ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮನರಂಜನೆ

Divya Suresh: ಕಾನೂನಿನ ಮುಂದೆ ಎಲ್ಲೆರೂ ಒಂದೇ; ಬಿಗ್ ಬಾಸ್ ಮಾಜಿ ಸ್ಪರ್ಧಿ ದಿವ್ಯಾ ಸುರೇಶ್

ಹಿಟ್ ಆ್ಯಂಡ್ ರನ್ ಪ್ರಕರಣ; ದಿವ್ಯಾ ಸುರೇಶ್ ಏನಂದ್ರು.?

ಹಿಟ್ ಆ್ಯಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ​​ಬಾಸ್ ಮಾಜಿ ಸ್ಪರ್ಧಿ ನಟಿ ದಿವ್ಯಾ ಸುರೇಶ್ ವಿರುದ್ಧ ದೂರು ದಾಖಲಾಗಿದೆ. ಅಕ್ಟೋಬರ್ 4ರಂದು ನಟಿ ದಿವ್ಯಾ ಸುರೇಶ್ ಕಾರಿನಲ್ಲಿ ಅಪಘಾತ ಮಾಡಿ ಸ್ಥಳದಿಂದ ಪರಾರಿ ಆಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಿವ್ಯಾ ಪ್ರತಿಕ್ರಿಯೆ ನೀಡಿದ್ದು, ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ, ಯಾರೂ ಚಿಕ್ಕವರಲ್ಲ ಎಂದಿದ್ದಾರೆ.

Pragathi Rishab Shetty: ದೀಪಾವಳಿ ವೇಳೆ ಬಾಕ್ಸ್‌ ಆಫೀಸ್‌ನಲ್ಲಿ ಇತಿಹಾಸ ಬರೆದ 'ಕಾಂತಾರ ಚಾಪ್ಟರ್‌ 1', ರಿಷಬ್‌ ಶೆಟ್ಟಿ ಮನೆಯಲ್ಲಿ ಡಬಲ್‌ ಸಂಭ್ರಮ

ʼಕಾಂತಾರʼ ಸಕ್ಸಸ್‌ ಬೆನ್ನಲ್ಲೇ ರಿಷಬ್‌ ಶೆಟ್ಟಿ ಮನೆಯಲ್ಲಿ ದೀಪಾವಳಿ ಸಂಭ್ರಮ

ನವರಾತ್ರಿಗೆ ತೆರೆಗೆ ಬಂದ ರಿಷಬ್‌ ಶೆಟ್ಟಿ-ಹೊಂಬಾಳೆ ಫಿಲ್ಮ್ಸ್‌ ಕಾಂಬಿನೇಷನ್‌ನ ಬಹುನಿರೀಕ್ಷಿತ ʼಕಾಂತಾರ ಚಾಪ್ಟರ್‌ 1' ಚಿತ್ರ ದೀಪಾವಳಿ ವೇಳೆ ಇತಿಹಾಸ ಬರೆದಿದೆ. ಬಾಕ್ಸ್‌ ಆಫೀಸ್‌ನಲ್ಲಿ 818 ಕೋಟಿ ರೂ. ಗಳಿಸಿದ ಇದು ಈ ವರ್ಷ ಅತೀ ಹೆಚ್ಚು ಕಲೆಕ್ಷನ್‌ ಮಾಡಿದ ಸಿನಿಮಾ ಎನಿಸಿಕೊಂಡಿದೆ. ಈಗಲೂ ಜಾಗತಿಕವಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಶೀಘ್ರದಲ್ಲೇ 1 ಸಾವಿರ ಕೋಟಿ ರೂ. ಕ್ಲಬ್‌ ಸೇರಲಿದೆ. ಈ ಮಧ್ಯೆ ರಿಷಬ್‌ ಶೆಟ್ಟಿ ತಮ್ಮ ಮನೆಯಲ್ಲಿ ಸಂಭ್ರಮದಿಂದ ದೀಪಾವಳಿ ಆಚರಿಸಿದ್ದಾರೆ. ಸದ್ಯ ಅವರ ಪತ್ನಿ, ವಸ್ತ್ರ ವಿನ್ಯಾಸಕಿ ಪ್ರಗತಿ ಶೆಟ್ಟಿ ದೀಪಾವಳಿ ಆಚರಣೆಯ ಫೋಟೊಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳ ಗಮನ ಸೆಳೆದಿದೆ.

Varna Movie: ಟೀಸರ್‌ನಲ್ಲೇ ಕುತೂಹಲ ಮೂಡಿಸಿದೆ ಅರ್ಜುನ್ ಯೋಗಿ ನಟನೆಯ ʼವರ್ಣʼ

ಟೀಸರ್‌ನಲ್ಲೇ ಕುತೂಹಲ ಮೂಡಿಸಿದೆ ಅರ್ಜುನ್ ಯೋಗಿ ನಟನೆಯ ʼವರ್ಣʼ

Sandalwood News: ಅರ್ಜುನ್ ಯೋಗಿ ನಾಯಕನಾಗಿ ನಟಿಸಿರುವ, ದೇವ ಶರ್ಮ ನಿರ್ದೇಶಿಸಿರುವ ಹಾಗೂ ಮಲ್ಲಿನೇನಿ ನವೀನ್ ಚೌಧರಿ ನಿರ್ಮಿಸಿರುವ ʼವರ್ಣʼ ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಚಿತ್ರದ ನಾಯಕಿಯಾಗಿ ಭವ್ಯ ಗೌಡ, ವಿಲನ್ ಪಾತ್ರದಲ್ಲಿ ಲಂಕೇಶ್ ರಾವಣ ನಟಿಸಿದ್ದಾರೆ.

Actor Yash: ʼಕೆಜಿಎಫ್' ಛಾಯಾಗ್ರಾಹಕ ಭುವನ್ ಗೌಡ ಮದುವೆಗೆ ಕಳೆ ತಂದ ರಾಕಿಂಗ್ ಸ್ಟಾರ್ ಯಶ್; ಇಲ್ಲಿದೆ ನೋಡಿ ವಿಡಿಯೊ

ಭುವನ್ ಗೌಡ ಮದುವೆಗೆ ಆಗಮಿಸಿದ ರಾಕಿಂಗ್ ಸ್ಟಾರ್ ಯಶ್

Yash attends Bhuvan Gowda’s wedding: ಶೂಟಿಂಗ್‍ನಲ್ಲಿ ಎಷ್ಟೇ ಬ್ಯುಸಿಯಾಗಿದ್ದರೂ ನಟ ಯಶ್ ಹಬ್ಬ, ಕುಟುಂಬ ಹಾಗೂ ಆಪ್ತರ ಕಾರ್ಯಕ್ರಮ ಅಂದಾಗ ಬಿಡುವು ಮಾಡಿಕೊಂಡು ಹಾಜರಾಗುತ್ತಾರೆ. ಇದೀಗ 'ಕೆಜಿಎಫ್‌ʼ ಚಿತ್ರದ ಛಾಯಾಗ್ರಾಹಕ ಭುವನ್ ಗೌಡ ಅವರ ವಿವಾಹಕ್ಕೆ ಆಗಮಿಸಿ ನೂತನ ದಂಪತಿಗೆ ಶುಭ ಕೋರಿದ್ದಾರೆ.

Dies Irae Movie: ʼಹೃದಯಂʼ ಮೂಲಕ ಪ್ರೇಕ್ಷಕರ ಹೃದಯ ಗೆದ್ದ ಪ್ರಣವ್ ಮೋಹನ್‌ಲಾಲ್ ನಟನೆಯ ʼಡೀಯಸ್ ಈರೇʼ ಚಿತ್ರದ ಟ್ರೈಲರ್‌ ಔಟ್‌

ಪ್ರಣವ್ ಮೋಹನ್‌ಲಾಲ್ ನಟನೆಯ ʼಡೀಯಸ್ ಈರೇʼ ಟ್ರೈಲರ್‌ ಔಟ್‌

Dies Irae Movie Trailer: ಮಾಲಿವುಡ್ ಸೂಪರ್ ಸ್ಟಾರ್ ಮೋಹನ್‌ಲಾಲ್ ಪುತ್ರ ಪ್ರಣವ್ ಮೋಹನ್‌ಲಾಲ್ ಅಭಿನಯದ ʼಡೀಯಸ್ ಈರೇʼ ಸಿನಿಮಾದ ಟ್ರೈಲರ್‌ ರಿಲೀಸ್‌ ಆಗಿದೆ. ಟ್ರೈಲರ್‌ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಒಂದು ಮುಕ್ಕಾಲು ಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡು ಸದ್ದು ಮಾಡುತ್ತಿದೆ.

Actor Satish Shah: 'ಸಾರಾಭಾಯ್‌ ವರ್ಸಸ್‌ ಸಾರಾಭಾಯ್‌' ಧಾರಾವಾಹಿ ಖ್ಯಾತಿಯ ನಟ ಸತೀಶ್‌ ಶಾ ನಿಧನ

ಬಾಲಿವುಡ್‌ ಹಿರಿಯ ನಟ ಸತೀಶ್‌ ಶಾ ಇನ್ನಿಲ್ಲ

'ಸಾರಾಭಾಯ್‌ ವರ್ಸಸ್‌ ಸಾರಾಭಾಯ್‌' ಹಿಂದಿ ಧಾರಾವಾಹಿ ಖ್ಯಾತಿಯ ಹಿರಿಯ ನಟ ಸತೀಶ್‌ ಶಾ ಶನಿವಾರ ನಿಧನ ಹೊಂದಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು. ಕಿಡ್ನಿ ಫೆಲ್ಯೂರ್‌ನಿಂದ ಅವರು ಮೃತಪಟ್ಟಿದ್ದಾರೆ. 1951ರಲ್ಲಿ ಮುಂಬೈಯಲ್ಲಿ ಜನಿಸಿದ ಸತೀಶ್‌ ಶಾ ಸಿನಿಮಾ ಹಾಗೂ ಕಿರುತೆರೆಯಲ್ಲಿ ಅಪಾರ ಜನಪ್ರಿಯತೆ ಗಳಿಸಿದ್ದಾರೆ. ಕನ್ನಡ ಸಿನಿಮಾದಲ್ಲಿಯೂ ಅಭಿನಯಿಸಿದ್ದಾರೆ.

BBK 12: ಕಿಚ್ಚ ಸುದೀಪ್ ಮುಂದೆಯೇ ಕಿತ್ತಾಡಿಕೊಂಡ ಜಾನ್ವಿ-ರಿಷಾ: ರಣರಂಗವಾದ ಮನೆ

ಸುದೀಪ್ ಮುಂದೆಯೇ ಕಿತ್ತಾಡಿಕೊಂಡ ಜಾನ್ವಿ-ರಿಷಾ

ಜಾನ್ವಿ ನೀಡಿದ ಈ ಹೇಳಿಕೆಗೆ ಕೆರಳಿ ಕೆಂಡವಾದ ರಿಷಾ, ನೀವು ಆಡಿದಾಗ ಆಟ ಚೆನ್ನಾಗಿರುತ್ತೆ.. ನಾವು ಆಡಿದ್ರೆ ಅದು ಅಸಹ್ಯ ಥೂ ಆಗುತ್ತಾ ಎಂದು ಕೇಳಿದ್ದಾರೆ. ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ನನ್ ಮಗನ್ದು ತಾಕತ್ ಏನು ಅಂತ ತೋರಿಸ್ತೇನೆ ಎಂದು ರಿಷಾ ಹೇಳಿದ್ದಾರೆ.

Twinkle Khanna: ಮದ್ವೆ ನಂತರ ಬೇರೊಬ್ಬರ ಜೊತೆ ಅಫೇರ್‌; ಅಕ್ಷಯ್‌ ಕುಮಾರ್‌ ಪತ್ನಿ ಟ್ವಿಂಕಲ್‌ ಖನ್ನಾ ಖುಲ್ಲಾಂ ಖುಲ್ಲಾ ಮಾತು!

ಶೃಂಗಾರದ ಬಗ್ಗೆ ಟ್ವಿಂಕಲ್ ಖನ್ನಾ ಓಪನ್ ಟಾಕ್

Twinkle Khanna speaks physical cheating: ಬಾಲಿವುಡ್ ಸೆಲೆಬ್ರಿಟಿಗಳು ಸದಾ ಸುದ್ದಿಯಲ್ಲಿರುತ್ತಾರೆ. ತಮ್ಮ ಏನಾದರೊಂದು ವಿಚಿತ್ರ ಹೇಳಿಕೆಗಳಿಂದ ಭಾರಿ ಚರ್ಚೆಗೆ ಕಾರಣರಾಗುತ್ತಾರೆ. ಇದೀಗ ನಟ ಅಕ್ಷಯ್‌ಕುಮಾರ್ ಪತ್ನಿ ಟ್ವಿಂಕಲ್ ಖನ್ನಾ ಹೇಳಿಕೆ ಭಾರಿ ಚರ್ಚೆಗೆ ಕಾರಣವಾಗಿದೆ.

Thalapathy Vijay: ಕರೂರು ಕಾಲ್ತುಳಿತ ಕೇಸ್‌; ಶೀಘ್ರದಲ್ಲೇ ಮೃತರ ಕುಟುಂಬ ಭೇಟಿ ಮಾಡಲಿರುವ ದಳಪತಿ ವಿಜಯ್

ಕರೂರುರಿಗೆ ಭೇಟಿ ನೀಡಲಿರುವ ದಳಪತಿ ವಿಜಯ್

TVK Chief Vijay: ಕರೂರು ಕಾಲ್ತುಳಿತದ ಘಟನೆ ಬಳಿಕ ತೀವ್ರ ಟೀಕೆಗೆ ಗುರಿ ಆಗಿದ್ದ ಟಿವಿಕೆ ಪಕ್ಷದ ಮುಖ್ಯಸ್ಥ ದಳಪತಿ ವಿಜಯ್ ಅವರು ಮೃತರ ಸಂತ್ರಸ್ತ ಕುಟುಂಬಗಳನ್ನು ಭೇಟಿಯಾಗಲು ಮುಂದಾಗಿದ್ದಾರೆ. ಈ ಹಿಂದೆ ಗಾಯಾಳುಗಳು ಹಾಗೂ ಮೃತರ ಕುಟುಂಬಕ್ಕೆ ಪರಿಹಾರ ಘೋಷಿಸಿದ್ದರು. ಮೃತರ ಕುಟುಂಬಗ್ಗೆ ತಲಾ 20 ಲಕ್ಷ ರೂ. ಹಾಗೂ ಗಾಯಾಳುಗಳಿಗೆ ತಲಾ 2 ಲಕ್ಷ ರೂಪಾಯಿ ನೀಡುವುದಾಗಿ ತಿಳಿಸಿದ್ದರು.

Kannada New Movie: ಚಾಮುಂಡೇಶ್ವರಿಯ ಸನ್ನಿಧಿಯಲ್ಲಿ ನೆರವೇರಿತು ʼಜುಮ್ಕಿʼ ಚಿತ್ರದ ಸ್ಕ್ರಿಪ್ಟ್ ಪೂಜೆ

ಎಂ.ಜೆ. ಜಯರಾಜ್ ನಟನೆ, ನಿರ್ದೇಶನದ ʼಜುಮ್ಕಿʼ ಚಿತ್ರದ ಸ್ಕ್ರಿಪ್ಟ್ ಪೂಜೆ

Sandalwood News: ಎಂ.ಜೆ. ಜಯರಾಜ್ ನಟನೆ ಮತ್ತು ನಿರ್ದೇಶನದ ʼಜುಮ್ಕಿʼ ಚಿತ್ರದ ಸ್ಕ್ರಿಪ್ಟ್ ಪೂಜೆಯು ಮೈಸೂರಿನ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ತಾಯಿಯ ಸನ್ನಿಧಿಯಲ್ಲಿ ನೆರವೇರಿತು. ನಿರ್ದೇಶಕ, ಹಾಗೂ ನಾಯಕನಟ ಎಂ.ಜೆ. ಜಯರಾಜ್, ಪತ್ರಕರ್ತ ಹಾಗೂ ಕಲಾವಿದ ವಿಸಿಎನ್‌ ಮಂಜುರಾಜ್, ಛಾಯಾಗ್ರಾಹಕ ಸಿದ್ಧಾರ್ಥ್ ಎಚ್‌.ಆರ್‌. ಮತ್ತು ಸಹ ನಿರ್ದೇಶಕ ಚಂದ್ರಕಾಂತ್ ಗುಜ್ಜಾಲ್ ಪಾಲ್ಗೊಂಡಿದ್ದರು.

Actor Mohanlal: ಆನೆ ದಂತ ಮಾಲೀಕತ್ವ; ಖ್ಯಾತ ನಟ ಮೋಹನ್‌ ಲಾಲ್‌ಗೆ ಭಾರೀ ಹಿನ್ನಡೆ

ದಂತ ಮಾಲೀಕತ್ವ: ನಟ ಮೋಹನ್ ಲಾಲ್ ಗೆ ಹಿನ್ನಡೆ

Ivory items: ದಂತ ವಸ್ತುಗಳಿಗೆ ಸಂಬಂಧಿಸಿ ಅರಣ್ಯ ಇಲಾಖೆಯ ಮಾಲೀಕತ್ವ ಪ್ರಮಾಣ ಪತ್ರಕ್ಕೆ ಸಂಬಂಧಿಸಿ ನಟ ಮೋಹನ್ ಲಾಲ್ ಅವರ ಅರ್ಜಿ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್ ಇದನ್ನು ಕಾನೂನು ಬದ್ಧವಾಗಿ ಜಾರಿಗೊಳಿಸಲಾಗುವುದಿಲ್ಲ ಎಂದು ಹೇಳಿದೆ. ಇದರಿಂದ ನಟನಿಗೆ ಭಾರಿ ಹಿನ್ನಡೆಯಾಗಿದೆ.

BBK 12: ಸ್ಪರ್ಧಿಗಳ ಟೂತ್ ಬ್ರಶ್​ನಲ್ಲಿ ಟಾಯ್ಲೆಟ್ ಕ್ಲೀನ್?: ಅಶ್ವಿನಿ ಗೌಡ ಮೇಲೆ ಮತ್ತೊಂದು ಆರೋಪ

ಟೂತ್ ಬ್ರಶ್​ನಲ್ಲಿ ಟಾಯ್ಲೆಟ್ ಕ್ಲೀನ್?: ಅಶ್ವಿನಿ ಮೇಲೆ ಮತ್ತೊಂದು ಆರೋಪ

ಅಶ್ವಿನಿ ಗೌಡ ಅವರಿಗೆ ರಘು ಅವರು ಕಳಪೆ ನೀಡಿದರು. ಇದರಿಂದ ಅಶ್ವಿನಿ ಗೌಡ ಸಿಟ್ಟಾದರು. ಆ ಬಳಿಕ ಎಲ್ಲರ ಟೂತ್‌ ಬ್ರಶ್‌ಗಳನ್ನ ಬಳಸಿ ಅಶ್ವಿನಿ ಗೌಡ ಬಾತ್‌ರೂಮ್‌ ಕ್ಲೀನ್ ಮಾಡಿದ್ರಾ ಎಂಬ ಅನುಮಾನ ವೀಕ್ಷಕರಿಗೆ ಬಂದಿದೆ. ಇದರ ಬಗ್ಗೆ ನಮಗೆ ಕ್ಲಾರಿಟಿ ಬೇಕೆಂದು ಒತ್ತಾಯಿಸಿದ್ದಾರೆ.

BBK 12: ಈ ವಾರವೂ ಅಶ್ವಿನಿಗೆ ಕಿಚ್ಚನಿಂದ ಕ್ಲಾಸ್ ಖಚಿತ, ಕಾಕ್ರೋಚ್​ಗೂ ಶುರುವಾಗಿದೆ ನಡುಕ

ಅಶ್ವಿನಿಗೆ ಕಿಚ್ಚನ ಕ್ಲಾಸ್ ಖಚಿತ, ಕಾಕ್ರೋಚ್​ಗೂ ಶುರುವಾಗಿದೆ ನಡುಕ

ಕಳೆದ ವೀಕೆಂಡ್ನಲ್ಲಿ ರಕ್ಷಿತಾ ಶೆಟ್ಟಿ ವಿಚಾರವಾಗಿ ಅಶ್ವಿನಿ ಗೌಡ ಹಾಗೂ ಜಾನ್ವಿಗೆ ಕಿಚ್ಚ ಸುದೀಪ್ ಮೈಚಳಿ ಬಿಡಿಸಿದ್ದರು. ಆದರೆ, ಆ ತಪ್ಪನ್ನು ಅಶ್ವಿನಿ ಗೌಡ ಇನ್ನೂ ಸರಿಪಡಿಸಿಕೊಂಡಿಲ್ಲ. ಈ ವಾರ ಸಾಕಷ್ಟು ತಪ್ಪು ಮಾಡಿದ್ದಾರೆ. ಬೇರೆಯವರ ತಪ್ಪನ್ನು ಬೊಟ್ಟು ಮಾಡಿ ತೋರಿಸುವ ಅಶ್ವಿನಿ, ತಾನೇ ಆ ತಪ್ಪು ಮಾಡಿದಾಗ ಅದನ್ನು ಒಪ್ಪಲು ತಯಾರು ಇರುವುದಿಲ್ಲ. ಈ ವಾರ ಇದು ಅನೇಕ ಬಾರಿ ಸಂಭವಿಸಿದೆ.

BBK 12: ಬಿಗ್ ಬಾಸ್ ಸೀಸನ್ 12ರ ಮೊದಲ ಕ್ಯಾಪ್ಟನ್ ಆದ ಮ್ಯುಟೆಂಟ್ ರಘು

ಬಿಗ್ ಬಾಸ್ ಸೀಸನ್ 12ರ ಮೊದಲ ಕ್ಯಾಪ್ಟನ್ ಆದ ರಘು

ಬಿಬಿಕೆ 12ರ ಮೊದಲ ಕ್ಯಾಪ್ಟನ್ಸಿ ಟಾಸ್ಕ್ಗೆ ರಘು ಹಾಗೂ ರಿಷಾ ಆಯ್ಕೆ ಆಗಿದ್ದರು. ಸೂರಜ್ ತಂಡ ವಿವಿಧ ಮುಖಬೆಲೆಯ ನಕಲಿ ನಾಣ್ಯಗಳ ಟಾಸ್ಕ್ನಲ್ಲಿ ಸೋತ ಕಾರಣ ಇವರು ಆಯ್ಕೆ ಆಗಲಿಲ್ಲ. ಅತ್ತ ರಘು ಹಾಗೂ ರಿಷಾ ಬಿಗ್ ಬಾಸ್ ಕೊಟ್ಟ ಸ್ಪೆಷಲ್ ಪವರ್ ಮೂಲಕ ನೇರವಾಗಿ ಕ್ಯಾಪ್ಟನ್ಸಿ ಟಾಸ್ಕ್ಗೆ ಅರ್ಹತೆ ಪಡೆದರು.

Kantara: Chapter -1: 2025ರಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ ಕಾಂತಾರ ಚಾಪ್ಟರ್- 1 ಸಿನಿಮಾ!

2025ರಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ ಕಾಂತಾರ ಚಾಪ್ಟರ್- 1 ಸಿನಿಮಾ!

Kantara: Chapter -1: ಕಾಂತಾರ ಚಾಪ್ಟರ್ -1 ಸಿನಿಮಾ ಚಿತ್ರಮಂದಿರದಲ್ಲಿ ಭರ್ಜರಿಯಾಗಿ ಪ್ರದರ್ಶನ ಕಾಣುವ ಮೂಲಕ ಬಾಕ್ಸ್ ಆಫೀಸ್ ನಲ್ಲಿ ಹಿಟ್ ಕಂಡಿದ್ದು ಅನೇಕ ಸೂಪರ್ ಹಿಟ್ ಸಿನಿಮಾಗಳ ದಾಖಲೆ ಯನ್ನು ಕೂಡ ಮೀರಿಸಿದೆ. ವಾರ್ 2, ಸೈಯಾರಾ, ಛಾವಾ, ಕೂಲಿ ಸಿನಿಮಾಗಳ ದಾಖಲೆಯನ್ನು ಮೀರಿಸಿ ಹೊಸ ದಾಖಲೆ ಮಾಡಿದೆ. ಈ ಮೂಲಕ ಕಾಂತಾರಾ ಸಿನಿಮಾ 2025 ರಲ್ಲಿ ತೆರೆಕಂಡ ಸಿನಿಮಾದಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ್ದ ಭಾರತೀಯ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

Kantara: Chapter -1: ರಾಜ್‌ ಬಿ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿ'ಕಾಂತಾರ: ಚಾಪ್ಟರ್ 1’ ಸಿನಿಮಾ ನೋಡಿಲ್ವಾ? ರಿಷಬ್‌ ಪತ್ನಿ ಪ್ರಗತಿ ಹೇಳಿದ್ದೇನು?

ರಾಜ್‌ ಬಿ ಶೆಟ್ಟಿ ಹಾಗೂ ರಕ್ಷಿತ್ 'ಕಾಂತಾರ: ಚಾಪ್ಟರ್ 1’ ಸಿನಿಮಾ ನೋಡಿಲ್ವ?

Kantara: Chapter -1: ಕೇವಲ ಭಾರತದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿಯೂ ಕೂಡ ಕಾಂತಾರ ಸಿನಿಮಾ ಸಂಚಲನ ಉಂಟುಮಾಡುತ್ತಿದೆ. ರಿಷಭ್ ನಿರ್ದೇಶನ ಅಭಿಯನಕ್ಕೆ ಪ್ರೇಕ್ಷಕರು ಫಿದಾ ಆಗಿದ್ದು ಹಲವು ಸೆಲೆಬ್ರಿಟಿಗಳು ಕೂಡ ಸಿನಿಮಾದ ಬಗ್ಗೆ ಮೆಚ್ಚುಗೆಯ ಪ್ರತಿಕ್ರಿಯೆ ನೀಡಿದ್ದಾರೆ.‌ ಆದರೆ 'ಕಾಂತರ ‌ಚಾಪ್ಟರ್ 1’ ಚಿತ್ರದ ಬಗ್ಗೆ ರಕ್ಷಿತ್ ಶೆಟ್ಟಿ ಹಾಗೂ ರಾಜ್‌ ಬಿ ಶೆಟ್ಟಿ ಯವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ‌ ಎನ್ನುವ ಚರ್ಚೆಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಾ ಇದೆ.‌ ಈ ಬಗ್ಗೆ ಇದೀಗ ರಿಷಬ್‌ ಶೆಟ್ಟಿ ಪತ್ನಿ ಪ್ರಗತಿ ಸ್ಪಷ್ಟನೆ ನೀಡಿದ್ದಾರೆ.

Rangapravesha: ಬೆಂಗಳೂರಿನಲ್ಲಿ ಅ.25ರಂದು ರಾಧಾ ಶ್ರೀವತ್ಸ ರಂಗಪ್ರವೇಶ

ಬೆಂಗಳೂರಿನಲ್ಲಿ ಅ.25ರಂದು ರಾಧಾ ಶ್ರೀವತ್ಸ ರಂಗಪ್ರವೇಶ

Bengaluru News: ಖ್ಯಾತ ಭರತನಾಟ್ಯ ವಿದುಷಿ ಡಾ. ಸುಪರ್ಣಾ ವೆಂಕಟೇಶ ಅವರ ಶಿಷ್ಯೆ ರಾಧಾ ಶ್ರೀವತ್ಸ ಅವರ ರಂಗಪ್ರವೇಶ ಕಾರ್ಯಕ್ರಮವು ಅ. 25ರಂದು ಶನಿವಾರ ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ ಜರುಗಲಿದೆ. ಈ ಕುರಿತ ವಿವರ ಇಲ್ಲಿದೆ.

Vrusshabha Movie: ಕೊನೆಗೂ ವೃಷಭ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಮಾಡಿದ ನಟ ಮೋಹನ್ ಲಾಲ್!

ವೃಷಭ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್!

Vrusshabha Movie Release Date: ಮಲಯಾಳಂ ಸೂಪರ್ ಸ್ಟಾರ್ ನಟ ಮೋಹನ್ ಲಾಲ್ ಅಭಿನಯದ ಬಹು ನಿರೀಕ್ಷಿತ ವೃಷಭ ಸಿನಿಮಾದ ಟೀಸರ್ ಇದೇ ಸೆಪ್ಟಂಬರ್ ತಿಂಗಳಲ್ಲಿ ಟೀಸರ್ ರಿಲೀಸ್ ಆಗಿತ್ತು. 1 ನಿಮಿಷ 43 ಸೆಕೆಂಡ್ ಇರುವ ಈ ಟೀಸರ್ ನಲ್ಲಿ ಅವರ ಲುಕ್‌ , ಮಾಸ್ ಎಂಟ್ರಿ ಅಭಿಮಾನಿಗಳ ಮನ ಸೆಳೆದಿತ್ತು. ಇದೀಗ ಅದೇ ಸಿನಿಮಾ ಯಾವಾಗ ರಿಲೀಸ್ ಆಗುತ್ತದೆ ಎಂಬ ಪೋಸ್ಟ್ ಒಂದನ್ನು ಹಂಚಿಕೊಳ್ಳಲಾಗಿದೆ.

Suvarna Gruhamantri: ಸ್ಟಾರ್ ಸುವರ್ಣ ವಾಹಿನಿಯಲ್ಲಿ "ಸುವರ್ಣ ಗೃಹಮಂತ್ರಿ''ಕಾರ್ಯಕ್ರಮದ ಸಂಭ್ರಮ..

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಸುವರ್ಣ ಗೃಹಮಂತ್ರಿ ಕಾರ್ಯಕ್ರಮ!

Suvarna Gruhamantri: "ಸುವರ್ಣ ಗೃಹಮಂತ್ರಿ"ಯು ಯಶಸ್ವಿ 500 ಸಂಚಿಕೆ ಗಳನ್ನು ಪೂರೈಸುವ ಸಂಭ್ರಮದಲ್ಲಿದೆ. ಈ ಸಂಭ್ರಮವನ್ನು ಮತ್ತಷ್ಟು ಸಂಭ್ರಮಿಸಲು ಮೊಟ್ಟ ಮೊದಲ ಬಾರಿಗೆ ಜೊತೆ ಯಾಗಲಿದೆ ನಟ ರವಿ ಶಂಕರ್ ಗೌಡ ಅವರ ಕುಟುಂಬ... ಈ ಸ್ಪೆಷಲ್ ಎಪಿಸೋಡ್ ಅಲ್ಲಿ ನಟ ರವಿ ಶಂಕರ್ ತಮ್ಮದೇ ಮನೆಗೆ ಹೋಗಿ ತನ್ನ ಕುಟುಂಬದ ಜೊತೆ ಮಾತುಕತೆ ನಡೆಸಲಿದ್ದಾರೆ.

Raghu Dixit Wedding: ಗಾಯಕಿ ವಾರಿಜಶ್ರೀ ಜತೆ ವಿವಾಹ ಜೀವನಕ್ಕೆ ಕಾಲಿಟ್ಟ ರಘು ದೀಕ್ಷಿತ್

ಗಾಯಕಿ ವಾರಿಜಶ್ರೀ ಜತೆ ವಿವಾಹ ಜೀವನಕ್ಕೆ ಕಾಲಿಟ್ಟ ರಘು ದೀಕ್ಷಿತ್

Raghu Dixit and Varijashree Venugopal Wedding: ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ಗಾಯಕ ರಘು ದೀಕ್ಷಿತ್‌ ಮತ್ತು ವಾರಿಜಶ್ರೀ ಮದುವೆ ನಡೆದಿದೆ. ಸೋಶಿಯಲ್ ಮೀಡಿಯಾದಲ್ಲಿ ಫೋಟೊಗಳು ವೈರಲ್‌ ಆಗಿದ್ದು, ನವಜೋಡಿಗೆ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.

BBK 12: ಬಿಗ್ ಬಾಸ್ ಜೈಲಿನಲ್ಲಿ ಅಶ್ವಿನಿ ಗೌಡ ದುರಹಂಕಾರ: ಸ್ಪರ್ಧಿಗಳ ಕೆಂಗಣ್ಣಿಗೆ ಗುರಿ

ಬಿಗ್ ಬಾಸ್ ಜೈಲಿನಲ್ಲಿ ಅಶ್ವಿನಿ ಗೌಡ ದುರಹಂಕಾರ

ಕಲರ್ಸ್ ಕನ್ನಡ ಒಂದು ಪ್ರೋಮೋ ಬಿಡುಗಡೆ ಮಾಡಿದ್ದು, ಇದರಲ್ಲಿ ಅಶ್ವಿನಿ ಗೌಡ ಅವರು ಕಳಪೆ ಪಡೆದು ಜೈಲಿನ ಒಳಗೆ ತೆರಳಿದ್ದಾರೆ. ಮೊದಲನೆಯದಾಗಿ ಮ್ಯೂಟೆಂಟ್ ರಘು ಅವರು, ಕಳಪೆ ಅಂತ ಬಂದಾಗ ನಾನು ಅಶ್ವಿನಿ ಮೇಡಂಗೆ ಕೊಡುತ್ತೇನೆ ಎಂದು ಹೇಳಿದ್ದಾರೆ. ಆಗ ಅಶ್ವಿನಿ ಅವರು ಥ್ಯಾಂಕ್ಯು ಎಂದು ಚಪ್ಪಾಳೆ ತಟ್ಟಿದ್ದಾರೆ.

Divya Suresh: ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ದಿವ್ಯಾ ಸುರೇಶ್‌ರಿಂದ ಹಿಟ್‌ & ರನ್‌, ಮಹಿಳೆಯ ಕಾಲು ಮುರಿತ

ನಟಿ ದಿವ್ಯಾ ಸುರೇಶ್‌ರಿಂದ ಹಿಟ್‌ & ರನ್‌, ಮಹಿಳೆಯ ಕಾಲು ಮುರಿತ

Hit and Run: ದಿವ್ಯಾ ಸುರೇಶ್ ಕಾರು ನಿಲ್ಲಿಸದೇ, ಗಾಯಾಳಿಗೆ ಚಿಕಿತ್ಸೆ ಕೊಡಿಸಲೂ ಯತ್ನಿಸದೆ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಂಡ ಬ್ಯಾಟರಾಯನಪುರ ಸಂಚಾರಿ ಪೊಲೀಸರು ಘಟನೆಯ ಸ್ಥಳದ ಸಿಟಿಟಿವಿ ಫೂಟೇಜ್‌ಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ನಟಿ ದಿವ್ಯಾ ಸುರೇಶ್ ಕಾರ್ ಡಿಕ್ಕಿ ಹೊಡೆದು ಹೋಗಿರುವುದು ಗೊತ್ತಾಗಿದೆ.

Sushant Singh Death Case: ಸುಶಾಂತ್‌ ಸಿಂಗ್‌ ಡೆತ್‌ ಕೇಸ್‌ನಲ್ಲಿ ರಿಯಾ ಚಕ್ರವರ್ತಿಗೆ ಬಿಗ್‌ ರಿಲೀಫ್‌; ಸಿಬಿಐ ವರದಿಯಲ್ಲೇನಿದೆ?

ಸುಶಾಂತ್‌ ಸಿಂಗ್‌ ಡೆತ್‌ ಕೇಸ್‌ನಲ್ಲಿ ರಿಯಾ ಚಕ್ರವರ್ತಿಗೆ ಬಿಗ್‌ ರಿಲೀಫ್‌!

Sushant Singh: ಜೂನ್ 14, 2020 ರಂದು ಸುಶಾಂತ್ ಸಿಂಗ್ ಅನುಮಾನಸ್ಪದವಾಗಿ ಸಾವನಪ್ಪಿದ್ದರು. ಇವರ ಸಾವು ನಿಗೂಢವಾಗಿದ್ದು ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂಬ ಆರೋಪದ ಮೇಲೆ ವಿವಿಧ ಆಯಾಮದಲ್ಲಿ ಕಳೆದ 5ವರ್ಷಗಳಿಂದ ತನಿಖೆ ನಡೆಯುತ್ತಿದೆ. ಇದೀಗ ಅವರ ಆತ್ಮಹತ್ಯೆ ಪ್ರಕರಣದಲ್ಲಿ ನಟಿ ರಿಯಾ ಚಕ್ರವರ್ತಿ ವಿರುದ್ಧ ವಿವಿಧ ಆರೋಪಗಳು ಕೇಳಿಬಂದಿತ್ತು. ಇದೀಗ ಸಿಬಿಐ ರಿಯಾ ಚಕ್ರ ವರ್ತಿಗೆ ಕ್ಲೀನ್‌ಚಿಟ್ ನೀಡಿದೆ.

BBK 12: ನಿನ್ನೆ ಮೊನ್ನೆ ಬಂದಿರೋ ಸೆಡೆ..: ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾಗೆ ಮತ್ತೆ ಅವಮಾನ

ನಿನ್ನೆ ಮೊನ್ನೆ ಬಂದಿರೋ ಸೆಡೆ..: ರಕ್ಷಿತಾಗೆ ಮತ್ತೆ ಅವಮಾನ

ಬಿಗ್ ಬಾಸ್ ಮನೆಯ ಸ್ಪರ್ಧಿ ಕಾಕ್ರೋಚ್ ಸುಧಿ ಅವರು ರಕ್ಷಿತಾ ಶೆಟ್ಟಿ ಅವರನ್ನು ಸೆಡೆ ಎಂದು ಕರೆದಿದ್ದಾರೆ. ‘‘ಅವಳ್ಯಾರೋ ನಿನ್ನೆ ಮೊನ್ನೆ ಬಂದಿರೋ ಸೆಡೆ ಮಾತಾಡ್ತಾನೇ ಇದ್ದಾಳೆ.. ಐದು ಸಲ ಕರೆದರೆ ತಿರಗೋದಿಲ್ಲ ಅವಳು.. ಒಬ್ಬಳೇ ಕಿಲಾಡಿ ಥರ ಮಾತಾಡ್ತಾಳೆ. ಮರ್ಯಾದೆ ಕೊಟ್ಟರೆ ಮರ್ಯಾದೆ..’’ ಎಂದು ಕೂಗಾಡಿದ್ದಾರೆ.

Loading...