ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವೀಡಿಯೋಸ್

ಮೇ 4ರ ನಂತರ ಸಿಎಂ ಸಿದ್ದರಾಮಯ್ಯ ಕುರ್ಚಿ ಇರುತ್ತದೋ ಇಲ್ಲವೋ ಗೊತ್ತಿಲ್ಲ: ಬೊಮ್ಮಾಯಿ Video

ಮೇ 4ರ ನಂತರ ಸಿದ್ದರಾಮಯ್ಯ ಕುರ್ಚಿ ಇರುತ್ತದೊ ಇಲ್ಲವೊ ಗೊತ್ತಿಲ್ಲ: ಬೊಮ್ಮಾಯಿ

Basavaraj Bommai: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತು ಕೇಳಿದ ಪ್ರಶ್ನೆಗೆ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನನಗೂ ಸಿಎಂ ಆಗುವ ಆಸೆ ಇದೆ. ಹಲವರಿಗೂ ಆಸೆ ಇದೆ ಎಂದು ಹೇಳಿದ್ದಾರೆ. ಆದರೆ ಮೇ 4ರ ನಂತರ ಸಿಎಂ ಸಿದ್ದರಾಮಯ್ಯ ಅವರ ಕುರ್ಚಿ ಇರುತ್ತದೋ, ಇಲ್ಲವೋ ಗೊತ್ತಿಲ್ಲ. ನಾವೂ ಯಾವ ಬದಲಾವಣೆ ಆಗಲಿದೆ ಎಂದು ನಿರೀಕ್ಷೆ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಬೌರಿಂಗ್ ಆಸ್ಪತ್ರೆ ದುರಂತ: ಕಾಂಗ್ರೆಸ್ ಸರ್ಕಾರ ಬದುಕಿದೆಯೋ, ಸತ್ತಿದೆಯೋ ಗೊತ್ತಿಲ್ಲ ಎಂದ ಬೊಮ್ಮಾಯಿ Video

ಕಾಂಗ್ರೆಸ್ ಸರ್ಕಾರ ಬದುಕಿದೆಯೋ, ಸತ್ತಿದೆಯೋ ಗೊತ್ತಿಲ್ಲ: ಬೊಮ್ಮಾಯಿ

Basavaraj Bommai: ಮಳೆ ಬಂದರೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಹವಾಮಾನ ಇಲಾಖೆ ಹೇಳುತ್ತಲೇ ಬಂದಿದೆ ಆದರೂ ಯಾವುದೇ ತಯಾರಿ ಕೂಡ ಮಾಡಿಕೊಂಡಿಲ್ಲ. ಒಂದು ರೀತಿಯಲ್ಲಿ ಈ ಸರ್ಕಾರ ಜನರ ಪಾಲಿಗೆ ಸತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಎಐ ಮೂಲಕ ಡಯಾಬಿಟಿಸ್ ನಿಯಂತ್ರಣ: ಇದು ಮಧುಮೇಹ ತಜ್ಞರ ಮಹ್ವತದ ಸಲಹೆ Video

ಎಐ ಸಹಾಯದಿಂದ ಮಧುಮೇಹ ನಿಯಂತ್ರಣ ಸಾಧ್ಯ: ತಜ್ಞರ ಸಲಹೆ

ವೇಗದ ಜೀವನಶೈಲಿ, ಅಸಮರ್ಪಕ ಆಹಾರ ಪದ್ಧತಿ ಮತ್ತು ವ್ಯಾಯಾಮದ ಕೊರತೆಯಿಂದ ಮಧುಮೇಹ ಹೆಚ್ಚುತ್ತಿದೆ. ಆದರೆ ಸರಿಯಾದ ಆಹಾರ ಮತ್ತು ತಂತ್ರಜ್ಞಾನ ಬಳಕೆ ಮೂಲಕ ಇದನ್ನು ನಿಯಂತ್ರಿಸಬಹುದು. ಎಐ ಸಹಾಯದಿಂದ ರಕ್ತದ ಸಕ್ಕರೆ ಮಟ್ಟವನ್ನು ಗಮನಿಸಿ ಉತ್ತಮ ಆರೋಗ್ಯ ನಿರ್ವಹಣೆ ಸಾಧ್ಯ ಎಂದು ಮಧುಮೇಹ ತಜ್ಞ ಡಾ. ಸುಮನ್ ತಿಳಿಸಿದ್ದಾರೆ.

“ಸಚಿವ ಸುಧಾಕರ್ ಹೆಬ್ಬೆಟ್ಟು ಒತ್ತಲು ಆರೋಗ್ಯ ವಿಚಾರ ಮುಚ್ಚಿಟ್ರಾ?”; ಮಾಜಿ ಸಿಎಂ ಕುಮಾರಸ್ವಾಮಿ ಹೀಗೆ ಹೇಳಿದ್ದೇಕೆ? Video

ಸರ್ಕಾರದ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ವಾಗ್ದಾಳಿ

Kumaraswamy lashes out at the government: ಸಚಿವ ಸುಧಾಕರ್‌ ಅವರ ಆರೋಗ್ಯ ಕುರಿತು ರಾಜ್ಯ ಸರ್ಕಾರ ವಾಸ್ತವಾಂಶವನ್ನು ಜನರ ಮುಂದೆ ಇಡಬೇಕು. ವಾಸ್ತವಾಂಶವನ್ನು ಜನರ ಮುಂದೆ ಇಟ್ಟಿದ್ದರೆ ನಾನು ಅದನ್ನು ಪ್ರಶ್ನೆ ಮಾಡುತ್ತಿರಲಿಲ್ಲ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಕೆಲವು ವಿಷಯಗಳನ್ನು ಉದ್ದೇಶಪೂರ್ವಕವಾಗಿ ಮುಚ್ಚಿಡಲಾಗುತ್ತಿದೆ ಎಂಬ ಅನುಮಾನವನ್ನು ಅವರು ವ್ಯಕ್ತಪಡಿಸಿದ್ದಾರೆ.

ಡಿಟಾಕ್ಸ್  ಮಾಡುವುದಕ್ಕೂ ಮುನ್ನ ವೈದ್ಯರ ಸಲಹೆ ಪಡೆಯಲೇಬೇಕು: ಡಾ. ಅನಿತಾ Video

ಮನೆಯಲ್ಲೇ ಡಿಟಾಕ್ಸ್ ಮಾಡುವುದು ಹೇಗೆ?

ದೇಹದ ಶುದ್ದೀಕರಣ ಮಾಡುವುದನ್ನು ಡಿಟಾಕ್ಸ್ ಎನ್ನುತ್ತೇವೆ. ಇದು ಆರೋಗ್ಯವಂತರಲ್ಲಿ ನೈಸರ್ಗಿಕವಾಗಿ ನಡೆಯುತ್ತದೆ. ಇದಕ್ಕಾಗಿ ಹೆಚ್ಚು ಖರ್ಚು ಮಾಡಬೇಕಾದ ಅಗತ್ಯವಿಲ್ಲ ಎನ್ನುತ್ತಾರೆ ಡಯಟೀಷಿಯನ್ ಡಾ. ಅನಿತಾ. ಯಾವುದಕ್ಕೂ ಮನೆಯಲ್ಲೇ ಡಿಟಾಕ್ಸ್ ಪ್ರಯೋಗ ಮಾಡಲು ಹೋಗುವ ಮುನ್ನ ವೈದ್ಯರ ಸಲಹೆ ಪಡೆಯಬೇಕು ಎನ್ನುತ್ತಾರೆ ಅವರು.

KD The Devil:  ‘ಕೆಡಿ’  ಟ್ರೈಲರ್ ಡಿಲೀಟ್ ಆಗೋಕೆ ಅದೇ ಕಾರಣ; ಪ್ರೇಮ್‌ ಉತ್ತರ ಇಲ್ಲಿದೆ Video

‘ಕೆಡಿ’ ಟ್ರೇಲರ್ ಡಿಲೀಟ್ ಆಗಿದ್ಯಾಕೆ? ಪ್ರೇಮ್‌ ಉತ್ತರ ಇಲ್ಲಿದೆ

Director Prem: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ‘ಕೆಡಿ: ದಿ ಡೆವಿಲ್’ ಚಿತ್ರದ ಟ್ರೇಲರ್ ಏಪ್ರಿಲ್ 22 ರಂದು ರಿಲೀಸ್ ಆಯ್ತು. ಏಪ್ರಿಲ್ 24 ರಂದು ಏಕಾಏಕಿ ‘ಕೆಡಿ’ ಚಿತ್ರದ ಟ್ರೇಲರ್‌ನ ಯೂಟ್ಯೂಬ್‌ನಿಂದ ತೆಗೆಯಲಾಯಿತು. ಸೆನ್ಸಾರ್ ಸರ್ಟಿಫಿಕೇಷನ್‌ ಪ್ರಾಬ್ಲಂನಿಂದಾಗಿ ‘ಕೆಡಿ’ ಟ್ರೇಲರ್‌ನ ಯೂಟ್ಯೂಬ್‌ನಿಂದ ಡಿಲೀಟ್ ಮಾಡಲಾಯಿತು. ಈ ಬಗ್ಗೆ ಪ್ರೇಮ್‌ ಹೇಳಿದ ಮಾತಿದು.

SSLC Results 2026: 625 ಅಂಕ ಪಡೆದ ದಾವಣಗೆರೆಯ ಭರತ್‌ನ ಫಸ್ಟ್ ರಿಯಾಕ್ಷನ್ ಹೇಗಿತ್ತು?

625 ಅಂಕ ಪಡೆಯಲು ಶಿಕ್ಷಕರೇ ಪ್ರಮುಖ ಕಾರಣ ಎಂದ ಟಾಪರ್ ಭರತ್

SSLC ಪರೀಕ್ಷೆಯಲ್ಲಿ 625ಕ್ಕೆ 625 ಅಂಕವನ್ನು ರಾಜ್ಯದ ಏಳು ವಿದ್ಯಾರ್ಥಿಗಳು ಪಡೆದಿದ್ದು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಕಬ್ಬಳ ಗ್ರಾಮದ ಶ್ರೀ ವಿದ್ಯಾಲಕ್ಷ್ಮೀ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಭರತ್ ಜಿ ಕೂಡ ಒಬ್ಬರಾಗಿದ್ದಾರೆ. 625 ಅಂಕಗಳನ್ನು ಪಡೆದು ರಾಜ್ಯಕ್ಕೆ ಟಾಪರ್ ಆಗಿ ಮಿಂಚಿದ್ದಾರೆ. ಈ ಸಾಧನೆಗೆ ಮುಖ್ಯ ಕಾರಣ ಯಾರು? ತನ್ನ ಓದಿನಲ್ಲಿ ಸವಾಲುಗಳೇನಿತ್ತು ಎಂದು ಖುದ್ದಾಗಿ ವಿದ್ಯಾರ್ಥಿ ಭರತ್ ಜಿ ಅವರೇ ವಿಶ್ವವಾಣಿ ಟಿವಿ ಜೊತೆ ಮಾತನಾಡಿದ್ದಾರೆ.

ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ 5 ಕೋಟಿ ರುಪಾಯಿ ಅನುದಾನ ಬಿಡುಗಡೆ: ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಸಂಸದ ಬಿ.ವೈ. ರಾಘವೇಂದ್ರ ಧನ್ಯವಾದ Video

ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ 5 ಕೋಟಿ ರುಪಾಯಿ ಅನುದಾನ ಬಿಡುಗಡೆ

Shivamogga’s McGann Hospital: ಮೆಗ್ಗಾನ್ ಆಸ್ಪತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಬರುತ್ತಿರುವುದರಿಂದ, ಪ್ರಸ್ತುತ ಇರುವ 30 ಬೆಡ್‌ಗಳ NICU ಘಟಕವನ್ನು ವಿಸ್ತರಿಸುವ ಅಗತ್ಯವಿತ್ತು. ಹೀಗಾಗಿ ಸಂಸತ್ತಿನಲ್ಲಿ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಮನವಿ ಮಾಡಿದಾಗ, ಅವರು ಕೂಡಲೇ ಸ್ಪಂದಿಸಿ ತಮ್ಮ ಸಂಸದರ ನಿಧಿಯ ಪೂರ್ಣ 5 ಕೋಟಿ ರುಪಾಯಿ ನೀಡಿದ್ದಾರೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

ಬೇಸಗೆಯಲ್ಲಿ ಮುಖದ ಮೊಡವೆ, ಟ್ಯಾನ್ ರಿಮೂವ್ ಮಾಡುವ ಸುಲಭ ಕ್ರಮ ಇಲ್ಲಿದೆ Video

ಮುಖದ ಕಾಂತಿ ಹೆಚ್ಚಿಸಲು ಐಸ್ ಕ್ಯೂಬ್ ಬಳಸಿ

ಸುಡು ಬಿಸಿಲು ಬೆವರಿನಿಂದಾಗಿ ಸಾಕಷ್ಟು ಜನರು ಮುಖದ ಆರೈಕೆ ಬಗ್ಗೆ ಗೊಂದಲಕ್ಕೆ ಒಳಗಾಗುತ್ತಾರೆ. ಸೂರ್ಯನ ನೇರ ಕಿರಣ- ಬೆವರು ಸೇರಿ ಮುಖದ ಅಂದವನ್ನೇ ಕೆಡಿಸುತ್ತದೆ. ಇವುಗಳಿಂದ ಮುಖದ ಮೇಲೆ ಮೊಡವೆ, ಸನ್ ಬರ್ನ್ ಮತ್ತು ಚರ್ಮ ಕಪ್ಪಾಗುವ ಸಮಸ್ಯೆಗಳು ಕಂಡು ಬರುತ್ತವೆ. ಇದಕ್ಕೆ ಮನೆಯಲ್ಲೇ ಯಾವ ರೀತಿಯ ಆರೈಕೆ ಮಾಡಬಹುದು? ಸುಲಭ ಪರಿಹಾರ ಏನು ಎಂದು ಆಯುರ್ವೇದ ಸೌಂದರ್ಯ ತಜ್ಞೆ ದೀಪಾ ನಾಗೇಶ್ ಮಾಹಿತಿ ನೀಡಿದ್ದಾರೆ.

ಹುಣಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಹೂಮಳೆಯ ಸ್ವಾಗತ Video

ಹುಣಸೂರಿನಲ್ಲಿ ಬಸವ ಮಹಾದ್ವಾರ ಲೋಕಾರ್ಪಾಣೆಗೊಳಿಸಿದ ಸಿಎಂ

CM Siddaramaiah: ಮೈಸೂರು ಜಿಲ್ಲೆಯ ಹುಣಸೂರಿಗೆ ಸೋಮವಾರ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಭಿಮಾನಿಗಳು ಜೆಸಿಬಿ ಮೂಲಕ ಹೂಮಳೆಯ ಸುರಿಸುವ ಮೂಲಕ ಸ್ವಾಗತ ಕೋರಿದರು. ಮಾದಳ್ಳಿಯ ಶ್ರೀ ಉಕ್ಕಿನಕಂತೆ ಮಠದಲ್ಲಿ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಬಸವ ಮಹಾದ್ವಾರವನ್ನು ಲೋಕಾರ್ಪಣೆಗೊಳಿಸಿದರು. ಸುತ್ತೂರು ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿ, ಶ್ರೀ ನಟರಾಜ ಸ್ವಾಮೀಜಿ, ಶ್ರೀ ಸಾಂಬ ಸದಾಶಿವ ಸ್ವಾಮೀಜಿ ಅವರ ದಿವ್ಯ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ನಡೆಯಿತು.

ಕಾಂಗ್ರೆಸ್ ಶಾಸಕ ಹ್ಯಾರಿಸ್, ಪುತ್ರ ನಲಪಾಡ್ ನಿವಾಸದ ಮೇಲೆ ಇಡಿ ದಾಳಿ: ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?

ಹ್ಯಾರಿಸ್ ನಿವಾಸದ ಮೇಲೆ ಇಡಿ ದಾಳಿ: ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?

CM Siddaramaiah Reaction: ಕಾಂಗ್ರೆಸ್ ಶಾಸಕ ಎನ್.ಎ. ಹ್ಯಾರಿಸ್ ಮತ್ತು ಅವರ ಪುತ್ರ ಮೊಹಮ್ಮದ್ ನಲಪಾಡ್ ಅವರ ನಿವಾಸಗಳ ಮೇಲೆ ಇಡಿ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಈ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದಾಗ, ತಮಗೆ ಮಾಹಿತಿ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

ಚಂದ್ರನು ಮೀನ ರಾಶಿಗೆ ಆರ್ಥಿಕವಾಗಿ ಯಶಸ್ಸು ನೀಡುತ್ತನಾ? Video

ಮೀನ ರಾಶಿಯವರಿಗೆ ಚಂದ್ರನ ಪ್ರಭಾವವೇನು?

ದ್ವಾದಶ ರಾಶಿಗಳ ಮೇಲೆ ಚಂದ್ರ ಗ್ರಹದ ಪರಿಣಾಮವೇನು? ಅದರಲ್ಲೂ ಮೀನ ರಾಶಿಗೆ ಚಂದ್ರನು ಐದನೇ ಮನೆಯ ಯಜಮಾನ ಆಗಿದ್ದಾನೆ. ಹಾಗಿದ್ರೆ ಮೀನ ರಾಶಿಗೆ ಈ ವರ್ಷ ಯಾವ ರೀತಿಯ ಬದಲಾವಣೆ ಆಗಬಹುದು ಎಂದು ಮಹಾಬಲ ಮೂರ್ತಿ ಕೊಡ್ಲೆಕೆರೆ ತಿಳಿಸಿದ್ದಾರೆ.

Radha Krishna Adiga's Book: ಬೆಂಗಳೂರಿನಲ್ಲಿ ʼರಾಧಾಕೃಷ್ಣ ಅಡಿಗ: ಇಡ್ಲಿ ಕಾಫಿ ಪರಂಪರೆ-ಪಯಣ' ಪುಸ್ತಕ ಲೋಕಾರ್ಪಣೆ Video

ʼರಾಧಾಕೃಷ್ಣ ಅಡಿಗ: ಇಡ್ಲಿ ಕಾಫಿ ಪರಂಪರೆ-ಪಯಣ' ಪುಸ್ತಕ ಲೋಕಾರ್ಪಣೆ

ದಕ್ಷಿಣ ಕನ್ನಡದ ಪುಟ್ಟ ಊರಿನಿಂದ ದಶಕಗಳ ಹಿಂದೆ ಬೆಂಗಳೂರಿಗೆ ವಲಸೆ ಬಂದು ಹೊಟೇಲ್ ಉದ್ಯಮದಲ್ಲಿ ಸ್ಮರಣೀಯ ಪರಂಪರೆ ಹುಟ್ಟುಹಾಕಿದ ಹೋಟೆಲ್‌ ಉದ್ಯಮಿ ರಾಧಾಕೃಷ್ಣ ಅಡಿಗ ಅವರ ಕುರಿತ ಅಪೂರ್ವ ಕಥನ ʼರಾಧಾಕೃಷ್ಣ ಅಡಿಗ- ಇಡ್ಲಿ ಕಾಫಿ ಪರಂಪರೆ- ಪಯಣʼ ಪುಸ್ತಕದಲ್ಲಿದೆ.

ಕುಂಭ ರಾಶಿಗೆ ಕಂಟಕ ತರ್ತಾನ ಚಂದ್ರ ಗ್ರಹ? ಮನಸ್ಸಿಗೆ ಒತ್ತಡ, ಆರೋಗ್ಯದ ಮೇಲೆ ಎಚ್ಚರಿಕೆ ಅಗತ್ಯ Video

ಕುಂಭ ರಾಶಿಗೆ ಎಚ್ಚರಿಕೆಯ ವರ್ಷ ಇದು

2026ರ ಏಪ್ರಿಲ್‌ನಲ್ಲಿ ಕುಂಭ ರಾಶಿಯವರಲ್ಲಿ ಚಂದ್ರ–ರಾಹು ಸಂಯೋಗದಿಂದ ಗ್ರಹಣ ಯೋಗ ಉಂಟಾಗಿ, ಮನಸ್ಸಿನ ಅಶಾಂತಿ, ಭಾವನಾತ್ಮಕ ಏರಿಳಿತ ಮತ್ತು ನಿರ್ಧಾರಗಳಲ್ಲಿ ಗೊಂದಲ ಕಾಣಿಸಬಹುದು. ಚಂದ್ರನು 6ನೇ ಭವನದ ಅಧಿಪತಿಯಾಗಿರುವುದರಿಂದ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಅಗತ್ಯವಾಗಿದ್ದು, ಒಟ್ಟಾರೆ ಮಿಶ್ರ ಫಲಿತಾಂಶ ಕಂಡುಬಂದಿದೆ.

ಮಕರ ರಾಶಿಯವರ ದಾಂಪತ್ಯ ಕಲಹಕ್ಕೆ ಚಂದ್ರನೇ ಕಾರಣನಾಗುತ್ತಾನಾ? Video

ಮಕರ ರಾಶಿಯವರ ದಾಂಪತ್ಯ ಕಲಹಕ್ಕೆ ಚಂದ್ರನೇ ಮೂಲ ಕಾರಣ?

ದ್ವಾದಶ ರಾಶಿಗಳ ಮೇಲೆ ಚಂದ್ರ ಗ್ರಹದ ಪರಿಣಾಮವೇನು? ಅದರಲ್ಲೂ ಮಕರ ರಾಶಿಗೆ ಚಂದ್ರನು ದಾಂಪತ್ಯದ ಮನೆಯ ಯಜಮಾನ ಆಗಿದ್ದಾನೆ. ಹಾಗಿದ್ರೆ ಮಕರ ರಾಶಿಗೆ ಈ ವರ್ಷ ಯಾವ ರೀತಿಯ ಬದಲಾವಣೆ ಆಗಬಹುದು ಎಂದು ಮಹಾಬಲ ಮೂರ್ತಿ ಕೊಡ್ಲೆಕೆರೆ ತಿಳಿಸಿದ್ದಾರೆ.

ಧನು ರಾಶಿಯವರ ಪಾಲಿಗೆ ಚಂದ್ರ ಗ್ರಹ ಕಾಮಧೇನು; ಈ ವರ್ಷ ಏನೆಲ್ಲ ಬದಲಾಗಲಿದೆ? Video

ಧನು ರಾಶಿಯವರ ಮೇಲೆ ಚಂದ್ರ ಗ್ರಹದ ಪರಿಣಾಮವೇನು?

ದ್ವಾದಶ ರಾಶಿಗಳ ಮೇಲೆ ಚಂದ್ರ ಗ್ರಹದ ಪರಿಣಾಮ: ಧನು ರಾಶಿಗೆ ಚಂದ್ರನು ಮರಣದ ಮನೆಯ ಯಜಮಾನ ಆಗಿದ್ದಾನೆ. ಹಾಗಾದರೆ ಧನು ರಾಶಿಯವರ ಮೇಲೆ ಈ ವರ್ಷ ಯಾವ ರೀತಿಯ ಬದಲಾವಣೆ ಆಗಬಹುದು ಎನ್ನುವ ಪ್ರಶ್ನೆಗೆ ಭಾರತೀಯ ಜ್ಯೋತಿಷ ವಿಜ್ಞಾನ ಸಂಶೋಧಕ ಮಹಾಬಲ ಮೂರ್ತಿ ಕೊಡ್ಲೆಕೆರೆ ಉತ್ತರಿಸಿದ್ದಾರೆ.

“ತಮ್ಮ ಹಕ್ಕಿಗಾಗಿ ಮಹಿಳೆಯರು 40 ವರ್ಷಗಳಿಂದ ಕಾದಿದ್ದರು”: ಲೋಕಸಭೆಯಲ್ಲಿ ಸಂಸದ ತೇಜಸ್ವಿ ಸೂರ್ಯ ಗುಡುಗು

ಲೋಕಸಭೆಯಲ್ಲಿ ಸಂಸದ ತೇಜಸ್ವಿ ಸೂರ್ಯ ಹೇಳಿದ್ದೇನು?

MP Tejasvi Surya: ʼʼತಮ್ಮ ಹಕ್ಕಿಗಾಗಿ ಮಹಿಳೆಯರು 40 ವರ್ಷಗಳಿಂದ ಕಾಯುತ್ತಿದ್ದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಮಹಿಳಾ ಮೀಸಲಾತಿ ಮಸೂದೆಯನ್ನು ಜಾರಿಗೆ ತರುವ ಮೂಲಕ ದೇಶದ ಅಭಿವೃದ್ಧಿಯಲ್ಲಿ ನಾರಿ ಶಕ್ತಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡುತ್ತಿದೆʼʼ ಎಂದು ಸಂಸದ ತೇಜಸ್ವಿ ಸೂರ್ಯ ಶ್ಲಾಘಿಸಿದರು.

Amruthadhaare Serial: ಗೌತಮ್‌- ಜೈದೇವ್‌ ಜಟಾಪಟಿ ಅಂತ್ಯ? ಸೀರಿಯಲ್‌ ಮುಗಿಯೋ ಟೈಂ ಬಂದೇ ಬಿಡ್ತಾ? Video

Amruthadhaare Serial: ಗೌತಮ್‌- ಜೈದೇವ್‌ ಜಟಾಪಟಿ ಅಂತ್ಯ?

Amruthadhaare Serial: 'ಅಮೃತಧಾರೆ' ಧಾರಾವಾಹಿಯಲ್ಲಿ ನಾಯಕ ಗೌತಮ್ ದಿವಾನ್ ಆಗಿ ಅಭಿನಯಿಸುತ್ತಿರುವ ರಾಜೇಶ್ ನಟರಂಗ ತಮ್ಮ ನಟನೆಯ ಮೂಲಕ ಗುರುತಿಸಿಕೊಂಡಿದ್ದಾರೆ. ಗೌತಮ್ ದಿವಾನ್ ಆಗಿ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿರುವ ರಾಜೇಶ್ ‌ನಟರಂಗ ನಿರ್ಮಾಪಕರಾಗಿಯೂ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ. ಈ ವೇಳೆ ವಿಶ್ವವಾಣಿ ವಿಶೇಷ ಸಂದರ್ಶನದಲ್ಲಿ ಸೀರಿಯಲ್‌ ಕುರಿತು ರಾಜೇಶ್ ನಟರಂಗ ಮಾತನಾಡಿದ್ದಾರೆ.

ವೃಶ್ಚಿಕ ರಾಶಿಗೆ ಚಂದ್ರ ಗ್ರಹದಿಂದ ಈ ವರ್ಷ ಯಶಸ್ಸು ಸಿಗುತ್ತದೆಯೇ? Video

ವೃಶ್ಚಿಕ ರಾಶಿಗೆ ಚಂದ್ರ ಗ್ರಹ ಮೂಡಿಸುವ ತಲ್ಲಣಗಳೇನು?

ದ್ವಾದಶ ರಾಶಿಗಳ ಮೇಲೆ ಚಂದ್ರ ಗ್ರಹದ ಪರಿಣಾಮವೇನು? ಅದರಲ್ಲೂ ವೃಶ್ಚಿಕ ರಾಶಿಗೆ ಚಂದ್ರನು ಭಾಗ್ಯದ ಮನೆಯ ಹತ್ತನೆ ಯಜಮಾನ ಆಗಿದ್ದಾನೆ. ಹಾಗಿದ್ರೆ ವೃಶ್ಚಿಕ ರಾಶಿಗೆ ಈ ವರ್ಷ ಯಾವ ರೀತಿಯ ಬದಲಾವಣೆ ಆಗಬಹುದು ಎಂದು ಮಹಾಬಲ ಮೂರ್ತಿ ಕೊಡ್ಲೆಕೆರೆ ತಿಳಿಸಿದ್ದಾರೆ.

ಪ್ರಧಾನಿ ಮೋದಿ ಉದ್ಘಾಟಿಸಿದ ಶ್ರೀ ಭೈರವೈಕ್ಯ ಮಂದಿರ ಹೇಗಿದೆ ಗೊತ್ತಾ? ವಿಡಿಯೋ ನೋಡಿ Video

ಪ್ರಧಾನಿ ಮೋದಿ ಉದ್ಘಾಟಿಸಿದ ಶ್ರೀ ಭೈರವೈಕ್ಯ ಮಂದಿರ ಹೇಗಿದೆ ಗೊತ್ತಾ?

Sri Guru Bhairavaikya Mandir: ಪ್ರಧಾನಿ ನರೇಂದ್ರ ಮೋದಿ ಇಂದು ಮಂಡ್ಯ ಜಿಲ್ಲೆಯ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿದ್ದು, ಶ್ರೀಗುರು ಭೈರವೈಕ್ಯ ಮಂದಿರದ ಉದ್ಘಾಟನೆಯನ್ನು ನೆರವೇರಿಸಿದ್ದಾರೆ. ಈ ಮಂದಿರ ಪರಮಪೂಜ್ಯ ಜಗದ್ಗುರು ಪದ್ಮಭೂಷಣ ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮಿಯವರ ಸಮಾಧಿ ಸ್ಥಳವಾಗಿದೆ.

PM Modi in  Adichunchanagiri: ಆದಿಚುಂಚನಗಿರಿ ಮಠಕ್ಕೆ ಪ್ರಧಾನಿ ಮೋದಿ ಭೇಟಿ; ಗುರುಭೈರವೈಕ್ಯ ಮಂದಿರ ಉದ್ಘಾಟನೆ Video

ಆದಿಚುಂಚನಗಿರಿ ಮಠಕ್ಕೆ ಪ್ರಧಾನಿ ಮೋದಿ ಭೇಟಿ

PM Modi Karnataka Visit: ಪ್ರಧಾನಿ ನರೇಂದ್ರ ಮೋದಿ ಅವರು ಮಂಡ್ಯ ಜಿಲ್ಲೆಯ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿದ್ದಾರೆ. ಮಠದಲ್ಲಿ ದ್ರಾವಿಡ-ಹೊಯ್ಸಳ ಶೈಲಿಯ ಶಿಲ್ಪಕಲೆಯಿಂದ ನಿರ್ಮಿಸಿರುವ ಶ್ರೀಗುರು ಭೈರವೈಕ್ಯ ಮಂದಿರದ ಉದ್ಘಾಟನೆಯನ್ನು ಪ್ರಧಾನಿ ನರೇಂದ್ರ ಮೋದಿ ನೆರವೇರಿಸಿದ್ದಾರೆ

ತುಲಾ ರಾಶಿಯವರ ಉದ್ಯೋಗದ ಮೇಲೆ ಚಂದ್ರ ಗ್ರಹದ ಪರಿಣಾಮವೇನು? Video

ತುಲಾ ರಾಶಿಗೆ ಚಂದ್ರನ ಪ್ರಭಾವವೇನು?

ಈ ವರ್ಷ ತುಲಾ ರಾಶಿಗೆ ಚಂದ್ರನು ಉದ್ಯೋಗ ವಿಚಾರದಲ್ಲಿ ಹತ್ತನೆ ಮನೆಯ ಯಜಮಾನ ಆಗಿದ್ದಾನೆ. ಹಾಗದರೆ ತುಲಾ ರಾಶಿಯವರ ಮೇಲೆ ಈ ವರ್ಷ ಯಾವ ರೀತಿಯ ಬದಲಾವಣೆ ಆಗಬಹುದು ಎಂದು ಮಹಾಬಲ ಮೂರ್ತಿ ಕೊಡ್ಲೆಕೆರೆ ತಿಳಿಸಿದ್ದಾರೆ.

ಎಂಎಲ್‌ಸಿ ನಜೀರ್ ಅಹ್ಮದ್ ರಾಜೀನಾಮೆ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಫಸ್ಟ್‌ ರಿಯಾಕ್ಷನ್‌ Video

ನಜೀರ್ ಅಹ್ಮದ್ ರಾಜೀನಾಮೆ ಕುರಿತು ಡಿ.ಕೆ. ಶಿವಕುಮಾರ್ ಹೇಳಿದ್ದೇನು?

DK Shivakumar: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಕಾರ್ಯದರ್ಶಿ ಹಾಗೂ ಎಂಎಲ್‌ಸಿ ನಜೀರ್ ಅಹ್ಮದ್ ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಪ್ರತಿದಿನ ವಿವಿಧ ನಾಯಕರು ನೀಡುವ ವರದಿ ಗಮನಿಸಲಾಗುತ್ತಿದೆ. ಅದರ ಆಧಾರದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದರು.

ಮಕ್ಕಳಲ್ಲಿ ಮುಂಜಾನೆ ಕಾಡುವ ಶೀತ, ತಲೆನೋವು: ನಿರ್ಲಕ್ಷ್ಯ ಬೇಡ Video

ಮಕ್ಕಳಲ್ಲಿ ಮುಂಜಾನೆ ಕಾಡುವ ಶೀತ, ತಲೆನೋವಿಗೆ ಏನು ಪರಿಹಾರ?

ಬೆಳಗ್ಗೆ ಎದ್ದಾಗ ಕೆಲವರಿಗೆ ಶೀತ, ತಲೆ ನೋವು ಕಾಡುತ್ತದೆ. ಇದಕ್ಕೆ ಹಲವು ಕಾರಣಗಳಿವೆ. ಅವುಗಳಲ್ಲಿ ಮುಖ್ಯವಾಗಿ ನಮ್ಮ ದಿನಚರಿಯೇ ಕಾರಣವಾಗಿರುತ್ತದೆ. ದಿನಚರಿಯೊಂದಿಗೆ ಕೆಲವೊಂದು ಆರೋಗ್ಯಕರ ಅಭ್ಯಾಸ ಮಾಡುವುದರಿಂದ ಬೆಳಗ್ಗೆ ಎದ್ದಾಗ ಕಾಡುವ ಶೀತ, ತಲೆನೋವನ್ನು ದೂರ ಮಾಡಬಹುದು ಮತ್ತು ಆರೋಗ್ಯವಾಗಿರಬಹುದು. ಈ ಅಭ್ಯಾಸಗಳು ಯಾವುದು ಎನ್ನುವ ಕುರಿತು ಆರೋಗ್ಯ ತಜ್ಞರು ನೀಡಿರುವ ಮಾಹಿತಿ ಇಲ್ಲಿದೆ.

Loading...