ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Haryana Model Murder Case: ಹರಿಯಾಣ ಮಾಡೆಲ್‌ ಹತ್ಯೆ ಕೇಸ್‌- ಬಾಯ್‌ಫ್ರೆಂಡ್‌ ಅರೆಸ್ಟ್‌; ಕೊಲೆ ಮಾಡಿರೋದನ್ನು ಒಪ್ಪಿಕೊಂಡ ಹಂತಕ

ಕೆಲವು ದಿನಗಳ ಹಿಂದೆ ನಡೆದಿದ್ದ ಹರಿಯಾಣದ 24 ವರ್ಷದ ಮಾಡೆಲ್‌ ಶೀತಲ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಬಾಯ್‌ಫ್ರೆಂಡ್‌ ಅರೆಸ್ಟ್‌ ಆಗಿದ್ದು, ತಾನೇ ಶೀತಲ್‌ಳನ್ನು ಹತ್ಯೆ ಮಾಡಿರುವುದು ಒಪ್ಪಿಕೊಂಡಿದ್ದಾನೆ. ಇನ್ನು ಈ ಹಂತಕ ವಿವಾಹಿತನಾಗಿದ್ದು, ಎರಡು ಮಕ್ಕಳ ತಂದೆ ಎಂಬುದು ತಿಳಿದುಬಂದಿದೆ.

ಹರಿಯಾಣ ಮಾಡೆಲ್‌ ಹತ್ಯೆ ಕೇಸ್‌- ಬಾಯ್‌ಫ್ರೆಂಡ್‌ ಅರೆಸ್ಟ್‌

Profile Rakshita Karkera Jun 17, 2025 4:04 PM

ಚಂಡೀಗಡ: ಹರಿಯಾಣದ ಮಾಡೆಲ್‌ ಶೀತಲ್‌ ಕೆಲ ದಿನಗಳ ಕಾಲ ನಿಗೂಢವಾಗಿ ಕಣ್ಮರೆಯಾಗಿ ಕೊನೆಗೆ ಶವವಾಗಿ ಪತ್ತೆಯಾಗಿದ್ದ(Haryana Model Murder Case) ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಬಲೆಗೆ ಬಿದ್ದಿದ್ದಾನೆ. ಹಂತಕ ಶೀತಲ್‌ನ ಬಾಯ್‌ಫ್ರೆಂಡ್‌ ಸುನಿಲ್‌ ಎಂದು ಗುರುತಿಸಲಾಗಿದೆ. ಈತನನ್ನು ಪೊಲೀಸರು ಸೋಮವಾರ ಸಂಜೆ ಇಸರಾನಾದಲ್ಲಿ ಅರೆಸ್ಟ್‌ ಮಾಡಲಾಗಿದೆ. ಶೀತಲ್‌ಳನ್ನು ಹಂತಕ ಸುನಿಲ್‌ ಕತ್ತಿಯಿಂದ ಇರಿದು ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಇನ್ನು ಈ ಹಂತಕ ವಿವಾಹಿತನಾಗಿದ್ದು, ಎರಡು ಮಕ್ಕಳ ತಂದೆ ಎಂಬುದು ತಿಳಿದುಬಂದಿದೆ.

ಜೂನ್ 15 ರಂದು ಶೀತಲ್ ನಾಪತ್ತೆಯಾಗಿದ್ದ ಹಿನ್ನೆಲೆ, ಮಟ್ಲೌಡ ಪೊಲೀಸ್ ಠಾಣೆಯಲ್ಲಿ ಶೀತಲ್‌ ತಂಗಿ ಪ್ರಕರಣ ದಾಖಲಿಸಿದ್ದರು. ಬಳಿಕ ಸೋಮವಾರ ಬೆಳಗ್ಗೆ ಸೋನಿಪತ್‌ನಲ್ಲಿರುವ ಕಾಲುವೆಯಲ್ಲಿ ಶೀತಲ್ ಶವ ಪತ್ತೆಯಾಗಿತ್ತು. ಪತ್ತೆಯಾಗಿರುವ ಶೀತಲ್‌ ದೇಹದ ಮೇಲೆ ಗಾಯದ ಗುರುತುಗಳು ಕಂಡುಬಂದಿದ್ದವು.

ಇನ್ನು ಹತ್ಯೆಯಾಗಿರುವ ಶೀತಲ್ ಪಾನಿಪತ್‌ನಲ್ಲಿ ತನ್ನ ಸಹೋದರಿಯೊಂದಿಗೆ ವಾಸವಾಗಿದ್ದು, ಹರಿಯಾಣದ ಸಂಗೀತ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಜೂನ್‌ 14ರಂದು ಶೂಟಿಂಗ್‌ಗಾಗಿ ಅಹಾರ್ ಗ್ರಾಮಕ್ಕೆ ಹೋಗಿದ್ದ ಶೀತಲ್ ಮನೆಗೆ ಹಿಂದುರುಗಿಲ್ಲ ಎಂದು ಶೀತಲ್‌ ತಂಗಿ ಪೊಲೀಸರಿಗೆ ತಿಳಿಸಿದ್ದರು. ಇನ್ನು ಪೋಲಿಸರು ಭಾರತೀಯ ದಂಡ ಸಂಹಿತೆ (BNS) ಸೆಕ್ಷನ್ 127(6) ಅಡಿಯಲ್ಲಿ ಪ್ರಕರಣವ ದಾಖಲಿಸಿಕೊಂಡು ಶೋಧ ಕಾರ್ಯ ಪ್ರಾರಂಭಿಸಿದ್ದರು. ಹುಡುಕಾಟದ ವೇಳೆ, ಸೋನಿಪತ್‌ನ ಖಾರ್ಖೋಡಾ ಬಳಿ ಇರುವ ಕಾಲುವೆಯಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾಗಿದ್ದು, ಅದನ್ನು ಶೀತಲ್‌ ಎಂದು ಗುರುತಿಸಲಾಯಿತು. ಖಾನ್ಪುರದ ಪಿಜಿಐ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯ ನಂತರ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು.

ಈ ಸುದ್ದಿಯನ್ನೂ ಓದಿ: Missing Case: 2023ರಲ್ಲಿಯೇ ಕೊಲೆಯಾಗಿದ್ದಾಳೆಂದು ಭಾವಿಸಲಾಗಿದ್ದ ಮಹಿಳೆ ಮನೆಗೆ ವಾಪಸ್‌, ಆಕೆಯ ಕೊಲೆ ಆರೋಪದ ಮೇಲೆ ಜೈಲಿನಲ್ಲಿರುವ ನಾಲ್ವರು

ಇನ್ನು ಪ್ರಕರಣದ ಬಗ್ಗೆ ಮಾತನಾಡಿರುವ ಸ್ಥಳೀಯ ಪೋಲಿಸರು, ಕುಟುಂಬದ ಮಾಹಿತಿಯ ಆಧಾರದಲ್ಲಿ ಸುನಿಲ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ, ಸೋಮವಾರ ಸಂಜೆ ಪಾರ್ಕ್ ಆಸ್ಪತ್ರೆಯ ಸಮೀಪದಲ್ಲಿ ಬಂಧಿಸಿದ್ದರು. ವಿಚಾರಣೆಯಲ್ಲಿ, ಶೀತಲ್‌ ಅವರನ್ನು ಇರಿದು ಕೊಂದು, ಕಾರು ಅಪಘಾತದಂತೆ ತೋರಿಸಲು ಅವರ ಶವವನ್ನೂ ಕಾರನ್ನೂ ಕಾಲುವೆಗೆ ಎಸೆದಿರುವುದಾಗಿ ಆರೋಪಿ ಸುನಿಲ್ ಒಪ್ಪಿಕೊಂಡಿದ್ದಾನೆ. ಆರೋಪಿಯನ್ನು ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.