ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಆರೋಗ್ಯ

Health Tips: ಬಳಲದೆಯೇ ತೂಕ ಇಳಿಸಬಹುದೇ? ಈ ಟಿಪ್ಸ್‌ ಅನುಸರಿಸಿದರೆ ಸಾಧ್ಯವಿದೆ

ತೂಕ ಇಳಿಕೆಗೆ ಟಿಪ್ಸ್ ಇಲ್ಲಿದೆ

ತೂಕ ಇಳಿಸಬೇಕು ಎಂದರೆ ಅರೆಹೊಟ್ಟೆ ತಿನ್ನಬೇಕು, ಉಪವಾಸ ಸಾಯಬೇಕೆಂದಿಲ್ಲ. ಹೊಟ್ಟೆಯ ಮೇಲೆ ತಣ್ಣೀರು ಬಟ್ಟೆ ಹಾಕಿಕೊಂಡು ಇಳಿಸಿದ ತೂಕದಿಂದ ಶರೀರ ಬೆಂಡಾಗಿ ಬಸವಳಿದು ಹೋಗುತ್ತದೆ. ನಿಶ್ಶಕ್ತಿ ಆವರಿಸುತ್ತದೆ. ನಂತರ ಆಹಾರವನ್ನು ಸಹಜ ಸ್ಥಿತಿಗೆ ತರುತ್ತಿದ್ದಂತೆ ಮತ್ತೆ ತೂಕ ಏರತೊಡಗುತ್ತದೆ. ಇದರಿಂದ ಉಪವಾಸ-ವನವಾಸ ಮಾಡಿ ಏನು ಮಾಡಿದಂತಾಯ್ತು? ಬದಲಿಗೆ, ನಿಗದಿತ ವ್ಯಾಯಾಮಗಳ ಜತೆಯಲ್ಲಿ ಸರಿಯಾದ ಆಹಾರಕ್ರಮವನ್ನೂ ಅನುಸರಿಸಿದರೆ, ಸಪೂರಕ್ಕೆ ಗಟ್ಟಿಮುಟ್ಟಾದ ದೇಹ ನಿಮ್ಮದಾಗಬಹುದು.

Health Tips: ಗರ್ಭಾವಸ್ಥೆಯಲ್ಲಿ ಬಿಪಿ-ಶುಗರ್ ಇದ್ದರೆ ಏನು ಮಾಡಬೇಕು? ಇಲ್ಲಿದೆ ತಜ್ಞರ ಸಲಹೆ

ಗರ್ಭಾವಸ್ಥೆಯಲ್ಲಿ ಬಿಪಿ- ಶುಗರ್ ಇದ್ದರೆ ಏನು ಕ್ರಮ ಕೈಗೊಳ್ಳಬೇಕು?

ಇತ್ತೀಚೆಗೆ ಸಾಕಷ್ಟು ಮಹಿಳೆಯರು ಗರ್ಭಾವಸ್ಥೆಯ ಪೂರ್ವದಲ್ಲಿಯೇ ಬಿಪಿ ಮತ್ತು ಶುಗರ್‌ನಂತಹ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅಂತಹ ಆರೋಗ್ಯ ಸಮಸ್ಯೆ ಇದ್ದವರು ಯಾವ ಬಗೆಯ ವಿಶೇಷ ಕಾಳಜಿ ವಹಿಸಬೇಕು? ಮಗು ಮತ್ತು ತಾಯಿಯ ಆರೋಗ್ಯದಲ್ಲಿ ಯಾವ ಸಮಸ್ಯೆ ಕಾಡಬಹುದು? ಎನ್ನುವಂತಹ ಸಾಕಷ್ಟು ಪ್ರಶ್ನೆಗಳಿಗೆ ಸೂಕ್ತ ಮಾಹಿತಿಯನ್ನು ಖ್ಯಾತ ಸ್ತ್ರೀ ರೋಗ ತಜ್ಞೆ ಡಾ. ರಶ್ಮಿ ಟಿ. ಎನ್‌. ವಿಶ್ವವಾಣಿ ಯೂಟ್ಯೂಬ್‌ ಚಾನಲ್‌ಗೆ ತಿಳಿಸಿದ್ದಾರೆ.

Health Tips: ಕಸೂರಿ ಮೇಥಿ: ರುಚಿಗಷ್ಟೇ ಅಲ್ಲ, ಆರೋಗ್ಯಕ್ಕೂ ಬೇಕು!

ಕಸೂರಿ ಮೇಥಿಯ ಸೇವನೆ ಆರೋಗ್ಯಕ್ಕೇನು ಲಾಭ?

ಭಾರತೀಯ ಅಡುಗೆಮನೆಗಳಲ್ಲೂ ಕೊತ್ತಂಬರಿ, ಕರಿಬೇವು, ಪುದೀನಾ ಮುಂತಾದವು ಬಳಕೆಯಲ್ಲಿವೆ. ಇವೆಲ್ಲ ಸಾಮಾನ್ಯವಾಗಿ ತಾಜಾ ಆಗಿಯೇ ಬಳಸುವ ಸೊಪ್ಪುಗಳು. ಆದರೆ ಮೆಂತೆ ಸೊಪ್ಪು ಹಸಿಯಾಗಿ ಬಳಸಿದಂತೆಯೇ ಒಣಗಿದ್ದೂ ಬಳಕೆಯಲ್ಲಿದೆ. ಕಸೂರಿ ಮೇಥಿ ಎಂದು ಕರೆಯಲಾಗುವ ಈ ಸೊಪ್ಪು ಬಹಳಷ್ಟು ಅಡುಗೆಗಳ ಘಮ, ರುಚಿ ಹೆಚ್ಚಿಸುತ್ತದೆ. ಅಷ್ಟೇ ಅಲ್ಲ, ಆರೋಗ್ಯಕ್ಕೂ ಬಹಳಷ್ಟು ಲಾಭಗಳನ್ನು ಕಸೂರಿ ಮೇಥಿ ತರಬಲ್ಲದು.

ಎದೆಯೊಳಗೆ ಹೊಕ್ಕ ಕಬ್ಬಿಣದ ರಾಡ್‌ - 11 ವರ್ಷದ ಬಾಲಕಿಯ ಪ್ರಾಣ ರಕ್ಷಿಸಿದ ಕೆಎಂಸಿ ಆಸ್ಪತ್ರೆ

ಎದೆಯೊಳಗೆ ಹೊಕ್ಕ ಕಬ್ಬಿಣದ ರಾಡ್‌ - 11 ವರ್ಷದ ಬಾಲಕಿಯ ಪ್ರಾಣ ರಕ್ಷಣೆ

ಬಾಲಕಿಗೆ ಥೊರಾಕೊಟೊಮಿ ಎಂಬ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನ ನಡೆಸಲಾಗಿದ್ದು ಮಕ್ಕಳ ಶಸ್ತ್ರ ಚಿಕಿತ್ಸಾ ತಜ್ಞ ಡಾ.ಸದಾಶಿವ್‌ ರಾವ್‌, ಅರವಳಿಕೆ ತಜ್ಞ ಡಾ.ಸುನೀಲ್‌ ಮತ್ತು ಡಾ.ಫ್ರೀಡಾ ಕುಟಿನ್ಹಾ ಅವರ ಜೊತೆ ಸೇರಿ ಬಾಲಕಿಯ ಎದೆಗೆ ಹೊಕ್ಕಿದ್ದ ಕಬ್ಬಿಣದ ರಾಡ್‌ನ್ನು ಸುರಕ್ಷಿತವಾಗಿ ಹೊರ ತೆಗೆದಿದ್ದಾರೆ. ಶಸ್ತ್ರಚಿಕಿತ್ಸೆ ಬಳಿಕ ಬಾಲಕಿಯನ್ನು ಪಿಡಿಯಾಟ್ರಿಕ್‌ ಇಂಟೆನ್ಸಿವ್‌ ಕೇರ್‍‌ ಗೆ ವರ್ಗಾಯಿಸಿ ತೀವ್ರ ನಿಗಾದಲ್ಲಿ ಇರಿಸಲಾಗಿತ್ತು

ಕೇಂದ್ರದ ಬಜೆಟ್‌ ಆರೋಗ್ಯ ಕ್ಷೇತ್ರಕ್ಕೆ ಏನೇನು ಕೊಡುಗೆ? ಆರೋಗ್ಯ ಕ್ಷೇತ್ರದ ಗಣ್ಯರಿಂದ ಅಭಿಪ್ರಾಯ

ಕೇಂದ್ರದ ಬಜೆಟ್‌ ಆರೋಗ್ಯ ಕ್ಷೇತ್ರಕ್ಕೆ ಏನೇನು ಕೊಡುಗೆ?

ಹ್ಯಾಪಿಯೆಸ್ಟ್ ಹೆಲ್ತ್‌ನಲ್ಲಿ, ದೀರ್ಘಕಾಲದ ಮತ್ತು ಜೀವನಶೈಲಿ ಸಂಬಂಧಿತ ಪರಿಸ್ಥಿತಿಗಳನ್ನು ಪರಿಹರಿ ಸಲು ಸಕಾಲಿಕ ರೋಗನಿರ್ಣಯ, ಕ್ಲಿನಿಕಲ್ ಆರೈಕೆ ಮತ್ತು ಆಯುರ್ವೇದ ಮತ್ತು ಯೋಗದಂತಹ ಪುರಾವೆ ಆಧಾರಿತ ಸ್ವಾಸ್ಥ್ಯ ಅಭ್ಯಾಸಗಳನ್ನು ಸಂಯೋಜಿಸುವ ಸಮಗ್ರ ವಿಧಾನದ ಅಗತ್ಯವಿದೆ ಎಂದು ನಾವು ನಂಬುತ್ತೇವೆ.

Health Tips: ಆಹಾರಕ್ಕೆ ಸೋಡಾ ಹಾಕುವ ಅಭ್ಯಾಸ ನಿಮಗಿದೆಯೆ? ಆರೋಗ್ಯಕ್ಕೆ ಎಷ್ಟು ಸೇಫ್‌? ಇಲ್ಲಿದೆ ನೋಡಿ ಮಾಹಿತಿ

ಸೋಡಾ ಬಳಕೆ ಆರೋಗ್ಯಕ್ಕೆ ಉತ್ತಮವೇ?

ಅಡುಗೆ ಸೋಡಾ ಅತಿ ಬಳಕೆ ಸರಿಯಲ್ಲ..ಯಾವತ್ತೋ ಒಂದೆರಡು ಬಾರಿ ಉಪಯೋಗಿಸಿದರೆ ಈ ವಸ್ತುಗಳಿಂದ ಹಾನಿಯಿಲ್ಲ. ಆದರೆ ಸದಾ ಕಾಲ ಇವುಗಳನ್ನೇ ನೆಚ್ಚಿಕೊಂಡಿದ್ದರೆ ಆರೋಗ್ಯ ಹದ ಗೆಡುತ್ತದೆ. ಸೋಡಾ ಅಥವಾ ಸೋಡಿಯಂ ಬೈಕಾರ್ಬೊನೇಟ್‌ಗೆ ಇರುವ ಸಹಜ ಗುಣವೆಂದರೆ ಕ್ಷಾರ ಅಥವಾ ಆಲ್ಕಲೈನ್.ಇದನ್ನು ಅತಿಯಾಗಿ ದೇಹಕ್ಕೆ ಸೇರಿಸಿದರೆ ರಕ್ತ ಪಿಎಚ್‌ ವ್ಯತ್ಯಾಸ ವಾಗಬಹುದು.

Health Tips: ಡಯಾಬಿಟಿಸ್ ನಿಯಂತ್ರಣ ಹೇಗೆ? ವೈದ್ಯರ ಸಲಹೆ‌ ಏನು?

ಡಯಾಬಿಟಿಸ್ ಕಂಟ್ರೋಲ್ ಗೆ ಸುಲಭ ಪರಿಹಾರ ಕ್ರಮ ಇಲ್ಲಿದೆ!

ಮಧುಮೇಹ ಅನ್ನೊದು ವಿಶ್ವದಾದ್ಯಂತ ಕೋಟ್ಯಂತರ ಜನರಿಗೆ ಕಾಡುವ ಸಮಸ್ಯೆಯಾಗಿದೆ. ಇದು ದೇಹದ ಇನ್ಸುಲಿನ್ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುವ ಒಂದು ಕಾಯಿಲೆಯಾಗಿದೆ. . ಈ ಒಂದು ಆರೋಗ್ಯ ಸಮಸ್ಯೆಯನ್ನು ಹೇಗೆ ನಿವಾರಿಸುವುದು? ಹೇಗೆ ಸಮತೋಲನದಲ್ಲಿ ಇಡುವುದು? ಇದಕ್ಕೆ ಮಾತ್ರೆಗಳ ಸಹಾಯ ಇಲ್ಲದೆ ಯಾವೆಲ್ಲ ಕ್ರಮ ಕೈಗೊಳ್ಳಬಹುದು ಎಂದು ಮಧುಮೇಹ ತಜ್ಞರಾದ ಡಾ. ಸುಮನ್‌ ಅವರು ಮಾಹಿತಿ ನೀಡಿದ್ದಾರೆ.

Budget 2026: ಮಧ್ಯಮ ವರ್ಗಕ್ಕೆ ಮೋದಿ ಸರ್ಕಾರದಿಂದ ಗುಡ್‌ನ್ಯೂಸ್‌; ಕ್ಯಾನ್ಸರ್, ಡಯಾಬಿಟಿಸ್‌ ಔಷಧ ಅಗ್ಗ

ಅಪರೂಪದ ಕಾಯಿಲೆಗಳ ಔಷಧಗಳಿಗೆ ಸುಂಕ ವಿನಾಯಿತಿ

ಅಪರೂಪದ ಕಾಯಿಲೆಗಳ ಚಿಕಿತ್ಸಾ ವೆಚ್ಚವನ್ನು ಕಡಿಮೆ ಮಾಡುವ ಉದ್ದೇಶದಿಂದ 2026-27ರ ಕೇಂದ್ರ ಹಣಕಾಸು ಬಜೆಟ್ ನಲ್ಲಿ ಅಪರೂಪದ ಕಾಯಿಲೆಗಳಿಗೆ ಆಮದು ಮಾಡುವ ಮತ್ತು ಕ್ಯಾನ್ಸರ್, ಡಯಾಬಿಟಿಸ್‌ ಔಷಧಗಳಿಗೆ ಸುಂಕ ವಿನಾಯಿತಿ ಘೋಷಿಸಲಾಗಿದೆ. ಜೀವ ಉಳಿಸುವ ಚಿಕಿತ್ಸೆಯನ್ನು ಕೈಗೆಟಕುವಂತೆ ಮಾಡಿರುವುದರಿಂದ ಸಾಕಷ್ಟು ಕುಟುಂಬಗಳಿಗೆ ಪ್ರಯೋಜನವಾಗಲಿದೆ.

Lung Cancer: ಚಳಿಗಾಲದ ದಟ್ಟ ಹೊಗೆ ಶ್ವಾಸಕೋಶದ ಕ್ಯಾನ್ಸರ್ ಅಪಾಯವನ್ನು ಹೇಗೆ ಹೆಚ್ಚಿಸುತ್ತದೆ?

ದಟ್ಟ ಹೊಗೆ ಶ್ವಾಸಕೋಶದ ಕ್ಯಾನ್ಸರ್ ಅಪಾಯವನ್ನು ಹೇಗೆ ಹೆಚ್ಚಿಸುತ್ತದೆ?

ಹಿರಿಯ ನಾಗರಿಕರಲ್ಲಿ ಹೆಚ್ಚುತ್ತಿರುವ ಕೆಮ್ಮು ಅಥವಾ ಮಕ್ಕಳ ಆಟದ ಸಮಯಕ್ಕೆ ಬೀಳುತ್ತಿರುವ ಕಡಿವಾಣ ಇದಕ್ಕೆ ಸಾಕ್ಷಿ. ಕಣ್ಣಿಗೆ ಕಾಣುವ ಈ 'ಹೊಗೆ ಕೇವಲ ಉಸಿರಾಟದ ಕಿರಿಕಿರಿಯಲ್ಲ, ಇದೊಂದು ಪ್ರಬಲವಾದ 'ಕಾರ್ಸಿನೋಜೆನ್' (ಕ್ಯಾನ್ಸರ್ ಕಾರಕ) ಆಗಿದ್ದು, ದೇಶದಲ್ಲಿ ಶ್ವಾಸಕೋಶದ ಕ್ಯಾನ್ಸರ್ ಪ್ರಮಾಣ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.

ಭಾರತೀಯರಿಗೆ ಯಾವ ಉಪ್ಪು ಅತ್ಯುತ್ತಮ? ಪೌಷ್ಟಿಕತಜ್ಞರ ಸಲಹೆ ಏನು?

ಈ ಉಪ್ಪು ಬಳಕೆ ಮಾಡುವ ಮುನ್ನ ಎಚ್ಚರ!

Health Tips: ಉಪ್ಪು ಆಹಾರ ರುಚಿಗೆ ಮಾತ್ರ ಪ್ರಮುಖವಾಗಿದೆ ಎಂದು ನಾವು ಅಂದುಕೊಂಡಿರುತ್ತೇವೆ, ಆದರೆ ಇದು ನಮ್ಮ ಆರೋಗ್ಯಕ್ಕೆ ಅಗತ್ಯವಾದ ಅಮೂಲ್ಯ ಖನಿಜವಾದ ಅಯೋಡಿನ್ ಅನ್ನೂ ಒದಗಿ ಸುತ್ತದೆ. ಇತ್ತೀಚಿನ ದಿನಗಳಲ್ಲಿ ಅಡುಗೆಮನೆಯಲ್ಲಿ ಸಾಮಾನ್ಯ ಉಪ್ಪಿನ ಬದಲು ಪಿಂಕ್ ಸಾಲ್ಟ್ ಸೆಲ್ಟಿಕ್ ಸಾಲ್ಟ್ ಬಳಕೆ ಮಾಡುವ ಪ್ರಮಾಣ ಹೆಚ್ಚಾಗಿದೆ. ಇಂತಹ ಉಪ್ಪಿನ‌ ಸೇವನೆ ಆರೋಗ್ಯಕ್ಕೆ ಹೇಗೆ ಪರಿಣಾಮ ಬೀರಬಹುದು? ಎಂದು ಪೌಷ್ಟಿಕತಜ್ಞರೊಬ್ಬರು ಎಚ್ಚರಿಕೆ ನೀಡಿದ್ದಾರೆ.

ಚಳಿಗಾಲದಲ್ಲಿ ನಿದ್ದೆ ಮುಗಿಯುವುದೇ ಇಲ್ಲವೇಕೆ?

ಚಳಿಗಾಲದಲ್ಲಿ ಹೆಚ್ಚು ನಿದ್ದೆ ಬರುವುದೇಕೆ?

ಸಾಮಾನ್ಯವಾಗಿ ಚಳಿಗಾಲದಲ್ಲಿ ಎಷ್ಟು ನಿದ್ದೆ ಮಾಡಿದರೂ ಸಾಕಾಗುವುದಿಲ್ಲ ಎಂದೆನಿಸುತ್ತದೆ. ಚಳಿಗಾಲ ಕಳೆದು ರಾತ್ರಿ ಕಿರಿದಾಗಿ, ಸೆಕೆಗಾಲ ಆರಂಭವಾಗುತ್ತಿದ್ದಂತೆ ನಿದ್ದೆಯೂ ಕಡಿಮೆಯಾಗುತ್ತದೆ. ಹಾಗಾದರೆ, ನಿದ್ದೆಗೂ ಋತುಮಾನಕ್ಕೂ ಸಂಬಂಧವಿದೆಯೇ, ಯಾವ ರೀತಿ, ಇದಕ್ಕೆ ಕಾರಣವೇನು ಇಲ್ಲಿದೆ ಸಂಪೂರ್ಣ ಮಾಹಿತಿ.

ಮೂರ್ಛೆರೋಗ ಚಿಕಿತ್ಸೆಯಲ್ಲಿ ಮಹತ್ತರ ಆವಿಷ್ಕಾರಗಳು

ಮೂರ್ಛೆರೋಗ ಚಿಕಿತ್ಸೆಯಲ್ಲಿ ಮಹತ್ತರ ಆವಿಷ್ಕಾರಗಳು

ಭಾರತದಲ್ಲಿ ಅಂದಾಜು ಒಂದು ಕೋಟಿಗೂ ಹೆಚ್ಚು ಮೀರಿರುವ ಮೂರ್ಛೆ ರೋಗದ ಪ್ರಕರಣ ಗಳಿದ್ದು ಇವುಗಳು ಜಾಗತಿಕ ಶೇ.20ರಷ್ಟು ಪಾಲು ಹೊಂದಿರುವುದು ಬಹಳ ಆತಂಕಕಾರಿ. ಈ ಕಾರಣದಿಂದ ವರ್ಷ ಕಳೆದಂತೆ ಈ ಪ್ರಕರಣಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ, ಆದರೆ ಮೂರ್ಛೆ ರೋಗದ ಕುರಿತಾದ ತಪ್ಪು ತಿಳವಳಿಕೆಗಳು ಇದರ ನಿರ್ವಹಣೆಗೆ ಇರುವ ಪ್ರಮುಖ ಅಡ್ಡಿಯಾಗಿವೆ.

ವೇಗನ್ ಆಹಾರ ಕ್ರಮ ಆರೋಗ್ಯಕ್ಕೆ ಒಳಿತೇ? ವೈದ್ಯರ ಸಲಹೆ ಏನು?

ವೇಗನ್ ಆಹಾರ ಕ್ರಮ ಎಂದರೇನು? ಆರೋಗ್ಯಕ್ಕೆ ಲಾಭ ಇದೆಯೇ?

Vegan Diet: ವೇಗನ್ ಡಯೆಟ್ ಇತ್ತೀಚೆಗೆ ಭಾರೀ ಟ್ರೆಂಡಿಂಗ್ ನಲ್ಲಿದೆ. ಸಂಪೂರ್ಣ ಸಸ್ಯ ಆಧಾರಿತ ಆಹಾರ ಪದ್ಧತಿ ಇದಾಗಿದ್ದು ಮಾಂಸ, ಮೀನು, ಮೊಟ್ಟೆ, ಇತ್ಯಾದಿ ಯಾವುದೇ ಮಾಂಸಾಹಾರಿ ಉತ್ಪನ್ನ ಗಳನ್ನು ಒಳಗೊಂಡಿರುವುದಿಲ್ಲ. ಅದೇ ರೀತಿ ಈ ಆಹಾರಕ್ರಮದಲ್ಲಿ ಡೈರಿ ಉತ್ಪನ್ನಗಳು ಮತ್ತು ಮೊಟ್ಟೆ ಗಳನ್ನು ಒಳಗೊಂಡಂತೆ ಪ್ರಾಣಿಗಳಿಂದ ಪಡೆದ ಯಾವುದೇ ಆಹಾರವನ್ನು ಬಳಕೆ ಮಾಡುವುದಿಲ್ಲ. ಹಾಗಿದ್ರೆ ಈ ವೇಗನ್ ಆಹಾರ ಕ್ರಮ ಎಂದರೇನು? ಇದರಿಂದ ಏನು ಆರೋಗ್ಯ ಲಾಭ ಇದೆ ಎಂದು ಡಯೇಟಿಷಿಯನ್ ಅನಿತಾ ಅವರು ಮಾಹಿತಿ ನೀಡಿದ್ದಾರೆ.

ಥೈರಾಯ್ಡ್‌ನ ಮೌನ ಅಸ್ವಸ್ಥತೆಗಳು ಭಾರತೀಯ ಮಹಿಳೆಯರಲ್ಲಿ ಫಲವಂತಿಕೆಯ ಹಾದಿ ತಪ್ಪಿಸುತ್ತಿವೆ, ವೈದ್ಯರ ಎಚ್ಚರಿಕೆ

ಥೈರಾಯ್ಡ್‌ನ ಅಸ್ವಸ್ಥತೆಗಳು ಮಹಿಳೆಯರಲ್ಲಿ ಫಲವಂತಿಕೆಯ ಹಾದಿ ತಪ್ಪಿಸುತ್ತಿವೆ

ಅಂಡೋತ್ಪತ್ತಿ, ಋತು ಚಕ್ರಗಳು, ಚಯಾಪಚಯ ಮತ್ತು ಭ್ರೂಣದ ಆರಂಭಿಕ ಬೆಳವಣಿಗೆಯನ್ನು ನಿಯಂತ್ರಿಸುವಲ್ಲಿ ಥೈರಾಯ್ಡ್ ಗ್ರಂಥಿಯು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಆದರೂ, ಮಹಿಳೆ ಯರು ಗರ್ಭ ಧರಿಸಲು ಕಷ್ಟ ಅನುಭವಿಸುವ ತನಕ ಮತ್ತು ಆಗಾಗ ಗರ್ಭಪಾತಗಳಾಗುವ ತನಕ ಥೈರಾಯ್ಡ್‌ನ ಸೂಕ್ಷ್ಮ ಅಸಮತೋಲನಗಳು ಬಹುತೇಕ ಪತ್ತೆಯೇ ಆಗುವುದಿಲ್ಲ

Health Tips: ನಾವು ತಿನ್ನುವ ಹಣ್ಣುಗಳಿಂದ ಕ್ಯಾನ್ಸರ್ ಅಪಾಯ ತಡೆಯಬಹುದೇ? ವೈದ್ಯರು ಹೇಳಿದ್ದೇನು?

ಹಣ್ಣಿನ ಸೇವನೆಯಿಂದ ಕ್ಯಾನ್ಸರ್ ತಡೆಯಬಹುದೇ?

ಕ್ಯಾನ್ಸರ್‌ ಎಂದಾಗ ಹೆಚ್ಚಿನವರು ಭಯಭೀತರಾಗುವುದೇ ಜಾಸ್ತಿ. ಇದರಲ್ಲಿ ಹಲವು ಪ್ರಕಾರಗಳಿದ್ದು ಅವು ಯಾವುದೇ ಲಕ್ಷಣಗಳನ್ನು ತೋರದೆ ಹಲವು ವಿಧಗಳಲ್ಲಿ ಮತ್ತು ಹಲವು ಕಾರಣದಿಂದ ಬರಬಹುದು. ಹಾಗಾಗಿ ಇದನ್ನು ಮೊದಲ ಹಂತದಲ್ಲೇ ಗುಣ ಪಡಿಸಲು ವೈದ್ಯಕೀಯ ನೆರವು ಪಡೆಯಬೇಕು‌.‌ ಅದ ರಲ್ಲೂ ಇದನ್ನು ಹಣ್ಣು ಅಥವಾ ತರಕಾರಿಗಳ‌ ಸೇವನೆಯಿಂದ ಗಣಪಡಿಸಬಹುದು ಎಂದು ಕೆಲವು ತಜ್ಞರು ಸಲಹೆ ನೀಡುತ್ತಾರೆ‌. ಇದು ನಿಜವೋ? ಈ ಕ್ಯಾನ್ಸರ್ ಮತ್ತು ಹಣ್ಣು ತರಕಾರಿಗಳ ಸೇವನೆಗೆ ಏನು ಸಂಬಂಧ ಇದೆ? ಹಣ್ಣುಗಳ ಸೇವನೆಯಿಂದ ಕ್ಯಾನ್ಸರ್ ಹೇಗೆ ಗುಣ ಪಡಿಸಬಹುದು ಎಂದು ಪ್ರೋ.ಸುತ್ತೂರು ಮಾಲಿನಿ ತಿಳಿಸಿಕೊಟ್ಟಿದ್ದಾರೆ.

ಉಪವಾಸ ಮಾಡಿದ್ರೆ ಕ್ಯಾನ್ಸರ್ ಬರಲ್ವಾ? ವೈದ್ಯರ ಸಲಹೆ ಏನು?

ಉಪವಾಸದಿಂದ ಕ್ಯಾನ್ಸರ್ ತಡೆಯಬಹುದೇ?

Health Tips: ವಾರಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ಉಪವಾಸ ಮಾಡಿದರೆ ನಮ್ಮ ಆರೋಗ್ಯದಲ್ಲಿ ಯಾವೆಲ್ಲ ಬದಲಾವಣೆಯನ್ನು ಕಾಣಬಹುದು? ಭವಿಷ್ಯದಲ್ಲಿ ಯಾವೆಲ್ಲಾ ಆರೋಗ್ಯ ಸಮಸ್ಯೆ ಗಳಿಂದ ದೂರ ಉಳಿಯಬಹುದು? ಕ್ಯಾನ್ಸರ್ ನಿಂದ ದೂರ ಇರಬಹುದಾ? ಉಪವಾಸದಿಂದ ದೇಹದ ಶಕ್ತಿ ಹೇಗೆ ಹೆಚ್ಚುವುದು? ಎನ್ನುವಂತಹ ವಿಚಾರಗಳಿಗೆ ಸೂಕ್ತ ಮಾಹಿತಿಯನ್ನು ಪ್ರೊ. ಸುತ್ತೂರು ಮಾಲಿನಿ ತಿಳಿಸಿಕೊಟ್ಟಿದ್ದಾರೆ.

ಸರ್ಜಿಕಲ್​ ಆಂಕೊಲಾಜಿ: ಹೇಗೆ ಕ್ಯಾನ್ಸರ್ ರೋಗಿಗಳ ಜೀವ ಉಳಿಸುತ್ತದೆ ಮತ್ತು ಜೀವನದ ಗುಣಮಟ್ಟ  ಹೆಚ್ಚಿಸುತ್ತದೆ?

ಸರ್ಜಿಕಲ್​ ಆಂಕೊಲಾಜಿ: ಹೇಗೆ ಕ್ಯಾನ್ಸರ್ ರೋಗಿಗಳ ಜೀವ ಉಳಿಸುತ್ತದೆ ?

ಕ್ಯಾನ್ಸರ್ ಚಿಕಿತ್ಸೆಯಲ್ಲಿ ಶಸ್ತ್ರಚಿಕಿತ್ಸೆ (ಸರ್ಜರಿ) ಒಂದು ಪ್ರಮುಖ ಭಾಗವಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿನ ನಿರಂತರ ಪ್ರಗತಿಯೊಂದಿಗೆ ಇದರ ಪಾತ್ರವು ಹೆಚ್ಚು ಮಹತ್ವದ್ದಾಗಿದೆ. ಗೆಡ್ಡೆಗಳು ಮತ್ತು ಬಾಧಿತ ಅಂಗಾಂಶಗಳನ್ನು ತೆಗೆದು ಹಾಕುವ ಮೂಲಕ, ಶಸ್ತ್ರಚಿಕಿತ್ಸಕರು ಕಾಯಿಲೆಯ ತೀವ್ರತೆಯನ್ನು ಗಣನೀಯವಾಗಿ ಕಡಿಮೆ ಮಾಡಬಹುದು.

ಗರ್ಭಾಶಯದ ಅಸಹಜ ರಕ್ತಸ್ರಾವ ಕುರಿತು ಉಚಿತ ಆಯುರ್ವೇದ ಸಮಾಲೋಚನೆ ಮತ್ತು ಚಿಕಿತ್ಸಾ ಶಿಬಿರ

ಉಚಿತ ಆಯುರ್ವೇದ ಸಮಾಲೋಚನೆ ಮತ್ತು ಚಿಕಿತ್ಸಾ ಶಿಬಿರ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಉಡುಪಿ ಇವರ ವತಿಯಿಂದ ಗರ್ಭಾಶಯದ ಆಸಹಜ ರಕ್ತಸ್ರಾವ (Abnormal Uterine Bleeding – AUB) ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯರಿಗಾಗಿ ಉಚಿತ ಆಯುರ್ವೇದ ಸಮಾಲೋಚನೆ ಮತ್ತು ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿದೆ.

ವರ್ಕೌಟ್ ನಂತರ ಈ ಆಹಾರಗಳನ್ನು ಸೇವಿಸಿದ್ರೆ ಹೊಳೆಯುವ ಚರ್ಮ ಮತ್ತು ಆರೋಗ್ಯಕರ ಕೂದಲು ನಿಮ್ಮದಾಗಲಿದೆ!

ವರ್ಕೌಟ್ ನಂತರ ಈ ಆಹಾರಗಳನ್ನು ಸೇವಿಸಿದ್ರೆ ಈ ಆರೋಗ್ಯ ಲಾಭ ಇದೆ!

Health Tips: ಇತ್ತೀಚೆಗೆ ಹೆಚ್ಚಿನವರು ದೇಹದ ತೂಕ ಇಳಿಸಿಕೊಳ್ಳಲು ವರ್ಕೌಟ್, ಡಯೆಟ್ ಅಂತ ನಾನಾ ಸಾಹಸ ಮಾಡುತ್ತಲೆ ಇರುತ್ತಾರೆ. ದೈಹಿಕ ಚಟುವಟಿಕೆ,ವ್ಯಾಯಾಮ ದೇಹಕ್ಕೆ ಅಗತ್ಯವಾಗಿದ್ದರೂ ಕೇವಲ ಸ್ನಾಯುಗಳ ಚೇತರಿಕೆ ಮಾತ್ರವಲ್ಲದೆ, ಚರ್ಮ ಮತ್ತು ಕೂದಲಿನ ಆರೋಗ್ಯವನ್ನು ಕಾಪಾಡಿ ಕೊಳ್ಳಬೇಕಾ ಗುತ್ತದೆ. ಹೀಗಾಗಿ ಖ್ಯಾತ ಪೌಷ್ಟಿಕ ತಜ್ಞರೊಬ್ಬರು ಪೋಷಕಾಂಶ ಭರಿತ ಆಹಾರ ವಿಧಾನವೊಂದನ್ನು ಹಂಚಿಕೊಂಡಿದ್ದು ಈ ಬಗ್ಗೆ ಮಾಹಿತಿ ಇಲ್ಲಿದೆ‌.

Health Tips: ನಿತ್ಯದ ಆರೋಗ್ಯಕ್ಕೆ ಈ ತರಕಾರಿಗಳನ್ನು ಸೇವಿಸಲು ಮರೆಯಬೇಡಿ!

ದೇಹದ ರಕ್ಷಣೆಗೆ ಈ ಐದು ತರಕಾರಿಗಳನ್ನು ಸೇವಿಸಲು ಮರೆಯದಿರಿ!

ಮುಖ್ಯವಾಗಿ ಆಹಾರ ಅಂತ ಬಂದಾಗ ತರಕಾರಿಯೂ ಮೊದಲ ಸ್ಥಾನದಲ್ಲಿದೆ.ವಿವಿಧ ರೀತಿಯ ತರಕಾರಿ ಗಳಲ್ಲಿ ಹಲವು ರೀತಿಯ ಪೋಷಕಾಂಶಗಳಿದ್ದು ದೇಹಕ್ಕೆ ಬೇಕಾದ ಶಕ್ತಿಯನ್ನು ಇವು ಒದಗಿ ಸುತ್ತದೆ. ಇತ್ತೀಚೆಗೆ ಪೌಷ್ಟಿಕತಜ್ಞರೊಬ್ಬರು ಪ್ರತಿದಿನವೂ ಸೇವಿಸಲೇಬೇಕಾದ ಐದು ಪ್ರಮುಖ ತರಕಾರಿಗಳ ಬಗ್ಗೆ ಮಹತ್ವದ ಮಾಹಿತಿಯನ್ನು ನೀಡಿದ್ದಾರೆ.

Health Tips: ಅಬ್ಬಬ್ಬಾ! ಕೇವಲ ಎರಡೇ ವಾರ ಸಕ್ಕರೆಯಿಂದ ಅಂತರ ಕಾಯ್ದುಕೊಂಡರೆ ಆರೋಗ್ಯಕ್ಕೆ ಏನೆಲ್ಲ ಪ್ರಯೋಜನ ಸಿಗುತ್ತೆ ಗೊತ್ತಾ?

ಅಬ್ಬಬ್ಬಾ! ಎರಡು ವಾರ ಸಕ್ಕರೆಗೆ ನೋ ಅಂದ್ರೆ ಇಷ್ಟು ಲಾಭನಾ?

Sugar Break: AIIMS‌ನಲ್ಲಿ ತರಬೇತಿ ಪಡೆದ ಗ್ಯಾಸ್ಟ್ರೋಎಂಟೆರಾಲಜಿಸ್ಟ್ ಡಾ. ಸೌರಭ್ ಸೇಠಿ ಇನ್‌ಸ್ಟಾಗ್ರಾಂನಲ್ಲಿ ವಿಡಿಯೊವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ 2 ವಾರ ಸಕ್ಕರೆಯಿಂದ ಅಂತರ ಕಾಯ್ದುಕೊಂಡರೆ ದೇಹಕ್ಕೆ ಏನೆಲ್ಲಾ ಲಾಭ ಸಿಗುತ್ತದೆ ಎಂಬುವುದನ್ನು ವಿವರಿಸಿದ್ದಾರೆ. ಆ ಬಗ್ಗೆ ಮಾಹಿತಿ ಇಲ್ಲಿದೆ.

ಮೊಟ್ಟೆ ಸೇವನೆ ಆರೋಗ್ಯಕ್ಕೆ ಉತ್ತಮವೇ? ಬಳಕೆ ಬಗ್ಗೆ ವೈದ್ಯರ ಸಲಹೆ ಏನು?

ಮೊಟ್ಟೆ ಸೇವನೆ ದೇಹಕ್ಕೆ ಸುರಕ್ಷಿತವೇ? ವೈದ್ಯರು ನೀಡಿದ ಸಲಹೆ ಏನು?

Health Tips: ಮೊಟ್ಟೆಯನ್ನು ಕೆಲವರು ಸೂಪರ್‌ಫುಡ್ ಎಂದು ಹೇಳಿದರೆ ಮತ್ತೆ ಹಲವರು ಅವುಗಳು ಕೊಲೆಸ್ಟ್ರಾಲ್ ಅಥವಾ ತೂಕ ಹೆಚ್ಚಳಕ್ಕೆ ಕಾರಣವಾಗುತ್ತವೆ ಎಂದು ದೂಷಿಸುತ್ತಾರೆ‌. ಹಾಗಾಗಿ ಪ್ರತಿದಿನ ಇವುಗಳ ಸೇವನೆ ಒಳ್ಳೆಯದೇ? ಅವು ಯಕೃತ್ತಿಗೆ ಹಾನಿ ಮಾಡುತ್ತವೆಯೇ? ಅಥವಾ ಅವು ತೂಕ ನಷ್ಟಕ್ಕೆ ಸಹಾಯ ಮಾಡಬಹುದೇ? ಎನ್ನುವ ಸಂದೇಹ ಹೆಚ್ಚಿನವರಿಗೆ ಇದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

ವೈರಲ್ ಉಸಿರಾಟದ ಸೋಂಕು: ಆರಂಭಿಕ ಹಂತದ ವೈದ್ಯಕೀಯ ಚಿಕಿತ್ಸೆ ಪಡೆಯಲು ಕನ್ನಿಂಗ್‌ಹ್ಯಾಮ್ ರಸ್ತೆಯ ಫೋರ್ಟಿಸ್ ಆಸ್ಪತ್ರೆ ವೈದ್ಯರ ಸಲಹೆ

ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ವೈರಲ್ ಉಸಿರಾಟದ ಸೋಂಕು

ವೈರಲ್ ಉಸಿರಾಟದ ಸೋಂಕುಗಳು ಚಳಿಗಾಲದಲ್ಲಿ ಸಾಮಾನ್ಯವಾಗಿದ್ದರೂ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ವರ್ಷ ಪ್ರಕರಣಗಳ ಸಂಖ್ಯೆ ಬಹಳಷ್ಟು ಹೆಚ್ಚಾಗಿದೆ ಎಂದು ಕನ್ನಿಂಗ್‌ಹ್ಯಾಮ್ ರಸ್ತೆಯ ಫೋರ್ಟಿಸ್ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ವಿಶೇಷವಾಗಿ ಮಕ್ಕಳು, ಹಿರಿಯ ನಾಗರಿಕರು ಮತ್ತು ಮೊದಲೇ ಆರೋಗ್ಯ ಸಮಸ್ಯೆ ಇರುವವರಲ್ಲಿ ಈ ರೋಗ ಲಕ್ಷಣಗಳು ದೀರ್ಘಕಾಲದವರೆಗೆ ಕಂಡುಬರುತ್ತಿವೆ.

Bone Marrow Transplant Unit: ಸ್ಪರ್ಶ್‌ ಆಸ್ಪತ್ರೆ ಹೆಣ್ಣೂರು ರಸ್ತೆ ಶಾಖೆಯಲ್ಲಿ ಅತ್ಯಾಧುನಿಕ ಅಸ್ಥಿಮಜ್ಜೆ ಕಸಿ ಘಟಕ ಆರಂಭ

ಅತ್ಯಾಧುನಿಕ ಅಸ್ಥಿಮಜ್ಜೆ ಕಸಿ ಘಟಕ ಆರಂಭ

ಅತ್ಯಾಧುನಿಕ ಆಸ್ಪತ್ರೆಗಳಲ್ಲಿ ಒಂದಾಗಿರುವ ಹೆಣ್ಣೂರು ಸ್ಪರ್ಶ್‌ ಆಸ್ಪತ್ರೆಯು ಈ ಮೂಲಕ ಕನಾಟಕದಲ್ಲಿ ಹೆಚ್ಚುತ್ತಿರುವ ಗಂಭೀರ ರಕ್ತ ಕ್ಯಾನ್ಸರ್‌ಗಳ ಚಿಕಿತ್ಸೆಗೆ ಸುಧಾರಿತ ತಂತ್ರಜ್ಞಾನ ಹಾಗೂ ತಜ್ಞ ವೈದ್ಯರು, ವೈದ್ಯಕೀಯ ಸವಲತ್ತುಗಳೊಂದಿಗೆ ಸಜ್ಜಾಗಿದ್ದು ಕೇವಲ ರಾಜ್ಯ ಮಾತ್ರ ವಲ್ಲ ದಕ್ಷಿಣ ಭಾರತದ ಹಾಗೂ ವಿದೇಶಗಳ ರೋಗಿಗಳಿಗೂ ಕ್ಯಾನ್ಸರ್‌ನಿಂದ ಗುಣಮುಖ ರಾಗುವ ಭರವಸೆ ಮೂಡಿಸಿದೆ

Loading...