ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವೀಡಿಯೋಸ್

HD Deve Gowda: ಬೆಂಗಳೂರಿನ ಉಡುಪಿ ಶ್ರೀ ಕೃಷ್ಣ ಭವನದಲ್ಲಿ ಮಸಾಲೆ ದೋಸೆ ಸವಿದ ಎಚ್.ಡಿ. ದೇವೇಗೌಡ್ರು Video

ಉಡುಪಿ ಶ್ರೀ ಕೃಷ್ಣ ಭವನದಲ್ಲಿ ಮಸಾಲೆ ದೋಸೆ ಸವಿದ ಎಚ್.ಡಿ. ದೇವೇಗೌಡ್ರು

ಬೆಂಗಳೂರು ನಗರದ ಶಾರದಾ ಪೀಠದ ಚಂದ್ರಮೌಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು, ಬಳೇಪೇಟೆಯ ಉಡುಪಿ ಶ್ರೀ ಕೃಷ್ಣ ಭವನ ಹೋಟೆಲ್‌ನಲ್ಲಿ ಉಪಾಹಾರ ಸೇವಿಸಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಮಧುಮೇಹಿಗಳಲ್ಲಿ  ಮೊದಲು ಕಣ್ಣಿನ ತೊಂದರೆ ಬರುವುದು ಯಾಕೆ? ತಜ್ಞರು ಹೇಳುವುದೇನು? Video

ಶುಗರ್ ಇದ್ದವರಿಗೆ ಮೊದಲು ಕಣ್ಣು ಕುರುಡಾಗುವುದೇಕೆ?

ಮಧುಮೇಹ ಎನ್ನುವುದು ಸೈಲೆಂಟ್ ಕಿಲ್ಲರ್. ಇದು ದೇಹದಲ್ಲಿರುವುದು ಗೊತ್ತಾಗುವುದೇ ಯಾವುದಾದರೂ ಅಂಗಾಂಗ ವೈಫಲ್ಯವಾದಾಗ. ನಮ್ಮ ದೇಹವು ಇದಕ್ಕೆ ಸಾಕಷ್ಟು ಮೊದಲೇ ಮುನ್ಸೂಚನೆಯನ್ನು ನೀಡುತ್ತದೆ. ಆದರೆ ನಾವು ಇದನ್ನು ನಿರ್ಲಕ್ಷಿಸುತ್ತೇವೆ. ಹೀಗಾಗಿ ಮಧುಮೇಹವಿದ್ದರೂ ಅನೇಕರಿಗೆ ತಿಳಿಯುವಾಗ ತಡವಾಗುತ್ತದೆ. ಹೀಗಾಗಿ ಮಧುಮೇಹಿಗಳು ನಿರಂತರ ಆರೋಗ್ಯ ತಪಾಸಣೆ ನಡೆಸಬೇಕು, ಅವು ಯಾವುದು, ಯಾಕಾಗಿ ಎನ್ನುವ ಮಧುಮೇಹ ತಜ್ಞರಾದ ಡಾ. ಸುಮನ್ ಅವರು ನೀಡಿರುವ ಮಾಹಿತಿ ಇಲ್ಲಿದೆ.

ಮದುವೆಗೆ ಸ್ಪೆಷಲ್ ಆಗಿ ಕಾಣಬೇಕಾ? ಸೆಲೆಬ್ರಿಟಿ ಮೇಕಪ್ ಆರ್ಟಿಸ್ಟ್ ದೀಪಾ ನಾಗೇಶ್ ಸಲಹೆ ಇಲ್ಲಿದೆ Video

ಮದುವೆಗೆ ಸ್ಪೆಷಲ್ ಆಗಿ ಕಾಣಬೇಕಾ? ಇಲ್ಲಿದೆ ಟಿಪ್ಸ್

Bridal makeup: ಸೆಲೆಬ್ರಿಟಿ ಮೇಕಪ್ ಆರ್ಟಿಸ್ಟ್ ದೀಪ ನಾಗೇಶ್ ಅವರು ವಧುವಿನ ಮೇಕಪ್ ತ್ವಚೆ ಮತ್ತು ತಲೆಗೂದಲಿನ ಆರೈಕೆಗೆ ಸಂಬಂಧಿಸಿದಂತೆ ಉಪಯುಕ್ತ ಮಾಹಿತಿ ಹಾಗೂ ಸಲಹೆಗಳನ್ನು ನೀಡಿದ್ದಾರೆ. 3ಡಿ ಮೇಕಪ್ ಉತ್ತಮವೇ? ಎಚ್‌ಡಿ ಮೇಕಪ್ ಉತ್ತಮವೇ? ಎಂಬ ಬಗ್ಗೆಯೂ ಅವರು ತಿಳಿಸಿದ್ದಾರೆ.

ಸಿ-ಸೆಕ್ಷನ್ ಹೆರಿಗೆ ಆಯ್ಕೆಯಿಂದ ಯಾವ ರೋಗಕ್ಕೆ ಅಹ್ವಾನ? ಈ ಬಗ್ಗೆ ತಜ್ಞರು ಹೇಳೋದೇನು? Video

ಸಿ-ಸೆಕ್ಷನ್ ಹೆರಿಗೆಯಿಂದ ಬರುವ ಅಪಾಯಗಳೇನು?

ಯಾವುದೇ ಕಾರಣಕ್ಕೂ ಸಿ-ಸೆಕ್ಷನ್ ಹೆರಿಗೆಯನ್ನು ಆಯ್ಕೆ ಅಥವಾ ಶಾರ್ಟ್ ಕಟ್ ಆಗಿ ಮಾಡಿಕೊಳ್ಳಬೇಡಿ. ಇದರಿಂದ ಮುಂದೆ ಸಾಕಷ್ಟು ತೊಂದರೆಗಳು ಎದರಾಗಬಹುದು ಎನ್ನುತ್ತಾರೆ ಖ್ಯಾತ ಸ್ತ್ರೀ ರೋಗ ತಜ್ಞರಾದ ಡಾ. ರಶ್ಮಿ ಟಿ.ಎನ್. ವಿಶ್ವವಾಣಿ ಹೆಲ್ತ್ ಯೂಟ್ಯೂಬ್ ಚಾನೆಲ್ ನಲ್ಲಿ ಮಾತನಾಡಿದ ಅವರು, ಸಿ-ಸೆಕ್ಷನ್ ಹೆರಿಗೆ ಆಯ್ಕೆಯಿಂದ ಮುಂದೆ ಬರಬಹುದಾದ ತೊಂದರೆಗಳ ಬಗ್ಗೆ ವಿವರಿಸಿರುವುದು ಹೀಗೆ..

ಬೆಲ್ಲ, ಸಕ್ಕರೆ ಸೇವಿಸದೇ ಇದ್ದರೂ ಮಧುಮೇಹ ಕಂಟ್ರೋಲ್‌ಗೆ ಸಿಗ್ತಿಲ್ವ? ಏನಂತಾರೆ ತಜ್ಞರು? Video

ಆಹಾರದ ಬಗ್ಗೆ ಮಧುಮೇಹಿಗಳಿಗೆ ಇರಲಿ ಎಚ್ಚರಿಕೆ

ಬೆಲ್ಲ, ಸಕ್ಕರೆ ಸೇವನೆ ನಿಲ್ಲಿಸಿದ್ದರೂ ಮಧುಮೇಹ ನಿಯಂತ್ರಣಕ್ಕೆ ಬರುತ್ತಿಲ್ಲ ಇದಕ್ಕೆ ಕಾರಣವೇನು?, ಆಹಾರ ಸೇವನೆಯಲ್ಲಿ ಮಧುಮೇಹಿಗಳು ಮಾಡುವ ತಪ್ಪೇನು? ಮಧುಮೇಹಿಗಳು ಆಹಾರ ಸೇವಿಸುವಾಗ ವಹಿಸಬೇಕಾದ ಎಚ್ಚರಿಕೆ ಕ್ರಮಗಳು ಯಾವುದು ? ಈ ಕುರಿತು ಆಹಾರ ತಜ್ಞರಾದ ಡಾ. ಅನಿತಾ ಅವರು ನೀಡಿರುವ ಮಾಹಿತಿ ಇಲ್ಲಿದೆ.

ಸಂಪುಟದಲ್ಲಿ ಹೆಚ್ಚುತ್ತಿರುವ ಅಸಮಾಧಾನದ ನಡುವೆ ಅಣ್ಣಮ್ಮ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ Video

ಅಣ್ಣಮ್ಮ ದೇವಿ ದೇವಸ್ಥಾನಕ್ಕೆ ಮುಖ್ಯಮಂತ್ರಿ ಡಿಕೆಶಿ ಭೇಟಿ

Shivakumar Visits Annamma Devi Temple: ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್‌ ಅಧಿಕಾರ ಸ್ವೀಕರಿಸಿದ್ದು, ಸಚಿವರಿಗೆ ಖಾತೆಯನ್ನೂ ಹಂಚಿಕೆ ಮಾಡಲಾಗಿದೆ. ಇದರ ಬೆನ್ನಲ್ಲೇ ಸಂಪುಟದಲ್ಲಿ ಅಸಮಾಧಾನ ಭುಗಿಲೆದ್ದಿದ್ದು ಜಲ ಸಂಪನ್ಯೂಲ ಖಾತೆ ನಿರಾಕರಿಸಿ ಹಿರಿಯ ನಾಯಕ ರಾಮಲಿಂಗಾ ರೆಡ್ಡಿ ರಾಜೀನಾಮೆ ಸಲ್ಲಿಸಿದ್ದಾರೆ. ಇತ್ತ ಕೆ.ಎಚ್‌. ಮುನಿಯಪ್ಪ ಕೂಡ ಅತೃಪ್ತಿ ಪ್ರಕಟಿಸಿದ್ದಾರೆ. ಈ ಮಧ್ಯೆ ಡಿಕೆಶಿ ಬೆಂಗಳೂರಿನ ಪ್ರಸಿದ್ಧ ಅಣ್ಣಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳು ಬೇಗ ಮಾತಾಡ್ತಾರೆ? ಏನಂತಾರೆ ತಜ್ಞರು? Video

ಹೆಣ್ಣು ಮಕ್ಕಳು ಬೇಗ ಮಾತನಾಡುತ್ತಾರೆಯೇ?

ಗಂಡು ಮಕ್ಕಳಿಗಿಂತ ಹೆಚ್ಚಾಗಿ ಹೆಣ್ಣು ಮಕ್ಕಳು ಬೇಗ ಮಾತನಾಡುತ್ತಾರೆ ಎನ್ನುವ ನಂಬಿಕೆ ಜನರಲ್ಲಿದೆ. ಮಕ್ಕಳ ಬೆಳವಣಿಗೆಯಲ್ಲಿ ಈ ರೀತಿಯ ವ್ಯತ್ಯಾಸಗಳು ಇವೆಯೇ ? ಅವುಗಳ ಬೆಳವಣಿಗೆಯ ವಿವಿಧ ಹಂತಗಳು ಯಾವುದು, ಯಾವ ಸಮಸ್ಯೆಗಳು ಕಂಡು ಬಂದಾಗ ವೈದ್ಯರನ್ನು ಸಂಪರ್ಕಿಸಬೇಕು ಎನ್ನುವ ಕುರಿತು ತಜ್ಞರು ನೀಡಿರುವ ಸಂಪೂರ್ಣ ಮಾಹಿತಿ ಇಲ್ಲಿದೆ.

ಹಾವೇರಿಯಲ್ಲಿ ಉಚಿತ ಸೋಯಾಬಿನ್‌ ಡೆಮೋ ಬಿತ್ತನೆ ಬೀಜ ವಿತರಣೆಗೆ ರೈತರ ಆಗ್ರಹ Video

ಹಾವೇರಿಯಲ್ಲಿ ಉಚಿತ ಸೋಯಾಬಿನ್‌ ಡೆಮೋ ಬೀಜ ವಿತರಣೆಗೆ ಆಗ್ರಹ

Haveri News: ಕೇಂದ್ರ ಸರ್ಕಾರ ನೀಡುವ ಉಚಿತ ಸೋಯಾಬಿನ್‌ ಡೆಮೋ ಬಿತ್ತನೆ ಬೀಜವನ್ನು ರೈತರು ಉತ್ಪಾದನೆ ಮಾಡಿಕೊಳ್ಳಲಿ. ಇದರಿಂದ ಬೀಜದ ಕೊರತೆ ನೀಗಿಸಲು ಸಾಧ್ಯ ಎಂಬ ಮಹತ್ತರ ಯೋಜನೆ ಘೋಷಿಸಲಾಗಿದೆ. ಆದರೆ ಹಾವೇರಿ ಜಿಲ್ಲಾಡಳಿತ ಸರಿಯಾಗಿ ಬಿತ್ತನೆ ಬೀಜ ವಿತರಣೆ ಮಾಡುತ್ತಿಲ್ಲ ಎಂದು ರೈತರು ಆರೋಪಿಸಿದ್ದಾರೆ. ಕೆಲ ರೈತರಿಗೆ ನಾಮಕಾವವಸ್ಥೆ ಬೀಜ ವಿತರಣೆ ಮಾಡಿ, ಬಳಿಕ ಬೀಜ ಖಾಲಿಯಾಗಿದೆ ಎಂದು ಹೇಳಿಕೆ ನೀಡಿ ಕೈ ತೊಳೆದುಕೊಂಡಿದ್ದಾರೆ ಎಂದು ರೈತರು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಧುಮೇಹಿಗಳಿಗೆ ಕಾಡುವ ಚರ್ಮದ ತೊಂದರೆಗಳಿಗೆ ಇದೆ ಪರಿಹಾರ Video

ಮಧುಮೇಹಿಗಳಲ್ಲಿ ಒಣ ಚರ್ಮಕ್ಕೆ ಕಾರಣವೇನು?

ಮಧುಮೇಹಿಗಳಲ್ಲಿ ಹೆಚ್ಚಾಗಿ ಚರ್ಮದ ಸಮಸ್ಯೆಗಳು ಕಂಡು ಬರುತ್ತವೆ. ಇದನ್ನು ನಿವಾರಿಸುವುದು, ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಸಾಧ್ಯವಿದೆ. ಇದಕ್ಕಾಗಿ ಸ್ವಲ್ಪ ಹೆಚ್ಚು ಕಾಳಜಿ ವಹಿಸಬೇಕು ಎನ್ನುತ್ತಾರೆ ಮಧುಮೇಹ ತಜ್ಞರಾದ ಡಾ. ಸುಮನ್. ವಿಶ್ವವಾಣಿ ಹೆಲ್ತ್ ಯೂಟ್ಯೂಬ್ ಚಾನೆಲ್ ನಲ್ಲಿ ಮಧುಮೇಹಿಗಳಲ್ಲಿ ಕಾಡುವ ಚರ್ಮದ ತೊಂದರೆ ಮತ್ತು ಅದಕ್ಕೆ ಪರಿಹಾರ ಈ ಕುರಿತು ನೀಡಿರುವ ಮಾಹಿತಿ ಇಲ್ಲಿದೆ.

ಮಿಥುನ ರಾಶಿಯವರಿಗೆ ಒಂದು ವರ್ಷ ಸುವರ್ಣ ಸಮಯ, ಮುಟ್ಟಿದ್ದೆಲ್ಲಾ ಆಗಲಿದೆ ಚಿನ್ನ Video

ಮಿಥುನ ರಾಶಿಯವರಿಗೆ ಸುವರ್ಣ ಸಮಯ

Guru Graha Effect: ಗುರುವಿನ ಬದಲಾವಣೆಯೂ ಜ್ಯೋತಿಷ್ಯ ಶಾಸ್ತ್ರದ ಅತೀ ಪ್ರಮುಖ ಸಂದರ್ಭ ಎಂದು ಪರಿಗಣಿಸಲಾಗುತ್ತದೆ. ಇದರ ಪರಿಣಾಮ ಮಿಥುನ ರಾಶ್ಯಾಧಿಪತಿ ಬುಧನ ಮೇಲೆ ಪ್ರಭಾವ ಬೀರಲಿದ್ದು ಜೀವನದಲ್ಲಿಪ್ರಗತಿಯನ್ನು ತರಲಿದೆ. ಆರ್ಥಿಕವಾಗಿ ಅಭಿವೃದ್ಧಿ ಇದ್ದರೂ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರುವಂತಿಲ್ಲ. ಗುರುವಿನ ಬದಲಾವಣೆ ಮಿಥುನ ರಾಶಿ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದನ್ನು ಖ್ಯಾತ ಜ್ಯೋತಿಷ್ಯರಾದ ಶ್ರೀ ದೇವದತ್ತ ಶರ್ಮ ಗುರೂಜಿ ನೀಡಿರುವ ಮಾಹಿತಿ ಇಲ್ಲಿದೆ.

ಇಂಧನ ಉಳಿತಾಯಕ್ಕೆ ಮೋದಿ ಕರೆಗೆ ಬಿ. ವೈ. ವಿಜಯೇಂದ್ರ ಬೆಂಬಲ: ಮೆಟ್ರೋದಲ್ಲಿ ಪ್ರಯಾಣಿಸಿದ ಬಿಜೆಪಿ ರಾಜ್ಯಾಧ್ಯಕ್ಷ Video

ಇಂಧನ ಉಳಿತಾಯಕ್ಕೆ ಮೋದಿ ಕರೆಗೆ ಬಿ. ವೈ. ವಿಜಯೇಂದ್ರ ಬೆಂಬಲ

Vijayendra Travels by Metro: ವಿಜಯೇಂದ್ರ ಅವರು ತಮ್ಮ ಅಧಿಕೃತ ಕಾರು ಮತ್ತು ಬೆಂಗಾವಲು ವಾಹನಗಳನ್ನು ಕಡಿಮೆ ಮಾಡಿ, ಸಾರ್ವಜನಿಕ ಸಾರಿಗೆ ವ್ಯವಸ್ಥೆಯಾದ ಮೆಟ್ರೋ ರೈಲನ್ನು ಬಳಸಿದ್ದಾರೆ. ಮೆಜೆಸ್ಟಿಕ್‌ನಿಂದ ಕೆಂಗೇರಿವರೆಗೂ ಮೆಟ್ರೋದಲ್ಲಿ ಪ್ರಯಾಣ ಮಾಡಿದ ಅವರು, ಸಾಮಾನ್ಯರಂತೆ ಕ್ಯೂನಲ್ಲಿ ನಿಂತು ಪ್ರಯಾಣಿಸಿದ್ದಾರೆ.

ಕಪ್ಪು, ದಟ್ಟವಾದ ಕೂದಲಿಗೆ ಏನು ಮಾಡಬೇಕು? Video

ಕೂದಲಿನ ಆರೈಕೆ ಹೇಗೆ ?

ಕಪ್ಪು, ದಟ್ಟವಾದ ಕೂದಲು ಎಲ್ಲರಿಗೂ ಇಷ್ಟವಾಗುತ್ತದೆ. ಆದರೆ ಕೂದಲನ್ನು ಚೆನ್ನಾಗಿ ಇಟ್ಟುಕೊಳ್ಳುವುದೇ ಸಮಸ್ಯೆ. ಹೆಚ್ಚಾಗಿ ಕೂದಲಿನ ನಾನಾ ರೀತಿಯ ಸಮಸ್ಯೆಗಳಿಗೆ ಸರಿಯಾಗಿ ಎಣ್ಣೆ ಹಚ್ಚದಿರುವುದೇ ಮುಖ್ಯ ಕಾರಣ. ಕೂದಲಿನ ಯಾವ ಸಮಸ್ಯೆಗೆ ಯಾವ ಎಣ್ಣೆ ಹಚ್ಚಬೇಕು ಎನ್ನುವ ಕುರಿತು ವಿಶ್ವವಾಣಿ ಹೆಲ್ತ್ ನಲ್ಲಿ ಆಯುರ್ವೇದಿಕ್ ಬ್ಯೂಟಿ ಥೆರಪಿಸ್ಟ್ ದೀಪಾ ನಾಗೇಶ್ ಅವರು ನೀಡಿರುವ ಮಾಹಿತಿ ಇಲ್ಲಿದೆ.

BSY Abhimanotsava: ಬಗರ್‌ ಹುಕುಂ ಹೋರಾಟದ ಮೂಲಕ ಬಡವರಿಗೆ ನ್ಯಾಯ ಕೊಡಿಸಿದ ರಾಜಾಹುಲಿ ಬಿಎಸ್‌ವೈ: ಜೋಶಿ Video

ಹೋರಾಟದ ಮೂಲಕ ಬಡವರಿಗೆ ನ್ಯಾಯ ಕೊಡಿಸಿದ ರಾಜಾಹುಲಿ ಬಿಎಸ್‌ವೈ

ಬಂಗಾಳದಲ್ಲಿ ನಮ್ಮ ವಿಚಾರಧಾರೆಗೆ ಪ್ರಚಂಡ ಗೆಲುವು ಸಿಕ್ಕಿದೆ. ದಕ್ಷಿಣ ಭಾರತದಲ್ಲಿ ಈ ಮೊದಲೂ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತು, ಮತ್ತೊಮ್ಮೆ ಬಿಎಸ್‌ವೈ ಅವರ ನೇತೃತ್ವದಲ್ಲಿ ಕರ್ನಾಟಕದಲ್ಲಿ ಬರಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಚಿತ್ರದುರ್ಗದಲ್ಲಿ ನಡೆದ ಬಿಎಸ್‌ವೈ ಅಭಿಮಾನೋತ್ಸವದಲ್ಲಿ ಅವರು ಮಾತನಾಡಿದ್ದಾರೆ.

BSY Abhimanotsava: ಬಿಎಸ್‌ವೈ ರಾಜ್ಯ ಕಂಡ ಏಕಮೇವ ಮಾಸ್‌ ಲೀಡರ್‌: ಬೊಮ್ಮಾಯಿ Video

ಬಿಎಸ್‌ವೈ ರಾಜ್ಯ ಕಂಡ ಏಕಮೇವ ಮಾಸ್‌ ಲೀಡರ್‌: ಬೊಮ್ಮಾಯಿ

ವಿರೋಧ ಪಕ್ಷದಲ್ಲಿದ್ದಾಗ ಯಾವುದಕ್ಕಾಗಿ ಹೋರಾಟ ಮಾಡಿದ್ದರೋ ಆ ಬೇಡಿಕೆಗಳನ್ನು ಅಧಿಕಾರಕ್ಕೆ ಬಂದಮೇಲೆ ಈಡೇರಿಸಲು ಬಿ.ಎಸ್‌.ಯಡಿಯೂರಪ್ಪ ಅವರು ಶ್ರಮಿಸಿದ್ದರು. ವಿಜಯಪುರ, ಶಿಗ್ಗಾಂವಿ, ದಾವಣಗೆರೆಯ ರಾಜನಹಳ್ಳಿಯಲ್ಲಿ ಕೆರೆ ತುಂಬಿಸುವ ಯೋಜನೆ ಸೇರಿ ಹಲವು ಯೋಜನೆಗಳನ್ನು ಕೈಗೊಂಡಿದ್ದರು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದರು.

BSY Abhimanotsava: ಚಿತ್ರದುರ್ಗದಲ್ಲಿ ಬಿಎಸ್‌ವೈ ಪುರಪ್ರವೇಶ; ಬೃಹತ್‌ ಮೆರವಣಿಗೆ ಮೂಲಕ ಅದ್ಧೂರಿ ಸ್ವಾಗತ Video

ಬಿಎಸ್‌ವೈ ಅದ್ಧೂರಿ ಪುರಪ್ರವೇಶ; ಮೆರವಣಿಗೆ ಮೂಲಕ ಸ್ವಾಗತ

BS Yediyurappa Abhimanotsava: ಬಿಜೆಪಿ ಹಿರಿಯ ನಾಯಕ, ರೈತನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು 50 ವರ್ಷ ಯಶಸ್ವಿ ರಾಜಕೀಯ ಜೀವನ ಪೂರೈಸಿದ ಹಿನ್ನೆಲೆಯಲ್ಲಿ ಅವರಿಗೆ ಗೌರವ ಸಲ್ಲಿಸಲು ʼಬಿಎಸ್‌ವೈ ಅಭಿಮಾನೋತ್ಸವʼ ಕಾರ್ಯಕ್ರಮವನ್ನು ಚಿತ್ರದುರ್ಗದ ಮಾದಾರ ಚೆನ್ನಯ್ಯ ಮೈದಾನದಲ್ಲಿ ನಾಳೆ ಹಮ್ಮಿಕೊಳ್ಳಲಾಗಿದೆ.

ಮೇ 4ರ ನಂತರ ಸಿಎಂ ಸಿದ್ದರಾಮಯ್ಯ ಕುರ್ಚಿ ಇರುತ್ತದೋ ಇಲ್ಲವೋ ಗೊತ್ತಿಲ್ಲ: ಬೊಮ್ಮಾಯಿ Video

ಮೇ 4ರ ನಂತರ ಸಿದ್ದರಾಮಯ್ಯ ಕುರ್ಚಿ ಇರುತ್ತದೊ ಇಲ್ಲವೊ ಗೊತ್ತಿಲ್ಲ: ಬೊಮ್ಮಾಯಿ

Basavaraj Bommai: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತು ಕೇಳಿದ ಪ್ರಶ್ನೆಗೆ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನನಗೂ ಸಿಎಂ ಆಗುವ ಆಸೆ ಇದೆ. ಹಲವರಿಗೂ ಆಸೆ ಇದೆ ಎಂದು ಹೇಳಿದ್ದಾರೆ. ಆದರೆ ಮೇ 4ರ ನಂತರ ಸಿಎಂ ಸಿದ್ದರಾಮಯ್ಯ ಅವರ ಕುರ್ಚಿ ಇರುತ್ತದೋ, ಇಲ್ಲವೋ ಗೊತ್ತಿಲ್ಲ. ನಾವೂ ಯಾವ ಬದಲಾವಣೆ ಆಗಲಿದೆ ಎಂದು ನಿರೀಕ್ಷೆ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಬೌರಿಂಗ್ ಆಸ್ಪತ್ರೆ ದುರಂತ: ಕಾಂಗ್ರೆಸ್ ಸರ್ಕಾರ ಬದುಕಿದೆಯೋ, ಸತ್ತಿದೆಯೋ ಗೊತ್ತಿಲ್ಲ ಎಂದ ಬೊಮ್ಮಾಯಿ Video

ಕಾಂಗ್ರೆಸ್ ಸರ್ಕಾರ ಬದುಕಿದೆಯೋ, ಸತ್ತಿದೆಯೋ ಗೊತ್ತಿಲ್ಲ: ಬೊಮ್ಮಾಯಿ

Basavaraj Bommai: ಮಳೆ ಬಂದರೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಹವಾಮಾನ ಇಲಾಖೆ ಹೇಳುತ್ತಲೇ ಬಂದಿದೆ ಆದರೂ ಯಾವುದೇ ತಯಾರಿ ಕೂಡ ಮಾಡಿಕೊಂಡಿಲ್ಲ. ಒಂದು ರೀತಿಯಲ್ಲಿ ಈ ಸರ್ಕಾರ ಜನರ ಪಾಲಿಗೆ ಸತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಎಐ ಮೂಲಕ ಡಯಾಬಿಟಿಸ್ ನಿಯಂತ್ರಣ: ಇದು ಮಧುಮೇಹ ತಜ್ಞರ ಮಹ್ವತದ ಸಲಹೆ Video

ಎಐ ಸಹಾಯದಿಂದ ಮಧುಮೇಹ ನಿಯಂತ್ರಣ ಸಾಧ್ಯ: ತಜ್ಞರ ಸಲಹೆ

ವೇಗದ ಜೀವನಶೈಲಿ, ಅಸಮರ್ಪಕ ಆಹಾರ ಪದ್ಧತಿ ಮತ್ತು ವ್ಯಾಯಾಮದ ಕೊರತೆಯಿಂದ ಮಧುಮೇಹ ಹೆಚ್ಚುತ್ತಿದೆ. ಆದರೆ ಸರಿಯಾದ ಆಹಾರ ಮತ್ತು ತಂತ್ರಜ್ಞಾನ ಬಳಕೆ ಮೂಲಕ ಇದನ್ನು ನಿಯಂತ್ರಿಸಬಹುದು. ಎಐ ಸಹಾಯದಿಂದ ರಕ್ತದ ಸಕ್ಕರೆ ಮಟ್ಟವನ್ನು ಗಮನಿಸಿ ಉತ್ತಮ ಆರೋಗ್ಯ ನಿರ್ವಹಣೆ ಸಾಧ್ಯ ಎಂದು ಮಧುಮೇಹ ತಜ್ಞ ಡಾ. ಸುಮನ್ ತಿಳಿಸಿದ್ದಾರೆ.

“ಸಚಿವ ಸುಧಾಕರ್ ಹೆಬ್ಬೆಟ್ಟು ಒತ್ತಲು ಆರೋಗ್ಯ ವಿಚಾರ ಮುಚ್ಚಿಟ್ರಾ?”; ಮಾಜಿ ಸಿಎಂ ಕುಮಾರಸ್ವಾಮಿ ಹೀಗೆ ಹೇಳಿದ್ದೇಕೆ? Video

ಸರ್ಕಾರದ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ವಾಗ್ದಾಳಿ

Kumaraswamy lashes out at the government: ಸಚಿವ ಸುಧಾಕರ್‌ ಅವರ ಆರೋಗ್ಯ ಕುರಿತು ರಾಜ್ಯ ಸರ್ಕಾರ ವಾಸ್ತವಾಂಶವನ್ನು ಜನರ ಮುಂದೆ ಇಡಬೇಕು. ವಾಸ್ತವಾಂಶವನ್ನು ಜನರ ಮುಂದೆ ಇಟ್ಟಿದ್ದರೆ ನಾನು ಅದನ್ನು ಪ್ರಶ್ನೆ ಮಾಡುತ್ತಿರಲಿಲ್ಲ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಕೆಲವು ವಿಷಯಗಳನ್ನು ಉದ್ದೇಶಪೂರ್ವಕವಾಗಿ ಮುಚ್ಚಿಡಲಾಗುತ್ತಿದೆ ಎಂಬ ಅನುಮಾನವನ್ನು ಅವರು ವ್ಯಕ್ತಪಡಿಸಿದ್ದಾರೆ.

ಡಿಟಾಕ್ಸ್  ಮಾಡುವುದಕ್ಕೂ ಮುನ್ನ ವೈದ್ಯರ ಸಲಹೆ ಪಡೆಯಲೇಬೇಕು: ಡಾ. ಅನಿತಾ Video

ಮನೆಯಲ್ಲೇ ಡಿಟಾಕ್ಸ್ ಮಾಡುವುದು ಹೇಗೆ?

ದೇಹದ ಶುದ್ದೀಕರಣ ಮಾಡುವುದನ್ನು ಡಿಟಾಕ್ಸ್ ಎನ್ನುತ್ತೇವೆ. ಇದು ಆರೋಗ್ಯವಂತರಲ್ಲಿ ನೈಸರ್ಗಿಕವಾಗಿ ನಡೆಯುತ್ತದೆ. ಇದಕ್ಕಾಗಿ ಹೆಚ್ಚು ಖರ್ಚು ಮಾಡಬೇಕಾದ ಅಗತ್ಯವಿಲ್ಲ ಎನ್ನುತ್ತಾರೆ ಡಯಟೀಷಿಯನ್ ಡಾ. ಅನಿತಾ. ಯಾವುದಕ್ಕೂ ಮನೆಯಲ್ಲೇ ಡಿಟಾಕ್ಸ್ ಪ್ರಯೋಗ ಮಾಡಲು ಹೋಗುವ ಮುನ್ನ ವೈದ್ಯರ ಸಲಹೆ ಪಡೆಯಬೇಕು ಎನ್ನುತ್ತಾರೆ ಅವರು.

KD The Devil:  ‘ಕೆಡಿ’  ಟ್ರೈಲರ್ ಡಿಲೀಟ್ ಆಗೋಕೆ ಅದೇ ಕಾರಣ; ಪ್ರೇಮ್‌ ಉತ್ತರ ಇಲ್ಲಿದೆ Video

‘ಕೆಡಿ’ ಟ್ರೇಲರ್ ಡಿಲೀಟ್ ಆಗಿದ್ಯಾಕೆ? ಪ್ರೇಮ್‌ ಉತ್ತರ ಇಲ್ಲಿದೆ

Director Prem: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ‘ಕೆಡಿ: ದಿ ಡೆವಿಲ್’ ಚಿತ್ರದ ಟ್ರೇಲರ್ ಏಪ್ರಿಲ್ 22 ರಂದು ರಿಲೀಸ್ ಆಯ್ತು. ಏಪ್ರಿಲ್ 24 ರಂದು ಏಕಾಏಕಿ ‘ಕೆಡಿ’ ಚಿತ್ರದ ಟ್ರೇಲರ್‌ನ ಯೂಟ್ಯೂಬ್‌ನಿಂದ ತೆಗೆಯಲಾಯಿತು. ಸೆನ್ಸಾರ್ ಸರ್ಟಿಫಿಕೇಷನ್‌ ಪ್ರಾಬ್ಲಂನಿಂದಾಗಿ ‘ಕೆಡಿ’ ಟ್ರೇಲರ್‌ನ ಯೂಟ್ಯೂಬ್‌ನಿಂದ ಡಿಲೀಟ್ ಮಾಡಲಾಯಿತು. ಈ ಬಗ್ಗೆ ಪ್ರೇಮ್‌ ಹೇಳಿದ ಮಾತಿದು.

SSLC Results 2026: 625 ಅಂಕ ಪಡೆದ ದಾವಣಗೆರೆಯ ಭರತ್‌ನ ಫಸ್ಟ್ ರಿಯಾಕ್ಷನ್ ಹೇಗಿತ್ತು?

625 ಅಂಕ ಪಡೆಯಲು ಶಿಕ್ಷಕರೇ ಪ್ರಮುಖ ಕಾರಣ ಎಂದ ಟಾಪರ್ ಭರತ್

SSLC ಪರೀಕ್ಷೆಯಲ್ಲಿ 625ಕ್ಕೆ 625 ಅಂಕವನ್ನು ರಾಜ್ಯದ ಏಳು ವಿದ್ಯಾರ್ಥಿಗಳು ಪಡೆದಿದ್ದು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಕಬ್ಬಳ ಗ್ರಾಮದ ಶ್ರೀ ವಿದ್ಯಾಲಕ್ಷ್ಮೀ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಭರತ್ ಜಿ ಕೂಡ ಒಬ್ಬರಾಗಿದ್ದಾರೆ. 625 ಅಂಕಗಳನ್ನು ಪಡೆದು ರಾಜ್ಯಕ್ಕೆ ಟಾಪರ್ ಆಗಿ ಮಿಂಚಿದ್ದಾರೆ. ಈ ಸಾಧನೆಗೆ ಮುಖ್ಯ ಕಾರಣ ಯಾರು? ತನ್ನ ಓದಿನಲ್ಲಿ ಸವಾಲುಗಳೇನಿತ್ತು ಎಂದು ಖುದ್ದಾಗಿ ವಿದ್ಯಾರ್ಥಿ ಭರತ್ ಜಿ ಅವರೇ ವಿಶ್ವವಾಣಿ ಟಿವಿ ಜೊತೆ ಮಾತನಾಡಿದ್ದಾರೆ.

ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ 5 ಕೋಟಿ ರುಪಾಯಿ ಅನುದಾನ ಬಿಡುಗಡೆ: ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಸಂಸದ ಬಿ.ವೈ. ರಾಘವೇಂದ್ರ ಧನ್ಯವಾದ Video

ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ 5 ಕೋಟಿ ರುಪಾಯಿ ಅನುದಾನ ಬಿಡುಗಡೆ

Shivamogga’s McGann Hospital: ಮೆಗ್ಗಾನ್ ಆಸ್ಪತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಬರುತ್ತಿರುವುದರಿಂದ, ಪ್ರಸ್ತುತ ಇರುವ 30 ಬೆಡ್‌ಗಳ NICU ಘಟಕವನ್ನು ವಿಸ್ತರಿಸುವ ಅಗತ್ಯವಿತ್ತು. ಹೀಗಾಗಿ ಸಂಸತ್ತಿನಲ್ಲಿ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಮನವಿ ಮಾಡಿದಾಗ, ಅವರು ಕೂಡಲೇ ಸ್ಪಂದಿಸಿ ತಮ್ಮ ಸಂಸದರ ನಿಧಿಯ ಪೂರ್ಣ 5 ಕೋಟಿ ರುಪಾಯಿ ನೀಡಿದ್ದಾರೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

ಬೇಸಗೆಯಲ್ಲಿ ಮುಖದ ಮೊಡವೆ, ಟ್ಯಾನ್ ರಿಮೂವ್ ಮಾಡುವ ಸುಲಭ ಕ್ರಮ ಇಲ್ಲಿದೆ Video

ಮುಖದ ಕಾಂತಿ ಹೆಚ್ಚಿಸಲು ಐಸ್ ಕ್ಯೂಬ್ ಬಳಸಿ

ಸುಡು ಬಿಸಿಲು ಬೆವರಿನಿಂದಾಗಿ ಸಾಕಷ್ಟು ಜನರು ಮುಖದ ಆರೈಕೆ ಬಗ್ಗೆ ಗೊಂದಲಕ್ಕೆ ಒಳಗಾಗುತ್ತಾರೆ. ಸೂರ್ಯನ ನೇರ ಕಿರಣ- ಬೆವರು ಸೇರಿ ಮುಖದ ಅಂದವನ್ನೇ ಕೆಡಿಸುತ್ತದೆ. ಇವುಗಳಿಂದ ಮುಖದ ಮೇಲೆ ಮೊಡವೆ, ಸನ್ ಬರ್ನ್ ಮತ್ತು ಚರ್ಮ ಕಪ್ಪಾಗುವ ಸಮಸ್ಯೆಗಳು ಕಂಡು ಬರುತ್ತವೆ. ಇದಕ್ಕೆ ಮನೆಯಲ್ಲೇ ಯಾವ ರೀತಿಯ ಆರೈಕೆ ಮಾಡಬಹುದು? ಸುಲಭ ಪರಿಹಾರ ಏನು ಎಂದು ಆಯುರ್ವೇದ ಸೌಂದರ್ಯ ತಜ್ಞೆ ದೀಪಾ ನಾಗೇಶ್ ಮಾಹಿತಿ ನೀಡಿದ್ದಾರೆ.

Loading...