ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮನರಂಜನೆ

Pushpa 3: ಅಲ್ಲು ಅರ್ಜುನ್‌ ಫ್ಯಾನ್ಸ್‌ಗೆ ಭರ್ಜರಿ ಗುಡ್‌ನ್ಯೂಸ್‌; ʼಪುಷ್ಪ 3ʼ ಬಂದೇಬರುತ್ತೆ ಎಂದ ನಿರ್ದೇಶಕ ಸುಕುಮಾರ್‌

ʼಪುಷ್ಪ 3ʼ ಬಂದೇಬರುತ್ತೆ ಎಂದ ನಿರ್ದೇಶಕ ಸುಕುಮಾರ್‌

Sukumar: ಭಾರತೀಯ ಚಿತ್ರರಂಗದಲ್ಲಿ ಹೊಸದೊಂದು ದಾಖಲೆ ಬರೆದ ಟಾಲಿವುಡ್‌ನ ಪುಷ್ಪ ಸರಣಿಯ ಮುಂದಿನ ಭಾಗವನ್ನು ತೆರೆಗೆ ತರುವುದಾಗಿ ನಿರ್ದೇಶಕ ಸುಕುಮಾರ್‌ ಘೋಷಿಸಿದ್ದಾರೆ. ಐಫಾ ಪ್ರಶಸ್ತಿ ಪ್ರದಾನ ವೇದಿಕೆಯಲ್ಲಿ ʼಪುಷ್ಪ 3ʼ ಚಿತ್ರವನ್ನು ತೆರೆಗೆ ತರುವುದಾಗಿ ತಿಳಿಸಿದ್ದಾರೆ.

The Bengal Files: ವಿವೇಕ್ ಅಗ್ನಿಹೋತ್ರಿ ನಿರ್ದೇಶನದ 'ದಿ ಬೆಂಗಾಳ್‌ ಫೈಲ್ಸ್' ಸೆನ್ಸಾರ್ ಶಿಪ್ ಅರ್ಜಿ ವಜಾ

'ದಿ ಬೆಂಗಾಳ್‌ ಫೈಲ್ಸ್' ಸೆನ್ಸಾರ್ ಶಿಪ್ ಅರ್ಜಿ ವಜಾ

ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ʼದಿ ಬೆಂಗಾಳ ಫೈಲ್ಸ್ʼ ಹಿಂದಿ ಚಿತ್ರದಲ್ಲಿ ತಮ್ಮ ಅಜ್ಜ ಗೋಪಾಲ್ ಚಂದ್ರ ಮುಖರ್ಜಿ ಅವರನ್ನು ಮಾನಹಾನಿಕರ ರೀತಿಯಲ್ಲಿ ಚಿತ್ರಿಸಲಾಗಿದೆ ಎಂದು ಅರ್ಜಿದಾರರಾದ ಶಂತನು ಮುಖರ್ಜಿ ಸಲ್ಲಿಸಿರುವ ದೂರನ್ನು ಪರಿಶೀಲಿಸಿರುವ ಕೋಲ್ಕತಾ ಹೈಕೋರ್ಟ್ ಈ ಅರ್ಜಿಯನ್ನು ವಜಾಗೊಳಿಸಿದೆ. 1946ರ ಆಗಸ್ಟ್‌ನಲ್ಲಿ ಕೋಲ್ಕತ್ತಾದಲ್ಲಿ ನಡೆದ ಕೋಮು ಗಲಭೆಯನ್ನು ಆಧರಿಸಿರುವ ಚಿತ್ರ ಇದಾಗಿದೆ.

Nanda Kishore: ಸೂಪರ್ ಸ್ಟಾರ್ ರಜನೀಕಾಂತ್‌ಗೆ ಆ್ಯಕ್ಷನ್ ಕಟ್ ಹೇಳಲಿದ್ದಾರಾ ನಿರ್ದೇಶಕ ನಂದ ಕಿಶೋರ್?

ಸೂಪರ್ ಸ್ಟಾರ್ ರಜನೀಕಾಂತ್ ಚಿತ್ರ ನಿರ್ದೇಶನ ಮಾಡಲಿದ್ದರಾ ನಂದ ಕಿಶೋರ್!

Nanda Kishore: ಮಲಯಾಳಂ ನ ಹೆಸರಾಂತ ನಟ ಮೋಹನ್ ಲಾಲ್ ಅವರೊಂದಿಗೆ ನಿರ್ದೇಶಕ ನಂದ ಕಿಶೋರ್ ಅವರು ವೃಷಭ ಸಿನಿಮಾ ಮಾಡಲಿದ್ದಾರೆ. ಇದಾದ ಬಳಿಕ ಸೂಪರ್ ಸ್ಟಾರ್ ರಜನೀಕಾಂತ್ ಅವರ ಹೊಸ ಸಿನಿಮಾಕ್ಕೆ ನಟ ನಂದ ಕಿಶೋರ್ ಅವರು ಆ್ಯಕ್ಷನ್ ಕಟ್ ಹೇಳಲಿದ್ದಾರೆ ಎಂಬ ಸುದ್ದಿ ಸದ್ಯ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

Abhinav Kashyap: ಸಲ್ಮಾನ್‌ ಖಾನ್‌ ಓರ್ವ ಗೂಂಡಾ; ʼದಬಾಂಗ್‌ʼ ನಿರ್ದೇಶಕ ಅಭಿನವ್‌ ಕಶ್ಯಪ್‌ ಗಂಭೀರ ಆರೋಪ

ಸಲ್ಮಾನ್‌ ಖಾನ್‌ ಓರ್ವ ಗೂಂಡಾ; ಅಭಿನವ್‌ ಕಶ್ಯಪ್‌ ಆರೋಪ

Salman Khan: ಬಾಲಿವುಡ್‌ನ ಸೂಪರ್‌ ಸ್ಟಾರ್‌ ಸಲ್ಮಾನ್‌ ಖಾನ್‌ ವಿರುದ್ಧ ಜನಪ್ರಿಯ ನಿರ್ದೇಶಕ ಅಭಿನವ್‌ ಕಶ್ಯಪ್‌ ಗುಡುಗಿದ್ದಾರೆ. ಸಲ್ಮಾನ್‌ ಖಾನ್‌ಗೆ ನಟನೆಯಲ್ಲಿ ಆಸಕ್ತಿ ಇಲ್ಲ, ಅವರೊಬ್ಬ ಗೂಂಡಾ ಎಂದು ಆರೋಪಿಸಿದ್ದಾರೆ. 2010ರಲ್ಲಿ ತೆರೆಕಂಡ ಬಾಲಿವುಡ್‌ನ ಸೂಪರ್‌ ಹಿಟ್‌ ಚಿತ್ರ ʼದಬಾಂಗ್‌ʼನಲ್ಲಿ ಇವರಿಬ್ಬರು ಜತೆಯಾಗಿ ಕೆಲಸ ಮಾಡಿದ್ದರು. ಅದಾದ ಬಳಿಕ ಇಬ್ಬರ ಮಧ್ಯೆ ಬಿರುಕು ಮೂಡಿತ್ತು.

Ramachari- Yajamana serial: ಯಜಮಾನ -ರಾಮಾಚಾರಿ ಸೀರಿಯಲ್ ಮಹಾಸಂಗಮದಲ್ಲಿ ಬಿಗ್ ಟ್ವಿಸ್ಟ್!

ಯಜಮಾನ- ರಾಮಾಚಾರಿ ಸೀರಿಯಲ್ ಮಹಾಸಂಗಮ!

Ramachari- Yajamana serial: ಯಜಮಾನ-ರಾಮಾಚಾರಿ ಮಹಾಸಂಚಿಕೆ ಕರುನಾಡಿಗೆ ಮನರಂಜನೆಯ ರಸದೌತಣವನ್ನ ಕೊಡಲು ಸಜ್ಜಾಗಿದೆ. ಎರಡು ಬ್ಯೂಟಿಫುಲ್ ಜೋಡಿಗಳ ಕ್ಯೂಟ್ ರೊಮ್ಯಾನ್ಸ್, ಎರಡು ಪವರ್‌ಫುಲ್ ಹೀರೋಗಳ ಸಖತ್ ಫೈಟ್, ಎರಡು ಹೀರೋಯಿನ್‌ಗಳ ಇಮೋಷನಲ್ ಸೀನ್ಸ್, ವಿಲನ್‌ಗಳ ಅಟ್ಟಹಾಸ, ಅದನ್ನ ಅಡಗಿಸೋ ಒಳ್ಳೇತನ, ನಾನ್-ಸ್ಟಾಪ್ ನಗು, ‘ನಾನಾ-ನೀನಾ’ ಪಂದ್ಯದ ಕುತೂಹಲ… ಹೀಗೆ ಮಹಾಸಂಚಿಕೆ ವಿಶೇಷವಾಗಿ ಮೂಡಿಬರಲಿದೆ.

Filmfare Glamour & Style Awards 2025: ಫಿಲ್ಮ್‌ಫೇರ್ ಗ್ಲಾಮರ್ & ಸ್ಟೈಲ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಮಿಂಚಿದ ಬಾಲಿವುಡ್ ತಾರೆಯರು!

ಫಿಲ್ಮ್‌ಫೇರ್ ಗ್ಲಾಮರ್ & ಸ್ಟೈಲ್ ಅವಾರ್ಡ್ಸ್ ಗೆ ಎಂಟ್ರಿ ಕೊಟ್ಟ ತಾರೆಯರು!

Filmfare Glamour & Style Awards: ಮುಂಬೈನಲ್ಲಿ ನಡೆದ ಫಿಲ್ಮ್‌ಫೇರ್ ಗ್ಲಾಮರ್ & ಸ್ಟೈಲ್ ಅವಾರ್ಡ್ಸ್ 2025 ರ ರೆಡ್ ಕಾರ್ಪೆಟ್ ಮೇಲೆ ಬಾಲಿವುಡ್ ತಾರೆಯರು ಗ್ರ್ಯಾಂಡ್ ಎಂಟ್ರಿ ನೀಡಿದ್ದಾರೆ. ಅನನ್ಯಾ ಪಾಂಡೆ, ಕರಣ್ ಜೋಹರ್ ಮತ್ತು ಇತರ ಸೆಲೆಬ್ರಿಟಿಗಳು ತಮ್ಮ ಡಿಫರೆಂಟ್ ಲುಕ್ಸ್‌ನೊಂದಿಗೆ ಎಲ್ಲರ ಗಮನ ಸೆಳೆದರು.

Kamal Haasan: 46 ವರ್ಷಗಳ ಬಳಿಕ ಮತ್ತೆ ತೆರೆಮೇಲೆ ಒಟ್ಟಿಗೆ ಬರಲಿದ್ದಾರೆ ಕಮಲ್‌- ರಜನಿಕಾಂತ್‌; ಸಿನಿಮಾ ಯಾವುದು ಗೊತ್ತಾ?

ತೆರೆಮೇಲೆ ಒಟ್ಟಿಗೆ ಬರಲಿದ್ದಾರೆ ಕಮಲ್‌- ರಜನಿಕಾಂತ್‌!

ತಮಿಳು ಚಿತ್ರರಂಗದ ಇಬ್ಬರು ದಿಗ್ಗಜ ನಟರಾದ 'ಸೂಪರ್ ಸ್ಟಾರ್‌' ರಜನಿಕಾಂತ್ ಮತ್ತು ಕಮಲ್ ಹಾಸನ್ ಅವರು ಬರೋಬ್ಬರಿ 46 ವರ್ಷಗಳ ಬಳಿಕ ಒಟ್ಟಿಗೆ ನಟಿಸಲಿದ್ದಾರೆ. ಕಮಲ್ ಹಾಸನ್ ಮುಂಬರುವ ಚಿತ್ರದಲ್ಲಿ ರಜನಿಕಾಂತ್ ಅವರೊಂದಿಗೆ ಪರದೆಯನ್ನು ಹಂಚಿಕೊಳ್ಳಲಿದ್ದಾರೆ.

Rukmini Vasanth: ಕೇರಳದಲ್ಲೂ ಕನ್ನಡ ಮಾತನಾಡಿದ ರುಕ್ಮಿಣಿ ವಸಂತ್‌; ವಿಡಿಯೊ ವೈರಲ್‌

ಕೇರಳದಲ್ಲೂ ಕನ್ನಡ ಮಾತನಾಡಿದ ರುಕ್ಮಿಣಿ ವಸಂತ್‌

Madharaasi Movie: 'ಮದರಾಸಿʼ ತಮಿಳು ಚಿತ್ರದ ಪ್ರಮೋಷನ್‌ಗಾಗಿ ಕೇರಳದ ಕೊಚ್ಚಿ ಲುಲು ಮಾಲ್‌ಗೆ ತೆರಳಿದ ಕನ್ನಡತಿ ರುಕ್ಮಿಣಿ ವಸಂತ್‌ ಅಲ್ಲೂ ಕನ್ನಡದಲ್ಲೇ ಮಾತನಾಡಿದ್ದು, ಗಮನ ಸೆಳೆದಿದೆ. ಸದ್ಯ ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

Dhanveer Gowda: ದರ್ಶನ್ ಇಲ್ಲದೆ ಬರ್ತ್‌ಡೇ ಆಚರಿಸಲ್ಲ ಎಂದ ಧನ್ವೀರ್‌- ಹುಟ್ಟುಹಬ್ಬಕ್ಕೆ ಶುಭ ಕೋರಿದ ವಿಜಯಲಕ್ಷ್ಮಿ.!

ದರ್ಶನ್ ಇಲ್ಲದೆ ಹುಟ್ಟುಹಬ್ಬ ಆಚರಣೆ ಇಲ್ಲ ಎಂದ ನಟ ಧನ್ವೀರ್!

Dhanveer Birthday: ಇಂದು ನಟ ಧನ್ವಿರ್ ಜನ್ಮ ದಿನವಾಗಿದ್ದು ನಟ ದರ್ಶನ್ ಅವರ ಪತ್ನಿ ವಿಜಯ ಲಕ್ಷ್ಮೀ ಅವರು ನಟ ಧನ್ವಿರ್ ಗೆ ಶುಭ ಕೋರಿದ್ದಾರೆ. ಆದರೆ ಇದರ ಬೆನ್ನಲ್ಲೆ ಈ ಬಾರಿ ಹುಟ್ಟು ಹಬ್ಬ ಆಚರಣೆ ಮಾಡುವುದಿಲ್ಲ ಎಂದು ತಮ್ಮ ಅಭಿಮಾನಿಗಳಿಗೆ ನಟ ಧನ್ವಿರ್ ಮನವಿ ಮಾಡಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

Bigg Boss Telugu: ಬಿಗ್ ಸರ್ಪ್ರೈಸ್: ಬಿಗ್ ಬಾಸ್ ತೆಲುಗು ಮನೆಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ಸಂಜನಾ ಗಲ್ರಾನಿ

ಬಿಗ್ ಬಾಸ್ ತೆಲುಗು ಮನೆಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ಸಂಜನಾ

ಬಿಗ್ ಬಾಸ್ ತೆಲುಗು ಸೀಸನ್ 9ರ 10ನೇ ಸ್ಪರ್ಧಿಯಾಗಿ ಸಂಜನಾ ಗಲ್ರಾನಿ ಎಂಟ್ರಿ ಕೊಟ್ಟು ಅಚ್ಚರಿ ಮೂಡಿಸಿದ್ದಾರೆ. ಮದುವೆ, ಮಗು ಆದ ಮೇಲೆ ಸಂಜನಾ ತೆರೆ ಮರೆಗೆ ಸರಿದಿದ್ದರು. ಸೋಶಿಯಲ್ ಮೀಡಿಯಾಗಳಲ್ಲಿ ಮಾತ್ರ ಆಕ್ಟಿವ್ ಆಗಿದ್ದ ಈ ನಟಿ ದಿಢೀರನೇ ಬಿಗ್ ಬಾಸ್ ವೇದಿಕೆ ಮೇಲೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.

Navya Nair: ಮಲ್ಲಿಗೆ ಹೂವು ಆಸ್ಟ್ರೇಲಿಯಾಗೆ ತೆಗೆದುಕೊಂಡು ಹೋಗಿದ್ದಕ್ಕೆ ನಟಿಗೆ ಬಿತ್ತು ಭಾರೀ ದಂಡ!

ಮಲ್ಲಿಗೆ ಹೂವು ತೆಗೆದುಕೊಂಡು ಹೋಗಿದ್ದಕ್ಕೆ ನಟಿಗೆ ಬಿತ್ತು ದಂಡ!

ಖ್ಯಾತ ನಟಿ ನವ್ಯಾ ನಾಯರ್ ಗೆ ಆಸ್ಟ್ರೇಲಿಯಾದ ಮೆಲ್ಬೋರ್ನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರೂ.1.1 ಲಕ್ಷ ದಂಡ ಹಾಕಲಾಗಿದೆ. ಕಾರಣ ಕೇಳಿದ್ರೆ ಅಚ್ಚರಿ ಎನಿಸುವುದಂತೂ ಸುಳ್ಳಲ್ಲ. ಮಲ್ಲಿಗೆ ಹೂಗಳನ್ನು ಕೊಂಡೊಯ್ದಿದ್ದಕ್ಕಾಗಿ ನಟಿ ನವ್ಯಾ ನಾಯರ್ ಅವರಿಗೆ ಸುಮಾರು 1.14 ಲಕ್ಷ (AUD 1,980) ದಂಡ ವಿಧಿಸಲಾಗಿದೆ.

Bhagya Lakshmi Serial: ಕೊನೆಗೂ ಸಿಕ್ಕಿತು ಕಳ್ಳತನವಾದ 25 ಲಕ್ಷ: ಭಾಗ್ಯ ಹಣವನ್ನು ಏನು ಮಾಡಿದ್ಳು ಗೊತ್ತಾ?

ಕೊನೆಗೂ ಸಿಕ್ಕಿತು ಕಳ್ಳತನವಾದ 25 ಲಕ್ಷ

ಭಾಗ್ಯ ಮನೆಯ ಮೇಲೆ ಮಿಡಲ್ ಕ್ಲಾಸ್ ಜೀವನ ನಡೆಸುತ್ತಿದ್ದ ವಿಚಾರ ರಾಮ್ದಾಸ್ಗೆ ಗೊತ್ತಾಗಿ ಅವರು ತುಂಬಾ ಬೇಸರ ಮಾಡಿಕೊಂಡಿದ್ದಾರೆ. ಇದರ ಮಧ್ಯೆ ಭಾಗ್ಯ ಮನೆಯಿಂದ ಕಳ್ಳತನವಾಗಿದ್ದ 25 ಲಕ್ಷ ಕೊನೆಗೂ ಸಿಕ್ಕಿದೆ. ಅಚ್ಚರಿ ಎಂದರೆ ಈ ಹಣವನ್ನು ಭಾಗ್ಯ ತೆಗೆದುಕೊಂಡಿದ್ದಾಳೆ. ಆದರೆ, ಇದರಲ್ಲೂ ಒಂದು ಟ್ವಿಸ್ಟ್ ನೀಡಲಾಗಿದೆ.

Kartik Aaryan And Sreeleela: ಡೇಟಿಂಗ್‌ ರೂಮರ್ಸ್‌ ನಡುವೆಯೇ ಕಾರ್ತಿಕ್ ಆರ್ಯನ್‌ ಮನೆಯಲ್ಲಿ ಕಾಣಿಸಿಕೊಂಡ ನಟಿ ಶ್ರೀಲೀಲಾ- ಫೋಟೊ ವೈರಲ್!

ಕಾರ್ತಿಕ್ ಆರ್ಯನ್‌ ಮನೆಯಲ್ಲಿ ನಟಿ ಶ್ರೀಲೀಲಾ! ಫೋಟೋ ವೈರಲ್‌

Kartik Aaryan And Sreeleela: ನಟ ಕಾರ್ತಿಕ್ ಆರ್ಯನ್ ಅವರು ಮುಂಬೈನ ತಮ್ಮ ನಿವಾಸದಲ್ಲಿ ತಮ್ಮ ಕುಟುಂಬದೊಂದಿಗೆ ಗಣೇಶ ಚತುರ್ಥಿಯನ್ನು ಆಚರಿಸಿದ್ದರು. ಆದರೆ ಈ ಬಾರೀ ಅವರ ಮನೆಯ ಗಣೇಶೋತ್ಸವ ಕಾರ್ಯಕ್ರಮಕ್ಕೆ ನಟಿ ಶ್ರೀಲೀಲಾ ಕೂಡ ಹಾಜರಾಗಿದ್ದರು. ನಟ ಕಾರ್ತಿಕ್ ಮತ್ತು ಶ್ರೀಲೀಲಾ ಗೌಪ್ಯವಾಗಿ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಹರಡುತ್ತಿದ್ದು ಇಬ್ಬರು ಒಟ್ಟಿಗೆ ಇರುವ ಅನೇಕ ಫೋಟೊಗಳು ವೈರಲ್ ಆಗಿದ್ದವು. ಇದರ ಬೆನ್ನಲ್ಲೆ ಇವರಿಬ್ಬರು ಒಟ್ಟಿಗೆ ಗಣೇಶೋತ್ಸವ ಆಚರಿಸಿಕೊಂಡಿರುವ ಫೋಟೊಗಳು ವದಂತಿಗಳಿಗೆ ಮತ್ತಷ್ಟು ಪುಷ್ಟಿ ನೀಡಿದಂತಿದೆ.

Sanjay Dutt: ಜೋಡಿ ಕೊಲೆ ಹಂತಕ ನಟ ಸಂಜಯ್‌ ದತ್‌ ಕುತ್ತಿಗೆಗೆ ಬ್ಲೇಡ್‌ ಇಟ್ಟಿದ್ನಂತೆ!

ಜೋಡಿ ಕೊಲೆ ಹಂತಕ ನಟ ಸಂಜಯ್‌ ದತ್‌ ಕುತ್ತಿಗೆಗೆ ಬ್ಲೇಡ್‌ ಇಟ್ಟಿದ್ನಂತೆ!

1993ರ ಮುಂಬೈ ಬಾಂಬ್ ಸ್ಫೋಟದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದ ಬಾಲಿವುಡ್ ನಟ ಸಂಜಯ್ ದತ್ (Sanjay Dutt) ಜೈಲಿನಲ್ಲಿದ್ದಾಗ ನಡೆದ ಒಂದು ಭಯಾನಕ ಘಟನೆಯನ್ನು ದಿ ಗ್ರೇಟ್ ಇಂಡಿಯನ್ ಕಪಿಲ್ ಶರ್ಮಾ ಶೋನಲ್ಲಿ ಹಂಚಿಕೊಂಡಿದ್ದಾರೆ. ಎರಡು ಕೊಲೆಗಳನ್ನು ಮಾಡಿದ್ದ ಅಪರಾಧಿಯೊಬ್ಬ ತನ್ನ ಕುತ್ತಿಗೆಗೆ ಬ್ಲೇಡ್ ಹಿಡಿದಿದ್ದ ಎಂದು ನಟ ನೆನಪಿಸಿಕೊಂಡಿದ್ದಾರೆ.

BBK 12: ಈ ಬಾರಿ ಬಿಗ್ ಬಾಸ್​ಗೆ ಹೋಗಲಿದ್ದಾರೆ ಕನ್ನಡದ ಎವರ್ ಗ್ರೀನ್ ನಟಿ ಸುಧಾರಾಣಿ

ಈ ಬಾರಿ ಬಿಗ್ ಬಾಸ್​ಗೆ ಹೋಗಲಿದ್ದಾರೆ ಕನ್ನಡದ ಎವರ್ ಗ್ರೀನ್ ನಟಿ

ಈ ಬಾರಿ ದೊಡ್ಮನೆಯೊಳಗೆ ಯಾವೆಲ್ಲಾ ಕಂಟೆಸ್ಟೆಂಟ್‌ ಹೋಗಬಹುದು ಎಂಬ ಪ್ರಶ್ನೆ ಎಲ್ಲರಲ್ಲಿಯೂ ಇನ್ನೂ ಹಾಗೇ ಕುತೂಹಲಕಾರಿಯಾಗಿ ಉಳಿದಿದೆ. ಸೋಷಿಯಲ್ ಮೀಡಿಯಾದಲ್ಲಿ ಒಂದಿಷ್ಟು ಹೆಸರು ಓಡಾಡುತ್ತಿದ್ದರೂ ಖಚಿತ ಮಾಹಿತಿ ಇಲ್ಲ. ಹೀಗಿರುವಾಗ ಬಲ್ಲ ಮೂಲಗಳಿಂದ ಬಿಬಿಕೆ 12ಗೆ ಕನ್ನಡದ ನಟಿ ಸುಧಾರಾಣಿ ಹೋಗಲಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.

BBK 12 Common People: ಈ ಬಾರಿ ಬಿಗ್ ಬಾಸ್ ಕನ್ನಡ ಮನೆಯೊಳಗೆ ನೀವೂ ಹೋಗಬಹುದು: ಜಸ್ಟ್ ಹೀಗೆ ಮಾಡಿ ಸಾಕು

ಈ ಬಾರಿ ಬಿಗ್ ಬಾಸ್ ಕನ್ನಡ ಮನೆಯೊಳಗೆ ನೀವೂ ಹೋಗಬಹುದು

ಈ ಬಾರಿ ಬಿಗ್‌ ಬಾಸ್‌ಗೆ ಜನಸಾಮಾನ್ಯರಿಗೂ ಎಂಟ್ರಿಯಿದೆ ಎಂದು ಕಲರ್ಸ್‌ಕನ್ನಡ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದೆ. ಹೌದು.. ಈ ಬಾರಿ ನೀವು ಬಿಗ್‌ ಬಾಸ್‌ ಕನ್ನಡದ ಮನೆಗೆ ಎಂಟ್ರಿ ಕೊಡಬಹುದು ಆದರೆ ಸ್ಪರ್ಧಿಯಾಗಿ ಅಲ್ಲ, ಬದಲಿಗೆ ಅತಿಥಿಯಾಗಿ. ಇದು ಹೇಗೆ?, ಇದಕ್ಕಾಗಿ ಏನೆಲ್ಲ ಮಾಡಬೇಕು? ಎಂಬ ಮಾಹಿತಿ ಇಲ್ಲಿದೆ.

Kareena Kapoor: ಬಾಲಿವುಡ್ ನಟಿ ಕರೀನಾ ಕಪೂರ್ ಸೀರೆಯಲ್ಲಿ ಫುಲ್ ಮಿಂಚಿಂಗ್; ಇಲ್ಲಿದೆ ಫೋಟೊ

ಸೀರೆಯಲ್ಲಿ ಮಿರ ಮಿರ ಮಿಂಚಿದ ಕರೀನಾ ಕಪೂರ್

Kareena Kapoor Khan: ಬಾಲಿವುಡ್‌ನ ಖ್ಯಾತ ನಟಿ ಕರೀನಾ ಕಪೂರ್ ಖಾನ್ ಸಿನಿಮಾ ಅಲ್ಲದೆ ವೈಯಕ್ತಿಕ ವಿಚಾರವಾಗಿಯೂ ಸುದ್ದಿಯಲ್ಲಿರುತ್ತಾರೆ. ಸಿನಿಮಾ ಇವೆಂಟ್‌ನಲ್ಲಿ ಹೆಚ್ಚಾಗಿ ಭಾಗವಹಿಸುವ ಕರೀನಾ ಇಂಗ್ಲೆಂಡ್‌ನ ಬರ್ಮಿಂಗ್‌ ಹ್ಯಾಮ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತಮ್ಮ ಸೌಂದರ್ಯ ಮತ್ತು ಫ್ಯಾಷನ್‌ ಸೆನ್ಸ್‌ನಿಂದ ಎಲ್ಲರ ಮನಸೂರೆಗೊಂಡಿದ್ದಾರೆ.

Nikita Ghag: ನಿರ್ಮಾಪಕನಿಗೆ ಬೆದರಿಕೆ ಹಾಕಿ 10 ಲಕ್ಷ ರೂ. ವಂಚನೆ; ಖ್ಯಾತ‌ ‌ನಟಿ ವಿರುದ್ಧ ಪ್ರಕರಣ ದಾಖಲು

10 ಲಕ್ಷ ರೂ. ಸುಲಿಗೆ ಆರೋಪದಡಿ ಖ್ಯಾತ ನಟಿ ವಿರುದ್ಧ ಪ್ರಕರಣ

ಮಹಾರಾಷ್ಟ್ರದ ಬಿಜೆಪಿ ಉಪಾಧ್ಯಕ್ಷೆ, ಬಾಲಿವುಡ್‌ ನಟಿ ನಿಖಿತಾ ಘಾಗ್ ಹಣಕಾಸಿನ ಅವ್ಯವಹಾರದಲ್ಲಿ ಒಂದರಲ್ಲಿ ಸಿಲುಕಿದ್ದಾರೆ. ನಿರ್ಮಾಪಕರೊಬ್ಬರಿಗೆ ಬೆದರಿಕೆ ಹಾಕಿ ಹಣ ಸುಲಿಗೆ ಮಾಡಿದ್ದಾರೆ ಎಂದು ನಿಖಿತಾ ಘಾಗ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Ghaati Box Office Collection: ಬಾಕ್ಸ್‌ ಆಫೀಸ್‌ ವಾರ್‌ನಲ್ಲಿ ಗೆದ್ರಾ ಅನುಷ್ಕಾ ಶೆಟ್ಟಿ? ʼಘಾಟಿʼ ಚಿತ್ರ ಗಳಿಸಿದ್ದೆಷ್ಟು?

ಅನುಷ್ಕಾ ಶೆಟ್ಟಿಯ ʼಘಾಟಿʼ ಚಿತ್ರ ಗಳಿಸಿದ್ದೆಷ್ಟು?

Ghaati Movie: ಕನ್ನಡತಿ ಅನುಷ್ಕಾ ಶೆಟ್ಟಿ ನಟನೆಯ ತೆಲುಗು ಚಿತ್ರ ʼಘಾಟಿʼ ಕೊನೆಗೂ ರಿಲೀಸ್‌ ಆಗಿದೆ. ಎರಡೆರಡು ಬಾರಿ ರಿಲೀಸ್‌ ದಿನಾಂಕ ಮುಂದೂಡಿಕೆಯಾಗಿದ್ದ ಈ ಚಿತ್ರ ಇದೀಗ ತೆರೆ ಮೇಲೆ ಬಂದಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಮಹಿಳಾ ಪ್ರಧಾನ ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ಗಮನ ಸೆಳೆದಿದ್ದು, ಗಳಿಸಿದ್ದೆಷ್ಟು ಎನ್ನುವ ವಿವರ ಇಲ್ಲಿದೆ.

Shiva Rajkumar: ಶೂಟಿಂಗ್ ಸೆಟ್‌ನಲ್ಲಿ ಫ್ಯಾನ್ಸ್ ಮೇಲೆ ಗರಂ ಆದ ಶಿವಣ್ಣ- ವಿಡಿಯೊ ವೈರಲ್

ಅಭಿಮಾನಿಗಳ ಜೊತೆ ಕೋಪಗೊಂಡ ಶಿವಣ್ಣ

Shiva Rajkumar: ಹ್ಯಾಟ್ರಿಕ್ ಹೀರೋ ಎಂಬ ಬಿರುದಿನಿಂದ ಕರೆಸಿಕೊಳ್ಳುವ ನಟ ಶಿವರಾಜ್ ಕುಮಾರ್ 130ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆನಂದ್ ಸಿನಿಮಾ ಮೂಲಕ ನಾಯಕ ನಟನಾಗಿ ಎಂಟ್ರಿ ಕೊಟ್ರ ಶುವಣ್ಣ ಬ್ಯಾಕ್ ಟು ಬ್ಯಾಕ್ ಸಾಕಷ್ಟು ಹಿಟ್ ಚಿತ್ರ ಕೊಟ್ಟು ಅಭಿಮಾನಿಗಳನ್ನು ಮನರಂಜಿಸಿದ್ದಾರೆ. ಈಗಲೂ ಶಿವರಾಜ್ ಕುಮಾರ್ ನಟನೆ, ಡ್ಯಾನ್ಸ್ ಗೆ ಫ್ಯಾನ್ಸ್ ಕೂಡ ಫಿದಾ ಆಗಿದ್ದಾರೆ. ಇನ್ನೂ ಶಿವಣ್ಣ ನನ್ನು ಕಂಡಾಗ ಅಭಿಮಾನಿಗಳು ಮುಗಿ ಬೀಳುವುದೇ ಹೆಚ್ಚು. ಆದರೆ‌ ಈ ಭಾರಿ ಸಿನಿಮಾ ಸೆಟ್‌ನಲ್ಲಿ ಫ್ಯಾನ್ಸ್ ಅತಿರೇಕದ ವರ್ತನೆಗೆ ಶಿವಣ್ಣ ಗರಂ ಆಗಿದ್ದಾರೆ.‌

Bigg Boss 19: ಬಿಗ್‌ಬಾಸ್‌ ವೇದಿಕೆ ಮೇಲೆಯೇ ಕಣ್ಣೀರಿಟ್ಟ ಸಲ್ಮಾನ್‌ ಖಾನ್!‌ ಅಷ್ಟಕ್ಕೂ ಆಗಿದ್ದೇನು?

ಬಿಗ್‌ಬಾಸ್‌ ವೇದಿಕೆ ಮೇಲೆಯೇ ಕಣ್ಣೀರಿಟ್ಟ ಸಲ್ಮಾನ್‌ ಖಾನ್!‌

Salman Khan: ನಟ ಸಲ್ಮಾನ್‌ ಖಾನ್‌ ಸಾರಥ್ಯದಲ್ಲಿ ʻಬಿಗ್‌ ಬಾಸ್‌ ಸೀಸನ್‌ 19ʼ ಈಗಾಗಲೇ ಆರಂಭವಾಗಿ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಇದೇ ರಿಯಾಲಿಟಿ ಶೋ ನ ಕಂಟೆಸ್ಟೆಂಟ್ ಆದ ನಟಿ ಕುನಿಕಾ ಸದಾನಂದ್ ಅವರು ಸ್ಪರ್ಧಿಯಾಗಿ ತಮ್ಮ ವೈಯಕ್ತಿಕ ವಿಚಾರದಿಂದ ಭಾರೀ ಸದ್ದು ಮಾಡುತ್ತಿದ್ದಾರೆ. ಈ ವಾರದ ವೀಕೆಂಡ್ ಶೋನಲ್ಲಿ ನಟಿ ಕುನಿಕಾ ಅವರ ಪುತ್ರ ಅಯಾನ್ ಲಾಲ್ ಅವರು ತಮ್ಮ ತಾಯಿಯ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿದ್ದಾರೆ. ಇದನ್ನು ಕೇಳಿ ನಟ ಸಲ್ಮಾನ್ ಖಾನ್ ಕೂಡ ಕಣ್ಣೀರು ಹಾಕಿದ್ದು ಇಡೀ ಬಿಗ್ ಬಾಸ್ ಶೋ ಭಾವನಾತ್ಮಕ ಕ್ಷಣ ಸೆರೆಹಿಡಿದಂತಿತ್ತು.

The Devil: ಯೂಟ್ಯೂಬ್‍, ಅಮೇಜಾನ್‍ ಮ್ಯೂಸಿಕ್‍ನಲ್ಲಿ  ‘ದಿ ಡೆವಿಲ್‍’ ಸಾಂಗ್‌ನದೇ ಹವಾ

ಇದ್ರೇ ನೆಮ್ದಿಯಾಗ್‍ ಇರ್ಬೇಕ್‍ ಹಾಡಿಗೆ ಭರ್ಜರಿ ರೆಸ್ಪಾನ್ಸ್

ಚಾಲೆಂಜಿಂಗ್‍ ಸ್ಟಾರ್ ದರ್ಶನ್‍ (Actor Darshan) ಅಭಿನಯದ ‘ದಿ ಡೆವಿಲ್‍’ ಚಿತ್ರದ ‘ಇದ್ರೇ (The Devil) ನೆಮ್ದಿಯಾಗ್‍ ಇರ್ಬೇಕ್‍ …’ ಹಾಡಿಗೆ ಉತ್ತಮ ರೆಸ್ಪಾನ್ಸ್‌ ಸಿಕ್ಕಿದೆ. ಕೆಲವು ದಿನಗಳ ಹಿಂದೆ ಸಾರೆಗಮ ಕನ್ನಡ ಚಾನಲ್‍ನಲ್ಲಿ ಬಿಡುಗಡೆಯಾಗಿದೆ.

Madharaasi Box Office Collection: ಕಾಲಿವುಡ್‌ನಲ್ಲೂ ಗೆಲುವಿನ ನಗೆ ಬೀರಿದ ರುಕ್ಮಿಣಿ ವಸಂತ್‌; ʼಮದರಾಸಿʼ ಮೊದಲ ದಿನ ಗಳಿಸಿದ್ದೆಷ್ಟು?

ಕಾಲಿವುಡ್‌ನಲ್ಲೂ ಗಮನ ಸೆಳೆದ ರುಕ್ಮಿಣಿ ವಸಂತ್‌

Rukmini Vasanth: ಸದ್ಯ ಪರಭಾಷೆಗಳಲ್ಲೂ ಬೇಡಿಕೆ ಕುರುಸಿಕೊಂಡಿರುವ ಕನ್ನಡತಿ ರುಕ್ಮಿಣಿ ವಸಂತ್‌ ತಮಿಳಿನಲ್ಲಿ ಕೊನೆಗೂ ಗೆಲುವಿನ ನಗೆ ಬೀರಿದ್ದಾರೆ. ವರ್ಷಾರಂಭದಲ್ಲಿ ತೆರೆಕಂಡ ತಮಿಳಿನ ಏಸ್‌ ಚಿತ್ರ ವಿಫಲವಾಗಿತ್ತು. ಇದೀಗ ರೆಲೀಸ್‌ ಆಗಿರುವ, ಶಿವಕಾರ್ತಿಕೇಯನ್‌ ಜತೆಗಿನ ʼಮದರಾಸಿʼ ಗೆಲುವಿನ ಹಳಿಯಲ್ಲಿದೆ.

ʼಕಾಂತಾರ: ಚಾಪ್ಟರ್‌ 1ʼ ಮೂಲಕ ಹೊಸ ಸಾಹಸಕ್ಕೆ ಕೈ ಹಾಕಿದ ರಿಷಬ್‌ ಶೆಟ್ಟಿ; ಅಪರೂಪದ ಅಪ್‌ಡೇಟ್‌ ಹಂಚಿಕೊಂಡ ಸ್ಟಂಟ್ ಕೊರಿಯೋಗ್ರಾಫ್ ಅರುಣ್ ರಾಜ್

ʼಕಾಂತಾರ: ಚಾಪ್ಟರ್‌ 1ʼ ಮೂಲಕ ಹೊಸ ಸಾಹಸಕ್ಕೆ ಕೈ ಹಾಕಿದ ರಿಷಬ್‌ ಶೆಟ್ಟಿ

Kantara: Chapter 1: ಸದ್ಯ ಜಾಗತಿಕ ಪ್ರೇಕ್ಷಕರ ಗಮನ ಸೆಳೆದ ರಿಷಬ್‌ ಶೆಟ್ಟಿ ಅವರ ಕಾಂತಾರ: ಚಾಪ್ಟರ್‌ 1 ಚಿತ್ರ ಅಕ್ಟೋಬರ್‌ 2ರಂದು ಕನ್ನಡದ ಜತೆಗೆ ಹಿಂದಿ, ತಮಿಳು, ತೆಲುಗು, ಹಿಂದಿ, ಮಲಯಾಳಂ, ಬೆಂಗಾಳಿ ಮತ್ತು ಇಗ್ಲಿಷ್‌ನಲ್ಲಿ ತೆರೆಗೆ ಬರಲಿದೆ.

Loading...