ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಮನರಂಜನೆ
Star Monsoon Fashion 2025: ನಟಿ ಮೌನ ಗುಡ್ಡೆಮನೆ ಮಾನ್ಸೂನ್‌ ಟ್ರಾವೆಲ್‌ ಫ್ಯಾಷನ್‌ ಝಲಕ್‌

ನಟಿ ಮೌನ ಗುಡ್ಡೆಮನೆ ಮಾನ್ಸೂನ್‌ ಟ್ರಾವೆಲ್‌ ಫ್ಯಾಷನ್‌ ಝಲಕ್‌

Actress Mouna Guddemane: ಸ್ನೇಹಿತೆಯರೊಂದಿಗೆ ಸಕಲೇಶಪುರಕ್ಕೆ ತೆರಳಿದ್ದ ನಟಿ ಮೌನ ಗುಡ್ಡೆಮನೆ, ಸಿಂಪಲ್‌ ಮಾನ್ಸೂನ್‌ ಟ್ರಾವೆಲ್‌ ಫ್ಯಾಷನ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಕೋ ಆರ್ಡ್ ಸೆಟ್‌ ಜತೆಗೆ ಜಾಕೆಟ್‌ ಧರಿಸಿರುವ ಅವರು ಕಲರ್‌ಫುಲ್‌ ರೈನ್‌ಕೋಟ್‌ನಲ್ಲೂ ಹಂಗಾಮ ಎಬ್ಬಿಸಿದ್ದಾರೆ. ಅವರ ಲುಕ್‌ ಹೇಗಿತ್ತು? ಇಲ್ಲಿದೆ ವಿವರ.

ಬೆಂಗಳೂರಿಗರೇ ಜುಲೈ 26ರಂದು ಕೃಷ್ಣ ಸಂಗೀತ ಸಂಜೆಯನ್ನು ಅನುಭವಿಸಲು ಸಿದ್ಧರಾಗಿ ..!

ಜು.26ರಂದು ಕೃಷ್ಣ ಸಂಗೀತ ಸಂಜೆಯನ್ನು ಅನುಭವಿಸಲು ಸಿದ್ಧರಾಗಿ ..!

ಏಕಂ ಸತ್ ಫೌಂಡೇಶನ್‌ ಜೊತೆಗೂಡಿ ಎ ಡಿ ವೆಂಚರ್ಸ್ ಪ್ರೊಡಕ್ಷನ್‌ನಲ್ಲಿ, ಕೆಸ್ಟೋನ್‌ ಉತ್ಸವ ಕಾರ್ಯ ಕ್ರಮವನ್ನು ಆಯೋಜಿಸಿದೆ. ಈ ಸಂಗೀತ ಸಂಜೆ ಕೃಷ್ಣನ ಜೀವನ ಹಾಗೂ ತತ್ವಗಳನ್ನು ಪ್ರಸ್ತುತ ಪಡಿಸಲಿದೆ. ಉತ್ತಮ ಸಂಗೀತ, ಕಥಾ ವಿಸ್ತಾರ, ತತ್ವಗಳ ಪಾಠದ ಮೂಲಕ ಭಗವಾನ್ ಕೃಷ್ಣನನ್ನ ಕಲಾವಿದನಾಗಿ, ಯೋಧನಾಗಿ , ಚಿಂತಕನಾಗಿ ಹಾಗೂ ಉತ್ತಮ ಮಾರ್ಗದರ್ಶಕನನ್ನಾಗಿ ಈ ಕಾರ್ಯಕ್ರಮ ಕೃಷ್ಣನ ಜೀವನವನ್ನ ತೆರೆದಿಡಲಿದೆ.

Sreeleela: ಮತ್ತೊಂದು ಬಾಲಿವುಡ್‌ ಚಿತ್ರ ಒಪ್ಪಿಕೊಂಡ ಶ್ರೀಲೀಲಾ; ರಣವೀರ್ ಸಿಂಗ್‌ ಜತೆ ಕಿಸ್‌ ಬೆಡಗಿ ರೊಮ್ಯಾನ್ಸ್‌

ನಟಿ ಶ್ರೀಲೀಲಾಗೆ ಬಾಲಿವುಡ್‌ನಲ್ಲಿ ಸಿಕ್ತು ಮತ್ತೊಂದು ಭರ್ಜರಿ ಆಫರ್

ಟಾಲಿವುಡ್‌ನಲ್ಲಿ ಸಾಕಷ್ಟು ಅವಕಾಶಗಳನ್ನು ಪಡೆಯುತ್ತಿರುವ ನಟಿ, ಕನ್ನಡತಿ ಶ್ರೀಲೀಲಾ ಇದೀಗ ಬಾಲಿವುಡ್‌ನಲ್ಲಿಯೂ ಸಾಕಷ್ಟು ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ತೆರೆಕಂಡ ಕಿರೀಟಿ ಜತೆಗಿನ ʼಜೂನಿಯರ್ʼ ಸಿ‌ನಿಮಾ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಇದೀಗ ಬಾಲಿವುಡ್ ಖ್ಯಾತ ನಟ ರಣವೀರ್ ಸಿಂಗ್ ಅಭಿನಯದ ಸಿನಿಮಾದಲ್ಲಿ ಶ್ರೀಲೀಲಾ ಅವರಿಗೆ ಅವಕಾಶ ಸಿಕ್ಕಿದೆ.

Sonal Monteiro: ʼʼನಮ್ಮ ಬಂಧ ಇನ್ನಷ್ಟು ಬಿಗಿಯಾಗಲಿʼʼ; ಭೀಮನ ಅಮಾವಾಸ್ಯೆ ಆಚರಿಸಿದ ಸೋನಾಲ್ ಮೊಂತೆರೊ ಭಾವುಕ

ಭೀಮನ ಅಮಾವಾಸ್ಯೆ ಆಚರಿಸಿದ ಸೋನಾಲ್ ಮೊಂತೆರೊ

Tharun Sudhir: ಸ್ಯಾಂಡಲ್‌ವುಡ್‌ ನಟಿ ಸೋನಾಲ್ ಮೊಂತೆರೊ ಗುರುವಾರ ಭೀಮನ ಅಮಾವಾಸ್ಯೆ ಆಚರಿಸಿದ್ದಾರೆ. ಪತಿ ತರುಣ್ ಸುಧೀರ್ ಅವರ ಪಾದ ಪೂಜೆ ಮಾಡಿ ಶಾಸ್ತ್ರೋಕ್ತವಾಗಿ ಸಂಪ್ರದಾಯವನ್ನು ಪಾಲಿಸಿದ್ದಾರೆ. ಸದ್ಯ ಈ ಫೋಟೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

Kundapra Kannada Habba 2025: ಬೆಂಗಳೂರಿನಲ್ಲಿ ಜುಲೈ 26, 27ರಂದು ʼಕುಂದಾಪ್ರ ಕನ್ನಡ ಹಬ್ಬʼ:  ಸಿಎಂ ಸಿದ್ದರಾಮಯ್ಯ ಅವರಿಂದ ಉದ್ಘಾಟನೆ

ಬೆಂಗಳೂರಲ್ಲಿ ಜುಲೈ 26, 27ರಂದು ʼಕುಂದಾಪ್ರ ಕನ್ನಡ ಹಬ್ಬʼ

Kundapra Kannada Habba 2025: ಕುಂದಾಪ್ರ ಕನ್ನಡ ಪ್ರತಿಷ್ಠಾನವು ಆಯೋಜಿಸಿರುವ ʼಕುಂದಾಪ್ರ ಕನ್ನಡ ಹಬ್ಬʼ ಜುಲೈ 26 ಮತ್ತು 27ರಂದು ಬೆಂಗಳೂರಿನ ಬೆಂಗಳೂರಿನ ಹೊಸಕೆರೆಹಳ್ಳಿ ನೈಸ್ ರೋಡ್ ಜಂಕ್ಷನ್ ಬಳಿ ಇರುವ ನಂದಿ ಲಿಂಕ್ ಗ್ರೌಂಡ್‌ನಲ್ಲಿ ನಡೆಯಲಿದೆ. ಈ ಕುರಿತ ವಿವರ ಇಲ್ಲಿದೆ.

ಸಹಾಯಕ ನಿರ್ದೇಶಕರಾಗಿ ವೃತ್ತಿ ಜೀವನ ಆರಂಭಿಸಿ ಬಳಿಕ ಸ್ಟಾರ್ ಪಟ್ಟಕ್ಕೇರಿದ ಬಾಲಿವುಡ್ ಕಲಾವಿದರು

ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ ಬಾಲಿವುಡ್ ಸ್ಟಾರ್‌ಗಳು

ಅನೇಕರು ಸಿನಿಮಾ ಕ್ಷೇತ್ರದಲ್ಲಿ ಸ್ಟಾರ್‌ ಆಗಬೇಕೆಂದು ಕನಸು ಕಾಣುತ್ತಾರೆ. ಆದರೆ ಕೆಲವರು ಮಾತ್ರ ಇದರಲ್ಲಿ ಯಶಸ್ವಿಯಾಗುತ್ತಾರೆ. ಬಾಲಿವುಡ್‌ನಲ್ಲಿ ದೊಡ್ಡ ಪರದೆಯ ಮೇಲೆ ಕಾಣಿಸಿಕೊಂಡು, ಪ್ರೇಕ್ಷಕರ ಮೆಚ್ಚುಗೆ ಗಳಿಸಿರುವ ಕೆಲವು ನಟ - ನಟಿಯರು ಆರಂಭದಲ್ಲಿ ಕ್ಯಾಮೆರಾ ಹಿಂದೆ ಕೆಲಸ ಮಾಡಿದ್ದರು ಎಂದರೆ ನೀವು ನಂಬಲೇಬೇಕು. ಮೊದಲು ಅಸಿಸ್ಟೆಂಟ್ ಡೈರೆಕ್ಟರ್ (AD) ಆಗಿ ಕೆಲಸ ಮಾಡಿದ್ದ ಅಂತಹ ಸ್ಟಾರ್‌ಗಳ ಮಾಹಿತಿ ಇಲ್ಲಿದೆ.

Fathers Day Movie: ತಂದೆ - ಮಗನ ಬಾಂಧವ್ಯದ ʼಫಾದರ್ಸ್ ಡೇʼ ಚಿತ್ರದ ಟೀಸರ್‌ ಔಟ್‌

ತಂದೆ - ಮಗನ ಬಾಂಧವ್ಯದ ʼಫಾದರ್ಸ್ ಡೇʼ ಚಿತ್ರದ ಟೀಸರ್‌ ಔಟ್‌

Fathers Day Movie: ರಾಜಾರಾಮ್ ರಾಜೇಂದ್ರನ್ ನಿರ್ದೇಶನದ, ಹರ್ಷಿಲ್ ಕೌಶಿಕ್ ಹಾಗೂ ಅಜಿತ್ ಹಂಡೆ ಪ್ರಮುಖ ಪಾತ್ರದಲ್ಲಿ ನಟಿಸಿರುವ ತಂದೆ - ಮಗನ ಬಾಂಧವ್ಯದ ʼಫಾದರ್ಸ್ ಡೇʼ ಚಿತ್ರದ ಟೀಸರ್‌ ಬಿಡುಗಡೆಯಾಗಿದೆ. ಈ ಕುರಿತ ವಿವರ ಇಲ್ಲಿದೆ.

Jason Sanjay: ನಟ ವಿಜಯ್ ಪುತ್ರ ಜೇಸನ್ ಹೊಸ ಚಿತ್ರದ ನಿರ್ದೇಶನದಲ್ಲಿ ಫುಲ್ ಬ್ಯುಸಿ; ವಿಡಿಯೊ ವೈರಲ್

ಡೈರಕ್ಷನ್‌ ಕ್ಯಾಪ್‌ ತೊಟ್ಟ ನಟ ದಳಪತಿ ವಿಜಯ್ ಪುತ್ರ ಜೇಸನ್

ಸಾಮಾನ್ಯವಾಗಿ ಸ್ಟಾರ್‌ಗಳ ಮಕ್ಕಳು ನಟನೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಆದರೆ ತಮಿಳು ಸೂಪರ್‌ಸ್ಟಾರ್‌, ದಳಪತಿ ವಿಜಯ್ ಪುತ್ರ ಜೇಸನ್ ನಟನೆಯ ಬದಲು ನಿರ್ದೇಶನ ಕ್ಷೇತ್ರ ಆಯ್ಕೆ ಮಾಡಿದ್ದಾರೆ. ಆ್ಯಕ್ಷನ್ ಸಿನಿಮಾವನ್ನು ಜೇಸನ್ ನಿರ್ದೇಶಿಸುತ್ತಿದ್ದು, ಈಗಾಗಲೇ ಸಿನಿಮಾದ ಚಿತ್ರೀಕರಣ ಕೂಡ ಆರಂಭವಾಗಿದೆ. ತಮಿಳುನಾಡಿನ ಸೇಲಂನಲ್ಲಿ ಚಿತ್ರೀಕರಣದಲ್ಲಿ ಜೇಸನ್ ಬ್ಯುಸಿಯಾಗಿದ್ದಾರೆ. ಈ ವಿಡಿಯೊ ವೈರಲ್ ಆಗಿದೆ.

Muddu Sose: ಮುದ್ದು ಸೊಸೆ ಧಾರಾವಾಹಿಯಲ್ಲಿ ಮಹಾ ತಿರುವು: ಎಂಟ್ರಿ ಕೊಟ್ಟ ಹನು-ಧನು ಜೋಡಿ

ಮುದ್ದು ಸೊಸೆ ಧಾರಾವಾಹಿಯಲ್ಲಿ ಹನು-ಧನು ಜೋಡಿ

ಬಿಗ್ ಬಾಸ್ ರನ್ನರ್-ಅಪ್ ತ್ರಿವಿಕ್ರಮ್ ನಟನೆಯ ಮುದ್ದು ಸೊಸೆ ಧಾರಾವಾಹಿ ಇತ್ತೀಚೆಗಷ್ಟೆ 50 ಸಂಚಿಕೆ ಪೂರೈಸಿತು. ಇದೀಗ ಧಾರಾವಾಹಿಯಲ್ಲಿ ಮಹಾ ತಿರುವೊಂದನ್ನು ನೀಡಲಾಗಿದೆ. ಇದಕ್ಕಾಗಿ ಬಿಗ್ ಬಾಸ್ ಕನ್ನಡ ಸೀಸನ್ 11ರ ಕುಚುಕು ಗೆಳೆಯರು ಹನುಮಂತ ಲಮಾಣಿ ಮತ್ತು ಧನರಾಜ್ ಆಚಾರ್ ಎಂಟ್ರಿ ಕೊಟ್ಟಿದ್ದಾರೆ.

Nandan Bhat: ಆತ್ಮಹತ್ಯೆಗೆ ಯತ್ನಿಸಿದ್ದ ಕಿರುತೆರೆ ಕಲಾವಿದ ನಂದನ್ ಭಟ್ ಸಾವು

ಆತ್ಮಹತ್ಯೆಗೆ ಯತ್ನಿಸಿದ್ದ ಕಿರುತೆರೆ ಕಲಾವಿದ ನಂದನ್ ಭಟ್ ಸಾವು

Nandan Bhat: ಕಳೆದ ವಾರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಕಿರುತೆರೆ ಕಲಾವಿದ ನಂದನ್ ಭಟ್ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಆದರೆ, ಇವರ ಆತ್ಮಹತ್ಯೆಗೆ ಕಾರಣವೇನು ಅನ್ನೋದು ಇನ್ನೂ ತಿಳಿದುಬಂದಿಲ್ಲ.

Ramayana Movie: ರಾಮಾಯಣಕ್ಕೋಸ್ಕರವೇ 10 ವರ್ಷ ಮೀಸಲಿಟ್ಟ ನಿರ್ದೇಶಕ; ಸಿನಿಮಾಗಾಗಿ ನಿತೇಶ್ ತಿವಾರಿ ಮಾಡಿದ ಅಧ್ಯಯನ ಹೇಗಿತ್ತು ಗೊತ್ತಾ?

ರಾಮಾಯಣಕ್ಕೋಸ್ಕರವೇ 10 ವರ್ಷ ಮೀಸಲಿಟ್ಟ ನಿರ್ದೇಶಕ!

ದಂಗಲ್ , ಚಿಚೋರೆಯಂತಹ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ನೀಡಿದ್ದ ನಿರ್ದೇಶಕ ನಿತೇಶ್ ತಿವಾರಿ ಅವರು ರಾಮಾಯಣ ಸಿನಿಮಾ ಮಾಡಲು ಸಾಕಷ್ಟು ಪರಿಶ್ರಮಿಸುತ್ತಿದ್ದಾರೆ. ರಾಮಾಯಣದಂತಹ ಮಹಾಕಾವ್ಯದ ಕಥೆಯ ವಿಚಾರಗಳ ಅಧ್ಯಯನ ಮಾಡಲು ಬರೋಬ್ಬರಿ 10 ವರ್ಷಗಳೇ ಸಂದಿದೆ ಎಂಬ ವಿಚಾರ ತಿಳಿದು ಬಂದಿದೆ. ಈ ಸಿನಿಮಾದ ಶೂಟಿಂಗ್ ಈಗ ನಡೆಯುತ್ತಿದ್ದರೂ ಕೂಡ ಇದೇ ಸಿನಿಮಾಕ್ಕಾಗಿ ಕಳೆದ 10 ವರ್ಷದಿಂದಲೂ ನಿರ್ದೇಶಕ ನಿತೇಶ್ ತಿವಾರಿ ಅವರು ಸಾಕಷ್ಟು ಅಧ್ಯಯನ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.

Bhagya Lakshmi Serial: ಪೂಜಾಳ ಒಳ್ಳೆ ಗುಣಕ್ಕೆ ಮನಸೋತ ರಾಮ್​ದಾಸ್: ಉರಿದುಕೊಂಡ ಮೀನಾಕ್ಷಿ

ಪೂಜಾಳ ಒಳ್ಳೆ ಗುಣಕ್ಕೆ ಮನಸೋತ ರಾಮ್​ದಾಸ್

ಪೂಜಾಳಿಗೆ ಹೇಗಾದರು ಮಾಡಿ ಬುದ್ದಿ ಕಲಿಸಬೇಕು.. ಅವಳಾಗಿಯೇ ಈ ಮನೆಯಿಂದ ಹೊರಹೋಗಬೇಕು ಎಂದು ಮೀನಾಕ್ಷಿ-ಕನ್ನಿಕಾ ಹೊಂಚು ಹಾಕುತ್ತಿದ್ದಾರೆ. ಆದರೆ, ಅತ್ತ ಪೂಜಾ ಮೊದಲ ದಿನವೇ ರಾಮ್ದಾಸ್ ಮನಗೆದ್ದಿದ್ದಾಳೆ. ಇದನ್ನು ಕಂಡು ಮೀನಾಕ್ಷಿಯ ಕೋಪ ನೆತ್ತಿಗೇರಿದೆ.

Serial Views: 25 ದಿನಗಳಲ್ಲಿ 85 ಕೋಟಿ ವೀಕ್ಷಣೆ: ವಿಶ್ವದಲ್ಲೇ ಅತಿ ಹೆಚ್ಚು ವೀಕ್ಷಿಸಿದ ಈ ಧಾರಾವಾಹಿ ಯಾವುದು ಗೊತ್ತೇ?

ವಿಶ್ವದಲ್ಲೇ ಅತಿ ಹೆಚ್ಚು ವೀಕ್ಷಿಸಿದ ಧಾರಾವಾಹಿ ಯಾವುದು ಗೊತ್ತೇ?

ಪ್ರತಿ ಭಾನುವಾರ ಬೆಳಿಗ್ಗೆ 9:30 ಕ್ಕೆ ಜನರು ಟಿವಿಯಲ್ಲಿ ರಾಮಾಯಣ ಧಾರಾವಾಹಿ ನೋಡಲು ಕಾಯುತ್ತಿದ್ದರು. ರಮಾನಂದ ಸಾಗರ್ ಇದನ್ನು ಬಹಳ ಚಿಂತನಶೀಲವಾಗಿ ಮತ್ತು ಕಠಿಣ ಪರಿಶ್ರಮದಿಂದ ಮಾಡಿದ್ದಾರೆ. ಅವರು 14 ವಿಭಿನ್ನ ರಾಮಾಯಣಗಳನ್ನು ಅಧ್ಯಯನ ಮಾಡಿ ಅವುಗಳ ಕಥೆಯನ್ನು ಅಚ್ಚುಕಟ್ಟಾಗಿ ತೋರಿಸಿದ್ದಾರೆ.

BBK 12: ಹಲವು ಧಾರಾವಾಹಿ ಮುಕ್ತಾಯ: ಬಿಗ್ ಬಾಸ್​ಗೆ ಬರಲು ತಯಾರಾದ ಸೀರಿಯಲ್ ನಟ-ನಟಿಯರು ಯಾರು?

ಬಿಗ್ ಬಾಸ್​ಗೆ ಬರಲು ತಯಾರಾದ ಸೀರಿಯಲ್ ನಟ-ನಟಿಯರು

ಕಳೆದ ಎರಡು-ಮೂರು ತಿಂಗಳುಗಳಲ್ಲಿ ಅನೇಕ ಧಾರಾವಾಹಿಗಳು ಮುಕ್ತಾಯಗೊಂಡಿವೆ. ಸದ್ಯ ಈ ಧಾರಾವಾಹಿ ಮುಕ್ತಾಯದ ಬಳಿಕ ಇದರಲ್ಲಿ ನಟಿಸಿದ ಕೆಲ ಸ್ಟಾರ್ಗಳು ಬಿಗ್ ಬಾಸ್ಗೆ ಬರಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದರಲ್ಲಿ ಮೊದಲ ಹೆಸರು ಗಗನ್ ಚಿನ್ನಪ್ಪ. ಸೀತಾ ರಾಮ ಸೀರಿಯಲ್‌ನಲ್ಲಿ ನಟಿಸಿದ್ದ ಇವರು ದೊಡ್ಮನೆಯೊಳಗೆ ಕಾಲಿಡಬಹುದು ಎಂಬ ಗುಸು-ಗುಸು ಇದೆ.

Atheist Krishna Death: ಫೋಟೋಶಾಪ್ ಮೀಮ್‌ ಮೂಲಕ ಮೋದಿಯನ್ನೂ ನಗಿಸಿದ್ದ ನಾಸ್ತಿಕ ಕೃಷ್ಣ ಇನ್ನಿಲ್ಲ

ಪ್ರಧಾನಿ ಮೋದಿಯನ್ನು ನಗುವಂತೆ ಮಾಡಿದ್ದ ನಾಸ್ತಿಕ ಕೃಷ್ಣ ನಿಧನ

ಹಾಸ್ಯ ಪ್ರಧಾನ ಫೋಟೊಶಾಪ್ ಮೀಮ್‌ಗಳಿಗೆ ಹೆಸರುವಾಸಿಯಾಗಿದ್ದ, ಪ್ರಧಾನಿ ನರೇಂದ್ರ ಮೋದಿ ಅವರನ್ನೂ ನಗುವಂತೆ ಮಾಡಿದ್ದ ಜನಪ್ರಿಯ ಕಲಾವಿದ ನಾಸ್ತಿಕ ಕೃಷ್ಣ ನ್ಯುಮೋನಿಯಾದಿಂದ ನಿಧನರಾಗಿದ್ದಾರೆ. ಇವರ ನಿಧನಕ್ಕೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ಇನ್ನು ಇವರ ನಿಧನದ ಸುದ್ದಿ ಕೇಳಿ ಅನೇಕ ಅಭಿಮಾನಿಗಳು ಆಘಾತಕ್ಕೊಳಗಾಗಿದ್ದಾರೆ.

Karuppu Teaser: ಸೂರ್ಯ ನಟನೆಯ 'ಕರುಪ್ಪು' ಟೀಸರ್ ರಿಲೀಸ್‌; ಫ್ಯಾನ್ಸ್‌ ಫುಲ್‌ ಥ್ರಿಲ್‌!

ಸೂರ್ಯ ನಟನೆಯ 'ಕರುಪ್ಪು' ಟೀಸರ್ ರಿಲೀಸ್‌; ಫ್ಯಾನ್ಸ್‌ ಫುಲ್‌ ಥ್ರಿಲ್‌!

ಸೂರ್ಯ ಹುಟ್ಟುಹಬ್ಬದ ಹಿನ್ನೆಲೆ ಅವರ ಅಭಿನಯದ 'ಕರುಪ್ಪು' ಸಿನಿಮಾದ ಟೀಸರ್ ಅನ್ನು ಇಂದು ಬಿಡುಗಡೆಗೊಳಿಸಲಾಯಿತು. ಆರ್. ಜೆ. ಬಾಲಾಜಿ ನಿರ್ದೇಶನದ ಕರುಪ್ಪು ಚಿತ್ರದಲ್ಲಿ ನಟ ಸೂರ್ಯ ನಾಯಕನಾಗಿ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ನಟಿ ತ್ರಿಶಾ ಅವರು ಈ ಸಿನಿಮಾದ ನಾಯಕಿಯಾಗಿದ್ದಾರೆ. ಸೂರ್ಯ ಅವರ ಅಭಿನಯದ ಹೊಸ ಸಿನಿಮಾ ಟೀಸರ್ ಬಹುತೇಕ 'ಘಜಿನಿ' ಸಿನಿಮಾವನ್ನು ಮತ್ತೆ ಮರುಕಳಿಸುವಂತಿದೆ. ಸಿನಿಮಾದ ಆ್ಯಕ್ಷನ್ ಸಿಕ್ವೆನ್ಸ್ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ.

Bollywood Movie: ಈ ವರ್ಷ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಹಿಟ್ ಕಂಡ ಬಾಲಿವುಡ್ ಸಿನಿಮಾಗಳಿವು!

ಈ ವರ್ಷ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಹಿಟ್ ಕಂಡ ಸಿನಿಮಾಗಳಿವು!

2025 ನೇ ವರ್ಷವು ಬಾಲಿವುಡ್ ಚಲನಚಿತ್ರೋದ್ಯಮಕ್ಕೆ ಅತ್ಯುತ್ತಮ ವರ್ಷವಾಗಿದೆ ಆರಂಭದಲ್ಲೇ ಕೆಲವು ಬಾಲಿವುಡ್ ಚಿತ್ರಗಳು ಈ ವರ್ಷ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿವೆ. ವಿಕ್ಕಿ ಕೌಶಲ್ ಅವರ 'ಚಾವಾ' , ಸಲ್ಮಾನ್ ಖಾನ್ 'ಸಿಕಂದರ್, ಅಕ್ಷಯ್ ಕುಮಾರ್ ಅವರ 'ಹೌಸ್ ಫುಲ್ 5' ಸೇರಿದಂತೆ ಬಾಲಿವುಡ್ ನ ಹಲವು ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಗಳಿಸಿವೆ. ಈ ನಿಟ್ಟಿನಲ್ಲಿ 100 ಕೋಟಿ ಗೂ ಅಧಿಕ ಹಣ ಗಳಿಸಿದ ಕೆಲವು ಪ್ರಮುಖ ಚಿತ್ರಗಳ ಮಾಹಿತಿ ಇಲ್ಲಿದೆ.

Karimani Serial: ಕಿರುತೆರೆ ವೀಕ್ಷಕರಿಗೆ ಶಾಕ್: ಕರಿಮಣಿ ಧಾರಾವಾಹಿ ದಿಢೀರ್ ಮುಕ್ತಾಯ

ಕಿರುತೆರೆ ವೀಕ್ಷಕರಿಗೆ ಶಾಕ್: ಕರಿಮಣಿ ಧಾರಾವಾಹಿ ದಿಢೀರ್ ಮುಕ್ತಾಯ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕರಿಮಣಿ ಧಾರಾವಾಹಿಗೆ ಶುಭಂ ಬೋರ್ಡ್ ಬೀಳುತ್ತಿದೆ. ಈಗಾಗಲೇ ಕೊನೆಯ ಸಂಚಿಕೆಗಳು ಪ್ರಸಾರ ಆಗಲು ಶುರುವಾಗಿವೆ. 2024 ಫೆಬ್ರವರಿಯಲ್ಲಿ ಕರಿಮಣಿ ಧಾರಾವಾಹಿ ಶುರುವಾಗಿತ್ತು. ಈಗಾಗಲೇ 407+ ಎಪಿಸೋಡ್‌ಗಳು ಪ್ರಸಾರ ಆಗಿವೆ.

Actress Samantha: ನಟಿ ಸಮಂತಾ ಮರುವಿವಾಹಕ್ಕೆ ಡೇಟ್ ಫಿಕ್ಸ್? ಯಾವಾಗ ಮದುವೆ ಗೊತ್ತಾ?

ನಟಿ ಸಮಂತಾ ಎರಡನೇ ಮದುವೆಗೆ ಡೇಟ್ ಫಿಕ್ಸ್?

ನಟಿ ಸಮಂತಾ ಅವರು ಸಿನಿಮಾಕ್ಕಿಂತಲೂ ವೈಯಕ್ತಿಕ ಜೀವನದ ವಿಚಾರಕ್ಕೆ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಅವರು ಈಗಾಗಲೇ ಲವ್ ನಲ್ಲಿ ಇದ್ದಾರೆ ಶೀಘ್ರವೇ ವಿವಾಹವಾಗಲಿದ್ದಾರೆ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಹರಿದಾಡಿತ್ತು. ಬಾಲಿವುಡ್ ಖ್ಯಾತ ನಿರ್ದೇಶಕ ರಾಜ್ ನಿಧಿಮೋರು ಅವರೊಂದಿಗೆ ಲವ್‌ನಲ್ಲಿದ್ದಾರೆ ಅವರಿಬ್ಬರು ಜೊತೆಗೆ ಸುತ್ತಾಡುತ್ತಿದ್ದಾರೆ ಎಂದು ಹೇಳುವ ಅನೇಕ ಫೋಟೊಗಳು ಕೂಡ ಈಗಾಗಲೇ ಸೋಶಿಯಲ್ ಮಿಡಿಯಾದಲ್ಲಿ ಹರಿದಾಡಿದೆ. ಅದರ ಬೆನ್ನಲ್ಲೆ ಎರಡನೇ ಮದುವೆಯ ದಿನಾಂಕ ಕೂಡ ನಿಗದಿಯಾಗಿದ್ದು ಅವರ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಂತಾಗಿದೆ‌.

Tanushree Dutta: ಮತ್ತೆ ಸುದ್ದಿಯಲ್ಲಿ ಮೀಟೂ ನಟಿ ತನುಶ್ರೀ ದತ್ತಾ! ವಿಡಿಯೊದಲ್ಲಿ ಗೋಳಾಡಿದ್ದೇಕೆ?

ಮೀಟೂ ನಟಿ ತನುಶ್ರೀ ದತ್ತಾ ಅಳುತ್ತಿರುವ ವಿಡಿಯೊ ವೈರಲ್‌!

Tanushree Dutta Video: ಮನೆಯಲ್ಲೇ ನನಗೆ ಕಿರುಕುಳ ನೀಡಲಾಗುತ್ತಿದೆ ಎಂದು ಬಾಲಿವುಡ್ ನಟಿ (bollywood actress) ತನುಶ್ರೀ ದತ್ತಾ (Tanushree Dutta) ಅಳುತ್ತಾ ಮಾಡಿರುವ ವಿಡಿಯೊ (Viral Video) ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನು ನೋಡಿ ಅನೇಕರು ನಟಿಗೆ ಬೆಂಬಲ ವ್ಯಕ್ತಪಡಿಸಿ ಸಾಂತ್ವನ ಹೇಳಿದ್ದಾರೆ.

Bhagya Lakshmi Serial: ಪೂಜಾ-ಕಿಶನ್ ಮೊದಲ ರಾತ್ರಿಯನ್ನು ಹಾಳು ಮಾಡಿದ ಕನ್ನಿಕಾ

ಪೂಜಾ-ಕಿಶನ್ ಮೊದಲ ರಾತ್ರಿಯನ್ನು ಹಾಳು ಮಾಡಿದ ಕನ್ನಿಕಾ

ಪೂಜಾ-ಕಿಶನ್ ಮೊದಲ ರಾತ್ರಿಗೆ ಹೂವಿನ ಅಲಂಕಾರದಿಂದ ರೂಮ್ ರೆಡೆಯಾಗಿರುತ್ತದೆ. ಆದರೆ, ಕನ್ನಿಕಾ ಇದನ್ನ ಕಂಡು ಕೋಪಗೊಂಡಿದ್ದಾಳೆ. ಹಾಸಿಗೆ ಮೇಲಿದ್ದ ಹೂವಿನ ಅಲಂಕಾರವನ್ನೆಲ್ಲ ಹಾಳು ಮಾಡಿದ್ದಾಳೆ. ಆಗ ಆದೀಶ್ವರ್ ಕಾಮತ್ ಬಂದಿದ್ದು, ಕನ್ನಿಕಾಗೆ ಕ್ಲಾಸ್ ತೆಗೆದುಕೊಂಡಿದ್ದಾನೆ.

Mahasangama: ಕಲರ್ಸ್ ಕನ್ನಡದಲ್ಲಿ ಭಾರ್ಗವಿ LL. B.- ನಂದಗೋಕುಲ ಮಹಾ ಸಂಗಮ

ಭಾರ್ಗವಿ LL. B.- ನಂದಗೋಕುಲ ಮಹಾ ಸಂಗಮ

ಸ್ವಾಭಿಮಾನದ ಮಹಾ ಸಂಘರ್ಷದ ಕತೆ ಹೇಳುವ ಭಾರ್ಗವಿ ಎಲ್ ಎಲ್ ಬಿ ಜನಮನ ಗೆಲ್ಲುತ್ತ ಟಿ ಆರ್ ಪಿ ಹೆಚ್ಚಿಸಿಕೊಂಡಿದೆ. ಇದೀಗ ರಾತ್ರಿ 8.30 ಕ್ಕೆ ಪ್ರಸಾರವಾಗುವ ಭಾರ್ಗವಿ LL. B. ರಾತ್ರಿ 9ಕ್ಕೆ ಪ್ರಸಾರವಾಗುವ ನಂದ ಗೋಕುಲ ಇವೆರಡೂ ಧಾರಾವಾಹಿಗಳ ಮಹಾ ಸಂಗಮದ ಪ್ರೋಮೋ ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟುಹಾಕಿದೆ.

BBK 12: ಈ ಬಾರಿ ಬಿಗ್ ಬಾಸ್ ಕನ್ನಡ 12 ನಡೆಯೋದು ಎಲ್ಲಿ ಗೊತ್ತೇ?: ದಿಢೀರ್ ಲೊಕೇಷನ್ ಶಿಪ್ಟ್

ಈ ಬಾರಿ ಬಿಗ್ ಬಾಸ್ ಕನ್ನಡ 12 ನಡೆಯೋದು ಎಲ್ಲಿ ಗೊತ್ತೇ?

ಈ ಮೊದಲು ಬಿಗ್ ಬಾಸ್ ಕನ್ನಡಕ್ಕೆ ಬಂದಾಗ ಪುಣೆಯ ಲೋನಾವಾಲಾದಲ್ಲಿ ಮೊದಲು ಚಿತ್ರೀಕರಣವನ್ನು ಶುರು ಮಾಡಲಾಗಿತ್ತು. ಮೊದಲ ಎರಡು ಸೀಸನ್‌ ನಡೆದಿದ್ದು ಇಲ್ಲಿಯೇ. ಆ ನಂತರ ಬಿಗ್ ಬಾಸ್‌ ಮನೆಯನ್ನು ಬೆಂಗಳೂರಿಗೆ ಸ್ಥಳಾಂತರ ಮಾಡಲಾಯಿತು. ಇದೀಗ ಬಿಗ್ ಬಾಸ್ ಕನ್ನಡ 12 ಕುರಿತು ಮತ್ತೊಂದು ಅಪ್ಡೇಟ್ ಹೊರಬಿದ್ದಿದ್ದು, ಈ ಬಾರಿ ಬಿಗ್ ಬಾಸ್ ಮನೆಯ ಲೊಕೇಷನ್ ಮತ್ತೆ ಬದಲಾಗಲಿದೆಯಂತೆ.

Mahavatar Narsimha Movie: ‘ಮಹಾವತಾರ ನರಸಿಂಹ' ಆನಿಮೇಷನ್‌ ಚಿತ್ರದ ರಿಲೀಸ್‌ ಡೇಟ್‌ ಅನೌನ್ಸ್‌

‘ಮಹಾವತಾರ ನರಸಿಂಹ' ಆನಿಮೇಷನ್‌ ಚಿತ್ರದ ರಿಲೀಸ್‌ ಡೇಟ್‌ ಅನೌನ್ಸ್‌

Mahavatar Narsimha Movie: ಅಶ್ವಿನ್ ಕುಮಾರ್ ನಿರ್ದೇಶನದ 'ಮಹಾವತಾರ ನರಸಿಂಹ' ಆನಿಮೇಷನ್‌ ಚಿತ್ರ ಇದೇ ಜುಲೈ 25ರಂದು ಕನ್ನಡ ಸೇರಿದಂತೆ ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ದೇಶಾದ್ಯಂತ ಬಿಡುಗಡೆ ಆಗುತ್ತಿದೆ. ಈ ಕುರಿತ ವಿವರ ಇಲ್ಲಿದೆ.

Loading...