Bengaluru News: ಕರ್ನಾಟಕ ಮಹಿಳಾ ಯಕ್ಷಗಾನ ಸಂಸ್ಥೆಯಿಂದ ಮಹಿಳಾ ಉತ್ಸವ- 2025 ಕಾರ್ಯಕ್ರಮ
Bengaluru News: ಕರ್ನಾಟಕ ಮಹಿಳಾ ಯಕ್ಷಗಾನ ಸಂಸ್ಥೆಯ ವತಿಯಿಂದ ಬೆಂಗಳೂರಿನ ಕನ್ನಡ ಭವನದ ನಯನಾ ಸಭಾಂಗಣದಲ್ಲಿ ಮಹಿಳಾ ಉತ್ಸವ- 2025 ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಯಕ್ಷಗಾನ ವೈಭವ ಕಾರ್ಯಕ್ರಮದಲ್ಲಿ ಆರು ತಿಂಗಳ ಕಾಲ ಸಂಸ್ಥೆಯಿಂದ ವಿದ್ಯಾರ್ಥಿ ವೇತನ ಪಡೆದ ಮಹಿಳಾ ಕಲಾವಿದರಿಂದಲೇ ʼಶಶಿಪ್ರಭಾ ಪರಿಣಯʼ ಎಂಬ ಆಖ್ಯಾನವನ್ನು ಆಡಿತೋರಿಸಲಾಯಿತು.


ಬೆಂಗಳೂರು: ಕರ್ನಾಟಕ ಮಹಿಳಾ ಯಕ್ಷಗಾನ ಸಂಸ್ಥೆಯ ವತಿಯಿಂದ ಬೆಂಗಳೂರಿನ (Bengaluru News) ಕನ್ನಡ ಭವನದ ನಯನಾ ಸಭಾಂಗಣದಲ್ಲಿ ʼಮಹಿಳಾ ಉತ್ಸವ- 2025ʼ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಯಕ್ಷಗಾನ ವೈಭವ ಕಾರ್ಯಕ್ರಮದಲ್ಲಿ ಆರು ತಿಂಗಳ ಕಾಲ ಸಂಸ್ಥೆಯಿಂದ ವಿದ್ಯಾರ್ಥಿ ವೇತನ ಪಡೆದ ಮಹಿಳಾ ಕಲಾವಿದರಿಂದಲೇ ʼಶಶಿಪ್ರಭಾ ಪರಿಣಯʼ ಎಂಬ ಆಖ್ಯಾನವನ್ನು ಆಡಿತೋರಿಸಲಾಯಿತು. ತಂಡದ ಕಲಾವಿದರಿಂದ ʼಕೃಷ್ಣಾರ್ಜುನ ಕಾಳಗʼ ಎಂಬ ಪ್ರಸಂಗವನ್ನೂ ಪ್ರದರ್ಶಿಸಲಾಯಿತು. ಈ ಎರಡೂ ಪ್ರಸಂಗಗಳನ್ನು ಯಕ್ಷ ಗುರು ಶ್ರೀನಿವಾಸ ಸಾಸ್ತಾನ ಅವರು ಸಂಯೋಜಿಸಿದ್ದು, ಕರ್ನಾಟಕ ಮಹಿಳಾ ಯಕ್ಷಗಾನ ತಂಡದ ಮುಖ್ಯಸ್ಥೆ ಗೌರಿ ಕೆ. ನಿರ್ದೇಶಿಸಿದ್ದರು.

ಮುಮ್ಮೇಳದಲ್ಲಿ ಮಹಿಳಾ ಯಕ್ಷಗಾನ ತಂಡದ ಮುಖ್ಯಸ್ಥೆ ಗೌರಿ ಕೆ., ಆಶಾ ಆರ್. ಅನ್ನಪೂರ್ಣೇಶ್ವರಿ, ಸುಮಾ ಅನಿಲ್ ಕುಮಾರ್, ಶಶಿಕಲಾ, ಲಕ್ಷ್ಮೀರಾವ್, ಶ್ವೇತಾ, ಅಮಿತ, ಅಂಬಿಕಾ, ಚೈತ್ರಾ ಆರ್. ಆಚಾರ್, ಚೈತ್ರಾ ಭಟ್, ದೀಕ್ಷಾ ಭಟ್, ಸಹನಾ ಜಿ., ಧೃತಿ ಅಮ್ಮೆಂಬಳ, ಅಭಿಶ್ರೀ ಶ್ರೀಹರ್ಷ, ರಕ್ಷಾ ವಿ, ಮಾನ್ಯ, ಯಾದ್ವಿ, ಸಹನಾ ಅನಿಲ್ ಕುಮಾರ್, ಗಗನ ಅನಿಲ್ ಕುಮಾರ್, ಕೃತಿ ಅಮ್ಮೆಂಬಳ ಭಾಗವಹಿಸಿದ್ದರು.
ಸಂಸ್ಥೆಯ ಪುಟಾಣಿ ಕಲಾವಿದರಿಂದ ಧೀರವೈಯ್ಯಾರ ಹಾಗೂ ಮಹಿಳಾ ಕಲಾವಿದರಿಂದ ಯಕ್ಷಗಾನ ಪೂರ್ವರಂಗ ಪ್ರಯೋಗವೂ ನಡೆಯಿತು. ಹಿಮ್ಮೇಳದಲ್ಲಿ ಸುಬ್ರಹ್ಮಣ್ಯ ನಾವುಡ, ವಿಶ್ವನಾಥ ಶೆಟ್ಟಿ ಭಾಗವತರಾಗಿ, ಗೌತಮ ಸಾಸ್ತಾನ ಮೃದಂಗದಲ್ಲಿ, ಸುಬ್ರಹ್ಮಣ್ಯ ಎಂ. ಅವರು ಚೆಂಡೆ ವಾದಕರಾಗಿದ್ದರು. ಬಳಿಕ ʼಕೃಷ್ಣ ಕೃಷ್ಣ ಕೃಷ್ಣʼ- ಶ್ರೀಕೃಷ್ಣ ರಸಾಮೃತ ಎಂಬ ಭರತನಾಟ್ಯ ವೈಭವ ಕಾರ್ಯಕ್ರಮ ನಡೆಯಿತು.
ಈ ಸುದ್ದಿಯನ್ನೂ ಓದಿ | CSA Recruitment 2025: ದೇಶಾದ್ಯಂತ ಬರೋಬ್ಬರಿ 10,277 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ IBPS; ಪದವಿ ಪೂರೈಸಿದವರು ಅಪ್ಲೈ ಮಾಡಿ
ಕಾರ್ಯಕ್ರಮದಲ್ಲಿ ಖ್ಯಾತ ನೃತ್ಯ ಇತಿಹಾಸ ತಜ್ಞೆ ಡಾ. ಕರುಣಾ ವಿಜಯೇಂದ್ರ ಮಾತನಾಡಿದರು. ಕಾರ್ಯಕ್ರಮವನ್ನು ಚೈತ್ರಾ ರಾಜೇಶ್ ಆಚಾರ್ ಮತ್ತು ಡಾ. ಸುಪ್ರೀತಾ ಗೌತಮ್ ನಡೆಸಿಕೊಟ್ಟರು.