ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಆರೋಗ್ಯ

Health Tips: ಬ್ರೇಕ್‌ಫಾಸ್ಟ್‌ ಸ್ಕಿಪ್‌ ಮಾಡ್ತಿದ್ದೀರಾ? ಈ ಆರೋಗ್ಯ ಸಮಸ್ಯೆ ಕಾಡಬಹುದು ಎಚ್ಚರ!

ಬೆಳಗಿನ ಉಪಾಹಾರ ತ್ಯಜಿಸಿದರೆ ಈ ಸಮಸ್ಯೆ ನಿಮ್ಮನ್ನು ಕಾಡಬಹುದು

Skipping Breakfast: ನೀವು ಸೇವಿಸುವ ಆಹಾರ ನಿಮ್ಮ ದೈಹಿಕ ಆರೋಗ್ಯ ಮಾತ್ರವಲ್ಲದೆ ಮನಸ್ಥಿತಿ ಮೇಲೂ ಪರಿಣಾಮ ಬೀರುತ್ತದೆ. ಸಮಯಕ್ಕೆ ಸರಿಯಾಗಿ ಆಹಾರ ಸೇವಿಸದಿರುವುದು ನಿಮ್ಮ ಕೆಲಸದ ಮೇಲೆ ಪರಿಣಾಮ ಬೀರಲಿದ್ದು, ಒತ್ತಡಕ್ಕೂ ಕಾರಣವಾಗುತ್ತದೆ‌. ನಮ್ಮ ಮೆದುಳು ದಿನಕ್ಕೆ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ಹೀಗಾಗಿ ಕೇವಲ ಒಂದು ಗ್ಲಾಸ್ ಟಿ ಅಥವಾ ಬಿಸ್ಕೆಟ್‌ ನಮ್ಮ ಮನಸ್ಥಿತಿಯನ್ನು ಕುಗ್ಗಿಸಬಹುದು.

Edible Gold: ಸಿಹಿ ಖಾದ್ಯಗಳಲ್ಲಿ ಚಿನ್ನದ ಜರಿ ಬಳಕೆ; ಇದರಿಂದ ಆರೋಗ್ಯಕ್ಕೆ ದೊರೆಯುವ ಲಾಭವೇನು?

ಖಾದ್ಯಗಳಲ್ಲಿ ಚಿನ್ನದ ಜರಿ ಬಳಕೆ: ಇದರಲ್ಲಿದೆ ಹಲವು ಉತ್ತಮ ಗುಣ

Health Tips: ಕೆಲವು ಸಿಹಿ ಖಾದ್ಯಗಳ ಮೇಲೆ ಬೆಳ್ಳಿಯ ಜರಿಯನ್ನು ಅಂಟಿಸುವುದು ಮಾಮೂಲಿ. ಅಂಥದ್ದನ್ನೇ ನಿಜವಾದ ಚಿನ್ನದಲ್ಲೂ ಮಾಡಿ ಅಂಟಿಸಬಹುದು, ಅದೇ ತಿನ್ನುವ ಚಿನ್ನ. ಅದನ್ನು ಮಾಡುವುದಕ್ಕೆ ಕ್ರಮವೂ ಇದೆ. ಶುದ್ಧ ಚಿನ್ನವನ್ನು 2,000 ಡಿಗ್ರಿ ಫ್ಯಾ.ಗಿಂತಲೂ ಹೆಚ್ಚಿನ ಶಾಖದಲ್ಲಿ ಕರಗಿಸಿ, ಕುದಿಸಿ, ಬಾರ್‌ ರೀತಿಯಲ್ಲಿ ಮಾಡಲಾಗುತ್ತದೆ. ಈ ಬಾರ್‌ ನಿಗದಿತ ಗಾತ್ರಕ್ಕೆ ತಲುಪಿದ ಮೇಲೆ, ಅದನ್ನು ತಟ್ಟಿ, ಕುಟ್ಟಿ 0.0001 ಮಿಲಿ ಮೀ. ಗಾತ್ರಕ್ಕೆ, ಅಂದರೆ ತೆಳ್ಳಾತಿತೆಳ್ಳನೆಯ ಹಾಳೆಯಂತೆ ಮಾಡ ಲಾಗುತ್ತದೆ. ಇದನ್ನೇ ಅಪರೂಪದ ಖಾದ್ಯಗಳಲ್ಲಿ ತಿನ್ನುವ ಚಿನ್ನವಾಗಿ ಬಳಸಲಾಗುತ್ತದೆ. ಚಿನ್ನ ತಿನ್ನುವುದೇನೋ ಸರಿ, ಆದರೆ ಏನಿದರ ಲಾಭಗಳು?

ಮಲೇರಿಯಾ ಅಥವಾ ಡೆಂಗೆ: ಯಾವುದೆಂದು ಹೇಗೆ ತಿಳಿಯಬೇಕು? ತಡೆಗಟ್ಟುವುದು ಹೇಗೆ?

ಮಲೇರಿಯಾ ಅಥವಾ ಡೆಂಗ್ಯು; ಪತ್ತೆ ಹಚ್ಚುವುದು ಹೇಗೆ?

Health Tips: ಬೇಸಗೆ ರಜೆಯೆಂಬ ನೆವದಲ್ಲಿ ಪ್ರಯಾಣ ಮಾಡುವಾಗ ಸೊಳ್ಳೆಗಳ ಕಾಟವಿರುವ ಊರು ಎದುರಾದರೂ ಆತಂಕವಾಗುತ್ತದೆ. ಪ್ರಯಾಣಿಸುವಾಗ ಸಾಂಕ್ರಾಮಿಕಗಳ ಬಗ್ಗೆಯೂ ಗಮನ ಇರಿಸುವುದು ಅನಿವಾರ್ಯ. ಹಾಗೆಂದು ಸೊಳ್ಳೆಯಿಂದ ಬರುವಂಥ ರೋಗಗಳೆಲ್ಲ ಒಂದೇ ರೀತಿಯವಲ್ಲ. ಪ್ರತಿ ಯೊಂದು ರೋಗಕ್ಕೂ ಅದರದ್ದೇ ಆದ ಭಿನ್ನ ಸ್ವರೂಪವಿದೆ, ಲಕ್ಷಣಗಳಿವೆ, ಹಾಗಾಗಿ ಚಿಕಿತ್ಸೆಯೂ ಬೇರೆ ಆಗಬೇಕು. ಹಾಗಾಗಿ ಈ ಬಗ್ಗೆ ಸರಿಯಾದ ಮಾಹಿತಿಯ ಕೊರತೆಯಿದ್ದರೆ, ಸಮಸ್ಯೆ ಬಿಗಡಾಯಿಸುತ್ತದೆ. ಈ ನಿಟ್ಟಿನಲ್ಲಿ, ಸೊಳ್ಳೆಗಳಿಂದಲೇ ಪ್ರಸರಣವಾಗುವ ಮಲೇರಿಯಾ ಮತ್ತು ಡೆಂಗೆ ರೋಗಗಳಿಗೆ ವ್ಯತ್ಯಾಸವೇನು? ನಿಮ್ಮ ಗೊಂದಲಗಳಿಗೆ ಇಲ್ಲಿದೆ ಉತ್ತರ.

ತಮಟೆ ವಾದ್ಯಗಳಿಗೆ ಜನ ಹುಚ್ಚೆದ್ದು ಕುಣಿಯೋದ್ಯಾಕೆ ಗೊತ್ತಾ? ಇದರ ಹಿಂದಿದೆ ವೈಜ್ಞಾನಿಕ ಕಾರಣ

ತಮಟೆ ವಾದ್ಯಗಳಿಗೆ ಜನ ಆಕರ್ಷಿತರಾಗೋದು ಯಾಕೆ?

Music Instruments: ಸಂಗೀತವು ಮನಸ್ಸಿಗೆ ವಿಶ್ರಾಂತಿ, ಶಾಂತಿ ಮತ್ತು ಖುಷಿಯನ್ನು ನೀಡುವ ಅದ್ಭುತ ಕಲೆ. ಪದಗಳ ಅಗತ್ಯವಿಲ್ಲದೆ ಭಾವನೆಗಳನ್ನು ವ್ಯಕ್ತಪಡಿಸುವ ಶಕ್ತಿ ಇದಕ್ಕಿದೆ. ಪ್ರತಿಯೊಂದು ಸ್ವರವೂ ಮನದಾಳವನ್ನು ಸ್ಪರ್ಶಿಸಿ, ಒತ್ತಡವನ್ನು ಕಡಿಮೆ ಮಾಡಿ, ಮನಸ್ಸನ್ನು ಉಲ್ಲಾಸಗೊಳಿಸುತ್ತದೆ. ವಾದ್ಯಗಳ ನಾದ ಹೇಗೆ ವೈಜ್ಞಾನಿಕವಾಗಿ ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತವೆ? ಎಂಬುದರ ವಿಚಾರಗಳ ಕುರಿತು ಪ್ರೊ. ಮಾಲಿನಿ ವಿವರಿಸಿದ್ದಾರೆ.

ಕಣ್ಣಿನ ಕೆಳಗೆ ಕಪ್ಪಾಗಿದೆಯೇ? ಇಲ್ಲಿವೆ ಮನೆಮದ್ದುಗಳು

ಕಣ್ಣಿನ ಡಾರ್ಕ್ ಸರ್ಕಲ್ ಗೆ ಇಲ್ಲಿದೆ ಮನೆಮದ್ದು!

Dark Circles Home Remedy: ಕಣ್ಣಿನ ಕೆಳಭಾಗದಲ್ಲಿ ಕಾಣುವ ಗಾಢಬಣ್ಣದ ವರ್ತುಲಗಳು ಇಡೀ ಮುಖಕ್ಕೆ ವಯಸ್ಸಾದ, ಸುಸ್ತಾದ ಮತ್ತು ನಿದ್ದೆಗೆಟ್ಟ ಕಳೆಯನ್ನು ನೀಡುವುದಂತೂ ಹೌದು. ಅದೇನು ಗಂಭೀರವಾದ ಆರೋಗ್ಯ ಸಮಸ್ಯೆಯ ಲಕ್ಷಣ ಅಲ್ಲದಿದ್ದರೂ, ಇದನ್ನು ಸರಿ ಮಾಡುವುದು ಹೇಗೆಂಬ ಪ್ರಶ್ನೆ ಮೂಡುತ್ತದೆ.

ಎಐ ಮೂಲಕ ಡಯಾಬಿಟಿಸ್ ನಿಯಂತ್ರಣ: ಇದು ಮಧುಮೇಹ ತಜ್ಞರ ಮಹ್ವತದ ಸಲಹೆ Video

ಎಐ ಸಹಾಯದಿಂದ ಮಧುಮೇಹ ನಿಯಂತ್ರಣ ಸಾಧ್ಯ: ತಜ್ಞರ ಸಲಹೆ

ವೇಗದ ಜೀವನಶೈಲಿ, ಅಸಮರ್ಪಕ ಆಹಾರ ಪದ್ಧತಿ ಮತ್ತು ವ್ಯಾಯಾಮದ ಕೊರತೆಯಿಂದ ಮಧುಮೇಹ ಹೆಚ್ಚುತ್ತಿದೆ. ಆದರೆ ಸರಿಯಾದ ಆಹಾರ ಮತ್ತು ತಂತ್ರಜ್ಞಾನ ಬಳಕೆ ಮೂಲಕ ಇದನ್ನು ನಿಯಂತ್ರಿಸಬಹುದು. ಎಐ ಸಹಾಯದಿಂದ ರಕ್ತದ ಸಕ್ಕರೆ ಮಟ್ಟವನ್ನು ಗಮನಿಸಿ ಉತ್ತಮ ಆರೋಗ್ಯ ನಿರ್ವಹಣೆ ಸಾಧ್ಯ ಎಂದು ಮಧುಮೇಹ ತಜ್ಞ ಡಾ. ಸುಮನ್ ತಿಳಿಸಿದ್ದಾರೆ.

ಅತಿಯಾಗಿ ಮೌತ್‌ ವಾಷ್‌ ಬಳಸುತ್ತಿದ್ದೀರಾ? ಈ ವಿಚಾರ ನಿಮ್ಮ ಗಮನದಲ್ಲಿರಲಿ

ಮೌತ್‌ ವಾಷ್‌ ಬಳಕೆಯ ಇತಿ-ಮಿತಿ ಗೊತ್ತೆ?

Oral Health of mouth: ಯಾವುದೇ ಮನೆಯ ಬಾತ್‌ರೂಂಗಳಲ್ಲಿ ಮೌತ್ ವಾಷ್‌ ಖಾಯಂ ಸ್ಥಾನವನ್ನು ಗಿಟ್ಟಿಸಿಕೊಂಡಿದೆ. ಬಣ್ಣದ ಬಾಟಲಿಗಳ ಮೇಲಿನ ಮೋಹವನ್ನೋ ಅಥವಾ ಜಾಹೀರಾತುಗಳ ಭರವಸೆಯನ್ನೋ ಒಂದೆಡೆ ಇಟ್ಟು, ಮೌತ್‌ವಾಷ್‌ ಬಳಕೆ ಇತಿ-ಮಿತಿಗಳೇನು ಎಂಬುದನ್ನು ಅರ್ಥ ಮಾಡಿಕೊಳ್ಳೋಣ.

ಮಾನಸಿಕ ರೋಗಿಗಳ ಸಮಗ್ರ ಆರೈಕೆ ಕಾರ್ಯಕ್ರಮ ಆರಂಭಿಸಿದ ಮಾರ್ಗ ಮೈಂಡ್ ಕೇರ್

ಸಮಗ್ರ ಆರೈಕೆ ಕಾರ್ಯಕ್ರಮ ಆರಂಭಿಸಿದ ಮಾರ್ಗ ಮೈಂಡ್ ಕೇರ್

ಮಾನಸಿಕ ಆರೋಗ್ಯ ಸೇವೆಗಳನ್ನು ಒದಗಿಸುವ ಮಾರ್ಗ ಮೈಂಡ್‌ ಕೇರ್‌ (Maarga Mind Care), ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಮಗ್ರ ಮಾನಸಿಕ ಕಾಳಜಿ ಕಾರ್ಯಕ್ರಮ (Integrative Day Care Program) ಆರಂಭಿಸಿದೆ. ಇದೊಂದು ಆಸ್ಪತ್ರೆಯಲ್ಲಿ ದಾಖಲೆಯಾಗದೇ ಹೊರರೋಗಿ ಯಾಗಿ ಚಿಕಿತ್ಸೆ ಪಡೆಯುವ / ನೀಡುವ ಮಾದರಿಯಾಗಿದೆ.

SMSIMSR: ಮುದ್ದೇನಹಳ್ಳಿಯ ಉಚಿತ ವೈದ್ಯಕೀಯ ಕಾಲೇಜಿಗೆ ರಾಷ್ಟ್ರೀಯ ಗುಣಮಟ್ಟದ ಗರಿ

ಮುದ್ದೇನಹಳ್ಳಿಯ ಉಚಿತ ವೈದ್ಯಕೀಯ ಕಾಲೇಜಿಗೆ ರಾಷ್ಟ್ರೀಯ ಗುಣಮಟ್ಟದ ಗರಿ

SMSIMSR: ಮುದ್ದೇನಹಳ್ಳಿಯ ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ (SMSIMSR)ಗೆ ರಾಷ್ಟ್ರೀಯ ಆಸ್ಪತ್ರೆಗಳು ಮತ್ತು ಆರೋಗ್ಯ ಸೇವಾ ಮಾನ್ಯತಾ ಮಂಡಳಿ (NABH) ಆರಂಭಿಕ ಹಂತದ ಮಾನ್ಯತೆಯನ್ನು ನೀಡಿದೆ. ಇದರೊಂದಿಗೆ ಗ್ರಾಮೀಣ ಆರೋಗ್ಯ ಸೇವೆಗೆ ಹೊಸ ಬಲ ಸಿಕ್ಕಿದೆ.

ಯುವ ಜನರೇ ಎಚ್ಚರ: ಜಿಮ್‌ನಿಂದ ಫಿಟ್‌ನೆಸ್ ಮಾತ್ರವಲ್ಲ, ನಿಮ್ಮ ಅಂದವೂ ಹಾಳಾಗಬಹುದು!

ಜಿಮ್‌ನಿಂದ ಫಿಟ್‌ನೆಸ್ ಮಾತ್ರವಲ್ಲ, ನಿಮ್ಮ ಲುಕ್ ಕೂಡ ಹಾಳಾಗುತ್ತೆ!

Health Tips: ನೋಡಲು ಫಿಟ್‌ ಆಗಿ ಕಾಣಬೇಕು ಎನ್ನುವುದು ಎಲ್ಲರ ಕನಸು. ಈ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವರು ಬಹುಬೇಗ ದೇಹದ ತೂಕ ಇಳಿಸುವುದು ಹಾಗೂ ತೂಕ ಏರಿಸಿಕೊಳ್ಳುವುದಕ್ಕೆ ಮುಂದಾಗುತ್ತಾರೆ. ಹೀಗಾದಾಗ ಅವರು ಹೇಗೆ ಆರೋಗ್ಯ ಸಮಸ್ಯೆ ಎದುರಿಸುತ್ತಾರೆ? ಯಾಕೆ ವಯಸ್ಸಾದವರಂತೆ ಕಾಣುತ್ತಾರೆ? ಎನ್ನುವುದರ ಕುರಿತು ಸಾಕಷ್ಟು ಮಾಹಿತಿಯನ್ನು ಪ್ರೊ. ಸುತ್ತೂರು ಮಾಲಿನಿ ತಿಳಿಸಿದ್ದಾರೆ.

Health Tips: ಬೇಸಿಗೆಗೂ ಕಣ್ಣಿನ ಆರೋಗ್ಯಕ್ಕೂ ಏನು ನಂಟು?

ಬೇಸಿಗೆಯಲ್ಲಿ ಕಣ್ಣಿನ ರಕ್ಷಣೆ ಹೇಗೆ?

ಬೇಸಿಗೆ ಕಾಲದಲ್ಲಿ ಚಳಿಯಿಲ್ಲ, ಮಳೆಯಿಲ್ಲ, ಮೋಡವಿಲ್ಲ, ಬೇಕಾದಷ್ಟು ಐಸ್‌ಕ್ರೀಮ್‌ ತಿನ್ನಬಹುದು ಎಂದೆಲ್ಲ ಸಂತಸ ಪಡುವವರಿದ್ದಾರೆ. ಆದರೆ ಝಳಝಳ ಬಿಸಿಲು ಸಹ ತನ್ನದೇ ಸವಾಲುಗಳನ್ನು ಮುಂದೊಡ್ಡುತ್ತದೆ. ಬಿಸಿಲಿಗೆ ಎಚ್ಚರ ತಪ್ಪುವುದು, ನಿರ್ಜಲೀಕರಣ ಮುಂತಾದ ಸಮಸ್ಯೆಗಳು ಮಾತ್ರವೇ ಅಲ್ಲ, ಕಣ್ಣಿನ ಪಾರ್ಶ್ವವಾಯುವಿಗೆ ತುತ್ತಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಬಿಸಿಲು ಹೆಚ್ಚಾದರೆ ಕಣ್ಣಿಗೇನು ತೊಂದರೆ? ಬೇಸಿಗೆಗೂ ಕಣ್ಣಿನ ಆರೋಗ್ಯಕ್ಕೂ ಏನಿದೆ ನಂಟು?

ಬೆಂಗಳೂರಿನ ಆಹಾರದ ಬದಲಾವಣೆಯು ಪ್ರೊಸ್ಟೇಟ್ ಕ್ಯಾನ್ಸರ್ ಹೆಚ್ಚಳಕ್ಕೆ ಕಾರಣ

ಆಹಾರದ ಬದಲಾವಣೆಯು ಪ್ರೊಸ್ಟೇಟ್ ಕ್ಯಾನ್ಸರ್ ಹೆಚ್ಚಳಕ್ಕೆ ಕಾರಣ

ಪ್ರೊಸ್ಟೇಟ್ ಕ್ಯಾನ್ಸರ್ ಈಗ ಬೆಂಗಳೂರು ಒಳಗೊಂಡು ನಗರ ಭಾರತದಲ್ಲಿ ಪುರುಷರನ್ನು ಬಾಧಿಸುತ್ತಿರುವ ಮುಂಚೂಣಿಯ ಕ್ಯಾನ್ಸರ್ ಗಳಲ್ಲಿ ಮುಂಚೂಣಿಯಲ್ಲಿದೆ, ಆದರೂ ಹೆಚ್ಚಾಗಿ ಪತ್ತೆಯಾಗುವುದಿಲ್ಲ ಮತ್ತು ಬಹಳ ಕಡಿಮೆ ತಿಳಿವಳಿಕೆ ಹೊಂದಲಾಗಿದೆ. ಪ್ರಾರಂಭಿಕ ರೋಗ ಲಕ್ಷಣಗಳ ಕೊರತೆಯಿಂದ ದೊಡ್ಡ ಪ್ರಮಾಣದ ರೋಗಿಗಳು ಮುಂದು ವರಿದ ಹಂತಗಳಲ್ಲಿ ಮಾತ್ರ ರೋಗಪರೀಕ್ಷೆಗೆ ಒಳಗಾಗುವುದು, ಚಿಕಿತ್ಸೆಯ ಫಲಿತಾಂಶ ಗಳನ್ನು ನಿಯಂತ್ರಿಸುತ್ತದೆ ಮತ್ತು ರೋಗದ ಹೊರೆಯನ್ನು ಹೆಚ್ಚಿಸುತ್ತದೆ.

ಕಲ್ಲಂಗಡಿ ತಿಂದರೆ ಸಾವು ಬರುತ್ತಾ? ವೈದ್ಯರು ಹೇಳಿದ್ದೇನು?

ಕಲ್ಲಂಗಡಿ ತಿಂದರೆ ಸಾವು ಬರುತ್ತಾ?

ವಿಷ ಆಹಾರ ಸೇವಿಸಿ ಮುಂಬೈನಲ್ಲಿ ನಾಲ್ವರು ಸಾವನ್ನಪ್ಪಿದ ಬಳಿಕ ಅವರು ಕಲ್ಲಂಗಡಿ ಹಣ್ಣು ತಿಂದಿದ್ದರು ಎಂದು ವರದಿಯಾಗಿದೆ. ಇದರಿಂದ ಕಲ್ಲಂಗಡಿ ಹಣ್ಣು ತಿನ್ನುವುದಕ್ಕೂ ಜನರು ಈಗ ಚಿಂತಿಸುವಂತಾಗಿದೆ. ಕಲ್ಲಂಗಡಿ ಹಣ್ಣು ತಿಂದರೆ ಸಾವು ಬರುತ್ತಾ, ಅನಾರೋಗ್ಯ ಕಾಡುತ್ತದೆಯೇ, ಯಾವ ರೀತಿಯ ಆರೋಗ್ಯ ತೊಂದರೆಗಳು ಕಾಣಿಸಿಕೊಳ್ಳುತ್ತವೆ ಎನ್ನುವ ಕುರಿತು ತಜ್ಞ ವೈದ್ಯರು ನೀಡಿರುವ ಮಾಹಿತಿ ಇಲ್ಲಿದೆ.

Benefits of Writing A Diary: ನಿತ್ಯ ಡೈರಿ ಬರೆದರೆ ಜೀವನದಲ್ಲಾಗುವ ಪವಾಡ ಏನೆಲ್ಲ ನೋಡಿ

ದಿನ ನಿತ್ಯ ಡೈರಿ ಬರೆದರೆ ಈ ಆರೋಗ್ಯ ಲಾಭ ಸಿಗಲಿದೆ

Diary Writing: ಪ್ರತಿಯೊಬ್ಬ ವ್ಯಕ್ತಿಯೂ ಒತ್ತಡದ ಜೀವನದಲ್ಲಿ ಬದುಕುತ್ತಿದ್ದಾನೆ. ಕೆಲಸ, ಮನೆ, ವೈಯಕ್ತಿಕ ವಿಚಾರ ಹೀಗೆ ನಾನಾ ಸಮಸ್ಯೆಗಳ ಒತ್ತಡ ಕಾಡುತ್ತದೆ. ಅದರಲ್ಲೂ ಕೆಲವರಿಗೆ ಜೀವನದಲ್ಲಿ ಹೇಳಿಕೊಳ್ಳಲಾಗದ ಘಟನೆಗಳು ನಡೆದಿರುತ್ತವೆ‌. ಅದು ಒಳ್ಳೆಯದು ಅಥವಾ ಕೆಟ್ಟದ್ದೇ ಆಗಿರಬಹುದು‌. ಇದು ಪದೇ ಪದೆ ಕಾಡುತ್ತಿರುತ್ತದೆ. ಇಂತಹ ಒತ್ತಡವನ್ನು ನಾವು ಡೈರಿ ಬರೆದಿಟ್ಟುಕೊಳ್ಳುವ ಮೂಲಕ ಪರಿಹರಿಸಿಕೊಳ್ಳಬಹುದು ಎಂದು ಪ್ರೊ. ಸುತ್ತೂರು ಮಾಲಿನಿ ತಿಳಿಸಿಕೊಟ್ಟಿದ್ದಾರೆ.

ಸುಡುವ ಬಿಸಿಲಿನಲ್ಲಿ ಆರೋಗ್ಯದ ಕಾಳಜಿ ವಹಿಸುವುದು ಹೇಗೆ?

ಇನ್ನೂ ಹೆಚ್ಚಲಿದೆ ಬಿಸಿಲು: ಆರೋಗ್ಯದ ಕಾಳಜಿ ಹೇಗೆ?

Health Tips: ಹವಾಮಾನ ತಜ್ಞರಿಂದ ಶಾಖದ ಅಲೆಗಳ ಬಗ್ಗೆ, ಉಷ್ಣತೆ ಹೆಚ್ಚುವ ಬಗ್ಗೆ ಎಚ್ಚರಿಕೆ ಬರುತ್ತಲೇ ಇದೆ. ಇಷ್ಟಾದರೂ ಹೆಚ್ಚಿನ ಸ್ಥಳಗಳಲ್ಲಿ ಮಳೆಯೇನೂ ಇಳೆಯನ್ನು ತಣಿಸುತ್ತಿಲ್ಲ. ಬಿಸಿಲಿನ ಆಘಾತಕ್ಕೆ ಸಿಲುಕುವವರ ಜೊತೆಗೆ, ಕಾಲರಾ, ಮಲೇರಿಯ ಮುಂತಾದ ಸಾಂಕ್ರಾಮಿಕಗಳಿಗೆ ತುತ್ತಾ ಗುವವರ ಸಂಖ್ಯೆಯೂ ಹೆಚ್ಚಬಹುದು. ಇಂಥ ದಿನಗಳಲ್ಲಿ ನಮ್ಮ ಮತ್ತು ನಮ್ಮ ಆತ್ಮೀಯರ ಕಾಳಜಿ ಹೇಗಿರಬೇಕೆಂಬ ಬಗ್ಗೆ ಒಂದಿಷ್ಟು ಮಾಹಿತಿಗಳಿವು...

"ನಿಮ್ಮ ಜೇಬಿನಲ್ಲಿ ಸದಾ ಒಂದು ಈರುಳ್ಳಿ ಇಟ್ಟುಕೊಳ್ಳಿ": ಬೇಸಿಗೆಯ ತಾಪಕ್ಕೆ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರ ವಿಶಿಷ್ಟ ಸಲಹೆ

ಬಿಸಿಲಿಗೆ ಈರುಳ್ಳಿ ಪರಿಹಾರ..!; ಇದು ಸಚಿವರ ಸಲಹೆ

ದೇಶಾದ್ಯಂತ ತೀವ್ರ ಬಿಸಿಲು ಮುಂದುವರಿದಿರುವ ಸಂದರ್ಭದಲ್ಲಿ, ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಬಿಸಿಯಿಂದ ತಪ್ಪಿಸಿಕೊಳ್ಳಲು ಜೇಬಿನಲ್ಲಿ ಈರುಳ್ಳಿ ಇಡುವಂತೆ ವಿಶಿಷ್ಟ ಸಲಹೆ ನೀಡಿದ್ದಾರೆ. ಆಯುರ್ವೇದ ಪದ್ಧತಿಗಳ ಮಹತ್ವವನ್ನು ಉಲ್ಲೇಖಿಸಿದ ಅವರು, ಪರಂಪರೆಯ ವಿಧಾನಗಳನ್ನು ಮರೆಯಬಾರದು ಎಂದಿದ್ದಾರೆ. ಈ ನಡುವೆ ಹಲವು ರಾಜ್ಯಗಳಲ್ಲಿ ತಾಪಮಾನ 44–46 ಡಿಗ್ರಿ ಸೆಲ್ಸಿಯಸ್‌ವರೆಗೆ ಏರಿಕೆಯಾಗಿ, ಜನರು ಮುನ್ನೆಚ್ಚರಿಕೆ ವಹಿಸಲು ತಜ್ಞರು ಸೂಚಿಸಿದ್ದಾರೆ.

ಡಿಟಾಕ್ಸ್  ಮಾಡುವುದಕ್ಕೂ ಮುನ್ನ ವೈದ್ಯರ ಸಲಹೆ ಪಡೆಯಲೇಬೇಕು: ಡಾ. ಅನಿತಾ Video

ಮನೆಯಲ್ಲೇ ಡಿಟಾಕ್ಸ್ ಮಾಡುವುದು ಹೇಗೆ?

ದೇಹದ ಶುದ್ದೀಕರಣ ಮಾಡುವುದನ್ನು ಡಿಟಾಕ್ಸ್ ಎನ್ನುತ್ತೇವೆ. ಇದು ಆರೋಗ್ಯವಂತರಲ್ಲಿ ನೈಸರ್ಗಿಕವಾಗಿ ನಡೆಯುತ್ತದೆ. ಇದಕ್ಕಾಗಿ ಹೆಚ್ಚು ಖರ್ಚು ಮಾಡಬೇಕಾದ ಅಗತ್ಯವಿಲ್ಲ ಎನ್ನುತ್ತಾರೆ ಡಯಟೀಷಿಯನ್ ಡಾ. ಅನಿತಾ. ಯಾವುದಕ್ಕೂ ಮನೆಯಲ್ಲೇ ಡಿಟಾಕ್ಸ್ ಪ್ರಯೋಗ ಮಾಡಲು ಹೋಗುವ ಮುನ್ನ ವೈದ್ಯರ ಸಲಹೆ ಪಡೆಯಬೇಕು ಎನ್ನುತ್ತಾರೆ ಅವರು.

ಮೆಡ್‌ ಟ್ರಾನಿಕ್‌ ನಿಂದ ಭಾರತದ ಪಾರ್ಕಿನ್ಸನ್ ರೋಗಿಗಳಿಗಾಗಿ 'ಅಡಾಪ್ಟಿವ್ ಡೀಪ್ ಬ್ರೈನ್ ಸ್ಟಿಮ್ಯುಲೇಶನ್' ವ್ಯವಸ್ಥೆ ಬಿಡುಗಡೆ

'ಅಡಾಪ್ಟಿವ್ ಡೀಪ್ ಬ್ರೈನ್ ಸ್ಟಿಮ್ಯುಲೇಶನ್' ವ್ಯವಸ್ಥೆ ಬಿಡುಗಡೆ

ಚಲನೆಗೆ ಸಂಬಂಧಿಸಿದ ಸವಾಲುಗಳು ಹೆಚ್ಚಾಗಿ ಗೋಚರಿಸುತ್ತವೆಯಾದರೂ, ಈ ಸ್ಥಿತಿಯು ಸಂವಹನ, ನಿದ್ರೆ ಮತ್ತು ಒಟ್ಟಾರೆ ಯೋಗಕ್ಷೇಮ ಸೇರಿದಂತೆ ದೈನಂದಿನ ಜೀವನದ ಇತರ ಅಂಶ ಗಳ ಮೇಲೂ ಪ್ರಭಾವ ಬೀರಬಹುದು. ಇಂದು, ರೋಗವು ವಿಕಸನಗೊಂಡಂತೆ ರೋಗ ಲಕ್ಷಣ ಗಳನ್ನು ನಿರ್ವಹಿಸಲು ವಿವಿಧ ಚಿಕಿತ್ಸಾ ವಿಧಾನಗಳು ಸಹಾಯ ಮಾಡುತ್ತವೆ.

Pudina vs Dhaniya: ಬೇಸಿಗೆಯಲ್ಲಿ ಜೀರ್ಣಕ್ರಿಯೆ ಸುಧಾರಿಸಲು ಯಾವುದು ಉತ್ತಮ?

ಪುದೀನಾ-ಕೊತ್ತಂಬರಿ ಸೊಪ್ಪು: ಯಾವುದು ದೇಹಕ್ಕೆ ಹಿತ?

Health Tips: ಈ ಬೇಸಿಗೆಯಲ್ಲಿ ಹಲವು ರೀತಿಯ ಆರೋಗ್ಯ ಸಮಸ್ಯೆ ಕಾಡುತ್ತದೆ. ಅದರಲ್ಲೂ ಹೆಚ್ಚಿನವರು ಸರಿಯಾಗಿ ಜೀರ್ಣವಾಗದೆ ಸಮಸ್ಯೆ ಬಳಲುತ್ತಾರೆ. ಹೊಟ್ಟೆ ಉಬ್ಬುವುದು, ಆಮ್ಲೀಯತೆ, ಗ್ಯಾಸ್ಟ್ರಿಕ್‌ನಂತಹ ಸಮಸ್ಯೆ ಬೇಸಗೆಯಲ್ಲಿ ಹೆಚ್ಚಾಗಿ ಕಾಡುತ್ತದೆ. ಹೀಗಾಗಿ ಇದಕ್ಕೆ ನೈಸರ್ಗಿಕ ಪರಿಹಾರ ಎಂದರೆ ಪುದೀನಾ ಮತ್ತು ಕೊತ್ತಂಬರಿ ಸೊಪ್ಪು ಬಳಕೆ. ಹಾಗಾದರೆ ಇವೆರಡರಲ್ಲಿ ಯಾವುದು ಉತ್ತಮ?

ಮೊಸರನ್ನ ಅಥವಾ ಚಿತ್ರಾನ್ನ: ಮಧುಮೇಹಿಗಳಿಗೆ ಯಾವುದು ಆರೋಗ್ಯಕಾರಿ?

ಮೊಸರನ್ನ ಅಥವಾ ಚಿತ್ರಾನ್ನ: ಮಧುಮೇಹಿಗಳಿಗೆ ಯಾವುದು ಉತ್ತಮ?

Curd Rice vs Lemon Rice: ಭಾರತೀಯ ಊಟಗಳಲ್ಲಿ ಅಕ್ಕಿ ಪ್ರಧಾನ ಆಹಾರವಾಗಿದೆ. ಬೆಳಗ್ಗಿನ ಆಹಾರವಾಗಿ ಇಲ್ಲಿ ಚಿತ್ರಾನ್ನ ಹಾಗೂ ಮೊಸರನ್ನಕ್ಕೆ ಹೆಚ್ಚಿನ ಆಧ್ಯತೆ ನೀಡಲಾಗುತ್ತದೆ. ಆದರೆ ಅಕ್ಕಿಯ ಆಹಾರಗಳ ಸೇವನೆಯೂ ನಿಮ್ಮ ರಕ್ತದಲ್ಲಿನ ಸಕ್ಕರೆಯನ್ನು ಹೆಚ್ಚಿಸುತ್ತದೆ. ಹಾಗಾದರೆ ಮೊಸರನ್ನ ಅಥವಾ ಚಿತ್ರಾನ್ನ ಇದರಲ್ಲಿ ಯಾವುದರ ಸೇವನೆ ಉತ್ತಮ? ಈ ಬಗ್ಗೆ ತಜ್ಞರ ಸಲಹೆ ಏನು?

Health Tips: ವ್ಯಾಯಾಮಕ್ಕೂ ಮುನ್ನ ಈ ಹಣ್ಣುಗಳ ಸೇವನೆ ಮಾಡಿದರೆ ಆರೋಗ್ಯಕ್ಕೆ ಉತ್ತಮ!

ವ್ಯಾಯಾಮದ ಮೊದಲು‌ ಈ ಹಣ್ಣುಗಳ ಆಯ್ಕೆ ಮಾಡಿ!

ಜಿಮ್ ಅಥವಾ ವ್ಯಾಯಾಮ ಮಾಡುವ ಮುನ್ನ ಸರಿಯಾದ ಆಹಾರ ಸೇವನೆ ಕೂಡ ಅಗತ್ಯ ಎಂದು ವೈದ್ಯರು ಸಲಹೆ ನೀಡುತ್ತಾರೆ. ತಜ್ಞರ ಪ್ರಕಾರ ಗ್ಲೂಕೋಸ್ ಅಥವಾ ಫ್ರಕ್ಟೋಸ್ ನ ಅಂಶವಿರುವ ಹಣ್ಣಿನ ಸೇವನೆ ದೇಹಕ್ಕೆ ಉತ್ತಮ ಶಕ್ತಿಯನ್ನು ನೀಡುತ್ತವೆ. ಹಾಗಿದ್ರೆ ಗ್ಲೂಕೋಸ್ ಅಥವಾ ಫ್ರಕ್ಟೋಸ್ ನ ಪ್ರಮಾಣವಿರುವ ಹಣ್ಣುಗಳು ಯಾವುವು?

Dr Sadhanashree Column: ಬಿಸಿಲಿನ ತಾಪಕ್ಕೆ ತಂಪಿನ ಸ್ಪರ್ಶ: ಆಯುರ್ವೇದದ ಸಮಗ್ರ ಪರಿಹಾರಗಳು

ಬಿಸಿಲಿನ ತಾಪಕ್ಕೆ ತಂಪಿನ ಸ್ಪರ್ಶ: ಆಯುರ್ವೇದದ ಸಮಗ್ರ ಪರಿಹಾರಗಳು

ಆಯುರ್ವೇದದಲ್ಲಿ ಋತುಚರ್ಯೆ ಎಂದರೆ ಋತುಗಳಿಗೆ ಅನುಗುಣವಾಗಿ ಜೀವನಶೈಲಿಯನ್ನು ರೂಪಿಸಿ ಕೊಳ್ಳುವುದು. ಪ್ರತಿಯೊಂದು ಋತುವೂ ತನ್ನದೇ ಆದ ಗುಣಗಳನ್ನು ಹೊಂದಿದೆ ಮತ್ತು ಅವು ದೇಹದ ದೋಷಗಳ ಮೇಲೆ ಪರಿಣಾಮ ಬೀರುತ್ತವೆ. ಈ ಬದಲಾವಣೆಗಳಿಗೆ ಅನುಗುಣವಾಗಿ ಆಹಾರ, ನಿದ್ರೆ ಮತ್ತು ಆಚರಣೆಗಳನ್ನು ಹೊಂದಿಸಿಕೊಳ್ಳುವುದು ಆರೋಗ್ಯದ ಮೂಲ.

Health Tips: ಒಂದೇ ಕಡೆ ಕೂತಿರುತ್ತೀರಾ? ಈ ಸಮಸ್ಯೆಗಳ ಬಗ್ಗೆ ನಿಗಾ ಇರಲಿ!

ಒಂದೇ ಕಡೆ ಕೂರುತ್ತೀರಾ? ಈ ಆರೋಗ್ಯ ಸಮಸ್ಯೆ ಕಾಡಬಹುದು

ಒಂದೆಡೆ ದೀರ್ಘ ಕಾಲ ಕೂತಿರುತ್ತೀರಿ ಎಂದಾದರೆ ಸಾವಿಗೆ ಬೇಗ ಹತ್ತಿರವಾಗುತ್ತೀರಿ ಎನ್ನುತ್ತಾರೆ ಹೃದಯ ತಜ್ಞರು. ಜಡ ಜೀವನದಿಂದ ಸಾವು ಬೇಗನೇ ಆಕ್ರಮಿಸುವ ಸಾಧ್ಯತೆ ಶೇ. 30ರಷ್ಟು ಹೆಚ್ಚುತ್ತದೆ ಎನ್ನುವುದು ಅಧ್ಯಯನಗಳು ಕಂಡುಕೊಂಡ ಸತ್ಯ. ಏನು ಹೀಗೆಂದರೆ? ಅದು ಹೇಗೆ ಸಾಧ್ಯ?

'ಪ್ರಿವೆಂಟಿವ್ ಜೆನೊಮಿಕ್ಸ್ ಕ್ಲಿನಿಕ್' ಪ್ರಾರಂಭಿಸಿದ ಫೋರ್ಟಿಸ್ ಆಸ್ಪತ್ರೆ ಬೆಂಗಳೂರು; ನಿಖರ ವೈದ್ಯಕೀಯ ಪದ್ಧತಿಯಲ್ಲಿ ಹೊಸ ಅಧ್ಯಾಯ ಆರಂಭ

'ಪ್ರಿವೆಂಟಿವ್ ಜೆನೊಮಿಕ್ಸ್ ಕ್ಲಿನಿಕ್' ಪ್ರಾರಂಭಿಸಿದ ಫೋರ್ಟಿಸ್ ಆಸ್ಪತ್ರೆ

ಪ್ರಿವೆಂಟಿವ್ ಜೆನೊಮಿಕ್ಸ್ ಕ್ಲಿನಿಕ್ (ತಡೆಗಟ್ಟುವ ತಳಿವಿಜ್ಞಾನ ಚಿಕಿತ್ಸಾಲಯ) ಸುಧಾರಿತ ಆನುವಂಶಿಕ ಪರೀಕ್ಷೆ, ತಜ್ಞರ ಸಮಾಲೋಚನೆ ಮತ್ತು ವೈಯಕ್ತಿಕ ಚಿಕಿತ್ಸಾ ಯೋಜನೆಗಳನ್ನು ನೀಡುವ ಗುರಿಯನ್ನು ಹೊಂದಿದೆ. ಇದು ವ್ಯಕ್ತಿಗಳು ತಮ್ಮ ಆನುವಂಶಿಕ ಗುಣಲಕ್ಷಣಗಳ ಆಧಾರದ ಮೇಲೆ ಆರೋಗ್ಯ ರಕ್ಷಣೆಯ ಕುರಿತು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ.

Loading...