ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ವಿದೇಶ

ಆಸ್ಟ್ರೇಲಿಯಾದಲ್ಲಿ ಗಾಂಧಿ ಪ್ರತಿಮೆಯನ್ನು ಕತ್ತರಿಸಿ ಕದ್ದೊಯ್ದ ಖದೀಮರು; ತಕ್ಷಣ ಕ್ರಮಕ್ಕೆ ಭಾರತ ಆಗ್ರಹ

ಗಾಂಧಿ ಪ್ರತಿಮೆಗೆ ಹಾನಿ; ಕ್ರಮಕ್ಕೆ ಆಗ್ರಹ

ಆಸ್ಟ್ರೇಲಿಯಾದಲ್ಲಿ ಗಾಂಧಿ ಪ್ರತಿಮೆಯನ್ನು ಕತ್ತರಿಸಿ ಕದ್ದೊಯ್ದಿರುವ ಘಟನೆ ನಡೆದಿದೆ. ಮೆಲ್ಬೋರ್ನ್‌ನ ರೌವಿಲ್ಲೆಯಲ್ಲಿನ ಆಸ್ಟ್ರೇಲಿಯನ್ ಇಂಡಿಯನ್ ಕಮ್ಯುನಿಟಿ ಸೆಂಟರ್‌ನಲ್ಲಿರುವ ಮಹಾತ್ಮ ಗಾಂಧಿಯವರ ಪ್ರತಿಮೆಯನ್ನು ಕತ್ತರಿಸಿ ಕದ್ದೊಯ್ಯಲಾಗಿದೆ. ಇದು ಭಾರತೀಯ ಮತ್ತು ಆಸ್ಟ್ರೇಲಿಯನ್ ಸಮುದಾಯದಲ್ಲಿ ತೀವ್ರ ಕಳವಳವನ್ನು ಉಂಟು ಮಾಡಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಭಾರತ ಕ್ರಮಕ್ಕೆ ಆಗ್ರಹಿಸಿದೆ.

ʼʼಅತ್ಯುತ್ತಮ ಒಪ್ಪಂದʼʼ: ಭಾರತ–ಅಮೆರಿಕ ವ್ಯಾಪಾರ ಒಪ್ಪಂದದ ಬಗ್ಗೆ ಸಚಿವ ಪಿಯೂಷ್ ಗೋಯಲ್ ಹೇಳಿದ್ದೇನು?

ಭಾರತ–ಅಮೆರಿಕ ವ್ಯಾಪಾರ ಒಪ್ಪಂದ ಅತ್ಯುತ್ತಮ: ಪಿಯೂಷ್ ಗೋಯಲ್

India -US Trade Deal: ಭಾರತ–ಅಮೆರಿಕ ಮಧ್ಯೆ ಒಪ್ಪಂದದ ವಿವರಗಳನ್ನು ಸಂಸತ್ತಿನಲ್ಲಿ ಹಂಚಿಕೊಳ್ಳಲು ಬಯಸಿದ್ದೆ. ಆದರೆ ಲೋಕಸಭೆಯಲ್ಲಿ ನಡೆದ ಗದ್ದಲದ ಕಾರಣ ಸಾಧ್ಯವಾಗಲಿಲ್ಲ ಎಂದು ಸಚಿವ ಪಿಯೂಷ್ ಗೋಯಲ್ ಹೇಳಿದರು. ಈ ವೇಳೆ ವಿರೋಧ ಪಕ್ಷದ ನಾಯಕರನ್ನು ತೀವ್ರವಾಗಿ ಟೀಕಿಸಿದ ಅವರು, ರಾಹುಲ್ ಗಾಂಧಿ ನಕಾರಾತ್ಮಕ ಮನಸ್ಥಿತಿಯ ವ್ಯಕ್ತಿ. ಅವರು ದೇಶದ ಬೆಳವಣಿಗೆಯನ್ನು ವಿರೋಧಿಸುತ್ತಿದ್ದಾರೆ ಎಂದು ಆರೋಪಿಸಿದರು.

ಅಮೆರಿಕ- ಭಾರತ ವ್ಯಾಪಾರ ಒಪ್ಪಂದ: ರೈತರ ವಿಚಾರದಲ್ಲಿ ರಾಜಿ ಇಲ್ಲ, ವೆನೆಜುವೆಲಾ ತೈಲ ಖರೀದಿ ಮಾಡೋದಿಲ್ಲ

ಅಮೆರಿಕ- ಭಾರತ ಒಪ್ಪಂದದ ಬಗ್ಗೆ ಕೇಂದ್ರ ಸರ್ಕಾರ ಹೇಳುವುದೇನು?

ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದ ಪೂರ್ಣಗೊಂಡಿದೆ. ಈ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಕೇಂದ್ರ ಸರ್ಕಾರ ಘೋಷಣೆಯನ್ನೂ ಮಾಡಿವೆ. ಅಮೆರಿಕ- ಭಾರತ ಒಪ್ಪಂದಕ್ಕಾಗಿ ರೈತರ ವಿಚಾರದಲ್ಲಿ ಯಾವುದೇ ರೀತಿಯಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಮತ್ತು ವೆನೆಜುವೆಲಾ ತೈಲ ಖರೀದಿ ಮಾಡೋದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.

ಮೆಣಸಿನಕಾಯಿ ನೆನೆಸಿಟ್ಟ ನೀರಿನಲ್ಲಿ ಸ್ನಾನ ಮಾಡಲು ನೀವು ಸಿದ್ಧರಿದ್ದೀರಾ? ಚೀನಾಕ್ಕೆ ಭೇಟಿ ನೀಡಿ

ಮೆಣಸಿನಕಾಯಿ ನೀರಿನ ಸ್ನಾನ ಮಾಡ್ತೀರಾ? ಇಲ್ಲಿಗೆ ಭೇಟಿ‌ ನೀಡಿ

Viral Video: ಚೀನಾದ ಹಾರ್ಬಿನ್‌ನಲ್ಲಿರುವ ಈ ಒಂದು ಈಜುಕೊಳ ಜಗತ್ತಿನ ಗಮನ ಸೆಳೆದಿದೆ. ಚೀನಾದ ರೆಸಾರ್ಟ್‌ ಒಂದರಲ್ಲಿ 'ಹಾಟ್ ಪಾಟ್ ಸ್ಪಾ' ಎಂದು ಕರೆಯಲಾಗುವ ಸ್ಪಾಟ್ ಇದ್ದು, ನೀರಿನ ಒಳಗೆ ತರಕಾರಿ ಮತ್ತು ಮೆಣಸಿನಕಾಯಿ ಹಾಕಲಾಗುತ್ತದೆ. ಮೆಣಸಿನಕಾಯಿ ತುಂಬಿದ ನೀರು ಒಂದು ಬದಿಯಲ್ಲಿ ಕೆಂಪು ಬಣ್ಣದಿಂದ ಕೂಡಿದ್ದು, ಇನ್ನೊಂದು ಬದಿಯಲ್ಲಿ ಹಾಲು ಮತ್ತು ಇತರ ತರಕಾರಿಗಳಿಂದ ಕೂಡಿದೆ.

ಭಾರತ ತೈಲ ಖರೀದಿ ನಿಲ್ಲಿಸುವ ಬಗ್ಗೆ ಯಾವುದೇ ಮಾಹಿತಿ ಇಲ್ಲ: ಅಮೆರಿಕ ವ್ಯಾಪಾರ ಒಪ್ಪಂದದ ನಂತರ ರಷ್ಯಾ ಮೊದಲ ಪ್ರತಿಕ್ರಿಯೆ

ಅಮೆರಿಕ ವ್ಯಾಪಾರ ಒಪ್ಪಂದದ ನಂತರ ರಷ್ಯಾ ಮೊದಲ ಪ್ರತಿಕ್ರಿಯೆ

India-US Trade Deal: ಭಾರತ ಮತ್ತು ಅಮೆರಿಕ ನಡುವೆ ಮಹತ್ವದ ವ್ಯಾಪಾರ ಒಪ್ಪಂದ ಅಂತಿಮಗೊಂಡಿದೆ. ಅದರ ಭಾಗವಾಗಿ ಭಾರತವು ರಷ್ಯಾದಿಂದ ತೈಲ ಖರೀದಿ ನಿಲ್ಲಿಸಲಿದೆ ಎಂದು ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ರಷ್ಯಾ ಈ ಬಗ್ಗೆ ಯಾವುದೇ ಮಾಹಿತಿ ಲಭಿಸಿಲ್ಲ ಎಂದಿದೆ.

ಹೆಚ್ಚಿನ ಸುಂಕ, ಬೆದರಿಕೆ, ಒಪ್ಪಂದ; ಅಮೆರಿಕ-ಭಾರತ ವ್ಯಾಪಾರ ಡೀಲ್‌ ಸಾಗಿ ಬಂದ ಉದ್ವಿಗ್ನತೆಯ ಹಾದಿ

ಅಮೆರಿಕ–ಭಾರತ ವ್ಯಾಪಾರ ಒಪ್ಪಂದ ಘರ್ಷಣೆ ಹೇಗಿತ್ತು?

ಭಾರತ–ಅಮೆರಿಕ ನಡುವಿನ ದೀರ್ಘಕಾಲದ ಸುಂಕ ವಿವಾದಕ್ಕೆ ತೆರೆ ಬಿದ್ದಿದ್ದು, ಐತಿಹಾಸಿಕ ವ್ಯಾಪಾರ ಒಪ್ಪಂದಕ್ಕೆ ಎರಡೂ ದೇಶಗಳು ಒಪ್ಪಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತೀಯ ರಫ್ತುಗಳ ಮೇಲಿನ ಸುಂಕವನ್ನು ಶೇ. 50ರಿಂದ ಶೇ. 18ಕ್ಕೆ ಇಳಿಸುವುದಾಗಿ ಘೋಷಿಸಿದ್ದಾರೆ. ಇದರಿಂದ ಭಾರತೀಯ ರಫ್ತುದಾರರಿಗೆ ದೊಡ್ಡ ರಿಲೀಫ್ ಸಿಕ್ಕಿದೆ. ಪ್ರಧಾನಿ ಮೋದಿ ಜತೆಗಿನ ಮಾತುಕತೆಯ ಬಳಿಕ ಸ್ನೇಹ ಮತ್ತು ಪರಸ್ಪರ ಗೌರವದ ಸಂಕೇತವಾಗಿ ಈ ಒಪ್ಪಂದ ಜಾರಿಗೆ ಬಂದಿದೆ.

ಭಾರತದ ಮೇಲಿನ ಸುಂಕ ಶೇಕಡಾ 18ಕ್ಕೆ ಇಳಿಸಿದ ಅಮೆರಿಕ; ಪ್ರಧಾನಿ ನರೇಂದ್ರ ಮೋದಿ ಮೊದಲ ಪ್ರತಿಕ್ರಿಯೆ

ಸುಂಕ ಇಳಿಸಿದ ಡೊನಾಲ್ಡ್‌ ಟ್ರಂಪ್‌ಗೆ ಮೋದಿ ಧನ್ಯವಾದ

Narendra Modi: ಅಮೆರಿಕ ಅಧ್ಯಕ್ಷ ಟೊನಾಲ್ಡ್‌ ಟ್ರಂಪ್‌ ಮಹತ್ವದ ಘೋಷಣೆ ಹೊರಡಿಸಿದ್ದು, ಭಾರತದ ಮೇಲಿನ ಸುಂಕವನ್ನು ಶೇಕಡಾ 18ಕ್ಕೆ ಇಳಿಸಿರುವುದಾಗಿ ತಿಳಿಸಿದ್ದಾರೆ. ಟ್ರಂಪ್‌ ಘೋಷಣೆ ಹೊರ ಬೀಳುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ನರೇಂದ್ರ ಮೋದಿಗೆ ಕರೆ ಮಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌; ಭಾರತದ ಮೇಲಿನ ಸುಂಕ ಶೇಕಡಾ 18ಕ್ಕೆ ಇಳಿಕೆ

ಭಾರತದ ಮೇಲಿನ ಸುಂಕ ಶೇಕಡಾ 18ಕ್ಕೆ ಇಳಿಸಿದ ಅಮೆರಿಕ ಅಧ್ಯಕ್ಷ ಟ್ರಂಪ್‌

ಭಾರತ ಮತ್ತು ಅಮೆರಿಕ ಮಧ್ಯೆ ಸುಂಕ ಸಮರ ನಡೆಯುತ್ತಿರುವ ಮಧ್ಯೆ ಅಪರೂಪದ ಪ್ರಸಂಗವೊಂದು ಕಂಡು ಬಂದಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕರೆ ಮಾಡಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡಿದ್ದು, ಸುಂಕವನ್ನು ಶೇಕಡಾ 18ಕ್ಕೆ ಇಳಿಸಿರುವುದಾಗಿ ಪ್ರಕಟಿಸಿದ್ದಾರೆ.

ಲಂಡನ್‌ನಿಂದ ಬೆಂಗಳೂರಿಗೆ ಹೊರಟಿದ್ದ ಏರ್‌ ಇಂಡಿಯಾ ವಿಮಾನದಲ್ಲಿ ಇಂಧನ ಪೂರೈಕೆ ಸ್ಥಗಿತ; ತಪ್ಪಿದ ಭಾರಿ ದುರಂತ

ಬೆಂಗಳೂರಿಗೆ ಹೊರಟಿದ್ದ ವಿಮಾನದಲ್ಲಿ ಇಂಧನ ಪೂರೈಕೆ ಸ್ಥಗಿತ

Air India Flight: ಲಂಡನ್‌ನಿಂದ ಬೆಂಗಳೂರಿಗೆ ಹೊರಟಿದ್ದ ಏರ್‌ ಇಂಡಿಯಾ ವಿಮಾನದಲ್ಲಿ ಇಂಧನ ಪೂರೈಕೆ ಸ್ಥಗಿತಗೊಂಡಿದ್ದು, ಅದೃಷ್ಟವಶಾತ್‌ ಭಾರಿ ದುರಂತವೊಂದು ತಪ್ಪಿದೆ. ಲಂಡನ್-ಬೆಂಗಳೂರು ಮಾರ್ಗದಲ್ಲಿ ಹಾರಾಟ ನಡೆಸುವ ಬೋಯಿಂಗ್ 787-8 ವಿಮಾನದಲ್ಲಿ ದೋಷ ಕಾಣಿಸಿಕೊಂಡಿದ್ದು, ಟ್ರಿಪ್‌ ಕಡಿತಗೊಳಿಸಲಾಗಿದೆ.

ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ: ಬಲೂಚಿಸ್ತಾನದಲ್ಲಿ 145 ಭಯೋತ್ಪಾದಕರು, 17 ಭದ್ರತಾ ಸಿಬ್ಬಂದಿ ಸಾವು

ಬಲೂಚಿಸ್ತಾನದಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ

ಕ್ವೆಟ್ಟಾ, ಮಸ್ತುಂಗ್, ನುಷ್ಕಿ, ದಲ್ಬಂದಿನ್, ಖರನ್, ಪಂಜ್‌ಗುರ್, ಟಂಪ್, ಗ್ವಾದರ್ ಮತ್ತು ಪಾಸ್ನಿ ಸೇರಿದಂತೆ ಬಲೂಚಿಸ್ತಾನದ ವಿವಿಧ ಭಾಗಗಳಲ್ಲಿ ನಡೆಸಿದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಲ್ಲಿ 145 ಭಯೋತ್ಪಾದಕರು, 17 ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಬಲೂಚಿಸ್ತಾನ ಮುಖ್ಯಮಂತ್ರಿ ಸರ್ಫರಾಜ್ ಬುಗ್ತಿ ತಿಳಿಸಿದ್ದಾರೆ.

ಬಲೂಚ್‌ ಮಹಿಳಾ ಆತ್ಮಾಹುತಿ ಬಾಂಬರ್‌ಗಳಿಂದ ಪಾಕಿಸ್ತಾನ ಸೇನೆ ಛಿದ್ರ-ಛಿದ್ರ; ಕಾರ್ಯಾಚರಣೆ ಕುರಿತು ನಾಯಕರು ಹೇಳಿದ್ದೇನು?

ಬಲೂಚ್‌ ಮಹಿಳಾ ಆತ್ಮಾಹುತಿ ಬಾಂಬರ್‌ಗಳಿಂದ ಪಾಕಿಸ್ತಾನ ಸೇನೆ ಛಿದ್ರ-ಛಿದ್ರ!

ಬಲೂಚಿಸ್ತಾನದ ಹಲವಾರು ಜಿಲ್ಲೆಗಳಲ್ಲಿ ಆಪರೇಷನ್ ಹೆರೋಫ್ ಫೇಸ್ I ಎಂದು ಕರೆಯಲ್ಪಡುವ ತನ್ನ ನಿರಂತರ ದಾಳಿಯು 40 ಗಂಟೆಗಳಿಗೂ ಹೆಚ್ಚು ಕಾಲ ಮುಂದುವರೆದಿದೆ ಎಂದು ಬಲೂಚಿಸ್ತಾನ್ ಬಂಡುಕೋರ ಗುಂಪು ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಹೇಳಿಕೊಂಡಿದೆ.

ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ಬಸ್‌ ಮೇಲೆ ರಷ್ಯಾ ಡ್ರೋನ್‌ ದಾಳಿ; 15 ಉಕ್ರೇನಿಯನ್ನರು ಸಾವು

ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ಬಸ್‌ ಮೇಲೆ ರಷ್ಯಾ ಡ್ರೋನ್‌ ದಾಳಿ

ಉಕ್ರೇನ್‌ನ ಪಾವ್ಲೋಹ್ರಾಡ್ ಜಿಲ್ಲೆಯಲ್ಲಿ ಶನಿವಾರ ರಷ್ಯಾ ಡ್ರೋನ್‌ ಮೂಲಕ ದಾಳಿ ನಡೆಸಿದ್ದು, ಡ್ರೋನ್ ಗಣಿಗಾರರನ್ನು ಸಾಗಿಸುತ್ತಿದ್ದ ಸರ್ವಿಸ್ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 15 ಜನರು ಸಾವನ್ನಪ್ಪಿದ್ದಾರೆ ಮತ್ತು ಏಳು ಜನರು ಗಾಯಗೊಂಡಿದ್ದಾರೆ ಎಂದು ಉಕ್ರೇನ್‌ನ ರಾಜ್ಯ ತುರ್ತು ಸೇವೆ ತಿಳಿಸಿದೆ.

ಲೈಂಗಿಕ ಕಾಯಿಲೆಗೆ ತುತ್ತಾಗಿರುವ ಬಿಲ್ ಗೇಟ್ಸ್; ಜೆಫ್ರಿ ಎಪ್ಸ್ಟೀನ್ ಪ್ರಕರಣದಲ್ಲಿ ಬಯಲಾಗಿದೆ ರಹಸ್ಯ

ವಿಶ್ವದ ಶ್ರೀಮಂತ ವ್ಯಕ್ತಿಯ ಇನ್ನೊಂದು ಮುಖ ಬಯಲು

ರಷ್ಯಾದ ಹುಡುಗಿಯರು, ಗುಪ್ತ ರೋಗ, ಹೆಂಡತಿಗೆ ಮೋಸ..ವಿಶ್ವದ ಶ್ರೀಮಂತ ವ್ಯಕ್ತಿಯೊಬ್ಬರ ಇನ್ನೊಂದು ಮುಖವನ್ನು ಅನಾವರಣ ಮಾಡಿದೆ ಜೆಫ್ರಿ ಎಪ್ಸ್ಟೀನ್ ಪ್ರಕರಣ. ಅಮೆರಿಕದ ನ್ಯಾಯಾಂಗ ಇಲಾಖೆ ಬಿಡುಗಡೆ ಮಾಡಿರುವ ಜೆಫ್ರಿ ಎಪ್ಸ್ಟೀನ್‌ಗೆ ಸಂಬಂಧಿಸಿದ ಹೊಸ ರಹಸ್ಯ ದಾಖಲೆಗಳಲ್ಲಿ ಬಿಲ್ ಗೇಟ್ಸ್ ಅವರಿಗೆ ಸಂಬಂಧಿಸಿದ ಹಲವು ರಹಸ್ಯಗಳು ಬಹಿರಂಗವಾಗಿವೆ.

ನೇರ ವಿಮಾನ ಹಾರಾಟ, ಫೈಟರ್ ಜೆಟ್ ಒಪ್ಪಂದ; ಭಾರತದ ವಿರುದ್ಧ ಪಾಕಿಸ್ತಾನ ಪರ ನಿಂತಿತೇ ಬಾಂಗ್ಲಾದೇಶ?

ಪಾಕಿಸ್ತಾನದೊಂದಿಗೆ ಫೈಟರ್ ಜೆಟ್ ಒಪ್ಪಂದಕ್ಕೆ ಮುಂದಾದ ಬಾಂಗ್ಲಾದೇಶ

ಸರಿಸುಮಾರು 14 ವರ್ಷಗಳ ಬಳಿಕ ಪಾಕಿಸ್ತಾನ ಜೊತೆ ಬಾಂಗ್ಲಾದೇಶ ಮೈತ್ರಿಯನ್ನು ಗಾಢ ಗೊಳಿಸುತ್ತಿರುವ ಸುಳಿವು ಸಿಕ್ಕಿದೆ. ಈಗಾಗಲೇ ಬಾಂಗ್ಲಾದೇಶವು ಇಸ್ಲಾಮಾಬಾದ್ ನೊಂದಿಗೆ ನೇರ ವಿಮಾನ ಹಾರಾಟ, ಫೈಟರ್ ಜೆಟ್ ಒಪ್ಪಂದಕ್ಕೆ ಅಣಿಯಾಗಿದೆ. ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಅಧಿಕಾರ ಪತನದ ಬಳಿಕ ಭಾರತಕ್ಕೆ ಬಂದು ನೆಲೆಯಾಗಿದ್ದು, ಇದು ಭಾರತ ಮತ್ತು ಬಾಂಗ್ಲಾದೇಶ ನಡುವಿನ ಸಂಬಂಧ ಹದಗೆಡಲು ಕಾರಣವಾಗಿದೆ.

ವೆನೆಜುವೆಲಾ ಜತೆ ಸಂಬಂಧ ಸದೃಢಗೊಳಿಸಲು ಹಂಗಾಮಿ ಅಧ್ಯಕ್ಷರೊಂದಿಗೆ ಪ್ರಧಾನಿ ಮೋದಿ ಮಾತುಕತೆ

ವೆನೆಜುವೆಲಾದ ಹಂಗಾಮಿ ಅಧ್ಯಕ್ಷರೊಂದಿಗೆ ಪ್ರಧಾನಿ ಮೋದಿ ಮಾತುಕತೆ

ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಅಮೆರಿಕ ಸೇನಾ ಪಡೆ ಬಂಧಿಸಿದ ಬಳಿಕ ಮೊದಲ ಬಾರಿಗೆ ವೆನೆಜುವೆಲಾದ ಹಂಗಾಮಿ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಎರಡು ರಾಷ್ಟ್ರಗಳ ನಡುವಿನ ಸಂಬಂಧಗಳನ್ನು ಸದೃಢಗೊಳಿಸಲು ಇಬ್ಬರು ನಾಯಕರು ಮಾತುಕತೆ ನಡೆಸಿದ್ದಾರೆ.

ರಷ್ಯಾದಿಂದ ಆಮದು ಕಡಿಮೆಯಾದ ಮೇಲೆ ಭಾರತಕ್ಕೆ ಕಚ್ಚಾ ತೈಲ ಎಲ್ಲಿಂದ ಬರುತ್ತೆ?

ಭಾರತಕ್ಕೆ ತೈಲ ಎಲ್ಲಿಂದ ಬರುತ್ತೆ?

ರಷ್ಯಾದಿಂದ ಭಾರತ ತೈಲ ಆಮದು ಮಾಡುತ್ತಿರುವುದರಿಂದ ಉಂಟಾದ ಸಂಕಷ್ಟ ಒಂದೆರಡಲ್ಲ. ಅಮೆರಿಕ ಭಾರಿ ಪ್ರಮಾಣದಲ್ಲಿ ಸುಂಕ ಹೇರಿ ಹೇಗಾದರೂ ಮಾಡಿ ಭಾರತ ರಷ್ಯಾದಿಂದ ತೈಲ ಖರೀದಿ ಮಾಡದಂತೆ ತಡೆಯುವ ಪ್ರಯತ್ನ ಮಾಡಿತ್ತು. ಈ ನಿಟ್ಟಿನಲ್ಲಿ ಕೊಂಚ ಯಶಸ್ಸನ್ನು ಪಡೆಯುವ ಹಾದಿಯಲ್ಲಿದೆ. ಆದರೆ ರಷ್ಯಾದಿಂದ ಭಾರತಕ್ಕೆ ತೈಲ ಆಮದು ಕಡಿಮೆಯಾದರೆ ಮತ್ತೆ ಎಲ್ಲಿಂದ ಭಾರತಕ್ಕೆ ತೈಲವನ್ನು ತರಲಾಗುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ.

ಭಾರತದ ಮೇಲೆ ನಿಗಾ ಇಟ್ಟಿರುವ ಪಾಕಿಸ್ತಾನ? ಸಾಂಬಾದಲ್ಲಿ ಮತ್ತೊಂದು ಶಂಕಿತ ಡ್ರೋನ್ ಪತ್ತೆ

ಕಾಶ್ಮೀರದಲ್ಲಿ ಪಾಕಿಸ್ತಾನಿ ಡ್ರೋನ್ ಪತ್ತೆ

ಭಾರತ ಮತ್ತು ಪಾಕಿಸ್ತಾನದ ಗಡಿ ಭಾಗದಲ್ಲಿ ಶಂಕಿತ ಪಾಕಿಸ್ತಾನಿ ಡ್ರೋನ್ ಪತ್ತೆಯಾಗಿದೆ. ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಸಿಬ್ಬಂದಿ ಇದರ ಮೇಲೆ ಗುಂಡಿನ ದಾಳಿ ನಡೆಸಿದರು. ಇದಕ್ಕೂ ಮುನ್ನ ಜನವರಿ 15 ರಂದು ಸಾಂಬಾದ ಐಬಿಯಲ್ಲಿ ಶಂಕಿತ ಪಾಕಿಸ್ತಾನಿ ಡ್ರೋನ್ ಪತ್ತೆಯಾಗಿತ್ತು. ಕೂಡಲೇ ಈ ಪ್ರದೇಶದಲ್ಲಿ ಹೈ ಅಲರ್ಟ್ ಘೋಷಿಸಲಾಗಿತ್ತು ಮತ್ತು ಭದ್ರತಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು.

ಶಾಂತಿ ಮಾತುಕತೆಗಾಗಿ ಉಕ್ರೇನ್ ಅಧ್ಯಕ್ಷರನ್ನು ಮಾಸ್ಕೋಗೆ ಆಹ್ವಾನಿಸಿದ ರಷ್ಯಾ

ಉಕ್ರೇನ್ ಅಧ್ಯಕ್ಷರಿಗೆ ಮಾಸ್ಕೋಗೆ ಆಹ್ವಾನ

ರಷ್ಯಾ ಮತ್ತು ಉಕ್ರೇನ್ ನಡುವಿನ ನಾಲ್ಕು ವರ್ಷಗಳ ಸಂಘರ್ಷ ಕೊನೆಯಾಗುವ ಲಕ್ಷಣ ಕಾಣುತ್ತಿದೆ. ಎರಡು ರಾಷ್ಟ್ರಗಳ ನಡುವೆ ಶಾಂತಿ ಮಾತುಕತೆಗಳು ಅಮೆರಿಕ ನೇತೃತ್ವದಲ್ಲಿ ತೀವ್ರತೆ ಪಡೆದುಕೊಂಡಿದೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಶಾಂತಿ ಮಾತುಕತೆಗಾಗಿ ರಷ್ಯಾವು ಮಾಸ್ಕೋಗೆ ಆಹ್ವಾನಿಸಿದೆ. ಆದರೆ ಇದಕ್ಕೆ ಉಕ್ರೇನ್ ಅಧ್ಯಕ್ಷರು ಇನ್ನೂ ಯಾವುದೇ ಉತ್ತರ ನೀಡಿಲ್ಲ.

Doomsday Clock: ಮಧ್ಯರಾತ್ರಿಯ ಹತ್ತಿರಕ್ಕೆ ಬಂದ ಡೂಮ್ಸ್‌ಡೇ ಗಡಿಯಾರ; ಇದು ವಿಶ್ವದ ವಿನಾಶದ ಮುನ್ಸೂಚನೆಯೇ?

ಮಧ್ಯರಾತ್ರಿಯ ಹತ್ತಿರಕ್ಕೆ ಬಂದ ಡೂಮ್ಸ್‌ಡೇ ಗಡಿಯಾರ

ಸರ್ವನಾಶದ ಮುಳ್ಳು ಎಂದೇ ಖ್ಯಾತಿ ಹೊಂದಿರುವ ಡೂಮ್ಸ್‌ಡೇ ಕ್ಲಾಕ್ ಬಗ್ಗೆ ಅಚ್ಚರಿಯ ಮಾಹಿತಿಯೊಂದು ಹೊರಬಿದ್ದಿದೆ. ಒಂದು ವೇಳೆ ಈ ಮುಳ್ಳು ಮಧ್ಯರಾತ್ರಿ 12 ಗಂಟೆಯನ್ನು ಸೂಚಿಸಿದರೆ ಜಗತ್ತು ಸರ್ವನಾಶವಾಗುತ್ತದೆ ಎನ್ನುವ ನಂಬಿಕೆ ಇದೆ. ಈ ಕುರಿತಾದ ವಿವರ ಇಲ್ಲಿದೆ.

ಬಜೆಟ್ ಅಧಿವೇಶನಕ್ಕೂ  ಮುನ್ನ ಕಾಂಗ್ರೆಸ್ ಕರೆದ ಸಭೆಗೆ ಎರಡನೇ ಬಾರಿಗೂ ಸಂಸದ ಶಶಿ ತರೂರ್ ಗೈರು

ಕಾಂಗ್ರೆಸ್ ಸಭೆಗೆ ಎರಡನೇ ಬಾರಿಗೂ ಶಶಿ ತರೂರ್ ಗೈರು

ಪಕ್ಷದೊಳಗಿನ ಅಸಮಾಧಾನಗಳ ನಡುವೆ ನಾಲ್ಕು ದಿನಗಳಲ್ಲಿ ಎರಡು ಬಾರಿ ಕರೆದ ಕಾಂಗ್ರೆಸ್ ಸಭೆಗೆ ಸಂಸದ ಶಶಿ ತರೂರ್ ಗೈರು ಹಾಜರಾಗಿದ್ದಾರೆ. ಬಜೆಟ್ ಅಧಿವೇಶನಕ್ಕೂ ಮುನ್ನ ಪಕ್ಷದ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಧ್ಯಕ್ಷತೆಯಲ್ಲಿ ಅವರ ನಿವಾಸದಲ್ಲಿ ಮಂಗಳವಾರ ಸಭೆ ಕರೆಯಲಾಗಿತ್ತು. ಆದರೆ ಈ ಸಭೆಗೆ ಶಶಿ ತರೂರ್ ಅವರು ಗೈರು ಹಾಜರಾಗಿದ್ದರು.

ದುಬೈ ಉದ್ಯಮಿಯಿಂದ ಬಂಪರ್‌ ಆಫರ್‌: ಮದುವೆಯಾಗುವ ಉದ್ಯೋಗಿಗಳಿಗೆ 12.5 ಲಕ್ಷ ರುಪಾಯಿ ಉಡುಗೊರೆ

ಮದುವೆಯಾಗುವ ಉದ್ಯೋಗಿಗಳಿಗೆ 12.5 ಲಕ್ಷ ರುಪಾಯಿ ಘೋಷಿಸಿದ ಕಂಪನಿ

Viral News: ದುಬೈಯ ಕಂಪನಿಯೊಂದು ಉದ್ಯೋಗಿಗಳಿಗೆ ಬಂಪರ್ ಆಫರ್ ಘೋಷಣೆ ಮಾಡಿದೆ. ಉದ್ಯೋಗಿಗಳ ಅನುಕೂಲಕ್ಕಾಗಿ ಅಲ್ ಹಬ್ತೂರ್ ಗ್ರೂಪ್‌ನ ಸಂಸ್ಥಾಪಕ ಅಧ್ಯಕ್ಷ ಖಲಫ್ ಅಹ್ಮದ್ ವಿಶೇಷ ಯೋಜನೆಯನ್ನು ಜಾರಿ ಮಾಡಿದ್ದಾರೆ‌. ಕಾರ್ಮಿಕರನ್ನು ಬೆಂಬಲಿಸುವ ನಿಟ್ಟಿನಲ್ಲಿ ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುವ ಯುವ ಉದ್ಯೋಗಿ ಮದುವೆಯಾದರೆ 12.5 ಲಕ್ಷ ರುಪಾಯಿ (50,000 ದಿರ್ಹಂ) ಅನುದಾನ ನೀಡುವುದಾಗಿ ಘೋಷಿಸಿದ್ದಾರೆ.

ಭಾರತ–ಇಯು ವ್ಯಾಪಾರ ಒಪ್ಪಂದಕ್ಕೆ ಸಹಿ: ಅಮೆರಿಕದ ಮೇಲೆ ಪರಿಣಾಮವೇನು?

ಭಾರತ–ಇಯು ಮುಕ್ತ ವ್ಯಾಪಾರ ಒಪ್ಪಂದ: ಟ್ರಂಪ್‌ ಸಿಡಿಮಿಡಿ

ಭಾರತ–ಐರೋಪ್ಯ ಒಕ್ಕೂಟದ ಮುಕ್ತ ವ್ಯಾಪಾರ ಒಪ್ಪಂದವು ಜಾಗತಿಕ ರಾಜಕೀಯ ಮತ್ತು ಆರ್ಥಿಕತೆಯಲ್ಲಿ ಮಹತ್ವದ ತಿರುವು ಎನಿಸಿಕೊಂಡಿದೆ. ಇದು ಭಾರತ ಮತ್ತು ಯುರೋಪ್ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಮಾತ್ರವಲ್ಲ ಅಮೆರಿಕ ಹಾಗೂ ಚೀನಾದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ, ದ್ವಿಪಕ್ಷೀಯ ವ್ಯಾಪಾರವನ್ನು ಉತ್ತೇಜಿಸುವ ಜತೆಗೆ ನಿಯಮಾಧಾರಿತ ಮತ್ತು ವೈವಿಧ್ಯಮಯ ಜಾಗತಿಕ ವಾಣಿಜ್ಯದತ್ತ ದಾರಿ ಮಾಡಿಕೊಡುತ್ತದೆ.

ಅಮೆರಿಕದಲ್ಲಿ ಭಾರಿ ಹಿಮಪಾತ; ಸಾವಿನ ಸಂಖ್ಯೆ 30ಕ್ಕೆ ಏರಿಕೆ: ಕಡು ಚಳಿಗೆ ದೇಶವೇ ತತ್ತರ

ಭಾರಿ ಹಿಮಪಾತದಿಂದ ತತ್ತರಿಸಿದ ಅಮೆರಿಕ

ಅಮೆರಿಕದಲ್ಲಿ ಅಪರೂಪದ ಭೀಕರ ಹಿಮಪಾತ ಮತ್ತು ಕಡು ಚಳಿ ಮುಂದುವರಿದಿದ್ದು, ಹಲವು ರಾಜ್ಯಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ವಿದ್ಯುತ್ ವ್ಯತ್ಯಯದಿಂದ ಲಕ್ಷಾಂತರ ಜನರು ಸಂಕಷ್ಟಕ್ಕೆ ಒಳಗಾಗಿದ್ದು, ಹಿಮ ಬಿರುಗಾಳಿ ಕಾರಣ 30ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.

ಗಣರಾಜ್ಯೋತ್ಸವದ ಶುಭ ಹಾರೈಸಿ, ಭಾರತ- ಅಮೆರಿಕ ಸಂಬಂಧಗಳಿಗೆ ಅಭಿನಂದನೆ ಸಲ್ಲಿಸಿದ ಡೊನಾಲ್ಡ್ ಟ್ರಂಪ್

ಭಾರತಕ್ಕೆ ಗಣರಾಜ್ಯೋತ್ಸವದ ಶುಭ ಹಾರೈಸಿದ ಡೊನಾಲ್ಡ್ ಟ್ರಂಪ್

2026ರ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಮೆರಿಕ ಮತ್ತು ಭಾರತದ ನಡುವಿನ ಸಂಬಂಧಗಳಿಗೆ ಅಭಿನಂದನೆ ಸಲ್ಲಿಸಿದರು. ವಿಶ್ವದ ಅತ್ಯಂತ ಹಳೆಯ ಪ್ರಜಾಪ್ರಭುತ್ವ ದೇಶಗಳಾದ ಭಾರತ ಮತ್ತು ಅಮೆರಿಕ ಐತಿಹಾಸಿಕ ಬಾಂಧವ್ಯವನ್ನು ಹಂಚಿಕೊಂಡಿವೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ.

Loading...