ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Government Employees: ಒಪಿಎಸ್‌ ಜಾರಿಗಾಗಿ ಹೋರಾಟಕ್ಕೆ ಸಿದ್ಧ: ಸಿ.ಎಸ್. ಷಡಾಕ್ಷರಿ

Government Employees: ರಾಜ್ಯ ಸರ್ಕಾರಿ ನೌಕರರ ಪರವಾಗಿ 25ಕ್ಕೂ ಹೆಚ್ಚು ಆದೇಶಗಳನ್ನು ಮಾಡಿ ನೌಕರರ ಹಿತಾಸಕ್ತಿಗಳನ್ನು ಕಾಪಾಡುವ ಕೆಲಸ ಮಾಡಿದ್ದೇವೆ. ನಮ್ಮ ಮುಂದೆ ಉಳಿದಿರುವ ನೌಕರರ ಬಹುದೊಡ್ಡ ಬೇಡಿಕೆ ಒಪಿಎಸ್‌ ಮರು ಜಾರಿ ಮಾಡುವುದು. ಇದಕ್ಕಾಗಿ ನಿರಂತರ ಪ್ರಯತ್ನ ಮಾಡುತ್ತೇವೆ ಎಂದು ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ತಿಳಿಸಿದ್ದಾರೆ.

ಒಪಿಎಸ್‌ ಜಾರಿಗಾಗಿ ಹೋರಾಟಕ್ಕೆ ಸಿದ್ಧ: ಸಿ.ಎಸ್. ಷಡಾಕ್ಷರಿ

Profile Prabhakara R Jun 1, 2025 7:30 PM

ಬೆಂಗಳೂರು: ರಾಜ್ಯ ಎನ್‌ಪಿಎಸ್ ನೌಕರರ (Government Employees) ಹಕ್ಕು ಬಾಧ್ಯತೆಗಳ ಹಿತರಕ್ಷಣೆಗಾಗಿ ಹಾಗೂ ಒಪಿಎಸ್ ಮರು ಜಾರಿಗೊಳಿಸುವ ಉದ್ದೇಶಕ್ಕಾಗಿ ಸ್ಥಾಪಿಸಿರುವ ಅಖಿಲ ಕರ್ನಾಟಕ ಎನ್‌ಪಿಎಸ್ ನೌಕರರ ಸಂಘದ ಮೊದಲ ಕಾರ್ಯಕಾರಿ ಸಮಿತಿ ಸಭೆ ಹಾಗೂ NPS TO OPS ಕಾರ್ಯಾಗಾರವು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಹಾಗೂ ಅಖಿಲ ಕರ್ನಾಟಕ ಎನ್‌ಪಿಎಸ್ ನೌಕರರ ಸಂಘದ ಅಧ್ಯಕ್ಷ ನಾಗನಗೌಡ ಎಂ.ಎ ಅವರ ಜಂಟಿ ಸಹಯೋಗದಲ್ಲಿ ಭಾನುವಾರ ನಡೆಯಿತು.

ಕಾರ್ಯಾಗಾರವನ್ನು ನ್ಯಾಯಮೂರ್ತಿ ಚಂದ್ರಶೇಖರಯ್ಯ ಅವರು ಉದ್ಘಾಟಿಸಿ, ಒಪಿಎಸ್ ಸರ್ಕಾರಿ ನೌಕರರ ಸಂವಿಧಾನಬದ್ಧ ಹಕ್ಕು ಆಗಿದೆ. ನೌಕರರ ಹೋರಾಟದ ಭಾಗವಾಗಿ ನಿಮ್ಮೊಂದಿಗೆ ಇದ್ದೇನೆ ಎಂದು ತಿಳಿಸಿದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರು ಮಾತನಾಡಿ, ನೌಕರರ ಪರವಾಗಿ 25ಕ್ಕೂ ಹೆಚ್ಚು ಆದೇಶಗಳನ್ನು ಮಾಡಿ ನೌಕರರ ಹಿತಾಸಕ್ತಿಗಳನ್ನು ಕಾಪಾಡುವ ಕೆಲಸ ಮಾಡಿದ್ದೇವೆ. 7ನೇ ವೇತನ ಆಯೋಗ, ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೊಳಿಸಲಾಗಿದೆ. ನಮ್ಮ ಮುಂದೆ ಉಳಿದಿರುವ ನೌಕರರ ಬಹುದೊಡ್ಡ ಬೇಡಿಕೆ NPS TO OPS ಜಾರಿ ಮಾಡುವುದು. ಈ ಬಗ್ಗೆ ಸರ್ಕಾರಿ ನೌಕರರ ಸಂಘ ತೆಗೆದುಕೊಳ್ಳುವ ನಿರ್ಧಾರಕ್ಕೆ ತಮ್ಮೆಲ್ಲರ ಬೆಂಬಲ ಬೇಕು ಎಂದು ಕೋರಿದರು.

ಪ್ರತಿ ತಾಲೂಕು, ಜಿಲ್ಲೆಯಲ್ಲಿ ಸಂಘಟಿತರಾಗಬೇಕು, ನೌಕರರ ಸಂಘದ ಜತೆಗೆ ತಾವುಗಳು ಸಂಯೋಜಿಸಿ ತಮ್ಮನ್ನು ಜೋಡಿಸಿಕೊಳ್ಳಬೇಕು. NPS ಅಧ್ಯಯನ ಸಮಿತಿಯು ನೌಕರರ ಪರವಾದ ವರದಿಯನ್ನು ಸರ್ಕಾರಕ್ಕೆ ನೀಡುವ ನಿರೀಕ್ಷೆ ಹೊಂದಿದ್ದೇವೆ. ಸಮಿತಿಯು ವರದಿ ನೀಡಿದ ನಂತರ ಮಾನ್ಯ ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಗಳ ಜೊತೆಗೆ ನಿರಂತರ ಸಂಪರ್ಕ ಸಾಧಿಸಿ ಮಾತುಕತೆಯ ಮೂಲಕ ಒಪಿಎಸ್ ಜಾರಿಗೊಳಿಸುವ ಪ್ರಯತ್ನ ಮಾಡುತ್ತೇವೆ. ಇಲ್ಲವಾದರೆ ಖಂಡಿತವಾಗಿ ಹೋರಾಟ ಮಾಡಿ ಒಪಿಎಸ್ ಜಾರಿಗಾಗಿ ಶ್ರಮಿಸುತ್ತೇವೆ ಎಂದು ಸಭೆಗೆ ತಿಳಿಸಿದರು.

C.S. Shadakshari (1)

ಪ್ರೊ.ರಾಧಾಕೃಷ್ಣ ಅವರು ಮಾತನಾಡಿ, ಎನ್‌ಪಿಎಸ್ ನೌಕರರ ಭಾವನೆಗಳನ್ನು ಅರ್ಥಮಾಡಿಕೊಂಡು ನಿಮ್ಮೊಂದಿಗೆ ಬಂದಿದ್ದೇನೆ. ಷಡಾಕ್ಷರಿ ಅವರು ಒಳ್ಳೆಯ ಕೆಲಸಗಳನ್ನು ಸರ್ಕಾರಿ ನೌಕರರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಎನ್‌ಪಿಎಸ್ ರದ್ದುಗೊಳಿಸುವ ಪ್ರಣಾಳಿಕೆಯ ಭರವಸೆಯನ್ನು ನೀಡುವಲ್ಲಿ ನೌಕರರ ಪರವಾಗಿ ನಾನು ಕರ್ತವ್ಯ ನಿರ್ವಹಿಸಿದ್ದೇನೆ. ಭರವಸೆ ನೀಡಿದ ಪಕ್ಷ ಅಧಿಕಾರದಲ್ಲಿದೆ, ಸರ್ಕಾರ ಈಡೇರಿಸದೇ ಹೊದರೆ ನ್ಯಾಯಾಲಯದಲ್ಲಿ ಪ್ರಣಾಳಿಕೆ ಸಮಿತಿ, ಪಕ್ಷ, ಸರ್ಕಾರದ ಮೇಲೆ ದಾವೆ ಹೂಡುವ ಬಗ್ಗೆ ಅವಕಾಶಗಳು ಇದೆಯೇ ಎಂದು ಪರಿಶೀಲನೆ ನೆಡೆಸಿದ್ದೇನೆ ಎಂದು ತಿಳಿಸಿದರು.

ಈ ಸುದ್ದಿಯನ್ನೂ ಓದಿ | CM Siddaramaiah: ರೈತರ ಆತ್ಮಹತ್ಯೆ ಪರಿಹಾರ ಶೀಘ್ರ ಒದಗಿಸಲು ಸಿಎಂ ಸೂಚನೆ

ಕಾರ್ಯಾಗಾರದಲ್ಲಿ ರಮೇಶ್ ಸಂಗಾ, ರುದ್ರಪ್ಪ, ಡಾ.ಸದಾನಂದ ನೆಲ್ಕುದ್ರಿ, ನೌಕರರ ಸಂಘದ ಗಿರಿಗೌಡ ಎಚ್, ಬಸವರಾಜು. ಎಸ್, ಮಲ್ಲಿಕಾರ್ಜುನ ಬಳ್ಳಾರಿ, ಮೋಹನ್ ಕುಮಾರ್, ಸುರೇಶ ಶೆಡಶ್ಯಾಳ, ವೀರೇಶ ಒಡೆಯನಪುರ, ರೇಣುಕಾದೇವಿ, ರಾಯಪ್ಪಗೌಡ, ಹರ್ಷ, ಚಂದ್ರಶೇಖರ್.ಶೈಲಜಾ, ರಮಾ, ರೂಪಾ ಉಪಸ್ಥಿತರಿದ್ದರು.