ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad
Profile

Ashok Nayak

Senior Sub Editor

[email protected]

ಮಂಗಳೂರು ವಿಶ್ವವಿದ್ಯಾಲಯದಿಂದ ಬಿ.ಎ ಪದವಿ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯದಲ್ಲಿ ಎಂ.ಎ. ಸಿಕ್ಕಿಂ ಮಣಿಪಾಲ ಯೂನಿವರ್ಸಿಟಿಯಿಂದ ಎಂಬಿಎ ಪದವಿ ಗಳಿಸಿರುತ್ತಾರೆ. ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ಶಿಕ್ಷಣ ಪೂರೈಕೆ... ಆರಂಭದಲ್ಲಿ ನಾಲ್ಕು ವರ್ಷಗಳ ಕಾಲ ರಾಜ್ಯಮಟ್ಟದ ಕನ್ನಡ ದಿನಪತ್ರಿಕೆ ಉದಯವಾಣಿಯ ಡಿಜಿಟಲ್‌ ವಿಭಾಗದಲ್ಲಿ ಪತ್ರಿಕೋದ್ಯಮ ವೃತ್ತಿ ಆರಂಭ. ಮಂಗಳೂರಿನ ವಿಜಯವಾಣಿಯಲ್ಲಿ ಒಂದು ವರ್ಷ ಡೆಸ್ಕ್‌ ನಲ್ಲಿ ಉಪಸಂಪಾದಕನಾಗಿ ಕಾರ್ಯನಿರ್ವಹಣೆ. ಬೆಂಗಳೂರಿನಲ್ಲಿ ಉದಯಕಾಲದಲ್ಲಿ ಡಿಜಿಟಲ್‌ ವಿಭಾಗದಲ್ಲಿ ವೃತ್ತಿ ನಿರ್ವಹಣೆ, ಎಸ್‌ ನ್ಯೂಸ್‌ ಚಾನೆಲ್‌ ನಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡಿದ ಅನುಭವ. ಈಗ, ವಿಶ್ವೇಶ್ವರ ಭಟ್‌ ಸಾರಥ್ಯದ ವಿಶ್ವವಾಣಿ ಕನ್ನಡ ದಿನಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಹಿರಿಯ ಉಪಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ..

Articles
ಶತದಿನೋತ್ಸವಕ್ಕೆ ಕರೆದಿಲ್ಲವೆಂದು ಮಾಧ್ಯಮಗಳೆದುರು ಹೇಳಿದ್ದೇಕೆ? ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್‌ಗೆ ಮಲ್ಲಿಕಾರ್ಜುನ್ ಖರ್ಗೆ ಖಡಕ್ ಪ್ರಶ್ನೆ

ಕೆಪಿಸಿಸಿ ಅಧ್ಯಕ್ಷರಿಗೇ ಹೈಕಮಾಂಡ್ ಶಿಸ್ತಿನ ಪಾಠ

ಪಕ್ಷದ ರಾಜ್ಯಾಧ್ಯಕ್ಷರೇ ಸರಕಾರದ ವಿರುದ್ಧ ಹೇಳಿಕೆ ನೀಡಿದರೆ ಪಕ್ಷಕ್ಕೆ ಹಾಗೂ ಸರಕಾರಕ್ಕೆ ಹೊಡೆತ ಬೀಳುತ್ತದೆ. ಇದಿಷ್ಟೇ ಅಲ್ಲದೇ, ಸರಕಾರ ಹಾಗೂ ಪಕ್ಷದ ನಡುವೆ ಸಮನ್ವಯತೆ ಇಲ್ಲ ಎನ್ನುವ ಸಂದೇಶ ರವಾನೆಯಾದರೆ ಸಂಘಟನೆಗೆ ಸಮಸ್ಯೆಯಾಗುತ್ತದೆ. ಆದ್ದರಿಂದ ಮುಂದಿನ ದಿನದಲ್ಲಿ ಈ ರೀತಿಯ ಗೊಂದಲಗಳ ಬಗ್ಗೆ ಬಹಿರಂಗವಾಗಿ ಮಾತನಾಡದಂತೆ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇನ್ನೂ 23 ತಾಲೂಕು ಬರ ಪಟ್ಟಿಗೆ: ಬರ ಬಾಧೆ: 2ನೇ ಪಟ್ಟಿಯಲ್ಲಿ 23 ತಾಲೂಕು ಸೇರ್ಪಡೆ

ಮಳೆಯ ಕೊರತೆ: 21 ತೀವ ಬರಪೀಡಿತ, 2 ಸಾಧಾರಣ

ರಾಜ್ಯದಲ್ಲಿ ನಿರೀಕ್ಷಿತ ಪ್ರಮಾಣದ ಮುಂಗಾರು ಮಳೆ ಬಾರದೇ ಇರುವುದರಿಂದ ರಾಜ್ಯ ಸರಕಾರ 2ನೇ ಹಂತದ ಬರ ತಾಲೂಕುಗಳ ಪಟ್ಟಿಯನ್ನು ಪ್ರಕಟಿಸಿದ್ದು, ಎರಡನೇ ಹಂತದಲ್ಲಿ 17 ಜಿಲ್ಲೆಗಳ 23 ತಾಲೂಕುಗಳು ಸೇರಿವೆ. ಮಳೆ ಕೊರತೆಯಾಗಿ ಬರ ಪರಿಸ್ಥಿತಿ ಸೃಷ್ಟಿಯಾಗಿದ್ದು, ಈಗಾಗಲೇ ಮೊದಲ ಹಂತದಲ್ಲಿ 101 ತಾಲೂಕುಗಳನ್ನು ರಾಜ್ಯ ಸರಕಾರ ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಿತ್ತು.

Ration Card e-KYC: ಪಡಿತರ ಚೀಟಿ ಇ-ಕೆವೈಸಿ: ಅ.20ರವರೆಗೆ ವಿಸ್ತರಣೆ

ಪಡಿತರ ಚೀಟಿ ಇ-ಕೆವೈಸಿ: ಅ.20ರವರೆಗೆ ವಿಸ್ತರಣೆ

ಹಗಲು ವೇಳೆಯಲ್ಲಿ ಕೂಲಿ-ನಾಲಿ ಮಾಡುವ ಶ್ರಮಿಕರು ಪಡಿತರ ಪಡೆಯಲು ಇಡೀ ದಿನದ ದುಡಿಮೆ ಕಳೆದುಕೊಳ್ಳುವುದನ್ನು ಸರಕಾರ ಸಹಿಸುವುದಿಲ್ಲ. ಪಡಿತರದಾರರ ಅನುಕೂಲಕ್ಕೆ ತಕ್ಕಂತೆ ನ್ಯಾಯಬೆಲೆ ಅಂಗಡಿಗಳು ಕಾರ್ಯನಿರ್ವಹಿಸಲೇಬೇಕಿದೆ. ಬರುವ ಅ.1ರಿಂದ ಜಾರಿಗೆ ಬರುವಂತೆ ರಾಜ್ಯದ ಎಲ್ಲಾ ನ್ಯಾಯಬೆಲೆ ಅಂಗಡಿಗಳು ಕಡ್ಡಾಯವಾಗಿ ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ, ಸಂಜೆ 4 ಗಂಟೆಯಿಂದ ರಾತ್ರಿ 8 ಗಂಟೆಯ ವರೆಗೆ ತೆರೆಯಲು ಆದೇಶಿಸಲಾಗಿದೆ.

ತುಳುವಿಗೆ ರಾಜ್ಯಭಾಷೆ ಸ್ಥಾನ ಸೇರಿ ಹಲ ಘೋಷಣೆ ನಿರೀಕ್ಷೆ ಕರಾವಳಿ ಕೇಂದ್ರಿತವಾದ 35 ವಿಚಾರಗಳನ್ನು ಚರ್ಚಿಸುವ ಸಾಧ್ಯತೆ: ಇಂದು ಕರಾವಳಿಯಲ್ಲಿ ಮಂತ್ರಿಮಂಡಲ ಸಭೆ

ಇಂದು ಕರಾವಳಿಯಲ್ಲಿ ಮಂತ್ರಿಮಂಡಲ ಸಭೆ

ದ.ಕನ್ನಡ, ಉಡುಪಿ ಮತ್ತು ಉ.ಕನ್ನಡ ಜಿಗಳಿಗೆ ಸಂಬಂಧಿಸಿದ ಸಂಪುಟ ಸಭೆಯಾದರೂ, ಮೀನು ಗಾರಿಕೆ, ಪ್ರವಾಸೋದ್ಯಮ, ಕಂದಾಯ ಭೂಮಿ, ಪಿಲಿಕುಳ ಅಭಿವೃದ್ಧಿ, ಕೋಸ್ಟಲ್ ರೋಡ್, ಸಿಆರ್ ಝಡ್ ಸಡಿಲಿಕೆ ಮುಂತಾದ 35ಕ್ಕೂ ಹೆಚ್ಚು ಮಂಗ ಳೂರು ಕೇಂದ್ರೀಕೃತ ಅಭಿವೃದ್ಧಿ ಯೋಜನೆಗಳ ವಿಷಯ ಮಂಡನೆ ನಡೆಯಲಿವೆ. ಕ್ರೂಸ್ ಟೂರಿಸಂ, ಬೋಟ್ ಹೌಸ್, ಹೂಡಿಕೆ ಹೆಚ್ಚಳ, ಕಡಲ ತೀರ ಮತ್ತು ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ತೀರ್ಮಾನ ನಿರೀಕ್ಷಿಸಲಾಗಿದೆ.

Vishwavani Editorial: ಫಾಲ್ಕೆ ಗೌರವಕ್ಕೆ ಕೊಂಕು ಸಲ್ಲದು

Vishwavani Editorial: ಫಾಲ್ಕೆ ಗೌರವಕ್ಕೆ ಕೊಂಕು ಸಲ್ಲದು

ಅನಂತ್ ಫಾಲ್ಕೆ ಪಡೆದ ಎರಡನೇ ಕನ್ನಡದ ನಟ, ಮೂರನೇ ಕನ್ನಡಿಗ. ಅವರ ಅಭಿನಯ ಪ್ರತಿಭೆ ವೈವಿಧ್ಯಮಯವಾದುದು. ಆರಂಭದ ದಿನಗಳಲ್ಲಿ ಹಿಂದಿ ರಂಗಭೂಮಿಯಲ್ಲಿ ಪಳಗಿದ ಅವರು ಆ ಪರಿಣತಿಯನ್ನು ಹಿಂದಿ ಚಲನಚಿತ್ರಗಳಿಗೂ ತಂದರು. ಶಾಮ್ ಬೆನಗಲ್ ಜೊತೆಗೆ ಅವರು ನೀಡಿದ ಅಂಕುರ್, ಮಂಥನ್, ಭೂಮಿಕಾ, ನಿಶಾಂತ್ ಮೊದಲಾದ ಸಿನಿಮಾಗಳು ಹೊಸ ಅಲೆಯ ಸಿನಿಮಾಗಳಾಗಿ ಹವಾ ಎಬ್ಬಿಸಿದವು.

ಕರ್ನಾಟಕ ಸಂಘ ಕತಾರ್‌ನಿಂದ ಉಪ ರಾಯಭಾರ ಮುಖ್ಯಸ್ಥ ಸಂದೀಪ್ ಕುಮಾರ್ ಅವರಿಗೆ ಭಾವಪೂರ್ಣ ಬೀಳ್ಕೊಡುಗೆ

ಸಂದೀಪ್ ಕುಮಾರ್ ಅವರಿಗೆ ಭಾವಪೂರ್ಣ ಬೀಳ್ಕೊಡುಗೆ

ಕತಾರ್‌ನಲ್ಲಿ ಭಾರತೀಯ ಕಲೆ, ಸಂಸ್ಕೃತಿ ಹಾಗೂ ಸಮಾಜ ಕಲ್ಯಾಣ ಚಟುವಟಿಕೆಗಳ ಸಂರಕ್ಷಣೆ ಮತ್ತು ಉತ್ತೇಜನಕ್ಕಾಗಿ ಕರ್ನಾಟಕ ಸಂಘ ಕತಾರ್ ಮಾಡುತ್ತಿರುವ ಸಮರ್ಪಿತ ಪ್ರಯತ್ನಗಳನ್ನು ಶ್ಲಾಘಿಸಿದರು. KSQ ನಾಯಕತ್ವ ಹಾಗೂ ಇಡೀ ಕನ್ನಡಿಗ ಸಮುದಾಯಕ್ಕೆ ತಮ್ಮ ಮುಂದಿನ ಕಾರ್ಯಕ್ರಮಗಳು ಮತ್ತು ಭವಿಷ್ಯದ ಯೋಜನೆಗಳಿಗೆ ಶುಭ ಹಾರೈಸಿದರು.

Jitendra Kundeshwara Column: ತುಳುವರ ದಶಕಗಳ ಹಕ್ಕೊತ್ತಾಯಕ್ಕೆ ಅಧಿಕೃತ ಮನ್ನಣೆ

ತುಳುವರ ದಶಕಗಳ ಹಕ್ಕೊತ್ತಾಯಕ್ಕೆ ಅಧಿಕೃತ ಮನ್ನಣೆ

ಇದು ತುಳು ಭಾಷೆಯ ಚರಿತ್ರೆಗೆ ಮಹತ್ವದ ಮುನ್ನುಡಿ ಬರೆಯಬಹುದು ಎನ್ನುವ ಆಸೆಯಲ್ಲಿ ಇಡೀ ತುಳುನಾಡು ಕಾಯುತ್ತಿದೆ. ಇದು ಸಂಘರ್ಷದ ಹಾದಿಯಲ್ಲ. ಬದಲಿಗೆ ತಾಯಿ ಭುವನೇಶ್ವರಿಯ ಮಡಿಲಲ್ಲಿ ಕುಳಿತ ತಾಯಿ ತುಳುವಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರವು ಅಪಾರ ಪ್ರೀತಿ ಮತ್ತು ಗೌರವದಿಂದ ಒಪ್ಪಿಸುತ್ತಿರುವ ಸಾಂಸ್ಕೃತಿಕ ಕಿರೀಟ ಎನ್ನಬಹುದು.

ಮಳೆ ಕೈ ಕೊಟ್ಟ ಹಿನ್ನೆಲೆ ಕೃಷಿಗೆ ಸಂಕಷ್ಟ, ಬರ ಘೋಷಣೆಗೆ ರೈತರ ಒತ್ತಾಯ: 1000 ಕೋಟಿ ವಿಶೇಷ ಪ್ಯಾಕೇಜ್‌ಗೆ ಆಗ್ರಹ

1000 ಕೋಟಿ ವಿಶೇಷ ಪ್ಯಾಕೇಜ್‌ಗೆ ಆಗ್ರಹ

ಕಲಬುರಗಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಗಮಿಸಿರುವ ಸಂದರ್ಭದಲ್ಲೇ ರೈತರ ಈ ಬೇಡಿಕೆ ಮತ್ತಷ್ಟು ಮುನ್ನೆಲೆಗೆ ಬಂದಿದೆ. ಬರದ ಸಂಕಷ್ಟದಲ್ಲಿರುವ ಕೃಷಿಕರಿಗೆ ಸರಕಾರ ತಕ್ಷಣ ಸ್ಪಂದಿಸಬೇಕು. ನೈಜ ಬೆಳೆನಷ್ಟ ಗುರುತಿಸಿ ಪರಿಹಾರ ಕಲ್ಪಿಸುವ ಜತೆಗೆ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಹಾಗೂ ಕೃಷಿ ಪುನಶ್ಚೇತನಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು.

ನಾಳೆ ಕರಾವಳಿಯಲ್ಲಿ ಸಂಪುಟ ಸಭೆ: ತುಳು 2ನೇ ಆಡಳಿತ ಭಾಷೆ, ಮೂಲಸೌಕರ್ಯ ಯೋಜನೆಗಳಿಗೆ ಅಧಿಕೃತ ಮುದ್ರೆಯ ನಿರೀಕ್ಷೆ

ನಾಳೆ ಕರಾವಳಿಯಲ್ಲಿ ಸಂಪುಟ ಸಭೆ

ಕರ್ನಾಟಕದ ಆಡಳಿತ ಶಕ್ತಿ ಸೌಧವೇ ಕರಾವಳಿಯಂಗಳಕ್ಕೆ ಇಳಿದು ಬರುತ್ತಿರುವ ಸಂದರ್ಭದಲ್ಲಿ ವಿವಿಧ ರಾಜಕೀಯ ಪಕ್ಷಗಳು, ಜನಪ್ರತಿನಿಧಿಗಳು, ಧಾರ್ಮಿಕಸಾಮಾಜಿಕ ಸಂಘಟನೆಗಳು ಹಾಗೂ ಕೈಗಾರಿಕಾ ಒಕ್ಕೂಟಗಳು ಸರಕಾರದ ಮುಂದಿಟ್ಟಿರುವ ಪ್ರಮುಖ ಪ್ರಸ್ತಾವನೆಗಳು ಮತ್ತು ಅವುಗಳ ಸಂಪುಟ ಅನುಮೋದನೆಯ ಸಾಧ್ಯತೆಗಳು ಹೀಗಿದೆ.

ದಿವ್ಯಾಂಗರಿಗೆ ಅನುಕಂಪವಲ್ಲ, ಸ್ವಾವಲಂಬನೆಗೆ ಆದ್ಯತೆ: ಬಿ.ಎಸ್.ಸುರೇಶ್

ದಿವ್ಯಾಂಗರಿಗೆ ಅನುಕಂಪವಲ್ಲ, ಸ್ವಾವಲಂಬನೆಗೆ ಆದ್ಯತೆ

ಸುಮಾರು 2,000 ವಿಕಲಚೇತನರು ಹಾಗೂ ಹಿರಿಯ ನಾಗರಿಕರಿಗೆ ಒಂದೇ ಸೂರಿನಡಿ ವಿವಿಧ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಸೌಲಭ್ಯ ವಿತರಿಸುತ್ತಿರುವುದು ಸಂತಸದ ಸಂಗತಿ. ಹಿಂದೆ ವಿಕಲಚೇತನರ ಬಗ್ಗೆ ಸಮಾಜದಲ್ಲಿ ವಿಭಿನ್ನ ಭಾವನೆಗಳಿದ್ದವು. ಇದೀಗ ಅವರನ್ನು ಅನುಕಂಪದಿಂದ ನೋಡುವ ಬದಲು ಸಮಾಜದ ಮುಖ್ಯವಾಹಿನಿಗೆ ತಂದು ಸ್ವಾವಲಂಬಿಗಳನ್ನಾಗಿ ಮಾಡಬೇಕಾದ ಕಾಲ ಬಂದಿದೆ

ನೀರು, ಕೃಷಿ ಮತ್ತು ಪೌಷ್ಟಿಕತೆಯಲ್ಲಿ ಸುಸ್ಥಿರ ಕ್ರಮಗಳಿಗೆ ಪೆಪ್ಸಿಕೊ ಒತ್ತು

ನೀರು, ಕೃಷಿ ಮತ್ತು ಪೌಷ್ಟಿಕತೆಯಲ್ಲಿ ಸುಸ್ಥಿರ ಕ್ರಮಗಳಿಗೆ ಪೆಪ್ಸಿಕೊ ಒತ್ತು

ಜಾಗತಿಕ ಮಟ್ಟದಲ್ಲಿ ಕಂಪನಿಯು 60ಕ್ಕೂ ಹೆಚ್ಚು ದೇಶಗಳಲ್ಲಿ 47 ಲಕ್ಷ ಎಕರೆ ಪ್ರದೇಶದಲ್ಲಿ ಪುನರುಜ್ಜೀವನ ಮತ್ತು ಸಂರಕ್ಷಣಾತ್ಮಕ ಕೃಷಿ ಪದ್ಧತಿಗಳನ್ನು ವಿಸ್ತರಿಸಿದೆ. ನೀರಿನ ಕೊರತೆಯ ಅಪಾಯ ಹೆಚ್ಚಿರುವ ತನ್ನ ಘಟಕಗಳಲ್ಲಿ ಬಳಸಿದ ನೀರಿನ ಶೇ 100ರಷ್ಟು ಮರುಪೂರಣ ಮಾಡಿದ್ದು, ಪ್ರಾಥಮಿಕ ಪ್ಯಾಕೇಜಿಂಗ್‌ನಲ್ಲಿ ಹೊಸ ಪ್ಲಾಸ್ಟಿಕ್ ಬಳಕೆಯನ್ನು ಶೇ 6ರಷ್ಟು ಕಡಿಮೆ ಮಾಡಿದೆ.

ಸಾಕುಪ್ರಾಣಿಗಳ ವಿಮಾನ ಪ್ರಯಾಣದಲ್ಲಿ ಬೆಂಗಳೂರು ಮುಂಚೂಣಿ: ಅಕಾಸಾ ಏರ್

ಸಾಕುಪ್ರಾಣಿಗಳ ವಿಮಾನ ಪ್ರಯಾಣದಲ್ಲಿ ಬೆಂಗಳೂರು ಮುಂಚೂಣಿ

ಅಕಾಸಾ ಏರ್‌ನಲ್ಲಿ ಅತಿ ಹೆಚ್ಚು ಬಾರಿ ಸಾಕುಪ್ರಾಣಿಗಳೊಂದಿಗೆ ಪ್ರಯಾಣಿಸುವ ಮೊದಲ 10 ಪೆಟ್ ಪೇರಂಟ್ಸ್‌ಗಳಲ್ಲಿ ಐವರು ಬೆಂಗಳೂರಿನವರಾಗಿದ್ದಾರೆ. ಬೆಂಗಳೂರು–ದೆಹಲಿ, ಬೆಂಗಳೂರು–ಕೊಲ್ಕತ್ತಾ ಮತ್ತು ಬೆಂಗಳೂರು–ಗುವಾಹಟಿ ಮಾರ್ಗಗಳು ಅತ್ಯಂತ ಜನಪ್ರಿಯ ಸಾಕುಪ್ರಾಣಿ ಪ್ರಯಾಣ ಮಾರ್ಗ ಗಳಲ್ಲಿ ಸೇರಿದ್ದು, ಕಳೆದ ಮೂರು ಹಣಕಾಸು ವರ್ಷಗಳಲ್ಲಿ ಬೆಂಗಳೂರಿನಿಂದ ನಡೆದ ಸಾಕುಪ್ರಾಣಿ ವಿಮಾನ ಪ್ರಯಾಣಗಳಲ್ಲಿ ಶೇ.55ಕ್ಕಿಂತ ಹೆಚ್ಚು ಪಾಲು ಹೊಂದಿವೆ.

Chikkaballapur News: ವೈರತ್ವದಾಚೆ ಮನುಷ್ಯತ್ವ ಮೆರೆದ ಶಾಸಕ, ಸಂಸದ: ಶಾಂತಮ್ಮ ನಮ್ಮ ತಾಯಿಯಷ್ಟೇ ಶ್ರೇಷ್ಠ ಎಂದ ಶಾಸಕ ಪ್ರದೀಪ್ ಈಶ್ವರ್

ಶಾಂತಮ್ಮ ನಮ್ಮ ತಾಯಿಯಷ್ಟೇ ಶ್ರೇಷ್ಠ ಎಂದ ಶಾಸಕ ಪ್ರದೀಪ್

ಇದು ರಾಜಕೀಯ ಹೊರತಾದ ಮನವಿ. ಸಂಸದರ ತಾಯಿ ನಮ್ಮೂರಿನ ಹೆಣ್ಣುಮಗಳು. ಅವರು ನಮ್ಮ ತಾಯಿಯಷ್ಟೇ ಶ್ರೇಷ್ಠರು. ಅವರ ಹೆಸರನ್ನು ಒಪಿಡಿಗೆ ಇಟ್ಟರೆ ನನಗೆ ಹೆಚ್ಚು ಸಂತೋಷವಾಗುತ್ತದೆ” ಇದು ನನ್ನ ಸಂಕಲ್ಪವೂ ಆಗಿತ್ತು ಎಂದು ಶಾಸಕ ಹೇಳಿದ ಮಾತು ಕಾರ್ಯಕ್ರಮದ ವಾತಾವರಣವನ್ನೇ ಬದಲಿಸಿತು.

Dr B R Ambedkar: ಅಂಬೇಡ್ಕರ್ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ

ಅಂಬೇಡ್ಕರ್ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ

ಅಂಬೇಡ್ಕರ್ ಅವರು ಯಾವುದೇ ಒಂದು ಜಾತಿ ಅಥವಾ ಸಮುದಾಯಕ್ಕೆ ಸೀಮಿತರಾದವರಲ್ಲ. ದೇಶದ ಎಲ್ಲ ಜನರಿಗೂ ಸಮಾನತೆ, ಸ್ವಾತಂತ್ರ್ಯ ಮತ್ತು ಬಂಧುತ್ವದ ಮೌಲ್ಯಗಳನ್ನು ಪ್ರತಿಪಾದಿಸಿದ ಮಹಾನ್ ಮಾನವತಾವಾದಿ ಹಾಗೂ ಸಂವಿಧಾನ ಶಿಲ್ಪಿಯಾಗಿದ್ದಾರೆ. ಅವರನ್ನು ಜಾತಿಯ ಎಲ್ಲೆಗಳನ್ನು ಮೀರಿ ಪ್ರತಿಯೊಬ್ಬರೂ ಗೌರವಿಸಬೇಕು.

Alamatti: ಕಡಿಮೆಯಾಗುತ್ತಿರುವ ಆಲಮಟ್ಟಿ ‌ಜಲಾಶಯ ಮಟ್ಟ; ಶೂನ್ಯಕ್ಕಿಳಿದ ಒಳಹರಿವು; ಬಾಗಿನಕ್ಕೆ ಹೆಚ್ಚಿದ ಒತ್ತಡ

ಕೂಡಲಸಂಗಮದ ಪೂಜೆ ನೆಪದಲ್ಲಿ‌ ಮರೆಯಾಗದಿರಲಿ ಕೃಷ್ಣೆ

ಮಹಾರಾಷ್ಟ್ರದಲ್ಲಿ ‌ಮಳೆ ಸಂಪೂರ್ಣ ನಿಂತ ಕಾರಣ ಜಲಾಶಯದ ಒಳಹರಿವು ಬುಧವಾರ ಶೂನ್ಯಕ್ಕೆ ತಲುಪಿದೆ. ಆದರೆ ಕಾಲುವೆಗಳ ಜಾಲಕ್ಕೆ ಮುಂಗಾರು ಹಂಗಾಮಿಗೆ ನೀರು, ಕೆರೆಗಳ‌ ಭರ್ತಿ, ಹಿನ್ನೀರಿನ‌ ಬಳಕೆ, ಭಾಷ್ಪಿಭವನದ ಕಾರಣ 13,692 ಕ್ಯುಸೆಕ್ ನೀರು ಜಲಾಶಯದಿಂದ ಹೊರ ಹೋಗುತ್ತಿದೆ. ಇದರಿಂದ ಜಲಾಶಯದ ಮಟ್ಟ ಕುಸಿಯತೊಡಗಿದೆ.

S N Subbareddy: ಶಿಕ್ಷಣದ ಜತೆಗೆ ಶಿಸ್ತನ್ನು ಕಲಿಸಿಕೊಡಿ: ಶಾಸಕ ಸುಬ್ಬಾರೆಡ್ಡಿ

ಶಿಕ್ಷಣದ ಜತೆಗೆ ಶಿಸ್ತನ್ನು ಕಲಿಸಿಕೊಡಿ: ಶಾಸಕ ಸುಬ್ಬಾರೆಡ್ಡಿ

ಮಕ್ಕಳು ತಮ್ಮ ಸುತ್ತಮುತ್ತಲಿನವರ ನಡವಳಿಕೆಯನ್ನು ಗಮನಿಸಿ ಅನುಸರಿಸುವುದರಿಂದ ಶಿಕ್ಷಕರು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಹಿಂದುಳಿದ ಹಾಗೂ ಬರಪೀಡಿತ ಗುಡಿಬಂಡೆ ತಾಲೂಕಿ ನಲ್ಲಿ ಮಕ್ಕಳ ಭವಿಷ್ಯ ರೂಪಿಸಲು ಶಿಕ್ಷಣವೇ ಪ್ರಮುಖ ಸಾಧನವಾಗಿದೆ. ಬಡ ಕುಟುಂಬಗಳ ಅನೇಕ ಮಕ್ಕಳು ಸರ್ಕಾರಿ ಶಾಲೆಗಳನ್ನು ಅವಲಂಬಿಸಿದ್ದು, ಶಿಕ್ಷಕರು ಅವರನ್ನು ತಮ್ಮ ಮಕ್ಕಳಂತೆ ಭಾವಿಸಿ ಗುಣಮಟ್ಟದ ಶಿಕ್ಷಣ ನೀಡಬೇಕು

ಗ್ರೀಕ್ ಚೆಸ್ ತಾರೆ ಸ್ಟಾವ್ರೌಲಾ ತ್ಸೋಲಕಿಡುಗೆ ‘ಪ್ಲೇಯರ್ ಆಫ್ ದಿ ಟೂರ್ನಮೆಂಟ್’ ಗೌರವ: ಜಾವಾ ಆಲ್ ಸ್ಟಾರ್ಸ್ 42 ಬಾಬರ್ ‘ಸಿಲ್ವರ್ ನೈಟ್’ ಮೋಟಾರ್‌ಸೈಕಲ್ ಗೆದ್ದ ಮೊದಲ ಆಟಗಾರ್ತಿ

ಗ್ರೀಕ್ ಚೆಸ್ ತಾರೆಗೆ ‘ಪ್ಲೇಯರ್ ಆಫ್ ದಿ ಟೂರ್ನಮೆಂಟ್’ ಗೌರವ

ಗ್ಯಾಂಜಸ್ ಗ್ರ್ಯಾಂಡ್‌ಮಾಸ್ಟರ್ಸ್ ತಂಡವನ್ನು ಪ್ರತಿನಿಧಿಸಿದ ಸ್ಟಾವ್ರೌಲಾ, ತಂಡಕ್ಕೆ ಮೊದಲ ಗ್ಲೋಬಲ್ ಚೆಸ್ ಲೀಗ್ ಪ್ರಶಸ್ತಿ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರ್ತಿಯರಲ್ಲಿ ಒಬ್ಬರಾಗಿ ಹೊರಹೊಮ್ಮಿದ ಅವರ ಪಯಣ, ಆರಂಭಿಕ ಹಿನ್ನಡೆಯಿಂದ ಅತ್ಯುನ್ನತ ವೈಯಕ್ತಿಕ ಗೌರವದವರೆಗೆ ಸಾಗಿದ ಪ್ರಬಲ ಮರಳಾಟದ ಕಥೆಯಾಗಿದೆ.

G N Bhat Column: ಭಾರತದ ಅಸ್ಮಿತೆ ಎತ್ತಿಹಿಡಿದ ಏಕೈಕ ಪ್ರಧಾನಿ ಮೋದಿ

ಭಾರತದ ಅಸ್ಮಿತೆ ಎತ್ತಿಹಿಡಿದ ಏಕೈಕ ಪ್ರಧಾನಿ ಮೋದಿ

ಒಬ್ಬ ವ್ಯಕ್ತಿಯ ವಿಶೇಷಗುಣ, ಅವನನ್ನು ಇತರರಿಂದ ಬೇರ್ಪಡಿಸಿ ತೋರಿಸುವ ಲಕ್ಷಣ ಎಂದು ಈ ಮಾತಿನ ಅರ್ಥ. ಈ ವಿಶೇಷ ಲಕ್ಷಣವು ರೂಪದ್ದಾಗಿರಬಹುದು; ವಸ್ತ್ರದ್ದಾಗಿರಬಹುದು; ಮಾತಿನದ್ದಾಗಿರ ಬಹುದು; ಅಂಗಚೇಷ್ಟೆಯದ್ದಾಗಿರಬಹುದು; ಕೊರಳ ಕೊಂಕಿನದ್ದಾಗಿರಬಹುದು. ಯಾವುದೋ ಒಂದು ದೇಹಗುಣವು ಅಥವಾ ಮನೋಗುಣವು ಮಿಕ್ಕೆಲ್ಲ ವಿಷಯಗಳಲ್ಲಿಯೂ ಇತರರನ್ನೇ ಹೋಲುತ್ತಾ, ಆದರೆ ಅವರಿಂದ ಪ್ರತ್ಯೇಕ ಮಾಡಿತೋರಿಸುವ ಆ ಗುಣವೇ ವ್ಯಕ್ತಿಪ್ರಭಾವ-ಪರ್ಸನಾಲಿಟಿ.

ಕಲಬೆರಕೆ ರಹಿತ, ಶುದ್ಧ ಆಹಾರ ಸೇವನೆಗೆ ಆದ್ಯತೆ: ಬೆಂಗಳೂರಿಗೆ ಉತ್ಪನ್ನ ಮಾರಾಟ ಆರಂಭಿಸಿದ ಕಾಮರ್ಸ್ ವೇದಿಕೆ

ಬೆಂಗಳೂರಿಗೆ ಉತ್ಪನ್ನ ಮಾರಾಟ ಆರಂಭಿಸಿದ ಕಾಮರ್ಸ್ ವೇದಿಕೆ

ಸಂಸ್ಥೆಯ ಉತ್ಪನ್ನಗಳ ಶ್ರೇಣಿಯು ಗ್ರಾಹಕರು ಆರ್ಡರ್ ನೀಡಿದ ತಕ್ಷಣವೇ ಗಿರಣಿಯಲ್ಲಿ ಬೀಸಿ ತಯಾರಿಸುವ ತಾಜಾ ಹಿಟ್ಟು, ಅರೆದ ತಾಜಾ ಸಾಂಬಾರ ಪದಾರ್ಥಗಳು, ಗಾಣದ ತಾಜಾ ಎಣ್ಣೆ, ಡೈರಿ ಉತ್ಪನ್ನಗಳು, ಸಣ್ಣ ಬ್ಯಾಚ್ಗಳಲ್ಲಿ ಸಿದ್ಧಪಡಿಸಿದ ಸ್ಪ್ರೆಡ್ಗಳು, ತಾಜಾ ಹೂವುಗಳು ಹಾಗೂ ರೆಡಿ-ಟು-ಕುಕ್ ಪದಾರ್ಥಗಳನ್ನು ಒಳಗೊಂಡಿದೆ.

ಬಲಿಷ್ಠ ಪ್ರಧಾನಿ ಮೋದಿ

ಬಲಿಷ್ಠ ಪ್ರಧಾನಿ ಮೋದಿ

ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 76 ವರ್ಷ ಪೂರೈಸಿ 77 ಕಾಲಿಟ್ಟಿದ್ದಾರೆ. ದೇಶ ಕಂಡ ಅತಿ ವಿಶಿಷ್ಟ ಪ್ರಧಾನಿ ಮೋದಿಯವರು. ಸತತ ಮೂರು ಬಾರಿ ದೇಶದ ಪ್ರಧಾನ ಮಂತ್ರಿಯಾಗಿ ಆಯ್ಕೆ ಯಾಗಿರುವುದು ಮೋದಿ ಅವರ ಜನಪ್ರಿಯತೆಯನ್ನು ಹಾಗೂ ದೇಶದ ಜನತೆ ಅವರ ಮೇಲಿಟ್ಟಿ‌ರುವ ನಂಬಿಕೆಯನ್ನು ಸೂಚಿಸುತ್ತದೆ

ಅಭಿನಯದ 'ಅನಂತ ಸಾಧಕ'

ಅಭಿನಯದ 'ಅನಂತ ಸಾಧಕ'

ಉತ್ತರ ಕನ್ನಡದ ಶಿರಾಲಿಯಲ್ಲಿ ಆನಂದಿ ನಾಗರ ಕಟ್ಟೆ, ಸದಾನಂದ ನಾಗರಕಟ್ಟೆ ಎಂಬ ಸಂಪ್ರದಾಯ ಬದ್ಧ, ಮಧ್ಯಮವರ್ಗದ ಕುಟುಂಬದಲ್ಲಿ ಸೆಪ್ಟೆಂಬರ್ 4, 1948ರಲ್ಲಿ ಹುಟ್ಟಿದ ಅನಂತ ನಾಗರಕಟ್ಟೆ, ಮುಂದೆ ಮುಂಬಯಿಯಲ್ಲಿ ನಾಟಕ ಹಾಗೂ ಸಿನಿಮಾಗಳಲ್ಲಿ ನಟಿಸತೊಡಗಿದಾಗ ತಮ್ಮ ಹೆಸರನ್ನು ಅನಂತನಾಗ್ ಎಂದು ಬದಲಿಸಿಕೊಂಡರು.

Street Festival: ಸ್ಟ್ರೀಟ್‌ ಫೆಸ್ಟಿವಲ್‌ಗೆ ಭಾರೀ ಸ್ಪಂದನೆ: ರಸ್ತೆಗೆ ವಿಶೇಷ ವಿನ್ಯಾಸ, ಜಗಮಗಿಸುವ ಲೇಸರ್ ಶೋ, ಡ್ರೋನ್ ಶೋಗೆ ಜನ ಫಿದಾ, ಕಲಬುರಗಿಯಲ್ಲಿ ರಂಗೇರಿದ ಕಲ್ಯಾಣ ಕರ್ನಾಟಕ ಉತ್ಸವ

ಸ್ಟ್ರೀಟ್‌ ಫೆಸ್ಟಿವಲ್‌ಗೆ ಭಾರೀ ಸ್ಪಂದನೆ

ಬಣ್ಣ ಬಣ್ಣದ ದೀಪಾಲಂಕಾರದಿಂದ ಕಂಗೊಳಿಸಿದ ಆವರಣದಲ್ಲಿ ಯುವಕ-ಯುವತಿಯರು, ಮಕ್ಕಳು, ಮಹಿಳೆ ಯರು ಸೇರಿ ಸಾವಿರಾರು ಜನರು ಸೇರಿ ಸಂಭ್ರಮಿಸಿದರು. ಜಗಮಗಿಸುವ ದೀಪಾಲಂಕಾರ, ಅಲಂಕೃತ ಪ್ರವೇಶದ್ವಾರ ಹಾಗೂ ವಿಭಿನ್ನ ವಿನ್ಯಾಸಗಳ ನಡುವೆ ಯುವಕ-ಯುವತಿಯರು ಸ್ಟ್ರೀಟ್ ಫೆಸ್ಟಿವಲ್‌ನ ಪ್ರಮುಖ ಆಕರ್ಷಣೆಯಾಗಿ ಕಾಣಿಸಿಕೊಂಡರು. ಮೊಬೈಲ್‌ಗಳಲ್ಲಿ ಕ್ಷಣಗಳನ್ನು ಸೆರೆ ಹಿಡಿಯುತ್ತಾ, ಸ್ನೇಹಿತರೊಂದಿಗೆ ಹೆಜ್ಜೆ ಹಾಕುತ್ತಾ ಯುವ ಸಮೂಹ ಉತ್ಸವದ ವಾತಾವರಣಕ್ಕೆ ಮತ್ತಷ್ಟು ರಂಗು ತಂದಿತು.

ಕೌಶಲ್ಯಾಧಾರಿತ ಶಿಕ್ಷಣದಿಂದ ಯಶಸ್ಸಿನತ್ತ: ಪದವಿಯ ಬಲೆಗೆ ಸಿಲುಕದೆ ಮುನ್ನಡೆಯುತ್ತಿರುವ ವೆಲ್‌ನೆಸ್ ಮತ್ತು ಹಾಸ್ಪಿಟಾಲಿಟಿ ಬಿ.ವೊಕ್ ಪದವೀಧರರು

ಕೌಶಲ್ಯಾಧಾರಿತ ಶಿಕ್ಷಣದಿಂದ ಯಶಸ್ಸಿನತ್ತ

ದಶಕಗಳಿಂದ ವಿದ್ಯಾರ್ಥಿಗಳ ವೃತ್ತಿಜೀವನದ ಬಗ್ಗೆ ಒಂದು ಸಾಮಾನ್ಯ ಕಲ್ಪನೆ ಇತ್ತು. ಮೊದಲು ಪದವಿ, ಬಳಿಕ ಇನ್ನೊಂದು ಉನ್ನತ ಪದವಿ, ನಂತರ ಉದ್ಯೋಗದ ಹುಡುಕಾಟ. ಇದೇ ಹಾದಿಯಲ್ಲಿ ಲಕ್ಷಾಂತರ ಮಂದಿ ಸಾಗುತ್ತಿರುವಾಗ, ಉದ್ಯೋಗಕ್ಕಾಗಿ ತೀವ್ರ ಸ್ಪರ್ಧೆ ಎದುರಾಗುತ್ತಿದೆ. ಈ ಪದವಿ ಕೇಂದ್ರಿತ ವ್ಯವಸ್ಥೆ ಯು ಬಹುಪಾಲು ಸಂದರ್ಭಗಳಲ್ಲಿ ಶೈಕ್ಷಣಿಕ ಪ್ರಮಾಣಪತ್ರವನ್ನೇ ವೃತ್ತಿಪರ ಸಾಮರ್ಥ್ಯದ ಮಾನದಂಡವೆಂದು ಪರಿಗಣಿಸುವಂತೆ ಮಾಡಿದೆ

Vishwavani Impact: ಕೊಪ್ಪಳ ವಿವಿಯ ಅಕ್ರಮ ತನಿಖೆ: ವಿಶ್ವವಾಣಿ ವರದಿಯ ಬೆನ್ನಲ್ಲೇ ಎಚ್ಚೆತ್ತ ರಾಜ್ಯ ಸರಕಾರ

ಕೊಪ್ಪಳ ವಿವಿಯ ಅಕ್ರಮ ತನಿಖೆ

ಸೆ.14ರಂದು ವಿಶ್ವವಾಣಿಯ ಮುಖಪುಟದಲ್ಲಿ (3ನೇ ಪುಟ) ಕೊಪ್ಪಳ ವಿವಿ ಅಕ್ರಮದ ಬಗ್ಗೆ ‘ಕೆಪಿಎಸ್‌ಸಿ ಯನ್ನೂ ಮೀರಿಸಿದೆ ಕೊಪ್ಪಳ ವಿವಿ ನೇಮಕಾತಿ ಅಕ್ರಮ, ಲಂಚವೇ ಪರಪಂಚ’ ಎಂಬ ಶೀರ್ಷಿಕೆಯಲ್ಲಿ ವರದಿ ಪ್ರಕಟವಾಗಿತ್ತು. ಉನ್ನತ ಶಿಕ್ಷಣ ಇಲಾಖೆ (ವಿಶ್ವವಿದ್ಯಾಲಯಗಳು) ಸರಕಾರ ಉಪ ಕಾರ್ಯದರ್ಶಿ ಟಿ.ವಿ.ರಾಜ್ಯಶ್ರೀ, ಸಮಿತಿ ರಚನೆ ಆದೇಶದಲ್ಲಿ ವಿಶ್ವವಾಣಿ ಪತ್ರಿಕೆ ವರದಿ ಉಲ್ಲೇಖಿಸಿದ್ದಾರೆ.

Loading...