ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದೇಶ

ಮಧ್ಯ ಪ್ರದೇಶ ಸಿಎಂ ಮೋಹನ್ ಯಾದವ್ ವಿರುದ್ಧ ಭೂ ವ್ಯವಹಾರ ಆರೋಪ; ಕರ್ನಾಟಕದಲ್ಲಿ ಖರ್ಗೆ ಕುಟುಂಬದ ಟ್ರಸ್ಟ್ ವಿರುದ್ಧ ಬಿಜೆಪಿ ಕಿಡಿ: ಏನಿದು ವಿವಾದ?

ಮಧ್ಯ ಪ್ರದೇಶ ಸಿಎಂ ಮೋಹನ್ ಯಾದವ್ ವಿರುದ್ಧ ಕಾಂಗ್ರೆಸ್ ಆರೋಪ

Mohan Yadav: ಮಧ್ಯ ಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಕುಟುಂಬದ ಭೂ ಖರೀದಿ ವಿಚಾರವಾಗಿ ಕಾಂಗ್ರೆಸ್ ನ್ಯಾಯಾಂಗ ತನಿಖೆಗೆ ಆಗ್ರಹಿಸಿದೆ. ಇತ್ತ ಕರ್ನಾಟಕದಲ್ಲಿ ಸಿದ್ಧಾರ್ಥ ವಿಹಾರ ಟ್ರಸ್ಟ್ ಮೂಲಕ ಭೂಮಿ ಪಡೆದಿರುವ ಆರೋಪವನ್ನು ಬಿಜೆಪಿ ಖರ್ಗೆ ಕುಟುಂಬದ ವಿರುದ್ಧ ಮಾಡಿದೆ. ಈ ಬೆಳವಣಿಗೆಯಿಂದ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ರಾಜಕೀಯ ವಾಕ್ಸಮರ ತೀವ್ರಗೊಂಡಿದೆ.

ಪ್ರಿಯಕರನಿಗಾಗಿ ಭಾವಿ ಪತಿಯನ್ನೇ ಹತ್ಯೆಗೈದ ಸಿಯಾ; ಸಹೋದರಿಯ ಅನುಮಾನದಿಂದ ಬಯಲಾಯ್ತು ಭೀಕರ ಸಂಚು ಸಂಚು

ಲೋಹಗಢ ಸಾವು ಪ್ರಕರಣ: ಸಹೋದರಿಯ ಅನುಮಾನದಿಂದ ಬಯಲಾಯ್ತು ಸಂಚು

Ketan Agarwal Murder: ಮಹಾರಾಷ್ಟ್ರದ ಲೋಹಗಢ ಕೋಟೆಯಲ್ಲಿ ಉದ್ಯಮಿ ಕೇತನ್ ಅಗರ್ವಾಲ್‌ ಸಾವನ್ನು ಆರಂಭದಲ್ಲಿ ಅಪಘಾತ ಎಂದು ಪರಿಗಣಿಸಲಾಗಿತ್ತು. ಆದರೆ ಸಹೋದರಿಯ ಅನುಮಾನದಿಂದ ಮರು ತನಿಖೆ ನಡೆದಿದ್ದು, ಭಾವಿ ಪತ್ನಿ ಸಿಯಾ ಗೋಯಲ್ ಹಾಗೂ ಆಕೆಯ ಪ್ರಿಯಕರ ಚೇತನ್ ಚೌಧರಿ ಸೇರಿ ಪೂರ್ವಯೋಜಿತವಾಗಿ ಕೊಲೆ ನಡೆಸಿದ್ದಾರೆ ಎಂಬ ಆರೋಪದಡಿ ಬಂಧಿಸಲಾಗಿದೆ.

ಆಗ ರಾಜ ರಘುವಂಶಿ ಈಗ ಕೇತನ್‌ ಅಗರ್ವಾಲ್‌: ಪ್ರವಾಸಿ ತಾಣದಲ್ಲಿ ಸಂಗಾತಿಯಿಂದಲೇ ಕೊಲೆಯಾದ ನತದೃಷ್ಟರು

ರಾಜ ರಘುವಂಶಿ ಹತ್ಯೆ ನೆನಪಿಸಿದ ಕೇತನ್‌ ಕೊಲೆ ಪ್ರಕರಣ

Pune Man Murder Case: ಮಹಾರಾಷ್ಟ್ರದ ಲೋನಾವಾಲಾ ಸಮೀಪದ ಲೋಹಗಢ ಕೋಟೆಯಲ್ಲಿ ಜೂ. 18ರಂದು ನಡೆದ ಯುವ ಉದ್ಯಮಿ 26 ವರ್ಷದ ಕೇತನ್‌ ವಿಶಾಲ್‌ ಅಗರ್ವಾಲ್‌ನ ಕೊಲೆ ಪ್ರಕರಣ ಸದ್ಯ ಭಾರಿ ಚರ್ಚೆಗೆ ಕಾರಣವಾಗುತ್ತಿದೆ. ಕಳೆದ ವರ್ಷದ ರಾಜ ರಘುವಂಶಿ ಹತ್ಯೆಯನ್ನು ಇದು ನೆನಪಿಸಿದೆ.

ಅಯತೊಲ್ಲಾ ಅಲಿ ಖಮೇನಿ ಅಂತ್ಯಕ್ರಿಯೆಗೆ ನರೇಂದ್ರ ಮೋದಿಗೆ ಇರಾನ್ ಅಧ್ಯಕ್ಷರಿಂದ ಆಹ್ವಾನ; ಭಾರತದ ಪ್ರಧಾನಿ ಹೋಗ್ತಾರ?

ಅಯತೊಲ್ಲಾ ಅಲಿ ಖಮೇನಿ ಅಂತಿಮ ಅಂತ್ಯಕ್ರಿಯೆ ಮೋದಿಗೆ ಆಹ್ವಾನ

Ayatollah Ali Khamenei: ಮಾಜಿ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವಂತೆ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡಿದ್ದಾರೆ. ಜುಲೈ 4ರಿಂದ 9ರವರೆಗೆ ಟೆಹರಾನ್‌, ಕೋಮ್ ಹಾಗೂ ಮಶ್ಹದ್‌ನಲ್ಲಿ ಅಂತ್ಯಕ್ರಿಯೆ ನಡೆಯಲಿದ್ದು, ಹಲವು ದೇಶಗಳ ನಾಯಕರು ಭಾಗವಹಿಸುವ ನಿರೀಕ್ಷೆಯಿದೆ.

Support Price for Mangoes: ರಾಜ್ಯದ ರೈತರಿಗೆ ಸಿಹಿ ಸುದ್ದಿ; ತಕ್ಷಣವೇ ಮಾವಿಗೆ ಬೆಂಬಲ ಬೆಲೆ ಘೋಷಿಸುವ ಭರವಸೆ ಕೊಟ್ಟ ಕೇಂದ್ರ ಕೃಷಿ ಸಚಿವ

ಮಾವಿಗೆ ಬೆಂಬಲ ಬೆಲೆ ಘೋಷಿಸುವ ಭರವಸೆ ಕೊಟ್ಟ ಕೇಂದ್ರ ಕೃಷಿ ಸಚಿವ

ಪ್ರಸಕ್ತ ಹಂಗಾಮಿನಲ್ಲಿ ರೈತರು ಎದುರಿಸುತ್ತಿರುವ ಬೆಲೆ ಕುಸಿತ ಸಂಕಷ್ಟವನ್ನು ತಗ್ಗಿಸಲು ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆ (ಎಂಐಎಸ್) ಮೂಲಕ ನೆರವಾಗಬೇಕು ಹಾಗೂ ಬೆಲೆ ಕೊರತೆ ಪಾವತಿ ಯೋಜನೆ (ಪಿಡಿಪಿಎಸ್) ಅಡಿಯಲ್ಲಿ ಬೆಂಬಲ ಬೆಲೆ ನೀಡಬೇಕು ಎಂದು ಕೇಂದ್ರ ಕೃಷಿ ಸಚಿವರನ್ನು ಸಚಿವ ಕುಮಾರಸ್ವಾಮಿ ಅವರು ಕೋರಿದ್ದಾರೆ. ಇದಕ್ಕೆ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಸ್ಪಂದಿಸಿದ್ದಾರೆ.

ಕಠಿಣ ಸಂದರ್ಭದಲ್ಲಿ ಸುವೇಂದು ಅಧಿಕಾರಿ ಜತೆ ಇದ್ದರು: ಮಹುವಾ ಮೊಯಿತ್ರಾ ಹೇಳಿಕೆಯಿಂದ ಬಂಗಾಳ ರಾಜಕೀಯದಲ್ಲಿ ಹೊಸ ಸಂಚಲನ

ಸುವೇಂದು ಅಧಿಕಾರಿಯನ್ನು ಹೊಗಳಿದ ಟಿಎಂಸಿ ಸಂಸದೆ: ಇದರ ಹಿಂದಿನ ಗುಟ್ಟೇನು?

ಪಶ್ಚಿಮ ಬಂಗಾಳದಲ್ಲಿ ವೈಭವದಿಂದ ಮೆರೆದಿದ್ದ ತೃಣ ಮೂಲ ಕಾಂಗ್ರೆಸ್ ಪಕ್ಷದ ಒಳಗೆ ಭಿನ್ನಾಭಿಪ್ರಾಯಗಳು ಹೆಚ್ಚಾಗಿರುವಾಗಲೇ ಪಕ್ಷದ ನಿಷ್ಠಾವಂತರು ಎಂದು ಗುರುತಿಸಿಕೊಂಡಿದ್ದ ಒಬ್ಬೊಬ್ಬರೇ ಮಮತಾ ಬ್ಯಾನರ್ಜಿ ಅವರ ವಿರುದ್ಧ ನಿಲ್ಲುತ್ತಿದ್ದಾರೆ. ಈ ನಡುವೆ ಇದೀಗ ಸಂಸದೆ ಮಹುವಾ ಮೊಯಿತ್ರಾ ಅವರು ಬಿಜೆಪಿ ನಾಯಕ, ಮುಖ್ಯಮಂತ್ರಿ ಸುವೇಂದು ಅಧಿಕಾರಿಯನ್ನು ಬಹಿರಂಗವಾಗಿ ಹೊಗಳಿದ್ದು, ಇದು ಇಲ್ಲಿನ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿದೆ.

ಪಾಕಿಸ್ತಾನ ವಾಯು ಪ್ರದೇಶಕ್ಕೆ ಏರ್‌ ಇಂಡಿಯಾ ವಿಮಾನ ಎಂಟ್ರಿ; ತನಿಖೆ ಕೈಗೆತ್ತಿಕೊಂಡ ಕೇಂದ್ರ

ಪಾಕಿಸ್ತಾನ ವಾಯು ಪ್ರದೇಶಕ್ಕೆ ಎಂಟ್ರಿ ಕೊಟ್ಟ ಏರ್‌ ಇಂಡಿಯಾ ವಿಮಾನ

Pakistan Airspace: ಏರ್‌ ಇಂಡಿಯಾ ವಿಮಾನ ಪಾಕಿಸ್ತಾನದ ವಾಯು ಪ್ರದೇಶವನ್ನು ಪ್ರವೇಶಿಸಿ ಸ್ವಲ್ಪ ಹೊತ್ತು ಅಲ್ಲೇ ಇದ್ದ ಘಟನೆ ಜೂನ್‌ 22ರಂದು ನಡೆದಿದ್ದು, ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ದೆಹಲಿಯಿಂದ ಪಂಜಾಬ್‌ನ ಅಮೃತಸರಕ್ಕೆ ಹೊರಟಿದ್ದ ಏರ್‌ ಇಂಡಿಯಾ AI479 ವಿಮಾನವು ಪಾಕಿಸ್ತಾನ ವಾಯು ಪ್ರದೇಶದಲ್ಲಿ ಕಾಣಿಸಿಕೊಂಡಿತ್ತು.

Pune Man Murder Case: ಕೇತನ್‌ ಕೊಲೆಯ ಕೆಲವೇ ತಾಸುಗಳ ಮೊದಲು ಕೆಫೆಯೊಂದರಲ್ಲಿ ಪ್ರಿಯಕರನನ್ನು ಭೇಟಿಯಾದ ಸಿಯಾ; ಮರ್ಡರ್‌ ಪ್ಲ್ಯಾನ್‌ ತಯಾರಾಗಿದ್ದೇ ಇಲ್ಲಿ

ಕೆಫೆಯಲ್ಲಿ ಪ್ರಿಯಕರನನ್ನು ಭೇಟಿಯಾಗಿ ಭಾವಿ ಪತಿಯ ಕೊಲೆ ಸಂಚು ರೂಪಿಸಿದ ಸಿಯಾ

Siya Goyal: ಮಹಾರಾಷ್ಟ್ರದಲ್ಲಿ ನಡೆದ ಯುವ ಉದ್ಯಮಿಯ ಕೊಲೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. 26 ವರ್ಷದ ಯುವ ಉದ್ಯಮಿ ಕೇತನ್‌ ವಿಶಾಲ್‌ ಅಗರ್ವಾಲ್‌ ಅವರನ್ನು ಭಾವಿ ಪತ್ನಿ ಸಿಯಾ ಗೋಯಲ್‌ ತನ್ನ ಪ್ರಿಯಕರ ಚೇತನ್‌ ಜತೆ ಸೇರಿ ಕೊಲೆ ಮಾಡಿದ್ದು, ಇವರಿಬ್ಬರ ಸಂಚಿನ ವಿವರ ಇದೀಗ ಬೆಳಕಿವೆ ಬಂದಿದೆ.

ಕಣ್ಣಿನ ಚಿಕಿತ್ಸೆಗಾಗಿ ವಿದೇಶ ಪ್ರಯಾಣಕ್ಕೆ ಅನುಮತಿ ನೀಡುವಂತೆ ಅರ್ಜಿ ಸಲ್ಲಿಸಿದ ಟಿಎಂಸಿ ನಾಯಕ ಅಭಿಷೇಕ್‌ ಬ್ಯಾನರ್ಜಿ; ತುರ್ತು ಪರಿಶೀಲಿಸಲು ಹೈಕೋರ್ಟ್‌ ನಕಾರ

ಅಭಿಷೇಕ್ ಬ್ಯಾನರ್ಜಿ ವಿದೇಶ ಪ್ರಯಾಣ ಅರ್ಜಿ ವಿಚಾರಣೆ ಮುಂದೂಡಿಕೆ

ತೃಣಮೂಲ ಕಾಂಗ್ರೆಸ್ ಸಂಸದ ಅಭಿಷೇಕ್ ಬ್ಯಾನರ್ಜಿ ಅವರ ವಿದೇಶ ಪ್ರಯಾಣ ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸಲು ಕಲ್ಕತ್ತಾ ಹೈಕೋರ್ಟ್ ನಿರಾಕರಿಸಿದೆ. ಈ ಕುರಿತು ಮುಂದಿನ ವಾರ ವಿಚಾರಣೆ ನಡೆಸುವುದಾಗಿ ಹೇಳಿದೆ. ಕಣ್ಣಿನ ಚಿಕಿತ್ಸೆ ಪಡೆಯಲು ವಿದೇಶಕ್ಕೆ ಹೋಗಲು ಅನುಮತಿ ಕೋರಿ ಅಭಿಷೇಕ್ ಬ್ಯಾನರ್ಜಿ ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

Star Fashion 2026: ರಿಬ್ಡ್ ಟೀ ಶರ್ಟ್‌ನಲ್ಲಿ ಟೈಗರ್‌ ಶ್ರಾಫ್‌ ಅವರಂತೆ ಕಾಣಲು ಇಲ್ಲಿವೆ 5 ಸ್ಟೈಲಿಂಗ್‌ ಟಿಪ್ಸ್

ಟೈಗರ್‌ ಶ್ರಾಫ್‌ ರಿಬ್ಡ್ ಟೀ ಶರ್ಟ್ ಲುಕ್‌ಗೆ 5 ಸ್ಟೈಲಿಂಗ್‌ ಟಿಪ್ಸ್

ಬಾಲಿವುಡ್‌ ನಟ ಟೈಗರ್‌ ಶ್ರಾಫ್‌ ಧರಿಸಿದ್ಧ, ರಿಬ್ಡ್ ಟೀ ಶರ್ಟ್ ಫ್ಯಾಷನ್‌ ಇತ್ತೀಚೆಗೆ ಸಾಕಷ್ಟು ಟ್ರೆಂಡಿಯಾಗಿದೆ. ಕೂಲ್‌ ಹಾಗೂ ಬಿಂದಾಸ್‌ ಲುಕ್ಕನ್ನು ನೀಡುವ ಈ ಟೀ ಶರ್ಟ್‌ನಲ್ಲಿ ಅತ್ಯಾಕರ್ಷಕವಾಗಿ ಕಾಣಿಸುವುದು ಹೇಗೆ? ಎಂಬುದರ ಸ್ಟೈಲಿಸ್ಟ್‌ಗಳು 5 ಟಿಪ್ಸ್ ನೀಡಿದ್ದಾರೆ.

ನಾವು ನಿಜವಾದ ತೃಣಮೂಲ ಕಾಂಗ್ರೆಸ್, ಪಕ್ಷದ ಚಿಹ್ನೆಗಾಗಿ ಹಕ್ಕು ಸಾಧಿಸುವ ಅಗತ್ಯವಿಲ್ಲ: ಋತಬ್ರತ ಬ್ಯಾನರ್ಜಿ  ಸ್ಪಷ್ಟನೆ

ಟಿಎಂಸಿ ಚಿಹ್ನೆಗಾಗಿ ಹಕ್ಕು ಸಾಧಿಸುವ ಅಗತ್ಯವಿಲ್ಲ: ಋತಬ್ರತ ಬ್ಯಾನರ್ಜಿ

ತೃಣಮೂಲ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷೆಯಾಗಿದ್ದ ಮಮತಾ ಬ್ಯಾನರ್ಜಿ ಅವರನ್ನು ಬಂಡಾಯ ನಾಯಕರು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿದ ಬಳಿಕ ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರ ಪಟ್ಟಿಯನ್ನು ಭಾರತೀಯ ಚುನಾವಣಾ ಆಯೋಗಕ್ಕೆ (ಇಸಿಐ) ಸಲ್ಲಿಸಿದರು. ಅಲ್ಲದೇ ನಮ್ಮದು ನಿಜವಾದ ತೃಣ ಮೂಲ ಕಾಂಗ್ರೆಸ್ ಪಕ್ಷ ಎಂದು ಸ್ಪಷ್ಟಪಡಿಸಿದ್ದಾರೆ.

ಉಕ್ರೇನ್‌ನಲ್ಲಿ ಭಾರತೀಯ ಸೈನಿಕರ ನಿಯೋಜನೆ; ಜೆ.ಡಿ. ವ್ಯಾನ್ಸ್ ಪ್ರಸ್ತಾವನೆಗೆ ಡೊನಾಲ್ಡ್‌ ಟ್ರಂಪ್ ಬ್ರೇಕ್

ಭಾರತೀಯ ಸೈನಿಕರ ಬಗ್ಗೆ ವ್ಯಾನ್ಸ್ ಪ್ರಸ್ತಾಪಕ್ಕೆ ಟ್ರಂಪ್ ನಕಾರ

JD Vance: ಉಕ್ರೇನ್-ರಷ್ಯಾ ಯುದ್ಧಕ್ಕೆ ವಿರಾಮ ತರಲು ಉಕ್ರೇನ್‌ನಲ್ಲಿ ಶಾಂತಿಪಾಲನಾ ಪಡೆಯಾಗಿ ಭಾರತೀಯ ಸೈನಿಕರನ್ನು ನಿಯೋಜಿಸುವ ಪ್ರಸ್ತಾವನೆಯನ್ನು ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಮುಂದಿಟ್ಟಿದ್ದರು ಎಂಬ ವಿಚಾರವನ್ನು ಹೊಸ ಪುಸ್ತಕವೊಂದು ಬಹಿರಂಗಪಡಿಸಿದೆ. ಆದರೆ ಈ ಪ್ರಸ್ತಾವನೆಯನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿರಸ್ಕರಿಸಿದ್ದಾಗಿ ವರದಿಯಾಗಿದೆ.

ಸ್ಟಾರ್ಟ್‌ಅಪ್‌ ಆರಂಭಿಸಲು 15 ವರ್ಷಗಳ ಬಳಿಕ ಅಮೆರಿಕದಿಂದ ಬೆಂಗಳೂರಿಗೆ ಮರಳಿದ ದಂಪತಿ

H-1B ಅನಿಶ್ಚಿತತೆಗೆ ಬೇಸತ್ತು ಬೆಂಗಳೂರು ವಾಪಸಾದ ದಂಪತಿ

Bengaluru News: 15 ವರ್ಷಗಳ ಕಾಲ ಅಮೆರಿಕದಲ್ಲಿ ವಾಸಿಸಿದ್ದ ಬೆಂಗಳೂರು ಮೂಲದ ಕಾರ್ತಿಕ್ ಮತ್ತು ಆಸ್ಥಾ ದಂಪತಿ ಗ್ರೀನ್ ಕಾರ್ಡ್ ವಿಳಂಬ, H-1B ವೀಸಾ ಅನಿಶ್ಚಿತತೆಯಿಂದ ಬೇಸತ್ತು ಭಾರತಕ್ಕೆ ಮರಳಿದ್ದಾರೆ. ಬೆಂಗಳೂರಿನಲ್ಲಿ ಬೆಳೆಯುತ್ತಿರುವ ಸ್ಟಾರ್ಟ್‌ಅಪ್ ಅವಕಾಶಗಳ ಹಿನ್ನೆಲೆಯಲ್ಲಿ ತಮ್ಮದೇ ಉದ್ಯಮ ಆರಂಭಿಸಲಿದ್ದಾರೆ.

ಅನಿವಾರ್ಯವಲ್ಲದೆ ಇದ್ದರೆ ಇರಾನ್‌ಗೆ ಹೋಗಬೇಡಿ: ಭಾರತೀಯ ರಾಯಭಾರ ಕಚೇರಿಯಿಂದ ಎಚ್ಚರಿಕೆ

ಇರಾನ್ ಪ್ರಯಾಣ: ಭಾರತೀಯರಿಗೆ ಎಚ್ಚರಿಕೆ

ಅನಿವಾರ್ಯ ಕಾರಣಗಳನ್ನು ಹೊರತುಪಡಿಸಿ ಸದ್ಯ ಭಾರತೀಯರು ಇರಾನ್‌ಗೆ ತೆರಳದಂತೆ ಭಾರತೀಯ ರಾಯಭಾರ ಕಚೇರಿಯು ಸೂಚಿಸಿದೆ. ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಇರಾನ್‌ನಲ್ಲಿನ ಭದ್ರತಾ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಇತ್ತೀಚಿನ ಬೆಳವಣಿಗೆ ಹಿನ್ನೆಲೆಯಲ್ಲಿ ಇರಾನ್ ಪ್ರಯಾಣಕ್ಕೆ ಅನುಮತಿ ನೀಡಿದ್ದರೂ ಅನಿವಾರ್ಯವಲ್ಲದೇ ಇದ್ದರೆ ಪ್ರಯಾಣ ತಪ್ಪಿಸಲು ಸೂಚನೆಯನ್ನು ನೀಡಿದೆ.

ಉರಿ ಬಿಸಿಲಿನಲ್ಲಿಯೂ ಹೂಡಿ, ಹೆಡ್‌ ಫೋನ್‌;  ಪುಣೆ ಉದ್ಯಮಿ ಹತ್ಯೆ ಬಯಲು ಮಾಡಿದ ಆ ರಹಸ್ಯವೇನು?

ಪುಣೆ ಉದ್ಯಮಿ ಹತ್ಯೆ ಬಯಲು ಮಾಡಿದ ಆ ರಹಸ್ಯವೇನು?

ಭಾವಿ ಪತ್ನಿ ತನ್ನ ಪ್ರಿಯಕರ ಜೊತೆ ಸೇರಿ ಉದ್ಯಮಿ ಹತ್ಯೆ ಮಾಡಿರುವ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ತನಿಖೆ ನಡೆಸುತ್ತಿರುವ ಅಧಿಕಾರಿಗಳ ಎದುರು ಒಂದೊಂದೇ ಸತ್ಯ ಬಯಲಾಗುತ್ತಿದೆ. ಪುಣೆಯ ಐತಿಹಾಸಿಕ ಲೋಹಗಡ್ ಕೋಟೆಯಲ್ಲಿ ಉದ್ಯಮಿ ಕೇತನ್‌ ಅವರನ್ನು ಸಿಯಾ ಹಾಗೂ ಚೇತನ್‌ ಚೌಧರಿ ಕೊಲೆ ಮಾಡಿದ್ದಾರೆ. ಅದಕ್ಕೂ ಮುನ್ನ ಸಿಯಾ ಹಾಗೂ ಕೇತನ್‌ ಕೋಟೆ ಹತ್ತುತ್ತಿರುವ ವಿಡಿಯೋ ಪೊಲೀಸರಿಗೆ ಲಭ್ಯವಾಗಿತ್ತು.

ಕೊಲೆ ಮಾಡಲು ಮಾಸ್ಟರ್‌ ಪ್ಲಾನ್‌;  ವಿದೇಶಕ್ಕೆ ಹೋಗದಂತೆ ತಡೆಯಲು ಭಾವಿ ಪತಿಯ ಪಾಸ್‌ಪೋರ್ಟ್ ಕದ್ದಿದ್ದ ಸಿಯಾ, ತನಿಖೆಯಲ್ಲಿ ಆಘಾತಕಾರಿ ಸತ್ಯ ಬಯಲು

ಲೋಹಗಢ ಕೋಟೆಯಲ್ಲಿ ಉದ್ಯಮಿಯ ರಹಸ್ಯ ಸಾವು; ಭಾವಿ ಪತ್ನಿಯೇ ಮಾಸ್ಟರ್‌ಮೈಂಡ್

ಮಹಾರಾಷ್ಟ್ರದ ಲೋಹಗಢ ಕೋಟೆಯಲ್ಲಿ 26 ವರ್ಷದ ರಿಯಲ್ ಎಸ್ಟೇಟ್ ಉದ್ಯಮಿ ಕೇತನ್ ವಿಶಾಲ್ ಅಗರ್ವಾಲ್ ಸಾವನ್ನಪ್ಪಿದ ಪ್ರಕರಣ ಕೊಲೆ ಪ್ರಕರಣವಾಗಿ ತಿರುವು ಪಡೆದಿದೆ. ಭಾವಿ ಪತ್ನಿ ಸಿಯಾ ಗೋಯಲ್ ಮತ್ತು ಆಕೆಯ ಪ್ರಿಯಕರ ಚೇತನ್ ಚೌಧರಿ ಸೇರಿ ಕೇತನ್ ಅವರನ್ನು ಕಂದಕಕ್ಕೆ ತಳ್ಳಿ ಅಪಘಾತದಂತೆ ಬಿಂಬಿಸಲು ಯತ್ನಿಸಿದ್ದರೆಂದು ಪೊಲೀಸರು ಆರೋಪಿಸಿದ್ದು, ಇಬ್ಬರನ್ನೂ ಬಂಧಿಸಿದ್ದಾರೆ. ಪ್ರಕರಣದ ಹಿಂದೆ ಆಸ್ತಿ ಹಾಗೂ ವಿಮಾ ಹಣದ ಉದ್ದೇಶವಿದೆಯೇ ಎಂಬ ದಿಕ್ಕಿನಲ್ಲೂ ತನಿಖೆ ನಡೆಯುತ್ತಿದೆ.

ಹನಿ ಟ್ರ್ಯಾಪ್, ಆತ್ಮಹತ್ಯಾ ದಾಳಿಗೆ ಸಂಚು: ಬಂಧನಕ್ಕೊಳಗಾದ ಜೈಪುರ ಮಹಿಳೆಗೆ ಜೈಶ್ ಸಂಪರ್ಕ

ಜೈಶ್ ಸಂಪರ್ಕದಲ್ಲಿ ಜೈಪುರ ಮಹಿಳೆ

ಹನಿಟ್ರ್ಯಾಪ್, ಆತ್ಮಹತ್ಯಾ ದಾಳಿಗೆ ಸಂಚು ರೂಪಿಸುತ್ತಿದ್ದ ಜೈಪುರದ ಮಹಿಳೆ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ (ಜೆಇಎಂ) ಜೊತೆ ಸಂಬಂಧ ಹೊಂದಿದ್ದವರ ಜೊತೆ ಸುಮಾರು ಎರಡು ವರ್ಷಗಳಿಂದ ಸಂಪರ್ಕ ಹೊಂದಿದ್ದಳು. ಜೈಪುರದ ಬಬಿತಾ ಧಕಾದ್ ಅಲಿಯಾಸ್ ಖದೀಜಾ ಜೈಶ್ ನ ಸ್ಲೀಪರ್-ಸೆಲ್ ಕಾರ್ಯಕರ್ತೆಯಾಗಿ ಗುರುತಿಸಿಕೊಂಡಿದ್ದಳು ಎಂದು ತನಿಖೆ ವೇಳೆ ಬಹಿರಂಗವಾಗಿದೆ.

ತರಾತುರಿಯಲ್ಲಿ ಮೇಕೆದಾಟು ನಿರ್ಣಯ ಅಂಗೀಕಾರ: ವಿಜಯ್ ಸರ್ಕಾರದ ವಿರುದ್ಧ ಎಐಎಡಿಎಂಕೆ ವಾಗ್ದಾಳಿ

ಮೇಕೆದಾಟು ನಿರ್ಣಯದಲ್ಲಿ ವಿಜಯ್ ಸರ್ಕಾರ ತಪ್ಪು ಮಾಡುತ್ತಿದೆ: ಎಐಎಡಿಎಂಕೆ

ಮೇಕೆದಾಟು ಯೋಜನೆಗೆ ಸಂಬಂಧಿಸಿ ಮುಖ್ಯಮಂತ್ರಿ ವಿಜಯ್ ನೇತೃತ್ವದ ತಮಿಳುನಾಡಿನ ಹೊಸ ಸರ್ಕಾರ ಹೊಸ ನಡೆಗೆ ಮುಂದಾಗಿದೆ. ಆದರೆ ಇದು ಈ ಹಿಂದೆ ಕಾನೂನು ಹೋರಾಟದ ಮೂಲಕ ಪಡೆದಿರುವ ತೀರ್ಪುಗಳನ್ನು ದುರ್ಬಲಗೊಳಿಸುವ ಸಾಧ್ಯತೆ ಇದೆ ಎಂಬುದಾಗಿ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಪಕ್ಷ ಹೇಳಿದೆ. ಈ ವಿಚಾರದಲ್ಲಿ ಸಿಎಂ ವಿಜಯ್ ಸರ್ಕಾರವನ್ನು ತೀವ್ರವಾಗಿ ಟೀಕಿಸಿದೆ.

ಎಥನಾಲ್ ಮಿಶ್ರಣದ ಕುರಿತು ಸಾಮಾಜಿಕ ಜಾಲತಾಣದಲ್ಲಿ ತಪ್ಪು ಮಾಹಿತಿ ಹಂಚಿಕೆ; ಕೇಂದ್ರ ಸರ್ಕಾರ ಹೇಳಿದ್ದೇನು?

ಎಥನಾಲ್ ಮಿಶ್ರಣದ ಕುರಿತು ಸಾಮಾಜಿಕ ಜಾಲತಾಣದಲ್ಲಿ ತಪ್ಪು ಮಾಹಿತಿ ಹಂಚಿ

ಪೆಟ್ರೋಲ್‌ಗೆ ಎಥನಾಲ್ ಮಿಶ್ರಣ ಮಾಡುವ (ಇಬಿಪಿ) ಯೋಜನೆ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತಿರುವ ಕೆಲವು ತಪ್ಪು ಮತ್ತು ಆಧಾರವಿಲ್ಲದ ವದಂತಿಗಳ ಕುರಿತು ಸರ್ಕಾರ ಸ್ಪಷ್ಟನೆ ನೀಡಿದೆ. ಕೇವಲ ವೀಕ್ಷಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಮತ್ತು ಜನರಲ್ಲಿ ಅನಗತ್ಯ ಭಯ ಹುಟ್ಟಿಸಲು ಹಳೆಯ ಚಿತ್ರಗಳು ಹಾಗೂ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತೆ ಹಂಚಿಕೊಳ್ಳಲಾಗುತ್ತಿರುವುದರ ಕುರಿತು ಎಚ್ಚರಿಕೆ ನೀಡಿದೆ.

ಸೋಷಿಯಲ್‌ ಮೀಡಿಯಾದಲ್ಲಿ ಸಂಚಲನ ಮೂಡಿಸಿದ ಭರತ್ ತಿವಾರಿ ಎನ್‌ಕೌಂಟರ್ ಪ್ರಕರಣ: ಬಿಹಾರ ಪೊಲೀಸ್ ಅಧಿಕಾರಿಗಳ ವಿರುದ್ಧ ಎಫ್‌ಐಆರ್

ಭರತ್ ತಿವಾರಿ ಎನ್‌ಕೌಂಟರ್‌ ಪ್ರಕರಣಕ್ಕೆ ಹೊಸ ತಿರುವು

Bharat Tiwari Encounter: ಬಿಹಾರದ ಭೋಜಪುರ ಜಿಲ್ಲೆಯಲ್ಲಿ ನಡೆದ ಭರತ್ ಭೂಷಣ್ ತಿವಾರಿ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಪೊಲೀಸ್ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಮೃತನ ತಾಯಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ರಾಜ್ಯ ಸರ್ಕಾರ ನ್ಯಾಯಾಂಗ ತನಿಖೆಗೆ ಆದೇಶಿಸಿದೆ. ಈ ಘಟನೆ ಬಿಹಾರದಲ್ಲಿ ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ʼʼವೈಫಲ್ಯ ಮರೆಮಾಚುವ ಯತ್ನʼʼ: ಯುದ್ಧ ಬೆದರಿಕೆ ಹಾಕಿದ ಪಾಕಿಸ್ತಾನದ ಖ್ವಾಜಾ ಆಸಿಫ್‌ಗೆ ಭಾರತ ತಿರುಗೇಟು

ಪಾಕಿಸ್ತಾನದ ಬೆದರಿಕೆಗೆ ಮುಟ್ಟಿ ನೋಡುವಂತೆ ತಿರುಗೇಟು ಕೊಟ್ಟ ಭಾರತ

Khawaja Asif: ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ನೀಡಿದ ಯುದ್ಧದ ಬೆದರಿಕೆಗೆ ಭಾರತ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ತನ್ನ ದೇಶದಲ್ಲಿನ ಮಾನವ ಹಕ್ಕುಗಳ ಉಲ್ಲಂಘನೆ ಹಾಗೂ ವೈಫಲ್ಯಗಳಿಂದ ಜಾಗತಿಕ ಗಮನವನ್ನು ಬೇರೆಡೆಗೆ ಸೆಳೆಯಲು ಪಾಕಿಸ್ತಾನ ಹತಾಶ ಯತ್ನ ನಡೆಸುತ್ತಿದೆ ಎಂದು ಭಾರತ ಆರೋಪಿಸಿದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆಯುತ್ತಿರುವ ದಬ್ಬಾಳಿಕೆ ಹಾಗೂ ನಾಗರಿಕರ ಮೇಲಿನ ಕ್ರೂರ ಕ್ರಮಗಳಿಗೂ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಲಖನೌ ಬೆಂಕಿ ದುರಂತ: ಮೃತ ಯಾವ ವಿದ್ಯಾರ್ಥಿಗಳ ಶರೀರದಲ್ಲೂ ಸುಟ್ಟು ಗಾಯಗಳಿಲ್ಲ; ಬಲಿಯಾಗಿದ್ದು ಹೇಗೆ?

ಲಖನೌ ಬೆಂಕಿ ದುರಂತದಲ್ಲಿ ಮೃತರ ಶರೀರದಲ್ಲಿ ಸುಟ್ಟು ಗಾಯಗಳಿಲ್ಲ

Lucknow Fire: ಉತ್ತರ ಪ್ರದೇಶದ ವಾಯುವ್ಯ ಲಖನೌದ ಅಲಿಗಂಜ್ ಪ್ರದೇಶದಲ್ಲಿರುವ ತರಬೇತಿ ಕೇಂದ್ರವಿದ್ದ ಕಟ್ಟಡಕ್ಕೆ ಸೋಮವಾರ (ಜೂನ್‌ 22) ಬೆಂಕಿ ಹತ್ತಿ ಉರಿದಿದ್ದು, ಕನಿಷ್ಠ 15 ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಆದರೆ ಯಾರೂ ಸುಟ್ಟ ಗಾಯಗಳಿಂದ ಮೃತಪಟ್ಟಿಲ್ಲ. ಉಸಿರುಗಟ್ಟಿ, ಹೊಗೆ ಉಸಿರಾಡಿ ಮೃತಟ್ಟಿರುವ ವಿಚಾರ ಬೆಳಕಿಗೆ ಬಂದಿದೆ.

ಮದುವೆಗಾಗಿ 17 ಕೋಟಿ ರುಪಾಯಿ ಕೊಟ್ಟು ಅರಮನೆ ಬುಕ್‌ ಮಾಡಿದವ ಹೆಣವಾದ! ಪ್ರೇಮಿಯೊಂದಿಗೆ ಸೇರಿ ಕೋಟೆಯಿಂದ ತಳ್ಳಿ ಕೊಂದ ಭಾವಿ ಪತ್ನಿ

ಮದುವೆಗೆ ಮುನ್ನವೇ ಯುವಕನನ್ನು ಕೊಂದ ಭಾವಿ ಪತ್ನಿ

Ketan Agarwal: ಪುಣೆಯ ಲೋಹಗಡ್ ಕೋಟೆಯಲ್ಲಿ ಅಪಘಾತ ಎಂದು ಭಾವಿಸಲಾಗಿದ್ದ 26 ವರ್ಷದ ಕೇತನ್‌ ವಿಶಾಲ್ ಅಗರ್ವಾಲ್ ಸಾವಿನ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ನಿಶ್ಚಿತಾರ್ಥವಾಗಿದ್ದ ಸಿಯಾ ಗೋಯಲ್ ಮತ್ತು ಆಕೆಯ ಪ್ರೇಮಿ ಸೇರಿ ಪೂರ್ವಯೋಜಿತವಾಗಿ ಕೇತನ್‌ನನ್ನು ಕೋಟೆಯಿಂದ ತಳ್ಳಿ ಕೊಲೆ ಮಾಡಿರುವ ಆರೋಪ ಕೇಳಿಬಂದಿದ್ದು, ಇಬ್ಬರನ್ನೂ ಬಂಧಿಸಲಾಗಿದೆ.

ತಮಿಳುನಾಡು ವಿಧಾನಸಭೆಯಲ್ಲಿ ವಿಜಯ್ ವಿರುದ್ಧ ಉದಯನಿಧಿ ಸ್ಟಾಲಿನ್ ವೈಯಕ್ತಿಕ ಟೀಕೆ – ರಾಜಕೀಯ ವಾಗ್ವಾದ ತಾರಕಕ್ಕೆ

ವಿಜಯ್ ವಿರುದ್ಧ ಉದಯನಿಧಿ ವೈಯಕ್ತಿಕ ಟೀಕೆ

Udhayanidhi Stalin vs Vijay: ತಮಿಳುನಾಡು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ವಿಜಯ್ ಮತ್ತು ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ನಡುವಿನ ವಾಕ್ಸಮರ ತೀವ್ರಗೊಂಡಿದೆ. ಉದಯನಿಧಿ ಸಾಮಾಜಿಕ ಜಾಲತಾಣ Xನಲ್ಲಿ ವಿಜಯ್ ಅವರ ವೈಯಕ್ತಿಕ ಜೀವನವನ್ನು ಉಲ್ಲೇಖಿಸುವ ಪೋಸ್ಟ್ ಮಾಡಿದ್ದು ಹೊಸ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಜಯ್ ಕೂಡ ಡಿಎಂಕೆ ವಿರುದ್ಧ ಭ್ರಷ್ಟಾಚಾರ ಆರೋಪಗಳನ್ನು ಮಾಡಿದ್ದು ರಾಜಕೀಯ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ.

Loading...