ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಸಂಪಾದಕೀಯ
Vishwavani Editorial: ಉಗ್ರವಾದದ ದಮನವಾಗಲಿ

ಉಗ್ರವಾದದ ದಮನವಾಗಲಿ

ಉಗ್ರವಾದವನ್ನು ಮತ್ತು ಉಗ್ರವಾದಿಗಳನ್ನು ಹಣಿಯಲು ಭಾರತವು ಕೈಗೊಂಡಿರುವ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ‘ಬ್ರಿಕ್ಸ್’ ರಾಷ್ಟ್ರಗಳು ಪುನರುಚ್ಚರಿಸಿವೆ. ಮತ್ತೊಂದೆಡೆ, ಭಯೋ ತ್ಪಾದನೆಯನ್ನು ಮಟ್ಟ ಹಾಕಿ, ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ವಿರುದ್ಧ ನಿರ್ಣಾಯಕ ಕ್ರಮವನ್ನು ಕೈಗೊಳ್ಳುವಂತೆ ಅಮೆರಿಕವು ಪಾಕಿಸ್ತಾನಕ್ಕೆ ತಾಕೀತು ಮಾಡಿದೆ.

Vishwavani Editorial: ಇದು ಪ್ರಶಂಸಾರ್ಹ ಬೆಳವಣಿಗೆ

ಇದು ಪ್ರಶಂಸಾರ್ಹ ಬೆಳವಣಿಗೆ

‘ಬ್ರಹ್ಮೋಸ್’ ಎಂಬುದು ಭಾರತ ಮತ್ತು ರಷ್ಯಾ ದೇಶಗಳ ಜಂಟಿ ಸಹಯೋಗದಲ್ಲಿ ಸಾಕಾರ ಗೊಂಡಿರುವ ಕನಸು ಎಂಬುದಿಲ್ಲಿ ಉಲ್ಲೇಖನೀಯ. ಇಂಥ ಮತ್ತಷ್ಟು ಉಪಕ್ರಮಗಳಿಗೆ ಭಾರತವು ಮುಂದಾದರೆ ಒಳಿತು ಎಂಬ ಗ್ರಹಿಕೆ ಬಹುತೇಕರಲ್ಲಿ ಗಟ್ಟಿಯಾಗುತ್ತಿರುವಾಗಲೇ, ಅಂಥ ಮತ್ತೊಂದು ಸಹಯೋಗಕ್ಕೆ ಭಾರತ ಮುಂದಾಗಿದೆ.

Vishwavani Editorial: ವಿನಾಶಕಾಲದಲ್ಲಿ ವಿಪರೀತ ಬುದ್ಧಿ

ವಿನಾಶಕಾಲದಲ್ಲಿ ವಿಪರೀತ ಬುದ್ಧಿ

ಚೀನಾ ಈಗ ಅಮೆರಿಕದ ಕೃಷಿ ಉತ್ಪನ್ನಗಳ ನಾಶಕ್ಕೆ ಸಂಚು ಹೂಡಿದೆ ಎಂದು ತಿಳಿದು ಬಂದಿದೆ. ಇಂಥ ‘ಘನಕಾರ್ಯ’ವನ್ನು ಮಾಡಬಲ್ಲ ಅಪಾಯಕಾರಿ ಶಿಲೀಂಧ್ರವನ್ನು ಕಳ್ಳಸಾಗಣೆ ಮಾಡಿದ ಆರೋಪದ ಮೇಲೆ ಚೀನಾದ ಇಬ್ಬರು ಸಂಶೋಧಕರನ್ನು ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಸಂಸ್ಥೆಯ ಅಧಿಕಾರಿಗಳು ಬಂಧಿಸಿರುವುದು ಈ ಮಾತಿಗೆ ಪುಷ್ಟಿ ನೀಡಿದೆ.

Vishwavani Editorial: ಸಂಭ್ರಮದಿಂದ ಸಮಾಧಿಯವರೆಗೆ...

ಸಂಭ್ರಮದಿಂದ ಸಮಾಧಿಯವರೆಗೆ...

ಸಂಭ್ರಮಾಚರಣೆಗೆಂದು ತವಕಿಸುತ್ತಿದ್ದವರು ಸಮಾಧಿಯೆಡೆಗೆ ಸಾಗುವಂತಾಗಿದ್ದು ನಿಜಕ್ಕೂ ನೋವಿನ ಸಂಗತಿ. ಅಗಾಧ ಸಂಖ್ಯೆಯಲ್ಲಿ ನೆರೆದಿರುವ ಜನರಲ್ಲಿ ಆಕ್ರೋಶವೇ ತುಂಬಿರಲಿ ಅಥವಾ ಸಂಭ್ರಮವೇ ಕೆನೆಗಟ್ಟಿರಲಿ, ಅವರನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡದಿದ್ದರೆ ಮತ್ತು ಅದಕ್ಕೆಂದು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದಿದ್ದರೆ ಉದ್ದೇಶಿತ ವಾತಾವರಣ ಹೇಗೆ ಬದಲಾಗಬಹುದು ಎಂಬುದಕ್ಕೆ ಈ ನಿದರ್ಶನ ಸಾಕ್ಷಿಯಾಗಬಲ್ಲದು

Vishwavani Editorial: ಯಾವ ಹುತ್ತದಲ್ಲಿ ಯಾವ ಹಾವೋ?

ಯಾವ ಹುತ್ತದಲ್ಲಿ ಯಾವ ಹಾವೋ?

ಪಂಜಾಬ್ ಪೊಲೀಸರು ಭಾನುವಾರ ಭರ್ಜರಿ ಕಾರ್ಯಾಚರಣೆಯನ್ನು ನಡೆಸಿ 113 ಮಂದಿ ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿ ಅವರಿಂದ ಗಣನೀಯ ಪ್ರಮಾಣದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡ ಸುದ್ದಿಯನ್ನು ನೀವು ಈಗಾಗಲೇ ಓದಿದ್ದೀರಿ. ಹೀಗೆ ವಶಪಡಿಸಿಕೊಳ್ಳಲಾದ ದ್ರವ್ಯಗಳಲ್ಲಿ 2 ಕೆ.ಜಿ.ಗೂ ಹೆಚ್ಚಿನ ಹೆರಾಯಿನ್, 330 ಗ್ರಾಂ.ನಷ್ಟು ಅಫೀಮು, 32 ಸಾವಿರಕ್ಕೂ ಹೆಚ್ಚಿನ ಮಾದಕ ವಸ್ತು ಮಾತ್ರೆಗಳು ಸೇರಿದ್ದವು

Vishwavani Editorial: ಕೆಟ್ಟ ಮೇಲೆ ಬುದ್ಧಿ ಬಂತು!

ಕೆಟ್ಟ ಮೇಲೆ ಬುದ್ಧಿ ಬಂತು!

‘ಕೆಟ್ಟ ಮೇಲೆ ಬುದ್ಧಿ ಬಂತು, ಅಟ್ಟ ಮೇಲೆ ಒಲೆ ಉರೀತು’ ಎಂಬ ಜಾಣನುಡಿಯನ್ನು ನಮ್ಮ ಹಿರೀಕರು ಕಟ್ಟಿಕೊಟ್ಟಿರುವುದು ಇಂಥವರನ್ನು ಮತ್ತು ಇಂಥ ದೇಶಗಳನ್ನು ನೋಡಿಯೇ ಇರಬೇಕು. ಬ್ರಿಟಿಷರ ಕಪಿಮುಷ್ಟಿಯಿಂದ ಬಿಡಿಸಿಕೊಂಡು, ದೇಶ ವಿಭಜನೆಯ ಫಲವಾಗಿ ಪ್ರತ್ಯೇಕ ರಾಷ್ಟ್ರವಾಗಿ ಅಸ್ತಿತ್ವವನ್ನು ಕಂಡುಕೊಂಡಾಗಿನಿಂದಲೂ ಭಾರತದ ವಿರುದ್ಧವಾಗಿ ಒಂದಲ್ಲಾ ಒಂದು ರೀತಿಯಲ್ಲಿ ಕತ್ತಿ ಮಸೆದು ಕೊಂಡೇ ಬಂದಿರುವಂಥದ್ದು ಪಾಕಿಸ್ತಾನ ಎಂಬ ಮಗ್ಗುಲುಮುಳ್ಳು ದೇಶ.

Vishwavani Editorial: ಇದು ಭರವಸೆಯ ಆಶಾಕಿರಣ

ಇದು ಭರವಸೆಯ ಆಶಾಕಿರಣ

ತಂಬಾಕು ಉತ್ಪನ್ನಗಳ ಖರೀದಿಗೆ ಇದ್ದ ವಯೋಮಿತಿಯನ್ನು 18 ವರ್ಷದಿಂದ 21ಕ್ಕೆ ಏರಿಸಿ ಆದೇಶ ಹೊರಡಿಸಿದೆ ರಾಜ್ಯ ಸರಕಾರ. ಇದು ನಿಜಕ್ಕೂ ಒಂದು ಶ್ಲಾಘನೀಯ ಉಪಕ್ರಮ ಎನ್ನಲಡ್ಡಿಯಿಲ್ಲ. ಏಕೆಂದರೆ, ಹದಿಹರೆಯದವರು, ಅದರಲ್ಲೂ ಗ್ರಾಮೀಣ ಪ್ರದೇಶದವರು ಸಿಗರೇಟು ಮತ್ತು ಇತರ ತಂಬಾಕು ಉತ್ಪನ್ನಗಳ ಗೀಳಿಗೆ ಒಳಗಾಗುತ್ತಿರುವ ಪರಿ ತೀವ್ರವಾಗಿರುವ ಈ ಕಾಲಘಟ್ಟದಲ್ಲೇ ಇಂಥ ದೊಂದು ತೀರ್ಮಾನ ಹೊರಬಿದ್ದಿರುವುದು ಹಾಗೂ ‘ವಿಶ್ವ ತಂಬಾಕುರಹಿತ ದಿನ’ವೇ ಅದಕ್ಕೆ ಪರ್ವಕಾಲ ವಾಗಿರುವುದು ಸ್ವೀಕಾರಾರ್ಹವೇ ಸರಿ

Vishwavani Editorial: ಕಾವ್ಯ ಚೇತನ ಎಚ್ಚೆಸ್ವಿ

ಕಾವ್ಯ ಚೇತನ ಎಚ್ಚೆಸ್ವಿ

ಗ್ರಾಮೀಣ ಪ್ರದೇಶದಲ್ಲಿ ಬೆಳೆದ ಅವರು ಯಕ್ಷಗಾನ, ಬಯಲಾಟ ಹಾಗೂ ಕುಮಾರವ್ಯಾಸ, ಪುರಂದರ, ಲಕ್ಷ್ಮೀಶರಂತಹ ಹಿರಿಯ ಕವಿಗಳ ಕೃತಿಗಳಿಂದ ಪ್ರೇರಿಪಿತರಾಗಿ ಕನ್ನಡದಲ್ಲಿ 100ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸುವ ಮೂಲಕ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.

Vishwavani Editorial: ಕರೋನಾ: ಆತಂಕ ಬೇಡ, ಎಚ್ಚರವಿರಲಿ

ಕರೋನಾ: ಆತಂಕ ಬೇಡ, ಎಚ್ಚರವಿರಲಿ

ಹೃದಯ ಸಂಬಂಧಿ ಮತ್ತು ಉಸಿರಾಟ ಸಂಬಂಧಿ ಸಮಸ್ಯೆಗಳು ಇರುವ ರೋಗಿಗಳನ್ನು ತಪಾಸಣೆಗೆ ಒಳಪಡಿಸುವಂತೆ ಆಸ್ಪತ್ರೆಗಳಿಗೆ ಸೂಚನೆ ನೀಡಿದೆ. ಮುನ್ನೆಚ್ಚರಿಕೆ ಕ್ರಮಗಳಿಗೆ ಸಂಬಂಧಿಸಿದ ಮಾರ್ಗ ಸೂಚಿಗಳನ್ನು ಆಸ್ಪತ್ರೆಗಳಿಗೆ ಮತ್ತು ಶಾಲೆಗಳಿಗೆ ಕಳುಹಿಸಿದೆ. ಹೀಗೆ ಕರೋನಾ ಸೋಂಕು ಹರಡುವುದರ ಮೇಲೆ ನಿಗಾ ಇರಿಸಲು, ಹರಡುವುದನ್ನು ತಡೆಯುವ ಸುರಕ್ಷತಾ ಕ್ರಮಗಳನ್ನು ಸಕರಾರ ತೆಗೆದುಕೊಂಡಿದೆ.

Vishwavani Editorial: ಶ್ರೇಷ್ಠತೆಯ ವ್ಯಸನ ಏಕೆ ?

ಶ್ರೇಷ್ಠತೆಯ ವ್ಯಸನ ಏಕೆ ?

ಒಂದು ಪ್ರದೇಶದ ಭಾಷೆ, ಸಂಸ್ಕೃತಿ ಮತ್ತು ಸಂಪ್ರದಾಯಗಳ ಹಿಂದೆ ನೂರಾರು ವರ್ಷಗಳ ಚರಿತ್ರೆ ಇರುತ್ತದೆ. ಅದನ್ನು ತಿಳಿದು ಗೌರವಿಸಬೇಕು. ಒಂದು ಮತ್ತೊಂದರ ಶ್ರೇಷ್ಠತೆಯನ್ನು ಸಾರುವುದು ನಮ್ಮ ಸಂವಿಧಾನದ ಮೌಲ್ಯಗಳಿಗೂ ವಿರುದ್ಧ. ಸಂವಿಧಾನದ ಪ್ರಕಾರ, ನಮ್ಮದು ಒಕ್ಕೂಟ ಗಣರಾಜ್ಯ

Vishwavani Editorial: ರಾಷ್ಟ್ರನಿಷ್ಠೆಯಲ್ಲೂ ರಾಜಕೀಯವೇ?

ರಾಷ್ಟ್ರನಿಷ್ಠೆಯಲ್ಲೂ ರಾಜಕೀಯವೇ?

“ಪಾಕಿಸ್ತಾನದ ಮಡಿಲಲ್ಲಿ ನೆಲೆಗೊಂಡಿದ್ದ ಭಯೋತ್ಪಾದಕರ 9 ತಾಣಗಳ ಮೇಲೆ ಭಾರತವು ದಾಳಿ ನಡೆಸಿದ ನಂತರವಷ್ಟೇ ಪಾಕಿಸ್ತಾನಕ್ಕೆ ಮಾಹಿತಿ ನೀಡಲಾಯಿತು" ಎಂಬುದಾಗಿ ಜೈಶಂಕರ್ ಸಂಸದೀಯ ಸಮಿತಿಗೆ ತಿಳಿಸಬೇಕಾಗಿ ಬಂದಿರುವುದು ಈ ಮಾತಿಗೆ ಪುಷ್ಟಿ ನೀಡುತ್ತದೆ. ಹಿಂದೊಮ್ಮೆ ಉಗ್ರರ ನೆಲೆಗಳ ಮೇಲೆ ಭಾರತವು ‘ಸರ್ಜಿಕಲ್ ಸ್ಟ್ರೈಕ್’ ಕೈಗೊಂಡಾಗಲೂ, ಅದಕ್ಕೆ ಪುರಾವೆ ಒದಗಿಸುವಂತೆ ಕಾಂಗ್ರೆಸ್ ಪಕ್ಷದ ವತಿಯಿಂದ ಆಗ್ರಹ ಹೊಮ್ಮಿತ್ತು ಎಂಬುದನ್ನಿಲ್ಲಿ ಸ್ಮರಿಸಬಹುದು.

Vishwavani Editorial: ಯುದ್ದಕಾಲೇ ಶಸ್ತ್ರಾಭ್ಯಾಸ ತರವೇ?

ಯುದ್ದಕಾಲೇ ಶಸ್ತ್ರಾಭ್ಯಾಸ ತರವೇ?

ಮಳೆಗಾಲ ಬಂತು ಎಂದಾಕ್ಷಣ ವಿವಿಧ ಪ್ರಾಂತ್ಯಗಳಲ್ಲಿ ಕಾಣಬರುವ ‘ವರ್ಷಧಾರೆ’ಯ ದೃಶ್ಯ ವೈಭವವನ್ನು ಕಣ್ತುಂಬಿಕೊಳ್ಳುವುದೇ ಒಂದು ಸಂಭ್ರಮ. ಅದರಲ್ಲೂ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿನ ಮಳೆಯನ್ನು ನೋಡುತ್ತಿದ್ದರೆ, ‘ನೆಲ ಮುಗಿಲನಪ್ಪಿದುದೋ, ಮುಗಿಲೇ ನೆಲನಪ್ಪಿ ದುದೋ, ಮಳೆಯಲ್ಲಿ ಬಯಲಾಯ್ತು ಬಯಲಿನಂತರವು’ ಎಂಬ ಕವಿ ವಾಣಿ ನೆನಪಾಗುತ್ತದೆ.

Vishwavani Editorial: ಸಂಚುಕೋರರಿಗೆ ಶಾಸ್ತಿಯಾಗಲಿ

ಸಂಚುಕೋರರಿಗೆ ಶಾಸ್ತಿಯಾಗಲಿ

ಭಾರತದಲ್ಲಿ ಇಂಥ ಯಾವುದೇ ವಿಧ್ವಂಸಕ ಕೃತ್ಯಗಳನ್ನು ತಾನು ನಡೆಸಿದಾಗಲೂ ‘ನಾನವನಲ್ಲ, ನಾನವನಲ್ಲ’ ಎಂದೇ ಅಮಾಯಕವಾಗಿ ಹೇಳಿಕೊಳ್ಳುತ್ತಿದ್ದ ಪಾಕಿಸ್ತಾನದ ಮತ್ತೊಂದು ಮುಖವಾಡ ವೀಗ ಬಯಲಾದಂತಾಗಿದೆ. ಇಷ್ಟಾಗಿಯೂ, ಮೊನ್ನಿನ ‘ಆಪರೇಷನ್ ಸಿಂದೂರ’ ಕಾರ್ಯಾಚರಣೆಯಲ್ಲಿ ಬರೆ ಹಾಕಿಸಿಕೊಂಡ ನಂತರವೂ ಪಾಕಿಸ್ತಾನದ ಠೇಂಕಾರ ನಿಂತಿಲ್ಲ

Vishwavani Editorial: ನಿಜಕ್ಕೂ ತಪ್ಪಾಗಿರುವುದು ಎಲ್ಲಿ?

ನಿಜಕ್ಕೂ ತಪ್ಪಾಗಿರುವುದು ಎಲ್ಲಿ?

ಇಷ್ಟೂ ವರ್ಷಗಳಲ್ಲಿ ಮಳೆ ನೀರಿನ ಸಮಸ್ಯೆಯು ಜನರನ್ನು ಸತತವಾಗಿ ಕಾಡುತ್ತಿದ್ದರೂ, ಅದಕ್ಕೊಂದು ನಿರ್ಣಾಯಕ ಪರಿಹಾರೋಪಾಯವನ್ನು ಕಂಡುಕೊಳ್ಳಲಾಗದಿರುವುದು ಆಳುಗರ ವೈಫಲ್ಯವಲ್ಲದೆ ಮತ್ತೇನು? ಇದ್ದಬದ್ದ ಕೆರೆಗಳನ್ನೆಲ್ಲ ಮುಚ್ಚಿ ಬಡಾವಣೆಗಳನ್ನು ನಿರ್ಮಿಸುವುದಕ್ಕೆ ಅನುವು ಮಾಡಿ ಕೊಟ್ಟಿದ್ದೇ ಈ ಸಮಸ್ಯೆ ತಾರಕಕ್ಕೇರಲು ಕಾರಣ ಎನ್ನುತ್ತಾರೆ ಬಲ್ಲವರು.

Vishwavani Editorial: ಸಂಭ್ರಮದ ಹೆಜ್ಜೆ ಸದೃಢವಾಗಲಿ

ಸಂಭ್ರಮದ ಹೆಜ್ಜೆ ಸದೃಢವಾಗಲಿ

ವಿವಿಧ ಕಾರಣಗಳಿಗಾಗಿ ಒದಗಿರುವ ಬೆಲೆಯೇರಿಕೆಯ ಸ್ಥಿತಿಯಿಂದ ಶ್ರೀಸಾಮಾನ್ಯರು ಸೇರಿದಂತೆ ಸಮಾಜದ ವಿವಿಧ ವರ್ಗಗಳು ತತ್ತರಿಸಿವೆ. ಆಳುಗ ವ್ಯವಸ್ಥೆಯ ಸುಸೂತ್ರ ಕಾರ್ಯ ನಿರ್ವಹಣೆಯ ಜತೆ ಜತೆಗೆ ಈ ಸಮಸ್ಯೆಗಳ ನಿವಾರಣೆಯ ಕಡೆಗೂ ಸರಕಾರದ ಸಹಭಾಗಿಗಳು ಗಮನಹರಿಸಬೇಕಿದೆ.

Vishwavani Editorial: ಪಾಕಿಸ್ತಾನ ಎಂಬ ಊಸರವಳ್ಳಿ

ಪಾಕಿಸ್ತಾನ ಎಂಬ ಊಸರವಳ್ಳಿ

‘ಭಾರತವನ್ನು ಉಡಾಯಿಸಬಲ್ಲಂಥ ಮಾರಕ ಅಸ್ತ್ರಗಳು ನಮ್ಮಲ್ಲಿವೆ. ಅವನ್ನು ನಾವು ಇಟ್ಟುಕೊಂಡಿರು ವುದು ಪ್ರದರ್ಶನಕ್ಕಲ್ಲ, ಪೂಜೆ ಮಾಡುವುದಕ್ಕಲ್ಲ’ ಎಂಬರ್ಥದ ಉಡಾಫೆಯ ಮಾತುಗಳು ಪಾಕ್ ಸೇನಾ ಧಿಕಾರಿಯೊಬ್ಬರಿಂದ ಹೊಮ್ಮಿದ್ದುಂಟು. ಆದರೆ, ‘ಆಪರೇಷನ್ ಸಿಂದೂರ’ ಕಾರ್ಯಾಚರಣೆಯನ್ನು ಭಾರತ ಶುರುವಿಟ್ಟು ಕೊಳ್ಳುತ್ತಿದ್ದಂತೆ ಪಾಕಿಸ್ತಾನ ತಡವರಿಸತೊಡಗಿತು ಮತ್ತು ಅದರ ‘ಉತ್ತರ ಕುಮಾರನ ಪೌರುಷ’ ಜಗತ್ತಿಗೇ ಗೊತ್ತಾಯಿತು

Vishwavani Editorial: ಬೆಂಕಿಗೆ ಬೀಳುವ ಪತಂಗಗಳಿವು !

ಬೆಂಕಿಗೆ ಬೀಳುವ ಪತಂಗಗಳಿವು !

ಹತರಾದವರ ಪೈಕಿ ಒಬ್ಬನಾದ ಆಮೀರ್ ನಜೀರ್ ವಾನಿ ಪಾಕಿಸ್ತಾನದಿಂದಲೇ ತರಬೇತಿ ಪಡೆದಿದ್ದ ಎಂಬುದು. ಹತನಾಗುವುದಕ್ಕೂ ಸ್ವಲ್ಪ ಮುಂಚೆ ಈತ ತಾಯಿಗೆ ವಿಡಿಯೋ ಕರೆ ಮಾಡಿ ಮಾತನಾಡಿ ದಾಗ, ಉಗ್ರವಾದ ಬಿಟ್ಟು ಶರಣಾ ಗುವಂತೆ ಆಕೆ ಬುದ್ಧಿವಾದ ಹೇಳಿದ್ದು, ಅದಕ್ಕೆ ಕಿವಿಗೊಡದ ಆತ ‘ಒಂದೊಮ್ಮೆ ಸೇನೆ ಬಂದರೆ ಅವರನ್ನು ಕೊಲ್ಲುವೆ’ ಎಂಬ ದುರಹಂಕಾರದ ಮಾತಾಡಿದ್ದು ಬಯಲಾಗಿದೆ.

Vishwavani Editorial: ಇದು ಅವಧಿಪೂರ್ವ ವಿದಾಯವೇ?

ಇದು ಅವಧಿಪೂರ್ವ ವಿದಾಯವೇ?

ತಮ್ಮ ಆಕರ್ಷಕ ಬ್ಯಾಟಿಂಗ್, ಲವಲವಿಕೆ ಮತ್ತು ಹುಮ್ಮಸ್ಸಿನ ಕಾರಣದಿಂದಾಗಿಯೇ ಕ್ರೀಡಾಭಿಮಾನಿ ಗಳನ್ನು ಸೆಳೆಯುವ ತಾಕತ್ತು, ವರ್ಚಸ್ಸನ್ನು ಹೊಂದಿದ್ದಂಥ ಮಹೋನ್ನತ ಆಟಗಾರ ಅವರು. ಕ್ರೀಡಾ ತಜ್ಞರು ಮತ್ತು ವಿಶ್ಲೇಷಣಕಾರರು ಹೇಳುವಂತೆ, ವಿರಾಟ್ ಕೊಹ್ಲಿಯವರು ಕನಿಷ್ಠಪಕ್ಷ ಇನ್ನೂ ನಾಲ್ಕು ವರ್ಷಗಳವರೆಗೆ ಈ ಪಯಣವನ್ನು ಮುಂದುವರಿಸ ಬಹುದಿತ್ತು. ಆದರೆ, ಕೊಹ್ಲಿ ಹೀಗೆ ನಿರ್ಧರಿಸಿದ್ದಾರೆ ಎಂದರೆ ಪ್ರಾಯಶಃ ಅದರ ಹಿಂದೆ ಗಟ್ಟಿಯಾದ ಕಾರಣ ಇದ್ದಿರಲೇಬೇಕು

Vishwavani Editorial: ಹೀನಸುಳಿ ಬೋಳಿಸಿದರೆ ಹೋದೀತೇ?!

ಹೀನಸುಳಿ ಬೋಳಿಸಿದರೆ ಹೋದೀತೇ?!

ಭಾರತವು ಒಂದೊಂದೇ ಉಗ್ರರ ನೆಲೆಗಳ ಮೇಲೆ ಬರೆ ಹಾಕಲು ಶುರು ಮಾಡುತ್ತಿದ್ದಂತೆ, ಪಾಕ್ ಕೈ ಕೈ ಹಿಸುಕಿ ಕೊಳ್ಳಬೇಕಾಯಿತು ಎಂಬುದನ್ನು ಮರೆಯಲಾಗದು. ಇಂಥ ಇಬ್ಬಂದಿತನ ಮೆರೆದ ಪಾಕ್, ಈಗ ಕದನ ವಿರಾಮವನ್ನು ಉಲ್ಲಂಘಿಸಿದೆ. ‘ಹೀನಸುಳಿ ಬೋಳಿಸಿದರೆ ಹೋದೀತೇ?!’ ಅಂತ ನಮ್ಮ ಪೂರ್ವ ಜರು ಅಷ್ಟಿಲ್ಲದೇ ಹೇಳಿದ್ದಾರಾ...

Vishwavani Editorial: ಸರಣಿ ಸಂಕಷ್ಟದಲ್ಲಿ ಪಾಕಿಸ್ತಾನ

ಸರಣಿ ಸಂಕಷ್ಟದಲ್ಲಿ ಪಾಕಿಸ್ತಾನ

‘ತೆಹ್ರೀಕ್-ಇ-ತಾಲಿಬಾನ್’ ನಡೆಸಿದ ದಾಳಿಯಲ್ಲಿ 20 ಮಂದಿ ಪಾಕ್ ಸೈನಿಕರು ಅಸುನೀಗಿದ್ದಾರೆ ಹಾಗೂ ಪಾಕಿಗಳ ಶಸಾಸಗಳನ್ನೂ ಅವರು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಉಗ್ರವಾದದ ಅಬ್ಬರ ಹಾಗೂ ‘ಛಾಯಾಸಮರದ’ ಮೂಲಕ ಶಾಂತಿಪ್ರಿಯ ರಾಷ್ಟ್ರಗಳಿಗೆ ಕಂಟಕ ಪ್ರಾಯವಾಗಿದ್ದ ಪಾಕಿಸ್ತಾನಕ್ಕೆ, ಈಗ ಎಲ್ಲವೂ ತನ್ನ ಲೆಕ್ಕಾಚಾರದಂತೆ ನಡೆಯುತ್ತಿಲ್ಲ ಎಂಬ ಕಹಿ ಸತ್ಯದ ಅರಿವಾಗಿರ ಬೇಕು!

Vishwavani Editorial: ಆಗ ಎಲ್ಲಿ ಹೋಗಿತ್ತು ಕಣ್ಣೀರು?

ಆಗ ಎಲ್ಲಿ ಹೋಗಿತ್ತು ಕಣ್ಣೀರು?

ಪ್ರಾಣಹಾನಿ ಮತ್ತು ಸ್ವತ್ತುನಷ್ಟ ಭಾರತೀಯರಿಗೇ ಆಗಲೀ ಪಾಕಿಸ್ತಾನಿಯರಿಗೇ ಆಗಲಿ, ಅದು ನೋವಿನ ವಿಷಯವೇ. ಪಾಕ್ ಸಂಸದರು ಈಗ ಹೀಗೆ ಕಣ್ಣೀರು ಸುರಿಸುವುದನ್ನು ಬಿಟ್ಟು, ತಮ್ಮ ದೇಶಕ್ಕೆ ಇಂಥ ದೊಂದು ದುಸ್ಥಿತಿಯನ್ನು ತಂದಿತ್ತ ಪರಮೋಚ್ಚ ನಾಯಕರನ್ನು ನೇರಾನೇರ ಪ್ರಶ್ನಿಸಲಿ...

Vishwavani Editorial: ಆಪರೇಷನ್ ಸಿಂದೂರ್ ದಿಟ್ಟ ನಡೆ

ಆಪರೇಷನ್ ಸಿಂದೂರ್ ದಿಟ್ಟ ನಡೆ

ಭಾರತದ ಇತಿಹಾಸದಲ್ಲೇ ಬುಧವಾರ ನಿಜಕ್ಕೂ ಮಹತ್ವದ ದಿನ. ಎರಡು ವಾರಗಳ ಹಿಂದೆ ಕಾಶ್ಮೀರ ದ ಪಹಲ್ಗಾಮ್‌ನಲ್ಲಿ 26 ಅಮಾಯಕರನ್ನು ಬರ್ಬರವಾಗಿ ಹತ್ಯೆ ಮಾಡಿದ ಪಾಕ್ ಪ್ರೇರಿತ ಉಗ್ರರು ಭಾರತೀಯರ ಆತ್ಮಾಭಿಮಾನವನ್ನು ಕೆಣಕಿದ್ದರು. ಇದೀಗ ಪಾಕಿಸ್ತಾನದಲ್ಲಿರುವ ಈ ಉಗ್ರರ ಅಡಗು ದಾಣಗಳ ಮೇಲೆ ದಾಳಿ ನಡೆಸಿರುವ ಭಾರತೀಯ ಸೇನೆ ನರರಾಕ್ಷಸರ ಹುಟ್ಟಡಗಿಸಿ ಇಡೀ ದೇಶದ ಜನತೆಯ ಶ್ಲಾಘನೆಗೆ ಪಾತ್ರವಾಗಿದೆ.

Vishwavani Editorial: ಸುಟ್ಟರೂ ಹೋಗದ ಹುಟ್ಟುಗುಣ!

ಸುಟ್ಟರೂ ಹೋಗದ ಹುಟ್ಟುಗುಣ!

ಉಗ್ರರು ಪಹಲ್ಗಾಮ್‌ನಲ್ಲಿ ಎಸಗಿದ ಪೈಶಾಚಿಕ ಕೃತ್ಯಕ್ಕೆ ಒಂದಿಡೀ ಜಗತ್ತೇ ತನಗೆ ಛೀಮಾರಿ ಹಾಕು ತ್ತಿರುವುದನ್ನು ಕಂಡಾದರೂ ಪಾಕಿಸ್ತಾನ ತೆಪ್ಪಗಿರಬೇಕಿತ್ತು. ಇಲ್ಲವೆಂದರೆ, ತನ್ಮ ಹುಟ್ಟಡಗಿಸಲು ಭಾರತವು ನಡೆಸುತ್ತಿರುವ ಸೇನಾ ಸನ್ನದ್ಧತೆಯನ್ನು ಕಂಡಾದರೂ ಪಾಕ್ ಬಾಲ ಮುದುರಿ ಕೊಂಡಿರ ಬೇಕಿತ್ತು. ಆದರೆ, ‘ಮಗಳು ವಿಧವೆಯಾದರೂ ಪರವಾಗಿಲ್ಲ, ಅಳಿಯ ಸಾಯಬೇಕು’ ಎನ್ನುವ ಜಾಯ ಮಾನ ಈ ‘ಮಗ್ಗುಲುಮುಳ್ಳು’ ದೇಶದ್ದು. ಹೀಗಾಗಿ ಎರಡು ಅನಪೇಕ್ಷಿತ ಕೃತ್ಯಗಳಿಗೆ ಪಾಕಿಸ್ತಾನದ ಪರ ಸಮರ್ಥಕರು ಕೈಹಾಕಲು ಹವಣಿಸುತ್ತಿರುವ ಸುದ್ದಿ ಬಂದಿದೆ

Vishwavani Editorial: ಬೋಧನಾ ಗುಣಮಟ್ಟ ಹೆಚ್ಚಳವಾಗಲಿ

ಬೋಧನಾ ಗುಣಮಟ್ಟ ಹೆಚ್ಚಳವಾಗಲಿ

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 144 ಶಾಲೆಗಳು ಶೂನ್ಯ ಫಲಿತಾಂಶ ದಾಖಲಿಸಿವೆ. ಅಲ್ಲದೆ, ಮೊದಲ ಹತ್ತು ಸ್ಥಾನಗಳನ್ನು ದಕ್ಷಿಣ ಕರ್ನಾಟಕದ ಜಿಗಳು ಪಡೆದರೆ, ಕೊನೆಯ ಏಳು ಸ್ಥಾನಗಳಲ್ಲಿ ಉತ್ತರ ಕರ್ನಾಟಕದ ಜಿಗಳಿವೆ. ಕಳೆದ ವರ್ಷವೂ ಹೆಚ್ಚು-ಕಡಿಮೆ ಇದೆ ಪರಿಸ್ಥಿತಿ ಇತ್ತು. ಫಲಿತಾಂಶ ಸುಧಾರಣೆಗೆ ಶಿಕ್ಷಣ ಇಲಾಖೆಯು ಹಲ ವಾರು ಕ್ರಮಗಳನ್ನು ಕೈಗೊಂಡರೂ ಯಾವುದೇ ರೀತಿಯ ಬದಲಾವಣೆ ಸಾಧ್ಯವಾಗುತ್ತಿಲ್ಲ