ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕರ್ನಾಟಕ

ED Raid: ಶಾಸಕ ವೀರೇಂದ್ರ ಪಪ್ಪಿ ಮನೆಯಲ್ಲಿ 21.43 ಕೆಜಿ ಚಿನ್ನದ ಬಿಸ್ಕೆಟ್‌, 10.98 ಕೆಜಿ ಚಿನ್ನಲೇಪಿತ ಬೆಳ್ಳಿ ಗಟ್ಟಿ ಜಪ್ತಿ!

ಶಾಸಕ ವೀರೇಂದ್ರ ಪಪ್ಪಿ ಮನೆಯಲ್ಲಿ 21.43 ಕೆಜಿ ಚಿನ್ನದ ಬಿಸ್ಕೆಟ್‌ ಜಪ್ತಿ!

K. C. Veerendra Puppy: ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಇಡಿ ಮಾಹಿತಿ ಹಂಚಿಕೊಂಡಿದೆ. ಕೆ.ಸಿ. ವೀರೇಂದ್ರ ಮತ್ತು ಇತರರ ವಿರುದ್ಧ ಅಕ್ರಮ ಆನ್‌ಲೈನ್ ಬೆಟ್ಟಿಂಗ್‌ ಪ್ರಕರಣಕ್ಕೆ ಸಂಬಂಧಿಸಿ ಪಿಎಂಎಲ್‌ಎ ಕಾಯ್ದೆ 2002ರಡಿ ಬೆಂಗಳೂರಿನ ಇಡಿಯಿಂದ, ಚಳ್ಳಕೆರೆಯಲ್ಲಿ ಸೆ.6ರಂದು ದಾಳಿ ನಡೆಸಲಾಗಿತ್ತು.

MLA Satish Sail: ಅಕ್ರಮ ಆಸ್ತಿ ಗಳಿಕೆ ಪ್ರಕರಣ; ಇಡಿಯಿಂದ ಕಾಂಗ್ರೆಸ್‌ ಶಾಸಕ ಸತೀಶ್ ಸೈಲ್ ಬಂಧನ

ಅಕ್ರಮ ಆಸ್ತಿ ಗಳಿಕೆ ಪ್ರಕರಣ; ಇಡಿಯಿಂದ ಕಾಂಗ್ರೆಸ್‌ ಶಾಸಕ ಸತೀಶ್ ಸೈಲ್ ಬಂಧನ

Disproportionate assets case: ಕಾರವಾರ ಶಾಸಕ ಸತೀಶ್ ಸೈಲ್ ಅವರ ನಿವಾಸ ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಆಗಸ್ಟ್ 13 ಮತ್ತು 14ರಂದು ದಾಳಿ ನಡೆಸಿ, ಕೋಟ್ಯಂತರ ರೂಪಾಯಿ ನಗದು, ಚಿನ್ನಾಭರಣ ಮತ್ತು ಬ್ಯಾಂಕ್ ಖಾತೆಗಳಲ್ಲಿ ದೊಡ್ಡ ಮೊತ್ತವನ್ನು ವಶಪಡಿಸಿಕೊಂಡಿತ್ತು. ಇದೀಗ ವಿಚಾರಣೆ ಬಳಿಕ ಅವರನ್ನು ಬಂಧಿಸಲಾಗಿದೆ.

Nepal Gen Z Protest: ನೇಪಾಳದಲ್ಲಿ ಹಿಂಸಾಚಾರ; 39 ಕನ್ನಡಿಗರ ರಕ್ಷಣೆಗೆ ಸಿಎಂ ಸಿದ್ದರಾಮಯ್ಯ ಸೂಚನೆ

ನೇಪಾಳದಲ್ಲಿ ಸಿಲುಕಿರುವ 39 ಕನ್ನಡಿಗರ ರಕ್ಷಣೆಗೆ ಸಿಎಂ ಸೂಚನೆ

CM Siddaramaiah: ನೇಪಾಳದಲ್ಲಿ ಪ್ರಕ್ಷುಬ್ದ ವಾತಾವರಣ ಸೃಷ್ಟಿಯಾಗಿದೆ. ಕಠ್ಮಂಡು ವಿಮಾನ ನಿಲ್ದಾಣದಲ್ಲಿ ಸಿಲುಕಿರುವ 39 ಮಂದಿ ಕನ್ನಡಿಗರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಸೂಚನೆ ನೀಡಿದ್ದಾರೆ.

MB Patil: ಧಾರವಾಡದಲ್ಲಿ ಜಪಾನಿನ ಹಿಟಾಚಿ ಮಷಿನರಿ ಕಂಪನಿಯ ಅಭಿವೃದ್ಧಿ ಕೇಂದ್ರ ಸ್ಥಾಪನೆ: ಎಂ.ಬಿ. ಪಾಟೀಲ

ಜಪಾನ್‌ನಲ್ಲಿ ರಾಜ್ಯದ ನಿಯೋಗದ ಎರಡನೇ ದಿನದ ಯಶಸ್ವಿ ರೋಡ್‌ ಷೋ

Invest Karnataka: ಜಪಾನಿನ ಹಿಟಾಚಿ ಕನ್‌ಸ್ಟ್ರಕ್ಷನ್‌ ಮಷಿನರಿ ಕಂಪನಿಯು ಧಾರವಾಡದಲ್ಲಿ ನಿರ್ಮಾಣ ಯಂತ್ರೋಪಕರಣಗಳ ಅಭಿವೃದ್ಧಿ ಕೇಂದ್ರ ಸ್ಥಾಪಿಸಲಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ. ಧಾರವಾಡದಲ್ಲಿ 2027ರ ವೇಳೆಗೆ ಕಾರ್ಯಾರಂಭ ಮಾಡಲಿರುವ ಈ ಕೇಂದ್ರವು, ನಿರ್ಮಾಣ ಯಂತ್ರೋಪಕರಣಗಳ ಜಾಗತಿಕ ಉತ್ಪನ್ನಗಳ ವಿನ್ಯಾಸ ರೂಪಿಸಲು ಮತ್ತು ಅಭಿವೃದ್ಧಿಪಡಿಸಲು ಆದ್ಯತೆ ನೀಡಲಿದೆ. 200 ಎಂಜಿನಿಯರ್‌ಗಳಿಗೆ ಇಲ್ಲಿ ಉದ್ಯೋಗ ಅವಕಾಶಗಳು ದೊರೆಯಲಿವೆ ಎಂದು ಸಚಿವರು ಹೇಳಿದ್ದಾರೆ.

ನಾಡೋಜ ಡಾ. ಗೊ.ರು. ಚನ್ನಬಸಪ್ಪ ಇವರಿಗೆ ಪ್ರತಿಷ್ಠಿತ 'ಬಸವ ವಿಭೂಷಣ' ಪುರಸ್ಕಾರ

ಡಾ. ಬಿ.ಡಿ. ಜತ್ತಿಯವರ 113ನೆಯ ಜನ್ಮದಿನೋತ್ಸವ

ಗೌರವಾನ್ವಿತ ಡಾ. ಬಿ.ಡಿ. ಜತ್ತಿಯವರ 113ನೆಯ ಜನ್ಮದಿನೋತ್ಸವ ಹಾಗೂ ಬಸವ ಸಮಿತಿಯ ಸಂಸ್ಥಾಪನಾ ದಿನಾಚರಣೆಯನ್ನು ಸೆ.10ರಂದು ಬೆಳಗ್ಗೆ 11.30ಕ್ಕೆ ಬಸವ ಸಮಿತಿಯ ಅನುಭವ ಮಂಟಪ ಸಭಾಂಗಣದಲ್ಲಿ ಆಚರಿಸಲಾಗುತ್ತಿದ್ದು, ಈ ಕಾರ್ಯಕ್ರಮದಲ್ಲಿ ಭಾರತ ಸರ್ಕಾರದ ರೈಲ್ವೆ ಖಾತೆ, ರಾಜ್ಯ ಸಚಿವ ವಿ.ಸೋಮಣ್ಣ ಉದ್ಘಾಟನೆ ಮಾಡಲಿದ್ದಾರೆ.

Kidwai Hospital: ಕ್ಯಾನ್ಸರ್‌ ಚಿಕಿತ್ಸೆಗೆ ದಾಖಲಾಗಿದ್ದ ಸಜಾ ಕೈದಿ ಕಿದ್ವಾಯಿ ಆಸ್ಪತ್ರೆಯಿಂದ ಪರಾರಿ; ವಿಡಿಯೋ ವೈರಲ್‌!

ಚಿಕಿತ್ಸೆಗೆ ದಾಖಲಾಗಿದ್ದ ಕೈದಿ ಕಿದ್ವಾಯಿ ಆಸ್ಪತ್ರೆಯಿಂದ ಪರಾರಿ!

Convict escapes: ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಸಜಾ ಕೈದಿಯನ್ನು ಬಿಜಾಪುರದಿಂದ ಬೆಂಗಳೂರಿನ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್‌ ಮಾಡಲಾಗಿತ್ತು. ಬಾಯಿ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಅಪರಾಧಿಯನ್ನ ಕಿದ್ವಾಯಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆ ತಂದಿದ್ದ ವೇಳೆ ಜೈಲು ಸಿಬ್ಬಂದಿ ಕಣ್ತಪ್ಪಿಸಿ ಪರಾರಿಯಾಗಿದ್ದಾನೆ.

ಜಾಗತಿಕ ಬೇಡಿಕೆ ಪೂರೈಕೆಗೆ ಹೈ-ವಾಲ್ಯೂಮ್ ಟ್ರಾನ್ಸ್‌ಫಾರ್ಮರ್ ಕಾರ್ಖಾನೆ ಆರಂಭಿಸಿದ ಬಿಒಎಸ್‌

ಹೈ-ವಾಲ್ಯೂಮ್ ಟ್ರಾನ್ಸ್‌ಫಾರ್ಮರ್ ಕಾರ್ಖಾನೆ ಆರಂಭಿಸಿದ ಬಿಒಎಸ್‌

ಗೇಮ್‌ಚೇಂಜ್‌ ಬಿಒಎಸ್‌ಗೆ 0.5-25 ಎಮ್‌ವಿಎ ರೇಂಜ್‌ವರೆಗೆ ಮತ್ತು 69 ಕೆವಿ ವರೆಗಿನ ವೋಲ್ಟೇಜ್‌ನ ಹೈ ವೋಲ್ಟೆಜ್‌ ವಿಭಾಗದ ಎಐ ಚಾಲಿತ ಡೇಟಾ ಸೆಂಟರ್, ರೆನೆವೇಬಲ್‌ ಎನರ್ಜಿ ಉತ್ಪನ್ನಗಳು , ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟೆಮ್, ದೊಡ್ಡ ಮಟ್ಟದ ಎಲೆಕ್ಟ್ರಿಫಿಕೇಶನ್‌ ಮೂಲಸೌಕರ್ಯ ಉತ್ಪನ್ನಗಳನ್ನು ಸಿದ್ಧಪಡಿಸಲು ನೆರವಾಗಿದೆ.

ಡ್ರೈವ್‌X ಡೈರೆಕ್ಟ್ ಪ್ರಾರಂಭಿಸುವುದರೊಂದಿಗೆ ಸಿ2ಸಿ ಮಾರುಕಟ್ಟೆಗೆ ಪ್ರವೇಶಿಸಿದ ಡ್ರೈವ್‌X ಮೊಬಿಲಿಟಿ

ಸಿ2ಸಿ ಮಾರುಕಟ್ಟೆಗೆ ಪ್ರವೇಶಿಸಿದ ಡ್ರೈವ್‌X ಮೊಬಿಲಿಟಿ

ಇದು ಅನುಕೂಲತೆ ಮತ್ತು ನಮ್ಯತೆಯನ್ನು ಬಯಸುವ ಗ್ರಾಹಕರಿಗೆ ಸರಿಯಾದ ಆಯ್ಕೆ ಯಾಗಿದೆ..ಇದು ದಾಖಲೆಗಳ ಸುಗಮಗೊಳಿಸುವಿಕೆ, ಖಾತರಿ ಆಯ್ಕೆಗಳು ಮತ್ತು ಮೌಲ್ಯವರ್ಧಿತ ಸೇವೆಗಳ ಮೂಲಕ ಮತ್ತಷ್ಟು ಭರವಸೆಯನ್ನು ನೀಡುತ್ತದೆ, ಇದು ಸಂಪೂರ್ಣ ಖರೀದಿ ಅನುಭವ ವನ್ನು ಸುಗಮಗೊಳಿಸುತ್ತದೆ

Bidar News: ಬೀದರ್‌ನಲ್ಲಿ ಕಾಲುವೆಗೆ ಹಾರಿ ಒಂದೇ ಕುಟುಂಬದ 6 ಮಂದಿ ಆತ್ಮಹತ್ಯೆಗೆ ಯತ್ನ, ನಾಲ್ವರ ಸಾವು, ಇಬ್ಬರು ಪಾರು

ಬೀದರ್‌ನಲ್ಲಿ ಕಾಲುವೆಗೆ ಹಾರಿ ಒಂದೇ ಕುಟುಂಬದ 4 ಮಂದಿ ಆತ್ಮಹತ್ಯೆ

Self Harming: ಒಂದೇ ಕುಟುಂಬದ ಆರು ಮಂದಿ, ಕಾರಂಜಾ ಡ್ಯಾಮ್‌ನ ಕಾಲುವೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಪೈಕಿ ಇಬ್ಬರನ್ನು ರಕ್ಷಣೆ ಮಾಡಿದ್ದು, ನಾಲ್ವರು ಮೃತಪಟ್ಟಿದ್ದಾರೆ. ಸಚಿವ ಈಶ್ವರ್‌ ಖಂಡ್ರೆ ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.

ಬೀಗ್ರು 'ಡೆಡ್ ಲೀಡ್ಸ್ ಸ್ಮಶಾನ' ಅಭಿಯಾನ ಪ್ರಾರಂಭ- ಸುಳ್ಳು ನಿರೀಕ್ಷೆಗಳ ಮೇಲಿನ ವ್ಯರ್ಥ ಮಾರ್ಕೆಟಿಂಗ್ ವೆಚ್ಚವನ್ನು ಕೊನೆಗೊಳಿಸಲು ಒಂದು ದಿಟ್ಟ ಕರೆ

ಬೀಗ್ರು 'ಡೆಡ್ ಲೀಡ್ಸ್ ಸ್ಮಶಾನ' ಅಭಿಯಾನ ಪ್ರಾರಂಭ

"ಸ್ಮಶಾನ" ಎಂಬ ಪರಿಕಲ್ಪನೆಯ ಮೂಲಕ ಈ ನಷ್ಟಗಳನ್ನು ಸಂಕೇತಿಸುವ ಮೂಲಕ, ಅನರ್ಹ ಅಭಿಯಾನಗಳು, ಉಬ್ಬಿಕೊಂಡಿರುವ ಮಾರಾಟ ವೆಚ್ಚಗಳು ಮತ್ತು ನಿರಂತರ ಅನುಸರಣೆಗಳು ಮಾರ್ಕೆಟಿಂಗ್ ಬಜೆಟ್‌ಗಳನ್ನು ಹೇಗೆ ಬರಿದಾಗಿಸುತ್ತಿವೆ ಎಂಬುದನ್ನು ಈ ಉಪಕ್ರಮವು ಒತ್ತಿ ಹೇಳುತ್ತದೆ ಮತ್ತು ಅಳೆಯಬಹುದಾದ ಕಡಿಮೆ ಆದಾಯವನ್ನು ನೀಡುತ್ತದೆ.

ಸದೃಢ ಬೆಳವಣಿಗೆ: ಕರ್ನಾಟಕದ ಸ್ಥಳೀಯ ಉದ್ಯಮಗಳಿಗೆ ಡಿಜಿಟಲ್ ಪಾವತಿಗಳಿಂದ ಉತ್ತೇಜನ

ಕರ್ನಾಟಕದ ಸ್ಥಳೀಯ ಉದ್ಯಮಗಳಿಗೆ ಡಿಜಿಟಲ್ ಪಾವತಿಗಳಿಂದ ಉತ್ತೇಜನ

ಹಂಪಿಯ ಪ್ರಾಚೀನ ದೇವಾಲಯ ಪಟ್ಟಣಗಳಿಂದ ಹಿಡಿದು ಬೆಳಗಾವಿಯ ಜನನಿಬಿಡ ಕೈಗಾರಿಕಾ ವಲಯಗಳವರೆಗೆ, ಮಂಗಳೂರಿನ ಅಭಿವೃದ್ಧಿಶೀಲ ಬಂದರು ಬದಿಯ ಮಾರುಕಟ್ಟೆಗಳಿಂದ ಹಿಡಿದು ಮೈಸೂರು ಅರಮನೆಯ ಸುತ್ತಮುತ್ತಲಿನ ಪ್ರಶಾಂತ ಬೀದಿಗಳವರೆಗೆ, ಸ್ಥಳೀಯ ವ್ಯವಹಾರಗಳ ಟ್ರೆಂಡ್‌ ನಲ್ಲಿ ಸ್ಪಷ್ಟ ಬದಲಾವಣೆಗಳು ಕಾಣುತ್ತಿವೆ.

ಫೇರ್‌ಟ್ರೇಡ್ ಇನ್ ಇಂಡಿಯಾ ಸಮ್ಮೇಳನದಲ್ಲಿ ಜಾಗತಿಕ ವ್ಯಾಪಾರ ವಲಯದ ಉತ್ಪಾದಕರಿಗೆ ಆದ್ಯತೆ

ಜಾಗತಿಕ ವ್ಯಾಪಾರ ವಲಯದ ಉತ್ಪಾದಕರಿಗೆ ಆದ್ಯತೆ

"ಫೇರ್‌ಟ್ರೇಡ್ ಇನ್ ಇಂಡಿಯಾ"ದ ಎರಡು ದಿನಗಳ ಸಮ್ಮೇಳನವು ಬೆಂಗಳೂರಿನ ದಿ ಛಾನ್ಸೆರಿ ಪೆವಿಲಿಯ ನ್‌ನಲ್ಲಿ ಆರಂಭವಾಗಿದ್ದು, ಈ ಬಾರಿ "ಸುಸ್ಥಿರತೆ, ಮಾರ್ಕೆಟ್‌ಗಳು ಮತ್ತು ಪ್ರಭಾವ" ಎಂಬ ಥೀಮ್ ಹೊಂದಿದೆ. ಇದರಲ್ಲಿ ಜಾಗತಿಕ ಮತ್ತು ಭಾರತೀಯ ಉತ್ಪಾದಕರು, ಉದ್ಯಮಗಳು, ಪಾಲಿಸಿ ನಿರೂಪಕರು ಮತ್ತು ಸುಸ್ಥಿರತೆ ನಾಯಕರು ಒಟ್ಟಿಗೆ ಸೇರಿದ್ದರು.

Karnataka Rains: ಯೆಲ್ಲೋ ಅಲರ್ಟ್; ಮುಂದಿನ 6 ದಿನ ರಾಜ್ಯದ ಉತ್ತರ, ದಕ್ಷಿಣ ಒಳನಾಡಿನಲ್ಲಿ ಅಬ್ಬರಿಸಲಿದೆ ಮುಂಗಾರು ಮಳೆ!

ಯೆಲ್ಲೋ ಅಲರ್ಟ್; ಮುಂದಿನ 6 ದಿನ ರಾಜ್ಯದಲ್ಲಿ ಅಬ್ಬರಿಸಲಿದೆ ಮುಂಗಾರು ಮಳೆ!

Weather Forecast: ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳವರೆಗೆ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಹಗುರದಿಂದ ಸಾಧಾರಣ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 29°C ಮತ್ತು 21°C ಇರುವ ಸಾಧ್ಯತೆ ಇದೆ.

Eye Makeup 2025: ಕಣ್ಣಿಗೆ ಐ ಶ್ಯಾಡೋ ಹಚ್ಚುವ ಮುನ್ನ ತಿಳಿದುಕೊಳ್ಳಬೇಕಾದ 5 ಸಂಗತಿಗಳು

ಕಣ್ಣಿಗೆ ಐ ಶ್ಯಾಡೋ ಹಚ್ಚುವ ಮುನ್ನ ತಿಳಿದುಕೊಳ್ಳಬೇಕಾದ 5 ಸಂಗತಿಗಳು

Eye Makeup 2025: ಕಂಗಳ ಅಂದವನ್ನು ಹೆಚ್ಚಿಸುವ ಐ ಶ್ಯಾಡೋಗಳನ್ನು ಹಚ್ಚುವ ಮುನ್ನ ಪ್ರಮುಖ 5 ಸಂಗತಿಗಳನ್ನು ತಿಳಿದುಕೊಳ್ಳುವುದು ಅಗತ್ಯ ಎನ್ನುತ್ತಾರೆ ಮೇಕಪ್ ಆರ್ಟಿಸ್ಟ್ ರಕ್ಷಾ. ಇದಕ್ಕಾಗಿ ಒಂದಿಷ್ಟು ಸಿಂಪಲ್ ಸಲಹೆ ಕೂಡ ನೀಡಿದ್ದಾರೆ.

Maddur stone-pelting: ಮದ್ದೂರು ಗಲಭೆ ಪ್ರಕರಣ; ತಪ್ಪೆಸೆಗಿದವರ ವಿರುದ್ಧ ಜಾತಿ ಧರ್ಮ ಪರಿಗಣಿಸದೇ ಕ್ರಮ ಎಂದ ಸಿಎಂ

ಮದ್ದೂರು ಗಲಭೆ; ತಪ್ಪೆಸೆಗಿದವರ ವಿರುದ್ಧ ಕಠಿಣ ಕ್ರಮ ಎಂದ ಸಿಎಂ

CM Siddaramaiah: ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮದ್ದೂರಿನ ಪ್ರಕರಣಕ್ಕೆ ಸಂಬಂಧಿಸಿದಂತೆ, 21 ಜನರನ್ನು ಈಗಾಗಲೇ ಬಂಧಿಸಿದ್ದು, ಯಾವುದೇ ಜಾತಿ, ಧರ್ಮಗಳನ್ನು ಸರ್ಕಾರ ಪರಿಗಣಿಸದೇ, ತಪ್ಪು ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ.

Bagalkot News: ಶಾಲೆಯಲ್ಲಿ ಇಬ್ಬರು ಮಕ್ಕಳ ಮಧ್ಯೆ ಗಲಾಟೆ; ಕಟ್ಟಿಗೆ ಇರಿತದಿಂದ ಕಣ್ಣು ಕಳೆದುಕೊಂಡ  ವಿದ್ಯಾರ್ಥಿ!

ಶಾಲೆಯಲ್ಲಿ ಗಲಾಟೆ; ಕಟ್ಟಿಗೆ ಇರಿತದಿಂದ ಕಣ್ಣು ಕಳೆದುಕೊಂಡ ವಿದ್ಯಾರ್ಥಿ!

Bagalkot News: ತೀವ್ರ ಗಾಯದ ಹಿನ್ನೆಲೆಯಲ್ಲಿ ಕಣ್ಣಿನ ಗುಡ್ಡೆಯನ್ನೇ ವೈದ್ಯರು ತೆಗೆದಿದ್ದಾರೆ. ಪೆನ್ ವಾಪಸ್‌ ಕೇಳುವ ವಿಚಾರದಲ್ಲಿ ಮಕ್ಕಳಿಬ್ಬರ ನಡುವೆ ಗಲಾಟೆ ನಡೆದಿದೆ. ಗಾಯಗೊಂಡ ವಿದ್ಯಾರ್ಥಿಯನ್ನು ಸದ್ಯ ಬೆಳಗಾವಿ ಜಿಲ್ಲೆಯ ಅಥಣಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

Pawan Kalyan: ಧರ್ಮಸ್ಥಳ ಪರ ನಿಂತ ಆಂಧ್ರ ಡಿಸಿಎಂ ಪವನ್‌ ಕಲ್ಯಾಣ್‌; ಸೆ.11ಕ್ಕೆ ಭೇಟಿ

ಸೆ.11ಕ್ಕೆ ಧರ್ಮಸ್ಥಳಕ್ಕೆ ಆಂಧ್ರ ಡಿಸಿಎಂ ಪವನ್‌ ಕಲ್ಯಾಣ್‌ ಭೇಟಿ

Dharmasthala Case: ಸೆಪ್ಟೆಂಬರ್ 11 ಗುರುವಾರ ಸಂಜೆ 5 ಗಂಟೆಗೆ ಆಂಧ್ರ ಪ್ರದೇಶದ ಡಿಸಿಎಂ ಪವನ್ ಕಲ್ಯಾಣ್ ನೇತೃತ್ವದಲ್ಲಿ ಧರ್ಮಸ್ಥಳದಲ್ಲಿ ದೇವರಿಗೆ ವಿಶೇಷ ಸೇವೆ ಹಮ್ಮಿಕೊಳ್ಳಲಾಗಿದೆ. ಕ್ಷೇತ್ರದ ಅಪಪ್ರಚಾರ ವಿರುದ್ಧ ವಿಶೇಷ ಪೂಜೆ ಸಲ್ಲಿಸಲು ಪವನ್ ಕಲ್ಯಾಣ್ ಮುಂದಾಗಿದ್ದಾರೆ ಎನ್ನಲಾಗಿದೆ.

Actor Darshan: ಬಳ್ಳಾರಿ ಜೈಲಿಗೆ ನಟ ದರ್ಶನ್‌ ಸ್ಥಳಾಂತರಕ್ಕೆ ಕೋರ್ಟ್‌ ನಕಾರ; ಹಾಸಿಗೆ, ದಿಂಬು ನೀಡಲು ಅನುಮತಿ

ಬಳ್ಳಾರಿ ಜೈಲಿಗೆ ನಟ ದರ್ಶನ್‌ ಸ್ಥಳಾಂತರಕ್ಕೆ ಕೋರ್ಟ್‌ ನಕಾರ

Renukaswamy Murder Case: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ನಟ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲು ಕೋರಿ ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನ್ಯಾಯಾಲಯದಲ್ಲಿ ನಡೆದಿದೆ. ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲು ಸಕಾರಣಗಳಿಲ್ಲ ಎಂದು ಹೇಳಿ, ನಟನ ಸ್ಥಳಾಂತರಕ್ಕೆ ಕೋರ್ಟ್ ನಿರಾಕರಿಸಿದೆ. ಹೀಗಾಗಿ ನಟ ದರ್ಶನ್‌ಗೆ ಪರಪ್ಪನ ಅಗ್ರಹಾರ ಜೈಲೇ ಗತಿಯಾಗಿದೆ.

Murder Attempt: ಲವರ್‌ ಜೊತೆ ಸೇರಿ ಗಂಡನ ಮರ್ಮಾಂಗ ಹಿಸುಕಿದ ಪತ್ನಿ, ಕೊಲೆ ಯತ್ನದಿಂದ ಪಾರಾದ ಗಂಡ

ಲವರ್‌ ಜೊತೆ ಸೇರಿ ಗಂಡನ ಮರ್ಮಾಂಗ ಹಿಸುಕಿದ ಪತ್ನಿ, ಕೊಲೆಯಿಂದ ಪಾರಾದ ಗಂಡ

Vijayapura Crime: ಪರಾರಿಯಾಗಿರುವ ಸುನಂದಾ ಪ್ರಿಯಕರ ಸಿದ್ಧಪ್ಪ ಅಜ್ಞಾತ ಸ್ಥಳದಿಂದ ವಿಡಿಯೋವೊಂದನ್ನು ಹರಿಬಿಟ್ಟಿದ್ದು, ಗಂಡನ ಹತ್ಯೆಗೆ ಸುನಂದಾ ಮಾಡಿದ್ದ ಪ್ಲ್ಯಾನ್ ಅನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾನೆ. ಭೀರಪ್ಪನ ಹತ್ಯೆಗೆ ಸ್ಕೆಚ್‌ ಹಾಕಿದ್ದೇ ಸ್ವತಃ ಪತ್ನಿ ಸುನಂದಾ. ಆಕೆಯೇ ಹತ್ಯೆಗೆ ದಿನ ಹಾಗೂ ಟೈಂ ಫಿಕ್ಸ್‌ ಮಾಡಿದ್ದಳು ಎಂದಿದ್ದಾನೆ.

Gruhalakshmi scheme: 2.13 ಲಕ್ಷ ಫಲಾನುಭವಿಗಳಿಗೆ ಗೃಹಲಕ್ಷ್ಮಿ ಹಣ ಕಡಿತ, ಸಿಎಂ ಖಡಕ್‌ ಸೂಚನೆ

2.13 ಲಕ್ಷ ಫಲಾನುಭವಿಗಳಿಗೆ ಗೃಹಲಕ್ಷ್ಮಿ ಹಣ ಕಡಿತ, ಸಿಎಂ ಖಡಕ್‌ ಸೂಚನೆ

CM Siddaramaiah: ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿ ಆದಾಯ ತೆರಿಗೆ ಪಾವತಿದಾರರಾಗಿದ್ದಲ್ಲಿ ಹಾಗೂ ಜಿ.ಎಸ್.ಟಿ. ರಿಟರ್ನ್ಸ್ ಸಲ್ಲಿಸುವವರಾಗಿದ್ದಲ್ಲಿ ಯೋಜನೆಗೆ ಅರ್ಹರಿರುವುದಿಲ್ಲ.‌ ಈವರೆಗೆ ರಾಜ್ಯಾದ್ಯಂತ ಗೃಹಲಕ್ಷ್ಮಿ ಯೋಜನೆಯಡಿ 2.13 ಲಕ್ಷ ಫಲಾನುಭವಿಗಳು ಐಟಿ/ಜಿಎಸ್ಟಿ ವ್ಯಾಪ್ತಿಗೊಳಪಡುತ್ತಾರೆ ಎಂದು ತಿಳಿದು ಬಂದಿದೆ.

Karnataka Weather: ಇಂದಿನ ಹವಾಮಾನ; ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ನಿರೀಕ್ಷೆ

ಇಂದಿನ ಹವಾಮಾನ; ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ನಿರೀಕ್ಷೆ

Karnataka Rains: ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳವರೆಗೆ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಹಗುರ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 30°C ಮತ್ತು 21°C ಇರುವ ಸಾಧ್ಯತೆ ಇದೆ.

Bagepally News: ರಸಗೊಬ್ಬರಕ್ಕಾಗಿ ರೈತರ ಪರದಾಟ

ರಸಗೊಬ್ಬರಕ್ಕಾಗಿ ರೈತರ ಪರದಾಟ

ಪಟ್ಟಣದ ಟಿಎಪಿಸಿಎಂಸಿ ರಸಗೊಬ್ಬರಗಳ ಮಾರಾಟ ಕೇಂದ್ರದ ಹಾಗೂ ತಾಲೂಕಿನ ಗೂಳೂರಿನಲ್ಲಿ ಸೊಸೈಟಿಯ ಮುಂದೆ ಸೋಮವಾರ ಮುಂಜಾನೆ ಸುಮಾರು 4.30ಗಂಟೆಯಿಂದಲೇ ಯುರಿಯಾ ರಸಗೊಬ್ಬರಕ್ಕಾಗಿ ನೂರಾರು ರೈತರು ಸಾಲುಗಟ್ಟಿ ಪರದಾಡಿದರು. ಎಷ್ಟೇ ಪರದಾಟ ನಡೆಸಿದರೇ ಹಲವಾರು ರೈತರು ರಸಗೊಬ್ಬರ ದೊರೆಯದ ವಾಪಸ್ಸು ಹೋದರು.

Adichunchanagiri Sri: ಸೆ.22ರಂದು ನಡೆಯುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ- 2025ರ ಒಕ್ಕಲಿಗ ಎಂದೇ ನಮೂದಿಸಿ : ಚುಂಚಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ಕರೆ

ಸೆ.22ರಂದು  ನಡೆಯುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ

ದೇಶದಲ್ಲಿ ಪ್ರತಿ ೧೦ ವರ್ಷಕ್ಕೊಮ್ಮೆ ಜಾತಿ ಗಣತಿ ಆಗಬೇಕು ಎಂದು ನಿಯಮವಿದ್ದರೂ ಕಾಲಕಾಲಕ್ಕೆ ಮಾಡುವಲ್ಲಿ ಆಡಳಿತ ಪಕ್ಷಗಳು ವಿಫಲವಾಗಿವೆ. ಆದರೆ ರಾಜ್ಯ ಸರಕಾರ 2013-14ರಲ್ಲಿ ನಡೆಸಿದ್ದ ಕಾಂತರಾಜ್ ಆಯೋಗದ ವರದಿ ಸರಿಯಾಗಿ ನಡೆದಿಲ್ಲ ಎಂಬುದನ್ನು ಮನಗಂಡಿರುವ ಸರಕಾರ ಬಹಳ ವಿವೇಚನೆಯಿಂದ ಮರುಸಮೀಕ್ಷೆಗೆ ಅವಕಾಶ ನೀಡಿರುವುದು ಸಂತೋಷದ ಸಂಗತಿಯಾಗಿದೆ

Dinesh Gundurao: 300 ವಿದ್ಯಾರ್ಥಿಗಳಿಂದ ಶ್ರೀ ವಿಷ್ಣುವಿನ ದಶಾವತಾರ ಸಾಂಸ್ಕೃತಿಕ ನೃತ್ಯ ಪ್ರದರ್ಶನ

ಶ್ರೀ ಲಲಿತಾ ಕಲಾನಿಕೇತನ ನೃತ್ಯ ಸಂಸ್ಥೆಯ ಬೆಳ್ಳಿಹಬ್ಬ ಸಂಭ್ರಮಾಚರಣೆ

ಇತಿಹಾಸದಲ್ಲಿ ಅಜರಾಮರ ಎನಿಸುವಂತೆ ಹೊಸ ಕಲಾ ಪ್ರಬೇಧವನ್ನು ಸೃಷ್ಟಿಸಿ, ಕಲಾ ಪ್ರಪಂಚ ದಲ್ಲಿ ತನ್ನದೇ ಛಾಪು ಮೂಡಿಸಿದ ಶ್ರೀ ಲಲಿತ ಕಲಾ ನಿಕೇತನದ ಸಂಸ್ಥೆಯ 300ಕ್ಕೂ ಹೆಚ್ಚು ವಿದ್ಯಾ ರ್ಥಿ ಬಳಗದೊಂದಿಗೆ ಶ್ರೀ ವಿಷ್ಣುವಿನ ದಶಾವತಾರ ಪ್ರಸ್ತುತ ಪಡಿಸುವ ಸಾಂಸ್ಕೃತಿಕ Stand ಪ್ರದರ್ಶಿಸಿದರು

Loading...