Indore Couple Missing: ರೇನ್ ಕೋಟ್, ಶರ್ಟ್ನಿಂದ ಸಿಕ್ತು ಕೊಲೆಯ ಸುಳಿವು; ಹಂತಕರ ಬಂಧನ ಹೇಗಿತ್ತು?
ಇಂದೋರ್ ಮೂಲದ ದಂಪತಿ ಹನಿಮೂನ್ಗೆಂದು (Indore Missing Couple) ಮೇಘಾಲಯಕ್ಕೆ (Meghalaya) ಹೋಗಿ ಕಾಣೆಯಾಗಿದ್ದ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಪ್ರಕರಣದಲ್ಲಿ ಗಂಡನನ್ನು ಹತ್ಯೆ ಮಾಡಿಸಿರುವ ಹಂತಕಿ ಸೋನಂ ಕರ್ಮಕಾಂಡ ಬಗೆದಷ್ಟೂ ಬಗೆದಷ್ಟೂ ಬಯಲಾಗುತ್ತಿದೆ.


ಶಿಲ್ಲಾಂಗ್: ಇಂದೋರ್ ಮೂಲದ ದಂಪತಿ ಹನಿಮೂನ್ಗೆಂದು (Indore Missing Couple)ಮೇಘಾಲಯಕ್ಕೆ ಹೋಗಿ ಕಾಣೆಯಾಗಿದ್ದ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಪ್ರಕರಣದಲ್ಲಿ ಗಂಡನನ್ನು ಹತ್ಯೆ ಮಾಡಿಸಿರುವ ಹಂತಕಿ ಸೋನಂ ಕರ್ಮಕಾಂಡ ಬಗೆದಷ್ಟೂ ಬಗೆದಷ್ಟೂ ಬಯಲಾಗುತ್ತಿದೆ. ಇನ್ನು ಈ ಪ್ರಕರಣದಲ್ಲಿ ಸೋನಂ ತನ್ನ ಪ್ರಿಯಕರ ರಾಜ್ ಕುಶ್ವಾಹ ಜೊತೆ ಸೇರಿ ತನ್ನ ಗಂಡನನ್ನು ಹತ್ಯೆ ಮಾಡಿಸಿದ್ದಳು. ಈಗಾಗಲೇ ಸೋನಂ ಮತ್ತು ಅವಳ ಪ್ರಿಯಕರ ಸೇರಿದಂತೆ ಪ್ರಮುಖ ಆರೋಪಿಗಳ ಬಂಧನ ಆಗಿದೆ. ಸೋನಂಗೆ ಸೇರಿದ ಕೆಲ ವಸ್ತುಗಳಿಂದಲೇ ಪ್ರಕರಣ ಮಹತ್ವದ ಸುಳಿವನ್ನು ಪಡೆದುಕೊಂಡಿದೆ.
ಆರೋಪಿ ಆಕಾಶ್ ಧರಿಸಿದ್ದ ಶರ್ಟ್ನಲ್ಲಿ ರಾಜಾ ರಘುವಂಶಿಯ ರಕ್ತದ ಕಲೆಗಳು ಪತ್ತೆಯಾಗಿವೆ ಎನ್ನಲಾಗಿದೆ. ಸೋನಂ ಧರಿಸಿದ್ದ ರೈನ್ಕೋಟ್ನಲ್ಲೂ ರಕ್ತದ ಗುರುತುಗಳು ಇದ್ದು, ತಜ್ಞರು ಪರಿಶೀಲನೆ ನಡೆಸುತ್ತಿದ್ದಾರೆ. ಆರೋಪಿ ಆನಂದ್ನ್ನು ಬಂಧಿಸುವಾಗ ಅವನು ಧರಿಸಿದ್ದ ಬಟ್ಟೆಯಲ್ಲೂ ರಕ್ತದ ಕಲೆಗಳಿದ್ದವು ಎನ್ನಲಾಗಿದೆ. ಆರೋಪಿಗಳ ಬಳಕೆಯಲ್ಲಿದ್ದ ಮೊಬೈಲ್, ಡಿಜಿಟಲ್ ವಸ್ತುಗಳು, 42 ಕಡೆಗಳ ಸಿಸಿಟಿವಿ ದೃಶ್ಯಗಳು, ಎಲ್ಲರ ಚಲನವಲನಗಳ ಪತ್ತೆಯಾಗಿವೆ. ಶಿಲ್ಲಾಂಗ್ನಲ್ಲಿ ಸ್ಕೂಟಿ ಪಡೆದಿದ್ದ ವ್ಯಕ್ತಿಯಿಂದ ದಾಖಲೆಗಳು ಸಿಕ್ಕಿವೆ. ಚಾಕು ಖರೀದಿಸಿದ ಅಂಗಡಿಯವನಿಂದ ಸಾಕ್ಷಿ ಸಿಕ್ಕಿದೆ. ಸೋನಂ, ರಾಜ್ ಕುಶ್ವಾಹಾ ಮತ್ತು ಕೊಲೆಗೈದವರ ಫೋನ್ ಕರೆ ವಿವರಗಳು. ಮೇ 23ರಂದು ಹತ್ಯೆಯ ಸ್ಥಳದ ಬಳಿ ಎಲ್ಲರ ಮೊಬೈಲ್ ಲೊಕೆಷನ್ ಪತ್ತೆ ಸೇರಿದಂತೆ ಹಲವು ಸಾಕ್ಷ್ಯಗಳು ಲಭ್ಯವಾಗಿವೆ. ಸೋನಂ ರಘುವಂಶಿಯ ಮೊಬೈಲ್ ಇನ್ನೂ ಪತ್ತೆಯಾಗಿಲ್ಲ. 20 ಲಕ್ಷಕ್ಕೆ ಸೋನಂ ಕೊಲೆ ಮಾಡಲು ಕುದುರಿಸಿದ್ದ ಹಣದ ಲೆಕ್ಕಾಚಾರ ಇನ್ನೂ ಸಾಬೀತಾಗಿಲ್ಲ. ಅಪರಾಧ ನಂತರ ಆರೋಪಿಗಳು ಬಳಸಿದ ಮಾರ್ಗಗಳ ವಿವರ ಇನ್ನೂ ಖಚಿತವಾಗಿಲ್ಲ ಎನ್ನಲಾಗಿದೆ.
ಈ ಸುದ್ದಿಯನ್ನೂ ಓದಿ: Indore Couple Missing: 'ಮೂರ್ಖರಿಂದ ಎಚ್ಚರ’: ಮೇಘಾಲಯ ಹತ್ಯೆ ಪ್ರಕರಣ ಕುರಿತು ಆಘಾತ ವ್ಯಕ್ತಪಡಿಸಿದ ಕಂಗನಾ ರಣಾವತ್
SIT ಹೇಳಿದ್ದೇನು?
ಪ್ರಕರಣದಲ್ಲಿ ಮುಖ್ಯ ಆರೋಪಿಗಳಾಗಿರುವ ಆಕಾಶ್, ಆನಂದ್ ಮತ್ತು ವಿಕಾಸ್ ಇಂಡೋರ್ನಿಂದ ಶಿಲ್ಲಾಂಗ್ಗೆ ವಿವಿಧ ಮಾರ್ಗವಾಗಿ ಪ್ರಯಾಣ ಬೆಳೆಸಿದ್ದಾರೆ. ಇದಾದ ನಂತರ ಮೇ 23ರಂದು ಸೋನಂ ಹಾಗೂ ರಾಜಾ ಚೆರ್ರಾಪುಂಜಿಯ ಟ್ರಕ್ಗೆ ಹೋಗಿದ್ದಾರೆ. ಈ ವೇಳೆ ಸೋನಂ ತನ್ನ ಪ್ರಿಯಕರ ರಾಜ್ ಕುಶ್ವಾಹ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಅವನಿಗೆ ಪ್ಲಾನ್ ಬಗ್ಗೆ ಅಪ್ಡೇಟ್ ನೀಡಿದ್ದಾಳೆ. ನಂತರ ಕೊನೆಗೂ ರಾಜ ರಘುವಂಶಿಯನ್ನು ಕೊಲ್ಲಲು ಹಂತಕರು ಮುಹೂರ್ತ ಫಿಕ್ಸ್ ಮಾಡಿದ್ದು, ಆರೋಪಿಗಳು ರಾಜಾ ರಘುವಂಶಿಯ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿ ಶವವನ್ನು ಸಮೀಪವಿದ್ದ ಕಣಿವೆಗೆ ಎಸೆದಿದ್ದಾರೆ ಎಂದು ಎಸ್ಐಟಿ ತಂಡ ಮಾಹಿತಿ ನೀಡಿದೆ.