ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವಿದೇಶ

ಕತಾರ್‌ನಲ್ಲಿ ಭೀಕರ ಸ್ಫೋಟ: ಭಾರತೀಯರು ಸೇರಿ 13 ಮಂದಿ ಸಾವು, 66 ಮಂದಿಗೆ ಗಾಯ

ಕತಾರ್‌ LNG ಘಟಕದಲ್ಲಿ ಸ್ಫೋಟ: ಭಾರತೀಯರು ಸೇರಿ 13 ಮಂದಿ ಸಾವು

Qatar Gas Plant Explosion: ಕತಾರ್‌ನ ರಾಸ್ ಲಫಾನ್ ಕೈಗಾರಿಕಾ ನಗರದಲ್ಲಿರುವ ಬರ್ಜಾನ್ LNG ಘಟಕದಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ ಭಾರತೀಯರು ಹಾಗೂ ಪಾಕಿಸ್ತಾನ ಮೂಲದ ಕಾರ್ಮಿಕರು ಸೇರಿ 13 ಮಂದಿ ಮೃತಪಟ್ಟಿದ್ದು, 66 ಮಂದಿ ಗಾಯಗೊಂಡಿದ್ದಾರೆ. ತಾಂತ್ರಿಕ ದೋಷದಿಂದ ಅವಘಡ ಸಂಭವಿಸಿದ್ದು, ಕತಾರ್ ಸರ್ಕಾರ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ.

ದೋಹಾದಲ್ಲಿ ಅದ್ಧೂರಿಯಾಗಿ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ದೋಹಾದಲ್ಲಿ ಅದ್ಧೂರಿಯಾಗಿ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

International Yoga Day: ಕತಾರ್‌ನ ಯುಡಿಎಸ್‌ಟಿ ಕ್ರಿಕೆಟ್ ಮೈದಾನದಲ್ಲಿ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅತ್ಯಂತ ಉತ್ಸಾಹ ಮತ್ತು ಭವ್ಯತೆಯಿಂದ ಆಚರಿಸಲಾಯಿತು. "ಆರೋಗ್ಯಕರ ವೃದ್ಧಾಪ್ಯಕ್ಕೆ ಯೋಗ" ಎಂಬ ಜಾಗತಿಕ ಧ್ಯೇಯವಾಕ್ಯದೊಂದಿಗೆ ನಡೆದ ಈ ಐತಿಹಾಸಿಕ ಕಾರ್ಯಕ್ರಮವು ದೀರ್ಘಾಯುಷ್ಯ, ಚೈತನ್ಯ ಮತ್ತು ಒಟ್ಟಾರೆ ಆರೋಗ್ಯವನ್ನು ವೃದ್ಧಿಸುವಲ್ಲಿ ಯೋಗದ ಪಾತ್ರವನ್ನು ಯಶಸ್ವಿಯಾಗಿ ಎತ್ತಿ ತೋರಿಸಿತು.

ನೆಚ್ಚಿನ ಭಾರತ, ಪಾಕಿಸ್ತಾನ ವ್ಯಕ್ತಿಯನ್ನು ಹೆಸರಿಸಿದ ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್; ಪಟ್ಟಿಯಲ್ಲಿ ಯಾರಿದ್ದಾರೆ?

ನೆಚ್ಚಿನ ಭಾರತೀಯ ವ್ಯಕ್ತಿಯನ್ನು ಹೆಸರಿಸಿದ ಅಮೆರಿಕ ಉಪಾಧ್ಯಕ್ಷ

JD Vance: ಸ್ವಿಟ್ಜರ್ಲ್ಯಾಂಡ್‌ನಲ್ಲಿ ನಡೆದ ಅಮೆರಿಕ-ಇರಾನ್ ಮಾತುಕತೆಯ ವೇಳೆ ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್, ತಮ್ಮ ಪತ್ನಿ ಉಷಾ ವ್ಯಾನ್ಸ್ ಮತ್ತು ಪಾಕಿಸ್ತಾನದ ಫೀಲ್ಡ್ ಮಾರ್ಷಲ್ ಅಸಿಂ ಮುನೀರ್ ಅವರನ್ನು ಜೀವನದ ಎರಡು ಪ್ರಮುಖ ವ್ಯಕ್ತಿಗಳೆಂದು ಉಲ್ಲೇಖಿಸಿದರು. ಕಳೆದ ಮೂರು ತಿಂಗಳಲ್ಲಿ ಮುನೀರ್ ಅವರೊಂದಿಗೆ ಅತಿಹೆಚ್ಚು ಮಾತುಕತೆ ನಡೆಸಿರುವುದಾಗಿ ತಿಳಿಸಿದ ಅವರು, ಅವರ ರಾಜತಾಂತ್ರಿಕ ನಾಯಕತ್ವವನ್ನು ಶ್ಲಾಘಿಸಿದರು.

ಅಧಿಕಾರ ವಹಿಸಿಕೊಂಡು 2 ವರ್ಷಕ್ಕೆ  ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ರಾಜೀನಾಮೆ

ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ರಾಜೀನಾಮೆ

ಇಂಗ್ಲೆಂಡ್‌ ಪ್ರಧಾನಿ ಕೀರ್‌ ಸ್ಟಾರ್ಮರ್‌ ಅವರು ಇಂದು (ಸೋಮವಾರ) ರಾಜೀನಾಮೆ ನೀಡಿದ್ದಾರೆ. ಆಡಳಿತಾರೂಢ ಲೇಬರ್ ಪಕ್ಷದೊಳಗೆ ಅವರ ನಾಯಕತ್ವದ ವಿರುದ್ಧ ದೊಡ್ಡ ಮಟ್ಟದ ಅಸಮಾಧಾನ ಸ್ಫೋಟಗೊಂಡಿತ್ತು. ಪಕ್ಷದ ಒಳಗಿನ ತೀವ್ರ ರಾಜಕೀಯ ಒತ್ತಡದಿಂದಾಗಿ ಅವರು ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇರಾನ್‌ ದಾಳಿ ನಡೆಸಿದ್ದ ಕತಾರ್‌ನ ನೈಸರ್ಗಿಕ ಅನಿಲ ಕೇಂದ್ರದಲ್ಲಿ ಸ್ಫೋಟ: 54 ಮಂದಿಗೆ ಗಾಯ, 18 ಮಂದಿ ನಾಪತ್ತೆ

ಇರಾನ್‌ ದಾಳಿ ನಡೆಸಿದ್ದ ಕತಾರ್‌ನ ನೈಸರ್ಗಿಕ ಅನಿಲ ಕೇಂದ್ರದಲ್ಲಿ ಸ್ಫೋಟ

ಕತಾರ್‌ನ ಪ್ರಮುಖ ನೈಸರ್ಗಿಕ ಅನಿಲ ರಫ್ತು ಟರ್ಮಿನಲ್ ಮೇಲೆ ಇರಾನ್ ಬಾಂಬ್ ದಾಳಿ ಮಾಡಿದ ಸ್ಥಳದಲ್ಲಿ ಕಾರ್ಮಿಕರು ಕಾರ್ಯಾಚರಣೆಯನ್ನು ಪುನರಾರಂಭಿಸಲು ಪ್ರಯತ್ನಿಸುತ್ತಿದ್ದಾಗ ಭಾನುವಾರ ರಾತ್ರಿ ಸ್ಫೋಟ ಸಂಭವಿಸಿದೆ. ಬೆಂಕಿ ಅವಘಡದಲ್ಲಿ ಕನಿಷ್ಠ 54 ಜನರು ಗಾಯಗೊಂಡಿದ್ದಾರೆ. ಇನ್ನೂ 18 ಜನರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

ನೀರು ಕೊಡದಿದ್ದರೆ ಭಾರತದೊಂದಿಗೆ ಯುದ್ಧ ಮಾಡುತ್ತೇವೆ; ಪಾಕಿಸ್ತಾನ ರಕ್ಷಣಾ ಸಚಿವನಿಂದ ಬೆದರಿಕೆ

ನೀರಿಗಾಗಿ ಯುದ್ಧ ನಡೆಯುತ್ತದೆ: ಭಾರತಕ್ಕೆ ಪಾಕಿಸ್ತಾನದಿಂದ ಬೆದರಿಕೆ

ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವ ಪಾಕಿಸ್ತಾನಕ್ಕೆ ಸಿಂಧೂ ನದಿ ನೀರು ಬಿಡುವುದಿಲ್ಲ ಎಂದು ಭಾರತದ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅವರು ಪಾಕಿಸ್ತಾನದ ಜಲ ಭದ್ರತೆಗಾಗಿ ಭವ್ಯ ಭಾರತದ ವಿರುದ್ಧ ಖಂಡಿತಾ ಯುದ್ಧ ಮಾಡಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ.

ಟ್ರಂಪ್‌ ಬೆದರಿಕೆಗೆ ಬಗ್ಗದ ಇರಾನ್‌; ಶಾಂತಿ ಮಾತುಕತೆ ಮಧ್ಯೆಯೇ ವಾಕ್‌ಔಟ್‌

ಟ್ರಂಪ್‌ ಬೆದರಿಕೆಗೆ ಬಗ್ಗದ ಇರಾನ್‌; ಶಾಂತಿ ಮಾತುಕತೆ ಮಧ್ಯೆಯೇ ವಾಕ್‌ಔಟ್‌

ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಭಾನುವಾರ ಆರಂಭವಾದ ಅಮೆರಿಕ ಮತ್ತು ಇರಾನ್ ನಡುವಿನ ಮಹತ್ವದ ಶಾಂತಿ ಮಾತುಕತೆಯಲ್ಲಿ ನಾಟಕೀಯ ಬೆಳವಣಿಗೆಗಳು ಸಂಭವಿಸಿವೆ. ಮಧ್ಯಪ್ರಾಚ್ಯದಲ್ಲಿ ಕಳೆದ ನಾಲ್ಕು ತಿಂಗಳಿನಿಂದ ಮುಂದುವರಿದಿದ್ದ ಉದ್ವಿಗ್ನತೆ ಮತ್ತು ಸಂಘರ್ಷಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಆಯೋಜಿಸಲಾದ ಈ ಮಾತುಕತೆ ಇದೀಗ ಬೇರೆ ತಿರುವು ಪಡೆದುಕೊಂಡಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೊಮ್ಮೆ ಪಾಕಿಸ್ತಾನದ ಬೆವರಿಳಿಸಿದ ಭಾರತ; ಅಸಂಬದ್ಧ ಹೇಳಿಕೆಗೆ ತರಾಟೆ

ಭಾರತದ ಬಗ್ಗೆ ಪಾಕಿಸ್ತಾನ ಅಧ್ಯಕ್ಷರ ಅಸಂಬದ್ಧ ಹೇಳಿಕೆಗೆ ತರಾಟೆ

India Slams Pakistan: ಭಾರತದಲ್ಲಿನ ಮುಸ್ಲಿಂ ಧಾರ್ಮಿಕ ಸ್ಥಳಗಳಿಗೆ ಬೆದರಿಕೆ ಇದೆ ಎಂಬ ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರ ಹೇಳಿಕೆಗೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಈ ಹೇಳಿಕೆಯನ್ನು ಭಾರತವು ಅಸಂಬದ್ಧ ಹಾಗೂ ದ್ವೇಷ ಪೂರಿತ ರಾಜಕೀಯ ದಾಳಿ ಎಂದು ವಾಗ್ದಾಳಿ ನಡೆಸಿದೆ. ಪಾಕಿಸ್ತಾನದಲ್ಲೇ ಮಾನವ ಹಕ್ಕುಗಳ ದಾಖಲೆ ಅತ್ಯಂತ ಕಳಪೆಯಾಗಿದೆ ಎಂದು ರಣಧೀರ್ ಜೈಸ್ವಾಲ್ ವ್ಯಂಗ್ಯವಾಡಿದರು.

ಅಮೆರಿಕ-ಇಸ್ರೇಲ್‌ನಿಂದ ಕದನ ವಿರಾಮ ಒಪ್ಪಂದ ಉಲ್ಲಂಘನೆ: ಮತ್ತೆ ಹೊರ್ಮುಜ್ ಜಲಸಂಧಿ ಮುಚ್ಚಿದ ಇರಾನ್

ಹೊರ್ಮುಜ್ ಮತ್ತೆ ಬಂದ್: ಕದನ ವಿರಾಮದ ಬಳಿಕ ಇರಾನ್‌ನ ಮೊದಲ ಪ್ರತೀಕಾರ

Strait of Hormuz: ಅಮೆರಿಕ ಮತ್ತು ಇಸ್ರೇಲ್‌ ಕದನ ವಿರಾಮ ಒಪ್ಪಂದ ಉಲ್ಲಂಘಿಸಿವೆ ಎಂದು ಆರೋಪಿಸಿರುವ ಇರಾನ್, ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗ ಹೊರ್ಮುಜ್ ಜಲಸಂಧಿಯನ್ನು ಹಡಗು ಸಂಚಾರಕ್ಕೆ ಮುಚ್ಚುವುದಾಗಿ ಘೋಷಿಸಿದೆ. ಈ ಕ್ರಮವನ್ನು ಮೊದಲ ಹೆಜ್ಜೆ ಎಂದು ಬಣ್ಣಿಸಿರುವ ಇರಾನ್ ಸೇನೆ, ಆಕ್ರಮಣಕಾರಿ ಕ್ರಮಗಳು ಮುಂದುವರಿದರೆ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.

''ನನ್ನ ಜನಪ್ರಿಯತೆ ಬಗ್ಗೆ ನೀವು ಚಿಂತಿಸಬೇಡಿ'': ಡೊನಾಲ್ಡ್‌ ಟ್ರಂಪ್‌ಗೆ ಜಾರ್ಜಿಯಾ ಮೆಲೋನಿ ತಿರುಗೇಟು

ಮತ್ತೆ ಮತ್ತೆ ಕೆಣಕಿದ ಟ್ರಂಪ್ ವಿರುದ್ಧ ಮೆಲೋನಿ ಕಿಡಿ ಕಿಡಿ

Giorgia Meloni: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಜಿ7 ಶೃಂಗಸಭೆಯಲ್ಲಿ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ತಮ್ಮೊಂದಿಗೆ ಫೋಟೊಗೆ ಪದೇ ಪದೆ ಮನವಿ ಮಾಡಿದ್ದರು ಎಂದು ಹೇಳಿದ್ದಾರೆ. ಜತೆಗೆ ಮೆಲೋನಿ ಅವರ ಜನಪ್ರಿಯತೆ ಕುಸಿಯುತ್ತಿದೆ ಎಂದು ಟೀಕಿಸಿದ್ದಾರೆ. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಮೆಲೋನಿ, ತಮ್ಮ ಜನಪ್ರಿಯತೆ ಇಟಲಿಯ ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸುವ ಸಾಮರ್ಥ್ಯದ ಮೇಲೆ ಅವಲಂಬಿತವಾಗಿದೆ ಎಂದು ಹೇಳಿದ್ದು, "ನನ್ನ ಜನಪ್ರಿಯತೆ ನಿಮ್ಮ ಚಿಂತೆಯ ವಿಷಯವಲ್ಲ" ಎಂದು ತಿರುಗೇಟು ನೀಡಿದ್ದಾರೆ. ಆ ಮೂಲಕ ಇಬ್ಬರು ನಾಯಕ ಗುದ್ದಾಟ ಜಗತ್ತಿನ ಗಮನ ಸೆಳೆದಿದೆ.

"ಆಕೆ ನನ್ನೊಂದಿಗೆ ಫೋಟೋ ತೆಗೆಸಿಕೊಳ್ಳಲು ಬೇಡಿಕೊಂಡಳು"; ಟ್ರಂಪ್‌ ಹೇಳಿಕೆಗೆ ಛೀಮಾರಿ ಹಾಕಿದ ಇಟಲಿ ಪ್ರಧಾನಿ ಮೆಲೋನಿ

ಟ್ರಂಪ್‌ ಹೇಳಿಕೆಗೆ ಛೀಮಾರಿ ಹಾಕಿದ ಇಟಲಿ ಪ್ರಧಾನಿ ಮೆಲೋನಿ? ಎನಿದು ಘಟನೆ?

ಡೊನಾಲ್ಡ್‌ ಟ್ರಂಪ್‌ ಹಾಗೂ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ನಡುವೆ ಇದೀಗ ಮಾತಿನ ಯುದ್ಧ ಶುರುವಾಗಿದೆ. ಇತ್ತೀಚೆಗೆ ಫ್ರಾನ್ಸ್‌ನಲ್ಲಿ ನಡೆದ G7 ಶೃಂಗಸಭೆಯ ಸಂದರ್ಭದಲ್ಲಿ ನನ್ನೊಂದಿಗೆ ಫೋಟೋ ತೆಗೆಸಿಕೊಳ್ಳಲು ಮೆಲೋನಿ ಬೇಡಿಕೊಂಡರು ಎಂದು ಟ್ರಂಪ್ ಹೇಳಿದ್ದು, ಭಾರೀ ವಿವಾದಕ್ಕೆ ಕಾರಣವಾಗಿದೆ.

ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಅಂತಿಮ ಹಂತದಲ್ಲಿ; ಮೋದಿ-ಟ್ರಂಪ್ ಸೂಚನೆ

ಭಾರತ-ಅಮೆರಿಕ ವ್ಯಾಪಾರ ಮಾತುಕತೆ ಅಂತಿಮ ಘಟ್ಟದಲ್ಲಿ!

ಭಾರತ ಮತ್ತು ಅಮೆರಿಕ ನಡುವಿನ ಮಧ್ಯಂತರ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಅಂತಿಮ ಹಂತ ತಲುಪಿದೆ. ಜಿ7 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ವಿಷಯದ ಕುರಿತು ಚರ್ಚೆ ನಡೆಸಿ, ಒಪ್ಪಂದವನ್ನು ಶೀಘ್ರದಲ್ಲೇ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಮುಂದಿನ ವಾರ ಅಮೆರಿಕದ ವ್ಯಾಪಾರ ಪ್ರತಿನಿಧಿ ಭಾರತಕ್ಕೆ ಭೇಟಿ ನೀಡಲಿದ್ದು, ಒಪ್ಪಂದಕ್ಕೆ ಅಂತಿಮ ರೂಪ ನೀಡುವ ಸಾಧ್ಯತೆಯಿದೆ.

ಪ್ರಧಾನಿ ಮೋದಿಯನ್ನು ಹಿಂದಿಯಲ್ಲೇ ಬೀಳ್ಕೊಟ್ಟ ಫ್ರಾನ್ಸ್‌ ಅಧ್ಯಕ್ಷ;  ಜೈ ಹಿಂದ್‌ ಎಂದ ವಿಡಿಯೋ ವೈರಲ್‌

ಹಿಂದಿಯಲ್ಲಿ ಮೋದಿಗೆ ಬೀಳ್ಕೊಟ್ಟ ಮ್ಯಾಕ್ರೋನ್

ಪ್ರಧಾನಿ ನರೇಂದ್ರ ಮೋದಿ ಅವರ ಫ್ರಾನ್ಸ್ ಭೇಟಿಯ ಅಂತ್ಯದಲ್ಲಿ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಹಿಂದಿಯಲ್ಲಿ ಮಾತನಾಡಿ ವಿಶೇಷವಾಗಿ ಬೀಳ್ಕೊಟ್ಟರು. "ಫ್ರಾನ್ಸ್-ಭಾರತ ಸ್ನೇಹ ಅಮರವಾಗಿರಲಿ" ಹಾಗೂ "ಜೈ ಹಿಂದ್" ಎಂದು ಹೇಳಿದ ಮ್ಯಾಕ್ರೋನ್ ಅವರ ನಡೆ ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ಗಮನ ಸೆಳೆದಿದೆ.

ಪಾಕಿಸ್ತಾನದ  ಗುರುದ್ವಾರದಲ್ಲಿ ವೃದ್ಧ ಸಿಖ್ ದಂಪತಿಯ ಭೀಕರ ಹತ್ಯೆ; ಶಂಕಿತನ ಬಂಧನ

ಪಾಕಿಸ್ತಾನದ ಗುರುದ್ವಾರದಲ್ಲಿ ವೃದ್ಧ ಸಿಖ್ ದಂಪತಿಯನ್ನು ಗುಂಡಿಕ್ಕಿ ಹತ್ಯೆ

Elderly Sikh Couple Shot Dead: ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಗುರುದ್ವಾರದಲ್ಲಿ ವೃದ್ಧ ಸಿಖ್ ದಂಪತಿಯನ್ನು ಗುಂಡಿಕ್ಕಿ ಕೊಂದ ಮೂರು ದಿನಗಳ ನಂತರ, ಪೊಲೀಸರು ಪ್ರಮುಖ ಶಂಕಿತ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಶಂಕಿತನನ್ನು ಅಮಜುಗರಿ ನಿವಾಸಿ ಶೇರ್ ಶಾ ಎಂದು ಗುರುತಿಸಲಾಗಿದೆ.

"ಕಾಶ್ಮೀರದ ತಂಟೆಗೆ ಬಂದ್ರೆ ಹುಷಾರ್‌"; ವಿಶ್ವಸಂಸ್ಥೆಯಲ್ಲಿ ಮತ್ತೆ ಪಾಕಿಸ್ತಾನದ ಮರ್ಯಾದೆ ತೆಗೆದ ಭಾರತ

UNನಲ್ಲಿ ಪಾಕ್‌ಗೆ ಭಾರತದ ತಿರುಗೇಟು

ವಿಶ್ವಸಂಸ್ಥೆಯಲ್ಲಿ ಭಾರತ, ಪಾಕಿಸ್ತಾನವನ್ನು ‘ಫ್ರಾಂಕೆನ್‌ಸ್ಟೈನ್ ರಾಜ್ಯ’ ಎಂದು ಕರೆಯುತ್ತಾ ಭಯೋತ್ಪಾದನೆಗೆ ಬೆಂಬಲ ನೀಡುವ ರಾಷ್ಟ್ರವೆಂದು ಆರೋಪಿಸಿದೆ. ಜಮ್ಮು-ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಪುನರುಚ್ಚರಿಸಿದ ಭಾರತ, ಸಿಂಧು ಜಲ ಒಪ್ಪಂದವೂ ಕಾಲಹರಣಗೊಂಡಿದೆ ಎಂದು ಹೇಳಿದೆ.

ಭಾರತಕ್ಕೆ ಮತ್ತೊಮ್ಮೆ ಮಗ್ಗುಲ ಮುಳ್ಳಾದ ಚೀನಾ; ಗಡಿಯ 50 ಕಿ.ಮೀ. ದೂರಲ್ಲಿ ಬ್ರಹ್ಮಪುತ್ರ ನದಿಗೆ ಹೊಸ ಮೆಗಾ ಡ್ಯಾಮ್: ಇದರಿಂದ ನಮಗೇಕೆ ಆತಂಕ?

ಬ್ರಹ್ಮಪುತ್ರ ನದಿಯಲ್ಲಿ ಚೀನಾದಿಂದ ಮೆಗಾ ಡ್ಯಾಮ್ ನಿರ್ಮಾಣ

ಟಿಬೆಟ್‌ನ ಯಾರ್ಲುಂಗ್ ತ್ಸಾಂಗ್ಪೋ (ಬ್ರಹ್ಮಪುತ್ರ) ನದಿಯಲ್ಲಿ ಚೀನಾ ಜಗತ್ತಿನ ಅತಿದೊಡ್ಡ ಜಲವಿದ್ಯುತ್ ಅಣೆಕಟ್ಟು ನಿರ್ಮಾಣ ಆರಂಭಿಸಿದೆ. ಭಾರತದ ಗಡಿಯ ಸಮೀಪದಲ್ಲಿರುವ ಈ ಯೋಜನೆಯಿಂದ ನದಿಯ ಹರಿವು ಬದಲಾಗಲಿದ್ದು, ಪರಿಸರ ಸಮತೋಲನ ಹಾಗೂ ಈಶಾನ್ಯ ಭಾರತದ ಭದ್ರತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ನೀರಿನ ನಿಯಂತ್ರಣವನ್ನು ವ್ಯೂಹಾತ್ಮಕವಾಗಿ ಚೀನಾ ಬಳಸಿಕೊಳ್ಳಬಹುದೆಂಬ ಆತಂಕವನ್ನು ಭಾರತ ವ್ಯಕ್ತಪಡಿಸಿದೆ.

ರಷ್ಯಾದ ತೈಲ ಸಂಸ್ಕರಣಾ ಘಟಕದ ಮೇಲೆ ಉಕ್ರೇನ್‌ ಡ್ರೋನ್‌ ದಾಳಿ; ಹಲವೆಡೆ ಭಾರೀ ಸ್ಫೋಟ

ರಷ್ಯಾದ ತೈಲ ಸಂಸ್ಕರಣಾ ಘಟಕದ ಮೇಲೆ ಉಕ್ರೇನ್‌ ಡ್ರೋನ್‌ ದಾಳಿ

ಇನ್ನೇನು ಕೊನೆಗೊಳ್ಳುತ್ತದೆ ಎಂದು ನಿರೀಕ್ಷಿಸಿದ್ದ ರಷ್ಯಾ- ಉಕ್ರೇನ್‌ ಯುದ್ಧ ಮತ್ತೆ ಹೊಸ ತಿರುವನ್ನು ಪಡೆದುಕೊಂಡಿದೆ. ಉಕ್ರೇನ್ ಸೇನೆ ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ಭಾರೀ ಡ್ರೋನ್ ದಾಳಿ ನಡೆಸಿದ್ದು, ಮಾಸ್ಕೋದ ಅತೀ ದೊಡ್ಡ ತೈಲ ಸಂಸ್ಕರಣಾ ಮೇಲೆ ದಾಳಿ ನಡೆಸಿದೆ. ಮಾಹಿತಿಯ ಪ್ರಕಾರ, ಉಕ್ರೇನ್‌ನ ಡ್ರೋನ್‌ಗಳು ಮಾಸ್ಕೋದಲ್ಲಿರುವ ಪೆಟ್ರೋಲಿಯಂ ಕಚ್ಚಾ ತೈಲ ಸಂಸ್ಕರಣಾ ಘಟಕಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿವೆ.

ಹೊರ್ಮುಜ್ ಜಲಸಂಧಿ ಮುಕ್ತ, ಇರಾನ್ ಅಭಿವೃದ್ಧಿಗೆ 300 ಬಿಲಿಯನ್ ಡಾಲರ್ ನಿಧಿ: ಒಪ್ಪಂದದ ಪಠ್ಯ ಬಿಡುಗಡೆ ಮಾಡಿದ ಅಮೆರಿಕ

ಹೊರ್ಮುಜ್ ಜಲಸಂಧಿ ಮುಕ್ತ, ಇರಾನ್ ಅಭಿವೃದ್ಧಿಗೆ 300 ಬಿಲಿಯನ್ ಡಾಲರ್ ನಿಧಿ

US Releases Text of Agreement: ಮಧ್ಯಪ್ರಾಚ್ಯ ಸಂಘರ್ಷಕ್ಕೆ ಸಂಬಂಧಿಸಿದಂತೆ 14 ಅಂಶಗಳ ಒಪ್ಪಂದದ ಸಂಪೂರ್ಣ ಪಠ್ಯವನ್ನು ಅಮೆರಿಕ ಸಂಯುಕ್ತ ಸಂಸ್ಥಾನ ಬಹಿರಂಗಪಡಿಸಿದೆ. ಈ ದಾಖಲೆಗೆ ಅಧಿಕೃತವಾಗಿ ಅಮೆರಿಕ ಸಂಯುಕ್ತ ಸಂಸ್ಥಾನ ಮತ್ತು ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ನಡುವಿನ ಇಸ್ಲಾಮಾಬಾದ್ ತಿಳುವಳಿಕೆ ಒಪ್ಪಂದ ಎಂದು ಹೆಸರಿಡಲಾಗಿದೆ.

ʼʼಲಕ್ಷಾಂತರ ಭಾರತೀಯ ನಾವಿಕರ ಸುರಕ್ಷತೆಯೇ ನಮ್ಮ ಆದ್ಯತೆʼʼ: ಡೊನಾಲ್ಡ್‌ ಟ್ರಂಪ್‌ಗೆ ಖಡಕ್‌ ಸಂದೇಶ ರವಾನಿಸಿದ ಪ್ರಧಾನಿ ನರೇಂದ್ರ ಮೋದಿ

ಭಾರತೀಯ ನಾವಿಕರ ಮೇಲಿನ ದಾಳಿ ಬಗ್ಗೆ ಟ್ರಂಪ್‌ಗೆ ಮೋದಿ ಖಡಕ್‌ ಎಚ್ಚರಿಕೆ

Narendra Modi: ಅಮರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಜತೆ ನಡೆದ ದ್ವಿಪಕ್ಷೀಯ ಮಾತುಕತೆ ವೇಳೆ ಪ್ರಧಾನಿ ನರೇಂದ್ರ ಮೋದಿ, ಇತ್ತೀಚೆಗೆ ಒಮಾನ್‌ ಕೊಲ್ಲಿಯಲ್ಲಿ ಅಮೆರಿಕ ನೌಕಾಪಡೆಯ ಶಕ್ತಿಶಾಲಿ ಡ್ರೋನ್‌ ದಾಳಿಯಿಂದ ವಾಣಿಜ್ಯ ನೌಕೆಯಲ್ಲಿದ್ದ ಮೂವರು ಭಾರತೀಯ ನಾವಿಕರು ದರ್ಮರಣಕ್ಕೀಡಾದ ಘಟನೆಗೆ ಕಳವಳ ವ್ಯಕ್ತಪಡಿಸಿದರು. ಜತೆಗೆ ʼಲಕ್ಷಾಂತರ ಭಾರತೀಯ ನಾವಿಕರ ಸುರಕ್ಷತೆಯೇ ನಮ್ಮ ಆದ್ಯತೆʼʼ ಎಂದು ತಿಳಿಸಿದರು.

ʼʼನರೇಂದ್ರ ಮೋದಿ ಮಹಾ ಪ್ರಚಂಡ, ಅವರ ಬಗ್ಗೆ ಅಪಾರ ಗೌರವವಿದೆʼʼ: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಬಣ್ಣನೆ

ಪ್ರಧಾನಿ ನರೇಂದ್ರ ಮೋದಿಯನ್ನು ಹಾಡಿ ಹೊಗಳಿದ ಡೊನಾಲ್ಡ್‌ ಟ್ರಂಪ್‌

Narendra Modi: ಭಾರತ-ಅಮೆರಿಕ ದ್ವಿಪಕ್ಷೀಯ ಮಾತುಕತೆ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಡೊನಾಲ್ಡ್‌ ಟ್ರಂಪ್‌ ಹೊಗಳಿದ್ದಾರೆ. ಮೋದಿ ಬಗ್ಗೆ ತನಗೆ ಅಪಾರ ಗೌರವವಿದೆ ಎಂದೂ ಟ್ರಂಪ್‌ ಈ ವೇಳೆ ತಿಳಿಸಿದ್ದಾರೆ. ಮಾತ್ರವಲ್ಲ ಮೋದಿ ಅವರನ್ನು ಉತ್ತಮ ಆದರೆ ಕಠಿಣ ವ್ಯಕ್ತಿ ಎಂದೂ ಟ್ರಂಪ್‌ ವಿವರಿಸಿದ್ದಾರೆ.

ʼʼನಿಯಮ ಉಲ್ಲಂಘಿಸಿದರೆ ಇರಾನ್‌ ಮೇಲೆ ಮತ್ತೆ ಬಾಂಬ್‌ ದಾಳಿʼʼ: ಫ್ರಾನ್ಸ್‌ನಲ್ಲಿ ನಿಂತು ಗುಡುಗಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌

ಪಶ್ಚಿಮ ಏಷ್ಯಾದ ಶಾಂತಿ ಸ್ಥಾಪನೆ ನಂಬಿಕೆ ಹುಸಿ ಮಾಡಿದ್ರಾ ಟ್ರಂಪ್?

Middle East Crisis: ಪಶ್ಚಿಮ ಏಷ್ಯಾದಲ್ಲಿ ಶಾಂತಿ ಸ್ಥಾಪನೆಗೆ ನಡೆಯುತ್ತಿದ್ದ ಪ್ರಯತ್ನಗಳು ಫಲ ನೀಡಲಿವೆ ಎಂಬ ನಿರೀಕ್ಷೆ ಮೂಡುತ್ತಿದ್ದಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ಗೆ ಹೊಸ ಎಚ್ಚರಿಕೆ ನೀಡಿದ್ದಾರೆ. ಯಾವುದೇ ಒಪ್ಪಂದ ಇನ್ನೂ ಪೂರ್ಣಗೊಂಡಿಲ್ಲ ಎಂದು ಹೇಳಿದ್ದಾರೆ.

ಭಾರತ–ಅಮೆರಿಕ ಸಂಬಂಧದಲ್ಲಿ ಬಿರುಕು? ಡೊನಾಲ್ಡ್‌ ಟ್ರಂಪ್ ನೀತಿಗಳಿಂದ ಹೆಚ್ಚಿದ ಉದ್ವಿಗ್ನತೆ

ಭಾರತ–ಅಮೆರಿಕ ಬಾಂಧವ್ಯದಲ್ಲಿ ಬಿರುಕು?

ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಮರಳಿದ ಬಳಿಕ ಭಾರತ–ಅಮೆರಿಕ ಸಂಬಂಧಗಳು ಹಲವು ವಿಷಯಗಳಲ್ಲಿ ಸವಾಲುಗಳನ್ನು ಎದುರಿಸುತ್ತಿವೆ. ಹೆಚ್ಚುವರಿ ಸುಂಕ, ವಲಸೆ ನೀತಿ, ಪಾಕಿಸ್ತಾನದೊಂದಿಗಿನ ಅಮೆರಿಕದ ಭಾಂದವ್ಯ ಹಾಗೂ ರಷ್ಯಾದಿಂದ ತೈಲ ಖರೀದಿಸುವ ವಿಚಾರದಲ್ಲಿ ಉಂಟಾದ ಭಿನ್ನಾಭಿಪ್ರಾಯಗಳು ಉಭಯ ರಾಷ್ಟ್ರಗಳ ನಡುವಿನ ಉದ್ವಿಗ್ನತೆಯನ್ನು ಹೆಚ್ಚಿಸಿವೆ. ಇದರಿಂದ ಭಾರತ–ಅಮೆರಿಕ ಬಾಂಧವ್ಯದ ಭವಿಷ್ಯದ ಬಗ್ಗೆ ಹೊಸ ಚರ್ಚೆ ಆರಂಭವಾಗಿದೆ.

ಇರಾನ್‌ಗೆ 300 ಬಿಲಿಯನ್ ಡಾಲರ್ ನೆರವು ನೀಡುತ್ತಾ ಅಮೆರಿಕ? ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ನೀಡಿದ ಸ್ಪಷ್ಟನೆಯಲ್ಲಿ ಏನಿದೆ?

ಇರಾನ್‌ಗೆ ನೆರವು ಅಲ್ಲ, ಹೂಡಿಕೆಗೆ ಮಾತ್ರ ಅವಕಾಶ: ಜೆ.ಡಿ. ವ್ಯಾನ್ಸ್

JD Vance: ಅಮೆರಿಕವು ಇರಾನ್‌ಗೆ 300 ಬಿಲಿಯನ್ ಡಾಲರ್ ನೆರವು ನೀಡುತ್ತಿದೆ ಎಂಬ ವರದಿಗಳನ್ನು ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ತಳ್ಳಿ ಹಾಕಿದ್ದಾರೆ. ಒಪ್ಪಂದದ ಷರತ್ತುಗಳನ್ನು ಇರಾನ್ ಪಾಲಿಸಿದರೆ ಮಾತ್ರ ಇತರ ರಾಷ್ಟ್ರಗಳಿಗೆ ಅಲ್ಲಿನ ಅಭಿವೃದ್ಧಿ ಯೋಜನೆಗಳಲ್ಲಿ ಹೂಡಿಕೆ ಮಾಡಲು ಅವಕಾಶ ನೀಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

“ಭಾರತದಲ್ಲಿ ಟೆಲಿಗ್ರಾಂ ಆ್ಯಪ್ ನಿಷೇಧಿಸಲು ರಿಲಯನ್ಸ್, ವಾಟ್ಸ್‌ಆ್ಯಪ್ ಕಾರಣ”: ಸಿಇಒ ಪಾವೆಲ್ ಡುರೊವ್ ಗಂಭೀರ ಆರೋಪ

ರಿಲಯನ್ಸ್, ವಾಟ್ಸ್‌ಆ್ಯಪ್ ವಿರುದ್ಧ ಟೆಲಿಗ್ರಾಂ ಸಿಇಒ ಗಂಭೀರ ಆರೋಪ

CEO Pavel Durov Alleges: ಮೆಟಾ ಭಾಗಶಃ ಪಾಲನ್ನು ಹೊಂದಿರುವ ರಿಲಯನ್ಸ್ ಗ್ರೂಪ್ ಭಾರತದಲ್ಲಿ ಟೆಲಿಗ್ರಾಂ ಅಪ್ಲಿಕೇಶನ್ ಮೇಲೆ ನಿಷೇಧ ಹೇರಲು ತನ್ನ ಪ್ರತಿಸ್ಪರ್ಧಿ ವಾಟ್ಸ್‌ಆ್ಯಪ್ ಜತೆ ಲಾಬಿ ಮಾಡಿಕೊಂಡಿರಬೇಕು ಎಂದು ಟೆಲಿಗ್ರಾಂ ಸಿಇಒ ಪಾವೆಲ್ ಡುರೊವ್ ಗಂಭೀರ ಆರೋಪ ಮಾಡಿದ್ದಾರೆ.

Loading...