ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮನರಂಜನೆ

Narendra Modi: ರಾಜ್​​ಕುಮಾರ್ ಅವರ ಜನಪ್ರಿಯ ಸಿನಿಮಾ ಗೀತೆ ಹಂಚಿಕೊಂಡ ಪ್ರಧಾನಿ ನರೇಂದ್ರ ಮೋದಿ; ಕಾರಣ ಏನು?

ರಾಜ್​​ಕುಮಾರ್ ಅವರ ಜನಪ್ರಿಯ ಸಿನಿಮಾ ಗೀತೆ ಹಂಚಿಕೊಂಡ ಮೋದಿ!

Rajkumar: ಪ್ರಧಾನಿ ನರೇಂದ್ರ ಮೋದಿ ಅವರು ಯುಗಾದಿಗೆ ಕನ್ನಡದಲ್ಲಿ ಯುಗಾದಿ ಹಬ್ಬದ ಶುಭಾಶಯ ಕೋರಿದ್ದರು. ಇದೀಗ ಡಾ. ರಾಜ್​​ಕುಮಾರ್ ಅವರ 'ಶ್ರೀ ಚಾಮುಂಡೇಶ್ವರಿ' ಹಾಡನ್ನು ಹಂಚಿಕೊಂಡಿರುವುದು ಕನ್ನಡಿಗರಿಗೆ ಮತ್ತು ಅಣ್ಣಾವ್ರ ಅಭಿಮಾನಿಗಳಿಗೆ ಖುಷಿ ತಂದಿದೆ. ಟ್ವಿಟರ್‌ನಲ್ಲಿ ಹಂಚಿಕೊಂಡು ಚೈತ್ರ ನವರಾತ್ರಿ ಸಂದೇಶ ಸಾರಿದ್ದಾರೆ. 'ಶ್ರೀಕೃಷ್ಣ ದೇವರಾಯ' ಚಿತ್ರದ 'ಶ್ರೀ ಚಾಮುಂಡೇಶ್ವರಿ' ಹಾಡಿನ ಯೂಟ್ಯೂಬ್ ಲಿಂಕ್ ಅನ್ನು ಪ್ರಧಾನಿ ಮೋದಿ ಪೋಸ್ಟ್ ಮಾಡಿದ್ದಾರೆ.

Amruthadhaare Serial: ದೊಡ್ಡ ಮಗಳ ಮದುವೆಗೆ ಸಿದ್ಧವಾದ್ರು ಗೌತಮ್ - ಭೂಮಿಕಾ!

Amruthadhaare: ದೊಡ್ಡ ಮಗಳ ಮದುವೆಗೆ ಸಿದ್ಧವಾದ್ರು ಗೌತಮ್ - ಭೂಮಿಕಾ!

Amruthadhaare Serial : ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ ಮಲ್ಲಿ ಮದುವೆ ಬಗ್ಗೆಯೇ ಕಥೆ ಸಾಗುತ್ತಿದೆ. ಒಂದು ಕಡೆ ಜೈದೇವ್‌ ಕುತಂತ್ರದ ನಡುವೆ ಮಲ್ಲಿ ಮದುವೆ ತಯಾರಿಯೂ ಜೋರಾಗಿದೆ. ದೊಡ್ಡ ಮಗಳ ಮದುವೆಗೆ ಗೌತಮ್ – ಭೂಮಿಕಾ ಸಿದ್ಧವಾಗುತ್ತಿದ್ದಾರೆ. ಮದುವೆ ಕಾರ್ಡ್‌ ಕೂಡ ಪ್ರಿಂಟ್‌ ಆಗಿದೆ.

Ravichandran Hamsalekha: ನಮ್ಮಲ್ಲಿ ಬಿರುಕು ಬಿಟ್ಟಾಗ ಹಲವರು ಸಂಭ್ರಮಿಸಿದ್ದೇ ಹೆಚ್ಚು! ರವಿಚಂದ್ರನ್ ಮುಕ್ತ ಮಾತು

ನಮ್ಮಲ್ಲಿ ಬಿರುಕು ಬಿಟ್ಟಾಗ ಹಲವರು ಸಂಭ್ರಮಿಸಿದ್ದೇ ಹೆಚ್ಚು! ರವಿಚಂದ್ರನ್

Ravichandran Hamsalekha: ಕ್ರೇಜಿ ಸ್ಟಾರ್ ರವಿಚಂದ್ರನ್ಹಾ ಗೂ ನಾದಬ್ರಹ್ಮ ಹಂಸಲೇಖ ಇಬ್ಬರೂ ಬೇರೆಯಾದಾಗ ಅವರ ಅಭಿಮಾನಿಗಳಿಗೆ ನಿರಾಸೆಯಾಗಿತ್ತು. ಆದರೆ, ಸುಮಾರು ಒಂದೂವರೆ ಎರಡು ದಶಕಗಳಿಂದ ಈ ಜೋಡಿ ಒಟ್ಟಿಗೆ ಸಿನಿಮಾ ಮಾಡಿಯೇ ಇಲ್ಲ. ಒಂದೇ ಒಂದು ಹಾಡು ಬಂದಿಲ್ಲ. ಆದರೆ ಈಗ ಅವರು ಒಂದಾಗಿದ್ದಾರೆ. ವೇದಿಕೆಯಲ್ಲಿ ಒಟ್ಟಿಗೆ ಕುಳಿತು ಆ ದಿನಗಳನ್ನು ಮೆಲುಕು ಹಾಕಿದ್ದಾರೆ. ತಮ್ಮಿಬ್ಬರ ಜರ್ನಿ ಬಗ್ಗೆ, ದೂರ ಆಗಿದ್ದರ ಬಗ್ಗೆ ಮಾತಾಡಿದ್ದಾರೆ.

Dhurandhar 2 collection:  ಸಿಗ್ತಿಲ್ಲ ಟಿಕೆಟ್, ʻಧುರಂಧರ್‌ʼ ಕ್ರೇಜ್ ಭಾರೀ ಜೋರು! ಗಳಿಕೆ ಎಷ್ಟು?

ಸಿಗ್ತಿಲ್ಲ ಟಿಕೆಟ್, ʻಧುರಂಧರ್‌ʼ ಕ್ರೇಜ್ ಭಾರೀ ಜೋರು! ಗಳಿಕೆ ಎಷ್ಟು?

Dhurandhar 2: ಧುರಂಧರ್: ದಿ ರಿವೆಂಜ್ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಎರಡನೇ ದಿನವೂ ಚಿತ್ರ ಇನ್ನೂ ಉತ್ತಮ ಪ್ರದರ್ಶನ ನೀಡಿತು. ರಣವೀರ್ ಸಿಂಗ್ ಅವರ ಸ್ಪೈ ಥ್ರಿಲ್ಲರ್ ಚಿತ್ರವು ಮೊದಲ ದಿನವೇ ಜಾಗತಿಕವಾಗಿ ₹ 200 ಕೋಟಿ ಗಡಿ ದಾಟಿತ್ತು. ಆರಂಭಿಕ ವರದಿಗಳ ಪ್ರಕಾರ, ಶುಕ್ರವಾರ ಚಿತ್ರ ಸುಮಾರು 80 ಕೋಟಿ ರೂ. ಗಳಿಸಿದೆ ಎಂದು ವರದಿಯಾಗಿದೆ. ಇದರೊಂದಿಗೆ, ಚಿತ್ರದ ಎರಡು ದಿನಗಳ ಒಟ್ಟು ಕಲೆಕ್ಷನ್ (ಪೂರ್ವವೀಕ್ಷಣೆಗಳು ಸೇರಿದಂತೆ) 200 ಕೋಟಿ ರೂ.ಗಳನ್ನು ದಾಟಿದೆ.

Maatrubhumi Movie: ಸಲ್ಮಾನ್ ಖಾನ್ `ಮಾತೃಭೂಮಿ' ಬಿಡುಗಡೆ ವಿಳಂಬ ಆಗ್ತಾ ಇರೋದು ಏಕೆ? ಇಲ್ಲಿದೆ ಕಾರಣ

ಸಲ್ಮಾನ್ ಖಾನ್ `ಮಾತೃಭೂಮಿ' ಬಿಡುಗಡೆ ವಿಳಂಬ ಆಗ್ತಾ ಇರೋದು ಏಕೆ?

Maatrubhumi Movie: ಗಲ್ವಾನ್ ಕದನ ಎಂದು ಕರೆಯಲ್ಪಡುತ್ತಿದ್ದ ಸಲ್ಮಾನ್ ಖಾನ್ ಅವರ 'ಮಾತೃಭೂಮಿ' ಚಿತ್ರದ ನಿರ್ಮಾಪಕರು ಅನಿರೀಕ್ಷಿತ ಹಿನ್ನಡೆಯನ್ನು ಎದುರಿಸುತ್ತಿದ್ದಾರೆ. ಈ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನಟ-ಗಾಯಕ ಪ್ರಶಾಂತ್ ತಮಾಂಗ್ ಅವರ ನಿಧನದ ನಂತರ ಚಿತ್ರದ ಬಿಡುಗಡೆ ವಿಳಂಬವಾಗಿದೆ ಎಂದು ವರದಿಯಾಗಿದೆ . ಈ ಚಿತ್ರವು ಏಪ್ರಿಲ್ ಆರಂಭದಲ್ಲಿ ಚಿತ್ರಮಂದಿರಗಳಿಗೆ ಆಗಮಿಸುವ ನಿರೀಕ್ಷೆಯಿತ್ತು. ಆದಾಗ್ಯೂ, ಬಾಕಿ ಇರುವ ಚಿತ್ರೀಕರಣದ ಅವಶ್ಯಕತೆಗಳು ಮತ್ತು ಅಗತ್ಯ ಸ್ಕ್ರಿಪ್ಟ್ ಹೊಂದಾಣಿಕೆಗಳಿಂದಾಗಿ ಸಿನಿಮಾ ರಿಲೀಸ್‌ ಮುಂದೂಡಲಾಗಿದೆ ಎಂದು ವರದಿಯಾಗಿದೆ.

Dhurandhar 2: ಬೇರೆ ಹೀರೋಗಳೆಲ್ಲ ಜೋಕರ್​ಗಳು! ರಣವೀರ್ ಸಿಂಗ್‌ ಹೊಗಳಿ ಆರ್​ಜಿವಿ ಹೇಳಿದ್ದೇನು?

ಬೇರೆ ಹೀರೋಗಳೆಲ್ಲ ಜೋಕರ್​ಗಳು! ರಣವೀರ್ ಹೊಗಳಿ RGV ಹೇಳಿದ್ದೇನು?

Dhurandhar 2: ಧುರಂಧರ್ 2 ಚಿತ್ರ ಬಿಡುಗಡೆಯಾದ ಒಂದು ದಿನದ ನಂತರ , ಚಲನಚಿತ್ರ ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ಸಾಮಾಜಿಕ ಮಾಧ್ಯಮದಲ್ಲಿ ದೀರ್ಘ ಟಿಪ್ಪಣಿಯನ್ನು ಹಂಚಿಕೊಂಡರು. ಸಿನಿಮಾವನ್ನು ಶ್ಲಾಘಿಸಿದರು. ಇದು ಭಾರತೀಯ ಚಿತ್ರರಂಗಕ್ಕೆ ಒಂದು ಮಹತ್ವದ ತಿರುವು ಎಂದು ಕರೆದರು. ಈ ಸಿನಿಮಾ ಮೂಲಕ ರಣವೀರ್ ಸಿಂಗ್ ಅವರು ಎಂದಿಗೂ ಕಷ್ಟಪಡದ ಹೀರೋಗಳನ್ನು ಕೊಂದು ಹಾಕಿದ್ದಾರೆ. ಅಂತಹ ಹಳೇ ಮಾದರಿಯ ಹೀರೋಗಳ ಹೆಣದ ಮೇಲೆ, ಅವರು ಒಬ್ಬ ನೈಜ ಹೀರೋಗೆ ಜನ್ಮ ನೀಡಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ʻನಂಗ್ಯಾಕೆ ಮದುವೆಗೆ ಕರೀಲಿಲ್ಲʼ ಅಂತ ಕೋಪಗೊಂಡಿದ್ದ ಪುಟಾಣಿ ಅಭಿಮಾನಿಯನ್ನು ಮನೆಗೆ ಆಹ್ವಾನಿಸಿ ಸತ್ಕರಿಸಿದ ರಶ್ಮಿಕಾ - ವಿಜಯ್‌ ದೇವರಕೊಂಡ

ಮುನಿಸಿಕೊಂಡಿದ್ದ ಪುಟಾಣಿ ಅಭಿಮಾನಿಗೆ ವಿಜಯ್-ರಶ್ಮಿಕಾ ನಿವಾಸದಲ್ಲಿ ಔತಣ

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮದುವೆಗೆ ತಮ್ಮನ್ನು ಕರೆಯಲಿಲ್ಲ ಎಂದು ಮುನಿಸಿಕೊಂಡಿದ್ದ ಪುಟಾಣಿ ಅಭಿಮಾನಿ 'ಲಕ್ಕಿ ತಲ್ಲಿ'ಯನ್ನು ಈ ಜೋಡಿ ಮನೆಗೆ ಆಹ್ವಾನಿಸಿದೆ. ತಮ್ಮ ನಿವಾಸಕ್ಕೆ ಲಕ್ಕಿ ತಲ್ಲಿ ಕುಟುಂಬವನ್ನು ಬರಮಾಡಿಕೊಂಡ ದಂಪತಿ, ಅವರಿಗೆ ಪ್ರೀತಿಯಿಂದ ಊಟ ಬಡಿಸಿ ಸತ್ಕರಿಸಿದ್ದಾರೆ. ಈ ಭೇಟಿಯ ಭಾವುಕ ಕ್ಷಣಗಳನ್ನು ಲಕ್ಕಿ ತಲ್ಲಿ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾಳೆ.

Dhurandhar 2: 'ಧುರಂಧರ್'ನ ಬಡೇ ಸಾಬ್ ಯಾರು ? ಸಲ್ಮಾನ್ ಖಾನ್, ಇಮ್ರಾನ್ ಹಶ್ಮಿ ಅಲ್ವೇ ಅಲ್ಲ

Dhurandhar 2: 'ಧುರಂಧರ್'ನ ಬಡೇ ಸಾಬ್ ಯಾರು ?

Dhurandhar 2: ಕಥೆ, ಸಾಹಸ ಸನ್ನಿವೇಶಗಳು ಮತ್ತು ಹಾಡುಗಳ ಜೊತೆಗೆ, ಸ್ಪೈ ಥ್ರಿಲ್ಲರ್ ಧುರಂಧರ್ ತನ್ನ ತಾರಾಬಳಗಕ್ಕಾಗಿ ಪ್ರಶಂಸೆಯನ್ನು ಪಡೆಯಿತು. ಹಮ್ಜಾ ಪಾತ್ರದಲ್ಲಿ ರಣವೀರ್ ಸಿಂಗ್ ಆಗಿರಲಿ ಅಥವಾ ಮೇಜರ್ ಇಕ್ಬಾಲ್ ಪಾತ್ರದಲ್ಲಿ ಅರ್ಜುನ್ ರಾಂಪಾಲ್ ಆಗಿರಲಿ ಆದಿತ್ಯ ಧರ್ ಅವರ ಚಿತ್ರಕ್ಕೆ ಇಡೀ ತಾರಾಬಳಗವೇ ಸಿನಿಮಾಗೆ ಜೀವ ತುಂಬಿದೆ. ಕೆಲವರು ಸಲ್ಮಾನ್ ಖಾನ್ ಹೆಸರನ್ನು ತೇಲಿ ಬಿಟ್ಟರೆ, ಇನ್ನೂ ಕೆಲವರು ''ಧುರಂಧರ್ 2'' ನಲ್ಲಿ ಬಡೇ ಸಾಬ್ ಪಾತ್ರವನ್ನು ಇಮ್ರಾನ್ ಹಶ್ಮಿ ನಿರ್ವಹಿಸಿದ್ದಾರೆ ಎಂದು ಕಮೆಂಟ್‌ ಮಾಡಿದ್ದರು. ಹಾಗಾದ್ರೆ ಈ ಪಾತ್ರ ನಿರ್ವಹಿಸಿರೋದು ಯಾರು?

Dhurandhar 2:'ಧುರಂಧರ್ 2' ಸಿನಿಮಾ ಅಲ್ಲ, ಟೈಮ್ ವೇಸ್ಟ್ ಮೂವಿ;  ರೊಚ್ಚಿಗೆದ್ದ ಸ್ಯಾಂಡಲ್‌ವುಡ್‌ ಕ್ವೀನ್‌ Video

'ಧುರಂಧರ್ 2' ಕಾಮಿಡಿ ಮೂವಿ, ನಿಮ್ಮ ಸಮಯ ವ್ಯರ್ಥ ಮಾಡಬೇಡಿ; ನಟಿ ರಮ್ಯಾ

Dhurandhar 2: `ಧುರಂದರ್ 2’ ಚಿತ್ರದ ಬಗ್ಗೆ ನಟಿ ರಮ್ಯಾ ನೆಗೆಟಿವ್ ಅಭಿಪ್ರಾಯ ನೀಡಿದ್ದಾರೆ. ‘’ಧುರಂದರ್‌ 2 ಚಿತ್ರದಲ್ಲಿ ಹಿಂಸಾಚಾರ ಹೆಚ್ಚಿದೆ. ಸುತ್ತಮುತ್ತ ಇರುವ ವಸ್ತುಗಳನ್ನೇ ಆಯುಧವಾಗಿಸಿದ್ದಾರೆ. ಇದು ಥಿಯೇಟರ್‌ನಲ್ಲಿ ನೋಡುವ ಚಿತ್ರವಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ ರಮ್ಯಾ.

ʻಲೆಜೆಂಡರಿʼ ಮಣಿರತ್ನಂ ಜೊತೆ ಕೈಜೋಡಿಸಿದ ನಟ ವಿಜಯ್‌ ಸೇತುಪತಿ; ಈ ಚಿತ್ರಕ್ಕೆ ಸಾಯಿ ಪಲ್ಲವಿ ನಾಯಕಿ

ಮಣಿರತ್ನಂ ಚಿತ್ರಕ್ಕಾಗಿ ಒಂದಾದ ವಿಜಯ್ ಸೇತುಪತಿ - ಸಾಯಿ ಪಲ್ಲವಿ

ದಿಗ್ಗಜ ನಿರ್ದೇಶಕ ಮಣಿರತ್ನಂ ತಮ್ಮ ಮುಂದಿನ ಚಿತ್ರಕ್ಕೆ ವಿಜಯ್ ಸೇತುಪತಿ ಮತ್ತು ಸಾಯಿ ಪಲ್ಲವಿ ಅವರನ್ನು ನಾಯಕ-ನಾಯಕಿಯಾಗಿ ಆಯ್ಕೆ ಮಾಡಿದ್ದಾರೆ. ಈ ಹಿಂದೆ 'ಚೆಕ್ಕ ಚಿವಂತ ವಾನಂ' ಚಿತ್ರದಲ್ಲಿ ವಿಜಯ್ ಜೊತೆ ಕೆಲಸ ಮಾಡಿದ್ದ ಮಣಿರತ್ನಂ, ಈಗ ಪೂರ್ಣ ಪ್ರಮಾಣದ ರೊಮ್ಯಾಂಟಿಕ್ ಡ್ರಾಮಾವನ್ನು ಸಿದ್ಧಪಡಿಸುತ್ತಿದ್ದಾರೆ. ಲೈಕಾ ಪ್ರೊಡಕ್ಷನ್ಸ್ ಮತ್ತು ಮದ್ರಾಸ್ ಟಾಕೀಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ.

Photos: ಯುಗಾದಿ ಹಬ್ಬದಂದು ರಶ್ಮಿಕಾ ಮಂದಣ್ಣಗೆ ಡಬಲ್‌ ಸಂಭ್ರಮ; ಅತ್ತೆಯೊಂದಿಗೆ ಖುಷಿಯನ್ನು ಹಂಚಿಕೊಂಡಿದ್ದು ಹೀಗೆ!

ಯುಗಾದಿ ಹಬ್ಬಕ್ಕೆ ರಶ್ಮಿಕಾ ಮಂದಣ್ಣಗೆ ಡಬಲ್ ಧಮಾಕ; ಅತ್ತೆಯೊಂದಿಗೆ ಸಂಭ್ರಮ

ನಟಿ ರಶ್ಮಿಕಾ ಮಂದಣ್ಣ ಅವರಿಗೆ ಯುಗಾದಿ ಹಬ್ಬದ ದಿನವೇ ಎರಡು ಡಬಲ್‌ ಸಂಭ್ರಮಗಳು ಸಿಕ್ಕಿವೆ. ಅದೇನಪ್ಪ ಅಂದರೆ, ಅವರು ಕಳೆದ ವರ್ಷ ನಟಿಸಿದ್ದ ʻದಿ ಗರ್ಲ್‌ಫ್ರೆಂಡ್‌ʼ ಸಿನಿಮಾಕ್ಕೆ ಎರಡು ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿವೆ. ಆ ಪ್ರಶಸ್ತಿಗಳು ಸಿಕ್ಕ ಖುಷಿಯಲ್ಲಿ ಅವರು ತಮ್ಮ ಅತ್ತೆ ಮಾಧವಿ ಜೊತೆಗೆ ಸಂಭ್ರಮಿಸಿದ್ದಾರೆ. ಈ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ರಶ್ಮಿಕಾ, "ನಾನು ಚಿಕ್ಕವಳಿದ್ದಾಗ ಯಾರಾದರೂ ರಾಜ್ಯ ಮಟ್ಟದ ಪ್ರಶಸ್ತಿ ಗೆದ್ದರೆ, ಅವರನ್ನು ಒಬ್ಬ ಸೂಪರ್‌ ಸ್ಟಾರ್‌ ತರಹ ನೋಡುತ್ತಿದ್ದೆ. ಅವರು ಇದನ್ನು ಹೇಗೆ ಸಾಧಿಸಿದರು? ಅವರ ದಿನಚರಿ ಹೇಗಿರುತ್ತದೆ? ಅಂತೆಲ್ಲಾ ಆಶ್ಚರ್ಯಪಡುತ್ತಿದ್ದೆ. ನಿನ್ನೆ ಸಂಜೆ ಅಂತಹದ್ದೇ ಒಂದು ರಾಜ್ಯ ಪ್ರಶಸ್ತಿಯನ್ನು ಪಡೆದುಕೊಂಡಿದ್ದು ನನಗೆ ತುಂಬಾ ವಿಶೇಷ ಅನಿಸುತ್ತಿದೆ" ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ.

ಹೆಸರು ಬದಲಾಯಿಸಿಕೊಂಡ ಉದಯ ಟಿವಿಯಲ್ಲಿ ಬರ್ತಿದೆ ಹೊಸ ಧಾರಾವಾಹಿ ʻಮೂಗುತಿ ಮಲ್ಲಿʼ; ನಾಯಕ-ನಾಯಕಿ ಯಾರು?

ಹೆಸರು ಬದಲಾಯಿಸಿಕೊಂಡ ಉದಯ ಟಿವಿ; ಯುಗಾದಿ ಕೊಡುಗೆಯಾಗಿ ಮೂಗುತಿ ಮಲ್ಲಿ

ಮೂರು ದಶಕಗಳ ಇತಿಹಾಸವಿರುವ ಉದಯ ಟಿವಿ ಈಗ 'ಸನ್ ಉದಯ' ಎಂಬ ಹೊಸ ಹೆಸರಿನೊಂದಿಗೆ ಮರುನಾಮಕರಣಗೊಂಡಿದೆ. ಈ ಹೊಸ ಪಯಣದ ಮೊದಲ ಹೆಜ್ಜೆಯಾಗಿ 'ಮೂಗುತಿ ಮಲ್ಲಿ' ಎಂಬ ವಿಭಿನ್ನ ಪ್ರೇಮಕಥೆಯ ಧಾರಾವಾಹಿ ಮಾರ್ಚ್ 23ರ ಸೋಮವಾರದಿಂದ ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ.

ʻಕೆಡಿʼ ಚಿತ್ರದ ಹಾಡಿನಲ್ಲಿ ಬಿಂದಾಸ್‌ ಆಗಿ ಸ್ಪೆಪ್‌ ಹಾಕಿದ್ದ ನಟಿ ನೋರಾ ಫತೇಹಿ ವಿರುದ್ಧ ಫತ್ವಾ ಜಾರಿ

'ಕೆಡಿ' ಹಾಡಿನ ವಿವಾದ: ನಟಿ ನೋರಾ ಫತೇಹಿ ವಿರುದ್ಧ 'ಫತ್ವಾ' ಜಾರಿ!

'ಕೆಡಿ' ಚಿತ್ರದ "ಸರ್ಸೆ ಸರ್ಸೆ ನಿನ್ನ ಸೆರಗ ಸರ್ಸೆ" ಹಾಡಿನಲ್ಲಿನ ಅಸಭ್ಯ ನೃತ್ಯ ಮತ್ತು ಸಾಹಿತ್ಯವನ್ನು ಖಂಡಿಸಿ ಉತ್ತರ ಪ್ರದೇಶದ ಅಲಿಗಢ ಮೂಲದ ಧಾರ್ಮಿಕ ಸಂಸ್ಥೆಯು ನಟಿ ನೋರಾ ಫತೇಹಿ ವಿರುದ್ಧ 'ಫತ್ವಾ' ಹೊರಡಿಸಿದೆ. ಇತ್ತ ಸಂಸತ್ತಿನಲ್ಲಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಈ ಹಾಡಿನ ಅಧಿಕೃತ ನಿಷೇಧವನ್ನು ಘೋಷಿಸಿದ್ದರೆ, ರಾಷ್ಟ್ರೀಯ ಮಹಿಳಾ ಆಯೋಗವು ಚಿತ್ರತಂಡಕ್ಕೆ ಸಮನ್ಸ್ ಜಾರಿ ಮಾಡಿದೆ.

ಸೊಸೆ ರಶ್ಮಿಕಾ ಮಂದಣ್ಣ ಮಾತಿಗೆ ಆನಂದಭಾಷ್ಪ ಸುರಿಸಿದ ಅತ್ತೆ ಮಾಧವಿ; ದೇವರಕೊಂಡ ಫ್ಯಾಮಿಲಿಗೆ ಇದು ಸಂತಸದ ಕ್ಷಣ

ʻಮಗಳಾಗಿದ್ದೆ, ಈಗ ಅಧಿಕೃತ ಸೊಸೆʼ; ಅತ್ತೆ ಮಾಧವಿ ಎದುರು ಭಾವುಕರಾದ ರಶ್ಮಿಕಾ

ತೆಲಂಗಾಣ ಸರ್ಕಾರದ 2025ರ ಸಾಲಿನ 'ಗದ್ದರ್' ಅತ್ಯುತ್ತಮ ನಟಿ ಪ್ರಶಸ್ತಿಯನ್ನು ರಶ್ಮಿಕಾ ಮಂದಣ್ಣ ಮುಡಿಗೇರಿಸಿಕೊಂಡಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತಮ್ಮ ಅತ್ತೆ ಮಾಧವಿ ದೇವರಕೊಂಡ ಅವರನ್ನು ಉದ್ದೇಶಿಸಿ ರಶ್ಮಿಕಾ ಆಡಿದ ಭಾವುಕ ಮಾತುಗಳು ಎಲ್ಲರ ಗಮನಸೆಳೆದಿವೆ. ಈ ಸುಂದರ ಕ್ಷಣದ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Ranveer Singh: ʻಧುರಂಧರ್ 2 ಭಾರಿ ನಿರಾಶೆ ಮೂಡಿಸಿದೆ..ʼ ಎಂದ ನಟಿ ರಮ್ಯಾ; ಅದಕ್ಕೆ ನೀಡಿದ ಕಾರಣಗಳು ಇಲ್ಲಿವೆ!

ಧುರಂಧರ್‌ 2 ಚಿತ್ರ ನೋಡಿ ʻಹಣ, ಸಮಯ ಹಾಳು ಮಾಡ್ಕೋಬೇಡಿʼ ಎಂದಿದ್ದೇಕೆ ರಮ್ಯಾ?

ರಣವೀರ್ ಸಿಂಗ್ ಅಭಿನಯದ 'ಧುರಂಧರ್ 2' ಚಿತ್ರವನ್ನು ವೀಕ್ಷಿಸಿದ ರಮ್ಯಾ, ಇದೊಂದು "ಸಹನಾ ಶಕ್ತಿಯ ಪರೀಕ್ಷೆ" ಎಂದು ಕರೆದಿದ್ದಾರೆ. ಚಿತ್ರದಲ್ಲಿನ ಮಿತಿಮೀರಿದ ಹಿಂಸಾಚಾರ ಮತ್ತು ಸಾಧಾರಣ ಮೇಕಿಂಗ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಅವರು, ಚಿತ್ರಮಂದಿರಕ್ಕೆ ಹೋಗಿ ಹಣ ವ್ಯಯಿಸುವ ಬದಲು ಒಟಿಟಿಯಲ್ಲಿ ನೋಡಲು ಇದು ಸೂಕ್ತ ಎಂದು ವ್ಯಂಗ್ಯವಾಡಿದ್ದಾರೆ.

Rishab Shetty: ಹೊಂಬಾಳೆ ಅನ್​​ಫಾಲೋ ಮಾಡಿದ್ರಾ ರಿಷಬ್? ತಮ್ಮ ಬ್ಯಾನರ್‌ನಲ್ಲೇ ಈ ಹೊಸ ಸಿನಿಮಾ!

ಹೊಂಬಾಳೆ ಅನ್​​ಫಾಲೋ ಮಾಡಿದ್ರಾ ರಿಷಬ್?

Hombale Films: ನಟ, ನಿರ್ದೇಶಕ ರಿಷಬ್‌ ಶೆಟ್ಟಿ ತಮ್ಮದೇ ಬ್ಯಾನರ್ ಅಲ್ಲಿ ‘ಚಾಪ್ಟರ್ 2’ ಎಂದು ಘೋಷಣೆ ಮಾಡಿದ್ದಾರೆ. ಯುಗಾದಿ ಹಬ್ಬವನ್ನು ಪತ್ನಿಯೊಂದಿಗೆ ಆಚರಿಸಿದ ಪೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ ಆದ ಬೆನ್ನಲ್ಲೇ ಈ ಪೋಸ್ಟ್‌ ಬಂದಿದೆ. ರಿಷಬ್ ಶೆಟ್ಟಿ ಯುಗಾದಿ ಹಬ್ಬದ ಶುಭಾಶಯವನ್ನು ಕೋರುತ್ತಾ "ಅಧ್ಯಾಯ ಎರಡು ಇಲ್ಲಿಂದ ಶುರು" ಎಂದು ಬರೆದು ಪೋಸ್ಟ್ ಮಾಡಿದ್ದರು. ರಿಷಬ್ ಶೆಟ್ಟಿ ಅವರು ಹೊಂಬಾಳೆ ಫಿಲ್ಮ್ಸ್ ಅನ್ನು ಇನ್‌ಸ್ಟಾದಲ್ಲಿ ಅನ್‌ಫಾಲೋ ಮಾಡಿ, ತಮ್ಮದೇ ಬ್ಯಾನರ್ ಅಡಿಯಲ್ಲಿ "ಚಾಪ್ಟರ್ 2" ಘೋಷಿಸಿದ್ದಾರೆ. ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ಆಗುತ್ತಿವೆ.

Dhurandhar 2 Review: ಧುರಂಧರ್‌ ಯಾರು? ಸಿನಿಮಾ ಹೇಗಿದೆ? ಇಲ್ಲಿದೆ ಸಿನಿಮಾ ವಿಮರ್ಶೆ Video

ಇದೊಂದು ಸೇಡಿನ ಕಥೆ! ಇಲ್ಲಿದೆ ಧುರಂಧರ್‌ 2 ಸಿನಿಮಾ ವಿಮರ್ಶೆ

Ranveer: ಗಲ್ಲು ಶಿಕ್ಷೆ ಪಡೆದು ಮರಣಹೊಂದಬೇಕಾಗಿದ್ದ ಪಂಜಾಬ್‌ನ ಸಣ್ಣ ಹಳ್ಳಿಯ ಹುಡುಗನೊಬ್ಬ ಪಾಕಿಸ್ತಾನದ ಒಳಗೆ ಹೋಗಿ ಅಲ್ಲಿನ ಆತಂಕವಾದಿ ಗುಂಪುಗಳನ್ನು ಸರ್ವನಾಶ ಮಾಡುವ ಕೆಲಸದಲ್ಲಿ ತೊಡಗುವ ರೋಚಕ ಕಥೆ ಧುರಂಧರ್. ʻಧುರಂಧರ್‌ 2ʼ ಸಿನಿಮಾ ಮೂಲಕ ನಿರ್ದೇಶಕ ಆದಿತ್ಯ ಧರ್ ಮತ್ತೊಂದು ಮಾಸ್ಟರ್‌ಪೀಸ್ ಚಿತ್ರವನ್ನು ನೀಡಿದ್ದಾರೆ.

Amruthadhaare Serial: ಲಕ್ಷ್ಮೀಕಾಂತನಿಗೆ ಸಿಕ್ಕಿದ್ಯಾ ಕೇಡಿ ಕುತಂತ್ರದ ಸುಳಿವು?

Amruthadhaare: ಲಕ್ಷ್ಮೀಕಾಂತನಿಗೆ ಸಿಕ್ಕಿದ್ಯಾ ಕೇಡಿ ಕುತಂತ್ರದ ಸುಳಿವು?

Amruthadhaare Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ ರೋಚಕ ತಿರುವು ಪಡೆದು ಕಥೆ ಸಾಗುತ್ತಿದೆ. ಜೈದೇವ್‌ಗೆ ಮಲ್ಲಿ ವಿಚಾರದಲ್ಲಿ ಮುಖಭಂಗವಾಗಿದೆ. ಪರೀಕ್ಷೆಗೆ ಮಲ್ಲಿ ಕುಳಿತುಕೊಳ್ಳವಾರದು ಅಂತ ಎಷ್ಟೇ ಪ್ಲ್ಯಾನ್‌ ಮಾಡಿದ್ರೂ ಪ್ಲ್ಯಾನ್‌ ಪ್ಲಾಪ್‌ ಆಗಿದೆ. ಇದರ ಜೊತೆಗೆ ಹಿಂದೆ ಇರುವ ವ್ಯಕ್ತಿ ಬೇರೆ ಯಾರು ಅಲ್ಲ ಬದಲಿಗೆ ಜೈದೇವ್ ಎನ್ನುವ ವಿಚಾರ ಗೌತಮ್ ಗೆ ಗೊತ್ತಾಗಿದೆ. ಸದ್ಯ ಜೈದೇವ್ ಎಂದಿನಂತೆ ಎಣ್ಣೆ ಕುಡಿಯುತ್ತಾ ಕುಂತಿದ್ದು, ಜೈದೇವ್‌ನ ಲಕ್ಷ್ಮೀಕಾಂತ್ ಪ್ರಶ್ನೆ ಮಾಡಿದ್ದಾನೆ. ಲಕ್ಷ್ಮೀಕಾಂತ್‌ಗೂ ಜೈದೇವ್‌ ಮೇಲೆ ಅನುಮಾನ ಶುರು ಆಗಿದೆ.

Dhurandhar 2: ಮೊದಲ ದಿನವೇ ಅದ್ಭುತ ಯಶಸ್ಸು ಕಂಡ ‘ಧುರಂಧರ್ 2’ ಸಿನಿಮಾ; ಫಸ್ಟ್‌ ಡೇ ಕಲೆಕ್ಷನ್‌ ಎಷ್ಟು?

ಮೊದಲ ದಿನವೇ ಅದ್ಭುತ ಯಶಸ್ಸು ಕಂಡ ‘ಧುರಂಧರ್ 2’ ಸಿನಿಮಾ

Ranveer Singh: 'ಧುರಂಧರ್‌: ದಿ ರಿವೆಂಜ್' ಘೋಷಣೆಯಾದ ದಿನವೇ ನಿರೀಕ್ಷೆಗಳು ಹೆಚ್ಚಾಗಿದ್ದವು. ರಣವೀರ್ ಸಿಂಗ್ ನಾಯಕನಾಗಿ ನಟಿಸಿದ ಆದಿತ್ಯ ಧರ್ ನಿರ್ದೇಶನದ ಈ ಚಿತ್ರವು ಆ ನಿರೀಕ್ಷೆಗಳನ್ನು ಪೂರೈಸುವುದಲ್ಲದೆ, ಇನ್ನೂ ಹೆಚ್ಚಿನದನ್ನು, ನೀಡಿತು. ಬಾಕ್ಸ್ ಆಫೀಸ್ ಅಂಕಿಅಂಶಗಳು ಅದಕ್ಕೆ ಪುರಾವೆಯಾಗಿ ನಿಂತಿವೆ. ಭಾರತದಾದ್ಯಂತ ಬಹು ಭಾಷೆಗಳಲ್ಲಿ ಬಿಡುಗಡೆಯಾದ ' ಧುರಂಧರ್‌: ದಿ ರಿವೆಂಜ್' ಮಾರ್ಚ್ 19, 2026 ರಂದು ಶುಕ್ರವಾರ 100 ಕೋಟಿ ರೂ.ಗಳಿಗೂ ಹೆಚ್ಚು ಗಳಿಸಿದೆ ಎಂದು ವರದಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಅದರ ಒಟ್ಟು ಗಳಿಕೆ 150 ಕೋಟಿ ರೂ.ಗಳಿಗೆ ಹತ್ತಿರವಾಗಿದೆ ಎಂದು ವರದಿಯಾಗಿದೆ.

Rashmika Mandanna: ಆಗ ಮಗಳಾಗಿ,ಈಗ ಸೊಸೆಯಾಗಿ ಪ್ರೀತಿ ನೀಡುತ್ತಿದ್ದಾರೆ! ರಶ್ಮಿಕಾ ಭಾವುಕ

ಆಗ ಮಗಳಾಗಿ,ಈಗ ಸೊಸೆಯಾಗಿ ಪ್ರೀತಿ ನೀಡುತ್ತಿದ್ದಾರೆ! ರಶ್ಮಿಕಾ ಭಾವುಕ

Rashmika: ತೆಲಂಗಾಣ ಗದ್ದರ್ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭವು ಮಾರ್ಚ್ 19 ರಂದು ಹೈದರಾಬಾದ್ ಹೈಟೆಕ್ಸ್‌ನಲ್ಲಿ ಯುಗಾದಿಯ ಸಂದರ್ಭದಲ್ಲಿ ಅದ್ಧೂರಿಯಾಗಿ ನಡೆಯಿತು. 2025 ರ ವರ್ಷದ ಗದ್ದರ್ ಪ್ರಶಸ್ತಿಗಳನ್ನು ಇತ್ತೀಚೆಗೆ ಘೋಷಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸೆಲೆಬ್ರಿಟಿಗಳು, ಚಲನಚಿತ್ರ ಮತ್ತು ರಾಜಕೀಯ ವ್ಯಕ್ತಿಗಳು ಭಾಗವಹಿಸಿದ್ದರು. ರಶ್ಮಿಕಾ ಮಂದಣ್ಣ ಅವರು ನಟನೆಗೆ ಮೊಟ್ಟ ಮೊದಲ ಬಾರಿಗೆ ರಾಜ್ಯ ಪ್ರಶಸ್ತಿಯನ್ನು ಪಡೆದಿದ್ದಾರೆ. ರಶ್ಮಿಕಾ ಅವರಿಗೆ ತೆಲಂಗಾಣ ಸರ್ಕಾರ ನೀಡುವ ಗದರ್ ಪ್ರಶಸ್ತಿ ಲಭಿಸಿದ್ದು, ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಪ್ರಶಸ್ತಿ ಸ್ವೀಕರಿಸಿ ಭಾವುಕರಾಗಿ ಮಾತನಾಡಿದ್ದಾರೆ.

Ranveer Singh: 'ಧುರಂಧರ್ ಪಾರ್ಟ್‌ 3ʼ ಬರೋದು ನಿಜವೇ? ವೈರಲ್‌ ಆಗುತ್ತಿರುವ ಫೋಟೋ ಹಿಂದಿನ ಅಸಲಿಯತ್ತೇನು?

'ಧುರಂಧರ್ ಪಾರ್ಟ್‌ 3' ಬರಲಿದೆಯಾ? ಹರಿದಾಡ್ತಿರುವ ಸುದ್ದಿ ಅನ್ನೋದು ನಿಜವೇ?

'ಧುರಂಧರ್ ಪಾರ್ಟ್‌ 3ʼ ಸಿನಿಮಾದ ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. 'ಧುರಂಧರ್ 2' ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿರುವ ಬೆನ್ನಲ್ಲೇ, ಜೂನ್ 14ರಂದು 'ಧುರಂಧರ್: ದಿ ಫೈನಲ್ ಚಾಪ್ಟರ್' ಬಿಡುಗಡೆಯಾಗಲಿದೆ ಎಂಬ ಪೋಸ್ಟ್ ವೈರಲ್ ಆಗುತ್ತಿದೆ. ಈ ಸಿನಿಮಾ ಬರೋದು ನಿಜವೇ?

ʻಕೆಡಿʼ ಸಿನಿಮಾ ಹಾಡಿನ ವಿವಾದ; ʻಜೋಗಿʼ ಪ್ರೇಮ್​​- ನೋರಾ ಫತೇಹಿಗೆ ನೊಟೀಸ್ ನೀಡಿದ ರಾಷ್ಟ್ರೀಯ ಮಹಿಳಾ ಆಯೋಗ

'ಕೆಡಿ' ಚಿತ್ರತಂಡಕ್ಕೆ ರಾಷ್ಟ್ರೀಯ ಮಹಿಳಾ ಆಯೋಗದ ಶಾಕ್; ಪ್ರೇಮ್‌ಗೆ ನೋಟಿಸ್!

'ಕೆಡಿ' ಚಿತ್ರದ "ಸರ್ಕೆ ಚುನರ್ ತೇರಿ ಸರ್ಕೆ" ಹಿಂದಿ ವರ್ಷನ್‌ ಹಾಡಿನಲ್ಲಿ ಅಶ್ಲೀಲತೆ ಮತ್ತು ಪೋಕ್ಸೋ ಕಾಯ್ದೆಯ ಉಲ್ಲಂಘನೆಯಾಗಿದೆ ಎಂಬ ದೂರಿನಡಿ ರಾಷ್ಟ್ರೀಯ ಮಹಿಳಾ ಆಯೋಗವು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ. ನಿರ್ದೇಶಕ ಪ್ರೇಮ್, ನಟಿ ನೋರಾ ಫತೇಹಿ, ಸಂಜಯ್ ದತ್ ಹಾಗೂ ಇನ್ನಿತರರಿಗೆ ಮಾ. 24ರಂದು ವಿಚಾರಣೆಗೆ ಹಾಜರಾಗಲು ಸಮನ್ಸ್ ನೀಡಲಾಗಿದೆ.

ಕನ್ನಡ ಸಿನಿಪ್ರಿಯರಿಗೆ ʻಧುರಂದರ್‌ 2ʼ ನಿರ್ದೇಶಕ ಆದಿತ್ಯ ಧರ್‌ ಕ್ಷಮೆ ಕೇಳಿದ್ದೇಕೆ? ಕೊನೇ ಕ್ಷಣದಲ್ಲಿ ಹಿಂಗ್ಯಾಕಾಯ್ತು?

ಕನ್ನಡಿಗರಿಗೆ ಕ್ಷಮೆ ಕೇಳಿದ 'ಧುರಂಧರ್ 2' ನಿರ್ದೇಶಕ ಆದಿತ್ಯ ಧರ್

ಧುರಂಧರ್‌ 2 ಸಿನಿಮಾದ ಕನ್ನಡ ವರ್ಷನ್‌ ತಾಂತ್ರಿಕ ಕಾರಣಗಳಿಂದಾಗಿ ವಿಳಂಬವಾಗಿದ್ದು, ನಿರ್ದೇಶಕ ಆದಿತ್ಯ ಧರ್ ಕನ್ನಡಿಗರಲ್ಲಿ ಕ್ಷಮೆಯಾಚಿಸಿದ್ದಾರೆ. ಮಾರ್ಚ್ 19ರಂದು ಬಿಡುಗಡೆಯಾಗಬೇಕಿದ್ದ ಕನ್ನಡ ಮತ್ತು ಮಲಯಾಳಂ ಆವೃತ್ತಿಯ ಪ್ರದರ್ಶನಗಳು ಅನಿರೀಕ್ಷಿತ ಅಡಚಣೆಯಿಂದಾಗಿ ಮಾರ್ಚ್ 20ಕ್ಕೆ ಮುಂದೂಡಲ್ಪಟ್ಟಿವೆ.

ಬರೀ ಪೇಯ್ಡ್‌ ಪ್ರೀಮಿಯರ್‌ ಶೋಗಳಿಂದಲೇ 50+ ಕೋಟಿ ರೂ. ಬಾಚಿದ ʻಧುರಂಧರ್‌ 2ʼ ಸಿನಿಮಾ; ಎಲ್ಲರಿಗೂ ಈಗ ಮೊದಲ ದಿನದ ಗಳಿಕೆ ಮೇಲೆ ಕಣ್ಣು

ಪ್ರೀಮಿಯರ್‌ ಶೋನಲ್ಲೇ 'ಧುರಂಧರ್ 2' ಸುನಾಮಿ; ಬಾಕ್ಸ್‌ ಆಫೀಸ್‌ ಉಡೀಸ್‌

ಧುರಂಧರ್‌ 2 ಸಿನಿಮಾವು ಬಾಕ್ಸ್‌ ಆಫೀಸ್‌ನಲ್ಲಿ ಇತಿಹಾಸ ಸೃಷ್ಟಿಸಿದೆ. ಮಾರ್ಚ್ 19ರಂದು ಅಧಿಕೃತವಾಗಿ ರಿಲೀಸ್‌ ಆಗೋದಕ್ಕೂ ಮುನ್ನ ನಡೆದ ಪೇಯ್ಡ್ ಪ್ರೀಮಿಯರ್ ಪ್ರದರ್ಶನಗಳಿಂದಲೇ ಈ ಚಿತ್ರಔು 52 ಕೋಟಿ ರೂ. ಬಾಚಿಕೊಂಡಿದೆ. ಕೆಲವು ತಾಂತ್ರಿಕ ಕಾರಣಗಳಿಂದ ದಕ್ಷಿಣ ಭಾರತದ ಭಾಷೆಗಳ ಶೋಗಳು ರದ್ದಾಗಿದ್ದರೂ, ಉತ್ತಮ ಗಳಿಕೆ ಮಾಡುವಲ್ಲಿ ಈ ಸಿನಿಮಾ ಹಿಂದೆ ಬಿದ್ದಿಲ್ಲ!

Loading...