ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ದೇಶ
Kerala News: ಗೂಗಲ್‌ ಮ್ಯಾಪ್‌ ನಂಬಿ ಹೊಳೆಗೆ ಬಿದ್ದ ಕಾರು, ವೃದ್ಧ ದಂಪತಿ ಪಾರು

ಗೂಗಲ್‌ ಮ್ಯಾಪ್‌ ನಂಬಿ ಹೊಳೆಗೆ ಬಿದ್ದ ಕಾರು, ವೃದ್ಧ ದಂಪತಿ ಪಾರು

Google Maps: ರಸ್ತೆಯು ನೀರಿನಿಂದ ತುಂಬಿತ್ತು. ಚಾಲಕನಿಗೆ ರಸ್ತೆಯನ್ನು ಸ್ಪಷ್ಟವಾಗಿ ನೋಡಲು ಸಾಧ್ಯವಾಗಲಿಲ್ಲ. ವಾಹನವು ಹೊಳೆಯ ಆಳವಾದ ಭಾಗದ ಕಡೆಗೆ ಸಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಚಾಲಕ ಸಮಯಕ್ಕೆ ಸರಿಯಾಗಿ ನಿಲ್ಲಿಸುವಲ್ಲಿ ಯಶಸ್ವಿಯಾದ. ಹೀಗಾಗಿ ದೊಡ್ಡ ಅನಾಹುತ ತಪ್ಪಿದೆ.

Viral Video: ಹೆತ್ತ ತಾಯಿ ಎನ್ನುವುದನ್ನೂ ನೋಡದೆ ಕ್ರೂರವಾಗಿ ಹಲ್ಲೆ ನಡೆಸಿದ ಮಗ; ಮನ ಕಲಕುವ ವಿಡಿಯೊ ವೈರಲ್

ಛೇ ಎಂಥಾ ಕಟುಕ ಮಗ; ತಾಯಿ ಮೇಲೆ ಅಮಾನುಷ ಹಲ್ಲೆ

ರಾಜಸ್ಥಾನದಲ್ಲಿ ನಡೆದ ಮನಕಲಕುವ ಘಟನೆಯ ವೈರಲ್ ಆಗಿದೆ. ಹೆತ್ತಮ್ಮನಿಗೆ ಮಗ ಹೊಡೆಯುವ ದೃಶ್ಯ ಇಆಗಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ತನ್ನ ಹೆತ್ತ ತಾಯಿಗೆ ಮಗ ಥಳಿಸುತ್ತಿರುವ ವಿಡಿಯೊ ಪೊಲೀಸರ ಕೈ ಸೇರಿದೆ. ಪಾಪಿ ಮಗನನ್ನು ದೀಪು ಮೆಹ್ರಾ ಎಂದು ಗುರುತಿಸಲಾಗಿದ್ದು, ಆತನ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

Smartphone: ಮೊಬೈಲ್‌ ಉತ್ಪಾದನೆಯಲ್ಲಿ ಗಣನೀಯ ಸಾಧನೆ ಮಾಡಿದ ಭಾರತ; ರಫ್ತು ಶೇ. 127ರಷ್ಟು ಹೆಚ್ಚಳ

ಜಾಗತಿಕ ಮೊಬೈಲ್‌ ಹಬ್‌ ಆಗುತ್ತಿದೆ ಭಾರತ

ವಿಶ್ವದ ಮೂರನೇ ಆರ್ಥಿಕ ರಾಷ್ಟ್ರದ ಆಶಯದಲ್ಲಿ ಅಗಾಧ ಬೆಳವಣಿಗೆ ಸಾಧಿಸುತ್ತಿರುವ ಭಾರತ, ಮೊಬೈಲ್‌ ಉದ್ಯಮದಲ್ಲಿ ಎರಡನೇ ಅತಿ ದೊಡ್ಡ ದೇಶವಾಗಿ ಹೊರ ಹೊಮ್ಮಿದೆ. ಭಾರತದ ಮೊಬೈಲ್ ಫೋನ್ ರಫ್ತು ಒಂದೇ ದಶಕದಲ್ಲಿ 127 ಪಟ್ಟು ಹೆಚ್ಚಳ ಕಂಡಿದ್ದು, ಭವಿಷ್ಯದಲ್ಲಿ ಭಾರತ ಜಾಗತಿಕ ಉತ್ಪಾದನಾ ಹಬ್‌ ಆಗುವತ್ತ ದಾಪುಗಾಲಿರಿಸಿದೆ.

ಬೈಕ್‌ನ ಪೆಟ್ರೋಲ್ ಟ್ಯಾಂಕ್‌ ಅಡಿಯಲ್ಲಿ ಅವಿತಿತ್ತು ವಿಷಕಾರಿ ಹಾವು; ಅರಿವಿಲ್ಲದೆ 2 ಗಂಟೆ ಸುತ್ತಾಡಿದ ವಿದ್ಯಾರ್ಥಿ ಪಾರಾಗಿದ್ದೇಗೆ?

ಬುಸ್ ಬುಸ್ ನಾಗಪ್ಪನಿಂದ ಬೈಕ್ ಸವಾರ ಜಸ್ಟ್ ಬಚಾವ್

ರಾಯಲ್ ಎನ್‌ಫೀಲ್ಡ್ ಬುಲೆಟ್‌ನ ಪೆಟ್ರೋಲ್ ಟ್ಯಾಂಕ್ ಕೆಳಗೆ ಸೇರಿಕೊಂಡಿದ್ದ ವಿಷಕಾರಿ ಹಾವಿನ ಅರಿವೇ ಇಲ್ಲದೆ ವಿದ್ಯಾರ್ಥಿ ಸುಮಾರು 2 ಗಂಟೆಗಳ ಕಾಲ ಸುತ್ತಾಡಿದ್ದಾನೆ. ಕೊನೆಗೆ ಕೂದಲೆಳೆ ಅಂತರದಲ್ಲಿ ಬಚಾವ್ ಆಗಿದ್ದಾನೆ. ಸದ್ಯ ಹಾವನ್ನು ಸೆರೆ ಹಿಡಿಯಲಾಗಿದೆ.

India-UK Free Trade Agreement: ಭಾರತ-ಬ್ರಿಟನ್‌ ಐತಿಹಾಸಿಕ ಮುಕ್ತ-ವ್ಯಾಪಾರ ಒಪ್ಪಂದಕ್ಕೆ ಸಹಿ; ಭಾರತಕ್ಕೇನು ಲಾಭ?

ಭಾರತ-ಬ್ರಿಟನ್‌ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದ

ಭಾರತ ಮತ್ತು ಬ್ರಿಟನ್‌ ಐತಿಹಾಸಿಕವಾದ ಮುಕ್ತ-ವ್ಯಾಪಾರ ಒಪ್ಪಂದ ಅಥವಾ ಫ್ರೀ ಟ್ರೇಡ್‌ ಅಗ್ರಿಮೆಂಟ್‌ಗೆ ಸಹಿ ಹಾಕಿವೆ. ಇದರ ಪರಿಣಾಮ ಉಭಯ ದೇಶಗಳ ನಡುವಣ ದ್ವಿಪಕ್ಷೀಯ ವ್ಯಾಪಾರವು ವಾರ್ಷಿಕ 34 ಶತಕೋಟಿ ಡಾಲರ್‌ಗೆ ಏರಿಕೆಯಾಗುವ ಸಾಧ್ಯತೆ ಇದೆ. ರುಪಾಯಿ ಲೆಕ್ಕದಲ್ಲಿ ಸುಮಾರು 2 ಲಕ್ಷದ 93 ಸಾವಿರ ಕೋಟಿ ರುಪಾಯಿ ಆಗಲಿದೆ.

Himanta Biswa Sarma: ಮುಸ್ಲಿಮರ ಸಂಖ್ಯೆ 2041ರ ವೇಳೆಗೆ ಹಿಂದೂ ಜನಸಂಖ್ಯೆಗೆ  ಸಮನಾಗಬಹುದು: ಹಿಮಂತ ಬಿಸ್ವಾ ಶರ್ಮಾ

ಹಿಂದೂ ಜನಸಂಖ್ಯೆಗೆ ಸಮವಾಗಿ ಬೆಳೆಯಲಿದೆ ಮುಸ್ಲಿಂ ಸಮುದಾಯ

ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಬುಧವಾರ ದಿಬ್ರುಗಢದಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ, ರಾಜ್ಯದ ಮುಸ್ಲಿಂ ಜನಸಂಖ್ಯೆಯು ಪ್ರಸ್ತುತ ಬೆಳವಣಿಗೆಯ ದರದಲ್ಲಿ ಮುಂದುವರಿದರೆ 2041ರ ವೇಳೆಗೆ ಹಿಂದೂ ಜನಸಂಖ್ಯೆಯೊಂದಿಗೆ ಸಮಾನವಾಗಲಿದೆ ಎಂದು ಹೇಳಿದ್ದಾರೆ.

Vice President: ಬಿಜೆಪಿಯವರೇ ನೂತನ ಉಪರಾಷ್ಟ್ರಪತಿ: ನಿತೀಶ್ ಕುಮಾರ್ ಆಯ್ಕೆಯ ವದಂತಿ ತಳ್ಳಿ ಹಾಕಿದ ಪಕ್ಷ

ಯಾರಾಗಲಿದ್ದಾರೆ ಮುಂದಿನ ಉಪರಾಷ್ಟ್ರಪತಿ?

ಮುಂದಿನ ಉಪರಾಷ್ಟ್ರಪತಿಯಾಗಿ ಬಿಜೆಪಿಯ ಹಿರಿಯ ನಾಯಕರೊಬ್ಬರು ಆಯ್ಕೆಯಾಗಲಿದ್ದಾರೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ. ಜಗದೀಪ್ ಧನಕರ್ ಅವರ ಆಕಸ್ಮಿಕ ರಾಜೀನಾಮೆಯಿಂದ ಖಾಲಿಯಾದ ಈ ಹುದ್ದೆಗೆ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್‌ ಅವರಂತಹ ಮಿತ್ರಪಕ್ಷದ ನಾಯಕರನ್ನು ಪರಿಗಣಿಸುವ ಊಹಾಪೋಹಗಳನ್ನು ಬಿಜೆಪಿ ಅಲ್ಲೆಳೆದಿದೆ.

Central Government: ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಗುಡ್‌ನ್ಯೂಸ್‌; ಪಾಲಕರ ಆರೈಕೆಗೆ ಸಿಗಲಿದೆ 30 ದಿನ ರಜೆ

ಪಾಲಕರ ಆರೈಕೆಗೆ ಸರ್ಕಾರಿ ನೌಕರರಿಗೆ ಸಿಗಲಿದೆ 30 ದಿನ ರಜೆ

Jitendra Singh: ಸೇವಾ ನಿಯಮಗಳ ಪ್ರಕಾರ ಕೇಂದ್ರ ಸರ್ಕಾರಿ ನೌಕರರಿಗೆ 30 ದಿನಗಳ ವೇತನ ಸಹಿತ ರಜೆ ಸಿಗಲಿದೆ. ಇದನ್ನು ವಯಸ್ಸಾದ ಪಾಲಕರ ಆರೈಕೆ ಸೇರಿದಂತೆ ಯಾವುದೇ ವೈಯಕ್ತಿಕ ಕಾರಣಕ್ಕಾಗಿ ಪಡೆಯಬಹುದು ಎಂದು ಕೇಂದ್ರ ಸಿಬ್ಬಂದಿ ರಾಜ್ಯ ಸಚಿವ ಜಿತೇಂದ್ರ ಸಿಂಗ್ ರಾಜ್ಯಸಭೆಯಲ್ಲಿ ತಿಳಿಸಿದರು.

PM Modi: ಪ್ರಧಾನಿ ಮೋದಿಗೆ ಭಾರತೀಯ ಸಮುದಾಯದಿಂದ ಲಂಡನ್‌ನಲ್ಲಿ ಭವ್ಯ ಸ್ವಾಗತ

ಪ್ರಧಾನಿ ಮೋದಿಗೆ ಲಂಡನ್‌ನಲ್ಲಿ ಸ್ವಾಗತ ಹೇಗಿತ್ತು ನೋಡಿ

ಬಹುನಿರೀಕ್ಷಿತ ಭಾರತ ಮತ್ತು ಇಂಗ್ಲೆಂಡ್‌ ನಡುವಿನ ಸಮಗ್ರ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವ ಸಲುವಾಗಿ ಎರಡು ದಿನಗಳ ಪ್ರವಾಸಕ್ಕೆ ಪ್ರಧಾನಿ ನರೇಂದ್ರ ಮೋದಿ ತೆರಳಿದ್ದಾರೆ. ಬುಧವಾರ ಸಂಜೆ ಲಂಡನ್‌ಗೆ ಆಗಮಿಸಿದ ವೇಳೆ ಅವರಿಗೆ ಭವ್ಯ ಸ್ವಾಗತ ದೊರೆಯಿತು. ಭಾರತೀಯ ಸಮುದಾಯದ ನೂರಾರು ಮಂದಿ ಮೋದಿ, ಮೋದಿ, ಭಾರತ್ ಮಾತಾ ಕಿ ಜೈ, ವಂದೇ ಮಾತರಂ ಘೋಷಣೆಗಳೊಂದಿಗೆ ಅವರನ್ನು ಬರಮಾಡಿಕೊಂಡರು.

Tradition: ಪುರುಷರು ಈ 5 ದೇವಾಲಯಗಳಿಗೆ ಪ್ರವೇಶಿಸುವಂತಿಲ್ಲ

ಈ ದೇವಾಲಯಗಳಿಗೆ ಪುರುಷರ ಪ್ರವೇಶ ನಿಷಿದ್ಧ

ದೇಶಾದ್ಯಂತ ಅನೇಕ ಹಿಂದೂ ದೇವಾಲಯಗಳಿವೆ. ಇಲ್ಲಿನ ಬಹುತೇಕ ದೇವಾಲಯ, ಆಲಯದ ಗರ್ಭಗುಡಿಯೊಳಗೆ ಮಹಿಳೆಯರ ಪ್ರವೇಶಕ್ಕೆ ನಿಷಿದ್ಧ ಹೇರಲಾಗಿರುವುದು ಎಲ್ಲರಿಗೂ ಗೊತ್ತಿದೆ. ಆದರೆ ಈ 5 ವಿಶೇಷ ದೇವಾಲಯಗಳಲ್ಲಿ ಮಾತ್ರ ಪುರುಷರಿಗೆ ನಿಷೇಧ ಹೇರಲಾಗಿದೆ. ಕೆಲವೊಂದು ಸಮಯ, ಸಂದರ್ಭಗಳಲ್ಲಿ ಈ ದೇಗುಲಗಳಿಗೆ ಪುರುಷರ ಪ್ರವೇಶ ಸಂಪೂರ್ಣವಾಗಿ ನಿರ್ಬಂಧಿಸಲಾಗುತ್ತದೆ. ಆ ದೇವಾಲಯಗಳು ಯಾವುದು ಎನ್ನುವ ಕುರಿತು ಇಲ್ಲಿದೆ ಮಾಹಿತಿ.

ಸೆಲ್ಫಿ ವೇಳೆ ಮತ್ತೊಂದು ಅವಾಂತರ; ಪೋಸ್‌ ನೀಡಿದ ಯುವಕನ ಕೈಗೆ ಕಚ್ಚಿದ ಹೆಬ್ಬಾವು: ಭಯಾನಕ ವಿಡಿಯೊ ಇಲ್ಲಿದೆ

ಸೆಲ್ಫಿ ತೆಗೆಯುವ ವೇಳೆ ಯುವಕನ ಕೈಗೆ ಕಚ್ಚಿದ ಹೆಬ್ಬಾವು

Young man bitten by python: ಸೆಲ್ಫಿ ತೆಗೆದುಕೊಳ್ಳಲು ಮುಂದಾದ ಯುವಕನೊಬ್ಬನಿಗೆ ಹೆಬ್ಬಾವು ಕಟ್ಟಿದ ಘಟನೆಯ ವಿಡಿಯೊ ವೈರಲ್ ಆಗಿದೆ. ಉರಗ ರಕ್ಷಕರೊಬ್ಬರು ಹೆಬ್ಬಾವನ್ನು ರಕ್ಷಿಸಿದರು. ಹೆಬ್ಬಾವನ್ನು ಕೈಯಲ್ಲಿ ಹಿಡಿದು ಬರುತ್ತಿದ್ದ ವೇಳೆ ಯುವ ಸೆಲ್ಫಿ ತೆಗೆದುಕೊಳ್ಳಲು ಮುಂದಾದ ವೇಳೆ ಈ ಭಯಾನಕ ಘಟನೆ ನಡೆದಿದೆ.

ವರದಕ್ಷಿಣೆಗಾಗಿ ತನ್ನ 8 ತಿಂಗಳ ಮಗುವನ್ನು ತಲೆಕೆಳಗಾಗಿ ನೇತು ಹಾಕಿ ಹಳ್ಳಿಯಾದ್ಯಂತ ಮೆರವಣಿಗೆ ಮಾಡಿದ ಭೂಪ; ಎದೆ ಝಲ್ಲೆನಿಸುವ ವಿಡಿಯೊ ವೈರಲ್‌

ವರದಕ್ಷಿಣೆಗೆ ಒತ್ತಾಯಿಸಿ ಈತ ಮಾಡಿದ್ದೇನು ಗೊತ್ತೆ?

Viral News: ಉತ್ತರ ಪ್ರದೇಶದ ರಾಂಪುರ ಜಿಲ್ಲೆಯ ಸಂಜು ಎಂಬಾತ ಪತ್ನಿ ಮತ್ತು ಆಕೆಯ ಕುಟುಂಬದವರಿಂದ ವರದಕ್ಷಿಣೆ ಪಡೆಯುವ ಸಲುವಾಗಿ ತನ್ನ 8 ತಿಂಗಳ ಮಗುವನ್ನು ತಲೆಕೆಳಗಾಗಿ ಹಿಡಿದುಕೊಂಡು ಹಳ್ಳಿಯ ಬೀದಿಗಳಲ್ಲಿ ಮೆರವಣಿಗೆ ಮಾಡಿದ್ದಾನೆ. ಈ ಕೃತ್ಯದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರಿ ಆಕ್ರೋಶ ವ್ಯಕ್ತವಾಗಿದೆ.

ರಿಸೆಪ್ಶನಿಸ್ಟ್ ಮೇಲಿನ ಹಲ್ಲೆ ಪ್ರಕರಣಕ್ಕೆ ಟ್ವಿಸ್ಟ್‌; ನಿಜಕ್ಕೂ ಮೊದಲು ಹೊಡೆದಿದ್ದು ಯಾರು?

ರಿಸೆಪ್ಶನಿಸ್ಟ್ ಮೇಲಿನ ಹಲ್ಲೆ ಪ್ರಕರಣಕ್ಕೆ ಟ್ವಿಸ್ಟ್

Receptionist Assault Aase: ಮಕ್ಕಳ ಆಸ್ಪತ್ರೆಯ ವೈದ್ಯರ ಚೇಂಬರ್‌ ಒಳಗೆ ನುಗ್ಗಲು ಯತ್ನಿಸಿದ್ದ ವ್ಯಕ್ತಿಯೊಬ್ಬ ತಡೆದ ರಿಸೆಪ್ಶನಿಸ್ಟ್‌ ಮೇಲೆ ಹಲ್ಲೆ ನಡೆಸಿ ನೆಲಕ್ಕೆ ಕೆಡವಿದ್ದ ಘಟನೆ ನಡೆದಿತ್ತು. ಇದೀಗ ಈ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಮುಂಬೈ ಸಮೀಪದ ಕಲ್ಯಾಣದಲ್ಲಿನ ಶ್ರೀ ಬಾಲ್‌ ಚಿಕಿತ್ಸಾಲಯ ಎಂಬ ಮಕ್ಕಳ ಆಸ್ಪತ್ರೆಯಲ್ಲಿ ನಡೆದ ಹಲ್ಲೆಯ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Viral Video: ರಸ್ತೆಯಲ್ಲಿ ಬಿದ್ದಿದ್ದ ಕಸವನ್ನೆತ್ತಿ ಡಸ್ಟ್‌ಬಿನ್‌ಗೆ ಹಾಕಿದ ಆನೆ ಮರಿ; ನಿಜವಾದ ಪ್ರಾಣಿ ಯಾರು ಎಂದು ಪ್ರಶ್ನಿಸಿದ ನೆಟ್ಟಿಗರು

ರಸ್ತೆಯಲ್ಲಿ ಬಿದ್ದಿದ್ದ ಕಸವನ್ನೆತ್ತಿ ಬುಟ್ಟಿಗೆ ಹಾಕಿದ ಆನೆ ಮರಿ

ಆನೆಮರಿ ಕಸ ವಿಲೇವಾರಿ ಮಾಡಲು ಡಸ್ಟ್‌ಬಿನ್‌ ಬಳಸುವ ಹೃದಯಸ್ಪರ್ಶಿ ಮತ್ತು ಮುದ್ದಾದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಅನೇಕರ ಹೃದಯ ಗೆದ್ದಿದೆ. ಆನೆಮರಿಯ ಸಾಮಾಜಿಕ ಕಳಕಳಿಯಿರುವ ಈ ವಿಡಿಯೊ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿದೆ. ಅನೇಕರು ಈ ವಿಡಿಯೊ ಶೇರ್‌ ಮಾಡಿ ಕಸವನ್ನು ರಸ್ತೆ ಬದಿ ಎಸೆಯುವವರಿಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ.

'ಸೈಯಾರ' ಚಿತ್ರ ವೀಕ್ಷಿಸಲು ಬಂದವರಿಗೆ ಸಿಕ್ತು ಪುಕ್ಸಟ್ಟೆ ಮನರಂಜನೆ! ಕಂಪ್ಲೀಟ್ ಹಣ ವಸೂಲಿ ಎಂದ ನೆಟ್ಟಿಗರು; ಅಷ್ಟಕ್ಕೂ ಆಗಿದ್ದೇನು?

ʼಸೈಯಾರʼ ಚಿತ್ರ ವೀಕ್ಷಿಸಲು ಬಂದವರಿಗೆ ಸಿಕ್ತು ಪುಕ್ಸಟ್ಟೆ ಮನರಂಜನೆ

Saiyaara Movie: 'ಸೈಯಾರ' ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪ್ರೇಕ್ಷಕರು ಜೋರಾಗಿ ಹರ್ಷೋದ್ಗಾರಗಳನ್ನು ಕೂಗುತ್ತಾ, ಕುಣಿದು ಕುಪ್ಪಳಿಸುತ್ತಿದ್ದಾರೆ. ಇದರ ಜತೆಗೆ ಸಿನಿಮಾ ಥಿಯೇಟರ್‌ನಲ್ಲಿ ಯುವತಿಯೊಬ್ಬಳ ಇಬ್ಬರು ಗೆಳೆಯರು ಪರಸ್ಪರ ಜಗಳವಾಡಿದ ದೃಶ್ಯದ ವಿಡಿಯೊ ವೈರಲ್ ಆಗಿದೆ.

ಕುಟುಂಬದ ವಿರುದ್ಧ ವಿವಾಹವಾಗಿ ಮಗುವನ್ನು ನಿಭಾಯಿಸುವುದು ಇಷ್ಟೊಂದು ಕಷ್ಟನಾ? ಖರ್ಚು-ವೆಚ್ಚದ ಬಗ್ಗೆ ಮಾಹಿತಿ ಹಂಚಿಕೊಂಡ ದಂಪತಿ

ಮೆಟ್ರೋ ನಗರದ ಖರ್ಚು-ವೆಚ್ಚದ ಬಗ್ಗೆ ಮಾಹಿತಿ ಹಂಚಿಕೊಂಡ ದಂಪತಿ

ಚೆನ್ನೈಯ ದಂಪತಿ ಕುಟುಂಬದ ವಿರುದ್ಧ ವಿವಾಹವಾಗಿದ್ದು, ಮಗುವನ್ನು ನೋಡಿಕೊಳ್ಳಲು ತಿಂಗಳಿಗಾಗುವ ವೆಚ್ಚದ ಬಗ್ಗೆ ವಿವರಿಸಿದ್ದಾರೆ. ತಮ್ಮ 8.5 ತಿಂಗಳ ಮಗುವನ್ನು ನೋಡಿಕೊಳ್ಳಲು ಮಾಸಿಕ ಖರ್ಚನ್ನು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ತಿಳಿಸಿದ್ದಾರೆ. ಸದ್ಯ ಈ ವಿಚಾರ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಆರಾಮದಾಯಕವಾಗಬೇಕಿದ್ದ ಪ್ರಯಾಣ ದುಃಸ್ವಪ್ನವಾಗಿ ಮಾರ್ಪಟ್ಟಿತು; ರ‍್ಯಾಪಿಡೊ ಬೈಕ್ ಸವಾರಿಯ ಆಘಾತಕಾರಿ ವಿಡಿಯೊ ವೈರಲ್

ರ‍್ಯಾಪಿಡೊ ಬೈಕ್ ಸವಾರಿಯ ಆಘಾತಕಾರಿ ವಿಡಿಯೊ ವೈರಲ್

Rapido Ride: ದೆಹಲಿಯ ಯುವತಿಯೊಬ್ಬರು ರ‍್ಯಾಪಿಡೊ ಬೈಕ್ ಸವಾರಿಯ ಸಮಯದಲ್ಲಿ ತನಗಾದ ಅಪಘಾತಕಾರಿ ಘಟನೆ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಚಾಲಕ ತನಗೆ ಹೆಲ್ಮೆಟ್ ನೀಡಲು ನಿರಾಕರಿಸಿದ್ದಾಗಿ ಆರೋಪಿಸಿದ್ದಾರೆ. ಈ ವಿಡಿಯೊ ರಸ್ತೆ ಸುರಕ್ಷತೆ, ಸವಾರಿಯ ಜವಾಬ್ದಾರಿಗಳ ಬಗ್ಗೆ ಚರ್ಚೆಗಳನ್ನು ಹುಟ್ಟುಹಾಕಿದೆ.

Mumbai Train Blast: ಮುಂಬೈ ರೈಲು ಸರಣಿ ಸ್ಫೋಟ ಪ್ರಕರಣ; ಆರೋಪಿಗಳ ಖುಲಾಸೆಗೊಳಿಸಿದ್ದ ಬಾಂಬೆ ಹೈಕೋರ್ಟ್​ ತೀರ್ಪಿಗೆ ಸುಪ್ರೀಂ ತಡೆ

ಮುಂಬೈ ರೈಲು ಸರಣಿ ಸ್ಫೋಟ ಪ್ರಕರಣ; ಸುಪ್ರೀಂ ಕೋರ್ಟ್‌ ಮಹತ್ವದ ಆದೇಶ

2006ರ ಜುಲೈ 11ರಂದು ಮುಂಬೈನ ಲೋಕಲ್ ರೈಲುಗಳಲ್ಲಿ ನಡೆದ ಸರಣಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಪ್ರಕರಣದ ಎಲ್ಲ 12 ಆರೋಪಿಗಳನ್ನು ಖುಲಾಸೆಗೊಳಿಸಿ ಬಾಂಬೇ ಹೈ ಕೋರ್ಟ್‌ ನೀಡಿದ್ದ ತೀರ್ಪಿಗೆ ಸುಪ್ರೀಂ ಕೋರ್ಟ್‌ ಗುರುವಾರ ತಡೆ ನೀಡಿದೆ.

Tourist Visas: ಚೀನಾ ನಾಗರಿಕರಿಗೆ ಪ್ರವಾಸಿ ವೀಸಾ ನೀಡಲು ಭಾರತದ ಯೋಜನೆ

ಇಂದಿನಿಂದ ಚೀನಾ ನಾಗರಿಕರಿಗೆ ಭಾರತದಿಂದ ಪ್ರವಾಸಿ ವೀಸಾ

ಚೀನಾ ನಾಗರಿಕರಿಗೆ ಪ್ರವಾಸಿ ವೀಸಾಗಳನ್ನು ಪುನರಾರಂಭಿಸಲು ಸಿದ್ಧತೆ ನಡೆಸುತ್ತಿರುವ ಭಾರತವು ಮೊದಲ ಬಾರಿಗೆ ಸ್ನೇಹ ಹಸ್ತ ಚಾಚಿದೆ. ಇದು ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

Viral Video: ಹಾಂಗ್‍ಕಾಂಗ್ ನಗರದ ಸ್ವಚ್ಛತೆಯ ಬಗ್ಗೆ ಭಾರತೀಯನ ಪ್ರಾಮಾಣಿಕ ನಿಲುವು; ವಿಡಿಯೊ ಇಲ್ಲಿದೆ

ಹಾಂಗ್‍ಕಾಂಗ್ ನಗರವನ್ನು ಕೊಂಡಾಡಿದ ಭಾರತೀಯ

Cleanliness of Hong Kong: ಹಾಂಗ್‌ಕಾಂಗ್‌ನಂತಹ ಸ್ವಚ್ಛ, ಸುಂದರ ನಗರದ ಬಗ್ಗೆ ವ್ಯಕ್ತಿಯೊಬ್ಬರು ತಮ್ಮ ಪ್ರಾಮಾಣಿಕ ಅಭಿಪ್ರಾಯವನ್ನು ಹಂಚಿಕೊಂಡ ನಂತರ ಈ ವಿಡಿಯೊ ವೈರಲ್ ಆಗಿದೆ. ಇದು ನಾಗರಿಕ ಪ್ರಜ್ಞೆಯ ಕುರಿತು ಚರ್ಚೆಯನ್ನು ಮತ್ತೆ ಹುಟ್ಟುಹಾಕಿದೆ. ಹಾಂಗ್‍ಕಾಂಗ್ ನಗರದ ಬಗ್ಗೆ ಈ ವ್ಯಕ್ತಿ ಹಂಚಿಕೊಂಡಿರುವುದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

Women Constables: ತೆರೆದ ಸ್ಥಳದಲ್ಲಿ ಸ್ನಾನ, ಕಾರಿಡಾರ್‌ನಲ್ಲಿ CCTV: ಗೋರಖ್‌ಪುರ ತರಬೇತಿ ಶಿಬಿರದ ಅವ್ಯವಸ್ಥೆ ವಿರುದ್ಧ ಮಹಿಳಾ ಕಾನ್ಸ್‌ಟೇಬಲ್‌ಗಳ ಪ್ರತಿಭಟನೆ

ಕಳಪೆ ಮೂಲಭೂತ ಸೌಕರ್ಯ; ಮಹಿಳಾ ಕಾನ್ಸ್‌ಟೇಬಲ್‌ಗಳ ಪ್ರತಿಭಟನೆ

Uttar Pradesh: ಉತ್ತರ ಪ್ರದೇಶದ ಗೋರಖ್‌ಪುರದ 26ನೇ ಬೆಟಾಲಿಯನ್ PAC ಕೇಂದ್ರದಲ್ಲಿ ತರಬೇತಿಗೆ ಸೇರಿರುವ ಮಹಿಳಾ ಕಾನ್ಸ್‌ಟೇಬಲ್‌ಗಳು ಬುಧವಾರ ಖಾಸಗಿತನಕ್ಕೆ ದಕ್ಕೆಯಾಗುತ್ತಿದೆ ಎಂದು ಮತ್ತು ನೀರು ಹಾಗೂ ವಿದ್ಯುತ್ ವ್ಯವಸ್ಥೆಯ ಕೊರತೆ ವಿರುದ್ಧ ಪ್ರತಿಭಟನೆ ನಡೆಸಿದರು. ಇತ್ತೀಚೆಗೆ ತರಬೇತಿಗೆ ಸೇರಿದ ಈ ನೂತನ ಕಾನ್ಸ್‌ಟೇಬಲ್‌ಗಳು “ತೆರೆದ ಸ್ಥಳದಲ್ಲಿ ಸ್ನಾನ ಮಾಡಬೇಕಾಗಿದೆ ಎಂದು ದೂರಿದ್ದಾರೆ.

Viral News:  ಹಸುವಿನ ಕೆಚ್ಚಲಿನಿಂದ ಮಗುವಿಗೆ ಹಾಲು ಕುಡಿಸಿದ ವ್ಯಕ್ತಿ; ನೆಟ್ಟಿಗರಿಂದ ಕ್ಲಾಸ್‌, ವಿಡಿಯೋ ನೋಡಿ

ಮಗುವಿಗೆ ಹಸುವಿನ ಕೆಚ್ಚಲಿನಿಂದ ಹಾಲು ಕುಡಿಸುತ್ತಿರುವ ವಿಡಿಯೊ ವೈರಲ್

man feeding raw cow milk: ವ್ಯಕ್ತಿಯೊಬ್ಬ ತನ್ನ ಮಗುವಿಗೆ ಹಸುವಿನ ಕೆಚ್ಚಲಿನಿಂದ ನೇರವಾಗಿ ಹಸಿ ಹಾಲು ಕುಡಿಯಲು ಬಿಡುತ್ತಿರುವ ವಿಡಿಯೊ ವೈರಲ್ ಆಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಟೀಕೆಗೆ ಕಾರಣವಾಗಿದೆ. ಇದು ಮಗುವಿಗೆ ಒಳ್ಳೆಯದೇ? ದಯವಿಟ್ಟು ಉತ್ತರಿಸಿ ಎಂಬ ಶೀರ್ಷಿಕೆಯೊಂದಿಗೆ ಎಕ್ಸ್‌ನಲ್ಲಿ ಹಂಚಿಕೊಳ್ಳಲಾಗಿದೆ.

Anil Ambani: ಅನಿಲ್‌ ಅಂಬಾನಿಗೆ ED ಶಾಕ್‌; 35 ಕ್ಕೂ ಅಧಿಕ ಸ್ಥಳಗಳಲ್ಲಿ ದಾಳಿ, ಶೋಧ ಕಾರ್ಯ ಆರಂಭ

ಅನಿಲ್‌ ಅಂಬಾನಿ ಕಚೇರಿ ಮೇಲೆ ಇಡಿ ದಾಳಿ

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ದೆಹಲಿ ಮತ್ತು ಮುಂಬೈನಲ್ಲಿರುವ ರಿಲಯನ್ಸ್ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ದಾಳಿ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ. ತನಿಖಾ ಸಂಸ್ಥೆ ಸುಮಾರು 35 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದೆ.

Narendra Modi: ಇಂದಿನಿಂದ ಪ್ರಧಾನಿ ಬ್ರಿಟನ್‌ ಪ್ರವಾಸ; ಮುಕ್ತ ವ್ಯಾಪಾರ ಒಪ್ಪಂದಕ್ಕೆ ಅಧಿಕೃತವಾಗಿ ಸಹಿ ಹಾಕಲಿರುವ ಮೋದಿ

ಇಂದಿನಿಂದ ಪ್ರಧಾನಿ ಬ್ರಿಟನ್‌ ಪ್ರವಾಸ; ಮಹತ್ವದ ಚರ್ಚೆ ಸಾಧ್ಯತೆ

ಮಹತ್ವದ ವ್ಯಾಪಾರ ಒಪ್ಪಂದಕ್ಕಾಗಿ ಪ್ರಧಾನಿ ಮೋದಿ (Narendra Modi) ಇಂದು ಇಂಗ್ಲೆಂಡ್‌ಗೆ (England) ಪ್ರಯಾಣ ಬೆಳೆಸಿದ್ದಾರೆ. ಪ್ರಧಾನಿಯನ್ನು ವಿಮಾನ ನಿಲ್ದಾಣದಲ್ಲಿ ಇಂಡೋ-ಪೆಸಿಫಿಕ್ ಉಸ್ತುವಾರಿ ಹೊಂದಿರುವ ಯುಕೆ ವಿದೇಶಾಂಗ ಕಚೇರಿಯ ಸಚಿವೆ ಕ್ಯಾಥರೀನ್ ವೆಸ್ಟ್ ಬರಮಾಡಿಕೊಂಡಿದ್ದಾರೆ.

Loading...