ಶ್ರೀ ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆ ಮೇಲೆ ಹಿಡಿತ ಸಾಧಿಸಿದ ಯಾದವಾಡ ಬಣ
ಯಾದವಾಡ ಬಣ ಹಾಗೂ ಹಿರೆರಡ್ಡಿ ಬಣದ ನಡುವೆ ಚುನಾವಣೆ ನಡೆದಿತ್ತು. ಒಟ್ಟು 18 ಸ್ಥಾನಗಳಿಗೆ ನಡೆದಿದ್ದ ಚುನಾವಣೆಯಲ್ಲಿ 11 ಸ್ಥಾನ ಗೆದ್ದು ಯಾದವಾಡ ಬಣ ಅಧಿಕಾರ ಹಿಡಿದಿದೆ. ಇನ್ನೂ ( ಹಿರೆರಡ್ಡಿ ) ರೈತ ರಕ್ಷಣಾ ಸಮಿತಿ 7 ಸ್ಥಾನ ಗೆದ್ದುಕೊಂಡಿದೆ. ಒಟ್ಟು 19,423 ಮತದಾರರ ಪೈಕಿ 12,056 ಜನ ಮಾತ್ರ ಮತದಾನ ಮಾಡಿದ್ದರು.

-

ರಾಮದುರ್ಗ: ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಖಾನಪೇಠಯ ಶ್ರೀ ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆ ನಡೆದಿದ್ದು, ಮತ್ತೆ ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಬಣ ಭರ್ಜರಿ ಗೆಲುವು ಸಾಧಿಸುವ ಮೂಲಕ ಕಾರ್ಖಾನೆಯ ಮೇಲೆ ತಮ್ಮ ಹಿಡಿತ ಸಾಧಿಸಿದೆ.
ರವಿವಾರ ಯಾದವಾಡ ಬಣ ಹಾಗೂ ಹಿರೆರಡ್ಡಿ ಬಣದ ನಡುವೆ ಚುನಾವಣೆ ನಡೆದಿತ್ತು. ಒಟ್ಟು 18 ಸ್ಥಾನಗಳಿಗೆ ನಡೆದಿದ್ದ ಚುನಾವಣೆಯಲ್ಲಿ 11 ಸ್ಥಾನ ಗೆದ್ದು ಯಾದವಾಡ ಬಣ ಅಧಿಕಾರ ಹಿಡಿದಿದೆ. ಇನ್ನೂ ( ಹಿರೆರಡ್ಡಿ ) ರೈತ ರಕ್ಷಣಾ ಸಮಿತಿ 7 ಸ್ಥಾನ ಗೆದ್ದುಕೊಂಡಿದೆ. ಒಟ್ಟು 19,423 ಮತದಾರರ ಪೈಕಿ 12,056 ಜನ ಮಾತ್ರ ಮತದಾನ ಮಾಡಿದ್ದರು.
ಮಹಾದೇವಪ್ಪ ಯಾದವಾಡ ಪೆನೆಲ್
ಮಹಾದೇವಪ್ಪ ಯಾದವಾಡ, ಮಲ್ಲಣ್ಣ ಯಾದವಾಡ, ಈರಪ್ಪ ಹರನಟ್ಟಿ, ಬಸವರಾಜ ತುಪ್ಪದ, ಭೀಮಪ್ಪ ಬೆಳವಣಕಿ, ಮಹಾದೇವ ಆತಾರ, ಶಶಿಕಲಾ ಸೋಮಗೊಂಡ, ಅನ್ನಪೂರ್ಣ ಪಾಟೀಲ್, ಶಿವಾನಂದ ಮುಷ್ಟಿಗೇರಿ, ಚಂದ್ರು ರಜಪೂತ, ಬಸವನಗೌಡ ಪಾಟೀಲ.
ಇದನ್ನೂ ಓದಿ: Belagavi News: ಕಾನ್ಸ್ಟೇಬಲ್ ಗೆ ಚಾಕು ಇರಿತ; ಗ್ಯಾಂಗ್ ರೇಪ್ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್
ರೈತ ಹಿತರಕ್ಷಣಾ ಸಮಿತಿ (ಹಿರೆರಡ್ಡಿ) ಪೆನೆಲ್
ಬಸವರಾಜ ಹಿರೆರಡ್ಡಿ, ಗೋಪಾಲರಡ್ಡಿ ಚಿಕರಡ್ಡಿ, ಪರತಗೌಡ ಪಾಟೀಲ್, ಈರಣ್ಣ ಕಾಮಣ್ಣವರ, ಭೀಮಪ್ಪ ಬಸಿಡೋಣಿ, ಬಸಪ್ಪ ಸಿದರಡ್ಡಿ.
ಭಾನುವಾರ ಮುಂಜಾನೆ 9 ಘಂಟೆಯಿಂದ ಆರಂಭವಾದ ಮತದಾನ ಪ್ರಕ್ರಿಯೆ, ಮಧ್ಯಾಹ್ನದ ವೇಳೆಗೆ ಮತದಾನ ವ್ಯವಸ್ಥೆ ಕಲ್ಪಿಸಿದ್ದ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಆವರಣ, ರಾಮ ದುರ್ಗ-ಸವದತ್ತಿ ಮುಖ್ಯ ರಸ್ತೆಯಲ್ಲಿ ಜನಂಗುಳಿ ಉಂಟಾಗಿ, ಗದ್ದಲದ ವಾತಾವರಣ ಸೃಷ್ಟಿಯಾಯಿತು.
ರಾಮದುರ್ಗ ತಾಲೂಕು ಸೇರಿದಂತೆ ಸವದತ್ತಿ, ಗೋಕಾಕ, ಬೈಲಹೊಂಗಲ ಯರಗಟ್ಟಿ, ಮೂಡಲಗಿ, ಬದಾಮಿ ತಾಲೂಕುಗಳಿಂದ ಶೇರುದಾರರು ಆಗಮಿಸಿ, ತಮ್ಮ ಮತ ಚಲಾಯಿಸಿದರು.