ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ವಿದೇಶ

ಕೊನೆ ಹಂತಕ್ಕೆ ತಲುಪಿತಾ ಇರಾನ್‌- ಇಸ್ರೇಲ್‌- ಅಮೆರಿಕ ಯುದ್ಧ? ಟ್ರಂಪ್‌ ನೀಡಿದ ಆ ಸುಳಿವೇನು?

ಕೊನೆ ಹಂತಕ್ಕೆ ತಲುಪಿತಾ ಇರಾನ್‌- ಇಸ್ರೇಲ್‌- ಅಮೆರಿಕ ಯುದ್ಧ?

Israel Iran War: ಇರಾನ್ ವಿರುದ್ಧದ ಮಿಲಿಟರಿ ಕಾರ್ಯಾಚರಣೆಗಳನ್ನು ಕಡಿಮೆ ಮಾಡುವ ಸಾಧ್ಯತೆಯ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಳಿವು ನೀಡಿದ್ದಾರೆ, ಸಂಘರ್ಷದಲ್ಲಿ ತನ್ನ ಉದ್ದೇಶಗಳನ್ನು ಸಾಧಿಸಲು ವಾಷಿಂಗ್ಟನ್ "ತುಂಬಾ ಹತ್ತಿರದಲ್ಲಿದೆ" ಎಂದು ಟ್ರಂಪ್‌ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

World Forest Day: ಇಂದು ವಿಶ್ವ ಅರಣ್ಯ ದಿನ; ಕಾಡು ಬೆಳೆಸಿ, ಭವಿಷ್ಯ ಉಳಿಸೋಣ

ಇಂದು ವಿಶ್ವ ಅರಣ್ಯ ದಿನ; ಏನಿದರ ಮಹತ್ವ?

ಅರಣ್ಯಗಳು ಪರಿಸರ ಸಮತೋಲನದ ಆಧಾರವಾಗಿದ್ದು, ಅವುಗಳ ನಾಶ ಹವಾಮಾನದ ಮೇಲೆ ಕೆಟ್ಟ ಪರಿಣಾಮ ಬೀಳುತ್ತಿದೆ. ಅಲ್ಲದೆ ಇದರಿಂದ ಜೀವರಾಶಿಗಳಿಗೂ ಅಪಾಯ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಸಂರಕ್ಷಣೆಯ ಮಹತ್ವವನ್ನು ತಿಳಿಸಲು ಮಾರ್ಚ್ 21ರಂದು ವಿಶ್ವ ಅರಣ್ಯ ದಿನ ಆಚರಿಸಲಾಗುತ್ತದೆ. ಹಾಗಾದರೆ ಈ ಅರಣ್ಯ ದಿನ ಶುರುವಾಗಿದ್ದು ಹೇಗೆ? ಯಾಕೆ ಆಚರಿಸುತ್ತಾರೆ? ಇಲ್ಲಿದೆ ಮಾಹಿತಿ.

ʼʼಹೇಡಿಗಳುʼʼ: ಇರಾನ್‌ ಮೇಲಿನ ಯುದ್ಧಕ್ಕೆ ಬೆಂಬಲ ನೀಡದ ನ್ಯಾಟೋ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಗರಂ

ನ್ಯಾಟೋ ಕೇವಲ ಕಾಗದದ ಹುಲಿ ಎಂದ ಡೊನಾಲ್ಡ್ ಟ್ರಂಪ್

ಇರಾನ್ ವಿರುದ್ಧ ಮಿಲಿಟರಿ ಸಹಾಯ ಕೇಳಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸೇನಾ ಪಡೆಗೆ ಯಾರೂ ಸಹಾಯ ಮಾಡಲು ಮುಂದೆ ಬಾರದೇ ಇರುವುದರಿಂದ ಆಕ್ರೋಶಗೊಂಡ ಅವರು ಅಮೆರಿಕದ ಮಿತ್ರರಾಷ್ಟ್ರಗಳನ್ನು ಹೇಡಿಗಳು ಎಂದು ಕರೆದಿದ್ದು, ಅಮೆರಿಕವಿಲ್ಲದೇ ಇದ್ದರೆ ನ್ಯಾಟೋ ಕೇವಲ ಕಾಗದದ ಹುಲಿ ಎಂದು ಹೇಳಿದ್ದಾರೆ.

ಇರಾನ್ ದಾಳಿಯಿಂದ ಕತಾರ್ ಎಲ್‌ಎನ್‌ಜಿ ರಫ್ತಿಗೆ ಅಡ್ಡಿ: ಭಾರತ ಸೇರಿ ಹಲವು ರಾಷ್ಟ್ರಗಳ ಕಾಡಲಿದ್ಯಾ  ಇಂಧನ ಕೊರತೆ? ಇಂಧನ ಕೊರತೆ?

ಇರಾನ್ ದಾಳಿ; ಭಾರತಕ್ಕೆ ಇಂಧನ ಕೊರತೆ ಭೀತಿ

ಇರಾನ್ ಕ್ಷಿಪಣಿ ದಾಳಿಯಿಂದ ಕತಾರ್‌ನ ರಾಸ್ ಲಫ್ಫಾನ್ LNG ಘಟಕಗಳಿಗೆ ಭಾರಿ ಹಾನಿಯಾಗಿದ್ದು, ಅನಿಲ ರಫ್ತು ವ್ಯತ್ಯಯ ಉಂಟಾಗಿದೆ. ಇದರ ಪರಿಣಾಮ ಭಾರತ ಸೇರಿದಂತೆ ಏಷ್ಯಾ ಮತ್ತು ಯುರೋಪ್ ದೇಶಗಳಲ್ಲಿ ಇಂಧನ ಸಂಕಷ್ಟ ಭೀತಿ ಹೆಚ್ಚಿದೆ.

ನೀರು ಹರಿಸುವ ಮಾತೇ ಇಲ್ಲ: ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಗುಡುಗು

ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ವಿರುದ್ಧ ಹರಿಹಾಯ್ದ ಭಾರತ

Zero water, zero talks: ಭಾರತವು ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ವಿರುದ್ಧ ಮತ್ತೊಮ್ಮೆ ಗುಡುಗಿದೆ. ಪಾಕಿಸ್ತಾನವು ಭಾರತದ ವಿರುದ್ಧದ ಭಯೋತ್ಪಾದನೆಗೆ ಬೆಂಬಲವನ್ನು ಸಂಪೂರ್ಣವಾಗಿ ನಿಲ್ಲಿಸುವವರೆಗೆ ಶೂನ್ಯ ನೀರು, ಶೂನ್ಯ ಮಾತುಕತೆ ಎಂದು ಹರೀಶ್ ಪರ್ವತನೇನಿ ಖಡಕ್ ಆಗಿ ತಿಳಿಸಿದ್ದಾರೆ. ಪಾಕಿಸ್ತಾನವು ಒಪ್ಪಂದಗಳಿಗಿಂತ ಮಾನವ ಜೀವನವನ್ನು ಆಯ್ಕೆ ಮಾಡಬೇಕು ಎಂದು ಅವರು ಹೇಳಿದ್ದಾರೆ.

ಅಮೆರಿಕ ಇರಾನ್ ಸಂಘರ್ಷ: ರಿಯಾದ್‌ನಲ್ಲಿ ಮತ್ತೊಬ್ಬ ಭಾರತೀಯ ಬಲಿ

ರಿಯಾದ್‌ನಲ್ಲಿ ಮತ್ತೊಬ್ಬ ಭಾರತೀಯ ಬಲಿ

ಅಮೆರಿಕ ಮತ್ತು ಇರಾನ್ ಸಂಘರ್ಷಕ್ಕೆ ಸೌದಿ ಅರೇಬಿಯಾದ ರಿಯಾದ್‌ನಲ್ಲಿ ಭಾರತೀಯನೊಬ್ಬ ಬಲಿಯಾಗಿದ್ದಾನೆ. ಮಾರ್ಚ್ 18ರಂದು ಭಾರತೀಯ ಪ್ರಜೆ ಸಾವನ್ನಪ್ಪಿದ್ದು, ಈ ಮೂಲಕ ರಿಯಾದ್‌ನಲ್ಲಿ ಸಾವಿನ ಸಂಖ್ಯೆ 6ಕ್ಕೇರಿದೆ. ಎಂಟಿ ಸೇಫ್‌ಸೀ ವಿಷ್ಣು ತೈಲ ಟ್ಯಾಂಕರ್‌ನಿಂದ ರಕ್ಷಿಸಲ್ಪಟ್ಟ ೧೫ ಭಾರತೀಯ ಸಿಬ್ಬಂದಿ ಮಾರ್ಚ್ 20 ರಂದು ತವರಿಗೆ ಮರಳುವ ನಿರೀಕ್ಷೆಯಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಇಸ್ರೇಲ್‌-ಅಮೆರಿಕಕ್ಕೆ ಸವಾಲೊಡ್ಡಿದ ಕೆಲವೇ ಹೊತ್ತಲ್ಲಿ ಇರಾನ್‌ ಐಆರ್‌ಜಿಸಿ ವಕ್ತಾರ ಅಲಿ ಮೊಹಮ್ಮದ್ ನೈನಿಯ ಹತ್ಯೆ

ಇರಾನ್‌ ಐಆರ್‌ಜಿಸಿ ವಕ್ತಾರ ಅಲಿ ಮೊಹಮ್ಮದ್ ನೈನಿಯ ಹತ್ಯೆ

Ali Mohammad Naini: ಮಾರ್ಚ್‌ 20ರಂದು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್‌ನ ವಕ್ತಾರ ಜನರಲ್ ಅಲಿ ಮೊಹಮ್ಮದ್ ನೈನಿ ಮೃತಪಟ್ಟಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಅಚ್ಚರಿ ಎಂದರೆ ಶತ್ರು ರಾಷ್ಟ್ರಗಳಿಗೆ ಎಚ್ಚರಿಕೆ ನೀಡಿದ ಕೆಲವೇ ಗಂಟೆಗಳಲ್ಲಿ ಅವರನ್ನು ಹೊಡೆದುರುಳಿಸಲಾಗಿದೆ.

ಭೀಕರ ಯುದ್ಧದ ನಡುವೆಯೇ 19 ವರ್ಷದ ಕುಸ್ತಿಪಟು ಸೇರಿ ಇಬ್ಬರನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಿದ ಇರಾನ್!

ಪ್ರತಿಭಟನಾಕಾರರನ್ನು ಗಲ್ಲಿಗೇರಿಸಿದ ಇರಾನ್

Death penalty Iran: ಇರಾನ್‌ನಲ್ಲಿ 19 ವರ್ಷದ ಕುಸ್ತಿಪಟು ಚಾಂಪಿಯನ್ ಮತ್ತು ಇತರ ಇಬ್ಬರು ಪ್ರತಿಭಟನಾಕಾರರನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಲಾಗಿದೆ. ಉದಯೋನ್ಮುಖ ಕುಸ್ತಿ ಪ್ರತಿಭೆ ಸಲೇಹ್ ಮೊಹಮ್ಮದಿ ಅವರನ್ನು ಸಯೀದ್ ದಾವೋಡಿ ಮತ್ತು ಮೆಹದಿ ಘಾಸೆಮಿ ಅವರೊಂದಿಗೆ ಗಲ್ಲಿಗೇರಿಸಲಾಯಿತು.

ನಾನು ಇನ್ನೂ ಬದುಕಿದ್ದೇನೆ: ಸಾವಿನ ವದಂತಿಗೆ ಬೆಂಜಮಿನ್ ನೆತನ್ಯಾಹು ಸ್ಪಷ್ಟನೆ

ನಾನು ಜೀವಂತವಾಗಿದ್ದೇನೆ: ಬೆಂಜಮಿನ್ ನೆತನ್ಯಾಹು

ನಾನು ಇನ್ನೂ ಜೀವಂತವಾಗಿದ್ದೇನೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸ್ಪಷ್ಟನೆ ನೀಡಿದ್ದಾರೆ. ಕೃತಕ ಬುದ್ಧಿಮತ್ತೆಯನ್ನು ಬಳಸಿ ತಯಾರಿಸಿರುವ ತಮ್ಮ ಸಾವಿನ ವಿಡಿಯೊ ಬಗ್ಗೆ ಸ್ಪಷ್ಟಿಕರಣ ನೀಡಿದ ಅವರು, ಮಾರ್ಚ್ 12ರಂದು ದೂರದರ್ಶನದಲ್ಲಿ ಪ್ರಸಾರವಾದ ತಮ್ಮ ಭಾಷಣವನ್ನು ಎಐ ಬಳಸಿ ಸೃಷ್ಟಿಸಲಾಗಿದೆ ಎಂದು ಹೇಳಿದರು.

ಪ್ರಿನ್ಸ್ ಸುಲ್ತಾನ್ ವಾಯುನೆಲೆಯ ಮೇಲೆ ಡ್ರೋನ್‌ ದಾಳಿ; ದುಬೈ, ಕತಾರ್‌ನಲ್ಲಿಯೂ ಭಾರೀ ಸ್ಫೋಟ

ಪ್ರಿನ್ಸ್ ಸುಲ್ತಾನ್ ವಾಯುನೆಲೆಯ ಮೇಲೆ ಇರಾನ್‌ ಡ್ರೋನ್‌ ದಾಳಿ

ಗಲ್ಫ್ ಪ್ರದೇಶದಾದ್ಯಂತ ಉದ್ವಿಗ್ನತೆ ತೀವ್ರಗೊಂಡಿದ್ದು, ತೈಲ ಪೂರೈಕೆ, ಪ್ರಯಾಣ ಮತ್ತು ದೈನಂದಿನ ಜೀವನದ ಮೇಲೆ ಪರಿಣಾಮ ಬೀರುತ್ತಿದೆ. ಇರಾನ್-ಯುಎಸ್ ಸಂಘರ್ಷವು ಕಡಿಮೆಯಾಗುವ ಯಾವುದೇ ಲಕ್ಷಣಗಳನ್ನು ತೋರಿಸುತ್ತಿಲ್ಲ. ಏತನ್ಮಧ್ಯೆ ಸೌದಿ ಅರೇಬಿಯಾದ ಪ್ರಿನ್ಸ್ ಸುಲ್ತಾನ್ ವಾಯುನೆಲೆಯ ಮೇಲೆ ಡ್ರೋನ್ ದಾಳಿ ನಡೆದಿದೆ ಎಂದು ವರದಿಯಾಗಿದೆ. ಏಪ್ರಿಲ್ 30 ರವರೆಗೆ ದುಬೈ ವಿಮಾನಗಳನ್ನು ಸ್ಥಗಿತಗೊಳಿಸಿದೆ.

ಮಿತ್ರರ ನಡುವೆ ಬಿರುಕು? ಇಸ್ರೇಲ್ ಅಮೆರಿಕವನ್ನು ಇರಾನ್ ಸಂಘರ್ಷಕ್ಕೆ ಎಳೆದಿದೆ ಆರೋಪ ತಿರಸ್ಕರಿಸಿದ ನೆತನ್ಯಾಹು

ಇಸ್ರೇಲ್ ಅಮೆರಿಕವನ್ನು ಸಂಘರ್ಷಕ್ಕೆ ಎಳೆದಿದೆ ಆರೋಪ ತಿರಸ್ಕರಿಸಿದ ನೆತನ್ಯಾಹು

ಇಸ್ರೇಲ್ "ಅಮೆರಿಕವನ್ನು ಇರಾನ್ ಜೊತೆ ಸಂಘರ್ಷಕ್ಕೆ ಎಳೆದಿದೆ" ಎಂಬ ವರದಿಗಳನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಗುರುವಾರ ನಿರಾಕರಿಸಿದ್ದು, ಅವುಗಳನ್ನು "ನಕಲಿ ಸುದ್ದಿ" ಎಂದು ಕರೆದಿದ್ದಾರೆ. ಯುದ್ಧದಲ್ಲಿ ಇಸ್ರೇಲ್ ಮತ್ತು ಅಮೆರಿಕದ ಶೌರ್ಯವನ್ನು ಕೊಂಡಾಡಿದ ನೆತನ್ಯಾಹು ನಾವು ಮಿಂಚಿನ ವೇಗದಲ್ಲಿ ಗುರಿಗಳನ್ನು ಸಾಧಿಸುತ್ತಿದ್ದೇವೆ" ಎಂದು ಹೇಳಿದರು.

ಯುದ್ಧದ ಮಧ್ಯೆ ಇರಾನ್‌ನಿಂದ ಜಗತ್ತಿಗೆ ಮತ್ತೊಂದು ಆರ್ಥಿಕ ಹೊಡೆತದ ಭೀತಿ; ಹೊರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ಹಡಗುಗಳಿಗೆ ಶುಲ್ಕ ವಿಧಿಸಲು ಚಿಂತನೆ

ಹೊರ್ಮುಜ್ ಜಲಸಂಧಿಯಲ್ಲಿ ಹಡಗುಗಳಿಗೆ ಇರಾನ್‌ ಶುಲ್ಕ ವಿಧಿಸುವ ಸಾಧ್ಯತೆ

Middle east crisis: ಹೊರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ಹಡಗುಗಳಿಗೆ ಸಾರಿಗೆ ಶುಲ್ಕ ವಿಧಿಸುವ ಪ್ರಸ್ತಾಪಕ್ಕೆ ಇರಾನ್ ಚಿಂತಿಸುತ್ತಿದೆ ಎಂದು ಹೇಳಲಾಗಿದೆ. ಇದು ಜಾರಿಗೆ ಬಂದರೆ ಸಾಗಣೆ, ಇಂಧನ ಸಾರಿಗೆ ಮತ್ತು ಆಹಾರ ಪೂರೈಕೆಗಾಗಿ ಹೊರ್ಮುಜ್ ಜಲಸಂಧಿ ಬಳಸುವ ದೇಶಗಳು ಇರಾನ್‌ಗೆ ಟೋಲ್‌ ಅಥವಾ ತೆರಿಗೆ ಪಾವತಿಸಬೇಕಾಗುತ್ತದೆ.

ಜಗತ್ತನ್ನೇ ಅಳಿಸಿದ್ದ ಪಂಚ್‌ ಬಾಳಲ್ಲಿ ತಂಗಾಳಿ: ಜಪಾನ್‌ನ ವೈರಲ್‌ ಮರಿ ಕೋತಿಗೆ ಸಿಕ್ಕೇ ಬಿಟ್ಳು ಗರ್ಲ್‌ಫ್ರೆಂಡ್‌

ಜಪಾನ್‌ನ ಕೋತಿ ಮರಿ ಪಂಚ್‌ಗೆ ಸಿಕ್ಕಿದ್ದಾಳೆ ಗೆಳತಿ

Punch finds a girlfriend: ಜಪಾನ್‌ನ ಇಚಿಕಾವಾ ಸಿಟಿ ಮೃಗಾಲಯದ ಮುದ್ದಾದ ಕೋತಿ ಮರಿ ಪಂಚ್‌ಗೆ ಇದೀಗ ಗರ್ಲ್ ಫ್ರೆಂಡ್ ಸಿಕ್ಕಿದ್ದಾಳೆ. ಇದರ ವಿಡಿಯೊ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಪಂಚ್ ಮತ್ತು ಮುದ್ದಾದ ಹೆಣ್ಣು ಕೋತಿಯ ವಿಡಿಯೊ ವೈರಲ್ ಆಗುತ್ತಿದ್ದಂತೆ ಎಲ್ಲರ ಹೃದಯವನ್ನು ತಟ್ಟಿದೆ. ಮೊಮೊ-ಚಾನ್‌ಗೆ ಪಂಚ್‌ನ ಗೆಳತಿ ಎಂಬ ಬಿರುದು ಸಿಕ್ಕಿದೆ.

ಚೀನಾಗೆ ತೆರಳಬೇಕಿದ್ದ ಹಡಗು ಯೂ ಟರ್ನ್: ಮಾರ್ಚ್‌ 21ರಂದು ಭಾರತಕ್ಕೆ ಬರಲಿದೆ 7.7 ಲಕ್ಷ ಬ್ಯಾರೆಲ್ ತೈಲ ಹೊತ್ತ ರಷ್ಯಾದ ಟ್ಯಾಂಕರ್

ಭಾರತಕ್ಕೆ ಬರಲಿದೆ 7.7 ಲಕ್ಷ ಬ್ಯಾರೆಲ್ ತೈಲ ಹೊತ್ತ ರಷ್ಯಾದ ಟ್ಯಾಂಕರ್

Russian oil tanker: ಚೀನಾಕ್ಕೆ ತೆರಳಬೇಕಾಗಿದ್ದ, 7.7 ಲಕ್ಷ ಬ್ಯಾರೆಲ್ ಕಚ್ಚಾ ತೈಲವನ್ನು ಹೊತ್ತೊಯ್ಯುತ್ತಿದ್ದ ರಷ್ಯಾದ ಟ್ಯಾಂಕರ್ ಹಡಗು ದಕ್ಷಿಣ ಚೀನಾ ಸಮುದ್ರದಲ್ಲಿ ಯೂ ಟರ್ನ್ ತೆಗೆದುಕೊಂಡು ಇದೀಗ ಭಾರತದತ್ತ ಬರುತ್ತಿದೆ. ಫೆಬ್ರವರಿ 28ರಂದು ಯುದ್ಧ ಪ್ರಾರಂಭವಾದ ಸುಮಾರು ಮೂರು ವಾರಗಳಲ್ಲಿ, ತೈಲ ಮತ್ತು ಅನಿಲ ದಾಸ್ತಾನುಗಳನ್ನು ಹೇರಿಕೊಂಡ, ಭಾರತೀಯ ಧ್ವಜ ಹೊತ್ತ ನಾಲ್ಕು ಹಡಗುಗಳು ಈಗಾಗಲೇ ಭಾರತಕ್ಕೆ ಬಂದಿವೆ.

ಒಮಾನ್‌ ಸುಲ್ತಾನ, ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ ಜತೆ ಪ್ರಧಾನಿ ಮೋದಿ ಮಾತುಕತೆ: ಮಧ್ಯಪ್ರಾಚ್ಯ ಯುದ್ಧ, ಹೊರ್ಮುಜ್ ಜಲಸಂಧಿ ಬಿಕ್ಕಟ್ಟಿನ ಬಗ್ಗೆ ಚರ್ಚೆ

ಒಮಾನ್‌ನ ಸುಲ್ತಾನ, ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ ಜತೆ ಮೋದಿ ಮಾತುಕತೆ

PM Narendra Modi: ಪ್ರಧಾನ ಮಂತ್ರಿ ನರೇಂದ್ರ ಮೋದಿ ಗುರುವಾರ (ಮಾರ್ಚ್‌ 19) ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ಒಮಾನ್‌ನ ಸುಲ್ತಾನ್ ಹೈತಮ್ ಬಿನ್ ತಾರಿಕ್ ಮತ್ತು ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಸೇರಿ ಜಾಗತಿಕ ನಾಯಕರೊಂದಿಗೆ ಉನ್ನತ ಮಟ್ಟದ ಮಾತುಕತೆ ನಡೆಸಿದರು. ಒಮಾನ್ ಜನರಿಗೆ ಮುಂಚಿತವಾಗಿ ಈದ್ ಶುಭಾಶಯಗಳನ್ನು ಕೋರಿದರು.

ಇಂಧನದ ಬಳಿಕ ಇಂಟರ್‌ನೆಟ್‌ಗೂ ಕುತ್ತು; ಹಾರ್ಮೊಜ್‌ನಲ್ಲಿರುವ ಕೇಬಲ್‌ ಕಡಿತಗೊಳಿಸುತ್ತಾ ಇರಾನ್‌?

ಹಾರ್ಮೊಜ್‌ನಲ್ಲಿರುವ ಇಂಟರ್‌ನೆಟ್‌ ಕೇಬಲ್‌ ಕಡಿತಗೊಳಿಸುತ್ತಾ ಇರಾನ್‌?

ಇರಾನ್ ವಿರುದ್ಧ ಅಮೆರಿಕ ಮತ್ತು ಇಸ್ರೇಲ್ ಯುದ್ಧವು ಮೂರನೇ ವಾರಕ್ಕೆ ಪ್ರವೇಶಿಸಿದ್ದು, ಅಂತ್ಯ ಕಾಣುತ್ತಿಲ್ಲ. ಇರಾನ್ ಈಗಾಗಲೇ ಹಾರ್ಮುಜ್ ಜಲಸಂಧಿಯನ್ನು ನಿರ್ಬಂಧಿಸಿದೆ, ಇದರಿಂದಾಗಿ ಜಗತ್ತಿಗೆ ಇಂಧನ ಪೂರೈಕೆ ಸ್ಥಗಿತಗೊಂಡಿದೆ . ಪ್ರಮುಖವಾದ ನೀರೊಳಗಿನ ಇಂಟರ್ನೆಟ್ ಕೇಬಲ್‌ಗಳು ಹಾರ್ಮುಜ್ ಮೂಲಕ ಹಾದು ಹೋಗುತ್ತವೆ.

ಇರಾನ್ ವಾಯುದಾಳಿ; ಕತಾರ್‌ನಲ್ಲಿರುವ ವಿಶ್ವದ ಅತಿದೊಡ್ಡ ಎಲ್‌ಎನ್‌ಜಿ ಸ್ಥಾವರಕ್ಕೆ ವ್ಯಾಪಕ ಹಾನಿ

ವಿಶ್ವದ ಅತಿದೊಡ್ಡ ಎಲ್‌ಎನ್‌ಜಿ ಸ್ಥಾವರಕ್ಕೆ ವ್ಯಾಪಕ ಹಾನಿ

Iran attack on Qatar: ವಿಶ್ವದ ಅತಿದೊಡ್ಡ ದ್ರವೀಕೃತ ನೈಸರ್ಗಿಕ ಅನಿಲ ರಫ್ತು ಸ್ಥಾವರವನ್ನು ಹೊಂದಿರುವ ಕತಾರ್‌ನಲ್ಲಿರುವ ಎಲ್‌ಎನ್‌ಜಿ ಸ್ಥಾವರವು ಇರಾನ್ ದಾಳಿಯಿಂದ ವ್ಯಾಪಕ ಹಾನಿಗೊಳಗಾಗಿದೆ. ಈ ತಿಂಗಳ ಆರಂಭದಲ್ಲಿ ಉತ್ಪಾದನೆಯನ್ನು ಸ್ಥಗಿತಗೊಳಿಸುವ ಮೊದಲು ಜಾಗತಿಕ ಪೂರೈಕೆಯ ಐದನೇ ಒಂದು ಭಾಗದಷ್ಟು ಪಾಲನ್ನು ಹೊಂದಿದ್ದ ಎಲ್‌ಎನ್‌ಜಿ ಸ್ಥಾವರವು ರಾಸ್ ಲಫಾನ್ ಕೈಗಾರಿಕಾ ನಗರಕ್ಕೆ ನೆಲೆಯಾಗಿದೆ.

ಇಸ್ರೇಲ್‌ನಿಂದ ಇನ್ನು ಮುಂದೆ ದಾಳಿ ನಡೆಯುವುದಿಲ್ಲ; ಯುದ್ಧ ಕೊನೆಗೊಳಿಸುವ ಸೂಚನೆ ನೀಡಿದ್ರಾ ಟ್ರಂಪ್‌?

ಯುದ್ಧ ಕೊನೆಗೊಳಿಸುವ ಸೂಚನೆ ನೀಡಿದ್ರಾ ಟ್ರಂಪ್‌?

ಮಧ್ಯಪ್ರಾಚ್ಯದಲ್ಲಿ ನಡೆದ ಪ್ರತಿದಾಳಿಯಿಂದಾಗಿ ಜಾಗತಿಕ ತೈಲ ಬೆಲೆಗಳು ಗಗನಕ್ಕೇರಿರುವ ನಡುವೆ, ಕತಾರ್‌ನ ಇಂಧನ ಮೂಲಸೌಕರ್ಯವನ್ನು ಗುರಿಯಾಗಿಸಿಕೊಳ್ಳುವುದರ ವಿರುದ್ಧ ಇರಾನ್‌ಗೆ ಎಚ್ಚರಿಕೆ ನೀಡುತ್ತಾ, ಇರಾನ್‌ನ ಪ್ರಮುಖ ಸೌತ್ ಪಾರ್ಸ್ ಅನಿಲ ಕ್ಷೇತ್ರದ ಮೇಲೆ ಇಸ್ರೇಲ್ ಇನ್ನು ಮುಂದೆ ದಾಳಿ ಮಾಡುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಹೇಳಿದ್ದಾರೆ.

Iran- israel war: ಹೊರ್ಮುಜ್‌ ಜಲಸಂಧಿಯತ್ತ ಭಾರತದ ಯುದ್ಧನೌಕೆಗಳು! ಕಾರಣವೇನು?

ಹೊರ್ಮುಜ್‌ ಜಲಸಂಧಿಯತ್ತ ಭಾರತದ ಯುದ್ಧನೌಕೆಗಳು! ಕಾರಣವೇನು?

ಹಡಗುಗಳನ್ನು ಸುರಕ್ಷಿತವಾಗಿ ಕರೆತರಲು ಭಾರತೀಯ ನೌಕಾಪಡೆ ಒಮಾನ್ ಗಲ್ಫ್ ಭಾಗದತ್ತ ಯುದ್ಧನೌಕೆಗಳನ್ನು ರವಾನಿಸಿದೆ ಎಂದು ವರದಿಯಾಗಿವೆ. ತೈಲ ಹಡಗುಗಳಿಗೆ ಎಸ್ಕಾರ್ಟ್ ನೀಡಲು 6ಕ್ಕೂ ಹೆಚ್ಚು ಯುದ್ಧನೌಕೆಗಳನ್ನು ನಿಯೋಜಿಸಲಾಗಿದೆ ಎಂದು ‘ಬ್ಲೂಮ್​ಬರ್ಗ್’ ಹಾಗೂ ಇತರೆ ಕೆಲವು ಮಾಧ್ಯಮಗಳು ವರದಿ ಮಾಡಿವೆ.

ಸಂಕಷ್ಟದ ವೇಳೆ ಯುಎಇ ಪ್ರವಾಸಿಗರಿಗೆ ಆಪತ್ಬಾಂಧವನಾದ 'ಕನ್ನಡಿಗಾಸ್ ಹೆಲ್ಪ್ ಲೈನ್’

ಕನ್ನಡಿಗಾಸ್ ಹೆಲ್ಪ್ ಲೈನ್ ಗೆ ಅನಿವಾಸಿಗಳಿಂದ ಮೆಚ್ಚುಗೆ

ಅಮೆರಿಕ- ಇಸ್ರೇಲ್ ಹಾಗೂ ಇರಾನ್ ನಡುವಿನ ಸಂಘರ್ಷದ ಪರಿಣಾಮವಾಗಿ ಮಧ್ಯೆ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಸಂದರ್ಭದಲ್ಲಿ ಯುಎಇಯಲ್ಲಿ ಸಂಕಷ್ಟಕ್ಕೀಡಾಗಿದ್ದ ಪ್ರವಾಸಿ ಕನ್ನಡಿಗರನ್ನು ರಕ್ಷಿಸಲು ಆಪತ್ಬಾಂಧವನಾಗಿ ಹಗಲಿರುಳು ಕಾರ್ಯನಿರ್ವಹಿಸಿದ 'ಕನ್ನಡಿಗಾಸ್ ಹೆಲ್ಪ್ ಲೈನ್’ ಗೆ ಅನಿವಾಸಿಗಳು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಂಘರ್ಷ ವಾತಾವರಣದ ನಡುವೆಯೇ ತೈಲ ರಫ್ತು ಆರಂಭಿಸಿದ ಇರಾಕ್

ಇರಾಕ್ ನಿಂದ ತೈಲ ರಫ್ತು ಆರಂಭ

ಇರಾನ್ ಮತ್ತು ಇಸ್ರೇಲ್ ಹಾಗೂ ಯುಎಸ್ ಸೇನಾ ಪಡೆಗಳ ಸಂಘರ್ಷದ ಪರಿಣಾಮ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಉದ್ವಿಗ್ನತೆ ಉಂಟಾಗಿದ್ದು, ಜಾಗತಿಕ ಮಟ್ಟದಲ್ಲಿ ತೈಲ ಬಿಕ್ಕಟ್ಟಿಗೆ ಕಾರಣವಾಗಿದೆ. ಸಂಘರ್ಷದ ಆತಂಕದ ನಡುವೆಯೇ ಇದೀಗ ಇರಾಕ್ ತೈಲ ರಫ್ತು ಚಟುವಟಿಕೆಯನ್ನು ಪ್ರಾರಂಭಿಸಿದೆ. ಇದಕ್ಕಾಗಿ ಇರಾಕ್ ಗೆ ಟರ್ಕಿ ಸಾಥ್ ನೀಡಿದೆ.

ಜನಸಂಖ್ಯೆ ಹೆಚ್ಚಿಸಲು ಚೀನಾ ವಿಶ್ವವಿದ್ಯಾನಿಲಯದಿಂದ ವಿದ್ಯಾರ್ಥಿಗಳಿಗೆ ವಿಶೇಷ ಸೂಚನೆ; ಲವ್‌ ಮಾಡುವಂತೆ ಕರೆ

ಪ್ರೀತಿಯಲ್ಲಿ ಬೀಳಲು ವಿದ್ಯಾರ್ಥಿಗಳಿಗೆ ಕರೆ ನೀಡಿದ ಚೀನಾ ವಿವಿ

ಚೀನಾದ ಸಿಚುವಾನ್ ಸೌತ್‌ವೆಸ್ಟ್ ವೊಕೇಶನಲ್ ಕಾಲೇಜ್ ಆಫ್ ಏವಿಯೇಷನ್ ರಜೆಯ ವೇಳೆ ವಿದ್ಯಾರ್ಥಿಗಳಿಗೆ ಹೂವುಗಳನ್ನು ಆನಂದಿಸಿ, ಪ್ರೀತಿಯಲ್ಲಿ ಬೀಳಿ ಎಂಬ ಸಲಹೆ ನೀಡಿದೆ. ಪ್ರವಾಸೋದ್ಯಮ, ಆಂತರಿಕ ಬಳಕೆ ಮತ್ತು ಜನನ ದರ ಹೆಚ್ಚಿಸಲು ಸರ್ಕಾರ ವಿಭಿನ್ನ ಕ್ರಮಗಳನ್ನು ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ಸಲಹೆ ಗಮನ ಸೆಳೆದಿದೆ.

ಇಸ್ರೇಲ್ ದಾಳಿಗೆ ಬಲಿಯಾದ ಮತ್ತೊಬ್ಬ ಇರಾನ್ ನಾಯಕ

ಇಸ್ರೇಲ್ ದಾಳಿಗೆ ಮತ್ತೊಬ್ಬ ಇರಾನ್ ನಾಯಕ ಬಲಿ

ಇರಾನ್‌ನ ಗುಪ್ತಚರ ಸಚಿವ ಎಸ್ಮಾಯಿಲ್ ಖತೀಬ್ ಅವರನ್ನು ಇಸ್ರೇಲ್ ಹತ್ಯೆಗೈದಿದೆ. ಖತೀಬ್ ಅವರನ್ನು ಬುಧವಾರ ರಾತ್ರಿಯಿಡೀ ನಡೆದ ದಾಳಿಯಲ್ಲಿ ಹತ್ಯೆ ಮಾಡಲಾಗಿದ್ದು, ಅವರ ಸಾವನ್ನು ಇರಾನ್ ದೃಢಪಡಿಸಿಲ್ಲ ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ತಿಳಿಸಿದ್ದಾರೆ. ಅವರನ್ನು ಕೊಳ್ಳಲು ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಮಿಲಿಟರಿಗೆ ಮುಕ್ತ ಅವಕಾಶ ನೀಡಿದ್ದರು ಎಂದು ಕಾಟ್ಜ್ ಹೇಳಿದರು.

80,886 ಮೆಟ್ರಿಕ್ ಟನ್ ಕಚ್ಚಾ ತೈಲದೊಂದಿಗೆ ಗುಜರಾತ್‌ ತಲುಪಿದ ಜಗ್‌ಲಡ್ಕಿ ಹಡಗು

ಭಾರತದ ತೈಲ ಸಮಸ್ಯೆಗೆ ಪರಿಹಾರ; ಗುಜರಾತ್‌ ತಲುಪಿತು ಮತ್ತೊಂದು ಹಡಗು

crude oil shipment: ಭಾರತದ ಧ್ವಜ ಹೊತ್ತ ಕಚ್ಚಾ ತೈಲ ಟ್ಯಾಂಕರ್ ಜಗ್‌ಲಡ್ಕಿ ಗುಜರಾತ್‌ನ ಅದಾನಿ ಬಂದರು ಮುಂದ್ರಾಗೆ ಯಶಸ್ವಿಯಾಗಿ ಆಗಮಿಸಿದೆ. ಈ ಸರಕುಗಳನ್ನು ಯುಎಇಯಿಂದ ತರಲಾಗಿದ್ದು, ಫುಜೈರಾ ಬಂದರಿನಲ್ಲಿ ಲೋಡ್ ಮಾಡಲಾಯಿತು. ಹಡಗು ಸುಮಾರು 80,886 ಮೆಟ್ರಿಕ್ ಟನ್ (MT) ಕಚ್ಚಾ ತೈಲವನ್ನು ಹೊತ್ತು ಬಂದರನ್ನು ತಲುಪಿತು.

Loading...