ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವಿದೇಶ

81ರ ವೃದ್ಧೆ, 24ರ ಯುವಕ: ಸೋಶಿಯಲ್ ಮೀಡಿಯಾ ಪ್ರೀತಿ, ಏರ್‌ಪೋರ್ಟ್‌ನಲ್ಲಿ ಭಾವುಕ ಭೇಟಿ! ವಿಡಿಯೊ ವೈರಲ್

81ರ ಅಜ್ಜಿ, 24ರ ಯುವಕ: ಸೋಶಿಯಲ್ ಮೀಡಿಯಾ ಪ್ರೇಮ ಈಗ ಮದುವೆಯತ್ತ

Viral Video: ಫ್ರಾನ್ಸ್‌ನ 81 ವರ್ಷದ ಮಹಿಳೆ ಮತ್ತು ಸೆನೆಗಲ್‌ನ 24 ವರ್ಷದ ಯುವಕ ಸೋಶಿಯಲ್ ಮೀಡಿಯಾದಲ್ಲಿ ಪರಿಚಯವಾಗಿ ಪ್ರೀತಿಯಲ್ಲಿ ಬಿದ್ದಿದ್ದಾರೆ. ಎರಡು ವರ್ಷಗಳ ಆನ್‌ಲೈನ್‌ ಸಂಪರ್ಕದ ಬಳಿಕ ಸೆನೆಗಲ್‌ನಲ್ಲಿ ಮೊದಲ ಬಾರಿ ಭೇಟಿಯಾದ ಇವರ ಭಾವುಕ ವಿಡಿಯೊ ವೈರಲ್ ಆಗಿದೆ. 57 ವರ್ಷಗಳ ವಯಸ್ಸಿನ ಅಂತರದ ನಡುವೆಯೂ 2026ರ ಸೆಪ್ಟೆಂಬರ್‌ನಲ್ಲಿ ಮದುವೆಯಾಗಲು ಈ ಜೋಡಿ ಮುಂದಾಗಿದೆ.

ಪ್ರಧಾನಿ ನರೇಂದ್ರ ಮೋದಿಗೆ ಕರೆ ಮಾಡಿದ  ಬೆಂಜಮಿನ್ ನೆತನ್ಯಾಹು; ಭಾರತ–ಇಸ್ರೇಲ್ ಬಾಂಧವ್ಯ ಮತ್ತಷ್ಟು ಬಲಪಡಿಸಲು ಮಾತುಕತೆ

ಭಾರತ–ಇಸ್ರೇಲ್ ಸಂಬಂಧ ವೃದ್ಧಿಗೆ ಮೋದಿ–ನೆತನ್ಯಾಹು ಸಮಾಲೋಚನೆ

Narendra Modi: ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ದೂರವಾಣಿ ಮೂಲಕ ಮಾತುಕತೆ ನಡೆಸಿ, ಭಾರತ–ಇಸ್ರೇಲ್ ವಿಶೇಷ ಕಾರ್ಯತಂತ್ರದ ಪಾಲುದಾರಿಕೆ ಹಾಗೂ ಪಶ್ಚಿಮ ಏಷ್ಯಾದ ಇತ್ತೀಚಿನ ಬೆಳವಣಿಗೆಗಳ ಕುರಿತು ಚರ್ಚೆ ನಡೆಸಿದರು. ಉಭಯ ನಾಯಕರು ವಿವಿಧ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ಮತ್ತಷ್ಟು ಬಲಪಡಿಸಲು ಬದ್ಧತೆ ವ್ಯಕ್ತಪಡಿಸಿ, ಮುಂದೆಯೂ ಸಂಪರ್ಕದಲ್ಲಿರಲು ಒಪ್ಪಿಗೆ ಸೂಚಿಸಿದರು.

ಪಾಕಿಸ್ತಾನದಂತೆ ಮತ್ತೊಂದು ಭಯೋತ್ಪಾದನೆ ತಾಣವಾಗುತ್ತಿದೆ ಬಾಂಗ್ಲಾದೇಶ: ಶೇಕ್ ಹಸೀನಾ ಪುತ್ರ ಸಜೀಬ್ ವಾಜೀದ್ ಜಾಯ್

ಪಾಕಿಸ್ತಾನವಾಗುತ್ತಿದೆ ಬಾಂಗ್ಲಾದೇಶ: ಶೇಕ್ ಹಸೀನಾ ಪುತ್ರ ಆತಂಕ

ಬಾಂಗ್ಲಾದೇಶದ ವಿಚಾರದಲ್ಲಿ ಅಂತಾರಾಷ್ಟ್ರೀಯ ಸಮುದಾಯಗಳು ಮಧ್ಯಪ್ರವೇಶ ಮಾಡದೇ ಇದ್ದರೆ ಬಾಂಗ್ಲಾದೇಶ ಮತ್ತೊಂದು ಪಾಕಿಸ್ತಾನವಾಗಲಿದೆ. ಇದು ಭಯೋತ್ಪಾದನೆಯ ತಾಣವಾಗಲಿದೆ ಎಂದು ಶೇಖ್ ಹಸೀನಾ ಮಗ ಸಜೀಬ್ ವಾಜೀದ್ ಜಾಯ್ ಆತಂಕ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ ಬಾಂಗ್ಲಾದೇಶದಲ್ಲಿ ಮುಕ್ತವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಪಾಕಿಸ್ತಾನದಿಂದ ಸ್ವಾತಂತ್ರ್ಯ ಘೋಷಿಸಿಕೊಂಡ ಬಲೂಚಿಸ್ತಾನ್; ವಿಶ್ವದ ಹೊಸ ದೇಶವಾಗುವುದೇ?

ವಿಶ್ವದ ಹೊಸ ದೇಶವಾಗುವುದೇ ಬಲೂಚಿಸ್ತಾನ್?

ಹಲವಾರು ವರ್ಷಗಳಿಂದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ ಬಲೂಚಿಸ್ತಾನ್ ಈಗ ತನ್ನನ್ನು ತಾನು ಸ್ವಾತಂತ್ರ್ಯ ದೇಶವೆಂದು ಘೋಷಿಸಿಕೊಂಡಿದೆ. ಆಗಸ್ಟ್ 11 ಅನ್ನು ತನ್ನ ಸ್ವಾತಂತ್ರ್ಯ ದಿನವೆಂದು ಘೋಷಿಸುವ ಮೂಲಕ ಅದು ಇದಕ್ಕಾಗಿ ಜಾಗತಿಕ ಮನ್ನಣೆ ಗಳಿಸಲು ಮುಂದಾಗಿದೆ. ಆದರೆ ಇದು ಸಾಧ್ಯವೇ? ಇಲ್ಲಿದೆ ಈ ಕುರಿತು ಸಂಪೂರ್ಣ ಮಾಹಿತಿ.

ಕೆಂಪು ಸಮುದ್ರದಲ್ಲಿ ಭಾರತದ ಹಡಗಿನ ಮೇಲೆ ದಾಳಿ: ನಾವಿಕರ ರಕ್ಷಣೆ

ಯೆಮೆನ್‌ ಬಳಿ ಭಾರತದ ಹಡಗಿನ ಮೇಲೆ ದಾಳಿ

ಯೆಮೆನ್‌ನ ಪಶ್ಚಿಮ ಕರಾವಳಿಯ ಕೆಂಪು ಸಮುದ್ರದಲ್ಲಿ ಇರಾನ್ ಬೆಂಬಲಿತ ಹೌತಿಗಳು ಮಂಗಳವಾರ ಭಾರತದ ಧ್ವಜ ಹೊತ್ತ ಹಡಗಿನ ಮೇಲೆ ದಾಳಿ ನಡೆಸಿದ್ದು, ಹಡಗು ಸಂಪೂರ್ಣವಾಗಿ ಸಮುದ್ರದಲ್ಲಿ ಮುಳುಗಿದೆ. ಹಡಗಿನಲ್ಲಿದ್ದ 13 ಭಾರತೀಯ ನಾವಿಕರನ್ನು ಯೆಮೆನ್ ಪಡೆಗಳು ರಕ್ಷಿಸಿ ಅವರಿಗೆ ವೈದ್ಯಕೀಯ ನೆರವು ನೀಡಿದರು. ಭಾರತ ಈ ದಾಳಿಯನ್ನು ಖಂಡಿಸಿದೆ.

ತಿಂಗಳಾಂತ್ಯದಲ್ಲಿ ಕಿರ್ಗಿಸ್ತಾನ್‌, ಉಜ್ಬೇಕಿಸ್ತಾನ್‌ಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ; ಮಧ್ಯ ಏಷ್ಯಾದೊಂದಿಗೆ ಭಾರತದ ಬಾಂಧವ್ಯ ಮತ್ತಷ್ಟು ವೃದ್ಧಿಸಲು ಕ್ರಮ

ತಿಂಗಳಾಂತ್ಯದಲ್ಲಿ ಕಿರ್ಗಿಸ್ತಾನ್‌, ಉಜ್ಬೇಕಿಸ್ತಾನ್‌ಗೆ ಪ್ರಧಾನಿ ಮೋದಿ ಭೇಟಿ

Narendra Modi: ಪ್ರಧಾನಿ ನರೇಂದ್ರ ಮೋದಿ ಆಗಸ್ಟ್‌ ಅಂತ್ಯದಲ್ಲಿ ಕಿರ್ಗಿಸ್ತಾನ್ ಮತ್ತು ಉಜ್ಬೇಕಿಸ್ತಾನ್‌ಗೆ ಭೇಟಿ ನೀಡಲಿದ್ದಾರೆ. ಶೃಂಗಸಭೆಯಲ್ಲಿ ಭಾಗವಹಿಸುವುದರ ಜತೆಗೆ ವ್ಯಾಪಾರ, ರಕ್ಷಣಾ ಸಹಕಾರ, ಹೂಡಿಕೆ ಮತ್ತು ರಾಜತಾಂತ್ರಿಕ ಸಂಬಂಧ ಬಲಪಡಿಸುವ ಕುರಿತು ಮಾತನಾಡಿದ್ದಾರೆ.

ಶೇಕ್‌ ಹಸೀನಾ ಸುದ್ದಿಗೋಷ್ಠಿಯಿಂದ ಅಂತರ ಕಾಯ್ದುಕೊಂಡ ಭಾರತ; ಆಗಸ್ಟ್‌ 5ರ ಕಾರ್ಯಕ್ರಮಕ್ಕೂ ನಮಗೂ ಸಂಬಂಧವಿಲ್ಲವೆಂದು ಸ್ಪಷ್ಟನೆ

ಶೇಕ್‌ ಹಸೀನಾ ಸುದ್ದಿಗೋಷ್ಠಿಯಿಂದ ಅಂತರ ಕಾಯ್ದುಕೊಂಡ ಭಾರತ

Sheikh Hasina: ಬಾಂಗ್ಲಾದೇಶದಲ್ಲಿ 2024ರಲ್ಲಿ ವಿದ್ಯಾರ್ಥಿ ದಂಗೆ ಭುಗಿಲೆದ್ದಾಗ ಆಶ್ರಯ ಕೋರಿ ಭಾರತಕ್ಕೆ ಬಂದ ಮಾಜಿ ಪ್ರಧಾನಿ ಶೇಕ್‌ ಹಸೀನಾ ಆಗಸ್ಟ್‌ 5ರಂದು ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಈ ಕಾರ್ಯಕ್ರಮಕ್ಕೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ಸರ್ಕಾರ ಇದೀಗ ಸ್ಪಷ್ಟಪಡಿಸಿದೆ.

ಮೃತ ಮರಿಯನ್ನು ಮರೆಯಲು ಸಾಧ್ಯವಾಗದೆ ಶವವನ್ನು ಬೆನ್ನ ಮೇಲೆ ಹೊತ್ತು ಈಜಿದ ತಾಯಿ ಡಾಲ್ಫಿನ್: ಭಾವುಕ ವಿಡಿಯೊ ವೈರಲ್‌

ಮೃತ ಮರಿಯನ್ನು ಹೊತ್ತು ಈಜಿದ ತಾಯಿ ಡಾಲ್ಫಿನ್: ವಿಡಿಯೊ ನೋಡಿ

Viral Video: ತಾಯಿ ಡಾಲ್ಫಿನ್ ತನ್ನ ಮೃತ ಮರಿಯೊಂದನ್ನು ಸುಮಾರು ಆರು ದಿನಗಳವರೆಗೆ ಬೆನ್ನ ಮೇಲೆ ಹೊತ್ತುಈಜಿದೆ. ಕಂದನನ್ನು ಮರೆಯಲಾಗದೆ ತನ್ನ ಜತೆಯಲ್ಲೇ ಮೃತ ಮರಿಯನ್ನು ಹೊತ್ತೊಯ್ದಿದೆ. ಈ ಭಾವುಕ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ಎಲ್ಲರ ಕಣ್ಣಂಚಲ್ಲಿ ನೀರು ತರಿಸಿದೆ.

Randhir Jaiswal: ಪಿಒಕೆ ಚುನಾವಣೆ ಕೇವಲ ನಾಟಕ; ಪಾಕಿಸ್ತಾನ ವಿರುದ್ಧ ಭಾರತ ವಾಗ್ದಾಳಿ

ಪಿಒಕೆ ಚುನಾವಣೆ ಬಗ್ಗೆ ಭಾರತದ ಕಿಡಿ

POK Elections: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ನಡೆದ ಚುನಾವಣೆಗಳನ್ನು ಭಾರತ ಕೇವಲ ನಾಟಕ ಎಂದು ಟೀಕಿಸಿದೆ. ಜನರ ಮೇಲಿನ ದಮನಕಾರಿ ನೀತಿ, ಹತ್ಯೆ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಚುನಾವಣೆಗಳ ಮೂಲಕ ಮರೆಮಾಚಲು ಸಾಧ್ಯವಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.

"ನರೇಂದ್ರ ಮೋದಿ ನಮ್ಮ ಆತ್ಮೀಯ ಸ್ನೇಹಿತ, ಭಾರತದ ಬೆಂಬಲ ಅವಿಸ್ಮರಣೀಯ": ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮೆಚ್ಚುಗೆ

ಭಾರತದ ಬೆಂಬಲಕ್ಕೆ ಇಸ್ರೇಲ್ ಪ್ರಧಾನಿ ನೆತನ್ಯಾಹು ಮೆಚ್ಚುಗೆ

Benjamin Netanyahu: ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಪ್ರಧಾನಿ ನರೇಂದ್ರ ಮೋದಿ ಅವರನ್ನು ಅತ್ಯಂತ ಆತ್ಮೀಯ ಸ್ನೇಹಿತರಲ್ಲಿ ಒಬ್ಬರು ಎಂದು ಬಣ್ಣಿಸಿದ್ದು, ಭಾರತದ ಬೆಂಬಲ ಅವಿಸ್ಮರಣೀಯ ಎಂದು ಹೇಳಿದ್ದಾರೆ. ಭಾರತ–ಇಸ್ರೇಲ್ ಸಂಬಂಧವನ್ನು ಇನ್ನಷ್ಟು ಬಲಪಡಿಸಲು ತಮ್ಮ ಸರ್ಕಾರ ಆದ್ಯತೆ ನೀಡುತ್ತಿದೆ ಎಂದು ಅವರು ತಿಳಿಸಿದ್ದಾರೆ.

“ಹೊರ್ಮುಜ್ ಸಂಘರ್ಷದ ವೇಳೆ ಭಾರತೀಯ ನಾವಿಕ ಮೃತಪಟ್ಟಿಲ್ಲ”: ಸುಪ್ರೀಂ ಕೋರ್ಟ್ ಮೊರೆ ಹೋದ ಮರ್ಚೆಂಟ್ ನೇವಿ ಕ್ಯಾಪ್ಟನ್ ಪತ್ನಿ

ಹೊರ್ಮುಜ್ ಸಂಘರ್ಷದ ವೇಳೆ ಭಾರತೀಯ ನಾವಿಕ ಮೃತಪಟ್ಟಿಲ್ಲ

Indian Sailor: ಮರ್ಚೆಂಟ್ ನೇವಿ ಕ್ಯಾಪ್ಟನ್ ಆಶಿಶ್ ಕುಮಾರ್ ಜೀವಂತವಾಗಿದ್ದಾರೆ. ವಿದೇಶಿ ವ್ಯಕ್ತಿಗಳ ಅಕ್ರಮ ಬಂಧನದಲ್ಲಿದ್ದಾರೆ ಎಂದು ಹೇಳಿರುವ ಅವರ ಪತ್ನಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಅಂತಾರಾಷ್ಟ್ರೀಯ ಸಂಖ್ಯೆಯಿಂದ ತನಗೆ ಸುಲಿಗೆ ಕರೆ ಬಂದಿದೆ, ಅವರ ಬಿಡುಗಡೆಗಾಗಿ 20 ಲಕ್ಷ ರುಪಾಯಿ ಬೇಡಿಕೆ ಇಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ.

ಭಯೋತ್ಪಾದಕರ ಸ್ವರ್ಗ ಪಾಕಿಸ್ತಾನದಲ್ಲೇ ಲಷ್ಕರ್-ಎ-ತೊಯ್ಬಾ ಉಗ್ರರ ಸರಣಿ ಹತ್ಯೆ; ಅಪರಿಚಿತರ ದಾಳಿಗೆ 30ಕ್ಕೂ ಹೆಚ್ಚು ಸದಸ್ಯರ ಸಾವು

ಲಷ್ಕರ್ ಉಗ್ರರ ಸರಣಿ ಹತ್ಯೆ ಬಹಿರಂಗ

Lashkar-e-Taiba: ಲಷ್ಕರ್-ಎ-ತೊಯ್ಬಾದ ಹಿರಿಯ ಉಗ್ರ ರಿಜ್ವಾನ್ ಹನೀಫ್ ವಿಡಿಯೊವೊಂದರಲ್ಲಿ 3–4 ವರ್ಷಗಳಲ್ಲಿ ಪಾಕಿಸ್ತಾನ ಹಾಗೂ ಪಿಒಕೆ ಪ್ರದೇಶಗಳಲ್ಲಿ ಸಂಘಟನೆಯ 30ಕ್ಕೂ ಹೆಚ್ಚು ಸದಸ್ಯರು ಅಪರಿಚಿತ ದಾಳಿಕೋರರಿಂದ ಹತ್ಯೆಯಾಗಿದ್ದಾರೆ ಎಂದು ಹೇಳಿದ್ದಾನೆ. ಈ ಹತ್ಯೆಗಳ ಹಿಂದೆ ಭಾರತದ ಕೈವಾಡವಿದೆ ಎಂದು ಆತ ಆರೋಪಿಸಿದ್ದರೂ, ಭಾರತ ಈ ಆರೋಪವನ್ನು ತಳ್ಳಿಹಾಕಿದೆ.

ಜಾರ್ಜಿಯಾ ಮೆಲೋನಿಗೆ ನರೇಂದ್ರ ಮೋದಿ ಚಾಕೊಲೇಟ್‌ ಗಿಫ್ಟ್‌ ಕೊಟ್ಟ ಎಫೆಕ್ಟ್‌: ಇಟಲಿ ಸೊಗಡಿನಲ್ಲಿ ಪಾರ್ಲೆ Melody ಕ್ಯಾಂಡಿ; Melodi ಟ್ರೆಂಡ್‌ಗೆ ಸಿಹಿ ಟ್ವಿಸ್ಟ್

ಇಟಲಿ ಸೊಗಡಿನಲ್ಲಿ ಮೆಲೋಡಿ: ಹೊಸ ರುಚಿಗೆ ನೆಟ್ಟಿಗರ ಮೆಚ್ಚುಗೆ

India-Italy Friendship: ಭಾರತ–ಇಟಲಿ ಸ್ನೇಹವನ್ನು ವಿಶೇಷವಾಗಿ ಆಚರಿಸುವ ಉದ್ದೇಶದಿಂದ ಪಾರ್ಲೆ ಸಂಸ್ಥೆ ತಿರಾಮಿಸು ರುಚಿಯ ಸೀಮಿತ ಆವೃತ್ತಿಯ ಮೆಲೋಡಿ ಕ್ಯಾಂಡಿಯನ್ನು ಬಿಡುಗಡೆ ಮಾಡಿದೆ. ಸೋಷಿಯಲ್‌ ಮೀಡಿಯಾದಲ್ಲಿ ಜನಪ್ರಿಯವಾಗಿದ್ದ ʼಮೆಲೋಡಿʼ ಟ್ರೆಂಡ್‌ಗೆ ಸೃಜನಾತ್ಮಕ ಸ್ಪರ್ಶ ನೀಡಿರುವ ಈ ಹೊಸ ಪ್ರಯತ್ನ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಹೊಸ ರುಚಿಯ ಮೆಲೋಡಿ ಬಿಡುಗಡೆಯಾದ ಕೂಡಲೇ ಭಾರಿ ಚರ್ಚೆಗೆ ಕಾರಣವಾಗಿದ್ದು, ಬ್ರ್ಯಾಂಡ್‌ನ ಹೊಸತನದ ಮಾರಾಟ ತಂತ್ರಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಪಾಕಿಸ್ತಾನದಲ್ಲಿ ಶಾಂತಿ ರ‍್ಯಾಲಿ ವೇಳೆ ಆತ್ಮಾಹುತಿ ಬಾಂಬ್ ದಾಳಿ; ಐವರು ಪೊಲೀಸರು ಸೇರಿ 14 ಮಂದಿ  ಸಾವು

ಪಾಕಿಸ್ತಾನದಲ್ಲಿ ಶಾಂತಿ ರ‍್ಯಾಲಿ ವೇಳೆ ಆತ್ಮಾಹುತಿ ಬಾಂಬ್ ದಾಳಿ

Bomb blast in Pakistan: ಶಾಂತಿ ರ‍್ಯಾಲಿಯ ವೇಳೆ ಭೀಕರ ಸ್ಫೋಟ ನಡೆದು ಪೊಲೀಸ್ ಸಿಬ್ಬಂದಿ ಸೇರಿ 14 ಮಂದಿ ಸಾವನ್ನಪ್ಪಿದ್ದು, ಕನಿಷ್ಠ 18 ಮಂದಿ ಗಾಯಗೊಂಡಿರುವ ಘಟನೆ ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ನಡೆದಿದೆ.

ಪ್ರವಾಸಿಗರಿದ್ದ ವಿಮಾನ ಅಪಘಾತ: ಪೆರುವಿನಲ್ಲಿ 13 ಮಂದಿ ಸಾವು

ಪೆರುವಿನಲ್ಲಿ ವಿಮಾನ ಅಪಘಾತ: 13 ಮಂದಿ ಸಾವು

ಪೆರುವಿನಲ್ಲಿ ಸಣ್ಣ ಪ್ರವಾಸಿ ವಿಮಾನವೊಂದು ಅಪಘಾತಕ್ಕೀಡಾಗಿ 13 ಮಂದಿ ಸಾವನ್ನಪ್ಪಿದ್ದಾರೆ. ಏರೋಡಯಾನ ನಿರ್ವಹಿಸುತ್ತಿದ್ದ ವಿಮಾನವು ಪ್ರವಾಸಿಗರಿಗೆ 30 ನಿಮಿಷಗಳಿಂದ ಒಂದು ಗಂಟೆಯವರೆಗೆ ದೃಶ್ಯವೀಕ್ಷಣೆಗೆ ಅವಕಾಶ ಮಾಡಿಕೊಡುತ್ತದೆ. ಶನಿವಾರ ಅಪಘಾತಕ್ಕೀಡಾದ ವಿಮಾನದಲ್ಲಿ 11 ವಿದೇಶಿ ಪ್ರವಾಸಿಗರು ಮತ್ತು ಇಬ್ಬರು ಸಿಬ್ಬಂದಿ ಇದ್ದರು ಎಂದು ಪೆರುವಿನ ವ್ಯಾಪಾರ ಮತ್ತು ಪ್ರವಾಸೋದ್ಯಮ ಸಚಿವಾಲಯ ತಿಳಿಸಿದೆ.

ಪಾಕಿಸ್ತಾನದಲ್ಲಿ ಖ್ಯಾತ ಪರ್ವತಾರೋಹಿ ನಿರ್ಮಲ್ ಪುರ್ಜಾ ದುರ್ಮರಣ; ಸಾವಿಗೆ ಕಾರಣವಾಗಿದ್ದೇನು?

ಪಾಕಿಸ್ತಾನದಲ್ಲಿ ಖ್ಯಾತ ಪರ್ವತಾರೋಹಿ ನಿರ್ಮಲ್ ಪುರ್ಜಾ ಸಾವು

Mountaineer Nirmal Purja Dies: ಖ್ಯಾತ ನೇಪಾಳಿ-ಬ್ರಿಟಿಷ್ ಪರ್ವತಾರೋಹಿ ನಿರ್ಮಲ್ ಪುರ್ಜಾ ಪಾಕಿಸ್ತಾನದ ಬ್ರಾಡ್ ಪೀಕ್‌ನಲ್ಲಿ ಸಂಭವಿಸಿದ ಹಿಮಪಾತದಲ್ಲಿ ಮೃತಪಟ್ಟಿದ್ದಾರೆ ಎಂದು ಅವರು ಸಹ-ಮಾಲೀಕರಾಗಿದ್ದ ಸಾಹಸಯಾತ್ರೆ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. ಪರ್ವತಾರೋಹಣ ದಂಡಯಾತ್ರೆಯಲ್ಲಿ ಭಾಗಿಯಾಗಿದ್ದ ವೇಳೆ, ಅವರಿದ್ದ ತಂಡದ ಮೇಲೆ ಹಿಮಕುಸಿತ ಸಂಭವಿಸಿದೆ.

ಪ್ರಧಾನಿ ನರೇಂದ್ರ ಮೋದಿ ಮುಂದಿನ ವರ್ಷ ಪಾಕಿಸ್ತಾನಕ್ಕೆ ಭೇಟಿ? ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗುತ್ತ SCO ಸುಮ್ಮಿಟ್?

ಇಸ್ಲಾಮಾಬಾದ್‌ಗೆ ಶೀಘ್ರದಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಹ್ವಾನ

ಪ್ರಧಾನಿ ನರೇಂದ್ರ ಮೋದಿ ಅವರನ್ನು ಶೀಘ್ರದಲ್ಲೇ ಇಸ್ಲಾಮಾಬಾದ್‌ಗೆ ಆಹ್ವಾನಿಸಲಾಗುವುದು ಎಂದ ಪಾಕಿಸ್ತಾನ ಹೇಳಿದೆ. 2027ರ ಶಾಂಘೈ ಸಹಕಾರ ಸಂಸ್ಥೆ ಶೃಂಗಸಭೆಗಾಗಿ ಅವರನ್ನು ಪಾಕಿಸ್ತಾನಕ್ಕೆ ಆಹ್ವಾನಿಸಲಾಗುವುದು. ಈ ಸಭೆಗೆ ಭಾರತ ಸೇರಿದಂತೆ ಎಲ್ಲಾ ಸದಸ್ಯ ರಾಷ್ಟ್ರಗಳಿಗೆ ಆಹ್ವಾನ ನೀಡಲಾಗುತ್ತದೆ ಎಂದು ಪಾಕಿಸ್ತಾನದ ವಿದೇಶಾಂಗ ಕಚೇರಿಯ ವಕ್ತಾರರು ತಿಳಿಸಿದ್ದಾರೆ.

ಬಲೂಚಿಸ್ತಾನದ ಕಲ್ಲಿದ್ದಲು ಗಣಿಯಲ್ಲಿ ಭಾರಿ ಸ್ಫೋಟ: 32 ಮಂದಿ ಸಾವು

ಬಲೂಚಿಸ್ತಾನದ ಕಲ್ಲಿದ್ದಲು ಗಣಿಯಲ್ಲಿ ಸ್ಫೋಟ

ಬಲೂಚಿಸ್ತಾನ್ ಪ್ರಾಂತ್ಯದ ರಾಜಧಾನಿ ಕ್ವೆಟ್ಟಾದ ಹೊರವಲಯದಲ್ಲಿ ಗುರುವಾರ ಕಲ್ಲಿದ್ದಲು ಗಣಿಯಲ್ಲಿ ಭಾರಿ ಸ್ಫೋಟ ಸಂಭವಿಸಿದೆ. ಇದರಿಂದ ಸುಮಾರು 32 ಮಂದಿ ಸಾವನ್ನಪ್ಪಿದ್ದು, 10 ಕ್ಕೂ ಹೆಚ್ಚು ಮಂದಿ ಭೂಗತದಲ್ಲಿ ಸಿಲುಕಿಕೊಂಡಿದ್ದಾರೆ. ಮೀಥೇನ್ ಅನಿಲದ ಶೇಖರಣೆಯಿಂದ ಸ್ಫೋಟ ಉಂಟಾಗಿದೆ ಎಂದು ಸರ್ಕಾರಿ ಗಣಿ ನಿರೀಕ್ಷಕ ಘನಿ ಬಲೋಚ್ ತಿಳಿಸಿದ್ದಾರೆ.

ಮತ್ತೆ ಬಾಲ ಬಿಚ್ಚಿದ ಚೀನಾ; ಲಡಾಖ್-ಅರುಣಾಚಲ ಪ್ರದೇಶ ಗಡಿ ಬಳಿ ಭಾರತದತ್ತ ಮುಖ ಮಾಡಿ ಜೆ-20 ಯುದ್ಧ ವಿಮಾನಗಳ ನಿಯೋಜನೆ

ಭಾರತ ಗಡಿ ಬಳಿ ಚೀನಾದ ಶಕ್ತಿ ಪ್ರದರ್ಶನ

J-20 Stealth Jets: ಭಾರತ-ಚೀನಾ ಗಡಿಯಲ್ಲಿನ LAC ಸಮೀಪ ಚೀನಾ ತನ್ನ ಅತ್ಯಾಧುನಿಕ ಜೆ-20 ಸ್ಟೆಲ್ತ್ ಯುದ್ಧ ವಿಮಾನಗಳನ್ನು ಹೋಟಾನ್ ಹಾಗೂ ಡ್ಯಾಮ್‌ಶುಂಗ್ ವಾಯುನೆಲೆಗಳಲ್ಲಿ ನಿಯೋಜಿಸಿದೆ. ಉಪಗ್ರಹ ಚಿತ್ರಗಳು ಈ ಬೆಳವಣಿಗೆಯನ್ನು ಬಹಿರಂಗಪಡಿಸಿದ್ದು, ಗಡಿಯಲ್ಲಿ ಚೀನಾದ ಸೇನಾ ಸನ್ನದ್ಧತೆ ಹೆಚ್ಚುತ್ತಿರುವುದನ್ನು ಸೂಚಿಸುತ್ತವೆ.

ಇರಾನ್ ಮೇಲೆ ಜೋರ್ಡಾನ್ ಪ್ರತೀಕಾರದ ದಾಳಿ ಆರಂಭಿಸಿದ ಅಮೆರಿಕ; ಹೊರ್ಮುಜ್‌ನಲ್ಲಿ ಮತ್ತೆ ಉದ್ವಿಗ್ನತೆ ಹೆಚ್ಚಳ

ಇರಾನ್ ಮೇಲೆ ಅಮೆರಿಕ ದಾಳಿ: ಭೀಕರ ಯುದ್ಧದ ಆತಂಕ

ಜೋರ್ಡಾನ್ ಮೇಲೆ ಇರಾನ್ ದಾಳಿ ನಡೆಸಿದ ಬಳಿಕ ಪ್ರತೀಕಾರವಾಗಿ ಅಮೆರಿಕವು ಇರಾನ್ ಮೇಲೆ ಡ್ರೋನ್ ದಾಳಿಯನ್ನು ನಡೆಸಿದೆ. ಇದು ಹೊರ್ಮುಜ್ ಸಲಸಂಧಿಯಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸಿದ್ದು, ಭೀಕರ ಯುದ್ಧದ ಆತಂಕವನ್ನು ಉಂಟು ಮಾಡಿದೆ. ಜೋರ್ಡಾನ್‌ನಲ್ಲಿನ ಯುಎಸ್ ಮಿಲಿಟರಿ ನೆಲೆಗಳ ಮೇಲೆ ಇರಾನ್ ಬುಧವಾರ ದಾಳಿ ನಡೆಸಿದ ಬಳಿಕ ಅಮೆರಿಕ ಸೇನಾ ಪಡೆಗಳು ಪ್ರತೀಕಾರದ ದಾಳಿಯನ್ನು ಪ್ರಾರಂಭಿಸಿವೆ.

ಪ್ರತಿಭಟನೆ ವೇಳೆ ರಷ್ಯಾದಲ್ಲಿದ್ದರೂ ಬಿಹಾರದ ಯುವಕನ ಹೆಸರಲ್ಲಿ ಪ್ರಕರಣ: ಪೊಲೀಸರಿಂದ ನಡೆಯಿತಾ ಯಡವಟ್ಟು?

ರಷ್ಯಾದಲ್ಲಿರುವ ಯುವಕನ ವಿರುದ್ಧ ಬಿಹಾರದಲ್ಲಿ ಪ್ರಕರಣ? ವಿಡಿಯೊ ವೈರಲ್

NEET Protest: ರಷ್ಯಾದಲ್ಲಿ ನಾಲ್ಕು ತಿಂಗಳಿಂದ ವಾಸವಾಗಿರುವುದಾಗಿ ಹೇಳಿರುವ ಬಿಹಾರದ ಯುವಕ ಮೊಹಮ್ಮದ್ ಸದಾಕತ್, ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಪ್ರತಿಭಟನೆ ಪ್ರಕರಣದಲ್ಲಿ ತನ್ನ ಹೆಸರನ್ನು ಅನ್ಯಾಯವಾಗಿ ಸೇರಿಸಲಾಗಿದೆ ಎಂದು ಆರೋಪಿಸಿದ್ದಾರೆ. ಇದೇ ವೇಳೆ, ಪ್ರತಿಭಟನೆಗೆ ಸಂಬಂಧಿಸಿದ ಎಲ್ಲ ಪ್ರಕರಣಗಳನ್ನು ಹಿಂತೆಗೆದುಕೊಳ್ಳುವುದಾಗಿ ಬಿಹಾರ ಸರ್ಕಾರ ಘೋಷಿಸಿದೆ.

ಭಾರತ, ಚೀನಾಕ್ಕೆ ಶೇಕಡಾ 100 ಸುಂಕ: ಅಮೆರಿಕ ಸೆನೆಟ್‌ನಲ್ಲಿ ರಷ್ಯಾ, ಇರಾನ್ ಮೇಲಿನ ನಿರ್ಬಂಧಕ್ಕೆ ಮಸೂದೆ ಮಂಡನೆ

ರಷ್ಯಾ, ಇರಾನ್ ಮೇಲೆ ನಿರ್ಬಂಧ ಮಸೂದೆ ತರಲು ಮುಂದಾದ ಅಮೆರಿಕ

ರಷ್ಯಾ ಮತ್ತು ಇರಾನ್ ಮೇಲೆ ನಿರ್ಬಂಧ ವಿಧಿಸುವ ಮಸೂದೆ ಮಂಡನೆಗೆ ಅಮೆರಿಕ ಸೆನೆಟ್ ಮುಂದಾಗಿದೆ. ಭಾರತ, ಚೀನಾ ಮೇಲೆ ಶೇಕಡಾ 100ರಷ್ಟು ಸುಂಕ ವಿಧಿಸುವ ರಷ್ಯಾ ನಿರ್ಬಂಧ ಮಸೂದೆಯನ್ನು ಅಮೆರಿಕ ಸೆನೆಟ್ ಮುಂದಿಟ್ಟಿದೆ. ಈ ಮಸೂದೆಯು ವಿಶೇಷವಾಗಿ ರಷ್ಯಾದ ತೈಲ ಮತ್ತು ಅನಿಲದ ಖರೀದಿದಾರ ರಾಷ್ಟ್ರಗಳ ಮೇಲೆ ಪರಿಣಾಮ ಬೀಳಲಿದೆ.

24 ಗಂಟೆಗಳಲ್ಲಿ 20ಕ್ಕೂ ಹೆಚ್ಚು ಕಾಶ್ಮೀರಿಗಳ ಸಾವು; ಪಿಒಕೆಯಲ್ಲಿ ಪಾಕಿಸ್ತಾನ ಸೇನೆಯ ಅಟ್ಟಹಾಸ

ಪಾಕಿಸ್ತಾನ ಸೇನೆಯ ಅಟ್ಟಹಾಸ; ಪಿಒಕೆಯ ರಸ್ತೆಗಳಲ್ಲಿ ಬೀಳುತ್ತಿದೆ ಹೆಣ

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಪಾಕಿಸ್ತಾನ ಸೇನಾ ಪಡೆಯು ನಡೆಸಿರುವ ದೌರ್ಜನ್ಯದಿಂದ ಕಳೆದ 24 ಗಂಟೆಗಳಲ್ಲಿ 20ಕ್ಕೂ ಹೆಚ್ಚು ಕಾಶ್ಮೀರಿಗಳು ಸಾವನ್ನಪ್ಪಿದ್ದಾರೆ. ಪಿಒಕೆಯಲ್ಲಿ ಚುನಾವಣೆ ಬಹಿಷ್ಕಾರಕ್ಕೆ ಕರೆ ನೀಡಿದ ಬಳಿಕ ಸ್ಥಳೀಯರ ಮೇಲೆ ಪೊಲೀಸ್ ದೌರ್ಜನ್ಯವು ಹೆಚ್ಚಾಗಿದ್ದು, ಈವರೆಗೆ 80ಕ್ಕೂ ಹೆಚ್ಚು ಮಂದಿಯನ್ನು ಕೊಲ್ಲಲಾಗಿದೆ ಎನ್ನಲಾಗಿದೆ.

ಜಪಾನ್‌ನಲ್ಲಿ 7.1 ತೀವ್ರತೆಯ ಭೂಕಂಪ: ಸುನಾಮಿ ಎಚ್ಚರಿಕೆ; ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೊ ವೈರಲ್‌

ಜಪಾನ್‌ನಲ್ಲಿ 7.1 ತೀವ್ರತೆಯ ಭೂಕಂಪ

Japan Earthquake: ಜಪಾನ್‌ನ ಕ್ಯುಶು ದ್ವೀಪದ ಕುಮೊಮೋಟೊ ಪ್ರಾಂತ್ಯದಲ್ಲಿ 7.1 ತೀವ್ರತೆಯ ಭೂಕಂಪ ಸಂಭವಿಸಿದ್ದು, ಸುನಾಮಿ ಎಚ್ಚರಿಕೆ ನೀಡಲಾಗಿದೆ. ಹಲವು ಪ್ರಾಂತ್ಯಗಳಲ್ಲಿ ತುರ್ತು ಎಚ್ಚರಿಕೆ ಘೋಷಿಸಲಾಗಿದ್ದು, ಕರಾವಳಿ ಪ್ರದೇಶದ ನಿವಾಸಿಗಳಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ. ಅಧಿಕಾರಿಗಳು ಹಾನಿಯ ಪ್ರಮಾಣವನ್ನು ಪರಿಶೀಲಿಸುತ್ತಿದ್ದು, ಮರುಕಂಪಗಳ ಸಾಧ್ಯತೆಯ ಹಿನ್ನೆಲೆಯಲ್ಲಿ ಎಚ್ಚರಿಕೆಯಿಂದಿರಲು ತಿಳಿಸಿದ್ದಾರೆ.

Loading...