ಸೈಬರ್ ವಂಚಕರನ್ನು ಶಿಕ್ಷಿಸಿ
ಸೈಬರ್ ವಂಚನೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗುವವರು ತೀರಾ ಕಡಿಮೆ. ಹೀಗಾಗಿ ದೇಶದ ನಾಗರಿಕರು ಕಷ್ಟಪಟ್ಟು ದುಡಿದ ಹಣವನ್ನುಯಾವುದೋ ದೇಶದ ಮೂಲೆಯಲ್ಲಿ ಕುಳಿತವರು ಲಪಟಾಯಿಸು ತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರಕಾರ ಆನ್ ಲೈನ್ ವಂಚನೆಯನ್ನು ರಾಷ್ಟ್ರದ್ರೋಹ ಎಂದು ಪರಿಗಣಿಸಿ ಗಂಭೀರ ಕ್ರಮ ತೆಗೆದುಕೊಳ್ಳದಿದ್ದಲ್ಲಿ ಈ ಪಿಡುಗನ್ನು ದೂರ ಮಾಡಲು ಸಾಧ್ಯವಿಲ್ಲ.