ಬಾಲ್ಯದ ಜಗಳಕ್ಕೆ ಈಗ ಸೇಡು; ಸಹಪಾಠಿಯ ಹಲ್ಲು ಮುರಿದ ವೃದ್ಧರು
ಕೇರಳದ ಕಾಸರಗೋಡು ಜಿಲ್ಲೆಯ ಮಾಲೋಂ ಪಟ್ಟಣದಲ್ಲಿ 50 ವರ್ಷಗಳ ಹಿಂದೆ ನಾಲ್ಕನೇ ತರಗತಿಯಲ್ಲಿ ನಡೆದ ಜಗಳವೊಂದುಮತ್ತೆ ಹೊಡೆದಾಟಕ್ಕೆ ಕಾರಣವಾಗಿದೆ. ಇಬ್ಬರು ವೃದ್ಧರು ತಮ್ಮ ಶಾಲಾ ಸಹಪಾಠಿಯ ಮೇಲೆ ಕಲ್ಲಿನಿಂದ ದಾಳಿ ನಡೆಸಿದ ಘಟನೆ ಸೋಮವಾರ ವರದಿಯಾಗಿದೆ. ಆರೋಪಿಗಳಾದ ಮಲೋತು ಬಾಲಕೃಷ್ಣನ್ ಮತ್ತು ಮ್ಯಾಥ್ಯೂ ವಲಿಯಾಪ್ಲಾಕ್ಕಲ್, ಗಾಯಾಳು ವಿಜೆ ಬಾಬು (62) ಅವರನ್ನು ಕಲ್ಲಿನಿಂದ ಹೊಡೆದಿದ್ದಾರೆ.