ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ದೇಶ

Supreme Court: ಶಿಕ್ಷೆ ಅವಧಿ ಮುಗಿದರೂ 4.7 ವರ್ಷ ಹೆಚ್ಚುವರಿ ಸೆರೆವಾಸ; ಕೈದಿಗೆ 25 ಲಕ್ಷ ರೂ. ಪರಿಹಾರಕ್ಕೆ ಸುಪ್ರೀಂ ಕೋರ್ಟ್ ಆದೇಶ

ಹೆಚ್ಚುವರಿ ಜೈಲುವಾಸ ಅನುಭವಿಸಿದ ವ್ಯಕ್ತಿಗೆ ಭರ್ಜರಿ ಆಫರ್ ನೀಡಿದ ಕೋರ್ಟ್

ವ್ಯಕ್ತಿಯೋರ್ವನನ್ನು ಶಿಕ್ಷಾವಧಿ ಮುಗಿದರೂ ನಾಲ್ಕೂವರೆ ವರ್ಷ ಹೆಚ್ಚುವರಿ ಸೆರೆವಾಸ ಅನುಭವಿಸಿದ್ದಕ್ಕೆ ವ್ಯಕ್ತಿಗೆ 25 ಲಕ್ಷ ರೂ. ಪರಿಹಾರ ನೀಡುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಅಲ್ಲದೇ ಈ ಬೇಜವಾಬ್ದಾರಿ ಮಾಡಿದ ಮಧ್ಯ ಪ್ರದೇಶ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.

Postpartum Psychosis: ದೇಶವೇ ಬೆಚ್ಚಿ ಬೀಳುವ ಘಟನೆ: ನವಜಾತ ಶಿಶುವನ್ನು ಫ್ರೀಜರ್‌ನಲ್ಲಿ ಇಟ್ಟ ತಾಯಿ

ನವಜಾತ ಶಿಶುವನ್ನು ಫ್ರೀಜರ್‌ನಲ್ಲಿ ಇಟ್ಟ ತಾಯಿ

ಕೆಟ್ಟ ಮಕ್ಕಳಿದ್ದರೂ ಕೆಟ್ಟ ತಾಯಿ ಇರಲ್ಲ ಎನ್ನುವ ಮಾತಿದೆ. ಆದರೆ ಇದನ್ನು ಕೆಲವರು ಸುಳ್ಳು ಮಾಡುತ್ತಿದ್ದಾರೆ. ಇಲ್ಲೊಬ್ಬಳು ಹೆತ್ತ ತಾಯಿಯೇ ತನ್ನ ಮಗುವನ್ನು ಫ್ರೀಜರ್‌ನಲ್ಲಿ ಇರಿಸಿ ಸಾಯಲು ಬಿಟ್ಟಿದ್ದಳು. ಆದರೆ ಅದೃಷ್ಟವಶಾತ್ ಕುಟುಂಬ ಸದಸ್ಯರು ಮಗುವನ್ನು ರಕ್ಷಿಸಿದ್ದಾರೆ.

Viral Video: ಇನ್‌ಸ್ಟಾಗ್ರಾಮ್ ರೀಲ್‌ಗಾಗಿ ಮುಳುಗುವ ನಾಟಕ: ಪೊಲೀಸರು ‘ಶವ’ ತೆಗೆಯಲು ಬಂದಾಗ ಎದ್ದ ವ್ಯಕ್ತಿ

ರೀಲ್ಸ್ ಚಟಕ್ಕೆ ನದಿಯಲ್ಲಿ ಮುಳುಗಿದ ಭೂಪ! ಮುಂದೇನಾಯ್ತು?

ಸೋಶಿಯಲ್ ಮೀಡಿಯಾ ಬಂದ ಮೇಲಂತೂ ಜನರ ಹುಚ್ಚಾಟ ಹೆಚ್ಚಾಗಿದ್ದು, ಅತಿರೇಕದ ವರ್ತನೆಯಿಂದ ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಿದ್ದಾರೆ. ಮೊದಲು ಸೆಲ್ಫಿ ತೆಗೆಯುವ ಹುಚ್ಚಿತ್ತು. ಇದೀಗ ರೀಲ್ಸ್ ಮಾಡುವ ಹುಚ್ಚು ಶುರುವಾಗಿದೆ. ಅಪಾಯಕಾರಿ ಸ್ಥಳಗಳಲ್ಲಿ ರೀಲ್ಸ್, ಫೋಟೊ ತೆಗೆಯಲು ಹೋಗಿ ಜೀವ ಕಳೆದುಕೊಂಡ ಎಷ್ಟೋ ನಿದರ್ಶನಗಳನ್ನು ನಾವು ನೋಡಿದ್ದೇವೆ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿ ರೀಲ್ಸ್ ಚಟಕ್ಕೆ ನದಿಯಲ್ಲಿ ಮುಳುಗಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Viral Video: ತೆಲಂಗಾಣದಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ:  ಭಯಾನಕ ವಿಡಿಯೊ ವೈರಲ್

ತೆಲಂಗಾಣದಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ

ತೆಲಂಗಾಣದ ಮೇಡಕ್ ಜಿಲ್ಲೆಯ ಕೌಡಿಪಲ್ಲಿ ಮಂಡಲದ ಮುತ್ರಜಪದ ಗ್ರಾಮದಲ್ಲಿರುವ ಮನೆಯೊಳಗೆ ಸ್ಫೋಟ ಆಗಿದ್ದು, ವಿಡಿಯೊ ವೈರಲ್‌ ಆಗಿದೆ. ಆ ಸಮಯದಲ್ಲಿ ಮನೆಯ ಒಳಗೆ ಯಾರೂ ಇರಲಿಲ್ಲ, ಇದರಿಂದಾಗಿ ದೊಡ್ಡ ದುರಂತವೊಂದು ತಪ್ಪಿದೆ ಎನ್ನಬಹುದು. ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ವೇಳೆ ವ್ಯಕ್ತಿಯೊಬ್ಬರು ಹೊರಗೆ ಇದ್ದ ಕಾರಣ ಮನೆಗೆ ಹಾನಿಯಾಗಿದ್ದರೂ ವ್ಯಕ್ತಿಗೆ ಏನು ಆಗಲಿಲ್ಲ.

Bomb Threat: ಬಾಂಬ್ ಬೆದರಿಕೆ; ಕೇರಳ ಸಿಎಂ ನಿವಾಸ, ಜಿಲ್ಲಾ ನ್ಯಾಯಾಲಯದಲ್ಲಿ ಶೋಧ

ಬಾಂಬ್ ಬೆದರಿಕೆ: ಕೇರಳದಲ್ಲಿ ಶೋಧ

ಕೇರಳ ಮುಖ್ಯಮಂತ್ರಿಯ ಅಧಿಕೃತ ನಿವಾಸ ಮತ್ತು ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಬಂದಿರುವ ಹಿನ್ನೆಲೆಯಲ್ಲಿ ತೀವ್ರ ಶೋಧ ಕಾರ್ಯಾಚರಣೆಯನ್ನು ನಡೆಸಲಾಗಿದೆ. ಇಮೇಲ್ ಮೂಲಕ ಬೆದರಿಕೆ ಬಂದ ಬಳಿಕ ಸೋಮವಾರ ತೀವ್ರ ಶೋಧ ಕಾರ್ಯಾಚರಣೆ ನಡೆಸಲಾಯಿತು.

Brain Eating Amoeba: ಮೆದುಳು ತಿನ್ನುವ ಅಮೀಬಾ ಸೋಂಕು: ಕೇರಳದಲ್ಲಿ ಮತ್ತೊಂದು ಬಲಿ

ಮೆದುಳು ತಿನ್ನುವ ಅಮೀಬಾ ಸೋಂಕಿಗೆ ಮತ್ತೊಂದು ಬಲಿ

ಕೇರಳದ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 56 ವರ್ಷದ ಮಹಿಳೆ ಶೋಭನಾ ಮೆದುಳು ತಿನ್ನುವ ಅಮೀಬಾ ಸೋಂಕಿಗೆ ಬಲಿಯಾಗಿದ್ದಾರೆ. ಇದೇ ಸೋಂಕಿನಿಂದ ಎರಡು ದಿನಗಳ ಹಿಂದೆ ಸುಲ್ತಾನ್ ಬತ್ತೇರಿ ಮೂಲದ 45 ವರ್ಷದ ರತೀಶ್ ಸಾವನ್ನಪ್ಪಿದ್ದರು.

Viral Video: ಬಾರ್ ಡ್ಯಾನ್ಸರ್ ಜತೆ ಅಶ್ಲೀಲವಾಗಿ ಡ್ಯಾನ್ಸ್‌ ಮಾಡಿದ ಎಎಸ್‍ಐ; ವಿಡಿಯೊ ವೈರಲ್ ಬೆನ್ನಲ್ಲೇ ಅಮಾನತು

ಬಾರ್ ಡ್ಯಾನ್ಸರ್ ಜತೆ ಅಶ್ಲೀಲವಾಗಿ ನೃತ್ಯ ಮಾಡಿದ ಎಎಸ್‍ಐ

ASI Caught Grooving with Bar Dancer: ಎಎಸ್‌ಐ ಒಬ್ಬರು ಆರ್ಕೆಸ್ಟ್ರಾ ನರ್ತಕಿಯೊಂದಿಗೆ ಅಶ್ಲೀಲವಾಗಿ ನೃತ್ಯ ಮಾಡುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವಿಡಿಯೊದಲ್ಲಿ ಎಎಸ್ಐ ಸಂಜೀವ್ ಗೌರ್ ಮತ್ತು ಇತರ ಕೆಲವರು ನೃತ್ಯ ಮಾಡುತ್ತಾ ಮಹಿಳೆಯರೊಂದಿಗೆ ಅಶ್ಲೀಲವಾಗಿ ವರ್ತಿಸುತ್ತಿರುವುದು ಕಂಡುಬಂದಿದೆ.

Viral Video: ರೈಲಿನಲ್ಲಿ ಪತ್ನಿಗೆ ಕಾಲ್ಗೆಜ್ಜೆ ತೊಡಿಸಿದ ವೃದ್ಧ ಪತಿ; ಇವರನ್ನು ನೋಡಿ ಕಲಿಯಿರಿ ಎಂದ ನೆಟ್ಟಿಗರು

ರೈಲಿನಲ್ಲಿ ಪತ್ನಿಗೆ ಕಾಲ್ಗೆಜ್ಜೆ ತೊಡಿಸಿದ ವೃದ್ಧ ಪತಿ

ತಮಿಳುನಾಡಿನ ಕೊಯಂಬತ್ತೂರು ಮೂಲದ ಮಹಿಳೆಯೊಬ್ಬರು ರೈಲು ಪ್ರಯಾಣದ ಸಮಯದಲ್ಲಿ ಮರೆಯಲಾಗದ ಪ್ರೇಮದ ಕ್ಷಣಕ್ಕೆ ಸಾಕ್ಷಿಯಾದರು. ಅದನ್ನು ಅವರು ತಮ್ಮ ಇನ್‌ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅನೇಕು ಮೆಚ್ಚುಗೆ ಸೂಚಿಸಿದ್ದಾರೆ.

The Bengal Files: ವಿವೇಕ್ ಅಗ್ನಿಹೋತ್ರಿ ನಿರ್ದೇಶನದ 'ದಿ ಬೆಂಗಾಳ್‌ ಫೈಲ್ಸ್' ಸೆನ್ಸಾರ್ ಶಿಪ್ ಅರ್ಜಿ ವಜಾ

'ದಿ ಬೆಂಗಾಳ್‌ ಫೈಲ್ಸ್' ಸೆನ್ಸಾರ್ ಶಿಪ್ ಅರ್ಜಿ ವಜಾ

ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ʼದಿ ಬೆಂಗಾಳ ಫೈಲ್ಸ್ʼ ಹಿಂದಿ ಚಿತ್ರದಲ್ಲಿ ತಮ್ಮ ಅಜ್ಜ ಗೋಪಾಲ್ ಚಂದ್ರ ಮುಖರ್ಜಿ ಅವರನ್ನು ಮಾನಹಾನಿಕರ ರೀತಿಯಲ್ಲಿ ಚಿತ್ರಿಸಲಾಗಿದೆ ಎಂದು ಅರ್ಜಿದಾರರಾದ ಶಂತನು ಮುಖರ್ಜಿ ಸಲ್ಲಿಸಿರುವ ದೂರನ್ನು ಪರಿಶೀಲಿಸಿರುವ ಕೋಲ್ಕತಾ ಹೈಕೋರ್ಟ್ ಈ ಅರ್ಜಿಯನ್ನು ವಜಾಗೊಳಿಸಿದೆ. 1946ರ ಆಗಸ್ಟ್‌ನಲ್ಲಿ ಕೋಲ್ಕತ್ತಾದಲ್ಲಿ ನಡೆದ ಕೋಮು ಗಲಭೆಯನ್ನು ಆಧರಿಸಿರುವ ಚಿತ್ರ ಇದಾಗಿದೆ.

Viral Video: ಟ್ರಾಫಿಕ್‌ಗೆ ಬೇಸತ್ತು ಇವ್ರು ಮಾಡಿದ್ದೇನು ಗೊತ್ತಾ? ಈ ವಿಡಿಯೊ ನೋಡಿದ್ರೆ ಶಾಕ್‌ ಆಗೋದು ಗ್ಯಾರಂಟಿ!

ಹೆಗಲ ಮೇಲೆ ಹೊತ್ತು ಸ್ಕೂಟರ್ ಸಾಗಿಸಿದ ಸವಾರರು

Men carrying scooter on shoulders: ಇಬ್ಬರು ವ್ಯಕ್ತಿಗಳು ಟ್ರಾಫಿಕ್ ಜಾಮ್ ತಪ್ಪಿಸಲು ಸ್ಕೂಟರ್ ಅನ್ನು ಹೆಗಲ ಮೇಲೆ ಹೊತ್ತು ನಡೆದಿರುವ ದೃಶ್ಯ ಹರಿಯಾಣದ ಗುರುಗ್ರಾಮದಲ್ಲಿ ಕಂಡುಬಂದಿದೆ. ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ. ವಿಡಿಯೊ ನೋಡಿದ ನೆಟ್ಟಿಗರು ಹಾಸ್ಯಚಟಾಕಿ ಹಾರಿಸಿದ್ದಾರೆ.

Viral Video: 52ನೇ ವಯಸ್ಸಿನಲ್ಲಿ ಎಂಬಿಎ ಪದವಿ ಪಡೆದ ತಂದೆ; ಮಗ ನೀಡಿದ ಸರ್ಪೈಸ್ ಹೇಗಿತ್ತು ಗೊತ್ತಾ?

52ನೇ ವಯಸ್ಸಿನಲ್ಲಿ ಎಂಬಿಎ ಪದವಿ ಪಡೆದ ತಂದೆಗೆ ಮಗನ ಸರ್ಪೈಸ್!

Man throws surprise party: ವ್ಯಕ್ತಿಯೊಬ್ಬರು ತಮ್ಮ 52ನೇ ವಯಸ್ಸಿನಲ್ಲಿ ಎಂಬಿಎ ಪದವಿ ಪಡೆದುಕೊಂಡು ಮನೆಗೆ ವಾಪಸ್ ಆದಾಗ ಅವರ ಪುತ್ರ ಅಚ್ಚರಿಯ ಉಡುಗೊರೆ ನೀಡಿದ್ದಾನೆ. ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ. ವಿಡಿಯೊ ಪೋಸ್ಟ್ ಮಾಡಿದಾಗಿನಿಂದ, ಇದು 3,16,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಕಂಡಿದೆ.

Viral Video: ಮಾಧುರಿಯ ಮಾರ್ ಡಾಲಾ ಹಾಡಿಗೆ ಶಾಲಾ ಬಾಲಕರ ಭರ್ಜರಿ ಡಾನ್ಸ್‌; ಜಬರ್ದಸ್ತ್ ವಿಡಿಯೊ ಇಲ್ಲಿದೆ

ಮಾಧುರಿಯ ಮಾರ್ ಡಾಲಾ ಹಾಡಿಗೆ ಶಾಲಾ ಬಾಲಕರ ಭರ್ಜರಿ ಡಾನ್ಸ್‌!

School Boys’ Dance: ಶಿಕ್ಷಕರ ದಿನದಂದು ಶಾಲಾ ಮಕ್ಕಳು ಮಾಡಿದ ನೃತ್ಯದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಶಾಲಾ ಸಮವಸ್ತ್ರ ಧರಿಸಿ, ಮಕ್ಕಳು ದೇವದಾಸ್ ಚಿತ್ರದ ಮಾರ್ ದಾಲಾ ಎಂಬ ಪ್ರಸಿದ್ಧ ಹಾಡಿಗೆ ನೃತ್ಯ ಪ್ರದರ್ಶಿಸಿದ್ದಾರೆ. ಈ ವಿಡಿಯೊ ಒಂದು ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ.

Viral Video: ಕ್ಷುಲ್ಲಕ ಕಾರಣಕ್ಕೆ ಜಗಳ; ಗ್ರಾಹಕರ ಮೇಲೆ ಹಲ್ಲೆ- ರೆಸ್ಟೋರೆಂಟ್ ಸಿಬ್ಬಂದಿ ವಿರುದ್ಧ ದೂರು

ಗ್ರಾಹಕರ ಮೇಲೆ ಹಲ್ಲೆ ನಡೆಸಿದ ರೆಸ್ಟೋರೆಂಟ್ ಸಿಬ್ಬಂದಿ

ನಹರ್‌ಗಢದ ಐತಿಹಾಸಿಕ ಕೋಟೆಯಲ್ಲಿರುವ ಜೈಪುರದ ಪದವ್ ರೆಸ್ಟೋರೆಂಟ್‌ನಲ್ಲಿ ಭಾನುವಾರ ರಾತ್ರಿ ಮಹಿಳಾ ಗ್ರಾಹಕರೊಬ್ಬರು ಆಸನ ವ್ಯವಸ್ಥೆ ಕುರಿತು ರೆಸ್ಟೋರೆಂಟ್‌ ಸಿಬ್ಬಂದಿಯೊಂದಿಗೆ ಜಗಳ ಪ್ರಾರಂಭಿಸಿದ್ದು, ಇದು ಮಾತಿನ ಚಕಮಕಿಗೆ ಕಾರಣವಾಗಿದೆ. ಬಳಿಕ ಗ್ರಾಹಕರು ಮತ್ತು ರೆಸ್ಟೋರೆಂಟ್ ಸಿಬ್ಬಂದಿ ನಡುವೆ ಹೊಡೆದಾಟವಾಗಿದ್ದು, ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ.

Haryana AC Blast: ಮನೆಯಲ್ಲಿ ಎಸಿ ಸ್ಫೋಟ- ಒಂದೇ ಕುಟುಂಬದ ಮೂವರು ಸಾವು- ಶ್ವಾನವೂ ಬಲಿ...!

ಮನೆಯಲ್ಲಿ ಎಸಿ ಸ್ಫೋಟ- ಮೂವರು ಬಲಿ

ಮನೆಯಲ್ಲಿ ಏರ್ ಕಂಡಿಷನ್(ಎಸಿ) ಸ್ಫೋಟಗೊಂಡ ಪರಿಣಾಮ ಒಂದೇ ಕುಟುಂಬದ ಮೂವರು ಮೃತಪಟ್ಟ ದಾರುಣ ಘಟನೆ ಹರಿಯಾಣದ ಫರಿದಾಬಾದ್‌ನ ಸಮೀಪ ನಡೆದಿದೆ. ತಿಂಡಿವಾನಂ ಸಮೀಪದ ಸಚಿನ್ ಕಪೂರ್, ಆತನ ಪತ್ನಿ ರಿಂಕು ಕಪೂರ್, ಮತ್ತು ಮಗಳು ಸುಜನ್ ಕಪೂರ್ ದುರ್ಘಟನೆಯಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮನೆಯ ಕೋಣೆಯೊಂದರಲ್ಲಿ ರಾತ್ರಿ ಮಲಗಿದ್ದ ವೇಳೆ ಶಾರ್ಟ್ ಸರ್ಕ್ಯೂಟ್ ನಿಂದ ಏರ್ ಕಂಡಿಷನ್ ಸ್ಫೋಟಗೊಂಡಿದ್ದು, ಬಳಿಕ ಬೆಂಕಿ ಬೆಡ್ ರೂಮ್ ಗೆ ಆವರಿಸಿದ ಪರಿಣಾಮ ಮೂವರು ಸಜೀವ ದಹನವಾಗಿದ್ದಾರೆ.

Vice President Election: ಉಪರಾಷ್ಟ್ರಪತಿ ಚುನಾವಣೆ- ಸಿ.ಪಿ. ರಾಧಾಕೃಷ್ಣನ್ ಗೆಲುವು ಖಚಿತ? ಏನಿದೆ NDA ಲೆಕ್ಕಾಚಾರ?

ನಾಳೆ ಉಪರಾಷ್ಟ್ರಪತಿ ಚುನಾವಣೆ-ಏನಿದೆ NDA ಲೆಕ್ಕಾಚಾರ?

ಉಪರಾಷ್ಟ್ರಪತಿ ಹುದ್ದೆಗೆ ಮಂಗಳವಾರ ರಹಸ್ಯ ಮತದಾನ ನಡೆಯಲಿದೆ. ಇದರ ಪ್ರಕ್ರಿಯೆ ಹೇಗಿರುತ್ತದೆ, ಮುಂದಿನ ಉಪರಾಷ್ಟ್ರಪತಿ ಯಾರಾಗುತ್ತಾರೆ, ಆಡಳಿತ ಮತ್ತು ವಿರೋಧ ಪಕ್ಷಗಳ ಲೆಕ್ಕಾಚಾರಗಳು ಯಾವ ರೀತಿಯಲ್ಲಿ ಇದೆ, ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿ ಕೂಟ ಏನೆಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿವೆ ಎನ್ನುವ ಕುರಿತು ಮಾಹಿತಿ ಇಲ್ಲಿದೆ.

Humans In Mars: ಮಂಗಳ ಗ್ರಹದಲ್ಲಿ ವಾಸಿಸಲು ನಾಲ್ವರು ರೆಡಿ- ಕೆಂಪು ಗ್ರಹದಲ್ಲಿ ಜೀವನ ಸಾಗಿಸಲು ಸವಾಲುಗಳೇನು?

ಮಂಗಳ ಗ್ರಹದಲ್ಲಿ ಬದುಕಲು ಸವಾಲುಗಳೆಷ್ಟು?

ಮಂಗಳ ಗ್ರಹದಲ್ಲಿ ಜೀವಿಗಳ ವಾಸ್ತವ್ಯದ ಬಗ್ಗೆ ಹಾಗೂ ಅದರ ಸಾಧ್ಯತೆಯ ಬಗ್ಗೆ ಹಲವು ವರ್ಷಗಳಿಂದ ಚರ್ಚೆಗಳು ನಡೆಯುತ್ತಿವೆ. ಅಲ್ಲಿ ಬದುಕುಳಿಯುವುದು ಸಾಧ್ಯ ಎಂದು ಕೆಲವರು ವಾದಿಸಿದರೆ, ಇನ್ನು ಕೆಲವರು ಇಲ್ಲ ಎಂದು ಚರ್ಚಿಸುತ್ತಾರೆ. ಮತ್ತೊಂದೆಡೆ, ವಿಜ್ಞಾನಿಗಳು ಮಂಗಳನಲ್ಲಿ ಸಂಶೋಧನೆ ನಡೆಸುತ್ತಿದ್ದು, ಕಠಿಣ ಪರಿಸ್ಥಿತಿಗಳಲ್ಲಿ ಮಂಗಳ ಗ್ರಹದಲ್ಲಿ ವಾಸಿಸಲು ಸಾಧ್ಯವಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಸೌರವ್ಯೂಹದ ಗ್ರಹಗಳಲ್ಲಿ ಮಂಗಳ ಗ್ರಹವೇ ಸಂಶೋದನೆಯ ಮುಖ್ಯ ಗುರಿಯಾಗಿದ್ದು, ಮಂಗಳ ಗ್ರಹದಲ್ಲಿ 4 ಮಂದಿ ರೆಡಿಯಾಗಿದ್ದಾರೆ ಎನ್ನಲಾಗಿದೆ

Supreme Court: ಮತದಾರರ ವಿಶೇಷ ಪರಿಷ್ಕರಣೆಗೆ ಆಧಾರ್ 12ನೇ ದಾಖಲೆಯಾಗಿ ಮಾನ್ಯ ; ಸುಪ್ರೀಂ

ಮತದಾರರ ವಿಶೇಷ ಪರಿಷ್ಕರಣೆಗೆ ಆಧಾರ್ 12ನೇ ದಾಖಲೆಯಾಗಿ ಮಾನ್ಯ

ವರ್ಷದ ಕೊನೆಯಲ್ಲಿ ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆಗೆ ಮುನ್ನ ಮತದಾರರ ಮರು ಪರಿಶೀಲನೆಗಾಗಿ ಚುನಾವಣಾ ಆಯೋಗವು ಆಧಾರ್ ಅನ್ನು ಗುರುತಿನ ಪುರಾವೆಯಾಗಿ ಸ್ವೀಕರಿಸಬೇಕು ಎಂದು ಸುಪ್ರೀಂ ಕೋರ್ಟ್‌ ಆದೇಶ ಹೊರಡಿಸಿದೆ. ಕರಡು ಪಟ್ಟಿಯಲ್ಲಿರುವ 7.24 ಕೋಟಿ ಮತದಾರರಲ್ಲಿ ಶೇ 99.6 ರಷ್ಟು ಜನರು ಈಗಾಗಲೇ ದಾಖಲೆಗಳನ್ನು ಸಲ್ಲಿಸಿದ್ದಾರೆ.

Volodymyr Zelensky: ಟ್ರಂಪ್‌ ಸುಂಕ ಹೆಚ್ಚಳ ನೀತಿಗೆ ಜೈ ಎಂದ ಝೆಲೆನ್ಸ್ಕಿ

ಸುಂಕ ಹೆಚ್ಚಳ: ಟ್ರಂಪ್ ನಿರ್ಧಾರ ಸರಿಯಾಗಿದೆ ಎಂದ ಝೆಲೆನ್ಸ್ಕಿ

Zelensky supports Trump: ಸಂದರ್ಶನವೊಂದರಲ್ಲಿ ಮಾತನಾಡಿರುವ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ರಷ್ಯಾದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವ ದೇಶಗಳ ಮೇಲೆ ಹೆಚ್ಚುವರಿ ಸುಂಕ ವಿಧಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ಧಾರ ಸರಿಯಾಗಿದೆ ಎಂದು ಹೇಳಿದ್ದು, ಉಕ್ರೇನ್‌ನೊಂದಿಗೆ ನಡೆಯುತ್ತಿರುವ ಯುದ್ಧದ ಕಾಲದಲ್ಲಿ ಇದು ಸರಿಯಾದ ನಿರ್ಣಯ ಎಂದು ಹೇಳಿದ್ದಾರೆ.

Crime News: ಸಾರ್ವಜನಿಕ ಸ್ಥಳದಲ್ಲಿ ಮೂತ್ರ ಮಾಡಬೇಡ ಅಂದಿದ್ದೇ ತಪ್ಪಾಯ್ತೇ? ಅಮೆರಿಕದಲ್ಲಿ ಭಾರತೀಯನ ಶೂಟೌಟ್‌!

ಭಾರತೀಯರ ಮೇಲೆ ಅಮೆರಿಕದಲ್ಲಿ ಪದೇ ಪದೇ ಶೂಟೌಟ್!

Haryana Man Killed in US: ಅಮೆರಿಕ ದೇಶದಲ್ಲಿ ಶೂಟೌಟ್ ಪ್ರಕರಣಗಳು ಪದೇ ಪದೇ ವರದಿಯಾಗುತ್ತಿವೆ. ದೇಶದ ಎಲ್ಲೆಂದರಲ್ಲಿ ಗುಂಡಿನ ಆರ್ಭಟ ಕೇಳಿ ಬರುತ್ತಿದೆ. ಅಲ್ಲಿ ಭಾರತೀಯರ ಸರಣಿ ಹತ್ಯೆಗಳು ನಡೆಯುತ್ತಿದ್ದು, ಅದು ಅಲ್ಲಿರುವ ಭಾರತ ಮೂಲದವರಿಗೆ ತೀವ್ರ ಆತಂಕ ತಂದೊಡ್ಡಿದೆ. ಈ ಮಧ್ಯೆ ಇದೀಗ ಮತ್ತೇ ಮತ್ತೊಬ್ಬ ಭಾರತೀಯನ ಹತ್ಯೆಯಾಗಿದೆ. ಕ್ಯಾಲಿಫೋರ್ನಿಯಾದ ಸಾರ್ವಜನಿಕ ಸ್ಥಳದಲ್ಲಿ ಮಾಡುತ್ತಿದ್ದ ವ್ಯಕ್ತಿಯನ್ನು ತಡೆದಿದ್ದಕ್ಕೆ, ಭಾರತ ಮೂಲದ ಯುವಕನ ಮೇಲೆ ಗುಂಡು ಹಾರಿಸಿ ಆತನನ್ನು ಹತ್ಯೆ ಮಾಡಿದ್ದಾನೆ.

Gen Z Protest: ಸೋಶಿಯಲ್‌ ಮೀಡಿಯಾ ಬ್ಯಾನ್‌; Gen Z ಗಳಿಂದ ಭಾರೀ ಪ್ರತಿಭಟನೆ, ಗುಂಡೇಟಿಗೆ 14 ಬಲಿ

ಜೆನ್‌ ಝಿಗಳಿಂದ ಭಾರೀ ಪ್ರತಿಭಟನೆ, ಗುಂಡೇಟಿಗೆ ಇಬ್ಬರು ಬಲಿ

ನೇಪಾಳವು ಸೋಶಿಯಲ್‌ ಮೀಡಿಯಾ ಅಪ್ಲಿಕೇಷನ್‌ಗಳನ್ನು ನಿರ್ಬಂಧಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿತ್ತು. ಇದೀಗ ಇದೇ ವಿಚಾರವಾಗಿ ನೇಪಾಳದಲ್ಲಿ ಪ್ರತಿಭಟನೆ ಭುಗಿಲೆದ್ದಿದೆ. ಭದ್ರತಾ ಪಡೆಗಳು ವಿದ್ಯಾರ್ಥಿಗಳನ್ನು ಚದುರಿಸಲು ಗುಂಡು ಹಾರಿಸಿದ್ದಾರೆ. ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದು, 8o ಕ್ಕೂ ಅಧಿಕ ಜನರಿಗೆ ಗಂಭೀರ ಗಾಯಗಳಾಗಿವೆ.

Viral News: ಬಡತನದಿಂದ ಬೇಸತ್ತು ಹೆತ್ತ ಮಗುವನ್ನೇ ಮಾರಾಟ ಮಾಡಿದ ದಂಪತಿ!

ಬಡತನದಿಂದ ಬೇಸತ್ತು ತಿಂಗಳ ಮಗುವನ್ನು ಮಾರಾಟ ಮಾಡಿದ ದಂಪತಿ

Couple Sells Month-Old Baby: ಬಡತನದಿಂದ ಬೇಸತ್ತ ದಂಪತಿಯು ತಮ್ಮ ಒಂದು ತಿಂಗಳ ಗಂಡು ಮಗುವನ್ನು 50,000 ರೂ. ಗೆ ಮಾರಾಟ ಮಾಡಿರುವ ಕರುಣಾಜನಕ ಘಟನೆ ಜಾರ್ಖಂಡ್‍ನಲ್ಲಿ ನಡೆದಿದೆ. ಘಟನೆಯ ಬಗ್ಗೆ ತಿಳಿದ ಕೂಡಲೇ ಪೊಲೀಸರಿಗೆ ಮಗುವನ್ನು ರಕ್ಷಿಸುವಂತೆ ಮುಖ್ಯಮಂತ್ರಿ ಆದೇಶ ನೀಡಿದ್ದರು.

Viral Video: ರೆಸ್ಟೋರೆಂಟ್‌ ಉದ್ಯೋಗಿಗಳ ಮೇಲೆ ಖಾಕಿಗಳ ಅಟ್ಟಹಾಸ- ಶಾಕಿಂಗ್‌ ವಿಡಿಯೊ ಇಲ್ಲಿದೆ

ರೆಸ್ಟೋರೆಂಟ್ ಉದ್ಯೋಗಿಗಳ ಮೇಲೆ ಠಾಣೆಯಲ್ಲಿ ಹಲ್ಲೆ ನಡೆಸಿದ ಪೊಲೀಸರು

Cop Assaulting Restaurant Employees: ಕೇರಳದಲ್ಲಿ ಮತ್ತೊಂದು ಲಾಕಪ್ ಹಲ್ಲೆ ಪ್ರಕರಣ ಬೆಳಕಿಗೆ ಬಂದಿದೆ. ಠಾಣೆಗೆ ಕರೆಸಿ ರೆಸ್ಟೋರೆಂಟ್ ಉದ್ಯೋಗಿಗಳ ಮೇಲೆ ಪೊಲೀಸರು ಹಲ್ಲೆ ನಡೆಸಿರುವ ಸಿಸಿಟಿವಿ ದೃಶ್ಯಾವಳಿಯ ವಿಡಿಯೊ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಘಟನೆ 2023ರ ಮೇ ತಿಂಗಳಲ್ಲಿ ಸಂಭವಿಸಿದೆ.

Yogi Adityanath: ಯೋಗಿ ಸರ್ಕಾರದಿಂದ ಹೊಸ ರೂಲ್ಸ್‌ ಜಾರಿ ; ಕಾಲೇಜುಗಳ ಪರಿಶೀಲನೆಗೆ ಕಮಿಟಿ ರಚನೆ

ಸರ್ಕಾರದಿಂದ ಹೊಸ ರೂಲ್ಸ್‌ ಜಾರಿ ;ಕಾಲೇಜುಗಳ ಪರಿಶೀಲನೆಗೆ ಕಮಿಟಿ ರಚನೆ

ಯೋಗಿ ಆದಿತ್ಯನಾಥ (Yogi Adityanath) ಯೋಗಿ ಅವರು ಉತ್ತರ ಪ್ರದೇಶದಲ್ಲಿ ವಿಶೇಷ ಕ್ರಮವನ್ನ ಜಾರಿಗೊಳಿಸಿದ್ದು, ಸರ್ಕಾರವು ರಾಜ್ಯಾದ್ಯಂತ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳ ಮೇಲೆ ದೊಡ್ಡ ಪ್ರಮಾಣದ ತನಿಖೆಯನ್ನು ಪ್ರಾರಂಭಿಸಿದೆ. ಈ ತಂಡಗಳಲ್ಲಿ ಹಿರಿಯ ಆಡಳಿತ ಅಧಿಕಾರಿಗಳು, ಪೊಲೀಸ್ ಇಲಾಖೆ ಅಧಿಕಾರಿಗಳು ಮತ್ತು ಶಿಕ್ಷಣ ಇಲಾಖೆ ಪ್ರತಿನಿಧಿಗಳು ಇರಲಿದೆ.

Sanjay Dutt: ಜೋಡಿ ಕೊಲೆ ಹಂತಕ ನಟ ಸಂಜಯ್‌ ದತ್‌ ಕುತ್ತಿಗೆಗೆ ಬ್ಲೇಡ್‌ ಇಟ್ಟಿದ್ನಂತೆ!

ಜೋಡಿ ಕೊಲೆ ಹಂತಕ ನಟ ಸಂಜಯ್‌ ದತ್‌ ಕುತ್ತಿಗೆಗೆ ಬ್ಲೇಡ್‌ ಇಟ್ಟಿದ್ನಂತೆ!

1993ರ ಮುಂಬೈ ಬಾಂಬ್ ಸ್ಫೋಟದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದ ಬಾಲಿವುಡ್ ನಟ ಸಂಜಯ್ ದತ್ (Sanjay Dutt) ಜೈಲಿನಲ್ಲಿದ್ದಾಗ ನಡೆದ ಒಂದು ಭಯಾನಕ ಘಟನೆಯನ್ನು ದಿ ಗ್ರೇಟ್ ಇಂಡಿಯನ್ ಕಪಿಲ್ ಶರ್ಮಾ ಶೋನಲ್ಲಿ ಹಂಚಿಕೊಂಡಿದ್ದಾರೆ. ಎರಡು ಕೊಲೆಗಳನ್ನು ಮಾಡಿದ್ದ ಅಪರಾಧಿಯೊಬ್ಬ ತನ್ನ ಕುತ್ತಿಗೆಗೆ ಬ್ಲೇಡ್ ಹಿಡಿದಿದ್ದ ಎಂದು ನಟ ನೆನಪಿಸಿಕೊಂಡಿದ್ದಾರೆ.

Loading...