ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ದೇಶ
Vijay Mallya: ವಿಜಯ್ ಮಲ್ಯರ ‘ಸೀಕ್ರೆಟ್’ ಇನ್‌ಸ್ಟಾಗ್ರಾಮ್ ಅಕೌಂಟ್‌ ಬಯಲು? ಹವಾ ಎಬ್ಬಿಸಿದ ‘ಇಂಡಿಯಾಫ್ಲಾಶ್’!

ವಿಜಯ್ ಮಲ್ಯರ ‘ಸೀಕ್ರೆಟ್’ ಇನ್‌ಸ್ಟಾಗ್ರಾಮ್ ಅಕೌಂಟ್‌ ಬಯಲು?

Vijay Mallya secret Instagram account: ವಿಜಯ್ ಮಲ್ಯ ತಮ್ಮ ಎಕ್ಸ್‌ ಖಾತೆಯಿಂದ ಹಾಟ್‌ಮೇಲ್ ಸಂಸ್ಥಾಪಕ ಸಬೀರ್ ಭಾಟಿಯಾ (Sabeer Bhatia) ಅವರ ಇನ್‌ಸ್ಟಾಗ್ರಾಮ್ (Instagram) ಪೋಸ್ಟ್‌ಗೆ ಲಿಂಕ್ ಹಂಚಿಕೊಂಡಿದ್ದರು. ಇದರಿಂದ ಇದು ಮಲ್ಯ ಅವರ ಸೀಕ್ರೆಟ್ ಇನ್‌ಸ್ಟಾಗ್ರಾಮ್ ಖಾತೆ ಇರಬಹುದೆಂದು ಜನರು ಶಂಕಿಸುತ್ತಿದ್ದಾರೆ

Kerala Viral News: 4ನೇ ಕ್ಲಾಸಲ್ಲಿ ನಡೆದಿದ್ದ ಜಗಳ; 50 ವರ್ಷಗಳ ನಂತರ ಸಹಪಾಠಿಯ ಹಲ್ಲು ಮುರಿದ ವೃದ್ಧರು

ಬಾಲ್ಯದ ಜಗಳಕ್ಕೆ ಈಗ ಸೇಡು; ಸಹಪಾಠಿಯ ಹಲ್ಲು ಮುರಿದ ವೃದ್ಧರು

ಕೇರಳದ ಕಾಸರಗೋಡು ಜಿಲ್ಲೆಯ ಮಾಲೋಂ ಪಟ್ಟಣದಲ್ಲಿ 50 ವರ್ಷಗಳ ಹಿಂದೆ ನಾಲ್ಕನೇ ತರಗತಿಯಲ್ಲಿ ನಡೆದ ಜಗಳವೊಂದುಮತ್ತೆ ಹೊಡೆದಾಟಕ್ಕೆ ಕಾರಣವಾಗಿದೆ. ಇಬ್ಬರು ವೃದ್ಧರು ತಮ್ಮ ಶಾಲಾ ಸಹಪಾಠಿಯ ಮೇಲೆ ಕಲ್ಲಿನಿಂದ ದಾಳಿ ನಡೆಸಿದ ಘಟನೆ ಸೋಮವಾರ ವರದಿಯಾಗಿದೆ. ಆರೋಪಿಗಳಾದ ಮಲೋತು ಬಾಲಕೃಷ್ಣನ್ ಮತ್ತು ಮ್ಯಾಥ್ಯೂ ವಲಿಯಾಪ್ಲಾಕ್ಕಲ್, ಗಾಯಾಳು ವಿಜೆ ಬಾಬು (62) ಅವರನ್ನು ಕಲ್ಲಿನಿಂದ ಹೊಡೆದಿದ್ದಾರೆ.

Indore couple missing: ಮಗನನ್ನು ಬಲಿ ಪಡೆದ ಹಂತಕಿ ಸೊಸೆ ಸೋನಂ ಬಗ್ಗೆ ಅತ್ತೆ ಬಿಚ್ಚಿಟ್ಟ ʻಆ ಸತ್ಯʼ ಏನು?

ಹನಿಮೂನ್ ಹೆಸ್ರಲ್ಲಿ ಮಗನ ಬಲಿ ಪಡೆದ ಸೊಸೆ ಬಗ್ಗೆ ಅತ್ತೆ ಹೇಳಿದ್ದೇನು?

ಕಳೆದ ಮೇ 23ರಂದು ಇಂದೋರ್‌ ಮೂಲದ ದಂಪತಿ ಮೇಘಾಲಯಲಕ್ಕೆ ಹನಿಮೂನ್‌ಗೆಂದು ಹೋಗಿ ನಿಗೂಢವಾಗಿ ಕಣ್ಮರೆಯಾಗಿದ್ದರು. ಈ ಹಿನ್ನಲೆ ಕುಟುಂಬಸ್ಥರ ದೂರಿನಾಧಾರದ ಮೇಲೆ ಪ್ರಕರಣದ ಬೆನ್ನತ್ತಿದ್ದ ಪೋಲಿಸರು ಕಾಣೆಯಾಗಿದ್ದ ರಾಜಾ ರಘುವಂಶಿಯವರ ಶವವನ್ನು ಪತ್ತೆ ಹಚ್ಚಿದ್ದರು. ನಂತರ ಸೋನಂಗಾಗಿ ಪೋಲಿಸರು ತಮ್ಮ ಕಾರ್ಯಚರಣೆ ಮುಂದುವರೆಸಿದ್ದರು. ಆದರೆ ಇದೀಗ ಪತಿ ರಾಜಾ ರಘುವಂಶಿ ಹತ್ಯೆಗೆ ಸೋನಂ ಸಂಚು ರೂಪಿಸಿರುವ ನಾಟಕ ಬಯಲಾಗಿದೆ.

IED Blast: ನಕ್ಸಲರಿಂದ ಐಇಡಿ ಸ್ಫೋಟ; ಎಎಸ್‌ಪಿ ಸಾವು, ಇಬ್ಬರು ಅಧಿಕಾರಿಗಳಿಗೆ ಗಾಯ

ನಕ್ಸಲರಿಂದ ವಿಧ್ವಂಸಕ ಕೃತ್ಯ; ಎಎಸ್‌ಪಿ ಸಾವು

ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯ ಕೊಂಟಾ-ಎರಾಬೋರ್ ರಸ್ತೆಯ ದೊಂಡ್ರಾ ಬಳಿ ನಕ್ಸಲರಿಂದ ರಚಿತವಾದ ಪ್ರೆಶರ್ IED (ಇಂಪ್ರೊವೈಸ್ಡ್ ಎಕ್ಸ್‌ಪ್ಲೋಸಿವ್ ಡಿವೈಸ್) ಸ್ಫೋಟದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ (ASP) ಆಕಾಶ್ ರಾವ್ ಗಿರಿಪುಂಜೆ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ಸೋಮವಾರ ತಿಳಿಸಿವೆ. ಈ ಘಟನೆಯಲ್ಲಿ ಡಿಎಸ್‌ಪಿ ಮತ್ತು ಇನ್‌ಸ್ಪೆಕ್ಟರ್ ಸೇರಿದಂತೆ ಇಬ್ಬರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ

Train tragedy: ತುಂಬಿ ತುಳುಕುತ್ತಿದ್ದ ಲೋಕಲ್‌ ಟ್ರೈನ್‌ನಿಂದ ಹಳಿಗೆ ಬಿದ್ದ ಹತ್ತಾರು ಮಂದಿ; ಐವರ ದುರ್ಮರಣ

ತುಂಬಿ ತುಳುಕುತ್ತಿದ್ದ ಲೋಕಲ್‌ ಟ್ರೈನ್‌; ಹಳಿಗೆ ಬಿದ್ದು ಐವರು ಸಾವು

ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್‌ ಕಡೆಯಿಂದ ಥಾಣೆಯ ಕಸರಾ ಪ್ರದೇಶದ ಕಡೆಗೆ ಸಾಗುತ್ತಿದ್ದ ರೈಲಿನಲ್ಲಿ ಇಂದು ಭಾರೀ ಜನದಟ್ಟಣೆ ಉಂಟಾಗಿತ್ತು. ಈ ವೇಳೆ ನೂಕು ನುಗ್ಗಲು ಸಂಭವಿಸಿ, ಹಲವು ಪ್ರಯಾಣಿಕರು ಏಕಾಏಕಿ ಚಲಿಸುತ್ತಿರುವ ರೈಲಿನಿಂದ ಹಳಿಗೆ ಬಿದ್ದಿದ್ದಾರೆ. ಈ ವೇಳೆ ಐವರು ದುರಂತ ಅಂತ್ಯ ಕಂಡಿದ್ದಾರೆ.

UP Couple missing: ಇಂದೋರ್‌ ಕೇಸ್‌ ಬೆನ್ನಲ್ಲೇ ಹನಿಮೂನ್‌ಗೆ ಹೋಗಿದ್ದ ಮತ್ತೊಂದು ಜೋಡಿ ಮಿಸ್ಸಿಂಗ್‌! ಏನಿದು ಘಟನೆ?

ಹನಿಮೂನ್‌ಗೆಂದು ಹೋಗಿದ್ದ ಯುಪಿ ದಂಪತಿಯೂ ಮಿಸ್ಸಿಂಗ್‌!

ಮೇಘಾಲಯದಲ್ಲಿ ಇಂದೋರ್‌ ದಂಪತಿ ಮಿಸ್ಸಿಂಗ್‌ ಕೇಸ್‌ ದೇಶಾದ್ಯಂತ ಸಂಚಲನ ಸೃಷ್ಟಿಸಿರುವ ನಡುವೆಯೇ ಇದೀಗ ಮತ್ತೊಂದು ಹನಿಮೂನ್‌ ಜೋಡಿ ನಿಗೂಢವಾಗಿ ಕಣ್ಮರೆಯಾಗಿರುವ ಘಟನೆ ವರದಿಯಾಗಿದೆ. ಸಿಕ್ಕಿಂಗೆ ಹನಿಮೂನ್‌ಗೆಂದು ತೆರಳಿದ್ದ ಉತ್ತರ ಪ್ರದೇಶದ ದಂಪತಿ ಭಾರೀ ಅಪಘಾತದ ನಂತರ ಕಣ್ಮರೆಯಾಗಿದ್ದಾರೆ ಎನ್ನಲಾಗಿದೆ.

Indore Couple Missing: ಮೇಘಾಲಯ ಮಿಸ್ಸಿಂಗ್‌ ಕೇಸ್‌; ಟೂರ್‌ ಗೈಡ್‌ ಕೊಟ್ಟ ಆ ಸುಳಿವಿನಿಂದ ಬಯಲಾಯ್ತು ಘೋರ ಕೃತ್ಯ!

ಮೇಘಾಲಯ ಮಿಸ್ಸಿಂಗ್‌ ಕೇಸ್‌-ಟೂರ್‌ ಗೈಡ್‌ ಕೊಟ್ಟ ಆ ಸುಳಿವೇನು?

ಇಂದೋರ್‌ ದಂಪತಿ ಮಿಸ್ಸಿಂಗ್‌ ಪ್ರಕರಣದಲ್ಲಿ(Indore Couple Missing) ಬಿಗ್‌ ಟ್ವಿಸ್ಟ್‌ ಸಿಕ್ಕಿದ್ದು, ಪತ್ನಿಯೇ ಪತಿಯ ಹತ್ಯೆಗೆ ಸುಪಾರಿ ಕೊಟ್ಟಿದ್ದಳೆಂಬ ಭಯಾನಕ ಸಂಗತಿ ಬಯಲಾಗಿದೆ. ಕಳೆದ ಎರಡು ವಾರಗಳಿಂದ ನಾಪತ್ತೆಯಾಗಿದ್ದ ಹಂತಕಿ ಮತ್ತು ಆಕೆಯ ಮೂವರು ಸಹಚರರನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಟೂರ್‌ ಗೈಡ್‌ ಕೊಟ್ಟ ಮಹತ್ವದ ಸುಳಿವೊಂದು ಈ ಪ್ರಕರಣ ಭೇದಿಸುವಲ್ಲಿ ಪೊಲೀಸರಿಗೆ ಬಹಳ ಸಹಾಯ ಮಾಡಿತ್ತು.

Indore Couple Missing: ಇಂದೋರ್‌ ದಂಪತಿ ಮಿಸ್ಸಿಂಗ್‌ ಕೇಸ್‌ನಲ್ಲಿ ಬಿಗ್‌ ಟ್ವಿಸ್ಟ್‌; ಪತಿಯ ಹತ್ಯೆಗೆ ಪತ್ನಿಯಿಂದಲೇ ಸುಪಾರಿ; ಹಂತಕಿ ಅರೆಸ್ಟ್‌

ಹನಿಮೂನ್‌ ಕಪಲ್‌ ಮಿಸ್ಸಿಂಗ್‌-ಪತಿಯ ಹತ್ಯೆಗೆ ಪತ್ನಿಯಿಂದಲೇ ಸುಪಾರಿ!

ಇಂದೋರ್‌ ದಂಪತಿ ಮಿಸ್ಸಿಂಗ್‌ ಪ್ರಕರಣದಲ್ಲಿ(Indore Couple Missing) ಬಿಗ್‌ ಟ್ವಿಸ್ಟ್‌ ಸಿಕ್ಕಿದ್ದು, ಪತ್ನಿಯೇ ಪತಿಯ ಹತ್ಯೆಗೆ ಸುಪಾರಿ ಕೊಟ್ಟಿದ್ದಳೆಂಬ ಭಯಾನಕ ಸಂಗತಿ ಬಯಲಾಗಿದೆ. ಕಳೆದ ಎರಡು ವಾರಗಳಿಂದ ನಾಪತ್ತೆಯಾಗಿದ್ದ ಹಂತಕಿ ಮತ್ತು ಆಕೆಯ ಮೂವರು ಸಹಚರರನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ.

Chirag Paswan: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಚಿರಾಗ್‌ ಪಾಸ್ವಾನ್‌ ಘೋಷಣೆ; ಬದಲಾಗುತ್ತಾ ರಾಜಕೀಯ ಚಿತ್ರಣ?

ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಚಿರಾಗ್‌ ಪಾಸ್ವಾನ್‌ ಘೋಷಣೆ

Bihar Assembly Polls: ಕೇಂದ್ರ ಸಚಿವ, ಲೋಕ ಜನಶಕ್ತಿ ಪಕ್ಷದ (ರಾಮ್ ವಿಲಾಸ್) ಮುಖ್ಯಸ್ಥ ಚಿರಾಗ್‌ ಪಾಸ್ವಾನ್‌ ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಆ ಮೂಲಕ ರಾಜಕೀಯ ಲೆಕ್ಕಾಚಾರವನ್ನೇ ಬದಲಾಯಿಸುವ ಸೂಚನೆ ನೀಡಿದ್ದಾರೆ.

Stock Market: ಈ 10 ಸ್ಟಾಕ್ಸ್‌ನಲ್ಲಿ ಹೂಡಿಕೆ ಮಾಡಿದ್ರೆ 40% ತನಕ ಲಾಭ?

ಈ 10 ಸ್ಟಾಕ್ಸ್‌ನಲ್ಲಿ ಹೂಡಿಕೆ ಮಾಡಿದ್ರೆ 40% ತನಕ ಲಾಭ?

Share Market: ಡಿಕ್ಸಾನ್‌ ಟೆಕ್ನಾಲಜೀಸ್‌, ಎಲ್‌ಐಸಿ ಹೌಸಿಂಗ್‌ ಫೈನಾನ್ಸ್‌, ಅರಬಿಂದೋ ಫಾರ್ಮಾ, ಕ್ರಾಂಪ್ಟನ್‌ ಗ್ರೀವ್ಸ್‌ , ಎಸಿಸಿ ಸೇರಿದಂತೆ 10 ಮಿಡ್‌ ಕ್ಯಾಪ್‌ ಸ್ಟಾಕ್ಸ್‌, ಹೂಡಿಕೆದಾರರಿಗೆ 40% ತನಕ ಲಾಭ ನೀಡುವ ಸಾಧ್ಯತೆ ಇದೆ ಎಂದು ಟ್ರೆಂಡ್‌ಲೈನ್‌ ಸಂಸ್ಥೆಯ ವರದಿ ತಿಳಿಸಿದೆ

Manipur Violence: ಮಣಿಪುರದಲ್ಲಿ ಎಟಿ ನಾಯಕನ ಬಂಧನ ಖಂಡಿಸಿ ಉಗ್ರ ಪ್ರತಿಭಟನೆ; ಪೆಟ್ರೋಲ್‌ ಸುರಿದುಕೊಂಡು ಬೆಂಬಲಿಗರಿಂದ  ಬೆದರಿಕೆ

ಮಣಿಪುರ ಜನಾಂಗೀಯ ಘರ್ಷಣೆ ತನಿಖೆಗೆ ಎದುರಾಗುತ್ತಿದೆ ಭಾರಿ ವಿರೋಧ

ಮೈಥಿ ಮತ್ತು ಕುಕಿ ಸಮುದಾಯಗಳ ಘರ್ಷಣೆಯಲ್ಲಿ ಪಾಲ್ಗೊಂಡಿರುವ ಆರೋಪದಲ್ಲಿ ಭದ್ರತಾ ಪಡೆಗಳು ಎಟಿ ನಾಯಕ ಕಾನನ್ ಸಿಂಗ್ ಅವರನ್ನು ಶನಿವಾರ ಬಂಧಿಸಿತ್ತು. ಇದಾದ ಬಳಿಕ ಶನಿವಾರ ರಾತ್ರಿ ಮಣಿಪುರದ ರಾಜಧಾನಿ ಇಂಫಾಲ್‌ನಲ್ಲಿ ಪ್ರತಿಭಟನೆಗಳು ಭುಗಿಲೆದ್ದವು. ಈ ವೇಳೆ ಯುವಕರ ಗುಂಪೊಂದು ತಮ್ಮ ತಲೆಗೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳುವುದಾಗಿ ಬೆದರಿಕೆ ಹಾಕಿದೆ.

Kamal Haasan: ಭಾಷಾ ಹೇರಿಕೆ ವಿರುದ್ಧ ಕರ್ನಾಟಕದ ಪರವಾಗಿದ್ದೇನೆ ಎಂದ ಕಮಲ್

ವಿವಾದದ ಬಳಿಕ ಕನ್ನಡಿಗರೊಂದಿಗೆ ಇದ್ದೇನೆ ಎಂದ ಕಮಲ್ ಹಾಸನ್

Kannada Language Row: ಕಮಲ್‌ ಹಾಸನ್‌ ದಕ್ಷಿಣದಲ್ಲಿ ಹಿಂದಿ ಭಾಷಾ ಹೇರಿಕೆ ಬಗ್ಗೆ ಮಾತನಾಡಿದ್ದಾರೆ. ದಕ್ಷಿಣ ರಾಜ್ಯಗಳಲ್ಲಿ ಹಿಂದಿ ಹೇರಿಕೆ ಮಾಡಲಾಗುತ್ತಿದೆ ಎಂಬ ಆರೋಪಗಳಿಗೆ ತಮ್ಮ ಹೊಸ ಚಿತ್ರ 'ಥಗ್ ಲೈಫ್' ಪ್ರಚಾರದ ವೇಳೆ ಪ್ರತಿಕ್ರಿಯಿಸಿರುವ ಅವರು, ನಾವು ಹಿಂದಿ ಭಾಷೆ ಹೇರಿಕೆ ಮಾಡದಿದ್ದರೂ ಕಲಿಯುತ್ತೇವೆ. ನಮಗೆ ಭಾಷೆ ಹೇರಿಕೆ ಮಾಡುವ ಅಗತ್ಯವಿಲ್ಲ. ಈ ವಿಚಾರದಲ್ಲಿ ನಾನು ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತಮಿಳುನಾಡಿನ ಪರವಾಗಿ ನಿಲ್ಲುತ್ತೇನೆ ಎಂದು ಹೇಳಿದ್ದಾರೆ.

Savitha S: ಇದೆಂಥಾ ವರ್ತನೆ?! ಅಧಿಕಾರಿಯತ್ತ ಪುಷ್ಪಗುಚ್ಛ ಎಸೆದ ಆಂಧ್ರ ಪ್ರದೇಶದ ಸಚಿವೆ ಸವಿತಾ; ನೆಟ್ಟಿಗರಿಂದ ಆಕ್ರೋಶ

ಅಧಿಕಾರಿಯತ್ತ ಪುಷ್ಪಗುಚ್ಛ ಎಸೆದ ಆಂಧ್ರ ಪ್ರದೇಶದ ಸಚಿವೆ ಸವಿತಾ

Viral Video: ಆಂಧ್ರ ಪ್ರದೇಶದ ಸಚಿವೆ ಸವಿತಾ ಎಸ್‌. ತಮಗೆ ನೀಡಿದ ಹೂ ಬೊಕೆಯನ್ನು ಅಧಿಕಾರಿಗಳತ್ತ ಎಸೆದು ವಿವಾದ ಹುಟ್ಟು ಹಾಕಿದ್ದಾರೆ. ಸಾರ್ವಜನಿಕ ಸಮಾರಂಭವೊಂದರಲ್ಲಿ ಭಾಗವಹಿಸಿದ್ದ ಅವರು ತಮ್ಮ ಪ್ರಶ್ನೆಗೆ ಸಮರ್ಪಕ ಉತ್ತರ ನೀಡಲಿಲ್ಲವೆಂಬ ಸಿಟ್ಟಿನಲ್ಲಿ ತಮಗೆ ನೀಡಿದ ಬೊಕೆಯನ್ನು ಅಧಿಕಾರಿಗಳತ್ತ ಎಸೆದಿದ್ದಾರೆ.

Viral Video: ಮದುವೆಯಾದ ಬೆನ್ನಲ್ಲೇ ಭರ್ಜರಿಯಾಗಿ ಹೆಜ್ಜೆ ಹಾಕಿದ ಸಂಸದೆ ಮಹುವಾ ಮೊಯಿತ್ರಾ; ವಿಡಿಯೊ  ವೈರಲ್

ಮದುವೆ ನೃತ್ಯದ ವಿಡಿಯೊ ಹಂಚಿಕೊಂಡ ಮಹುವಾ ಮೊಯಿತ್ರಾ

ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಹಿರಿಯ ವಕೀಲ ಮತ್ತು ಬಿಜೆಡಿ ಮಾಜಿ ಸಂಸದ ಪಿನಾಕಿ ಮಿಶ್ರಾ ಅವರನ್ನು ಇತ್ತೀಚೆಗೆ ಜರ್ಮನಿಯಲ್ಲಿ ವಿವಾಹವಾಗಿದ್ದು, ನವ ದಂಪತಿಗಳ ನೃತ್ಯದ ವಿಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಈ ವಿಡಿಯೊವನ್ನು ಮಹುವಾ ಮೊಯಿತ್ರಾ ಹಂಚಿಕೊಂಡಿದ್ದಾರೆ.

Self Harming: ಅಲ್ಲಾನಿಗೆ ಮೇಕೆ ಬದಲು ನನ್ನ ತ್ಯಾಗ ಮಾಡುತ್ತೇನೆ ಎಂದು ಹೇಳಿ ವ್ಯಕ್ತಿ ಆತ್ಮಹತ್ಯೆ

ಮೇಕೆ ಬದಲು ತನ್ನನ್ನು ತಾನೇ ಬಲಿ ಕೊಟ್ಟುಕೊಂಡ ವೃದ್ಧ!

ಬಕ್ರೀದ್ ಹಬ್ಬದ ಸಲುವಾಗಿ ಶನಿವಾರ ಬೆಳಗ್ಗೆ ಸುಮಾರು 10 ಗಂಟೆಗೆ ಸುಲ್ತಾನ್ ಸೈಯದ್ ಮಖ್ದೂಮ್ ಅಶ್ರಫ್ ಶಾ ಅವರ ದರ್ಗಾದಲ್ಲಿ ಈದ್ ಪ್ರಾರ್ಥನೆಯನ್ನು ಸಲ್ಲಿಸಿ ಬಂದ ಇಶ್ ಮೊಹಮ್ಮದ್ ಅನ್ಸಾರಿ ಅವರು ತಮ್ಮ ಮನೆಯ ಪಕ್ಕದ ಗುಡಿಸಲಿನಲ್ಲಿ ಚಾಕುವಿನಿಂದ ಕತ್ತು ಸೀಳಿಕೊಂಡು ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾರೆ.

Indore Couple missing: ಇಂದೋರ್‌ ಜೋಡಿ ಮಿಸ್ಸಿಂಗ್‌ ಕೇಸ್‌ನಲ್ಲಿ ಮಹತ್ವದ ಸುಳಿವು; ಆ ದಿನ ಅವರ ಜೊತೆಗಿದ್ದ ಆ ಮೂವರು ಯಾರು?

ಇಂದೋರ್ ದಂಪತಿ ನಾಪತ್ತೆ ಕೇಸ್‌; ಮಹತ್ವ ಸುಳಿವು ಪತ್ತೆ

ಮೇಘಾಲಯದ ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯಲ್ಲಿ ಹನಿಮೂನ್ ನಡೆಸುತ್ತಿದ್ದ ರಾಜಾ ರಘುವಂಶಿ ಮತ್ತು ಅವರ ಪತ್ನಿ ಸೋನಮ್ ಸೊಹ್ರಾದಲ್ಲಿ (Indore Couple missing) ನಾಪತ್ತೆಯಾಗಿದ್ದರು. ರಾಜಾ ರಘುವಂಶಿ ಅವರ ಶವ ಪತ್ತೆಯಾಗಿದ್ದು, ಸೋನಮ್ ಇನ್ನೂ ಕಾಣೆಯಾಗಿದ್ದಾರೆ. ಅವರನ್ನು ಪತ್ತೆಹಚ್ಚಲು ಶೋಧ ಕಾರ್ಯಾಚರಣೆ ಮುಂದುವರಿದಿದೆ.

Manipur Violence: ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಸಂಘರ್ಷ; 5 ಜಿಲ್ಲೆಗಳಲ್ಲಿ ಇಂಟರ್‌ನೆಟ್‌ ಸ್ಥಗಿತ

ಮಣಿಪುರ ಮತ್ತೆ ಕೊತ ಕೊತ; 5 ಜಿಲ್ಲೆಗಳಲ್ಲಿ ಇಂಟರ್‌ನೆಟ್‌ ಸ್ಥಗಿತ

ಕೆಲವು ದಿನಗಳಿಂದ ಶಾಂತವಾಗಿದ್ದ ಮಣಿಪುರದಲ್ಲಿ ಮತ್ತೆ ಸಂಘರ್ಷ ಭುಗಿಲೆದ್ದಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಮೈಥಿ ಸಮುದಾಯದ ನಾಯಕನನ್ನು ಬಂಧಿಸಿದ ಬಳಿಕ ಅನೇಕ ಪ್ರದೇಶಗಳಲ್ಲಿ ಪ್ರತಿಭಟನೆಗಳು ಪ್ರಾರಂಭವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಹಲವೆಡೆ 5 ದಿನಗಳವರೆಗೆ ಇಂಟರ್‌ನೆಟ್‌ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.

Physical assault: ಐಸಿಯುನಲ್ಲೇ ನಡೀತು ಹೀನ ಕೃತ್ಯ! ಮತ್ತು ಬರೋ ಇಂಜೆಕ್ಷನ್‌ ಕೊಟ್ಟು ಮಹಿಳೆ ಮೇಲೆ ಅತ್ಯಾಚಾರ

ಶಾಕಿಂಗ್‌! ಐಸಿಯುನಲ್ಲಿದ್ದ ಮಹಿಳೆ ಮೇಲೆ ಅತ್ಯಾಚಾರ

ಐಸಿಯು ವಾರ್ಡ್ (ICU Ward) ನಲ್ಲಿ ದಾಖಲಾಗಿದ್ದ 32 ವರ್ಷದ ಮಹಿಳೆಗೆ ನಿದ್ರೆ ಬರುವ ಇಂಜೆಕ್ಷನ್ ನೀಡಿ ನರ್ಸಿಂಗ್ ಸಿಬ್ಬಂದಿಯೊಬ್ಬ (Nursing Staff) ಅತ್ಯಾಚಾರ (Physical assault) ನಡೆಸಿರುವ ಘಟನೆ ರಾಜಸ್ಥಾನದ (Rajasthan) ಅಲ್ವಾರ್ ನಲ್ಲಿರುವ ವೈದ್ಯಕೀಯ ಕಾಲೇಜಿನಲ್ಲಿ ಜೂನ್ 4ರಂದು ರಾತ್ರಿ ನಡೆದಿದೆ. ಮಹಿಳೆಯು ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಲು ಆಸ್ಪತ್ರೆಗೆ ದಾಖಲಾಗಿದ್ದರು.

Pralhad Joshi: ಕೇಂದ್ರದ ಪುರಸ್ಕಾರಗಳು ನೈಜ ಸಾಧಕರಿಗೆ ಸಲ್ಲುತ್ತಿವೆ: ಪ್ರಲ್ಹಾದ್‌ ಜೋಶಿ

ಕೇಂದ್ರದ ಪುರಸ್ಕಾರಗಳು ನೈಜ ಸಾಧಕರಿಗೆ ಸಲ್ಲುತ್ತಿವೆ: ಜೋಶಿ

ಸ್ಥಳೀಯ ಆಡಳಿತ, ಅಧಿಕಾರಿಗಳಿಗೇ ನೈಜ ಸಾಧಕರ ಬಗ್ಗೆ ಮಾಹಿತಿ ಇರುವುದಿಲ್ಲ. ಅಂಥ ಸಮಾಜ ಸೇವಕರನ್ನು, ಸಾಧಕರನ್ನು ಪ್ರಧಾನಿ ನರೇಂದ್ರ ಮೋದಿ ಗುರುತಿಸಿ ಪದ್ಮಶ್ರೀಯಂತಹ ಅತ್ಯುನ್ನತ ಪ್ರಶಸ್ತಿ ನೀಡಿ ಪುರಸ್ಕರಿಸುತ್ತಿದ್ದಾರೆ. ಈ ಮೂಲಕ ಅವರ ಸೇವಾ ಕೈಂಕರ್ಯಗಳಿಗೆ ಮತ್ತಷ್ಟು ಪ್ರೋತ್ಸಾಹ ನೀಡುತ್ತ ಬೆಂಬಲವಾಗಿ ನಿಂತಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದ್ದಾರೆ.

Stock Market: ಜಿಯೊ ಫೈನಾನ್ಷಿಯಲ್‌ ಸ್ಟಾಕ್‌ 1 ತಿಂಗಳಿನಲ್ಲಿ 18% ಹೈ ಜಂಪ್

ಜಿಯೊ ಫೈನಾನ್ಷಿಯಲ್‌ ಸ್ಟಾಕ್‌ 1 ತಿಂಗಳಿನಲ್ಲಿ 18% ಹೈ ಜಂಪ್!

Share Market: ಮುಕೇಶ್‌ ಅಂಬಾನಿ ನೇತೃತ್ವದ ಜಿಯೊ ಫೈನಾನ್ಷಿಯ್‌ ಸರ್ವೀಸ್‌ ಲಿಮಿಟೆಡ್‌ Jio Financial Services Ltd (JFSL) ಕಂಪನಿಯ ಷೇರಿನ ದರ ಕಳೆದ ಒಂದು ತಿಂಗಳಿನ ಅವಧಿಯಲ್ಲಿ 18% ಏರಿಕೆಯಾಗಿದೆ. ಈ ಕುರಿತ ಮಾಹಿತಿ ಇಲ್ಲಿದೆ.

Personal Loan: ಆಧಾರ್‌ ಕಾರ್ಡ್‌ ನೆರವಿನಿಂದ ಸುಲಭವಾಗಿ 10 ಸಾವಿರ ರೂ. ಸಾಲ ಪಡೆಯಬೇಕೆ? ಈ ಟಿಪ್ಸ್‌ ಫಾಲೋ ಮಾಡಿ

ಆಧಾರ್‌ ಕಾರ್ಡ್‌ ನೆರವಿನಿಂದ ಸುಲಭವಾಗಿ ಪಡೆಯಿರಿ 10 ಸಾವಿರ ರೂ. ಸಾಲ

ಸದ್ಯ ದುಬಾರಿ ಜೀವನ ವಿಧಾನಗಳಿಂದ ಸಾಮಾನ್ಯ ವರ್ಗದವರು ಸಾಲದ ಮೊರೆ ಹೋಗಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ಆದರೆ ಕೆಲವೊಮ್ಮೆ ಸುದೀರ್ಘ ಪ್ರಕ್ರಿಯೆಯಿಂದಾಗಿ ತ್ವರಿತವಾಗಿ ಸಾಲ ಮಂಜೂರಾಗುವುದಿಲ್ಲ. ಆದರೆ ಚಿಂತಿಸಬೇಕಾಗಿಲ್ಲ. ಆಧಾರ್‌ ಕಾರ್ಡ್‌ ಇದ್ದರೆ ಸಾಕು 10 ಸಾವಿರ ರೂ.ವರೆಗೆ ಸಣ್ಣ ಮೊತ್ತದ ಸಾಲ ಪಡೆಯಬಹುದು. ಅದು ಹೇಗೆ ಎನ್ನುವ ವಿವರಿಲ್ಲಿದೆ.

Emergency Landing: ಹೆದ್ದಾರಿ ಮಧ್ಯದಲ್ಲೇ ಹೆಲಿಕಾಪ್ಟರ್‌ ತುರ್ತು ಭೂಸ್ಪರ್ಶ; ಪೈಲಟ್‌, ಪ್ರಯಾಣಿಕರು ಪಾರು

ಹೆದ್ದಾರಿ ಮಧ್ಯದಲ್ಲೇ ಹೆಲಿಕಾಪ್ಟರ್‌ ತುರ್ತು ಭೂಸ್ಪರ್ಶ

ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯಲ್ಲಿ ಶನಿವಾರ ಖಾಸಗಿ ಹೆಲಿಕಾಪ್ಟರ್ ರಸ್ತೆಯ ಮಧ್ಯದಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್ ಆಗಿದ್ದು, ಅದೃಷ್ಟವಶಾತ್‌ ಯಾವುದೇ ಅನಾಹುತ ಸಂಭವಿಸಿಲ್ಲ. ಈ ವೇಳೆ ಹೆಲಿಕಾಪ್ಟರ್‌ನಲ್ಲಿ 5 ಮಂದಿ ಪ್ರಯಾಣಿಕರಿದ್ದರು. ಗಾಳಿಗೆರಗಿದ ಕೆಲವೇ ಕ್ಷಣಗಳಲ್ಲಿ ತಾಂತ್ರಿಕ ದೋಷ ಕಂಡು ಬಂದಿತ್ತು.

ಅತಿ ಹೆಚ್ಚು ಯುದ್ಧಗಳನ್ನು ಮಾಡಿರುವ ರಾಷ್ಟ್ರ ಯಾವುದು ಗೊತ್ತಾ? ಅಮೆರಿಕ, ರಷ್ಯಾ ಅಲ್ಲವೇ ಅಲ್ಲ

ಅತಿ ಹೆಚ್ಚು ಯುದ್ಧಗಳನ್ನು ಮಾಡಿರುವ ರಾಷ್ಟ್ರ ಯಾವುದು?

ಪ್ರಪಂಚದ ವಿವಿಧ ಭಾಗಗಳಲ್ಲಿಹಲವು ಯುದ್ಧಗಳು ನಡೆದು ಹೋಗಿವೆ. ಈಗಲೂ ನಡೆಯುತ್ತಿವೆ. ಇತಿಹಾಸ ಗಮನಿಸಿದರೆ ಅನಾದಿ ಕಾಲದಿಂದಲೂ ಯುದ್ಧದ ಪೃವೃತ್ತಿ ಇತ್ತು ಎನ್ನುವುದು ಗೋಚರಿಸುತ್ತದೆ. ಹಾಗಾದರೆ ಇದುವರೆಗೆ ಅತಿ ಹೇಚ್ಚು ಯುದ್ಧ ನಡೆಸಿದ ದೇಶ ಯಾವುದು ಎನ್ನುವ ಕುತೂಹಲ ಮೂಡುವುದು ಸಹಜ. ಇಲ್ಲಿದೆ ಉತ್ತರ.

Viral Video: ಸಿಕ್ಕಾಪಟ್ಟೆ ವೈರಲ್‌ ಆಯ್ತು ವಂದೇ ಭಾರತ್‍ ರೈಲುಗಳ ಈ ವಿಡಿಯೊ; ಅಂತಹದ್ದೇನಿದೆ ಇದರಲ್ಲಿ?

ಈ ವಂದೇ ಭಾರತ್‌ ರೈಲು ನೋಡಿ ನೆಟ್ಟಿಗರಿಗೆ ಫುಲ್‌ ಶಾಕ್‌

ರೈಲ್ವೆ ಜಂಕ್ಷನ್‌ನಲ್ಲಿ ಮೂರು ಹೈಸ್ಪೀಡ್ ವಂದೇ ಭಾರತ್‍ ರೈಲುಗಳು ಸರಾಗವಾಗಿ ಒಂದರ ನಂತರ ಒಂದು ದಾಟುತ್ತಿರುವುದನ್ನು ತೋರಿಸುವ ಅದ್ಭುತ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನು ನೋಡಿ ನೆಟ್ಟಿಗರು ಬೆಕ್ಕಸ ಬೆರಗಾಗಿದ್ದಾರೆ. ಆದರೆ ಇದು ನಿಜವಾದ ವಂದೇ ಭಾರತ್ ರೈಲುಗಳಲ್ಲ, ಬದಲಾಗಿ 3D ಅನಿಮೇಷನ್‍ನಿಂದ ರಚಿಸಿದ ವಿಡಿಯೊ ಎನ್ನಲಾಗಿದೆ.