ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad
Profile

Sushmitha Jain

[email protected]

Articles
"ಸತ್ತರೂ ಭೂತವಾಗಿ ಬಂದು ಕಾಡುತ್ತೇನೆ"; ಜುಲೈ 20ಕ್ಕೆ ಸಂಸತ್ ಚಲೋಗೆ ಸೋನಂ ವಾಂಗ್ಚುಕ್ ಕರೆ

20ನೇ ದಿನಕ್ಕೂ ಮುಂದುವರಿದ ಸೋನಂ ವಾಂಗ್ಚುಕ್ ಉಪವಾಸ

ಶಿಕ್ಷಣ ತಜ್ಞ ಸೋನಂ ವಾಂಗ್ಚುಕ್ ಅವರು ತಮ್ಮ ಅನಿರ್ದಿಷ್ಟಾವಧಿ ಉಪವಾಸವನ್ನು ಜುಲೈ 20ರವರೆಗೆ ಮುಂದುವರಿಸುವುದಾಗಿ ಘೋಷಿಸಿದ್ದಾರೆ. ಅದೇ ದಿನ ನಡೆಯಲಿರುವ 'ಸಂಸತ್ ಚಲೋ' ಮೆರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅವರು ಜನತೆಗೆ ಕರೆ ನೀಡಿದ್ದಾರೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಹಾಗೂ ಶಿಕ್ಷಣ ವ್ಯವಸ್ಥೆಯಲ್ಲಿನ ಅಕ್ರಮಗಳ ವಿರುದ್ಧ ಅವರು ಹೋರಾಟ ನಡೆಸುತ್ತಿದ್ದು, ಆರೋಗ್ಯ ಹದಗೆಟ್ಟಿದ್ದರೂ ತಮ್ಮ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದ್ದಾರೆ.

ಜೋರ್ಡನ್‌ನಲ್ಲಿರುವ ಅಮೆರಿಕ ಸೇನಾ ನೆಲೆ ಮೇಲೆ ಇರಾನ್ ದಾಳಿ? F-35 ಸೇರಿ ಹಲವು ಯುದ್ಧವಿಮಾನಗಳು ಧ್ವಂಸ!

ಜೋರ್ಡನ್‌ನಲ್ಲಿ ಅಮೆರಿಕ ನೆಲೆ ಮೇಲೆ ಇರಾನ್ ದಾಳಿ?

ಜೋರ್ಡನ್‌ನ ಅಲ್-ಅಜ್ರಾಕ್ ವಾಯುನೆಲೆಯಲ್ಲಿರುವ ಅಮೆರಿಕ ಸೇನಾ ವಿಭಾಗದ ಮೇಲೆ ಕ್ಷಿಪಣಿ ಹಾಗೂ ಡ್ರೋನ್ ದಾಳಿ ನಡೆಸಿರುವುದಾಗಿ ಇರಾನ್ ಹೇಳಿಕೊಂಡಿದೆ. ಈ ದಾಳಿಯಲ್ಲಿ F-35, F-16 ಸೇರಿದಂತೆ ಹಲವು ಯುದ್ಧವಿಮಾನಗಳು ಮತ್ತು ಸೇನಾ ಉಪಕರಣಗಳು ನಾಶವಾಗಿದ್ದು, ಅಮೆರಿಕದ ಸೈನಿಕರಿಗೆ ಸಾವುನೋವು ಸಂಭವಿಸಿದೆ ಎಂದು ಇರಾನ್ ಹೇಳಿಕೊಂಡಿದೆ.

ಜುಲೈ 20 ರಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭ; ಯಾವೆಲ್ಲ ಬಿಲ್‌ಗಳಿಗೆ ಸಿಗಲಿದೆ ಗ್ರೀನ್‌ ಸಿಗ್ನಲ್‌?

7 ಮಸೂದೆಗಳಿಗೆ ಕೇಂದ್ರದ ಗ್ರೀನ್ ಸಿಗ್ನಲ್

ಮುಂಬರುವ ಸಂಸತ್ ಅಧಿವೇಶನಕ್ಕಾಗಿ ಕೇಂದ್ರ ಸರ್ಕಾರ ಏಳು ಪ್ರಮುಖ ಮಸೂದೆಗಳನ್ನು ಪಟ್ಟಿ ಮಾಡಿದೆ. ಆದರೆ ಮಹಿಳಾ ಮೀಸಲು, ಪರಿಸೀಮನೆ ಹಾಗೂ 130ನೇ ಸಂವಿಧಾನ ತಿದ್ದುಪಡಿ ಮಸೂದೆಗಳು ತಾತ್ಕಾಲಿಕ ಕಾರ್ಯಸೂಚಿಯಲ್ಲಿ ಸ್ಥಾನ ಪಡೆದಿಲ್ಲ. FCRA, ಉನ್ನತ ಶಿಕ್ಷಣ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯೆ, MSME ಸೇರಿದಂತೆ ಹಲವು ಮಹತ್ವದ ಮಸೂದೆಗಳನ್ನು ಈ ಅಧಿವೇಶನದಲ್ಲಿ ಮಂಡಿಸಲು ಸರ್ಕಾರ ಸಿದ್ಧತೆ ನಡೆಸಿದೆ.

ಈ ಎರಡು ಗುಣಗಳಿರುವ ಮಹಿಳೆಯರಿಂದ ದೂರವಿರಿ ಎನ್ನುತ್ತದೆ ಚಾಣಕ್ಯನ ನೀತಿ

ಈ ಗುಣದ ಮಹಿಳೆಯರನ್ನು ನಂಬಬೇಡಿ: ಚಾಣಕ್ಯ ಕಿವಿಮಾತು

Chanakya Niti: ಚಾಣಕ್ಯ ನೀತಿಯ ಪ್ರಕಾರ ಉತ್ತಮ ಜೀವನ ಹಾಗೂ ಕುಟುಂಬಕ್ಕಾಗಿ ಸಂಗಾತಿಯ ಆಯ್ಕೆ ಬಹಳ ಮುಖ್ಯ. ದುರಾಸೆ ಮತ್ತು ಸೋಮಾರಿತನದಂತಹ ದುರ್ಗುಣಗಳು ವ್ಯಕ್ತಿಯ ಜೀವನ, ಸಂಬಂಧಗಳು ಮತ್ತು ಕುಟುಂಬದ ನೆಮ್ಮದಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ ಎಂದು ಚಾಣಕ್ಯ ತಿಳಿಸಿದ್ದಾರೆ. ಆದ್ದರಿಂದ ಈ ಗುಣಗಳಿಂದ ದೂರವಿದ್ದು, ಪ್ರಾಮಾಣಿಕತೆ, ಪರಿಶ್ರಮ ಮತ್ತು ತೃಪ್ತಿಯಂತಹ ಸದ್ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂಬ ಸಂದೇಶ ನೀಡಿದ್ದಾರೆ.

150 ಕೋಟಿ ರುಪಾಯಿ ಆಸ್ತಿಗಾಗಿ ಹರಿಯಿತು ನೆತ್ತರು: ಕುಡಿದ ಮತ್ತಿನಲ್ಲಿ ತಂದೆಯನ್ನೇ ಗುಂಡಿಕ್ಕಿ ಕೊಂದ ಪಾಪಿ ಪುತ್ರ

150 ಕೋಟಿ ರುಪಾಯಿ ಆಸ್ತಿಗಾಗಿ ತಂದೆಯನ್ನೇ ಕೊಂದ ಪುತ್ರ

Crime News: ಉತ್ತರ ಪ್ರದೇಶದ ಗಾಜಿಯಾಬಾದ್‌ನ ಮೋದಿನಗರದಲ್ಲಿ ₹150 ಕೋಟಿ ಮೌಲ್ಯದ ಆಸ್ತಿ ವಿವಾದ ದುರಂತ ಅಂತ್ಯ ಕಂಡಿದೆ. ಮದ್ಯದ ಅಮಲಿನಲ್ಲಿದ್ದ 32 ವರ್ಷದ ಪುತ್ರ ನಿಖಿಲ್ ತನ್ನ ತಂದೆ ಹರಿಯೋಂ ಚೌಧರಿ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿ ಪರಾರಿಯಾಗಿದ್ದಾನೆ. ಈಗಾಗಲೇ 25 ಬಿಘಾ ಜಮೀನು ಮತ್ತು ಅಂಗಡಿಗಳನ್ನು ಪಡೆದಿದ್ದರೂ ಉಳಿದ ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಕೊಡುವಂತೆ ಒತ್ತಾಯಿಸಿದ್ದಾನೆ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯ ಬಂಧನಕ್ಕೆ ನಾಲ್ಕು ವಿಶೇಷ ತಂಡಗಳನ್ನು ರಚಿಸಿ ಶೋಧ ಕಾರ್ಯ ಮುಂದುವರಿಸಿದ್ದಾರೆ.

ಹಿರಿಯ ನಾಯಕರು ಪಕ್ಷ ತೊರೆದರೂ ಸೋದರಳಿಯ ಅಭಿಷೇಕ್‌ನನ್ನು ಬಿಟ್ಟು ಕೊಡುತ್ತಿಲ್ಲ ಮಮತಾ ಬ್ಯಾನರ್ಜಿ; ದೀದಿಗೆ ಬೆರಳೆಣಿಕೆಯ ನಿಷ್ಠಾವಂತರೇ ಈಗ ಶಕ್ತಿ

ಹೊಡೆತ ಬಿದ್ದರೂ ಅಭಿಷೇಕ್‌ನನ್ನು ಬಿಟ್ಟು ಕೊಡುತ್ತಿಲ್ಲ ಮಮತಾ ಬ್ಯಾನರ್ಜಿ

Mamata Banerjee: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಮತ್ತೊಂದು ರಾಜಕೀಯ ಹಿನ್ನಡೆಯಾಗಿದ್ದು, ಮೂರು ದಶಕಗಳ ಕಾಲ ಅವರ ಆಪ್ತರಾಗಿದ್ದ ಟಿಎಂಸಿ ಹಿರಿಯ ನಾಯಕ ಹಾಗೂ ಶಾಸಕ ಮದನ್ ಮಿತ್ರ ಬಂಡಾಯ ಬಣಕ್ಕೆ ಸೇರುವುದಾಗಿ ಘೋಷಿಸಿದ್ದಾರೆ. ಈ ಬೆಳವಣಿಗೆ ಟಿಎಂಸಿಯಲ್ಲಿ ಭಿನ್ನಮತ ಮತ್ತಷ್ಟು ಹೆಚ್ಚಿಸಿರುವುದರ ಜತೆಗೆ, ಮುಂಗಾರು ಅಧಿವೇಶನಕ್ಕೂ ಮುನ್ನ ಪಕ್ಷದ ಹಲವು ನಾಯಕರು ಮತ್ತು ಸಂಸದರು ದೂರವಾಗುತ್ತಿರುವ ಬೆಳವಣಿಗೆ ಮಮತಾ ಬ್ಯಾನರ್ಜಿ ಅವರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಸೋದರಳಿಯ ಅಭಿಷೇಕ್‌ ಬ್ಯಾನರ್ಜಿಯ ಕಾರಣ ನೀಡಿ ಹಲವು ನಾಯಕರು ಪಕ್ಷ ತೊರೆಯುತ್ತಿದ್ದರೂ ಮಮತಾ ಈ ಬಗ್ಗೆ ಕ್ಯಾರೇ ಎಂದಿಲ್ಲ.

ಟೆಹರಾನ್‌ನಲ್ಲಿ ಡೊನಾಲ್ಡ್‌ ಟ್ರಂಪ್ ಶವಪೆಟ್ಟಿಗೆಯ ಬೃಹತ್ ಹೋರ್ಡಿಂಗ್‌: ಅಮೆರಿಕಕ್ಕೆ ಬಹಿರಂಗ ಸವಾಲು ಹಾಕಿದ ಇರಾನ್‌; ಮತ್ತೊಂದು ಹಂತಕ್ಕೆ ಹೋಗುತ್ತ ಸಂಘರ್ಷ?

ಟ್ರಂಪ್ ಶವಪೆಟ್ಟಿಗೆಯ ಚಿತ್ರ ಪ್ರದರ್ಶಿಸಿದ ಇರಾನ್

Donald Trump: ಇರಾನ್ ರಾಜಧಾನಿ ಟೆಹರಾನ್‌ನಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಶವಪೆಟ್ಟಿಗೆಯಲ್ಲಿ ಚಿತ್ರಿಸಿರುವ ಬೃಹತ್ ಹೋರ್ಡಿಂಗ್ ಅಳವಡಿಸಲಾಗಿದೆ. ʼWe Will Kill Trumpʼ ಎಂಬ ಸಂದೇಶವಿರುವ ಈ ಹೋರ್ಡಿಂಗ್ ಅಮೆರಿಕ–ಇರಾನ್ ನಡುವಿನ ಉದ್ವಿಗ್ನತೆಯ ಮಧ್ಯೆ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ.

ಉಕ್ರೇನ್ ದಾಳಿಯಿಂದ ರಷ್ಯಾಗೆ ಇಂಧನ ಬಿಕ್ಕಟ್ಟು: ಪೆಟ್ರೋಲ್ ಪೂರೈಸುವಂತೆ ಭಾರತಕ್ಕೆ ಮನವಿ; ಏನಿದು ಹೊಸ ಬೆಳವಣಿಗೆ?

ಭಾರತದಿಂದ ಪೆಟ್ರೋಲ್ ಕೇಳಿದ ರಷ್ಯಾ; ಏನಿದು ರಿವರ್ಸ್‌ ಎಕಾನಮಿ?

Russia-Ukraine War: ಉಕ್ರೇನ್ ದಾಳಿಯಿಂದ ರಷ್ಯಾದ ತೈಲ ಸಂಸ್ಕರಣಾ ಘಟಕಗಳಿಗೆ ಭಾರಿ ಹಾನಿಯಾಗಿದ್ದು, ದೇಶದಲ್ಲಿ ಪೆಟ್ರೋಲ್ ಬಿಕ್ಕಟ್ಟು ಎದುರಾಗಿದೆ. ಈ ಹಿನ್ನೆಲೆಯಲ್ಲಿ ರಷ್ಯಾದ ಪ್ರಮುಖ ತೈಲ ಕಂಪನಿಗಳು ಭಾರತದಿಂದ ಹೆಚ್ಚಿನ ಪ್ರಮಾಣದಲ್ಲಿ ಪೆಟ್ರೋಲ್ ಪೂರೈಸುವಂತೆ ಮನವಿ ಮಾಡಿವೆ ಎಂದು ವರದಿಯಾಗಿದೆ.

ಒಂದು ದೇಶ-ಒಂದು ಚುನಾವಣೆ: ಮಳೆಗಾಲ ಅಧಿವೇಶನದಲ್ಲೇ ಮಸೂದೆ ಮಂಡಿಸಲು ಕೇಂದ್ರದ ಸಿದ್ಧತೆ

'ಒಂದು ದೇಶ - ಒಂದು ಚುನಾವಣೆ' ಮಸೂದೆ ಜಾರಿಗೆ ಮತ್ತೆ ಚರ್ಚೆ

One Nation One Election Bill: ಸಂಸತ್ತಿನ ಮಳೆಗಾಲ ಅಧಿವೇಶನದಲ್ಲಿ 'ಒಂದು ದೇಶ - ಒಂದು ಚುನಾವಣೆ' ಸಂವಿಧಾನ ತಿದ್ದುಪಡಿ ಮಸೂದೆಯನ್ನು ಮುಂದಕ್ಕೆ ತರಲು ಕೇಂದ್ರ ಸರ್ಕಾರ ಸಜ್ಜಾಗಿದೆ. ಮಸೂದೆ ಅಂಗೀಕಾರಕ್ಕೆ ಅಗತ್ಯವಿರುವ ವಿಶೇಷ ಬಹುಮತದ ಲೆಕ್ಕಾಚಾರ ನಡೆಯುತ್ತಿದ್ದು, 2034ರಿಂದ ಲೋಕಸಭೆ ಮತ್ತು ರಾಜ್ಯ ವಿಧಾನಸಭೆ ಚುನಾವಣೆಗಳನ್ನು ಒಂದೇ ಸಮಯದಲ್ಲಿ ನಡೆಸುವ ಗುರಿ ಹೊಂದಲಾಗಿದೆ.

ದಾಖಲೆ ಬರೆಯಲಿರುವ ಎಲ್ ನಿನೋ? ಭಾರತದಲ್ಲಿ ಮಳೆ ಕೊರತೆ ಹೆಚ್ಚುವ ಸಾಧ್ಯತೆ

ಭಾರತಕ್ಕೆ ಎಲ್ ನಿನೋ ಶಾಕ್; ಕೃಷಿಗೆ ಕಾದಿದೆಯೇ ಸಂಕಷ್ಟ?

El Nino: 2026ರಲ್ಲಿ ರೂಪುಗೊಳ್ಳುತ್ತಿರುವ ಎಲ್ ನಿನೋ ಆಧುನಿಕ ಇತಿಹಾಸದಲ್ಲೇ ಅತ್ಯಂತ ಪ್ರಬಲವಾಗುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ಎಚ್ಚರಿಸಿದ್ದಾರೆ. ಇದರ ಪರಿಣಾಮ ಭಾರತದಲ್ಲಿ ಮುಂಗಾರು ದುರ್ಬಲವಾಗುವ ಸಾಧ್ಯತೆ ಹೆಚ್ಚಿದ್ದು, ಮಳೆ ಕೊರತೆಯಿಂದ ಕೃಷಿ ಹಾಗೂ ಬೀಜ ಬಿತ್ತನೆ ಮೇಲೆ ಈಗಾಗಲೇ ಪರಿಣಾಮ ಕಾಣಿಸುತ್ತಿದೆ.

''ನೀನು ಮುಸ್ಲಿಮಾ?ʼʼ ಧರ್ಮ ಕೇಳಿ ಭಾರತ ಮೂಲದ ಮುಸ್ಲಿಂ ವ್ಯಕ್ತಿಯ ಮೇಲೆ ಅಮೆರಿಕದಲ್ಲಿ ಚಾಕು ದಾಳಿ

ಅಮೆರಿಕದಲ್ಲಿ ಭಾರತೀಯ ಮುಸ್ಲಿಂ ವ್ಯಕ್ತಿಯ ಮೇಲೆ ದಾಳಿ

ಅಮೆರಿಕದ ಉಟಾ ರಾಜ್ಯದ ವೆಸ್ಟ್ ವ್ಯಾಲಿ ಸಿಟಿಯ ವ್ಯಾಲಿ ಫೇರ್ ಮಾಲ್‌ನಲ್ಲಿ ಭಾರತ ಮೂಲದ ಮುಸ್ಲಿಂ ಉದ್ಯೋಗಿಯ ಮೇಲೆ ಧರ್ಮ ಕೇಳಿದ ಬಳಿಕ ಚಾಕು ದಾಳಿ ನಡೆಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಯುವಕ ಚಿಕಿತ್ಸೆ ಪಡೆಯುತ್ತಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

Astro Tips: ಗುರುವಾರ ಈ ಪರಿಹಾರಗಳನ್ನು ಮಾಡಿದರೆ ವಿಷ್ಣುವಿನ ಕೃಪೆಯೊಂದಿಗೆ ಆರ್ಥಿಕ ಪ್ರಗತಿ, ದಾಂಪತ್ಯ ಸುಖ ಹೆಚ್ಚಲಿದೆ

ಗುರುವಾರ ಈ ಪರಿಹಾರಗಳನ್ನು ಮಾಡಿ

ಹಿಂದೂ ಧಾರ್ಮಿಕ ನಂಬಿಕೆಯ ಪ್ರಕಾರ ಗುರುವಾರವನ್ನು ಶ್ರೀಮಹಾವಿಷ್ಣುವಿನ ಆರಾಧನೆಗೆ ಅತ್ಯಂತ ಶುಭಕರ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನ ವಿಷ್ಣು-ಲಕ್ಷ್ಮಿ ಪೂಜೆ, ಹಳದಿ ಬಟ್ಟೆ ಧರಿಸುವುದು, ಉಪವಾಸ, ದಾನ ಹಾಗೂ ಮಂತ್ರಜಪ ಮಾಡುವುದರಿಂದ ಆರ್ಥಿಕ ಪ್ರಗತಿ, ದಾಂಪತ್ಯ ಸುಖ, ಕುಟುಂಬದ ನೆಮ್ಮದಿ ಮತ್ತು ಗುರು ಗ್ರಹದ ಅನುಗ್ರಹ ದೊರೆಯುತ್ತದೆ ಎಂಬ ನಂಬಿಕೆ ಇದೆ.

E20 ಪೆಟ್ರೋಲ್‌ನಿಂದ ಎಂಜಿನ್‌ಗೆ ಹಾನಿಯಿಲ್ಲ, ಮೈಲೇಜ್ ಮೇಲೂ ದೊಡ್ಡ ಪರಿಣಾಮವಿಲ್ಲ: IIT ಕಾನ್ಪುರ್ ಸಂಶೋಧನೆಯಿಂದ ದೃಢ

E20 ಕುರಿತು ವದಂತಿ ತಳ್ಳಿ ಹಾಕಿದ IIT

E20 Petrol: E20 ಪೆಟ್ರೋಲ್ ಬಳಕೆಯಿಂದ ವಾಹನಗಳ ಎಂಜಿನ್‌ಗೆ ಹಾನಿಯಾಗುವುದಿಲ್ಲ ಹಾಗೂ ಮೈಲೇಜ್‌ನಲ್ಲಿ ಗಮನಾರ್ಹ ಕುಸಿತವೂ ಕಂಡುಬರುವುದಿಲ್ಲ ಎಂದು ಐಐಟಿ ಕಾನ್ಪುರ್ ಸಂಶೋಧನೆ ತಿಳಿಸಿದೆ. ಚಾಲನಾ ಶೈಲಿ, ರಸ್ತೆ ಪರಿಸ್ಥಿತಿ ಮತ್ತು ವಾಹನದ ನಿರ್ವಹಣೆಯೇ ಮೈಲೇಜ್ ಮೇಲೆ ಹೆಚ್ಚು ಪರಿಣಾಮ ಬೀರುತ್ತವೆ ಎಂದು ಸಂಶೋಧಕರು ಸ್ಪಷ್ಟಪಡಿಸಿದ್ದಾರೆ.

ಪಶ್ಚಿಮ ಏಷ್ಯಾ ಸಮುದ್ರ ಬಿಕ್ಕಟ್ಟು: ಭಾರತೀಯ ನಾವಿಕರ ಸುರಕ್ಷತೆಗೆ ಕೇಂದ್ರದಿಂದ 'Seafarer First' ಯೋಜನೆ ಜಾರಿ

ಭಾರತೀಯ ನಾವಿಕರ ರಕ್ಷಣೆಗೆ ಕೇಂದ್ರದ ಹೊಸ ಯೋಜನೆ

ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಸಮುದ್ರ ಭದ್ರತಾ ಬಿಕ್ಕಟ್ಟಿನ ನಡುವೆ ಭಾರತೀಯ ನಾವಿಕರ ಸುರಕ್ಷತೆಗಾಗಿ ಕೇಂದ್ರ ಸರ್ಕಾರ 'Seafarer First' ಯೋಜನೆಯನ್ನು ಆರಂಭಿಸಿದೆ. ಹೋರ್ಮುಜ್ ಜಲಸಂಧಿಯಲ್ಲಿ ನಡೆದ ಕ್ಷಿಪಣಿ ದಾಳಿಯಲ್ಲಿ ಭಾರತೀಯ ನಾವಿಕರ ಸಾವಿನ ಬಳಿಕ ಈ ಕ್ರಮ ಕೈಗೊಳ್ಳಲಾಗಿದ್ದು, ರಿಯಲ್-ಟೈಮ್ ಹಡಗು ಮೇಲ್ವಿಚಾರಣೆ, ಕುಟುಂಬಗಳಿಗೆ ವಿಶೇಷ ಸಂಪರ್ಕಾಧಿಕಾರಿ ಹಾಗೂ 24x7 ಸಹಾಯವಾಣಿ ವ್ಯವಸ್ಥೆ ಜಾರಿಗೊಳಿಸಲಾಗಿದೆ.

"ಸ್ತನವನ್ನು ಮುಟ್ಟಿ, ಸಲ್ವಾರ್ ಕಳಚಲು ಪ್ರಯತ್ನಿಸಿದರೆ ಅದು ಅತ್ಯಾಚಾರದ ಯತ್ನವಲ್ಲವೇ?" ಪಾಟ್ನಾ ಹೈಕೋರ್ಟ್ ತೀರ್ಪಿಗೆ ಸುಪ್ರೀಂ ತರಾಟೆ

ಪಾಟ್ನಾ ಹೈಕೋರ್ಟ್ ತೀರ್ಪು ಪ್ರಶ್ನಿಸಿದ ಸುಪ್ರೀಂ ಕೋರ್ಟ್

ಮಹಿಳೆಯ ಸ್ತನ ಒತ್ತಿ, ಸಲ್ವಾರ್ ಕಳಚಲು ಯತ್ನಿಸಿದ್ದರೂ ಅದು ಅತ್ಯಾಚಾರಕ್ಕೆ ಯತ್ನವಲ್ಲ ಎಂದು ಪಾಟ್ನಾ ಹೈಕೋರ್ಟ್ ನೀಡಿದ ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಗಂಭೀರ ಪ್ರಶ್ನೆ ಎತ್ತಿದೆ. ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ನ್ಯಾಯಾಲಯಗಳು ಹೆಚ್ಚು ಸಂವೇದನಾಶೀಲವಾಗಿ ನಡೆದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದ್ದು, ದೇಶದ ಎಲ್ಲಾ ನ್ಯಾಯಾಲಯಗಳಿಗೆ ಹೊಸ ಮಾರ್ಗಸೂಚಿಗಳನ್ನು ಅನುಸರಿಸುವಂತೆ ನಿರ್ದೇಶಿಸಿದೆ.

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಯಶಸ್ವಿ ಪ್ರಯಾಣ ಬೆಳೆಸಿದ ಅನಿಲ್ ಮೆನನ್; ಯಾರಿವರು? ಹಿನ್ನೆಲೆಯೇನು?

ಕೇರಳ ಮೂಲದ ನಾಸಾ ಗಗನಯಾತ್ರಿ ಅನಿಲ್ ಮೆನನ್ ಐಎಸ್ಎಸ್‌ಗೆ ಯಶಸ್ವಿ ಹಾರಾಟ

ಕೇರಳ ಮೂಲದ ನಾಸಾ ಗಗನಯಾತ್ರಿ ಅನಿಲ್ ಮೆನನ್ ಅವರು ಸೊಯುಜ್ MS-29 ಬಾಹ್ಯಾಕಾಶ ನೌಕೆಯಲ್ಲಿ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ISS) ಯಶಸ್ವಿಯಾಗಿ ಪ್ರಯಾಣ ಬೆಳೆಸಿದ್ದಾರೆ. ಅವರ ಸಾಧನೆಗೆ ಕೇರಳ ರಾಜ್ಯಪಾಲ ಮತ್ತು ಮುಖ್ಯಮಂತ್ರಿ ಅಭಿನಂದನೆ ಸಲ್ಲಿಸಿದ್ದು, ಇದು ಕೇರಳದ ಜನರಿಗೆ ಹೆಮ್ಮೆಯ ಕ್ಷಣವಾಗಿದೆ.

Astro Tips: ಆಷಾಢ ಬುಧವಾರ ಈ ಪೂಜೆ ಮಾಡಿದರೆ ಗಣೇಶನ ಕೃಪೆ; ಜೀವನದ ವಿಘ್ನಗಳು ದೂರವಾಗುತ್ತವೆ!

ಆಷಾಢ ಮಾಸದ ಬುಧವಾರ ಶಿವ-ಗಣೇಶ ಆರಾಧನೆಯಿಂದ ಸಿಗಲಿದೆ ಶುಭಫಲ

ಆಷಾಢ ಮಾಸದ ಬುಧವಾರವು ಗಣೇಶ ಹಾಗೂ ಶಿವನ ಆರಾಧನೆಗೆ ಅತ್ಯಂತ ಶುಭಕರವೆಂದು ನಂಬಲಾಗಿದೆ. ಈ ದಿನ ವಿಶೇಷ ಪೂಜೆ, ಅಭಿಷೇಕ, ಮಂತ್ರ ಜಪ ಹಾಗೂ ಧಾರ್ಮಿಕ ಆಚರಣೆಗಳನ್ನು ಭಕ್ತಿಯಿಂದ ಪಾಲಿಸಿದರೆ ವಿಘ್ನಗಳು ದೂರಾಗಿ, ಸುಖ-ಸಮೃದ್ಧಿ, ಯಶಸ್ಸು ಮತ್ತು ಮನೋಕಾಮನೆಗಳ ಈಡೇರಿಕೆ ದೊರೆಯುತ್ತದೆ ಎಂಬ ಧಾರ್ಮಿಕ ನಂಬಿಕೆ ಇದೆ.

ʼʼಇಂಗ್ಲಿಷ್ ವರ್ಣಮಾಲೆ ಗೊತ್ತೆ?ʼʼ: ಸಾರ್ವಜನಿಕ ವೇದಿಕೆಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳನ್ನು ಅವಮಾನಿಸಿದ ಕೇರಳಂ ಮಾಜಿ ಸಚಿವ ಜಲೀಲ್; ಪ್ರಕರಣ ದಾಖಲು

ಮಾಜಿ ಸಚಿವ ಜಲೀಲ್ ವಿರುದ್ಧ ಮಕ್ಕಳ ಹಕ್ಕುಗಳ ಆಯೋಗದಿಂದ ಪ್ರಕರಣ

KT Jaleel: ಪಾಲಕ್ಕಾಡಿನಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಸಾರ್ವಜನಿಕವಾಗಿ ವಿದ್ಯಾರ್ಥಿಗಳನ್ನು ಅವಮಾನಿಸಿದ ಆರೋಪದಡಿ ಕೇರಳಂನ ಮಾಜಿ ಸಚಿವ ಕೆ.ಟಿ. ಜಲೀಲ್ ವಿರುದ್ಧ ರಾಜ್ಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗ ಪ್ರಕರಣ ದಾಖಲಿಸಿದೆ. ತಮ್ಮ ನಡೆಯನ್ನು ಸಮರ್ಥಿಸಿಕೊಂಡ ಜಲೀಲ್, ತಾವು ಶಿಕ್ಷಕರಂತೆ ಮಾತನಾಡಿದ್ದು, ಅವಮಾನಿಸುವ ಉದ್ದೇಶ ಇರಲಿಲ್ಲ ಎಂದಿದ್ದಾರೆ. ಜತೆಗೆ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೇಳಲು ಸಿದ್ಧ ಎಂದು ಹೇಳಿದ್ದಾರೆ.

ವಿಜಯ್‌ ನೇತೃತ್ವದ ತಮಿಳುನಾಡು ಸರ್ಕಾರಕ್ಕೆ ತೀವ್ರ ಮುಜುಗರ; ಟಿವಿಕೆ ಮುಖಂಡನ ವಿರುದ್ಧ ಕೇಳಿಬಂತು ಲೈಂಗಿಕ ಕಿರುಕುಳ ಆರೋಪ

ಟಿವಿಕೆ ಮುಖಂಡನ ವಿರುದ್ಧ ಲೈಂಗಿಕ ಕಿರುಕುಳ ಆರೋಪ

Tamilaga Vettri Kazhagam: ತಮಿಳುನಾಡಿನ ಕರೂರ್ ಜಿಲ್ಲೆಯ ಟಿವಿಕೆ ಪಕ್ಷದ ಮುಖಂಡ ರಮೇಶ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿದೆ. 25 ವರ್ಷದ ವಿವಾಹಿತ ಮಹಿಳೆ ದೂರು ನೀಡಿ, ಮೂರು ತಿಂಗಳಿನಿಂದ ನಿರಂತರ ದೌರ್ಜನ್ಯ ಎಸಗಿದ್ದಲ್ಲೆ ಅಪಹರಿಸಲು ಯತ್ನಿಸಿದ್ದಾನೆ ಎಂದು ಹೇಳಿದ್ದಾರೆ. ಘಟನೆಯ ಬಳಿಕ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಮತ್ತೆ ಹಿಂಸಾಚಾರ: ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ, 6 ನಾಗರಿಕರ ಸಾವು

PoKಯಲ್ಲಿ ಗುಂಡಿನ ದಾಳಿ: 6 ಮಂದಿ ಬಲಿ

Pakistan-occupied Kashmir: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ರಾವಲಕೋಟ್‌ನಲ್ಲಿ ಪ್ರತಿಭಟನಾಕಾರರ ಮೇಲೆ ಪಾಕಿಸ್ತಾನದ ಭದ್ರತಾ ಪಡೆಗಳು ಗುಂಡಿನ ದಾಳಿ ನಡೆಸಿದ್ದು, 6 ಮಂದಿ ನಾಗರಿಕರು ಮೃತಪಟ್ಟಿದ್ದಾರೆ. ಈ ನಡುವೆ ಅಮೆರಿಕದ ವೈಟ್ ಹೌಸ್ ಎದುರು ಪಿಒಕೆ ಮೂಲದ ಜನರು ಪ್ರತಿಭಟನೆ ನಡೆಸಿ ಅಂತಾರಾಷ್ಟ್ರೀಯ ಸಮುದಾಯ ಮಧ್ಯ ಪ್ರವೇಶಿಸುವಂತೆ ಆಗ್ರಹಿಸಿದ್ದಾರೆ. ಘಟನೆಗೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಪಾಕಿಸ್ತಾನ ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತಿದೆ ಎಂದು ಆರೋಪಿಸಿದೆ.

ಭಾರತದಲ್ಲಿ ಅಡಗಿದ್ದ ಅಮೆರಿಕ ಪ್ರಜೆ ನೇಪಾಳಕ್ಕೆ ಪರಾರಿಯಾಗುವಾಗ ಅರೆಸ್ಟ್‌; ಯೋಧ ಎಂದು ಹೇಳಿಕೊಂಡು ಓಡಾಡಿಕೊಂಡಿದ್ದ ಈತನ ಉದ್ದೇಶ ಏನಾಗಿತ್ತು?

ಅಮೆರಿಕ ನೌಕಾಪಡೆಯ ಮಾಜಿ ಯೋಧ ಬಂಧನ

American Detained: ಅಮೆರಿಕದ ನೌಕಾಪಡೆ ಹಾಗೂ ವಿಶೇಷ ಪಡೆಯ ಮಾಜಿ ಯೋಧ ಎಂದು ಹೇಳಿಕೊಂಡಿರುವ ಜೋರ್ಡನ್ ಬ್ರೌನ್‌ನನ್ನು ಉತ್ತರ ಪ್ರದೇಶದ ಸೋನೌಲಿ ಭಾರತ–ನೇಪಾಳ ಗಡಿಯಲ್ಲಿ ಬಂಧಿಸಲಾಗಿದೆ. ಮಾನ್ಯ ದಾಖಲೆಗಳಿಲ್ಲದೆ ನೇಪಾಳ ಪ್ರವೇಶಿಸಲು ಯತ್ನಿಸಿದ ವೇಳೆ ಗಡಿ ಭದ್ರತಾ ಪಡೆ ತಡೆದಿದೆ. ಆತನ ಹೇಳಿಕೆಗಳ ಸತ್ಯಾಸತ್ಯತೆ ಕುರಿತು ತನಿಖೆ ಮುಂದುವರಿದಿದೆ.

Viral Video: ಆಗ್ರಾದಲ್ಲಿ ಫ್ರಿಜ್‌ ಒಳಗೆ ಮೂಡಿ ಬಂದ ಹಿಮ ಶಿವಲಿಂಗ; ದರ್ಶನಕ್ಕೆ ಭಕ್ತರ ದಂಡು

ಫ್ರಿಜ್‌ನಲ್ಲಿ ಮೂಡಿದ ಹಿಮ ಶಿವಲಿಂಗಕ್ಕೆ ಜಲಾಭಿಷೇಕ; ವಿಡಿಯೊ ಇಲ್ಲಿದೆ

Shivling-Like Ice Formation: ಉತ್ತರ ಪ್ರದೇಶದ ಆಗ್ರಾದ ಮನೆಯೊಂದರ ಫ್ರಿಜ್‌ನಲ್ಲಿ ಹಿಮದಿಂದ ಶಿವಲಿಂಗದಂತಿರುವ ಆಕಾರ ಮೂಡಿದ್ದು, ಸ್ಥಳೀಯರು ಇದನ್ನು ಶಿವನ ಕೃಪೆಯ ಸಂಕೇತವೆಂದು ನಂಬಿ ಪೂಜೆ ಸಲ್ಲಿಸಿದ್ದಾರೆ. ಘಟನೆಗೆ ಸಂಬಂಧಿಸಿದ ಫೋಟೊ ಹಾಗೂ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

Astro Tips: ಆಷಾಢದಲ್ಲಿ ತುಳಸಿ ಪೂಜೆ ಹೀಗೆ ಮಾಡಿ; ಮನೆಯಲ್ಲಿ ಸುಖ-ಸಮೃದ್ಧಿ ನೆಲೆಸುತ್ತದೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ

ಆಷಾಢದಲ್ಲಿ ತುಳಸಿಗೆ ಇವುಗಳನ್ನು ಅರ್ಪಿಸಿ..!

ಹಿಂದೂ ಧರ್ಮದಲ್ಲಿ ಆಷಾಢ ಮಾಸದಲ್ಲಿ ತುಳಸಿ ಪೂಜೆಗೆ ವಿಶೇಷ ಮಹತ್ವವಿದೆ. ಈ ಅವಧಿಯಲ್ಲಿ ತುಪ್ಪದ ದೀಪ ಹಚ್ಚುವುದು, ಕೆಂಪು ಚುನರಿ ಅರ್ಪಿಸುವುದು, ಹಳದಿ ದಾರ ಕಟ್ಟುವುದು, ಕೇಸರಿ ಹಾಗೂ ಹಾಲು ಬೆರೆಸಿದ ನೀರನ್ನು ತುಳಸಿಗೆ ಅರ್ಪಿಸುವುದು ಶುಭಕರವೆಂದು ನಂಬಲಾಗಿದೆ. ಈ ಆಚರಣೆಗಳಿಂದ ಮನೆಗೆ ಸುಖ, ಸಮೃದ್ಧಿ, ಸಕಾರಾತ್ಮಕ ಶಕ್ತಿ ಮತ್ತು ಲಕ್ಷ್ಮೀ ಕೃಪೆ ದೊರೆಯುತ್ತದೆ ಎಂಬ ಧಾರ್ಮಿಕ ನಂಬಿಕೆ ಇದೆ.

Vastu Tips: ಸಾಕುಪ್ರಾಣಿಗಳಿಗೂ ವಾಸ್ತು ಇದೆ! ಯಾವ ಪ್ರಾಣಿಗೆ ಯಾವ ದಿಕ್ಕು ಶುಭ ಗೊತ್ತಾ?

ಸಾಕುಪ್ರಾಣಿಗಳಿಗೆ ಈ ದಿಕ್ಕುಗಳು ಶುಭ..!

ಫೆಂಗ್‌ಶೂಯಿ ಹಾಗೂ ವಾಸ್ತುಶಾಸ್ತ್ರದ ಪ್ರಕಾರ ಸಾಕುಪ್ರಾಣಿಗಳ ವಾಸಸ್ಥಳದ ದಿಕ್ಕು ಅವುಗಳ ಆರೋಗ್ಯ ಮತ್ತು ಚೈತನ್ಯದ ಮೇಲೆ ಪರಿಣಾಮ ಬೀರುತ್ತದೆ ಎನ್ನಲಾಗಿದೆ. ನಾಯಿ, ಹಕ್ಕಿ, ಮೀನು ಹಾಗೂ ಹಸುಗಳಿಗೆ ಸೂಕ್ತ ದಿಕ್ಕಿನಲ್ಲಿ ಗೂಡು ಅಥವಾ ವಾಸಸ್ಥಳವನ್ನು ವ್ಯವಸ್ಥೆ ಮಾಡಿದರೆ ಮನೆಯಲ್ಲೂ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ ಎಂಬ ನಂಬಿಕೆಯಿದೆ.

Loading...