಿ.ಎಂ.ಸಿದ್ದೇಶ್ವರ ಅವರೊಂದಿಗೆ ದಶಕಗಳ ಕಾಲ ಗುರುತಿಸಿಕೊಂಡಿರುವ ಪಕ್ಷದ ಕಾರ್ಯಕರ್ತರು ಈಗ ರಾಜ್ಯಾಧ್ಯಕ್ಷ ಹಾಗೂ ತಮ್ಮ ನಾಯಕನ ನಡುವೆ ಭಿನ್ನಮತ ಉಂಟಾದ ಮಾತ್ರಕ್ಕೆ ಇತ್ತ ನಾಯಕರನ್ನು ಬಿಡಲಾಗದೇ, ಅತ್ತ ಪಕ್ಷವನ್ನೂ ಬಿಡಲಾಗದ ಸ್ಥಿತಿಗೆ ಬಂದು ನಿಂತಿದ್ದಾರೆ.

Vishweshwar Bhat Column: ರನ್‌ ವೇ ಮೇಲಿನ ಗುರುತುಗಳು

ರನ್‌ ವೇ ಮೇಲಿನ ಗುರುತುಗಳು

ರನ್‌ವೇಯ ಪ್ರಾರಂಭದಲ್ಲಿ ದೊಡ್ಡ ಬಿಳಿ ಸಂಖ್ಯೆಗಳನ್ನು (ಉದಾಹರಣೆಗೆ 27 ಅಥವಾ 09) ನೀವು ನೋಡಿರುತ್ತೀರಿ. ಇವು ರನ್‌ವೇಯ ಕಾಂತೀಯ ದಿಕ್ಕನ್ನು ಸೂಚಿಸುತ್ತವೆ. ಉದಾಹರಣೆಗೆ, ‘27’ ಎಂದರೆ ರನ್‌ವೇಯು 270 ಡಿಗ್ರಿ (ಪಶ್ಚಿಮ) ದಿಕ್ಕಿನಲ್ಲಿ ಇದೆ ಎಂದು ಅರ್ಥ. ಹಾಗೆಯೇ ‘09’ ಎಂದರೆ 90 ಡಿಗ್ರಿ ಪೂರ್ವ ದಿಕ್ಕಿನಲ್ಲಿದೆ ಎಂದು ಅರ್ಥ.

Roopa Gururaj Column: ಹಸುವಿನ ಕುತ್ತಿಗೆಗೆ ಕಟ್ಟಿದ ಹಗ್ಗ, ಅವನನ್ನೂ ಬಂಧಿಸಿತ್ತು

ಹಸುವಿನ ಕುತ್ತಿಗೆಗೆ ಕಟ್ಟಿದ ಹಗ್ಗ, ಅವನನ್ನೂ ಬಂಧಿಸಿತ್ತು

ಯಾರನ್ನು ನಾವು ಬಂಧಿಸಿಡುತ್ತೇವೆಯೊ, ಅವರೊಂದಿಗೆ ನಾವೇ ಬಂದಿತರಾಗಿರುತ್ತೇವೆ. ಅವರನ್ನು ಬಿಟ್ಟು ನಮ್ಮಿಂದ ಇರಲಾಗದು.ಇದೇ ಜೀವನದ ಒಂದು ಅನಿವಾರ್ಯ ಕರ್ಮ ಎಂದರು. ಅವನಿಗೆ ಅವರ ಮಾತುಗಳ ಒಳಾರ್ಥ ತಿಳಿಯಿತು. ಕೈಮುಗಿದು ತನಗೆ ಸಿಕ್ಕ ಜ್ಞಾನಕ್ಕೆ ಅವರಿಗೆ ನಮಸ್ಕರಿಸಿದ. ಆಗ ಸಂತರು ಹೇಳಿದರು ‘ಯಾರು ಬಂಧನದಿಂದ ಮುಕ್ತರಾಗಲು ಬಯಸುತ್ತಾರೋ, ಅವರು ಎಂದಿಗೂ ಯಾರನ್ನೂ ಬಂಧಿತರನ್ನಾಗಿ ಮಾಡುವುದಿಲ್ಲ.

‌ಪ್ರವಾಹ ತಡೆಗೆ ಸ್ಲೂಯಿಸ್‌ ಗೇಟ್

ಪ್ರವಾಹ ತಡೆಗೆ ಸ್ಲೂಯಿಸ್‌ ಗೇಟ್

ನಗರದ ಪ್ರಮುಖ ವಲಯಗಳಲ್ಲಿ ಮಳೆ ಬಂದಾಗ ಉಂಟಾಗುವ ಸಮಸ್ಯೆಯನ್ನು ನಿಯಂತ್ರಿಸಲು ಪಾಲಿಕೆ ಮುಂದಾಗಿದ್ದು, ಈ ನಿಟ್ಟಿನಲ್ಲಿ 15 ಸ್ಲೂಯಿಸ್ ಗೇಟ್‌ಗಳು ಕಾರ್ಯ ನಿರ್ವಹಿಸುತ್ತಿದ್ದರೆ, 7 ಗೇಟ್‌ಗಳ ಅಳವಡಿಕೆ ಕಾರ್ಯವು ಪ್ರಗತಿಯಲ್ಲಿದೆ. ಇನ್ನು ಒಂದು ಗೇಟ್ ಅಳವಡಿಕೆಯ ಪ್ರಸ್ತಾವನೆಯನ್ನು ಸರಕಾರಕ್ಕೆ ಕಳುಹಿಸಿದ್ದು, ಈ ಮೂಲಕ ಸಾರ್ವಜನಿಕರ ಸಮಸ್ಯೆಗೆ ಪರಿಹಾರ ಒದಗಿಸಲು ಪಾಲಿಕೆ ಕಾರ್ಯಪ್ರವೃತ್ತವಾಗಿದೆ

Loading...