ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ದೇಶ

ಅಯೋಧ್ಯೆ ರಾಮ ಮಂದಿರ ಪ್ರಾಣ ಪ್ರತಿಷ್ಠೆಯ ದ್ವಿತೀಯ ವಾರ್ಷಿಕೋತ್ಸವಕ್ಕೆ ಮುಹೂರ್ತ ಫಿಕ್ಸ್‌; ಈ ವರ್ಷವೇ ನಡೆಯಲಿದೆ ಐತಿಹಾಸಿಕ ಆಚರಣೆ

ರಾಮ ಮಂದಿರದ ದ್ವಿತೀಯ ವಾರ್ಷಿಕೋತ್ಸವಕ್ಕೆ ದಿನ ನಿಗದಿ

Ram Mandir 2nd Anniversary: ಅಯೋಧ್ಯೆ ರಾಮ ಮಂದಿರದಲ್ಲಿ ನಡೆದ ಬಾಲಕ ರಾಮನ ವಿಗ್ರಹದ ಪ್ರಾಣ ಪ್ರತಿಷ್ಠೆಯ ದ್ವಿತೀಯ ವಾರ್ಷಿಕೋತ್ಸವಕ್ಕೆ ದಿನಾಂಕ ನಿಗದಿಯಾಗಿದೆ. ಈ ವರ್ಷದ ಡಿಸೆಂಬರ್‌ 31ರಂದು ವಾರ್ಷಿಕೋತ್ಸವ ಆಯೋಜಿಸಲಾಗಿದ್ದು, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಯೋಗಿ ಆದಿತ್ಯನಾಥ್‌ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.

ಪಾಕಿಸ್ತಾನಕ್ಕೆ ಗೂಢಚಾರಿಕೆ ಆರೋಪ: ಅಸ್ಸಾಂನಲ್ಲಿ ನಿವೃತ್ತ ವಾಯುಪಡೆ ಅಧಿಕಾರಿಯ ಬಂಧನ

ಅಸ್ಸಾಂನಲ್ಲಿ ನಿವೃತ್ತ ವಾಯುಪಡೆ ಅಧಿಕಾರಿಯ ಬಂಧನ

Retired Air Force Officer Arrested: ಅಸ್ಸಾಂನಲ್ಲಿ ನಿವೃತ್ತ ವಾಯುಸೇನಾ ಅಧಿಕಾರಿ ಕುಲೆಂದ್ರ ಶರ್ಮಾನನ್ನು ಪಾಕಿಸ್ತಾನಕ್ಕೆ ಗೂಢಚಾರಿಕೆ ನಡೆಸಿದ ಆರೋಪದ ಮೇರೆಗೆ ಬಂಧಿಸಲಾಗಿದೆ. ಶರ್ಮಾನ ಚಲನವಲನಗಳ ಬಗ್ಗೆ ತೀವ್ರ ನಿಗಾ ವಹಿಸಿದ್ದ ಪೊಲೀಸರು, ಕೊನೆಗೆ ಬಂಧಿಸಿದ್ದಾರೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ.

ಸಹಜ ಸ್ಥಿತಿಯತ್ತ ಇಂಡಿಗೋ ಕಾರ್ಯಾಚರಣೆ; ಇಂದು 2,050ಕ್ಕೂ ಹೆಚ್ಚು ವಿಮಾನಗಳ ಹಾರಾಟ

ಸಹಜ ಸ್ಥಿತಿಯತ್ತ ಇಂಡಿಗೋ ವಿಮಾನಗಳ ಕಾರ್ಯಾಚರಣೆ

IndiGo Flight operations: ಇಂಡಿಗೋ ಸಂಸ್ಥೆಯ ವಿಮಾನ ಕಾರ್ಯಾಚರಣೆ 1 ವಾರಗಳ ವ್ಯತ್ಯಯದ ನಂತರ ಸಹಜ ಸ್ಥಿತಿಗೆ ಬಂದಿದೆ. ಡಿಸೆಂಬರ್ 13ರಂದು ಸಂಸ್ಥೆಯ 2,050ಕ್ಕೂ ಹೆಚ್ಚು ವಿಮಾನಗಳು ಕಾರ್ಯ ನಿರ್ವಹಿಸಿದವು. ಪ್ರಯಾಣಿಕರಿಗೆ ಮರುಪಾವತಿ ಹಾಗೂ ಪರಿಹಾರ ನೀಡುವ ಮೂಲಕ ಗ್ರಾಹಕ ಸೇವೆಯನ್ನು ಸುಧಾರಿಸುವ ಮೇಲೆ ಗಮನಹರಿಸಲಾಗಿದೆ.

Star Fashion 2025: ಚೀತಾ ಪ್ರಿಂಟ್ಸ್‌ನ ಗ್ಲಾಮರಸ್‌ ಗೌನ್‌ನಲ್ಲಿ ಕಾಣಿಸಿಕೊಂಡ ಚಿತ್ರಾಂಗದಾ

ಚೀತಾ ಪ್ರಿಂಟ್ಸ್‌ನ ಗ್ಲಾಮರಸ್‌ ಗೌನ್‌ನಲ್ಲಿ ಕಾಣಿಸಿಕೊಂಡ ಚಿತ್ರಾಂಗದಾ

ಬಾಲಿವುಡ್‌ ನಟಿ ಚಿತ್ರಾಂಗದಾ ಸಿಂಗ್‌ ಶ್ವೇತ ವರ್ಣದ ಚೀತಾ ಪ್ರಿಂಟ್ಸ್‌ನ ಆಫ್‌ ಶೋಲ್ಡರ್‌ ಕಾರ್ಸೆಟ್‌ ಶೈಲಿಯ ಬಾಡಿಕಾನ್‌ ಗೌನ್‌ನಲ್ಲಿ ಗ್ಲಾಮರಸ್‌ ಆಗಿ ಕಾಣಿಸಿಕೊಂಡಿದ್ದಾರೆ. ಅವರು ಧರಿಸಿರುವ ಈ ಔಟ್‌ಫಿಟ್‌ ಸ್ಪೆಷಾಲಿಟಿ ಏನು? ಇಲ್ಲಿದೆ ವಿವರ.

ಕೇಂದ್ರದಿಂದ ಮನರೇಗಾ ಯೋಜನೆಗೆ ಮರುನಾಮಕರಣ; ಕೆಲಸದ ಅವಧಿಯಲ್ಲೂ ಹೆಚ್ಚಳ: ಕನಿಷ್ಠ ವೇತನವೂ ಅಧಿಕ

ಮನರೇಗಾ ಇನ್ಮುಂದೆ ಪೂಜ್ಯ ಬಾಪು ಗ್ರಾಮೀಣ ರೋಜ್‌ಗಾರ್‌ ಯೋಜನೆ

MGNREGA: ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯ ಹೆಸರು ಬದಲಾಯಿಸಲಾಗಿದೆ. ಈ ಯೋಜನೆಯ ಇನ್ಮುಂದೆ ಪೂಜ್ಯ ಬಾಪು ಗ್ರಾಮೀಣ ರೋಜ್‌ಗಾರ್‌ ಯೋಜನೆಯಾಗಿ ಗುರುತಿಸ್ಪಡಲಿದೆ. ಡಿಸೆಂಬರ್‌ 12ರಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಮರುನಾಮಕರಣಕ್ಕೆ ಒಪ್ಪಿಗೆ ನೀಡಲಾಯಿತು. ಈ ಯೋಜನೆಯಡಿ ಒದಗಿಸುವ ಕೆಲಸದ ದಿನಗಳ ಸಂಖ್ಯೆಯನ್ನು 100 ದಿನಗಳಿಂದ 125 ದಿನಗಳಿಗೆ ಹೆಚ್ಚಿಸಲಾಗಿದೆ.

Year Ender 2025: ಇಡ್ಲಿಯಿಂದ ಬೀಟ್ರೂಟ್ ಕಾಂಜಿವರೆಗೆ; 2025ರಲ್ಲಿ ಗೂಗಲ್‍ನಲ್ಲಿ ಅತಿ ಹೆಚ್ಚು ಸರ್ಚ್ ಮಾಡಲ್ಪಟ್ಟ ಭಾರತೀಯ ಖಾದ್ಯಗಳಿವು

2025ರಲ್ಲಿ ಗೂಗಲ್‍ನಲ್ಲಿ ಅತಿ ಹೆಚ್ಚು ಸರ್ಚ್ ಮಾಡಲ್ಪಟ್ಟ ಖಾದ್ಯಗಳಿವು

2025ರಲ್ಲಿ ಗೂಗಲ್‌ನಲ್ಲಿ ಜನರ ಗಮನ ಸೆಳೆದ ಅತಿದೊಡ್ಡ ಖಾದ್ಯಗಳ ಪಟ್ಟಿ ಇಲ್ಲಿದೆ. ಈ ಆಹಾರಗಳು ಜನರಲ್ಲಿ ಹೆಚ್ಚು ಆಸಕ್ತಿ ಹುಟ್ಟಿಸಿದ್ದವು ಮತ್ತು ಆರೋಗ್ಯ, ರುಚಿಯ ಕಾರಣದಿಂದಲೂ ಜನಪ್ರಿಯವಾಗಿವೆ. ಅವುಗಳು ಯಾವ್ಯಾವು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

ತಿರುವನಂತಪುರಂ ಕಾರ್ಪೊರೇಷನ್‌ನಲ್ಲಿ ಬಿಜೆಪಿ ಐತಿಹಾಸಿಕ ಗೆಲುವು; ವಿಕಸಿತ ಕೇರಳ ಎಂದ ಮೋದಿ

'ಕೇರಳ ರಾಜಕೀಯದಲ್ಲಿ ಒಂದು ನಿರ್ಣಾಯಕ ಕ್ಷಣ'; ಪ್ರಧಾನಿ ಮೋದಿ

Kerala local body polls: 2020 ರಲ್ಲಿ ಕೇರಳದಲ್ಲಿ ನಡೆದ ಹಿಂದಿನ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ, ಎಲ್‌ಡಿಎಫ್ ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ 52 ವಾರ್ಡ್‌ಗಳನ್ನು ಗೆದ್ದಿತ್ತು. ಬಿಜೆಪಿ ನೇತೃತ್ವದ ಮೈತ್ರಿಕೂಟ 33 ವಾರ್ಡ್‌ಗಳನ್ನು ಗೆದ್ದುಕೊಂಡಿತ್ತು. ಮತ್ತೊಂದೆಡೆ, ಯುಡಿಎಫ್ 10 ವಾರ್ಡ್‌ಗಳನ್ನು ಗೆದ್ದಿತ್ತು. ಈ ಬಾರಿ ಬಿಜೆಪಿ ಮೇಲುಗೈ ಸಾಧಿಸಿತು.

4 ವರ್ಷಗಳ ಬಳಿಕ ಹೈ ಪ್ರೊಫೈಲ್ ಕೊಲೆ ಪ್ರಕರಣ ಭೇದಿಸಿದ ಪೊಲೀಸರು; ಪತ್ನಿಯನ್ನು ಕೊಂದು ದರೋಡೆಯ ಕಥೆ ಕಟ್ಟಿದ ಪ್ರೊಫೆಸರ್ ಅರೆಸ್ಟ್

ಪತ್ನಿ ಕೊಂದ ಆರೋಪದ ಮೇಲೆ ಪ್ರೊಫೆಸರ್ ಅರೆಸ್ಟ್

ಚಂಡೀಗಢದ ಪಂಜಾಬ್ ಯುನಿವರ್ಸಿಟಿಯ ಹಿರಿಯ ಪ್ರಾಧ್ಯಾಪಕ ಬಿಬಿ ಗೋಯಲ್‌ನನ್ನು ಪತ್ನಿ ಸೀಮಾ ಗೋಯಲ್ ಅವರ ಹತ್ಯೆ ಪ್ರಕರಣದಲ್ಲಿ ಬಂಧಿಸಲಾಗಿದೆ. ಪೊಲೀಸ್ ತಂಡವು ದೀರ್ಘ ಕಾಲದ ತನಿಖೆಯ ನಂತರ ಈ ಹೈ–ಪ್ರೊಫೈಲ್ ಕೊಲೆ ಪ್ರಕರಣವನ್ನು ಭೇದಿಸಿದ್ದು, ಬ್ರೇನ್–ಮ್ಯಾಪಿಂಗ್ ಮತ್ತು BEOS ಪ್ರೊಫೈಲಿಂಗ್ ಮೂಲಕ ಪ್ರಮುಖ ಸಾಕ್ಷ್ಯಗಳನ್ನು ಪತ್ತೆ ಹಚ್ಚಲಾಗಿದೆ.

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ: ತಿರುವನಂತಪುರದಲ್ಲಿ ಬಿಜೆಪಿಗೆ ಭರ್ಜರಿ ಗೆಲುವು

ತಿರುವನಂತಪುರದಲ್ಲಿ ಬಿಜೆಪಿಗೆ ಭರ್ಜರಿ ಗೆಲುವು

Kerala local body polls: "45 ವರ್ಷಗಳ ಎಲ್‌ಡಿಎಫ್ ದುರಾಡಳಿತದಿಂದ ಬದಲಾವಣೆಗಾಗಿ ನಾನು ಪ್ರಚಾರ ಮಾಡಿದ್ದೇನೆ, ಆದರೆ ಮತದಾರರು ಅಂತಿಮವಾಗಿ ಆಡಳಿತದಲ್ಲಿ ಸ್ಪಷ್ಟ ಬದಲಾವಣೆಯನ್ನು ಬಯಸಿದ ಮತ್ತೊಂದು ಪಕ್ಷಕ್ಕೆ ಪ್ರತಿಫಲ ನೀಡಿದ್ದಾರೆ. ಅದು ಪ್ರಜಾಪ್ರಭುತ್ವದ ಸೌಂದರ್ಯ. ಒಟ್ಟಾರೆಯಾಗಿ ಯುಡಿಎಫ್ ಆಗಿರಲಿ ಅಥವಾ ನನ್ನ ಕ್ಷೇತ್ರದಲ್ಲಿ ಬಿಜೆಪಿಯಾಗಿರಲಿ, ಜನರ ತೀರ್ಪನ್ನು ಗೌರವಿಸಬೇಕು" ಎಂದು ತರೂರ್‌ ಹೇಳಿದರು.

ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕ್ಕಿ ಕೇಜ್ ಬೆಂಗಳೂರು ನಿವಾಸದಲ್ಲಿ ಕಳ್ಳತನ; ವಿಡಿಯೊ ವೈರಲ್‌

ರಿಕ್ಕಿ ಕೇಜ್ ನಿವಾಸಕ್ಕೆ ಕನ್ನ ಹಾಕಿದ ಜೊಮ್ಯಾಟೊ ಡೆಲಿವರಿ ಬಾಯ್‌!

Grammy Winner Ricky Kej: ರಿಕಿ ಕೇಜ್ ಒಬ್ಬ ಭಾರತೀಯ ಸಂಗೀತ ಸಂಯೋಜಕ, ಪರಿಸರವಾದಿ ಮತ್ತು ಮೂರು ಬಾರಿ ಗ್ರ್ಯಾಮಿ ಪ್ರಶಸ್ತಿ ವಿಜೇತರು. ರಿಕಿ ಕೇಜ್ 1981 ರಲ್ಲಿ ಅಮೆರಿಕದ ಉತ್ತರ ಕೆರೊಲಿನಾದಲ್ಲಿ ಜನಿಸಿದರು. ಅವರು ಎಂಟು ವರ್ಷದವರಾಗಿದ್ದಾಗ ಅವರ ಕುಟುಂಬ ಬೆಂಗಳೂರಿಗೆ ಸ್ಥಳಾಂತರಗೊಂಡಿತು.

ಸಾಧುವಿನ ವೇಷದಲ್ಲಿ ತಲೆಮರೆಸಿಕೊಂಡಿದ್ದ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ವ್ಯಕ್ತಿಯ ಬಂಧನ

37 ವರ್ಷಗಳ ಬಳಿಕ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ವ್ಯಕ್ತಿಯ ಬಂಧನ

ಸುಮಾರು 37 ವರ್ಷಗಳ ಹಿಂದೆ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ವ್ಯಕ್ತಿಯೊಬ್ಬನನ್ನು ಇದೀಗ ಮಧ್ಯಪ್ರದೇಶದಲ್ಲಿ ಬಂಧಿಸಲಾಗಿದೆ. ಆಸಿಡ್ ದಾಳಿ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ವ್ಯಕ್ತಿ ಸಾಧುವಿನ ವೇಷದಲ್ಲಿ ತಲೆ ಮರೆಸಿಕೊಂಡಿದ್ದನು. ಆತನನ್ನು ಶಿವಪುರಿ ಜಿಲ್ಲೆಯ ಗಾಯತ್ರಿ ಶಕ್ತಿಪೀಠದಲ್ಲಿ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಭಾರತದಲ್ಲಿ 35 ಶತಕೋಟಿ ಡಾಲರ್‌ ಹೂಡಿಕೆಗೆ ಅಮೆಜಾನ್‌ ನಿರ್ಧಾರ

ಅಮೆರಿಕದ ಇ-ಕಾಮರ್ಸ್‌ ದಿಗ್ಗಜನಿಂದ ಭಾರತದಲ್ಲಿ ಭಾರಿ ಹೂಡಿಕೆ

Amazon: ಆತ್ಮನಿರ್ಭರ ಭಾರತ ಮತ್ತು ವಿಕಸಿತ ಭಾರತಕ್ಕೆ ಅಮೆಜಾನ್‌ ಸಹಕರಿಸಲಿದೆ. ವಿದ್ಯಾರ್ಥಿಗಳು, ಉದ್ಯಮಿಗಳು, ವ್ಯಾಪಾರಸ್ಥರು ಮತ್ತು ಎಲ್ಲರಿಗೂ ಎಐ ಪ್ರಯೋಜನಗಳನ್ನು ದಾಟಿಸುವುದು ಅಮೆಜಾನ್‌ ನ ಮಹತ್ವದ ಯೋಜನೆಯಾಗಿದೆ. ಸರಕಾರಿ ಶಾಲೆಗಳ 40 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಎಐ ತರಬೇತಿ, ಶಿಕ್ಷಣ ನೀಡಲಾಗಿವುದು.

ಭಾರತೀಯ ಸೇನೆಗೆ ಮತ್ತಷ್ಟು ಬಲ; 2,500 ಕೋಟಿ ರೂ. ಮೌಲ್ಯದ ಪಿನಾಕಾ ರಾಕೆಟ್‌ ಖರೀದಿಗೆ ಪ್ರಸ್ತಾವನೆ: ಪಾಕಿಸ್ತಾನಕ್ಕೆ ನಡುಕು ಶುರು

ಪಿನಾಕಾ ರಾಕೆಟ್‍ ಪ್ರಸ್ತಾವನೆ ಮುಂದಿಟ್ಟ ಭಾರತೀಯ ಸೇನೆ

Pinaka rockets: ಭಾರತೀಯ ಸೇನೆ ದೀರ್ಘ ವ್ಯಾಪ್ತಿಯ ಪಿನಾಕಾ ರಾಕೆಟ್‌ ಖರೀದಿಸಲು 2,500 ಕೋಟಿ ರೂ. ಮೌಲ್ಯದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರದ ಮುಂದಿಟ್ಟಿದೆ. DRDO ಅಭಿವೃದ್ಧಿಪಡಿಸಿದ ಈ ರಾಕೆಟ್‌ಗಳು ದೇಶೀಯ ಶಸ್ತ್ರಾಸ್ತ್ರ ವ್ಯವಸ್ಥೆಯನ್ನು ಬಲಪಡಿಸಿ, ಸೇನೆಯ ನಿಖರತೆ ಮತ್ತು ವ್ಯಾಪ್ತಿಯ ಸಾಮರ್ಥ್ಯವನ್ನು ಹೆಚ್ಚಿಸುವುದಕ್ಕೆ ಕಾರಣವಾಗಲಿದೆ.

ಹೈದರಾಬಾದ್‌ನಲ್ಲಿ ಲಿಯೋನೆಲ್ ಮೆಸ್ಸಿ ಭೇಟಿ ಮಾಡಲಿರುವ ರಾಹುಲ್ ಗಾಂಧಿ

ಮೋದಿಗೂ ಮುನ್ನ ಮೆಸ್ಸಿ ಭೇಟಿ ಮಾಡಲಿರುವ ರಾಹುಲ್ ಗಾಂಧಿ

Rahul Gandhi: ವರದಿಗಳ ಪ್ರಕಾರ, ಹೈದರಾಬಾದ್‌ನ ಫಲಕ್ನುಮಾ ಅರಮನೆಯಲ್ಲಿ ಮೆಸ್ಸಿ ಜೊತೆ ಫೋಟೋಶೂಟ್‌ಗೆ ಅವಕಾಶ ಕಲ್ಪಿಸಲಾಗಿದೆ. ಇದರ ಟಿಕೆಟ್‌ಗೆ ₹9.95 ಲಕ್ಷ ಇದ್ದು, ಜಿಎಸ್‌ಟಿ ಸೇರಿದಂತೆ ₹10 ಲಕ್ಷಕ್ಕೂ ಹೆಚ್ಚಾಗುತ್ತದೆ. ಟಿಕೆಟ್‌ಗಳನ್ನು ಡಿಸ್ಟ್ರಿಕ್ಟ್‌ ಆ್ಯಪ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ.

ದೆಹಲಿ ಗಾಳಿಯ ಗುಣಮಟ್ಟ ‘ಅತ್ಯಂತ ಕಳಪೆ’: 387ಕ್ಕೆ ತಲುಪಿದ AQI ಸೂಚ್ಯಂಕ

ದೆಹಲಿಯಲ್ಲಿ ಅತಿ ಕಳಪೆ ಮಟ್ಟಕ್ಕೆ ಕುಸಿದ ವಾಯು ಗುಣಮಟ್ಟ

Delhi AQI:38 ಮೇಲ್ವಿಚಾರಣಾ ಕೇಂದ್ರಗಳ ಪೈಕಿ 18 ಕೇಂದ್ರಗಳಲ್ಲಿ ವಾಯು ಗುಣಮಟ್ಟ ಅತ್ಯಂತ ಕಳಪೆ ಮಟ್ಟಕ್ಕೆ ಕುಸಿದಿದಿದ್ದು, QI ಮಟ್ಟವನ್ನು 400 ಕ್ಕಿಂತ ಹೆಚ್ಚಿಸಿವೆ. ಅವುಗಳಲ್ಲಿ ವಾಜಿರ್‌ಪುರ, ಜಹಾಂಗೀರ್‌ಪುರಿ ಮತ್ತು ವಿವೇಕ್ ವಿಹಾರ್ ಅತ್ಯಂತ ಕಲುಷಿತ ತಾಣಗಳಾಗಿವೆ.

ಟ್ರಂಪ್ ವಿಧಿಸಿದ ಶೇ. 50ರ ಸುಂಕ ಕೊನೆಗೊಳಿಸುವ ನಿರ್ಣಯ ಮಂಡಿಸಿದ ಅಮೆರಿಕ ಸಂಸದರು

ಭಾರತದ ಮೇಲೆ ಟ್ರಂಪ್ ವಿಧಿಸಿದ ಶೇ. 50ರ ಸುಂಕ ಕೊನೆಗೊಳಿಸಲು ಚಿಂತನೆ

trump tariffs india: ಭಾರತದ ಮೇಲೆ 2025ರ ಆ.27ರಂದು ಹೇರಲಾದ ಶೇ. 25ರ ಹೆಚ್ಚುವರಿ ಪೂರಕ ಸುಂಕವನ್ನು ರದ್ದುಪಡಿಸಲು ಕೋರಿದೆ. ಇದಕ್ಕೂ ಮುನ್ನ ಪ್ರತ್ಯುತ್ತರ ಸುಂಕವನ್ನು ಹೇರಲಾಗಿತ್ತು. ಅಂತರರಾಷ್ಟ್ರೀಯ ತುರ್ತು ಆರ್ಥಿಕ ಅಧಿಕಾರ ಕಾಯ್ದೆಯಡಿ ವಿಧಿಸಿದ ಈ ಎರಡೂ ಸುಂಕಗಳು ಸೇರಿ ಭಾರತದಿಂದ ಆಮದಾಗುವ ಉತ್ಪನ್ನಗಳು ಶೇನ50ರಷ್ಟು ದುಬಾರಿಯಾಗಿದ್ದವು.

ಭಾರತೀಯ ಅಭಿಮಾನಿಗಳ ಹರ್ಷೋದ್ಗಾರ ಕಂಡು ಪುಳಕಿತರಾದ ಲಿಯೋನೆಲ್ ಮೆಸ್ಸಿ

ಕೋಲ್ಕತ್ತಾಗೆ ಬಂದಿಳಿದಿದ ದಿಗ್ಗಜ ಲಿಯೋನೆಲ್ ಮೆಸ್ಸಿ

Lionel Messi in Kolkata: ಯುವ ಭಾರತಿ ಕ್ರೀಡಾಂಗಣದಲ್ಲಿ ನಡೆಯುವ ಸೌಹಾರ್ದ ಪಂದ್ಯದಲ್ಲಿ ಮೆಸ್ಸಿ ಭಾಗವಹಿಸಲಿದ್ದಾರೆ, ಅಲ್ಲಿ ಸಾವಿರಾರು ಜನರು ಕ್ರೀಡಾಂಗಣಕ್ಕೆ ಆಗಮಿಸುವ ನಿರೀಕ್ಷೆಯಿದೆ. ಅದೇ ಸ್ಥಳದಲ್ಲಿ ಅಭಿಮಾನಿಗಳ ಸಂವಾದ ಕಾರ್ಯಕ್ರಮವು ಮೆಸ್ಸಿಯ ಕೋಲ್ಕತ್ತಾ ಕಾರ್ಯಕ್ರಮಗಳನ್ನು ಮುಕ್ತಾಯಗೊಳಿಸುತ್ತದೆ.

ಪಾಕಿಸ್ತಾನ ವಿವಿಯಲ್ಲಿ ಸಂಸ್ಕೃತ ಕಲಿಕೆ!

ಪಾಕಿಸ್ತಾನ ವಿವಿಯಲ್ಲಿ ಸಂಸ್ಕೃತ ಕಲಿಕೆ!

Pakistan Brings Back Sanskrit: ‘1947ರ ವಿಭಜನೆಯ ನಂತರ ಪಾಕಿಸ್ತಾನದಲ್ಲಿ ಔಪಚಾರಿಕವಾಗಿ ಸಂಸ್ಕೃತವನ್ನು ಕಲಿಸಲಾಗುತ್ತಿರುವುದು ಅಪರೂಪ. ದಶಕಗಳ ನಂತರ ವಿವಿಯ ತರಗತಿಗಳಲ್ಲಿ ಸಂಸ್ಕೃತ ಕಲಿಕೆ ಆರಂಭವಾಗಿರುವುದು, ದಕ್ಷಿಣ ಏಷ್ಯಾದ ಬೌದ್ಧಿಕ ಮತ್ತು ಸಾಂಸ್ಕೃತಿಕ ಪರಂಪರೆಯೊಂದಿಗೆ ತೊಡಗಿಸಿಕೊಳ್ಳುವ ನವೀಕೃತ ಬದ್ಧತೆಯನ್ನು ಸೂಚಿಸುತ್ತದೆ’ ಎಂದು ವಿವಿ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.

ತೆಲಂಗಾಣ ಸರ್ಕಾರದ ಜೊತೆಗೆ ₹600 ಕೋಟಿ ಒಪ್ಪಂದ ಮಾಡಿಕೊಂಡ ಸುಮಧುರ ಗ್ರೂಪ್

ಪಾರ್ಕ್ ಅಭಿವೃದ್ಧಿಗೆ ತೆಲಂಗಾಣ ಸರ್ಕಾರದ ಜೊತೆಗೆ ₹600 ಕೋಟಿ ಒಪ್ಪಂದ

ಸುಮಧುರ ಗ್ರೂಪ್ ಸಂಸ್ಥೆಯು ಭಾರತ ಫ್ಯೂಚರ್ ಸಿಟಿಯಲ್ಲಿ ನಡೆದ ‘ತೆಲಂಗಾಣ ರೈಸಿಂಗ್ ಗ್ಲೋಬಲ್ ಸಮಿಟ್ 2025’ ಶೃಂಗಸಭೆಯಲ್ಲಿ 100 ಎಕರೆ ವಿಸ್ತೀರ್ಣದ ಇಂಡಸ್ಟ್ರಿಯಲ್ ಮತ್ತು ವೇರ್‌ಹೌಸಿಂಗ್ ಪಾರ್ಕ್ ಅಭಿವೃದ್ಧಿಗೆ ತೆಲಂಗಾಣ ಸರ್ಕಾರದ ಜೊತೆಗೆ ₹600 ಕೋಟಿ ಹೂಡಿಕೆ ಮಾಡುವ ತಿಳಿವಳಿಕೆ ಪತ್ರಕ್ಕೆ ಸಹಿ ಹಾಕಿದೆ

Year Ender 2025: ಈ ವರ್ಷ ಪ್ರವಾಸಿಗರು ಅತೀ ಹೆಚ್ಚು ಭೇಟಿ ಕೊಟ್ಟ ಸ್ಥಳಗಳಿವು; ಪಟ್ಟಿಯಲ್ಲಿ ಭಾರತದ ಯಾವ ತಾಣವಿದೆ?

ಪ್ರವಾಸಿಗರು ಅತೀ ಹೆಚ್ಚು ಭೇಟಿ ನೀಡಿದ ತಾಣಗಳಿವು

2025ರ ಟ್ರಾವಲ್ ಡಾಟಾ ಮತ್ತು ಟ್ರೆಂಡ್‌ಗಳನ್ನು ಆಧರಿಸಿ ಜನರು ಸರ್ಚ್ ಮಾಡಿದ, ಬುಕ್ ಮಾಡಿದ ಮತ್ತು ಭೇಟಿ ನೀಡಿದ ಪ್ರವಾಸಿ ಸ್ಥಳಗಳ ಮಾಹಿತಿಯನ್ನು ನಾವಿಲ್ಲಿ ನಿಮಗಾಗಿ ನೀಡುತ್ತಿದ್ದೇವೆ. ಈ ಎಲ್ಲ ಪ್ರವಾಸಿ ಸ್ಥಳಗಳು ತಮ್ಮಲ್ಲಿರುವ ವೈಶಿಷ್ಟ್ಯಗಳಿಂದ ವಿಶ್ವದ ಪ್ರವಾಸಿಗಳನ್ನು ತಮ್ಮತ್ತ ಸೆಳೆಯುವಲ್ಲಿ 2025ರಲ್ಲಿ ಯಶಸ್ವಿಯಾಗಿವೆ.

Karthigai Deepam Row: ತಮಿಳುನಾಡಿನ ಕಾರ್ತಿಕ ದೀಪಕ್ಕೆ ಡಿಎಂಕೆ ವಿರೋಧ, ನ್ಯಾಯಾಂಗಕ್ಕೂ ಅವಮಾನ

ಕಾರ್ತಿಕ ದೀಪಕ್ಕೆ ಡಿಎಂಕೆ ವಿರೋಧ, ನ್ಯಾಯಾಂಗಕ್ಕೂ ಅವಮಾನ

ಡಿಎಂಕೆಯ ಅಸಲಿ ಮುಖ ಮತ್ತೊಬ್ಬೆ ಬಟಾ ಬಯಲಾಗಿದೆ. ತಮಿಳುನಾಡಿನ ತಿರುಪಾರನುಕುಂಡ್ರಮ್ ಎಂಬಲ್ಲಿ 'ಕಾರ್ತಿಕ ದೀಪಂʼ ಅಥವಾ 'ಕಾರ್ತಿಗೈ ದೀಪಂʼ ಉತ್ಸವಕ್ಕೆ ವಿರೋಧ ವ್ಯಕ್ತಪಡಿಸಿ ಹಿಂದೂಗಳ ಭಾವನೆಗೆ ಧಕ್ಕೆ ತಂದಿದೆ. ಇದೀಗ ಡಿಎಂಕೆ ಈ ನೆಪದಲ್ಲಿ ನ್ಯಾಯಾಂಗವನ್ನೂ ಅವಮಾನಿಸಿದೆ. ಈ ಕುರಿತಾದ ಸಂಪೂರ್ಣ ವಿವರ ಇಲ್ಲಿದೆ.

ಮತ್ತೊಮ್ಮೆ ಆಮರಣಾಂತ ಉಪವಾಸ ಘೋಷಿಸಿದ ಅಣ್ಣಾ ಹಜಾರೆ; ಲೋಕಾಯುಕ್ತ ಕಾನೂನು ಜಾರಿಗೆ ಒತ್ತಾಯ

ಆಮರಣಾಂತ ಉಪವಾಸ ನಡೆಸಲು ಅಣ್ಣಾ ಹಜಾರೆ ಸಿದ್ಧತೆ

ಲೋಕಾಯುಕ್ತ ಕಾನೂನು ಜಾರಿಗೆ ಒತ್ತಾಯಿಸಿ ಅಣ್ಣಾ ಹಜಾರೆ ಅಮರಣಾಂತ ಉಪವಾಸ ನಡೆಸುವುದಾಗಿ ಹೇಳಿದ್ದಾರೆ. ಇದು ತಮ್ಮ ಅಂತಿಮ ಹೋರಾಟ ಎಂದು ಹೇಳಿರುವ ಅವರು ಮಹಾರಾಷ್ಟ್ರ ಸರ್ಕಾರ ಲೋಕಾಯುಕ್ತ ಕಾಯ್ದೆಯನ್ನು ಜಾರಿಗೆ ತರುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದ್ದು, ಜನವರಿ 30ರಿಂದ ಮಹಾರಾಷ್ಟ್ರದ ರಾಲೇಗನ್ ಸಿದ್ಧಿಯಲ್ಲಿ ಅನಿರ್ದಿಷ್ಟವಧಿ ಉಪವಾಸ ಪ್ರಾರಂಭಿಸುವುದಾಗಿ ತಿಳಿಸಿದ್ದಾರೆ.

Silver Price: ಮಾರುಕಟ್ಟೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ದಾಖಲೆ ಬರೆದ ಬೆಳ್ಳಿ ದರ

2 ಲಕ್ಷ ರೂ. ಗಡಿ ದಾಟಿದ ಬೆಳ್ಳಿ

ಇದೇ ಮೊದಲ ಬಾರಿಗೆ ಮಾರುಕಟ್ಟೆ ಇತಿಹಾಸದಲ್ಲಿ ಬೆಳ್ಳಿಯ ದರ ದಾಖಲೆಯನ್ನು ಬರೆದಿದೆ. ಡಿಸೆಂಬರ್ 12 ರಂದು ಶುಕ್ರವಾರ ಚಿನ್ನದ ಬೆಲೆಯೊಂದಿಗೆ ಬೆಳ್ಳಿ ಬೆಲೆ ಕೂಡ ಏರಿಕೆಯಾಗಿದ್ದು, ಬೆಳ್ಳಿ ದರ 2 ಲಕ್ಷ ರೂ. ಗಡಿ ದಾಟಿದೆ. ಅಂತಾರಾಷ್ಟ್ರೀಯ ಸ್ಪಾಟ್ ಮಾರುಕಟ್ಟೆಯಲ್ಲೂ ಕೂಡ ಬೆಳ್ಳಿಯ ದರ ಏರಿಕೆಯನ್ನು ಕಂಡಿದೆ.

Rahul Gandhi: "3 ವರ್ಷದಿಂದ ರಾಹುಲ್‌ ಭೇಟಿಯಾಗಿ ಅಲೆಯುತ್ತಿದ್ದೇನೆ"; ಕಾಂಗ್ರೆಸ್‌ ಅವನತಿ ಕುರಿತು ಸೋನಿಯಾಗೆ ಪತ್ರ ಬರೆದ ಮಾಜಿ MLA

ಕಾಂಗ್ರೆಸ್‌ ಅವನತಿ ಕುರಿತು ಸೋನಿಯಾಗೆ ಪತ್ರ ಬರೆದ ಮಾಜಿ MLA

ಒಡಿಶಾ ಕಾಂಗ್ರೆಸ್ ನಾಯಕರೊಬ್ಬರು ರಾಹುಲ್‌ ಗಾಂಧಿ ಅವರ ಮೇಲೆ ಗಂಭೀರ ಆರೋಪ ಮಾಡಿದ್ದು, ಸೋನಿಯಾ ಗಾಂಧಿಯವರಿಗೆ ಪತ್ರ ಬರೆಯುವ ಮೂಲಕ ದೂರನ್ನು ನೀಡಿದ್ದಾರೆ. ಪತ್ರದಲ್ಲಿ, ಪಕ್ಷದ ಸಂಘಟನಾತ್ಮಕ ಕುಸಿತ ಮತ್ತು ನಾಯಕತ್ವದ ವೈಫಲ್ಯಗಳ ಬಗ್ಗೆ ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದಾರೆ.

Loading...