ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad
Profile

Sushmitha Jain

[email protected]

Articles
ಅಸ್ಸಾಂ ವಿಧಾನಸಭಾ ಚುನಾವಣೆ: ಕಾಂಗ್ರೆಸ್‌ನಿಂದ ಗೆದ್ದ 19 ಶಾಸಕರಲ್ಲಿ 18 ಮಂದಿ ಮುಸ್ಲಿಮರು!

ಅಸ್ಸಾಂನಲ್ಲಿ ಕಾಂಗ್ರೆಸ್‌ನಿಂದ ಗೆದ್ದ 19 ಶಾಸಕರಲ್ಲಿ 18 ಮಂದಿ ಮುಸ್ಲಿಮರು!

ಮೇ 4ರಂದು ವಿಧಾನಸಭಾ ಚುನಾವಣಾ ಫಲಿತಾಂಶಗಳಲ್ಲಿ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳಲ್ಲಿ ಸ್ಪರ್ಧಿಸಿದ ಮುಸ್ಲಿಂ ಅಭ್ಯರ್ಥಿಗಳು ಗಮನಾರ್ಹ ಯಶಸ್ಸು ಸಾಧಿಸಿದ್ದಾರೆ. ವಿಶೇಷವಾಗಿ ಅಸ್ಸಾಂನಲ್ಲಿ ಕಾಂಗ್ರೆಸ್‌ನಿಂದ ಗೆದ್ದ 19 ಸ್ಥಾನಗಳಲ್ಲಿ 18 ಮಂದಿ ಮುಸ್ಲಿಂ ಅಭ್ಯರ್ಥಿಗಳು. ಆ ಮೂಲಕ ಸುಮಾರು ಶೇ. 90ರಷ್ಟು ಯಶಸ್ಸು ದಾಖಲಿಸಲಾಗಿದೆ. ಅದೇ ಸಮಯದಲ್ಲಿ ಮುಸ್ಲಿಮೇತರ ಅಭ್ಯರ್ಥಿಗಳ ಪ್ರದರ್ಶನ ಅತ್ಯಂತ ದುರ್ಬಲವಾಗಿತ್ತು. ಕೇರಳಂನಲ್ಲಿಯೂ ಯುಡಿಎಫ್ ಮೈತ್ರಿಕೂಟದ ಮೂಲಕ ಹೆಚ್ಚಿನ ಮುಸ್ಲಿಂ ಶಾಸಕರು ಆಯ್ಕೆಯಾಗಿದ್ದು, ರಾಜಕೀಯ ಸಮೀಕರಣಗಳಲ್ಲಿ ಮತಧ್ರುವೀಕರಣದ ಸ್ಪಷ್ಟ ಚಿತ್ರಣ ಕಂಡುಬಂದಿದೆ.

ಇಂದಿರಾ ಗಾಂಧಿ ಕಾಲದ ಕಾಂಗ್ರೆಸ್ ದಾಖಲೆ ಸರಿಗಟ್ಟಿದ ಬಿಜೆಪಿ: ಈಗ ಕಛ್‌ನಿಂದ ಕಿಬಿತ್ತುವರೆಗೆ ಕೇಸರಿ ಅಲೆ

21 ರಾಜ್ಯಗಳಲ್ಲಿ ಅಧಿಕಾರ ಚುಕ್ಕಾಣಿ ಹಿಡಿದ ಬಿಜೆಪಿ

ಅಸ್ಸಾಂನಲ್ಲಿ ಸತತ ಮೂರನೇ ಬಾರಿ ಅಧಿಕಾರವನ್ನು ಕಾಪಾಡಿಕೊಂಡು, ಪಶ್ಚಿಮ ಬಂಗಾಳದಲ್ಲಿ ಮಹತ್ವದ ಗೆಲುವು ಸಾಧಿಸುವ ಮೂಲಕ ಬಿಜೆಪಿ ತನ್ನ ರಾಜಕೀಯ ಪ್ರಭಾವವನ್ನು ದೇಶದ 21 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ವಿಸ್ತರಿಸಿದೆ. 2014ರಲ್ಲಿ ಕೇವಲ ಏಳು ರಾಜ್ಯಗಳಲ್ಲಿ ಮಾತ್ರ ಅಧಿಕಾರ ಹೊಂದಿದ್ದ ಪಕ್ಷ, ಸಂಘಟನಾ ಶಕ್ತಿ, ಮೈತ್ರಿ ರಾಜಕೀಯ ಮತ್ತು ಬೂತ್ ಮಟ್ಟದ ಕಾರ್ಯತಂತ್ರಗಳ ಮೂಲಕ ದೊಡ್ಡ ಮಟ್ಟದ ಬೆಳವಣಿಗೆಯನ್ನು ಸಾಧಿಸಿದೆ. ಈ ಸಾಧನೆ ಇಂದಿರಾ ಗಾಂಧಿಯ ಕಾಲದಲ್ಲಿ ಕಾಂಗ್ರೆಸ್ ಹೊಂದಿದ್ದ ಐತಿಹಾಸಿಕ ಪ್ರಾಬಲ್ಯಕ್ಕೆ ಸಮಾನವಾಗಿದೆ. 2024ರ ಲೋಕಸಭಾ ಚುನಾವಣೆಯ ಹಿನ್ನಡೆಯ ನಂತರವೂ ಬಿಜೆಪಿ ಪುನರುತ್ಥಾನ ಸಾಧಿಸಿದ್ದು, ರಾಷ್ಟ್ರ ರಾಜಕೀಯದಲ್ಲಿ ತನ್ನ ಪ್ರಾಬಲ್ಯವನ್ನು ಮತ್ತೆ ದೃಢಪಡಿಸಿದೆ.

Astro Tips: ಒತ್ತಡದಿಂದ ಮನಸ್ಸು ಅಶಾಂತವಾಗಿದೆಯೇ?  ಹಾಗಾದ್ರೆ ಪ್ರತಿನಿತ್ಯ ಈ ಶಾಂತಿ ಮಂತ್ರಗಳನ್ನು ಜಪಿಸಿ

ಮನಸ್ಸಿಗೆ ಶಾಂತಿ ಬೇಕೇ..? ಈ ಸರಳ ಮಂತ್ರಗಳನ್ನು ಪಠಿಸಿ

ಶಾಂತಿ ಮಂತ್ರಗಳು ಮನಸ್ಸಿಗೆ ಆಳವಾದ ಶಾಂತಿ ಮತ್ತು ನೆಮ್ಮದಿಯನ್ನು ನೀಡುವ ಶಕ್ತಿಯುತ ಸಾಧನಗಳಾಗಿವೆ ಎಂದು ನಂಬಲಾಗುತ್ತದೆ. ಇವುಗಳ ನಿಯಮಿತ ಜಪವು ಆತಂಕ, ಒತ್ತಡ ಹಾಗೂ ಮಾನಸಿಕ ಅಶಾಂತಿಯನ್ನು ಕಡಿಮೆ ಮಾಡಲು ಸಹಕಾರಿ. ಮಂತ್ರಗಳ ಧ್ವನಿಕಂಪನಗಳು ಮನಸ್ಸನ್ನು ಶುದ್ಧಗೊಳಿಸಿ, ಸಕಾರಾತ್ಮಕ ಚಿಂತನೆಗೆ ಉತ್ತೇಜನ ನೀಡುತ್ತವೆ. ದಿನನಿತ್ಯ ಕೆಲವು ನಿಮಿಷಗಳ ಕಾಲ ಶಾಂತಿ ಮಂತ್ರಗಳನ್ನು ಪಠಿಸುವುದರಿಂದ ಮನಸ್ಸಿನ ಸ್ಥಿರತೆ ಹೆಚ್ಚಾಗಿ, ಜೀವನದಲ್ಲಿ ಸಮತೋಲನ ಮತ್ತು ಸಂತೋಷವನ್ನು ಅನುಭವಿಸಬಹುದು.

ಅಸ್ಸಾಂನಲ್ಲಿ ಸತತ 3ನೇ ಬಾರಿಗೆ ಬಿಜೆಪಿಗೆ ಭರ್ಜರಿ ಜಯ; ಇದು 'ಐತಿಹಾಸಿಕ ಗೆಲುವು' ಎಂದ ಹಿಮಂತ ಬಿಸ್ವಾ ಶರ್ಮಾ

ಅಸ್ಸಾಂನಲ್ಲಿ ಬಿಜೆಪಿ ಹ್ಯಾಟ್ರಿಕ್ ಗೆಲುವು

ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸತತ ಮೂರನೇ ಬಾರಿ ಭರ್ಜರಿ ಜಯ ಸಾಧಿಸಿ ಇತಿಹಾಸ ನಿರ್ಮಿಸಿದೆ. ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಈ ಗೆಲುವನ್ನು ‘ಐತಿಹಾಸಿಕ’ ಎಂದು ಕರೆದಿದ್ದು, ಜನರಿಗೆ ಧನ್ಯವಾದ ಸಲ್ಲಿಸಿ ಚುನಾವಣಾ ಭರವಸೆಗಳನ್ನು ಈಡೇರಿಸುವುದಾಗಿ ತಿಳಿಸಿದ್ದಾರೆ. ಎನ್‌ಡಿಎ ಮೈತ್ರಿಕೂಟ 100ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ರಾಜ್ಯದಲ್ಲಿ ತನ್ನ ಪ್ರಾಬಲ್ಯವನ್ನು ಮತ್ತಷ್ಟು ಬಲಪಡಿಸಿದೆ.

"ಲೂಟಿ, ಲೂಟಿ, ಲೂಟಿ. ನಾವು ಮತ್ತೆ ಪುಟಿದೇಳುತ್ತೇವೆ": ಬಂಗಾಳದ ಆಘಾತಕಾರಿ ಸೋಲಿಗೆ ಮಮತಾ ಬ್ಯಾನರ್ಜಿ ಹತಾಶೆ

ಬಂಗಾಳ ಸೋಲಿನ ಬೆನ್ನಲ್ಲೇ ಮಮತಾ ಹತಾಶೆ ನುಡಿ

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಭಾರಿ ಹಿನ್ನಡೆ ಅನುಭವಿಸಿದ ಮಮತಾ ಬ್ಯಾನರ್ಜಿ, ಫಲಿತಾಂಶವನ್ನು ;ಲೂಟಿʼ ಎಂದು ಕರೆದಿದ್ದಾರೆ. ಬಿಜೆಪಿ ಐತಿಹಾಸಿಕ ಮುನ್ನಡೆ ಸಾಧಿಸಿದ ಹಿನ್ನೆಲೆಯಲ್ಲಿ, ಚುನಾವಣಾ ಆಯೋಗ ಮತ್ತು ಕೇಂದ್ರದ ಮೇಲೆ ತೀವ್ರ ಆರೋಪ ಮಾಡಿರುವ ಮಮತಾ, ತೃಣಮೂಲ ಕಾಂಗ್ರೆಸ್ ಮತ್ತೆ ಬಲವಾಗಿ ಪುನಃ ಏಳುತ್ತದೆ ಎಂದು ಹೇಳಿದ್ದಾರೆ.

Assembly Election Result 2026: ಕೇರಳಂನಲ್ಲಿ ಇತಿಹಾಸ ಬರೆದ ಬಿಜೆಪಿ; ಇದೇ ಮೊದಲ ಬಾರಿಗೆ ಮೂರು ಕ್ಷೇತ್ರಗಳಲ್ಲಿ ಜಯಭೇರಿ

ಕೇರಳ: ಮೂರು ಕ್ಷೇತ್ರಗಳಲ್ಲಿ ಅರಳಿದ ಕಮಲ

Assembly Election Result 2026: 2026ರ ಕೇರಳಂ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮೂರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ಇತಿಹಾಸ ನಿರ್ಮಿಸಿದೆ. ನೇಮಂ, ಚಾತನ್ನೂರು ಮತ್ತು ಕಳಕೂಟ್ಟಂ ಕ್ಷೇತ್ರಗಳಲ್ಲಿ ಕಮಲ ಅರಳಿದ್ದು, ರಾಜ್ಯ ರಾಜಕೀಯದಲ್ಲಿ ಮೂರನೇ ಶಕ್ತಿಯಾಗಿ ತನ್ನ ಅಸ್ತಿತ್ವವನ್ನು ಬಲಪಡಿಸಿದೆ. ಇದೇ ವೇಳೆ ಯುಡಿಎಫ್ ಭರ್ಜರಿ ಗೆಲುವು ಸಾಧಿಸಿ ಅಧಿಕಾರಕ್ಕೆ ಮರಳಿದ್ದು, ಎಲ್‌ಡಿಎಫ್‌ ಭಾರಿ ಸೋಲು ಕಂಡಿದೆ.

ಆಂಬುಲೆನ್ಸ್‌ ಕೊರತೆ: 15 ವರ್ಷದ ಬುಡಕಟ್ಟು ಬಾಲಕಿಯ ಮೃತದೇಹವನ್ನು ಭುಜದ ಮೇಲೆ ಹೊತ್ತು ಸಾಗಿಸಿದ ಕುಟುಂಬ

ಸಿಗದ ಆಂಬುಲೆನ್ಸ್‌; ಭುಜದಲ್ಲಿ ಹೊತ್ತು ಮಗಳ ಮೃತದೇಹ ಸಾಗಿಸಿದ ಪೋಷಕರು

ಮಧ್ಯ ಪ್ರದೇಶದ ಅಶೋಕನಗರದಲ್ಲಿ 15 ವರ್ಷದ ಬುಡಕಟ್ಟು ಬಾಲಕಿಯ ಮೃತದೇಹ ಸಾಗಿಸಲು ಯಾವುದೇ ವ್ಯವಸ್ಥೆ ಇಲ್ಲದ ಕಾರಣ ಕುಟುಂಬಸ್ಥರು ಭುಜದ ಮೇಲೆ ಹೊತ್ತೊಯ್ಯಬೇಕಾದ ದಾರುಣ ಘಟನೆ ನಡೆದಿದೆ. ಆಸ್ಪತ್ರೆಯ ನಿರ್ಲಕ್ಷ್ಯ, ಮೂಲಭೂತ ಸೌಲಭ್ಯಗಳ ಕೊರತೆ ಮತ್ತು ಆಡಳಿತ ವೈಫಲ್ಯಕ್ಕೆ ಈ ಘಟನೆ ಕನ್ನಡಿ ಹಿಡಿದಿದೆ.

ತಮಿಳುನಾಡು ರಾಜಕೀಯದಲ್ಲಿ ಸಂಚಲನ ಮೂಡಿಸಿದ ಟಿವಿಕೆಯ ವಿಜಯ್ ಮುಂದಿದೆ ಹಲವು ಆಯ್ಕೆಗಳು: ಯಾರ ಕೈಹಿಡಿಯಲಿದ್ದಾರೆ 'ಜನನಾಯಕ'?

ತಮಿಳುನಾಡಿನಲ್ಲಿ ಟಿವಿಕೆ ನಾಯಕ ವಿಜಯ್ ಕಿಂಗ್‌ ಮೇಕರ್

ತಮಿಳುನಾಡಿನಲ್ಲಿ ನಟ-ರಾಜಕಾರಣಿ ವಿಜಯ್ ಅವರ ಟಿವಿಕೆ ಪಕ್ಷ ಅಚ್ಚರಿ ಮೂಡಿಸುವ ಸಾಧನೆ ಮಾಡಿದ್ದು, ಬಹುಮತದ ಅಂಚಿಗೆ ಬಂದು ನಿಂತಿದೆ. ಸರ್ಕಾರ ರಚಿಸಲು ಎಐಎಡಿಎಂಕೆ, ಸಣ್ಣ ಪಕ್ಷಗಳು ಅಥವಾ ಕಾಂಗ್ರೆಸ್ ಬೆಂಬಲ ಪಡೆಯುವ ಆಯ್ಕೆಗಳು ಅವರ ಮುಂದಿವೆ. ಬಿಜೆಪಿ ವಿರುದ್ಧದ ನಿಲುವು ಅವರ ಮೈತ್ರಿ ನಿರ್ಧಾರದಲ್ಲಿ ಪ್ರಮುಖ ಪಾತ್ರವಹಿಸುವ ಸಾಧ್ಯತೆ ಇದೆ.

"ಈ ವಿಡಿಯೊ ಇಟ್ಟುಕೊಳ್ಳಿ": 2025ರಲ್ಲೇ ವಿಜಯ್ ಗೆಲುವಿನ ಭವಿಷ್ಯ ನುಡಿದಿದ್ದ ಪ್ರಶಾಂತ್ ಕಿಶೋರ್ ವಿಡಿಯೊ ವೈರಲ್

ವಿಜಯ್ ಗೆಲುವು: ಪ್ರಶಾಂತ್ ಕಿಶೋರ್ ಹಳೆಯ ವಿಡಿಯೊ ಮತ್ತೆ ಮುನ್ನಲೆಗೆ

Viral Video: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷ ಭರ್ಜರಿ ಸಾಧನೆ ಮಾಡುವುದಾಗಿ ಚುನಾವಣೆಗೆ ಒಂದು ವರ್ಷ ಮೊದಲು ಪ್ರಶಾಂತ್ ಕಿಶೋರ್ ಹೇಳಿದ್ದ ಭವಿಷ್ಯ ಈಗ ನಿಜವಾಗಿದೆ. ಅವರ ಹಳೆಯ ಸಂದರ್ಶನದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ಬಿಜೆಪಿ ಸಚಿವರ ರ‍್ಯಾಲಿ ವಿರುದ್ಧ ಆಕ್ರೋಶ ಹೊರಹಾಕಿದ್ದ ಮುಂಬೈ ಮಹಿಳೆ ಯು ಟರ್ನ್; ಈಗ ಹೇಳಿದ್ದೇನು?

ಬಿಜೆಪಿ ರ‍್ಯಾಲಿ ವಿವಾದ: ಮಹಿಳೆ ಯು ಟರ್ನ್

ಮಹಾರಾಷ್ಟ್ರದ ಮುಂಬೈಯಲ್ಲಿ ರಾಜಕೀಯ ರ‍್ಯಾಲಿಯಿಂದ ಉಂಟಾದ ಟ್ರಾಫಿಕ್ ಜಾಮ್ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದ ಟೀನಾ ಚೌಧರಿ ಇದೀಗ ತಮ್ಮ ನಿಲುವು ಬದಲಿಸಿ, ಸಚಿವ ಗಿರೀಶ್ ಮಹಾಜನ್ ಸಮಸ್ಯೆ ಪರಿಹರಿಸಲು ಸಹಕರಿಸಿದರು ಎಂದು ಹೇಳಿದ್ದಾರೆ. ಸಚಿವರು ಮಧ್ಯ ಪ್ರವೇಶಿಸಿ ಸಮಸ್ಯೆಬಗೆಹರಿಸಿದ್ದಾರೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

Vastu Tips: ವಾಸ್ತು ದೋಷ , ಆರೋಗ್ಯ: ಯಾವ ದಿಕ್ಕು ಯಾವ ಅನಾರೋಗ್ಯ ಸಮಸ್ಯೆಗೆ ಕಾರಣ? ಇಲ್ಲಿದೆ ಮಾಹಿತಿ

ಮನೆಯಲ್ಲಿ ಈ ವಾಸ್ತು ದೋಷಗಳಿದ್ದರೆ ಅನಾರೋಗ್ಯ ತಪ್ಪದು!

ಮನೆಯಲ್ಲಿನ ವಾಸ್ತು ದೋಷಗಳು ಜೀವನದಲ್ಲಿ ಹಲವು ಸಮಸ್ಯೆಗಳಿಗೆ ಕಾರಣವಾಗಬಹುದು ಎಂಬ ನಂಬಿಕೆ ಇದೆ. ವಿಶೇಷವಾಗಿ ದಿಕ್ಕು, ವಿನ್ಯಾಸ ಮತ್ತು ವ್ಯವಸ್ಥೆಯಲ್ಲಿನ ತಪ್ಪುಗಳು ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಆದ್ದರಿಂದ ಯಾವ ವಾಸ್ತು ದೋಷದಿಂದ ಯಾವ ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ.

"ಊಟ ಇಲ್ಲ, ನಿದ್ದೆ ಇಲ್ಲ": 9 ಮಂದಿಯನ್ನು ಬಲಿ ಪಡೆದ ಜಬಲ್ಪುರ ನೌಕಾ ದುರಂತದ ಪೈಲಟ್ ಸ್ಥಿತಿ ಶತ್ರುವಿಗೂ ಬೇಡ

9 ಮಂದಿಯ ಬಲಿ ಪಡೆದ ಜಬಲ್ಪುರ ನೌಕಾ ದುರಂತದ ಪೈಲಟ್ ಹೇಳಿದ್ದೇನು?

ಮಧ್ಯ ಪ್ರದೇಶದ ಜಬಲ್ಪುರದ ಬರ್ಗಿ ಅಣೆಕಟ್ಟಿನಲ್ಲಿ ಸಂಭವಿಸಿದ ಕ್ರೂಸ್ ಬೋಟ್ ದುರಂತದಲ್ಲಿ 9 ಮಂದಿ ಸಾವನ್ನಪ್ಪಿದ್ದಾರೆ. ಪೈಲಟ್ ಮಹೇಶ್ ಪಟೇಲ್ ಹವಾಮಾನ ಏಕಾಏಕಿ ಬದಲಾದ ಕಾರಣ ದೋಣಿ ನಿಯಂತ್ರಣ ತಪ್ಪಿದುದಾಗಿ ಹೇಳಿದ್ದಾರೆ. ಪ್ರಯಾಣಿಕರನ್ನು ಉಳಿಸಲು ಕೊನೆಯವರೆಗೂ ಪ್ರಯತ್ನಿಸಿದ್ದಾಗಿ ಅವರು ತಿಳಿಸಿದ್ದು, ಈ ಘಟನೆ ಬಳಿಕ ಊಟ-ನಿದ್ದೆ ಮಾಡಲು ಸಾಧ್ಯವಾಗದೆ ಒದ್ದಾಡುತ್ತಿರುವುದಾಗಿ ಹೇಳಿದ್ದಾರೆ.

ಹಳೆಯ ಐಇಡಿ ನಿಷ್ಕ್ರಿಯಗೊಳಿಸುವ ವೇಳೆ ಸ್ಫೋಟ: ಛತ್ತೀಸ್‌ಗಢದಲ್ಲಿ ನಾಲ್ವರು ಭದ್ರತಾ ಸಿಬ್ಬಂದಿ ಹುತಾತ್ಮ

ಛತ್ತೀಸ್‌ಗಢದಲ್ಲಿ ಐಇಡಿ ಸ್ಫೋಟ; ನಾಲ್ವರು ಭದ್ರತಾ ಸಿಬ್ಬಂದಿ ಹುತಾತ್ಮ

ಛತ್ತೀಸ್‌ಗಢದ ಕಂಕೇರ್ ಜಿಲ್ಲೆಯಲ್ಲಿ ಹಳೆಯ ಐಇಡಿ ನಿಷ್ಕ್ರಿಯಗೊಳಿಸುವ ವೇಳೆ ಸ್ಫೋಟ ಸಂಭವಿಸಿ ನಾಲ್ವರು ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಾರೆ. ನಕ್ಸಲ್ ಮುಕ್ತ ಘೋಷಣೆಯ ಬಳಿಕ ನಡೆದ ಮೊದಲ ಘಟನೆ ಇದಾಗಿದೆ. ನಕ್ಸಲರ ವಶದಲ್ಲಿದ್ದ ಐಇಡಿ ನಿಷ್ಕ್ರಿಯಗೊಳಿಸುವ ವೇಳೆ ಘಟನೆ ನಡೆದಿದೆ.

ಅಮೆರಿಕದ ಒಪ್ಪಂದ ತಿರಸ್ಕರಿಸಿದ ಇರಾನ್; ಪಶ್ಚಿಮ ಏಷ್ಯಾದಲ್ಲಿ ಮತ್ತೆ ಯುದ್ಧ ಆರಂಭವಾಗುವ ಭೀತಿ

ಅಮೆರಿಕ ಒಪ್ಪಂದಗಳಿಗೆ ಬದ್ಧವಿಲ್ಲ ಎಂದ ಇರಾನ್‌

ಇರಾನ್ ಸೇನಾ ಅಧಿಕಾರಿಗಳು ಅಮೆರಿಕದ ವಿರುದ್ಧ ಗಂಭೀರ ಆರೋಪ ಮಾಡಿದ್ದು, ವಾಷಿಂಗ್ಟನ್‌ನ ಯಾವುದೇ ಒಪ್ಪಂದಗಳಿಗೆ ಬದ್ಧವಾಗಿಲ್ಲ ಎಂದು ಹೇಳಿದ್ದಾರೆ. ಜತೆಗೆ ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಯುದ್ಧ ಮತ್ತೆ ಪ್ರಾರಂಭವಾಗುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಇರಾನ್ ಸೇನೆ ಹೈ ಅಲರ್ಟ್‌ನಲ್ಲಿ ಇದ್ದು, ಯಾವುದೇ ದಾಳಿ ಎದುರಿಸಲು ಸಿದ್ಧವಾಗಿದೆ. ಇತ್ತ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಇರಾನ್ ಮಾತುಕತೆಯನ್ನು ತಿರಸ್ಕರಿಸಿದ್ದು, ಪರಮಾಣು ಭೀತಿ ಬಗ್ಗೆ ಕಠಿಣ ನಿಲುವು ವ್ಯಕ್ತಪಡಿಸಿದ್ದಾರೆ.

ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆ: ದೇಶದಲ್ಲೂ ಶೀಘ್ರದಲ್ಲೇ ಪೆಟ್ರೋಲ್, ಡೀಸೆಲ್, ಎಲ್‌ಪಿಜಿ ದರ ಹೆಚ್ಚಳ ಸಾಧ್ಯತೆ

ಭಾರತದಲ್ಲಿ ಪೆಟ್ರೋಲ್, ಡೀಸೆಲ್, LPG ಬೆಲೆ ಏರಿಕೆ ಸಾಧ್ಯತೆ

ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯಿಂದ ಜಾಗತಿಕ ಕಚ್ಚಾ ತೈಲ ಬೆಲೆ ಏರಿಕೆಯಾಗಿದ್ದು, ಇದರ ಪರಿಣಾಮವಾಗಿ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ದರಗಳು ಶೀಘ್ರದಲ್ಲೇ ಹೆಚ್ಚಾಗುವ ಸಾಧ್ಯತೆ ಇದೆ. ಪ್ರತಿ ಲೀಟರ್‌ಗೆ 4-5 ರುಪಾಯಿ ಮತ್ತು ಎಲ್‌ಪಿಜಿ ಸಿಲಿಂಡರ್‌ಗೆ 40-50 ರುಪಾಯಿ ಹೆಚ್ಚಳ ಸಾಧ್ಯತೆ ಇದೆ. ಕೇಂದ್ರ ಸರ್ಕಾರ ಮುಂದಿನ ಒಂದು ವಾರದಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಿದೆ.

Fact Check: ತಿಂಗಳಿಗೆ 15 ಲಕ್ಷ ರುಪಾಯಿ ಲಾಭದ ಹೂಡಿಕೆ ಬಗ್ಗೆ ವಿವರಿಸಿದ್ರಾ ರಕ್ಷಣಾ ಸಚಿವ ರಾಜನಾಥ್ ಸಿಂಗ್? ವೈರಲ್‌ ವಿಡಿಯೊದ ಅಸಲಿಯತ್ತೇನು?

ಎಐ ಡೀಪ್‌ಫೇಕ್ ವಿಡಿಯೊ: ರಾಜನಾಥ್ ಸಿಂಗ್ ಹೆಸರಿನಲ್ಲಿ ನಕಲಿ ಹೂಡಿಕೆ ಯೋಜನೆ

22,000 ರುಪಾಯಿ ಹೂಡಿಕೆಗೆ ದಿನಕ್ಕೆ 80,000 ರುಪಾಯಿ ಲಾಭ ಸಿಗುತ್ತದೆ ಎಂದು ಹೇಳುವಂತೆ ರಾಜನಾಥ್ ಸಿಂಗ್ ಅವರ ಧ್ವನಿಯಲ್ಲಿ ಸೃಷ್ಟಿಸಲಾದ ಎಐ ಡೀಪ್‌ಫೇಕ್ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೊ ಸಂಪೂರ್ಣ ನಕಲಿ ಎಂದು ಫ್ಯಾಕ್ಟ್ ಚೆಕ್ ಘಟಕವು ಸ್ಪಷ್ಟಪಡಿಸಿದೆ. ಸರ್ಕಾರ ಅಥವಾ ಸಚಿವರು ಇಂತಹ ಯಾವುದೇ ಹೂಡಿಕೆ ಯೋಜನೆಯನ್ನು ಅನುಮೋದಿಸಿಲ್ಲ ಎಂದು ಎಚ್ಚರಿಕೆ ನೀಡಲಾಗಿದೆ.

ಭಾರತದಾದ್ಯಂತ ಮೊಬೈಲ್ ಸದ್ದು ಬೀಪ್‌ ಸೌಂಡ್‌ ಮಾಡಿದ ಮೊಬೈಲ್‌ ಫೋನ್‌: ಕೇಂದ್ರ ಸರ್ಕಾರದ ತುರ್ತು ವಿಪತ್ತು ಎಚ್ಚರಿಕೆ ವ್ಯವಸ್ಥೆ ಪರೀಕ್ಷೆ ಯಶಸ್ವಿ

ದೇಶವ್ಯಾಪಿ ಮೊಬೈಲ್ ಅಲರ್ಟ್: ಏನಿದು ‘ಸೆಲ್ ಬ್ರಾಡ್‌ಕಾಸ್ಟ್’?

ಭಾರತ ಸರ್ಕಾರವು ‘ಸೆಲ್ ಬ್ರಾಡ್‌ಕಾಸ್ಟ್’ ತುರ್ತು ಎಚ್ಚರಿಕೆ ವ್ಯವಸ್ಥೆಯನ್ನು ಪರೀಕ್ಷಾರ್ಥವಾಗಿ ಪ್ರಾರಂಭಿಸಿದ್ದು, ದೇಶದಾದ್ಯಂತ ಲಕ್ಷಾಂತರ ಮೊಬೈಲ್‌ಗಳಿಗೆ ʼಅತ್ಯಂತ ತೀವ್ರ ಎಚ್ಚರಿಕೆʼ ಸಂದೇಶ ರವಾನಿಸಲಾಗಿದೆ. ಇದು ಕೇವಲ ಪರೀಕ್ಷೆಯಾಗಿದ್ದು, ಸಾರ್ವಜನಿಕರು ಗಾಬರಿಯಾಗಬೇಕಾಗಿಲ್ಲ. ಈ ವ್ಯವಸ್ಥೆಯು ಭೂಕಂಪ, ಸುನಾಮಿ ಮುಂತಾದ ವಿಪತ್ತು ಸಂದರ್ಭಗಳಲ್ಲಿ ಜೀವ ರಕ್ಷಕವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ರಾಹುಲ್ ಗಾಂಧಿಗೆ ಬಿಗ್ ರಿಲೀಫ್: 2025ರ ಹೇಳಿಕೆಗೆ ಎಫ್‌ಐಆರ್ ದಾಖಲಿಸುವಂತೆ ಕೋರಿದ್ದ ಅರ್ಜಿ ವಜಾ

ರಾಹುಲ್ ಗಾಂಧಿ ವಿರುದ್ಧದ ಎಫ್‌ಐಆರ್ ವಜಾ

ಅಲಹಾಬಾದ್ ಹೈಕೋರ್ಟ್ ರಾಹುಲ್ ಗಾಂಧಿ ಅವರ 2025ರ ಹೇಳಿಕೆ ವಿರುದ್ಧ ಎಫ್‌ಐಆರ್ ದಾಖಲಿಸಲು ಕೋರಿದ್ದ ಅರ್ಜಿಯನ್ನು ವಜಾಗೊಳಿಸಿ, ಕೆಳ ನ್ಯಾಯಾಲಯದ ಆದೇಶವನ್ನು ಸಮರ್ಥಿಸಿದೆ. ಅರ್ಜಿದಾರರ ವಾದಗಳಿಗೆ ಕಾನೂನುಬದ್ಧ ಆಧಾರವಿಲ್ಲ ಎಂದು ಹೇಳಿದ ನ್ಯಾಯಾಲಯ, ಈ ಮೂಲಕ ರಾಹುಲ್ ಗಾಂಧಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.

ಎಲ್‌ಪಿಜಿ ಸಿಲಿಂಡರ್‌ ಖರೀದಿಗೆ ಇಂದಿನಿಂದ ಹೊಸ ನಿಯಮ: 2 ಗ್ಯಾಸ್ ಸಂಪರ್ಕ ನಿಷೇಧ, ಒಟಿಪಿ ಆಧಾರಿತ ವಿತರಣೆ, ಬೆಲೆ ಪರಿಷ್ಕರಣೆ

ಎಲ್‌ಪಿಜಿ ಸಂಪರ್ಕಕ್ಕೆ ಇಂದಿನಿಂದ ಹೊಸ ನಿಯಮ ಜಾರಿ

ಕೇಂದ್ರ ಸರ್ಕಾರ ಹೊಸ ಎಲ್‌ಪಿಜಿ ನಿಯಮ ಜಾರಿಗೆ ತಂದು, ಒಂದೇ ಮನೆಯಲ್ಲಿ ಎರಡು ಗ್ಯಾಸ್ ಸಂಪರ್ಕಗಳನ್ನು ನಿಷೇಧಿಸಿದೆ. ಒಟಿಪಿ ಆಧಾರಿತ ಸಿಲಿಂಡರ್ ವಿತರಣೆಯನ್ನು ಕಡ್ಡಾಯಗೊಳಿಸಿದ್ದು, ಗ್ರಾಹಕರು ಕೆವೈಸಿ ಮಾಹಿತಿಯನ್ನು ನವೀಕರಿಸಬೇಕು. ಬುಕಿಂಗ್ ಅವಧಿಯಲ್ಲೂ ಬದಲಾವಣೆ ಮಾಡಲಾಗಿದ್ದು, ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ.

ಪುಸ್ತಕ ಪ್ರೇಮಿಗಳ 'ದೊಡ್ಡ ಮನಸ್ಸು': ನೆನೆದ ಪುಟಗಳಿಗೆ ಮರುಜೀವ ನೀಡಲು 'ಒದ್ದೆ ಪುಸ್ತಕ ಮೇಳ'!

ಬೆಂಗಳೂರಿನಲ್ಲಿ 'ಒದ್ದೆ ಪುಸ್ತಕ ಮೇಳ'!

ಮಳೆಯಿಂದ ಹಾನಿಗೊಳಗಾದ ಪುಸ್ತಕ ಅಂಗಡಿಗೆ ಬೆಂಬಲ ನೀಡಲು ಬೆಂಗಳೂರಿನ ಓದುಗರು ಮುಂದೆ ಬಂದು, ನೆನೆದ ಹಾಗೂ ಹಾನಿಗೊಳಗಾದ ಪುಸ್ತಕಗಳನ್ನು ರಿಯಾಯಿತಿ ದರದಲ್ಲಿ ಖರೀದಿಸುತ್ತಿದ್ದಾರೆ. ಇದರ ಫಲವಾಗಿ ‘ಒದ್ದೆ ಪುಸ್ತಕಗಳ ಮೇಳ’ ಎಂಬ ವಿಶಿಷ್ಟ ಪರಿಕಲ್ಪನೆ ಹುಟ್ಟಿಕೊಂಡಿದ್ದು, ಅಂಗಡಿಗೆ ಆರ್ಥಿಕ ಸಹಾಯದ ಜತೆಗೆ ಪುಸ್ತಕಗಳಿಗೆ ಮರುಜೀವ ನೀಡಲಾಗುತ್ತಿದೆ.

ಬ್ಯಾಲೆಟ್ ಪೆಟ್ಟಿಗೆ ತೆರೆಯಲಾಗಿದೆ ಎಂದು ಆರೋಪಿಸಿ ತೃಣಮೂಲ ಕಾಂಗ್ರೆಸ್‌ ಪ್ರತಿಭಟನೆ; "ಇದೆಲ್ಲ ಬರಿ ವದಂತಿ" ಎಂದ ಬಿಜೆಪಿ

ಕೋಲ್ಕತ್ತಾ ಸ್ಟ್ರಾಂಗ್ ರೂಮ್ ಮುಂದೆ ಟಿಎಂಸಿ ಧರಣಿ

ತೃಣಮೂಲ ಕಾಂಗ್ರೆಸ್ ನಾಯಕರು ಕೋಲ್ಕತ್ತಾದ ಸ್ಟ್ರಾಂಗ್ ರೂಮ್ ಹೊರಗೆ ಧರಣಿ ನಡೆಸಿ, ಅಧಿಕೃತ ಪ್ರತಿನಿಧಿಗಳಿಲ್ಲದೆ ಇವಿಎಂ ಮತಪೆಟ್ಟಿಗೆಗಳನ್ನು ಅಕ್ರಮವಾಗಿ ತೆರೆಯಲಾಗುತ್ತಿದೆ ಎಂದು ಆರೋಪಿಸಿದರು. ಅನಿರೀಕ್ಷಿತ ಚಟುವಟಿಕೆಗಳ ಬಗ್ಗೆ ಅವರು ಪ್ರಶ್ನೆ ಎತ್ತಿದರೆ, ಬಿಜೆಪಿ ಈ ಆರೋಪಗಳನ್ನು ಸಂಪೂರ್ಣ ವದಂತಿ ಎಂದು ತಳ್ಳಿ ಹಾಕಿತು. ಚುನಾವಣಾ ಆಯೋಗವು ಸ್ಟ್ರಾಂಗ್ ರೂಂಗಳು ಸುರಕ್ಷಿತವಾಗಿವೆ ಎಂದು ಸ್ಪಷ್ಟಪಡಿಸಿದೆ.

ಮತ ಎಣಿಕೆಗೆ 3 ದಿನ ಬಾಕಿ ಇರುವಾಗಲೇ ಪಶ್ಚಿಮ ಬಂಗಾಳದಲ್ಲಿ ಹೈಡ್ರಾಮ; ಭವಾನಿಪುರ ಸ್ಟ್ರಾಂಗ್ ರೂಂಗೆ ಮಮತಾ ಬ್ಯಾನರ್ಜಿ ಭೇಟಿ: ಮತ ಎಣಿಕೆ ಅಕ್ರಮಗಳ ಬಗ್ಗೆ ಎಚ್ಚರಿಕೆ

ಭವಾನಿಪುರ ಸ್ಟ್ರಾಂಗ್ ರೂಂಗೆ ಮಮತಾ ಬ್ಯಾನರ್ಜಿ ದಾಳಿ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭವಾನಿಪುರ ಸ್ಟ್ರಾಂಗ್ ರೂಮ್‌ಗೆ ಭೇಟಿ ನೀಡಿ ಮತ ಎಣಿಕೆಯಲ್ಲಿ ಅಕ್ರಮಗಳ ಬಗ್ಗೆ ಎಚ್ಚರಿಕೆ ನೀಡಿ, ಪಾರದರ್ಶಕತೆ ಕಾಪಾಡುವಂತೆ ಸೂಚಿಸಿದ್ದಾರೆ. ಭವಾನಿಪುರ ಕ್ಷೇತ್ರದ ಇವಿಎಂ ಸ್ಟ್ರಾಂಗ್ ರೂಂಗೆ ಭೇಟಿ ನೀಡಿದ ನಂತರ ಅವರು ಈ ಗಂಭೀರ ಆರೋಪ ಮಾಡಿದ್ದಾರೆ.

Vastu Tips: ವಾಸ್ತು ಪ್ರಕಾರ ಮನೆಗೆ ಯಾವ ಬಣ್ಣ ಸೂಕ್ತ? ಜೀವನದಲ್ಲಿ ಬದಲಾವಣೆ ತರುವ ಬಣ್ಣಗಳು ಇವು!

ಮನೆಗೆ ಸರಿಯಾದ ಬಣ್ಣ ಯಾವುದು?; ಇಲ್ಲಿದೆ ಮಾಹಿತಿ

ವಾಸ್ತು ಪ್ರಕಾರ ಮನೆಯಲ್ಲಿನ ಬಣ್ಣಗಳ ಆಯ್ಕೆ ಜೀವನದಲ್ಲಿ ಧನಾತ್ಮಕ ಶಕ್ತಿ, ಸಂತೋಷ ಮತ್ತು ಸಮೃದ್ಧಿಯನ್ನು ತರಲು ಮಹತ್ವವಾದ ಪಾತ್ರ ವಹಿಸುತ್ತದೆ. ಸರಿಯಾದ ಬಣ್ಣಗಳು ಮನಸ್ಸಿಗೆ ಶಾಂತಿ ನೀಡುವುದಷ್ಟೇ ಅಲ್ಲ, ಮನೆಯ ವಾತಾವರಣವನ್ನು ಹಿತಕರವಾಗಿಸಿ ಕುಟುಂಬದ ಸದಸ್ಯರ ನಡುವೆ ಒಗ್ಗಟ್ಟು ಮತ್ತು ಉತ್ಸಾಹವನ್ನು ಹೆಚ್ಚಿಸುತ್ತವೆ. ಪ್ರತಿಯೊಂದು ಕೋಣೆಗೆ ಹೊಂದುವ ಬಣ್ಣಗಳನ್ನು ಆಯ್ಕೆ ಮಾಡುವುದು ಆರೋಗ್ಯ, ಆರ್ಥಿಕ ಸ್ಥಿರತೆ ಮತ್ತು ಮಾನಸಿಕ ಸಮತೋಲನಕ್ಕೂ ಸಹಾಯಕವಾಗುತ್ತದೆ ಎಂದು ವಾಸ್ತು ಶಾಸ್ತ್ರವು ಸೂಚಿಸುತ್ತದೆ.

May Day: ಕಾರ್ಮಿಕರ ದಿನಾಚರಣೆ: ಹಕ್ಕುಗಳಿಗಾಗಿ ನಡೆದ ಹೋರಾಟದ ಕಥೆ ಇದು !

ಕಾರ್ಮಿಕರ ದಿನಾಚರಣೆಯ ಇತಿಹಾಸ ಹಾಗೂ ಮಹತ್ವ ಇಲ್ಲಿದೆ.

ಮೇ ದಿನವನ್ನು ಅಂತಾರಾಷ್ಟ್ರೀಯ ಕಾರ್ಮಿಕರ ದಿನವೆಂದು ಕರೆಯಲಾಗುತ್ತದೆ. ಶ್ರಮಜೀವಿಗಳ ಕೊಡುಗೆಯನ್ನು ಗೌರವಿಸುವುದಕ್ಕೂ, ಕಠಿಣ ಹಾಗೂ ಅಸುರಕ್ಷಿತ ಪರಿಸ್ಥಿತಿಯಲ್ಲಿ ದುಡಿಯುವ ಕಾರ್ಮಿಕರ ಸಂಕಷ್ಟಗಳನ್ನು ಸ್ಮರಿಸುವುದಕ್ಕೂ ಈ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಈ ದಿನದ ಇತಿಹಾಸ, ಮಹತ್ವದ ಬಗ್ಗೆ ಇಲ್ಲಿದೆ ಮಾಹಿತಿ

Loading...