ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ತಾಜಾ ಸುದ್ದಿ

WTL 2025: ವಿಶ್ವ ಟೆನಿಸ್ ಲೀಗ್ ಕಿರೀಟ ಮುಡಿಗೇರಿಸಿಕೊಂಡ ಆಸ್ಸಿ ಮ್ಯಾವೆರಿಕ್ಸ್ ಕೈಟ್ಸ್!

ವಿಶ್ವ ಟೆನಿಸ್‌ ಲೀಗ್‌ ಮುಡಿಗೇರಿಸಿಕೊಂಡ ಆಸ್ಸಿ ಮ್ಯಾವೆರಿಕ್‌ ಕೈಟ್ಸ್‌!

ಕಳೆದ ನಾಲ್ಕು ದಿನಗಳಿಂದ ಬೆಂಗಳೂರಿನ ಎಎಸ್‌ಎಂ ಕೃಷ್ಣ ಕ್ರೀಡಾಂಗಣದಲ್ಲಿ ನಡೆದದ್ದ 2025ರ ವಿಶ್ವ ಟೆನಿಸ್‌ ಲೀಗ್‌ ಟೂರ್ನಿಯು ಶನಿವಾರ ಅಂತ್ಯವಾಗಿದೆ. ಫೈನಲ್‌ ಹಣಾಹಣಿಯಲ್ಲಿ ಎಒಎಸ್‌ ಈಗಲ್ಸ್‌ ತಂಡವನ್ನು 22-19 ಅಂತರದಲ್ಲಿ ಮಣಿಸಿದ ಆಸ್ಸಿ ಮ್ಯಾವೆರಿಕ್ಸ್‌ ಕೈಟ್ಸ್‌ ತಂಡ ಚೊಚ್ಚಲ ಚಾಂಪಿಯನ್‌ ಆಗಿದೆ.

Gauribidanur News: ಸಾದರ ಸಮುದಾಯದ ಏಳಿಗೆಯೇ ಸಂಘದ ಪ್ರಧಾನ ಧ್ಯೇಯವಾಗಿದೆ: ಗೌರವಾಧ್ಯಕ್ಷ ಪಿ.ಟಿ.ಶ್ರೀನಿವಾಸ್

ಹಿಂದೂ ಸಾದರ ಸೇವಾ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

ವ್ಯವಸಾಯವನ್ನೇ ಮುಖ್ಯ ಕಸುಬಾಗಿಸಿಕೊಂಡು ಸಮಾಜದ ಜೊತೆಯಲ್ಲಿ ಸಹಬಾಳ್ವೆಯಿಂದ ಬದುಕು ತ್ತಿರುವ ಹಿಂದು ಸಾದರ ಸಮಾಜವು ಇತ್ತೀಚಿನ ಕಾಲಘಟ್ಟದಲ್ಲಿ ವ್ಯವಸಾಯದಿಂದ ಸಾಕಷ್ಟು ನಷ್ಟ ಅನುಭವಿಸಿ ಆರ್ಥಿಕವಾಗಿ ಸಂಕಷ್ಟದ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಕೆಲವರಿಗೆ ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣವನ್ನು ಕೊಡಿಸಲಾಗದೆ ಕೈಚಲ್ಲಿರುವುದನ್ನು ಕಂಡಿದ್ದೇವೆ.

2023ರಲ್ಲಿ ಕೊನೆಯ ಪಂದ್ಯವಾಡಿದ್ದ ಇಶಾನ್‌ ಕಿಶನ್‌ ಭಾರತ ತಂಡಕ್ಕೆ ಕಮ್‌ಬ್ಯಾಕ್‌ ಮಾಡಿದ್ದೇಗೆ?

ಇಶಾನ್‌ ಕಿಶನ್‌ ಭಾರತ ತಂಡಕ್ಕೆ ಕಮ್‌ಬ್ಯಾಕ್‌ ಮಾಡಿದ್ದೇಗೆ?

ಅಶಿಸ್ತಿನ ಕಾರಣ ಭಾರತ ತಂಡದಿಂದ ಹೊರ ಬಿದ್ದಿದ್ದ ವಿಕೆಟ್‌ ಕೀಪರ್‌ ಇಶಾನ್ ಕಿಶನ್ ದೇಶಿ ಕ್ರಿಕೆಟ್‌ಗೆ ಮರಳಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಜಾರ್ಖಂಡ್ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವಲ್ಲಿ ಅವರು ಮಹತ್ತರ ಪಾತ್ರವನ್ನು ವಹಿಸಿದ್ದರು. ಅವರು ಫೈನಲ್‌ನಲ್ಲಿ ಶತಕದ ಜೊತೆಗೆ ಈ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ್ದರು.

Sixth Kannada Literary Conference: ಕನ್ನಡ ಮಾಧ್ಯಮಕ್ಕೆ ಉದ್ಯೋಗ ಮೀಸಲಾತಿ ಸಿಗಲಿ : ಸಮ್ಮೇಳನಾಧ್ಯಕ್ಷ ಡಾ.ಬಿ.ನಂಜುಂಡಸ್ವಾಮಿ

ಕನ್ನಡ ಮಾಧ್ಯಮಕ್ಕೆ ಉದ್ಯೋಗ ಮೀಸಲಾತಿ ಸಿಗಲಿ

ಗ್ರಂಥಾಲಯಗಳು ಸಹ ಓದುಗರ ಕೊರತೆ ಎದುರಿಸಿದೆ. ಸರ್ಕಾರ ಪುಸ್ತಕಗಳ ಖರೀದಿ ಮಾಡಬೇಕಿದೆ. ಪಟ್ಟಣ ನಗರದಲ್ಲಿ ಪ್ರತಿ ಪ್ರಜೆಯಿಂದ ಲೈಬ್ರರಿ ಸೆಸ್ ವಸೂಲಿ ಮಾಡಲಾಗುತ್ತಿದೆ. ಆದರೆ ಗ್ರಂಥಾ ಲಯಕ್ಕೆ ಪುಸ್ತಕಗಳು ಖರೀದಿ ಆಗುತ್ತಿಲ್ಲ. ಅಂತೂ ಇಂತೂ ಖರೀದಿ ನಡೆದರೆ ಅದರ ಹಣ ಬರಲು ಮೂರು ನಾಲ್ಕು ವರ್ಷ ಬೇಕಿದೆ. ಈ ಜೊತೆಗೆ ಪ್ರಕಾಶಕರ ಸ್ಥಿತಿ ಶೋಚನೀಯ ಎಂದು ಬೇಸರ ವ್ಯಕ್ತಪಡಿಸಿದ ಅವರು ಸರ್ಕಾರ ಪುಸ್ತಕೋದ್ಯಮ ರಕ್ಷಿಸಬೇಕಿದೆ. ಈ ಕಾಯಕ ಎಲ್ಲಾ ಕನ್ನಡಿಗರ ಕರ್ತವ್ಯ

ನಾಳೆಯಿಂದ ಪಲ್ಸ್ ಪೋಲಿಯೋ ಅಭಿಯಾನ; ನಿಮ್ಮ ಹತ್ತಿರದ ಪೋಲಿಯೋ ಬೂತ್ ಹೀಗೆ ಚೆಕ್‌ ಮಾಡಿ

ನಾಳೆಯಿಂದ ಪಲ್ಸ್ ಪೋಲಿಯೋ ಅಭಿಯಾನ; ಬೂತ್ ಹೀಗೆ ಚೆಕ್‌ ಮಾಡಿ

Pulse Polio Campaign 2025: ಆರೋಗ್ಯ ಇಲಾಖೆಯು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪೋಲಿಯೋ ಬೂತ್, ಪ್ರಾಥಮಿಕ ಆಸ್ಪತ್ರೆ ಮಾಹಿತಿ ಪಡೆಯಲು QR ಕೋಡ್ ಬಿಡುಗಡೆ ಮಾಡಿದೆ. ಹಾಗೆಯೇ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಜಿಬಿಎ ನೀಡಿರುವ ಕ್ಯೂಆರ್‌ ಕೋಡ್ ಮತ್ತು ಲಿಂಕ್‌ ಮೂಲಕ ಹತ್ತಿರದ ಪೋಲಿಯೋ ಬೂತ್ ಮಾಹಿತಿ ಪಡೆಯಬಹುದಾಗಿದೆ.

World Meditation Day: ಕೈವಾರದಲ್ಲಿ ಇಂದು ವಿಶ್ವಧ್ಯಾನ ದಿನಾಚರಣೆ

World Meditation Day: ಕೈವಾರದಲ್ಲಿ ಇಂದು ವಿಶ್ವಧ್ಯಾನ ದಿನಾಚರಣೆ

ಧ್ಯಾನವು ಜೀವನದಲ್ಲಿ ಶಾಂತಿ ಮತ್ತು ಸಂತೋಷವನ್ನು ತರುವ ಒಂದು ಶಕ್ತಿಯುತವಾದ ಸಾಧನ ವಾಗಿದೆ. ಸದ್ಗುರು ಶ್ರೀಯೋಗಿನಾರೇಯಣ ತಾತಯ್ಯನವರು ತಮ್ಮ ಬೋಧನೆಗಳಲ್ಲಿ ಧ್ಯಾನದ ಮಹತ್ವ ವನ್ನು ಸಾರಿದ್ದಾರೆ. ಈ ಕಾರಣದಿಂದ ಮಠದಲ್ಲಿ ಆತ್ಮಧ್ಯಾನ ಮಂದಿರವನ್ನು ನಿರ್ಮಿಸಲಾಗಿದೆ. ಪ್ರತಿನಿತ್ಯ ಧ್ಯಾನಾಸಕ್ತರು ಬಂದು ಧ್ಯಾನವನ್ನು ಮಾಡುತ್ತಾರೆ

ಕರ್ನಾಟಕದ ಬಳಿಕ ಇನ್ನೊಂದು ಕಾಂಗ್ರೆಸ್ ಆಡಳಿತದ ರಾಜ್ಯದಲ್ಲೂ ದ್ವೇಷ ಭಾಷಣದ ವಿರುದ್ಧ ಕಾನೂನು ಜಾರಿಗೆ ಸಿದ್ಧತೆ

ದ್ವೇಷ ಭಾಷಣದ ವಿರುದ್ಧ ಕಾನೂನು ಜಾರಿಗೆ ಮುಂದಾದ ತೆಲಂಗಾಣ

ಕರ್ನಾಟಕದ ಬಳಿಕ ಇದೀಗ ತೆಲಂಗಾಣದಲ್ಲೂ ದ್ವೇಷ ಭಾಷಣದ ವಿರುದ್ಧ ಕಾನೂನು ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ರೇವಂತ್ ರೆಡ್ಡಿ ತಿಳಿಸಿದ್ದಾರೆ. ರಾಜ್ಯ ಸರ್ಕಾರ ಆಯೋಜಿಸಿದ್ದ ಕ್ರಿಸ್‌ಮಸ್ ಆಚರಣೆಯಲ್ಲಿ ಮಾತನಾಡಿದ ಅವರು ಈ ಕುರಿತು ಮಾಹಿತಿ ನೀಡಿದರು. ಕರ್ನಾಟಕದಲ್ಲಿ ಗುರುವಾರ ಈ ಕಾನೂನನ್ನು ಅಂಗೀಕರಿಸಲಾಗಿದೆ.

ಭಾರತದ ಕಾಫಿಗೆ ಬೇಡಿಕೆ ಹೆಚ್ಚಿದ ಹಿನ್ನೆಲೆ ವಿದೇಶಗಳಿಂದ ಮುಕ್ತ ವ್ಯಾಪಾರ ಒಪ್ಪಂದ: ಜೋಶಿ

ಭಾರತದ ಕಾಫಿಗೆ ಹೆಚ್ಚಿದ ಜಾಗತಿಕ ಬೇಡಿಕೆ: ಪ್ರಲ್ಹಾದ್‌ ಜೋಶಿ

ಭಾರತ ಇಂದು 4 ಲಕ್ಷ ಟನ್‌ ಕಾಫಿಯನ್ನು ಉತ್ಪಾದಿಸುತ್ತಿದ್ದು, ಶೇ.70ರಷ್ಟು ಕಾಫಿ ರಫ್ತು ಮಾಡುತ್ತಿದೆ. ಶೇ.30ರಷ್ಟು ಮಾತ್ರ ಸ್ಥಳೀಯವಾಗಿ ಬಳಕೆಯಾಗುತ್ತಿದೆ. ಚಿಕ್ಕಮಗಳೂರು ಕಾಫಿ, ಅರೋಕೋ ಕಾಫಿ ಸೇರಿದಂತೆ ದೇಶದೆಲ್ಲೆಡೆ ಕಾಫಿ ಬೆಳೆಗೆ ಕೇಂದ್ರ ಸರ್ಕಾರ ಉತ್ತೇಜನ ನೀಡುತ್ತಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದ್ದಾರೆ.

ದ್ವೇಷ ಭಾಷಣ ತಡೆ ಕಾಯ್ದೆ; ಜಿಹಾದಿ ಮನಸ್ಥಿತಿಯವರನ್ನು ಮೊದಲು ಜೈಲಿಗೆ ಹಾಕಬೇಕಾಗುತ್ತದೆ ಎಂದ ಜೋಶಿ

ಜಿಹಾದಿ ಮನಸ್ಥಿತಿ ಉಳ್ಳವರನ್ನು ಮೊದಲು ಜೈಲಿಗೆ ಹಾಕಬೇಕಾಗುತ್ತದೆ: ಜೋಶಿ

Pralhad Joshi: ಬಾಳೆಹೊನ್ನೂರಿನಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ, ಬಹಳ ಜನ ಜಿಹಾದಿ ಮನಸ್ಥಿತಿಯಲ್ಲಿ ಭಾಷಣ ಮಾಡುವರು ಇದ್ದಾರೆ. ಸರ್ಕಾರ ಮೊದಲು ಇಂಥವರನ್ನು ಒಳಗೆ ಹಾಕಬೇಕಿದೆ. ರಾಜ್ಯದಲ್ಲಿ ಈ ಮಸೂದೆ ಅನುಷ್ಠಾನ ಆಗುವುದಿಲ್ಲ ಎಂದು ಹೇಳಿದ್ದಾರೆ.

ಮೋದಿ ರ‍್ಯಾಲಿಗೆ ಹೋಗುತ್ತಿದ್ದಾಗ ಅಪಘಾತ: ನಾಲ್ವರು ಬಿಜೆಪಿ ಕಾರ್ಯಕರ್ತರ ಸಾವು

ಅಪಘಾತ: ನಾಲ್ವರು ಬಿಜೆಪಿ ಕಾರ್ಯಕರ್ತರು ಸಾವು

ಪಶ್ಚಿಮ ಬಂಗಾಳದಲ್ಲಿ ಮೋದಿ ರ‍್ಯಾಲಿಗೆ ಹೋಗುತ್ತಿದ್ದಾಗ ರೈಲು ಡಿಕ್ಕಿ ಹೊಡೆದು ನಾಲ್ವರು ಬಿಜೆಪಿ ಕಾರ್ಯಕರ್ತರು ಸಾವನ್ನಪ್ಪಿದ ಘಟನೆ ಮುರ್ಷಿದಾಬಾದ್‌ನಲ್ಲಿ ನಡೆದಿದೆ. ದಟ್ಟವಾದ ಮಂಜಿನ ಕಾರಣದಿಂದ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಬಿಜೆಪಿ ಕಾರ್ಯಕರ್ತರ ಸಾವಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ.

ವಿಶ್ವ ಧ್ಯಾನ ದಿನ: ಜಗತ್ತು ಕೊನೆಗೂ, ವಿಶೇಷವಾಗಿ ಈ ಪ್ರಕ್ಷುಬ್ಧ ಯುಗದಲ್ಲಿ, ವೈಜ್ಞಾನಿಕ ಧ್ಯಾನದ ಅತ್ಯಂತ ಮಹತ್ವವನ್ನು ಅರಿತುಕೊಳ್ಳುತ್ತಿದೆ!

ವಿಶ್ವ ಧ್ಯಾನ ದಿನ

ಧ್ಯಾನವನ್ನು ಭಗವಂತನ ಮೇಲಿನ ಏಕಾಗ್ರತೆ ಎಂದು ಸರಿಯಾಗಿ ವ್ಯಾಖ್ಯಾನಿಸಲಾಗಿದೆ. ಪ್ರತಿ ದಿನ ಕೇವಲ ಸ್ವಲ್ಪ ಸಮಯವನ್ನು ಧ್ಯಾನದಲ್ಲಿ ಕಳೆಯುವ ಸರಳ ಅಭ್ಯಾಸದಿಂದಲೇ, ಮಾನವರು ತಮ್ಮ ಮಾನಸಿಕ ಶಾಂತಿಯ ಮಟ್ಟವನ್ನು ಮತ್ತು ದೈಹಿಕ ಆರೋಗ್ಯವನ್ನು ಸಹ ಗಮನಾರ್ಹವಾಗಿ ಹೆಚ್ಚಿಸಿಕೊಳ್ಳಬಹುದು.

ಟಿ20 ವಿಶ್ವಕಪ್‌ ಟೂರ್ನಿಯಿಂದ ಶುಭಮನ್‌ ಗಿಲ್‌ರನ್ನು ತೆಗೆಯಲು ಕಾರಣ ತಿಳಿಸಿದ ಅಜಿತ್‌ ಅಗರ್ಕರ್‌!

ಶುಭಮನ್‌ ಗಿಲ್‌ರನ್ನು ಕೈ ಬಿಡಲು ನೈಜ ಕಾರಣ ತಿಳಿಸಿದ ಅಜಿತ್‌ ಅಗರ್ಕರ್‌!

Ajit Agarkar on Shubman Gill: ಮುಂದಿನ ವರ್ಷ ನಡೆಯುವ 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಗೆ 15 ಸದಸ್ಯರ ಭಾರತ ತಂಡವನ್ನು ಬಿಸಿಸಿಐ ಆಯ್ಕೆ ಸಮಿತಿ ಶನಿವಾರ ಪ್ರಕಟಿಸಿದೆ. ಆದರೆ, ಉಪ ನಾಯಕ ಶುಭಮನ್‌ ಗಿಲ್‌ ಅವರನ್ನು ತಂಡದಿಂದ ಕೈ ಬಿಡಲಾಗಿದೆ. ಇದಕ್ಕೆ ಬಲವಾದ ಕಾರಣವೇನೆಂದು ಬಿಸಿಸಿಐ ಚೀಫ್‌ ಸೆಲೆಕ್ಟರ್‌ ವಿವರಿಸಿದ್ದಾರೆ.

Bangladesh Unrest: ಚುನಾವಣೆ ಹೊಸ್ತಿಲಿನಲ್ಲಿ ಬಾಂಗ್ಲಾದೇಶ ಧಗಧಗ: ಕಾರಣವೇನು?

ಚುನಾವಣೆ ಹೊಸ್ತಿಲಿನಲ್ಲಿ ಬಾಂಗ್ಲಾದೇಶ ಧಗಧಗ

ಬಾಂಗ್ಲಾದೇಶ ಮತ್ತೊಮ್ಮೆ ನಿಗಿನಿಗಿ ಕೆಂಡವಾಗಿದೆ. ಕಳೆದ ವರ್ಷ ಶೇಖ್‌ ಹಸೀನಾ ಪದಚ್ಯುತಿಯ ನಂತರ ಮೊದಲ ಬಾರಿಗೆ 2026ರ ಫೆಬ್ರವರಿ 12ಕ್ಕೆ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಈ ನಡುವೆ ಬಾಂಗ್ಲಾದೇಶದಲ್ಲಿ ಗಲಭೆ ಮರುಕಳಿಸಿದೆ. ಮತ್ತೊಮ್ಮೆ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ಹಾಗಾದರೆ ನೆರೆ ರಾಷ್ಟ್ರದಲ್ಲಿ ನಡೆಯುತ್ತಿರುವುದೇನು? ಇದಕ್ಕೆ ಕಾರಣ ಯಾರು? ಇಲ್ಲಿದೆ ವಿವರ.

1915ರಲ್ಲಿ ಬ್ರಿಟೀಷರ ಕಾಲದಲ್ಲೇ ನಿರ್ಮಾಣವಾಗಿರುವ ಜಿಲ್ಲಾ ಕೇಂದ್ರದ ರೈಲು ಮಾರ್ಗಕ್ಕೆ ಬೇಕಿದೆ ಕಾಯಕಲ್ಪ

ಮೂಲ ಸೌಕರ್ಯಗಳಿಗೆ ಬೇಕಿದೆ ಪ್ರಥಮಾದ್ಯತೆ

ಜಿಲ್ಲಾ ಕೇಂದ್ರದ ರೈಲು ಸಂಚಾರ ಆರಂಭವಾಗಿ ದಶಕಗಳೇ ಕಳೆದರೂ ನಿಲ್ದಾಣದಲ್ಲಿ ಮೂಲ ಸೌಕರ್ಯ ಗಳ ಕೊರತೆ ಎದ್ದು ಕಾಣುತ್ತಿದ್ದು ಸರಿಯಾದ ಪ್ಲಾಟ್ ಫಾರ್ಮ್, ಮಳೆ ಬಿಸಿಲಿಂದ ಆಶ್ರಯ ಪಡೆಯುವ ಛಾವಣಿ,ಶುದ್ಧ ಕುಡಿಯುವ ನೀರು, ಮತ್ತು ಜನಬಳಕೆಗೆ ಬರುವಂತಹ ಶೌಚಾಲಯಗಳಿಲ್ಲದೆ ಪ್ರಯಾ ಣಿಕರು ತೊಂದರೆ ಅನುಭವಿಸುತ್ತಿದ್ದಾರೆ.

Bharath Ranganath: ಯುರೋಪಿಯನ್ ಶೃಂಗಸಭೆಯಲ್ಲಿ ಕನ್ನಡಿಗ ಭರತ್ ರಂಗನಾಥ್‌ಗೆ ಡಾಕ್ಟರೇಟ್‌ ಪದವಿ

ಕನ್ನಡಿಗ ಭರತ್ ರಂಗನಾಥ್‌ಗೆ ಡಾಕ್ಟರೇಟ್‌ ಪದವಿ

European Summit: ʼಕರ್ನಾಟಕದಲ್ಲಿ ನವೀಕರಿಸಬಹುದಾದ ಇಂಧನದಲ್ಲಿ AI ಅಳವಡಿಕೆʼ ವಿಷಯದ ಕುರಿತು ಕ್ಯಾಲಿಫೋರ್ನಿಯಾ ಪಬ್ಲಿಕ್‌ ಯೂನಿವರ್ಸಸಿಟಿಯಲ್ಲಿ ಮಂಡಿಸಿದ ಪ್ರಬಂಧಕ್ಕಾಗಿ ಕನ್ನಡಿಗ ಭರತ್ ರಂಗನಾಥ್ ಅವರಿಗೆ ತಮಿಳುನಾಡಿನ ಪೆರಂಬಲೂರಿನಲ್ಲಿ ನಡೆದ ಯುರೋಪಿಯನ್ ಶೃಂಗಸಭೆಯಲ್ಲಿ ಡಾಕ್ಟರೇಟ್‌ ಪದವಿ ನೀಡಲಾಗಿದೆ.

ಸದ್ದಿಲ್ಲದೇ ಬೆಳ್ಳುಳ್ಳಿ ಬೆಲೆ ಏರಿಕೆ

ಸದ್ದಿಲ್ಲದೇ ಬೆಳ್ಳುಳ್ಳಿ ಬೆಲೆ ಏರಿಕೆ

ಈಗ ಸದ್ಯ ಈರುಳ್ಳಿ ಟೊಮೆಟೊಗಿಂತ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಬಹುಬೇಡಿಕೆ ವಸ್ತುವಾಗಿದೆ. ಪ್ರತಿಯೊಬ್ಬರೂ ಬೆಳ್ಳುಳ್ಳಿ ಬೆಲೆ ಕೇಳಿ ಹೇಗೆ ಖರೀದಿ ಮಾಡುವುದು? ಎಂಬ ಜಿಜ್ಞಾಸೆಯಲ್ಲಿದ್ದಾರೆ. ದರ ಹೆಚ್ಚಾಗುತ್ತಿರುವುದರಿಂದ ಬೆಳ್ಳುಳ್ಳಿ ಬಳಕೆ ಕಡಿಮೆಯಾಗಲಿದೆ ಎಂಬ ಮಾತು ಕೇಳಿಬರುತ್ತಿದೆ. ಅದರಲ್ಲಿ ಜನಸಾಮಾನ್ಯರು ಬೆಳ್ಳುಳ್ಳಿ ಬಳಸುವುದನ್ನು ಮರೆತು ಬಿಡುವಂತಾಗಿದೆ.

The Script Craft: ಹೊಸ ಪ್ರತಿಭೆಗಳ ಬೆಂಬಲಕ್ಕೆ ನಿಂತ ಪ್ರಭಾಸ್‌; ನಿರ್ದೇಶಕರಿಗೆ, ಕಥೆಗಾರರಿಗೆ ಇಲ್ಲಿದೆ ಸಖತ್‌ ಚಾನ್ಸ್!‌

ಹೊಸ ಪ್ರತಿಭೆಗಳ ಬೆಂಬಲಕ್ಕೆ ನಿಂತ ʻಬಾಹುಬಲಿʼ ನಟ ಪ್ರಭಾಸ್‌

The Script Craft Launch: ಪ್ಯಾನ್‌ ಇಂಡಿಯಾ ಸ್ಟಾರ್ ಪ್ರಭಾಸ್ ಅವರು ಕೇವಲ ಸಿನಿಮಾಗಳಲ್ಲಷ್ಟೇ ಅಲ್ಲದೆ, ಹೊಸ ಪ್ರತಿಭೆಗಳನ್ನು ಬೆಳೆಸುವಲ್ಲಿಯೂ ಮುಂಚೂಣಿಯಲ್ಲಿದ್ದಾರೆ. ಅವರು ಇಂದು ಘೋಷಿಸಿರುವ 'ದಿ ಸ್ಕ್ರಿಪ್ಟ್ ಕ್ರಾಫ್ಟ್' ಅಭಿಯಾನವು ಪ್ರಪಂಚದಾದ್ಯಂತ ಇರುವ ಕಿರುಚಿತ್ರ ನಿರ್ದೇಶಕರು ಮತ್ತು ಕಥೆಗಾರರಿಗೆ ಸಿನಿಮಾ ರಂಗಕ್ಕೆ ನೇರ ಪ್ರವೇಶ ಒದಗಿಸುವ ಗುರಿಯನ್ನು ಹೊಂದಿದೆ.

ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್‌ನ ವಿಮಾನ ನಿಲ್ದಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ; ಇಲ್ಲಿದೆ ಕಲರ್‌ಫುಲ್‌ ಫೋಟೊಸ್‌

ಗುವಾಹಟಿಯಲ್ಲಿ ಪ್ರಕೃತಿ ಥೀಮ್‌ನ ವಿಮಾನ ನಿಲ್ದಾಣಕ್ಕೆ ಚಾಲನೆ

ಅಸ್ಸಾಂನ ಗುವಾಹಟಿಯ ಲೋಕಪ್ರಿಯ ಗೋಪಿನಾಥ್ ಬಾರ್ಡೋಲೋಯ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿರ್ಮಾಣವಾದ ಹೊಸ ಟರ್ಮಿನಲ್ ಕಟ್ಟಡವನ್ನು ಶನಿವಾರ (ಡಿಸೆಂಬರ್‌ 20) ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ವಿಶೇಷ ಎಂದರೆ ಇದು ಪ್ರಕೃತಿ ಥೀಮ್‌ನಲ್ಲಿ ನಿರ್ಮಾಣವಾದ ದೇಶದ ಮೊದಲ ಟರ್ಮಿನಲ್‌. ಈ ವಿಮಾನ ನಿಲ್ದಾಣವನ್ನು 2032ರ ವೇಳೆಗೆ ಪ್ರತಿ ವರ್ಷ 1.31 ಕೋಟಿ ಪ್ರಯಾಣಿಕರು ಬಳಸುವಂತೆ ಮಾಡುವ ಗುರಿ ಹೊಂದಲಾಗಿದೆ. ಸದ್ಯ ಈ ಟರ್ಮಿನಲ್‌ನ ಫೋಟೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಡಿ.25ರಿಂದ ದ್ವಿತೀಯ ವಿಶ್ವ ಆಯುರ್ವೇದ ಸಮ್ಮೇಳನ; ಬೈಕ್ ರ್‍ಯಾಲಿಗೆ ಹೈಕೋರ್ಟ್ ನ್ಯಾಯಮೂರ್ತಿ ವಿ. ಶ್ರೀಶಾನಂದ ಚಾಲನೆ

ಡಿ.25ರಿಂದ ದ್ವಿತೀಯ ವಿಶ್ವ ಆಯುರ್ವೇದ ಸಮ್ಮೇಳನ

2nd Ayurveda World Summit: ಕಜೆ ಆಯುರ್ವೇದಿಕ್ ಚಾರಿಟೇಬಲ್ ಫೌಂಡೇಶನ್ ವತಿಯಿಂದ ಡಿಸೆಂಬರ್ 25ರಿಂದ 28ವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ದ್ವಿತೀಯ ಆಯುರ್ವೇದ ಸಮ್ಮೇಳನದ ಜನಜಾಗೃತಿಗಾಗಿ, ಬೆಂಗಳೂರಿನ ಗಿರಿನಗರಲ್ಲಿ ಬೃಹತ್ ಆಯುರ್ವೇದ ಬೈಕ್ ಜಾಥಾಗೆ ಹೈಕೋರ್ಟ್ ನ್ಯಾಯಮೂರ್ತಿ ವಿ. ಶ್ರೀಶಾನಂದ ಚಾಲನೆ ನೀಡಿದರು.

Women's Kannada Rajyotsava: ಡಿ.23 ರಂದು ಮಹಿಳಾ ಕನ್ನಡ ರಾಜ್ಯೋತ್ಸವ

ಡಿ.23 ರಂದು ಮಹಿಳಾ ಕನ್ನಡ ರಾಜ್ಯೋತ್ಸವ

ಈ ಬಾರಿ ಮಹಿಳೆಯರೇ ಒಗ್ಗೂಡಿ ಕನ್ನಡದ ಅಸ್ಮಿತೆಯನ್ನು ಎತ್ತಿ ಹಿಡಿಯುವ ವಿಶೇಷ ಪ್ರಯತ್ನ ಮಾಡು ತ್ತಿದ್ದೇವೆ. ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮಹಿಳೆಯ ರಿಂದ ಬೈಕ್ ರ‍್ಯಾಲಿ ನಡೆಯಲಿದೆ ಎಂದರು. ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಕಾರ್ಯಕ್ರಮವನ್ನು ಉದ್ಘಾಟಿಸ ಲಿದ್ದಾರೆ. ಶಾಸಕ ಸುರೇಶಬಾಬು ಅಧ್ಯಕ್ಷತೆ ವಹಿಸಲಿದ್ದಾರೆ.

ಗುವಾಹಟಿಯಲ್ಲಿ ದೇಶದ ಮೊದಲ ಬಿದಿರಿನ ವಿಮಾನ ನಿಲ್ದಾಣ ಉದ್ಘಾಟಿಸಿದ ಪ್ರಧಾನಿ ಮೋದಿ

ದೇಶದ ಮೊದಲ ಬಿದಿರಿನ ವಿಮಾನ ನಿಲ್ದಾಣ ಲೋಕಾರ್ಪಣೆ

ಪರಿಸರವನ್ನೇ ಹೊದ್ದುಕೊಂಡಂತಿರುವ ದೇಶದ ಮೊದಲ ಬಿದಿರಿನ ವಿಮಾನ ನಿಲ್ದಾಣವನ್ನು ಗುವಾಹಟಿಯಲ್ಲಿ ಶನಿವಾರ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. 'ದಿ ಬಿದಿರಿನ ಆರ್ಕಿಡ್‌ಗಳು' ಎಂದು ಹೆಸರಿಸಿರುವ ಇಲ್ಲಿನ ಟರ್ಮಿನಲ್ ನ ವಿಶಿಷ್ಟ ವಿನ್ಯಾಸವು ಪ್ರೇಕ್ಷಕರನ್ನು ಮೋಡಿ ಮಾಡುವಂತಿದೆ. ಅಸ್ಸಾಂನ ಪ್ರಸಿದ್ಧ 'ಕೊಪೌ ಫೂಲ್' ಮತ್ತು ಸ್ಥಳೀಯ ಬಿದಿರಿನ ಪ್ರಭೇದಗಳಿಂದ ಪ್ರೇರಿತವಾಗಿರುವ ಇದು ಈಶಾನ್ಯದ ಪರಿಸರ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುತ್ತದೆ.

Karnataka Weather: ತೀವ್ರ ಶೀತ ಗಾಳಿ; ನಾಳೆ ಬೀದರ್‌, ಕಲಬುರಗಿ ಸೇರಿ 7 ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌ ಘೋಷಣೆ

ತೀವ್ರ ಶೀತ ಗಾಳಿ ಹಿನ್ನೆಲೆ ನಾಳೆ ರಾಜ್ಯದ 7 ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌

Cold Wave Alert For Karnataka: ಉತ್ತರ ಒಳನಾಡಿನ ಬೀದರ್, ಕಲಬುರಗಿ, ವಿಜಯಪುರ, ಯಾದಗಿರಿ, ರಾಯಚೂರು, ಬಾಗಲಕೋಟೆ, ಬೆಳಗಾವಿ ಜಿಲ್ಲೆಗಳಲ್ಲಿ ಭಾನುವಾರ ತೀವ್ರ ಶೀತಗಾಳಿ ಸಾಧ್ಯತೆ ಮತ್ತು ಗದಗ, ಕೊಪ್ಪಳ, ಧಾರವಾಡ, ಹಾವೇರಿ ಜಿಲ್ಲೆಗಳಲ್ಲಿ ಶೀತಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Jana Nayagan: ʻದಳಪತಿʼ ವಿಜಯ್‌ ಕೊನೇ ಚಿತ್ರವು ಟಾರ್ಗೆಟ್‌ ಆಯ್ತಾ? ʻಜನ ನಾಯಗನ್‌ʼ ಎದುರು ಬರ್ತಿದೆಯಾ ಮತ್ತೊಂದು ತಮಿಳು ಸಿನಿಮಾ?

Thalapathy Vijay: ತಮಿಳುನಾಡಿನಲ್ಲಿ ʻಜನ ನಾಯಗನ್‌ʼ ಟಾರ್ಗೆಟ್‌ ಆಯ್ತಾ?

Jana Nayagan Movie Update: ದಳಪತಿ ವಿಜಯ್ ಅವರ ಕೊನೆಯ ಚಿತ್ರ 'ಜನ ನಾಯಗನ್' 2026ರ ಜನವರಿ 9ರಂದು ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. ಕನ್ನಡದ ಕೆವಿಎನ್ (KVN) ಸಂಸ್ಥೆ ನಿರ್ಮಿಸಿರುವ ಈ ಚಿತ್ರಕ್ಕೆ ತಮಿಳುನಾಡಿನ ರಾಜಕೀಯ ಮೇಲಾಟಗಳ ನಡುವೆ ಪೈಪೋಟಿ ಎದುರಾಗಿದೆ. ಶಿವಕಾರ್ತಿಕೇಯನ್ ಅಭಿನಯದ 'ಪರಾಶಕ್ತಿ' ಚಿತ್ರವು ಜನವರಿ 14ರ ಬದಲು ವಿಜಯ್ ಚಿತ್ರ ಬಿಡುಗಡೆಯಾದ ಮರುದಿನವೇ (ಜ.10) ತೆರೆಗೆ ಬರಲಿದೆ ಎಂಬ ಸುದ್ದಿ ಹಬ್ಬಿದೆ.

BBK 12: ಈ ವಾರ ಕೂಡ ವೋಟಿಂಗ್‌ ಲೈನ್‌ ತೆರೆದಿಲ್ಲ; ಆದರೂ ಇಬ್ಬರು ಸ್ಪರ್ಧಿಗಳು ಬಿಗ್‌ ಬಾಸ್‌ನಿಂದ ಹೊರಬೀಳುವುದು ಖಚಿತ!

BBK 12: ಈ ವಾರ ವೋಟಿಂಗ್‌ ಲೈನ್‌ ತೆರೆದಿಲ್ಲ; ಆದ್ರೂ ಇಬ್ರೂ ಎಲಿಮಿನೇಟ್!

BBK 12 Weekend Twist: ಬಿಗ್ ಬಾಸ್ ಕನ್ನಡ 12ರ ಮನೆಯಲ್ಲಿ ಈ ವಾರವೂ ನಾಮಿನೇಟ್ ಆದ ಸ್ಪರ್ಧಿಗಳಿಗೆ ಎಲಿಮಿನೇಷನ್ ಭೀತಿ ಇಲ್ಲ. ಯಾಕೆಂದರೆ ಕಳೆದ ವಾರದಂತೆ ಈ ವಾರವೂ ವೋಟಿಂಗ್ ಲೈನ್ಸ್ ತೆರೆದಿಲ್ಲ. ಆದರೆ, ಮನೆಯೊಳಗೆ ವೈಲ್ಡ್ ಕಾರ್ಡ್ ಸ್ಪರ್ಧಿಗಳಂತೆ ಮಿಂಚುತ್ತಿದ್ದ ಚೈತ್ರಾ ಕುಂದಾಪುರ ಮತ್ತು ರಜತ್ ಅವರು ಈ ವಾರ ಮನೆಯಿಂದ ಹೊರಹೋಗುವುದು ಖಚಿತ ಎನ್ನಲಾಗುತ್ತಿದೆ.

Loading...