ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಂಪಾದಕೀಯ

ಅಗ್ನಿ ಸುರಕ್ಷತೆ ಖಾತ್ರಿ ಬೇಕು

ಅಗ್ನಿ ಸುರಕ್ಷತೆ ಖಾತ್ರಿ ಬೇಕು

ಕೆಲ ದಿನಗಳ ಹಿಂದೆ ಮೈಸೂರಿನ ದಟ್ಟಗಳ್ಳಿಯಲ್ಲಿರುವ ರೆಸ್ಟಾರೆಂಟ್‌ನಲ್ಲಿ ಉಂಟಾದ ಬೆಂಕಿ ಅನಾಹುತ ದಲ್ಲಿ ಇಬ್ಬರು ಸತ್ತು, ಹತ್ತಾರು ಮಂದಿ ತೀವ್ರವಾಗಿ ಗಾಯಗೊಂಡಿದ್ದರು. ಎಲ್ಲ ಬೆಂಕಿ ಆಕಸ್ಮಿಕಗಳ ಮೂಲ ಕಾರಣ ಬೇರೆ ಬೇರೆ ಆಗಿರಬಹುದಾದರೂ, ಹೆಚ್ಚಿನ ಜೀವಹಾನಿಗಳಿಗೆ ಕಾರಣ ಅಲ್ಲಿ ಸೂಕ್ತ ಸುರಕ್ಷತಾ ಕ್ರಮಗಳು ಇಲ್ಲದಿರುವುದೇ ಆಗಿರುತ್ತದೆ.

ಪ್ರಜಾಸೇವೆಯಲ್ಲಿ ದಕ್ಷತೆ ಬೇಕು

ಪ್ರಜಾಸೇವೆಯಲ್ಲಿ ದಕ್ಷತೆ ಬೇಕು

ಇಲಾಖೆಗೆ ಪ್ರತ್ಯೇಕ ಸಚಿವರು, ಸಚಿವಾಲಯ, ಅಧಿಕಾರಿಗಳು ಇರುತ್ತಾರೆ. ಈಗಿರುವ ಸಕಾಲ, ಇ- ಆಡಳಿತ ದಂತಹ ಇಲಾಖೆಗಳನ್ನು ಇದರಲ್ಲಿ ವಿಲೀನಗೊಳಿಸುವ ಇರಾದೆ ಇದೆ. ಇದರ ಹಿಂದಿರುವ ಉದ್ದೇಶ ಉತ್ತಮವಾಗಿದೆ. ಯಾವುದೇ ಇಲಾಖೆಗೆ ಹೋದರೂ ಅಲ್ಲಿ ಕೆಲಸವಾಗದೆ ಬಳಲುವ, ಕೆಲಸ ಮಾಡಿಸಿ ಕೊಳ್ಳಲು ಕಂಬ ಕಂಬ ಸುತ್ತುವ, ಲಂಚ ನೀಡಿದರೂ ಕೆಲಸವಾಗದ ಜನಸಾಮಾನ್ಯರನ್ನು ಕಾಣಬಹುದು.

Vishwavani Editorial: ಪೊಲೀಸ್ ಇಲಾಖೆಗೆ ಬೇಕು ಸುಧಾರಣೆ

Vishwavani Editorial: ಪೊಲೀಸ್ ಇಲಾಖೆಗೆ ಬೇಕು ಸುಧಾರಣೆ

ಶಿಕ್ಷೆಯಾಗದೇ ಹೋದರೆ ಯಾವ ಇಲಾಖಾ ತನಿಖೆಯಿಂದಲೂ ಪ್ರಯೋಜನವಿಲ್ಲ. ಹೊಸದಾಗಿ ಗೃಹ ಇಲಾಖೆ ಸಚಿವರಾಗಿರುವ ಪ್ರಿಯಾಂಕ್ ಖರ್ಗೆ ಅವರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಸೂಚನೆಗಳಿವೆ. ನಾಗರಿಕರಿಗೆ ಕಿರುಕುಳ ನೀಡುವುದು, ಲಂಚಕ್ಕೆ ಬೇಡಿಕೆ ಇಡುವುದು ಮತ್ತು ಭ್ರಷ್ಟಾ ಚಾರದಲ್ಲಿ ತೊಡಗುವ ಪೊಲೀಸ್ ಅಧಿಕಾರಿಗಳ ವಿರುದ್ಧ ಸರಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ‘ರಾಜ್ಯದ ಪೊಲೀಸ್ ವ್ಯವಸ್ಥೆ ತುಕ್ಕು ಹಿಡಿದಿದೆ. ಇದನ್ನು ಒಂದೇ ದಿನದಲ್ಲಿ ಸರಿಪಡಿಸಲು ಸಾಧ್ಯ ವಿಲ್ಲ’ ಎಂದು ಸಚಿವರೇ ಒಪ್ಪಿಕೊಂಡಿದ್ದಾರೆ.

ಬಿಡದಿ ರೈತರ ಹಿತ ಮುಖ್ಯ

ಬಿಡದಿ ರೈತರ ಹಿತ ಮುಖ್ಯ

ವಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಯೋಜನೆಯನ್ನು ವಿರೋಧಿಸಿ ರೈತರ ಬೆನ್ನಿಗೆ ನಿಂತಿವೆ. ರಾಹುಲ್ ಗಾಂಧಿಗೆ ಪತ್ರ ಚಳುವಳಿ ನಡೆಯುತ್ತಿದೆ. ವಿಚಿತ್ರ ಎಂದರೆ, ಅಧಿಕಾರದಲ್ಲಿದ್ದಾಗ ಇದೇ ಯೋಜನೆಯನ್ನು ಜೆಡಿಎಸ್ ಹಾಗೂ ಬಿಜೆಪಿ ಅನುಮೋದಿಸಿದ್ದವು. ಅಂದರೆ, ಯೋಜನೆಯ ಕುರಿತ ವಿರೋಧ ರಾಜಕೀಯ ನೆಲೆಯಲ್ಲಿಯಷ್ಟೇ ನಡೆಯುತ್ತಿದೆ ಎಂದು ಅರ್ಥವಾಗುತ್ತದೆ.

Vishwavani Editorial: ಮಳೆ ಕೊರತೆ ಎದುರಿಸೋಣ

Vishwavani Editorial: ಮಳೆ ಕೊರತೆ ಎದುರಿಸೋಣ

ಪರ್ಯಾಯ ದ್ವೀಪ ಭಾರತ ಉಪಖಂಡದ ಮೇಲೆ ಇಷ್ಟು ಹೊತ್ತಿಗೆ ದಟ್ಟವಾಗಿ ಮೋಡಗಳು ಇರಬೇಕಾ ಗಿದ್ದು, ಉಪಗ್ರಹ ಚಿತ್ರಗಳಲ್ಲಿ ಸ್ವಲ್ಪವೂ ಗೋಚರಿಸಿಲ್ಲ. ಹೀಗಾಗಿ, ಇನ್ನೂ ಹಲವು ದಿನಗಳ ಕಾಲ ಈ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ. ಜೂನ್ ಅಂತ್ಯದವರೆಗೆ ಮಳೆ ಬರದೇ ಹೋದರೆ, ಈ ವರ್ಷ ಬರಗಾಲ ಕಾಲಿಡುವುದು ಖಚಿತ. ಈ ಸಲದ ಮಳೆಯನ್ನು ನೆಚ್ಚುವಂತಿಲ್ಲ ಎಂದು ತಜ್ಞರು ಎಚ್ಚರಿಸಿ ದ್ದಾರೆ.

ಸಮರ ನಿಂತು ಶಾಂತಿ ನೆಲೆಸಲಿ

ಸಮರ ನಿಂತು ಶಾಂತಿ ನೆಲೆಸಲಿ

ಯುದ್ಧದ ಪರಿಣಾಮ ಹಾರ್ಮುಜ್ ಜಲಸಂಧಿಯನ್ನು ಇರಾನ್ ಬಂದ್ ಮಾಡಿ, ತೈಲ ಪೂರೈಕೆ ಅಸ್ತವ್ಯಸ್ತವಾಗಿತ್ತು. ಇದರಿಂದ ಹಣದುಬ್ಬರ, ಅವಶ್ಯಕ ವಸ್ತುಗಳ ಬೆಲೆಯೇರಿಕೆ ಉಂಟಾಗಿತ್ತು. ಸಮರಕ್ಕೆ ಮಂಗಳ ಹಾಡುವುದರೊಂದಿಗೆ ತೈಲ ಪೂರೈಕೆ ಸುಗಮವಾಗಿ ಬೆಲೆಯೂ ಇಳಿಯಲಿ ಎಂದು ನಾವು ಆಶಿಸಬಹುದು.

Vishwavani Editorial: ಶಾಲಾ ಕಟ್ಟಡಗಳ ಅಸುರಕ್ಷತೆ

Vishwavani Editorial: ಶಾಲಾ ಕಟ್ಟಡಗಳ ಅಸುರಕ್ಷತೆ

ಅಪಾಯಕಾರಿಯಾದ ಕಟ್ಟಡಗಳನ್ನು ಗುರುತಿಸಿ ಅವುಗಳನ್ನು ತೆರವುಗೊಳಿಸುವ ಅಥವಾ ದುರಸ್ತಿ ಮಾಡುವ ಕಾರ್ಯವನ್ನು ಸಂಬಂಧಪಟ್ಟ ಇಲಾಖೆ ಕಾಲಮಿತಿಯೊಳಗೆ ಕೈಗೊಳ್ಳಬೇಕಾಗಿತ್ತು. ಶಿಕ್ಷಣ ಎನ್ನುವುದು ಮಕ್ಕಳ ಭವಿಷ್ಯ ನಿರ್ಮಾಣದ ಅಡಿಪಾಯ. ಆದರೆ, ಸುರಕ್ಷಿತ ಕಟ್ಟಡಗಳ ಕೊರತೆ ಯಿಂದ ಮಕ್ಕಳ ಜೀವವೇ ಅಪಾದಲ್ಲಿರುವ ಪರಿಸ್ಥಿತಿ ನಿರ್ಮಾಣವಾಗಬಾರದು.

Vishwavani Editorial: ಮುಗ್ಧತೆಯ ನಾಶ

Vishwavani Editorial: ಮುಗ್ಧತೆಯ ನಾಶ

ಮಗುವಿನ ದೇಹದ ಮೇಲೆ ಸಿಗರೇಟ್‌ನಿಂದ ಸುಟ್ಟ ಕಲೆಗಳಿದ್ದುದು, ಕೊಲೆಯ ಬರ್ಬರತೆಗೆ ಸಾಕ್ಷಿ. ಹುಡುಕುತ್ತ ಹೋದರೆ ಇಂಥ ಹಲವು ಪ್ರಕರಣಗಳು ಸಿಗಬಹುದು ಹಾಗೂ ಮಕ್ಕಳನ್ನು ನಾವು ನೋಡಿಕೊಳ್ಳುವ ರೀತಿಗೆ ಕನ್ನಡಿ ಹಿಡಿಯಬಹುದು. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಪ್ರಕಾರ, 2024ರಲ್ಲಿ ಭಾರತದಲ್ಲಿ ಮಕ್ಕಳ ವಿರುದ್ಧದ ಅಪರಾಧಗಳ 1,87,702 ಪ್ರಕರಣಗಳು ದಾಖಲಾಗಿವೆ.

ಗೃಹಲಕ್ಷ್ಮಿ ಲೋಪ ಸರಿಪಡಿಸಿ

ಗೃಹಲಕ್ಷ್ಮಿ ಲೋಪ ಸರಿಪಡಿಸಿ

ಒಟ್ಟಾರೆ ಹೀಗೆ ರಾಜ್ಯದ ಖಜಾನೆಗೆ ನಷ್ಟವಾದ ಹಣ ಹಲವು ಕೋಟಿಗಳಷ್ಟು. ಇದು ಯೋಜನೆ ಯ ಅನುಷ್ಠಾನದ ಹಂತದಲ್ಲಿ ನಡೆದ ಬೃಹತ್ ಪ್ರಮಾದ. ಇದೀಗ ಅನರ್ಹರನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದ್ದು, ಅನರ್ಹರ ಹೆಸರನ್ನು ಪಟ್ಟಿಯಿಂದ ಡಿಲೀಟ್ ಮಾಡಲಾಗುತ್ತಿದೆ.

Vishwavani Editorial: ಗೌಡರ ನಿರ್ಗಮನ, ಖರ್ಗೆ ಆಗಮನ

Vishwavani Editorial: ಗೌಡರ ನಿರ್ಗಮನ, ಖರ್ಗೆ ಆಗಮನ

ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆಯಾಗಬೇಕಾದ ನಾಲ್ಕು ಸ್ಥಾನಗಳಿಗೆ ಇದೇ 18ರಂದು ನಡೆಯುವ ಚುನಾವಣೆಗೆ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಂಡಿದೆ. ಕಾಂಗ್ರೆಸ್‌ನಿಂದ ಎಂ.ಮಲ್ಲಿಕಾರ್ಜುನ ಖರ್ಗೆ, ಪವನ್ ಖೇರಾ, ಮನ್ಸೂರ್ ಅಲಿ ಖಾನ್ ಸ್ಪರ್ಧಿಸಿದ್ದರೆ, ಬಿಜೆಪಿಯಿಂದ ಪ್ರೊ.ಎಂ. ನಾಗರಾಜ್ ಅವರು ಸ್ಪರ್ಧಿಸಿದ್ದಾರೆ.

Vishwavani Editorial: ದಾಖಲೆ ಬರೆದ ಪ್ರಧಾನಿ

Vishwavani Editorial: ದಾಖಲೆ ಬರೆದ ಪ್ರಧಾನಿ

ಮನೆಮನೆಗೂ ವಿದ್ಯುತ್ ಹಾಗೂ ಅಡುಗೆ ಅನಿಲ ಕಲ್ಪಿಸುವ ಕಾರ್ಯದಲ್ಲಿ ಭಾರಿ ಪ್ರಗತಿ ಆಗಿದೆ. ಹೆದ್ದಾರಿಗಳು ಹಾಗೂ ರೈಲ್ವೆ ಜಾಲಗಳು ಸಾಕಷ್ಟು ವಿಸ್ತರಿಸಿದ್ದು, ಮೂಲ ಸೌಕರ‍್ಯದಲ್ಲಿ ಪ್ರಗತಿ ಯಾಗಿದೆ. ಭಾರತ ಅಂತಾರಾಷ್ಟ್ರೀಯ ಸೌರ ಒಕ್ಕೂಟದ ನಾಯಕತ್ವ ವಹಿಸಿಕೊಂಡಿದ್ದು, ಸೌರ ಶಕ್ತಿ ಉತ್ಪಾದನೆಯಲ್ಲಿ ಜಾಗತಿಕವಾಗಿ 2ನೇ ಸ್ಥಾನದಲ್ಲಿದೆ.

Vishwavani Editorial: ಕಿರಿಯ ಪ್ರತಿಭೆಗಳ ಮಿಂಚು

ಕಿರಿಯ ಪ್ರತಿಭೆಗಳ ಮಿಂಚು

ಆಫ್ಘನ್ ತಂಡದ ವಿರುದ್ಧ ನಡೆದ ಟೆಸ್ಟ್‌ನಲ್ಲಿ ಭಾರತ ತಂಡದ ಮಾನವ್ ಸುತಾರ್ 6 ವಿಕೆಟ್‌ಗಳನ್ನು ಕಿತ್ತು ದಾಖಲೆ ಮಾಡಿದ್ದಾರೆ. ಇದು ಭಾರತ ತಂಡದಲ್ಲಿ ಸುತಾರ್ ಅವರ ಚೊಚ್ಚಲ ಟೆಸ್ಟ್ ಹಾಗೂ ಅವರ ವಯಸ್ಸು 26. ವೈಭವ್, ಸುತಾರ್, ಪ್ರಜ್ಞಾನಂದ, ಗುಕೇಶ್ ಮೊದಲಾದವರು ಆಧುನಿಕ ಭಾರತದ ಯುವ ತಲೆಮಾರಿನ ಕ್ರೀಡಾಳುಗಳಾಗಿದ್ದು, ಕ್ರೀಡಾಸ್ಪೂರ್ತಿ ಯನ್ನೂ ಗೆಲ್ಲುವ ಛಲವನ್ನೂ ಪ್ರದರ್ಶಿಸಿದ್ದಾರೆ. ಇಂಥ ಕಿರಿಯ ಪ್ರತಿಭೆಗಳೇ ನಮ್ಮ ದೇಶದ ಕ್ರೀಡಾಚೈತನ್ಯವನ್ನು ಮುಂದಕ್ಕೊಯ್ಯಲಿದ್ದಾರೆ ಎಂಬುದನ್ನು ಇವರು ಸಾರಿ ಹೇಳುತ್ತಿದ್ದಾರೆ.

Vishwavani Editorial: ಸಿದ್ಧಾಂತಗಳ ಅವಸಾನ

Vishwavani Editorial: ಸಿದ್ಧಾಂತಗಳ ಅವಸಾನ

ಪಶ್ಚಿಮ ಬಂಗಾಳದಲ್ಲೂ ಇದೇ ಸ್ಥಿತಿ ಕಾಣಿಸುತ್ತಿದೆ. ಅಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಇಬ್ಭಾಗವಾಗಿದೆ. ಒಂದು ಬಲಿಷ್ಠ ಬಣ ಬಿಜೆಪಿಯತ್ತ ಚಲಿಸುತ್ತಿದೆ. ಈ ರಾಜಕೀಯ ಬಿಕ್ಕಟ್ಟನ್ನು ನಿಭಾಯಿಸಲು ಮಮತಾ ಅಸಫಲರಾಗಿದ್ದಾರೆ. ಬಿಜೆಪಿ ಹಾಗೂ ಕಮ್ಯು ನಿಸ್ಟ್ ಪಕ್ಷಗಳ ರಾಜಕಾರಣವನ್ನು ವಿರೋಧಿಸುತ್ತಲೇ ಮಮತಾ ತಮ್ಮ ಪಕ್ಷವನ್ನು ಕಟ್ಟಿಕೊಂಡಿ ದ್ದಾರೆ.

ಕೊಟ್ಟ ಕುದುರೆಯ ಏರಬೇಕು

ಕೊಟ್ಟ ಕುದುರೆಯ ಏರಬೇಕು

ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಂಪುಟದಲ್ಲಿ ಮೊದಲ ದಿನವೇ ಬಂಡಾಯ ಕಾಣಿಸಿಕೊಂಡಿದೆ. ರಾಮಲಿಂಗಾರೆಡ್ಡಿ ಅವರು ತಮಗೆ ನೀಡಲಾದ ಖಾತೆ ಜಲಸಂಪನ್ಮೂಲ ಖಾತೆಯನ್ನು ತಿರಸ್ಕರಿಸಿ, ಬೆಂಗಳೂರು ನಗರಾಭಿವೃದ್ಧಿ ಖಾತೆ ಸಿಗದಿದ್ದುದಕ್ಕೆ ಅತೃಪ್ತಿ ವ್ಯಕ್ತಪಡಿಸಿ ರಾಜಿನಾಮೆ ನೀಡಿದ್ದಾರೆ. ರೆಡ್ಡಿ ಅವರ ಜೊತೆ ಮಾತನಾಡುತ್ತೇನೆ ಎಂದು ಸಿಎಂ ಹೇಳಿದ್ದಾರಾದರೂ, ರಾಜಿನಾಮೆ ಅಂಗೀಕೃತವಾಗಿದೆ.

Vishwavani Editorial: ಹೊಸ ಯೋಜನೆಗಳ ಸಾಲು

Vishwavani Editorial: ಹೊಸ ಯೋಜನೆಗಳ ಸಾಲು

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಅವಕಾಶ ದೊರೆತಾಗಲೆ ವಿದ್ಯಾರ್ಥಿಗಳ ಉಚಿತ ಪ್ರಯಾಣಕ್ಕೂ ಬೇಡಿಕೆ ಇತ್ತು. ಅದೀಗ ನನಸಾಗುತ್ತಿದೆ. ರಾಜ್ಯಾದ್ಯಂತ ಅನ್ಯಾನ್ಯ ಕಾರಣಗಳಿಂದ ಲಕ್ಷಾಂತರ ಮಂದಿ ತಮ್ಮ ಆಸ್ತಿಗಳಿಗೆ ಬಿ ಖಾತೆ ಪಡೆದಿದ್ದು, ಎಲ್ಲಾ ಖಾತೆ ಆಗದೆ ಆಸ್ತಿ ಸಾಲ, ಮಾರಾಟಗಳಲ್ಲಿ ಪಾಡು ಪಡುತ್ತಿದ್ದಾರೆ.

Vishwavani Editorial: ಡಿಕೆಶಿ ಮುಂದಿವೆ ಸವಾಲುಗಳು

Vishwavani Editorial: ಡಿಕೆಶಿ ಮುಂದಿವೆ ಸವಾಲುಗಳು

ಸಾಫ್ಟ್ ಹಿಂದುತ್ವದ ಬೆನ್ನೇರಿರುವ ಡಿಕೆಶಿ ಅವರಿಗೆ ಅಹಿಂದ ಮತಗಳನ್ನು ಉಳಿಸಿಕೊಳ್ಳುವ ಸವಾಲು ಇದೆ. ರಾಜ್ಯ ರಾಜಕಾರಣದಲ್ಲೇ ಸಕ್ರಿಯವಾಗಿ ಇರುತ್ತೇನೆ ಎಂದು ಸಾರಿರುವ ಸಿದ್ದರಾಮಯ್ಯ ಅವರ ಬೆಂಬಲವನ್ನೂ ಇದಕ್ಕಾಗಿ ಸಕ್ರಿಯವಾಗಿ ಬಳಸಿಕೊಳ್ಳಬೇಕಿದೆ. ಬೆಂಗಳೂರಿನ ಅಭಿವೃದ್ಧಿಗಾಗಿ ನಾನಾ ಯೋಜನೆಗಳು ಸಿಎಂ ತಲೆಯಲ್ಲಿವೆ.

Vishwavani Editorial: ಆರ್‌ಸಿಬಿ ಅರ್ಹ ವಿಜಯ

Vishwavani Editorial: ಆರ್‌ಸಿಬಿ ಅರ್ಹ ವಿಜಯ

ದೇವದತ್ ಪಡಿಕ್ಕಲ್, ಸುಯಶ್ ಶರ್ಮಾ, ವೆಂಕಟೇಶ್ ಅಯ್ಯರ್ ಮೊದಲಾದ ಅತ್ಯುತ್ತಮ ದಾಂಡಿಗರ ಸಾಲನ್ನೇ ಹೊಂದಿರುವ ಆರ್‌ಸಿಬಿ ಆಕ್ರಮಣಕಾರಿ ಆಟವನ್ನೇ ನೆಚ್ಚಿಕೊಂಡಿದ್ದು, ಪವರ್ ಪ್ಲೇನಲ್ಲಿ ಗರಿಷ್ಠ ರನ್‌ಗಳನ್ನು ದಾಖಲಿಸಿ ಎದುರಾಳಿ ತಂಡದ ಮೇಲೆ ಒತ್ತಡ ಸೃಷ್ಟಿಸಿದೆ. ಜೊತೆಗೆ ಅತ್ಯುತ್ತಮ ಬೌಲರ್‌ಗಳ ಪಡೆಯನ್ನೂ ಹೊಂದಿದೆ.

Vishwavani Editorial: ಟ್ರಬಲ್ ಶೂಟರ್ ಸಿಎಂ

Vishwavani Editorial: ಟ್ರಬಲ್ ಶೂಟರ್ ಸಿಎಂ

ನಾಯಕತ್ವದ ವಿಚಾರದಲ್ಲಿ ಡಿಕೆಶಿ ಅವರನ್ನು ಯಾರೂ ಕಡೆಗಣಿಸಲು ಸಾಧ್ಯವಿಲ್ಲ. ಕಳೆದ ಬಾರಿ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಪಕ್ಷದ ಅಧ್ಯಕ್ಷರಾಗಿ ಮಹತ್ವದ ಹೊಣೆ ವಹಿಸಿ ಕೊಂಡು, ಕಾಲಿಗೆ ಚಕ್ರ ಕಟ್ಟಿಕೊಂಡಂತೆ ತಿರುಗಾಡಿ, ಬಿಜೆಪಿಯ ಆಡಳಿತದ ಲೋಪದೋಷ ಗಳನ್ನು ಪರಿಣಾಮಕಾರಿಯಾಗಿ ಟೀಕಿಸುತ್ತ, ಕಾಂಗ್ರೆಸ್ ಆಡಳಿತಕ್ಕೆ ಬರುವಲ್ಲಿ ಗಣನೀಯ ಸಾಧನೆ ಮಾಡಿದವರು ಅವರು.

Vishwavani Editorial: ಎಲ್ ನಿನೋ ಎದುರಿಸೋಣ

Vishwavani Editorial: ಎಲ್ ನಿನೋ ಎದುರಿಸೋಣ

ಕೇರಳ ಕರಾವಳಿಗೆ ಮೇ 26ರಂದು ಮುಂಗಾರು ಪ್ರವೇಶಿಸಲಿದೆ ಎಂದು ಐಎಂಡಿ ಈ ಮೊದಲು ಅಂದಾಜಿಸಿತ್ತು. ಆದರೆ ಈಗ ಮುಂಗಾರು ಆಗಮನವೂ ಒಂದು ವಾರ ತಡವಾಗಿದೆ. ಎಲ್ ನಿನೊ ಕಾರಣದಿಂದಾಗಿ ಈ ವರ್ಷದ ಮುಂಗಾರು ಹಂಗಾಮಿನಲ್ಲಿ ಮಳೆ ಪ್ರಮಾಣ (ದೀರ್ಘಾವಧಿ ಸರಾಸರಿ) ಶೇ.92ರಿಂದ ಶೇ.90ಕ್ಕೆ ಇಳಿಸಲಾಗಿದೆ.

ಜನನಾಯಕನ ನಿರ್ಗಮನ

ಜನನಾಯಕನ ನಿರ್ಗಮನ

ಮೂರು ವರ್ಷ ಹಿಂದೆ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದಾಗ ಖಜಾನೆ, ತೆರಿಗೆಗೆ ಸಂಬಂಧಿಸಿದಂತೆ ಭರವಸೆಯ ವಾತಾವರಣ ಇರಲಿಲ್ಲ. ಅಂಥ ಹೊತ್ತಿನಲ್ಲೂ, ತಾವು ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಉಚಿತ ಗ್ಯಾರಂಟಿಗಳನ್ನು ಹಿಂಜರಿಕೆಯಿಲ್ಲದೆ ಅನುಷ್ಠಾನಕ್ಕೆ ತಂದು, ಕೊಟ್ಟ ಮಾತಿನಂತೆ ನಡೆದು ಕೊಂಡವರು ಸಿದ್ದರಾಮಯ್ಯ. ಈಗಲೂ ಅವರು ಹೈಕಮಾಂಡ್ ಮುಂದೆ ವಚನಬದ್ಧತೆ ಕಾಪಾಡಿ ಕೊಂಡಿದ್ದಾರೆ.

Vishwavani Editorial: ಮಳೆಗಾಲದ ಸನ್ನದ್ಧತೆ ಬೇಕು

Vishwavani Editorial: ಮಳೆಗಾಲದ ಸನ್ನದ್ಧತೆ ಬೇಕು

ಇವು ಜನಸಾಮಾನ್ಯರಿಗೆ ಗೋಳನ್ನು ತರುತ್ತವಲ್ಲದೆ ಹಿತವನ್ನಲ್ಲ. ಸರಕಾರ ಮೊದಲೇ ಇದನ್ನೆಲ್ಲ ಯೋಜಿಸಿ ಮಳೆಗಾಲಕ್ಕೆ ಸೂಕ್ತ ತಯಾರಿ ಮಾಡಿಕೊಳ್ಳಬೇಕು. ಮಳೆ ಬಿದ್ದ ನಂತರ ಈ ಬಗ್ಗೆ ಯೋಚಿಸು ವುದಲ್ಲ. ಇನ್ನೂ ಕಾಲ ಮಿಂಚಿಲ್ಲ. ಅರ್ಧಕ್ಕೆ ಬಿಟ್ಟ ಕಾಮಗಾರಿಗಳನ್ನು ಪೂರೈಸಬೇಕು. ಮಳೆ ನೀರು ಹರಿದುಹೋಗುವ ಮತ್ತು ಇಂಗುವ ವ್ಯವಸ್ಥೆಗಳನ್ನು ಸಮರ್ಪಕಗೊಳಿಸಬೇಕು.

ಮೇಕೆದಾಟಿಗೆ ವಿಜಯ್ ತಗಾದೆ

ಮೇಕೆದಾಟಿಗೆ ವಿಜಯ್ ತಗಾದೆ

ಕರ್ನಾಟಕ ಸರಕಾರ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ಜನರಿಗೆ ಕುಡಿಯುವ ನೀರು ಒದಗಿಸುವ ಪ್ರಮುಖ ಉದ್ದೇಶದಿಂದ ರಾಮನಗರ ಜಿಲ್ಲೆಯ ಮೇಕೆದಾಟು ಬಳಿ ಆಣೆಕಟ್ಟು ನಿರ್ಮಾಣಕ್ಕೆ ಮುಂದಾಗಿದೆ. ಸುಮಾರು 67 ಟಿಎಂಸಿ ನೀರನ್ನು ಸಂಗ್ರಹಿಸುವ ಸಾಮರ್ಥ್ಯವನ್ನು ಈ ಜಲಾಶಯ ಹೊಂದಿರಲಿದೆ. ತಮಗೆ ದೊರೆಯುವ ಕಾವೇರಿ ನೀರು ಕಡಿತವಾಗಬಹುದು ಎಂಬುದು ಕಾನೂನು ಹೋರಾಟ ಆರಂಭಿಸಿ ರುವ ತಮಿಳುನಾಡಿನ ಆತಂಕ.

Vishwavani Editorial: ಡಿಜಿಟಲ್ ಅರೆಸ್ಟ್ ವಿಶ್ವರೂಪ

Vishwavani Editorial: ಡಿಜಿಟಲ್ ಅರೆಸ್ಟ್ ವಿಶ್ವರೂಪ

ಬಲಿಪಶುಗಳನ್ನು ಗುರುತಿಸಿ ವಿಡಿಯೋ ಕಾಲ್ ಮೂಲಕ ‘ನಾವು ಪೊಲೀಸರು. ನೀವು ಅಕ್ರಮ ಹಣ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದೀರಿ, ಬಂಧನಕ್ಕೆ ಒಳಗಾಗದಿರಲು ನಾವು ಹೇಳಿದಂತೆ ಕೇಳಿ’ ಎಂದು ಬೆದರಿಸುವುದು ಸಾಮಾನ್ಯ. ಇದಕ್ಕೆ ಬೆದರಿದ ಜನಸಾಮಾನ್ಯರು ತಮ್ಮ ಖಾತೆಯ ವಿವರಗಳನ್ನು ನೀಡಿ, ಹಣವನ್ನು ಖದೀಮರ ಖಾತೆಗೆ ವರ್ಗಾಯಿಸುತ್ತಾರೆ.

Vishwavani Editorial: ಕಪ್ಪೆಚಿಪ್ಪು ದುರಂತ ದುಃಖಕರ

Vishwavani Editorial: ಕಪ್ಪೆಚಿಪ್ಪು ದುರಂತ ದುಃಖಕರ

ನೀರಿನ ರಭಸಕ್ಕೆ ಸಿಲುಕಿ ಇವರೆಲ್ಲರೂ ಮುಳುಗಿದ್ದಾರೆ. ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿಗಳನ್ನು ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ನದಿಯಲ್ಲಿ ಇನ್ನೂ ಕೆಲವರು ಕಣ್ಮರೆ ಯಾಗಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳೀಯರ ಸಹಾಯದೊಂದಿಗೆ ತೀವ್ರ ಶೋಧ ಕಾರ್ಯ ಮುಂದುವರಿದಿದೆ. ಕಪ್ಪೆಚಿಪ್ಪು ಆರಿಸುವುದನ್ನು ರಾಜ್ಯದ ಕರಾವಳಿಯುದ್ದಕ್ಕೂ ಸ್ಥಳೀಯ ಜನ ಮಾಡುತ್ತಿರುತ್ತಾರೆ.

Loading...