ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವೈರಲ್‌

ನನ್ನ ಸ್ವಂತ ಮನೆಗೆ ಭೇಟಿ ನೀಡಲು ಅನುಮತಿ ಬೇಕೆ? ಪಿತೃ ಪ್ರಧಾನ ಮದುವೆ ಸಂಪ್ರದಾಯದ ವಿರುದ್ಧ ಯುವತಿ ಆಕ್ರೋಶ

ಮದುವೆ ಮಂಟಪದಲ್ಲೇ ಪಿತೃಪ್ರಧಾನ ಪದ್ಧತಿ ಖಂಡಿಸಿದ ವಧು

Viral News: ಮದುವೆಯೊಂದರಲ್ಲಿ ಪಿತೃ ಪ್ರಧಾನ ಭಾರತೀಯ ವಿವಾಹ ಆಚರಣೆಯ ಬಗ್ಗೆ ಯುವತಿಯೊಬ್ಬಳು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ. ವಿವಾಹದ ವಿಧಿ ವಿಧಾನದ ಸಂದರ್ಭ ದಲ್ಲಿ ಪಾದ್ರಿಯೂ ವಧುವನ್ನು ತನ್ನ ಗಂಡನ ಒಪ್ಪಿಗೆಯಿಲ್ಲದೆ ತನ್ನ ಪೋಷಕರ ಮನೆಗೆ ಭೇಟಿ ನೀಡುವುದಿಲ್ಲ ಎಂದು ಪ್ರತಿಜ್ಞೆ ಮಾಡುವಂತೆ ಕೇಳುವಾಗ ವಧು ಮದುವೆ ಸಮಾರಂಭದಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

ನೋಯ್ಡಾ ಕಾಲೇಜಿನಲ್ಲಿ ಜೂನಿಯರ್ ವಿದ್ಯಾರ್ಥಿನಿ ಮೇಲೆ ಹಲ್ಲೆ: ಕಪಾಳಮೋಕ್ಷ ಮಾಡಿ ದೌರ್ಜನ್ಯ!

ನೋಯ್ಡಾದಲ್ಲಿ ಸೀನಿಯರ್ ವಿದ್ಯಾರ್ಥಿಗಳ ರ‍್ಯಾಗಿಂಗ್: ನೆಟ್ಟಿಗರು ಕಿಡಿ

Viral Video: ಗ್ರೇಟರ್ ನೋಯ್ಡಾದ ಖಾಸಗಿ ವಿಶ್ವವಿದ್ಯಾಲಯದ ವಿಡಿಯೊವೊಂದು ವೈರಲ್ ಆಗಿದ್ದು ಸೀನಿಯರ್ ವಿದ್ಯಾರ್ಥಿಗಳ ಗುಂಪೊಂದು ಜೂನಿಯರ್ ವಿದ್ಯಾರ್ಥಿಗಳ ಮೇಲೆ ಹಲ್ಲೆಯನ್ನು ನಡೆಸಿದೆ. ವಿದ್ಯಾರ್ಥಿನಿಯೊಬ್ಬಳು ಜೂನಿಯರ್ ವಿದ್ಯಾರ್ಥಿನಿಗೆ ಸರಿಯಾಗಿ ನಿಂದಿಸಿ ಕಪಾಳಮೋಕ್ಷ ಮಾಡಿದ್ದಾಳೆ‌. ಸದ್ಯ ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆತಂಕವನ್ನು ವ್ಯಕ್ತ ಪಡಿಸಿದ್ದಾರೆ..

ಆಂಬುಲೆನ್ಸ್‌ ಕೊರತೆ: 15 ವರ್ಷದ ಬುಡಕಟ್ಟು ಬಾಲಕಿಯ ಮೃತದೇಹವನ್ನು ಭುಜದ ಮೇಲೆ ಹೊತ್ತು ಸಾಗಿಸಿದ ಕುಟುಂಬ

ಸಿಗದ ಆಂಬುಲೆನ್ಸ್‌; ಭುಜದಲ್ಲಿ ಹೊತ್ತು ಮಗಳ ಮೃತದೇಹ ಸಾಗಿಸಿದ ಪೋಷಕರು

ಮಧ್ಯ ಪ್ರದೇಶದ ಅಶೋಕನಗರದಲ್ಲಿ 15 ವರ್ಷದ ಬುಡಕಟ್ಟು ಬಾಲಕಿಯ ಮೃತದೇಹ ಸಾಗಿಸಲು ಯಾವುದೇ ವ್ಯವಸ್ಥೆ ಇಲ್ಲದ ಕಾರಣ ಕುಟುಂಬಸ್ಥರು ಭುಜದ ಮೇಲೆ ಹೊತ್ತೊಯ್ಯಬೇಕಾದ ದಾರುಣ ಘಟನೆ ನಡೆದಿದೆ. ಆಸ್ಪತ್ರೆಯ ನಿರ್ಲಕ್ಷ್ಯ, ಮೂಲಭೂತ ಸೌಲಭ್ಯಗಳ ಕೊರತೆ ಮತ್ತು ಆಡಳಿತ ವೈಫಲ್ಯಕ್ಕೆ ಈ ಘಟನೆ ಕನ್ನಡಿ ಹಿಡಿದಿದೆ.

ದೆಹಲಿಯ‌ ನಡು ರಸ್ತೆಯಲ್ಲೇ ಹುಟ್ಟುಹಬ್ಬ ಆಚರಣೆ: ಸಂಚಾರಕ್ಕೆ ಅಡ್ಡಿಪಡಿಸಿದ ಯುವಕರ ವಿರುದ್ಧ ಕಿಡಿ

ಮಧ್ಯ ರಸ್ತೆಯಲ್ಲೇ ಬರ್ತ್ ಡೇ ಆಚರಿಸಿದ ಯುವಕರು

Viral Video: ದೆಹಲಿಯ ಜನನಿಬಿಡ ರಸ್ತೆಯಲ್ಲಿಯೇ ಯುವಕರ ಗುಂಪೊಂದು ಹುಟ್ಟುಹಬ್ಬ ಆಚರಿಸಿದೆ. ದೆಹಲಿಯ ಬಾಬರ್ ಪುರ ಎಂಬಲ್ಲಿ ಈ ಘಟನೆ ನಡೆದಿದೆ. ಸುತ್ತ-ಮುತ್ತ ವಾಹನಗಳು ಸ್ಥಗಿತಗೊಂಡು ನಿಂತಿದ್ದರೂ ಯುವಕರು ಕ್ಯಾರೇ ಎನ್ನದೇ ಆಚರಣೆಯಲ್ಲಿ ಮುಳುಗಿದ್ದಾರೆ. ಸಾರ್ವಜನಿಕ ರಸ್ತೆಯನ್ನು ಸಂಪೂರ್ಣವಾಗಿ ಬ್ಲಾಕ್ ಮಾಡಲಾಗಿದ್ದು ಇತರ ವಾಹನ ಸವಾರರು ಭಾರಿ ತೊಂದರೆ ಅನುಭವಿಸಿದ್ದಾರೆ.

ರೈಲಿನಲ್ಲಿ ಯುವತಿಯರ ಮೇಲೆ ಹಲ್ಲೆ: ದಿಟ್ಟಿಸಿ ನೋಡಿದ್ದನ್ನು ಪ್ರಶ್ನಿಸಿದ್ದಕ್ಕೆ ಕಪಾಳಮೋಕ್ಷ ಮಾಡಿದ ದುಷ್ಕರ್ಮಿ

ರೈಲಿನಲ್ಲಿ ಕಿರುಕುಳ ನೀಡಿ ಯುವತಿಯ ಕೆನ್ನೆಗೆ ಬಾರಿಸಿದ ದುಷ್ಕರ್ಮಿ

Viral Video: ಚಲಿಸುವ ರೈಲಿನಲ್ಲಿ ಯುವತಿಯರ ಗುಂಪಿನ ಮೇಲೆ ದುಷ್ಕರ್ಮಿಯೊಬ್ಬ ಹಲ್ಲೆ ಎಸಗಿದ್ದಾನೆ. ಯುವತಿಯರ ಗುಂಪು ಮತ್ತು ಪುರುಷ ಪ್ರಯಾಣಿಕನ ನಡುವೆ ವಾಗ್ವಾದ ಉಂಟಾಗಿದ್ದು, ಮಾತಿನ ಚಕಮಕಿಯ ನಂತರ ಅದು ದೈಹಿಕ ಹಿಂಸೆಯಲ್ಲಿ ಕೊನೆಗೊಂಡಿದೆ. ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಿಡಿಕಾರಿದ್ದಾರೆ.

ಚಲಿಸುವ ಬೈಕ್‌ನಲ್ಲೇ ಯುವತಿಯ ಕೂದಲು ಎಳೆದು ಹಲ್ಲೆ ನಡೆಸಿದ ಯುವಕ: ವಿಡಿಯೊ ವೈರಲ್

ಯುವತಿಯ ಕೂದಲು ಎಳೆದು ಹಲ್ಲೆ ಎಸಗಿದ ಯುವಕ: ನೆಟ್ಟಿಗರು ಕಿಡಿ

Viral Video: ಒಡಿಶಾದ ಭುವನೇಶ್ವರದದಲ್ಲಿನ ಅಘಾತಕಾರಿ ದೃಶ್ಯವೊಂದು ವೈರಲ್ ಆಗಿದೆ. ವ್ಯಕ್ತಿಯೊಬ್ಬ ಚಲಿಸುವ ಬೈಕ್‌ನಲ್ಲೇ ಯುವತಿಯ ಮೇಲೆ ಹಲ್ಲೆ ನಡೆಸಿರುವ ಘಟನೆ ಇದಾಗಿದೆ. ಒಂದು ಕೈಯಲ್ಲಿ ಬೈಕ್ ಚಲಾಯಿಸುತ್ತ ಮತ್ತೊಂದು ಕೈಯಲ್ಲಿ ಯುವತಿಯ ಕೂದಲನ್ನು ಎಳೆಯುತ್ತಾ ಹಲ್ಲೆ ಮಾಡಿದ್ದಾನೆ‌. ಈ ವಿಡಿಯೊ ನೋಡಿದ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ಈ ವಿಡಿಯೊ ಇಟ್ಟುಕೊಳ್ಳಿ": 2025ರಲ್ಲೇ ವಿಜಯ್ ಗೆಲುವಿನ ಭವಿಷ್ಯ ನುಡಿದಿದ್ದ ಪ್ರಶಾಂತ್ ಕಿಶೋರ್ ವಿಡಿಯೊ ವೈರಲ್

ವಿಜಯ್ ಗೆಲುವು: ಪ್ರಶಾಂತ್ ಕಿಶೋರ್ ಹಳೆಯ ವಿಡಿಯೊ ಮತ್ತೆ ಮುನ್ನಲೆಗೆ

Viral Video: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷ ಭರ್ಜರಿ ಸಾಧನೆ ಮಾಡುವುದಾಗಿ ಚುನಾವಣೆಗೆ ಒಂದು ವರ್ಷ ಮೊದಲು ಪ್ರಶಾಂತ್ ಕಿಶೋರ್ ಹೇಳಿದ್ದ ಭವಿಷ್ಯ ಈಗ ನಿಜವಾಗಿದೆ. ಅವರ ಹಳೆಯ ಸಂದರ್ಶನದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ಭಾರತದ ಈ ವೈಶಿಷ್ಟ್ಯ ಜಗತ್ತಿಗೇ ಮಾದರಿ: ವಿದೇಶಿ ಮಹಿಳೆಯ ಮೆಚ್ಚುಗೆ

ಭಾರತದ ಸೌಕರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ ಪೋಲೆಂಡ್ ಮಹಿಳೆ

Viral Video: ಹತ್ತು ವರ್ಷಗಳಿಂದ ಭಾರತದಲ್ಲಿ ಬದುಕು ಕಟ್ಟಿರುವ ಪೋಲೆಂಡ್‌ನ ಮಹಿಳೆಯೊಬ್ಬರು ಇಲ್ಲಿನ ದೈನಂದಿನ ಜೀವನದದ ಸೌಕರ್ಯಗಳ ಬಗ್ಗೆ ವಿಡಿಯೊ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭಾರತದ ಈ ಅಭ್ಯಾಸವನ್ನು ಇತರ ರಾಷ್ಟ್ರಗಳು ನೋಡಿ ಕಲಿಯಬೇಕು ಎಂದು ಅವರು ಇಲ್ಲಿನ ಹಲವು ವೈಶಿಷ್ಟ್ಯವನ್ನು ತೋರ್ಪಡಿಸಿದ್ದಾರೆ.

ರೈಲಿನ ಸೀಟ್ ಕವರ್ ಕಿತ್ತು ಹಾಕಿ ಪುಂಡಾಟ ಮೆರೆದ ಯುವಕರು; ದಂಡ ವಸೂಲಿ ಮಾಡಿ ಎಂದ ನೆಟ್ಟಿಗರು

ರೈಲಿನ ಸೀಟ್ ಕವರ್ ಕಿತ್ತು ಹಾಕಿ ಹುಚ್ಚಾಟ ಮೆರೆದ ಯುವಕರು

Viral Video: ಇಲ್ಲೊಂದು ಯುವಕರ ಗುಂಪು ವೈರಲ್ ಆಗುವ ಉದ್ದೇಶದಿಂದ ಸಾರ್ವಜನಿಕ ವಸ್ತುವನ್ನು ಧ್ವಂಸಗೊಳಿಸಿದ ಘಟನೆ ನಡೆದಿದೆ. ಚಲಿಸುತ್ತಿರುವ ರೈಲಿನ ಸೀಟು ಹರಿದು ಹಾಕಿ ಹುಚ್ಚಾಟ ಮರೆದಿದೆ. ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ನೆಟ್ಟಿಗರು ಯುವಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಬಿಜೆಪಿ ಸಚಿವರ ರ‍್ಯಾಲಿ ವಿರುದ್ಧ ಆಕ್ರೋಶ ಹೊರಹಾಕಿದ್ದ ಮುಂಬೈ ಮಹಿಳೆ ಯು ಟರ್ನ್; ಈಗ ಹೇಳಿದ್ದೇನು?

ಬಿಜೆಪಿ ರ‍್ಯಾಲಿ ವಿವಾದ: ಮಹಿಳೆ ಯು ಟರ್ನ್

ಮಹಾರಾಷ್ಟ್ರದ ಮುಂಬೈಯಲ್ಲಿ ರಾಜಕೀಯ ರ‍್ಯಾಲಿಯಿಂದ ಉಂಟಾದ ಟ್ರಾಫಿಕ್ ಜಾಮ್ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದ ಟೀನಾ ಚೌಧರಿ ಇದೀಗ ತಮ್ಮ ನಿಲುವು ಬದಲಿಸಿ, ಸಚಿವ ಗಿರೀಶ್ ಮಹಾಜನ್ ಸಮಸ್ಯೆ ಪರಿಹರಿಸಲು ಸಹಕರಿಸಿದರು ಎಂದು ಹೇಳಿದ್ದಾರೆ. ಸಚಿವರು ಮಧ್ಯ ಪ್ರವೇಶಿಸಿ ಸಮಸ್ಯೆಬಗೆಹರಿಸಿದ್ದಾರೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ಕಲ್ಲಂಗಡಿ ಹಣ್ಣು ವಿಷಕಾರಿಯೆ? ಮುಂಬೈ ಘಟನೆ ಬಳಿಕ ಕೊಳೆತು ಹೋಗಿರುವ ಹಣ್ಣಿನ ವಿಡಿಯೊ ಶೇರ್ ಮಾಡಿದ ನಟ

ಕಲ್ಲಂಗಡಿ ಹಣ್ಣು ವಿಷಕಾರಿಯೇ? ಖ್ಯಾತ ನಟ ವಿಡಿಯೊದಲ್ಲಿ ಹೇಳಿದ್ದೇನು?

Viral Video: ಮುಂಬೈಯಲ್ಲಿ ಅಬ್ದುಲ್ಲ ದಕೋಡಿಯಾ ಕುಟುಂಬ ಇತ್ತೀಚೆಗೆ ತಡರಾತ್ರಿ ಕಲ್ಲಂಗಡಿ ಹಣ್ಣು ತಿಂದು ಸಾವೀಗಿಡಾಗಿತ್ತು. ಇದರ ಬೆನ್ನಲ್ಲೇ ಇದೀಗ ಮರಾಠಿ ನಟ ಶಶಾಂಕ್ ಕೇತ್ಕರ್ ಕಲ್ಲಂಗಡಿ ಹಣ್ಣಿನಿಂದ ನೊರೆ ಹೊರ ಬರುತ್ತಿರುವುದನ್ನು ತೋರಿಸುವ ವಿಡಿಯೊವೊಂದು ಶೇರ್ ಮಾಡಿದ್ದಾರೆ. ಸದ್ಯ ಈ ದೃಶ್ಯ ನೋಡಿದ ಅನೇಕರು ಆತಂಕ ವ್ಯಕ್ತಪಡಿಸಿದ್ದಾರೆ.

ಸ್ಮಶಾನದಲ್ಲಿ ನಡೆದ ಮದುವೆಯನ್ನು ಎಂದಾದರೂ ನೋಡಿದ್ದೀರಾ? ಉತ್ತರಾಖಂಡದಲ್ಲಿ ನಡೆದ ವಿಚಿತ್ರ ಆಚರಣೆಗೆ ನೆಟ್ಟಿಗರು ಕಿಡಿ

ಸ್ಮಶಾನದಲ್ಲಿ ಮದುವೆ: ಧಾರ್ಮಿಕ ಆಚರಣೆಗೆ ದಕ್ಕೆ ಎಂದ ನೆಟ್ಟಿಗರು

Viral Video: ಸ್ಮಶಾನದಲ್ಲಿ ಮದುವೆ ಇಟ್ಟುಕೊಂಡಿರುವುದನ್ನು ನೀವೆಲ್ಲಾದರೂ ಕೇಳಿದ್ದೀರಾ? ನಿಜಕ್ಕೂ ಇದೆಂಥ ವಿಚಿತ್ರ ಮದುವೆ ಎಂದು ನಿಮಗೂ ಅನಿಸಿರಬಹುದು. ಹೌದು, ಉತ್ತರಾಖಂಡದ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದ ಹತ್ತಿರ ಇರುವ ಸ್ಮಶಾನದಲ್ಲಿ ನಡೆದ ವಿವಾಹದ ಸುದ್ದಿಯೊಂದು ಭಾರೀ ವೈರಲ್ ಆಗಿದೆ.

SRH vs KKR: ಚಿರತೆ ವೇಗ, ರೋವ್ಮನ್ ಪೊವೆಲ್ ಒನ್‌ ಹ್ಯಾಂಡೆಡ್‌ ಕ್ಯಾಚ್‌ಗೆ ನೆಟ್ಟಿಗರು ಫಿದಾ

ಚಿರತೆ ವೇಗ, ಪೊವೆಲ್ ಒನ್‌ ಹ್ಯಾಂಡೆಡ್‌ ಕ್ಯಾಚ್‌ಗೆ ನೆಟ್ಟಿಗರು ಫಿದಾ

IPL 2026: ಪಂದ್ಯದಲ್ಲಿ ಟಾಸ್ ಗೆದ್ದ ಸನ್‌ರೈಸರ್ಸ್‌ ನಾಯಕ ಪ್ಯಾಟ್ ಕಮ್ಮಿನ್ಸ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆದರೆ ಅವರ ಆಯ್ಕೆಯನ್ನು ಸಮರ್ಥಿಸಿಕೊಳ್ಳಲು ಬ್ಯಾಟರ್‌ಗಳು ವಿಫಲರಾದರು. ಅಭಿಷೇಕ್ ಶರ್ಮಾ ಮತ್ತು ಟ್ರಾವಿಸ್ ಹೆಡ್ 44 ರನ್‌ಗಳ ಜೊತೆಯಾಟದೊಂದಿಗೆ ಆತಿಥೇಯರಿಗೆ ತ್ವರಿತ ಆರಂಭ ನೀಡಿದರೂ ಆ ಬಳಿಕಕ ತಂಡ ಹಠಾತ್‌ ಕುಸಿತ ಕಂಡು 165 ರನ್‌ಗೆ ಸರ್ವಪತನ ಕಂಡಿತು.

ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಯಲು ಹಾಸ್ಟೆಲ್ ಫ್ಯಾನ್‌ಗೆ ಕಬ್ಬಿಣದ ಪಂಜರ ಅಳವಡಿಕೆ; ಇದರ ಬದಲು ಎಸಿ ಅಳವಡಿಸಬಹುದಿತ್ತು ಎಂದ ನೆಟ್ಟಿಗರು

ಆತ್ಮಹತ್ಯೆ ತಡೆಗೆ ಫ್ಯಾನ್‌ ಸುತ್ತಲೂ ಕಬ್ಬಿಣ ಪಂಜರ ಅಳವಡಿಕೆ

Viral Video: ರಾಜಸ್ಥಾನದ ಕೋಟಾ ಪ್ರಮುಖ ಶಿಕ್ಷಣ ಕೇಂದ್ರವಾಗಿ ಹೆಸರು ಪಡೆದಿದ್ದರೂ ಇಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣ ಹೆಚ್ಚಾಗಿ ನಡೆಯುತ್ತಿದೆ. ಇದನ್ನು ತಡೆಯುವುದಕ್ಕಾಗಿ ಕೋಟಾದ ಹಾಸ್ಟೆಲ್‌ಗಳಲ್ಲಿ ಸೀಲಿಂಗ್ ಫ್ಯಾನ್‌ಗಳ ಸುತ್ತಲೂ ಕಬ್ಬಿಣದ ಪಂಜರ ಅಳವಡಿಸಲಾಗುತ್ತಿದೆ. ಕೋಟಾ ಹಾಸ್ಟೆಲ್‌ ಒಳಗಿನ ವಿಡಿಯೊ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ಚರ್ಚೆಗೆ ಕಾರಣವಾಗಿದೆ.

ಹರಿದ್ವಾರದ ಗಂಗಾ ನದಿಯಲ್ಲಿ ಶ್ವಾನಕ್ಕೆ ಸ್ನಾನ ಮಾಡಿಸಿದ ಮಹಿಳೆ: ನೆಟ್ಟಿಗರು ಕಿಡಿ

ಸಾಕು ನಾಯಿಗೆ ಹರಿದ್ವಾರದ ಗಂಗಾ ನದಿಯಲ್ಲಿ ಸ್ನಾನ: ಭಕ್ತರ ಆಕ್ರೋಶ

Viral Video: ಮಹಿಳೆಯೊಬ್ಬರು ಸಾಕು ನಾಯಿಗೆ ಗಂಗಾ ನದಿಯಲ್ಲಿ ಸ್ನಾನ ಮಾಡಿಸಿರುವ ಘಟನೆ ನಡೆದಿದೆ. ಈ ದೃಶ್ಯವು ಸ್ಥಳದಲ್ಲಿದ್ದ ಜನರ ಜತೆ ಬಿಸಿ ವಾಗ್ವಾದಕ್ಕೆ ಕಾರಣವಾಯಿತು‌. ಹಲವು ಭಕ್ತರು ಆಕೆಯ ಕೃತ್ಯವನ್ನು ಖಂಡಿಸಿದ್ದು, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ನಗುವಿನ ಕ್ಷಣವಾಗಿ ಬದಲಾದ ಭಾವನಾತ್ಮಕ ವಿದಾಯ: ಬೆಂಗಳೂರು ಉದ್ಯೋಗಿಯ ರಾಜೀನಾಮೆ ಮೇಲ್‌ ಕಂಡು ನಕ್ಕ ಸಹೋದ್ಯೋಗಿ

ಮೀಮ್ ಶೇರ್ ಮಾಡಿ ಕೆಲಸಕ್ಕೆ ವಿದಾಯ ಹೇಳಿದ ಬೆಂಗಳೂರಿನ ಯುವಕ

Viral Video: ಬೆಂಗಳೂರಿನ ಉದ್ಯೋಗಿಯೊಬ್ಬರು ಅಸಾಮಾನ್ಯ ಭಾವನಾತ್ಮಕ ವಿದಾಯ ಸಹೋದ್ಯೋಗಿಗಳನ್ನು ನಗುವಿನ ಅಲೆಯಲ್ಲಿ ತೇಲುವಂತೆ ಮಾಡಿದೆ. ರಾಜೀನಾಮೆ ಪತ್ರವನ್ನು ಅವರು ವಿಭಿನ್ನವಾಗಿ ಮೇಲ್ ಮಾಡಿ ವಿದಾಯ ಹೇಳಿದ್ದಾರೆ. ತಮಾಷೆಯ ಮೀಮ್‌ ಕಳುಹಿಸುವ ಮೂಲಕ ಅವರು ಸಹೋದ್ಯೋಗಿಗಳಿಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.

Guinness World Record: ಅಂಡಮಾನ್, ನಿಕೋಬಾರ್ ದ್ವೀಪದ ಬಳಿ ಸಮುದ್ರದಾಳದಲ್ಲಿ ಅರಳಿದ ಬೃಹತ್ ಭಾರತ ಧ್ವಜ; ವಿಶ್ವ ದಾಖಲೆ

ಸಮುದ್ರದಾಳದಲ್ಲಿ ಅರಳಿದ ಭಾರತದ ಧ್ವಜ

ಅದು ಹೆಮ್ಮೆಯ ಕ್ಷಣವಾಗಿತ್ತು. ಸುಮಾರು 200 ಮಂದಿ ಸೇರಿ ಅಂಡಮಾನ್, ನಿಕೋಬಾರ್ ದ್ವೀಪದ ಬಳಿ ಸಮುದ್ರದಾಳದಲ್ಲಿ ಬೃಹತ್ ಭಾರತ ಧ್ವಜವನ್ನು ಅರಳಿಸಿದರು. ಸ್ವರಾಜ್ ದ್ವೀಪದ ರಾಧಾನಗರ ಬೀಚ್ ಬಳಿ ಬೃಹತ್ ಧ್ವಜವನ್ನು ಅರಳಿಸಲಾಗಿದ್ದು, ಇದು ಗಿನ್ನೆಸ್ ವಿಶ್ವ ದಾಖಲೆಯನ್ನು ಬರೆದಿದೆ. ಇದರ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಶ್ರೀಮಂತಿಕೆ ಇದ್ದರೆ ಸಾಲದು ನಾಗರಿಕ ಪ್ರಜ್ಞೆಯೂ ಬೇಕು; ಮನಾಲಿಯ ಚಾರ್ಜಿಂಗ್ ಪಾಯಿಂಟ್ ಕಸದ ಬುಟ್ಟಿಯನ್ನಾಗಿಸಿದ ಪ್ರವಾಸಿಗರು

ಮನಾಲಿಯ ಚಾರ್ಜಿಂಗ್ ಪಾಯಿಂಟ್ ಈಗ ಕಸದ ಬುಟ್ಟಿ!

Viral Video: ಹಿಮಾಚಲ ಪ್ರದೇಶದ ಪ್ರವಾಸಿ ಸ್ಥಳ ಮನಾಲಿಯಲ್ಲಿ ಚಾರ್ಜಿಂಗ್ ಪಾಯಿಂಟ್ ಸ್ಥಳವನ್ನು ಕಸದ ಬುಟ್ಟಿಯಾಗಿ ಜನರು ಬಳಸಿಕೊಂಡಿದ್ದಾರೆ. ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ಸ್ಥಳದಲ್ಲಿ ಶಿಸ್ತಿನ ಬಗ್ಗೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇರಳಂ ದೇವಾಲಯದಲ್ಲಿ ಆನೆಗಳ ಅಟ್ಟಹಾಸ: ಇಬ್ಬರು ಸಾವು, ಅಡ್ಡ ಸಿಕ್ಕಿದ ಕಾರು, ಸ್ಕೂಟರ್‌ ಪುಡಿಪುಡಿ

ಆನೆ ದಾಳಿಗೆ ಕೇರಳಂ ದೇವಸ್ಥಾನ ಉತ್ಸವದ ವೇಳೆ ಇಬ್ಬರು ಬಲಿ

Viral Video: ಕೇರಳಂನ ಎರಡು ದೇವಾಲಯ ಉತ್ಸವಗಳಲ್ಲಿ ಆನೆಯ ದಾಳಿಯಿಂದ ಇಬ್ಬರು ಪ್ರಾಣ ಕಳೆದುಕೊಂಡಿರುವ ಘಟನೆ ನಡೆದಿದೆ. ಎರ್ನಾಕುಲಂ ಮತ್ತು ತ್ರಿಶೂರ್ ಜಿಲ್ಲೆಗಳಲ್ಲಿ ಎರಡು ಪ್ರತ್ಯೇಕ ಘಟನೆಗಳು ನಡೆದಿದ್ದು ಓರ್ವ ಮಾವುತ ಹಾಗೂ ಲಾರಿ ಚಾಲಕ ಮೃತ ಪಟ್ಟಿದ್ದಾರೆ‌. ಆನೆ ಅಟ್ಟಹಾಸ ಮೆರೆಯುತ್ತಿರುವ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

ಜಬಲ್ಪುರ ದೋಣಿ ದುರಂತದ ಕೊನೆ ಕ್ಷಣದ ವಿಡಿಯೊ: ಆಡಳಿತ ಮಂಡಳಿಯ ವೈಫಲ್ಯವೇ ಕಾರಣ?

ಜಬಲ್ಪುರ ಕ್ರೂಸ್ ದುರಂತಕ್ಕೆ ಸಿಬ್ಬಂದಿ ನಿರ್ಲಕ್ಷ್ಯವೇ ಕಾರಣ?

Viral Video: ನದಿಯ ಅಲೆಗಳ ಮೇಲೆ ಸಾಗುತ್ತಿದ್ದ ದೋಣಿಯೇ ಪ್ರಯಾಣಿಕರ ಪಾಲಿಗೆ ಯಮ ನಾಗಬಹುದು ಎನ್ನುವ ಊಹೆಯೂ ಯಾರಿಗೂ ಇರಿಲಲ್ಲ. ಈ ದುರ್ಘಟನೆಯಲ್ಲಿ ಒಂಬತ್ತು ಮಂದಿ ಸಾವನ್ನಪ್ಪಿದ್ದು, 28 ಮಂದಿಯನ್ನು ರಕ್ಷಿಸಲಾಗಿದೆ. ಇನ್ನೂ 6 ಮಂದಿ ನಾಪತ್ತೆಯಾಗಿದ್ದಾರೆ. ಈ ಘಟನೆಗೂ ಮೊದಲು ಚಿತ್ರೀಕರಿಸಿದ ವಿಡಿಯೊವೊಂದು ವೈರಲ್ ಆಗಿದ್ದು ಅಲ್ಲಿನ ಸಿಬ್ಬಂದಿಗಳು ಯಾವುದೇ ಸುರಕ್ಷತೆ ಮಾನದಂಡಗಳನ್ನು ಪಾಲಿಸಿಲ್ಲ. ಸದ್ಯ ಪ್ರವಾಸಿಗರ ಜೀವದ ಜೊತೆ ಬೇಜವ್ದಾರಿ ವಹಿಸಿದ ಅಲ್ಲಿನ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಕಾಳಿಂಗ ಸರ್ಪದ ಜೊತೆ ಹುಚ್ಚಾಟ; ಪ್ರಾಣವನ್ನೇ ಕಳೆದುಕೊಂಡ ಉರಗ ತಜ್ಞ, ಭಯಾನಕ ವಿಡಿಯೊ ವೈರಲ್

ಕಾಳಿಂಗ ಸರ್ಪ ಹಿಡಿಯಲು ಹೋಗಿ ಉರಗ ತಜ್ಞ ಸಾವು

Viral Video: ವಿಷಕಾರಿ ಹಾವಿನ ಜೊತೆ ಹುಚ್ಚಾಟ ಮೆರೆಯುವುದು ಅಷ್ಟು ಸುಲಭದ ಮಾತಲ್ಲ.. ನಾಗರ ಹಾವು, ಕಾಳಿಂಗ ಸರ್ಪ ಹೀಗೆ ವಿಷಕಾರಿ ಹಾವನ್ನು ಹಿಡಿಯಲು ಹೋಗಿ ಪ್ರಾಣ ಕಳೆದುಕೊಂಡವರು ಅನೇಕರು ಇದ್ದಾರೆ‌. ಇದಕ್ಕೆ ಸಾಕ್ಷಿ ಎಂಬಂತೆ ಯಾವುದೇ ಸುರಕ್ಷತಾ ಮಾರ್ಗ ಬಳಸದೇ ಉರಗ ತಜ್ಞ ಕಾಳಿಂಗ ಸರ್ಪವನ್ನು ಹಿಡಿಯಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಸದ್ಯ ಈ ಅಘಾತಕಾರಿ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

ಮದುವೆ ಮಂಟಪದಲ್ಲಿ ವರನಿಗೆ ಹಾರ ಹಾಕುವ ಬದಲು ಪ್ರಿಯತಮನಿಗೆ ಹಾರ ಹಾಕಿದ ವಧು: ವಿಡಿಯೊ ವೈರಲ್

ಪ್ರಿಯತಮನಿಗೆ ಹಾರ ಹಾಕಿ ವರನಿಗೆ ಶಾಕ್ ಕೊಟ್ಟ ವಧು: ವಿಡಿಯೊ ಇಲ್ಲಿದೆ!

Viral Video: ಯುವತಿಯೊಬ್ಬಳು ಮದುವೆ ಮಂಟಪದಲ್ಲಿ ವರನಿಗೆ ಹಾರ ಹಾಕುವ ಬದಲು ಮಂಟದ ಕೆಳಗೆ ಓಡೋಡಿ ಬಂದು ಪ್ರಿಯತಮನಿಗೆ ಹಾರ ಹಾಕಿದ ವಿಡಿಯೊ ವೈರಲ್ ಆಗಿದೆ. ಇಂದಿನ ಜಾನಂಗದ ಮದುವೆ ಬಗ್ಗೆ ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದು ಹಲವಾರು ಆಕ್ರೋಶ ಹೊರಹಾಕಿದ್ದಾರೆ.

ಕೊಲೆ ಪ್ರಕರಣಕ್ಕೆ ಸಾಕ್ಷಿ ನೀಡಿದ ಸಾಕು ಗಿಳಿ: ಪತಿಯನ್ನು ಕೊಂದ ಪತ್ನಿಯ ಕೃತ್ಯ ಬೆಳಕಿಗೆ ಬಂದಿದ್ದು ಹೇಗೆ?

ಕೊಲೆ ಪ್ರಕರಣವನ್ನು ಭೇದಿಸಲು ಪೊಲೀಸರಿಗೆ ನೆರವಾದ ಸಾಕು ಗಿಣಿ!

Viral News: ಅಮೆರಿಕದ ಮಿಚಿಗನ್ ನಲ್ಲಿ ಸಾಕು ಗಿಣಿಯೊಂದು ಅಪರಾಧಿಯನ್ನು ಪತ್ತೆ ಹಚ್ಚಿದ ಘಟನೆಯೊಂದು ನಡೆದಿದೆ. ಮನೆಯ ಯಜಮಾನನ ಕೊಲೆಯನ್ನು ಕಣ್ಣಾರೆ ಕಂಡ ಗಿಳಿಯೂ ಮಾಲೀಕರ ಸಾವಿಗೆ ಸಂಬಂಧಿಸಿದ ವಾಕ್ಯವನ್ನು ಪದೇ ಪದೇ ಹೇಳುವ ಮೂಲಕ ಕೊಲೆಗೆ ಸಾಕ್ಷಿ ನೀಡಿದೆ. ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

Fact check: ಜಬಲ್ಪುರ ದೋಣಿ ದುರಂತ: ವೈರಲ್ ಆಗಿರುವ ತಾಯಿ, ಮಗುವಿನ ಚಿತ್ರ ನಕಲಿ

ಜಬಲ್ಪುರ ದೋಣಿ ದುರಂತ: ವೈರಲ್ ಚಿತ್ರ ನಿಜವಲ್ಲ

ಮಧ್ಯಪ್ರದೇಶದ ಜಬಲ್ಪುರದಲ್ಲಿ ಗುರುವಾರ ಸಂಜೆ ನಡೆದಿರುವ ದೋಣಿ ದುರಂತಕ್ಕೆ ಸಂಬಂಧಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ತಾಯಿ, ಮಗುವಿನ ಚಿತ್ರವೊಂದು ಹರಿದಾಡುತ್ತಿದ್ದು, ಇದು ನಕಲಿ ಚಿತ್ರವಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ರಕ್ಷಣಾ ತಂಡವು ಶುಕ್ರವಾರ ನಡೆಸಿದ ಕಾರ್ಯಾಚರಣೆ ವೇಳೆ ತಾಯಿಯೊಬ್ಬಳು ತನ್ನ ನಾಲ್ಕು ವರ್ಷದ ಮಗುವನ್ನು ಬಿಗಿಯಾಗಿ ತಬ್ಬಿ ಹಿಡಿದು ಸಾವನ್ನಪ್ಪಿರುವ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಇದಕ್ಕೆ ಸಂಬಂಧಿಸಿ ಸಾಮಾಜಿಕ ಮಾಧ್ಯಮದಲ್ಲಿ ಕೃತಕ ಬುದ್ದಿ ಮತ್ತೆ ಬಳಸಿ ಚಿತ್ರವನ್ನು ಹರಿಯಬಿಡಲಾಗಿತ್ತು.

Loading...