ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad
Profile

Sushmitha Jain

[email protected]

Articles
Astro Tips: ದಾರಿದ್ರ್ಯ ಮತ್ತು ಅಡೆತಡೆಗಳಿಂದ ಮುಕ್ತಿ ಬೇಕೇ?; ಹಾಗಾದ್ರೆ ನೀರಿಗೆ ಇವುಗಳನ್ನು ಬೆರಸಿ ಸ್ನಾನ ಮಾಡಿ

ನೀರಿಗೆ ಇವುಗಳನ್ನ ಬೆರಸಿ ಸ್ನಾನ ಮಾಡಿದ್ರೆ ಬದಲಾಗುತ್ತೇ ನಿಮ್ಮ ಲಕ್..!

ಜ್ಯೋತಿಷ್ಯ ನಂಬಿಕೆಗಳ ಪ್ರಕಾರ, ಸ್ನಾನದ ನೀರಿಗೆ ಲವಂಗ, ತುಳಸಿ ಮತ್ತು ಅರಿಶಿನವನ್ನು ಸೇರಿಸಿ ಸ್ನಾನ ಮಾಡಿದರೆ ದಾರಿದ್ರ್ಯ, ಅಡೆತಡೆಗಳು ಮತ್ತು ಗ್ರಹ ದೋಷಗಳು ಕಡಿಮೆಯಾಗುತ್ತವೆ ಎಂದು ಹೇಳಲಾಗುತ್ತದೆ. ಈ ಸರಳ ವಿಧಾನವು ಜೀವನದಲ್ಲಿ ಸಕಾರಾತ್ಮಕ ಶಕ್ತಿ ಮತ್ತು ಶಾಂತಿಯನ್ನು ತರಲು ಸಹಾಯಕವಾಗಿದ್ದು, ಜ್ಯೋತಿಷ್ಯ ಶಾಸ್ತ್ರದಲ್ಲಿ ವಿವರಿಸಲಾಗಿರುವ ಈ ಪರಿಹಾರವನ್ನು ಅನುಸರಿಸುವುದರಿಂದ ಶನಿ ದೋಷವೂ ನಿವಾರಣೆಯಾಗಲಿದೆ.

ಇರಾನ್ ಮಾಜಿ ಸರ್ವಾಧಿಕಾರಿ ಖಮೇನಿ ಭಾರತೀಯ ಮೂಲದವರೆ?  ಭಾರತದ ಈ ಗ್ರಾಮದ ನಂಟು ಬೆಳೆದಿದ್ದೇಗೆ?

ಇರಾನ್ ಮಾಜಿ ಸರ್ವಾಧಿಕಾರಿ ಖಮೇನಿ ಭಾರತೀಯ ಮೂಲದವರೆ?

ಉತ್ತರ ಪ್ರದೇಶದ ಕಿಂತೂರು ಗ್ರಾಮವು ಖೊಮೇನಿ ಅವರ ವಂಶದ ಮೂಲವಾಗಿ ಪ್ರಸಿದ್ಧಿ ಪಡೆದಿದೆ. ಅವರ ಅಜ್ಜ ಸೈಯದ್ ಅಹ್ಮದ್ ಮುಸಾವಿ ಹಿಂದಿ ಭಾರತದಿಂದ ಇರಾನ್‌ಗೆ ವಲಸೆ ಹೋಗಿ ಅಲ್ಲಿ ನೆಲೆಸಿದ ಪರಿಣಾಮ, ಈ ಗ್ರಾಮವು ಭಾರತ ಮತ್ತು ಇರಾನ್ ನಡುವಿನ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಬಾಂಧವ್ಯದ ಪ್ರಮುಖ ಕೊಂಡಿಯಾಗಿ ಇಂದಿಗೂ ಗುರುತಿಸಿಕೊಂಡಿದೆ.

ವಿಮಾನದ ಸೀಟುಗಳಲ್ಲಿ ಮಕ್ಕಳ ರಕ್ತಸಿಕ್ತ ಬ್ಯಾಗ್, ಪುಟ್ಟ ಶೂಗಳು! ಇಸ್ಲಾಮಾಬಾದ್‌ಗೆ  ತೆರಳಿದ ವಿಮಾನದಲ್ಲಿತ್ತು ಕಣ್ಣೀರ ಕಥೆ

ಮಿನಾಬ್ ಸ್ಮರಣೆಯಲ್ಲಿ ಪಾಕ್‌ಗೆ ಹಿಂದಿರುಗಿದ ಇರಾನ್ ನಿಯೋಗ

ಅಮೆರಿಕದೊಂದಿಗೆ ಶಾಂತಿ ಮಾತುಕತೆಗಾಗಿ ಪಾಕಿಸ್ತಾನಕ್ಕೆ ತೆರಳಿದ ಇರಾನ್ ನಿಯೋಗ, ಮಿನಾಬ್ ದಾಳಿಯಲ್ಲಿ ಸಾವನ್ನಪ್ಪಿದ ಮಕ್ಕಳ ನೆನಪಿಗಾಗಿ ರಕ್ತಸಿಕ್ತ ಶಾಲಾ ಬ್ಯಾಗ್‌ಗಳು, ಶೂಗಳು ಮತ್ತು ಚಿತ್ರಗಳನ್ನು ವಿಮಾನದಲ್ಲಿ ತೆಗೆದುಕೊಂಡು ಹೋಗಿ ಜಗತ್ತಿನ ಗಮನ ಸೆಳೆದಿದೆ. ‘Minab168’ ಹೆಸರಿನ ಈ ಸಂಕೇತಾತ್ಮಕ ಕ್ರಮ ಯುದ್ಧದ ಭೀಕರ ಮಾನವೀಯ ನಷ್ಟವನ್ನು ಒತ್ತಿಹೇಳುತ್ತದೆ.

5 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ;  ಗಂಟಲು ಸೀಳಿ ಕೊಂದ ಶಾಲಾ ಹಾಸ್ಟೆಲ್ ಸೆಕ್ಯುರಿಟಿ!

5 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ!

ಬಿಹಾರದ ಜಹಾನಾಬಾದ್ ಜಿಲ್ಲೆಯಲ್ಲಿ ವಸತಿ ಶಾಲೆಯ ಹಾಸ್ಟೆಲ್‌ನಲ್ಲಿ 5 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಹತ್ಯೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಕ್ಯಾಂಟೀನ್ ಕಾವಲುಗಾರನನ್ನು ಪೊಲೀಸರು ಬಂಧಿಸಿದ್ದು, ಆರೋಪಿಯು ತಪ್ಪೊಪ್ಪಿಕೊಂಡಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ, ದೌರ್ಜನ್ಯ ಮತ್ತು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಅತ್ಯಾಚಾರ, ಬಲವಂತದ ಮತಾಂತರ ಆರೋಪ;  ಹೈಕೋರ್ಟ್ ಮೇಲೆ ಹತ್ತಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ

ಕೋರ್ಟ್‌ ಆವರಣದಲ್ಲೇ ಮಹಿಳೆ ಆತ್ಮಹತ್ಯೆ ಯತ್ನ

ಲಕ್ನೋದಲ್ಲಿರುವ ಅಲಹಾಬಾದ್ ಹೈಕೋರ್ಟ್ ಪೀಠದಲ್ಲಿ ಮಹಿಳೆಯೊಬ್ಬರು ಮೇಲ್ಛಾವಣಿ ಹತ್ತಿ ಆತ್ಮಹತ್ಯೆ ಬೆದರಿಕೆ ಹಾಕಿದ ಘಟನೆ ಆತಂಕ ಸೃಷ್ಟಿಸಿದೆ. ಸಾಮೂಹಿಕ ಅತ್ಯಾಚಾರ ಮತ್ತು ಬಲವಂತದ ಮತಾಂತರದ ಆರೋಪಗಳ ಹಿನ್ನೆಲೆಯಲ್ಲಿ ಒತ್ತಡ ಎದುರಿಸುತ್ತಿದ್ದ ಮಹಿಳೆ ಈ ಕ್ರಮಕ್ಕೆ ಮುಂದಾಗಿದ್ದು, ಬಳಿಕ ಅಧಿಕಾರಿಗಳು ಮತ್ತು ವಕೀಲರ ಮಧ್ಯಪ್ರವೇಶದಿಂದ ಮಹಿಳೆ ಮತ್ತು ಮಗುವನ್ನು ಸುರಕ್ಷಿತವಾಗಿ ರಕ್ಷಿಸಲಾಯಿತು. ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಉಜ್ಜಯಿನಿ ದುರಂತ: ಫಲಿಸಲಿಲ್ಲ ಪ್ರಾರ್ಥನೆ, ಬೋರ್‌ವೆಲ್‌ಗೆ ಬಿದ್ದ ಬಾಲಕ ಸಾವು

ಉಜ್ಜಯಿನಿ ಬೋರ್‌ವೆಲ್ ದುರಂತ: ಬಾಲಕ ಸಾವು

ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಕೊಳವೆ ಬಾವಿಗೆ ಬಿದ್ದ 2.5 ವರ್ಷದ ಬಾಲಕ ಭಗೀರಥ್, 23 ಗಂಟೆಗಳ ಕಠಿಣ ರಕ್ಷಣಾ ಕಾರ್ಯಾಚರಣೆಯ ಬಳಿಕ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ದುರ್ಘಟನೆ ನಡೆದಿದೆ. SDRF ಮತ್ತು NDRF ತಂಡಗಳು ತೀವ್ರ ಪ್ರಯತ್ನ ನಡೆಸಿದರೂ ಮಗುವನ್ನು ಉಳಿಸಲು ಸಾಧ್ಯವಾಗಲಿಲ್ಲ. ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಸಂತಾಪ ಸೂಚಿಸಿ, ಕುಟುಂಬಕ್ಕೆ 4 ಲಕ್ಷ ಪರಿಹಾರ ಘೋಷಿಸಿದ್ದಾರೆ.

Vastu Tips: ವಾಸ್ತು ಪ್ರಕಾರ ಮನೆಯ ಯಾವ ಕೋಣೆಗೆ ಯಾವ ಬಣ್ಣ ಸೂಕ್ತ? ಇಲ್ಲಿದೆ ಉತ್ತರ

ಮನೆಯ ಯಾವ ಕೋಣೆಗೆ ಯಾವ ಬಣ್ಣ ಶುಭ?

ವಾಸ್ತು ಶಾಸ್ತ್ರದಲ್ಲಿ ಬಣ್ಣಗಳಿಗೆ ವಿಶೇಷ ಮಹತ್ವವಿದೆ. ಮನೆಗೆ ಸರಿಯಾದ ಬಣ್ಣಗಳನ್ನು ಆಯ್ಕೆ ಮಾಡಿದರೆ ಧನಾತ್ಮಕ ಶಕ್ತಿ ಹೆಚ್ಚಾಗಿ, ಜೀವನದಲ್ಲಿ ಶಾಂತಿ ಮತ್ತು ಸಂತೋಷ ಬರುತ್ತದೆ. ಮಲಗುವ ಕೋಣೆ, ಹಾಲ್, ಅಡುಗೆ ಮನೆ ಸೇರಿದಂತೆ ಪ್ರತಿಯೊಂದು ಕೋಣೆಗೆ ವಿಭಿನ್ನ ಬಣ್ಣಗಳನ್ನು ಬಳಸುವುದು ಉತ್ತಮ ಎಂದು ವಾಸ್ತು ಹೇಳುತ್ತದೆ.

ಅಮೆರಿಕ-ಇರಾನ್ ಶಾಂತಿ ಒಪ್ಪಂದ: ಸಂಧಾನಕಾರನಾಗಿ ಪಾಕಿಸ್ತಾನದ ಪಾತ್ರ ಅನಿವಾರ್ಯತೆಯೇ ಅಥವಾ ಆಯ್ಕೆಯೇ?

ಅಮೆರಿಕ-ಇರಾನ್ ಶಾಂತಿ ಒಪ್ಪಂದ: ಪಾಕಿಸ್ತಾನದ ಪಾತ್ರವೇನು..?

ಅಮೆರಿಕ-ಇರಾನ್ ನಡುವಿನ ಕದನ ವಿರಾಮದಲ್ಲಿ ಪಾಕಿಸ್ತಾನದ ಪಾತ್ರ ಮಹತ್ವ ಪಡೆದಿದೆ. ಆರ್ಥಿಕ ಸಂಕಷ್ಟ, ತೈಲದ ಅವಲಂಬನೆ ಮತ್ತು ಜಾಗತಿಕ ಒತ್ತಡಗಳಿಂದಾಗಿ ಪಾಕಿಸ್ತಾನ ಮಧ್ಯಸ್ಥಿಕೆ ವಹಿಸಬೇಕಾದ ಪರಿಸ್ಥಿತಿ ಉಂಟಾಯಿತು. ಈ ಸಂಧಾನವು ರಾಜತಾಂತ್ರಿಕ ಯಶಸ್ಸಾ ಅಥವಾ ಕೇವಲ ರಾಜಕೀಯ ಅವಶ್ಯಕತೆಯ ಫಲವೋ ಎಂಬ ಚರ್ಚೆ ಮುಂದುವರಿದಿದೆ.

ಸಾಮ್ರಾಟ್ ಚೌಧರಿ ಬಿಹಾರದ ಮುಂದಿನ ಸಿಎಂ?: ನಿತೀಶ್ ಕುಮಾರ್ ರಾಜೀನಾಮೆ ಸಾಧ್ಯತೆ

ಬಿಹಾರದಲ್ಲಿ ನಿತೀಶ್ ಯುಗ ಅಂತ್ಯ?

ಬಿಹಾರದಲ್ಲಿ ದೀರ್ಘಕಾಲ ಪ್ರಭಾವ ಹೊಂದಿದ್ದ ನಿತೀಶ್ ಕುಮಾರ್ ಅವರ ಆಡಳಿತ ಅಂತ್ಯಗೊಳ್ಳುವ ಸೂಚನೆಗಳು ಸ್ಪಷ್ಟವಾಗುತ್ತಿವೆ. ಅವರು ದೆಹಲಿಗೆ ತೆರಳಿರುವುದು ಮತ್ತು ಏಪ್ರಿಲ್ 14ರಂದು ಎನ್‌ಡಿಎ ಸಭೆಯ ನಂತರ ರಾಜೀನಾಮೆ ನೀಡುವ ಸಾಧ್ಯತೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಮುಂದಿನ ಮುಖ್ಯಮಂತ್ರಿ ಸ್ಥಾನಕ್ಕೆ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಹೆಸರು ಮುಂಚೂಣಿಯಲ್ಲಿದೆ. ಈ ಬೆಳವಣಿಗೆಯನ್ನು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ತೀವ್ರವಾಗಿ ಟೀಕಿಸಿದ್ದು, ಬಿಜೆಪಿ ಒತ್ತಡದ ಆರೋಪ ಮಾಡಿದ್ದಾರೆ. ನಿತೀಶ್ ಕುಮಾರ್ ಅವರ ದೆಹಲಿ ರಾಜಕೀಯ ಪ್ರವೇಶದಿಂದ ಬಿಹಾರದಲ್ಲಿ ಹೊಸ ರಾಜಕೀಯ ಸಮೀಕರಣಗಳು ಮೂಡುವ ಸಾಧ್ಯತೆ ಹೆಚ್ಚಾಗಿದೆ.

ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಬೋರ್‌ವೆಲ್‌ಗೆ ಬಿದ್ದ ಎರಡೂವರೆ ವರ್ಷದ ಬಾಲಕ: ರಕ್ಷಣಾ ಕಾರ್ಯಾಚರಣೆ ಚುರುಕು

ಬೋರ್‌ವೆಲ್‌ಗೆ ಬಿದ್ದ 2.5 ವರ್ಷದ ಬಾಲಕ..!

ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ 2.5 ವರ್ಷದ ಬಾಲಕ ಬೋರ್‌ವೆಲ್‌ಗೆ ಬಿದ್ದು ಸುಮಾರು 70 ಅಡಿ ಆಳದಲ್ಲಿ ಸಿಲುಕಿದ್ದಾನೆ. SDRF, ಪೊಲೀಸರು ಮತ್ತು ಸ್ಥಳೀಯರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಆಮ್ಲಜನಕ ಪೂರೈಕೆ ಹಾಗೂ ಸುರಂಗ ತೋಡುವ ಕಾರ್ಯ ಮುಂದುವರಿದಿದೆ.

ಡಿಜಿಟಲ್‌ ಅರೆಸ್ಟ್‌ ಆಗಿದ್ದ ತಂದೆ ತಾಯಿಯನ್ನು ರಕ್ಷಿಸಿದ 8 ನೇ ತರಗತಿ ಬಾಲಕ!

‘ಡಿಜಿಟಲ್ ಅರೆಸ್ಟ್’: ಬಾಲಕನ ಚಾಣಾಕ್ಷತನದಿಂದ ತಪ್ಪಿದ ದೊಡ್ಡ ವಂಚನೆ

ಉತ್ತರ ಪ್ರದೇಶದ ಬರೇಲಿಯಲ್ಲಿ ಸೈಬರ್ ವಂಚಕರು ‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ ದಂಪತಿಯನ್ನು 10 ಗಂಟೆಗಳ ಕಾಲ ವಿಡಿಯೋ ಕಾಲ್ ಮೂಲಕ ಒತ್ತೆಯಾಳಾಗಿಟ್ಟಿದ್ದರು. ಈ ವೇಳೆ ಅವರ 8ನೇ ತರಗತಿ ಓದುತ್ತಿರುವ ಮಗ ಸಮಯಪ್ರಜ್ಞೆ ತೋರಿಸಿ ಫೋನ್ ಅನ್ನು ಫ್ಲೈಟ್ ಮೋಡ್‌ಗೆ ಹಾಕಿ ವಂಚಕರ ಸಂಪರ್ಕ ಕಡಿತಗೊಳಿಸಿ ಪೋಷಕರನ್ನು ರಕ್ಷಿಸಿದ್ದಾನೆ.

Astro Tips: ಶುಕ್ರವಾರ ಒಂದು ರೂಪಾಯಿ ನಾಣ್ಯದಿಂದ ಮಾಡುವ ಈ ಒಂದು ಆಚರಣೆ ನಿಮ್ಮ ಅದೃಷ್ಟವನ್ನೇ ಬದಲಾಯಿಸುತ್ತೆ!

ಲಕ್ಷ್ಮೀದೇವಿಯ ಆಶೀರ್ವಾದಕ್ಕಾಗಿ ಶುಕ್ರವಾರ ಯಾವ ಮಂತ್ರ ಜಪಿಸಬೇಕು?

ಶುಕ್ರವಾರ ಲಕ್ಷ್ಮಿ ದೇವಿ ಪೂಜೆಗೆ ಅತ್ಯಂತ ಶುಭ ದಿನವಾಗಿದ್ದು, ಈ ದಿನ ಭಕ್ತಿಯಿಂದ ಪೂಜೆ, ಸಣ್ಣ ಕ್ರಮಗಳು ಮತ್ತು ಮಂತ್ರ ಜಪ ಮಾಡಿದರೆ ಧನಾಗಮನ, ಸಂಪತ್ತು ವೃದ್ಧಿ ಹಾಗೂ ಅದೃಷ್ಟ ಹೆಚ್ಚಾಗುತ್ತದೆ. ಹಾಗಾಗಿ ಶುಕ್ರವಾರ ಯಾವ ಕೆಲಸಗಳನ್ನು ಮಾಡಬೇಕು? ಯಾವ ಮಂತ್ರ ಪಠಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ.

ಅಮೆರಿಕದಿಂದ ಮೂರು ನಿಯಮಗಳ ಉಲ್ಲಂಘನೆ: ಕದನ ವಿರಾಮ ಮಾತುಕತೆ ಅಸಮಂಜಸ ಎಂದ ಇರಾನ್

ಅಮೆರಿಕ ನಿಯಮ ಉಲ್ಲಂಘನೆ; ಕದನ ವಿರಾಮ ಅಸಮಂಜಸ ಎಂದ ಇರಾನ್

ಮೊಹಮ್ಮದ್ ಬಾಗರ್ ಘಾಲಿಬಾಫ್ ಅವರು ಅಮೆರಿಕದೊಂದಿಗೆ ನಡೆಯುತ್ತಿರುವ ಕದನ ವಿರಾಮ ಮತ್ತು ಮಾತುಕತೆಗಳನ್ನು “ಅಸಮಂಜಸ” ಎಂದು ಕರೆದಿದ್ದಾರೆ. ಇಸ್ರೇಲ್‌ನ ಲೆಬನಾನ್ ಮೇಲಿನ ದಾಳಿ, ಅಮೆರಿಕದ ಡ್ರೋನ್ ಪ್ರವೇಶ ಮತ್ತು ಯುರೇನಿಯಂ ಪುಷ್ಟೀಕರಣ ವಿಚಾರದಲ್ಲಿ ಅಮೆರಿಕದ ನಿರಾಕರಣೆಗಳನ್ನು ಅವರು ಉಲ್ಲಂಘನೆ ಎಂದು ಆರೋಪಿಸಿದ್ದಾರೆ. ಡೊನಾಲ್ಡ್ ಟ್ರಂಪ್ ಇದನ್ನು ಪ್ರತ್ಯೇಕ ವಿಷಯ ಎಂದು ಹೇಳಿದರೆ, ಬೆಂಜಮಿನ್ ನೆತನ್ಯಾಹು ಲೆಬನಾನ್‌ನಲ್ಲಿ ಸೈನಿಕ ಕ್ರಮ ಮುಂದುವರಿಸುವುದಾಗಿ ಹೇಳಿದ್ದಾರೆ. ಈ ಭಿನ್ನಾಭಿಪ್ರಾಯಗಳು ಶಾಂತಿ ಪ್ರಕ್ರಿಯೆಗೆ ಅಡ್ಡಿಯಾಗುತ್ತಿವೆ.

DCC Bank Recruitment: ಬಳ್ಳಾರಿ ಡಿಸಿಸಿ ಬ್ಯಾಂಕ್ ನೇಮಕಾತಿ; 10th, PU ಆದವರಿಗೆ ಉದ್ಯೋಗ, ಆಸಕ್ತರು ಅರ್ಜಿ ಹಾಕಿ

ಬ್ಯಾಂಕ್ ಉದ್ಯೋಗಾವಕಾಶ; 82 ಹುದ್ದೆಗಳಿಗೆ ಅರ್ಜಿ ಆಹ್ವಾನ

Ballari DCC Bankವು ಒಟ್ಟು 82 ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಿದೆ. ವ್ಯವಸ್ಥಾಪಕ, ಪ್ರಥಮ ಹಾಗೂ ದ್ವಿತೀಯ ದರ್ಜೆ ಸಹಾಯಕರು, ವಾಹನ ಚಾಲಕರು ಮತ್ತು ಕಿರಿಯ ಸೇವಕರ ಹುದ್ದೆಗಳು ಲಭ್ಯವಿವೆ. ಪದವಿ, PUC ಹಾಗೂ SSLC ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಪ್ರಕ್ರಿಯೆ ಆನ್‌ಲೈನ್ ಮೂಲಕ ಏಪ್ರಿಲ್ 6ರಿಂದ ಆರಂಭವಾಗಿ ಮೇ 6ರವರೆಗೆ ನಡೆಯಲಿದೆ. ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ. ಬ್ಯಾಂಕ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಇದು ಉತ್ತಮ ಅವಕಾಶವಾಗಿದೆ.

ಅಮೆರಿಕ-ಇರಾನ್ ಕದನ ವಿರಾಮ: ಪಾಕಿಸ್ತಾನದ ಪಾತ್ರ ಕೇವಲ 'ಪೋಸ್ಟ್ ಮ್ಯಾನ್' ಕೆಲಸವೇ ಅಥವಾ ನಿಜವಾದ ಸಂಧಾನಕಾರನೇ?

ಅಮೆರಿಕ–ಇರಾನ್ ಕದನ ವಿರಾಮ: ಚೀನಾದ ಪಾತ್ರವೇನು..?

ಅಮೆರಿಕ ಮತ್ತು ಇರಾನ್ ನಡುವೆ ನಡೆದಿರುವ ಎರಡು ವಾರಗಳ ಕದನ ವಿರಾಮದಲ್ಲಿ ಪಾಕಿಸ್ತಾನವು ಪ್ರಮುಖ ಸಂಧಾನಕಾರನಾಗಿ ಹೇಳಿಕೊಳ್ಳುತ್ತಿದ್ದರೂ, ತಜ್ಞರ ಪ್ರಕಾರ ಅದು ಕೇವಲ ‘ಸಂದೇಶವಾಹಕ’ ಪಾತ್ರದಲ್ಲೇ ಸೀಮಿತವಾಗಿದೆ. ನಿಜವಾದ ಒತ್ತಡ ಮತ್ತು ಪ್ರಭಾವ ಚೀನಾದಿಂದ ಬಂದಿದೆ, ಏಕೆಂದರೆ ಹಾರ್ಮುಜ್ ಜಲಸಂಧಿ ಮುಚ್ಚುವಿಕೆಯು ಅದರ ಆರ್ಥಿಕ ಹಿತಾಸಕ್ತಿಗೆ ಹೊಡೆತ ನೀಡಿತ್ತು. ಪಾಕಿಸ್ತಾನ ತನ್ನ ಆರ್ಥಿಕ ಸಂಕಷ್ಟದಿಂದ ಹೊರಬರಲು ಈ ಅವಕಾಶವನ್ನು ಬಳಸಿಕೊಳ್ಳುತ್ತಿದೆ ಎಂಬ ವಿಶ್ಲೇಷಣೆ ಕೂಡ ಇದೆ. ಒಟ್ಟಿನಲ್ಲಿ, ಈ ಕದನ ವಿರಾಮದಲ್ಲಿ ಪಾಕಿಸ್ತಾನದ ಪಾತ್ರ ಸೀಮಿತವಾಗಿದ್ದು, ಭವಿಷ್ಯದಲ್ಲಿ ಪರಿಸ್ಥಿತಿಯನ್ನು ನಿಭಾಯಿಸುವ ಸಾಮರ್ಥ್ಯವೂ ಅದರ ಬಳಿ ಇಲ್ಲ ಎಂಬ ಆತಂಕ ವ್ಯಕ್ತವಾಗಿದೆ.

Astro Tips: ಮನೆ ಬಾಗಿಲಿಗೆ ಹಸು ಬಂದು ನಿಂತರೆ ಏನರ್ಥ? ಈ ಸೂಚನೆಗಳು ಕಂಡುಬಂದರೆ ನಿಮ್ಮ ಲಕ್ ಬದಲಾಗಲಿದೆ!

ಈ ಸೂಚನೆಗಳು ಕಂಡರೆ ಹಣ, ಐಶ್ವರ್ಯ ನಿಮ್ಮದಾಗುತ್ತದೆ

ಜೀವನದಲ್ಲಿ ಕಾಣಿಸುವ ಕೆಲವು ಸಣ್ಣ ಘಟನೆಗಳು ಧಾರ್ಮಿಕ ನಂಬಿಕೆಗಳ ಪ್ರಕಾರ ದೊಡ್ಡ ಶುಭ ಸೂಚನೆಗಳಾಗಿರುತ್ತವೆ. ಹಸು ಮನೆಗೆ ಬರುವುದು, ಇರುವೆಗಳು ಅಕ್ಕಿ ಹೊತ್ತುಕೊಂಡು ಹೋಗುವುದು, ಗಿಳಿಯ ಆಗಮನ, ಹಲ್ಲಿ ಬೀಳುವುದು ಎಲ್ಲವೂ ನಿಮ್ಮ ಜೀವನದಲ್ಲಿ ಹಣ, ಐಶ್ವರ್ಯ ಮತ್ತು ಅದೃಷ್ಟ ಹೆಚ್ಚಾಗಲಿರುವ ಸಂಕೇತಗಳೆಂದು ನಂಬಲಾಗುತ್ತದೆ.

Vastu Tips: ಕಚೇರಿಯಲ್ಲಿ ನೀರಿನ ಬಾಟಲಿ ಯಾವ ದಿಕ್ಕಿನಲ್ಲಿ ಇಡಬೇಕು? ವಾಸ್ತು ಪ್ರಕಾರ ಈ ತಪ್ಪುಗಳು ನಿಮ್ಮ ಪ್ರಗತಿಗೆ ಅಡ್ಡಿಯಾಗಬಹುದು!

ಕಚೇರಿಯಲ್ಲಿ ನೀರು ಇಡುವ ಸರಿಯಾದ ದಿಕ್ಕು ಯಾವುದು ಗೊತ್ತಾ?

ಕಚೇರಿಯಲ್ಲಿ ನೀರನ್ನು ಸರಿಯಾದ ದಿಕ್ಕಿನಲ್ಲಿ ಇಡುವುದು ವಾಸ್ತು ಪ್ರಕಾರ ಅತ್ಯಂತ ಮುಖ್ಯ. ಈಶಾನ್ಯ ದಿಕ್ಕು ಅತ್ಯುತ್ತಮವಾಗಿದ್ದು, ಉತ್ತರ ದಿಕ್ಕು ಪರ್ಯಾಯವಾಗಿದೆ. ತಪ್ಪು ದಿಕ್ಕಿನಲ್ಲಿ ನೀರು ಇಡುವುದರಿಂದ ಕೆಲಸಗಳಲ್ಲಿ ಅಡೆತಡೆಗಳು ಮತ್ತು ಆರ್ಥಿಕ ಸಮಸ್ಯೆಗಳು ಉಂಟಾಗಬಹುದು. ಸರಿಯಾದ ವಿಧಾನ ಮತ್ತು ಸ್ವಚ್ಛತೆಯನ್ನು ಪಾಲಿಸಿದರೆ ಸಕಾರಾತ್ಮಕ ಶಕ್ತಿ ಮತ್ತು ಉದ್ಯೋಗದಲ್ಲಿ ಬೆಳವಣಿಗೆ ಸಾಧ್ಯ ಎನ್ನುತ್ತದೆ ವಾಸ್ತು ಶಾಸ್ತ್ರ.

ಇರಾನ್ ಯುದ್ಧ ಕದನ ವಿರಾಮ: ಹಾರ್ಮುಜ್ ಜಲಸಂಧಿಯಲ್ಲಿ ಸಿಲುಕಿರುವ ಭಾರತದ ತೈಲ, ಅನಿಲದ ಲೆಕ್ಕಾಚಾರ

ಹಾರ್ಮುಜ್‌ನಲ್ಲಿ ಬಾಕಿಯಾದ ಭಾರತ ಹಡಗುಗಳು

ಇರಾನ್-ಅಮೆರಿಕ ಕದನ ವಿರಾಮದ ನಂತರ ಹಾರ್ಮುಜ್ ಜಲಸಂಧಿ ಭಾಗಶಃ ತೆರೆಯಲ್ಪಟ್ಟರೂ, ಭಾರತದ ಹಲವಾರು ತೈಲ ಮತ್ತು ಎಲ್‌ಪಿಜಿ ಹಡಗುಗಳು ಇನ್ನೂ ಸಿಲುಕಿಕೊಂಡಿವೆ. ಸುಮಾರು 68,000 ಮೆಟ್ರಿಕ್ ಟನ್ ಎಲ್‌ಪಿಜಿ ಮತ್ತು 4.23 ಲಕ್ಷ ಮೆಟ್ರಿಕ್ ಟನ್ ಕಚ್ಚಾ ತೈಲ ಸಾಗಣೆ ವಿಳಂಬವಾಗಿದ್ದು, ಸರ್ಕಾರ ಹಡಗುಗಳನ್ನು ಸುರಕ್ಷಿತವಾಗಿ ಹೊರತೆಗೆದಲು ಪ್ರಯತ್ನಿಸುತ್ತಿದೆ.

ಏಳು ವರ್ಷಗಳ ನಂತರ ಇರಾನ್‌ನಿಂದ ಭಾರತಕ್ಕೆ ತೈಲ ಆಮದು ಆರಂಭ: ಚೀನಾದತ್ತ ಸಾಗುತ್ತಿದ್ದ ಹಡಗು ಭಾರತದತ್ತ ಪ್ರಯಾಣ

7 ವರ್ಷಗಳ ಬಳಿಕ ಇರಾನ್ ತೈಲ ಭಾರತಕ್ಕೆ..!

7 ವರ್ಷಗಳ ವಿರಾಮದ ನಂತರ ಭಾರತವು ಇರಾನ್‌ನಿಂದ ಕಚ್ಚಾ ತೈಲವನ್ನು ಮರು ಆಮದು ಮಾಡಿಕೊಳ್ಳುತ್ತಿದೆ. ಅಮೆರಿಕದ ನಿರ್ಬಂಧಗಳಲ್ಲಿ ತಾತ್ಕಾಲಿಕ ಸಡಿಲಿಕೆ ಹಾಗೂ ಜಾಗತಿಕ ಪೂರೈಕೆ ಸಮಸ್ಯೆಗಳ ನಡುವೆ ಈ ಬೆಳವಣಿಗೆ ಸಂಭವಿಸಿದೆ. ಇಂಡಿಯನ್ ಆಯಿಲ್ ಖರೀದಿಸಿದ ತೈಲ ಸಾಗಿಸುತ್ತಿದ್ದ ಹಡಗು ದಿಕ್ಕು ಬದಲಿಸಿ ಭಾರತದತ್ತ ಬರುತ್ತಿದೆ. ಇದು ಭಾರತದ ಇಂಧನ ಭದ್ರತೆಗೆ ಮಹತ್ವದ ಹೆಜ್ಜೆಯಾಗಿದೆ.

''ಇರಾನ್‌ನಿಂದ ಕೂಡಲೇ ನಿರ್ಗಮಿಸಿ'': ಕದನ ವಿರಾಮದ ಬೆನ್ನಲ್ಲೇ ಭಾರತೀಯರಿಗೆ ರಾಯಭಾರ ಕಚೇರಿ ಸೂಚನೆ

ಇರಾನ್‌ನಿಂದ ತಕ್ಷಣ ಹೊರಬನ್ನಿ: ಭಾರತೀಯರಿಗೆ ರಾಯಭಾರ ಕಚೇರಿಯ ಸೂಚನೆ

ಅಮೆರಿಕ-ಇರಾನ್ ನಡುವೆ ಎರಡು ವಾರಗಳ ಕದನ ವಿರಾಮ ಘೋಷಣೆಯಾಗಿದೆ. ಇದರ ಬೆನ್ನಲ್ಲೇ ಇರಾನ್‌ನಲ್ಲಿ ಇರುವ ಭಾರತೀಯರಿಗೆ ತಕ್ಷಣ ದೇಶ ತೊರೆಯುವಂತೆ ಭಾರತೀಯ ರಾಯಭಾರ ಕಚೇರಿ ಸೂಚನೆ ನೀಡಿದೆ. ಭದ್ರತಾ ಪರಿಸ್ಥಿತಿ ಇನ್ನೂ ಅನಿಶ್ಚಿತವಾಗಿರುವುದರಿಂದ, ರಾಯಭಾರ ಕಚೇರಿಯ ಮಾರ್ಗದರ್ಶನದಲ್ಲಿ ಸುರಕ್ಷಿತವಾಗಿ ಹೊರಬರಲು ಸೂಚಿಸಲಾಗಿದೆ. ಸುಮಾರು 7,500 ಭಾರತೀಯರು ಇನ್ನೂ ಇರಾನ್‌ನಲ್ಲಿದ್ದಾರೆ. ಕದನ ವಿರಾಮದ ಅವಧಿಯಲ್ಲಿ ಸುರಕ್ಷಿತವಾಗಿ ನಿರ್ಗಮಿಸಲು ಭಾರತ ಸರ್ಕಾರ ತುರ್ತು ಕ್ರಮ ಕೈಗೊಂಡಿದೆ.

"ಕದನ ವಿರಾಮದಲ್ಲಿ ಲೆಬನಾನ್ ಸೇರಿಲ್ಲ": ಶೆಹಬಾಜ್ ಷರೀಫ್ ಹೇಳಿಕೆ ಅಲ್ಲಗಳೆದ ನೆತನ್ಯಾಹು

ಇರಾನ್ ಮೇಲಿನ ದಾಳಿಗೆ 2 ವಾರ ವಿರಾಮ; ಲೆಬನಾನ್‌ ಒಳಗೊಂಡಿಲ್ಲ ಎಂದ ಇಸ್ರೇಲ್‌

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಮೇಲಿನ ದಾಳಿಗಳನ್ನು ಎರಡು ವಾರಗಳ ಕಾಲ ಸ್ಥಗಿತಗೊಳಿಸುವ ನಿರ್ಧಾರ ತೆಗೆದುಕೊಂಡಿದ್ದು, ಇದನ್ನು ಇಸ್ರೇಲ್ ಬೆಂಬಲಿಸಿದೆ. ಆದರೆ ಈ ಕದನ ವಿರಾಮವು ಲೆಬನಾನ್‌ಗೆ ಅನ್ವಯಿಸುವುದಿಲ್ಲ ಎಂದು ಇಸ್ರೇಲ್‌ ಪ್ರಧಾನಿ ನೆತನ್ಯಾಹು ಸ್ಪಷ್ಟಪಡಿಸಿದ್ದಾರೆ. ಇದರಿಂದ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಹೇಳಿಕೆಯಲ್ಲಿ ವೈರು‍ಧ್ಯ ಕಾಣಿಸಿಕೊಂಡಿದೆ. ಅಮೆರಿಕ-ಇರಾನ್ ಮಾತುಕತೆಗಳು ಮುಂದುವರಿಯುತ್ತಿದ್ದು, ಮಧ್ಯಪ್ರಾಚ್ಯ ಸಂಘರ್ಷದಲ್ಲಿ ಮಹತ್ವದ ಬೆಳವಣಿಗೆ ಆಗಿದೆ.

Astro Tips: ಬುಧವಾರ ಈ ಬಣ್ಣದ ಬಟ್ಟೆ ಧರಿಸಿದರೆ ಏನು ಲಾಭ? ಈ ಸರಳ ನಿಯಮಗಳು ನಿಮ್ಮ ಅದೃಷ್ಟ ಬದಲಾಯಿಸಬಹುದು!

ಬುಧವಾರ ಹಸಿರು ಬಟ್ಟೆ ಧರಿಸಿದರೆ ಅದೃಷ್ಟ ಬದಲಾಗುತ್ತಾ?

ಬುಧವಾರದಂದು ಹಸಿರು ಬಟ್ಟೆಗಳನ್ನು ಧರಿಸುವುದು ಹಾಗೂ ಗಣೇಶ ಪೂಜೆ ಮಾಡುವುದು ಶುಭಕರ ಎಂದು ನಂಬಲಾಗುತ್ತದೆ. ಇದು ಬುಧ ಗ್ರಹವನ್ನು ಬಲಪಡಿಸಿ, ಜೀವನದಲ್ಲಿ ಸಮೃದ್ಧಿ ಮತ್ತು ವ್ಯವಹಾರದಲ್ಲಿ ಪ್ರಗತಿಯನ್ನು ತರುತ್ತದೆ. ಈ ದಿನ ದಾನಧರ್ಮ ಹಾಗೂ ಮಂತ್ರಜಪ ಮಾಡುವುದರಿಂದ ಅಡೆತಡೆಗಳು ನಿವಾರಣೆಯಾಗುತ್ತವೆ.

ತಮಿಳುನಾಡಿನಲ್ಲಿ ಈ ಬಾರಿ ಎಐಎಡಿಎಂಕೆಯತ್ತ ಮತದಾರರ ಚಿತ್ತ; ಚುನಾವಣಾ ಪೂರ್ವ ಸಮೀಕ್ಷೆ ಹೇಳಿದ್ದೇನು?

ತಮಿಳುನಾಡು ಚುನಾವಣೆ ಸಮೀಕ್ಷೆ: ಎಐಎಡಿಎಂಕೆ ಮುನ್ನಡೆ

ಸಿಎನ್ಎನ್ ನ್ಯೂಸ್ 18 ಸಮೀಕ್ಷೆಯ ಪ್ರಕಾರ ತಮಿಳುನಾಡು ಚುನಾವಣೆಯಲ್ಲಿ ಎಐಎಡಿಎಂಕೆ ಮುನ್ನಡೆ ಸಾಧಿಸಲಿದೆ. ಆಡಳಿತರೂಢ ಡಿಎಂಕೆಗೆ ಹಿನ್ನಡೆ ಸಂಭವಿಸುವ ಸಾಧ್ಯತೆಯಿದ್ದು, ಮತದಾರರ ಒಲವು ಎಐಎಡಿಎಂಕೆ ಕಡೆ ಹೆಚ್ಚುತ್ತಿದೆ. ಸೀಟುಗಳ ಅಂದಾಜು ಪ್ರಕಾರ ಎಐಎಡಿಎಂಕೆ ಸ್ಪಷ್ಟ ಬಹುಮತ ಪಡೆಯುವ ಸಾಧ್ಯತೆ ಇದೆ.

Dhaka-Delhi Reset: ಭಾರತಕ್ಕೆ ಭೇಟಿ ನೀಡಿದ ಬಾಂಗ್ಲಾದೇಶ ವಿದೇಶಾಂಗ ಸಚಿವ; ಎರಡು ದೇಶಗಳ ಸಂಬಂಧ ಮತ್ತೆ ವೃದ್ಧಿಸುತ್ತ?

ಬಾಂಗ್ಲಾದೇಶ ವಿದೇಶಾಂಗ ಸಚಿವ ಭಾರತಕ್ಕೆ ಭೇಟಿ

ಬಾಂಗ್ಲಾದೇಶದ ವಿದೇಶಾಂಗ ಸಚಿವ ಡಾ. ಖಲೀಲೂರ್ ರೆಹಮಾನ್ ಏಪ್ರಿಲ್ 7ರಿಂದ 9ರವರೆಗೆ ಭಾರತ ಪ್ರವಾಸ ಕೈಗೊಂಡಿದ್ದಾರೆ. ಇದು ಬಾಂಗ್ಲಾದೇಶದಲ್ಲಿ ಹೊಸ ಸರ್ಕಾರ ರಚನೆಯಾದ ಬಳಿಕ ನಡೆಯುತ್ತಿರುವ ಮೊದಲ ಉನ್ನತ ಮಟ್ಟದ ರಾಜತಾಂತ್ರಿಕ ಮಾತುಕತೆ. ನದಿ ನೀರು ಹಂಚಿಕೆ, ಗಡಿ ನಿರ್ವಹಣೆ, ಇಂಧನ ಸಹಕಾರ, ವೀಸಾ ಸೇವೆಗಳು ಸೇರಿಹಲವು ಪ್ರಮುಖ ವಿಷಯಗಳು ಚರ್ಚೆಗೆ ಬರಲಿದ್ದು, ಉಭಯ ದೇಶಗಳ ಸಂಬಂಧಗಳಿಗೆ ಹೊಸ ದಿಕ್ಕು ನೀಡುವ ನಿರೀಕ್ಷೆಯಿದೆ.

Loading...