ಅಗ್ನಿ ಸುರಕ್ಷತೆ ಖಾತ್ರಿ ಬೇಕು
ಕೆಲ ದಿನಗಳ ಹಿಂದೆ ಮೈಸೂರಿನ ದಟ್ಟಗಳ್ಳಿಯಲ್ಲಿರುವ ರೆಸ್ಟಾರೆಂಟ್ನಲ್ಲಿ ಉಂಟಾದ ಬೆಂಕಿ ಅನಾಹುತ ದಲ್ಲಿ ಇಬ್ಬರು ಸತ್ತು, ಹತ್ತಾರು ಮಂದಿ ತೀವ್ರವಾಗಿ ಗಾಯಗೊಂಡಿದ್ದರು. ಎಲ್ಲ ಬೆಂಕಿ ಆಕಸ್ಮಿಕಗಳ ಮೂಲ ಕಾರಣ ಬೇರೆ ಬೇರೆ ಆಗಿರಬಹುದಾದರೂ, ಹೆಚ್ಚಿನ ಜೀವಹಾನಿಗಳಿಗೆ ಕಾರಣ ಅಲ್ಲಿ ಸೂಕ್ತ ಸುರಕ್ಷತಾ ಕ್ರಮಗಳು ಇಲ್ಲದಿರುವುದೇ ಆಗಿರುತ್ತದೆ.