ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ತಾಜಾ ಸುದ್ದಿ

Aadhaar Card: ಪೌರತ್ವದ ಪುರಾವೆಯಾಗಿಲ್ಲ ಆಧಾರ್; ಯಾಕೆ ಗೊತ್ತೆ?

ದೇಶದ ಪೌರತ್ವಕ್ಕೆ ಪುರಾವೆಯಲ್ಲ ಆಧಾರ್

ಪ್ರತಿಯೊಂದು ವಹಿವಾಟಿಗೂ ದಾಖಲೆಯಾಗಿ ಸಲ್ಲಿಕೆಯಾಗುವ ಆಧಾರ್ ಕಾರ್ಡ್ ದೇಶದ ಪೌರತ್ವದ ಪುರಾವೆಯಾಗಿಲ್ಲ. ಯಾಕೆಂದರೆ ಇದನ್ನು ಪಡೆಯಲು ವಿದೇಶಿಯರು ಕೂಡ ಅರ್ಹರಾಗಿದ್ದಾರೆ. ಈ ಕುರಿತು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಮುಖ್ಯಸ್ಥ ಭುವನೇಶ್ ಕುಮಾರ್ ಹೇಳುವುದೇನು? ಇಲ್ಲಿದೆ ಮಾಹಿತಿ.

SA20 Auction: 16.5 ಮಿಲಿಯನ್‌ ದಾಖಲೆ ಮೊತ್ತ ಜೇಬಿಗಿಳಿಸಿಕೊಂಡ ಡೆವಾಲ್ಡ್‌ ಬ್ರೆವಿಸ್‌!

16.5 ಮಿಲಿಯನ್‌ ದಾಖಲೆ ಮೊತ್ತ ಜೇಬಿಗಿಳಿಸಿಕೊಂಡ ಬೇಬಿ ಎಬಿಡಿ!

ದಕ್ಷಿಣ ಆಫ್ರಿಕಾದ 22 ವರ್ಷದ ಯುವ ಆಟಗಾರ ಡೆವಾಲ್ಡ್‌ ಬ್ರೆವಿಸ್‌ ದಕ್ಷಿಣ ಆಫ್ರಿಕಾ-20 ಕ್ರಿಕೆಟ್‌ ಲೀಗ್‌ ಹರಾಜಿನಲ್ಲಿ 16.5 ಮಿಲಿಯನ್‌ ದಾಖಲೆಯ ಮೊತ್ತಕ್ಕೆ ಪ್ರಿಟೋರಿಯಾ ಕ್ಯಾಪಿಟಲ್ಸ್‌ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಆ ಮೂಲಕ ಲೀಗ್‌ ಇತಿಹಾಸದಲ್ಲೇ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದಾರೆ ಚೆನ್ನೈ ಸೂಪರ್‌ ಕಿಂಗ್ಸ್‌ ಬ್ಯಾಟ್ಸ್‌ಮನ್‌.

Kantara Movie: ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ನಲ್ಲೂ ರಿಲೀಸ್‌ ಆಗಲಿದೆ ʼಕಾಂತಾರ ಚಾಪ್ಟರ್ 1ʼ

ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ನಲ್ಲಿ ʼಕಾಂತಾರ ಚಾಪ್ಟರ್ 1ʼ ಬಿಡುಗಡೆ!

Kantara Movie: ರಿಷಬ್ ಶೆಟ್ಟಿ ಬರೆದು ನಿರ್ದೇಶಿಸಿರುವ 'ಕಾಂತಾರ ಚಾಪ್ಟರ್‌ 1' ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಿಸಿದ್ದಾರೆ. ಇದೀಗ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿನ ವೀಕ್ಷಕರಿಗಾಗಿ, ಈ ಚಿತ್ರವನ್ನು ಡ್ರೀಮ್ ಸ್ಕ್ರೀನ್ಸ್ ಇಂಟರ್‌ನ್ಯಾಷನಲ್ ವಿತರಿಸ ಲಿದ್ದು, ಅಲ್ಲಿನ ಸಿನಿಪ್ರಿಯರಿಗೆ ಈ ದೈವಿಕ ಕಥೆಯನ್ನು ದೊಡ್ಡ ಪರದೆಯ ಮೇಲೆ ಕಣ್ತುಂಬಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

Viral Video:  ಅಂತ್ಯಕ್ರಿಯೆಗಾಗಿ ಮಹಿಳೆಯ ಮೃತದೇಹವನ್ನು ಬೈಕ್‍ನಲ್ಲಿ ಸಾಗಿಸಿದ ವ್ಯಕ್ತಿ; ನೆಟ್ಟಿಗರ ಆಕ್ರೋಶ

ಮಹಿಳೆಯ ಮೃತದೇಹವನ್ನು ಬೈಕ್‍ನಲ್ಲಿ ಸಾಗಿಸಿದ ವ್ಯಕ್ತಿ

A Man transports woman's body: ಮಹಿಳೆಯೊಬ್ಬಳ ಮೃತದೇಹವನ್ನು ಬೈಕ್‍ನಲ್ಲಿ ಸಾಗಿಸಿದ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಮೃತಳನ್ನು ಬುದ್ಧರಾಣಿ ಎಂದು ಗುರುತಿಸಲಾಗಿದೆ. ಮಹಿಳೆ ಅನುಮಾನಾಸ್ಪದ ಸ್ಥಿತಿಯಲ್ಲಿ ಮೃತಪಟ್ಟಿದ್ದಾಳೆ ಎಂದು ಆರೋಪಿಸಲಾಗಿದೆ. ಉತ್ತರ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

Viral Video: ಬಿಲಿಯನೇರ್ vs ಅಪ್ಪನಾಗಿರುವುದು! ಮಗನನ್ನು ಹೆಗಲ ಮೇಲೆ ಹೊತ್ತುಕೊಂಡ ಎಲಾನ್‌ ಮಸ್ಕ್; ವಿಡಿಯೊ ವೈರಲ್

ಮಗನನ್ನು ಹೆಗಲ ಮೇಲೆ ಹೊತ್ತುಕೊಂಡ ಎಲಾನ್‌ ಮಸ್ಕ್

Elon Musk Carrying Son: ಅಮೆರಿಕ ಉದ್ಯಮಿ ಎಲಾನ್ ಮಸ್ಕ್ ತಮ್ಮ ಸಾಹಸಗಳು ಮತ್ತು ದಿಟ್ಟ ಆಲೋಚನೆಗಳಿಗಾಗಿ ಆಗಾಗ ಸುದ್ದಿಯಲ್ಲಿರುತ್ತಾರೆ. ಇದೀಗ ತಮ್ಮ ಮಗನೊಂದಿಗೆ ಮಗುವಂತಾದ ಅವರ ವರ್ತನೆಯು ನೆಟ್ಟಿಗರ ಮನಗೆದ್ದಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೊವೊಂದು ಎಲಾನ್ ಮಸ್ಕ್ ಅವರ ಇನ್ನೊಂದು ಮುಖವನ್ನು ಪ್ರದರ್ಶಿಸಿದೆ.

Viral News: ನಟ ಮಿಲಿಂದ್ ಸೋಮನ್, ಸಂಸದ ತೇಜಸ್ವಿ ಸೂರ್ಯ ನಡುವೆ ಪುಷ್ ಅಪ್ ಸ್ಪರ್ಧೆ; ಗೆದ್ದಿದ್ದು ಯಾರು?

ನಮೋ ಯುವ ರನ್ ಉದ್ಘಾಟನೆ

ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಭಾರತೀಯ ಜನತಾ ಯುವ ಮೋರ್ಚಾ ಆಯೋಜಿಸಿದ್ದ ‘ನಮೋ ಯುವ ರನ್’ ಕಾರ್ಯಕ್ರಮದ ಉದ್ಘಾಟನೆ ವೇಳೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮತ್ತು ನಟ-ಮಾಡೆಲ್ ಮಿಲಿಂದ್ ಸೋಮನ್ ಪುಷ್‌-ಅಪ್ ಚಾಲೆಂಜ್‌ನಲ್ಲಿ ಭಾಗವಹಿಸಿದರು. 59 ವರ್ಷದ ಮಿಲಿಂದ್ ಸೋಮನ್ ಈ ಕಾರ್ಯಕ್ರಮದ ವಿಶೇಷ ಅತಿಥಿಯಾಗಿದ್ದರು. ಈ ಸವಾಲಿನ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Raj Kundra: 60 ಕೋಟಿ ರೂ. ವಂಚನೆ ಪ್ರಕರಣ: ರಾಜ್ ಕುಂದ್ರಾಗೆ ಸಮನ್ಸ್

60 ಕೋಟಿ ರೂ. ವಂಚನೆ ಪ್ರಕರಣ; ರಾಜ್ ಕುಂದ್ರಾಗೆ ಸಮನ್ಸ್

ಸುಮಾರು 60 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಅವರಿಗೆ ಮುಂಬೈ ಪೊಲೀಸರು ಸಮನ್ಸ್ ನೀಡಿದ್ದಾರೆ. ಈ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ದೂರುದಾರರು ಮೊದಲು ಸಂಪರ್ಕಿಸಿದ್ದ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯ ಮಂಡಳಿಯ ಲೆಕ್ಕಪರಿಶೋಧಕರಿಗೂ ಸಮನ್ಸ್ ನೀಡಲಾಗಿದೆ.

MLA Satish Sail: ಅಕ್ರಮ ಆಸ್ತಿ ಗಳಿಕೆ ಪ್ರಕರಣ; ಇಡಿಯಿಂದ ಕಾಂಗ್ರೆಸ್‌ ಶಾಸಕ ಸತೀಶ್ ಸೈಲ್ ಬಂಧನ

ಅಕ್ರಮ ಆಸ್ತಿ ಗಳಿಕೆ ಪ್ರಕರಣ; ಇಡಿಯಿಂದ ಕಾಂಗ್ರೆಸ್‌ ಶಾಸಕ ಸತೀಶ್ ಸೈಲ್ ಬಂಧನ

Disproportionate assets case: ಕಾರವಾರ ಶಾಸಕ ಸತೀಶ್ ಸೈಲ್ ಅವರ ನಿವಾಸ ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಆಗಸ್ಟ್ 13 ಮತ್ತು 14ರಂದು ದಾಳಿ ನಡೆಸಿ, ಕೋಟ್ಯಂತರ ರೂಪಾಯಿ ನಗದು, ಚಿನ್ನಾಭರಣ ಮತ್ತು ಬ್ಯಾಂಕ್ ಖಾತೆಗಳಲ್ಲಿ ದೊಡ್ಡ ಮೊತ್ತವನ್ನು ವಶಪಡಿಸಿಕೊಂಡಿತ್ತು. ಇದೀಗ ವಿಚಾರಣೆ ಬಳಿಕ ಅವರನ್ನು ಬಂಧಿಸಲಾಗಿದೆ.

Nepal Gen Z Protest: ನೇಪಾಳದಲ್ಲಿ ಹಿಂಸಾಚಾರ; 39 ಕನ್ನಡಿಗರ ರಕ್ಷಣೆಗೆ ಸಿಎಂ ಸಿದ್ದರಾಮಯ್ಯ ಸೂಚನೆ

ನೇಪಾಳದಲ್ಲಿ ಸಿಲುಕಿರುವ 39 ಕನ್ನಡಿಗರ ರಕ್ಷಣೆಗೆ ಸಿಎಂ ಸೂಚನೆ

CM Siddaramaiah: ನೇಪಾಳದಲ್ಲಿ ಪ್ರಕ್ಷುಬ್ದ ವಾತಾವರಣ ಸೃಷ್ಟಿಯಾಗಿದೆ. ಕಠ್ಮಂಡು ವಿಮಾನ ನಿಲ್ದಾಣದಲ್ಲಿ ಸಿಲುಕಿರುವ 39 ಮಂದಿ ಕನ್ನಡಿಗರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಸೂಚನೆ ನೀಡಿದ್ದಾರೆ.

Blood Moon: ನಿಮ್ಗೆ ಬ್ಲಡ್ ಮೂನ್ ನೋಡಲು ಆಗ್ಲಿಲ್ವಾ? ಕೆಂಪು ಚಂದಿರನ ಕಣ್ತುಂಬಿಕೊಳ್ಳಲು ಇಲ್ಲಿದೆ ಮತ್ತೊಂದು ಅವಕಾಶ

ಮುಂದಿನ ಬ್ಲಡ್ ಮೂನ್ ಯಾವಾಗ ಗೊತ್ತಾ.?

ಈ ವರ್ಷದ ಕೊನೆಯ ಚಂದ್ರಗ್ರಹಣ ಸೆಪ್ಟೆಂಬರ್ 7ರಂದು ಮುಗಿದಿದೆ. ಬ್ಲಡ್ ಮೂನ್ ಎಂದು ಕರೆಯಲ್ಪಡುವ ಈ ಚಂದ್ರಗ್ರಹಣ ಹಲವು ವಿಶೇಷತೆ ಹೊಂದಿದೆ. ಪೂರ್ಣ ಚಂದ್ರಗ್ರಹಣದ ವೇಳೆ ಚಂದ್ರ ಕೆಂಪಾಗಿ ಕಾಣುತ್ತಾನೆ. ಹೀಗಾಗಿ ಇದಕ್ಕೆ ಬ್ಲಡ್ ಮೂನ್ ಅಥವಾ ರಕ್ತ ಚಂದ್ರ ಎಂದು ಕರೆಯಲಾಗುತ್ತದೆ. ಇನ್ನು ಕೆಲವರಿಗೆ ನಾನಾ ಕಾರಣಗಳಿಂದ ಈ ವಿಸ್ಮಯವನ್ನು ಕಾಣಲು ಆಗಲಿಲ್ಲ, ಅಂತವರಿಗಾಗಿ ನಾವು ಹೊಸ ಸುದ್ದಿಯೊಂದನ್ನು ಹೊತ್ತು ತಂದಿದ್ದೇವೆ.

Vice President of India: ಉಪರಾಷ್ಟ್ರಪತಿಗಳ ಚುನಾವಣೆ ಹೇಗೆ ನಡೆಯಿತು..? ಅವರಿಗೆ ಸಿಗುವ ಸಂಬಳ ಎಷ್ಟು? ಅವರಿಗೆ ಯಾವೆಲ್ಲಾ ಸೌಲಭ್ಯಗಳು ಸಿಗುತ್ತೆ?

ಉಪರಾಷ್ಟ್ರಪತಿಯಾದ್ರೆ ಏನೆಲ್ಲಾ ಸೌಲಭ್ಯಗಳು ಸಿಗುತ್ತವೆ?

ಜಗದೀಪ್‌ ಧನಕರ್‌ ಅವರು ಉಪರಾಷ್ಟ್ರಪತಿ ಹುದ್ದೆಗೆ ರಾಜೀನಾಮೆ ನೀಡಿದ್ದು, ಇಂದು ಹೊಸ ಉಪರಾಷ್ಟ್ರಪತಿ ಆಯ್ಕೆಗೆ ಚುನಾವಣೆ ನಡೆದಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಜೀನಾಮೆ ಅಂಗೀಕರಿಸಿದ ಮರುದಿನವೇ ಚುನಾವಣಾ ಆಯೋಗ ವೈಸ್‌ ಪ್ರೆಸಿಡೆಂಟ್‌ ಆಯ್ಕೆಗೆ ಪ್ರಕ್ರಿಯೆಯನ್ನು ಶುರುಮಾಡಿತು. ಉಪರಾಷ್ಟ್ರಪತಿ ಚುನಾವಣೆ ಪ್ರಕ್ರಿಯೆ ಹೇಗಿರುತ್ತೆ? ಯಾರೆಲ್ಲಾ ಮತ ಹಾಕ್ತಾರೆ? ದೇಶದ ಎರಡನೇ ಅತ್ಯುನ್ನತ ಸಾಂವಿಧಾನಿಕ ಹುದ್ದೆಯೇರಲು ಏನೆಲ್ಲಾ ಅರ್ಹತೆಗಳಿರಬೇಕು? ಇವರ ವೇತನ ಎಷ್ಟು? ಉಪರಾಷ್ಟ್ರಪತಿಯಾದ್ರೆ ಏನೆಲ್ಲಾ ಸೌಲಭ್ಯಗಳು ಸಿಗುತ್ತವೆ? ಎಂಬುದನ್ನು ಈ ವಿಡಿಯೋದಲ್ಲಿ ನೋಡೋಣ ಬನ್ನಿ..

Siachen Avalanche: ಸಿಯಾಚಿನ್‌ನಲ್ಲಿ ಭಾರಿ ಹಿಮಪಾತ; ಮೂವರು ಸೈನಿಕರು ಬಲಿ

ಸಿಯಾಚಿನ್‌ನಲ್ಲಿ ಭಾರಿ ಹಿಮಪಾತ; ಮೂವರು ಸೈನಿಕರು ಬಲಿ

ಕೇಂದ್ರಾಡಳಿತ ಪ್ರದೇಶ ಲಡಾಖ್‌ನಲ್ಲಿರುವ ವಿಶ್ವದ ಅತಿ ಎತ್ತರದ ಯುದ್ಧಭೂಮಿ ಎನಿಸಿಕೊಂಡಿರುವ ಸಿಯಾಚಿನ್‌ನಲ್ಲಿ ಹಿಮಪಾತ ಸಂಭವಿಸಿ ಮೂವರು ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತ ಸೈನಿಕರು ಮಹಾರ್ ರೆಜಿಮೆಂಟ್‌ನವರಾಗಿದ್ದು, ಗುಜರಾತ್, ಉತ್ತರ ಪ್ರದೇಶ ಮತ್ತು ಜಾರ್ಖಂಡ್‌ ಮೂಲದವರು.

MB Patil: ಧಾರವಾಡದಲ್ಲಿ ಜಪಾನಿನ ಹಿಟಾಚಿ ಮಷಿನರಿ ಕಂಪನಿಯ ಅಭಿವೃದ್ಧಿ ಕೇಂದ್ರ ಸ್ಥಾಪನೆ: ಎಂ.ಬಿ. ಪಾಟೀಲ

ಜಪಾನ್‌ನಲ್ಲಿ ರಾಜ್ಯದ ನಿಯೋಗದ ಎರಡನೇ ದಿನದ ಯಶಸ್ವಿ ರೋಡ್‌ ಷೋ

Invest Karnataka: ಜಪಾನಿನ ಹಿಟಾಚಿ ಕನ್‌ಸ್ಟ್ರಕ್ಷನ್‌ ಮಷಿನರಿ ಕಂಪನಿಯು ಧಾರವಾಡದಲ್ಲಿ ನಿರ್ಮಾಣ ಯಂತ್ರೋಪಕರಣಗಳ ಅಭಿವೃದ್ಧಿ ಕೇಂದ್ರ ಸ್ಥಾಪಿಸಲಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ. ಧಾರವಾಡದಲ್ಲಿ 2027ರ ವೇಳೆಗೆ ಕಾರ್ಯಾರಂಭ ಮಾಡಲಿರುವ ಈ ಕೇಂದ್ರವು, ನಿರ್ಮಾಣ ಯಂತ್ರೋಪಕರಣಗಳ ಜಾಗತಿಕ ಉತ್ಪನ್ನಗಳ ವಿನ್ಯಾಸ ರೂಪಿಸಲು ಮತ್ತು ಅಭಿವೃದ್ಧಿಪಡಿಸಲು ಆದ್ಯತೆ ನೀಡಲಿದೆ. 200 ಎಂಜಿನಿಯರ್‌ಗಳಿಗೆ ಇಲ್ಲಿ ಉದ್ಯೋಗ ಅವಕಾಶಗಳು ದೊರೆಯಲಿವೆ ಎಂದು ಸಚಿವರು ಹೇಳಿದ್ದಾರೆ.

Viral Video: ಜಡೆ ಜಗಳಕ್ಕೆ ಜನ ದಂಗು! ಮಹಿಳಾಮಣಿಗಳ ಭರ್ಜರಿ ಫೈಟ್‌; ಈ ವಿಡಿಯೊ ನೋಡಿ

ಪರಸ್ಪರ ಕೂದಲು ಎಳೆದು, ಹೊಡೆದಾಡಿಕೊಂಡ ಮಹಿಳೆಯರು

Women Beat Each Other: ಮಹಿಳೆಯರಿಬ್ಬರು ಪರಸ್ಪರ ಕೂದಲು ಎಳೆದುಕೊಂಡು, ಹಲ್ಲೆ ನಡೆಸಿರುವ ಘಟನೆಯ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ. ರಾಜಸ್ಥಾನದ ಸಿಕಾರ್ ಜಿಲ್ಲೆಯ ಖಾತು ಶ್ಯಾಮ್ ದೇವಸ್ಥಾನದ ಬಳಿ ಈ ಘಟನೆ ನಡೆದಿದೆ. ಮಹಿಳೆಯರು ಕೋಲುಗಳಿಂದ ಹೊಡೆದುಕೊಂಡಿದ್ದಾರೆ.

ನಾಡೋಜ ಡಾ. ಗೊ.ರು. ಚನ್ನಬಸಪ್ಪ ಇವರಿಗೆ ಪ್ರತಿಷ್ಠಿತ 'ಬಸವ ವಿಭೂಷಣ' ಪುರಸ್ಕಾರ

ಡಾ. ಬಿ.ಡಿ. ಜತ್ತಿಯವರ 113ನೆಯ ಜನ್ಮದಿನೋತ್ಸವ

ಗೌರವಾನ್ವಿತ ಡಾ. ಬಿ.ಡಿ. ಜತ್ತಿಯವರ 113ನೆಯ ಜನ್ಮದಿನೋತ್ಸವ ಹಾಗೂ ಬಸವ ಸಮಿತಿಯ ಸಂಸ್ಥಾಪನಾ ದಿನಾಚರಣೆಯನ್ನು ಸೆ.10ರಂದು ಬೆಳಗ್ಗೆ 11.30ಕ್ಕೆ ಬಸವ ಸಮಿತಿಯ ಅನುಭವ ಮಂಟಪ ಸಭಾಂಗಣದಲ್ಲಿ ಆಚರಿಸಲಾಗುತ್ತಿದ್ದು, ಈ ಕಾರ್ಯಕ್ರಮದಲ್ಲಿ ಭಾರತ ಸರ್ಕಾರದ ರೈಲ್ವೆ ಖಾತೆ, ರಾಜ್ಯ ಸಚಿವ ವಿ.ಸೋಮಣ್ಣ ಉದ್ಘಾಟನೆ ಮಾಡಲಿದ್ದಾರೆ.

IPL 2025: ʻಪಂಜಾಬ್‌ ಕಿಂಗ್ಸ್‌ನಲ್ಲಿ ಸಿಕ್ಕಿದ್ದ ಬೆಂಬಲ ಕೆಕೆಆರ್‌ನಲ್ಲಿ ಸಿಕ್ಕಿರಲಿಲ್ಲʼ-ಶ್ರೇಯಸ್‌ ಅಯ್ಯರ್!

ಪಂಜಾಬ್‌- ಕೋಲ್ಕತಾ ಫ್ರಾಂಚೈಸಿ ನಡುವಿನ ವ್ಯತ್ಯಾಸ ತಿಳಿಸಿದ ಅಯ್ಯರ್‌!

ಕಳೆದ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಪಂಜಾಬ್‌ ಕಿಂಗ್ಸ್‌ ನಾಯಕತ್ವ ವಹಿಸಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ಶ್ರೇಯಸ್‌ ಅಯ್ಯರ್‌, ಹಿಂದಿನ ಫ್ರಾಂಚೈಸಿ ಕೋಲ್ಕತಾ ನೈಟ್‌ ರೈಡರ್ಸ್‌ ಹಾಗೂ ಪಂಜಾಬ್‌ ಕಿಂಗ್ಸ್‌ ತಂಡಗಳ ನಡುವಣ ವ್ಯತ್ಯಾಸವನ್ನು ಹಂಚಿಕೊಂಡಿದ್ದಾರೆ.

Kidwai Hospital: ಕ್ಯಾನ್ಸರ್‌ ಚಿಕಿತ್ಸೆಗೆ ದಾಖಲಾಗಿದ್ದ ಸಜಾ ಕೈದಿ ಕಿದ್ವಾಯಿ ಆಸ್ಪತ್ರೆಯಿಂದ ಪರಾರಿ; ವಿಡಿಯೋ ವೈರಲ್‌!

ಚಿಕಿತ್ಸೆಗೆ ದಾಖಲಾಗಿದ್ದ ಕೈದಿ ಕಿದ್ವಾಯಿ ಆಸ್ಪತ್ರೆಯಿಂದ ಪರಾರಿ!

Convict escapes: ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಸಜಾ ಕೈದಿಯನ್ನು ಬಿಜಾಪುರದಿಂದ ಬೆಂಗಳೂರಿನ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್‌ ಮಾಡಲಾಗಿತ್ತು. ಬಾಯಿ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಅಪರಾಧಿಯನ್ನ ಕಿದ್ವಾಯಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆ ತಂದಿದ್ದ ವೇಳೆ ಜೈಲು ಸಿಬ್ಬಂದಿ ಕಣ್ತಪ್ಪಿಸಿ ಪರಾರಿಯಾಗಿದ್ದಾನೆ.

Viral News: ನೌಕಾಪಡೆಯ ಸಿಬ್ಬಂದಿಯಂತೆ ನಟಿಸಿ ರೈಫಲ್, ಮದ್ದುಗುಂಡುಗಳೊಂದಿಗೆ ಎಸ್ಕೇಪ್!

ನೇವಿ ಆಫಿಸರ್‌ನಂತೆ ನಟಿಸಿ ರೈಫಲ್, ಮದ್ದುಗುಂಡುಗಳೊಂದಿಗೆ ಎಸ್ಕೇಪ್!

Deceiver Escapes with Rifle: ನೌಕಾಪಡೆಯ ಸಿಬ್ಬಂದಿಯಂತೆ ನಟಿಸಿ, ಆಯುಧ ಹಸ್ತಾಂತರಿಸುವಂತೆ ವ್ಯಕ್ತಿಯೊಬ್ಬ ಕೇಳಿಕೊಂಡಿದ್ದಾನೆ. ಇದನ್ನು ನಂಬಿದ ಸಿಬ್ಬಂದಿ ಆತನಿಗೆ ರೈಫಲ್, ಮದ್ದುಗುಂಡು ಹಸ್ತಾಂತರಿಸಿದ್ದಾರೆ. ಆದರೆ ಕೆಲವೇ ಹೊತ್ತಿನಲ್ಲಿ ವಂಚಕ ಅಲ್ಲಿಂದ ಪರಾರಿಯಾಗಿದ್ದಾನೆ. ಈ ಘಟನೆ ದಕ್ಷಿಣ ಮುಂಬೈನಲ್ಲಿ ನಡೆದಿದೆ.

ಜಾಗತಿಕ ಬೇಡಿಕೆ ಪೂರೈಕೆಗೆ ಹೈ-ವಾಲ್ಯೂಮ್ ಟ್ರಾನ್ಸ್‌ಫಾರ್ಮರ್ ಕಾರ್ಖಾನೆ ಆರಂಭಿಸಿದ ಬಿಒಎಸ್‌

ಹೈ-ವಾಲ್ಯೂಮ್ ಟ್ರಾನ್ಸ್‌ಫಾರ್ಮರ್ ಕಾರ್ಖಾನೆ ಆರಂಭಿಸಿದ ಬಿಒಎಸ್‌

ಗೇಮ್‌ಚೇಂಜ್‌ ಬಿಒಎಸ್‌ಗೆ 0.5-25 ಎಮ್‌ವಿಎ ರೇಂಜ್‌ವರೆಗೆ ಮತ್ತು 69 ಕೆವಿ ವರೆಗಿನ ವೋಲ್ಟೇಜ್‌ನ ಹೈ ವೋಲ್ಟೆಜ್‌ ವಿಭಾಗದ ಎಐ ಚಾಲಿತ ಡೇಟಾ ಸೆಂಟರ್, ರೆನೆವೇಬಲ್‌ ಎನರ್ಜಿ ಉತ್ಪನ್ನಗಳು , ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟೆಮ್, ದೊಡ್ಡ ಮಟ್ಟದ ಎಲೆಕ್ಟ್ರಿಫಿಕೇಶನ್‌ ಮೂಲಸೌಕರ್ಯ ಉತ್ಪನ್ನಗಳನ್ನು ಸಿದ್ಧಪಡಿಸಲು ನೆರವಾಗಿದೆ.

VZY ಸ್ಮಾರ್ಟ್ ಟಿವಿ ಶ್ರೇಣಿ ಪ್ರಾರಂಭಿಸಿದ ಡಿಶ್ ಟಿವಿ

VZY ಸ್ಮಾರ್ಟ್ ಟಿವಿ ಶ್ರೇಣಿ ಪ್ರಾರಂಭಿಸಿದ ಡಿಶ್ ಟಿವಿ

VZY ಎಂದರೆ ವೈಬ್, ಜೋನ್ ಮತ್ತು ನೀವು. ಇದು ತಂತ್ರಜ್ಞಾನ, ವಿನ್ಯಾಸ ಮತ್ತು ಮಾನವ ಸಂಪರ್ಕ ವನ್ನು ಸಂಯೋಜಿಸುವ ಸ್ಮಾರ್ಟ್ ಮನರಂಜನಾ ಒಡನಾಡಿಯಾಗಲಿದೆ. ದೂರದರ್ಶನ ಕ್ಕಿಂತ ಹೆಚ್ಚಾಗಿ, VZY ಒಂದು ಮನರಂಜನಾ ವಿಶ್ವವಾಗಿದ್ದು, ಇದು ಡಿಶ್ ಟಿವಿಯ ವಿಶ್ವಾಸಾರ್ಹ DTH ಪರಿಣತಿಯನ್ನು ಸ್ಟ್ರೀಮಿಂಗ್‌ನ ಭವಿಷ್ಯದೊಂದಿಗೆ ಸಂಯೋಜಿಸುತ್ತದೆ.

Justice Mohammad Hidayatullah: ಸಿಜೆಐ, ರಾಷ್ಟ್ರಪತಿ, ಉಪ ರಾಷ್ಟ್ರಪತಿ.... ದೇಶದ ಮೂರು ಉನ್ನತ ಹುದ್ದೆಯನ್ನು ಪಡೆದ ಏಕೈಕ ವ್ಯಕ್ತಿ ಯಾರು ಗೊತ್ತೇ?

ದೇಶದ ಮೂರು ಉನ್ನತ ಹುದ್ದೆಯನ್ನು ಪಡೆದ ಏಕೈಕ ವ್ಯಕ್ತಿ ಇವರು

ದೇಶದ ಮೂರು ಉನ್ನತ ಹುದ್ದೆಗಳಾದ ಮುಖ್ಯ ನ್ಯಾಯಮೂರ್ತಿ, ಹಂಗಾಮಿ ರಾಷ್ಟ್ರಪತಿ ಮತ್ತು ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಏಕೈಕ ವ್ಯಕ್ತಿ ಎಂದರೆ ಮೊಹಮ್ಮದ್ ಹಿದಾಯತುಲ್ಲಾ. ಮೂರು ಪ್ರಮುಖ ಹುದ್ದೆಗಳಲ್ಲಿನ ಇವರ ಪ್ರಯಾಣವು ಭಾರತದ ಪ್ರಜಾಪ್ರಭುತ್ವ ಚೌಕಟ್ಟಿನ ಬಲ ಮತ್ತು ಅದರ ನಾಯಕತ್ವದ ಆಳವನ್ನು ಪ್ರತಿಬಿಂಬಿಸುತ್ತದೆ.

Salman Khan: ನಟ ಸಲ್ಮಾನ್ ಖಾನ್ ಒಬ್ಬ ಗೂಂಡಾ- ದಬಾಂಗ್ ಸಿನಿಮಾ ನಿರ್ದೇಶಕ ಹೀಗ್ಯಾಕಂದ್ರು?

ಸಲ್ಮಾನ್ ಖಾನ್ ಮೇಲೆ ಆರೋಪಗಳ ಸುರಿಮಳೆಗೈದ ಚಿತ್ರ ನಿರ್ದೇಶಕ

ಇತ್ತೀಚೆಗೆ ಸಲ್ಮಾನ್ ಖಾನ್ ಅವರ ಕೆಲವು ವಿಡಿಯೋಗಳನ್ನು ನೋಡಿ ನೆಟ್ಟಿಗರು ಟ್ರೋಲ್ ಮಾಡಿದ್ದರು. ಸಲ್ಮಾನ್ ಖಾನ್ ಅವರಿಗೆ ವಯಸ್ಸು ಆಯ್ತು ಎಂದು ಒಂದಷ್ಟು ಜನರು ಲೇವಡಿ ಮಾಡಿದ್ದರು. ಇದೀಗ ನಿರ್ದೇಶರೊಬ್ಬರು ಸಲ್ಲು ಬ್ಯಾಡ್ ಬಾಯ್, ಅವನೊಬ್ಬ ಗೂಂಡಾ ಎಂದು ಟೀಕೆ ಮಾಡಿದ್ದಾರೆ.

ಡ್ರೈವ್‌X ಡೈರೆಕ್ಟ್ ಪ್ರಾರಂಭಿಸುವುದರೊಂದಿಗೆ ಸಿ2ಸಿ ಮಾರುಕಟ್ಟೆಗೆ ಪ್ರವೇಶಿಸಿದ ಡ್ರೈವ್‌X ಮೊಬಿಲಿಟಿ

ಸಿ2ಸಿ ಮಾರುಕಟ್ಟೆಗೆ ಪ್ರವೇಶಿಸಿದ ಡ್ರೈವ್‌X ಮೊಬಿಲಿಟಿ

ಇದು ಅನುಕೂಲತೆ ಮತ್ತು ನಮ್ಯತೆಯನ್ನು ಬಯಸುವ ಗ್ರಾಹಕರಿಗೆ ಸರಿಯಾದ ಆಯ್ಕೆ ಯಾಗಿದೆ..ಇದು ದಾಖಲೆಗಳ ಸುಗಮಗೊಳಿಸುವಿಕೆ, ಖಾತರಿ ಆಯ್ಕೆಗಳು ಮತ್ತು ಮೌಲ್ಯವರ್ಧಿತ ಸೇವೆಗಳ ಮೂಲಕ ಮತ್ತಷ್ಟು ಭರವಸೆಯನ್ನು ನೀಡುತ್ತದೆ, ಇದು ಸಂಪೂರ್ಣ ಖರೀದಿ ಅನುಭವ ವನ್ನು ಸುಗಮಗೊಳಿಸುತ್ತದೆ

Subroto Cup (U-15): ಫೈನಲ್‌ಗೇರಿದ ಮಿನರ್ವಾ ಪಬ್ಲಿಕ್ ಸ್ಕೂಲ್-ವಿದ್ಯಾಚಲ್ ಇಂಟರ್ ನ್ಯಾಷನಲ್ ಸ್ಕೂಲ್!

ಫೈನಲ್‌ಗೆ ಮಿನರ್ವಾ ಪಬ್ಲಿಕ್ ಸ್ಕೂಲ್-ವಿದ್ಯಾಚಲ್ ಇಂಟರ್ ನ್ಯಾಷನಲ್ ಸ್ಕೂಲ್

ಬೆಂಗಳೂರಿನಲ್ಲಿ ನಡೆಯುತ್ತಿರುವ 64ನೇ ಸುಬ್ರ೦ತೋ ಕಪ್‌ ಅಂತಾರಾಷ್ಟ್ರೀಯ ಫುಟ್ಬಾಲ್‌ ಸಬ್‌ ಜೂನಿಯರ್‌ ಟೂರ್ನಿಯ ಫೈನಲ್‌ಗೆ ಮಿನರ್ವಾ ಪಬ್ಲಿಕ್ ಸ್ಕೂಲ್ (CISCE) ಹಾಗು ವಿದ್ಯಾಚಲ್ ಇಂಟರ್ ನ್ಯಾಷನಲ್ ಸ್ಕೂಲ್ (ಬಿಹಾರ) ತಂಡಗಳು ಪ್ರವೇಶ ಪಡೆದಿವೆ. ಮಂಗಳವಾರ ಈ ಎರಡೂ ತಂಡಗಳು ಪ್ರತ್ಯೇಕ ಸೆಮಿಫೈನಲ್‌ ಪಂದ್ಯಗಳಲ್ಲಿ ಗೆಲುವು ಪಡೆಯುವ ಮೂಲಕ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿವೆ.

Loading...