ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವೈರಲ್‌

ಐಟಿ ಕಂಪನಿಯ 18 ಲಕ್ಷ ರುಪಾಯಿ ಸಂಬಳ ತೊರೆದು ಡೇರಿ ಉದ್ಯಮ ಆರಂಭಿಸಿದ 42 ವರ್ಷದ ಟೆಕ್ಕಿ! ಸ್ಫೂರ್ತಿದಾಯಕ ವಿಡಿಯೊ ನೋಡಿ

ಐಟಿ ಕಂಪನಿ ಜಾಬ್ ತೊರೆದು ಡೇರಿ ಉದ್ಯಮ ಆರಂಭಿಸಿ ಸಕ್ಸಸ್ ಕಂಡ 42ರ ಟೆಕ್ಕಿ

Viral News: ಮಾನಸಿಕ ನೆಮ್ಮದಿಗಾಗಿ ಲಕ್ಷ ಲಕ್ಷ ರುಪಾಯಿ ಸಂಬಳ ಸಿಗುತ್ತಿದ್ದ ಉದ್ಯೋಗ ತೊರೆದು ಸ್ವಂತ ಉದ್ಯಮ ನಡೆಸುವವರು ಅನೇಕರು ಇದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ತೆಲಂಗಾಣದ ಹೈದರಾಬಾದ್‌ನ 42 ವರ್ಷದ ಎಂಜಿನಿಯರ್ ಒಬ್ಬರು ಐಟಿ ಕೆಲಸಕ್ಕೆ ಗುಡ್ ಬೈ ಹೇಳಿ ಡೇರಿ ಉದ್ಯಮ ಆರಂಭಿಸಿದ್ದಾರೆ. ಕೆಲಸದ ಬಗ್ಗೆ ಅಭದ್ರತೆ ಕಾಡಿರುವುದರಿಂದ ಸ್ವಂತ ಉದ್ಯಮವನ್ನು ಆರಂಭಿಸಲು ಇಚ್ಚಿಸಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಸದ್ಯ ಇವರ ಯಶಸ್ಸು ಕಂಡು ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.

ಅಧಿಕಾರ ದರ್ಪದಿಂದ ಬೀದಿಬದಿ ವ್ಯಾಪಾರಿಯ ಆಹಾರ ಚೆಲ್ಲಿದ ಪೊಲೀಸ್ ಅಧಿಕಾರಿ: ಕಣ್ಣೀರಿಟ್ಟ ಮಾರಾಟಗಾರನ ವಿಡಿಯೊ ವೈರಲ್‌

ಬೀದಿ ಬದಿ ವ್ಯಾಪಾರಿಯ ಆಹಾರ ಚೆಲ್ಲಿದ ಪೊಲೀಸ್ ಅಧಿಕಾರಿ

Viral Video: ಕಾನೂನು ರಕ್ಷಿಸಬೇಕಾದ ಪೊಲೀಸರೇ ಬೀದಿಬದಿ ವ್ಯಾಪಾರಿಯ ಆಹಾರ ಮತ್ತು ಪಾತ್ರೆಗಳನ್ನು ನೆಲಕ್ಕೆ ಎಸೆದಿದ್ದಾರೆ. ಪೊಲೀಸ್ ಅಧಿಕಾರ ದರ್ಪದ ಬಗ್ಗೆ ನೆಟ್ಟಿಗರು ಕಿಡಿಕಾರಿದ್ದು ಈ ಘಟನೆ ಈಗ ವ್ಯಾಪಕ ಆಕ್ರೋಶವನ್ನು ಹುಟ್ಟುಹಾಕಿದೆ. ಅನೇಕರು ಆಹಾರವನ್ನು ಎಸೆದ ಕ್ರಮವನ್ನು ಪ್ರಶ್ನಿಸಿದ್ದು, ಇಂತಹ ಅಧಿಕಾರಿಗಳು ಬಡವರ್ಗದ ಜನತೆಯ ಮೇಲೆ ಮಾತ್ರ ದರ್ಪ ತೋರಿಸಲು ಸಾಧ್ಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

81ರ ವೃದ್ಧೆ, 24ರ ಯುವಕ: ಸೋಶಿಯಲ್ ಮೀಡಿಯಾ ಪ್ರೀತಿ, ಏರ್‌ಪೋರ್ಟ್‌ನಲ್ಲಿ ಭಾವುಕ ಭೇಟಿ! ವಿಡಿಯೊ ವೈರಲ್

81ರ ಅಜ್ಜಿ, 24ರ ಯುವಕ: ಸೋಶಿಯಲ್ ಮೀಡಿಯಾ ಪ್ರೇಮ ಈಗ ಮದುವೆಯತ್ತ

Viral Video: ಫ್ರಾನ್ಸ್‌ನ 81 ವರ್ಷದ ಮಹಿಳೆ ಮತ್ತು ಸೆನೆಗಲ್‌ನ 24 ವರ್ಷದ ಯುವಕ ಸೋಶಿಯಲ್ ಮೀಡಿಯಾದಲ್ಲಿ ಪರಿಚಯವಾಗಿ ಪ್ರೀತಿಯಲ್ಲಿ ಬಿದ್ದಿದ್ದಾರೆ. ಎರಡು ವರ್ಷಗಳ ಆನ್‌ಲೈನ್‌ ಸಂಪರ್ಕದ ಬಳಿಕ ಸೆನೆಗಲ್‌ನಲ್ಲಿ ಮೊದಲ ಬಾರಿ ಭೇಟಿಯಾದ ಇವರ ಭಾವುಕ ವಿಡಿಯೊ ವೈರಲ್ ಆಗಿದೆ. 57 ವರ್ಷಗಳ ವಯಸ್ಸಿನ ಅಂತರದ ನಡುವೆಯೂ 2026ರ ಸೆಪ್ಟೆಂಬರ್‌ನಲ್ಲಿ ಮದುವೆಯಾಗಲು ಈ ಜೋಡಿ ಮುಂದಾಗಿದೆ.

ಕೊನೆ ಕ್ಷಣದಲ್ಲಿ ಎಐ ಬಳಸಿ ಮೆಹೆಂದಿ ವಿನ್ಯಾಸ ಆರಿಸಿದ ಮುಂಬೈ ವಧು: 'ಪರ್ಫೆಕ್ಟ್ ಡಿಸೈನ್'ಎಂದ ನೆಟ್ಟಿಗರು

ಎಐ ಬಳಸಿ ಮೆಹೆಂದಿ ಡಿಸೈನ್ ಆರಿಸಿದ ವಧು: ವಿನ್ಯಾಸಕ್ಕೆ ನೆಟ್ಟಿಗರು ಫಿದಾ

Viral News: ಏನೇ ಪ್ರಶ್ನೆ, ಗೊಂದಲಗಳಿದ್ದರೂ ಕ್ಷಣಾರ್ಧದಲ್ಲಿ ಉತ್ತರಿಸುವ ಎಐ ಆಧಾರಿತ ತಂತ್ರಜ್ಞಾನದಿಂದ ಪರಿಹಾರ ಕಂಡುಕೊಳ್ಳುವವರು ಅನೇಕರು ಇದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಮೆಹೆಂದಿ ಶಾಸ್ತ್ರದ ಕೊನೆ ಕ್ಷಣದ ವೇಳೆಗೆ ಮಹಾರಾಷ್ಟ್ರದ ಮುಂಬೈ ವಧುವೊಬ್ಬರು ಚಾಟ್ ಜಿಟಿಪಿ ಬಳಸಿ ಮೆಹೆಂದಿ ಡಿಸೈನ್ ಆಯ್ಕೆ ಮಾಡಿದ್ದಾರೆ. ತಮ್ಮ ಪ್ರೇಮಕಥೆಯನ್ನು ಬಿಂಬಿಸುವ ಈ ಡಿಸೈನ್ ತನಗೆ ಸೂಕ್ತವಾಗಿತ್ತು ಎಂದು ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.

ಚಾಲಕನ ನಿರ್ಲಕ್ಷ್ಯದಿಂದ ಯುವತಿ ಗಂಭೀರ ಗಾಯ; ಚಿಕಿತ್ಸೆಗೆ 20 ಲಕ್ಷ ರುಪಾಯಿ ಆಗಿದ್ದರೂ ಕ್ಯಾರೇ ಎನ್ನದ ರ‍್ಯಾಪಿಡೋ ಸಂಸ್ಥೆ

ಚಾಲಕನ ನಿರ್ಲಕ್ಷ್ಯದಿಂದ ಯುವತಿಗೆ ಗಾಯ; ಕ್ಯಾರೇ ಎನ್ನದ ರ‍್ಯಾಪಿಡೋ

Viral News: ಯುವತಿಯೊಬ್ಬರು ಕಚೇರಿಗೆ ತೆರಳಲು ಬೆಂಗಳೂರಿನಿಂದ ರ‍್ಯಾಪಿಡೋ ಬುಕ್ ಮಾಡಿದ್ದರು. ಆದರೆ ರೈಡರ್ ಅಜಾಗರೂಕತೆಯಿಂದ ವೇಗವಾಗಿ ತೆರಳಿದ ಕಾರಣ ನಿಯಂತ್ರಣ ತಪ್ಪಿ ಅಪಘಾತವಾಗಿದೆ. ಇದರಿಂದ ಯುವತಿ ರಸ್ತೆಗೆ ಬಿದ್ದಿದ್ದು ಟ್ರ್ಯಾಕ್ಟರ್‌ ಅವರ ಮೇಲೆ ಹರಿದಿದೆ. ಈ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ರ‍್ಯಾಪಿಡೋ ಸಂಸ್ಥೆ ಮಾತ್ರ ಯಾವುದೇ ವೈದ್ಯಕೀಯ ವೆಚ್ಚಗಳನ್ನು ನೀಡದೆ ನಿರ್ಲಕ್ಷ್ಯವಹಿಸಿದೆ.

ರಾಜಸ್ಥಾನದ ಸರ್ಕಾರಿ ಆಸ್ಪತ್ರೆಯಲ್ಲಿ ಅಘಾತಕಾರಿ ಘಟನೆ: ಮಹಿಳೆ ಮೇಲೆ ಕುಸಿದು ಬಿದ್ದ ಚಾವಣಿ; ಸಿಸಿಟಿವಿ ದೃಶ್ಯ ವೈರಲ್

ರಾಜಸ್ಥಾನದ ಸರ್ಕಾರಿ ಆಸ್ಪತ್ರೆಯ ಚಾವಣಿ ಕುಸಿದು ಮಹಿಳೆಗೆ ಗಾಯ

Viral Video: ರಾಜಸ್ಥಾನದ ಚುರು ಜಿಲ್ಲೆಯ ಸುಜನ್‌ಗಢದಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಅಘಾತಕಾರಿ ಘಟನೆಯೊಂದು ನಡೆದಿದೆ. ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಮುಖ್ಯದ್ವಾರದ ಚಾವಣಿ ಕುಸಿದು ಬಿದ್ದಿದ್ದು ಮಹಿಳೆಯೊಬ್ಬರ ತಲೆಗೆ ತೀವ್ರ ಗಾಯವಾಗಿದೆ. ಮಹಿಳೆಯನ್ನು ಸರ್ಕಾರಿ ಬಗಾಡಿಯಾ ಉಪ-ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

80ರ ವರ್ಷದ ತಂದೆಯನ್ನು ಮೊದಲ ಬಾರಿಗೆ ಬೀಚ್‌ಗೆ ಕರೆದೊಯ್ದ ಮಗ; ಭಾವುಕ ಕ್ಷಣದ ವಿಡಿಯೊ ವೈರಲ್

ಮಗನ ಜತೆ ಮೊದಲ ಬಾರಿಗೆ ಬೀಚ್‌ಗೆ ಬಂದ 80ರ ವರ್ಷದ ತಂದೆ

Viral Video: 80 ವರ್ಷದ ವೃದ್ಧ ತಂದೆ ಮೊದಲ ಬಾರಿಗೆ ಬೀಚ್‌ಗೆ ಕಾಲಿಟ್ಟು ರೋಮಾಂಚಿತರಾಗಿರುವ ವಿಡಿಯೊ ವೈರಲ್ ಆಗಿದೆ. ಒಡಿಶಾದ ಕೊನಾರ್ಕ್ ಬಳಿಯ ಚಂದ್ರಭಾಗ ಬೀಚ್‌ಗೆ ವೃದ್ಧ ತಂದೆಯನ್ನು ಮಗ ಕರೆದುಕೊಂಡು ಹೋಗಿದ್ದು ಅವರು ಸಣ್ಣ ಮಗುವಿನಂತೆ ಖುಷಿ ಪಟ್ಟಿದ್ದಾರೆ. ಅವರು ಸಮುದ್ರ ತೀರವನ್ನು ಸಮೀಪಿಸುತ್ತಿದ್ದಂತೆ, ತನ್ನ ಕೈಗಳನ್ನು ಮುಗಿದು ಪ್ರಾರ್ಥನೆ ಮಾಡಿದ್ದಾರೆ. ಕೆಲವು ಕ್ಷಣಗಳ ನಂತರ, ಅಲೆಗಳು ಅವರ ಪಾದಗಳನ್ನು ನಿಧಾನವಾಗಿ ಸ್ಪರ್ಶಿಸಿದಾಗ ಮೌನವಾಗಿ ನಿಂತು ನೋಡಿದ್ದಾರೆ.

ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡೋದು ನೋಡಿದ್ರೆ ಶಾಕ್‌ ಆಗ್ತೀರಾ! ಮುರಿದ ಕಾಲಿಗೆ ಪ್ಲಾಸ್ಟರ್ ಬದಲಿಗೆ ಕಾರ್ಡ್‌ಬೋರ್ಡ್ ಬ್ಯಾಂಡೇಜ್ ಹಾಕಿದ ವೈದ್ಯರು!

ಪ್ಲಾಸ್ಟರ್ ಬದಲು ಕಾರ್ಡ್‌ಬೋರ್ಡ್ ಬ್ಯಾಂಡೇಜ್ ಹಾಕಿದ ವೈದ್ಯರು

Viral Video: ಬಿಹಾರದ ಬೇಗೂಸರಾಯ್ ಆಸ್ಪತ್ರೆಯೊಂದರಲ್ಲಿ ಪ್ಲಾಸ್ಟರ್ ಬದಲಿಗೆ ಗಾಯಗೊಂಡ ವ್ಯಕ್ತಿಯ ಕಾಲಿಗೆವಖಾಲಿ ರಟ್ಟಿನ ಬಾಕ್ಸ್ ಬಳಸಿ ಬ್ಯಾಂಡೇಜ್ ಮಾಡಿರುವ ವಿಡಿಯೊವೊಂದು ವೈರಲ್ ಆಗಿದೆ. ಈ ದೃಶ್ಯ ಬಿಹಾರದ ಆರೋಗ್ಯ ವ್ಯವಸ್ಥೆಯ ಬಗ್ಗೆ ವ್ಯಾಪಕ ಟೀಕೆಗೆ ಕಾರಣವಾಗಿದ್ದು ನೆಟ್ಟಿಗರು ಆಸ್ಪತ್ರೆ ಸಿಬ್ಬಂದಿಗಳ ವರ್ತನೆ ವಿರುದ್ಧ ಕಿಡಿಕಾರಿದ್ದಾರೆ.

ಸಿಡಿಲು ಬಡಿದು ಯುವ ಫುಟ್ಬಾಲ್ ಆಟಗಾರ ಸಾವು; ಭೀಕರ ದೃಶ್ಯದ ವಿಡಿಯೊ ವೈರಲ್‌

ಪಂದ್ಯದ ವೇಳೆ ಸಿಡಿಲು ಬಡಿದು ಯುವ ಫುಟ್ಬಾಲ್ ಆಟಗಾರ ಸಾವು

Lightning Strikes: ಥೈಲ್ಯಾಂಡ್‌ನಲ್ಲಿ ಸಿಡಿಲಿನಿಂದ ಸಾವುಗಳು ಸಾಮಾನ್ಯ ಎಂದು ಸುದ್ದಿವಾಹಿನಿಯೊಂದು ವರದಿ ಮಾಡಿದೆ. ರೋಗ ನಿಯಂತ್ರಣ ಇಲಾಖೆಯ ಡೇಟಾವನ್ನು ಉಲ್ಲೇಖಿಸಿ, 2020 ಮತ್ತು 2024 ರ ನಡುವೆ ದೇಶಾದ್ಯಂತ ಕನಿಷ್ಠ 283 ಜನರು ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ ಮತ್ತು ಅವರಲ್ಲಿ ಹಲವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಅದು ಹೇಳಿದೆ.

ಮೂವರು ಪುತ್ರಿಯರಿದ್ದರೂ ಕೊನೆಗಾಲದಲ್ಲಿ ಅನಾಥನಾದ ಶ್ರೀಮಂತ ವ್ಯಾಪಾರಿ: ಅಂತ್ಯಕ್ರಿಯೆಯ ವಿಡಿಯೊ ಕಳುಹಿಸಿ ಸಾಕು ಎಂದ ಮಕ್ಕಳು

ತಂದೆಯ ಅಂತ್ಯಕ್ರಿಯೆ ಮಾಡಿ ವಿಡಿಯೊ ಕಳುಹಿಸಿ ಎಂದ ಮಕ್ಕಳು

ಜೀವವನ್ನೇ ತೇಯ್ದು ಮಕ್ಕಳನ್ನು ಚೆನ್ನಾಗಿ ನೋಡಿಕೊಂಡರೂ ಕೊನೆಗಾಲದಲ್ಲಿ ಅವರು ಜೊತೆ ನಿಲ್ಲುತ್ತಾರೆ ಎನ್ನುವ ಭರವಸೆ ಇರುವುದಿಲ್ಲ ಎಂಬುದನ್ನು ಕೆಲವೊಂದು ಘಟನೆಗಳು ಮತ್ತೆ ಮತ್ತೆ ಸಾಬೀತು ಪಡಿಸುತ್ತಲೇ ಇರುತ್ತದೆ. ಇಂತಹ ಒಂದು ಘಟನೆ ಈಗ ಹರಿಯಾಣದಲ್ಲಿ ನಡೆದಿದೆ. ಶ್ರೀಮಂತ ವ್ಯಾಪಾರಿಯೊಬ್ಬರಿಗೆ ಮೂವರು ಹೆಣ್ಣು ಮಕ್ಕಳಿದ್ದರೂ ಕೂಡ ತಂದೆಯ ಕೊನೆ ಘಳಿಗೆಯಲ್ಲಿ ಅವರು ಜೊತೆ ಇರಲಿಲ್ಲ. ವೃದ್ದಾಶ್ರಮದಲ್ಲೇ ಸಾವನ್ನಪ್ಪಿದ ತಂದೆಯ ಅಂತಿಮ ದರ್ಶನವನ್ನು ಮಾತ್ರವಲ್ಲ ಅಂತ್ಯಕ್ರಿಯೆ ನಡೆಸಲು ಕೂಡ ಬರಲಿಲ್ಲ.

ಚಲಿಸುವ ಬೈಕ್‌ನಲ್ಲಿಯೇ ಮಗುವಿಗೆ ಜನ್ಮ ನೀಡಿದ ತಾಯಿ: ಕಂದಮ್ಮನನ್ನು ರಕ್ಷಣೆ ಮಾಡಿದ ರೋಚಕ ವಿಡಿಯೊ ನೋಡಿ!

ಬೈಕ್ ನಲ್ಲೇ ಮಗುವಿನ ಜನನ: ತಕ್ಷಣ ಸ್ಪಂದಿಸಿ ಮಗುವನ್ನು ರಕ್ಷಿಸಿದ ವೈದ್ಯರು

Viral Video: ಬೈಕ್ ನ ಹಿಂಬದಿ ಸೀಟ್ ನಲ್ಲೇ ಗರ್ಭಿಣಿ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ ಅಘಾತಕಾರಿ ಘಟನೆಯೊಂದು ನಡೆದಿದೆ. ಆದಾಗ್ಯೂ, ಅವರು ಆಸ್ಪತ್ರೆಯ ಪ್ರವೇಶದ್ವಾರವನ್ನು ತಲುಪುವ ಹೊತ್ತಿಗೆ ಆದಾಗಲೇ ಹೆರಿಗೆಯಾಗಿತ್ತು. ವಿಯೆಟ್ನಾಂನ ಥಾಯ್ ನ್ಗುಯೆನ್ ಪ್ರಾಂತ್ಯದ ಫೂಲುವಾಂಗ್ ಆಸ್ಪತ್ರೆಯ ಆವರಣದಲ್ಲಿ ಈ ಘಟನೆ ನಡೆದಿದ್ದು ಸದ್ಯ ತಾಯಿ ಮಗು ಸುರಕ್ಷಿತವಾಗಿದ್ದಾರೆ.

ಮಾಲ್‌ನಲ್ಲಿ ಜನರೆದುರೇ ಚಾಕು ಹಿಡಿದು ಯುವತಿಯ ಮೇಲೆ ಹಲ್ಲೆ ನಡೆಸಿದ ಯುವಕ! ವಿಡಿಯೊ ವೈರಲ್

ಚಾಕು ಹಿಡಿದು ಯುವತಿ ಮೇಲೆ ದೈಹಿಕ ಹಲ್ಲೆ: ಕ್ರಮ ಕೈಗೊಂಡ ಪೊಲೀಸರು

Viral Video: ಇಂದಿರಾಲುರಂ ಜೈಪುರಿಯಾ ಮಾಲ್ ನಲ್ಲಿ ಅಘಾತಕಾರಿ ಘಟನೆಯೊಂದು ನಡೆದಿದೆ. ಯುವಕನೊಬ್ಬ ಚಾಕುವನ್ನು ಹಿಡಿದುಕೊಂಡು ಯುವತಿಗೆ ಪದೇ ಪದೇ ಕಪಾಳಮೋಕ್ಷ ಮಾಡುತ್ತಿರುವ ದೃಶ್ಯ ಕಂಡು ಬಂದಿದೆ. ಅಲ್ಲಿದ್ದ ಮತ್ತೊಬ್ಬ ಯುವತಿ ರಕ್ಷಣೆಗೆ ಧಾವಿಸಿದಾಗಲೂ ಆಕೆಯನ್ನು ಪಕ್ಕಕ್ಕೆ ತಳ್ಳಿ ಬೆದರಿಸಿದ್ದಾನೆ..

ಬೆಳಗ್ಗಿನ ಜಾವ ನಿದ್ದೆಯಲ್ಲಿದ್ದ ಸಿಬ್ಬಂದಿಗಳ ಮೊಬೈಲ್ ಕಳ್ಳತನ: ರೆಡ್‌ಹ್ಯಾಂಡಾಗಿ ಹಿಡಿದು ಖದೀಮನನ್ನು ಕುರ್ಚಿಗೆ ಕಟ್ಟಿ ಹಾಕಿದ ಸೆಕ್ಯುರಿಟಿ ಗಾರ್ಡ್!

ಮೊಬೈಲ್ ಕಳವು ಮಾಡುತ್ತಿದ್ದ ಖದೀಮನನ್ನು ರೆಡ್‌ ಹ್ಯಾಂಡಾಗಿ ಹಿಡಿದ ಸಿಬ್ಬಂದಿ

Viral Video: ಮುಂಬೈನ ಮೆರೈನ್ ಡ್ರೈವ್‌ನಲ್ಲಿ ಖದೀಮನೊಬ್ಬ ಸೆಕ್ಯುರಿಟಿ ಗಾರ್ಡ್‌ಗಳ ಮೊಬೈಲ್ ಫೋನ್ ಗಳನ್ನೆ ಗುರಿಯಾಗಿಸಿಕೊಂಡು ಕಳ್ಳತನ ಮಾಡಲು ಮುಂದಾಗಿದ್ದಾನೆ. ಎಚ್ಚೆತ್ತ ಸಿಬ್ಬಂದಿ ಯೊಬ್ವರು ಆರೋಪಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದು, ಪೊಲೀಸರ ಕೈಗೆ ಒಪ್ಪಿಸಿದ್ದಾರೆ. ಈ ರೋಚಕ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

Viral Video: ಪೊಲೀಸ್ ಬೈಕ್‌ನಲ್ಲಿ ರ‍್ಯಾಪಿಡೋ ಸೇವೆ? ಸರ್ಕಾರಿ ವಾಹನ ದುರುಪಯೋಗ ಪಡಿಸಿಕೊಂಡ ಸಬ್ ಇನ್ಸ್‌ಪೆಕ್ಟರ್‌ ವಿರುದ್ಧ ಕ್ರಮ

ಸರ್ಕಾರಿ ಬೈಕ್‌ನಲ್ಲಿ ರ‍್ಯಾಪಿಡೋ ರೈಡ್

Police Bike Used For Rapido Ride: ತೆಲಂಗಾಣದ ವಾರಂಗಲ್‌ನಲ್ಲಿ ಪೊಲೀಸ್ ಇಲಾಖೆಯ ಪಟ್ರೋಲಿಂಗ್ ಬೈಕ್ ಅನ್ನು ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಸೇವೆಗೆ ಬಳಸಲಾಗಿದೆ ಎಂಬ ಆರೋಪ ಭಾರಿ ವಿವಾದಕ್ಕೆ ಕಾರಣವಾಗಿದೆ. ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೊಲೀಸ್ ಇಲಾಖೆ ತನಿಖೆ ಆರಂಭಿಸಿದೆ. ಸಂಬಂಧಿತ ಸಬ್ ಇನ್ಸ್‌ಪೆಕ್ಟರ್ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗಿದೆ.

ಆನ್‌ಲೈನ್ ಮೀಟಿಂಗ್‌ಗೆ  'ಫೇಸ್‌ ಪ್ಯಾಕ್' ಧರಿಸಿ ಭಾಗವಹಿಸಿದ Gen Z ಉದ್ಯೋಗಿ: ಮ್ಯಾನೇಜರ್ ಪ್ರಶ್ನಿಸಿದ್ದಕ್ಕೆ ಯುವತಿ ಹೇಳಿದ್ದೇನು?

ಆನ್‌ಲೈನ್ ಮೀಟಿಂಗ್ ಗೆ ಫೇಸ್ ಪ್ಯಾಕ್ ಧರಿಸಿ ಕಾಣಿಸಿಕೊಂಡ ಯುವತಿ

Viral News: ಜೆನ್ ಝಿ ಯುವತಿಯೊಬ್ಬಳು ಮುಖಕ್ಕೆ ಫೇಸ್ ಪ್ಯಾಕ್ ಹಚ್ಚಿ ಮೀಟಿಂಗ್ ನಲ್ಲಿ ಪಾಲ್ಗೊಂಡಿದ್ದಾಳೆ. ಈ ಬಗ್ಗೆ ಪ್ರಶ್ನೆ ಮಾಡಿದ ಮ್ಯಾನೇಜರ್ ಗೆ ನಾಟುವಂತೆ ಉತ್ತರ ನೀಡಿದ್ದು ಕೆಲವರು ಆಕೆಯ ಹಾಸ್ಯಮಯ ಉತ್ತರವನ್ನು ಶ್ಲಾಘಿಸಿದರೆ, ಇನ್ನು ಕೆಲವರು ಕೆಲಸದ ಸ್ಥಳದ ಶಿಷ್ಟಾಚಾರವನ್ನು ಪ್ರಶ್ನಿಸಿದ್ದಾರೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ವರ್ಚುವಲ್ ಸಭೆಗಳ ಸಮಯದಲ್ಲಿ ಉದ್ಯೋಗಿಗಳು ತಮ್ಮ ಕ್ಯಾಮೆರಾಗಳನ್ನು ಆನ್‌ನಲ್ಲಿ ಇಡಬೇಕೇ? ಎಂದು ಕೆಲವರು ಪ್ರಶ್ನೆ ಮಾಡುತ್ತಿದ್ದಾರೆ.

ಮುಂದಿನ ವರ್ಷ ಸಂಕಷ್ಟ ಕಾದಿದೆಯಾ? ಸಿಜೆಪಿ ಸಂಸ್ಥಾಪಕ ಅಭೀಜಿತ್ ದೀಪ್ಕೆ ಕುರಿತು ಜ್ಯೋತಿಷಿ ನುಡಿದ ಭವಿಷ್ಯವೇನು?

ಅಭೀಜಿತ್ ದೀಪ್ಕೆ ಜೈಲಿಗೆ ಸೇರುತ್ತಾರೆಯೇ? ಭವಿಷ್ಯ ನುಡಿದ ಜ್ಯೋತಿಷಿ

Viral Video: ಸಿಜೆಪಿ ಸಂಸ್ಥಾಪಕರಿಗೆ ಮುಂದಿನ ದಿನದ ಭವಿಷ್ಯವು ಕರಾಳವಾಗಿದೆ ಎಂದು ಖ್ಯಾತ ಜ್ಯೋತಿಷಿಯೊಬ್ಬರು ಎಚ್ಚರಿಕೆ ನೀಡಿದ್ದಾರೆ. ಮುಂದಿನ ವರ್ಷ ಈತನಿಗೆ ತುಂಬಾ ಒತ್ತಡದಾಯಕ ದಿನವಾಗಬಹುದು. ವಾಸ್ತವವಾಗಿ ಜೈಲಿಗೂ ಹೋಗಬಹುದು ಎಂದು ಭವಿಷ್ಯ ನುಡಿದಿದ್ದಾರೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

ಕ್ರಿಕೆಟ್‌ನಲ್ಲಿ ಹೀಗೊಂದು ಅಚ್ಚರಿಯ ರನೌಟ್‌; ವಿಡಿಯೊ ವೈರಲ್‌

ಕ್ರಿಕೆಟ್‌ನಲ್ಲಿ ಹೀಗೊಂದು ಅಚ್ಚರಿಯ ರನೌಟ್‌; ವಿಡಿಯೊ ವೈರಲ್‌

Delhi Premier League 2026: ರೋಮಾಂಚಕಾರಿ ಗೆಲುವಿನಿಂದಾಗಿ ಔಟರ್ ಡೆಲ್ಲಿ ವಾರಿಯರ್ಸ್ ತಂಡವು ಋತುವಿನ ಮೊದಲ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಆರನೇ ಸ್ಥಾನಕ್ಕೆ ಏರಿತು. ಏತನ್ಮಧ್ಯೆ, ಸೋಲಿನ ಹೊರತಾಗಿಯೂ, ನ್ಯೂ ಡೆಲ್ಲಿ ಟೈಗರ್ಸ್ ಮೂರು ಪಂದ್ಯಗಳಲ್ಲಿ ಒಂದು ಜಯದೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

ಉತ್ತರ ಪ್ರದೇಶದಲ್ಲಿ ಮನಕಲಕುವ ಘಟನೆ: ವಿಷಕಾರಿ ಹಾವಿನಿಂದ ಮನೆಯವರನ್ನು ರಕ್ಷಿಸಿ ಪ್ರಾಣ ಬಿಟ್ಟ ಶ್ವಾನ

ಮನೆಯವರ ರಕ್ಷಣೆಗಾಗಿ ಹಾವಿನೊಂದಿಗೆ ಹೋರಾಡಿ ಪ್ರಾಣ ಬಿಟ್ಟ ಶ್ವಾನ

Viral News: ಉತ್ತರ ಪ್ರದೇಶದಲ್ಲಿ ಮನಕುಲಕುವ ಘಟನೆಯೊಂದು ನಡೆದಿದೆ. ವಿಷಕಾರಿ ಹಾವಿನಿಂದ ಮನೆಯವರನ್ನು ರಕ್ಷಿಸಿ ಶ್ವಾನ ಬಳಿಕ ಪ್ರಾಣ ಬಿಟ್ಟಿದೆ. ಹಾವಿನ ಜತೆ ಹೋರಾಡಿ ಜೀವ ಕಳೆದುಕೊಂಡಿದೆ. ಈ ಭಾವುಕ ಘಟನೆ ನೆಟ್ಟಿಗರ ಕಣ್ನಂಚು ಒದ್ದೆ ಮಾಡಿದೆ.

ಮೃತ ಮರಿಯನ್ನು ಮರೆಯಲು ಸಾಧ್ಯವಾಗದೆ ಶವವನ್ನು ಬೆನ್ನ ಮೇಲೆ ಹೊತ್ತು ಈಜಿದ ತಾಯಿ ಡಾಲ್ಫಿನ್: ಭಾವುಕ ವಿಡಿಯೊ ವೈರಲ್‌

ಮೃತ ಮರಿಯನ್ನು ಹೊತ್ತು ಈಜಿದ ತಾಯಿ ಡಾಲ್ಫಿನ್: ವಿಡಿಯೊ ನೋಡಿ

Viral Video: ತಾಯಿ ಡಾಲ್ಫಿನ್ ತನ್ನ ಮೃತ ಮರಿಯೊಂದನ್ನು ಸುಮಾರು ಆರು ದಿನಗಳವರೆಗೆ ಬೆನ್ನ ಮೇಲೆ ಹೊತ್ತುಈಜಿದೆ. ಕಂದನನ್ನು ಮರೆಯಲಾಗದೆ ತನ್ನ ಜತೆಯಲ್ಲೇ ಮೃತ ಮರಿಯನ್ನು ಹೊತ್ತೊಯ್ದಿದೆ. ಈ ಭಾವುಕ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ಎಲ್ಲರ ಕಣ್ಣಂಚಲ್ಲಿ ನೀರು ತರಿಸಿದೆ.

ಆರ್ಡರ್ ಮಾಡದೇ ಇದ್ದರೂ ತಲುಪಿದ ಪಾರ್ಸೆಲ್: ಬೆಂಗಳೂರಿನಲ್ಲಿ 500 ರುಪಾಯಿಯ ಕ್ಯಾಶ್-ಆನ್-ಡೆಲಿವರಿ ಸ್ಕ್ಯಾಮ್; ಏನಿದು ಮೋಸದ ಜಾಲ? ಹೇಗೆ ಕಾರ್ಯ ನಿರ್ವಹಿಸುತ್ತೆ?

500 ರುಪಾಯಿ ಕ್ಯಾಶ್-ಆನ್-ಡೆಲಿವರಿ ಸ್ಕ್ಯಾಮ್ ಬಗ್ಗೆ ಎಚ್ಚರಿಸಿದ ಯುವತಿ

Viral Video: ಇಂದು ಆನ್‌ಲೈನ್ ವ್ಯವಹಾರದಲ್ಲಿ ಮೋಸದ ಜಾಲ ಹೆಚ್ಚಾಗಿದ್ದು, ಹಣವನ್ನು ಕಳುಹಿಸುವ ಮುನ್ನ ಸರಿಯಾಗಿ ಪರಿಶೀಲಿಸಬೇಕಾಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಬೆಂಗಳೂರಿನಲ್ಲಿ ಹೊಸ ಸ್ಕ್ಯಾಮ್‌ ನಡೆಯುತ್ತಿದೆ. ಯುವತಿಯೊಬ್ಬರು ಯಾವುದೇ ವಸ್ತು ಆರ್ಡರ್ ಮಾಡದೇ ಇದ್ದರೂ ಅವರ ಹೆಸರಿಗೆ ಹಾಗೂ ವಿಳಾಸಕ್ಕೆ 500 ರುಪಾಯಿ ಮೌಲ್ಯದ ಪಾರ್ಸಲ್ ಬಂದಿದೆ. ಈ ವಂಚನೆಯ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ಎಚ್ಚರಿಕೆ ನೀಡಿದ್ದಾರೆ.

ವಿದ್ಯಾರ್ಥಿಗಳ ಭವಿಷ್ಯದ ಚಿಂತೆ ಇಲ್ಲದ ಶಿಕ್ಷಕನಿಗೆ ಕ್ಲಾಸ್‌ನಲ್ಲೇ ನಿದ್ದೆ; ತರಗತಿಯಲ್ಲೇ ಮಲಗಿದ ಅಧ್ಯಾಪಕ: ಮೊಬೈಲ್ ನೋಡುತ್ತ ಕುಳಿತ ಮಕ್ಕಳು

ತರಗತಿಯೊಳಗೆ ನಿದ್ದೆಗೆ ಜಾರಿದ ಶಿಕ್ಷಕ: ವಿಡಿಯೊ ವೈರಲ್‌

Viral Video: ಉತ್ತರ ಪ್ರದೇಶದ ಕನ್ನೌಜ್‌ನ ಸರ್ಕಾರಿ ಶಾಲೆಯ ಶಿಕ್ಷಕನೊಬ್ಬ ತರಗತಿ ವೇಳೆಯಲ್ಲಿ ನಿದ್ದೆ ಮಾಡಿದ್ದು, ವಿದ್ಯಾರ್ಥಿಗಳು ಮೊಬೈಲ್‌ನಲ್ಲಿ ಮುಳುಗಿ ಹೋಗಿದ್ದಾನೆ. ಈ ಘಟನೆಯ ದೃಶ್ಯ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಮಕ್ಕಳ ಭವಿಷ್ಯದ ಬಗ್ಗೆ ಆತಂಕ ವ್ಯಕ್ತ ಪಡಿಸಿದ್ದಾರೆ.

ಉಕ್ಕಿ ಹರಿಯುವ ನದಿಯ ಮಧ್ಯೆ ಜೀವ ಪಣಕ್ಕಿಟ್ಟು ಶಾಲೆಗೆ ತೆರಳುವ ಮಕ್ಕಳು; ವೈರಲ್ ವಿಡಿಯೊ ಇಲ್ಲಿದೆ

ಶಾಲೆ ಸೇರುವ ದಾರಿ ಜೀವಕ್ಕೆ ಸವಾಲು; ನದಿ ದಾಟುವ ಮಕ್ಕಳ ವಿಡಿಯೊ ವೈರಲ್

ಮಧ್ಯಪ್ರದೇಶದ ವಿದಿಶಾ ಜಿಲ್ಲೆಯ ಕರುವಾ ಗ್ರಾಮದ ಮಕ್ಕಳು ಶಾಲೆಗೆ ಹೋಗಲು ಪ್ರತಿದಿನ ಬೆಟ್ವಾ ನದಿಯ ಮೇಲಿನ ಕಿರಿದಾದ ಸ್ಟಾಪ್ ಡ್ಯಾಂ ದಾಟುತ್ತಿದ್ದಾರೆ. ಸುರಕ್ಷಿತ ರಸ್ತೆ ಬಳಸಲು 8–10 ಕಿ.ಮೀ. ಸುತ್ತು ಹೋಗಬೇಕಾಗಿರುವುದರಿಂದ ಮಕ್ಕಳು ಜೀವದ ಹಂಗು ತೊರೆದು ಈ ಅಪಾಯಕಾರಿ ಮಾರ್ಗವನ್ನೇ ಆಯ್ಕೆ ಮಾಡುತ್ತಿದ್ದಾರೆ. ವೈರಲ್ ವಿಡಿಯೋ ಬಳಿಕ ಆಡಳಿತ ಸೈಕಲ್ ವಿತರಣೆ, ತಾತ್ಕಾಲಿಕ ಸೇತುವೆ ನಿರ್ಮಾಣ ಹಾಗೂ ಹೊಸ ಶಾಲೆ ಆರಂಭಿಸುವ ಭರವಸೆ ನೀಡಿದೆ.

ಮದುವೆಯಾಗುವ ಕನ್ಯೆಗಾಗಿ ವ್ಯಕ್ತಿಯ ವಿಚಿತ್ರ ಷರತ್ತು ಕೇಳಿದ್ರೆ ಶಾಕ್‌ ಆಗ್ತೀರಾ! ಈತನ ನಿರೀಕ್ಷೆ ಕಂಡು ಕಾಲೆಳೆದ ನೆಟ್ಟಿಗರು!

ಆದರ್ಶ ಪತ್ನಿಗಾಗಿ ಯುವಕನ ವಿಚಿತ್ರ ಷರತ್ತು ಕಂಡು ನೆಟ್ಟಿಗರೇ ಶಾಕ್!

Viral News: ಇಲ್ಲೊಬ್ಬ ಆದರ್ಶ ಪತ್ನಿಯ ಬಗ್ಗೆ ವಿಚಿತ್ರ ಷರತ್ತುವೊಂದನ್ನು ಸೋಷಿಯಲ್ ಮೀಡಿಯಾ ದಲ್ಲಿ ಶೇರ್ ಮಾಡಿಕೊಂಡಿದ್ದಾನೆ. ತಾನು ಮದುವೆಯಾಗುವ ಹುಡುಗಿಗೆ ಇಂತಹ ಗುಣಗಳಿದ್ದರೆ ಮಾತ್ರ ಮದುವೆ ಯಾಗುತ್ತೆನೆಂದು ಹೇಳಿಕೊಂಡಿದ್ದು ಯುವಕನ ಷರತ್ತು ಕಂಡು ನೆಟ್ಟಿಗರು ಟ್ರೋಲ್ ಮಾಡು ತ್ತಿದ್ದಾರೆ. ಇಂದಿನ ಆಧುನಿಕ ಯುಗದಲ್ಲಿ ಇಂತಹ ಹುಡುಗಿ ಸಿಗುವ ಕನಸು ಕಾಣಬೇಡ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ.

ಬೆಂಗಳೂರು ಐಟಿ ಕಂಪನಿಯ 11 ಲಕ್ಷ ವೇತನದ ಕೆಲಸ ತೊರೆದು ನೀರಿನ ಬಿಸಿನೆಸ್ ಆರಂಭ ಮಾಡಿದ ಯುವಕ! ಈಗ ವಾರ್ಷಿಕ ಗಳಿಕೆ 28.5 ಲಕ್ಷ!

ಐಟಿ ಕಂಪನಿಯ ಜಾಬ್ ತೊರೆದು ನೀರಿನ ಬಿಸಿನೆಸ್ ಮೂಲಕ ಯಶಸ್ಸು ಕಂಡ ಯುವಕ

Viral News: ಕಾರ್ಪೊರೇಟ್ ಉದ್ಯಮವನ್ನು ತೊರೆದ ಅನೇಕ ಯುವಕ- ಯುವತಿಯರಿದ್ದಾರೆ. ಲಕ್ಷ ಲಕ್ಷ ಸಂಬಳ ಬರುತ್ತಿದ್ದರೂ ನೆಮ್ಮದಿ ಇಲ್ಲ ಅನ್ನುವ ಕಾರಣಕ್ಕೆ ಪ್ರತಿಷ್ಠಿತ ಕಂಪನಿಯ ಕೆಲಸವನ್ನೇ ತ್ಯಜಿ ಸುತ್ತಾರೆ. ಇದಕ್ಕೆ ಸಾಕ್ಷಿ ಎಂಬಂತೆ ಬೆಂಗಳೂರಿನ ಯುವಕನೊಬ್ಬ ಕಾರ್ಪೊರೇಟ್ ಜಾಬ್ ನಿಂದ ಬೇಸೆತ್ತು ಸ್ವಂತ ಉದ್ಯಮ ಮಾಡುವ ಮೂಲಕ ಯಶಸ್ಸು ಕಂಡ ಸುದ್ದಿಯೊಂದು ಭಾರೀ ವೈರಲ್ ಆಗುತ್ತಿದೆ

Loading...