ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಆರೋಗ್ಯ

ಬೆಲ್ಲ ತಿಂದರೆ ಉಸಿರಾಟದ ಸಮಸ್ಯೆ ನಿವಾರಣೆಯಾಗುತ್ತಾ? ತಜ್ಞರು ಹೇಳೋದೇನು?

ಬೆಲ್ಲ ತಿಂದರೆ ಉಸಿರಾಟದ ತೊಂದರೆ ಕಡಿಮೆಯಾಗುತ್ತದೆಯೇ?

Health Tips: ಸಣ್ಣ ತುಂಡು ಬೆಲ್ಲ ತಿನ್ನುವುದರಿಂದ ಗಂಟಲು ಶುದ್ಧವಾಗಿ ಕೆಮ್ಮು ಕಡಿಮೆಯಾಗುತ್ತದೆ. ಇದು ನೈಸರ್ಗಿಕ ಕ್ಲೆನ್ಸರ್ ಮತ್ತು ಕಫ ನಿವಾರಕವಾಗಿ ಕಾರ್ಯನಿರ್ವಹಿಸಲಿದ್ದು ಲೋಳೆಯನ್ನು ತೆರವುಗೊಳಿಸಲು ಮತ್ತು ಉಸಿರಾಡುವ ಮಾಲಿನ್ಯಕಾರಕಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ ಎಂದು ಕೆಲವು ವೈಜ್ಞಾನಿಕ ಸಂಶೋಧನೆಯಲ್ಲಿ ಪ್ರಕಟವಾಗಿದೆ. ಹಾಗಿದ್ರೆ ಬೆಲ್ಲ ತಿಂದರೆ ಉಸಿರಾಟದ ಸಮಸ್ಯೆ ನಿವಾರಣೆಯಾಗುತ್ತಾ?..

ಶಿಗೆಲ್ಲಾ ಕಾಟಕ್ಕೆ ಕೇರಳಂ ಕಂಗಾಲು: ಜೂನ್‌ನಲ್ಲೇ 70 ಸೋಂಕು ಪ್ರಕರಣ ದಾಖಲು; ಏನಿದರ ಲಕ್ಷಣ?

ಕೇರಳಂನಲ್ಲಿ ಶಿಗೆಲ್ಲಾ ಸೋಂಕಿನ ಅಬ್ಬರ: 146 ಪ್ರಕರಣ, 5 ಸಾವು

Shigella: ಕೇರಳಂನಲ್ಲಿ ಈ ವರ್ಷ ಇದುವರೆಗೆ 146 ಶಿಗೆಲ್ಲಾ ಸೋಂಕು ಪ್ರಕರಣಗಳು ದಾಖಲಾಗಿದ್ದು, ಐವರು ಮೃತಪಟ್ಟಿದ್ದಾರೆ. ಜೂನ್ ತಿಂಗಳಲ್ಲೇ 70 ಪ್ರಕರಣಗಳು ವರದಿಯಾಗಿರುವುದು ಆತಂಕ ಹೆಚ್ಚಿಸಿದೆ. ಮಳೆಗಾಲದಲ್ಲಿ ನೀರಿನ ಕಲುಷಿತಗೊಂಡು ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ನಿಗಾ ಹಾಗೂ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ.

Health Tips: ಸೌತೆಕಾಯಿ ಸೇವನೆ ಆರೋಗ್ಯಕ್ಕೆ ಒಳಿತೇ? ತಜ್ಞರು ಹೇಳೋದೇನು?

ಸೌತೆಕಾಯಿ ನಿಮ್ಮ ದೇಹವನ್ನು ಅಸ್ವಸ್ಥಗೊಳಿಸಬಹುದೇ?

ಸೌತೆಕಾಯಿಯಲ್ಲಿ ಜೀವಸತ್ವಗಳು ಮತ್ತು ಉತ್ಕರ್ಷಣ ನಿರೋಧಕಗಳು ಹೆಚ್ಚಿನ ಪ್ರಮಾಣದಲ್ಲಿದ್ದು ಜನಪ್ರಿಯ ಬೇಸಿಗೆ ಆಹಾರವಾಗಿದೆ. ಆದರೆ ಸೌತೆಕಾಯಿ ಸಾಮಾನ್ಯವಾಗಿ ಹೆಚ್ಚಿನ ಜನರಿಗೆ ಸುರಕ್ಷಿತ ವಾಗಿದ್ದರೂ, ಅವು ಕೆಲವೊಮ್ಮೆ ಕೆಲವು ಸಂದರ್ಭಗಳಲ್ಲಿ ಅಡ್ಡಪರಿಣಾಮಗಳು ಅಥವಾ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ತಜ್ಞರು ಎಚ್ಚರಿಕೆಯನ್ನು ನೀಡಿದ್ದಾರೆ.

ಪ್ರಿ ಡಯಾಬಿಟಿಸ್'ಗೆ ಸರಳ ಮದ್ದು !

ಪ್ರಿ ಡಯಾಬಿಟಿಸ್'ಗೆ ಸರಳ ಮದ್ದು !

ನನ್ನ ಪ್ರಾಕ್ಟೀಸಿನಲ್ಲಿ ದಿನಕ್ಕೊಮ್ಮೆಯಾದರೂ ಕೇಳಿ ಬರುವ ಅತಿ ರೋಚಕವಾದ ಮತ್ತು ಅಷ್ಟೇ ಅಪಾಯಕಾರಿಯಾದ ಡೈಲಾಗ್ ಇದು: ರಕ್ತಪರೀಕ್ಷೆಯ ವರದಿಯನ್ನು ನನ್ನ ಮುಂದಿಟ್ಟು, ಮುಖದಲ್ಲಿ ಒಂದು ವಿಜಯದ ನಗೆ ಬೀರುತ್ತಾ ಹೇಳ್ತಾರೆ ‘ನೋಡಿ ಡಾಕ್ಟ್ರೇ, ನನಗೇನೂ ಶುಗರ್ ಇಲ್ಲ! ರಿಪೋರ್ಟ್‌ ನಲ್ಲಿ ಶುಗರ್ ಬರೀ ‘ಬಾರ್ಡರ್’ನಲ್ಲಿದೆ ಅಂತ ಲ್ಯಾಬ್‌ನವರು ಹೇಳಿದ್ರು

R Ramaradhya Column: ಯೋಗ ಅಭ್ಯಾಸವೇ ಡಾ.ರಾಜ್‌ ಯಶಸ್ಸಿನ ಕೀಲಿಕೈ !

ಯೋಗ ಅಭ್ಯಾಸವೇ ಡಾ.ರಾಜ್‌ ಯಶಸ್ಸಿನ ಕೀಲಿಕೈ !

ಕ್ಲಿಷ್ಟವಾದ ಹಲವು ಯೋಗಾಸನಗಳನ್ನು ಸುಲಭವಾಗಿ ಮಾಡಿ, ಇಂತಹ ಅದ್ವಿತೀಯ ಸಾಧನೆ ಗೈದವರು ನಮ್ಮ ಡಾ. ರಾಜ್‌ಕುಮಾರ್. ಆ ಚಲನಚಿತ್ರದ ಟೈಟಲ್ ಕಾರ್ಡ್‌ನಲ್ಲಿ ಅಳವಡಿಸಿದ್ದ ಯೋಗಾಭ್ಯಾಸ ಭಂಗಿಗಳನ್ನು ಪ್ರದರ್ಶಿಸಲು, ಅಪಾರ ಅಭ್ಯಾಸ, ಸಾಧನೆ ಮತ್ತು ಏಕಾಗ್ರತೆ ಬೇಕು! ಅಂದು ಅವರ ಯೋಗಾಸನವು ಉನ್ನತ ಮಟ್ಟದಲ್ಲಿತ್ತು; ಅದನ್ನು ಮೂವಿ ಕ್ಯಾಮೆರಾದಲ್ಲಿ ಸೆರೆ ಹಿಡಿದ ಅಂದಿನ ಆ ಸಾಹಸ ಅನುಕರಣಾರ್ಹ

ಯೋಗ ಲೋಕಹಿತಾರ್ಥಾಯ

ಯೋಗ ಲೋಕಹಿತಾರ್ಥಾಯ

ನಾವು ಇಂದು ವಿಶ್ವ ಯೋಗ ದಿನಾಚರಣೆಯ ಸಂಭ್ರಮದಲ್ಲಿದ್ದೇವೆ. ಈ ಸಂದರ್ಭದಲ್ಲಿ ಯೋಗ ದಿನದ ಮಹತ್ವ ಮತ್ತು ಯೋಗ ನಮ್ಮ ಜೀವನದಲ್ಲಿ ನಿರ್ವಹಿಸುತ್ತಿರುವ ಮಹತ್ವದ ಪಾತ್ರವನ್ನು ಕುರಿತು ಚಿಂತಿಸುವುದಕ್ಕೆ ಸಕಾಲ. ಭಾರತ ದೇಶವು ಪ್ರಾಚೀನ ಕಾಲಗಳಿಂದಲೂ ಜ್ಞಾನ ವಿಜ್ಞಾನ ಗಳ ತವರೂರು. ಪ್ರಪಂಚದ ಬೇರೆ ಬೇರೆ ಭಾಗಗಳಿಂದ ಇಲ್ಲಿಗೆ ಬಂದು ಜ್ಞಾನ ಸಂಪಾದನೆಯನ್ನು ಮಾಡಿ ತೆರಳುತ್ತಿದ್ದ ಐತಿಹಾಸಿಕ ಘಟನೆಗಳನ್ನು ನಾವು ಕೇಳಿದ್ದೇವೆ.

International Day of Yoga 2026: ಋತುಬಂಧ ನಿಭಾಯಿಸಲು ಯೋಗ ಸಹಕಾರಿ

ಋತುಬಂಧ ನಿಭಾಯಿಸಲು ಯೋಗ ನೆರವಾಗುವುದೇ?

Yoga for Menopause: ಮೈ ಬಿಸಿಯಾಗುವುದು ಮತ್ತು ಅತಿಯಾಗಿ ಬೆವರುವುದು ಮುಟ್ಟಾದ ದಿನಗಳ ಅತ್ಯಂತ ಸಾಮಾನ್ಯ ಲಕ್ಷಣ. ಹೀಗೆ ಇದ್ದಕ್ಕಿದ್ದಂತೆ ಮೈ ಬಿಸಿಯೇರುವುದು ಸಾಕಷ್ಟು ಕಿರಿಕಿರಿಯನ್ನುಂಟು ಮಾಡುತ್ತದೆ. ಯೋಗದಲ್ಲಿ ಅಭ್ಯಾಸ ಮಾಡುವ ಉತ್ತಾನಪಾದಾಸನ, ಬಾಲಾಸನ, ವಿಪರೀತ ಕರಣಿಯಂಥ ಆಸನಗಳು ಮನಸ್ಸನ್ನು ವಿಶ್ರಾಂತಿಯೆಡೆಗೆ ದೂಡುತ್ತವೆ.

ಇಂದು ವಿಶ್ವ ಯೋಗ ದಿನ: ಆರೋಗ್ಯಪೂರ್ಣ ಭವಿಷ್ಯಕ್ಕೆ ಯೋಗದ ಸಂಕಲ್ಪ

ವಿಶ್ವ ಯೋಗ ದಿನ: ಆರೋಗ್ಯಪೂರ್ಣ ಭವಿಷ್ಯಕ್ಕೆ ಯೋಗದ ಸಂಕಲ್ಪ

International Yoga Day 2026: ಪ್ರತಿ ವರ್ಷ ಜೂನ್ 21ರಂದು ಆಚರಿಸಲಾಗುವ ಅಂತಾರಾಷ್ಟ್ರೀಯ ಯೋಗ ದಿನವು ಯೋಗದ ಆರೋಗ್ಯ, ಮಾನಸಿಕ ಶಾಂತಿ ಮತ್ತು ಆಧ್ಯಾತ್ಮಿಕ ಬೆಳವಣಿಗೆಯ ಮಹತ್ವವನ್ನು ಸಾರುತ್ತದೆ. 2026ರ ಥೀಮ್ ʼಆರೋಗ್ಯಪೂರ್ಣ ವಯಸ್ಸಿಗೆ ಯೋಗʼ ಆಗಿದ್ದು, ಎಲ್ಲ ವಯೋಮಾನದವರ ಸಮಗ್ರ ಆರೋಗ್ಯವನ್ನು ಉತ್ತೇಜಿಸುವ ಗುರಿ ಹೊಂದಿದೆ.

Dr Sadhanashree Column: ʼನಂಬಿಕೆಯ ಶಕ್ತಿʼ: ಚಿಕಿತ್ಸೆಯ ಯಶಸ್ಸಿನ ಹಿಂದೆ ಇರುವ ಅದೃಶ್ಯ ಔಷಧಿ

ʼನಂಬಿಕೆಯ ಶಕ್ತಿʼ: ಚಿಕಿತ್ಸೆಯ ಯಶಸ್ಸಿನ ಹಿಂದೆ ಇರುವ ಅದೃಶ್ಯ ಔಷಧಿ

ಮನಸ್ಸು ಮತ್ತು ದೇಹದ ಈ ಸಂಬಂಧವನ್ನು ಅರ್ಥಮಾಡಿಕೊಳ್ಳಲು ಒಂದು ಸರಳ ಉದಾಹರಣೆ ಸಾಕು. ನೀವು ಹುಳಿಯಾದ ನಿಂಬೆರಸವನ್ನು ಕೇವಲ ಕಲ್ಪಿಸಿಕೊಂಡರೂ ಬಾಯಿಯಲ್ಲಿ ನೀರು ಬರುತ್ತದೆ. ನಿಜವಾದ ನಿಂಬೆಹಣ್ಣು ಇಲ್ಲದಿದ್ದರೂ ಮನಸ್ಸಿನ ಕಲ್ಪನೆಯೇ ದೇಹದಲ್ಲಿ ಪ್ರತಿಕ್ರಿಯೆಯನ್ನು ಉಂಟು ಮಾಡುತ್ತದೆ. ಹಾಗಿದ್ದರೆ ಆರೋಗ್ಯ ಮತ್ತು ಗುಣಮುಖತೆಯ ಬಗ್ಗೆ ಮನಸ್ಸಿನಲ್ಲಿ ಮೂಡುವ ಗಾಢ ನಂಬಿಕೆಯು ದೇಹದ ಮೇಲೆ ಪರಿಣಾಮ ಬೀರುವುದು ಆಶ್ಚರ್ಯದ ಸಂಗತಿ ಯೇನಲ್ಲ.

ಮಧ್ಯಾಹ್ನದ ಈ ಅಭ್ಯಾಸಗಳು ನಿಮ್ಮ ತೂಕ ಏರಿಕೆಗೆ ಕಾರಣವಾಗಬಹುದು!

ಮಧ್ಯಾಹ್ನದ ಈ ಹವ್ಯಾಸಗಳು ನಿಮ್ಮ ತೂಕವನ್ನು ಹೆಚ್ಚಿಸಬಹುದು!

Health Tips; ಕೆಲವರು ಡಯೆಟ್ ಹಾಗೂ ವರ್ಕೌಟ್ ಮಾಡುವ ಮೂಲಕ ತೂಕ ಇಳಿಕೆಗೆ ಪ್ರಯತ್ನಿ ಸುತ್ತಾರೆ. ಆದರೆ ಕೆಲವೊಮ್ಮೆ ನಾವು ಸೇವಿಸುವ ಆಹಾರ ಕೂಡ ತೂಕ ಏರಿಕೆಗೆ ಪ್ರಮುಖ ಕಾರಣ ವಾಗಬಹುದು. ಮಧ್ಯಾಹ್ನದ ಸಮಯದಲ್ಲಿ ಹಸಿವು ಹೆಚ್ಚಾಗಿ ಜಂಕ್ ಫುಡ್ ತಿನ್ನಬೇಕು, ಹೊರಗಿನ ಬಿಸಿ ಬಿಸಿ ಆಹಾರ ಬೇಕು ಎಂದು ಅನಿಸುವುದು ಸಾಮಾನ್ಯ.‌ ಈ ಸಂದರ್ಭದಲ್ಲಿ ನಾವು ಮಾಡುವ ತಪ್ಪುಗಳು ಮೆಟಬಾಲಿಸಂ ಪ್ರಕ್ರಿಯೆಯನ್ನು ನಿಧಾನ ಮಾಡಿ ತೂಕ ಹೆಚ್ಚಾಗಲು ಕಾರಣವಾಗುತ್ತವೆ.

International Yoga Day 2026: ಒತ್ತಡದ ಯುಗದಲ್ಲಿ ಯುವ ಪೀಳಿಗೆಗೆ 'ಯೋಗ' ಪರಿಹಾರ

ಒತ್ತಡದ ಯುಗದಲ್ಲಿ ಯುವ ಪೀಳಿಗೆಗೆ 'ಯೋಗ' ಪರಿಹಾರ

ಭಾರತೀಯ ಯೋಗಕ್ಕೆ ಸುಮಾರು ಐದು ಸಾವಿರ ವರ್ಷಗಳಿಗೂ ಹಿಂದಿನ ಸುದೀರ್ಘ ಇತಿಹಾಸವಿದೆ. 'ಯೋಗ' ಭಾರತೀಯರಿಗೆ ನಮ್ಮ ಪ್ರಾಚೀನ ಋಷಿಮುನಿಗಳು ನೀಡಿದಂತಹ ಒಂದು ಅತ್ಯದ್ಭುತವಾದ ವಿಜ್ಞಾನವಾಗಿದೆ. ಯೋಗದಿಂದ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳಿವೆ ಎಂಬ ಕುರಿತು ಮಂಗಳೂರಿನ ಯೋಗಪಟು ರಶ್ಮಿ ಬರಾಳು ಅವರ ಲೇಖನ ಇಲ್ಲಿದೆ.

ಕುಡುಗೋಲು ರಕ್ತಕಣ ರೋಗದ ಸುತ್ತಲಿನ ಮಿಥ್ಯೆಗಳು: ರೋಗ ಪರೀಕ್ಷೆ ತಡ ಮಾಡುವುದು ಜೀವಕ್ಕೆ ಕಂಟಕವಾಗಬಲ್ಲದು

ಕುಡುಗೋಲು ರಕ್ತಕಣ ರೋಗದ ಸುತ್ತಲಿನ ಮಿಥ್ಯೆಗಳು

ಕುಡುಗೋಲು ರಕ್ತಕಣದ ರೋಗಲಕ್ಷಣ ಮತ್ತು ರೋಗವಿರುವುದರ ನಡುವೆ ಕೂಡಾ ಗೊಂದಲವಿದೆ. ಈ ರೋಗಲಕ್ಷಣವುಳ್ಳ ಜನರು ಸಂಪೂರ್ಣ ಸಾಮಾನ್ಯ ಜೀವನ ನಡೆಸುತ್ತಿರುತ್ತಾರೆ ಮತ್ತು ಎಂದಿಗೂ ರೋಗ ಲಕ್ಷಣವನ್ನು ಅಭಿವೃದ್ಧಿ ಪಡಿಸಿಕೊಳ್ಳುವುದಿಲ್ಲ. ಅಂತಹ ಕಡೆ ಇಬ್ಬರೂ ಪೋಷಕರು ರೋಗವನ್ನು ಹೊಂದಿದ್ದಲ್ಲಿ ಮಗುವಿಗೆ ವರ್ಗಾವಣೆಯಾಗುವ ಸಾಧ್ಯತೆ ಇರುತ್ತದೆ.

Dr C N Manjunath: ಸುಧಾರಿತ ಹೃದಯದ ಆರೈಕೆಗೆ ಬೇಡಿಕೆ: ಎರಡನೇ ಕ್ಯಾಥ್ ಲ್ಯಾಬ್ ಸೇರ್ಪಡೆ, ವಾರ್ಷಿಕ ಹೆಚ್ಚುವರಿ 3,000 ರೋಗಿಗಳಿಗೆ ಚಿಕಿತ್ಸೆ

ಎರಡನೇ ಕ್ಯಾಥ್ ಲ್ಯಾಬ್ ಸೇರ್ಪಡೆ, ಹೆಚ್ಚುವರಿ 3,000 ರೋಗಿಗಳಿಗೆ ಚಿಕಿತ್ಸೆ

ಶೇಷಾದ್ರಿಪುರಂ ಅಪೋಲೋ ಆಸ್ಪತ್ರೆಯು ಪ್ರಸ್ತುತ ವಾರ್ಷಿಕ 4,000ಕ್ಕೂ ಹೆಚ್ಚು ಹೃದಯರೋಗದ ಪ್ರಕರಣಗಳನ್ನು ನಿರ್ವಹಿಸಬಲ್ಲದು. 2015ರಲ್ಲಿ ಅನುಷ್ಠಾನಗೊಳಿಸಲಾದ ಆಸ್ಪತ್ರೆಯ ಮೊದಲ ಕ್ಯಾಥ್ ಲ್ಯಾಬ್ 27,000ಕ್ಕೂ ಹೆಚ್ಚು ಪ್ರಕ್ರಿಯೆಗಳನ್ನು ನಿರ್ವಹಿಸುತ್ತಿದ್ದು ಅದು ತುರ್ತು ಹಾಗೂ ಯೋಜಿತ ಹೃದಯ ಚಿಕಿತ್ಸೆಗಳನ್ನು ದಿನಪೂರ್ತಿ ನೀಡುತ್ತಿದೆ.

ಆಹಾರಕ್ಕೆ ಕೃತಕ ಬಣ್ಣ ಬಳಸುತ್ತೀರಾ? ಈ ಬಗ್ಗೆ ಗೊತ್ತಿರಲಿ!

ಆಹಾರದಲ್ಲಿ ಕೃತಕ ಬಣ್ಣ: ಇರಲಿ ಎಚ್ಚರ

Health Tips: ಬೇಕರಿಗಳಿಗೆ ಹೋದರೆ, ನೋಡುವುದಕ್ಕೆ ಆಕರ್ಷಕವಾದ, ವರ್ಣಮಯವಾದ ತಿನಿಸುಗಳು ನಮ್ಮ ಗಮನ ಸೆಳೆಯುತ್ತವೆ. ನೋಡುತ್ತಿದ್ದಂತೆಯೇ ಬಾಯಲ್ಲಿ ನೀರೂರುವಂತೆ ಮಾಡುವ ಉದ್ದೇಶ ದಿಂದ ಬೇಕ್‌ ಮಾಡಿದ ತಿನಿಸುಗಳನ್ನು ರಂಗುರಂಗಾಗಿಯೇ ಇರಿಸುತ್ತಾರೆ. ಹೆಚ್ಚಿನ ಬಾರಿ ಈ ಎಲ್ಲಾ ತಿಂಡಿಗಳಲ್ಲೂ ಹಲವು ರೀತಿಯ ಬಣ್ಣಗಳನ್ನು (ಫುಡ್‌ ಕಲರ್‌) ಉಪಯೋಗಿಸಲಾಗುತ್ತದೆ. ಆಹಾರದಲ್ಲಿ ಉಪಯೋಗಿಸುವ ಬಣ್ಣಗಳು ಅರಿಶಿನ, ಕೇಸರಿಯಂಥ ನೈಸರ್ಗಿಕ ಮೂಲದ್ದೂ ಇರಬಹುದು ಅಥವಾ ಕೃತಕ ಬಣ್ಣಗಳೂ ಇರಬಹುದು. ಕೆಲವು ಬಣ್ಣಗಳಂತೂ ಹೊಟ್ಟೆಯನ್ನೆಲ್ಲಾ ಹಾಳು ಮಾಡಿ, ಆರೋಗ್ಯವನ್ನು ಏರುಪೇರು ಮಾಡಿಬಿಡುತ್ತದೆ.

ದಂತ ಚಿಕಿತ್ಸೆಗಾಗಿ ಲಂಡನ್‌ನಿಂದ ಬೆಂಗಳೂರಿಗೆ ಬಂದ ವ್ಯಕ್ತಿ; ಕೈಗೆಟುಕುವ ದರದ ಅತ್ಯಾಧುನಿಕ ಚಿಕಿತ್ಸೆಗೆ ಫಿದಾ

ಹಲ್ಲಿನ ಚಿಕಿತ್ಸೆಗಾಗಿ ಲಂಡನ್‌ನಿಂದ ಬೆಂಗಳೂರಿಗೆ ಬಂದ ವ್ಯಕ್ತಿ

Bengaluru News: ಹಲ್ಲಿನ ಗಂಭೀರ ಸಮಸ್ಯೆಯಿಂದ ಬಳಲುತ್ತಿದ್ದ ಲಂಡನ್‌ನ 42 ವರ್ಷದ ಜಾನ್ ಮಿಲ್ಲರ್ ಎಂಬುವವರು ಬರೋಬ್ಬರಿ 8,000 ಕಿಲೋ ಮೀಟರ್ ಪ್ರಯಾಣಿಸಿ ಬೆಂಗಳೂರಿಗೆ ಬಂದು ಯಶಸ್ವಿ ಚಿಕಿತ್ಸೆ ಪಡೆದು ಮರಳಿದ್ದಾರೆ. ಜತೆಗೆ ಬೆಂಗಳೂರಿನ ಚಿಕಿತ್ಸಾ ರೀತಿಗೆ ಫಿದಾ ಆಗಿದ್ದಾರೆ.

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ತಿಂಗಳಿಗೆ 3 ದಿನ ಪಿರಿಯಡ್ಸ್ ರಜೆ? ಆರೋಗ್ಯ-ಶಿಕ್ಷಣದ ನಡುವೆ ಹೊಸ ಚರ್ಚೆ

ಶಾಲಾ ಬಾಲಕಿಯರಿಗೆ ಪಿರಿಯಡ್ಸ್ ರಜೆ: ಕೇರಳದ ಪ್ರಸ್ತಾವನೆಗೆ ದೇಶಾದ್ಯಂತ ಚರ್ಚೆ

ಕೇರಳ ಸರ್ಕಾರವು ಶಾಲಾ ಬಾಲಕಿಯರಿಗೆ ಪಿರಿಯಡ್ಸ್ ಸಮಯದಲ್ಲಿ ತಿಂಗಳಿಗೆ ಮೂರು ದಿನಗಳ ರಜೆ ನೀಡುವ ಪ್ರಸ್ತಾವನೆ ಮುಂದಿಟ್ಟಿದ್ದು, ಇದು ಆರೋಗ್ಯ, ಶಿಕ್ಷಣ ಮತ್ತು ಮಹಿಳಾ ಹಕ್ಕುಗಳ ಕುರಿತು ದೇಶಾದ್ಯಂತ ಚರ್ಚೆಗೆ ಕಾರಣವಾಗಿದೆ. ಕೆಲವರು ಇದನ್ನು ವಿದ್ಯಾರ್ಥಿನಿಯರ ಆರೋಗ್ಯದ ದೃಷ್ಟಿಯಿಂದ ಸ್ವಾಗತಿಸಿದ್ದರೆ, ಇನ್ನು ಕೆಲವರು ಖಾಸಗಿತನ ಮತ್ತು ಶೈಕ್ಷಣಿಕ ಪರಿಣಾಮಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಗರ್ಭಿಣಿ ಕೇಸರಿ ಹಾಲು ಕುಡಿಯುವುದರಿಂದ ಮಗು ಬೆಳ್ಳಗಿರುತ್ತದೆಯೇ?

ಗರ್ಭಿಣಿ ಮಹಿಳೆ ಕೇಸರಿ ಹಾಲು ಕುಡಿದರೆ ಮಗು ಬೆಳ್ಳಗೆ ಆಗಬಹುದೇ?

Health Tips: ಮಗುವೊಂದು ಬರುವುದಿದೆ ಎಂದಾದರೆ ಸಂಭ್ರಮ ಮುಗಿಲು ಮುಟ್ಟುತ್ತದೆ. ಮನೆಯನ್ನು ಮಗುವಿಗಾಗಿ ಸಿದ್ಧ ಮಾಡುವುದರಿಂದ ಹಿಡಿದು, ಗರ್ಭಿಣಿಗೆ ಅಡಿಯಿಂದ ಮುಡಿಯವರೆಗೆ ಸಲಹೆ ಕೊಡುವವರೆಗೆ ಯಾವುದಕ್ಕೂ ಕೊರತೆಯಾಗುವುದಿಲ್ಲ. ಇದನ್ನು ತಿನ್ನು, ಅದನ್ನು ಕೇಳು, ಮತ್ತೊಂದನ್ನು ನೋಡು, ಇನ್ಯಾವುದನ್ನೋ ಕುಡಿ ಎನ್ನುತ್ತಾ, ಯಾವುದು ಬೇಕು-ಯಾಕೆ ಬೇಕು ಎನ್ನುವುದೇ ತಿಳಿಯದಂತೆ ಗೊಂದಲ ಹುಟ್ಟಿಸಿಬಿಡುತ್ತಾರೆ ಸುತ್ತಲಿನವರು.

Dr N Someshwara Column: ಐರನ್‌ ಲಂಗ್ಸ್‌ ಎಂಬ ಏಳು ಸುತ್ತಿನ ಕೋಟೆ !

ಐರನ್‌ ಲಂಗ್ಸ್‌ ಎಂಬ ಏಳು ಸುತ್ತಿನ ಕೋಟೆ !

ಕೈ-ಕಾಲುಗಳ ಸ್ನಾಯುಗಳು ನ್ಯೂನಪೋಷಣೆಗೆ ಒಳಗಾಗಿ ಪರಿಪೂರ್ಣವಾಗಿ ನಿಶ್ಚೇತವಾಗುತ್ತವೆ. ಇಂದಿನ ದಿನಗಳಲ್ಲಾಗಿದ್ದರೆ, ಉಸಿರಾಡಲು ಕಷ್ಟಪಡುತ್ತಿರುವ ಮಗುವನ್ನು ತೀವ್ರ ನಿಗಾ ಘಟಕಕ್ಕೆ (ಐಸಿಯು) ಸೇರಿಸುತ್ತಿದ್ದರು. ಆ ಮಗುವಿಗೆ ವೆಂಟಿಲೇಟರ್ ಎಂಬ ಸಾಧನವನ್ನು ಅಳವಡಿಸುತ್ತಿದ್ದರು. ಆ ಸಾಧನವು ಮಗುವಿಗೆ ಉಸಿರಾಡಲು, ದೇಹಕ್ಕೆ ಅಗತ್ಯವಾದ ಆಕ್ಸಿಜನ್‌ನನ್ನು ಪೂರೈಸಲು ನೆರವಾಗುತ್ತಿತ್ತು

ಬೆಂಗಳೂರಿನ ಮೂರು ಸ್ಥಳಗಳಲ್ಲಿ ಆಯುರ್ವೇದ ಕ್ಲಿನಿಕ್‍ಗಳ ಜೊತೆ ಕ್ಲಿನಿಕಲ್ ಆರೈಕೆಗೆ ಕಾಲಿಟ್ಟ ಕಪಿವ

ಆಯುರ್ವೇದ ಕ್ಲಿನಿಕ್‍ಗಳ ಜೊತೆ ಕ್ಲಿನಿಕಲ್ ಆರೈಕೆಗೆ ಕಾಲಿಟ್ಟ ಕಪಿವ

ಭಾರತದ ಮೊದಲ ಆಧುನಿಕ ಸಮಗ್ರ ಆಯುರ್ವೇದ ಬ್ರ್ಯಾಂಡ್, ದೈನಂದಿನ ನೈಸರ್ಗಿಕ ಮತ್ತು ವೈದ್ಯಕೀಯವಾಗಿ ಪರೀಕ್ಷಿಸಿದ ಸ್ವಾಸ್ಥ್ಯ ಉತ್ಪನ್ನಗಳನ್ನು ಒದಗಿಸುವ ಕಪಿವಾ, ಕ್ಲಿನಿಕಲ್ ಆರೈಕೆಗೆ ಲಭ್ಯತೆಯನ್ನು ಗುರುತಿಸುವ ಮತ್ತು ನಗರಕ್ಕೆ ಹೆಚ್ಚು ರಚನಾತ್ಮಕವಾದ ಆಯುರ್ವೇದ ಆಧಾರಿತ ಚಿಕಿತ್ಸಾ ವಿಧಾನ ತರುವ ಆಯುರ್ವೇದ ಚಿಕಿತ್ಸಾಲಯಗಳನ್ನು ಪ್ರಾರಂಭಿಸಿದೆ.

ಮಳೆಗಾಲದಲ್ಲಿ ಮಕ್ಕಳ ಕ್ಷೇಮ ಕಾಯುವುದು ಹೇಗೆ?

ಮಳೆಗಾಲದಲ್ಲಿ ಮಕ್ಕಳ ಆರೋಗ್ಯ ರಕ್ಷಣೆ ಹೇಗೆ?

Health Tips; ಮನೆಯಲ್ಲಿರುವ ದೊಡ್ಡ ಮಕ್ಕಳಿಗೆ ಅನಾರೋಗ್ಯ ಶುರುವಾಯಿತೆಂದರೆ, ಬೆನ್ನಿಗೆ ಚಿಕ್ಕ ಮಕ್ಕಳಿದ್ದರೆ ಅವರೂ ಮಲಗುತ್ತಾರೆಂಬುದು ಖಾತ್ರಿ. ಅದರಲ್ಲೂ ಎಳೆಗೂಸುಗಳಿದ್ದರಂತೂ ಹೆತ್ತವರಿಗೆ ಇನ್ನಷ್ಟು ಆತಂಕ. ಹೇಳಲು ಬಾರದ, ಹೇಳಿದ್ದು ತಿಳಿಯದ ಮಕ್ಕಳ ಅನಾರೋಗ್ಯವೆಂದರೆ ಮನೆಯ ಹಿರಿಯರಿಗೆ ತಲೆಬಿಸಿ.

ಹೆಚ್ಚಿನ ಪ್ರೋಟೀನ್, ಕಡಿಮೆ ಕ್ಯಾಲೊರಿ: ಬೆಂಗಳೂರಿಗರಿಗಾಗಿ 'ಈಟ್‌ರೈಟ್ ಎಕ್ಸ್‌ಕ್ಲೂಸಿವ್ಸ್'

ಹೆಚ್ಚಿನ ಪ್ರೋಟೀನ್, ಕಡಿಮೆ ಕ್ಯಾಲೊರಿ

ಜನವರಿ 2026ರಲ್ಲಿ 'ಈಟ್‌ರೈಟ್' ಆರಂಭವಾಗಿದ್ದು, ಇದರ ಅಡಿಯಲ್ಲಿ ಆರೋಗ್ಯಕರ ಆಹಾರ ವನ್ನು ಜನರಿಗೆ ಸುಲಭವಾಗಿ ತಲುಪಿಸುವ ಗುರಿಯನ್ನು ಹಾಕಿಕೊಂಡಿದೆ. ಸದ್ಯ ದೇಶದ 50ಕ್ಕೂ ಹೆಚ್ಚು ನಗರ ಗಳಲ್ಲಿ ಈ ಸೇವೆ ಲಭ್ಯವಿದ್ದು, ಬರೋಬ್ಬರಿ 30 ಲಕ್ಷಕ್ಕೂ ಅಧಿಕ ಆರೋಗ್ಯಕರ ತಿನಿಸುಗಳನ್ನು ಹೊಂದಿದೆ.

ಬ್ರೈನ್ ಟ್ಯೂಮರ್ ನಿವಾರಿಸಿ ಯುವತಿ ಜೀವ ಉಳಿಸಿದ ವೈದ್ಯರು

ಬ್ರೈನ್ ಟ್ಯೂಮರ್ ನಿವಾರಿಸಿ ಯುವತಿ ಜೀವ ಉಳಿಸಿದ ವೈದ್ಯರು

ಅತಿ ಹೆಚ್ಚು ಕೆಲಸದ ಒತ್ತಡವಿರುವ ಕಾರ್ಪೊರೇಟ್ ವೃತ್ತಿಜೀವನ ಹಾಗೂ ವೈಯಕ್ತಿಕ ಜವಾಬ್ದಾರಿ ಗಳನ್ನು ಸರಿದೂಗಿಸಿಕೊಂಡು ಹೋಗುತ್ತಿದ್ದ ಈ ಯುವ ಉದ್ಯೋಗಿ, ಕಳೆದ ಕೆಲವು ವಾರಗಳಿಂದ ಸಣ್ಣ ಪ್ರಮಾಣದ ತಲೆನೋವಿನಿಂದ ಬಳಲುತ್ತಿದ್ದರು. ಆದರೆ, ಇಂದಿನ ಯುವ ಪೀಳಿಗೆಯ ಅನೇಕರಂತೆ, ಅವರು ಕೂಡ ಇದನ್ನು ಕೆಲಸದ ಒತ್ತಡ ಮತ್ತು ಆಯಾಸದಿಂದ ಬಂದ ಸಾಮಾನ್ಯ ತಲೆನೋವೆಂದು ನಿರ್ಲಕ್ಷಿಸಿದ್ದರು.

ಅತಿಯಾದ ಕ್ಯಾಫಿನ್ ಮತ್ತು ಎನರ್ಜಿ ಡ್ರಿಂಕ್ಸ್ ಹೃದಯದ ಲಯದ ಮೇಲೆ ಪರಿಣಾಮ ಬೀರುತ್ತವೆಯೇ?

ಅತಿಯಾದ ಎನರ್ಜಿ ಡ್ರಿಂಕ್ಸ್ ಹೃದಯದ ಲಯದ ಮೇಲೆ ಪರಿಣಾಮ ಬೀರುತ್ತವೆಯೇ?

ಕ್ಯಾಫಿನ್ ಕೇಂದ್ರ ನರಮಂಡಲವನ್ನು ಉತ್ತೇಜಿಸುವ ಮೂಲಕ ಕಾರ್ಯನಿರ್ವಹಿಸುತ್ತದೆ. ಇದರಿಂದ ಎಚ್ಚರಿಕೆ ಹೆಚ್ಚುವುದರ ಜೊತೆಗೆ ತಾತ್ಕಾಲಿಕವಾಗಿ ಶಕ್ತಿಯ ಮಟ್ಟವೂ ಹೆಚ್ಚುತ್ತದೆ. ಆದರೆ, ಇದು ಅಡ್ರಿನಲಿನ್‌ ಮೊದಲಾದ ಒತ್ತಡದ ಹಾರ್ಮೋನುಗಳ ಬಿಡುಗಡೆಯನ್ನೂ ಹೆಚ್ಚಿಸುತ್ತದೆ. ಇದರ ಪರಿಣಾಮವಾಗಿ ಹೃದಯ ಬಡಿತದ ವೇಗ ಮತ್ತು ರಕ್ತದೊತ್ತಡ ಹೆಚ್ಚಾಗಬಹುದು.

Vishwavani Health: ಮಕ್ಕಳಾಗದಿರಲೂ ಬೊಜ್ಜು ಕಾರಣ; ಆಘಾತಕಾರಿ ಅಂಶ ಬಿಚ್ಚಿಟ್ಟ ತಜ್ಞರು

ಬೊಜ್ಜಿನಿಂದಲೇ ಬಂಜೆತನ? ತಜ್ಞರು ಹೇಳೋದೇನು?

Can Obesity Affect Pregnancy? ದೇಹದಲ್ಲಿ ಅರಿವಿಲ್ಲದಂತೆ ಸಂಗ್ರಹವಾಗುವ ಬೊಜ್ಜು ಎಲ್ಲ ಕಾಯಿಲೆಗಳಿಗೂ ಮೂಲ ಎನ್ನಲಾಗುತ್ತದೆ. ಬೊಜ್ಜಿನಿಂದಲೇ ಬಂಜೆತನ ಉಂಟಾಗುತ್ತದೆಯೇ? ಹೆಣ್ಣು ಮಕ್ಕಳು ಬೇಗ ಋತುಮತಿಯಾಗಲು ಬೊಜ್ಜು ಕಾರಣವೇ ? ಪುರುಷರಲ್ಲಿ ಬೊಜ್ಜು ಯಾವ ರೀತಿಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ? ಎನ್ನುವ ಕುರಿತು ಮೈಸೂರು ವಿವಿಯ ಜೆನೆಟಿಕ್ಸ್‌ ಮತ್ತು ಜಿನೋಮಿಕ್ಸ್‌ ಅಧ್ಯಯನ ವಿಭಾಗದ ಅಧ್ಯಕ್ಷೆ ಡಾ. ಸುತ್ತೂರು ಮಾಲಿನಿ ನೀಡಿದ ವಿವರ ಇಲ್ಲಿದೆ.

Loading...