ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಸಂಪಾದಕೀಯ
Vishwavani Editorial: ತಕ್ಕ ಶಾಸ್ತಿ ಮಾಡಲು ಇದು ಸಕಾಲ

ತಕ್ಕ ಶಾಸ್ತಿ ಮಾಡಲು ಇದು ಸಕಾಲ

ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಗುಂಡು ಹಾರಿಸಿ ಕೊಲ್ಲುವ ಮಟ್ಟಕ್ಕೆ ಪಾಕಿಸ್ತಾನದ ಚಿಂತನೆ ಇಳಿದಿದೆ ಎಂದರೆ, ಇದಕ್ಕಿಂತ ಹೀನ ವರ್ತನೆ ಇನ್ನೊಂದು ಇರಲಾರದು. ವಿನಾಕಾರಣ ಭಾರತದ ಮೇಲೆ ಮುರಕೊಂಡು ಬಿದ್ದ ಪಾಕಿಸ್ತಾನಕ್ಕೆ ಕಾರ್ಗಿಲ್ ಯುದ್ಧದ ವೇಳೆ ಬುದ್ಧಿ ಕಲಿಸಲಾಗಿತ್ತು

Vishwavani Editorial: ಉಗ್ರರ ದಮನಕ್ಕೆ ದೇಶವೇ ಒಂದಾಗಲಿ

ಉಗ್ರರ ದಮನಕ್ಕೆ ದೇಶವೇ ಒಂದಾಗಲಿ

ಕಾಶ್ಮೀರ ವಿಚಾರದಲ್ಲಿ ಎಲ್ಲ ರಾಜಕೀಯ ಪಕ್ಷಗಳು ಒಂದಾಗಬೇಕು. ಎಲ್‌ಒಸಿಯಿಂದ 200 ಕಿ.ಮೀ. ದೂರವಿರುವ ಪಹಲ್ಗಾಮ್‌ಗೆ ಉಗ್ರರು ಬರಬೇಕೆಂದರೆ ಸ್ಥಳೀಯರಲ್ಲಿ ಕೆಲವರು ಸಹಕಾರ ನೀಡಿರಲೇ ಬೇಕು. ಇವರು ಯಾರೇ ಆಗಿರಲಿ ಹೆಡೆಮರಿ ಕಟ್ಟಿ ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕು. ಉಗ್ರರ ದುಷ್ಟಕೂಟ ವನ್ನು ದಮನ ಮಾಡುವಲ್ಲಿ ಇಡೀ ದೇಶ ಒಂದಾಗಬೇಕು.

Vishwavani Editorial: ಅರಿವಿಲ್ಲದಿದ್ದರೆ ಅಪಾಯ ಖಾತ್ರಿ!

ಅರಿವಿಲ್ಲದಿದ್ದರೆ ಅಪಾಯ ಖಾತ್ರಿ!

ಮೊಬೈಲ್ ಮಡಿಲಿಗೆ ದಂಡಿಯಾಗಿ ಬಂದು ಬೀಳುವ ಬಹುಮಾನ ನೀಡಿಕೆಯಂಥ ಆಮಿಷಗಳಿಗೆ ಬಲಿಯಾಗದಿರುವ, ಅಪರಿಚಿತ ಸಂಖ್ಯೆಗಳಿಂದ ಬಂದ ಲಿಂಕ್ ಅನ್ನು ಒತ್ತದಿರುವ ಜಾಣ್ಮೆಯನ್ನು ಜನರು ತೋರಬೇಕಿದೆ. ಜತೆಗೆ, ಸೈಬರ್ ವಂಚಕರನ್ನು ಬಲಿ ಹಾಕುವ ವಿಷಯದಲ್ಲಿ ಪೊಲೀಸರೂ ಮತ್ತಷ್ಟು ಚುರುಕಾಗಬೇಕಿದೆ.

Vishwavani Editorial: ಇದು ನಮ್ಮವರಿಗೆ ಪಾಠವಾಗಬೇಕು

ಇದು ನಮ್ಮವರಿಗೆ ಪಾಠವಾಗಬೇಕು

ಯಾವುದೇ ಒಂದು ರಾಷ್ಟ್ರದಲ್ಲಿ ಜನರ ಹಿತರಕ್ಷಣೆಯೇ ಆಳುಗರ ಆದ್ಯತಾ ವಿಷಯವಾಗಿದ್ದರೆ, ತಮ್ಮದು ಪ್ರಜಾಪ್ರಭುತ್ವ ವ್ಯವಸ್ಥೆಯೋ ಅಥವಾ ರಾಜಪ್ರಭುತ್ವವೋ ಎಂಬು ದರ ಬಗ್ಗೆ ಜನರು ತಲೆ ಕೆಡಿಸಿ ಕೊಳ್ಳಲು ಹೋಗುವುದಿಲ್ಲ; ಆದರೆ ಆಳುಗರಿಗೆ ಜನಕಲ್ಯಾಣ ವೆಂಬುದು ಆದ್ಯತೆಯ ಪಟ್ಟಿಯಲ್ಲಿನ ಕೊನೆಯ ಬಾಬತ್ತಾಗಿಬಿಟ್ಟರೆ, ಜನರು ಅಂಥ ವ್ಯವಸ್ಥೆಯ ವಿರುದ್ಧ ಸಿಡಿದೇಳುತ್ತಾರೆ ಮತ್ತು ಬದಲಾವಣೆಗೆ ಆಗ್ರಹಿಸುತ್ತಾರೆ

Vishwavani Editorial: ಒಬ್ಬನಿಗಿಂತ ಮೂವರು ಲೇಸು

ಒಬ್ಬನಿಗಿಂತ ಮೂವರು ಲೇಸು

ಅಮೆರಿಕದ ಸುಂಕಪರ್ವದ ಬಿಕ್ಕಟ್ಟಿನಿಂದ ಬಚಾವಾಗಲು ಇರಬಹುದಾದ ಪರ್ಯಾಯ ಮಾರ್ಗಗಳನ್ನು ತಡಕುವ ಯತ್ನಕ್ಕೂ ಭಾರತ ಮುಂದಾಗಿರುವುದು ಶ್ಲಾಘನೀಯ. ಈ ಕಸರತ್ತಿನ ಒಂದು ಭಾಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ಮುಂದಿನ ತಿಂಗಳಲ್ಲಿ ಐರೋಪ್ಯ ರಾಷ್ಟ್ರಗಳಾದ ನಾರ್ವೆ, ನೆದರ್ಲ್ಯಾಂಡ್ ಮತ್ತು ಕ್ರೊವೇಷಿಯಾಗೆ ಭೇಟಿ ನೀಡುತ್ತಿದ್ದಾರೆ

Vishwavani Editorial: ಇದು ಸೊಕ್ಕಿನ ಪರಮಾವಧಿಯಷ್ಟೇ!

ಇದು ಸೊಕ್ಕಿನ ಪರಮಾವಧಿಯಷ್ಟೇ!

ಕಾಶ್ಮೀರವು ಪಾಕಿಸ್ತಾನದ ಕೊರಳಿನ ರಕ್ತನಾಳವಿದ್ದಂತೆ’ ಎಂಬ ಬಾಲಂಗೋಚಿಯನ್ನೂ ಸೇರಿಸಿ ದ್ದಾರೆ. ಗಡಿಭಾಗದಲ್ಲಿ ತನ್ನ ಉಗ್ರರನ್ನು ತೂರಿಸಿ ಭಾರತದ ನೆಲದಲ್ಲಿ ವಿಧ್ವಂಸಕ ಕೃತ್ಯಗಳನ್ನು ಹಾಗೂ ಗಲಭೆ ಗಳನ್ನು ನಡೆಸಲು ಚಿತಾವಣೆ ನೀಡುತ್ತಿದ್ದ ಪಾಕಿಸ್ತಾನಕ್ಕೆ ಭಾರತವು ಕಾಲಾನುಕಾಲಕ್ಕೆ ತಪರಾಕಿ ನೀಡಿದ್ದುಂಟು

Vishwavani Editorial: ನಕಲಿ ವೈದ್ಯರ ಹಾವಳಿ ತಪ್ಪಲಿ

ನಕಲಿ ವೈದ್ಯರ ಹಾವಳಿ ತಪ್ಪಲಿ

ಮಂಡ್ಯ ಕೆ. ಆರ್ ತಾಲ್ಲೂಕಿನ ನಕಲಿ ವೈದ್ಯರೊಬ್ಬರು ಕೇವಲ ಎಸ್ಸೆಸ್ಸೆಲ್ಸಿ ಮುಗಿಸಿ ಕಳೆದ 15 ವರ್ಷ ಗಳಿಂದ ಕ್ಲಿನಿಕ್ ನಡೆಸುತ್ತಿದ್ದರು. ಇತ್ತೀಚೆಗೆ ತಮ್ಮ ಕ್ಲಿನಿಕ್ ನೋಂದಣಿಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಯನ್ನು ಪುರಸ್ಕರಿಸಲು ನಿರಾಕರಿಸಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ, ರಾಜ್ಯದಲ್ಲಿ ನಕಲಿ ವೈದ್ಯರ ವಿರುದ್ಧ ಕಠಣ ಕ್ರಮ ಜರುಗಿಸಲು ಆದೇಶ ನೀಡಿದ್ದಾರೆ.

Vishwavani Editorial: ವಂಚಕರಿಗೆ ಇನ್ನು ಉಳಿಗಾಲವಿಲ್ಲ

ವಂಚಕರಿಗೆ ಇನ್ನು ಉಳಿಗಾಲವಿಲ್ಲ

ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಿಂದ 6000 ಕೋಟಿ ರುಪಾಯಿಗೂ ಹೆಚ್ಚಿನ ಸಾಲ ಪಡೆದು ನಾಮ ಹಾಕಿ ಭಾರತದಿಂದ ಪಲಾಯನ ಮಾಡಿದ್ದ ಮೆಹುಲ್ ಚೋಕ್ಸಿಯು ಬೆಲ್ಜಿಯಂನಲ್ಲಿ ಬಂಧನಕ್ಕೊಳಗಾಗಿದ್ದು ಈತನನ್ನೂ ಹೆಡೆಮುರಿ ಕಟ್ಟಿ ಭಾರತಕ್ಕೆ ಎಳೆ ತರುವ ಕಾಲ ಸನ್ನಿಹಿತವಾಗಿದೆ

Vishwavani Editorial: ಇದು ಇಂದ್ರನ ಅಮರಾವತಿಯೇ?

ಇದು ಇಂದ್ರನ ಅಮರಾವತಿಯೇ?

ಟೋಕಿಯೋ, ಸಿಂಗಾಪುರದಂಥ ವಿಶ್ವದರ್ಜೆಯ ನಗರವಾಗಿ ಅಮರಾವತಿ ರೂಪುಗೊಳ್ಳಬೇಕು ಎಂಬ ಕನಸಿನ ಸಾಕಾರದ ಭಾಗವಾಗಲಿದೆಯಂತೆ ಈ ನಿರ್ಮಾಣ ಕಾಮಗಾರಿ. ಸರಕಾರವೊಂದರ ಆಡಳಿತ ಚಟುವಟಿಕೆಗಳು ಸುಸೂತ್ರವಾಗಿ ನಡೆಯಲು ಮೂಲಭೂತ ಸೌಕರ್ಯಗಳ ರೂಪಣೆಯಾಗಬೇಕು, ರಾಜ್ಯದ ರಾಜಧಾನಿ ಬಹುಜನರ ನಿರೀಕ್ಷೆಗೆ ತಕ್ಕಂತೆ ಸುಸಜ್ಜಿತವಾಗಿರಬೇಕು ಎಂಬ ಆಶಯಗಳನ್ನು ಇಟ್ಟುಕೊಳ್ಳುವುದರಲ್ಲಿ ತಪ್ಪೇನಿಲ್ಲ

Vishwavani Editorial: ಮತ್ತೆ ಬಾಲ ಬಿಚ್ಚಿದರೇ ಉಗ್ರರು?

ಮತ್ತೆ ಬಾಲ ಬಿಚ್ಚಿದರೇ ಉಗ್ರರು?

ಜಮ್ಮು-ಕಾಶ್ಮೀರದ ಅಖ್ನೂರ್ ವಲಯದಲ್ಲಿ ಗಡಿ ನಿಯಂತ್ರಣ ರೇಖೆಯ (ಎಲ್‌ಒಸಿ) ಬಳಿ ಪಾಕಿಸ್ತಾನ ಮೂಲದ ಉಗ್ರರ ತಂಡವು ದೇಶದೊಳಗೆ ನುಸುಳುತ್ತಿರುವುದನ್ನು ಕಂಡ ಭದ್ರತಾ ಪಡೆಯ ಯೋಧರು ತಕ್ಷಣವೇ ಕಾರ್ಯಾಚರಣೆ ಆರಂಭಿ ಸಿದ್ದಕ್ಕೆ ಉಗ್ರರೂ ಪ್ರತಿಯಾಗಿ ಗುಂಡು ಹಾರಿಸಿದರು ಎಂದು ತಿಳಿದು ಬಂದಿದೆ

Vishwavani Editorial: ಈ ವಿಷಯದಲ್ಲೂ ರಾಜಕೀಯವೇ?!

ಈ ವಿಷಯದಲ್ಲೂ ರಾಜಕೀಯವೇ?!

ಆಳುಗರು ಮಾಡಿದ್ದನ್ನೆಲ್ಲಾ ಅವರ ರಾಜಕೀಯ ಎದುರಾಳಿಗಳು ಕಣ್ಣುಮುಚ್ಚಿ ಒಪ್ಪಿಕೊಳ್ಳಬೇಕು ಎಂದೇನಿಲ್ಲ; ಆಳುಗರು ಹಾದಿತಪ್ಪದಂತೆ ಕಾಲಾನುಕಾಲಕ್ಕೆ ಅವರ ಕಿವಿ ಹಿಂಡಬೇಕಾದ್ದು ಇಂಥ ಎದುರಾಳಿಗಳ/ವಿಪಕ್ಷಗಳ ಕರ್ತವ್ಯವೂ ಹೌದು, ಅದು ಪ್ರಜಾಪ್ರಭುತ್ವದ ಸೊಬಗೂ ಹೌದು. ಆದರೆ ವಿರೋಧಿಸುವ ಅಥವಾ ಅಪಸ್ವರವೆತ್ತುವ ಭರದಲ್ಲಿ ವಿವೇಚನೆಯನ್ನು ಮರೆತರೆ ಹೇಗೆ?

Vishwavani Editorial: ಭಾರತದ ರಾಜತಾಂತ್ರಿಕ ಗೆಲುವು

ಭಾರತದ ರಾಜತಾಂತ್ರಿಕ ಗೆಲುವು

ಮುಂಬೈ ದಾಳಿಯ ಮುಖ್ಯ ಸಂಚುಕೋರರಲ್ಲಿ ಒಬ್ಬನಾದ ಡೇವಿಡ್ ಹೆಡ್ಲಿಯ ಭಾರತ ಪ್ರವಾಸ ಮತ್ತು ಇತರ ಯೋಜನೆಗಳಿಗೆ ರಾಣಾ ಬೆಂಗಾವಲಾಗಿದ್ದ. ಈತ ಸದ್ಯ ಅಮೆರಿಕದ ಜೈಲಿನಲ್ಲಿದ್ದು ಭಾರತಕ್ಕೆ ಕರೆ ತರಬೇಕಿದೆ. ಅಲ್ಲದೆ, ಇದೇ ದಾಳಿಯ ಇನ್ನಿತರ ಭಯೋತ್ಪಾದಕರು ಪಾಕಿಸ್ತಾನದಲ್ಲಿ ಮುಕ್ತವಾಗಿ ಸುತ್ತಾಡುತ್ತಿದ್ದಾರೆ.

Vishwavani Editorial: ಬಾಂಗ್ಲಾ ವರ್ತನೆ ಆಘಾತಕಾರಿ

ಬಾಂಗ್ಲಾ ವರ್ತನೆ ಆಘಾತಕಾರಿ

ಮೊಹಮದ್ ಯೂನುಸ್ ನೇತೃತ್ವದಲ್ಲಿ ರಚನೆಯಾದ ಮಧ್ಯಂತರ ಸರ್ಕಾರ ಭಾರತದ ಜೊತೆಗೆ ಸೌಹಾರ್ದತೆಗಿಂತಲೂ ಸಂಘರ್ಷಕ್ಕೆ ಹೆಚ್ಚು ಒತ್ತು ನೀಡಿದೆ. ಇದೀಗ ಚೀನಾದ ನೆಲದಲ್ಲಿ ನಿಂತು ಯೂನುಸ್ ಭಾರತದ ಈಶಾನ್ಯ ರಾಜ್ಯಗಳ ಬಗ್ಗೆ ಮಾತನಾಡಿರುವುದು ಚೀನಾ, ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಸೇರಿ ಮೂರು ದುಷ್ಟಕೂಟಗಳು ಭಾರತದ ವಿರುದ್ಧ ಸಂಚು ರೂಪಿಸುತ್ತಿವೆಯೇ ಎಂಬ ಅನುಮಾನಗಳಿಗೆ ಕಾರಣವಾಗಿದೆ.

Vishwavani Editorial: ಇದು ದುರ್ಭರ, ದುಬಾರಿ ದುನಿಯಾ

ಇದು ದುರ್ಭರ, ದುಬಾರಿ ದುನಿಯಾ

ಜನರು ಪ್ರಸ್ತುತ ಇಂಥದೇ ಪರಿಸ್ಥಿತಿಯ ಲಾನುಭವಿಗಳಾಗಿದ್ದಾರೆ. ನಿರುದ್ಯೋಗ ಸಮಸ್ಯೆಗೆ ಮದ್ದು ಅರೆಯುವಂಥ ಉಪಕ್ರಮಗಳು ಹೇಳಿಕೊಳ್ಳುವಷ್ಟು ಜಾರಿಗೆ ಬರದ ಕಾರಣ, ‘ದುಡಿಯುವ ಕೈ ಒಂದು, ಆದರೆ ತಿನ್ನುವ ಬಾಯಿ ಹನ್ನೊಂದು’ ಎನ್ನುವಂಥ ಪರಿಸ್ಥಿತಿ ಇನ್ನೂ ಅನೇಕ ಕುಟುಂಬಗಳಲ್ಲಿದೆ.

Vishwavani Editorial: ಜಾರಿಯಾಗದ ಆಶಯ ಲೊಳಲೊಟೆ !

ಜಾರಿಯಾಗದ ಆಶಯ ಲೊಳಲೊಟೆ !

ಕಳೆದ ಕೆಲ ತಿಂಗಳಿಂದ ಕಮಲ ಪಾಳಯದಲ್ಲಿ ಭಿನ್ನಮತ ಭುಗಿಲೆದ್ದು, ಹಾದಿರಂಪ-ಬೀದಿ ರಂಪದ ಹಂತವನ್ನು ತಲುಪಿದಾಗ ಅಥವಾ ಭಿನ್ನರ ಬಣಗಳು ತಮ್ಮದೇ ಆದ ದೂರಿನ ಮೂಟೆ ಯನ್ನು ಹೊತ್ತು ದೆಹಲಿ ದೊರೆಗಳ ಬಳಿ ಅವನ್ನು ಬಿಚ್ಚಿಡುವಾಗ ಹೀಗೆ ‘ನಾಲ್ಕು ಗೋಡೆಗಳ ಮಧ್ಯೆಯೇ’ ಭಿನ್ನಮತವನ್ನು ಬಗೆಹರಿಸಿಕೊಳ್ಳುವ ಚಿತ್ತಸ್ಥಿತಿಯು ಪಕ್ಷದ ತಥಾಕಥಿತ ರಾಜ್ಯ ನಾಯಕರಲ್ಲಿ ಇರಲಿಲ್ಲವೇಕೆ?

Vishwavani Editorial: ನಂಬಿದ ಗುರುವೇ ನೆತ್ತರು ಹೀರಿದರೆ?

ನಂಬಿದ ಗುರುವೇ ನೆತ್ತರು ಹೀರಿದರೆ?

ಅಕ್ಷರ ಹೇಳಿ ಕೊಡುವ ಗುರುವಾಗಿರಲಿ, ಆಟದ ಕೌಶಲ ಹೇಳಿಕೊಡುವ ತರಬೇತುದಾರನಾಗಿರಲಿ, ಕಲಿಕೆಗೆ ಬಂದಿರುವವರ ಪಾಲಿಗೆ ಆತ ದೇವರೇ. ಇದು ಬಹುತೇಕರ ಗ್ರಹಿಕೆ ಯೂ ಹೌದು. ಆದರೆ, ಮೇಲೆ ಉಲ್ಲೇಖಿಸಿರುವ ಪ್ರಕರಣದಲ್ಲಿ ಕಾಣವುದು ಗುರುವೆಂಬ ಗಿಳಿಯಲ್ಲ, ಅದು ಹಸಿಮಾಂಸ ಕ್ಕೆ ಹಪಹಪಿಸುವ ರಣಹದ್ದು.

Vishwavani Editorial: ಬರೆ ಬೀಳೋದು ಜನರಿಗೇ ಅಲ್ಲವೇ?

ಬರೆ ಬೀಳೋದು ಜನರಿಗೇ ಅಲ್ಲವೇ?

ತಮ್ಮ ಹಿತವನ್ನು ರಕ್ಷಿಸುತ್ತಾರೆ ಎಂಬ ಭರವಸೆಯಿಟ್ಟುಕೊಂಡು ತಾವು ಚುನಾ ಯಿಸಿದ ಪ್ರತಿನಿಧಿಗಳೇ ಸಮಸ್ಯೆಗೆ ಮದ್ದು ಅರೆಯುವ ಯತ್ನವನ್ನು ಮಾಡದೆ, ಪರಸ್ಪರರ ಮೇಲೆ ಕೆಸರೆರ ಚುತ್ತಾ ದಿನವನ್ನು ಕಳೆಯುತ್ತಿದ್ದರೆ, ಅದ್ಯಾವ ಪುರುಷಾರ್ಥ? ಎಂಬ ಬಿರುನುಡಿಗಳೂ ಅವರಿಂದ ಕೇಳಿಬರುತ್ತಿವೆ. ಅವರ ಮಾತಿನಲ್ಲೂ ತಥ್ಯವಿದೆ.

Vishwavani Editorial: ಆಗ ಯುವರಾಜ, ಈಗ ಎ.ರಾಜಾ!

ಆಗ ಯುವರಾಜ, ಈಗ ಎ.ರಾಜಾ!

ಎ.ರಾಜಾ ಅವರು ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮೊನ್ನೆ ಮಾತನಾಡುತ್ತಾ, “ಹಿಂದೂ ಧರ್ಮದ ಸಂಕೇತಗಳು, ಚಿಹ್ನೆಗಳನ್ನು ಧರಿಸಬೇಡಿ. ತಿಲಕ-ಕೇಸರಿಗಳನ್ನು ತ್ಯಜಿಸಿ, ಸಂಗಳಿಗಿಂತ ಭಿನ್ನವಾಗಿರಿ" ಎಂದು ಕರೆ ನೀಡಿದ್ದಾರೆ. ಪಕ್ಷದ ನಾಯಕರು ಭಾಗವಹಿಸುವ ಯಾವುದೇ ಕಾರ್ಯಕ್ರಮದಲ್ಲೂ ಕಾರ್ಯ ಕರ್ತರು ಹೀಗೇ ನಡೆದು ಕೊಳ್ಳಬೇಕು ಎಂಬುದು ರಾಜಾ ಅವರು ಹೊರಡಿಸಿರುವ ಫರ್ಮಾನು!

Vishwavani Editorial: ಭಿನ್ನ ಮಕ್ಕಳ ಬಗ್ಗೆ ಕಾಳಜಿ ಇರಲಿ

ಭಿನ್ನ ಮಕ್ಕಳ ಬಗ್ಗೆ ಕಾಳಜಿ ಇರಲಿ

ಏಪ್ರಿಲ್ 2 ವಿಶ್ವ ಆಟಿಸಂ ಜಾಗೃತಿ ದಿನ. ಮೇಲ್ನೋಟಕ್ಕೆ ಅಂಗಾಂಗಗಳೆಲ್ಲವೂ ಸರಿ ಇದ್ದರೂ ಕೇಂದ್ರಿ ಯ ನರಮಂಡಲ ಮತ್ತು ಮೆದುಳಿಗೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುವ ಆಟಿಸಂ ರೋಗಿಗಳಿಗೆ ಪೋಷಕರು ಮಾತ್ರವಲ್ಲ ಇಡೀ ಸಮಾಜದ ಕಾಳಜಿ, ಆರೈಕೆ ಅಗತ್ಯವಿದೆ. ಶಾರೀರಿಕ ಸಮಸ್ಯೆ ರೋಗಗಳಿಗೆ ಚಿಕಿತ್ಸೆ ಕೊಡಿಸಬಹುದು. ಆದರೆ ಆಟಿಸಂ ಇರುವ ರೋಗಿಗಳಿಗೆ ಜೀವನ ಪರ‍್ಯಂತ ಪ್ರೀತಿ ತುಂಬಿದ ಆರೈಕೆ ಅಗತ್ಯ

Vishwavani Editorial: ಎಚ್ಚರಿಕೆ ಗಂಟೆಯಾಗಲಿ

ಎಚ್ಚರಿಕೆ ಗಂಟೆಯಾಗಲಿ

ಭೂಕಂಪ ಸಂತ್ರಸ್ತ ಪ್ರದೇಶ ಒಂದರ್ಥದಲ್ಲಿ ಸ್ಮಶಾನವಾಗಿ ಮಾರ್ಪ ಟ್ಟಿದೆ. ಭೂಕಂಪದಂಥ ಪ್ರಕೃತಿ ವಿಕೋಪಗಳನ್ನು ತಡೆಯುವುದು ಹುಲುಮಾನವರಿಂದ ಆಗದ ಕೆಲಸ ಎಂಬುದೇನೋ ಸರಿ; ಆದರೆ, ಇಂಥ ವಿಪತ್ತುಗಳು ಜರುಗುವಲ್ಲಿ ತನ್ನ ಪಾತ್ರ ಎಷ್ಟಿದೆ ಎಂಬು ದರ ಅವಲೋಕನಕ್ಕೆ ಮನುಷ್ಯ ಒಡ್ಡಿ ಕೊಳ್ಳಬೇಕಾದ್ದು ಈ ಕ್ಷಣದ ಅನಿವಾರ್ಯತೆ.

Vishwavani Editorial: ರಾಜ್ಯದ ನಿಲುವು ಬದಲಾಗದಿರಲಿ

ರಾಜ್ಯದ ನಿಲುವು ಬದಲಾಗದಿರಲಿ

ಕೆಲ ತಿಂಗಳ ಹಿಂದೆ ವಯನಾಡಲ್ಲಿ ಮಾತನಾಡಿದ್ದ ಡಿಸಿಎಂ ಡಿಕೆ ಶಿವಕುಮಾರ್ ಕೂಡ ಬಂಡೀಪುರ ರಾತ್ರಿ ವಾಹನ ಸಂಚಾರ ನಿಷೇಧ ತೆರವು ಬಗ್ಗೆ ಪರಿಶೀಲಿಸುವ ಭರವಸೆ ನೀಡಿದ್ದರು. ಈ ವಿಷಯ ದಲ್ಲಿ ಎರಡು ರಾಜ್ಯಗಳ ಬಾಂಧವ್ಯಕ್ಕಿಂತಲೂ ಸಮಸ್ತ ಜೀವಸಂಕುಲದ ಪ್ರಶ್ನೆ ಅಡಗಿರುವುದು ಇಬ್ಬರು ಹಿರಿಯ ಸಚಿವರಿಗೆ ತಿಳಿಯದ ವಿಷಯವೇನಲ್ಲ.

Vishwavani Editorial: ರಾಜಕಾರಣವೋ, ದೃಶ್ಯಭೀಷಣವೋ ?

ರಾಜಕಾರಣವೋ, ದೃಶ್ಯಭೀಷಣವೋ ?

ರಾಜ್ಯದ ಜನರಿಗೆ ಪ್ರಸ್ತುತ ಕಾಣುತ್ತಿರುವುದು ರಾಜಕಾರಣವಲ್ಲ, ‘ದೃಶ್ಯಭೀಷಣ’. ಜನಕಲ್ಯಾಣಕ್ಕೆ ಆಳುಗರು ದಿನಪೂರ್ತಿ ಸಮಯ ವಿನಿಯೋಗಿಸಿದರೂ ಸಾಲದು ಎಂಬ ಅನಿವಾರ್ಯತೆ ಇರು ವಾಗ, ಆಳುಗ ಪಕ್ಷ ದವರು ಹಾಗೂ ವಿಪಕ್ಷದವರು ತಂತಮ್ಮ ಮನೆಯ ಅಂತಃಕಲಹದ ಬೆಂಕಿಯ ಶಮನಕ್ಕೇ ಬಹುತೇಕ ಸಮಯವನ್ನು ಮೀಸಲಿಡುವಂತಾದರೆ, ಜನಕಲ್ಯಾಣದ ಆಶಯ ಸಾಕಾರ ಗೊಳ್ಳುವುದೆಂತು?

Vishwavani Editorial: ಬಿಜೆಪಿ ಕಲಹ ಉಲ್ಭಣ

ಬಿಜೆಪಿ ಕಲಹ ಉಲ್ಭಣ

ಪಕ್ಷದ ಕಟ್ಟಾ ಹಿಂದೂ ನಾಯಕ ಎಂದು ಗುರುತಿಸಿಕೊಂಡಿದ್ದ ಯತ್ನಾಳ್‌ರಿಗೆ ಕೇಂದ್ರ ದಲ್ಲೂ, ರಾಜ್ಯದಲ್ಲೂ ಕೆಲ ನಾಯಕರು ಬೆಂಬಲವಾಗಿ ನಿಂತಿದ್ದರು. ಆದರೆ ಪಕ್ಷದ ಈ ಆಂತರಿಕ ಕಚ್ಚಾಟ ವನ್ನು ನಿರ್ಲಕ್ಷಿಸುತ್ತಲೇ ಬಂದ ಹೈಕಮಾಂಡ್, ಇದೀಗ ಒಮ್ಮಿಂದೊ ಮ್ಮೆಲೆ ಕೆಲವರಿಗೆ ಶೋಕಾ ಸ್ ನೋಟಿಸ್ ನೀಡಿದೆ.

Vishwavani Editorial: ಕಾನೂನು ಮೇಲ್ಮಟ್ಟದಿಂದ ಜಾರಿಯಾಗಲಿ

ಕಾನೂನು ಮೇಲ್ಮಟ್ಟದಿಂದ ಜಾರಿಯಾಗಲಿ

ಚುನಾಯಿತ ಕಾರ್ಪೊರೇಟರ್‌ಗಳು ನಿಯಮಗಳ ಪ್ರಕಾರ ತಮ್ಮ ಆಸ್ತಿ ವಿವರ ಘೋಷಿಸಲು ವಿಫಲವಾದ ಹಿನ್ನೆಲೆಯಲ್ಲಿ ವಿಜಯಪುರ ಮಹಾನಗರ ಪಾಲಿಕೆಯ 35 ಕಾರ್ಪೊರೇಟರ್‌ ಗಳ ನ್ನು ಅನರ್ಹಗೊಳಿಸಿ ಬೆಳಗಾವಿ ಪ್ರಾದೇಶಿಕ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಈ ಪ್ರಕರಣ ರಾಜ್ಯ ಮಟ್ಟದಲ್ಲಿ ಸಂಚಲನ ಸೃಷ್ಟಿಸಿದೆ