ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ವಿದೇಶ

Viral Video: ಬಿಲಿಯನೇರ್ vs ಅಪ್ಪನಾಗಿರುವುದು! ಮಗನನ್ನು ಹೆಗಲ ಮೇಲೆ ಹೊತ್ತುಕೊಂಡ ಎಲಾನ್‌ ಮಸ್ಕ್; ವಿಡಿಯೊ ವೈರಲ್

ಮಗನನ್ನು ಹೆಗಲ ಮೇಲೆ ಹೊತ್ತುಕೊಂಡ ಎಲಾನ್‌ ಮಸ್ಕ್

Elon Musk Carrying Son: ಅಮೆರಿಕ ಉದ್ಯಮಿ ಎಲಾನ್ ಮಸ್ಕ್ ತಮ್ಮ ಸಾಹಸಗಳು ಮತ್ತು ದಿಟ್ಟ ಆಲೋಚನೆಗಳಿಗಾಗಿ ಆಗಾಗ ಸುದ್ದಿಯಲ್ಲಿರುತ್ತಾರೆ. ಇದೀಗ ತಮ್ಮ ಮಗನೊಂದಿಗೆ ಮಗುವಂತಾದ ಅವರ ವರ್ತನೆಯು ನೆಟ್ಟಿಗರ ಮನಗೆದ್ದಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೊವೊಂದು ಎಲಾನ್ ಮಸ್ಕ್ ಅವರ ಇನ್ನೊಂದು ಮುಖವನ್ನು ಪ್ರದರ್ಶಿಸಿದೆ.

MB Patil: ಧಾರವಾಡದಲ್ಲಿ ಜಪಾನಿನ ಹಿಟಾಚಿ ಮಷಿನರಿ ಕಂಪನಿಯ ಅಭಿವೃದ್ಧಿ ಕೇಂದ್ರ ಸ್ಥಾಪನೆ: ಎಂ.ಬಿ. ಪಾಟೀಲ

ಜಪಾನ್‌ನಲ್ಲಿ ರಾಜ್ಯದ ನಿಯೋಗದ ಎರಡನೇ ದಿನದ ಯಶಸ್ವಿ ರೋಡ್‌ ಷೋ

Invest Karnataka: ಜಪಾನಿನ ಹಿಟಾಚಿ ಕನ್‌ಸ್ಟ್ರಕ್ಷನ್‌ ಮಷಿನರಿ ಕಂಪನಿಯು ಧಾರವಾಡದಲ್ಲಿ ನಿರ್ಮಾಣ ಯಂತ್ರೋಪಕರಣಗಳ ಅಭಿವೃದ್ಧಿ ಕೇಂದ್ರ ಸ್ಥಾಪಿಸಲಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ. ಧಾರವಾಡದಲ್ಲಿ 2027ರ ವೇಳೆಗೆ ಕಾರ್ಯಾರಂಭ ಮಾಡಲಿರುವ ಈ ಕೇಂದ್ರವು, ನಿರ್ಮಾಣ ಯಂತ್ರೋಪಕರಣಗಳ ಜಾಗತಿಕ ಉತ್ಪನ್ನಗಳ ವಿನ್ಯಾಸ ರೂಪಿಸಲು ಮತ್ತು ಅಭಿವೃದ್ಧಿಪಡಿಸಲು ಆದ್ಯತೆ ನೀಡಲಿದೆ. 200 ಎಂಜಿನಿಯರ್‌ಗಳಿಗೆ ಇಲ್ಲಿ ಉದ್ಯೋಗ ಅವಕಾಶಗಳು ದೊರೆಯಲಿವೆ ಎಂದು ಸಚಿವರು ಹೇಳಿದ್ದಾರೆ.

Rajyalaxmi Chitrakar: ನೇಪಾಳದಲ್ಲಿ ಭುಗಿಲೆದ್ದ ಪ್ರತಿಭಟನಾಕಾರರ ಆಕ್ರೋಶ; ಮಾಜಿ ಪ್ರಧಾನಿ ಪತ್ನಿ ಸಜೀವ ದಹನ

ನೇಪಾಳ ಮಾಜಿ ಪ್ರಧಾನಿ ಪತ್ನಿ ಸಜೀವ ದಹನ

Nepal Gen Z Protest: ನೇಪಾಳದಲ್ಲಿ ಜೆನ್‌ ಝಿ ತಲೆಮಾರಿನ ಪ್ರತಿಭಟನಾಕಾರರು ಮಾಜಿ ಪ್ರಧಾನಿ ಜಲನಾಥ್‌ ಖನಾಲ್‌ ನಿವಾಸಕ್ಕೆ ಬೆಂಕಿ ಹಚ್ಚಿದ್ದು, ಅವರ ಪತ್ನಿ ರಾಜಲಕ್ಷ್ಮೀ ಚಿತ್ರಾಕರ್‌ ಜೀವಂತವಾಗಿ ಸುಟ್ಟು ಹೋಗಿದ್ದಾರೆ ಎಂದು ವರದಿಯೊಂದು ತಿಳಿಸಿದೆ.

Nepal Gen Z Protest: ಜೆನ್‌ ಝಿ ಪ್ರತಿಭಟನೆಗೆ ಮಣಿದು ನೇಪಾಳ ಪ್ರಧಾನಿ ಒಲಿ, ಅ‍ಧ್ಯಕ್ಷ ರಾಮಚಂದ್ರ ಪೌಡೆಲ್‌ ರಾಜೀನಾಮೆ

ನೇಪಾಳ ಪ್ರಧಾನಿ ಒಲಿ, ಅ‍ಧ್ಯಕ್ಷ ರಾಮಚಂದ್ರ ಪೌಡೆಲ್‌ ರಾಜೀನಾಮೆ

ಫೇಸ್‌ಬುಕ್‌, ವ್ಯಾಟ್ಸ್‌ಆ್ಯಪ್‌, ಇನ್‌ಸ್ಟಾಗ್ರಾಮ್‌, ಯೂಟ್ಯೂಬ್‌ ಸೇರಿ 26 ಸಾಮಾಜಿಕ ಜಾಲತಾಣಗಳ ಮೇಲೆ ನೇಪಾಳ ಸರ್ಕಾರ ಹೇರಿದ ನಿಷೇಧದ ವಿರುದ್ಧ ಸಾವಿರಾರು ಮಂದಿ ಬೀದಿಗಿಳಿದಿದ್ದು, ಪ್ರಧಾನಿ ಕೆ.ಪಿ. ಶರ್ಮಾ ಒಲಿ ಮತ್ತು ರಾಷ್ಟ್ರಾಧ್ಯಕ್ಷ ರಾಮಚಂದ್ರ ಪೌಡೆಲ್‌ ರಾಜೀನಾಮೆ ನೀಡಿದ್ದಾರೆ.

France politics: ಫ್ರಾನ್ಸ್‌ ಸರಕಾರ ಪತನ, ವಿಶ್ವಾಸಮತ ಕಳೆದುಕೊಂಡ ಪ್ರಧಾನಿ ಬೇರೂ

ಫ್ರಾನ್ಸ್‌ ಸರಕಾರ ಪತನ, ವಿಶ್ವಾಸಮತ ಕಳೆದುಕೊಂಡ ಪ್ರಧಾನಿ ಬೇರೂ

ಇದರೊಂದಿಗೆ ಫ್ರಾನ್ಸ್ ಕೇವಲ 12 ತಿಂಗಳಲ್ಲಿ ನಾಲ್ಕನೇ ಪ್ರಧಾನಿಯನ್ನು ಪಡೆಯುವ ಸಾಧ್ಯತೆಯಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರಿಂದ ನೇಮಕಗೊಂಡಿದ್ದ ಬೇರೂ ಅವಿಶ್ವಾಸ ನಿರ್ಣಯದಲ್ಲಿ 364-194 ಮತಗಳ ಪ್ರಚಂಡ ಬಹುಮತದೊಂದಿಗೆ ಸೋತರು.

Nepal Gen Z Protest: ನೇಪಾಳದಲ್ಲಿ ಭುಗಿಲೆದ್ದ ಹಿಂಸಾಚಾರ; ಗುಂಡು ಹಾರಿಸಲು ಆದೇಶ

ನೇಪಾಳದಲ್ಲಿ ಭುಗಿಲೆದ್ದ ಹಿಂಸಾಚಾರ; ಗುಂಡು ಹಾರಿಸಲು ಆದೇಶ

ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪಿಸಿ ಮತ್ತು ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌, ವ್ಯಾಟ್ಸ್‌ಆ್ಯಪ್‌, ಯೂಟ್ಯೂಬ್‌, ಸ್ನ್ಯಾಪ್‌ಚಾಟ್‌ ಮುಂತಾದ ಪ್ರಮುಖ ಸಾಮಾಜಿಕ ಜಾಲತಾಣಗಳನ್ನು ನಿಷೇಧಿಸಿರುವುದನು ವಿರೋಧಿಸಿ ಸುಮಾರು ನೇಪಾಳದಲ್ಲಿ ಬೃಹತ್‌ ಪ್ರತಿಭಟನೆ ಆರಂಭವಾಗಿದ್ದು, ಹಿಂಸಾಚಾರದಲ್ಲಿ 18 ಮಂದಿ ಮೃತಪಟ್ಟಿದ್ದಾರೆ.

Humans In Mars: ಮಂಗಳ ಗ್ರಹದಲ್ಲಿ ವಾಸಿಸಲು ನಾಲ್ವರು ರೆಡಿ- ಕೆಂಪು ಗ್ರಹದಲ್ಲಿ ಜೀವನ ಸಾಗಿಸಲು ಸವಾಲುಗಳೇನು?

ಮಂಗಳ ಗ್ರಹದಲ್ಲಿ ಬದುಕಲು ಸವಾಲುಗಳೆಷ್ಟು?

ಮಂಗಳ ಗ್ರಹದಲ್ಲಿ ಜೀವಿಗಳ ವಾಸ್ತವ್ಯದ ಬಗ್ಗೆ ಹಾಗೂ ಅದರ ಸಾಧ್ಯತೆಯ ಬಗ್ಗೆ ಹಲವು ವರ್ಷಗಳಿಂದ ಚರ್ಚೆಗಳು ನಡೆಯುತ್ತಿವೆ. ಅಲ್ಲಿ ಬದುಕುಳಿಯುವುದು ಸಾಧ್ಯ ಎಂದು ಕೆಲವರು ವಾದಿಸಿದರೆ, ಇನ್ನು ಕೆಲವರು ಇಲ್ಲ ಎಂದು ಚರ್ಚಿಸುತ್ತಾರೆ. ಮತ್ತೊಂದೆಡೆ, ವಿಜ್ಞಾನಿಗಳು ಮಂಗಳನಲ್ಲಿ ಸಂಶೋಧನೆ ನಡೆಸುತ್ತಿದ್ದು, ಕಠಿಣ ಪರಿಸ್ಥಿತಿಗಳಲ್ಲಿ ಮಂಗಳ ಗ್ರಹದಲ್ಲಿ ವಾಸಿಸಲು ಸಾಧ್ಯವಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಸೌರವ್ಯೂಹದ ಗ್ರಹಗಳಲ್ಲಿ ಮಂಗಳ ಗ್ರಹವೇ ಸಂಶೋದನೆಯ ಮುಖ್ಯ ಗುರಿಯಾಗಿದ್ದು, ಮಂಗಳ ಗ್ರಹದಲ್ಲಿ 4 ಮಂದಿ ರೆಡಿಯಾಗಿದ್ದಾರೆ ಎನ್ನಲಾಗಿದೆ

Volodymyr Zelensky: ಟ್ರಂಪ್‌ ಸುಂಕ ಹೆಚ್ಚಳ ನೀತಿಗೆ ಜೈ ಎಂದ ಝೆಲೆನ್ಸ್ಕಿ

ಸುಂಕ ಹೆಚ್ಚಳ: ಟ್ರಂಪ್ ನಿರ್ಧಾರ ಸರಿಯಾಗಿದೆ ಎಂದ ಝೆಲೆನ್ಸ್ಕಿ

Zelensky supports Trump: ಸಂದರ್ಶನವೊಂದರಲ್ಲಿ ಮಾತನಾಡಿರುವ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ರಷ್ಯಾದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವ ದೇಶಗಳ ಮೇಲೆ ಹೆಚ್ಚುವರಿ ಸುಂಕ ವಿಧಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ಧಾರ ಸರಿಯಾಗಿದೆ ಎಂದು ಹೇಳಿದ್ದು, ಉಕ್ರೇನ್‌ನೊಂದಿಗೆ ನಡೆಯುತ್ತಿರುವ ಯುದ್ಧದ ಕಾಲದಲ್ಲಿ ಇದು ಸರಿಯಾದ ನಿರ್ಣಯ ಎಂದು ಹೇಳಿದ್ದಾರೆ.

Crime News: ಸಾರ್ವಜನಿಕ ಸ್ಥಳದಲ್ಲಿ ಮೂತ್ರ ಮಾಡಬೇಡ ಅಂದಿದ್ದೇ ತಪ್ಪಾಯ್ತೇ? ಅಮೆರಿಕದಲ್ಲಿ ಭಾರತೀಯನ ಶೂಟೌಟ್‌!

ಭಾರತೀಯರ ಮೇಲೆ ಅಮೆರಿಕದಲ್ಲಿ ಪದೇ ಪದೇ ಶೂಟೌಟ್!

Haryana Man Killed in US: ಅಮೆರಿಕ ದೇಶದಲ್ಲಿ ಶೂಟೌಟ್ ಪ್ರಕರಣಗಳು ಪದೇ ಪದೇ ವರದಿಯಾಗುತ್ತಿವೆ. ದೇಶದ ಎಲ್ಲೆಂದರಲ್ಲಿ ಗುಂಡಿನ ಆರ್ಭಟ ಕೇಳಿ ಬರುತ್ತಿದೆ. ಅಲ್ಲಿ ಭಾರತೀಯರ ಸರಣಿ ಹತ್ಯೆಗಳು ನಡೆಯುತ್ತಿದ್ದು, ಅದು ಅಲ್ಲಿರುವ ಭಾರತ ಮೂಲದವರಿಗೆ ತೀವ್ರ ಆತಂಕ ತಂದೊಡ್ಡಿದೆ. ಈ ಮಧ್ಯೆ ಇದೀಗ ಮತ್ತೇ ಮತ್ತೊಬ್ಬ ಭಾರತೀಯನ ಹತ್ಯೆಯಾಗಿದೆ. ಕ್ಯಾಲಿಫೋರ್ನಿಯಾದ ಸಾರ್ವಜನಿಕ ಸ್ಥಳದಲ್ಲಿ ಮಾಡುತ್ತಿದ್ದ ವ್ಯಕ್ತಿಯನ್ನು ತಡೆದಿದ್ದಕ್ಕೆ, ಭಾರತ ಮೂಲದ ಯುವಕನ ಮೇಲೆ ಗುಂಡು ಹಾರಿಸಿ ಆತನನ್ನು ಹತ್ಯೆ ಮಾಡಿದ್ದಾನೆ.

Jerusalem Shooting: ಜೆರುಸಲೇಂನಲ್ಲಿ ಪ್ಯಾಲೆಸ್ಟಿನ್ ಭಯೋತ್ಪಾದಕರ ದಾಳಿ; ನಾಲ್ವರು ಸಾವು

ಜೆರುಸಲೇಂನಲ್ಲಿ ಪ್ಯಾಲೆಸ್ಟಿನ್ ಭಯೋತ್ಪಾದಕರ ದಾಳಿ

ಇಸ್ರೇಲ್‌ ರಾಜಧಾನಿ ಜೆರುಸಲೇಂನಲ್ಲಿ ನಡೆದ ಪ್ಯಾಲೆಸ್ಟಿನ್ ಭಯೋತ್ಪಾದಕರ ಗುಂಡಿನ ದಾಳಿಯಲ್ಲಿ ಕನಿಷ್ಠ 4 ಮಂದಿ ಮೃತಪಟ್ಟು 15 ಮಂದಿ ಗಾಯಗೊಂಡಿದ್ದಾರೆ. ಜೆರುಸಲೇಂ ನಗರದ ಹೊರವಲಯದ ರಾಮೋತ್‌ ಜಂಕ್ಷನ್‌ನಲ್ಲಿ ಈ ಘಟನೆ ನಡೆದಿದೆ. ದಾಳಿ ನಡೆಸಿದ ಇಬ್ಬರನ್ನೂ ಹೊಡೆದುರುಳಿಸಲಾಗಿದೆ.

Prince Harry: ಯುಕೆಯಲ್ಲಿ ಪ್ರಿನ್ಸ್ ಹ್ಯಾರಿ-ತಂದೆ ಕಿಂಗ್ ಚಾರ್ಲ್ಸ್ ಅವರನ್ನು ಭೇಟಿಯಾಗುವರೇ?

ಪ್ರಿನ್ಸ್ ಹ್ಯಾರಿ ತಂದೆಯನ್ನು ಭೇಟಿಯಾಗುವರೇ?

ರಾಜಮನೆತನದಲ್ಲಿರುವ ಭಿನ್ನಾಭಿಪ್ರಾಯಗಳನ್ನು ದೂರ ಮಾಡಲು 20 ತಿಂಗಳ ಬಳಿಕ ಮೊದಲ ಬಾರಿಗೆ ಪ್ರಿನ್ಸ್ ಹ್ಯಾರಿ ಬ್ರಿಟನ್‌ಗೆ ಮರಳುತ್ತಿದ್ದಾರೆ. ಹ್ಯಾರಿ ಅವರು ತಮ್ಮ ಅಜ್ಜಿ ರಾಣಿ ಎಲಿಜಬೆತ್ ಅವರ ಮೂರನೇ ವರ್ಷದ ಪುಣ್ಯತಿಥಿಯ ಅಂಗವಾಗಿ ನಡೆಯುವ ವಾರ್ಷಿಕ ದತ್ತಿ ಕಾರ್ಯಕ್ರಮವಾದ ವೆಲ್‌ಚೈಲ್ಡ್ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಲಿದ್ದು, ಈ ವೇಳೆ ಅವರು ತಂದೆ ಕಿಂಗ್ ಚಾರ್ಲ್ಸ್ ಅವರನ್ನು ಭೇಟಿಯಾಗಬಹುದು ಎನ್ನಲಾಗಿದೆ.

ಭಾರತ-ಅಮೆರಿಕ ಶೀತಲ ಸಮರದಿಂದ ಇಂಡೊ-ಇಸ್ರೇಲ್ ಸ್ನೇಹಕ್ಕೆ ಧಕ್ಕೆ ಇಲ್ಲ; ಇಸ್ರೇಲ್ ವಿದೇಶಾಂಗ ಇಲಾಖೆಯ ಡೈರೆಕ್ಟರ್ ಜನರಲ್ ಈಡನ್ ಬಾರ್ ಟಾಲ್ ಸ್ಪಷ್ಟನೆ

ಹಮಾಸ್ ಉಗ್ರರನ್ನು ನಾಶ ಮಾಡದೆ ವಿರಮಿಸುವುದಿಲ್ಲ ಎಂದ ಇಸ್ರೇಲ್

Eden Bar Tal: ಕೆಲವು ಮುಸ್ಲಿಂ ಮೂಲಭೂತವಾದಿ ದೇಶಗಳ ಕುಮ್ಮಕ್ಕಿನಿಂದ ಪ್ಯಾಲೆಸ್ಟಿನ್ ಮತ್ತು ಗಾಜಾ ಪಟ್ಟಿಯಿಂದ ಕಾರ್ಯ ನಿರ್ವಹಿಸುತ್ತಿರುವ ಹಮಾಸ್, ಹೆಜ್ಬುಲ್ಲಾದಂತಹ ಉಗ್ರರನ್ನು ಸಂಪೂರ್ಣ ನಾಶ ಮಾಡದೆ ವಿರಮಿಸುವುದಿಲ್ಲ ಎಂದು ಇಸ್ರೇಲ್ ವಿದೇಶಾಂಗ ಇಲಾಖೆಯ ಡೈರೆಕ್ಟರ್ ಜನರಲ್ ಈಡನ್ ಬಾರ್ ಟಾಲ್ ತಿಳಿಸಿದರು. ಭಾರತದಿಂದ ತೆರಳಿರುವ ಪತ್ರಕರ್ತರ ಜತೆ ಜೆರುಸಲೆಂನಲ್ಲಿ ನಡೆಸಿದ ಸಂವಾದದಲ್ಲಿ ಅವರು ಮಾತನಾಡಿದರು.

Viral Video: ನೇಪಾಳದ ಅತಿ ದೊಡ್ಡ ಧಾರ್ಮಿಕ ಹಬ್ಬ ಇಂದ್ರ ಜಾತ್ರೆ; ಕುಮಾರಿ ದೇವತೆ ವಿಶಿಷ್ಟ ಆಚರಣೆಯೇ ಪ್ರಮುಖ ಆಕರ್ಷಣೆ

ನೇಪಾಳದಲ್ಲಿ ನಡೆಯುತ್ತೆ ಅತಿ ದೊಡ್ಡ ಧಾರ್ಮಿಕ ಹಬ್ಬ

Nepal’s Biggest Religious Festival: ನೇಪಾಳದ ರಾಜಧಾನಿ ಕಠ್ಮಂಡುವಿನ ಅತಿ ದೊಡ್ಡ ಧಾರ್ಮಿಕ ಹಬ್ಬದ ಋತು ಪ್ರಾರಂಭವಾಗಿದೆ. ಈ ಇಂದ್ರ ಜಾತ್ರೆಯ ಭಾಗವಾಗಿ ಕುಮಾರಿ ದೇವತೆಯನ್ನು ಆಯ್ಕೆ ಮಾಡಲಾಗುತ್ತದೆ. ಕುಮಾರಿ ಎಂದು ಕರೆಯುವ ದೇವತೆಯನ್ನು ಇಲ್ಲಿನ ಹಿಂದೂಗಳು ಪೂಜಿಸುತ್ತಾರೆ.

Syrians Arrest: ಗಾಜಾ ಸಂತ್ರಸ್ತರ ಪರವಾಗಿ ಹಣ ಸಂಗ್ರಹ: ಮೂವರು ಸಿರಿಯನ್ನರ ಬಂಧನ

ದೆಹಲಿಯಲ್ಲಿ ಮೂವರು ಸಿರಿಯನ್ನರ ಬಂಧನ

ಗಾಜಾ ಸಂತ್ರಸ್ತರ ಪರವಾಗಿ ಎಂದು ಹೇಳಿ ಅಕ್ರಮವಾಗಿ ಹಣ ಸಂಗ್ರಹಿಸಿದ್ದ ಮೂವರು ಸಿರಿಯನ್ನರನ್ನು ದೆಹಲಿಯಲ್ಲಿ ಬಂಧಿಸಲಾಗಿದೆ. ಆರೋಪಿಗಳು ದೆಹಲಿಯಿಂದ ದುಬೈ ಮೂಲಕ ಡಮಾಸ್ಕಸ್‌ಗೆ ಹೋಗಲು ವಿಮಾನ ಹತ್ತಲು ಪ್ರಯತ್ನಿಸುತ್ತಿದ್ದಾಗ ಅಹಮದಾಬಾದ್ ಅಪರಾಧ ವಿಭಾಗದ ಪೊಲೀಸರು ಬಂಧಿಸಿದರು. ಇವರು ಗಾಜಾ ಸಂತ್ರಸ್ತರ ಪರವಾಗಿ ಸಂಗ್ರಹಿಸಿದ ಹಣವನ್ನು ಆರೋಪಿಗಳು ಐಷಾರಾಮಿ ಜೀವನ ನಡೆಸಲು ಬಳಸಿಕೊಳ್ಳುತ್ತಿದ್ದರು ಎನ್ನಲಾಗಿದೆ.

Viral News: ತಾತ್ಕಾಲಿಕ ಪತ್ನಿ ಬೇಕಾ? ಹಾಗಿದ್ದರೆ ಈ ದೇಶದಲ್ಲಿ ಸಂಗಾತಿಯನ್ನು ಬಾಡಿಗೆಗೆ ಪಡೆಯಬಹುದು!

ಈ ದೇಶದಲ್ಲಿ ಪತ್ನಿಯನ್ನು ಬಾಡಿಗೆಗೆ ಪಡೆಯಬಹುದು

Temporary Wife: ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾದ ಈ ದೇಶವು ಈಗ ಬಾಡಿಗೆಗೆ ಹೆಂಡತಿಯರನ್ನು ನೀಡುವ ಮೂಲಕ ಗಮನ ಸೆಳೆಯುತ್ತಿದೆ. ಇದು ಆಗ್ನೇಯ ಏಷ್ಯಾದ ಒಂದು ಸುಂದರದೇಶ. ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಯಾವುದು ಈ ದೇಶ?

Tihar Jail: ವಿಜಯ್ ಮಲ್ಯ, ನೀರವ್ ಮೋದಿ ಭಾರತಕ್ಕೆ ಹಸ್ತಾಂತರ- ತಿಹಾರ್ ಜೈಲು ಭದ್ರತೆ ಪರಿಶೀಲಿಸಿದ ಯುಕೆ ತಂಡ

ತಿಹಾರ್ ಜೈಲು ಪರಿಶೀಲಿಸಿದ ಯುಕೆ ಅಧಿಕಾರಿಗಳು

ವಿಜಯ್ ಮಲ್ಯ, ನೀರವ್ ಮೋದಿ ಅವರನ್ನು ದೇಶಕ್ಕೆ ಒಪ್ಪಿಸಲು ಭಾರತ ಒತ್ತಾಯಿಸುತ್ತಿರುವ ಮಧ್ಯೆಯೇ ಯುನೈಟೆಡ್ ಕಿಂಗ್‌ಡಮ್‌ನ ಕ್ರೌನ್ ಪ್ರಾಸಿಕ್ಯೂಷನ್ ಸರ್ವಿಸ್ (ಸಿಪಿಎಸ್) ತಂಡವು ಇತ್ತೀಚೆಗೆ ದೆಹಲಿಯ ತಿಹಾರ್ ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಮೊದಲ ಬಾರಿಗೆ ಅಪರಾಧಿಗಳು ಮತ್ತು ಹೆಚ್ಚಿನ ಭದ್ರತೆಯ ಕೈದಿಗಳನ್ನು ಇರಿಸಿರುವ ಜೈಲು ಸಂಖ್ಯೆ 4 ಅನ್ನು ಸಿಪಿಎಸ್ ನಿಯೋಗವು ಪರಿಶೀಲನೆ ನಡೆಸಿರುವುದಾಗಿ ಜೈಲು ಅಧಿಕಾರಿಗಳು ತಿಳಿಸಿದ್ದಾರೆ.

Russia-Ukraine War: ಉಕ್ರೇನ್‌ನ ಕ್ಯಾಬಿನೆಟ್‌ ಕಟ್ಟಡದ ಮೇಲೆ ದಾಳಿ ಮಾಡಿದ ರಷ್ಯಾ; ಗರ್ಭಿಣಿ ಸೇರಿ ಹಲವರಿಗೆ ಗಾಯ

ಉಕ್ರೇನ್‌ನ ಕ್ಯಾಬಿನೆಟ್‌ ಕಟ್ಟಡದ ಮೇಲೆ ದಾಳಿ ಮಾಡಿದ ರಷ್ಯಾ

ರಷ್ಯಾ ಹಾಗೂ ಉಕ್ರೇನ್‌ ನಡುವಿನ ಯುದ್ಧ ನಿರಂತರವಾಗಿ ನಡೆಯುತ್ತಲೇ ಇದೆ. ಭಾನುವಾರ ರಷ್ಯಾದ ಪಡೆಗಳು ಕೇಂದ್ರ ಕೈವ್‌ನಲ್ಲಿರುವ ಉಕ್ರೇನ್‌ನ ಕ್ಯಾಬಿನೆಟ್ ಅನ್ನು ಹೊಂದಿರುವ ಸರ್ಕಾರಿ ಕಟ್ಟಡಗಳ ಮೇಲೆ ದಾಳಿ ಮಾಡಿವೆ. ದಾಳಿಯಲ್ಲಿ ಒಂದು ವರ್ಷದ ಮಗು ಸೇರಿದಂತೆ ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ.

Pak Bomb Blast: ಉಗ್ರ ಪೋಷಕ ಪಾಕ್‌ಗೆ ತಕ್ಕ ಶಾಸ್ತಿ-  ಕ್ರಿಕೆಟ್‌ ಗ್ರೌಂಡ್‌ನಲ್ಲಿ ಉಗ್ರರಿಂದ ಬಾಂಬ್‌ ಬ್ಲಾಸ್ಟ್‌

ಪಾಕ್‌ನಲ್ಲಿ ಉಗ್ರರಿಂದ ಬಾಂಬ್‌ ಬ್ಲಾಸ್ಟ್‌!

ಖೈಬರ್ ಪಖ್ತುನ್ಖ್ವಾದ ಬಜೌರ್ ಜಿಲ್ಲೆಯಲ್ಲಿ ಶನಿವಾರ ನಡೆದ ಕ್ರಿಕೆಟ್ ಪಂದ್ಯದ ವೇಳೆ ನಡೆದ ಬಾಂಬ್ ಸ್ಫೋಟದಲ್ಲಿ ಕನಿಷ್ಠ ಒಬ್ಬ ಸಾವನ್ನಪ್ಪಿದರೆ, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಖಾರ್ ತಹಸಿಲ್‌ನ ಕೌಸರ್ ಕ್ರಿಕೆಟ್ ಮೈದಾನದಲ್ಲಿ ನಡೆದ ಘಟನೆಯನ್ನು ಬಜೌರ್ ಜಿಲ್ಲಾ ಪೊಲೀಸ್ ಅಧಿಕಾರಿ ವಕಾಸ್ ರಫೀಕ್ ದೃಢಪಡಿಸಿದರು. ಸುಧಾರಿತ ಸ್ಫೋಟಕ ಸಾಧನ (ಐಇಡಿ) ಬಳಸಿ ಸ್ಫೋಟ ನಡೆಸಲಾಗಿದೆ ಎಂದು ಹೇಳಿದ್ದಾರೆ.

Viral News: ಕೋಲ್ಡ್‌ ಪ್ಲೇ ಕಾರ್ಯಕ್ರಮದಲ್ಲಿ ಸಿಇಒ ಜೊತೆ ಸಿಕ್ಕಿಬಿದ್ದಿದ್ದ HRಗೆ ಪತಿಯಿಂದ ಡಿವೋರ್ಸ್‌

ಸಿಇಒ ಜೊತೆ ಸಿಕ್ಕಿಬಿದ್ದಿದ್ದ HRಗೆ ಪತಿಯಿಂದ ಡಿವೋರ್ಸ್‌

ಆಸ್ಟ್ರೋನಮರ್ ಸಿಇಒ ಆಂಡಿ ಬ್ರಯಾನ್ ಅವರೊಂದಿಗಿನ ಸಂಬಂಧ ಬಹಿರಂಗಗೊಂಡ ಬಳಿಕ ಅವರ ಸಂಸ್ಥೆಯ ಎಚ್‍ಆರ್ ಕ್ರಿಸ್ಟಿನ್ ಕ್ಯಾಬೋಟ್ ತನ್ನ ಪತಿಯೊಂದಿಗೆ ವಿಚ್ಛೇದನ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ತಿಂಗಳ ಹಿಂದೆಯಷ್ಟೇ ಬೋಸ್ಟನ್‌ನಲ್ಲಿ ನಡೆದ ಕೋಲ್ಡ್‌ಪ್ಲೇ ಸಂಗೀತ ಕಚೇರಿಯಲ್ಲಿ ಬ್ರಯಾನ್ ಮತ್ತು ಕ್ರಿಸ್ಟಿನ್ ಕ್ಯಾಬೋಟ್ ಜೋಡಿ ಕೆಮರಾ ಕಣ್ಣಿಗೆ ಸಿಕ್ಕಿ ಬಿದ್ದಿತ್ತು.

Emmanuel Macron: ಉಕ್ರೇನ್‌ ಸಂಘರ್ಷ ಕೊನೆಗೊಳಿಸುವ ಬಗ್ಗೆ ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಜತೆ ಮೋದಿ ಚರ್ಚೆ

ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಜತೆ ಮೋದಿ ಚರ್ಚೆ

Narendra Modi: ಪ್ರಧಾನಿ ನರೇಂದ್ರ ಮೋದಿ ಅವರು ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಜತೆ ದೂರವಾಣಿಯಲ್ಲಿ ಮಾತುಕತೆ ನಡೆಸಿದರು. ಉಕ್ರೇನ್‌ನಲ್ಲಿ ಶಾಶ್ವತ ಶಾಂತಿಯನ್ನು ಸ್ಥಾಪಿಸಲು ಭಾರತ ಮತ್ತು ಫ್ರಾನ್ಸ್ ದೃಢ ಸಂಕಲ್ಪವನ್ನು ಹೊಂದಿವೆ ಎಂದು ಮೋದಿ ಅವರೊಂದಿಗಿನ ದೂರವಾಣಿ ಸಂಭಾಷಣೆಯ ನಂತರ ಇಮ್ಯಾನುಯೆಲ್ ಮ್ಯಾಕ್ರನ್ ಹೇಳಿದರು.

Khalistan Terrorists: ಖಲಿಸ್ತಾನಿಗಳಿಗೆ ನೆರವು ನೀಡುತ್ತಿರುವ ಕಳ್ಳಾಟವನ್ನು ಕೊನೆಗೂ ಒಪ್ಪಿಕೊಂಡ ಕೆನಡಾ

ಖಲಿಸ್ತಾನಿಗಳಿಗೆ ನೆರವು; ಕೆನಡಾದ ಕಳ್ಳಾಟ ಬಯಲು

ಕೆನಡಾದಲ್ಲಿ ಖಲಿಸ್ತಾನಿ ಭಯೋತ್ಪಾದಕರಿಗೆ (Khalistan Terrorist) ಸಂಬಂಧಿಸಿದ ಭಯೋತ್ಪಾದಕ ಸಂಘಟನೆಗಳಿಗೆ ಹಣಕಾಸು ನೆರವು ದೊರೆಯುತ್ತಿರುವ ಕುರಿತು ಕೆನಡಾ ಸರ್ಕಾರ ಇದೇ ಮೊದಲ ಬಾರಿಗೆ ಬಾಯ್ಬಿಟ್ಟಿದೆ. ಇದು ಕೆನಡಾದಲ್ಲಿ ಹಣ ವರ್ಗಾವಣೆ ಮತ್ತು ಭಯೋತ್ಪಾದಕ ಹಣಕಾಸು ಅಪಾಯಗಳ ಕುರಿತು ಅದರ ಹಣಕಾಸು ಇಲಾಖೆಯಿಂದ ನಡೆಸಲಾಗುವ ಮೌಲ್ಯಮಾಪನದ ಭಾಗವಾಗಿದೆ.

Tariff War: ಇನ್ನು ಕೇವಲ 2 ತಿಂಗಳಲ್ಲಿ ಭಾರತ ಸೋಲೊಪ್ಪಿಕೊಂಡು ಕ್ಷಮೆ ಕೇಳುತ್ತೆ;  ಟ್ರಂಪ್‌ ಆಪ್ತನಿಂದ ಉದ್ಧಟತನದ ಹೇಳಿಕೆ

ಭಾರತ ಸೋಲೊಪ್ಪಿಕೊಂಡು ಕ್ಷಮೆ ಕೇಳುತ್ತೆ; ಟ್ರಂಪ್‌ ಆಪ್ತ

ಭಾರತ ಅಮೆರಿಕದಿಂದ ತೈಲ ಖರೀದಿಸುತ್ತಿರುವುದು ಅಮೆರಿಕಕ್ಕೆ (America) ದೊಡ್ಡ ತಲೆ ನೋವಾಗಿ ಮಾರ್ಪಾಡಾಗಿದೆ. ಇದೀಗ ಭಾರತ (India) ಇನ್ನೆರಡು ತಿಂಗಳಲ್ಲಿ ನಮಗೆ ಕ್ಷಮೆಯಾಚಿಸುತ್ತದೆ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೂವಾರ್ಡ್‌ ಲುಟ್ನಿಕ್‌ ಹೇಳಿಕೆ ನೀಡಿದ್ದಾರೆ.

Donald Trump: ಮೋದಿ ಯಾವಗಲೂ ನನ್ನ ಉತ್ತಮ ಸ್ನೇಹಿತ; ಉಲ್ಟಾ ಹೊಡೆದ ಟ್ರಂಪ್‌

ಮೋದಿ ಯಾವಗಲೂ ನನ್ನ ಉತ್ತಮ ಸ್ನೇಹಿತ; ಟ್ರಂಪ್‌

ನಿನ್ನೆಯಷ್ಟೇ ಚೀನಾಗೋಸ್ಕರ ಭಾರತ ಹಾಗೂ ರಷ್ಯಾ ಕಳೆದುಕೊಂಡಿದ್ದೆ ಎಂದು ಹೇಳಿದ್ದ ಟ್ರಂಪ್‌ (Donald Trump) ಇಂದು ವರಸೆ ಬದಲಿಸಿದ್ದಾರೆ. ಹೇಳಿಕೆಯ ಕೆಲವೇ ಗಂಟೆಗಳ ನಂತರ, ರಿಪಬ್ಲಿಕನ್ ಈಗ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ (Narendra Modi) ನಾನು ತುಂಬಾ ಚೆನ್ನಾಗಿದ್ದೇನೆ ಎಂದು ಹೇಳಿದ್ದಾರೆ.

Viral News: ತೀರದ ಲೈಂಗಿಕ ತೃಷೆ...ಜೇಬಲ್ಲಿ ದುಡ್ಡಿಲ್ಲ...ಕೊನೆಗೆ ಇನ್ಶೂರೆನ್ಸ್‌ ಹಣಕ್ಕಾಗಿ ಕಾಲುಗಳನ್ನೇ ಕತ್ತರಿಸಿಕೊಂಡ!

ಇನ್ಶೂರೆನ್ಸ್‌ ಹಣಕ್ಕಾಗಿ ಕಾಲುಗಳನ್ನೇ ಕತ್ತರಿಸಿಕೊಂಡ!

Surgeon Chopped Off His Legs: ವೈದ್ಯನೊಬ್ಬ ಉದ್ದೇಶಪೂರ್ವಕವಾಗಿ ತನ್ನ ಕಾಲುಗಳನ್ನು ಕತ್ತರಿಸಿಕೊಂಡು, ನಂತರ ವಿಮಾ ಕಂಪನಿಗಳಿಂದ ಸುಮಾರು 5 ಕೋಟಿ ರೂ. ಪರಿಹಾರ ಮೊತ್ತವನ್ನು ಪಡೆದುಕೊಂಡಿದ್ದಾನೆ. ಯುಕೆ ಮೂಲದ ಸರ್ಜನ್ ವಂಚನೆ ಎಸಗಿದಾತ. ಇದೀಗ ಜೈಲುಶಿಕ್ಷೆಗೆ ಗುರಿಯಾಗಿದ್ದಾನೆ.

Loading...