ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕರ್ನಾಟಕ

Gauribidanur News: ಸಾದರ ಸಮುದಾಯದ ಏಳಿಗೆಯೇ ಸಂಘದ ಪ್ರಧಾನ ಧ್ಯೇಯವಾಗಿದೆ: ಗೌರವಾಧ್ಯಕ್ಷ ಪಿ.ಟಿ.ಶ್ರೀನಿವಾಸ್

ಹಿಂದೂ ಸಾದರ ಸೇವಾ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

ವ್ಯವಸಾಯವನ್ನೇ ಮುಖ್ಯ ಕಸುಬಾಗಿಸಿಕೊಂಡು ಸಮಾಜದ ಜೊತೆಯಲ್ಲಿ ಸಹಬಾಳ್ವೆಯಿಂದ ಬದುಕು ತ್ತಿರುವ ಹಿಂದು ಸಾದರ ಸಮಾಜವು ಇತ್ತೀಚಿನ ಕಾಲಘಟ್ಟದಲ್ಲಿ ವ್ಯವಸಾಯದಿಂದ ಸಾಕಷ್ಟು ನಷ್ಟ ಅನುಭವಿಸಿ ಆರ್ಥಿಕವಾಗಿ ಸಂಕಷ್ಟದ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಕೆಲವರಿಗೆ ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣವನ್ನು ಕೊಡಿಸಲಾಗದೆ ಕೈಚಲ್ಲಿರುವುದನ್ನು ಕಂಡಿದ್ದೇವೆ.

Sixth Kannada Literary Conference: ಕನ್ನಡ ಮಾಧ್ಯಮಕ್ಕೆ ಉದ್ಯೋಗ ಮೀಸಲಾತಿ ಸಿಗಲಿ : ಸಮ್ಮೇಳನಾಧ್ಯಕ್ಷ ಡಾ.ಬಿ.ನಂಜುಂಡಸ್ವಾಮಿ

ಕನ್ನಡ ಮಾಧ್ಯಮಕ್ಕೆ ಉದ್ಯೋಗ ಮೀಸಲಾತಿ ಸಿಗಲಿ

ಗ್ರಂಥಾಲಯಗಳು ಸಹ ಓದುಗರ ಕೊರತೆ ಎದುರಿಸಿದೆ. ಸರ್ಕಾರ ಪುಸ್ತಕಗಳ ಖರೀದಿ ಮಾಡಬೇಕಿದೆ. ಪಟ್ಟಣ ನಗರದಲ್ಲಿ ಪ್ರತಿ ಪ್ರಜೆಯಿಂದ ಲೈಬ್ರರಿ ಸೆಸ್ ವಸೂಲಿ ಮಾಡಲಾಗುತ್ತಿದೆ. ಆದರೆ ಗ್ರಂಥಾ ಲಯಕ್ಕೆ ಪುಸ್ತಕಗಳು ಖರೀದಿ ಆಗುತ್ತಿಲ್ಲ. ಅಂತೂ ಇಂತೂ ಖರೀದಿ ನಡೆದರೆ ಅದರ ಹಣ ಬರಲು ಮೂರು ನಾಲ್ಕು ವರ್ಷ ಬೇಕಿದೆ. ಈ ಜೊತೆಗೆ ಪ್ರಕಾಶಕರ ಸ್ಥಿತಿ ಶೋಚನೀಯ ಎಂದು ಬೇಸರ ವ್ಯಕ್ತಪಡಿಸಿದ ಅವರು ಸರ್ಕಾರ ಪುಸ್ತಕೋದ್ಯಮ ರಕ್ಷಿಸಬೇಕಿದೆ. ಈ ಕಾಯಕ ಎಲ್ಲಾ ಕನ್ನಡಿಗರ ಕರ್ತವ್ಯ

ನಾಳೆಯಿಂದ ಪಲ್ಸ್ ಪೋಲಿಯೋ ಅಭಿಯಾನ; ನಿಮ್ಮ ಹತ್ತಿರದ ಪೋಲಿಯೋ ಬೂತ್ ಹೀಗೆ ಚೆಕ್‌ ಮಾಡಿ

ನಾಳೆಯಿಂದ ಪಲ್ಸ್ ಪೋಲಿಯೋ ಅಭಿಯಾನ; ಬೂತ್ ಹೀಗೆ ಚೆಕ್‌ ಮಾಡಿ

Pulse Polio Campaign 2025: ಆರೋಗ್ಯ ಇಲಾಖೆಯು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪೋಲಿಯೋ ಬೂತ್, ಪ್ರಾಥಮಿಕ ಆಸ್ಪತ್ರೆ ಮಾಹಿತಿ ಪಡೆಯಲು QR ಕೋಡ್ ಬಿಡುಗಡೆ ಮಾಡಿದೆ. ಹಾಗೆಯೇ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಜಿಬಿಎ ನೀಡಿರುವ ಕ್ಯೂಆರ್‌ ಕೋಡ್ ಮತ್ತು ಲಿಂಕ್‌ ಮೂಲಕ ಹತ್ತಿರದ ಪೋಲಿಯೋ ಬೂತ್ ಮಾಹಿತಿ ಪಡೆಯಬಹುದಾಗಿದೆ.

World Meditation Day: ಕೈವಾರದಲ್ಲಿ ಇಂದು ವಿಶ್ವಧ್ಯಾನ ದಿನಾಚರಣೆ

World Meditation Day: ಕೈವಾರದಲ್ಲಿ ಇಂದು ವಿಶ್ವಧ್ಯಾನ ದಿನಾಚರಣೆ

ಧ್ಯಾನವು ಜೀವನದಲ್ಲಿ ಶಾಂತಿ ಮತ್ತು ಸಂತೋಷವನ್ನು ತರುವ ಒಂದು ಶಕ್ತಿಯುತವಾದ ಸಾಧನ ವಾಗಿದೆ. ಸದ್ಗುರು ಶ್ರೀಯೋಗಿನಾರೇಯಣ ತಾತಯ್ಯನವರು ತಮ್ಮ ಬೋಧನೆಗಳಲ್ಲಿ ಧ್ಯಾನದ ಮಹತ್ವ ವನ್ನು ಸಾರಿದ್ದಾರೆ. ಈ ಕಾರಣದಿಂದ ಮಠದಲ್ಲಿ ಆತ್ಮಧ್ಯಾನ ಮಂದಿರವನ್ನು ನಿರ್ಮಿಸಲಾಗಿದೆ. ಪ್ರತಿನಿತ್ಯ ಧ್ಯಾನಾಸಕ್ತರು ಬಂದು ಧ್ಯಾನವನ್ನು ಮಾಡುತ್ತಾರೆ

ಭಾರತದ ಕಾಫಿಗೆ ಬೇಡಿಕೆ ಹೆಚ್ಚಿದ ಹಿನ್ನೆಲೆ ವಿದೇಶಗಳಿಂದ ಮುಕ್ತ ವ್ಯಾಪಾರ ಒಪ್ಪಂದ: ಜೋಶಿ

ಭಾರತದ ಕಾಫಿಗೆ ಹೆಚ್ಚಿದ ಜಾಗತಿಕ ಬೇಡಿಕೆ: ಪ್ರಲ್ಹಾದ್‌ ಜೋಶಿ

ಭಾರತ ಇಂದು 4 ಲಕ್ಷ ಟನ್‌ ಕಾಫಿಯನ್ನು ಉತ್ಪಾದಿಸುತ್ತಿದ್ದು, ಶೇ.70ರಷ್ಟು ಕಾಫಿ ರಫ್ತು ಮಾಡುತ್ತಿದೆ. ಶೇ.30ರಷ್ಟು ಮಾತ್ರ ಸ್ಥಳೀಯವಾಗಿ ಬಳಕೆಯಾಗುತ್ತಿದೆ. ಚಿಕ್ಕಮಗಳೂರು ಕಾಫಿ, ಅರೋಕೋ ಕಾಫಿ ಸೇರಿದಂತೆ ದೇಶದೆಲ್ಲೆಡೆ ಕಾಫಿ ಬೆಳೆಗೆ ಕೇಂದ್ರ ಸರ್ಕಾರ ಉತ್ತೇಜನ ನೀಡುತ್ತಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದ್ದಾರೆ.

ದ್ವೇಷ ಭಾಷಣ ತಡೆ ಕಾಯ್ದೆ; ಜಿಹಾದಿ ಮನಸ್ಥಿತಿಯವರನ್ನು ಮೊದಲು ಜೈಲಿಗೆ ಹಾಕಬೇಕಾಗುತ್ತದೆ ಎಂದ ಜೋಶಿ

ಜಿಹಾದಿ ಮನಸ್ಥಿತಿ ಉಳ್ಳವರನ್ನು ಮೊದಲು ಜೈಲಿಗೆ ಹಾಕಬೇಕಾಗುತ್ತದೆ: ಜೋಶಿ

Pralhad Joshi: ಬಾಳೆಹೊನ್ನೂರಿನಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ, ಬಹಳ ಜನ ಜಿಹಾದಿ ಮನಸ್ಥಿತಿಯಲ್ಲಿ ಭಾಷಣ ಮಾಡುವರು ಇದ್ದಾರೆ. ಸರ್ಕಾರ ಮೊದಲು ಇಂಥವರನ್ನು ಒಳಗೆ ಹಾಕಬೇಕಿದೆ. ರಾಜ್ಯದಲ್ಲಿ ಈ ಮಸೂದೆ ಅನುಷ್ಠಾನ ಆಗುವುದಿಲ್ಲ ಎಂದು ಹೇಳಿದ್ದಾರೆ.

1915ರಲ್ಲಿ ಬ್ರಿಟೀಷರ ಕಾಲದಲ್ಲೇ ನಿರ್ಮಾಣವಾಗಿರುವ ಜಿಲ್ಲಾ ಕೇಂದ್ರದ ರೈಲು ಮಾರ್ಗಕ್ಕೆ ಬೇಕಿದೆ ಕಾಯಕಲ್ಪ

ಮೂಲ ಸೌಕರ್ಯಗಳಿಗೆ ಬೇಕಿದೆ ಪ್ರಥಮಾದ್ಯತೆ

ಜಿಲ್ಲಾ ಕೇಂದ್ರದ ರೈಲು ಸಂಚಾರ ಆರಂಭವಾಗಿ ದಶಕಗಳೇ ಕಳೆದರೂ ನಿಲ್ದಾಣದಲ್ಲಿ ಮೂಲ ಸೌಕರ್ಯ ಗಳ ಕೊರತೆ ಎದ್ದು ಕಾಣುತ್ತಿದ್ದು ಸರಿಯಾದ ಪ್ಲಾಟ್ ಫಾರ್ಮ್, ಮಳೆ ಬಿಸಿಲಿಂದ ಆಶ್ರಯ ಪಡೆಯುವ ಛಾವಣಿ,ಶುದ್ಧ ಕುಡಿಯುವ ನೀರು, ಮತ್ತು ಜನಬಳಕೆಗೆ ಬರುವಂತಹ ಶೌಚಾಲಯಗಳಿಲ್ಲದೆ ಪ್ರಯಾ ಣಿಕರು ತೊಂದರೆ ಅನುಭವಿಸುತ್ತಿದ್ದಾರೆ.

Bharath Ranganath: ಯುರೋಪಿಯನ್ ಶೃಂಗಸಭೆಯಲ್ಲಿ ಕನ್ನಡಿಗ ಭರತ್ ರಂಗನಾಥ್‌ಗೆ ಡಾಕ್ಟರೇಟ್‌ ಪದವಿ

ಕನ್ನಡಿಗ ಭರತ್ ರಂಗನಾಥ್‌ಗೆ ಡಾಕ್ಟರೇಟ್‌ ಪದವಿ

European Summit: ʼಕರ್ನಾಟಕದಲ್ಲಿ ನವೀಕರಿಸಬಹುದಾದ ಇಂಧನದಲ್ಲಿ AI ಅಳವಡಿಕೆʼ ವಿಷಯದ ಕುರಿತು ಕ್ಯಾಲಿಫೋರ್ನಿಯಾ ಪಬ್ಲಿಕ್‌ ಯೂನಿವರ್ಸಸಿಟಿಯಲ್ಲಿ ಮಂಡಿಸಿದ ಪ್ರಬಂಧಕ್ಕಾಗಿ ಕನ್ನಡಿಗ ಭರತ್ ರಂಗನಾಥ್ ಅವರಿಗೆ ತಮಿಳುನಾಡಿನ ಪೆರಂಬಲೂರಿನಲ್ಲಿ ನಡೆದ ಯುರೋಪಿಯನ್ ಶೃಂಗಸಭೆಯಲ್ಲಿ ಡಾಕ್ಟರೇಟ್‌ ಪದವಿ ನೀಡಲಾಗಿದೆ.

ಸದ್ದಿಲ್ಲದೇ ಬೆಳ್ಳುಳ್ಳಿ ಬೆಲೆ ಏರಿಕೆ

ಸದ್ದಿಲ್ಲದೇ ಬೆಳ್ಳುಳ್ಳಿ ಬೆಲೆ ಏರಿಕೆ

ಈಗ ಸದ್ಯ ಈರುಳ್ಳಿ ಟೊಮೆಟೊಗಿಂತ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಬಹುಬೇಡಿಕೆ ವಸ್ತುವಾಗಿದೆ. ಪ್ರತಿಯೊಬ್ಬರೂ ಬೆಳ್ಳುಳ್ಳಿ ಬೆಲೆ ಕೇಳಿ ಹೇಗೆ ಖರೀದಿ ಮಾಡುವುದು? ಎಂಬ ಜಿಜ್ಞಾಸೆಯಲ್ಲಿದ್ದಾರೆ. ದರ ಹೆಚ್ಚಾಗುತ್ತಿರುವುದರಿಂದ ಬೆಳ್ಳುಳ್ಳಿ ಬಳಕೆ ಕಡಿಮೆಯಾಗಲಿದೆ ಎಂಬ ಮಾತು ಕೇಳಿಬರುತ್ತಿದೆ. ಅದರಲ್ಲಿ ಜನಸಾಮಾನ್ಯರು ಬೆಳ್ಳುಳ್ಳಿ ಬಳಸುವುದನ್ನು ಮರೆತು ಬಿಡುವಂತಾಗಿದೆ.

ಡಿ.25ರಿಂದ ದ್ವಿತೀಯ ವಿಶ್ವ ಆಯುರ್ವೇದ ಸಮ್ಮೇಳನ; ಬೈಕ್ ರ್‍ಯಾಲಿಗೆ ಹೈಕೋರ್ಟ್ ನ್ಯಾಯಮೂರ್ತಿ ವಿ. ಶ್ರೀಶಾನಂದ ಚಾಲನೆ

ಡಿ.25ರಿಂದ ದ್ವಿತೀಯ ವಿಶ್ವ ಆಯುರ್ವೇದ ಸಮ್ಮೇಳನ

2nd Ayurveda World Summit: ಕಜೆ ಆಯುರ್ವೇದಿಕ್ ಚಾರಿಟೇಬಲ್ ಫೌಂಡೇಶನ್ ವತಿಯಿಂದ ಡಿಸೆಂಬರ್ 25ರಿಂದ 28ವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ದ್ವಿತೀಯ ಆಯುರ್ವೇದ ಸಮ್ಮೇಳನದ ಜನಜಾಗೃತಿಗಾಗಿ, ಬೆಂಗಳೂರಿನ ಗಿರಿನಗರಲ್ಲಿ ಬೃಹತ್ ಆಯುರ್ವೇದ ಬೈಕ್ ಜಾಥಾಗೆ ಹೈಕೋರ್ಟ್ ನ್ಯಾಯಮೂರ್ತಿ ವಿ. ಶ್ರೀಶಾನಂದ ಚಾಲನೆ ನೀಡಿದರು.

Women's Kannada Rajyotsava: ಡಿ.23 ರಂದು ಮಹಿಳಾ ಕನ್ನಡ ರಾಜ್ಯೋತ್ಸವ

ಡಿ.23 ರಂದು ಮಹಿಳಾ ಕನ್ನಡ ರಾಜ್ಯೋತ್ಸವ

ಈ ಬಾರಿ ಮಹಿಳೆಯರೇ ಒಗ್ಗೂಡಿ ಕನ್ನಡದ ಅಸ್ಮಿತೆಯನ್ನು ಎತ್ತಿ ಹಿಡಿಯುವ ವಿಶೇಷ ಪ್ರಯತ್ನ ಮಾಡು ತ್ತಿದ್ದೇವೆ. ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮಹಿಳೆಯ ರಿಂದ ಬೈಕ್ ರ‍್ಯಾಲಿ ನಡೆಯಲಿದೆ ಎಂದರು. ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಕಾರ್ಯಕ್ರಮವನ್ನು ಉದ್ಘಾಟಿಸ ಲಿದ್ದಾರೆ. ಶಾಸಕ ಸುರೇಶಬಾಬು ಅಧ್ಯಕ್ಷತೆ ವಹಿಸಲಿದ್ದಾರೆ.

Karnataka Weather: ತೀವ್ರ ಶೀತ ಗಾಳಿ; ನಾಳೆ ಬೀದರ್‌, ಕಲಬುರಗಿ ಸೇರಿ 7 ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌ ಘೋಷಣೆ

ತೀವ್ರ ಶೀತ ಗಾಳಿ ಹಿನ್ನೆಲೆ ನಾಳೆ ರಾಜ್ಯದ 7 ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌

Cold Wave Alert For Karnataka: ಉತ್ತರ ಒಳನಾಡಿನ ಬೀದರ್, ಕಲಬುರಗಿ, ವಿಜಯಪುರ, ಯಾದಗಿರಿ, ರಾಯಚೂರು, ಬಾಗಲಕೋಟೆ, ಬೆಳಗಾವಿ ಜಿಲ್ಲೆಗಳಲ್ಲಿ ಭಾನುವಾರ ತೀವ್ರ ಶೀತಗಾಳಿ ಸಾಧ್ಯತೆ ಮತ್ತು ಗದಗ, ಕೊಪ್ಪಳ, ಧಾರವಾಡ, ಹಾವೇರಿ ಜಿಲ್ಲೆಗಳಲ್ಲಿ ಶೀತಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮೈಸೂರಿನಲ್ಲಿ ಘೋರ ಘಟನೆ; ಬಿಸಿನೀರಿನ ಪಾತ್ರೆಗೆ ಬಿದ್ದು 2 ವರ್ಷದ ಬಾಲಕಿ ಸಾವು

ಮೈಸೂರಿನಲ್ಲಿ ಬಿಸಿನೀರಿನ ಪಾತ್ರೆಗೆ ಬಿದ್ದು 2 ವರ್ಷದ ಬಾಲಕಿ ಸಾವು

Mysuru News: ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಜಯಗಿರಿ ಹಾಡಿಯಲ್ಲಿ ಘಟನೆ ನಡೆದಿದೆ. ತಾಯಿ ಸ್ನಾನ ಮಾಡಿಸಲು ಪಾತ್ರೆಯಲ್ಲಿ ಬಿಸಿ ನೀರಿಟ್ಟು, ತಣ್ಣೀರು ತರಲು ಹೋಗಿದ್ದಾರೆ. ಈ ವೇಳೆ ಮಗು ಬಿಸಿ ನೀರಿನ ಪಾತ್ರೆಗೆ ಬಿದ್ದು ಮೃತಪಟ್ಟಿದೆ.

Bagalkot News: ಬುದ್ಧಿಮಾಂದ್ಯ ಬಾಲಕನ ಕಣ್ಣಿಗೆ ಖಾರದ ಪುಡಿ ಎರಚಿ, ಪೈಪ್‌ನಿಂದ ಹೊಡೆದ ಶಿಕ್ಷಕ ದಂಪತಿ!

ಬುದ್ಧಿಮಾಂದ್ಯ ಬಾಲಕನ ಕಣ್ಣಿಗೆ ಖಾರದ ಪುಡಿ ಎರಚಿ ಹಲ್ಲೆಗೈದ ಶಿಕ್ಷಕ!

ಬಾಗಲಕೋಟೆಯಲ್ಲಿ ವಸತಿಶಾಲೆಯ ಮಾಲೀಕ ಹಾಗೂ ಶಿಕ್ಷಕ ಅಕ್ಷಯ್ ಎಂಬಾತ ಬುದ್ಧಿಮಾಂದ್ಯ ಬಾಲಕನ ಮೇಲೆ ಹಲ್ಲೆ ನಡೆಸಿದ್ದಾನೆ. ಬಾಲಕನನ್ನು ಪ್ಲಾಸ್ಟಿಕ್ ಪೈಪ್‌ನಿಂದ ರಕ್ತ ಹೆಪ್ಪುಗಟ್ಟುವಂತೆ ಥಳಿಸಲಾಗಿದೆ, ಆ ಸಂದರ್ಭದಲ್ಲಿ ಬಾಲಕನ ಕಣ್ಣಿಗೆ ಖಾರದಪುಡಿ ಎರಚಿ, ಚಿತ್ರಹಿಂಸೆ ನೀಡಲಾಗಿದೆ.

ದ್ವೇಷ ಭಾಷಣ ತಡೆ ಕಾಯ್ದೆಯಡಿ ಪ್ರಿಯಾಂಕ್ ಖರ್ಗೆ ಮೊದಲ ಅಪರಾಧಿ; ಕ್ಷಮೆಗೆ ಗೋವಿಂದ ಕಾರಜೋಳ ಆಗ್ರಹ

ಪ್ರಿಯಾಂಕ್ ಖರ್ಗೆ ಕೂಡಲೇ ಕ್ಷಮೆ ಕೇಳಲಿ: ಗೋವಿಂದ ಕಾರಜೋಳ ಆಗ್ರಹ

Govind Karjol: ಆಡಳಿತ- ವಿಪಕ್ಷದ ನಡುವೆ ಟೀಕೆ -ಟಿಪ್ಪಣಿ ನಡೆಯುವುದು ಪ್ರಜಾಪ್ರಭುತ್ವದ ಸೌಂದರ್ಯ. ಟೀಕೆ ಟಿಪ್ಪಣಿಗಳು ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು ಇರಬೇಕು. ಜನರ ಕಲ್ಯಾಣಕ್ಕಾಗಿ ಇರಬೇಕು. ವೈಯಕ್ತಿಕ ದ್ವೇಷದಿಂದ ಹಿರಿಯರನ್ನು ಅಪಮಾನ ಮಾಡುವ ಶಬ್ದ ಬಳಸುವುದು ಯೋಗ್ಯವಲ್ಲ, ತರವಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಸಂಸದ ಗೋವಿಂದ ಕಾರಜೋಳ ಹೇಳಿದ್ದಾರೆ.

ಲೈಂಗಿಕ ಆಟಿಕೆ ಖರೀದಿಸುತ್ತಿರುವವರಲ್ಲಿ ಬೆಂಗಳೂರಿಗರೇ ನಂಬರ್ 1; ಟಾಯ್‌ಗೆ 4 ಲಕ್ಷ ರುಪಾಯಿ!

ಲೈಂಗಿಕ ಆಟಿಕೆ ಖರೀದಿಸುತ್ತಿರುವವರಲ್ಲಿ ಬೆಂಗಳೂರಿಗರೇ ನಂಬರ್ 1

Bengaluru News: ಇತ್ತೀಚಿನ ವರದಿಯೊಂದರ ಪ್ರಕಾರ, ಭಾರತದಲ್ಲಿ ಸೆಕ್ಸ್ ಗೊಂಬೆಗಳ ಖರೀದಿಯಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ವಿಶೇಷವಾಗಿ ಸುಮಾರು 4 ಲಕ್ಷ ರುಪಾಯಿ ಮೌಲ್ಯದ ಸೆಕ್ಸ್ ಟಾಯ್‌ಗಳ ಮಾರಾಟವಾಗುತ್ತಿದೆ. ಬದಲಾಗುತ್ತಿರುವ ಜೀವನಶೈಲಿ, ತಂತ್ರಜ್ಞಾನ ಪ್ರಭಾವ ಮತ್ತು ಖಾಸಗಿ ಆಯ್ಕೆಗಳ ಬಗ್ಗೆ ಹೆಚ್ಚುತ್ತಿರುವ ಮುಕ್ತ ಮನೋಭಾವ ಈ ಪ್ರವೃತ್ತಿಗೆ ಕಾರಣ.

KSRTC Bus: ಪ್ರಯಾಣಿಕರಿಗೆ ಸಿಹಿಸುದ್ದಿ; ಕ್ರಿಸ್‌ಮಸ್‌ ಹಿನ್ನೆಲೆ ಕೆಎಸ್‌ಆರ್‌ಟಿಸಿಯಿಂದ 1,000 ಹೆಚ್ಚುವರಿ ಬಸ್​​ ವ್ಯವಸ್ಥೆ

ಕ್ರಿಸ್‌ಮಸ್‌ಗೆ ಕೆಎಸ್‌ಆರ್‌ಟಿಸಿಯಿಂದ 1,000 ಹೆಚ್ಚುವರಿ ಬಸ್​​ ವ್ಯವಸ್ಥೆ

ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಡಿ.19, 20 ಹಾಗೂ 24ರಂದು ಬೆಂಗಳೂರಿನಿಂದ ವಿವಿಧ ಸ್ಥಳಗಳಿಗೆ 1000 ಹೆಚ್ಚುವರಿ ವಾಹನಗಳ ವಿಶೇಷ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ನಂತರ ರಾಜ್ಯದ ಮತ್ತು ಅಂತಾರಾಜ್ಯದ ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ಡಿ.26 ಹಾಗೂ 28ರಂದು ವಿಶೇಷ ಬಸ್‌ಗಳು ಕಾರ್ಯಾಚರಣೆ ನಡೆಸಲಿವೆ.

ಸಭ್ಯ ಉಡುಗೆ, ಸಮಯಪಾಲನೆ ಕಡ್ಡಾಯ: ಸರ್ಕಾರಿ ನೌಕರರಿಗೆ ಕಠಿಣ ನಿಯಮ ಜಾರಿ

ಸಭ್ಯ ಉಡುಗೆ, ಸಮಯಪಾಲನೆ ಕಡ್ಡಾಯ: ಸರ್ಕಾರಿ ನೌಕರರಿಗೆ ಕಠಿಣ ನಿಯಮ ಜಾರಿ

Dress code for government employees: ರಾಜ್ಯ ಸರ್ಕಾರದ ಕಚೇರಿಗಳಲ್ಲಿ ಸರ್ಕಾರಿ ನೌಕರರು ಚಲನವಲನ ವಹಿ, ನಗದು ಘೋಷಣೆ ವಹಿಯನ್ನು ನಿರ್ವಹಣೆ ಮಾಡದಿರುವುದು, ಸಭ್ಯ ಉಡುಗೆ ತೊಡುಗೆಗಳನ್ನು ಧರಿಸದಿರುವ ಕುರಿತು ಸಾರ್ವಜನಿಕರಿಂದ ದೂರುಗಳ ಬಂದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಕಠಿಣ ನಿಯಮಗಳನ್ನು ಜಾರಿ ಮಾಡಿದೆ.

CCRI: ಕಾಫಿ ಸಂಶೋಧನಾ ಕೇಂದ್ರಕ್ಕೆ ಶತಮಾನೋತ್ಸವ ಸಂಭ್ರಮ

ಕಾಫಿ ಸಂಶೋಧನಾ ಕೇಂದ್ರಕ್ಕೆ ಶತಮಾನೋತ್ಸವ ಸಂಭ್ರಮ

ಇಂದಿನಿಂದ ಮೂರು ದಿನಗಳು ಕಾಫಿ ಸಂಬಂಧಿತ ವಿವಿಧ ವಿಚಾರಗಳ ಬಗ್ಗೆ ಗೋಷ್ಠಿ, ಪ್ರದರ್ಶನ ಗಳಿಗೆ ಈ ಕೇಂದ್ರ ಸಜ್ಜಾಗಿದೆ. ಭಾರತದ ಕಾಫಿ ಕೃಷಿ ಸಂಶೋಧನೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಕಾಫಿ ನಾಡಿನ ಈ ಹೆಮ್ಮೆಯ ಕೇಂದ್ರದ ಶತಮಾನ ಸಂಭ್ರ ಮಕ್ಕಾಗಿ ಚಿಕ್ಕಮಗಳೂರು ಜಿಲ್ಲೆಯ ಬಾಳೆ ಹೊನ್ನೂರು ಎಂಬ ಪಟ್ಟಣ ಹಬ್ಬದ ಸಂಭ್ರಮದಿಂದ ಸಜ್ಜುಗೊಂಡಿದೆ.

ಹೈಕಮಾಂಡ್‌ ಕರೆದಾಗ ನಾನು, ಸಿಎಂ ದೆಹಲಿಗೆ ಹೋಗ್ತೇವೆ, ಕದ್ದುಮುಚ್ಚಿ ಹೋಗಲ್ಲ: ಡಿ.ಕೆ. ಶಿವಕುಮಾರ್

ನಾನು ಕದ್ದುಮುಚ್ಚಿ ದೆಹಲಿಗೆ ಹೋಗಲ್ಲ: ಡಿ.ಕೆ. ಶಿವಕುಮಾರ್

DK Shivakumar: ದೆಹಲಿ ನಾಯಕರು ನಿಮಗೆ ಆಹ್ವಾನ ನೀಡಿದ್ದಾರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಡಿ.ಕೆ. ಶಿವಕುಮಾರ್‌, ನಮ್ಮ ಹೈಕಮಾಂಡ್ ನಾಯಕರು ಸಿಎಂ ಮತ್ತು ನನಗೆ ಇಬ್ಬರಿಗೂ ಏನೋ ಹೇಳಿದ್ದಾರೆ. ಸೂಕ್ತ ಸಮಯದಲ್ಲಿ ಕರೆಸುತ್ತೇವೆ ಎಂದೂ ಇಬ್ಬರಿಗೂ ಹೇಳಿದ್ದಾರೆ. ಆಗ ಇಬ್ಬರೂ ದಿಲ್ಲಿಗೆ ಹೋಗುತ್ತೇವೆ ಎಂದು ಹೇಳಿದ್ದಾರೆ.

ಹಿರಿಯ ಪತ್ರಕರ್ತ ದೊಡ್ಡಬೊಮ್ಮಯ್ಯ ಹೃದಯಾಘಾತದಿಂದ ನಿಧನ; ಸಿಎಂ ಸಂತಾಪ

ಹಿರಿಯ ಪತ್ರಕರ್ತ ದೊಡ್ಡಬೊಮ್ಮಯ್ಯ ಹೃದಯಾಘಾತದಿಂದ ನಿಧನ; ಸಿಎಂ ಸಂತಾಪ

ಮೂಲತಃ ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ರೊಪ್ಪ ಗ್ರಾಮದವರಾದ ದೊಡ್ಡ ಬೊಮ್ಮಯ್ಯ ಅವರು, ಸುಮಾರು 30 ವರ್ಷ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿದ್ದಾರೆ. ಬೆಳಗಾವಿಯಲ್ಲಿ ವಿಧಾನಮಂಡಲದ ಅಧಿವೇಶನ ಮುಗಿದ ನಂತರ ಬೆಂಗಳೂರಿನ ನಿವಾಸಕ್ಕೆ ವಾಪಸ್‌ ತೆರಳುವಾಗ, ಬಸ್‌ನಲ್ಲಿ ಹೃದಯಾಘಾತವಾಗಿ ನಿಧನರಾಗಿದ್ದಾರೆ.

Bengaluru Power Cut: ಡಿ.22ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ

ಡಿ.22ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ

BESCOM News: ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಪ್ರೆಸ್ಟೀಜ್ ಫಾಲ್ಕಾನ್ ಸಿಟಿ ಉಪಕೇಂದ್ರ ವ್ಯಾಪ್ತಿಯ ಹಲವೆಡೆ ಡಿ.22ರಂದು ಸೋಮವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 4 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

Self Harming: ಕಲಬುರಗಿಯಲ್ಲಿ ಬೆಂಕಿ ಹಚ್ಚಿಕೊಂಡು ಬಿಜೆಪಿ ಕಾರ್ಯಕರ್ತೆ ಆತ್ಮಹತ್ಯೆ

ಕಲಬುರಗಿಯಲ್ಲಿ ಬೆಂಕಿ ಹಚ್ಚಿಕೊಂಡು ಬಿಜೆಪಿ ಕಾರ್ಯಕರ್ತೆ ಆತ್ಮಹತ್ಯೆ

ನಂದಿಕೂರ ಗ್ರಾಮದಲ್ಲಿ ಮಲ್ಲಿನಾಥ ಬಿರಾದಾರ್ ಎಂಬವರ ಮನೆಯಲ್ಲಿ ಜ್ಯೋತಿ ಪಾಟೀಲ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಬ್ಬರೂ ಬಿಜೆಪಿ ಕಾರ್ಯಕರ್ತರು ಎಂದು ತಿಳಿದುಬಂದಿದೆ. ಜ್ಯೋತಿ ಪಾಟೀಲ್ ಕಲಬುರಗಿಯ ಬ್ರಹ್ಮಪುರ ಬಡಾವಣೆಯ ನಿವಾಸಿ ಎಂದು ತಿಳಿದುಬಂದಿದೆ. ಘಟನೆ ಕುರಿತು ಫರತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫುಟ್‌ಬಾಲ್‌ನಂತೆ ಮಗುವಿಗೆ ಒದ್ದ ಸೈಕೋ ರಂಜನ್‌ ಮೇಲೆ ಪೋಕ್ಸೋ ಕೇಸ್‌ ದಾಖಲಿಸಲು ಮುಂದಾದ ಪೊಲೀಸರು

ಸೈಕೋ ರಂಜನ್‌ ಮೇಲೆ ಪೋಕ್ಸೋ ಕೇಸ್‌ ದಾಖಲಿಸಲು ಮುಂದಾದ ಪೊಲೀಸರು

ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆ ವೇಳೆ ಸೈಕೋ ರಂಜನ್ ಮಕ್ಕಳ ಮೇಲೆ ನಡೆಸಿರೋ ವಿಕೃತಿಯ ಸಾಲು ಸಾಲು ಘಟನೆಗಳು ಬೆಳಕಿಗೆ ಬಂದಿವೆ. ಸೈಕಲ್‌ನಲ್ಲಿ ಹೋಗುತ್ತಿದ್ದ ಬಾಲಕನ ತಲೆ ಕೂದಲು ಹಿಡಿದು ಗರಗರನೇ ತಿರುಗಿಸಿ ಹಲ್ಲೆ ನಡೆಸಿದ್ದ. ಒಂದು ಮಗುವಿನ ಮೇಲೆ ಬೈಕ್‌ ಹತ್ತಿಸಲು ಯತ್ನಿಸಿದ್ದ. ಹೀಗೆ ಒಂದು ವಾರದ ಅಂತರದಲ್ಲಿ ನಾಲ್ಕು ಮಕ್ಕಳಿಗೆ ಹಲ್ಲೆ ಮಾಡಿ ಕಿರುಕುಳ ನೀಡಿದ್ದಾನೆ.

Loading...