ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಆರೋಗ್ಯ

ಜನನ ಪ್ರಮಾಣ ಹೆಚ್ಚಳ ? ಕಾಂಡೋಮ್ ಮೇಲೆ ಶೇ. 13ರಷ್ಟು ತೆರಿಗೆ ವಿಧಿಸಿದ ಚೀನಾ

ಕಾಂಡೋಮ್ ಮೇಲೆ ಶೇ. 13ರಷ್ಟು ತೆರಿಗೆ ವಿಧಿಸಿದ ಚೀನಾ

ಮೂರು ದಶಕಗಳ ವಿನಾಯಿತಿ ಬಳಿಕ ಇದೀಗ ಚೀನಾದಲ್ಲಿ ಕಾಂಡೋಮ್ ಮೇಲೆ ತೆರಿಗೆ ವಿಧಿಸಲಾಗಿದೆ. ಚೀನಾದಲ್ಲಿ ಸಾವಿನ ಪ್ರಮಾಣ ಹೆಚ್ಚಳವಾಗಿ 2023ರಲ್ಲಿ ಜನಸಂಖ್ಯೆಯಲ್ಲಿ ಭಾರತ ಚೀನಾವನ್ನು ಹಿಂದಿಕ್ಕಿತ್ತು. ಸಾವಿನ ಪ್ರಮಾಣ ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ ಕಾಂಡೋಮ್ ಮೇಲೆ ತೆರಿಗೆ ವಿನಾಯಿತಿ ನೀಡಿದ್ದ ಚೀನಾ ಇದೀಗ ಮತ್ತೆ ತೆರಿಗೆ ವಿಧಿಸಿ ಆದೇಶ ಹೊರಡಿಸಿದೆ. ಇದಕ್ಕೆ ಕಾರಣವೇನು ಎನ್ನುವ ಕುರಿತು ಮಾಹಿತಿ ಇಲ್ಲಿದೆ.

Beauty Tips: ಚಳಿಗಾಲದಲ್ಲಿ ಚರ್ಮ ಮತ್ತು ಕೂದಲಿನ ಆರೈಕೆಯ ಟೆನ್ಷನ್ ಬಿಡಿ! ಸಾಸಿವೆ ಎಣ್ಣೆಗೆ ಫುಲ್ ಕೆಲ್ಸ ಕೊಡಿ!

ನಿಮ್ಮ ತುಟಿ, ಚರ್ಮ ಮತ್ತು ಕೂದಲಿನ ಆರೈಕೆಗೆ ಇಲ್ಲಿದೆ ಸಿಂಪಲ್ ಪರಿಹಾರ

ಚಳಿಗಾಲದಲ್ಲಿ ಚರ್ಮ ಹಾಗೂ ಕೂದಲಿನ ಆರೈಕೆ ಕಡೆ ಹೆಚ್ಚಿನ ಗಮನ ಹರಿಸದೆ ಇದ್ದರೆ ವಯಸ್ಸಾದವರಂತೆ ಕಾಣುತ್ತದೆ. ಬೇಸಗೆಯಲ್ಲಿ ನಾವು ಹೆಚ್ಚೆಚ್ಚು ನೀರನ್ನು ಕುಡಿಯುವುದರಿಂದ ನಮ್ಮ ದೇಹದಲ್ಲಿ ತೇವಾಂಶವಿರುತ್ತದೆ. ಆದರೆ ಚಳಿಗಾಲದಲ್ಲಿ ನಮಗೆ ಬಾಯಾರಿಕೆ ಕಡಿಮೆಯಾಗುವುದರಿಂದ ನೀರಿನ ಸೇವನೆ ಕಡಿಮೆಯಾಗಿ ದೇಹವು ತೇವಾಂಶವನ್ನು ಕಳೆದುಕೊಳ್ಳುತ್ತದೆ.

ವಾಕಿಂಗ್ ಮಾಡುವಾಗ ನಮ್ಮ ಪಾದರಕ್ಷೆ ಹೇಗಿರಬೇಕು?

ವಾಕಿಂಗ್ ಹೋಗುವಾಗ ಇಂತಹ ಪಾದರಕ್ಷೆ ಬಳಸಿ!

Walking for health: ನಮ್ಮ ನಡಿಗೆಯ ಭಾಗವಾಗಿರುವ ಪಾದ ಮತ್ತು ಪಾದರಕ್ಷೆಯ ನಾವೆಷ್ಟು ಜಾಗ್ರತೆ ವಹಿಸುತ್ತೇವೆ? ದಿನದ ವಾಕಿಂಗ್‌ಗೆ ಯಾವುದಾದರೂ ಒಂದು ಪಾದರಕ್ಷೆ ತೊಟ್ಟು ಹೋದರಾಯಿತು ಎಂಬ ಧೋರಣೆಯಿದ್ದರೆ, ಕಾಲುಗಳ ಸಮಸ್ಯೆಗೆ ಮೂಲವಾಗಬಹುದು. ಹಾಗಾದರೆ ಇದಕ್ಕಾಗಿಯೇ ವಿನ್ಯಾಸಗೊಳಿಸಿದ ಪಾದರಕ್ಷೆಗಳು ನಮಗೆ ಬೇಕೆ? ಬೇಕಾದರೆ ಯಾಕೆ?

ಬೆಳಗಿನ ಹೊತ್ತು ಸರಣಿ ಸೀನುಗಳೇ? ಇಲ್ಲಿದೆ ಕಾರಣ

ಬೆಳಗ್ಗಿನ ಸಮಯ ಸೀನುಗಳ ಸಮಸ್ಯೆಯೇ? ಇಲ್ಲಿದೆ ಪರಿಹಾರ

ಸೀನುವುದೇನು ರೋಗವೇ ಎಂದರೆ, ಅಲ್ಲ. ಸರಳವಾಗಿ ಹೇಳುವುದಾದರೆ, ದೇಹಕ್ಕೆ ಅಗತ್ಯ ಇಲ್ಲದ ಯಾವುದೋ ವಸ್ತು ದೇಹವನ್ನು ಪ್ರವೇಶಿಸಿದಾಗ ಉಂಟಾಗುವ ಪ್ರತಿಕ್ರಿಯೆಯಿದು. ಹೀಗೆ ಸೀನುವುದರಿಂದ ಆರೋಗ್ಯಕ್ಕೆ ಹಾನಿಯೂ ಆಗುವುದಿಲ್ಲ. ಆದರೆ ಬೆಳಗ್ಗೆ ಇರುವ ಎಲ್ಲ ಕೆಲಸಗಳನ್ನೂ ಬಿಟ್ಟು ಕಣ್ಣು-ಮೂಗು ಒರೆಸಿಕೊಂಡು ಕೂತಿರುವುದೇ ದೊಡ್ಡದಾಗಿ ಸಿಕ್ಕಾಪಟ್ಟೆ ಕಿರಿಕಿರಿ ಎನಿಸುತ್ತದೆ.

ಮಕ್ಕಳಲ್ಲಿ ದೃಷ್ಟಿ ದೋಷ ಬರಲು ಕಾರಣ ಏನು? ಇಲ್ಲಿದೆ ಸರಳ ಆಯುರ್ವೇದದ ಪರಿಹಾರ ಕ್ರಮ

ಮಕ್ಕಳಲ್ಲಿ ದೃಷ್ಟಿ ದೋಷ ಸಮಸ್ಯೆ ಬರದಿರಲು ಈ ಆಯುರ್ವೇದ ವಿಧಾನ ಬಳಸಿ!

ಎಳೆ ಮಕ್ಕಳಿಗೆ ಈ ದೃಷ್ಟಿ ಸಮಸ್ಯೆ ಕಂಡು ಬರುವ ಪ್ರಮಾಣ ಗಣನೀಯವಾಗಿ ಹೆಚ್ಚಾಗುತ್ತಿದೆ. ಮಕ್ಕಳಲ್ಲಿ ಕಂಡು ಬರುವ ವಿಟಮಿನ್ ಡಿ ಕೊರತೆ, ಆಹಾರದಲ್ಲಿ ಪೋಷಕಾಂಶ ಸರಿಯಾದ ಪ್ರಮಾಣದಲ್ಲಿ ಲಭ್ಯವಾಗದಿರುವುದು ಇದಕ್ಕೆ ಮುಖ್ಯ ಕಾರಣವಾಗಿದೆ. ಹೀಗಾಗಿ ಮಕ್ಕಳ ಲಾಲನೆ ಪಾಲನೆ ಮಾಡುವಾಗ ಈ ಎಲ್ಲ ವಿಚಾರದ ಕಡೆ ಗಮನಹರಿಸಬೇಕು ಎಂದು ವಿಶ್ವವಾಣಿ ಹೆಲ್ತ್ ಚಾನೆಲ್ ನಲ್ಲಿ ಖ್ಯಾತ ಆಯು ರ್ವೇದದ ವೈದ್ಯರಾದ ಡಾ. ಪದ್ಮಾವತಿ ರಾಥೋಡ್ ಅವರು ತಿಳಿಸಿಕೊಟ್ಟಿದ್ದಾರೆ.

Health Tips: ರಾಗಿ ತಿಂದವ ನಿರೋಗಿ! – ಚಳಿಗಾಲದಲ್ಲಿ ಹೀಗಿರಲಿ ನಿಮ್ಮ ಫುಡ್ ಸಿಸ್ಟಮ್

ಈ ಹಿಟ್ಟುಗಳಲ್ಲಿದೆ ನಿಮ್ಮ ದೇಹವನ್ನು ಬೆಚ್ಚಗಿರಿಸುವ ವಿಶೇಷ ಗುಣ

ಚಳಿಗಾಲದಲ್ಲಿ ಮುಖ್ಯವಾಗಿ ನಮ್ಮ ಜಿರ್ಣಾಂಗ ವ್ಯವಸ್ಥೆಯನ್ನು ಸುಸ್ಥಿಯಲ್ಲಿರಿಸಿಕೊಳ್ಳುವುದು ಒಂದು ಸವಾಲಿನ ಕೆಲಸವೇ ಸರಿ. ಇದಕ್ಕೆ ಪೂರಕವಾಗಿ ಚಳಿಗಾಲದಲ್ಲಿ ನಿರ್ಧಿಷ್ಟ ಹಣ್ಣು ಮತ್ತು ತರಕಾರಿಗಳನ್ನು ಸೇವಿಸುವ ಸಂಪ್ರದಾಯವಿದೆ. ಅದೇ ರೀತಿಯಲ್ಲಿ ಚಳಿಗಾಲದಲ್ಲಿ ಯಾವ ಧಾನ್ಯದ ಹಿಟ್ಟನ್ನು ಬಳಸಬೇಕೆಂಬ ವಿಚಾರ ಹಲವರಿಗೆ ಗೊತ್ತಿಲ್ಲ. ಈ ಬಗ್ಗೆ ಮಾಹಿತಿ ನೀಡುವ ಲೇಖನ ಇದಾಗಿದೆ.

Breast cancer: ಇತ್ತೀಚಿನ ವರ್ಷದಲ್ಲಿ ಅವಿವಾಹಿತರಿಗೆ ಸ್ತನ ಕ್ಯಾನ್ಸರ್ ಹೆಚ್ಚಾಗಲು ಕಾರಣ ಏನು ಗೊತ್ತಾ?

ಸ್ತನ ಕ್ಯಾನ್ಸರ್ ಗೆ ಕಾರಣ ಏನು? ಈ ಬಗ್ಗೆ ವೈದ್ಯರ ಸಲಹೆ ಏನು?

ಇತ್ತೀಚಿನ ಜನರ ಜೀವನ ಶೈಲಿಯು ಸ್ತನ ಕ್ಯಾನ್ಸರ್ ಉಂಟಾಗಲು ಕಾರಣವಾಗುತ್ತಿದ್ದು ಈ ಬಗ್ಗೆ ಮೊದಲೇ ಎಚ್ಚೆತ್ತುಕೊಂಡರೆ ಮುಂದಾಗುವ ಸಮಸ್ಯೆ ತಡೆಗಟ್ಟಬಹುದಾಗಿದೆ. ಕ್ಯಾನ್ಸರ್ ಗುಣಪಡಿಸಲು ಇರುವ ವಿವಿಧ ಚಿಕಿತ್ಸಾ ವಿಧಾನಗಳ ಬಗ್ಗೆ ಇತ್ತೀಚೆಗಷ್ಟೇ ವಿಶ್ವವಾಣಿ ಹೆಲ್ತ್ ಚಾನೆಲ್ ನಲ್ಲಿ ಖ್ಯಾತ ಆಯು ರ್ವೇದದ ವೈದ್ಯರಾದ ಡಾ. ಮಾಲಿನಿ ಎಸ್. ಸುತ್ತೂರು ಅವರು ತಿಳಿಸಿಕೊಟ್ಟಿದ್ದಾರೆ. ಮಹಿಳೆಯರಲ್ಲಿ ಕ್ಯಾನ್ಸರ್ ಉಂಟಾಗಲು ಕಾರಣ ಏನು? ಇದರ ಬಗ್ಗೆ ವೈದ್ಯರು ನೀಡುವ ಸಲಹೆ ಏನು ಎಂಬಿತ್ಯಾದಿ ವಿಚಾರಗಳ ಬಗ್ಗೆ ಮಾಹಿತಿ ಇಲ್ಲಿದೆ

Health Tips: ಚಳಿಗಾಲದಲ್ಲಿ ಸಪೋಟ ಹಣ್ಣಿನ ಆರೋಗ್ಯ ಪ್ರಯೋಜನಗಳು: ರೋಗನಿರೋಧಕ ಶಕ್ತಿ ಹೆಚ್ಚಿಸಿ, ಹೃದಯವನ್ನು ಕಾಪಾಡಿ

ಸಪೋಟ ಹಣ್ಣಿನಲ್ಲಿದೆ ಅಗಾಧ ಅರೋಗ್ಯ ಪ್ರಯೋಜನ

ಈ ಕಾಲೋಚಿತ ಹಣ್ಣುಗಳನ್ನು ದೈನಂದಿನ ಆಹಾರದ ಜೊತೆ ಜೊತೆ ಸೇವಿಸುವುದರಿಂದ ನಿಮ್ಮಲ್ಲಿರುವ ರೋಗನಿರೋಧಕ ಶಕ್ತಿ ಹೆಚ್ಚುವುದಲ್ಲದೇ ಈ ರೀತಿಯ ಸಮಸ್ಯೆಗಳಿಂದ ದೂರ ಇರುವಂತೆ ಮಾಡುತ್ತದೆ. ಈ ರೀತಿ ಚಳಿಗಾಲದಲ್ಲಿ ನಿಮ್ಮ ಆರೋಗ್ಯವನ್ನು ಸರಿದೂಗಿಸಿಕೊಂಡು ಹೋಗುವ ಹಲವಾರು ಆಹಾರ ಪದಾರ್ಥಗಳಿದ್ದು, ಈ ಚಳಿಗಾಲದಲ್ಲಿ ಹೇರಳವಾಗಿ ಸಿಗುವ ಈ ಸಪೋಟ ಹಣ್ಣನ್ನು ಸೇವಿಸುವುದು ಆರೋಗ್ಯಕ್ಕೆ ಅನೇಕ ಉಪಯೋಗವಿದೆ.

ಜನ ಹೆಚ್ಚಿನ ಸಂಖ್ಯೆಯಲ್ಲಿ ಅಂಗಾಂಗ ದಾನಕ್ಕೆ ಮುಂದಾಗಬೇಕು: ಡಾ.ಇ.ಎನ್.ರಾಜೀವ್

ಜನ ಅಂಗಾಂಗ ದಾನಕ್ಕೆ ಮುಂದಾಗಬೇಕು: ಡಾ.ಇ.ಎನ್.ರಾಜೀವ್

Tumkur News: ಪ್ರತಿ ವರ್ಷ ಲಕ್ಷಾಂತರ ಮಂದಿ ಅಂಗಾಂಗ ವೈಫಲ್ಯಕ್ಕೆ ತುತ್ತಾಗುತ್ತಿದ್ದಾರೆ. ದಾನಿಗಳ ಕೊರತೆ, ಜಾಗೃತಿ ಮೂಡದೆ ಅತ್ಯಲ್ಪ ಜನರಿಗಷ್ಟೇ ಅಂಗಾಂಗ ಕಸಿ ಸಾಧ್ಯವಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಅಂಗಾಂಗ ದಾನಕ್ಕೆ ಮುಂದಾಗಬೇಕು. ಜನರಲ್ಲಿ ಮತ್ತಷ್ಟು ಜಾಗೃತಿ ಮೂಡಿಸಬೇಕು ಎಂದು ಮಣಿಪಾಲ್ ಆಸ್ಪತ್ರೆ ಮೂತ್ರಪಿಂಡ ತಜ್ಞ ಡಾ.ಇ.ಎನ್.ರಾಜೀವ್, ತುರ್ತು ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ವಿಜಯಕುಮಾರ್ ಅನಯ್ಯರೆಡ್ಡಿ ಜಂಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

Sandalwood Actress Sudharani: ಹೊಸ ಪೀಳಿಗೆಯ ಮೇಕೊ ರೋಬೊಟಿಕ್ ತಂತ್ರಜ್ಞಾನ ಪರಿಚಯಿಸಿದ ಫೋರ್ಟಿಸ್ ಆಸ್ಪತ್ರೆ

ಹೊಸ ಪೀಳಿಗೆಯ ಮೇಕೊ ರೋಬೊಟಿಕ್ ತಂತ್ರಜ್ಞಾನ ಪರಿಚಯಿಸಿದ ಫೋರ್ಟಿಸ್ ಆಸ್ಪತ್ರೆ

ಶಸ್ತ್ರಚಿಕಿತ್ಸೆಯ ನಂತರದ ನೋವು ಕಡಿಮೆಯಾಗುವುದು, ತ್ವರಿತ ಚೇತರಿಕೆ, ಮೊಣಕಾಲು ಕೀಲು ಕಾರ್ಯನಿರ್ವಹಣೆಯಲ್ಲಿ ಕ್ಷಿಪ್ರ ಸುಧಾರಣೆ ಮತ್ತು ದೀರ್ಘಕಾಲ ದವರೆಗೆ ಮೊಣಕಾಲು ಕೀಲು ಸ್ಥಿರ ವಾಗಿರುವುದಕ್ಕೆ ಇದು ನೆರವಾಗಲಿದೆ. ಇದು ರೋಗಿಯ ಅನುಭವವನ್ನು ಗಮನಾರ್ಹವಾಗಿ ಹೆಚ್ಚಿಸಲಿದೆ. ದಕ್ಷಿಣ ಭಾರತದ ಜನಪ್ರಿಯ ನಟಿ ಸುಧಾರಾಣಿ ಅವರು ಈ ಹೊಸ ಸೌಲಭ್ಯ ಉದ್ಘಾಟಿಸಿ ಮಾತನಾಡಿದರು

Mana Santwana: ಪರೀಕ್ಷೆ ವೇಳೆ ಮಕ್ಕಳ ನೆನಪಿನ ಶಕ್ತಿ ಹೆಚ್ಚಾಗಲು ಈ ಟಿಪ್ಸ್‌ ಫಾಲೋ ಮಾಡಿ

ಮಕ್ಕಳ ನೆನಪಿನ ಶಕ್ತಿ ಹೆಚ್ಚಾಗಲು ಈ ಟಿಪ್ಸ್‌ ಫಾಲೋ ಮಾಡಿ

ಪರೀಕ್ಷೆ ಹತ್ತಿರ ಬರುತ್ತಿದೆ. ಹೀಗಾಗಿ ಹೆತ್ತವರಿಗೆ ಮಕ್ಕಳನ್ನು ಓದಿಸುವುದೇ ದೊಡ್ಡ ಸವಾಲು. ಕೆಲವೊಮ್ಮೆ ಮಕ್ಕಳು ಕಷ್ಟಪಟ್ಟು ಓದಿದರೂ ನೆನಪಿನಲ್ಲಿ ಉಳಿಯುವುದಿಲ್ಲ. ಈ ಸಮಸ್ಯೆಗೆ ಕಾರಣವೇನು? ಪರಿಹಾರವೇನು? ಎನ್ನುವುದನ್ನು ಆಪ್ತ ಸಮಾಲೋಚಕಿ, ಮನಶಾಸ್ತ್ರಜ್ಞೆ ಭವ್ಯಾ ವಿಶ್ವನಾಥ್‌ ವಿವರಿಸಿದ್ದಾರೆ.

ಮಹಿಳೆಯಲ್ಲಿ ಅಪರೂಪದ ಕಾಯಿಲೆಯಾದ "ಪಲ್ಮನರಿ ಅಲ್ವಿಯೋಲಾರ್‌ ಪ್ರೊಟಿನೋಸಿಸ್‌" ಪತ್ತೆ: ಸ್ಪರ್ಶ್‌ ಆಸ್ಪತ್ರೆ ವೈದ್ಯರಿಂದ ಯಶಸ್ವಿ ಚಿಕಿತ್ಸೆ

ಮಹಿಳೆಯಲ್ಲಿ ಪಲ್ಮನರಿ ಅಲ್ವಿಯೋಲಾರ್‌ ಪ್ರೊಟಿನೋಸಿಸ್‌" ಪತ್ತೆ

ಉಸಿರಾಟದ ಸಮಸ್ಯೆಗಳು ಗಂಭೀರವಾದಾಗ ಮೊದಲು ನಿಮೋನಿಯಾ ಇರಬಹುದು ಎಂದೇ ಭಾವಿಸಲಾಗುತ್ತದೆ. ಇದೇ ರೀತಿಯ ರೋಗಲಕ್ಷಣ ಗಳಾದ ದೀರ್ಘಾವಧಿ ಕಫ, ಉಸಿರಾಟ ಸಮಸ್ಯೆ, ನಿರಂತರ ಆಯಾಸದಿಂದ ಬಳಲುತ್ತಿದ್ದ 39 ವರ್ಷದ ಮಹಿಳೆಗೆ ಮೊದಲು ವೈರಲ್‌ ನಿಮೋನಿಯಾ ಸೋಂಕಿನ ರೋಗ ಪತ್ತೆ ಮಾಡಲಾಗಿತ್ತು, ಹಲವು ಸುತ್ತಿನ ವೈದ್ಯಕೀಯ ಚಿಕಿತ್ಸೆಯನ್ನೂ ನೀಡಲಾಗಿತ್ತು

ಲೋ ಲೆವೆಲ್ ಶುಗರ್ ಇದ್ದರೆ ನಿರ್ಲಕ್ಷಿಸಬೇಡಿ: ತಜ್ಞರ ಈ ಟಿಪ್ಸ್‌ ಫಾಲೋ ಮಾಡಿ

ಲೋ ಲೆವೆಲ್ ಶುಗರ್ ಇದ್ದವರು ಸಿಹಿ ತಿನ್ನಬಹುದೇ?

Low Blood Sugar: ಕೆಲವರಿಗೆ ಶುಗರ್ ಲೆವೆಲ್ ತುಂಬಾ ಹೆಚ್ಚಾಗಿ ಇದ್ದರೆ ಇನ್ನು ಕೆಲವರಲ್ಲಿ ಈ ಶುಗರ್ ಲೆವೆಲ್ ಬಹಳ ಕಡಿಮೆ ಕಂಡು ಬರುತ್ತದೆ. ಎರಡು ಕೂಡ ಬಹಳ ಅಪಾಯಕಾರಿಯಾಗಿದ್ದು ಈ ಬಗ್ಗೆ ನಿರ್ಲಕ್ಷ್ಯ ಮಾಡಬಾರದು ಎಂದು ವಿಶ್ವವಾಣಿ ಹೆಲ್ತ್ ಚಾನಲ್‌ನಲ್ಲಿ ಖ್ಯಾತ ಮಧುಮೇಹ ತಜ್ಞ ಡಾ. ಸುಮನ್ ರಾಥೋಡ್ ತಿಳಿಸಿಕೊಟ್ಟಿದ್ದಾರೆ.

Health Tips: ಚಳಿ ಚಳಿ ತಾಳೆನು ಈ ಚಳಿಯ...ಚಳಿಯಿಂದ ನಿಮ್ಮ ಅರೋಗ್ಯವನ್ನು ಹೀಗೆ ಕಾಪಾಡಿಕೊಳ್ಳಿ

ಈ ಚಳಿಗಾಲದಲ್ಲಿ ಇಂತಹ ಆಹಾರ ಸೇವಿಸಿ

ಚಳಿಗಾಲದಲ್ಲಿ ಸಾಮಾನ್ಯವಾಗಿ ಸೂಕ್ಷ್ಮಾಣು ಜೀವಿಗಳು ಹಾಗೂ ವೈರಸ್‌ಗಳು ವೇಗವಾಗಿ ಹರಡುತ್ತವೆ. ಹಾಗಾಗಿ ಈ ಸಂದರ್ಭದಲ್ಲಿ ನಾವು ಸೇವಿಸುವ ಆಹಾರ ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಂತಿರಬೇಕು. ಹಾಗಾದರೆ ಚಳಿಗಾಲದಲ್ಲಿ ನಮ್ಮ ಇಮ್ಯುನಿಟಿಯನ್ನು ಹೆಚ್ಚಿಸುವ ಆಹಾರಗಳು ಯಾವವು? ಇವುಗಳನ್ನು ಹೇಗೆ ಆಯ್ಕೆ ಮಾಡಿಕೊಳ್ಳಬೇಕು? ಎಂಬುದರ ವಿವರ ಇಲ್ಲಿದೆ.

Benefits Of Pista: ಹಸನ್ಮುಖಿ ಬೀಜ ಪಿಸ್ತಾದ ಸದ್ಗುಣಗಳ ಬಗ್ಗೆ ಗೊತ್ತೇ?

ಹಸನ್ಮುಖಿ ಬೀಜ ಪಿಸ್ತಾದ ಸದ್ಗುಣಗಳ ಬಗ್ಗೆ ಗೊತ್ತೇ?

ಬಾದಾಮಿ, ಗೋಡಂಬಿ, ಪಿಸ್ತಾ, ಚಿಯಾ, ಅಗಸೆ ಮುಂತಾದ ಎಲ್ಲ ಬೀಜಗಳೂ ಪ್ರೊಟೀನ್‌, ವಿಟಮಿನ್‌, ನಾರು, ಖನಿಜಗಳು ಮತ್ತು ಉತ್ತಮ ಕೊಬ್ಬುಗಳ ಗೋದಾಮಿದ್ದಂತೆ. ಹಾಗೆಂದು ಎಲ್ಲ ಬೀಜಗಳಲ್ಲೂ ಒಂದೇ ಪೋಷಕಾಂಶಗಳನ್ನು ಹೊತ್ತು ಬರುವುದಿಲ್ಲ. ಈ ಲೇಖನದಲ್ಲಿ ಪಿಸ್ತಾ ಸೇವನೆಯಿಂದ ಯಾವೆಲ್ಲ ರೀತಿಯಿಂದ ಉಪಯೋಗವಿದೆ ಎನ್ನುವುದನ್ನು ನೋಡೋಣ.

ಮಹಿಳೆಗೆ ಸಂಕೀರ್ಣ ಡಬಲ್ ವಾಲ್ವ್ ಬದಲಿ ಶಸ್ತ್ರಚಿಕಿತ್ಸೆಯನ್ನು ಸಕ್ರಿಯಗೊಳಿಸಿದ ಸುಧಾರಿತ ರೊಬೊಟಿಕ್ ತಂತ್ರಜ್ಞಾನ

ಬದಲಿ ಶಸ್ತ್ರಚಿಕಿತ್ಸೆ ಸಕ್ರಿಯಗೊಳಿಸಿದ ಸುಧಾರಿತ ರೊಬೊಟಿಕ್ ತಂತ್ರಜ್ಞಾನ

ಶಸ್ತ್ರಚಿಕಿತ್ಸೆಯ ನಂತರ ಕೇವಲ 12 ಗಂಟೆಗಳಲ್ಲೇ ರೋಗಿಯನ್ನು ವೆಂಟಿಲೇಟರ್‌ ನಿಂದ ಬಿಡುಗಡೆ ಮಾಡಿ ಅವರಿಗೆ ನಡೆಯಲು ಅನುವು ಮಾಡಿಕೊಡಲಾಯಿತು. ಆ ನಂತರ ಬಹಳ ಬೇಗ ವಾರ್ಡ್‌ ಗೆ ಸ್ಥಳಾಂತರಿಸಿ, ಶಸ್ತ್ರಚಿಕಿತ್ಸೆಯ ಮೂರನೇ ದಿನವೇ ಮನೆಗೆ ಡಿಸ್ ಚಾರ್ಜ್ ಮಾಡಲಾಯಿತು. ಒಂದು ವಾರದ ಫಾಲೋ- ಅಪ್‌ ನಡೆಸಲಾಗಿದ್ದು, ಈ ಹಂತದಲ್ಲಿ ಅವರು ಯಾವುದೇ ಸಮಸ್ಯೆಗಳಿಲ್ಲದೆ ಚೆನ್ನಾಗಿಯೇ ಇದ್ದರು

Health Tips: ದಿನಕ್ಕೊಂದು ಸೀಬೆ ತಿಂದರೆ ಹೃದಯದ ಆರೋಗ್ಯಕ್ಕೆ ಯಾವೆಲ್ಲಾ ಬೆನಿಫಿಟ್‌ ಇರಲಿದೆ?

ಪೇರಳೆಯಲ್ಲಿ ಹೇರಳವಾಗಿದೆ ‘ಸಿ' ವಿಟಮಿನ್

ಕಿತ್ತಳೆ ಹಣ್ಣಿನಲ್ಲಿರುವುದಕ್ಕಿಂತಲೂ ಸೀಬೆ ಹಣ್ಣಿನಲ್ಲಿ ವಿಟಮಿನ್ ಸಿ ಅಂಶ ಅಧಿಕವಾಗಿದೆ. ಈ ಹಣ್ಣಿನಲ್ಲಿ ಕಂಡುಬರುವ ಅಧಿಕ ಪ್ರಮಾಣದ ನಾರಿನಂಶ, ಪೊಟ್ಯಾಶಿಯಂ, ಮತ್ತು ಸಮೃದ್ಧವಾಗಿರುವ ಆಂಟಿ ಟಾಕ್ಸಿಕ್ ಅಂಶಗಳು ನಮ್ಮ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಪ್ರಯೋಜನಕಾರಿಯಾಗಿದೆ.

Health Tips: ವಾರದಿಂದ ಕಾಡುವ ನೆಗಡಿ, ಕೆಮ್ಮಿಗೆ ಇಲ್ಲಿದೆ ಸರಳ ಮನೆ ಮದ್ದು

ದೀರ್ಘ ಕಾಲದ ನೆಗಡಿ-ಕೆಮ್ಮು ಸಮಸ್ಯೆಗೆ ಈ ಸರಳ ಕ್ರಮ ಫಾಲೋ ಮಾಡಿ

ನಮ್ಮ ಸುತ್ತಮುತ್ತಲು ಇರುವ ಔಷಧೀಯ ಗಿಡಗಳಿಂದಲೇ ದೀರ್ಘ ಕಾಲದ ನೆಗಡಿ, ಕೆಮ್ಮು ಕಫದಂತಹ ಆರೋಗ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಅದರಲ್ಲಿಯೂ ತುಳಸಿ ಎಲೆ ದೀರ್ಘ ಕಾಲದ ನೆಗಡಿ, ಕಫ, ಕೆಮ್ಮು ಸಮಸ್ಯೆಗೆ ಸುಲಭವಾಗಿ ಪರಿಹಾರ ನೀಡುವ ಜತೆಗೆ ಅನೇಕ ಇತರ ಆರೋಗ್ಯ ಸಮಸ್ಯೆಯನ್ನೂ ನಿವಾರಿಸುತ್ತದೆ ಎಂದು ವೈದ್ಯೆ ಡಾ. ಪದ್ಮಾವತಿ ರಾಥೋಡ್ ವಿವರಿಸಿದ್ದಾರೆ.

Health Tips: ಅಂಗೈಯಲ್ಲೇ ಇದೆ ಔಷಧ ಭಂಡಾರ; ತೂಕ ಇಳಿಕೆಯಿಂದ ಹಿಡಿದು ಬೊಜ್ಜು ಕರಗಿಸಲು ನೆರವಾಗುತ್ತದೆ ಈ ಮ್ಯಾಜಿಕ್‌ ಪಾನೀಯ

ಶುಗರ್ ಕಂಟ್ರೋಲ್ ಮಾಡುತ್ತದೆ ಈ ಪಾನೀಯ

ಬಾಳೆ ದಿಂಡಿನ ಸೇವನೆಯು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಬಾಳೆ ದಿಂಡು ಜೀರ್ಣಾಂಗ ವ್ಯವಸ್ಥೆ ಮತ್ತು ಆಮ್ಲೀಯತೆಯ ಸಮಸ್ಯೆಗೆ ಪರಿಹಾರವನ್ನು ನೀಡುತ್ತದೆ. ಬಾಳೆ ದಿಂಡು ಪೊಟ್ಯಾಸಿಯಮ್, ವಿಟಮಿನ್ ಬಿ6, ಮೆಗ್ನೀಸಿಯಮ್, ವಿಟಮಿನ್ ಸಿ, ತಾಮ್ರ , ಕಬ್ಬಿಣ, ಮ್ಯಾಂಗನೀಸ್, ಕಾರ್ಬೋಹೈಡ್ರೇಟ್‌, ಫೈಬರ್, ಇತರ ಖನಿಜಗಳು ಮತ್ತು ಸೂಕ್ಷ್ಮ ಪೋಷಕಾಂಶಗಳಿಂದ ಸಮೃದ್ಧವಾಗಿದೆ.

ಮಾತು ಕಮ್ಮಿ ಮಾಡಿ ಮೌನ ವ್ರತ ಪಾಲಿಸಿದರೆ ಈ ಎಲ್ಲ ಆರೋಗ್ಯ ಲಾಭ ನಿಮ್ಮದಾಗಲಿದೆ; ಈ ಬಗ್ಗೆ ತಜ್ಞರು ಹೇಳೋದೇನು?

ವಾರಕ್ಕೆ ಒಮ್ಮೆಯಾದರೂ ಮೌನ ವ್ರತ ಪಾಲಿಸಿ

Benefit of Silence: ಜೀವನದಲ್ಲಿ ಮೌನವಾಗಿರುವುದು ನಮ್ಮ ವ್ಯಕ್ಯಿತ್ವ ರೂಪುಗೊಳ್ಳಲು ಸಹಕಾರಿ. ಜತೆಗೆ ಮೌನವಾಗಿರುವುದು ವೈಜ್ಞಾನಿಕ ದೃಷ್ಟಿಯಿಂದ ಏನೆಲ್ಲ ಅನುಕೂಲ ಇದೆ ಎಂಬುದನ್ನು ವಿಶ್ವವಾಣಿ ಹೆಲ್ತ್ ಚಾನಲ್‌ನಲ್ಲಿ ಖ್ಯಾತ ವೈದ್ಯ ಡಾ. ಮಾಲಿನಿ ಎಸ್. ಸುತ್ತೂರು ತಿಳಿಸಿಕೊಟ್ಟಿದ್ದಾರೆ. ದೊಡ್ಡ ಸಾಧಕರು ಕೂಡ ಮಾತಿಗಿಂತ ಕೃತಿ ಲೇಸು ಎಂಬ ತತ್ವ ಅಳವಡಿಸಿಕೊಂಡಿದ್ದರು. ಮೌನವಾಗಿರುವುದು ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಬಹಳ ಪ್ರಯೋಜನೆ ಸಿಗಲಿದೆ ಎಂದು ತಿಳಿಸಿದ್ದಾರೆ.

obesity Awareness: ಒಬೆಸಿಟಿ ಕುರಿತು ಮಕ್ಕಳಿಗೆ ಶಾಲೆಯಂದಲೇ ಅರಿವು ಮೂಡಿಸುವ ಕೆಲಸವಾಗಬೇಕು : ಮಕ್ಕಳ ತಜ್ಞ ಡಾ. ರಾಜೀವ್‌ ಅಗರ್ವಾಲ್‌

ಒಬೆಸಿಟಿ ಕುರಿತು ಮಕ್ಕಳಿಗೆ ಶಾಲೆಯಂದಲೇ ಅರಿವು ಮೂಡಿಸುವ ಕೆಲಸವಾಗಬೇಕು

ಇಂದಿನ ದಿನಗಳಲ್ಲಿ ನಾಲಿಗೆಗೆ ರುಚಿ ಹೆಚ್ಚಿಸುವ ಆಹಾರಗಳು ಮಕ್ಕಳ ಕೈಗೆ ಸುಲಭವಾಗಿ ಸಿಗು ತ್ತಿರುವ ಕಾರಣ, ಜಂಕ್‌ಫುಡ್‌ನತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಅವರಿಗೆ ಯಾವುದು ಆರೋಗ್ಯಕ್ಕೆ ಆಪ್ತ ಹಾಗೂ ಆಪತ್ತು ಎಂಬುದನ್ನು ತಿಳಿ ಹೇಳುವ ಕೆಲಸ ಶಾಲೆಯಿಂದಲೇ ಆಗಬೇಕು. ಮನೆಯಲ್ಲಿ ಪೋಷಕರಷ್ಟೇ ಶಿಕ್ಷಕರಿಗೂ ಜವಾಬ್ದಾರಿ ಇರಲಿದೆ.

Beauty Tips: ಕೂದಲು ಉದುರುವ ಸಮಸ್ಯೆಯಿಂದ ಬೇಸತ್ತಿದ್ದೀರಾ? ಹಾಗಾದ್ರೆ ಈ ಟಿಪ್ಸ್ ಟ್ರೈ ಮಾಡಿ ನೋಡಿ

ಕೂದಲು ಉದುರುವುದನ್ನು ನಿಯಂತ್ರಿಸಲು ಇಲ್ಲಿದೆ ಮನೆಮದ್ದು

Hair Care Tips: ಕೂದಲು ಉದುರುವ ಸಮಸ್ಯೆ ಇಂದು ಬಹುತೇಕ ಎಲ್ಲರಿಗೂ ಸಾಮಾನ್ಯವಾಗಿದ್ದು, ಇದಕ್ಕೆ ಸರಿಯಾದ ಪರಿಹಾರ ಹುಡುಕುವುದು ಹಲವು ಬಾರಿ ಸವಾಲಾಗುತ್ತದೆ. ಜೊತೆಗೆ, ರಾಸಾಯನಿಕ ಅಂಶಗಳಿಂದ ತಯಾರಿಸಿದ ಹೇರ್ ಕಲರ್ ಹಾಗೂ ಬಣ್ಣಗಳನ್ನು ಬಳಸುವುದರಿಂದ ಕೂದಲಿನ ಆರೋಗ್ಯ ಮತ್ತಷ್ಟು ಹದೆಗೆಡುತ್ತಿದ್ದು, ಕೂದಲು ಉದುರುವಿಕೆ ಸಮಸ್ಯೆಗೂ ದಾರಿ ಮಾಡಿಕೊಡುತ್ತದೆ. ಹಾಗಾದ್ರೆ ಇದನ್ನು ನಿಯಂತ್ರಿಸುವುದೇಗೆ ಎಂದು ಯೋಚಿಸುತ್ತಿದ್ದರೆ ಇಲ್ಲಿದೆ ಸಿಂಪಲ್ ಟಿಪ್ಸ್..

Dental Problem: ಚಳಿಗಾಲದಲ್ಲಿ ಹಲ್ಲಿನ ಸಮಸ್ಯೆ ನಿಭಾಯಿಸುವುದು ಹೇಗೆ?

ಚಳಿಗಾಲದಲ್ಲಿ ಹಲ್ಲಿನ ಸಮಸ್ಯೆಗೆ ಪರಿಹಾರ ಇಲ್ಲಿದೆ!

ಹಲ್ಲುಗಳ ಕ್ಷೇಮಕ್ಕೆ ಮಾರಕವಾಗುವಂಥ ಕೆಲವು ವಿಚಿತ್ರ ಸವಾಲುಗಳು ಚಳಿಗಾಲದಲ್ಲಿ ಎದುರಾ ಗುವುದು ನಿಜ. ರಜೆಯ ಪ್ರವಾಸಗಳು, ಮಿತ್ರಕೂಟಗಳು, ಹೊಸವರ್ಷದ ಪಾರ್ಟಿ ಎಂದು ಸಹಜವಾಗಿ ಸಿಹಿ ತಿನ್ನುವ ಪ್ರಮಾಣ ಹೆಚ್ಚಿರುತ್ತದೆ. ಇದಕ್ಕೆ ಸರಿಯಾಗಿ, ಆಗಾಗ ಬಾಯಿ ತೊಳೆಯದಿರುವುದು, ಚಳಿಯ ನೆಪವನ್ನೊಡ್ಡಿ ರಾತ್ರಿ ಹಲ್ಲುಜ್ಜದೇ ಮಲಗುವುದು ಮುಂತಾದವು ದಂತ ಸ್ವಾಸ್ಥ್ಯ ಹಾಳಾಗುವುದಕ್ಕೆ ಬಹಳಷ್ಟು ಕೊಡುಗೆಯನ್ನು ನೀಡುತ್ತವೆ. ಹಾಗಾದರೆ ಚಳಿಗಾಲದಲ್ಲಿ ಹಲ್ಲುಗಳ ಯೋಗಕ್ಷೇಮ ಕಾಪಾಡಲು ಏನು ಮಾಡಬಹುದು?

Vitamin D Deficiency: ವಿಟಮಿನ್‌ ಡಿ ಕೊರತೆಯಿಂದ ಬಳಲುತ್ತಿದ್ದೀರಾ? ಆಹಾರ ತಜ್ಞರು ಹೇಳೋದೇನು?

ವಿಟಮಿನ್ ಡಿ ಕೊರತೆ ಇದ್ದರೆ ಪರಿಹಾರ ಏನು?

ಜನಸಂಖ್ಯೆಯಲ್ಲಿ ಶೇ.80ರಷ್ಟು ಜನರು ವಿಟಮಿನ್‌ ಡಿ ಕೊರತೆಯಿಂದ ಬಳಲುತ್ತಿದ್ದಾರೆ. ಪರೀಕ್ಷೆ ನಡೆಸಿ ದಾಗ ಎಲ್ಲಾ ವಯೋಮಾನದವರಲ್ಲೂ ಸಹ ವಿಟಮಿನ್‌ ಡಿ ಮತ್ತು ವಿಟಮಿನ್‌ ಬಿ12 ಕೊರತೆ ಇರುವುದು ತಿಳಿದುಬರುತ್ತಿದೆ. ಬಹುತೇಕ ಮಂದಿ ಈ ಸಮಸ್ಯೆಗೆ ಪರಿಹಾರ ಮಾಂಸಹಾರ ಸೇವನೆ ಎಂಬ ತಪ್ಪು ಕಲ್ಪನೆ ಹೊಂದಿದ್ದಾರೆ ಎಂದು ಬೆಂಗಳೂರಿನ ವಾಸವಿ ಆಸ್ಪತ್ರೆಯ ಆಹಾರ ತಜ್ಞೆ ಡಾ. ಸುನಿತಾ ವಿವರಿಸಿದ್ದಾರೆ.

Loading...