ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸಂಪಾದಕೀಯ

Vishwavani Editorial: ಕಾನೂನು ಎಲ್ಲರಿಗೂ ಒಂದೇ

Vishwavani Editorial: ಕಾನೂನು ಎಲ್ಲರಿಗೂ ಒಂದೇ

ಪ್ರಭಾವಿಗಳೆಂಬ ಕಾರಣಕ್ಕೆ ಕಾನೂನಿನ ಕಬಂಧಬಾಹುಗಳಿಂದ ಇವರು ತಪ್ಪಿಸಿಕೊಳ್ಳಬಹುದು ಎಂಬ ಆಕ್ರೋಶ-ಅಸಮಾಧಾನಭರಿತ ಅಭಿಪ್ರಾಯಗಳೂ ಅವರಿಂದ ವ್ಯಕ್ತವಾಗಿದ್ದುಂಟು. ಆದರೀಗ ಲಭ್ಯವಾಗಿ ರುವ ಮಾಹಿತಿಯ ಪ್ರಕಾರ ಈ ಉದ್ಯಮಿಗಳಿಬ್ಬರ ಗಡಿಪಾರಿಗೆ ಸಮ್ಮತಿ ಸಿಕ್ಕಿರುವುದರಿಂದ ಹಿಂದೆ ಹೀಗೆ ಅನುಮಾನಿಸಿದ್ದವರಿಗೆ ಸಮಾಧಾನವಾಗಿದೆ.

Vishwavani Editorial: ಮೂಗು ಹಿಡಿದರೆ ಬಾಯಿ ಓಪನ್!

Vishwavani Editorial: ಮೂಗು ಹಿಡಿದರೆ ಬಾಯಿ ಓಪನ್!

ಭಾರಿ ಸುಂಕ ಹೇರಿದ್ದಕ್ಕೆ ವಿಶ್ವದ ಮಿಕ್ಕ ದೇಶಗಳಂತೆಯೇ ಭಾರತವೂ ಅಮೆರಿಕಕ್ಕೆ ದುಂಬಾಲು ಬಿದ್ದು ಸುಂಕವನ್ನು ತಗ್ಗಿಸುವಂತೆ ಕೋರುತ್ತದೆ ಎಂದೇ ಲೆಕ್ಕಿಸಿದ್ದರು ಟ್ರಂಪ್. ಆದರೆ ಭಾರತ ಈ ಬೆಳವಣಿಗೆಗೆ ‘ಕ್ಯಾರೇ’ ಎನ್ನಲಿಲ್ಲ. ಸಾಲದೆಂಬಂತೆ, ಟ್ರಂಪ್ ಮಾತಾಡಲೆಂದು ೪ ಬಾರಿ ಕರೆ ಮಾಡಿದಾಗಲೂ ಮೋದಿ ‘ನಾಟ್ ರೀಚಬಲ್’ ಆಗಿಬಿಟ್ಟರು! ಕಾರಣ, ‘ಮೂಗನ್ನು ಗಟ್ಟಿ ಯಾಗಿ ಹಿಡಿದರೆ, ಬಾಯಿ ತಾನಾಗೇ ತೆರೆದುಕೊಳ್ಳುತ್ತದೆ’ ಎಂಬುದು ಮೋದಿಯವರಿಗೆ ಗೊತ್ತಿತ್ತು.

Vishwavani Editorial: ಆಪ್ತಮಿತ್ರನ ಸಾಂಗತ್ಯ ಸಾಕು

Vishwavani Editorial: ಆಪ್ತಮಿತ್ರನ ಸಾಂಗತ್ಯ ಸಾಕು

‘ವಿಶ್ವದ ದೊಡ್ಡಣ್ಣ ಎನಿಸಿಕೊಂಡ ಅಮೆರಿಕದ ಕಣ್ಣ ಇಶಾರೆಗೆ ತಕ್ಕಂತೆಯೇ ನಡೆದುಕೊಳ್ಳಬೇಕು, ಅಮೆರಿಕ ಮುನಿದರೆ ಅಪಾಯ ಕಟ್ಟಿಟ್ಟಬುತ್ತಿ’ ಎಂಬುದು ತೀರಾ ಇತ್ತೀಚಿನ ವರ್ಷಗಳವರೆಗೆ ವಿಶ್ವದ ಕೆಲ ರಾಷ್ಟ್ರಗಳಲ್ಲಿ ಕಾಣಬರುತ್ತಿದ್ದ ಸ್ಥಾಯೀಭಾವ. ಇಂಥದೊಂದು ಗ್ರಹಿಕೆಯ ಗುಮ್ಮನನ್ನು ಮುಂದಿಟ್ಟು ಕೊಂಡೇ ಅಮೆರಿಕದ ಅಧ್ಯಕ್ಷರು ‘ವಿಶ್ವ ರಾಜಕೀಯ ರಂಗ’ದಲ್ಲಿ ಕಾಲಾನುಕಾಲಕ್ಕೆ ಜಗನ್ನಾಟಕವನ್ನು ಆಡಿದ್ದಿದೆ.

Vishwavani Editorial: ಇಸ್ರೋ ಸಾಧನೆಗೆ ಇನ್ನೊಂದು ಗರಿ

Vishwavani Editorial: ಇಸ್ರೋ ಸಾಧನೆಗೆ ಇನ್ನೊಂದು ಗರಿ

ಎಲೆಕ್ಟ್ರಾನಿಕ್ ಜಗತ್ತಿನಲ್ಲಿ ಚಿಪ್‌ಗೆ ಕಪ್ಪು ಚಿನ್ನ ಎಂದು ಹೇಳಲಾಗುತ್ತದೆ, ಚಿಪ್‌ಗಳು ಡಿಜಿಟಲ್ ವಜ್ರ ಗಳಾಗಿವೆ. ಇದುವರೆಗೆ ಜಗತ್ತು ಈ ವಜ್ರಕ್ಕಾಗಿ ಬಹುತೇಕ ಚೀನಾವನ್ನೇ ಅವಲಂಬಿಸಿದೆ. ದೆಹಲಿಯಲ್ಲಿ ನಡೆದ ಸೆಮಿಕಾನ್ ಇಂಡಿಯಾ ಸಭೆ ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ದೇಶದ ಪ್ರಗತಿಗೆ ಒತ್ತು ನೀಡುವ ನಿರೀಕ್ಷೆ ಇದೆ.

Vishwavani Editorial: ಬರುವುದಕ್ಕೆ ಮುಖವೆಲ್ಲಿದೆ?!

Vishwavani Editorial: ಬರುವುದಕ್ಕೆ ಮುಖವೆಲ್ಲಿದೆ?!

ಭಾರತ ಮತ್ತು ಪಾಕ್ ನಡುವಿನ ಸಂಘರ್ಷವನ್ನು ನಿಲ್ಲಿಸಿದ್ದು ತಾವೇ ಎಂದು ಟ್ರಂಪ್ ತುತ್ತೂರಿ ಊದಲು ಶುರು ಹಚ್ಚಿಕೊಂಡಾಗಿನಿಂದ ದ್ವಿಪಕ್ಷೀಯ ಸಂಬಂಧದಲ್ಲಿ ಬಿರುಕು ಕಾಣಿಸಿಕೊಳ್ಳಲಾರಂಭಿಸಿತು. ನಂತರ ಟ್ರಂಪ್ ಅತಿರೇಕದ ಸುಂಕವನ್ನು ಹೇರಿದ್ದರಿಂದಾಗಿ ಈ ಬಿರುಕು ಇನ್ನಷ್ಟು ದೊಡ್ಡದಾಯಿತು.

Vishwavani Editorial: ಟ್ರಂಪ್ ನಡೆದದ್ದೇ ದಾರಿಯಲ್ಲ!

Vishwavani Editorial: ಟ್ರಂಪ್ ನಡೆದದ್ದೇ ದಾರಿಯಲ್ಲ!

ಪ್ರಾಯಶಃ ಟ್ರಂಪ್ ಮಹಾಶಯರಿಗೆ ಇದಕ್ಕಿಂತ ಮಿಗಿಲಾದ ಛೀಮಾರಿಯ ಅಗತ್ಯವಿಲ್ಲ ಎನಿಸುತ್ತದೆ. ಅನ್ಯದೇಶಗಳು ಟ್ರಂಪ್‌ರೆಡೆಗೆ ಅಸಮಾಧಾನವನ್ನು ತೋರುವುದು ಒತ್ತಟ್ಟಿಗಿರಲಿ, ಸ್ವದೇಶದಲ್ಲಿಯೇ ಅವರೆಡೆಗೆ ಹೀಗೆ ಅಪಸ್ವರ ಹೊಮ್ಮಿರುವುದು ಗಮನಾರ್ಹ. ಟ್ರಂಪ್ ಇನ್ನಾದರೂ ತಮ್ಮ ತಪ್ಪನ್ನು ತಿದ್ದಿಕೊಳ್ಳುತ್ತಾರಾ ಎಂಬುದನ್ನು ಕಾದುನೋಡಬೇಕು.

Vishwavani Editorial: ಸಂಚುಕೋರರ ದಮನವಾಗಲಿ

Vishwavani Editorial: ಸಂಚುಕೋರರ ದಮನವಾಗಲಿ

ಚುನಾವಣೆಗಳ ಸಂದರ್ಭದಲ್ಲಿ ಅನಪೇಕ್ಷಿತ ಗಾಳಿ ಸುದ್ದಿಗಳು ಹಬ್ಬಿ, ರಾಜಕೀಯ ಬಣಗಳ ನಡುವಿನ ಸಂಘರ್ಷದ ಬೆಂಕಿಯು ಮತ್ತಷ್ಟು ಪ್ರಜ್ವಲವಾಗಿ ಉರಿಯುವುದಕ್ಕೂ ಇಂಥ ಕುತ್ಸಿತ ಶಕ್ತಿಗಳು ಎಣ್ಣೆ ಯನ್ನು ಸುರಿಯುತ್ತವೆ ಎಂಬುದು ಗೊತ್ತಿರುವಂಥದ್ದೇ. ಅದರಲ್ಲೂ ನಿರ್ದಿಷ್ಟವಾಗಿ, ದೇಶ ವಿಭಜನೆ ಯಾದಾಗಿನಿಂದಲೂ ಭಾರತದ ಮೇಲೆ ಕಿಡಿಕಾರುತ್ತಲೇ ಬಂದಿರುವ ಮಗ್ಗುಲ ಮುಳ್ಳು ದೇಶ ಪಾಕಿಸ್ತಾನ ವು ಇಂಥ ಸಂದರ್ಭಕ್ಕಾಗಿಯೇ ಕಾಯುತ್ತಿರುತ್ತದೆ.

Vishwavani Editorial: ಇದು ನಿಜನಾಯಕನ ತಾಕತ್ತು

Vishwavani Editorial: ಇದು ನಿಜನಾಯಕನ ತಾಕತ್ತು

ಪ್ರಧಾನಿ ನರೇಂದ್ರ ಮೋದಿಯ ವರೊಂದಿಗೆ ಮಾತುಕತೆ ನಡೆಸಲು ಟ್ರಂಪ್ 4 ಬಾರಿ ದೂರವಾಣಿ ಕರೆ ಮಾಡಿದ್ದರೂ, ಅವರಿಗೆ ‘ನಾಟ್ ರೀಚಬಲ್’ ಆಗಿದ್ದಾರೆ ಮೋದಿ! ಹೀಗಾಗಿ, ‘ಭಾರತದ ಮನವೊಲಿಸುವ ಟ್ರಂಪ್ ಅವರ ಕೊನೆಯ ಕ್ಷಣದ ಕಸರತ್ತು ವಿಫಲವಾಗಿರುವುದರ ದ್ಯೋತಕವಿದು’ ಎಂದೇ ರಾಜಕೀಯ ಪಂಡಿತರು ವ್ಯಾಖ್ಯಾನಿಸುತ್ತಿದ್ದಾರಂತೆ.

Vishwavani Editorial: ಸನಾತನಿಗಳು ಜಾಗೃತರಾಗಲಿ

Vishwavani Editorial: ಸನಾತನಿಗಳು ಜಾಗೃತರಾಗಲಿ

ಮನೆಯಲ್ಲಿ ಪೂಜಿಸುವ ಗಣಪನಿಂದ ಹಿಡಿದು ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸಲ್ಪಡುವ ‘ಊರ ಗಣಪತಿ’ಯವರೆಗಿನ ಸಜ್ಜಿಕೆಗಳೆಲ್ಲದಕ್ಕೂ ಈ ಮಾತು ಅನ್ವಯ. ಬ್ರಿಟಿಷರ ಬಿಗಿಮುಷ್ಟಿಯಲ್ಲಿ ಸಿಲುಕಿ, ದಾಸ್ಯದ ಸಂಕೋಲೆಯನ್ನು ಕಾಲಿಗೆ ಬಿಗಿಸಿಕೊಂಡಿದ್ದ ಭಾರತವನ್ನು ಅದರಿಂದ ಬಿಡಿಸುವ ಮಾರ್ಗೋ ಪಾಯಗಳ ಕುರಿತು ಆಲೋಚಿಸುತ್ತಿದ್ದ ಲೋಕಮಾನ್ಯ ಬಾಲಗಂಗಾಧರ ತಿಲಕರಿಗೆ ಹೊಳೆದ ಪರಿಕಲ್ಪನೆ ಯೇ ‘ಸಾರ್ವಜನಿಕ ಗಣೇಶೋತ್ಸವ’.

Vishwavani Editorial: ಇದು ವಿಶ್ವದ ಎಷ್ಟನೇ ಅದ್ಭುತ?!

Vishwavani Editorial: ಇದು ವಿಶ್ವದ ಎಷ್ಟನೇ ಅದ್ಭುತ?!

ಬಿಹಾರ ರಾಜ್ಯದ ಮತದಾರರ ಪಟ್ಟಿಯಲ್ಲಿ ಪಾಕಿಸ್ತಾನದ ಇಬ್ಬರು ಮಹಿಳೆಯರ ಹೆಸರಿರುವ, ಅವರಿ ಬ್ಬರೂ ದಶಕಗಳಿಂದ ಹತ್ತಾರು ಚುನಾವಣೆಗಳಲ್ಲಿ ಮತದಾನ ಮಾಡಿರುವ ಸುದ್ದಿಯನ್ನು ನೀವು ಈಗಾ ಗಲೇ ಓದಿದ್ದೀರಿ. ಇವರಿಬ್ಬರ ಬಳಿ ಮತದಾರರ ಗುರುತಿನ ಚೀಟಿ, ಆಧಾರ್ ಗುರುತಿನ ಚೀಟಿಗಳೂ ಇವೆಯಂತೆ.

Vishwavani Editorial: ಸಮನ್ವಯತೆ ಸಾಧಿಸಬೇಕು

Vishwavani Editorial: ಸಮನ್ವಯತೆ ಸಾಧಿಸಬೇಕು

ಒಂದು ಕಾಲಕ್ಕೆ ಬೆಂಗಳೂರು ಪಡೆದುಕೊಂಡಿದ್ದ ‘ಉದ್ಯಾನ ನಗರಿ’ ಎಂಬ ಹೆಸರಿಗೆ ಕಾಲಕ್ರಮೇಣ ಸಂಚಕಾರ ಒದಗಿ ‘ಕಾಂಕ್ರೀಟ್ ಜಂಗಲ್’ ಎಂಬ ಹಣೆಪಟ್ಟಿ ಏರಿಕೊಳ್ಳುವಂತಾಯಿತು ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಹಾಗಾದರೆ ಅಭಿವೃದ್ಧಿ ಚಟುವಟಿಕೆಗಳನ್ನು ಕೈಬಿಡಬೇಕೇ? ಅದನ್ನು ನೆಚ್ಚಿ ರುವ ಆರ್ಥಿಕ ಚಟುವಟಿಕೆಗಳನ್ನು ಮೂಲೆಗುಂಪು ಮಾಡಬೇಕೇ? ಎಂಬ ಪ್ರಶ್ನೆ ಇಲ್ಲಿ ಉದ್ಭವಿಸು ತ್ತದೆ.

Vishwavani Editorial: ಸನಾತನ ಎಂದರೆ ಸದರವೇ?

Vishwavani Editorial: ಸನಾತನ ಎಂದರೆ ಸದರವೇ?

ತಮಿಳುನಾಡಿನ ಉದ್ದಗಲಕ್ಕೂ ಹಾಸುಹೊಕ್ಕಾಗಿರುವ ದೇವಾಲಯಗಳಿಂದ ಹರಿದು ಬರುವ ಆದಾಯ ವನ್ನು ಮಡಿಲಿಗೆ ತುಂಬಿಸಿಕೊಳ್ಳುವಲ್ಲಿ ಯಾವುದೇ ಲಜ್ಜೆಯಿಲ್ಲದ ಅವರ ಸರಕಾರಕ್ಕೆ, ಆ ದೇವಾಲಯ ಗಳಿಗೆ ಆಧಾರವಾಗಿರುವ ಸನಾತನ ಧರ್ಮದ ಮೇಲೆ ಕೆಂಗಣ್ಣೇಕೋ ಎಂಬುದು ಅರ್ಥವಾಗದ ಪ್ರಶ್ನೆ. ಅವರ ಈ ನಡೆಯು ಅನುಕೂಲಸಿಂಧು ರಾಜಕಾರಣದ ಮತ್ತೊಂದು ಮಗ್ಗುಲೂ ಆಗಿರಬೇಕು, ಇರಲಿ ಬಿಡಿ.

Vishwavani Editorial: ಸ್ವಾತಂತ್ರ್ಯದ ಹಣತೆ ಬೆಳಗುತ್ತಿರಲಿ

Vishwavani Editorial: ಸ್ವಾತಂತ್ರ್ಯದ ಹಣತೆ ಬೆಳಗುತ್ತಿರಲಿ

ಭಾರತೀಯರ ಹೃದಯದಲ್ಲಿ ಇಂದು ಕನಸುಗಳಿವೆ. ಕಣ್ಣಲ್ಲಿ ಬೆಳಕಿದೆ. ವಿಶ್ವಕ್ಕೆ ಬೆಳಕು ತೋರುವ ಭರವಸೆಗಳಿವೆ. ಸರಕಾರ ದೇಶದ ಯುವಶಕ್ತಿಯ ಆಶೋತ್ತರಗಳಿಗೆ ಒತ್ತಾಸೆಯಾಗಿ ನಿಂತರೆ ಈ ದೇಶವನ್ನು ಉನ್ನತಿಯ ಶೃಂಗಕ್ಕೆ ಒಯ್ಯುವುದು ಕಷ್ಟವೇನಲ್ಲ. ಆದರೆ ಅದಕ್ಕೆ ಮುನ್ನ ಪ್ರತಿಯೊಬ್ಬ ಪ್ರಜೆಗೂ ಸ್ವಾತಂತ್ರ್ಯ ದಿನದ ಮಹತ್ವ ಅರಿವಾಗಬೇಕು. ಇದು ಕೇವಲ ಬಾವುಟ ಹಾರಿಸುವ ದಿನವಲ್ಲ. ಪ್ರತಿಯೊಬ್ಬ ಭಾರತೀಯ ದೇಶಕ್ಕಾಗಿ ಮರು ಸಮರ್ಪಣೆ ಮಾಡಿಕೊಳ್ಳುವ ದಿನ.

Vishwavani Editorial: ಈ ಸಹಯೋಗ ಅನಿವಾರ್ಯ

Vishwavani Editorial: ಈ ಸಹಯೋಗ ಅನಿವಾರ್ಯ

ಭಾರತವನ್ನು ದಮನಿಸುವುದೇ ಈಗ ಅವರ ಪಾಲಿನ ‘ಒಂದಂಶದ ಕಾರ್ಯಕ್ರಮ’. ಇದನ್ನು ಸಾಕಾರ ಗೊಳಿಸಲೆಂದು ನಮ್ಮ ಮಗ್ಗುಲುಮುಳ್ಳು ದೇಶ ಪಾಕಿಸ್ತಾನದೊಂದಿಗೆ ಟ್ರಂಪ್ ಒಡನಾಟವನ್ನು ಶುರುವಿಟ್ಟುಕೊಂಡಿದ್ದಾರೆ. ಅಮೆರಿಕದ ಆಳುಗರ ಸ್ವಹಿತಾಸಕ್ತಿಯ ಧೋರಣೆಗಳನ್ನೂ ನವರಂಗಿ ಆಟಗಳನ್ನೂ ದಶಕಗಳಿಂದಲೂ ನೋಡಿಕೊಂಡು ಬಂದಿರುವ ಭಾರತವು ಈ ಬೆಳವಣಿಗೆ ಯಿಂದೇನೂ ವಿಚಲಿತಗೊಂಡಿಲ್ಲ.

Vishwavani Editorial: ಸೂಕ್ತ ಮಾಹಿತಿ ದೊರೆಯಲಿ

Vishwavani Editorial: ಸೂಕ್ತ ಮಾಹಿತಿ ದೊರೆಯಲಿ

ಒಂದು ಕಾಲದಲ್ಲಿ ಸಂಗೀತ ಪ್ರೇಮಿಗಳು ರೇಡಿಯೋಗೆ ಹೊರತಾಗಿ ನೆಚ್ಚಿದ್ದು ‘ಗ್ರಾಮಾಫೋನ್’ ಪ್ಲೇಟು ಗಳನ್ನು. ತರುವಾಯದಲ್ಲಿ ಧ್ವನಿಮುದ್ರಣ ಕ್ಷೇತ್ರದಲ್ಲಿ ‘ಕ್ಯಾಸೆಟ್ ಕ್ರಾಂತಿ’ಯಾದಾಗ, ಗ್ರಾಮಾ ಫೋನ್ ಪ್ಲೇಟುಗಳು ಹಂತಹಂತವಾಗಿ ತಮ್ಮ ಅಸ್ತಿತ್ವವನ್ನು ಕಳೆದುಕೊಂಡವು. ಕೆಲ ವರ್ಷಗಳ ವರೆಗೆ ‘ಕ್ಯಾಸೆಟ್’ ದರ್ಬಾರು ನಡೆಯಿತಾದರೂ, ನಂತರ ದಾಪುಗಾಲಿಟ್ಟು ಬಂದ ‘ಕಾಂಪ್ಯಾಕ್ಟ್ ಡಿಸ್ಕ್’ (ಸಿಡಿ) ಮತ್ತು ‘ಡಿಜಿಟಲ್ ವರ್ಸಟೈಲ್ ಡಿಸ್ಕ್’ (ಡಿವಿಡಿ) ಅಬ್ಬರದಿಂದಾಗಿ ಕ್ಯಾಸೆಟ್ ಮೂಲೆಗುಂಪಾಯಿತು.

Vishwavani Editorial: ಧರೆ ಹೊತ್ತಿ ಉರಿದರೆ ನಿಲ್ಲಲಾಗದು..

Vishwavani Editorial: ಧರೆ ಹೊತ್ತಿ ಉರಿದರೆ ನಿಲ್ಲಲಾಗದು..

ಹಿಮಾಚಲ ಪ್ರದೇಶದಲ್ಲೂ ಮೇಘಸ್ಫೋಟ ಸಂಭವಿಸಿದೆ. ಅಲ್ಲಿನ ಕುಲು ಜಿಲ್ಲೆ ಸೇರಿದಂತೆ ಹಲವು ಭಾಗ ಗಳಲ್ಲಿ ಈಗಾಗಲೇ 350ಕ್ಕೂ ಹೆಚ್ಚು ರಸ್ತೆಗಳು ಮುಚ್ಚಿಹೋಗಿರುವ, ಹತ್ತತ್ತಿರ 600 ವಿದ್ಯುತ್ ಟ್ರಾನ್ಸ್ ಫಾರ್ಮರ್‌ಗಳಿಗೆ ಹಾನಿಯಾಗಿರುವ, 170ಕ್ಕೂ ಹೆಚ್ಚಿನ ನೀರು ಸರಬರಾಜು ಯೋಜನೆಗಳಿಗೆ ಅಡ್ಡಿಯಾಗಿ ರುವ ವರದಿಗಳು ಬಂದಿವೆ.

Vishwavani Editorial: ಕಿಡಿಗೇಡಿಗಳನ್ನು ಬಲಿ ಹಾಕಿ

Vishwavani Editorial: ಕಿಡಿಗೇಡಿಗಳನ್ನು ಬಲಿ ಹಾಕಿ

‘ತಲೆ’ಗಳಿಗೆ ಹೀಗೆ ಇಕ್ಕಳ ಹಾಕಿದರೆ, ಆಗ ‘ಬಾಲಂಗೋಚಿ’ಗಳು ತಾವಾಗೇ ದಾರಿಗೆ ಬರುತ್ತವೆ. ಇಲ್ಲವಾದಲ್ಲಿ ದುರುಳರಿಗೆ, ದುರಾತ್ಮರಿಗೆ ಕಾನೂನಿನ ಭಯವೇ ಇಲ್ಲದಂತಾಗುತ್ತದೆ. ಉಗ್ರವಾದಕ್ಕೆ ಇಂಬು ಕೊಡು ವವರನ್ನು ಮೊಳಕೆಯಲ್ಲೇ ಚಿವುಟಿಹಾಕದಿದ್ದರೆ, ಅವರು ಮುಂದೆ ಬೆಳೆದು ಹೆಮ್ಮರವಾದಾಗ ಮತ್ತು ಎಲ್ಲೆಡೆ ಹಬ್ಬಿಕೊಂಡಾಗ ಲಗಾಮು ಹಾಕುವುದು ಕಷ್ಟವಾಗಬಹುದು.

Vishwavani Editorial: ತಾನು ಮಳ್ಳ, ಪರರನ್ನು ನಂಬ!

Vishwavani Editorial: ತಾನು ಮಳ್ಳ, ಪರರನ್ನು ನಂಬ!

‘ಅಮೆರಿಕ ಈಗಲೂ ಯುರೇನಿಯಂ ಮತ್ತು ರಸಗೊಬ್ಬರವನ್ನು ರಷ್ಯಾದಿಂದ ಖರೀದಿಸು ತ್ತಿದೆಯಲ್ಲಾ?’ ಎಂಬ ಅಮೆರಿಕದ ಮಾಧ್ಯಮಗಳ ಪ್ರಶ್ನೆಗೆ, ‘ನನಗೆ ಈ ವಿಚಾರವೇ ಗೊತ್ತಿಲ್ಲ, ಈಗ ನಿಮ್ಮಿಂದ ಮಾಹಿತಿ ಸಿಕ್ಕಿರುವುದರಿಂದ ಈ ಬಗ್ಗೆ ಪರಿಶೀಲಿಸಬೇಕಿದೆ’ ಎಂಬ ಜಾಣ ಉತ್ತರವನ್ನು ನೀಡಿ ಟ್ರಂಪ್ ಜಾರಿಕೊಂಡಿ ದ್ದಾರೆ.

Vishwavani Editorial: ದೇವಭೂಮಿಯ ಘೋರ ದುರಂತ

Vishwavani Editorial: ದೇವಭೂಮಿಯ ಘೋರ ದುರಂತ

2013ರ ಉತ್ತರಾಖಂಡ ಪ್ರವಾಹವು 5000ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿತ್ತು ಮತ್ತು 2000ಕ್ಕೂ ಹೆಚ್ಚು ಮನೆಗಳನ್ನು ಹಾನಿಗೊಳಿಸಿತ್ತು. 2021ರಲ್ಲಿ ಚಮೋಲಿ ಪ್ರವಾಹದಿಂದ 200ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ಉತ್ತರಾಖಂಡದ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಜನರು ಭೂಕುಸಿತ ಮತ್ತು ಪ್ರವಾಹಕ್ಕೆ ಗುರಿಯಾಗುವ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ

Vishwavani Editorial: ಈಗ ಬಾಲಂಗೋಚಿಯ ಸರದಿ!

ಈಗ ಬಾಲಂಗೋಚಿಯ ಸರದಿ!

ಏನಾದರೊಂದು ಕಿರಿಕಿರಿ ಮಾಡಿ ಭಾರತವನ್ನು ತನ್ನ ತಾಳಕ್ಕೆ ತಕ್ಕಂತೆ ಕುಣಿಸಬೇಕು ಎಂಬ ಹಠ ತೊಟ್ಟಂತಿರುವ ಅಮೆರಿಕದ ಅಧ್ಯಕ್ಷ ಟ್ರಂಪ್ ಅವರು, ಈ ನಿಟ್ಟಿನಲ್ಲಿ ಥರಾವರಿ ಕಸರತ್ತು ಮಾಡುತ್ತಿರು ವಂತಿದೆ. ಆದರೆ, ಅಂತಾರಾಷ್ಟ್ರೀಯ ಬಾಂಧವ್ಯ, ದ್ವಿಪಕ್ಷೀಯ ರಾಜತಾಂತ್ರಿಕತೆ ಮತ್ತು ವಾಣಿಜ್ಯ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಭಾರತದ ನಿಲುವು ಸ್ಪಷ್ಟವಾಗೇ ಇದೆ, ಅಲುಗಾಡ ದಂತಿದೆ.

Vishwavani Editorial: ಕಾರ್ಮೋಡದಂಚಿನ ಬೆಳ್ಳಿಕಿರಣ

ಕಾರ್ಮೋಡದಂಚಿನ ಬೆಳ್ಳಿಕಿರಣ

‘ಟೇಕನ್ ಫಾರ್ ಗ್ರಾಂಟೆಡ್’ ಎನ್ನುವ ರೀತಿಯಲ್ಲಿ ಪ್ರೇಕ್ಷಕರನ್ನು ಹಗುರವಾಗಿ ಪರಿಗಣಿಸದೆ, ಚಿತ್ರ‌ ನಿರ್ಮಾಣ ಎಂಬ ಕುಸುರಿ ಕೆಲಸದಲ್ಲಿ ಶ್ರದ್ಧೆಯಿಂದ ತೊಡಗಿಸಿಕೊಂಡು ಉತ್ತಮ ಚಲನಚಿತ್ರವನ್ನು ಕಟ್ಟಿಕೊಟ್ಟರೆ, ಯಾವ ‘ಸ್ಟಾರ್-ಕಾಸ್ಟ್’ ಇಲ್ಲದಿದ್ದರೂ ಪ್ರೇಕ್ಷಕರು ಆ ಚಿತ್ರವನ್ನು ಹಿಡಿದೆತ್ತಿ ಗೆಲ್ಲಿಸುತ್ತಾರೆ ಎಂಬುದಕ್ಕೆ ‘ಸು ಫ್ರಮ್ ಸೋ’ ಚಿತ್ರವೇ ಸಾಕ್ಷಿ.

Vishwavani Editorial: ಇದು ಹತಾಶೆಯ ಪರಮಾವಧಿ

Vishwavani Editorial: ಇದು ಹತಾಶೆಯ ಪರಮಾವಧಿ

ತೀರಾ ಇತ್ತೀಚೆಗೆ, ‘ರಷ್ಯಾ ಮತ್ತು ಭಾರತದ ಆರ್ಥಿಕತೆಗಳು ಕುಸಿಯಲಿವೆ’ ಎಂಬ ಭವಿಷ್ಯ ನುಡಿದು ಭಾರತ ವನ್ನು ದಿಕ್ಕೆಡಿಸಲು ಯತ್ನಿಸಿದ್ದೂ ಟ್ರಂಪ್ ಮಹಾಶಯರೇ; ಆದರೆ ಭಾರತದ ಆರ್ಥಿಕತೆಯು ಏರುಗತಿ ಯಲ್ಲಿರುವುದನ್ನು ಬಲ್ಲ ವಿಷಯತಜ್ಞರು, ಟ್ರಂಪ್‌ರ ಈ ಭವಿಷ್ಯವನ್ನು ಕೇಳಿ ನಕ್ಕರಷ್ಟೇ. ಇದು ಟ್ರಂಪ್‌ ರಿಗಾದ ಎರಡನೇ ಮುಖಭಂಗ.

Vishwavani Editorial: ಇದು ತುಘಲಕ್ ದರ್ಬಾರು

ಇದು ತುಘಲಕ್ ದರ್ಬಾರು

ಪಾಕಿಸ್ತಾನದಲ್ಲಿ ಬೃಹತ್ ತೈಲ ನಿಕ್ಷೇಪಗಳನ್ನು ಅಭಿವೃದ್ಧಿಪಡಿಸಲು ಆ ದೇಶದೊಂದಿಗೆ ಪಾಲು ದಾರಿಕೆ ಒಡಂಬಡಿಕೆ ಮಾಡಿಕೊಳ್ಳುವುದಾಗಿ ಟ್ರಂಪ್ ಘೋಷಿಸಿದ್ದಾರೆ. ಸಾಲದೆಂಬಂತೆ, ‘ಭಾರತ ಮತ್ತು ರಷ್ಯಾ ದೇಶಗಳು ಸದ್ಯದಲ್ಲೇ ನಿರ್ಜೀವ ಆರ್ಥಿಕತೆ ಸಾಕ್ಷಿಯಾಗಲಿವೆ’ ಎಂಬ ಬುರುಡೆ-ಭವಿಷ್ಯವನ್ನೂ ನುಡಿದು ಬಿಟ್ಟಿದ್ದಾರೆ!

Vishwavani Editorial: ಅಮೆರಿಕದಲ್ಲೊಬ್ಬ ತುಘಲಕ್!

ಅಮೆರಿಕದಲ್ಲೊಬ್ಬ ತುಘಲಕ್!

ಇದು ಅಮೆರಿಕನ್ನರ ಪುಣ್ಯವೋ, ಅಥವಾ ಜಗತ್ತಿನ ಮಿಕ್ಕ ರಾಷ್ಟ್ರಗಳ ಕರ್ಮವೋ ಎಂಬುದನ್ನು ಭಗವಂತನೇ ಹೇಳಬೇಕು. ಕೆಲ ತಿಂಗಳ ಹಿಂದೆ, ಜಗತ್ತಿನ ವಿವಿಧ ದೇಶಗಳಿಂದ ಅಮೆರಿಕಕ್ಕೆ ಬಂದು ಬೀಳುವ ವೈವಿಧ್ಯಮಯ ಸರಕು-ಸಾಮಗ್ರಿಗಳ ಮೇಲೆ ಅತಿರೇಕದ ಸುಂಕ ಹೇರುವ ನಿಲುವನ್ನು ಘೋಷಿ ಸುವ ಮೂಲಕ ತಮ್ಮ ‘ರಾಜತಾಂತ್ರಿಕ ಚೇಷ್ಟೆ’ಗೆ ಚಾಲನೆ ನೀಡಿದ್ದ ಟ್ರಂಪ್, ಭಾರತದ ವಿಷಯದಲ್ಲಿ ಅದ್ಯಾಕೋ ಸುಮ್ಮನಿದ್ದರು.

Loading...