Viral Video: ಹೆತ್ತ ತಾಯಿ ಎನ್ನುವುದನ್ನೂ ನೋಡದೆ ಕ್ರೂರವಾಗಿ ಹಲ್ಲೆ ನಡೆಸಿದ ಮಗ; ಮನ ಕಲಕುವ ವಿಡಿಯೊ ವೈರಲ್
ರಾಜಸ್ಥಾನದಲ್ಲಿ ನಡೆದ ಮನಕಲಕುವ ಘಟನೆಯ ವೈರಲ್ ಆಗಿದೆ. ಹೆತ್ತಮ್ಮನಿಗೆ ಮಗ ಹೊಡೆಯುವ ದೃಶ್ಯ ಇಆಗಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ತನ್ನ ಹೆತ್ತ ತಾಯಿಗೆ ಮಗ ಥಳಿಸುತ್ತಿರುವ ವಿಡಿಯೊ ಪೊಲೀಸರ ಕೈ ಸೇರಿದೆ. ಪಾಪಿ ಮಗನನ್ನು ದೀಪು ಮೆಹ್ರಾ ಎಂದು ಗುರುತಿಸಲಾಗಿದ್ದು, ಆತನ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಘಟನೆಯ ದೃಶ್ಯ

ಜೈಪುರ: ರಾಜಸ್ಥಾನದ (Rajasthan) ಕೋಟಾದಲ್ಲಿ (Kota) ನಡೆದ ಆಘಾತಕಾರಿ ಘಟನೆಯೊಂದರಲ್ಲಿ, ದೀಪು ಮೆಹ್ರಾ ಎಂಬಾತ ತನ್ನ 65 ವರ್ಷದ ತಾಯಿ (Assaults Mother) ಸಂತೋಷ್ ಬಾಯಿ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ್ದಾನೆ. ಅವರ ಮೇಲೆ ಕಾಲಿನಿಂದ ಒದ್ದು, ಚಪ್ಪಲಿಯಿಂದ ಹೊಡೆದಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗಿದೆ (Viral Video೦. ಈ ದೌರ್ಜನ್ಯವು ಜುಲೈ 20ರಂದು ಅನಂತಪುರ ಪೊಲೀಸ್ ಠಾಣೆ ವ್ಯಾಪ್ತಿಯ ಓಂ ಗ್ರೀನ್ ಮೀಡೋಸ್ ಅಪಾರ್ಟ್ಮೆಂಟ್ನಲ್ಲಿ ನಡೆದಿದೆ.
ಸಿಸಿಟಿವಿ ಮತ್ತು ಮೊಬೈಲ್ ಫೋನ್ನಲ್ಲಿ ದಾಖಲಾದ ದೃಶ್ಯಗಳ ಪ್ರಕಾರ, ದೀಪು ಮೆಹ್ರಾ ತಾಯಿಯ ಮನೆಯ ಗೇಟ್ ಒಡೆದು ಒಳನುಗ್ಗಿ, ದಾಳಿ ನಡೆಸಿದ್ದಾನೆ. ಮನೆಯಲ್ಲಿ ಇದ್ದ ಮಕ್ಕಳ ಕೂಗಾಟವನ್ನು ಲೆಕ್ಕಿಸದೆ, ಆತ ತಾಯಿಯನ್ನು ಕಾಲಿನಿಂದ ಒದ್ದು, ಚಪ್ಪಲಿಯಿಂದ ಹೊಡೆದಿದ್ದಾನೆ. ಸಂತೋಷ್ ಬಾಯಿ ತಮ್ಮ ದೂರಿನಲ್ಲಿ, ಮಗ ತನ್ನ ಪತಿಯ ಮೇಲೂ ದಾಳಿ ನಡೆಸಿದ್ದಾನೆ ಎಂದು ಆರೋಪಿಸಿದ್ದಾರೆ.
ವೈರಲ್ ವಿಡಿಯೊ ಇಲ್ಲಿದೆ:
રાજસ્થાનના કોટાના કપાતરનો વીડિયો વાયરલ
— Toral Kavi (@toralkavi) July 24, 2025
વૃદ્ધ માતાને લાતો, મુક્કા, ચંપલથી મરાયો ઢોર માર
વૃદ્ધ માતાએ આરોપી પુત્ર સામે અનંતપુર પો.સ્ટે.મા નોંધાવી ફરિયાદ
પોલીસે આરોપીની ધરપકડ કર્યા બાદ જામીન પર મુક્ત કર્યો#RajasthanNews @tv13gujarati pic.twitter.com/XWlrUdqOgu
ಈ ಸುದ್ದಿಯನ್ನು ಓದಿ: Smartphone: ಮೊಬೈಲ್ ಉತ್ಪಾದನೆಯಲ್ಲಿ ಗಣನೀಯ ಸಾಧನೆ ಮಾಡಿದ ಭಾರತ; ರಫ್ತು ಶೇ. 127ರಷ್ಟು ಹೆಚ್ಚಳ
ತಾಯಿ ನೆಲಕ್ಕೆ ಬಿದ್ದರೂ, ಆರೋಪಿಯು ದಾಳಿಯನ್ನು ಮುಂದುವರಿಸಿದ್ದಾನೆ. ಕುಟುಂಬದ ಸದಸ್ಯರು ಈ ಘಟನೆಯನ್ನು ವಿಡಿಯೊ ಮಾಡಿ, ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಆಧಾರದ ಮೇಲೆ ಅನಂತಪುರ ಪೊಲೀಸರು ಮೆಹ್ರಾನನ್ನು ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಆದರೆ ನಂತರ ಆತನಿಗೆ ಜಾಮೀನು ಮಂಜೂರಾಯಿತು.
ಸಹಾಯಕ ಸಬ್-ಇನ್ಸ್ಪೆಕ್ಟರ್ ಉದಯ್ ಸಿಂಗ್ ಪ್ರಕಾರ, ಮನೆಗೆ ನುಗ್ಗಿ ದಾಳಿ ನಡೆಸಿದ ಆರೋಪದಡಿ ಮೆಹ್ರಾ ವಿರುದ್ಧ ವಿವಿಧ ಸೆಕ್ಷನ್ಗಳಡಿ ಪ್ರಕರಣ ದಾಖಲಾಗಿದೆ. ಈ ಘಟನೆಯು ಕುಟುಂಬದ ವಿವಾದದಿಂದ ಉಂಟಾಗಿರಬಹುದು ಎಂದು ಶಂಕಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆಯು ಕುಟುಂಬದೊಳಗಿನ ಸಂಘರ್ಷ ಮತ್ತು ಹಿರಿಯರ ಮೇಲಿನ ದೌರ್ಜನ್ಯದ ಬಗ್ಗೆ ಗಂಭೀರ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.