ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಸಂಪಾದಕೀಯ
Vishwavani Editorial: ಸೈಬರ್ ವಂಚಕರನ್ನು ಶಿಕ್ಷಿಸಿ

ಸೈಬರ್ ವಂಚಕರನ್ನು ಶಿಕ್ಷಿಸಿ

ಸೈಬರ್ ವಂಚನೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗುವವರು ತೀರಾ ಕಡಿಮೆ. ಹೀಗಾಗಿ ದೇಶದ ನಾಗರಿಕರು ಕಷ್ಟಪಟ್ಟು ದುಡಿದ ಹಣವನ್ನುಯಾವುದೋ ದೇಶದ ಮೂಲೆಯಲ್ಲಿ ಕುಳಿತವರು ಲಪಟಾಯಿಸು ತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರಕಾರ ಆನ್ ಲೈನ್ ವಂಚನೆಯನ್ನು ರಾಷ್ಟ್ರದ್ರೋಹ ಎಂದು ಪರಿಗಣಿಸಿ ಗಂಭೀರ ಕ್ರಮ ತೆಗೆದುಕೊಳ್ಳದಿದ್ದಲ್ಲಿ ಈ ಪಿಡುಗನ್ನು ದೂರ ಮಾಡಲು ಸಾಧ್ಯವಿಲ್ಲ.

Vishwavani Editorial: ಈ ಆತ್ಮಹತ್ಯೆಗಳಿಗೆ ಕಾರಣವೇನು?

ಈ ಆತ್ಮಹತ್ಯೆಗಳಿಗೆ ಕಾರಣವೇನು?

ಶಾಲಾ ಹಂತದ ಶಿಕ್ಷಣವನ್ನು ಮುಗಿಸಿ ಆಗಷ್ಟೇ ವಿಭಿನ್ನ ಪ್ರಪಂಚಕ್ಕೆ ತೆರೆದುಕೊಳ್ಳುತ್ತಿರುವ ಯುವ ಹೃದಯಗಳು, ಯಾರೋ ಕುಹಕಿಗಳು/ಕಿಡಿಗೇಡಿಗಳಿಂದ ಒದಗುವ ಇಂಥ ಕಿರಿಕಿರಿಯನ್ನು ತಡೆದುಕೊಳ್ಳ ಲಾಗದಷ್ಟು ಸೂಕ್ಷ್ಮ ಮನಸ್ಥಿತಿಯವರಾಗಿರುತ್ತಾರೆ. ರ‍್ಯಾಗಿಂಗ್‌ನಿಂದಾಗಿ ತಮಗಾಗುತ್ತಿರುವ ತೊಂದರೆ ಯನ್ನು ಮತ್ತೊಬ್ಬರಲ್ಲಿ ಹೇಳಿಕೊಳ್ಳಲಾಗದ ಅಸಹಾಯಕತೆಯೂ ಅವರನ್ನು ಕಾಡುತ್ತಿರುತ್ತದೆ ಎಂಬುದನ್ನು ಮನಗಂಡು ಇಂಥ ಯುವ ಪ್ರತಿಭೆಗಳನ್ನು ಸಂರಕ್ಷಿಸಬೇಕಾದ ಹಾಗೂ ತಪ್ಪಿತಸ್ಥರ ಹೆಡೆಮುರಿ ಕಟ್ಟಬೇಕಾದ ಅನಿವಾರ್ಯತೆ ಹಿಂದೆಂದಿಗಿಂತ ಈಗ ಹೆಚ್ಚಾಗಿದೆ.

Vishwavani Editorial: ರ‍್ಯಾಗಿಂಗ್ ಎಂಬ ಪೆಡಂಭೂತ

ರ‍್ಯಾಗಿಂಗ್ ಎಂಬ ಪೆಡಂಭೂತ

ವಿದ್ಯಾರ್ಥಿ ನಿಲಯದಲ್ಲಿದ್ದುಕೊಂಡು ವಿದ್ಯಾಭ್ಯಾಸದಲ್ಲಿ ತೊಡಗಿರುವವರು, ಅದರಲ್ಲೂ ನಿರ್ದಿಷ್ಟ ವಾಗಿ ವೈದ್ಯಕೀಯ, ಎಂಜಿನಿಯರಿಂಗ್‌ನಂಥ ಉನ್ನತ ವ್ಯಾಸಂಗಕ್ಕೆ ಒಡ್ಡಿಕೊಂಡಿರುವವರು ಒಂದಿ ಷ್ಟು ಹೆಚ್ಚುವರಿ ಒತ್ತಡಗಳನ್ನು ಅನುಭವಿಸಬೇಕಾಗಿ ಬರುತ್ತದೆ. ಮನೆಯಿಂದ ಮತ್ತು ಮನೆಯವರ ಒಡನಾಟ ದಿಂದ ದೂರವಿದ್ದು ಹೀಗೆ ವಿದ್ಯಾರ್ಥಿ ನಿಲಯದಲ್ಲಿ ಆಶ್ರಯ ಪಡೆಯ ಬೇಕಾಗಿ ಬರುವಾಗಲೇ ಅಂಥ ವಿದ್ಯಾರ್ಥಿಗಳಲ್ಲಿ ಭಾವನಾತ್ಮಕ ನೆಲೆಯಲ್ಲಿ ಒಂದಷ್ಟು ಒತ್ತಡಗಳು ಅಥವಾ ತಲ್ಲಣ ಗಳು ಇರುತ್ತವೆ.

Vishwavani Editorial: ದೊಣ್ಣೆ ನಾಯಕನ ಅಪ್ಪಣೆಯೇ?!

ದೊಣ್ಣೆ ನಾಯಕನ ಅಪ್ಪಣೆಯೇ?!

ಉಕ್ರೇನ್ ವಿರುದ್ಧದ ಯುದ್ಧವನ್ನು ಮುಂದುವರಿಸಿರುವ ರಷ್ಯಾದ ಜತೆಗಿನ ವ್ಯಾಪಾರ-ವ್ಯವಹಾರ ಗಳನ್ನು ಕಡಿದುಕೊಳ್ಳುವಂತೆ ಭಾರತ, ಬ್ರೆಜಿಲ್ ಮತ್ತು ಚೀನಾ ದೇಶಗಳ ಮೇಲೆ ಒತ್ತಡ ಹಾಕಿರುವ ‘ನ್ಯಾಟೊ’ ಒಕ್ಕೂಟ, ‘ಒಂದೊಮ್ಮೆ ರಷ್ಯಾದ ಜತೆಗಿನ ವ್ಯಾಪಾರ ಚಟುವಟಿಕೆಗಳನ್ನು ಮುಂದು ವರಿಸಿದರೆ ತೀವ್ರ ಸ್ವರೂಪದ ಆರ್ಥಿಕ ನಿರ್ಬಂಧಗಳನ್ನು ಹೇರಲಾಗುತ್ತದೆ’ ಎಂದು ಬೆದರಿಕೆ ಹಾಕಿದೆ.

Vishwavani Editorial: ಜಿಎಸ್‌ಟಿ ಹೊರೆ ಇಳಿಸಲಿ

ಜಿಎಸ್‌ಟಿ ಹೊರೆ ಇಳಿಸಲಿ

ಪೂರ್ಣ ಪ್ರಮಾಣದ ಅವಧಿ ವಿಮಾ ಯೋಜನೆಗಳ ಮೇಲೆ ಜಿಎಸ್‌ಟಿ ರದ್ದುಗೊಳಿಸಬಹುದು ಎಂಬ ಮಾತುಗಳು ಕೇಳಿ ಬರುತ್ತಿದೆ. ಜಿಎಸ್‌ಟಿ ಕೌನ್ಸಿಲ್‌ನ 55ನೇ ಸಭೆ ಕಳೆದ ವರ್ಷ ಡಿಸೆಂಬರ್ 2024ರಲ್ಲಿ ನಡೆದಿತ್ತು. ಅಂದಿನಿಂದಲೂ ಜಿಎಸ್‌ಟಿ ದರಗಳನ್ನು ತರ್ಕಬದ್ಧಗೊಳಿಸಬೇಕು ಎಂಬ ಬೇಡಿಕೆ ಇತ್ತು.

Vishwavani Editorial: ಹೆಚ್ಚುತ್ತಿರುವ ಡ್ರಗ್ಸ್ ಹಾವಳಿ

Vishwavani Editorial: ಹೆಚ್ಚುತ್ತಿರುವ ಡ್ರಗ್ಸ್ ಹಾವಳಿ

ಅಫೀಮು, ಗಾಂಜಾ, ಹೆರಾ ಯಿನ್, ಮಾರ್ಫಿನ್, ಎಡಿಎಂಎ, ಎಲ್‌ಎಸ್‌ಡಿ, ಕೊಕೇನ್ ಮುಂತಾದ ಮಾದಕ ವಸ್ತುಗಳ ಮಾರಾಟ ಹಾಗೂ ಪೂರೈಕೆಗೆ ಇನ್ನೂ ಲಗಾಮು ಬಿದ್ದಿಲ್ಲ ಎಂಬ ಕಾರಣಕ್ಕೇ ರಾಜ್ಯ ದಲ್ಲಿ ಗೃಹ ಸಚಿವರ ನೇತೃತ್ವದಲ್ಲಿ ಏಳು ಸಚಿವರ ಕಾರ್ಯಪಡೆಯನ್ನು ಕೆಲ ತಿಂಗಳ ಹಿಂದೆ ರಚಿಸಿ, ಈ ದಂಧೆಗೆ ಇತಿಶ್ರೀ ಹಾಡಲು ಸಂಕಲ್ಪಿಸಲಾಗಿತ್ತು ಎಂಬುದನ್ನಿಲ್ಲಿ ಸ್ಮರಿಸಬಹುದು

Vishwavani Editorial: ಈ ಅಕ್ರಮವು ಸಕ್ರಮ ಆಗದಿರಲಿ

ಈ ಅಕ್ರಮವು ಸಕ್ರಮ ಆಗದಿರಲಿ

ಅಕ್ರಮ ನುಸುಳುಕೋರರಿಗೆ ತಕ್ಕ ಶಾಸ್ತಿ ಮಾಡದೆ, ತಮ್ಮ ವೋಟ್‌ ಬ್ಯಾಂಕ್ ರಾಜಕಾರಣದ ತಳಹದಿ ಯನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳಲೆಂದು ಇವರಿಗೆ ವಾಮಮಾರ್ಗದಲ್ಲಿ ವಿಳಾಸದ ಪುರಾವೆಯನ್ನು ದಕ್ಕಿಸಿಕೊಡಲಾಗುತ್ತಿದೆ ಎಂಬುದೂ ಆಗಾಗ ಕಿವಿಗೆ ಅಪ್ಪಳಿಸುವ ಆರೋಪ. ಇದು ಒಂದೊಮ್ಮೆ ನಿಜವಾ ಗಿದ್ದಲ್ಲಿ, ಇಂಥ ಪರಿಪಾಠಗಳಿಗೆ ಆದಷ್ಟು ಬೇಗ ತಿಲಾಂಜಲಿ ನೀಡಬೇಕಾದ್ದು ಇಂಥ ಆಶ್ರಯದಾತರ ಆದ್ಯಕರ್ತವ್ಯವಾಗಬೇಕು.

Vishwavani Editorial: ಜೀವಿಗಳ ಜೀವ ಅಗ್ಗವಾಗದಿರಲಿ

Vishwavani Editorial: ಜೀವಿಗಳ ಜೀವ ಅಗ್ಗವಾಗದಿರಲಿ

ವಾರದ ಹಿಂದೆ ಅರಣ್ಯ ಪ್ರದೇಶದಲ್ಲಿ ಆಹಾರಕ್ಕಾಗಿ ಬೇಟೆಯಾಡುವಾಗ ತೀವ್ರವಾಗಿ ಗಾಯ ಗೊಂಡಿದ್ದ ಈ ಚೀತಾ, ಚಿಕಿತ್ಸೆಯು ಫಲಪ್ರದವಾಗದ ಕಾರಣ ಅಸುನೀಗಿತು ಎನ್ನಲಾಗಿದೆ. ಇದೂ ಸೇರಿದಂತೆ, ‘ಚೀತಾ ಯೋಜನೆ’ ಅಡಿಯಲ್ಲಿ ಅನ್ಯದೇಶಗಳಿಂದ ತರಿಸಿಕೊಳ್ಳಲಾಗಿದ್ದ ಚೀತಾಗಳ ಪೈಕಿ ಇದುವರೆಗೆ 9 ಚೀತಾ ಗಳು ಸತ್ತಿರುವುದು ನಿರ್ಲಕ್ಷಿಸುವ ಸಂಗತಿಯಂತೂ ಅಲ್ಲ.

Vishwavani Editorial: ಅಕ್ರಮವಾಸಿಗಳನ್ನು ಒಕ್ಕಲೆಬ್ಬಿಸಿ

ಅಕ್ರಮವಾಸಿಗಳನ್ನು ಒಕ್ಕಲೆಬ್ಬಿಸಿ

ಕಾರ್ಯಕರ್ತರು ಇಂಥ ಅಕ್ರಮ ನಿವಾಸಿಗಳು ನೆಲೆಸಿರುವ ಶೆಡ್‌ಗಳಿಗೆ ಭೇಟಿಯಿತ್ತು ದಾಖಲೆಗಳನ್ನು ಪರಿಶೀಲಿಸಿದಾಗ, ಅವರಲ್ಲಿ ಅನೇಕರು ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿಕೊಂಡಿರುವುದು ಪತ್ತೆ ಯಾಗಿದೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಈ ಕಾರ್ಯದ ನೆರವೇರಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕಿದೆ.

Vishwavani Editorial: ಹೃದಯಾಘಾತ: ಆತಂಕ ಬೇಡ

ಹೃದಯಾಘಾತ: ಆತಂಕ ಬೇಡ

ಆಧುನಿಕ ಜೀವನ ಶೈಲಿ, ಅಸುರಕ್ಷಿತ ಆಹಾರ ಕ್ರಮ, ದೈನಂದಿನ ಜೀವನದಲ್ಲಿ ಮಾನಸಿಕ ಒತ್ತಡ ಹಾಗೂ ಅತಿಯಾದ ಮೊಬೈಲ್ ಫೋನ್ ಬಳಕೆಯಿಂದ ಇತ್ತೀಚಿನ ದಿನಗಳಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ತಜ್ಞರು ಕೂಡ ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ಸಾರ್ವ ಜನಿಕರು ಆಸ್ಪತ್ರೆಗಳಿಗೆ ಧಾವಿಸುವುದಕ್ಕಿಂತ ಜೀವನಶೈಲಿಯನ್ನು ಬದಲಿಸಿಕೊಳ್ಳುವುದರತ್ತ ಗಮನ ಹರಿಸಬೇಕಾದ ಅಗತ್ಯವಿದೆ.

Vishwavani Editorial: ಮೂಗನ್ನು ಹಿಡಿದಾಗ ತೆರೆದ ಬಾಯಿ!

ಮೂಗನ್ನು ಹಿಡಿದಾಗ ತೆರೆದ ಬಾಯಿ!

ತನ್ನ ವಿರುದ್ಧ ಕೈಗೊಂಡ ಕುಕೃತ್ಯಗಳ ಕುರಿತು ಭಾರತ ಹೇಳಿಕೆ ನೀಡಿದಾಗ ‘ನಾನವನಲ್ಲ, ನಾನವ ನಲ್ಲ’ ಎನ್ನುವುದು ಮತ್ತು ಅಂಥ ವಿಧ್ವಂಸಕ ಕೃತ್ಯಗಳಿಗೆ ಸಂಬಂಧಿಸಿದ ಸಾಕ್ಷ್ಯ-ಪುರಾವೆಗಳನ್ನು ಬಿಡುಗಡೆ ಮಾಡಿದಾಗ ವಿಧಿಯಿಲ್ಲದೆ ಒಪ್ಪಿಕೊಳ್ಳುವುದು ಇವು ಪಾಕಿಸ್ತಾನದ ಆಳುಗರ, ಸೇನಾ ನಾಯಕರ ಮತ್ತು ಪಾಕ್-ಪ್ರಚೋದಿತ ಉಗ್ರರ ಚಾಳಿಯೇ ಆಗಿಬಿಟ್ಟಿದೆ. ಇದಕ್ಕೆ ಇತ್ತೀಚಿನ ಸೇರ್ಪಡೆ ತಹಾವುರ್ ಹುಸೇನ್ ರಾಣಾ.

Vishwavani Editorial: ಬಳ್ಳಿಗಳಿಗೆ ನೀರೆರೆಯಬೇಕಿದೆ

ಬಳ್ಳಿಗಳಿಗೆ ನೀರೆರೆಯಬೇಕಿದೆ

ಹುಡುಕಿದರೆ ಇಂಥ ಹಲವು ಪ್ರತಿಭೆಗಳು ನಮ್ಮ ನಾಡಿನ ಮೂಲೆಮೂಲೆಯಲ್ಲೂ ಸಿಕ್ಕಾವು. ಆದರೆ ಹೊಟ್ಟೆ ಹೊರೆದುಕೊಳ್ಳುವುದೇ ಕಷ್ಟವಾಗಿರುವ ಕಾರಣಕ್ಕೆ ಇಂಥ ಪ್ರತಿಭೆಗಳಿಗೆ ಉತ್ತೇಜಿಸಲಾಗದ ಸ್ಥಿತಿಯಲ್ಲಿ ಅವರ ಕುಟುಂಬಗಳಿರಬಹುದು. ಇಂಥ ‘ಪ್ರತಿಭಾ- ಬಳ್ಳಿಗಳಿಗೆ’ ನೀರೆರೆಯಬೇಕಾದ ಕೆಲಸ ಆಗಬೇಕಿದೆ...

Vishwavani Editorial: ಮತ್ತೆ ಕೈಕುಲುಕಿದ ಕುಡಿಗಳು

ಮತ್ತೆ ಕೈಕುಲುಕಿದ ಕುಡಿಗಳು

ಸೋದರ ಸಂಬಂಧಿಗಳಾದ ಉದ್ಧವ್ ಠಾಕ್ರೆ ಮತ್ತು ರಾಜ್ ಠಾಕ್ರೆಯವರು ಬರೋಬ್ಬರಿ 20 ವರ್ಷಗಳ ನಂತರ ಮತ್ತೆ ಒಗ್ಗಟ್ಟು ಪ್ರದರ್ಶಿಸಿರುವುದು ಹಲವರ ಹುಬ್ಬೇರಿಸಿದೆ. ರಾಜಕೀಯ ಎಂದ ಮೇಲೆ ಇಂಥ ಬೆಳವಣಿಗೆಗಳು ಸಹಜ ಎನ್ನುವಷ್ಟರ ಮಟ್ಟಿಗೆ ರಾಜಕೀಯಾಸಕ್ತರೂ ಈ ಮರುಕೂಡಿಕೆಯನ್ನು ಸ್ವೀಕರಿಸಿದ್ದಾರೆ ಎನ್ನಿ.

Vishwavani Editorial: ರಕ್ಷಕನೇ ಭಕ್ಷನಾದರೆ ಗತಿಯೇನು?

ರಕ್ಷಕನೇ ಭಕ್ಷನಾದರೆ ಗತಿಯೇನು?

ಫರೂಕಾಬಾದ್‌ನಲ್ಲಿ ನಡೆದಿರುವ ಅತ್ಯಾಚಾರ ಪ್ರಕರಣವು ಇದಕ್ಕಿಂತ ಘೋರ ವಾದುದು, ಕಾರಣ ಇದನ್ನು ಎಸಗಿದಾತ ‘ಜನರಕ್ಷಕ’ ಎಂದೇ ಕರೆಸಿಕೊಳ್ಳುವ ಒಬ್ಬ ಪೊಲೀಸ್ ಪೇದೆ. ಶಾಲೆಗೆ ತೆರಳುತ್ತಿದ್ದ 15ರ ಬಾಲಕಿಯನ್ನು ಈತ ರಸ್ತೆಯಲ್ಲೇ ಅಡ್ಡಗಟ್ಟಿ ಕಾರಿನಲ್ಲಿ ಅಪಹರಿಸಿ ತನ್ನ ತೃಷೆಯನ್ನು ತೀರಿಸಿ ಕೊಂಡಿದ್ದಾನೆ ಎಂಬುದು ಲಭ್ಯ ಮಾಹಿತಿ.

Vishwavani Editorial: ಮತ್ತೊಮ್ಮೆ ಸತ್ಯದ ಅನಾವರಣ

ಮತ್ತೊಮ್ಮೆ ಸತ್ಯದ ಅನಾವರಣ

ಯಶಸ್ಸಿಗೆ ಅಪ್ಪಂದಿರು ಹಲವರು, ಆದರೆ ಸೋಲು ಮಾತ್ರ ಅನಾಥ’ ಎಂಬುದೊಂದು ಮಾತಿದೆ. ನಿಯೋಜಿತ ಕಾರ್ಯ ಭಾರದ ನೆರವೇರಿಕೆಯ ಹಾದಿಯಲ್ಲಿ ಮುಳ್ಳುಗಳೇ ತುಂಬಿವೆ, ಹೆಜ್ಜೆ ಹೆಜ್ಜೆಗೂ ಸಂಕಷ್ಟ-ಸವಾಲುಗಳು ಎದುರಾಗುತ್ತವೆ ಎಂಬುದು ಪೂರ್ವಭಾವಿಯಾಗಿ ಅರಿವಾಗುತ್ತಿದ್ದಂತೆ ಆ ಕಡೆ ತಲೆಯಿಟ್ಟೂ ಮಲಗದವರು, ಒಂದೊಮ್ಮೆ ಆ ಕಾರ್ಯಭಾರ ಯಶಸ್ಸು ಕಂಡಿತೆಂದರೆ, ‘ಇದರಲ್ಲಿ ನನ್ನ ಯೋಗದಾನವೂ ಇತ್ತು’ ಎಂದು ಹೇಳಿಕೊಳ್ಳಲು ಹಪಹಪಿಸುವುದಿದೆ.

Vishwavani Editorial: ಬೈಕ್ ಟ್ಯಾಕ್ಸಿ ಸೇವೆ ಊರ್ಜಿತವಾಗಲಿ

ಬೈಕ್ ಟ್ಯಾಕ್ಸಿ ಸೇವೆ ಊರ್ಜಿತವಾಗಲಿ

ಕೇಂದ್ರ ಸರಕಾರದ ಅನುಮೋದನೆ ನೀಡಿದ್ದರೂ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಹಕ್ಕು ರಾಜ್ಯ ಸರಕಾರಕ್ಕಿರುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ. ಕೇಂದ್ರ ಸರಕಾರದ ಈ ನಿರ್ಧಾರದಿಂದ ಹೆಚ್ಚು ವರಿ ಆದಾಯಕ್ಕಾಗಿ ಬೈಕ್ ಟ್ಯಾಕ್ಸಿಗಳನ್ನು ಓಡಿಸುತ್ತಿದ್ದ ಲಕ್ಷಾಂತರ ಯುವಕ-ಯುವತಿಯರಲ್ಲಿ ಆಶಾ ಭಾವನೆ ಮೂಡಿದೆ. ಮಿತವ್ಯಯ ಮತ್ತು ತ್ವರಿತ ಸೇವೆಯ ಕಾರಣಕ್ಕೆ ಈ ವಾಹನಗಳನ್ನು ಆಶ್ರಯಿಸಿದ್ದ ಜನರಿಗೂ ಕೇಂದ್ರದ ಈ ನಿರ್ಧಾರ ಸಂತಸ ತಂದಿದೆ.

Vishwavani Editorial: ಷಡ್ರಸವನ್ನು ಉಣಿಸಬೇಕಿಲ್ಲ...!

ಷಡ್ರಸವನ್ನು ಉಣಿಸಬೇಕಿಲ್ಲ...!

ದೇಗುಲದ ಗರ್ಭಗುಡಿಯಲ್ಲಿರುವ ಮೂರ್ತಿಗಳಲ್ಲಿ ಮಾತ್ರವಲ್ಲದೆ, ಗಿಡ-ಮರ, ಪ್ರಾಣಿ-ಪಕ್ಷಿ, ಕಲ್ಲು-ಮಣ್ಣಿನಲ್ಲೂ ದೇವರನ್ನು ಕಾಣುವ ಸಂಸ್ಕೃತಿ ಮತ್ತು ಪರಂಪರೆ ನಮ್ಮದು. ಅಂತೆಯೇ, ಹುಲಿ, ಸಿಂಹ, ವೃಷಭ, ನವಿಲು ಮುಂತಾದ ಪ್ರಾಣಿ-ಪಕ್ಷಿಗಳನ್ನು ನಿರ್ದಿಷ್ಟ ದೇವರುಗಳ ವಾಹನಗಳಾಗಿ ಪರಿಕಲ್ಪಿಸಿ ಕೊಂಡಿರುವ ಸಮಾಜ ನಮ್ಮದು.

Vishwavani Editorial: ಭಾರತದ ಹೆಮ್ಮೆಯ ಕ್ಷಣ

ಭಾರತದ ಹೆಮ್ಮೆಯ ಕ್ಷಣ

1984ರಲ್ಲಿ ವಿಂಗ್ ಕಮಾಂಡರ್ ರಾಕೇಶ್ ಶರ್ಮಾ ಇತಿಹಾಸ ನಿರ್ಮಿಸಿದ ನಾಲ್ಕು ದಶಕಗಳ ನಂತರ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಬಾಹ್ಯಾಕಾಶಕ್ಕೆ ಹೋಗುತ್ತಿರುವ ಭಾರತದ ಎರಡನೇ ಗಗನ ಯಾತ್ರಿ. ಇಸ್ರೋ ಗಗನಯಾತ್ರಿ ಆಗಿರುವ ಶುಕ್ಲಾ ಅವರೊಂದಿಗೆ ಅಮೆರಿಕ, ಹಂಗರಿ ಮತ್ತು ಪೋಲೆಂಡ್‌ನ ಗಗನಯಾತ್ರಿಗಳೂ ಅಂತರಿಕ್ಷಕ್ಕೆ ಹಾರಿದ್ದಾರೆ. ಆಕ್ಸಿಯಮ್ ಮಿಷನ್‌ನ ವಿಶೇಷತೆ ಏನೆಂದರೆ ಗಗನ ಯಾತ್ರಿಗಳು 14 ದಿನಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಉಳಿದು ಅಧ್ಯಯನ ಗಳನ್ನು ನಡೆಸಲಿದ್ದಾರೆ.

Vishwavani Editorial: ಮತ್ತೆ ಬಾಲ ಬಿಚ್ಚಿದ ಬಿಲಾವಲ್

ಮತ್ತೆ ಬಾಲ ಬಿಚ್ಚಿದ ಬಿಲಾವಲ್

ಸಿಂಧೂ ನದಿ ಜಲ ಒಪ್ಪಂದದ ಅಡಿಯಲ್ಲಿ ಪಾಕಿಸ್ತಾನಕ್ಕೆ ನ್ಯಾಯಯುತವಾಗಿ ಸಲ್ಲಬೇಕಾದ ನೀರಿನ ಪಾಲನ್ನು ಭಾರತವು ಇನ್ನು ಮುಂದೆಯೂ ನಿರಾಕರಿಸಿದರೆ, ಪಾಕಿಸ್ತಾನವು ಯುದ್ಧಕ್ಕೆ ಸಿದ್ಧವಾಗ ಬೇಕಾಗುತ್ತದೆ ಎಂದು ಅಬ್ಬರಿಸಿದ್ದಾರೆ ಅಲ್ಲಿನ ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ.

Vishwavani Editorial : ಅಸಮಾಧಾನವೋ ಎಚ್ಚರಿಕೆಯೋ?

ಅಸಮಾಧಾನವೋ ಎಚ್ಚರಿಕೆಯೋ?

ಹಿಂದೆ ಗದ್ದುಗೆಯಲ್ಲಿದ್ದವರು ಆಡಳಿತ-ವಿರೋಧಿ ಅಲೆಗೆ ಗುರಿಯಾದ ಕಾರಣಕ್ಕೇ ನಮಗೀಗ ಅಧಿಕಾರ ಸಿಕ್ಕಿರುವುದು’ ಎಂಬ ವಾಸ್ತವವನ್ನು ಸಂಬಂಧಪಟ್ಟವರು ಒಂದೊಮ್ಮೆ ಅರ್ಥಮಾಡಿಕೊಂಡರೆ, ಎಲ್ಲ ತೆರನಾದ ಅಸಮಾಧಾನಗಳು ಮತ್ತು ಅಪಸ್ವರಗಳು ಶಮನವಾದಾವು. ಅಂಥದೊಂದು ಆರೋಗ್ಯಕರ ಪರಿಸ್ಥಿತಿ ರೂಪುಗೊಳ್ಳಲಿ ಎಂದಷ್ಟೇ ನಮ್ಮಂಥವರು ಹಾರೈಸಬಹುದು!

Vishwavani Editorial: ಮೂರನೇ ಮಹಾಯುದ್ಧದ ಭೀತಿ

ಮೂರನೇ ಮಹಾಯುದ್ಧದ ಭೀತಿ

ಇರಾನ್ ದೇಶದ ಮೂರು ಅಣುಸ್ಥಾವರಗಳ ಮೇಲೆ ಅಮೆರಿಕ ವೈಮಾನಿಕ ದಾಳಿಯನ್ನು ನಡೆಸಿದ್ದು ಇದು ಪರಮಾಣು ಯುದ್ಧಕ್ಕೆ ನಾಂದಿ ಹಾಡಬಹುದೇ ಎಂಬ ಭೀತಿಯು ಜಾಗತಿಕ ಸಮುದಾಯದಲ್ಲಿ ಹೆಚ್ಚಲು ಕಾರಣವಾಗಿದೆ. ಇಷ್ಟು ದಿನ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ, ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವಿನ ಹಣಾಹಣಿಯನ್ನು ನೋಡಿ ಕಂಗೆಟ್ಟವರಿಗೆ, ಈ ಬೆಳವಣಿಗೆ ಮತ್ತೊಂದು ಆಘಾತ ವಾಗಿದೆ ಎನ್ನಲಡ್ಡಿಯಿಲ್ಲ.

Vishwavani Editorial: ಬೆಂಕಿಯಿಲ್ಲದೆ ಹೊಗೆಯಾಡುವುದಿಲ್ಲ

ಬೆಂಕಿಯಿಲ್ಲದೆ ಹೊಗೆಯಾಡುವುದಿಲ್ಲ

ಅಂದಿನಿಂದಲೂ ಭಾರತ ಮತ್ತು ಕೆನಡಾ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧವು ಹದಗೆಟ್ಟಿತ್ತು ಎಂಬುದನ್ನಿಲ್ಲಿ ಸ್ಮರಿಸಬಹುದು. ಈಗ, ಭಾರತದ ಗ್ರಹಿಕೆ ಮತ್ತು ನಿಲುವನ್ನೇ ಕೆನಡಾದ ಗುಪ್ತಚರ ಸಂಸ್ಥೆಯು ಪುನರುಚ್ಚರಿಸಿರುವ ಹಿನ್ನೆಲೆಯಲ್ಲಿ ಭಾರತದ ಮಾತುಗಳಿಗೆ ಒಂದು ತೂಕ ಬಂದಂತಾಗಿದೆ

Vishwavani Editorial: ಗುಡುಗಿನಲ್ಲಿದೆ ಪರೋಕ್ಷ ಸಂದೇಶ

ಗುಡುಗಿನಲ್ಲಿದೆ ಪರೋಕ್ಷ ಸಂದೇಶ

ಕೆನಡಾ ದೇಶದ ಕನನಾ ಸ್ಕಿಸ್‌ನಲ್ಲಿ ಆಯೋಜಿಸಲಾಗಿರುವ ‘ಜಿ-7’ ದೇಶಗಳ ಶೃಂಗಸಭೆಗೆ ವಿಶೇಷ ಆಹ್ವಾನಿತರಾಗಿ ತೆರಳಿರುವ ಪ್ರಧಾನಿ ನರೇಂದ್ರ ಮೋದಿಯವರು ಸಭೆಯನ್ನು ಉದ್ದೇಶಿಸಿ ಮಾತನಾಡು ವಾಗ, “ಭಯೋತ್ಪಾದನೆ ವಿರುದ್ಧ ಹೋರಾಡುವ ಬದಲಾಗಿ ಕೆಲವು ದೇಶಗಳು ಭಯೋತ್ಪಾದನೆಯ ಸೃಷ್ಟಿಕರ್ತ ದೇಶಕ್ಕೇ ನೆರವಾಗುವ ಮೂಲಕ ಇಬ್ಬಗೆ ನೀತಿಯನ್ನು ಅನುಸರಿಸುತ್ತಿವೆ" ಎಂಬ ಅಸಮಾ ಧಾನವನ್ನು ವ್ಯಕ್ತಪಡಿಸಿದ್ದಾರೆ.

Vishwavani Editorial: ಕೆನಡಾ ಸಂಬಂಧ ಸುಧಾರಣೆ

ಕೆನಡಾ ಸಂಬಂಧ ಸುಧಾರಣೆ

ಉಭಯ ದೇಶಗಳು ಹೊಸ ಹೈಕಮಿಷನರ್‌ಗಳನ್ನು ನೇಮಿಸಲು ಒಪ್ಪಿಕೊಂಡಿವೆ. ಇದರಿಂದ ಕೆನಡಾಕ್ಕೆ ಭೇಟಿ ನೀಡುವ ಲಕ್ಷಾಂತರ ಭಾರತೀಯರ ವೀಸಾ ಮತ್ತಿತರ ಸೇವೆ ಸುಗಮವಾಗಲಿದೆ. ದ್ವಿಪಕ್ಷೀಯ ಸಂಬಂಧ ಸುಧಾರಣೆ ದೃಷ್ಟಿಯಿಂದ ಇದು ಮಹತ್ವದ ಬೆಳವಣಿಗೆ. ಕೆನಡಾದಲ್ಲಿ ಸಿಖ್ ಪ್ರತ್ಯೇಕತಾವಾದಿ ಗಳ ಚಟುವಟಿಕೆ ನಿಲ್ಲಿಸುವಲ್ಲೂ ಭಾರತ ಒತ್ತಡ ಹೇರಬೇಕಾಗಿದೆ.

Loading...