ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ದೇಶ
Amit Shah: "ಪಾಕಿಸ್ತಾನಿಗಳನ್ನು ಈ ಕೂಡಲೇ ಹುಡುಕಿ ದೇಶದಿಂದ ಹೊರದಬ್ಬಿ"  ;  ಅಮಿತ್‌ ಶಾ ಖಡಕ್‌ ಸೂಚನೆ

ಪಾಕಿಸ್ತಾನಿಗಳನ್ನು ಈ ಕೂಡಲೇ ಹುಡುಕಿ ದೇಶದಿಂದ ಹೊರದಬ್ಬಿ; ಅಮಿತ್‌ ಶಾ

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಸೋಮವಾರ ನಡೆದ ಭೀಕರ ಉಗ್ರರ ದಾಳಿ ಬಳಿಕ ಭಾರತ ಹಾಗೂ ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ. ಭಾರತ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿಯನ್ನು ಮಾಡಲು ಮುಂದಾಗಿದೆ. ಭಾರತದಲ್ಲಿರುವ ಪಾಕಿಸ್ತಾನಿ ಪ್ರಜೆಗಳನ್ನು ಹೊರದಬ್ಬುವಂತೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೂಚನೆ ನೀಡಿದ್ದಾರೆ.

Kunal Kamra: ಏಕನಾಥ್ ಶಿಂಧೆ ಪ್ರಕರಣ;   ಕುನಾಲ್ ಕಮ್ರಾಗೆ ಬಿಗ್ ರಿಲೀಫ್ ನೀಡಿದ ಹೈಕೋರ್ಟ್‌

ಕುನಾಲ್ ಕಮ್ರಾಗೆ ಬಿಗ್ ರಿಲೀಫ್ ನೀಡಿದ ಹೈಕೋರ್ಟ್‌

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಬಗ್ಗೆ ವಿವಾದಾತ್ಮಕ ಹೇಳೀಕೆ ನೀಡಿದ್ದ ಕುನಾಲ್‌ ಕಾಮ್ರಾಗೆ ಇದೀಗ ಬಿಗ್‌ ರಿಲೀಫ್‌ ಸಿಕ್ಕಿದೆ. ಹಾಸ್ಯನಟ ಅವರಿಗೆ ಬಾಂಬೆ ಹೈಕೋರ್ಟ್ ಸ್ವಲ್ಪ ರಿಲೀಫ್ ನೀಡಿದೆ. ಶುಕ್ರವಾರ ಬೆಳಿಗ್ಗೆ ನ್ಯಾಯಾಲಯವು ಶ್ರೀ ಕಮ್ರಾ ಅವರನ್ನು ಈ ಸಮಯದಲ್ಲಿ ಬಂಧಿಸಲು ಸಾಧ್ಯವಿಲ್ಲ ಎಂದು ಹೇಳಿದೆ.

IND vs PAK: ಇನ್ನು ಮುಂದೆ ವಿಶ್ವಕಪ್ ಗ್ರೂಪ್ ಹಂತದಲ್ಲಿ ಭಾರತ-ಪಾಕ್‌ ಪಂದ್ಯ ನಡೆಯುವುದು ಅನುಮಾನ!

ವಿಶ್ವಕಪ್ ಗ್ರೂಪ್ ಹಂತದಲ್ಲಿ ಭಾರತ-ಪಾಕ್‌ ಪಂದ್ಯ ನಡೆಯುವುದು ಅನುಮಾನ!

Pahalgam Terrorist Attack: ಮುಂಬರುವ ವಿಶ್ವಕಪ್ ಕೂಟದಲ್ಲಿ ಭಾರತ ಪಾಕಿಸ್ಥಾನ ಪಂದ್ಯಗಳ ಮೇಲೆ ಪಹಲ್ಗಾಮ್‌ನ ಉಗ್ರರ ದಾಳಿಯ ಕರಿನೆರಳು ಬಿದ್ದಿದ್ದು, ಈ ಸಂಬಂಧವಾಗಿ, ಬಿಸಿಸಿಐ ಮತ್ತು ಭಾರತ ಸರಕಾರ ಯಾವ ನಿಲುವನ್ನು ತಳೆಯಲಿದೆ ಎಂಬ ಕುತೂಹಲ ಎರಡೂ ದೇಶಗಳ ಕ್ರಿಕೆಟ್ ಪ್ರೇಮಿಗಳಲ್ಲಿ ಮೂಡಿದೆ.

Rahul Gandhi: ಸ್ವಾತಂತ್ರ್ಯ ಹೋರಾಟಗಾರರಿಗೆ ಕೊಡುವ ಗೌರವ ಇದೇನಾ? ಸಾವರ್ಕರ್‌ ವಿರುದ್ಧದ ಹೇಳಿಕೆಗೆ ರಾಹುಲ್‌ಗಾಂಧಿಗೆ ಸುಪ್ರೀಂ ಕ್ಲಾಸ್‌

ಸಾವರ್ಕರ್‌ಗೆ ಅಪಮಾನ; ರಾಹುಲ್‌ಗಾಂಧಿಗೆ ಸುಪ್ರೀಂ ಕ್ಲಾಸ್‌

Supreme Court Slams Rahul Gandhi:ಸ್ವಾತಂತ್ರ್ಯ ಹೋರಾಟಗಾರ ವಿ.ಡಿ. ಸಾವರ್ಕರ್‌ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ರಾಹುಲ್‌ ಗಾಂಧಿ ವಿರುದ್ಧ ಸುಪ್ರೀಂ ಕೋರ್ಟ್‌ ಗರಂ ಆಗಿದೆ. ಈ ವರ್ತನೆ ಮರುಕಳಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.

Indian Airlines: ವಾಯುಮಾರ್ಗ ಮುಚ್ಚಿದ ಪಾಕ್‌; ಏರ್‌ಇಂಡಿಯಾ, ಇಂಡಿಗೋ ವಿಮಾನಗಳು ಡೈವರ್ಟ್‌

ಭಾರತೀಯ ವಿಮಾನಗಳಿಗೆ ವಾಯುಪ್ರದೇಶ ಮುಚ್ಚಿದ ಪಾಕ್

ಪಹಲ್ಗಾಮ್‌ ದುರಂತ (Pahalgam attack) ನಂತರ ಭಾರತ ಸರ್ಕಾರ ಕೈಗೊಂಡ ಕ್ರಮಗಳಿಗೆ ಪ್ರತಿಯಾಗಿ ಪಾಕಿಸ್ತಾನವು ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ತನ್ನ ವಾಯುಪ್ರದೇಶವನ್ನು ಮುಚ್ಚಿದೆ. ಹೀಗಾಗಿ ಸೇವೆಯಲ್ಲಿ ಅಡಚಣೆ ಉಂಟಾಗಲಿದೆ ಎಂದು ಇಂಡಿಗೋ ಮತ್ತು ಏರ್ ಇಂಡಿಯಾ ಪ್ರಯಾಣಿಕರಿಗೆ ತಿಳಿಸಿದೆ. ವಿಮಾನ ಮಾರ್ಗಗಳನ್ನು ಬದಲಾಯಿಸಬೇಕಾಗಿರುವುದರಿಂದ "ಪರ್ಯಾಯ ವಿಸ್ತೃತ ಮಾರ್ಗ" ಕ್ಕೆ ಕಾರಣವಾಗುವ ಕೆಲವು ಅಂತಾರಾಷ್ಟ್ರೀಯ ವಿಮಾನಗಳ ವೇಳಾಪಟ್ಟಿಯ ಮೇಲೆ ಇದು ಪರಿಣಾಮ ಬೀರುತ್ತದೆ ಎಂದು ವಿಮಾನಯಾನ ಸಂಸ್ಥೆಗಳು ತಿಳಿಸಿವೆ.

Shimla Agreement: ಶಿಮ್ಲಾ ಒಪ್ಪಂದ ಮುರಿಯುವ ಬೆದರಿಕೆ-ಯುದ್ಧಕ್ಕೆ ಅಹ್ವಾನ ನೀಡಿತೇ ಪಾಕ್ ?

ಭಾರತಕ್ಕೆ ಪಾಕ್‌ನಿಂದ ಶಿಮ್ಲಾ ಒಪ್ಪಂದ ಮುರಿಯುವ ಬೆದರಿಕೆ

ದಕ್ಷಿಣ ಕಶ್ಮೀರ ಪಹಲ್ಗಾಮ್ ನ ಬೈಸರನ್ ಕಣಿವೆಯಲ್ಲಿ ಪ್ರವಾಸಿಗರ ಮೇಲಿನ ಭಯೋತ್ಪಾದಕರ ದಾಳಿಗೆ ಪ್ರತಿಯಾಗಿ ಭಾರತ ಸರ್ಕಾರವು ಸಿಂಧೂ ನದಿ ನೀರು ಒಪ್ಪಂದವನ್ನು ರದ್ದುಗೊಳಿಸಿದ ಬೆನ್ನಲ್ಲೇ ಪಾಕಿಸ್ತಾನ ಶಿಮ್ಲಾ ಒಪ್ಪಂದವನ್ನು ಮುರಿಯುವುದಾಗಿ ಬೆದರಿಕೆ ಒಡ್ಡುತ್ತಿದೆ. ಈ ಮೂಲಕ ಪಾಕಿಸ್ತಾನವು ಯುದ್ಧ ನಡೆಸಲು ಭಾರತಕ್ಕೆ ಬಹಿರಂಗವಾಗಿಯೇ ಅಹ್ವಾನ ನೀಡುತ್ತಿದೆ. ಒಂದು ವೇಳೆ ಪಾಕಿಸ್ತಾನ ಈ ಒಪ್ಪಂದ ಮುರಿದರೆ ಮತ್ತೊಮ್ಮೆ ಎರಡು ದೇಶಗಳ ನಡುವೆ ಯುದ್ಧ ಪ್ರಾರಂಭವಾಗುವುದರಲ್ಲಿ ಸಂದೇಹವಿಲ್ಲ.

Abir Gulaal Ban In India: ಪಾಕ್ ನಟ ಫವಾದ್ ಖಾನ್ ಅಭಿನಯದ ಬಾಲಿವುಡ್‌ ಚಿತ್ರ 'ಅಬೀರ್ ಗುಲಾಲ್’ ಬ್ಯಾನ್

ಪಾಕ್ ನಟನ ಸಿನಿಮಾ ರಿಲೀಸ್‌ಗೆ ನಿಷೇಧ ಹೇರಿದ ಭಾರತ

Abir Gulaal Ban In India: ಪಾಕಿಸ್ತಾನಿ ನಟ ಫವಾದ್ ಖಾನ್ ಅಭಿನಯದ ಬಾಲಿವುಡ್ ಚಿತ್ರ ಅಬೀರ್ ಗುಲಾಲ್ ಭಾರತದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಈ ಚಿತ್ರದಲ್ಲಿ ವಾಣಿ ಕಪೂರ್ ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಏಪ್ರಿಲ್ 22ರ ಮಂಗಳವಾರ ನಡೆದ ಭೀಕರ ಭಯೋತ್ಪಾದಕ ದಾಳಿಯ ಬೆನ್ನಲ್ಲೇ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಭಾರತದ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಸಂಬಂಧಿಸಿದ ಮೂಲಗಳು ತಿಳಿಸಿವೆ.

Pahalgam Terror Attack: ಹಮಾಸ್- ಪಾಕ್ ಬೆಂಬಲಿತ ಲಷ್ಕರ್ ನಡುವೆ ಸಂಪರ್ಕ ಇದೆ ಎಂದ ಇಸ್ರೇಲ್ ರಾಯಭಾರಿ

ಪಹಲ್ಗಾಮ್‌ ದಾಳಿಯನ್ನು ಹಮಾಸ್ ದಾಳಿಗೆ ಹೋಲಿಸಿದ ಇಸ್ರೇಲ್‌ ರಾಯಭಾರಿ

Pahalgam Terror Attack: ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿನಡೆದ ಭಯೋತ್ಪಾದಕ ದಾಳಿಯನ್ನು ಇಸ್ರೇಲ್‌ನ ರಾಯಭಾರಿ ರಿಯುವೆನ್ ಅಜಾರ್ ಅವರು 2023ರ ಅಕ್ಟೋಬರ್ 7ರ ಹಮಾಸ್ ದಾಳಿಗೆ ಹೋಲಿಸಿದ್ದಾರೆ. ಈ ಎರಡೂ ದಾಳಿಗಳು ನಾಗರಿಕರನ್ನು ಗುರಿಯಾಗಿಸಿಕೊಂಡಿರುವುದರಿಂದ ಸಾಮ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.

Pahalgam terror Attack: ಭಾರತೀಯ ಸೇನೆಯ ಭರ್ಜರಿ ಬೇಟೆ-  ಲಷ್ಕರ್‌ ತೊಯ್ಬಾ ಟಾಪ್‌ ಕಮಾಂಡರ್‌ ಫಿನೀಶ್‌!

LeT ಟಾಪ್‌ ಕಮಾಂಡರ್‌ ಫಿನೀಶ್‌!

LeT commander encounter:ಪಹಲ್ಗಾಮ್‌ನಲ್ಲಿ ಮೂರು ದಿನಗಳ ಹಿಂದೆ ನಡೆದ ರಣ ಭೀಕರ ಉಗ್ರ ದಾಳಿ ಬೆನ್ನಲ್ಲೇ ಭಯೋತ್ಪಾದಕರ ಬೇಟೆಗೆ ಇಳಿದಿರುವ ಭಾರತೀಯ ಸೇನೆ ಲಷ್ಕರ್‌- ತೊಯ್ಬಾ ಉಗ್ರ ಸಂಘಟನೆಯ ಟಾಪ್‌ ಕಮಾಂಡರ್‌ನನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದೆ.

Pahalgam Terror Attack: 2 ದಿನಗಳಲ್ಲಿ ಪಾಕಿಸ್ತಾನ ವಿರುದ್ಧ 7 ದೊಡ್ಡ ನಿರ್ಧಾರ ಕೈಗೊಂಡ ಭಾರತ

ಪಾಕಿಸ್ತಾನದ ವಿರುದ್ಧ ಭಾರತದ ಪ್ರತೀಕಾರ ಹೇಗಿದೆ ಗೊತ್ತಾ..?

Pahalgam Terror Attack: ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯನ್ನು ಖಂಡಿಸಿ ಭಾರತ ದಿಟ್ಟ ಹೆಜ್ಜೆ ಇಟ್ಟಿದ್ದು, ಭಾರತವು ಅಟಾರಿ ಗಡಿ ಬಂದ್ ಮಾಡಿದ್ದು, ಪಾಕಿಸ್ತಾನದ ಮೇಲೆ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿರುವ ಭಾರತ, ಪಾಕಿಸ್ತಾನದೊಂದಿಗಿನ ತನ್ನ ರಾಜತಾಂತ್ರಿಕ ಸಂಬಂಧವನ್ನು ಕಡಿತಗೊಳಿಸಿದೆ. ಪಾಕಿಸ್ತಾನಿಗರಿಗೆ ವೀಸಾ ಸೇವೆ ಸ್ಥಗಿತಗೊಳಿಸಿದ್ದು, ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ. ಇದರಿಂದ ಪಾಕಿಸ್ತಾನ ಕಂಗಾಲಾಗಿದೆ. ಈ ಕುರಿತು ಇಲ್ಲಿದೆ ಹೆಚ್ಚಿನ ಮಾಹಿತಿ.

Pahalgam terror Attack: ಪಹಲ್ಗಾಮ್‌ ದಾಳಿಯಲ್ಲಿ ಭಾಗಿಯಾಗಿದ್ದ ಇಬ್ಬರು ಲಷ್ಕರ್‌ ಉಗ್ರರ ಮನೆಗಳು ಧ್ವಂಸ

ಇಬ್ಬರು ಲಷ್ಕರ್‌ ಉಗ್ರರ ಮನೆಗಳು ಧ್ವಂಸ

Lashkar Terrorists: ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಉಗ್ರರ ದಾಳಿ ಬೆನ್ನಲ್ಲೇ ಇಬ್ಬರು ಶಂಕಿತ ಉಗ್ರರ ನಿವಾಸಗಳನ್ನು ಭಾರತೀಯ ಸೇನೆ ಪುಡಿಗಟ್ಟಿದೆ. ಸ್ಫೋಟಕಗಳನ್ನು ಸ್ಫೋಟಿಸಿ ಉಗ್ರರ ಮನೆಗಳನ್ನು ಧ್ವಂಸ ಮಾಡಲಾಗಿದೆ. ಲಷ್ಕರ್-ಎ-ತೈಬಾ (LET) ಭಯೋತ್ಪಾದಕ ಸಂಘಟನೆಯ ಆದಿಲ್ ಹುಸೇನ್ ಥೋಕರ್ ಮತ್ತು ಆಸಿಫ್ ಶೇಖ್ ಅವರ ಮನೆಗಳು ನಾಶಗೊಂಡಿವೆ.

Pakistan's Firing: ಪಾಕಿಸ್ತಾನದಿಂದ ಮತ್ತೆ ಕಿಡಿಗೇಡಿ ಕೃತ್ಯ; ಗಡಿಯಲ್ಲಿ ಗುಂಡಿನ ದಾಳಿ- ಭಾರತೀಯ ಸೇನೆಯಿಂದ ತಕ್ಕ ಪ್ರತ್ಯುತ್ತರ

ಗಡಿಯಲ್ಲಿ ಪಾಕ್‌ ಸೇನೆಯಿಂದ ಗುಂಡಿನ ದಾಳಿ- ಸೇನೆಯಿಂದ ತಕ್ಕ ಪ್ರತ್ಯುತ್ತರ

Firing Across Line Of Control:ಜಮ್ಮು ಮತ್ತು ಕಾಶ್ಮೀರದ ನಿಯಂತ್ರಣ ರೇಖೆಯ (LOC) ಉದ್ದಕ್ಕೂ ಪಾಕಿಸ್ತಾನಿ ಪಡೆಗಳು ಭಾರತೀಯ ಪೋಸ್ಟ್‌ಗಳ ಮೇಲೆ ತಡರಾತ್ರಿ ದಾಳಿ(India Retaliates)ನಡೆಸಿದೆ. ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಿದೆ.

Star Saree Fashion: ಫ್ಯಾಷನ್‌ ಫಾಲೋವರ್ಸ್‌ ಮನ ಸೆಳೆದ ನಟಿ ಡೈಸಿ ಬೊಪಣ್ಣರ ಶೀರ್‌ ಸೀರೆ

ಫ್ಯಾಷನ್‌ ಫಾಲೋವರ್ಸ್‌ ಮನ ಸೆಳೆದ ನಟಿ ಡೈಸಿ ಬೊಪಣ್ಣರ ಶೀರ್‌ ಸೀರೆ

Star Saree Fashion: ಅತ್ಯಾಕರ್ಷಕ ಓಷನ್‌ ಬ್ಲ್ಯೂ ಶೀರ್‌ ಸೀರೆಯಲ್ಲಿ ನಟಿ ಡೈಸಿ ಬೊಪಣ್ಣ ಫ್ಯಾಷನ್‌ ಫಾಲೋವರ್‌ಗಳ ಮನ ಸೆಳೆದಿದ್ದಾರೆ. ಹಾಗಾದಲ್ಲಿ, ಬೇಸಿಗೆ ಫ್ಯಾಷನ್‌ ಲಿಸ್ಟ್‌ಗೆ ಸೇರುವ ಈ ಸೀರೆಯ ವಿಶೇಷತೆಯೇನು ? ಇವರಂತೆಯೇ ನೀವು ಕೂಡ ಹೇಗೆ ಸ್ಟೈಲಿಂಗ್‌ ಮಾಡಬಹುದು? ಎಂಬುದರ ಬಗ್ಗೆ ಫ್ಯಾಷನ್‌ ಎಕ್ಸ್‌ಪರ್ಟ್ಸ್‌ ಸಿಂಪಲ್ಲಾಗಿ ತಿಳಿಸಿದ್ದಾರೆ.

Pahalgam Terror Attack: ಇಂದು ಜಮ್ಮು-ಕಾಶ್ಮೀರಕ್ಕೆ ರಾಹುಲ್‌ ಗಾಂಧಿ ಭೇಟಿ

ಇಂದು ಜಮ್ಮು-ಕಾಶ್ಮೀರಕ್ಕೆ ರಾಹುಲ್‌ ಗಾಂಧಿ ಭೇಟಿ

Rahul Gandhi To Visit J&K:ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಶುಕ್ರವಾರ ಜಮ್ಮು ಮತ್ತು ಕಾಶ್ಮೀರದ ಶ್ರೀನಗರಕ್ಕೆ ಇಂದು ಭೇಟಿ ನೀಡಲಿದ್ದಾರೆ. ಅಮೆರಿಕಕ್ಕೆ ಅಧಿಕೃತ ಭೇಟಿ ನೀಡಿದ್ದ ರಾಹುಲ್ ಗಾಂಧಿ ತಮ್ಮ ಪ್ರವಾಸವನ್ನು ಮೊಟಕುಗೊಳಿಸಿ ಗುರುವಾರ ಮುಂಜಾನೆ ನವದೆಹಲಿಗೆ ಮರಳಿದ್ದರು.

Summer Fashion: ಬೀಚ್‌ಸೈಡ್‌ನಲ್ಲಿ ಫ್ಲೋರಲ್‌ ಮ್ಯಾಕ್ಸಿ ಡ್ರೆಸ್‌ನಲ್ಲಿ ಕಾಣಿಸಿಕೊಂಡ ನಟಿ ಭೂಮಿಕಾ

ಫ್ಲೋರಲ್‌ ಮ್ಯಾಕ್ಸಿ ಡ್ರೆಸ್‌ನಲ್ಲಿ ಕಾಣಿಸಿಕೊಂಡ ನಟಿ ಭೂಮಿಕಾ

Summer Fashion: ನಟಿ ಭೂಮಿಕಾ, ಬೀಚ್‌ ಸೈಡ್‌ನಲ್ಲಿ ಫ್ಲೋರಲ್‌ ಕಟೌಟ್‌ ಮ್ಯಾಕ್ಸಿಯಲ್ಲಿ ಅತ್ಯಾಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ. ಅವರ ಈ ನಯಾ ಸಮ್ಮರ್‌ ಫ್ಯಾಷನ್‌ ಸ್ಟೇಟ್‌ಮೆಂಟ್‌ ನೋಡುಗರ ಮನ ಸೆಳೆದಿದೆ. ಈ ಕುರಿತಂತೆ ವಿಶ್ವವಾಣಿ ನ್ಯೂಸ್‌ನೊಂದಿಗೆ ಮಾತನಾಡಿರುವ ಅವರು, ಫಾಲೋವರ್ಸ್‌ಗೆ ಒಂದಿಷ್ಟು ಸಮ್ಮರ್‌ ಟಿಪ್ಸ್‌ ನೀಡಿದ್ದಾರೆ. ಈ ಕುರಿತಂತೆ ಇಲ್ಲಿದೆ ಡಿಟೇಲ್ಸ್.‌

Pahalgam Terror Attack:  ಸರ್ವಪಕ್ಷಗಳ ಸಭೆ ; ಪಹಲ್ಗಾಮ್ ಭದ್ರತಾ ಲೋಪ ಒಪ್ಪಿಕೊಂಡ ಕೇಂದ್ರ ಸರ್ಕಾರ

ಪಹಲ್ಗಾಮ್ ಭದ್ರತಾ ಲೋಪ ಒಪ್ಪಿಕೊಂಡ ಕೇಂದ್ರ ಸರ್ಕಾರ

ಗುರುವಾರ ಸಂಸತ್ತಿನಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ಸರ್ಕಾರ ಭದ್ರತಾ ವೈಫಲ್ಯವನ್ನು ಒಪ್ಪಿಕೊಂಡಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಭದ್ರತಾ ಲೋಪವಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. "ಏನೂ ತಪ್ಪಾಗಿಲ್ಲದಿದ್ದರೆ, ನಾವು ಇಲ್ಲಿ ಏಕೆ ಕುಳಿತುಕೊಳ್ಳುತ್ತಿದ್ದೆವು? ಎಲ್ಲೋ ಕೆಲವು ಕಡೆ ಲೋಪಗಳಾಗಿವೆ ಎಂದು ಅಮಿತ್ ಶಾ ಸಭೆಯಲ್ಲಿ ವಿರೋಧ ಪಕ್ಷದ ನಾಯಕರಿಗೆ ಹೇಳಿದ್ದಾರೆ.

Pahalgam Terror Attack: ಸರ್ಕಾರ ಯಾವುದೇ ಕ್ರಮ ಕೈಗೊಂಡರೂ ಸಂಪೂರ್ಣ ಬೆಂಬಲ;  ರಾಹುಲ್ ಗಾಂಧಿ

ಸರ್ಕಾರಕ್ಕೆ ಬೆಂಬಲ ಸೂಚಿಸುತ್ತೇವೆ; ರಾಹುಲ್‌ ಗಾಂಧಿ

ಲೋಕಸಭಾ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. 26 ಜನರ ಸಾವಿಗೆ ಕಾರಣವಾದ ಹತ್ಯಾಕಾಂಡಕ್ಕೆ ಪ್ರತ್ಯುತ್ತರ ನೀಡಲೇ ಬೇಕು ಅದಕ್ಕಾಗಿ ಸರ್ಕಾರ ಯಾವುದೇ ಕ್ರಮ ಕೈಗೊಳ್ಳಲು ವಿರೋಧ ಪಕ್ಷವು ಸಂಪೂರ್ಣ ಬೆಂಬಲವನ್ನು ನೀಡಿದೆ ಎಂದು ಹೇಳಿದರು.

Assam MLA:  ಪುಲ್ವಾಮಾ, ಪಹಲ್ಗಾಮ್ ದಾಳಿ, "ಸರ್ಕಾರದ ಪಿತೂರಿ" ;  ವಿವಾದಾತ್ಮಕ ಹೇಳಿಕೆ ನೀಡಿದ ಅಸ್ಸಾಂ ಶಾಸಕನ ಬಂಧನ

ಪುಲ್ವಾಮಾ, ಪಹಲ್ಗಾಮ್ ದಾಳಿ ಸರ್ಕಾರದ ಪಿತೂರಿ; ಅಸ್ಸಾಂ ಶಾಸಕನ ಬಂಧನ

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಮತ್ತು ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಅಸ್ಸಾಂನ ಶಾಸಕರೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ವಿರೋಧ ಪಕ್ಷವಾದ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಎಐಯುಡಿಎಫ್) ನ ಶಾಸಕ ಅಮೀನುಲ್ ಇಸ್ಲಾಂ ಈ ಹೇಳಿಕೆಯನ್ನು ನೀಡಿದ್ದಾರೆ.

Pahalgam Terror Attack:  ರಾಜನಾಥ್‌ ಸಿಂಗ್‌ ಅಧ್ಯಕ್ಷತೆಯಲ್ಲಿ ಸರ್ವಪಕ್ಷ ಸಭೆ ಶುರು; ಮಹತ್ವದ ನಿರ್ಧಾರ ಸಾಧ್ಯತೆ

ರಾಜನಾಥ್‌ ಸಿಂಗ್‌ ಅಧ್ಯಕ್ಷತೆಯಲ್ಲಿ ಸರ್ವಪಕ್ಷ ಸಭೆ ಶುರು

ಪಹಲ್ಗಾಮ್ ನಲ್ಲಿ ನಡೆದಂತಹ ಉಗ್ರರ ದಾಳಿಗೆ ಇದೀಗ ಭಾರತ ತಕ್ಕ ಉತ್ತರ ನೀಡಲು ಸಜ್ಜಾಗಿದೆ. ಈಗಾಗಲೇ ರಾಜತಾಂತ್ರಿಕ ಯುದ್ಧವನ್ನು ಸಾರಿದೆ. ಇದೀಗ ಸಂಸತ್ ಭವನದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭವಾಗಿದೆ.

Pahalgam terror attack: ಪಹಲ್ಗಾಮ್ ಉಗ್ರರ ದಾಳಿಗೆ ಪಾಕ್‌ ಸೆಲೆಬ್ರಿಟಿಗಳಿಂದ ಖಂಡನೆ

ಭಯೋತ್ಪಾದಕ ದಾಳಿಗೆ ಪಾಕಿಸ್ತಾನಿ ಸೆಲೆಬ್ರಿಟಿಗಳಿಂದ ಖಂಡನೆ

ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಖಂಡಿಸಿ ಪಾಕಿಸ್ತಾನದ ನಟ ಫವಾದ್ ಖಾನ್ (Fawad Khan), ನಟಿಯರಾದ ಹನಿಯಾ ಆಮಿರ್ (Hania Aamir)ಮತ್ತು ಮೌರಾ ಹೊಕೇನ್ (Mawra Hocane) ಸೇರಿದಂತೆ ಹಲವು ಸೆಲೆಬ್ರಿಟಿಗಳು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಎಲ್ಲಿಯಾದರೂ ದುರಂತ ಸಂಭವಿಸಿದರೆ ಅದು ನಮಗೆಲ್ಲರಿಗೂ ದುರಂತವೇ ಆಗಿದೆ ಎಂದು ಹೇಳಿದ್ದು, ಅವರೆಲ್ಲ ಭಯೋತ್ಪಾದಕ ದಾಳಿಯ ವಿರುದ್ಧ ಧ್ವನಿಗೂಡಿಸಿದ್ದಾರೆ ಮತ್ತು ಮೃತರಿಗೆ ಸಂತಾಪ ಸೂಚಿಸಿದ್ದಾರೆ.

Rahul Gandhi:  ರಾಹುಲ್ ಗಾಂಧಿ ವಿದೇಶಕ್ಕೆ ಹೋದಾಗಲೇ ಕಾಶ್ಮೀರದಲ್ಲಿ ದಾಳಿ ; ಪೋಸ್ಟ್ ಮಾಡಿದ ಕರ್ನಾಟಕ ಬಿಜೆಪಿ ಐಟಿ ಸೆಲ್​​ ವಿರುದ್ಧ ಕೇಸ್

ರಾಹುಲ್‌ ಗಾಂಧಿಗೂ, ಪಹಲ್ಗಾಮ್‌ ದಾಳಿಗೂ ಲಿಂಕ್‌; ಬಿಜೆಪಿ ಮೇಲೆ ಎಫ್‌ಐಆರ್‌

ಪಹಲ್ಗಾಮ್‌ನಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಿದೇಶ ಪ್ರವಾಸದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಬಿಜೆಪಿ ಐಟಿ ಸೆಲ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

Viral News: ಹಳೆಯ ಬಸ್ಸುಗಳಿಗೆ ಮಾರ್ಡನ್‌ ಟಚ್! ಅಂಗಡಿ, ರೆಸ್ಟೋರೆಂಟ್‍ಗಳಾಗಿ ಪರಿವರ್ತನೆ

ಹಳೆಯ ಬಸ್ಸುಗಳಿಗೆ ಮಾರ್ಡನ್‌ ಟಚ್! ಏನಿದು ಸಂಗತಿ?

ಸ್ಥಳೀಯ ವ್ಯವಹಾರವನ್ನು ಹೆಚ್ಚಿಸುವ ಉದ್ದೇಶದಿಂದ ದೆಹಲಿ ಸರ್ಕಾರವು ಹಳೆಯದಾದ ಹಾಗೂ ಹಾಳಾಗಿ ಕೆಟ್ಟು ನಿಂತ ಬಸ್ಸುಗಳನ್ನು ಕಾಂಪ್ಯಾಕ್ಟ್ ಚಿಲ್ಲರೆ ಅಂಗಡಿಗಳಾಗಿ ಮರುಬಳಕೆ ಮಾಡುವ ಹೊಸ ಯೋಜನೆಯನ್ನು ಅನಾವರಣಗೊಳಿಸಿದೆ. ದೆಹಲಿ ಸರ್ಕಾರವು ಕಾಶ್ಮೀರಿ ಗೇಟ್, ಆನಂದ್ ವಿಹಾರ್ ಮತ್ತು ಸರೈ ಕಾಲೆ ಖಾನ್‍ನಲ್ಲಿರುವ ಐಎಸ್ಬಿಟಿಗಳಲ್ಲಿ ಹಳೆಯ ಬಸ್ಸುಗಳನ್ನು ಚಿಲ್ಲರೆ ಅಂಗಡಿಗಳಾಗಿ ಪರಿವರ್ತಿಸಲಿದೆ. ಈ ಸುದ್ದಿ ಈಗ ವೈರಲ್‌(Viral News) ಆಗಿದೆ.

Pahalgam Attack: ಎಲ್‌ಇಟಿಯ ತರಬೇತಿ ಶಿಬಿರಗಳು ಎಲ್ಲಿವೆ? ಅವುಗಳನ್ನು ನಾಶ ಮಾಡಲು ಭಾರತಕ್ಕೆ ಸಾಧ್ಯವೇ?

ಎಲ್‌ಇಟಿಯ ತರಬೇತಿ ಶಿಬಿರಗಳು ಎಲ್ಲಿವೆ? ಅದರ ಧ್ವಂಸ ಸಾಧ್ಯವೇ?

ಲಷ್ಕರ್-ಎ-ತೈಬಾ ಭಯೋತ್ಪಾದಕ ಸಂಘಟನೆಯ ಶಿಬಿರ ಮತ್ತು ಉಡಾವಣಾ ಪ್ಯಾಡ್‌ಗಳನ್ನು ಲಷ್ಕರ್ ತರಬೇತುದಾರರು ಪಾಕಿಸ್ತಾನದ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ ಮಾರ್ಗದರ್ಶನದಲ್ಲಿ ನಡೆಸುತ್ತಿದ್ದಾರೆ ಎನ್ನುತ್ತದೆ ಗುಪ್ತಚರ ಮಾಹಿತಿಗಳು. ಹಾಗಾದರೆ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಎಲ್‌ಇಟಿಯ ತರಬೇತಿ ಶಿಬಿರಗಳು ಎಲ್ಲಿವೆ, ಇಲ್ಲಿ ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

INS Surat: ಪಹಲ್ಗಾಮ್ ದಾಳಿ ಬಳಿಕ ಅರೇಬಿಯನ್ ಸಮುದ್ರದಲ್ಲಿ ಕ್ಷಿಪಣಿ ಹಾರಿಸಿದ ಭಾರತದ INS ಸೂರತ್

ಅರಬ್ಬಿ ಸಮುದ್ರದಲ್ಲಿ ಭಾರತೀಯ ನೌಕಾಶಕ್ತಿ ಅನಾವರಣ

Pahalgam Terror Attack: ಭಾರತೀಯ ನೌಕಾಪಡೆಯ ಇತ್ತೀಚಿನ ಯುದ್ಧನೌಕೆ ಐಎನ್‌ಎಸ್ ಸೂರತ್ ತನ್ನ ಅತ್ಯಾಧುನಿಕ ವಾಯು ರಕ್ಷಣಾ ಸಾಮರ್ಥ್ಯವನ್ನು ಪ್ರದರ್ಶಿಸುತ್ತಾ, ಅರೇಬಿಯನ್ ಸಮುದ್ರದಲ್ಲಿ ಗುರುವಾರ ಮಧ್ಯಮ ವ್ಯಾಪ್ತಿಯ ಭೂಮಿಯಿಂದ ಗಾಳಿಗೆ ಹಾರುವ ಕ್ಷಿಪಣಿ ಯಶಸ್ವಿಯಾಗಿ ಪರೀಕ್ಷಿಸಿದೆ. ಕಡಿಮೆ ಎತ್ತರದಲ್ಲಿ ರಾಡಾರ್‌ಗೆ ಸಿಗದಂತೆ ಚಲಿಸುವ ಗುರಿಗಳನ್ನು ಸಮರ್ಥವಾಗಿ ಎದುರಿಸುವ ಈ ಯುದ್ಧನೌಕೆಯ ಸಾಮರ್ಥ್ಯವನ್ನು ಈ ಪರೀಕ್ಷೆ ಒತ್ತಿಹೇಳಿದೆ.