ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ವೈರಲ್‌

Bangalore Flat Rent: ಬೆಂಗಳೂರಿನಲ್ಲಿ 2 ಬಿಎಚ್‌ಕೆ ಫ್ಲ್ಯಾಟ್‌ಗೆ 20 ಸಾವಿರ ಬಾಡಿಗೆ, 30 ಲಕ್ಷ ಅಡ್ವಾನ್ಸ್‌ ಕೇಳಿದ ಮಾಲೀಕ!

2 ಬಿಎಚ್‌ಕೆ ಫ್ಲ್ಯಾಟ್‌ಗೆ 20 ಸಾವಿರ ಬಾಡಿಗೆ, 30 ಲಕ್ಷ ಅಡ್ವಾನ್ಸ್‌!

Security Deposit For Bangalore Flat : ಬೆಂಗಳೂರಿನ ಫ್ರೇಜರ್‌ ಟೌನ್‌ನಲ್ಲಿ 2 ಬಿಎಚ್‌ಕೆ ಫ್ಲ್ಯಾಟ್‌ವೊಂದಕ್ಕೆ ನೀಡಿರುವ ಜಾಹೀರಾತು ವೈರಲ್‌ ಆಗಿದೆ. 2 ಬಿಎಚ್‌ಕೆ ಫ್ಲ್ಯಾಟ್‌ಗೆ 20 ಸಾವಿರ ಬಾಡಿಗೆ ಹಾಗೂ 30 ಲಕ್ಷ ಅಡ್ವಾನ್ಸ್‌ ನಿಗದಿಪಡಿಸಿರುವುದನ್ನು ರೆಡಿಟ್‌ನಲ್ಲಿ ನೆಟ್ಟಿಗರೊಬ್ಬರು ಹಂಚಿಕೊಂಡಿದ್ದಾರೆ. ಈ ಬಗ್ಗೆ ಹಲವರು ಕಿಡಿಕಾರಿದ್ದಾರೆ.

Viral Video: ಛೀ.. ಈತನೆಂಥಾ ನೀಚ! ಎಂಜಲು ಉಗುಳಿ ರೊಟ್ಟಿ ಮಾಡಿದ ಕಿಡಿಗೇಡಿ- ವಿಡಿಯೊ ಫುಲ್‌ ವೈರಲ್‌

ಎಂಜಲು ಉಗುಳಿ ರೊಟ್ಟಿ ಮಾಡಿದ ಕಿಡಿಗೇಡಿ- ವಿಡಿಯೊ ಫುಲ್‌ ವೈರಲ್‌

Spitting on Rotis at Wedding: ಮದುವೆಗೆ ಬಂದ ಅತಿಥಿಗಳಿಗೆ ಊಟಕ್ಕೆ ರೊಟ್ಟಿ ತಯಾರಿಸುತ್ತಿದ್ದ ವ್ಯಕ್ತಿಯೊಬ್ಬ ಆ ರೊಟ್ಟಿಯ ಹಿಟ್ಟಿನ ಮೇಲೆ ಉಗುಳುತ್ತಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ನಡೆದಿದೆ. ಸದ್ಯ ಈ ಕುರಿತಾದ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆರೋಪ ಮಾಡಿದ್ದ ವ್ಯಕ್ತಿ ವಿರುದ್ಧ ಕಠಿಣ ಶಿಕ್ಷೆ ಜಾರಿಗೆ ತರಲು ಸೋಶಿಯಲ್ ಮಿಡಿಯಾದಲ್ಲಿ ಅಧಿಕಾರಿಗಳನ್ನು ಟ್ಯಾಗ್ ಮಾಡಿ ವಿಡಿಯೊ ಪೋಸ್ಟ್ ಹಂಚಿಕೊಳ್ಳಲಾಗಿದೆ.ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ಬಂಧಿಸಲಾಗಿದೆ.

Viral Video: ನೆಚ್ಚಿನ ಪತ್ನಿಗೆ ಚಿನ್ನದ ಸರ ಕೊಡಿಸಲು ಈ ಭೂಪ ಮಾಡಿದ್ದೇನು ಗೊತ್ತಾ? ಈ ವಿಡಿಯೊ ನೋಡಿ

ಚಿಲ್ಲರೆ ಕೂಡಿಟ್ಟು ಪತ್ನಿಗೆ ಚಿನ್ನದ ಸರ ಕೊಡಿಸಿದ ಪತಿ!

ವ್ಯಕ್ತಿಯೊಬ್ಬ ಒಂದು ವರ್ಷಕ್ಕೂ ಹೆಚ್ಚು ಕಾಲ ಹಣ ಕೂಡಿಟ್ಟು ತನ್ನ ಚಿಲ್ಲರೆ ಹಣ ದಲ್ಲಿಯೇ ಪತ್ನಿಗೆ ಚಿನ್ನದ ಸರ ಕೊಡಿಸಿದ್ದ ಘಟನೆ ಕಾನ್ಪುರದಲ್ಲಿ (Kanpur) ನಡೆದಿದೆ. ಚಿಲ್ಲರೆ ಸಂಗ್ರಹ ಮಾಡಿದ್ದ ಎರಡು ಚೀಲಗಳ ಸಮೇತ ಆ ವ್ಯಕ್ತಿ ಆಭರಣ ಮಳಿಗೆಗೆ ಬಂದಿದ್ದು ಬಳಿಕ ಅದೇ ಚಿಲ್ಲರೆ ಹಣದಲ್ಲಿಯೇ ಚಿನ್ನದ ಸರ ಖರೀದಿ ಮಾಡಿದ್ದಾನೆ‌. ಸದ್ಯ ಈ ವ್ಯಕ್ತಿಯ ವಿಡಿಯೋ ಒಂದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಪತ್ನಿ ಮೇಲಿನ ಆತನ ಪ್ರೀತಿ ಮತ್ತು ಮುಗ್ದತೆಯೂ ನೆಟ್ಟಿಗರ ಗಮನ ಸೆಳೆಯುವಂತೆ ಮಾಡಿದೆ.. 22 ವರ್ಷದ ಅಭಿಷೇಕ್ ಯಾದವ್ ಅವರು ತನ್ನ ಪತ್ನಿಗೆ ಚಿನ್ನದ ಸರ ಕೊಡಿಸಬೇಕು ಎಂಬ ಕಾರಣಕ್ಕೆ ಒಂದು ವರ್ಷಕ್ಕು ಹೆಚ್ಚು ಕಾಲ ಹಣ ಸಂಗ್ರಹಿಸಿದ್ದು ತಿಳಿದು ಬಂದಿದೆ.

Prince Harry-Meghan Markle: ಡಿವೋರ್ಸ್‌ ರೂಮರ್ಸ್‌ ನಡುವೆಯೇ ಪ್ರಿನ್ಸ್‌ ಹ್ಯಾರಿಯನ್ನು ತಬ್ಬಿ ಮುತ್ತಿಟ್ಟ ಮೇಘನ್‌ ಮಾರ್ಕೆಲ್‌! ವಿಡಿಯೊ ವೈರಲ್‌

ಪ್ರಿನ್ಸ್‌ ಹ್ಯಾರಿಯನ್ನು ತಬ್ಬಿ ಮುತ್ತಿಟ್ಟ ಮೇಘನ್‌ ಮಾರ್ಕೆಲ್‌!

League Baseball season 2025: 2025ರ ಮೇಜರ್ ಲೀಗ್ ಬೇಸ್‌ಬಾಲ್ ಸೀಸನ್‌ನಲ್ಲಿ ಟೊರೊಂಟೊ ಬ್ಲೂ ಜೇಸ್ ಅನ್ನು ಸೋಲಿಸಿ ಲಾಸ್ ಏಂಜಲೀಸ್ ಡಾಡ್ಜರ್ಸ್ ಪಂದ್ಯವನ್ನು ಗೆದ್ದ ತಕ್ಷಣ ಮೇಘನ್ ಮಾರ್ಕೆಲ್ ಅವರು ಸಂತೋಷದಿಂದ ಕುಣಿದು ಹ್ಯಾರಿಯನ್ನು ತಬ್ಬಿಕೊಂಡು ಮುತ್ತು ನೀಡಿದರು. ಇದರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ (Viral Video) ಆಗಿದ್ದು, ಈ ವಿಡಿಯೊದಲ್ಲಿ ಹ್ಯಾರಿ ಅಷ್ಟೇನು ಆಸಕ್ತರಾಗಿಲ್ಲದಂತೆ ಕಂಡು ಬಂದಿದೆ. ಈ ವಿಡಿಯೊ ನೋಡಿರುವ ಅನೇಕ ನೆಟ್ಟಿಗರು ಕಾಮೆಂಟ್ ಮಾಡಿದ್ದು ಇದು ನಾವು ಖುಷಿಯಾಗಿದ್ದೇವೆ ಎಂಬುದನ್ನು ಪ್ರದರ್ಶಿಸಲು ಮಾಡಿರುವ ವಿಡಿಯೊ ಎಂದು ಹೇಳಿದ್ದಾರೆ.

Viral Video: ಚಿಕನ್ ಫ್ರೈ ವಿಚಾರಕ್ಕೆ ಮದ್ವೆ ಮನೆ ಆಯ್ತು ರಣಾಂಗಣ! ಬಂಧುಗಳ ನಡುವೆ ಮಾರಾಮಾರಿ

ಚಿಕನ್ ಫ್ರೈ ವಿಚಾರದಲ್ಲಿ ಮದುವೆ ಮನೆಯಲ್ಲಿ ಬಿಗ್‌ ಫೈಟ್‌!

Wedding Event Turns into Battlefield: ಮದುವೆ ಸಮಾರಂಭವೊಂದು ಅಚ್ಚರಿಯ ರೀತಿಯಲ್ಲಿ ಅಸ್ತವ್ಯಸ್ತಗೊಂಡಿದೆ. ಊಟದ ವೇಳೆ ಚಿಕನ್ ಫ್ರೈ ಹಂಚಿಕೆಯಲ್ಲಿ ಉಂಟಾದ ತಕರಾರಿನಿಂದ ಅತಿಥಿಗಳ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಅದು ಹೊಯ್‍ಕೈ ಮಟ್ಟಕ್ಕೆ ತಲುಪಿದೆ. ಚಿಕನ್ ಫ್ರೈಗಳನ್ನು ಬಡಿಸುವ ಬಗ್ಗೆ ವಧು ಮತ್ತು ವರನ ಕಡೆಯವರ ನಡುವೆ ಜಗಳ ಭುಗಿಲೆದ್ದಿದೆ. ವರನ ಕುಟುಂಬದ ಕೆಲವು ಸದಸ್ಯರು ಅಲ್ಪ ಪ್ರಮಾಣದ ಖಾದ್ಯವನ್ನಷ್ಟೇ ಬಡಿಸಲಾಗುತ್ತಿದೆ ಎಂದು ದೂರಿದರು. ಸ್ಥಳದಲ್ಲಿದ್ದವರು ಘಟನೆಯ ದೃಶ್ಯವನ್ನು ಚಿತ್ರೀಕರಿಸಿದ್ದು, ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ. ಅದು ಭಾರಿ ವೈರಲ್ ಆಗಿದೆ.

Viral Video: ಮಹಿಳಾ ವಿಶ್ವಕಪ್ ಫೈನಲ್ ಪಂದ್ಯದ ವೇಳೆ ಭಾರತದ ರಾಷ್ಟ್ರಗೀತೆ ಹಾಡಿದ ಪಾಕ್‌ ಅಭಿಮಾನಿ!

ವಿಶ್ವಕಪ್ ಫೈನಲ್ ವೇಳೆ ಭಾರತದ ರಾಷ್ಟ್ರಗೀತೆ ಹಾಡಿದ ಪಾಕ್‌ ಅಭಿಮಾನಿ!

Pakistan Fan Sings Indian National Anthem: ಸದ್ಯ ವೈರಲ್‌ ಆಗುತ್ತಿರುವ ವಿಡಿಯೊದಲ್ಲಿ ಇಬ್ಬರು ಪುರುಷರು ಮತ್ತು ಸಣ್ಣ ಬಾಲಕಿಯೊಬ್ಬಳು ಪಾಕ್‌ ಜೆರ್ಸಿತೊಟ್ಟು ಟಿವಿ ಮುಂದೆ ನಿಂತು ಭಾರತದ ರಾಷ್ಟ್ರಗೀತೆ ಹಾಡುತ್ತಿರುವುದನ್ನು ಕಾಣಬಹುದು. ಬಳಿಕ ಹರ್ಮನ್‌ಪ್ರೀತ್‌ ಕೌರ್‌ ವಿಶ್ವಕಪ್‌ ಟ್ರೋಫಿ ಸ್ವೀಕರಿಸುವಾಗ ಸಂಭ್ರಮಿಸುವುದನ್ನು ಕಾಣಬಹುದು.

Actress Kajal: ಖ್ಯಾತ ನಟಿ ಕಾಜಲ್‌ ಖಾಸಗಿ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌!

ನಟಿ ಕಾಜಲ್‌ ಖಾಸಗಿ ವಿಡಿಯೋ ವೈರಲ್‌!

ಭೋಜ್‌ಪುರಿ ನಟಿಯರ (Bhojpuri) ಎಂಎಂಎಸ್ (ಖಾಸಗಿ ವಿಡಿಯೋ) ಸೋರಿಕೆಯ ಸುದ್ದಿಗಳು ಆಗಾಗ ಕೇಳಿ ಬರುತ್ತಿರುತ್ತವೆ. ಇದೀಗ ಅಂತಹ ಸುದ್ದಿಗಳು ಹೊರಹೊಮ್ಮಿದ್ದು, ಭೋಜ್‌ಪುರಿ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ. 15 ವರ್ಷದ ಯುವ ನಟಿ ಕಾಜಲ್ ಕುಮಾರಿ ದೊಡ್ಡ ವಿವಾದದಲ್ಲಿ ಸಿಲುಕಿದ್ದಾರೆ. ಕಾಜಲ್ ಕುಮಾರಿ ಖೇಸರಿ ಲಾಲ್ ಯಾದವ್ ಅವರೊಂದಿಗೆ ವೇದಿಕೆ ಕಾರ್ಯಕ್ರಮಗಳಲ್ಲಿಯೂ ಪ್ರದರ್ಶನ ನೀಡಿದ್ದಾರೆ. ಇದಲ್ಲದೆ, ಕಾಜಲ್ ಕುಮಾರಿ ಹಲವಾರು ಭೋಜ್‌ಪುರಿ ಸಂಗೀತ ವೀಡಿಯೊಗಳಲ್ಲಿ ಕೆಲಸ ಮಾಡಿದ್ದಾರೆ. ಕೇವಲ ಕಾಜಲ್‌ ಮಾತ್ರವಲ್ಲದೇ ಭೋಜ್‌ಪುರಿ ನಟಿಯರಾದ ಅಕ್ಷರಾ ಸಿಂಗ್ ಮತ್ತು ತ್ರಿಶಾ ಕರ್ ಮಧು ಸೇರಿದಂತೆ ಹಲವರ ಖಾಸಗಿ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು.

Animal Cruelty: ಸಾಕಲೆಂದು ಬಂದವಳು, ನೆಲಕ್ಕೆ ಬಡಿದು ನಾಯಿಮರಿಯನ್ನು ಕೊಂದಳು!  ಮಹಿಳೆಯ ಕೃತ್ಯ ಸಿಸಿಟಿವಿಯಲ್ಲಿ ಸೆರೆ

ಸಾಕಲೆಂದು ಬಂದವಳು, ನೆಲಕ್ಕೆ ಬಡಿದು ನಾಯಿಮರಿಯನ್ನು ಕೊಂದಳು!

viral video: ಕೆಲವರ ಕ್ರೌರ್ಯಕ್ಕೆ ಕಾರಣ ಊಹಿಸಲೂ ಸಾಧ್ಯವಿಲ್ಲ ಎಂಬುದು ಈ ಘಟನೆಯಿಂದ ರುಜುವಾತು ಆಗಿದೆ. ಆ ಮನೆ ಮಾಲೀಕರು ತಾವು ಇಲ್ಲದಾಗ ತಮ್ಮ ನಾಯಿ ಮರಿಯನ್ನು ನೋಡಿಕೊಳ್ಳಲಿ ಎಂದು ಒಬ್ಬಾಕೆ ಮಹಿಳೆಯನ್ನು ನೇಮಿಸಿಕೊಂಡಿದ್ದಾರೆ. ಆದರೆ ಸಾಕಲೆಂದು ಬಂದವಳೇ ಆ ನಾಯಿ ಮರಿಗೆ ಯಮಸ್ವರೂಪಿಯಾಗಿದ್ದಾಳೆ. ಅದೂ ಆಕೆ ನಾಯಿ ಮರಿ ಮೇಲೆ ತೋರಿದ್ದು ಅಂತಿಂಥಾ ಕ್ರೌರ್ಯವಲ್ಲ. ಲಿಫ್ಟ್‌ ಒಳಗೆ ನಾಯಿಮರಿಯನ್ನು ಅದರ ಕೊರಳಿಗೆ ಕಟ್ಟಿದ ಬೆಲ್ಟ್‌ನಿಂದಲೇ ಎತ್ತಿ ಬಟ್ಟೆ ಕುಕ್ಕಿದಂತೆ ಕುಕ್ಕಿ ಕೊಂದುಹಾಕಿದ್ದಾಳೆ. ನಂತರ ನಾಯಿ ಮರೆ ಹೇಗೆ ಸತ್ತಿತು ಎಂದು ತನಗೆ ಗೊತ್ತೇ ಇಲ್ಲ ಎಂದು ನಾಟಕ ಆಡಿದ್ದಾಳೆ.

Viral Video: ಸಾಲ ನಿರಾಕರಿಸಿದ್ದಕ್ಕೆ ಇಡೀ ಅಂಗಡಿಯನ್ನೇ ಸುಟ್ಟ ಕಿಡಿಗೇಡಿಗಳು; ಮನ ಕಲಕುವ ವಿಡಿಯೋ ಇಲ್ಲಿದೆ

ಅಂಗಡಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ ಕಿಡಿಗೇಡಿಗಳು: ವಿಡಿಯೋ ವೈರಲ್

Viral Video: ಅಂಗಡಿಯ ಮಾಲಿಕನೊಬ್ಬ ತನ್ನ ಬಳಿ ಸಾಲಕ್ಕೆ ತಿಂಡಿ ತಿನಿಸು ಕೇಳಿದ್ದ ಗ್ರಾಹಕನಿಗೆ ಸಾಲ ನೀಡಲು ನೀರಾಕರಿದ್ದಾನೆ‌. ಪರಿಣಾಮ ಗ್ರಾಹಕರಿಬ್ಬರು ಕೋಪದಿಂದ ದಿನಸಿ ಅಂಗಡಿಗೆ ಬೆಂಕಿ ಹಚ್ಚಿದ ಘಟನೆ ಮಧ್ಯಪ್ರದೇಶದ ಸತ್ನಾ ಜಿಲ್ಲೆಯಲ್ಲಿ ನಡೆದಿದೆ. ಸಾಲಕ್ಕೆಂದು ತಿಂಡಿ ತಿನಿಸು ಕೇಳಿದ್ದಾಗ ಸಾಲ ನೀಡಲು ಸಾಧ್ಯವಿಲ್ಲ ಹಣ ನೀಡಿದರೆ ಮಾತ್ರವೇ ವಸ್ತುಗಳನ್ನು ಕೊಡುವುದಾಗಿ ಅಂಗಡಿ ಮಾಲಿಕ ತಿಳಿಸಿದ್ದಾನೆ. ಬಳಿಕ ಇಬ್ಬರು ಗ್ರಾಹಕರು ಕೋಪದಲ್ಲಿ ದಿನಸಿ ಅಂಗಡಿಗೆ ಬೆಂಕಿ ಹಚ್ಚುವ ಮೂಲಕ ದುಶ್ಕೃತ್ಯವೆಸಗಿದ್ದಾರೆ. ಸದ್ಯ ಈ ಕುರಿತಾದ ವಿಡಿಯೋ ಒಂದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

Viral Video: ಚಲಿಸುತ್ತಿದ್ದ ರೈಲು ಹತ್ತಲು ಹೋಗಿದ್ದ ಮಹಿಳೆಯ ಜೀವ ರಕ್ಷಕರಾದ  ಆರ್‌ಪಿಎಫ್  ಸಿಬ್ಬಂದಿ; ವಿಡಿಯೋ ನೋಡಿ

ಚಲಿಸುವ ರೈಲು ಹತ್ತಲು ಹೋದ ಮಹಿಳೆಯನ್ನು ರಕ್ಷಿಸಿದ ಆರ್‌ಪಿಎಫ್ ಸಿಬ್ಬಂದಿ

Viral Video: ಚಲಿಸುವ ರೈಲು ಹತ್ತಲು ಪ್ರಯತ್ನಿಸುವಾಗ ಜಾರಿಬಿದ್ದ ಮಹಿಳಾ ಪ್ರಯಾಣಿಕರೊಬ್ಬರನ್ನು ಆರ್‌ಪಿಎಫ್ ಸಿಬಂದಿಯು ರಕ್ಷಿಸಿದ್ದ ಘಟನೆ ತಮಿಳುನಾಡಿನ ಈರೋಡ್ ಜಂಕ್ಷನ್‌ನಲ್ಲಿ ನಡೆದಿದೆ‌‌. ಮಹಿಳೆಯ ಅಜಾಗರೂಕತೆಯಿಂದ ಪ್ರಾಣಾಪಾಯ ಆಗುವ ಸಾಧ್ಯತೆ ಇತ್ತು. ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಅನಾಹುತ ತಪ್ಪಿದಂತಾಗಿದೆ. ಸದ್ಯ ಈ ಕುರಿತಾರ ವಿಡಿಯೋ ಒಂದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ತಮಿಳುನಾಡಿನ ಈ ರೋಡ್ ರೈಲ್ವೇ ಸ್ಟೇಷನ್ ನಲ್ಲಿ ನಡೆದ ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಸೆರೆಯಾಗಿದೆ. ರೈಲ್ವೇ ಸಚಿವಾಲಯವು ತಮ್ಮ ಅಧಿಕೃತ ಟ್ವಿಟರ್ ಎಕ್ಸ್ ಖಾತೆಯಲ್ಲಿ ಘಟನೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

Viral Video: ಅಮೆರಿಕದಲ್ಲಿ ಬಟ್ಟೆ ಕಳ್ಳತನ ಮಾಡಲು ಹೋಗಿ ಸಿಕ್ಕಿಬಿದ್ಳು ಕಳ್ಳಿ! ಭಾರೀ ವೈರಲ್‌ ಆಗ್ತಿದ್ದಂತೆ ಈ ವಿಡಿಯೊ

ಅಮೆರಿಕದಲ್ಲಿ ಬಟ್ಟೆ ಕಳ್ಳತನ ಮಾಡಲು ಹೋಗಿ ಸಿಕ್ಕಿಬಿದ್ದ ಭಾರತೀಯ ಯುವತಿ

Indian woman caught stealing clothes in America: ಅಮೆರಿಕದಲ್ಲಿ ಸಾಕಷ್ಟು ಮಂದಿ ಭಾರತೀಯ ಮೂಲದ ಜನರು ಶಿಕ್ಷಣ, ಉದ್ಯೋಗ ಪಡೆಯುತ್ತಿದ್ದಾರೆ. ಅಲ್ಲಿನ ಕಾನೂನು ತುಂಬಾ ಕಟ್ಟುನಿಟ್ಟಾಗಿದೆ. ಒಂದು ಸ್ವಲ್ಪ ಎಡವಟ್ಟಾದರೂ ಕಾನೂನಿನ ಕಂಟಕಕ್ಕೆ ಒಳಗಾಗಬಹುದು. ಇದೀಗ ಭಾರತೀಯ ಮೂಲದ ಯುವತಿಯೊಬ್ಬಳು, ಅಂಗಡಿಯೊಂದರಲ್ಲಿ ಬಟ್ಟೆಗಳನ್ನು ಖರೀದಿಸಿ ಬಿಲ್ ಕೊಡದೆ ಎಸ್ಕೇಪ್ ಆಗಲು ಪ್ರಯತ್ನಿಸಿದ್ದಾಳೆ. ಈ ವೇಳೆ ಸಿಕ್ಕಿಬಿದ್ದ ಅವಳನ್ನು ಪೊಲೀಸರು ಬಂಧಿಸಲು ಮುಂದಾಗಿದ್ದಾರೆ. ಇದರಿಂದ ಹೆದರಿದ ಆಕೆ, ತಾನು ಕದ್ದೊಯ್ಯುತ್ತಿರಲಿಲ್ಲ, ತನ್ನನ್ನು ಬಿಟ್ಟುಬಿಡುವಂತೆ ಅಂಗಲಾಚಿದ್ದಾಳೆ. ಇದರ ವಿಡಿಯೊ ವೈರಲ್ ಆಗಿದೆ.

Pushkar Fair: 21 ಕೋಟಿ ರೂ. ಮೌಲ್ಯದ ಕೋಣ ಹಠಾತ್‌ ಸಾವು; ವಿಮೆ ಹಣಕ್ಕಾಗಿ ಮೂಕ ಪ್ರಾಣಿಯ ಕೊಲೆ?

21 ಕೋಟಿ ರೂ. ಮೌಲ್ಯದ ಕೋಣ ಹಠಾತ್‌ ಸಾವು

Pushkar Animal Fair in Rajasthan: ರಾಜಸ್ಥಾನದಲ್ಲಿ ಆಯೋಜಿಸಿರುವ ಪುಷ್ಕರ್ ಜಾನುವಾರು ಮೇಳದ ಪ್ರಧಾನ ಆಕರ್ಷಣೆಯಾಗಿದ್ದ 21 ಕೋಟಿ ರೂ. ಮೌಲ್ಯದ ಕೋಣ ಹಠಾತ್‌ ಆಗಿ ಸಾವನ್ನಪ್ಪಿದ್ದು, ಪ್ರಾಣಿಪ್ರುಯರು ಆಘಾತ ವ್ಯಕ್ತಪಡಿಸಿದ್ದಾರೆ. ಅನಾರೋಗ್ಯದಿಂದ ಈ ದುಬಾರಿ ಕೋಣ ಅಕ್ಟೋಬರ್‌ 31ರಂದು ಅಸುನೀಗಿದೆ. ಪ್ರತಿದಿನ ಭೇಟಿ ನೀಡುವ ಸಾವಿರಾರು ಮಂದಿಗೆ ಈ ಕೋಣ ಬಹಳ ಪ್ರಿಯವಾಗಿತ್ತು.

Viral Video: ಪಾಕಿಸ್ತಾನದಲ್ಲಿ ಕೇವಲ 20 ರೂ. ಸಿಗುತ್ತೆ ಹೊಟೇಲ್‌ ರೂಂ! ಇದರ ಅವಸ್ಥೆ ಹೇಗಿದೆ ಗೊತ್ತಾ?

ಪಾಕ್‌ನ ಈ ಅತ್ಯಂತ ಅಗ್ಗದ ಹೊಟೇಲ್‌ ಹೇಗಿದೆ ಗೊತ್ತಾ?

World’s ‘Cheapest Hotel’ In Pakistan’: ಪಾಕಿಸ್ತಾನದ ಪೇಶಾವರದಲ್ಲಿರುವ ಹೊಟೇಲ್ ಒಂದರಲ್ಲಿ ವಿಶ್ವದಲ್ಲೇ ಅತೀ ಅಗ್ಗದ ದರದ ಸೇವೆಯನ್ನು ನೀಡುತ್ತಿದೆ ಎಂಬ ಸುದ್ದಿ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಒಂದು ರಾತ್ರಿ ಈ ಹೊಟೇಲ್ ನಲ್ಲಿ ತಂಗಲು ಬರೀ 20 ರೂಪಾಯಿ ದರವನ್ನು ನಿಗಧಿ ಮಾಡಿದೆ. ಇಷ್ಟು ಕಡಿಮೆ ದರ ದಲ್ಲಿ ತಂಗುವ ವ್ಯವಸ್ಥೆ ಮಾಡಿದ್ದು ಕಂಡು ನೆಟ್ಟಿಗರು ಅಚ್ಚರಿಗೊಂಡಿದ್ದಾರೆ. ನಮ್ಮ ದೇಶದಲ್ಲೇ ಅತೀ ಕಡಿಮೆಗೆ ಸ್ಟೇ ಮಾಡಲು ರೂಮ್ ಹುಡುಕುದಾದರೆ 500-800 ರೂಪಾಯಿ ತನಕ ಕನಿಷ್ಠ ದರ ಇದ್ದೇ ಇರುತ್ತದೆ. ಆದರೆ ಪಾಕಿಸ್ತಾನದ ಈ ಹೊಟೇಲ್ ನ ಬೆಲೆಯು ಬರೀ 20 ರೂಪಾಯಿ ಆಗಿದ್ದು ಇದು ವಿಶ್ವದಲ್ಲಿಯೇ ಅತ್ಯಂತ ಕಡಿಮೆ ದರದ ಹೊಟೇಲ್ ಸ್ಟೇ ಎಂದು ಹೇಳಲಾಗುತ್ತಿದ್ದು ಇದರ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

Viral News: ಮಾಂಸಾಹಾರ ಬ್ಯಾನ್‌ ಆಗಿರುವ ಪ್ರಪಂಚದ ಏಕೈಕ ನಗರ ಇದೇ ನೋಡಿ; ಇದು ಇರೋದು ಭಾರತದಲ್ಲಿ!

ಮಾಂಸಾಹಾರ ನಿಷೇಧ ಮಾಡಿರುವ ಏಕೈಕ ನಗರ ಇದೇ ನೋಡಿ!

Non-Vegetarian Food: ಈ ಒಂದು ಜಿಲ್ಲೆಯಲ್ಲಿ ಮಾಂಸಾಹಾರ ಆಹಾರವನ್ನೇ ನಿಷೇಧಿಸಿದ ವಿಶ್ವದ ಮೊದಲ ನಗರವಾಗಿ ಪ್ರಸಿದ್ಧಿ ಪಡೆದಿದೆ.. ಗುಜರಾತ್‌ನ ಭಾವನಗರ ಜಿಲ್ಲೆಯಲ್ಲಿರುವ ಒಂದು ಸಣ್ಣ ನಗರವು ಮಾಂಸಾಹಾರವನ್ನು ನಿಷೇಧ ಮಾಡಿದ ವಿಶ್ವದ ಮೊದಲ ನಗರವಾಗಿ ಪ್ರಸಿದ್ಧಿ ಪಡೆದಿದೆ. ಏಕೆಂದರೆ, ಈ ನಗರದಲ್ಲಿ ಮಾಂಸಾಹಾರವನ್ನು ಮಾರಾಟ ಮಾಡುವುದು, ಖರೀದಿಸುವುದು ಮತ್ತು ಸೇವಿಸುವುದನ್ನು ಕಾನೂನಿನ ಮೂಲಕ ಸಂಪೂರ್ಣವಾಗಿ ನಿಷೇಧ ಮಾಡಲಾಗಿದ್ದು ಯಾರು ಕೂಡ ಸೇವನೆ ಮಾಡು ವಂತಿಲ್ಲ. ಹಾಗಿದ್ರೆ ಇದಕ್ಕೆ ಕಾರಣವೇನು? ಯಾಕಾಗಿ ಈ ನಿಯಮವನ್ನು ಇಲ್ಲಿ ಜಾರಿ ಮಾಡಿದ್ದಾರೆ?

Viral Video: ಶಾಲೆಯ ನಾಲ್ಕನೇ ಮಹಡಿಯಿಂದ ಹಾರಿ ವಿದ್ಯಾರ್ಥಿನಿ ಸಾವು; ದೇಹದ ಮೇಲೆ ಗಾಯವೂ ಇಲ್ಲ... ಸ್ಥಳದಲ್ಲಿ ರಕ್ತದ ಕಲೆಗಳೂ ಇಲ್ಲ!

ನಾಲ್ಕನೆ ಮಹಡಿಯಿಂದ ಬಿದ್ದ ಬಾಲಕಿ- ಸಾವಿನ ಬಗ್ಗೆ ಹಲವು ಶಂಕೆ

Jaipur Self Harming News: ಖಾಸಗಿ ಶಾಲೆಯ ವಿದ್ಯಾರ್ಥಿಯೊಬ್ಬಳು ಶಾಲಾ‌ ಮಹಡಿಯಿಂದ ಹಾರಿ ಸಾವನಪ್ಪಿದ್ದ ಘಟನೆ ಜೈಪುರದಲ್ಲಿ ನಡೆದಿದೆ‌. 9 ವರ್ಷದ ಬಾಲಕಿಯು ನಾಲ್ಕನೇ ಮಹಡಿಯಿಂದ ಹಾರಿ ನವೆಂಬರ್ 1ರಂದು ಸಾವನ್ನಪ್ಪಿದ್ದಾರೆ. ಸಿಸಿಟಿವಿ ದೃಶ್ಯಾವಳಿಯಲ್ಲಿ ಆಕೆ ಸಾವನಪ್ಪಿದ್ದ ದೃಶ್ಯಗಳು ಸೆರೆಯಾಗಿದ್ದು ಬಾಲಕಿ ಕಂಬಿ ಬೇಲಿಯನ್ನು ಹತ್ತಿ ಜಿಗಿಯುತ್ತಿರುವ ದೃಶ್ಯ ಕಂಡುಬಂದಿದೆ. ಮಹಡಿಯಿಂದ 47 ಅಡಿ ಎತ್ತರದಿಂದ ಬಿದ್ದ ನಾಲ್ಕನೇ ತರಗತಿ ವಿದ್ಯಾರ್ಥಿನಿ ಅಮಾರಿಯಾಳನ್ನು ತಕ್ಷಣ ಪಕ್ಕದ ಆಸ್ಪತ್ರೆಗೆ ಕರೆ ದೊಯ್ಯಲಾಗಿದೆ. ಆದರೆ ಆಸ್ಪತ್ರೆಗೆ ಹೊರಡುವ ಮೊದಲೇ ಆಕೆ ಅಸ್ವಸ್ಥಳಾಗಿದ್ದು ಆಸ್ಪತ್ರೆಯಲ್ಲಿಯೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದನ್ನು ವೈದ್ಯರು ತಿಳಿಸಿದ್ದಾರೆ..

Road Rage Bangaluru:  ಬೈಕ್‌ ಸವಾರನಿಗೆ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದ ಕ್ಯಾಬ್‌ ಚಾಲಕ; ವಿಡಿಯೋ ವೈರಲ್‌

ಬೈಕ್‌ ಸವಾರನಿಗೆ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದ ಕ್ಯಾಬ್‌ ಚಾಲಕ!

ಕ್ಯಾಬ್ ಚಾಲಕನೊಬ್ಬ ಉದ್ದೇಶಪೂರ್ವಕವಾಗಿ ತನ್ನ ಕಾರನ್ನು ಬೈಕ್‌ಗೆ ಡಿಕ್ಕಿ ಹೊಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಶುಕ್ರವಾರ ಮಧ್ಯಾಹ್ನ ಕೆ.ಆರ್. ಪುರಂ ಸೇತುವೆಯಲ್ಲಿ ಈ ಘಟನೆ ನಡೆದಿದ್ದು, ಕಾರು ಚಾಲಕನ ಕೃತ್ಯ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದಾರೆ.

Viral News: ಬಾತ್‍ರೂಮ್‍ ಬಾಗಿಲು ತೆರೆಯಲು ಸಾಧ್ಯವಾಗದೆ ಮಕ್ಕಳು ಸಿಕ್ಕಿಬಿದ್ದರೆ ಹೀಗೆ ಮಾಡಿ; ರಕ್ಷಣಾ ಕಾರ್ಯಾಚರಣೆಯನ್ನು ರೆಕಾರ್ಡ್ ಮಾಡಿದ ತಾಯಿ

ಬಾತ್‍ರೂಮ್‍ ಬಾಗಿಲು ತೆರೆಯಲು ಸಾಧ್ಯವಾಗದೆ ಸಿಕ್ಕಿಬಿದ್ದ ಬಾಲಕ

Boy Gets Trapped in Bathroom: ಸಾಮಾಜಿಕ ಮಾಧ್ಯಮದಲ್ಲಿ ವೀಕ್ಷಣೆಗಳನ್ನು ಪಡೆಯಲು ಅನೇಕರು ವಿಪರೀತ ಸಾಹಸಗಳು, ಅಪಾಯಕಾರಿ ಸವಾಲುಗಳ ರೀಲ್ಸ್‌ಗಳು ಮಾಡುತ್ತಿರುತ್ತಾರೆ. ಖ್ಯಾತಿಯನ್ನು ಪಡೆಯುವ ಸಲುವಾಗಿ ಅನೇಕರು ತಮ್ಮ ಜೀವವನ್ನು ಅಪಾಯಕ್ಕೊಡ್ಡಿ ರೀಲ್ಸ್ ಮಾಡುತ್ತಾರೆ. ಬಹಳಷ್ಟು ಮಂದಿ ಜೀವ ಕಳೆದುಕೊಂಡಿದ್ದಾರೆ ಕೂಡ. ಮಹಿಳೆಯೊಬ್ಬಳ ಮಗ ಬಾತ್‌ರೂಮ್‌ನ ಬಾಗಿಲನ್ನು ಒಳಗಿನಿಂದ ಲಾಕ್ ಮಾಡಿದ್ದ. ಆದರೆ ಬಳಿಕ ತೆಗೆಯಲು ಸಾಧ್ಯವಾಗದೆ ಸಂಕಷ್ಟಕ್ಕೊಳಗಾಗಿದ್ದ. ನೆರೆಹೊರೆಯವರನ್ನು ಕರೆದು ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ. ಈ ದೃಶ್ಯವನ್ನು ಬಾಲಕನ ತಾಯಿ ಚಿತ್ರೀಕರಿಸಿದ್ದಾರೆ.

Indian Railway: ತೃತೀಯ ಲಿಂಗಿಗಳಂತೆ ನಟಿಸಿ ಪ್ರಯಾಣಿಕರಿಗೆ ಕಿರುಕುಳ ನೀಡುವವರ ವಿರುದ್ಧ ಕ್ರಮ; 'ರೈಲ್ ಮದದ್' ಪೋರ್ಟಲ್‌ನಲ್ಲಿ ದೂರು ಸಲ್ಲಿಸಿ

ತೃತೀಯ ಲಿಂಗಿಗಳಂತೆ ನಟಿಸಿ ಕಿರುಕುಳ ನೀಡಿದರೆ ಕ್ರಮ

Harassed By People Posing As Transgenders: ರೈಲಿನಲ್ಲಿ ಪ್ರಯಾಣಿಸುವಾಗ ತೃತಿಯ ಲಿಂಗಿಗಳು ಪ್ರಯಾಣಿಕರ ಬಳಿಗೆ ತೆರಳಿ ಹಣಕ್ಕಾಗಿ ಬೇಡಿಕೆಯಿಡುತ್ತಾರೆ. ಕೆಲವರು ತೃತೀಯ ಲಿಂಗಿಗಳಂತೆ ನಟಿಸಿ ಪ್ರಯಾಣಿಕರಿಂದ ಸುಲಿಗೆ ಮಾಡುತ್ತಾರೆ. ಇದರಿಂದ ಪ್ರಯಾಣಿಕರು ಸಾಕಷ್ಟು ಕಷ್ಟಪಡುವಂತಾಗಿದೆ. ಇದೀಗ ಭಾರತೀಯ ರೈಲ್ವೆ ಇಲಾಖೆ ಹೊಸ ನಿಯಮವೊಂದನ್ನು ಜಾರಿಗೆ ತಂದಿದೆ. ತೃತೀಯ ಲಿಂಗಿಗಳಂತೆ ನಟಿಸಿ ಹಣಕ್ಕಾಗಿ ಬೇಡಿಕೆ ಇಡುವ ವ್ಯಕ್ತಿಗಳಿಂದ ಕಿರುಕುಳವನ್ನು ತಪ್ಪಿಸಲು, 'ರೈಲ್ ಮದದ್' ಪೋರ್ಟಲ್ ಅನ್ನು ತಂದಿದೆ ಅಥವಾ 139 ಸಂಖ್ಯೆಗೆ ಕರೆ ಮಾಡುವ ಮೂಲಕ ದೂರು ಸಲ್ಲಿಸಬಹುದು.

Viral Video: ಹ್ಯಾಲೋವಿನ್‌ಗಾಗಿ ಅನ್ನಾಬೆಲ್ಲೆ ಆಗಿ ಬದಲಾದ ಮೇಕಪ್ ಕಲಾವಿದೆ; ರಸ್ತೆಯಲ್ಲಿ ನೋಡಿ ಕಿರುಚಿ ಓಡಿದ ಜನ, ಇಲ್ಲಿದೆ ವಿಡಿಯೊ

ಹ್ಯಾಲೋವಿನ್‌ಗಾಗಿ ಅನ್ನಾಬೆಲ್ಲೆ ಆಗಿ ಬದಲಾದ ಮೇಕಪ್ ಕಲಾವಿದೆ

Makeup Artist Transforms into Annabelle: ಹ್ಯಾಲೋವಿನ್‌ ಒಂದು ಪಾಶ್ಚಾತ್ಯ ಸಂಪ್ರದಾಯದ ಹಬ್ಬವಾಗಿದ್ದು, ಇತ್ತೀಚೆಗೆ ಭಾರತಕ್ಕೂ ಕಾಲಿಟ್ಟಿದೆ. ಪಾಶ್ಚಿಮಾತ್ಯ ಜನರು ಭೂತ, ಪ್ರೇತ, ಪಿಶಾಚಿ ಮುಂತಾದ ವೇಷಭೂಷಣ ಧರಿಸಿ, ಆತ್ಮಗಳನ್ನು ದೂರವಿಡಲು ಪ್ರಯತ್ನಿಸುತ್ತಿದ್ದರು. ಈಗ ಇದು ಮುಖ್ಯವಾಗಿ ಮನರಂಜನೆ ಮತ್ತು ಕಾಸ್ಟ್ಯೂಮ್ ಪಾರ್ಟಿಗಳ ಹಬ್ಬವಾಗಿ ರೂಪಾಂತರಗೊಂಡಿದೆ. ವಿದೇಶದ ಈ ಹಬ್ಬ ಇತ್ತೀಚೆಗೆ ಭಾರತಕ್ಕೂ ಕಾಲಿಟ್ಟಿದೆ. ಇದೀಗ ದೆಹಲಿಯಲ್ಲಿ ಮಹಿಳೆಯೊಬ್ಬರು ಅನ್ನಾಬೆಲ್ಲೆ ಆಗಿ ತಮ್ಮನ್ನು ತಾವು ಪರಿವರ್ತಿಸಿಕೊಂಡು, ನಗರದ ಬೀದಿಗಳಲ್ಲಿ ಸುತ್ತಾಡಿದ್ದಾರೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

Online Scam: 'ಮೇಕ್‌ ಮೀ ಪ್ರೆಗ್ನೆಂಟ್' ಆನ್ಲೈನ್ ಜಾಹೀರಾತು ನಂಬಿದ ವ್ಯಕ್ತಿಗೆ ಲಕ್ಷ... ಲಕ್ಷ... ಪಂಗನಾಮ!

ಆನ್‌ಲೈನ್‌ ಜಾಹೀರಾತುಗಳ ಬಗ್ಗೆ ಎಚ್ಚರ... ಎಚ್ಚರ!

Pregnancy Offer Ad: ಪ್ರೆಗ್ನೆಂಟ್ ಜಾಬ್ ಅಥವಾ ಪ್ಲೇಬಾಯ್ ಸರ್ವಿಸ್ ಹಗರಣ ಎಂದು ಕರೆಯಲ್ಪಡುವ ಸೈಬರ್ ದಂಧೆಯು ಇತ್ತೀಚಿನ ದಿನಗಳಲ್ಲಿ ತನ್ನ ಜಾಲವನ್ನು ಬಹಳಷ್ಟು ವಿಸ್ತರಿಸಿದೆ. ವ್ಯಕ್ತಿಯೊಬ್ಬ, ‘ತನ್ನನ್ನು ಗರ್ಭಿಣಿ ಮಾಡು’ ಎಂಬ ಆನ್ಲೈನ್ ಜಾಹೀರಾತು ಸ್ವೀಕರಿಸಿದ ನಂತರ ಅದಕ್ಕೆ ಪ್ರತಿಕ್ರಿಯಿಸಿದ್ದಾನೆ. ಇಂಥವರನ್ನೇ ಗುರಿಯಾಗಿಸಿದ್ದ ವಂಚಕರ ಬಲೆಗೆ ಸುಲಭವಾಗಿ ಬಿದ್ದ ಪುಣೆ ಮೂಲದ ಗುತ್ತಿಗೆದಾರನು 11 ಲಕ್ಷ ರೂ. ಕಳೆದುಕೊಂಡಿದ್ದಾನೆ. ನೋಂದಣಿ ಶುಲ್ಕ, ಸದಸ್ಯತ್ವ ಶುಲ್ಕ, ಗೌಪ್ಯತೆ ಶುಲ್ಕ ಮತ್ತು ಸಂಸ್ಕರಣಾ ಶುಲ್ಕಗಳು ಸೇರಿದಂತೆ ವಿವಿಧ ರೀತಿಯ ಶುಲ್ಕಗಳನ್ನು ಪಾವತಿಸುವಂತೆ ಗುತ್ತಿಗೆದಾರನಿಗೆ ವಂಚಿಸಲಾಗಿದೆ.

Viral Video: ಯುವತಿಯನ್ನು ಕೂರಿಸಿಕೊಂಡು ಡೆಡ್ಲಿ ವ್ಹೀಲಿಂಗ್! ಈ ಹುಚ್ಚಾಟದ ವಿಡಿಯೊ ಇಲ್ಲಿದೆ

ಯುವತಿ ಜೊತೆ ಡೆಡ್ಲಿ ವ್ಹೀಲಿಂಗ್! ಎದೆಝಲ್ಲೆನ್ನಿಸುವ ವಿಡಿಯೊ ಇಲ್ಲಿದೆ

Dangerous Wheeling Stunt: ಸಾಮಾಜಿಕ ಮಾಧ್ಯಮದಲ್ಲಿ ಖ್ಯಾತರಾಗಲು ಕೆಲವರು ತಮ್ಮ ಜೀವವನ್ನು ಪಣಕ್ಕಿಡುತ್ತಾರೆ. ಜೀವನ ದುರಂತ ಅಂತ್ಯ ಮಾಡಿಕೊಂಡವರು ಹಲವರಿದ್ದಾರೆ. ಇದೀಗ ವೈರಲ್ ಆಗಿರುವ ವಿಡಿಯೊವೊಂದರಲ್ಲಿ ರಸ್ತೆ ಮಧ್ಯ ಅಪಾಯಕಾರಿ ವ್ಹೀಲಿಂಗ್ ಪ್ರದರ್ಶಿಸುವುದನ್ನು ಕಾಣಬಹುದು. ಬೈಕ್‍ ಸವಾರ ತನ್ನ ಹಿಂದೆ ಯುವತಿಯನ್ನು ಕೂರಿಸಿಕೊಂಡು ಸ್ಟಂಟ್ ಮಾಡಿದ್ದಾನೆ. ಬೈಕ್ ಅನ್ನು ವೇಗವಾಗಿ ಚಲಾಯಿಸಿದ್ದಲ್ಲದೆ, ವ್ಹೀಲಿಂಗ್ ಮಾಡಿದ್ದಾನೆ. ಈ ವೇಳೆ ಬೈಕ್ ನಿಯಂತ್ರಣ ತಪ್ಪಿದೆ. ಇಬ್ಬರೂ ರಸ್ತೆಮಧ್ಯ ಬಿದ್ದಿದ್ದಾರೆ. ಎದೆಝಲ್ಲೆನ್ನಿಸುವ ವಿಡಿಯೊ ನೋಡಿದ ನೆಟ್ಟಿಗರು ಇಂಥವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

Viral News: ಅಪ್ಪನ 62 ವರ್ಷದ ಹಳೆಯ  ಬ್ಯಾಂಕ್ ಪಾಸ್‌ಬುಕ್‍ ಸಿಕ್ತು... ರಾತ್ರೋರಾತ್ರಿ ಮಗ ಕೋಟ್ಯಧಿಪತಿ!

ಕಸವೆಂದು ಎಸೆಯುವ ಮುನ್ನ ಈ ಸ್ಟೋರಿ ಓದಿ

Hidden Fortune Revealed: ಮನೆಯಲ್ಲಿರುವ ಹಳೆಯ ವಸ್ತುಗಳನ್ನು ಕಸ ಎಂದು ಎಸೆಯುವ ಅಭ್ಯಾಸ ನಿಮಗಿದೆಯಾ? ಹಾಗಿದ್ದರೆ ಈ ಸ್ಟೋರಿ ಓದಲೇಬೇಕು. ಹಳೆಯ ಕಾಗದಗಳನ್ನು ಕಸ ಎಂದು ಎಸೆಯದೆ ಹಾಗೆಯೇ ಇಟ್ಟರೆ ಮುಂದೊಂದು ದಿನ ನಿಮ್ಮ ಲಕ್ ಬದಲಾಗಬಹುದು. ಚಿಲಿಯಲ್ಲಿ ವಾಸಿಸುತ್ತಿರುವ ಎಕ್ಸೆಸೈಲ್ ಹಿನೊಹೊಸಾ ಎಂಬ ವ್ಯಕ್ತಿಗೆ ಇದೇ ಘಟನೆ ಸಂಭವಿಸಿದೆ. ಮೃತ ತಂದೆಯ 62 ವರ್ಷದ ಹಿಂದಿನ ಬ್ಯಾಕ್ ಪಾಸ್‍ಬುಕ್ ಅವರ ಜೀವನವನ್ನೇ ಬದಲಾಯಿಸಿದ್ದು, ರಾತ್ರೋರಾತ್ರಿ ಕೋಟ್ಯಧಿಪತಿಯಾಗಿದ್ದಾರೆ. ಈ ಆಕಸ್ಮಿಕವಾಗಿ ಸಿಕ್ಕ ಬ್ಯಾಂಕ್ ಪಾಸ್‍ಬುಕ್ ಅವರಿಗೆ ಅನಿರೀಕ್ಷಿತ ಭಾಗ್ಯವನ್ನು ತಂದುಕೊಟ್ಟಿತು.

Viral Video: ಒಂದು ಕಾಲದಲ್ಲಿ WWE ಕುಸ್ತಿಪಟು, ಈಗ ಆಶ್ರಮದಲ್ಲಿ ಕಸ ಗುಡಿಸುತ್ತಿರುವ ಕರ್ಮಚಾರಿ! ಇಲ್ಲಿದೆ ನೋಡಿ ವಿಡಿಯೊ

ಆಶ್ರಮದಲ್ಲಿ ಕಸ ಗುಡಿಸುತ್ತಿರುವ WWE ಮಾಜಿ ಕುಸ್ತಿಪಟು

WWE Wrestler, Now Seen Sweeping Floors: ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಒಂದು ವಿಡಿಯೊದಲ್ಲಿ ಎಲ್ಲರಿಗೂ ಅಚ್ಚರಿ ತಂದ ಒಂದು ಘಟನೆ ನಡೆದಿದೆ. ಒಂದು ಕಾಲದಲ್ಲಿ ಕ್ರೀಡಾ ಲೋಕದಲ್ಲಿ ಮೆರೆದಿದ್ದ ವ್ಯಕ್ತಿಯೊಬ್ಬರು ಇದೀಗ ಹಿಂದೂ ಗುರು ಪ್ರೇಮಾನಂದ ಮಹಾರಾಜರ ಆಶ್ರಮದಲ್ಲಿ ಕಸ ಗುಡಿಸುತ್ತಿದ್ದಾರೆ. ಅವರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. WWE ಮಾಜಿ ಕುಸ್ತಿಪಟು ಮತ್ತು ಬೇಸ್‌ಬಾಲ್ ಆಟಗಾರ ರಿಂಕು ಸಿಂಗ್ ವೃಂದಾವನದಲ್ಲಿರುವ ಪ್ರೇಮಾನಂದ ಮಹಾರಾಜರ ಆಶ್ರಮದಲ್ಲಿ ನೆಲ ಸ್ವಚ್ಛಗೊಳಿಸುತ್ತಿದ್ದಾರೆ. ಬೇಸ್‌ಬಾಲ್‌ನಿಂದ WWE ಮೂಲಕ ವೃಂದಾವನದವರೆಗೆ ಅವರ ಈ ಪಯಣವು ಎಲ್ಲರಿಗೂ ಅಚ್ಚರಿ ತಂದಿದೆ.

ನಿಶ್ವಿತಾರ್ಥಕ್ಕೂ ಮುನ್ನ ವಧುವಿನ ತಂದೆಯೊಂದಿಗೆ ಓಡಿಹೋದ ವರನ ತಾಯಿ; ಹೀಗೊಂದು ಅಂಕಲ್‌-ಆಂಟಿ ಲವ್‌ಸ್ಟೋರಿ!

ವಧುವಿನ ತಂದೆಯೊಂದಿಗೆ ಓಡಿಹೋದ ವರನ ತಾಯಿ

Viral News: ಮಕ್ಕಳ ನಿಶ್ಚಿತಾರ್ಥಕ್ಕೂ ಮುನ್ನ ವಧುವಿನ ತಂದೆ ಮತ್ತು ವರನ ತಾಯಿ ಓಡಿ ಹೋಗಿರುವ ಘಟನೆ ಮಧ್ಯ ಪ್ರದೇಶದ ಉಜ್ಜೈನಿಯಲ್ಲಿ ನಡೆದಿದೆ. 8 ದಿನಗಳ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಸದ್ಯ ಪೊಲೀಸರು ಈ ಕಿಲಾಡಿ ಜೋಡಿಯನ್ನು ಪತ್ತೆ ಹಚ್ಚಿದ್ದಾರೆ. ಆದರೆ ಮಹಿಳೆ ಪ್ರಿಯತಮನನ್ನು ಬಿಟ್ಟು ಮನೆಗೆ ಹೋಗಲು ನಿರಾಕರಿಸಿದ್ದಾಳೆ. 7 ದಿನಗಳ ಕಾಲ ನಾಪತ್ತೆಯಾಗಿ ಇದೀಗ ಉಂತ್ವಾಸ ಗ್ರಾಮದ 45 ವರ್ಷದ ಮಹಿಳೆ ತನ್ನ ಪ್ರಿಯತಮನ ನಿವಾಸಲ್ಲಿ ಪತ್ತೆಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಆಕೆಯ ಪುತ್ರ ನೀಡಿದ ನಾಪತ್ತೆ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.

Loading...