ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಸಂಪಾದಕೀಯ

Vishwavani Editorial: ಪುಸ್ತಕಗಳ ಓದು ಹೆಚ್ಚಾಗಲಿ

Vishwavani Editorial: ಪುಸ್ತಕಗಳ ಓದು ಹೆಚ್ಚಾಗಲಿ

ಇದೂ ಒಪ್ಪುವಂಥ ಮಾತೇ. ಆದರೆ ಪುಸ್ತಕವೊಂದನ್ನು ಕೈಯಲ್ಲಿ ಹಿಡಿದು, ಅದರ ಸಾಲುಗಳಿಗೆ ಪ್ರತ್ಯಕ್ಷ ಒಡ್ಡಿಕೊಂಡು, ಅಕ್ಷರದ ರಸಾಸ್ವಾದನೆಯನ್ನು ಮಾಡುವುದಿದೆಯಲ್ಲಾ, ಅದು ಪ್ರಾಯಶಃ ಡಿಜಿಟಲ್ ಸ್ವರೂಪದಲ್ಲಿ ದಕ್ಕುವುದಿಲ್ಲ. ಜತೆಗೆ, ಪುಸ್ತಕದ ಆ ಸಾಲುಗಳಲ್ಲಿರುವ ಭಾವನೆಗೆ ನಮ್ಮ ಮನವನ್ನು ಸರಿ ಹೊಂದಿಸಿಕೊಳ್ಳುತ್ತಾ ಸ್ವೀಕರಿಸುತ್ತಾ ಹೋದಂತೆ, ನಮಗೇ ಅರಿವಿಲ್ಲದಂತೆ ನಮ್ಮ ಕಲ್ಪನಾಶಕ್ತಿಯೂ ಗಣನೀಯವಾಗಿ ಗಾಢವಾಗುವುದಿದೆ.

Vishwavani Editorial: ಅಮಲಿನ ಅಡ್ಡಾ ಆಗದಿರಲಿ

Vishwavani Editorial: ಅಮಲಿನ ಅಡ್ಡಾ ಆಗದಿರಲಿ

ಒಂದು ಕಾಲಕ್ಕೆ ಪಂಜಾಬ್ ರಾಜ್ಯದಲ್ಲಿ ಮಾದಕ ವಸ್ತುಗಳ ಮಾರಾಟಜಾಲವು ಅತಿರೇಕ ಎಂಬಷ್ಟರ ಮಟ್ಟಿಗೆ ಸಕ್ರಿಯವಾಗಿದ್ದು ಹಾಗೂ ಮಾದಕ ದ್ರವ್ಯದ ವ್ಯಸನಿಗಳ ಸಂಖ್ಯೆ ಅಲ್ಲಿ ಕಳವಳಕಾರಿ ಮಟ್ಟ ವನ್ನು ಮುಟ್ಟಿದ್ದು ಗೊತ್ತಿರುವಂಥದ್ದೇ. ಹೀಗೆ ನಶೆಯಲ್ಲಿ ತೇಲುವವರು ಹೆಚ್ಚಿದ್ದಾರೆ ಎಂಬ ಕಾರಣ ಕ್ಕಾಗಿಯೇ ಆ ರಾಜ್ಯವನ್ನು ‘ಉಡ್ತಾ ಪಂಜಾಬ್’ ಎಂದು ಕರೆದಿದ್ದೂ ಉಂಟು.

Vishwavani Editorial: ದರೋಡೆ ಪ್ರಕರಣ ಹೆಚ್ಚಳ ಕಳವಳಕಾರಿ

Vishwavani Editorial: ದರೋಡೆ ಪ್ರಕರಣ ಹೆಚ್ಚಳ ಕಳವಳಕಾರಿ

ಬೆಂಗಳೂರಿನ ಎಟಿಎಂ ಹಣ ದರೋಡೆ ಪ್ರಕರಣ, ಮೈಸೂರಿನ ಹುಣಸೂರು ಚಿನ್ನಾಭರಣ ಅಂಗಡಿ ದರೋಡೆ, ವಿಜಯಪುರ ಜಿಲ್ಲೆಯ ಚಡಚಣದಲ್ಲಿ ನಡೆದ ಚಿನ್ನಾಭರಣ ಅಂಗಡಿ ಪ್ರಕರಣದ ಆರೋಪಿ ಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂಬ ಸುದ್ದಿ ಕೇಳಿ ಜನರು ನಿಟ್ಟುಸಿರುವ ಬಿಡುವ ಮುನ್ನವೇ ಇಂಥ ಹಲವು ಪ್ರಕರಣಗಳು ವರದಿಯಾಗುತ್ತಿವೆ.

Vishwavani Editorial: ಎರಡು ಅತಿರೇಕಗಳ ಸುತ್ತ

Vishwavani Editorial: ಎರಡು ಅತಿರೇಕಗಳ ಸುತ್ತ

ಮೊದಲನೆಯದಕ್ಕೆ ಕಾರಣಕರ್ತರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್. ಅಮೆರಿಕದ ಬೆನ್ನಿಗೆ ಅಂಟಿಕೊಂಡಿರುವ ಕೆನಡಾ ರಾಷ್ಟ್ರದ ಮೇಲೆಯೇ ಕೆಂಗಣ್ಣು ಬೀರಿರುವ ಟ್ರಂಪ್, ಅದರ ಮೇಲೆಯೂ ಶೇ.100ರ ಪ್ರಮಾಣದ ಸುಂಕವನ್ನು ವಿಧಿಸುವುದಾಗಿ ಬೆದರಿಕೆ ಹಾಕಿದ್ದಾರೆ; ಚೀನಾ ದೊಂದಿಗಿನ ವ್ಯಾಪಾರ ಸಂಬಂಧವನ್ನು ಕೆನಡಾ ಮುಂದು ವರಿಸಿರುವುದೇ ಟ್ರಂಪ್ ಮಹಾ ಶಯರ ಈ ಕಡುಕೋಪಕ್ಕೆ ಕಾರಣವಂತೆ. ಈ ಐಲುದೊರೆಯ ಆಟಾಟೋಪ ಯಾವಾಗ ನಿಲ್ಲುವುದೋ ಭಗವಂತನೇ ಬಲ್ಲ!

Vishwavani Editorial: ಗಣತಂತ್ರದ ಸಾರ್ಥಕತೆ

Vishwavani Editorial: ಗಣತಂತ್ರದ ಸಾರ್ಥಕತೆ

ದೇಶದ ಉದ್ದಗಲಕ್ಕೂ ಇಂದು 77ನೇ ಗಣರಾಜ್ಯೋತ್ಸವದ ಸಂಭ್ರಮ. ನೈತಿಕ ನಾಯಕತ್ವ, ಸ್ಪಂದನಶೀಲ ಆಡಳಿತ ಮತ್ತು ಜನರ ಆಕಾಂಕ್ಷೆಗಳೊಂದಿಗೆ ನಿರಂತರವಾಗಿ ತೊಡಗಿಸಿ ಕೊಳ್ಳುವ ಮೂಲಕ ಗಣತಂತ್ರವು ತನ್ನ ಅಸ್ತಿತ್ವವನ್ನು ಕಂಡುಕೊಳ್ಳುತ್ತದೆ, ಸಾರ್ಥಕತೆಯನ್ನು ಮೆರೆಯು ತ್ತದೆ ಹಾಗೂ ಆಳುಗ ವ್ಯವಸ್ಥೆಯು ಜನರಿಗಾಗಿ ಆಡಳಿತ ನಡೆಸಲು ಬದ್ಧವಾಗಿರುವಾಗ ಮಾತ್ರವೇ ಪ್ರಜಾಪ್ರಭುತ್ವವು ನಿಜಾರ್ಥದಲ್ಲಿ ಉಳಿಯುತ್ತದೆ ಎಂಬುದು ಬಲ್ಲವರ ವ್ಯಾಖ್ಯಾನ.

Vishwavani Editorial: ಮಾಡೋದು ಅನಾಚಾರ, ಮನೆಮುಂದೆ..

Vishwavani Editorial: ಮಾಡೋದು ಅನಾಚಾರ, ಮನೆಮುಂದೆ..

‘ಕಂಕುಳಲ್ಲಿ ದೊಣ್ಣೆ, ಕೈಯಲ್ಲಿ ಶರಣಾರ್ಥಿ’ ಎಂಬ ಮಾತಿನಂತೆ, ಶಾಂತಿಮಂತ್ರ ಪಠಿಸುತ್ತಲೇ ತನಗಾಗದ ದೇಶಗಳ ಮೇಲೆ ಯುದ್ಧಕ್ಕೆ ತೆರಳುವ ಅಥವಾ ಯಾವುದಾದರೂ ಎರಡು ರಾಷ್ಟ್ರಗಳ ನಡುವೆ ಹಿತಾಸಕ್ತಿಯ ಸಂಘರ್ಷ ತಲೆದೋರಿದ್ದರೆ ಅವುಗಳ ನಡುವೆ ಯುದ್ಧಕ್ಕೆ ತಿದಿಯೂದುವ ಟ್ರಂಪ್, ತಮ್ಮನ್ನು ತಾವು ‘ಶಾಂತಿದೂತ’ ಎಂದು ಭ್ರಮಿಸಿದ್ದು, ನೊಬೆಲ್ ಶಾಂತಿ ಪುರಸ್ಕಾರ ಕ್ಕಾಗಿ ಹಟಮಾಡಿದ್ದು ಕಳೆದ ವರ್ಷದ ದೊಡ್ಡ ಜೋಕ್.

Vishwavani Editorial: ಕುಸಿದಿದ್ದು ಟ್ಯಾಂಕ್ ಮಾತ್ರವೇ ಅಲ್ಲ!

Vishwavani Editorial: ಕುಸಿದಿದ್ದು ಟ್ಯಾಂಕ್ ಮಾತ್ರವೇ ಅಲ್ಲ!

33 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಗುರಿಯನ್ನು ಹೊಂದಿದ್ದ ಯೋಜನೆಯ ಭಾಗವಾಗಿದ್ದ ಟ್ಯಾಂಕ್ ಇದು ಎಂಬುದು ಗಮನಿಸಬೇಕಾದ ಸಂಗತಿ. ಈ ಘಟನೆಯನ್ನು ಸ್ಥೂಲ ನೋಟದಲ್ಲಿ ದಕ್ಕಿಸಿಕೊಳ್ಳುವವರು, ‘ಕುಸಿದಿದ್ದು ಕೇವಲ ನೀರಿನ ಟ್ಯಾಂಕ್, ಇಲ್ಲಿ ಅಣೆಕಟ್ಟೆಯೇನೂ ಒಡೆದು ಹೋಗಿಲ್ಲವಲ್ಲ’ ಎಂದು ಹಗುರ ದನಿಯಲ್ಲಿ ಪ್ರತಿಕ್ರಿಯಿಸಬಹುದು.

Vishwavani Editorial: ಇದು ಆತ್ಮವಿಮರ್ಶೆಯ ಹೊತ್ತು

Vishwavani Editorial: ಇದು ಆತ್ಮವಿಮರ್ಶೆಯ ಹೊತ್ತು

ರಾಜಕಾರಣಿಗಳು, ಅವರ ಹಿಂಬಾಲಕರು ಗುಂಪು ಘರ್ಷಣೆಯಲ್ಲಿ ತೊಡಗುವುದು, ಅಧಿಕಾರಿಗಳು ಕಚೇರಿಯಲ್ಲೇ ರಾಸಲೀಲೆ ನಡೆಸುವುದು, ಸಮಾಜದ ಮೌಲ್ಯಗಳ ಪ್ರತಿನಿಧಿಗಳೆಂದೇ ಗೌರವಿಸ ಲ್ಪಡುವ ಪೀಠಾಧಿಪತಿಗಳು, ಸನ್ಯಾಸಿಗಳು ಅನೈತಿಕ ಸಂಬಂಧವನ್ನು ಹೊಂದಿರುವುದು... ನಿತ್ಯ ಇಂತಹ ಸುದ್ದಿಗಳನ್ನೇ ಕೇಳುತ್ತ, ನೋಡುತ್ತ, ಇಡೀ ವ್ಯವಸ್ಥೆಯ ಬಗ್ಗೆಯೇ ಅನುಮಾನ ಬರುವಂತಾ ಗಿದೆ. ಸದ್ಯ ಕೆಲವು ಬಹಿರಂಗವಾಗಿವೆ ಅಷ್ಟೇ

Vishwavani Editorial: ಸರಿಯಾಗಿ ಬಿಸಿ ಮುಟ್ಟಿಸಬೇಕಿದೆ

Vishwavani Editorial: ಸರಿಯಾಗಿ ಬಿಸಿ ಮುಟ್ಟಿಸಬೇಕಿದೆ

ನೆರೆರಾಷ್ಟ್ರ ಪಾಕಿಸ್ತಾನವು ನೀಡುತ್ತಿರುವ ಕುಮ್ಮಕ್ಕು, ಆ ಪಾಕಿಸ್ತಾನಕ್ಕೆ ಅಮೆರಿಕದಿಂದ ಒದಗುತ್ತಿರುವ ವಿವಿಧ ನೆಲೆಗಟ್ಟಿನ ಒತ್ತಾಸೆಗಳು- ಹೀಗೆ ಉಗ್ರರ ಈ ಧಾರ್ಷ್ಟ್ಯದ ಹಿಂದೆ ಸಾಕಷ್ಟು ಅಂಶಗಳು ಕೆಲಸ ಮಾಡುತ್ತಿರುವ ಸಂಭವವಿದೆ. ಹೀಗಾಗಿ ಭಾರತವು ಉಗ್ರದಮನದ ನಿಟ್ಟಿನಲ್ಲಿ ನಿಷ್ಠುರ ಕ್ರಮಗಳಿಗೆ ಮುಂದಾಗಬೇಕಾದ ಅಗತ್ಯವಿದೆ.

Vishwavani Editorial: ಚೇಳಿಗೆ ಪಾರುಪತ್ಯ ಕೊಟ್ಟರೆ...!

Vishwavani Editorial: ಚೇಳಿಗೆ ಪಾರುಪತ್ಯ ಕೊಟ್ಟರೆ...!

ವಿಶ್ವದಲ್ಲೇ ಬೃಹತ್ ದ್ವೀಪ ಎನಿಸಿಕೊಂಡಿರುವ ‘ಗ್ರೀನ್‌ಲ್ಯಾಂಡ್’ ಮೇಲೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಣ್ಣು ಹಾಕಿದ್ದಾರೆ. ಸಾಂಸ್ಕೃತಿಕವಾಗಿ ಈ ದ್ವೀಪವು ಡೆನ್ಮಾರ್ಕ್‌ನ ಅಧಿಕಾರ ವ್ಯಾಪ್ತಿಯಲ್ಲಿದ್ದರೂ, ಭೌಗೋಳಿಕವಾಗಿ ಅಮೆರಿಕಕ್ಕೆ ಸನಿಹದಲ್ಲಿರುವುದರಿಂದ, ಭದ್ರತಾ ಹಿತಾಸಕ್ತಿಯ ಕಾರಣದಿಂದ ಅದನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವುದರಲ್ಲೇ ಶ್ರೇಯವಿದೆ ಎಂದು ಟ್ರಂಪ್ ಭಾವಿಸಿದಂತಿದೆ.

Vishwavani Editorial: ಹೊಣೆಗೇಡಿತನದ ಪರಮಾವಧಿ

Vishwavani Editorial: ಹೊಣೆಗೇಡಿತನದ ಪರಮಾವಧಿ

ಲಕ್ಷಾಂತರ ಜನರ ಆಶೋತ್ತರಗಳಿಗೆ ಸ್ಪಂದಿಸಬೇಕಾದ, ಜನಕಲ್ಯಾಣದ ಯೋಜನೆಗಳ ಜಾರಿಗೆ, ಅಭಿವೃದ್ಧಿ ಚಟುವಟಿಕೆಗಳಿಗೆ ಸರಕಾರವನ್ನು ಆಗ್ರಹಿಸಬೇಕಾದ ಮತ್ತು ಸುಶಾಸನಕ್ಕೆ ಒತ್ತು ನೀಡಬೇಕಾದ ಇಂಥ ಜನಪ್ರತಿನಿಧಿಗಳು ತಮ್ಮ ಬಾಯಿಯೆದುರು ಮೈಕು ಇದೆ ಎಂಬ ಕಾರಣಕ್ಕೆ ಔಚಿತ್ಯ ಪ್ರಜ್ಞೆಯಿಲ್ಲದೆ ಹೀಗೆ ಮಾತಾಡುವುದು ನಮ್ಮ ವ್ಯವಸ್ಥೆಯಲ್ಲಿನ ಅವ್ಯವಸ್ಥೆಗೆ ಹಿಡಿದಿರುವ ಕನ್ನಡಿಯೂ ಹೌದು.

Vishwavani Editorial: ಮಾನವ ಜೀವ ಇಷ್ಟೊಂದು ಅಗ್ಗವೇ?!

Vishwavani Editorial: ಮಾನವ ಜೀವ ಇಷ್ಟೊಂದು ಅಗ್ಗವೇ?!

ಜನರನ್ನು ರಕ್ಷಿಸುವ ಹೊಣೆ ಹೊತ್ತವರೇ ಹೀಗೆ ಜನಹತ್ಯೆಗೆ ಮುಂದಾದರೆ ಅದು ‘ಚೇಳಿಗೆ ಪಾರುಪತ್ಯ ವನ್ನು ಕೊಟ್ಟಂತೆ’ ಎಂಬ ಮಾತನ್ನು ನೆನಪಿಸುವ ನಡೆಯಾಗುತ್ತದೆ. ಆಡಳಿತಾರೂಢರ ವಿರುದ್ಧದ ಜನರ ಇಂಥ ದಂಗೆಗೆ ಕೆಲವೊಮ್ಮೆ ಬಾಹ್ಯಶಕ್ತಿಗಳ ಕುಮ್ಮಕ್ಕೂ ಇರುತ್ತದೆ ಎಂಬುದು ನಿಜವಾದರೂ, ಇರಾನ್ ವಿಷಯದಲ್ಲಿ ಆ ಗ್ರಹಿಕೆಯನ್ನು ಸಂಪೂರ್ಣ ನಂಬಲಾಗದು.

Vishwavani Editorial: ಶಾಂತಿದೂತನ ಇಬ್ಬಂದಿತನ

Vishwavani Editorial: ಶಾಂತಿದೂತನ ಇಬ್ಬಂದಿತನ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಒಂದೊಂದೇ ಬಣ್ಣಗಳು ಬಯಲಾ ಗುತ್ತಿವೆ. ಸಾಕಷ್ಟು ಅಂತಾರಾಷ್ಟ್ರೀಯ ಯುದ್ಧಗಳನ್ನು ನಿಲ್ಲಿಸಿರುವ ತಮಗೆ ನೊಬೆಲ್ ಶಾಂತಿ ಪುರಸ್ಕಾರ ದಕ್ಕಲೇಬೇಕು ಎಂದು ಇನ್ನಿಲ್ಲದಂತೆ ಹಠ ಹಿಡಿದಿದ್ದ ಟ್ರಂಪ್ ಮಹಾಶಯರು, ಆ ಕಾಲಘಟ್ಟ ಮುಗಿಯುತ್ತಿದ್ದಂತೆ ಇರಾನ್‌ನ ಅಂತಃಕಲಹದಲ್ಲಿ ಮೂಗು ತೂರಿಸುತ್ತಿದ್ದಾರೆ. ಅದಕ್ಕೆ ಇನ್ನಷ್ಟು ಪ್ರಚೋದನೆ ನೀಡುವ ಮೂಲಕ ತಾವು ಧರಿಸಿಕೊಂಡಿದ್ದ ‘ಶಾಂತಿದೂತ’ ಎಂಬ ಮುಖವಾಡವನ್ನು ತಾವೇ ಕಳಚಿಟ್ಟಿದ್ದಾರೆ.

Vishwavani Editorial: ಇರಾನ್ ಬಿಕ್ಕಟ್ಟಿಂದ ಅಮೆರಿಕಕ್ಕೇನು ಲಾಭ?

Vishwavani Editorial: ಇರಾನ್ ಬಿಕ್ಕಟ್ಟಿಂದ ಅಮೆರಿಕಕ್ಕೇನು ಲಾಭ?

ಇರಾನ್‌ನಲ್ಲಿ ಅಲ್ಲಿನ ಆರ್ಥಿಕ ದುಸ್ಥಿತಿಯ ವಿರುದ್ಧ ಶುರುವಾದ ಆಕ್ರೋಶ, ಮೌಲ್ವಿಗಳೇ ದೇಶ ಬಿಟ್ಟು ತೊಲಗಿ ಎನ್ನುವ ದನಿಯಾಗಿ ಬದಲಾಗಿದೆ. ಬುಧವಾರ ಬೆಳಗ್ಗೆ ಹೊತ್ತಿಗೆ ಸಾವಿನ ಸಂಖ್ಯೆ 2571 ದಾಟಿದೆ ಎಂದು ವರದಿಗಳಾಗಿವೆ. ಈ ಪ್ರತಿಭಟನೆಗೆ ಅಮೆರಿಕದ ನೇರ ಬೆಂಬಲವಿದೆ ಎನ್ನುವುದು ಜಗಜ್ಜಾಹೀ ರಾಗಿದೆ. ಸ್ವತಃ ಟ್ರಂಪ್ ಹೋರಾಟ ನಿಲ್ಲಿಸಬೇಡಿ ಎಂದು ಜನರಿಗೆ ಕರೆ ನೀಡಿದ್ದಾರೆ.

Vishwavani Editorial: ಡಿಜಿಟಲ್ ಗುಮ್ಮನ ಕಾಟ

Vishwavani Editorial: ಡಿಜಿಟಲ್ ಗುಮ್ಮನ ಕಾಟ

ದೆಹಲಿಯ ವಯೋವೃದ್ಧ ವೈದ್ಯ ದಂಪತಿ ಇದಕ್ಕೆ ಬಲಿಪಶುವಾಗಿರುವುದು ‘ವರದಿಯಾಗಿರುವ’ ಇತ್ತೀಚಿನ ನಿದರ್ಶನ; ವರದಿಯಾಗದೇ ಇರುವುದು ಇನ್ನೆಷ್ಟೋ? ಇವರಿಬ್ಬರೂ ವಿಶ್ವಸಂಸ್ಥೆಗಾಗಿ ಅಮೆರಿಕದಲ್ಲಿ 48 ವರ್ಷಗಳ ಕಾಲ ವೈದ್ಯಕೀಯ ಸೇವೆಯಲ್ಲಿದ್ದು ನಿವೃತ್ತಿ ಬಳಿಕ ದೆಹಲಿಯಲ್ಲಿ ನೆಲೆಗೊಂಡು ಸಮಾಜಸೇವೆಯಲ್ಲಿ ತೊಡಗಿದ್ದವರು ಎನ್ನುತ್ತದೆ ಸುದ್ದಿ.

Vishwavani Editorial: ಐಲುದೊರೆಯ ಅಧಿಕ ಪ್ರಸಂಗ

Vishwavani Editorial: ಐಲುದೊರೆಯ ಅಧಿಕ ಪ್ರಸಂಗ

ಪ್ರಸ್ತುತ ಟ್ರಂಪ್ ಮಹಾಶಯರು ತೊಡಗಿಸಿಕೊಂಡಿರುವುದು ಇಂಥ ‘ಸ್ವೀಕಾರಾರ್ಹವಲ್ಲದ’ ಕಾರ್ಯ ಗಳಲ್ಲೇ. ಅಮೆರಿಕಕ್ಕೆ ತೆರಳುವವರು ಪಡೆಯಬೇಕಾಗುವ ವೀಸಾದ ವಾರ್ಷಿಕ ಶುಲ್ಕವನ್ನು ಅತಿರೇಕದ ಮಟ್ಟಕ್ಕೆ ಏರಿಸಿ ಹಲವರ ಹುಬ್ಬೇರಿಸಿದ್ದ ಟ್ರಂಪ್, ಕೆಲ ತಿಂಗಳ ಹಿಂದೆ ‘ಸುಂಕ ಸಮರ’ಕ್ಕೂ ಮುಂದಾ ಗಿದ್ದನ್ನು ಜಗತ್ತೇ ಕಂಡಿದೆ.

Vishwavani Editorial: ಕೃತಘ್ನರಿಗೆ ತಕ್ಕ ಉತ್ತರವಿದು

Vishwavani Editorial: ಕೃತಘ್ನರಿಗೆ ತಕ್ಕ ಉತ್ತರವಿದು

ಹಿಂದೂಗಳನ್ನು ಮತ್ತು ಭಾರತವನ್ನು ಗುರಿಯಾಗಿಸಿಕೊಂಡ ಪ್ರತಿಭಟನೆಗಳು ನೆರೆ ರಾಷ್ಟ್ರ ಬಾಂಗ್ಲಾದೇಶದಲ್ಲಿ ಹೆಚ್ಚುತ್ತಲೇ ಇವೆ. ಇಷ್ಟು ಸಾಲದೆಂಬಂತೆ, ಬಾಂಗ್ಲಾದ ಒಂದಿಷ್ಟು ತಥಾ ಕಥಿತ ನಾಯಕರು ಗಡಿಭಾಗದ ‘ಚಿಕನ್ ನೆಕ್’ ಪ್ರದೇಶದ ಕುರಿತು ಉಲ್ಲೇಖಿಸಿ, ಈಶಾನ್ಯ ಭಾರತದ ಜತೆಗಿನ ಸಂಪರ್ಕವನ್ನೇ ತುಂಡರಿಸುವುದಾಗಿ ಭಾರತಕ್ಕೆ ಗೊಡ್ಡು ಬೆದರಿಕೆ ಹಾಕಿದ್ದರು.

Vishwavani Editorial: ದೂರದಿಂದಲೇ ಜೀವ ಹಿಂಡುತಿದೆ...

Vishwavani Editorial: ದೂರದಿಂದಲೇ ಜೀವ ಹಿಂಡುತಿದೆ...

ದೀಪು ಚಂದ್ರ ದಾಸ್, ಅಮೃತ್ ಮೊಂಡಲ್ ಎಂಬಿಬ್ಬರ ಮೇಲೆ ಉದ್ರಿಕ್ತ ಮುಸ್ಲಿಮರ ಗುಂಪು ಹೀಗೆಯೇ ಘೋರದಾಳಿ ನಡೆಸಿ ಬರ್ಬರವಾಗಿ ಹತ್ಯೆಗೈದಿದ್ದದನ್ನು ಮರೆಯು ವಂತಿಲ್ಲ. ಖೋಕೋನ್ ದಾಸ್ ಎಂಬುವವರೂ ಮಾರಕ ದಾಳಿಗೆ ತುತ್ತಾಗಿದ್ದು, ಚೇತರಿಸಿಕೊಳ್ಳಲು ಇನ್ನೂ ಸಾಕಷ್ಟು ದಿನಗಳು ಬೇಕಾಗುತ್ತವೆ ಎನ್ನಲಾಗುತ್ತಿದೆ.

Vishwavani Editorial: ಅಕಟಕಟಾ, ಜೈಲಿನಲ್ಲೂ ವೈಭೋಗ!

Vishwavani Editorial: ಅಕಟಕಟಾ, ಜೈಲಿನಲ್ಲೂ ವೈಭೋಗ!

ಬದಲಾದ ಕಾಲ ಘಟ್ಟದಲ್ಲಿ ಜೈಲುಗಳಲ್ಲಿ ‘ಪ್ರಭಾವಿ’ ಕೈದಿಗಳಿಗೆ ರಾಜವೈಭೋಗ ಸದೃಶ ವಾಗಿರುವ ಸೇವೆ ಸಲ್ಲುತ್ತಿರುವುದು ಒಂದೊಂದಾಗಿ ವರದಿಯಾಗುತ್ತಿದೆ. ಕಲಬುರ್ಗಿಯ ಕೇಂದ್ರ ಕಾರಾಗೃಹದಲ್ಲಿ ಸಿಗರೇಟು-ಮದ್ಯ ಸರಬರಾಜಿಗೆ, ಇಸ್ಪೀಟು ಆಟಕ್ಕೆ ಎಡೆಮಾಡಿಕೊಡಲಾಗಿದೆಯೇ ಎಂಬ ಸಂಶಯಕ್ಕೆ ಎಡೆಮಾಡಿ ಕೊಡುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು ಇದರ ತಥ್ಯವನ್ನು ಸಂಬಂಧ ಪಟ್ಟವರು ಹೊರಗೆಡಹಬೇಕಿದೆ.

Vishwavani Editorial: ಆನಂದದ ಸೆಲೆಯೊಂದು ಜಿನುಗಲಿ

Vishwavani Editorial: ಆನಂದದ ಸೆಲೆಯೊಂದು ಜಿನುಗಲಿ

ಹೊಸ ವರ್ಷಾಚರಣೆ ಯಾವತ್ತೂ ಅತಿರೇಕಕ್ಕೆ ಹೋಗಿ ನಮ್ಮ ಜೀವನದ ನಾಶದವರೆಗೆ ಹೋಗಬಾರದು. ಹೊಸವರ್ಷದಲ್ಲಿ ಹಳೆಯ ತಪ್ಪುಗಳನ್ನು ಮುಂದುವರಿಸಬಾರದು, ನಮ್ಮದೇ ಗುಣಮಟ್ಟವನ್ನು ವೃದ್ಧಿಸಿ ಕೊಳ್ಳಬೇಕು. ಹೊಸ ಸಂಬಂಧಗಳನ್ನು ಶುರು ಮಾಡುವುದು ಎಷ್ಟು ಮುಖ್ಯವೋ ಸಂಬಂಧಗಳನ್ನು ಅಷ್ಟೇ ಹದವಾಗಿ ಕಾಪಾಡಿಕೊಳ್ಳುವುದು ಅಗತ್ಯ.

Vishwavani Editorial: ದಿನಪತ್ರಿಕೆ ಓದುವ ಅಭ್ಯಾಸ

Vishwavani Editorial: ದಿನಪತ್ರಿಕೆ ಓದುವ ಅಭ್ಯಾಸ

ಶಾಲೆಗಳಲ್ಲಿ ಮುಂಜಾನೆಯ ಪ್ರಾರ್ಥನೆ ಮತ್ತು ರಾಷ್ಟ್ರಗೀತೆ ಗಾಯನದ ಸಂದರ್ಭದಲ್ಲಿ, ಅಂದಿನ ದಿನಪತ್ರಿಕೆಯಲ್ಲಿ ಪ್ರಕಟವಾಗಿರುವ ಪ್ರಮುಖ ಸುದ್ದಿಗಳನ್ನು/ಸುದ್ದಿ ಶೀರ್ಷಿಕೆಗಳನ್ನು ದಿನಕ್ಕೊಬ್ಬ ವಿದ್ಯಾರ್ಥಿಯಿಂದ ಓದಿಸುವ ಪರಿಪಾಠ ಬಹುತೇಕ ಶಾಲೆಗಳಲ್ಲಿದೆ. ಆದರೆ ಇದು ‘ಹತ್ತರಲ್ಲಿ ಹನ್ನೊಂದು’ ಎಂಬಂಥ ಚಟುವಟಿಕೆ ಆಗಿ ಬಿಟ್ಟಿದೆಯೇ ವಿನಾ, ಸಾಕಷ್ಟು ವಿದ್ಯಾರ್ಥಿಗಳು ಇದರ ಮಹತ್ವವನ್ನು ಗಂಭೀರವಾಗಿ ಪರಿಗಣಿಸಿದಂತಿಲ್ಲ

Vishwavani Editotial: ಸ್ವಯಂವೈದ್ಯ ಸರ್ವಥಾ ಸಲ್ಲ

Vishwavani Editotial: ಸ್ವಯಂವೈದ್ಯ ಸರ್ವಥಾ ಸಲ್ಲ

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇತ್ತೀಚೆಗೆ ತಮ್ಮ ‘ಮನ್ ಕಿ ಬಾತ್’ ರೇಡಿಯೋ ಕಾರ್ಯಕ್ರಮ ದಲ್ಲಿ ಮಾತನಾಡುತ್ತಾ, ‘ಆರೋಗ್ಯ ಕೆಟ್ಟಾಗ ನಮ್ಮಲ್ಲಿ ಅನೇಕ ಮಂದಿಗೆ ಸ್ವಯಂ ವೈದ್ಯ ಮಾಡಿಕೊಳ್ಳುವ ರೂಢಿ ಇದೆ, ಇದು ಬಹಳ ಅಪಾಯಕಾರಿ’ ಎಂಬ ಗಮನ ಸೆಳೆಯುವ ಮಾತನ್ನಾಡಿದ್ದಾರೆ. ಇದು ಅಕ್ಷರಶಃ ಸತ್ಯ.

Vishwavani Editorial: ಉಗ್ರರಿದ್ದಾರೆ, ನಿರ್ಲಕ್ಷ್ಯ ಸಲ್ಲ

Vishwavani Editorial: ಉಗ್ರರಿದ್ದಾರೆ, ನಿರ್ಲಕ್ಷ್ಯ ಸಲ್ಲ

ಪಾಕಿಸ್ತಾನ ಮೂಲದ ‘ಲಷ್ಕರ್-ಎ-ತೈಬಾ’ (ಎಲ್‌ಇಟಿ) ಉಗ್ರಗಾಮಿ ಸಂಘಟನೆಗೆ ಸೇರಿದ ಇಬ್ಬರು ಉಗ್ರರು ದಕ್ಷಿಣ ಕಾಶ್ಮೀರ ಭಾಗದಲ್ಲಿ ನಿರಾಳವಾಗಿ ಮತ್ತು ರಾಜಾರೋಷವಾಗಿ ಓಡಾಡಿಕೊಂಡಿರುವುದನ್ನು ವ್ಯಾಪಾರದ ಮಳಿಗೆಯೊಂದರ ಸಿಸಿಟಿವಿ ಕ್ಯಾಮೆರಾ ಸೆರೆ ಹಿಡಿದಿರುವ ಸುದ್ದಿ ಬಂದಿದೆ. ‘ಮೀನಿನ ಹೆಜ್ಜೆಯ ಜಾಡನ್ನಾದರೂ ಕಂಡುಹಿಡಿಯಬಹುದು, ಆದರೆ ಕುತ್ಸಿತ ಜನರ ದುರಾಲೋಚನೆಗಳನ್ನು ಮುಂಚಿತ ವಾಗಿ ಲೆಕ್ಕಿಸುವುದು ಕಷ್ಟ’ ಎಂಬ ಮಾತನ್ನು ಗಮನದಲ್ಲಿಟ್ಟು ಕೊಂಡು, ಈ ಬೆಳವಣಿಗೆಯನ್ನು ಹದ್ದಿನ ಕಣ್ಣುಗಳಿಂದ ವಿಶ್ಲೇಷಿಸಬೇಕಾದ ಅಗತ್ಯವಿದೆ.

Vishwavani Editorial: ಉಗ್ರವಾದಕ್ಕೂ ಇದೇ ಗತಿಯಾಗಲಿ

Vishwavani Editorial: ಉಗ್ರವಾದಕ್ಕೂ ಇದೇ ಗತಿಯಾಗಲಿ

ಪಹಲ್ಗಾಮ್ ಹತ್ಯಾಕಾಂಡ, ಇಸ್ರೇಲ್‌ನ ‘ನೋವಾ’ ಸಂಗೀತೋತ್ಸವದ ವೇಳೆ ಘಟಿಸಿದ ಉಗ್ರದಾಳಿ ಹಾಗೂ ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ಮಾರ್ದನಿಸಿದ ಭಯೋತ್ಪಾದಕರ ಹೇಷಾರವ ಇವೆಲ್ಲವೂ ಜಾಗತಿಕ ಸಮುದಾಯದ ಮನವನ್ನು ಇನ್ನಿಲ್ಲದಂತೆ ಕಲಕಿರುವ ಘೋರ ಘಟನೆಗಳೇ. ಪ್ರಸ್ತುತ ಜಗತ್ತಿಗೆ ಬೇಕಿರುವುದು ಬುಲೆಟ್ಟು-ಬಾಂಬುಗಳ ಅಬ್ಬರವಲ್ಲ

Loading...