ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Murder Case: ಮದುವೆಯಾಗುವ ಸಲುವಾಗಿ ಗೋವಾಗೆ ಪ್ರಯಾಣ; ಮಾರ್ಗ ಮಧ್ಯದಲ್ಲೇ ಗೆಳತಿಯ ಕತ್ತು ಸೀಳಿ ಕೊಲೆಗೈದ ಪ್ರೇಮಿ!

ಯುವಕನೊಬ್ಬ ತನ್ನ ಪ್ರೇಯಸಿಯನ್ನು ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಗೋವಾದ ಅರಣ್ಯ ಪ್ರದೇಶದಲ್ಲಿ ಸೋಮವಾರ ಬೆಳಿಗ್ಗೆ ಕತ್ತು ಸೀಳಿದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆಯಾಗಿದೆ. ಗೆಳತಿಯ ಕೊಲೆ ಆರೋಪದ ಮೇಲೆ 22 ವರ್ಷದ ಸಂಜಯ್ ಕೆವಿನ್ ಎಂಬಾತನ್ನು ಹುಬ್ಬಳ್ಳಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನಿಂದ ಗೋವಾಗೆ ಕರೆದುಕೊಂಡು ಹೋಗಿ ಗೆಳತಿಯ ಕೊಲೆ ಮಾಡಿದ ಪ್ರೇಮಿ

Profile Vishakha Bhat Jun 18, 2025 11:17 AM

ಪಣಜಿ: ಯುವಕನೊಬ್ಬ ತನ್ನ ಪ್ರೇಯಸಿಯನ್ನು ಕತ್ತು ಸೀಳಿ ಬರ್ಬರವಾಗಿ (Murder Case) ಹತ್ಯೆ ಮಾಡಿದ್ದಾನೆ. ಗೋವಾದ (GOA) ಅರಣ್ಯ ಪ್ರದೇಶದಲ್ಲಿ ಸೋಮವಾರ ಬೆಳಿಗ್ಗೆ ಕತ್ತು ಸೀಳಿದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆಯಾಗಿದೆ. ಗೆಳತಿಯ ಕೊಲೆ ಆರೋಪದ ಮೇಲೆ 22 ವರ್ಷದ ಸಂಜಯ್ ಕೆವಿನ್ ಎಂಬಾತನ್ನು ಹುಬ್ಬಳ್ಳಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಈ ಜೋಡಿ ಮದುವೆಯಾಗುವ ಉದ್ದೇಶದಿಂದ ಬೆಂಗಳೂರಿನಿಂದ ಗೋವಾಕ್ಕೆ ಪ್ರಯಾಣಿಸಿದ್ದರು ಎಂದು ವರದಿಯಾಗಿದೆ. ಕೊಲೆಯಾದ ಯುವತಿಯನ್ನು ರೋಶ್ನಿ ಮೋಸೆಸ್ ಎಂದು ಗುರುತಿಸಲಾಗಿದೆ.

ಗೋವಾ ಪ್ರವಾಸದ ಸಮಯದಲ್ಲಿ ತನ್ನ ಗೆಳತಿ ಬೇರೊಬ್ಬ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನದಿಂದ ಆಕೆಯನ್ನು ಕೊಲೆ ಮಾಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಪೊಂಡಾ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯ ತಂಡ, ಶ್ವಾನ ದಳ ಮತ್ತು ತಾಂತ್ರಿಕ ತಜ್ಞರ ಸಹಾಯದಿಂದ ಅಪರಾಧ ಸ್ಥಳದ ಪರೀಕ್ಷೆಯನ್ನು ನಡೆಸಲಾಗಿದೆ.

ಕೊಲೆಯಾದ ಯುವತಿ ಶಾಲೆಯೊಂದರಲ್ಲಿ ಬೋಧಕೇತರ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಳು. ಯುವಕ ನಿರುದ್ಯೋಗಿ ಆಗಿದ್ದ. ಪೊಲೀಸರ ಪ್ರಕಾರ, ಕೊಲೆಗೆ ಮುನ್ನ ಆರೋಪಿ ಬೆಂಗಳೂರಿನಲ್ಲಿರುವ ತನ್ನ ಮನೆಯಿಂದ ಹೊರಟು ಹಾವೇರಿ ಬಳಿ ಯುವತಿಯನ್ನು ಭೇಟಿಯಾಗಿದ್ದ. ನಂತರ ಅವರು ಗೋವಾಕ್ಕೆ ತೆರಳಿದ್ದರು. ಅವರು ಶಾಲಾ ಸಹಪಾಠಿಗಳಾಗಿದ್ದು, ಹಲವಾರು ವರ್ಷಗಳಿಂದ ಸಂಬಂಧದಲ್ಲಿದ್ದರು. ಇತ್ತೀಚೆಗೆ, ಅವಳು ಇನ್ನೊಬ್ಬ ಪುರುಷನೊಂದಿಗೆ ಸಂಬಂಧ ಹೊಂದಿದ್ದಾಳೆ ಎಂದು ಅವನಿಗೆ ಅನುಮಾನ ಬರಲು ಪ್ರಾರಂಭಿಸಿತು. ಈ ವಿಷಯದಿಂದ ಕೋಪಗೊಂಡ ಅವನು ಗೋವಾದಲ್ಲಿ ಅವಳನ್ನು ಕೊಲೆ ಮಾಡಲು ಯೋಜಿಸಿದನು. ಈ ಉದ್ದೇಶಕ್ಕಾಗಿ ಅವನು ತನ್ನೊಂದಿಗೆ ಒಂದು ಚಾಕುವನ್ನು ಹೊಂದಿದ್ದನು" ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ಈ ಸುದ್ದಿಯನ್ನೂ ಓದಿ: Haryana Model Murder Case: ಹರಿಯಾಣ ಮಾಡೆಲ್‌ ಹತ್ಯೆ ಕೇಸ್‌- ಬಾಯ್‌ಫ್ರೆಂಡ್‌ ಅರೆಸ್ಟ್‌; ಕೊಲೆ ಮಾಡಿರೋದನ್ನು ಒಪ್ಪಿಕೊಂಡ ಹಂತಕ

ಗೋವಾ ತಲುಪಿ ಭಾನುವಾರ ಧರ್ಬಂದೋರಾ ಪ್ರದೇಶದ ಪಿಲ್ಲಿಯೆಮ್‌ನಲ್ಲಿರುವ ಅರಣ್ಯ ಪ್ರದೇಶದ ಬಳಿ ಬಸ್ಸಿನಿಂದ ಇಳಿದರು. "ಆರೋಪಿ ಆಕೆಯನ್ನು ಪೊದೆಗಳಿಗೆ ಕರೆದೊಯ್ದು ಚಾಕುವಿನಿಂದ ಕತ್ತು ಸೀಳಿದ್ದಾನೆ. ನಂತರ ಆಕೆಯ ಫೋನ್ ಕಿತ್ತುಕೊಂಡು ಸ್ಥಳದಿಂದ ಪರಾರಿಯಾಗಿದ್ದ. ಪೊಲೀಸರು ತನಿಖೆ ಮಾಡಿ ಹುಬ್ಬಳ್ಳಿಯನ್ನು ಆತನನ್ನು ಬಂಧಿಸಿದ್ದಾರೆ. ಗೋವಾ ಪ್ರಯಾಣದ ಸಮಯದಲ್ಲಿ ಆಕೆಯ ಜೊತೆ ಜಗಳವಾಡಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.