ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಆರೋಗ್ಯ

ಈ ಹಣ್ಣುಗಳನ್ನೂ ಒಟ್ಟಿಗೆ ಸೇವಿಸುತ್ತೀರಾ? ಅಪಾಯ ತಪ್ಪಿದ್ದಲ್ಲ!

ಈ ಹಣ್ಣುಗಳನ್ನು ಎಂದಿಗೂ ಒಟ್ಟಿಗೆ ಸೇವಿಸಬೇಡಿ!

Health Tips: ಮುಖ್ಯವಾಗಿ ಹಣ್ಣುಗಳು ನಮ್ಮ ದೇಹಕ್ಕೆ ಪೋಷಕಾಂಶ ಹಾಗೂ ಜೀವಸತ್ವಗಳನ್ನು ಒದಗಿಸುತ್ತದೆ. ಆದರೆ ನಮ್ಮ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ ಎಂದು ತಿಳಿದಿದ್ದರೂ ಕೆಲವು ಹಣ್ಣುಗಳನ್ನು ಒಟ್ಟಿಗೆ ಸೇವಿಸುವುದು ನಿಜವಾಗಿಯೂ ಅಪಾಯಕಾರಿ ಎಂಬುದು ನಿಮಗೆ ತಿಳಿದಿದೆಯೇ? ಆಯುರ್ವೇದ ಆರೋಗ್ಯ ತಜ್ಞರ ಪ್ರಕಾರ, ಕೆಲವು ಹಣ್ಣುಗಳು ಹೊಟ್ಟೆಯ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು..

ಬೆಂಗಳೂರಿನಲ್ಲಿ ಬೃಹತ್ 'ಜಿಸಿಸಿ' ಸ್ಥಾಪನೆ ಘೋಷಿಸಿದ ಮೆಡ್‌ಟೆಕ್‌ ದೈತ್ಯ 'ಡಿಪ್ಯೂ ಸಿಂಥೆಸ್', 500ಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ

'ಜಿಸಿಸಿ' ಸ್ಥಾಪನೆ ಘೋಷಿಸಿದ ಮೆಡ್‌ಟೆಕ್‌ ದೈತ್ಯ 'ಡಿಪ್ಯೂ ಸಿಂಥೆಸ್'

ರೋಗಿಗಳಿಗೆ, ವೈದ್ಯಕೀಯ ಪಾಲುದಾರರಿಗೆ ಹಾಗೂ ಶಸ್ತ್ರಚಿಕಿತ್ಸಕರಿಗೆ ಅತ್ಯಾಧುನಿಕ ಸೇವೆ ಒದಗಿಸುವ ನಿಟ್ಟಿನಲ್ಲಿ ಈ ಕೇಂದ್ರವು ಕೆಲಸ ಮಾಡಲಿದೆ. ಮುಖ್ಯವಾಗಿ ಸಾಫ್ಟ್‌ವೇರ್ ಡೆವಲಪ್ಮೆಂಟ್, ಡೇಟಾ ಮತ್ತು ಕೃತಕ ಬುದ್ಧಿಮತ್ತೆ, ಎಂಟರ್‌ಪ್ರೈಸ್ ಅಪ್ಲಿಕೇಶನ್ಸ್, ಸೈಬರ್ ಸೆಕ್ಯುರಿಟಿ ಸೇರಿದಂತೆ ಹಲವು ನವೀನ ತಂತ್ರಜ್ಞಾನಗಳ ಅಭಿವೃದ್ಧಿಗೆ ಈ ಜಿಸಿಸಿ ವೇದಿಕೆಯಾಗಲಿದೆ.

ಪ್ರೋಟೀನ್ ಭರಿತ ಆಹಾರವನ್ನು ಹೇಗೆ ಸೇವಿಸಬೇಕು? ತಜ್ಞರು ನೀಡಿದ ಸಲಹೆ ಏನು?

ಪ್ರೋಟೀನ್ ಆಹಾರಗಳನ್ನು ಹೇಗೆ ಸೇವಿಸಿದರೆ ಒಳಿತು ಗೊತ್ತೆ?

Health Tips: ಕಡಲೆ, ರಾಜ್ಮಾ, ಹೆಸರುಕಾಳಿನಂತಹ ಆಹಾರಗಳನ್ನು ಪೌಷ್ಟಿಕಾಂಶ ಹೆಚ್ಚಿಸಲು ಸೇವಿಸಲಾಗುತ್ತದೆ, ಆದರೆ ಪ್ರತಿಯೊಂದೂ ನೆನೆಸುವುದು, ಮೊಳಕೆ ಭರಿಸುವುದು, ಕುದಿಸುವುದು ಅಥವಾ ಹುರಿ ಯುವುದರಿಂದ ಆರೋಗ್ಯ ಲಾಭವನ್ನು ಪಡೆಯಲಾಗುವುದಿಲ್ಲ. ಹಾಗಿದ್ದರೆ ಪ್ರೋಟೀನ್ ಭರಿತ ಆಹಾರವನ್ನು ಹೇಗೆ ಸೇವಿಸಬೇಕು?

ಮಣಿಪಾಲ್ ಆಸ್ಪತ್ರೆಯಲ್ಲಿ ದೇಶದ ಮೊದಲ ಎಐ ಆಧಾರಿತ ಎಲೆಕ್ಟಾ ಇವೋ

ಮಣಿಪಾಲ್ ಆಸ್ಪತ್ರೆಯಲ್ಲಿ ದೇಶದ ಮೊದಲ ಎಐ ಆಧಾರಿತ ಎಲೆಕ್ಟಾ ಇವೋ

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಅಂಕಿಅಂಶಗಳ ಪ್ರಕಾರ, ದೇಶದಲ್ಲಿ ಪ್ರತಿ ವರ್ಷ ಸುಮಾರು 14.6 ಲಕ್ಷ ಹೊಸ ಕ್ಯಾನ್ಸರ್ ಪ್ರಕರಣಗಳು ದಾಖಲಾಗುತ್ತಿವೆ. ಈ ಹಿನ್ನೆಲೆ ಯಲ್ಲಿ ರೋಗಿಯ ಅಗತ್ಯಕ್ಕೆ ತಕ್ಕಂತೆ ಚಿಕಿತ್ಸೆಯನ್ನು ರೂಪಿಸುವ ತಂತ್ರಜ್ಞಾನಗಳ ಅಗತ್ಯ ಹೆಚ್ಚುತ್ತಿದ್ದು, ಎಲೆಕ್ಟಾ ಇವೋ ಈ ದಿಸೆಯಲ್ಲಿ ಮಹತ್ವದ ಹೆಜ್ಜೆಯಾಗಿದೆ.

100 ವರ್ಷ ಬದುಕಬೇಕಿದ್ದರೆ ಈ ಜಾಗಕ್ಕೆ ಹೋಗಿ!

ಶತಾಯುಷಿಯಾಗುವುದು ಹೇಗೆ ?

ಇತ್ತೀಚಿನ ದಿನಗಳಲ್ಲಿ ಸಣ್ಣ ವಯಸ್ಸಿಗೆ ಜನರು ಹೃದಯಾಘಾತ, ಕ್ಯಾನ್ಸರ್ ನಂತಹ ಗಂಭೀರ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಇದರಿಂದ 100 ವರ್ಷ ದಾಟುವುದು ಬಿಡಿ 40 ದಾಟಿದರೂ ದೊಡ್ಡದೇ ಎನ್ನುವಂತಾಗಿದೆ. ಇಂತಹ ಸಮಯದಲ್ಲೂ ಕೂಡ 100 ವರ್ಷಕ್ಕಿಂತ ಹೆಚ್ಚು ಕಾಲ ಬಾಳಬೇಕು ಎನ್ನುವವರು ವಿಶ್ವದ ಈ ಒಂದು ಜಾಗಗಳಿಗೆ ಹೋಗಿ ವಾಸ ಮಾಡಬಹುದು. ಅಂತಹ ಜಾಗ ಯಾವುದು, ಅಲ್ಲಿನ ವಿಶೇಷತೆ ಏನು ಎಂಬುದರ ಕುರಿತು ಮೈಸೂರು ವಿವಿಯ ಡಾ. ಸುತ್ತೂರು ಮಾಲಿನಿ ಅವರು ನೀಡಿರುವ ಮಾಹಿತಿ ಇಲ್ಲಿದೆ.

ನಿಮ್ಮ ಚರ್ಮವನ್ನು ಹೊಳೆಯುವಂತೆ ಮಾಡಬೇಕೇ?ಈ ಪಾನೀಯಗಳ ಸೇವನೆಗೆ ಆದ್ಯತೆ ನೀಡಿ!

ಯೌವ್ವನದ ಚರ್ಮವನ್ನು ಕಾಪಾಡಿಕೊಳ್ಳಲು ಈ ಪಾನೀಯ ಸೇವಿಸಿ!

Health Tips: ಯೌವನದಿಂದ ಕಾಣುವಂತೆ ಹಾಗೂ ಚರ್ಮ ನೈಸರ್ಗಿಕವಾಗಿ ಹೊಳೆಯುವಂತೆ ಮಾಡಲು ಅದ್ಬುತ ಆಹಾರ ಸೇವೆನೆ ಕಡೆಗೆ ಆಧ್ಯತೆಯನ್ನು ನೀಡಬೇಕಾಗುತ್ತದೆ. ಅದರಲ್ಲೂ ಕಾಲಜನ್ ಅನ್ನೋದು ಯೌವ್ವನದ ಮತ್ತು ಕಾಂತಿಯುತ ಚರ್ಮದ ಹಿಂದಿನ ರಹಸ್ಯವಾಗಿದೆ. ಇದು ನಮ್ಮ ದೇಹದಲ್ಲಿ ಹೇರಳವಾಗಿರುವ ಪ್ರೋಟೀನ್ ಆಗಿದ್ದು, ಚರ್ಮ, ಸ್ನಾಯುಗಳು ಹಾಗೂ ಮೂಳೆಗಳಿಗೆ ಬೆಂಬಲ ನೀಡುತ್ತದೆ.

ಎಚ್‌ಸಿಜಿ ಕರ್ನಾಟಕದ ಮೊದಲ ಎಲೆಕ್ಟಾ ಯುನಿಟಿ ಎಂಆರ್-ಲೈನಾಕ್ ಮೂಲಕ ರೋಗಿಗಳಿಗೆ ಚಿಕಿತ್ಸೆ

ರಾಜ್ಯಕ್ಕೆ ಕಾಲಿಟ್ಟ ಎಂಆರ್-ಮಾರ್ಗದರ್ಶಿತ ಅಡಾಪ್ಟಿವ್ ರೇಡಿಯೇಷನ್ ಥೆರಪಿ

ಹೆಲ್ತ್‌ಕೇರ್ ಗ್ಲೋಬಲ್ ಎಂಟರ್‌ಪ್ರೈಸಸ್ (ಎಚ್‌ಸಿಜಿ), ಕರ್ನಾಟಕದ ಮೊದಲ ಎಲೆಕ್ಟಾ ಯುನಿಟಿ ಎಂಆರ್-ಲೈನಾಕ್ ಅನ್ನು ಬಳಸಿಕೊಂಡು ಕ್ಯಾನ್ಸರ್ ರೋಗಿಗಳ ಚಿಕಿತ್ಸೆ ಪ್ರಾರಂಭಿಸಿದೆ. ಈ ಮಹತ್ವದ ಮೈಲುಗಲ್ಲಿನೊಂದಿಗೆ, ಎಚ್‌ಸಿಜಿಯು ಕರ್ನಾಟಕ ಮತ್ತು ನೆರೆಹೊರೆಯ ಪ್ರದೇಶಗಳಲ್ಲಿನ ರೋಗಿಗಳಿಗೆ ಎಂಆರ್-ಮಾರ್ಗದರ್ಶಿತ ಹೊಂದಾಣಿಕೆಯ ವಿಕಿರಣ ಚಿಕಿತ್ಸೆಗೆ ಪ್ರವೇಶ ಒದಗಿಸಿದೆ.

Dr N Someshwara Column: ಎರಡು ಹುಚ್ಚುನಾಯಿಗಳು ಹಾಗೂ ಅವುಗಳ ನಿಯಂತ್ರಣ !

ಎರಡು ಹುಚ್ಚುನಾಯಿಗಳು ಹಾಗೂ ಅವುಗಳ ನಿಯಂತ್ರಣ !

ಒಂದು ಹುಚ್ಚು ನಾಯಿ ಅಟ್ಟಿಸಿಕೊಂಡು ಬಂದಿತು ಎಂದು ಭಾವಿಸೋಣ. ಅದು ಎಲ್ಲಿ ಕಚ್ಚಿ ಬಿಡುತ್ತದೆ ಯೋ ಎಂಬ ಭಯವು ನಮ್ಮನ್ನು ಕಾಡುತ್ತದೆ. ಈಗ ನಮ್ಮ ಮುಂದೆ ಇರುವುದು ಎರಡೇ ದಾರಿ. ಒಂದು ಕೆಳಗೆ ಬಿದ್ದಿರುವ ಕಲ್ಲನ್ನು ಕೈಗೆ ತೆಗೆದುಕೊಂಡು, ಧೈರ್ಯವಾಗಿ ನಾಯಿಯನ್ನು ಎದುರಿಸ ಬೇಕು. ಇಲ್ಲವೇ ನಾಯಿಯ ಬಾಯಿಗೆ ಸಿಗದ ಹಾಗೆ ಮಿಂಚಿನ ವೇಗದಲ್ಲಿ ಓಡಿ ಹೋಗಬೇಕು. ನಮ್ಮ ನಿರ್ಧಾರವನ್ನು ಕಾರ್ಯರೂಪಕ್ಕೆ ತರಬೇಕಾದರೆ ನಮ್ಮ ದೇಹದಲ್ಲಿ ಅಗತ್ಯ ಸಿದ್ಧತೆ ಗಳು ನಡೆಯಬೇಕಾಗುತ್ತದೆ.

ತಲೆನೋವು ಬರುತ್ತಿದೆಯೇ? ನೀವು ಮಾಡುವ ಈ ತಪ್ಪುಗಳು ಕೂಡ ಕಾರಣವಾಗಿರಬಹುದು!

ತಲೆನೋವಿಗೆ ತಜ್ಞರ ಸಲಹೆ ಏನು?

Health Tips: ಕೆಲವೊಮ್ಮೆ ಬಿಸಿಲಿಗೆ ಹೋದಾಗ, ಒತ್ತಡ ಇದ್ದಾಗ ಅಥವಾ ನೀವು ಸರಿಯಾದ ಸಮಯಕ್ಕೆ ಆಹಾರವನ್ನು ಸೇವಿಸದಿದ್ದಾಗ ಕೂಡ ತಲೆನೋವು ಬರಬಹುದು. ಆದರೆ ಪದೇ ಪದೇ ತಲೆನೋವು ಬರುವುದು ಸಾಮಾನ್ಯವಾದ ಸಮಸ್ಯೆಯಲ್ಲ, ಇದರ ಬಗ್ಗೆ ಮೊದಲೇ ಮುನ್ನೆಚ್ಚರಿಕೆ ವಹಿಸುವ ಬಗ್ಗೆ ತಜ್ಞರು ಸಲಹೆ ನೀಡಿದ್ದಾರೆ. ಕೆಲವೊಮ್ಮೆ ನಮ್ಮ ದೈನಂದಿನ ಅಭ್ಯಾಸದಲ್ಲಿ ಬದಲಾವಣೆ ಮಾಡಿಕೊಳ್ಳುವ ಮೂಲಕ ಪರಿಹಾರ ಕಂಡುಕೊಳ್ಳಬಹುದು.

Vishwavani Health: ಬಿಳಿ ಕೂದಲನ್ನು ಕಪ್ಪು ಮಾಡುತ್ತೆ ಈ ಒಂದು ಮ್ಯಾಜಿಕ್‌ ಸೊಪ್ಪು; ಕಾಡಲ್ಲಿ ಮಾತ್ರವಲ್ಲ ನಾಡಲ್ಲೂ ಸಿಗುತ್ತೆ! ವಿಡಿಯೊ ನೋಡಿ Video

ಕೂದಲಿನ ಆರೈಕೆಗೆ ಹೊನ್ನಿನ ಗುಣವುಳ್ಳ ಸೊಪ್ಪು ಯಾವುದು ಗೊತ್ತೇ?

ಕೂದಲು ಉದುರುವುದು, ಬಾಲ ನೆರೆ ಸೇರಿದಂತೆ ಕೂದಲಿನ ನಾನಾ ರೀತಿಯ ತೊಂದರೆ ಇದ್ದವರು ಈ ಒಂದು ಸೊಪ್ಪನ್ನು ಬಳಸಿ ನಿವಾರಣೆ ಮಾಡಿಕೊಳ್ಳಬಹುದು. ಆ ಸೊಪ್ಪು ಯಾವುದು, ಅದರಿಂದ ಕಾಡಿಗೆ, ಹೇರ್ ಆಯಿಲ್, ಹೇರ್ ಪ್ಯಾಕ್ ತಯಾರಿಸುವುದು ಹೇಗೆ ಎನ್ನುವ ಕುರಿತು ಆಯುರ್ವೇದ ಸೌಂದರ್ಯ ತಜ್ಞರಾದ ದೀಪಾ ನಾಗೇಶ್ ಅವರು ನೀಡಿರುವ ಮಾಹಿತಿ ಇಲ್ಲಿದೆ.

ಬೆಳಗ್ಗಿನ ಉಪಾಹಾರ ಸೇವಿಸಿದ ನಂತರವೂ ಹಸಿವಾಗುತ್ತಿದೆಯೇ? ಕಾರಣವೇನು?

ಉಪಾಹಾರ ಸೇವಿಸಿದ ನಂತರವೂ ಹಸಿವು ಹೆಚ್ಚಾಗುತ್ತಿದೆಯೇ?

Health Tips: ಕೆಲವರಿಗೆ ಹೊಟ್ಟೆ ತುಂಬಾ ತಿಂದರೂ ಹಸಿವಾದ ಅನುಭವ ಆಗುತ್ತದೆ. ಇದಕ್ಕೆ ಕಾರಣವೇನು? ಎನ್ನುವ ಪ್ರಶ್ನೆ ಹಲವರಲ್ಲಿ ಇರಬಹುದು. ರಕ್ತದಲ್ಲಿನ ಸಕ್ಕರೆಯ ತ್ವರಿತ ಏರಿಳಿತಗಳು, ಅಗತ್ಯವಾದ ಮ್ಯಾಕ್ರೋನ್ಯೂಟ್ರಿಯೆಂಟ್‌ಗಳ ಕೊರತೆ ಅಥವಾ ಕಳಪೆ ನಿದ್ರೆ, ಒತ್ತಡ ಮತ್ತು ನಿರ್ಜಲೀಕರಣದಂತಹ ಜೀವನಶೈಲಿಯೂ ಇದಕ್ಕೆ ಕಾರಣವಾಗಿರಬಹುದು. ನಾವು ಸೇವನೆ ಮಾಡುವ ಆಹಾರದಲ್ಲಿ ಪೋಷಕಾಂಶಗಳು ಇಲ್ಲದೆ ಇದ್ದಾಗ ಈ ರೀತಿ ಸಮಸ್ಯೆ ಕಾಣಿಸಿಕೊಳ್ಳಬಹುದು.

Vishwavani Health: ಮಳೆಗಾಲದಲ್ಲಿ ಮಧುಮೇಹಿಗಳು ವಹಿಸಲೇಬೇಕಾದ ಎಚ್ಚರಿಕೆ ಏನು? ಇಲ್ಲಿದೆ ತಜ್ಞರ ಸಲಹೆ Video

ಮಳೆಗಾಲದಲ್ಲಿ ಮಧುಮೇಹಿಗಳಿಗೆ ಕಾಡುವ ಆರೋಗ್ಯ ಸಮಸ್ಯೆಗಳು

ಮಧುಮೇಹ ಕಾಯಿಲೆಯಿಂದ ಬಳಲುತ್ತಿರುವವರು ಮಳೆಗಾಲದಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಲೇಬೇಕು. ಸ್ವಲ್ಪ ನಿರ್ಲಕ್ಷವು ಅಪಾಯಕಾರಿಯಾಗಬಹುದು ಎನ್ನುತ್ತಾರೆ ಮಧುಮೇಹ ತಜ್ಞ ಡಾ. ಸುಮನ್. ಮಳೆಗಾಲದಲ್ಲಿ ಮಧುಮೇಹಿಗಳು ಯಾವ ರೀತಿಯ ಆಹಾರ ಸೇವಿಸಬೇಕು? ದಿನಚರಿ ಪಾಲಿಸಬೇಕು ಎಂಬುದರ ಕುರಿತು ಅವರು ನೀಡಿರುವ ಮಾಹಿತಿ ಇಲ್ಲಿದೆ.

ಕನಕಪುರ ರಸ್ತೆಯಲ್ಲಿ ಮಣಿಪಾಲ್ ಆಸ್ಪತ್ರೆಯ ಸಮಗ್ರ ಮಕ್ಕಳ ಚಿಕಿತ್ಸಾ ಕೇಂದ್ರ ಆರಂಭ

ಮಣಿಪಾಲ್ ಆಸ್ಪತ್ರೆಯ ಸಮಗ್ರ ಮಕ್ಕಳ ಚಿಕಿತ್ಸಾ ಕೇಂದ್ರ ಆರಂಭ

ಕನಕಪುರ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಕುಟುಂಬಗಳಿಗೆ ಮಕ್ಕಳ ಆರೋಗ್ಯ ಸೇವೆಯನ್ನು ಇನ್ನಷ್ಟು ಸುಲಭವಾಗಿ ಮತ್ತು ಮನೆ ಸಮೀಪದಲ್ಲೇ ದೊರಕುವಂತೆ ಮಾಡಲು, ಮಣಿಪಾಲ್ ಆಸ್ಪತ್ರೆ ಕನಕಪುರ ರಸ್ತೆಯಲ್ಲಿ ಮಕ್ಕಳ ಚಿಕಿತ್ಸಾ ಕೇಂದ್ರ (Paediatrics Centre) ಹಾಗೂ ಮಕ್ಕಳ ಉನ್ನತ ವಿಶೇಷ ಚಿಕಿತ್ಸಾ ಸೇವೆಗಳನ್ನು (Paediatric Super Specialty Services ) ಆರಂಭಿಸಿದೆ.

Dr. Rohith Kumar H G Column: ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವುದೇಕೆ?

ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವುದೇಕೆ?

ಕ್ಯಾನ್ಸರ್ ಹೊಸ ಕಾಯಿಲೆಯಲ್ಲ. ಪ್ರಾಚೀನ ಈಜಿಪ್ಟಿನ ಮಮ್ಮಿಗಳಲ್ಲಿ ಹಾಗೂ ಕೋಟ್ಯಂತರ ವರ್ಷಗಳ ಹಿಂದಿನ ಡೈನೋಸರ್‌ಗಳ ಪಳೆಯುಳಿಕೆಗಳಲ್ಲಿಯೂ ಮೂಳೆಯ ಕ್ಯಾನ್ಸರ್ ಇರುವುದನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಅಂದರೆ ಕ್ಯಾನ್ಸರ್ ಆಧುನಿಕ ನಾಗರಿಕತೆಯ ಸೃಷ್ಟಿಯಲ್ಲ. ಹಾಗಾದರೆ, ಈಗ ಯಾಕೆ ಇಷ್ಟೊಂದು ಹೆಚ್ಚಾಗುತ್ತಿದೆ?

ಅಕ್ಕಿ ತೊಳೆದ ನೀರು ಚೆಲ್ಲುತ್ತೀರಾ? ಅದರಲ್ಲಿದೆ ಈ ಆರೋಗ್ಯದ ಗುಟ್ಟು!

ಚರ್ಮದ ಆರೋಗ್ಯ ವೃದ್ಧಿಗೆ ಸಹಕಾರಿ ಅಕ್ಕಿ ತೊಳೆದ ನೀರು!

Health Tips: ಅಕ್ಕಿ ತೊಳೆದ ನೀರು ಚೆಲ್ಲುವುದೇ ಹೆಚ್ಚು, ಆದರೆ ಇದರಲ್ಲಿ ಹಲವು ರೀತಿಯ ಆರೋಗ್ಯ ಲಾಭಗಳಿದ್ದು ಸೌಂದರ್ಯ ವರ್ಧಕವಾಗಿಯೂ ಬಳಕೆ ಮಾಡಬಹುದು. ಅಕ್ಕಿಯನ್ನು ನೆನೆಸಿ ಅಥವಾ ಕುದಿಸಿದ ನಂತರ ಉಳಿದ ಈ ದ್ರವವು ವಿಟಮಿನ್‌ಗಳು, ಉತ್ಕರ್ಷಣ ನಿರೋಧಕಗಳು ಮತ್ತು ಅಮೈನೋ ಆಮ್ಲಗಳ ವಿಶಿಷ್ಟ ಮಿಶ್ರಣವನ್ನು ಹೊಂದಿರುತ್ತದೆ. ವೈಜ್ಞಾನಿಕ ಸಂಶೋಧನೆ ಪ್ರಕಾರ ಇದನ್ನು ಸೇವನೆ ಮಾಡಿದರೆ ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ನೀಡಬಹುದು.

3000 ರೊಬೊ ನೆರವಿನ ಶಸ್ತ್ರಚಿಕಿತ್ಸೆಗಳ ಪೂರ್ಣಗೊಳಿಸಿದ ಎಂಬ ಹೆಗ್ಗಳಿಕೆಗೆ ಫೋರ್ಟಿಸ್ ಆಸ್ಪತ್ರೆ ಪಾತ್ರ

3000 ರೊಬೊ ನೆರವಿನ ಶಸ್ತ್ರಚಿಕಿತ್ಸೆಗಳ ಪೂರ್ಣಗೊಳಿಸಿದ ಫೋರ್ಟಿಸ್ ಆಸ್ಪತ್ರೆ

2018 ರಲ್ಲಿ ತನ್ನ ರೋಬೋಟಿಕ್ ಶಸ್ತ್ರಚಿಕಿತ್ಸಾ ಕಾರ್ಯಕ್ರಮವನ್ನು ಪ್ರಾರಂಭಿಸಿದ ದಿನದಿಂದಲೂ ಆಸ್ಪತ್ರೆಯು ಯುರಾಲಜಿ, ಮೂತ್ರಪಿಂಡ ಕಸಿ, ಗೈನಕಾಲಜಿ, ಸರ್ಜಿಕಲ್ ಆಂಕಾಲಜಿ, ಗ್ಯಾಸ್ಟ್ರೋ ಇಂಟಸ್ಟೈನಲ್ ಶಸ್ತ್ರಚಿಕಿತ್ಸೆ, ಬೇರಿಯಾಟ್ರಿಕ್ ಶಸ್ತ್ರಚಿಕಿತ್ಸೆ, ಹೃದ್ರೋಗ ಶಸ್ತ್ರಚಿಕಿತ್ಸೆ ಮತ್ತು ಇಎನ್‌ಟಿ ಸೇರಿದಂತೆ 12 ಕ್ಕೂ ಹೆಚ್ಚು ವಿಭಾಗಗಳಲ್ಲಿ ಭಾರತದ ಅತ್ಯಂತ ಸಮಗ್ರ ರೋಬೋಟಿಕ್ ಶಸ್ತ್ರಚಿಕಿತ್ಸಾ ಕಾರ್ಯಕ್ರಮಗಳಲ್ಲಿ ಒಂದನ್ನು ನಿರ್ಮಿಸಿದೆ

ಬೆಳಗಿನ ವಾಕಿಂಗ್‌ ಅಥವಾ ಸಂಜೆ ವಾಕಿಂಗ್‌; ಆರೋಗ್ಯಕ್ಕೆ ಯಾವುದು ಹೆಚ್ಚು ಉತ್ತಮ? ವೇಗದ ತೂಕ ಇಳಿಕೆಗೆ ನೆರವಾಗೋದು ಯಾವುದು?

ಬೆಳಗಿನ ನಡಿಗೆ VS ಸಂಜೆ ನಡಿಗೆ: ಆರೋಗ್ಯಕ್ಕೆ ಯಾವುದು ಉತ್ತಮ?

Morning Walk vs Evening Walk: ಪ್ರತಿದಿನ 30–45 ನಿಮಿಷಗಳ ವಾಕಿಂಗ್ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ. ಆದರೆ ಬೆಳಗ್ಗೆ ನಡೆಯುವುದು ಉತ್ತಮವೇ ಅಥವಾ ಸಂಜೆ ನಡೆಯುವುದೇ ಹೆಚ್ಚು ಲಾಭಕರವೇ ಎಂಬ ಪ್ರಶ್ನೆಗೆ ತಜ್ಞರು ಉತ್ತರ ನೀಡಿದ್ದಾರೆ. ತೂಕ ಇಳಿಕೆ, ಹೃದಯದ ಆರೋಗ್ಯ, ಉತ್ತಮ ನಿದ್ರೆ ಸೇರಿ ವಿವಿಧ ವಿಚಾರಗಳಿಗೆ ಸಂಬಂಧಿಸಿ ಎರಡೂ ಸಮಯದ ನಡಿಗೆಯ ಪ್ರಯೋಜನಗಳ ಬಗ್ಗೆ ತಿಳಿಯಿರಿ.

ಚರ್ಮದ ಕಾಂತಿಯಿಂದ ಹಿಡಿದು ತೂಕ ಇಳಿಕೆಯವರೆಗೆ-  ಬೀಟ್‌ರೂಟ್ ಜ್ಯೂಸ್ ನ ಲಾಭ ಒಂದೆರಡಲ್ಲ!

ಬೀಟ್‌ರೂಟ್ ಜ್ಯೂಸ್ ಆರೋಗ್ಯ ಲಾಭದ ಬಗ್ಗೆ ನಿಮಗೆ ತಿಳಿದಿದೆಯೇ?

Health Tips: ತರಕಾರಿಗಳಲ್ಲಿ ಬೀಟ್ ರೂಟ್ ಅಂದಾಗ ಹೆಚ್ಚಿನವರು ದೂರ ಸರಿಯುತ್ತಾರೆ. ಆದರೆ ಇದರ ಆರೋಗ್ಯ ಲಾಭವನ್ನು ತಿಳಿದರೆ ಖಂಡಿತ ನೀವು ಸೇವನೆ ಮಾಡಬಹುದು‌. ಅಗತ್ಯ ಪೋಷಕಾಂಶಗಳು, ಉತ್ಕರ್ಷಣ ನಿರೋಧಕಗಳು ಮತ್ತು ನೈಟ್ರೇಟ್‌ಗಳಿಂದ ತುಂಬಿದ್ದು ನಿಮ್ಮ ದೇಹವನ್ನು ಚೈತನ್ಯ ಗೊಳಿಸುವುದಲ್ಲದೆ ಆರೋಗ್ಯವಾಗಿರಲು ಪ್ರೇರಿಪಿಸುತ್ತದೆ.

ತುರ್ತು ಚಿಕಿತ್ಸಾ ಘಟಕದಲ್ಲಿ ಸ್ಪರ್ಶ್‌ ಆಸ್ಪತ್ರೆಗೆ ಜಾಗತಿಕ ಮನ್ನಣೆ: ಐಎಫ್‌ಇಎಂ ಗೋಲ್ಡ್‌ ಲೆವಲ್‌ ಪ್ರಮಾಣ ಪತ್ರದ ಪಡೆದ ಹೆಗ್ಗಳಿಕೆ

ತುರ್ತು ಚಿಕಿತ್ಸಾ ಘಟಕದಲ್ಲಿ ಸ್ಪರ್ಶ್‌ ಆಸ್ಪತ್ರೆಗೆ ಜಾಗತಿಕ ಮನ್ನಣೆ

ತುರ್ತು ಚಿಕಿತ್ಸಾ ಸಂದರ್ಭಗಳಲ್ಲಿ ವೇಗ, ನಿಖರತೆ ಮತ್ತು ನಿರಂತರ ಸಮನ್ವಯತೆಯು ಕ್ಲಿಷ್ಟಕರ ವಾದ ರೋಗ ಸ್ಥಿತಿಯಲ್ಲಿರುವ ರೋಗಿಯ ಚಿಕಿತ್ಸೆಯಲ್ಲಿ ಅತ್ಯುತ್ತಮ ಫಲಿತಾಂಶಗಳನ್ನು ಸಾಧಿಸುವಲ್ಲಿ ನಿರ್ಣಾಯಕವಾಗಿರುತ್ತದೆ. 10 ಅಧ್ಯಾಯಗಳು ಮತ್ತು 200ಕ್ಕೂ ಹೆಚ್ಚು ಪ್ರಮುಖ ಮಾನದಂಡ ಗಳನ್ನು ಅಂತರರಾಷ್ಟ್ರೀಯ ಮಾನದಂಡಗಳೊಂದಿಗೆ ಜೋಡಿಸಲಾಗಿದ್ದ ಈ ಗೋಲ್ಡ್ ಪರ್ರಮಾಣೀ ಕರಣವು ಚಿಕಿತ್ಸೆಯಲ್ಲಿನ ಉತ್ಕೃಷ್ಟತೆ ಮತ್ತು ಮತ್ತು ರೋಗಿಗಳ ಸುರಕ್ಷತೆಯ ಮೇಲಿನ ನಮ್ಮ ಬದ್ಧತೆಯನ್ನು ಇನ್ನಷ್ಟು ಬಲಪಡಿಸುತ್ತದೆ

ಅನಿಯಮಿತ ಹೃದಯ ಬಡಿತ: ಹೃದಯದ ಬಡಿತದ ಲಯದ ಸಮಸ್ಯೆಯನ್ನು ಆರಂಭದಲ್ಲೇ ಗುರುತಿಸಿ

ಹೃದಯದ ಬಡಿತದ ಲಯದ ಸಮಸ್ಯೆಯನ್ನು ಆರಂಭದಲ್ಲೇ ಗುರುತಿಸಿ

ಭಾರತದಂತಹ ದೇಶದಲ್ಲಿ ಈ ವಿಷಯ ಇನ್ನಷ್ಟು ಮಹತ್ವದ್ದಾಗಿದೆ, ಏಕೆಂದರೆ ಹೃದಯ ಮತ್ತು ರಕ್ತನಾಳಗಳಿಗೆ ಸಂಬಂಧಿಸಿದ ಕಾಯಿಲೆಗಳು ಇಂದಿಗೂ ಸಾರ್ವಜನಿಕ ಆರೋಗ್ಯದ ಪ್ರಮುಖ ಸವಾಲಾಗಿವೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಪ್ರಕಾರ, ಪ್ರತಿವರ್ಷ ಜಗತ್ತಿನಾದ್ಯಂತ ಲಕ್ಷಾಂತರ ಜನರು ಹೃದಯ ಮತ್ತು ರಕ್ತನಾಳಗಳ ಕಾಯಿಲೆಗಳಿಂದ ಬಳಲುತ್ತಾರೆ.

ಮಳೆಗಾಲದಲ್ಲಿ ಜೀರ್ಣಕ್ರಿಯೆ ಸಮಸ್ಯೆಯೇ? ಈ ಆಹಾರಗಳಿಗೆ ಆದ್ಯತೆ ನೀಡಿ!

ಕರುಳಿನ ಆರೋಗ್ಯವನ್ನು ನೈಸರ್ಗಿಕವಾಗಿ ಹೆಚ್ಚಿಸುವ ಆಹಾರಗಳು

Health Tips: ಮಾನ್ಸೂನ್ ಋತುವಿನಲ್ಲಿ ತಂಪಾದ ವಾತಾವರಣ ಇದ್ದರೂ ನಿಮ್ಮ ಜೀರ್ಣಾಂಗ ವ್ಯವಸ್ಥೆ ಸವಾಲಿನದ್ದಾಗಿರಬಹುದು. ಕಲುಷಿತ ನೀರು, ಅಸ್ವಚ್ಛ ಆಹಾರದಿಂದ ಅತಿಸಾರ, ಭೇದಿ, ಗ್ಯಾಸ್ಟ್ರಿಕ್‌ ನಂತ ಸಮಸ್ಯೆ ಕಾಣಿಸಿಕೊಂಡು ಜೀರ್ಣಕ್ರಿಯೆಗೆ ಪ್ರಬಲ ಪೆಟ್ಟು ಬೀಳಲಿದೆ. ಹಾಗಾಗಿ ತಾಜಾ, ಸರಳ ಮತ್ತು ಪೌಷ್ಟಿಕ ಆಹಾರಗಳನ್ನು ಆರಿಸಿಕೊಳ್ಳುವುದು ಮಳೆಗಾಲದಲ್ಲಿ ಜೀರ್ಣಕಾರಿ ಆರೋಗ್ಯವನ್ನು ಬೆಂಬಲಿಸಲು ಸಹಾಯ ಮಾಡುತ್ತದೆ.

ಊಟದ ನಂತರ ಸದಾ ಹಸಿವಾಗುತ್ತಿದೆಯೇ? ರಕ್ತದ ಸಕ್ಕರೆಯ ಸಂಪರ್ಕವನ್ನು ಅರಿಯಿರಿ

ಊಟದ ನಂತರ ಸದಾ ಹಸಿವಾಗುತ್ತಿದೆಯೇ?

ಕೆಲ ವ್ಯಕ್ತಿಗಳು ಬಹಳ ಕಡಿಮೆ ಆಹಾರ ಸೇವಿಸಿದ್ದೇವೆ ಎಂದು ಭಾವಿಸುತ್ತಾರೆ. ವಾಸ್ತವದಲ್ಲಿ ಸಮಸ್ಯೆಯು ಆಹಾರದ ಪ್ರಮಾಣದಲ್ಲಿ ಅಲ್ಲ, ಬದಲಿಗೆ ದೇಹವು ಅದನ್ನು ಹೇಗೆ ನಿರ್ವಹಿಸುತ್ತದೆ ಎನ್ನುವುದರಲ್ಲಿದೆ. ಉಪಾಹಾರವು ರಿಫೈನ್ಡ್ ಕಾರ್ಬೊಹೈಡ್ರೇಟ್ ಗಳನ್ನು ಹೊಂದಿರುತ್ತದೆ, ಅದು ತಕ್ಷಣವೇ ಶಕ್ತಿ ನೀಡಬಹುದು, ಆದರೆ ಅದು ರಕ್ತದ ಸಕ್ಕರೆಯ ದೀರ್ಘಾವಧಿ ಸ್ಥಿರತೆ ನೀಡುವುದಿಲ್ಲ. ಸಕ್ಕರೆಯ ಅಂಶದ ತೀವ್ರ ಹೆಚ್ಚಳ ಮತ್ತು ಕುಸಿತ ಹಸಿವು ಬೇಗನೆ ಮರುಕಳಿಸುವಂತೆ ಮಾಡುತ್ತದೆ.

ರೋಗ ಬರದಂತೆ ತಡೆಯಲು ನಮ್ಮ ಊಟ ಹೇಗಿರಬೇಕು? ನ್ಯೂಟ್ರಿಷನ್ ಸಮಿಟ್‌ನಲ್ಲಿ ತಜ್ಞರಿಂದ ಸಿಗಲಿದೆ ಉತ್ತರ

ರೋಗ ಬರದಂತೆ ತಡೆಯಲು ನಮ್ಮ ಊಟ ಹೇಗಿರಬೇಕು?

ಉತ್ತಮ ಆಹಾರ ಪದ್ಧತಿಯಿಂದ ರೋಗಗಳನ್ನು ಹೇಗೆ ತಡೆಯಬಹುದು ಮತ್ತು ಸುದೀರ್ಘ ಕಾಲ ಆರೋಗ್ಯವಾಗಿ ಬದುಕುವುದು ಹೇಗೆ ಎಂಬುದನ್ನು ಚರ್ಚಿಸಲು, ಹ್ಯಾಪಿಯೆಸ್ಟ್ ಹೆಲ್ತ್ ಸಂಸ್ಥೆಯು ಇದೇ ಆಗಸ್ಟ್ 8, 2026 ರಂದು ಬೆಂಗಳೂರಿನಲ್ಲಿ 'ದಿ ಎಡ್ಜ್ ಆಫ್ ನ್ಯೂಟ್ರಿಷನ್ 2026' ಎಂಬ ಒಂದು ದಿನದ ಬೃಹತ್ ಸಮಿಟ್ ಅನ್ನು ಆಯೋಜಿಸಿದೆ.

ಸರ್ಕಾರಿ ಆರೋಗ್ಯ ಯೋಜನೆಗಳಡಿ ಅರ್ಹ ಬಿಪಿಎಲ್ ಕುಟುಂಬಗಳಿಗೆ ನಗದುರಹಿತ ಐವಿಎಫ್ ಸೇವೆಗಳನ್ನು ಆರಂಭಿಸಿದ 'ಮಿಲನ್'

ನಗದುರಹಿತ ಐವಿಎಫ್ ಸೇವೆಗಳನ್ನು ಆರಂಭಿಸಿದ 'ಮಿಲನ್'

ಕರ್ನಾಟಕದ ಅರ್ಹ ಬಿಪಿಎಲ್ ಪಡಿತರ ಚೀಟಿದಾರರು ಸರ್ಕಾರದ ಆರೋಗ್ಯ ಯೋಜನೆಗಳಡಿ ನಿಗದಿ ಪಡಿಸಲಾದ ಅರ್ಹತಾ ಮಾನದಂಡಗಳು, ಟ್ರೀಟ್‌ಮೆಂಟ್ ಪ್ಯಾಕೇಜ್, ರೆಫರಲ್ ಪ್ರಕ್ರಿಯೆ ಹಾಗೂ ಮಾರ್ಗ ಸೂಚಿಗಳಿಗೆ ಒಳಪಟ್ಟು, ಆಯ್ದ ಮಿಲನ್ ಕೇಂದ್ರ ಗಳಲ್ಲಿ ಶೇ. 100ರಷ್ಟು ನಗದುರಹಿತವಾಗಿ ಅನುಮೋದಿತ ಫರ್ಟಿಲಿಟಿ ಚಿಕಿತ್ಸೆಯನ್ನು ಪಡೆಯಬಹುದಾಗಿದೆ.

Loading...