ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಮನರಂಜನೆ
Urvashi Rautela: ದಬಿಡಿ ದಿಬಿಡಿ ಹಾಡಿನ ಲಿರಿಕ್ಸ್ ಮರೆತು ಟ್ರೋಲ್ ಆದ ನಟಿ ಊರ್ವಶಿ ರೌಟೇಲಾ!

ದಬಿಡಿ- ದಿಬಿಡಿ ಹಾಡಿನ ಲಿರಿಕ್ಸ್ ಮರೆತು ಟ್ರೋಲ್ ಆದ ನಟಿ ಊರ್ವಶಿ!..

ಟಾಲಿವುಡ್‌ ಸ್ಟಾರ್ ನಟ ಬಾಲಕೃಷ್ಣ ನಟಿಸಿರುವ ಡಾಕು ಮಹಾರಾಜ್ ಇತ್ತೀಚೆಗಷ್ಟೇ ಅದ್ಧೂರಿಯಾಗಿ ರಿಲೀಸ್ ಆಗಿತ್ತು. ಊರ್ವಶಿ ರೌಟೇಲಾ ಈ ಸಿನಿಮಾದಲ್ಲಿ ಬಾಲಕೃಷ್ಣ ಜೊತೆ ಹಾಡೊಂದರಲ್ಲಿ ಸಖತ್ ಸ್ಟೆಪ್ ಹಾಕಿದ್ದರು.ಇದೀಗ ನಟಿ ಸಂದರ್ಶನವೊಂದರಲ್ಲಿ ದಬಿಡಿ ದಿಬಿಡಿ ಹಾಡನ್ನು ಹೇಳಲು ಹೋಗಿ ಈ ಹಾಡಿನ ಲಿರಿಕ್ಸ್ ಮರೆತು ಗೊಂದಲಕ್ಕೆ ಒಳಗಾಗಿದ್ದಾರೆ. ಸದ್ಯ ನಟಿಯ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗಿದ್ದು ನಟಿ ಟ್ರೋಲ್ ಗೆ ಗುರಿಯಾಗಿದ್ದಾರೆ..

Fawad Khan Movie: ಪಾಕ್ ನಟ ಫಯಾದ್ ಖಾನ್ ನಟನೆಯ ಅಬಿರ್ ಗುಲಾಲ್ ಸಿನಿಮಾದ ಹಾಡುಗಳು ಯೂಟ್ಯೂಬ್‌ನಿಂದ ಡಿಲೀಟ್

ಪಾಕ್‌ ನಟ ಸಿನಿಮಾ ಹಾಡು ಯೂಟ್ಯೂಬ್‌ನಿಂದ ಡಿಲೀಟ್

ಪಾಕ್ ನಟ ಫವಾದ್ ಖಾನ್(Fawad Khan movie) ನಟಿಸಿರುವ ಹಿಂದಿ ಸಿನಿಮಾವೊಂದರ ಮೇಲೆ ಉಗ್ರರ ದಾಳಿಯ ನೇರ ಎಫೆಕ್ಟ್ ಬಿದ್ದಿದೆ. ಭಾರತದಲ್ಲಿ ಬಿಡುಗಡೆ ಆಗಬೇಕಿದ್ದ ಪಾಕಿಸ್ತಾನದ ನಟನ ಸಿನಿಮಾ ಒಂದಕ್ಕೆ ಇದೀಗ ಅವಕಾಶ ನಿರಾಕರಿಸಲಾಗಿದೆ. ಈ ಸಿನಿಮಾದ ಹಾಡು ಮತ್ತು ಟೀಸರ್ ನ ತುಣುಕು ಯೂಟ್ಯೂಬ್‌ನಿಂದ ತೆಗೆದುಹಾಕಲಾಗಿದೆ.

Bhagya Lakshmi Serial: ತಾಂಡವ್ ಆಫೀಸಲ್ಲಿ ಭಾಗ್ಯಂಗೆ ಸಿಕ್ತು ಭಾರೀ ಗೌರವ: ದಂಗಾದ ಶ್ರೇಷ್ಠಾ

ತಾಂಡವ್ ಆಫೀಸಲ್ಲಿ ಭಾಗ್ಯಂಗೆ ಸಿಕ್ತು ಭಾರೀ ಗೌರವ: ದಂಗಾದ ಶ್ರೇಷ್ಠಾ

ಕುತೂಹಲ ತಡೆಯಲಾಗದೆ ತಾಂಡವ್-ಶ್ರೇಷ್ಠಾ, ಭಾಗ್ಯ ಬಳಿಯೇ ಹೋಗಿ ನಿನೇನು ಮಾಡ್ತಾ ಇದ್ದೀಯ ಇಲ್ಲಿ? ಎಂದು ಪ್ರಶ್ನಿಸಿದ್ದಾರೆ. ಆಗ ಭಾಗ್ಯ ಏನೋ ಸ್ವಲ್ಪ ಕೆಲಸ ಇತ್ತು, ಅದಕ್ಕಾಗಿ ಬಂದೆ ಎಂದು ಅಲ್ಲಿಂದ ಹೊರಟು ಹೋಗಿದ್ದಾಳೆ. ಶ್ರೇಷ್ಠಾ ನಾನಾ ಪ್ಲ್ಯಾನ್ ಮಾಡಿ ಹೆಚ್ಆರ್ ಬಳಿ ಹೋಗಿ ಭಾಗ್ಯ ಯಾಕೆ ಬಂದಿದ್ದಳು ಎಂಬ ವಿಚಾರವನ್ನು ತಿಳಿಯಲು ಮುಂದಾಗುತ್ತಾಳೆ. ಆದರೆ,

Abir Gulaal Ban In India: ಪಾಕ್ ನಟ ಫವಾದ್ ಖಾನ್ ಅಭಿನಯದ ಬಾಲಿವುಡ್‌ ಚಿತ್ರ 'ಅಬೀರ್ ಗುಲಾಲ್’ ಬ್ಯಾನ್

ಪಾಕ್ ನಟನ ಸಿನಿಮಾ ರಿಲೀಸ್‌ಗೆ ನಿಷೇಧ ಹೇರಿದ ಭಾರತ

Abir Gulaal Ban In India: ಪಾಕಿಸ್ತಾನಿ ನಟ ಫವಾದ್ ಖಾನ್ ಅಭಿನಯದ ಬಾಲಿವುಡ್ ಚಿತ್ರ ಅಬೀರ್ ಗುಲಾಲ್ ಭಾರತದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಈ ಚಿತ್ರದಲ್ಲಿ ವಾಣಿ ಕಪೂರ್ ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಏಪ್ರಿಲ್ 22ರ ಮಂಗಳವಾರ ನಡೆದ ಭೀಕರ ಭಯೋತ್ಪಾದಕ ದಾಳಿಯ ಬೆನ್ನಲ್ಲೇ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಭಾರತದ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಸಂಬಂಧಿಸಿದ ಮೂಲಗಳು ತಿಳಿಸಿವೆ.

Sanvi Sudeep: ಟಾಲಿವುಡ್ ಸಿನಿಮಾದಲ್ಲಿ ಕಿಚ್ಚನ ಮಗಳು ಸಾನ್ವಿ: ಮುಂದಿನ ವಾರವೇ ಚಿತ್ರ ತೆರೆಗೆ

ಟಾಲಿವುಡ್ ಸಿನಿಮಾದಲ್ಲಿ ಕಿಚ್ಚನ ಮಗಳು ಸಾನ್ವಿ

ತೆಲುಗು ಚಿತ್ರವೊಂದರಲ್ಲಿ ಕೆಲಸ ಮಾಡಿದ್ದಾರೆ. ಈ ಬಗ್ಗೆ ಟಾಲಿವುಡ್ ನಟ ನಾನಿ ಮಾಹಿತಿ ನೀಡಿದ್ದಾರೆ. ಇಲ್ಲಿ ಸಾನ್ವಿ ಹೀರೊಯಿನ್ ಆಗಿ ನಟಿಸುತ್ತಿಲ್ಲ ಅಥವಾ ಯಾವುದೇ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಬದಲಾಗಿ ನಾನಿ ನಟನೆಯ ತೆಲುಗಿನ ಆಕ್ಷನ್ ಥ್ರಿಲ್ಲರ್ ಹಿಟ್- 3 ಸಿನಿಮಾದ ಹಿನ್ನೆಲೆ ಗಾಯಕಿಯಾಗಿ ಹಾಡಿದ್ದಾರೆ.

Muddu Sose: ಮೊದಲ ವಾರದಲ್ಲೇ ಧೂಳೆಬ್ಬಿಸಿದ ತ್ರಿವಿಕ್ರಮ್ ಮುದ್ದುಸೊಸೆ ಧಾರಾವಾಹಿ: ಟಿಆರ್​ಪಿ ಎಷ್ಟು?

ಮೊದಲ ವಾರದಲ್ಲೇ ಧೂಳೆಬ್ಬಿಸಿದ ತ್ರಿವಿಕ್ರಮ್ ಮುದ್ದುಸೊಸೆ ಧಾರಾವಾಹಿ

ಕಳೆದ ವಾರ ಕಲರ್ಸ್ ಕನ್ನಡದಲ್ಲಿ ಲಕ್ಷ್ಮೀ ಬಾರಮ್ಮ ಧಾರಾವಾಹಿ ಕೊನೆಗೊಂಡಿತು. ಈ ಸಮಯಕ್ಕೆ ಬಿಗ್ ಬಾಸ್ ಕನ್ನಡ ಸೀಸನ್ 11ರ ರನ್ನರ್-ಅಪ್ ತ್ರಿವಿಕ್ರಮ್ ನಟನೆಯ ಮುದ್ದು ಸೊಸೆ ಧಾರಾವಾಹಿ ಆರಂಭವಾಯಿತು. ಮೊದಲ ವಾರವೇ ಈ ಧಾರಾವಾಹಿ ಧೂಳೆಬ್ಬಿಸಿದೆ. ಕಲರ್ಸ್ ಕನ್ನಡದ ನಂಬರ್ ಒನ್ ಧಾರಾವಾಹಿಯಾಗಿ ಇದು ಹೊರಹೊಮ್ಮಿದೆ.

Bollywood Celebrity Fitness: ಫಿಟ್ ಆಗಿರಲು ಬಾಲಿವುಡ್ ಸೆಲೆಬ್ರಿಟಿಗಳ ಫಿಟ್ನೆಸ್ ಚಾಲೆಂಜ್ ಹೇಗಿದೆ?

ಫಿಟ್ನೆಸ್‌ಗಾಗಿ ಬಾಲಿವುಡ್ ಸೆಲೆಬ್ರಿಟಿಗಳ ಲೈಫ್ ಸ್ಟೈಲ್ ಹೇಗಿದೆ ನೋಡಿ!

ಸೆಲೆಬ್ರಿಟಿಗಳು ತಮ್ಮ ದೇಹ ಸ್ಥಿತಿ ಯಥಾವತ್ತಾಗಿ ಇಡಲು ವ್ಯಾಯಾಮ, ವರ್ಕೌಟ್ ಇತ್ಯಾದಿ ಮಾಡಿ ಹೆಚ್ಚು ಫಿಟ್ ಆ್ಯಂಡ್ ಫೈನ್ ಆಗಿರಲು ಬಯಸುತ್ತಾರೆ. ಕೆಲವು ಸಿನಿಮಾಗಳಲ್ಲಿ ಹೆಚ್ಚು ದೇಹ ತೂಕ ಬೇಕಾದರೆ ಇನ್ನು ಕೆಲವು ಸಿನಿಮಾಕ್ಕೆ ಸ್ಲಿಂ ಆಗಿರಬೇಕಾಗುತ್ತದೆ. ಹೀಗಾಗಿ ತಮಗೆ ಬೇಕಾದಂತೆ ದೇಹ ಸ್ಥಿತಿ ಮಾರ್ಪಡಿಸುವುದು ಕಷ್ಟದ ಕೆಲಸವಾದರೂ ಕೂಡ ಬಾಲಿವುಡ್ ನ ಕೆಲವು ಸೆಲೆಬ್ರಿಟಿಗಳು ಅದ್ಭುತವಾದ ಫಿಟ್ನೆಸ್ ಅನ್ನು ಕಾಯ್ದುಕೊಂಡಿದ್ದಾರೆ.

Pahalgam terror attack: ಪಹಲ್ಗಾಮ್ ಉಗ್ರರ ದಾಳಿಗೆ ಪಾಕ್‌ ಸೆಲೆಬ್ರಿಟಿಗಳಿಂದ ಖಂಡನೆ

ಭಯೋತ್ಪಾದಕ ದಾಳಿಗೆ ಪಾಕಿಸ್ತಾನಿ ಸೆಲೆಬ್ರಿಟಿಗಳಿಂದ ಖಂಡನೆ

ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಖಂಡಿಸಿ ಪಾಕಿಸ್ತಾನದ ನಟ ಫವಾದ್ ಖಾನ್ (Fawad Khan), ನಟಿಯರಾದ ಹನಿಯಾ ಆಮಿರ್ (Hania Aamir)ಮತ್ತು ಮೌರಾ ಹೊಕೇನ್ (Mawra Hocane) ಸೇರಿದಂತೆ ಹಲವು ಸೆಲೆಬ್ರಿಟಿಗಳು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಎಲ್ಲಿಯಾದರೂ ದುರಂತ ಸಂಭವಿಸಿದರೆ ಅದು ನಮಗೆಲ್ಲರಿಗೂ ದುರಂತವೇ ಆಗಿದೆ ಎಂದು ಹೇಳಿದ್ದು, ಅವರೆಲ್ಲ ಭಯೋತ್ಪಾದಕ ದಾಳಿಯ ವಿರುದ್ಧ ಧ್ವನಿಗೂಡಿಸಿದ್ದಾರೆ ಮತ್ತು ಮೃತರಿಗೆ ಸಂತಾಪ ಸೂಚಿಸಿದ್ದಾರೆ.

Shine Tom Chacko: ನಟ ಶೈನ್ ಟಾಮ್ ಬಗ್ಗೆ ಮತ್ತೊಬ್ಬ ಖ್ಯಾತ ನಟಿ ಆರೋಪ

ನಟ ಶೈನ್ ಟಾಮ್ ವಿರುದ್ಧ ಮತ್ತೊಬ್ಬ ನಟಿ ಆರೋಪ!

ನಟ ಶೈನ್ ಟಾಮ್ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಇದೀಗ ಮತ್ತೊಬ್ಬ ನಟಿ ಚಿತ್ರೀಕರಣ ಸಮಯದಲ್ಲಿ ಅಸಭ್ಯ ವರ್ತನೆ(Shine Tom Chacko) ತೋರಿಸಿರುವ ಬಗ್ಗೆ ಆರೋಪ ಮಾಡಿದ್ದಾರೆ. ಆಸ್ಟ್ರೇಲಿಯಾದ ನಟಿ ಅಪರ್ಣಾ ಜಾನ್ ಈ ಆರೋಪ ಮಾಡಿದ್ದು ಮಲಯಾಳಂ ಚಿತ್ರದ ʻಸೂತ್ರವಾಕ್ಯಂ’ನ ಶೂಟಿಂಗ್ ವೇಳೆ, ಅಸಭ್ಯ ವರ್ತನೆ ತೋರಿಸಿದ್ದಾರೆಂದು ನಟಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

Ekka Movie Teaser: ಎಕ್ಕ ಟೀಸರ್ ರಿಲೀಸ್- ಡಿಫರೆಂಟ್ ಅವತಾರದಲ್ಲಿ ಯುವರಾಜ್ ಕುಮಾರ್ ಎಂಟ್ರಿ

ಎಕ್ಕ ಟೀಸರ್ ಬಿಡುಗಡೆ! ಯುವನ ಎಂಟ್ರಿಗೆ ಅಭಿಮಾನಿಗಳು ಫಿದಾ!..

ಯುವರಾಜ್‌ ಕುಮಾರ್‌ ಹುಟ್ಟುಹಬ್ಬದ ಅಂಗವಾಗಿ ನಿನ್ನೆ ಬಿಡುಗಡೆಯಾಗಬೇಕಿದ್ದ ಎಕ್ಕ ಚಿತ್ರದ ಯುವ ಟೀಸರ್‌(Ekka Movie teaser release) ಇಂದು ಅನಾವರಣ ಮಾಡಲಾಗಿದೆ. ಪಹಲ್ಗಾಮ್ ಉಗ್ರರ ದಾಳಿಯಲ್ಲಿ ತಮ್ಮ ಕುಟುಂಬದವರನ್ನು ಕಳೆದುಕೊಂಡವರಿಗೆ ಗೌರವ ಸೂಚಿಸುವ ಸಲುವಾಗಿ ಚಿತ್ರತಂಡ ಟೀಸರ್‌ ಬಿಡುಗಡೆ ಮುಂದೂಡಿತ್ತು. ಇಂದು ಅಣ್ಣಾವ್ರ ಜನ್ಮದಿನದ ಜೊತೆಗೆ ಯುವ ಬರ್ತಡೇ ಸ್ಪೆಷಲ್‌ ಆಗಿಯೇ ಟೀಸರ್‌ ರಿಲೀಸ್‌ ಆಗಿದೆ.

Imanvi: "ಪಾಕ್‌ ಜೊತೆ ಈಕೆಗೆ ನಂಟು ಸಿನಿಮಾದಿಂದ ಕಿತ್ತೊಗೆಯಿರಿ" ; ಪ್ರಭಾಸ್‌ ಹೊಸ ಸಿನಿಮಾ ನಾಯಕಿ ಮೇಲೆ ಏನಿದು ಆರೋಪ?

ಪಾಕ್‌ ಜೊತೆ ನಂಟು; ಪ್ರಭಾಸ್‌ ಹೊಸ ಸಿನಿಮಾ ನಾಯಕಿ ಮೇಲೆ ಏನಿದು ಆರೋಪ?

ಪಹಲ್ಗಾಮ್‌ನಲ್ಲಿ ಸೋಮವಾರ ನಡೆದ ಉಗ್ರರ ಭೀಕರ ದಾಳಿಗೆ ಈ ವರೆಗೆ 26 ಮಂದಿ ಮೃತಪಟ್ಟಿದ್ದಾರೆ. ಈ ಹಿನ್ನೆಲೆ ಪಾಕ್ ಕಲಾವಿದರನ್ನು ಭಾರತದ ಸಿನಿಮಾದಿಂದ ಹೊರಗಿಡುವ ಕುರಿತು ಚರ್ಚೆ ಶುರುವಾಗಿದೆ. ಇದರ ನಡುವೆ ಶೂಟಿಂಗ್‌ ನಡೆಯುತ್ತಿರುವ ಪ್ರಭಾಸ್‌ ನಟನೆಯ ಫೌಝಿ ಸಿನಿಮಾ ನಾಯಕಿ ಇಮಾನ್ವಿ ಅವರನ್ನು ಚಿತ್ರದಿಂದ ಕೈಬಿಡುವಂತೆ ಎಲ್ಲಡೆ ಕೂಗು ಕೇಳಿ ಬರುತ್ತಿದೆ.

Actor Sridhar: ಪಾರು ಸೀರಿಯಲ್ ನಟ ಶ್ರೀಧರ್‌ಗೆ ಅನಾರೋಗ್ಯ: ಚಿಕಿತ್ಸೆಯ ಸಹಾಯಕ್ಕಾಗಿ ಅಂಗಲಾಚಿದ ನಟ!

ಪಾರು ಸೀರಿಯಲ್ ನಟ ಶ್ರೀಧರ್‌ಗೆ ಅನಾರೋಗ್ಯ

ಇನ್‌ಫೆಕ್ಷನ್‌ನಿಂದಾಗಿ ನಟ ಶ್ರೀಧರ್‌ ತೀವ್ರ ಅಸ್ವಸ್ಥರಾಗಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು ಆರ್ಥಿಕ ಸಹಾಯಕ್ಕಾಗಿ ಮನವಿ ಮಾಡಿದ್ದಾರೆ. ಸದ್ಯ ನಟನನ್ನು ಅವರ ತಾಯಿ ನೋಡಿಕೊಳ್ಳುತ್ತಿದ್ದಾರೆ. ಪ್ರತಿ ದಿನ ಚಿಕಿತ್ಸೆಗೆ 10ರಿಂದ 15 ಸಾವಿರ ರೂ. ಖರ್ಚಾಗುತ್ತಿದೆ. ಹಾಗಾಗಿ ಹೆಚ್ಚಿನ ಹಣ ಸಹಾಯಕ್ಕಾಗಿ ನಟನ ಪರ ಕಮಲಿ ಖ್ಯಾತಿಯ ಅಂಕಿತಾ ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.

Aditya Dhar: ಅವರಿಗೆ ಕಾ‍ಶ್ಮೀರ ಬೇಕು... ನಮಗೆ ಅವರ ತಲೆ ಬೇಕು- ಉರಿ ಸಿನಿಮಾ ನಿರ್ದೇಶಕ ಆಕ್ರೋಶ

ಪಹಲ್ಗಾಮ್ ದಾಳಿ ಬಗ್ಗೆ ಉರಿ ಸಿನಿಮಾ ನಿರ್ದೇಶಕ ಹೇಳಿದ್ದೇನು?

Aditya Dhar on Pahalgam Terror Attack: ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ನಡೆದ ಅತ್ಯಂತ ಭೀಕರ ದಾಳಿಯ ಬಗ್ಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದ್ದು ಈ ಹೀನಾಯ ಕೃತ್ಯ ಖಂಡಿಸಿ ಅನೇಕ ಸಿನಿಮಾ ನಟನಟಿಯರು, ನಿರ್ಮಾಪಕರು ಆಕ್ರೋಶವನ್ನು ಹೊರಹಾಕಿದ್ದಾರೆ. ಇದೀಗ ಉರಿ: ದಿ ಸರ್ಜಿಕಲ್ ಸ್ಟ್ರೈಕ್ ಸಿನಿಮಾ ನಿರ್ದೇಶಕ ಆದಿತ್ಯಧರ್ ಕೂಡ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ ಕುರಿತು ಆಕ್ರೋಶ ವ್ಯಕ್ತಪಡಿಸಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.

Suthradhari Movie: ಸಿನಿಮಾ ಬಿಡುಗಡೆಗೂ ಮುನ್ನ ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದ ʼಸೂತ್ರಧಾರಿʼ ಚಿತ್ರತಂಡ

ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದ ʼಸೂತ್ರಧಾರಿʼ ಚಿತ್ರತಂಡ

Suthradhari Movie: ಚಂದನ್ ಶೆಟ್ಟಿ ಮೊದಲ ಬಾರಿಗೆ ನಾಯಕನಾಗಿ ನಟಿಸಿರುವ ಬಹುನಿರೀಕ್ಷಿತ ʼಸೂತ್ರಧಾರಿʼ ಚಿತ್ರ ಮೇ 9 ರಂದು ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಚಿತ್ರ ಬಿಡುಗಡೆಗೂ ಮುನ್ನ ನಿರ್ಮಾಪಕ ನವರಸನ್, ನಿರ್ದೇಶಕ ಕಿರಣ್ ಕುಮಾರ್, ನಾಯಕ ಚಂದನ್ ಶೆಟ್ಟಿ ಹಾಗೂ ನಾಯಕಿ ಅಪೂರ್ವ ತಿರುಪತಿಗೆ ತೆರಳಿ ತಿಮ್ಮಪ್ಪನ ದರ್ಶನ ಮಾಡಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

Disha Patani: ಮಾಡರ್ನ್ ಮಿನಿ-ಸಿಲ್ವರ್ ಡ್ರೆಸ್‌ನಲ್ಲಿ ನಟಿ ದಿಶಾ ಪಟಾನಿ ಫುಲ್‌ ಮಿಂಚಿಂಗ್‌; ಫೋಟೋಸ್ ಇಲ್ಲಿವೆ

ದಿಶಾ ಪಟಾನಿ ಮಿನಿ ಸಿಲ್ವರ್ ಔಟ್ ಫಿಟ್ ಗೆ ಫ್ಯಾನ್ಸ್ ಫಿದಾ!

ಇತ್ತೀಚೆಗಷ್ಟೇ ನೆಟ್ಟೆಡ್ ಡ್ರೆಸ್‌ನಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದ ಬಾಲಿವುಡ್ ಬೆಡಗಿ ದಿಶಾ ಪಟಾನಿ(Disha Patani) ಇದೀಗ ಸಿಲ್ವರ್ ಮಿನಿ ಮಾಡರ್ನ್ ಡ್ರೆಸ್ ನಲ್ಲಿ‌ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಇವರ ಗ್ಲಾಮರ್ ಲುಕ್ ಗೆ ನೆಟ್ಟಿಗರು ಫಿಧಾ ಆಗಿದ್ದು ಈ ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿವೆ.

Bhagya Lakshmi Serial: ತಾಂಡವ್ ಆಫೀಸ್​ನಲ್ಲೇ ದೊಡ್ಡದಾಗಿ ಕ್ಯಾಂಟೀನ್ ಶುರುಮಾಡಿದ ಭಾಗ್ಯ

ತಾಂಡವ್ ಆಫೀಸ್​ನಲ್ಲೇ ಕ್ಯಾಂಟೀನ್ ಶುರುಮಾಡಿದ ಭಾಗ್ಯ

ಮತ್ತೊಂದು ದೊಡ್ಡ ಹೆಜ್ಜೆ ಭಾಗ್ಯ ಟೀಮ್ ಒಟ್ಟಿದೆ. ತಾಂಡವ್-ಶ್ರೇಷ್ಠಾ ಕೆಲಸ ಮಾಡುವ ಆಫೀಸ್ನಲ್ಲೇ ಇವರು ಕೈ ತುತ್ತು ಕ್ಯಾಂಟೀನ್ ತೆರೆದಿದ್ದಾರೆ. ತಾಂಡವ್ನ ಬಾಸ್ ಬಂದು ಭಾಗ್ಯಾಳನ್ನು ಗ್ರ್ಯಾಂಡ್ ಆಗಿ ವೆಲ್ಕಮ್ ಮಾಡಿದ್ದಾರೆ. ಇವತ್ತಿಂದ ನಮ್ಮ ಕ್ಯಾಂಟೀನ್ ಎಲ್ಲ ಜವಾಬ್ದಾರಿ ಭಾಗ್ಯ ಮತ್ತು ತಂಡ ವಹಿಸಿಕೊಳ್ಳುತ್ತದೆ ಎಂದು ಬಾಸ್ ಹೇಳಿದ್ದಾರೆ.

Raj Kumar Birthday: ಕರುನಾಡ ಕಣ್ಮಣಿ, ವರನಟ ಡಾ. ರಾಜ್‌ ಜನ್ಮದಿನ- ʻಬಂಗಾರದ ಮನುಷ್ಯʼನಿಗೆ ಅಭಿಮಾನಿಗಳಿಂದ ಗೌರವ ನಮನ

ಕರುನಾಡ ಕಣ್ಮಣಿ, ವರನಟ ಡಾ. ರಾಜ್‌ ಜನ್ಮದಿನ

Dr. Raj Kumar Birthday today: ಕನ್ನಡ ಬೆಳ್ಳಿತೆರೆ ನಟಸಾರ್ವಭೌಮ, ಗಾನ ಗಂಧರ್ವ, ರಣಧೀರ ಕಂಠೀರವ ಡಾ. ರಾಜ್‌ಕುಮಾರ್‌ ಅವರ ಜನ್ಮ ದಿನಾಚರಣೆ. ಮೇರುನಟ 96ನೇ ಬರ್ತ್‌ಡೇಯನ್ನು ಅಭಿಮಾನಿಗಳು ತಮ್ಮದೇ ಆದ ರೀತಿಯಲ್ಲಿ ಆಚರಿಸುತ್ತಿದ್ದಾರೆ.

Dr Rajkumar Birthday: ಇಂದು ವರನಟ ಡಾ. ರಾಜ್‌ ಜನ್ಮದಿನ,  ʼಗಂಧದ ಗುಡಿʼ ರಿರಿಲೀಸ್

ಇಂದು ವರನಟ ಡಾ. ರಾಜ್‌ ಜನ್ಮದಿನ, ʼಗಂಧದ ಗುಡಿʼ ರಿರಿಲೀಸ್

ಡಾ. ವಿಷ್ಣುವರ್ಧನ್ ಜೊತೆಯಾಗಿ ಡಾ. ರಾಜ್‌ಕುಮಾರ್‌ ನಟಿಸಿದ ಏಕೈಕ ಚಿತ್ರ ʼಗಂಧದ ಗುಡಿʼ ಇಂದು ರಿ ರಿಲೀಸ್‌ ಆಗುತ್ತಿದೆ. ತಾತನ (ರಾಜ್‌ಕುಮಾರ್) ಜನ್ಮದಿನದಂದೇ ತಮ್ಮ ನಿರ್ಮಾಣದ ಚೊಚ್ಚಲ ಚಿತ್ರ 'ಫೈರ್‌' ಅನ್ನು ಮೊಮ್ಮಗಳು ನಿವೇದಿತಾ ಶಿವರಾಜ್‌ಕುಮಾರ್‌ ಕೂಡ ಬಿಡುಗಡೆಗೊಳಿಸುತ್ತಿದ್ದಾರೆ.

Mokshitha Pai: ಚಿನ್ನದ ರೇಟ್ ಹೆಚ್ಚಲು ಮೋಕ್ಷಿತಾ ಕಾರಣ ಎಂದ ಫ್ಯಾನ್ಸ್: ಫೋಟೋ ಫುಲ್ ವೈರಲ್

ಚಿನ್ನದ ರೇಟ್ ಹೆಚ್ಚಲು ಮೋಕ್ಷಿತಾ ಕಾರಣ ಎಂದ ಫ್ಯಾನ್ಸ್

ಸೋಷಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್ ಆಗರುವ ಮೋಕ್ಷಿತಾ, ಆಗಾಗ ಪ್ರವಾಸಕ್ಕೆ ತೆರಳಿದ ಪೋಟೋಗಳನ್ನು ತಮ್ಮ ಇನ್ಸ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ. ಇದೀಗ ಮೋಕ್ಷಿ ಆಭರಣ ತೊಟ್ಟು ಫೋಟೋಕ್ಕೆ ಪೋಸ್ ಕೊಟ್ಟಿದ್ದು ಇದು ಸಾಮಾಜಿಕ ಜಾಲತಾಣಗಳಲ್ಲಿ ಧೂಳೆಬ್ಬಿಸುತ್ತಿದೆ.

Seetha Rama Serial: ಸೀತಾ ರಾಮ ಧಾರಾವಾಹಿಯಲ್ಲಿ ಬಿಗ್ ಟ್ವಿಸ್ಟ್: ಅಶೋಕನಿಗೆ ಗೊತ್ತಾಯ್ತು ಸಿಹಿಯ ಆತ್ಮದ ಕಥೆ

ಸೀತಾ ರಾಮ ಧಾರಾವಾಹಿಯಲ್ಲಿ ಬಿಗ್ ಟ್ವಿಸ್ಟ್

ಸಿಹಿಯ ಅಸ್ಥಿ ತೆಗೆದುಕೊಂಡು ಹೋಗುವ ವೇಳೆ ಆ ಅಸ್ಥಿಯನ್ನು ವಿಸರ್ಜನೆ ಮಾಡಿದರೆ, ತಮಗೆ ಮೋಕ್ಷ ಸಿಗುತ್ತದೆ, ತಾನಿನ್ನು ಯಾರಿಗೂ ಕಾಣಿಸಿಕೊಳ್ಳುವುದಿಲ್ಲ ಎಂದು ಅರಿತ ಸಿಹಿ ಅದನ್ನು ಅಲ್ಲಿಂದ ಎತ್ತಿಕೊಂಡು ಅಡಗಿಸಿ ಇಡುತ್ತಿದ್ದಾಳೆ. ಇದನ್ನು ನೋಡಿದ ಅಶೋಕ್ಗೆ ಏನಾಗುತ್ತಿದೆ ಎನ್ನುವುದೇ ತಿಳಿಯುವುದಿಲ್ಲ. ಇದಕ್ಕೂ ಮುನ್ನ ಸಿಹಿಯ ಅಸ್ತಿಯು ಸುಬ್ಬಿಯ ಮನೆಯಲ್ಲಿ ಅಶೋಕ್ಗೆ ಸಿಕ್ಕಿರುತ್ತದೆ.

Janhvi Kapoor and Sidharth Malhotra: ಪರಮ್ ಸುಂದರಿ ಚಿತ್ರದ ಮುದ್ದು ಜೋಡಿ ಜಾನ್ವಿ -ಸಿದ್ಧಾರ್ಥ್ ಫೋಟೊ ಕಂಡು ಫಿದಾ ಆದ ಫ್ಯಾನ್ಸ್

ಜಾನ್ವಿ- ಸಿದ್ಧಾರ್ಥ್ ರೋಮ್ಯಾಂಟಿಕ್ ಫೋಟೊ ವೈರಲ್!

ಜಾನ್ವಿ ಕಪೂರ್ ತಮ್ಮ ಮುಂಬರುವ ಚಿತ್ರ ಪರಮ್ ಸುಂದರಿಯಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಜೊತೆಗೆ ನಟಿಸಲಿದ್ದಾರೆ(Janhvi Kapoor and Sidharth Malhotra). ನಟಿ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಶೂಟಿಂಗ್ ವೇಳೆಯ ಅನೇಕ ದೃಶ್ಯವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ಇದೀಗ ಬಹಳಷ್ಟು ವೈರಲ್ ಆಗಿದ್ದು ಅಭಿಮಾನಿಗಳು ಮೆಚ್ಚುಗೆ ಗಳಿಸಿದ್ದಾರೆ

Actor Lalit Manchanda: ಖ್ಯಾತ ಹಿಂದಿ ಕಿರುತೆರೆ ನಟ ಆತ್ಮಹತ್ಯೆ; ಕಾರಣ ಏನು?

ಖ್ಯಾತ ಹಿಂದಿ ಕಿರುತೆರೆ ನಟ ಆತ್ಮಹತ್ಯೆ; ಕಾರಣ ಏನು?

ಹಿಂದಿ ಕಿರುತೆರೆಯ ಜನಪ್ರಿಯ ಧಾರವಾಹಿ ತಾರಕ್ ಮೆಹ್ತಾ ಕಾ ಊಲ್ತಾ ಚಶ್ಮಾ ಖ್ಯಾತಿಯ ನಟ ಲಲಿತ್ ಮಂಚಂದ(Actor Lalit Manchanda) ಆತ್ಮಹತ್ಯೆ ಮಾಡಿಕೊಂಡಿದ್ದು ನಟನ ಮೃತ ದೇಹವು ಉತ್ತರ ಪ್ರದೇಶದ ಮೀರತ್‌ನಲ್ಲಿರುವ ಅವರ ಸ್ವಗೃಹದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಲಲಿತ್ ಮಂಚಂದ ಅವರ ಮೃತ ದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

Anupam Kher: ʻಕಾಶ್ಮೀರ್‌ ಫೈಲ್‌ʼ ಬಂದಾಗ ಪ್ರೊಪಗಾಂಡ ಅಂದ್ರು... ಹಾಗಿದ್ರೆ ಈಗ ಏನಾಗ್ತಿರೋದು? ನಟ ಅನುಪಮ್ ಖೇರ್ ಕಿಡಿ

ಪಹಲ್ಗಾಮ್‌ ದಾಳಿ ಬಗ್ಗೆ ಅನುಪಮ್ ಖೇರ್ ಹೇಳಿದ್ದೇನು...?

Anupam Kher: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ಮಂಗಳವಾರ ಮಧ್ಯಾಹ್ನ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಪ್ರವಾಸಿಗರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಈ ಘಟನೆಯನ್ನು ಖಂಡಿಸಿ, ಕಾಶ್ಮೀರಿ ಪಂಡಿತರಾದ ನಟ ಅನುಪಮ್ ಖೇರ್ ಮಂಗಳವಾರ ರಾತ್ರಿ ವಿಡಿಯೋ ಸಂದೇಶ ಹಂಚಿಕೊಂಡಿದ್ದಾರೆ. ದಾಳಿಕೋರರಿಗೆ ಕಠಿಣ ಶಿಕ್ಷೆಯಾಗಬೇಕೆಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಮನವಿ ಮಾಡಿದ್ದಾರೆ.

Yuddhakaanda Movie: ʼಯುದ್ಧಕಾಂಡʼ ಯಶಸ್ವಿ ಪ್ರದರ್ಶನ: ಚಿತ್ರತಂಡದಿಂದ ಸಕ್ಸಸ್‌ ಮೀಟ್‌

ʼಯುದ್ಧಕಾಂಡʼ ಯಶಸ್ವಿ ಪ್ರದರ್ಶನ: ಚಿತ್ರತಂಡದಿಂದ ಸಕ್ಸಸ್‌ ಮೀಟ್‌

Yuddhakaanda Movie: ಅಜೇಯ್ ರಾವ್ ನಿರ್ಮಿಸಿ, ನಾಯಕನಾಗಿ ನಟಿಸಿರುವ ʼಯುದ್ಧಕಾಂಡʼ ಚಿತ್ರ ಕಳೆದ ಏಪ್ರಿಲ್ 18 ರಂದು ರಾಜ್ಯಾದ್ಯಂತ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಈ ಸಂತಸವನ್ನು ಅಜೇಯ್ ರಾವ್ ಹಾಗೂ ಚಿತ್ರತಂಡದವರು ಸಕ್ಸಸ್ ಮೀಟ್‌ನಲ್ಲಿ ಹಂಚಿಕೊಂಡರು. ಈ ಕುರಿತ ವಿವರ ಇಲ್ಲಿದೆ.