ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದೇಶ

World Forest Day: ಇಂದು ವಿಶ್ವ ಅರಣ್ಯ ದಿನ; ಕಾಡು ಬೆಳೆಸಿ, ಭವಿಷ್ಯ ಉಳಿಸೋಣ

ಇಂದು ವಿಶ್ವ ಅರಣ್ಯ ದಿನ; ಏನಿದರ ಮಹತ್ವ?

ಅರಣ್ಯಗಳು ಪರಿಸರ ಸಮತೋಲನದ ಆಧಾರವಾಗಿದ್ದು, ಅವುಗಳ ನಾಶ ಹವಾಮಾನದ ಮೇಲೆ ಕೆಟ್ಟ ಪರಿಣಾಮ ಬೀಳುತ್ತಿದೆ. ಅಲ್ಲದೆ ಇದರಿಂದ ಜೀವರಾಶಿಗಳಿಗೂ ಅಪಾಯ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಸಂರಕ್ಷಣೆಯ ಮಹತ್ವವನ್ನು ತಿಳಿಸಲು ಮಾರ್ಚ್ 21ರಂದು ವಿಶ್ವ ಅರಣ್ಯ ದಿನ ಆಚರಿಸಲಾಗುತ್ತದೆ. ಹಾಗಾದರೆ ಈ ಅರಣ್ಯ ದಿನ ಶುರುವಾಗಿದ್ದು ಹೇಗೆ? ಯಾಕೆ ಆಚರಿಸುತ್ತಾರೆ? ಇಲ್ಲಿದೆ ಮಾಹಿತಿ.

Road Accident: ಬ್ರೇಕ್‌ ಫೇಲ್‌, ಬೈಕ್-‌ ಪಿಕಪ್‌ಗೆ ಡಿಕ್ಕಿ ಹೊಡೆದ ಸರ್ಕಾರಿ ಬಸ್:‌ ಎಂಟು ಮಂದಿ ದುರ್ಮರಣ

ಬೈಕ್-‌ ಪಿಕಪ್‌ಗೆ ಡಿಕ್ಕಿ ಹೊಡೆದ ಸರ್ಕಾರಿ ಬಸ್:‌ ಎಂಟು ಮಂದಿ ದುರ್ಮರಣ

30ಕ್ಕೂ ಹೆಚ್ಚು ಜನರಿದ್ದ ತಮಿಳುನಾಡು ಸರ್ಕಾರಿ ಬಸ್ ಈರೋಡ್‌ನಿಂದ ಸೇಲಂಗೆ ಹೋಗುತ್ತಿತ್ತು. ಈ ವೇಳೆ ಉತ್ತಮಸೋಲಪುರಂ ಬಳಿ ಬಸ್‌ನ ಬ್ರೇಕ್ ಫೇಲ್ ಆಗಿ, ನಿಯಂತ್ರಣ ತಪ್ಪಿದೆ. ಪರಿಣಾಮ ಬಸ್ ಬೈಕ್ ಹಾಗೂ ಪಿಕಪ್ ವ್ಯಾನ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ನಾಲ್ವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಇರಾನ್ ದಾಳಿಯಿಂದ ಕತಾರ್ ಎಲ್‌ಎನ್‌ಜಿ ರಫ್ತಿಗೆ ಅಡ್ಡಿ: ಭಾರತ ಸೇರಿ ಹಲವು ರಾಷ್ಟ್ರಗಳ ಕಾಡಲಿದ್ಯಾ  ಇಂಧನ ಕೊರತೆ? ಇಂಧನ ಕೊರತೆ?

ಇರಾನ್ ದಾಳಿ; ಭಾರತಕ್ಕೆ ಇಂಧನ ಕೊರತೆ ಭೀತಿ

ಇರಾನ್ ಕ್ಷಿಪಣಿ ದಾಳಿಯಿಂದ ಕತಾರ್‌ನ ರಾಸ್ ಲಫ್ಫಾನ್ LNG ಘಟಕಗಳಿಗೆ ಭಾರಿ ಹಾನಿಯಾಗಿದ್ದು, ಅನಿಲ ರಫ್ತು ವ್ಯತ್ಯಯ ಉಂಟಾಗಿದೆ. ಇದರ ಪರಿಣಾಮ ಭಾರತ ಸೇರಿದಂತೆ ಏಷ್ಯಾ ಮತ್ತು ಯುರೋಪ್ ದೇಶಗಳಲ್ಲಿ ಇಂಧನ ಸಂಕಷ್ಟ ಭೀತಿ ಹೆಚ್ಚಿದೆ.

ಎಟಿಎಂನಲ್ಲಿ ಹಣ ಬಾರದೇ ಇರುವುದಕ್ಕೆ ಸಿಕ್ಕಿತು  3.28 ಲಕ್ಷ ರೂ. ಪರಿಹಾರ

ಬ್ಯಾಂಕ್ ಆಫ್ ಬರೋಡಾ ವಿರುದ್ಧ ಹೋರಾಟಕ್ಕೆ ಸಿಕ್ಕಿತು ಗೆಲುವು

ಎಟಿಎಂನಿಂದ ಹಣ ಪಡೆಯಲು ಹೋದವನಿಗೆ ಹಣ ಸಿಗಲಿಲ್ಲ. ಬ್ಯಾಂಕ್ ಖಾತೆಯಿಂದ ಹಣ ಕಡಿತಗೊಂಡಿತ್ತು. ಈ ಬಗ್ಗೆ ದೂರು ಸಲ್ಲಿಸಿದ ಸೂರತ್‌ನ ಜಿಲ್ಲಾ ಗ್ರಾಹಕ ವಿವಾದ ಪರಿಹಾರ ಆಯೋಗವು ಒಂಬತ್ತು ವರ್ಷಗಳ ಬಳಿಕ ಗ್ರಾಹಕನಿಗೆ 3.28 ಲಕ್ಷ ರೂ. ಪರಿಹಾರವನ್ನು ಪಾವತಿಸುವಂತೆ ಸಾರ್ವಜನಿಕ ವಲಯದ ಬ್ಯಾಂಕಿಗೆ ಆದೇಶಿಸಿದೆ.

ತೈಲ ಬಿಕ್ಕಟ್ಟಿನ ನಡುವೆ ಮತ್ತೊಂದು ಬರೆ; ಪ್ರತಿ ಆರ್ಡರ್‌ಗೆ 2.40 ರುಪಾಯಿ ಹೆಚ್ಚಿಸಿದ ಝೊಮೆಟೊ

ಝೊಮೆಟೊದಲ್ಲಿ ಪ್ರತಿ ಆರ್ಡರ್‌ಗೆ 2.40 ರುಪಾಯಿ ಹೆಚ್ಚಳ

Zomato hikes prices: ಆಹಾರ ವಿತರಣಾ ಸಂಸ್ಥೆ ಝೊಮೆಟೊ ಬಳಕೆದಾರರಿಗೆ ವಿಧಿಸುವ ಪ್ಲಾಟ್‌ಫಾರ್ಮ್ ಶುಲ್ಕವನ್ನು ಪ್ರತಿ ಆರ್ಡರ್‌ಗೆ 2.40 ರುಪಾಯಿಯಿಂದ 14.90 ರುಪಾಯಿಗೆ ಹೆಚ್ಚಿಸಿದೆ. ಇದರ ಪ್ರತಿಸ್ಪರ್ಧಿ ಸ್ವಿಗ್ಗಿ ತನ್ನ ಬಳಕೆದಾರರಿಂದ ಜಿಎಸ್‌ಟಿ ಸೇರಿದಂತೆ 14.99 ರುಪಾಯಿ ಆನ್‌ಲೈನ್‌ ಪ್ಲಾಟ್‌ಫಾರ್ಮ್‌ಗೆ ವಿಧಿಸುತ್ತಿದೆ. ಮೂರನೇ ಅತಿದೊಡ್ಡ ಆಹಾರ ವಿತರಣೆ ಸಂಸ್ಥೆಯಾಗಿರುವ ಮ್ಯಾಜಿಕ್‌ಪಿನ್ ಮಾತ್ರ ಸದ್ಯ ಶುಲ್ಕ ಹೆಚ್ಚಿಸಲ್ಲ ಎಂದು ಹೇಳಿದೆ.

ಅತ್ಯಾಚಾರ ಆರೋಪಿ ಜ್ಯೋತಿಷಿಯೊಂದಿಗೆ ಕಾಣಿಸಿಕೊಂಡ ಮಹಾರಾಷ್ಟ್ರದ ಮಹಿಳಾ ಅಧಿಕಾರಿ; ಫೋಟೊ ವೈರಲ್

ಅತ್ಯಾಚಾರ ಆರೋಪಿಯ ಜತೆ ಮಹಿಳಾ ಆಯೋಗದ ಅಧ್ಯಕ್ಷೆ; ಫೋಟೊ ವೈರಲ್

ಅತ್ಯಾಚಾರ ಆರೋಪಿಯೊಂದಿಗೆ ಕಾಣಿಸಿಕೊಂಡ ಫೋಟೊ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಮಹಿಳಾ ಆಯೋಗದ ಅಧ್ಯಕ್ಷೆ ರೂಪಾಲಿ ಚಕಂಕರ್ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ರಾಜೀನಾಮೆಗೆ ಒತ್ತಾಯ ಕೇಳಿಬಂದಿದೆ. ಅಶೋಕ್ ಖರತ್ ಜತೆಗಿರುವ ಫೋಟೊ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಭಾರಿ ವಿವಾದಕ್ಕೆ ಕಾರಣವಾಗಿದೆ.

ನೀರು ಹರಿಸುವ ಮಾತೇ ಇಲ್ಲ: ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಗುಡುಗು

ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ವಿರುದ್ಧ ಹರಿಹಾಯ್ದ ಭಾರತ

Zero water, zero talks: ಭಾರತವು ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ವಿರುದ್ಧ ಮತ್ತೊಮ್ಮೆ ಗುಡುಗಿದೆ. ಪಾಕಿಸ್ತಾನವು ಭಾರತದ ವಿರುದ್ಧದ ಭಯೋತ್ಪಾದನೆಗೆ ಬೆಂಬಲವನ್ನು ಸಂಪೂರ್ಣವಾಗಿ ನಿಲ್ಲಿಸುವವರೆಗೆ ಶೂನ್ಯ ನೀರು, ಶೂನ್ಯ ಮಾತುಕತೆ ಎಂದು ಹರೀಶ್ ಪರ್ವತನೇನಿ ಖಡಕ್ ಆಗಿ ತಿಳಿಸಿದ್ದಾರೆ. ಪಾಕಿಸ್ತಾನವು ಒಪ್ಪಂದಗಳಿಗಿಂತ ಮಾನವ ಜೀವನವನ್ನು ಆಯ್ಕೆ ಮಾಡಬೇಕು ಎಂದು ಅವರು ಹೇಳಿದ್ದಾರೆ.

ಅಮೆರಿಕ ಇರಾನ್ ಸಂಘರ್ಷ: ರಿಯಾದ್‌ನಲ್ಲಿ ಮತ್ತೊಬ್ಬ ಭಾರತೀಯ ಬಲಿ

ರಿಯಾದ್‌ನಲ್ಲಿ ಮತ್ತೊಬ್ಬ ಭಾರತೀಯ ಬಲಿ

ಅಮೆರಿಕ ಮತ್ತು ಇರಾನ್ ಸಂಘರ್ಷಕ್ಕೆ ಸೌದಿ ಅರೇಬಿಯಾದ ರಿಯಾದ್‌ನಲ್ಲಿ ಭಾರತೀಯನೊಬ್ಬ ಬಲಿಯಾಗಿದ್ದಾನೆ. ಮಾರ್ಚ್ 18ರಂದು ಭಾರತೀಯ ಪ್ರಜೆ ಸಾವನ್ನಪ್ಪಿದ್ದು, ಈ ಮೂಲಕ ರಿಯಾದ್‌ನಲ್ಲಿ ಸಾವಿನ ಸಂಖ್ಯೆ 6ಕ್ಕೇರಿದೆ. ಎಂಟಿ ಸೇಫ್‌ಸೀ ವಿಷ್ಣು ತೈಲ ಟ್ಯಾಂಕರ್‌ನಿಂದ ರಕ್ಷಿಸಲ್ಪಟ್ಟ ೧೫ ಭಾರತೀಯ ಸಿಬ್ಬಂದಿ ಮಾರ್ಚ್ 20 ರಂದು ತವರಿಗೆ ಮರಳುವ ನಿರೀಕ್ಷೆಯಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಕಾಲು ನೋವಿನಿಂದ ಬಳಲುತ್ತಿದ್ದ ಶ್ವಾನಕ್ಕೆ ರಸ್ತೆ ದಾಟಲು ನೆರವಾದ ಬಾಲಕ; ವಿಡಿಯೊ ನೋಡಿ

ಶ್ವಾನಕ್ಕೆ ರಸ್ತೆ ದಾಟಲು ನೆರವಾದ ಬಾಲಕ: ವಿಡಿಯೊ ವೈರಲ್

Viral Video: ಕೇರಳಂನಲ್ಲಿ ಬಾಲಕನು ಕಾಲು ನೋವಿನಿಂದ ಬಳಲುತ್ತಿದ್ದ ಶ್ವಾನವನ್ನು ರಸ್ತೆ ದಾಟಿಸಿದ್ದು, ‍ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿದೆ. ರಸ್ತೆಯೂ ಜನದಟ್ಟಣೆಯಿಂದ ಕೂಡಿದ್ದು, ಅಪಾಯಕಾರಿಯಾಗಿದ್ದರೂ, ಬಾಲಕ ಇತರ ವಾಹನಗಳನ್ನು ನಿಯಂತ್ರಿಸಿ ನಾಯಿ ಸುರಕ್ಷಿತವಾಗಿ ದಾಟಿಸಿದ್ದಾನೆ. ಸದ್ಯ ಈ ಘಟನೆಯ ವಿಡಿಯೊ ವೈರಲ್‌ ಆಗಿದೆ.

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಬಗ್ಗೆ ಭಾರತದ ನಿಲುವನ್ನು ಶ್ಲಾಘಿಸಿದ ಶಶಿ ತರೂರ್ ಹೇಳಿಕೆಗೆ ಬಿಜೆಪಿ ಪ್ರಶಂಸೆ; ಕಾಂಗ್ರೆಸ್ ವಿರುದ್ಧ ವಾಗ್ದಾಳಿ

ಶಶಿ ತರೂರ್ ಹೇಳಿಕೆಗೆ ಬಿಜೆಪಿ ಪ್ರಶಂಸೆ; ಕಾಂಗ್ರೆಸ್ ವಿರುದ್ಧ ವಾಗ್ದಾಳಿ

BJP slams Congress: ಪಶ್ಚಿಮ ಏಷ್ಯಾ ಬಿಕ್ಕಟ್ಟಿಗೆ ಭಾರತದ ಪ್ರತಿಕ್ರಿಯೆಯನ್ನು ಜವಾಬ್ದಾರಿಯುತ ರಾಜತಾಂತ್ರಿಕತೆಯ ಉದಾಹರಣೆ ಎಂದು ಕಾಂಗ್ರೆಸ್‌ ನಾಯಕ ಶಶಿ ತರೂರ್ ಬಣ್ಣಿಸಿದ್ದಾರೆ. ಸಂಯಮ ಎಂದರೆ ಶರಣಾಗತಿಯಲ್ಲ. ಸಂಯಮವೇ ಶಕ್ತಿ ಎಂದು ಹೇಳಿದ್ದಾರೆ. ತರೂರ್ ಅವರ ಹೇಳಿಕೆಯನ್ನು ಇದೀಗ ಬಿಜೆಪಿ ಪ್ರಶಂಸಿಸಿದ್ದು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ.

ಸೇನಾ ಚಲನವಲನ ಪತ್ತೆಹಚ್ಚಲು ಸಿಸಿಟಿವಿ ಕ್ಯಾಮರಾ ಅಳವಡಿಕೆ: ಪಾಕಿಸ್ತಾನದ ಐಎಸ್ಐ ಜತೆ ಸಂಪರ್ಕ ಹೊಂದಿದ್ದ ಜಾಲ ಪತ್ತೆ

ಪಾಕಿಸ್ತಾನದ ಐಎಸ್ಐ ಜತೆ ಸಂಪರ್ಕ ಹೊಂದಿದ್ದ ಜಾಲ ಪತ್ತೆ

ISI spy network: ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಜತೆ ಸಂಪರ್ಕ ಹೊಂದಿರುವ ಬೇಹುಗಾರಿಕೆ ಜಾಲದೊಂದಿಗೆ ಸಂಬಂಧ ಹೊಂದಿದ್ದಾರೆ ಎಂಬ ಆರೋಪದ ಮೇಲೆ ಉತ್ತರ ಪ್ರದೇಶದ ಗಾಜಿಯಾಬಾದ್ ಪೊಲೀಸರು ಮಾರ್ಚ್ 14ರಂದು ಆರು ವ್ಯಕ್ತಿಗಳನ್ನು ಬಂಧಿಸಿದ್ದಾರೆ. ಗಾಜಿಯಾಬಾದ್ ಪೊಲೀಸರು ಈ ಜಾಲದ ಮಾಸ್ಟರ್ ಮೈಂಡ್ ಸೊಹೈಲ್ ಮಲಿಕ್‌ನನ್ನು ವಶಕ್ಕೆ ಪಡೆದಿದ್ದಾರೆ.

ದೇಶಕ್ಕೆ ತೈಲ ಬಿಕ್ಕಟ್ಟು ತಟ್ಟಿದರೂ ಕೇರಳದ ಈ ಕುಟುಂಬ ನಿರಾಳ: ನೀರಿಗಾಗಿ ಕೊರೆದ ಬಾವಿಯಲ್ಲಿ ಅಡುಗೆ ಅನಿಲ ಪತ್ತೆ

ಕುಡಿಯುವ ನೀರಿಗಾಗಿ ಅಗೆದ ಬಾವಿಯಲ್ಲಿ ಅಡುಗೆ ಅನಿಲ ಪತ್ತೆ

Viral News: ಕೇರಳದ ಕುಟುಂಬವೊಂದಕ್ಕೆ ಕೊಳವೆಬಾವಿಯಿಂದಾಗಿ ಉಚಿತವಾಗಿ ಅಡುಗೆ ಅನಿಲ ದೊರೆಯುತ್ತಿದೆ. ಹೌದು, ಕುಡಿಯುವ ನೀರಿಗಾಗಿ ಹಣ ವ್ಯಯಿಸಿ ತೋಡಿದ ಬಾವಿಯಲ್ಲಿ ಮಿಥೇನ್‌ ಪತ್ತೆಯಾಗಿದ್ದು, ಅಡುಗೆ ಅನಿಲದ ಸಮಸ್ಯೆ ನೀಗಿದೆ. ಇದರಿಂದ ಆರ್ಥಿಕವಾಗಿ ಸಾಕಷ್ಟು ಉಳಿತಾಯವಾಗುತ್ತಿದೆ.

ವಿಶ್ವದ ಯುದ್ಧಗಳನ್ನು ಕೊನೆಗಾಣಿಸುವ ಶಕ್ತಿ ಭಾರತಕ್ಕಿದೆ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್

ಭಾರತ ಮಾತ್ರ ಜಾಗತಿಕ ಸಂಘರ್ಷ ತಣ್ಣಗಾಗಿಸಬಲ್ಲದು: ಮೋಹನ್ ಭಾಗವತ್

ನಾಗಪುರದಲ್ಲಿ ಮಾತನಾಡಿದ ಮೋಹನ್ ಭಾಗವತ್ ಅವರು, ಇಸ್ರೇಲ್–ಇರಾನ್ ಸಂಘರ್ಷ ಸೇರಿದಂತೆ ಜಾಗತಿಕ ಉದ್ವಿಗ್ನತೆಯನ್ನು ಶಮನಗೊಳಿಸಲು ಭಾರತಕ್ಕೇ ವಿಶಿಷ್ಟ ಸಾಮರ್ಥ್ಯವಿದೆ ಎಂದು ಹೇಳಿದ್ದಾರೆ. ಧರ್ಮ, ಏಕತೆ ಮತ್ತು ಮಾನವೀಯ ಮೌಲ್ಯಗಳ ಮೂಲಕ ಜಗತ್ತಿಗೆ ಶಾಂತಿಯ ದಾರಿ ತೋರಿಸುವ ಹೊಣೆ ಭಾರತಕ್ಕಿದೆ ಎಂಬುದನ್ನು ಅವರು ಒತ್ತಿಹೇಳಿದರು.

ಇರಾನ್ ಯುದ್ಧ ಎಫೆಕ್ಟ್: 11 ವಾಯುಪ್ರದೇಶ ತಪ್ಪಿಸಲು ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ಕೇಂದ್ರದ ಸೂಚನೆ

11 ವಾಯುಪ್ರದೇಶಕ್ಕಿಲ್ಲ ಭಾರತದ ವಿಮಾನ ಎಂಟ್ರಿ

ಇಸ್ರೇಲ್ ಮತ್ತು ಯುಎಸ್ ಸೇನಾ ಪಡೆ ಮತ್ತು ಇರಾನ್ ನಡುವಿನ ಸಂಘರ್ಷ ತೀವ್ರಗೊಂಡಿರುವುದರಿಂದ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಭಾರತದ ವಿಮಾನಯಾನ ಸಂಸ್ಥೆಗಳು ಇರಾನ್, ಇಸ್ರೇಲ್, ಲೆಬನಾನ್ ಸೇರಿದಂತೆ ಹೆಚ್ಚಿನ ಅಪಾಯ ವಲಯಗಳಾದ 11 ವಾಯುಪ್ರದೇಶಗಳನ್ನು ಬಿಟ್ಟು ಪ್ರಯಾಣಿಸಲು ಕೇಂದ್ರ ಸರ್ಕಾರ ಸೂಚನೆ ನೀಡಿದೆ.

ಜಾಗತಿಕ ತೈಲ ಬಿಕ್ಕಟ್ಟು; ಪ್ರೀಮಿಯಂ ಪೆಟ್ರೋಲ್ ಬೆಲೆ ಲೀಟರ್‌ಗೆ 2.30 ರೂ. ಹೆಚ್ಚಳ

ಪ್ರೀಮಿಯಂ ಪೆಟ್ರೋಲ್ ಬೆಲೆ ಲೀಟರ್‌ಗೆ 2.30 ರೂ. ಹೆಚ್ಚಳ

Fuel Price Hike: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಜಾಗತಿಕ ಇಂಧನ ಮಾರುಕಟ್ಟೆಗಳ ಮೇಲೆ ಪರಿಣಾಮ ಬೀರಿದೆ. ತೈಲ ಮಾರುಕಟ್ಟೆ ಕಂಪನಿಗಳು ಪ್ರೀಮಿಯಂ ಪೆಟ್ರೋಲ್ ಬೆಲೆಯನ್ನು ಲೀಟರ್‌ಗೆ 2 ರೂ.ಗಳಿಂದ 2.3 ರೂ.ಗಳವರೆಗೆ ಹೆಚ್ಚಿಸಿವೆ. ಹೊಸ ಬೆಲೆಗಳು ಮಾರ್ಚ್ 20, 2026 ರಿಂದ ಜಾರಿಗೆ ಬಂದವೆ.

ಮಗನ ವಿರುದ್ಧವೇ ಸಾಕ್ಷಿ ಹೇಳಿದ ತಾಯಿ; ತಂದೆಯನ್ನು ಕೊಂದ ಮಗನಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್

ತಂದೆಯನ್ನು ಕೊಂದ ಪುತ್ರನಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್

Crime News: ಕೊಲೆ ಪ್ರಕರಣವೊಂದರಲ್ಲಿ ತಾಯಿಯ ಸಾಕ್ಷ್ಯವೇ ತನ್ನ ಮಗನಿಗೆ ಜೀವಾವಧಿ ಶಿಕ್ಷೆ ವಿಧಿಸಲು ಕಾರಣವಾಗಿರುವ ಘಟನೆ ನಡೆದಿದೆ. ಕಳೆದ ವರ್ಷ ಏಪ್ರಿಲ್ 11 ರಂದು 10 ಬಿಘಾ (ಸುಮಾರು 60 ಎಕರೆ) ಜಮೀನಿಗಾಗಿ ನಡೆದ ಜಗಳದಲ್ಲಿ ಛತ್ರಪಾಲ್ ಎಂಬ ಆರೋಪಿ ತನ್ನ ತಂದೆಯ ಮೇಲೆ ಕುಡುಗೋಲಿನಿಂದ ಹಲ್ಲೆ ಮಾಡಿದ್ದ. ದುರದೃಷ್ಟವಶಾತ್, ಸಮೀಪದ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದರು.

ಪ್ರೀತಿಯಿಂದ ಸಾಕಿದ್ದ ಬೆಕ್ಕು ಸಾವು; ದುಃಖ ತಡೆಯಲಾರದೆ  20 ವರ್ಷದ ವಿದ್ಯಾರ್ಥಿನಿ ಆತ್ಮಹತ್ಯೆ

ಸಾಕು ಬೆಕ್ಕಿನ ಸಾವಿನಿಂದ ದುಃಖಿತಳಾದ ಯುವತಿ ಆತ್ಮಹತ್ಯೆ

Crime News: 20 ವರ್ಷದ ಬಿಎಸ್ಸಿ ವಿದ್ಯಾರ್ಥಿನಿಯೊಬ್ಬಳು ತನ್ನ ಸಾಕು ಬೆಕ್ಕಿನ ಸಾವನ್ನು ಸಹಿಸಲು ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಹಿಮಬಿಂದು ಎಂದು ಗುರುತಿಸಲಾದ ವಿದ್ಯಾರ್ಥಿನಿ ಕಳೆದ ಎರಡು ವರ್ಷಗಳಿಂದ ಬೆಕ್ಕನ್ನು ಬಹಳ ಪ್ರೀತಿಯಿಂದ ಸಾಕುತ್ತಿದ್ದಳು. ಆ ಸಾಕು ಬೆಕ್ಕು ಇತ್ತೀಚೆಗೆ ಸತ್ತುಹೋಯಿತು.

ಭಾರತ, ಪಾಕಿಸ್ತಾನ, ಅಫ್ಘಾನಿಸ್ತಾನದಲ್ಲಿ ಭಾರೀ ಮಳೆ ಮುನ್ಸೂಚನೆ; ಗಂಟೆಗೆ 40-80 KM ಬಿರುಗಾಳಿ ಎಚ್ಚರಿಕೆ

ಭಾರತ, ಪಾಕಿಸ್ತಾನ, ಅಫ್ಘಾನಿಸ್ತಾನದಲ್ಲಿ ಭಾರೀ ಮಳೆ ಮುನ್ಸೂಚನೆ

Rain Alert: ಭಾರತ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ತೀವ್ರವಾದ ಮಳೆ, ಗುಡುಗು ಸಹಿತ ಮಳೆ, ಬಿರುಗಾಳಿ ಮತ್ತು ಆಲಿಕಲ್ಲು ಮಳೆಯಾಗಲಿದೆ ಎಂದು ಎಚ್ಚರಿಕೆ ನೀಡಲಾಗಿದೆ. ಉತ್ತರ ಪ್ರದೇಶದ ಪಶ್ಚಿಮ ಮತ್ತು ಪೂರ್ವ ಭಾಗಗಳಲ್ಲಿ ಹವಾಮಾನವು ವ್ಯಾಪಕವಾಗಿ ಪರಿಣಾಮ ಬೀರಲಿದೆ.

Physical Abuse: 58 ಮಹಿಳೆಯರಿಗೆ 3 ವರ್ಷ ಅತ್ಯಾಚಾರ, ರಹಸ್ಯ ಕ್ಯಾಮೆರಾ ಇಟ್ಟು ಬ್ಲ್ಯಾಕ್‌ಮೇಲ್:‌ ಜ್ಯೋತಿಷಿಯ ಸೆರೆ

58 ಮಹಿಳೆಯರಿಗೆ ಅತ್ಯಾಚಾರ, ಬ್ಲ್ಯಾಕ್‌ಮೇಲ್:‌ ಸೆಲೆಬ್ರಿಟಿ ಜ್ಯೋತಿಷಿ ಸೆರೆ

ನಿವೃತ್ತ ಮರ್ಚೆಂಟ್ ನೇವಿ ಅಧಿಕಾರಿಯೆಂದು ಹೇಳಿಕೊಳ್ಳುವ ಖರತ್, ಕೌಟುಂಬಿಕ ಸಮಸ್ಯೆಗಳ ಪರಿಹಾರಕ್ಕಾಗಿ ಬರುವ ಮಹಿಳೆಯರಿಗೆ ಅಮಲು ಪದಾರ್ಥ ನೀಡಿ ಸಮ್ಮೋಹನಗೊಳಿಸುತ್ತಿದ್ದ. ಬಳಿಕ ಮಾಟಮಂತ್ರದ ಭಯ ಹುಟ್ಟಿಸಿ ಅಥವಾ ಪತಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿ ಮಹಿಳೆಯರ ಮೇಲೆ ಅತ್ಯಾಚಾರ ಎಸಗುತ್ತಿದ್ದ ಎಂದು ಪೊಲೀಸರ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಮಧ್ಯಪ್ರಾಚ್ಯ ಸಂಘರ್ಷ: ಕೇಂದ್ರ ಸರ್ಕಾರವನ್ನು ಬೆಂಬಲಿಸಿದ ಕಾಂಗ್ರೆಸ್ ಸಂಸದ ಮನೀಶ್ ತಿವಾರಿ

ಮಧ್ಯಪ್ರಾಚ್ಯ ಸಂಘರ್ಷ: ಭಾರತದ ನಿಲುವಿಗೆ ಮನೀಶ್ ತಿವಾರಿ ಶ್ಲಾಘನೆ

Middle East conflict: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದ ಬಗ್ಗೆ ಭಾರತ ಹೊಂದಿರುವ ನಿಲುವನ್ನು ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಬೆಂಬಲಿಸಿದರು. ಪಶ್ಚಿಮ ಏಷ್ಯಾದಲ್ಲಿ ಒಂದೇ ಯುದ್ಧವಲ್ಲ, ಹಲವು ಸಂಘರ್ಷಗಳು ಒಂದೇ ಸಮಯದಲ್ಲಿ ನಡೆಯುತ್ತಿವೆ. ಭಾರತ ಸರಿಯಾದ ಕ್ರಮವನ್ನೇ ಅನುಸರಿಸುತ್ತಿದೆ ಎಂದು ಅವರು ಹೇಳಿದ್ದಾರೆ.

ಚೀನಾಗೆ ತೆರಳಬೇಕಿದ್ದ ಹಡಗು ಯೂ ಟರ್ನ್: ಮಾರ್ಚ್‌ 21ರಂದು ಭಾರತಕ್ಕೆ ಬರಲಿದೆ 7.7 ಲಕ್ಷ ಬ್ಯಾರೆಲ್ ತೈಲ ಹೊತ್ತ ರಷ್ಯಾದ ಟ್ಯಾಂಕರ್

ಭಾರತಕ್ಕೆ ಬರಲಿದೆ 7.7 ಲಕ್ಷ ಬ್ಯಾರೆಲ್ ತೈಲ ಹೊತ್ತ ರಷ್ಯಾದ ಟ್ಯಾಂಕರ್

Russian oil tanker: ಚೀನಾಕ್ಕೆ ತೆರಳಬೇಕಾಗಿದ್ದ, 7.7 ಲಕ್ಷ ಬ್ಯಾರೆಲ್ ಕಚ್ಚಾ ತೈಲವನ್ನು ಹೊತ್ತೊಯ್ಯುತ್ತಿದ್ದ ರಷ್ಯಾದ ಟ್ಯಾಂಕರ್ ಹಡಗು ದಕ್ಷಿಣ ಚೀನಾ ಸಮುದ್ರದಲ್ಲಿ ಯೂ ಟರ್ನ್ ತೆಗೆದುಕೊಂಡು ಇದೀಗ ಭಾರತದತ್ತ ಬರುತ್ತಿದೆ. ಫೆಬ್ರವರಿ 28ರಂದು ಯುದ್ಧ ಪ್ರಾರಂಭವಾದ ಸುಮಾರು ಮೂರು ವಾರಗಳಲ್ಲಿ, ತೈಲ ಮತ್ತು ಅನಿಲ ದಾಸ್ತಾನುಗಳನ್ನು ಹೇರಿಕೊಂಡ, ಭಾರತೀಯ ಧ್ವಜ ಹೊತ್ತ ನಾಲ್ಕು ಹಡಗುಗಳು ಈಗಾಗಲೇ ಭಾರತಕ್ಕೆ ಬಂದಿವೆ.

ಒಮಾನ್‌ ಸುಲ್ತಾನ, ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ ಜತೆ ಪ್ರಧಾನಿ ಮೋದಿ ಮಾತುಕತೆ: ಮಧ್ಯಪ್ರಾಚ್ಯ ಯುದ್ಧ, ಹೊರ್ಮುಜ್ ಜಲಸಂಧಿ ಬಿಕ್ಕಟ್ಟಿನ ಬಗ್ಗೆ ಚರ್ಚೆ

ಒಮಾನ್‌ನ ಸುಲ್ತಾನ, ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ ಜತೆ ಮೋದಿ ಮಾತುಕತೆ

PM Narendra Modi: ಪ್ರಧಾನ ಮಂತ್ರಿ ನರೇಂದ್ರ ಮೋದಿ ಗುರುವಾರ (ಮಾರ್ಚ್‌ 19) ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ಒಮಾನ್‌ನ ಸುಲ್ತಾನ್ ಹೈತಮ್ ಬಿನ್ ತಾರಿಕ್ ಮತ್ತು ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಸೇರಿ ಜಾಗತಿಕ ನಾಯಕರೊಂದಿಗೆ ಉನ್ನತ ಮಟ್ಟದ ಮಾತುಕತೆ ನಡೆಸಿದರು. ಒಮಾನ್ ಜನರಿಗೆ ಮುಂಚಿತವಾಗಿ ಈದ್ ಶುಭಾಶಯಗಳನ್ನು ಕೋರಿದರು.

ನವೀಕರಿಸಬಹುದಾದ ಇಂಧನದಲ್ಲಿ ಭಾರತ 3ನೇ ಅತಿದೊಡ್ಡ ರಾಷ್ಟ್ರ: ಪ್ರಲ್ಹಾದ್‌ ಜೋಶಿ

ನವೀಕರಿಸಬಹುದಾದ ಇಂಧನದಲ್ಲಿ ಭಾರತ 3ನೇ ಅತಿದೊಡ್ಡ ರಾಷ್ಟ್ರ: ಜೋಶಿ

Pralhad Joshi: ಭಾರತದಲ್ಲಿ ನವೀಕರಿಸಬಹುದಾದ ಇಂಧನ ವಲಯ ಪರ್ಯಾಯ ಇಂಧನ ಉತ್ಪಾದನಾ ಕೇಂದ್ರವಾಗಿ ರೂಪಿತವಾಗುತ್ತಿದೆ. ದಶಕದ ಹಿಂದೆ ದೂರದ ಬೆಟ್ಟದಂತಿದ್ದ ನವೀಕರಿಸಬಹುದಾದ ಇಂಧನ ಪ್ರಯಾಣ ವಾಸ್ತವದಲ್ಲಿ ಸಾಧನೆಯ ಪಥದಲ್ಲಿದೆ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್‌ ಜೋಶಿ ಸಂತಸ ವ್ಯಕ್ತಪಡಿಸಿದ್ದಾರೆ.

ರಾಹುಲ್ ಗಾಂಧಿಯನ್ನು ಟಪೋರಿ ಎಂದು ಕರೆದ ಬಿಜೆಪಿ ಸಂಸದೆ ಕಂಗನಾ ರಣಾವತ್

ರಾಹುಲ್ ಗಾಂಧಿಯ ನಡವಳಿಕೆಯನ್ನು ಟೀಕಿಸಿದ ಕಂಗನಾ ರಣಾವತ್

Kangana Ranaut criticises Rahul’s Behaviour: ಕಾಂಗ್ರೆಸ್‌ ಸಂಸದ ರಾಹುಲ್ ಗಾಂಧಿ ಸಂಸದೆಯರಿಗೆ ಮುಜುಗರವಾಗುವ ರೀತಿಯಲ್ಲಿ ವರ್ತಿಸುತ್ತಾರೆ ಎಂದು ಬಿಜೆಪಿ ಸಂಸದೆ ಮತ್ತು ನಟಿ ಕಂಗನಾ ರಣಾವತ್ ಕಟುವಾಗಿ ಟೀಕಿಸಿದ್ದಾರೆ. ರಾಹುಲ್ ಗಾಂಧಿ ಟಪೋರಿಯಂತೆ ಕಾಣಿಸುತ್ತಾರೆ ಎಂದು ಹೇಳುವ ಮೂಲಕ ಹೊಸ ರಾಜಕೀಯ ವಿವಾದ ಹುಟ್ಟುಹಾಕಿದ್ದಾರೆ.

Loading...