ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad
Profile

Sushmitha Jain

[email protected]

Articles
ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಅಂತಿಮ ಹಂತದಲ್ಲಿ; ಮೋದಿ-ಟ್ರಂಪ್ ಸೂಚನೆ

ಭಾರತ-ಅಮೆರಿಕ ವ್ಯಾಪಾರ ಮಾತುಕತೆ ಅಂತಿಮ ಘಟ್ಟದಲ್ಲಿ!

ಭಾರತ ಮತ್ತು ಅಮೆರಿಕ ನಡುವಿನ ಮಧ್ಯಂತರ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಅಂತಿಮ ಹಂತ ತಲುಪಿದೆ. ಜಿ7 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ವಿಷಯದ ಕುರಿತು ಚರ್ಚೆ ನಡೆಸಿ, ಒಪ್ಪಂದವನ್ನು ಶೀಘ್ರದಲ್ಲೇ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಮುಂದಿನ ವಾರ ಅಮೆರಿಕದ ವ್ಯಾಪಾರ ಪ್ರತಿನಿಧಿ ಭಾರತಕ್ಕೆ ಭೇಟಿ ನೀಡಲಿದ್ದು, ಒಪ್ಪಂದಕ್ಕೆ ಅಂತಿಮ ರೂಪ ನೀಡುವ ಸಾಧ್ಯತೆಯಿದೆ.

ಪ್ರಧಾನಿ ಮೋದಿಯನ್ನು ಹಿಂದಿಯಲ್ಲೇ ಬೀಳ್ಕೊಟ್ಟ ಫ್ರಾನ್ಸ್‌ ಅಧ್ಯಕ್ಷ;  ಜೈ ಹಿಂದ್‌ ಎಂದ ವಿಡಿಯೋ ವೈರಲ್‌

ಹಿಂದಿಯಲ್ಲಿ ಮೋದಿಗೆ ಬೀಳ್ಕೊಟ್ಟ ಮ್ಯಾಕ್ರೋನ್

ಪ್ರಧಾನಿ ನರೇಂದ್ರ ಮೋದಿ ಅವರ ಫ್ರಾನ್ಸ್ ಭೇಟಿಯ ಅಂತ್ಯದಲ್ಲಿ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಹಿಂದಿಯಲ್ಲಿ ಮಾತನಾಡಿ ವಿಶೇಷವಾಗಿ ಬೀಳ್ಕೊಟ್ಟರು. "ಫ್ರಾನ್ಸ್-ಭಾರತ ಸ್ನೇಹ ಅಮರವಾಗಿರಲಿ" ಹಾಗೂ "ಜೈ ಹಿಂದ್" ಎಂದು ಹೇಳಿದ ಮ್ಯಾಕ್ರೋನ್ ಅವರ ನಡೆ ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ಗಮನ ಸೆಳೆದಿದೆ.

"ಕಾಶ್ಮೀರದ ತಂಟೆಗೆ ಬಂದ್ರೆ ಹುಷಾರ್‌"; ವಿಶ್ವಸಂಸ್ಥೆಯಲ್ಲಿ ಮತ್ತೆ ಪಾಕಿಸ್ತಾನದ ಮರ್ಯಾದೆ ತೆಗೆದ ಭಾರತ

UNನಲ್ಲಿ ಪಾಕ್‌ಗೆ ಭಾರತದ ತಿರುಗೇಟು

ವಿಶ್ವಸಂಸ್ಥೆಯಲ್ಲಿ ಭಾರತ, ಪಾಕಿಸ್ತಾನವನ್ನು ‘ಫ್ರಾಂಕೆನ್‌ಸ್ಟೈನ್ ರಾಜ್ಯ’ ಎಂದು ಕರೆಯುತ್ತಾ ಭಯೋತ್ಪಾದನೆಗೆ ಬೆಂಬಲ ನೀಡುವ ರಾಷ್ಟ್ರವೆಂದು ಆರೋಪಿಸಿದೆ. ಜಮ್ಮು-ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಪುನರುಚ್ಚರಿಸಿದ ಭಾರತ, ಸಿಂಧು ಜಲ ಒಪ್ಪಂದವೂ ಕಾಲಹರಣಗೊಂಡಿದೆ ಎಂದು ಹೇಳಿದೆ.

Vastu Tips: ವಾಸ್ತು ಪ್ರಕಾರ ಈ ಗಿಡಗಳನ್ನು ಗಿಫ್ಟ್ ಮಾಡಬೇಡಿ! ಅದೃಷ್ಟಕ್ಕಿಂತ ದುಷ್ಪರಿಣಾಮವೇ ಹೆಚ್ಚು?

ಉಡುಗೊರೆಯಾಗಿ ಗಿಡ ನೀಡುವ ಮುನ್ನ ಎಚ್ಚರ!

ಗ್ರೀನ್ ಗಿಫ್ಟಿಂಗ್ ಟ್ರೆಂಡ್ ಹೆಚ್ಚಾಗುತ್ತಿರುವ ನಡುವೆಯೇ, ವಾಸ್ತು ಶಾಸ್ತ್ರದ ಪ್ರಕಾರ ಕೆಲವು ಗಿಡಗಳನ್ನು ಉಡುಗೊರೆಯಾಗಿ ನೀಡುವುದು ಅಶುಭ ಎಂದು ಪರಿಗಣಿಸಲಾಗುತ್ತದೆ. ಕ್ಯಾಕ್ಟಸ್, ಬೋನ್ಸಾಯ್ ಮತ್ತು ಮೆಹಂದಿ ಗಿಡಗಳು ನಕಾರಾತ್ಮಕ ಶಕ್ತಿ, ಸಂಬಂಧಗಳಲ್ಲಿ ಬಿರುಕು ಹಾಗೂ ಆರ್ಥಿಕ ಪ್ರಗತಿಗೆ ಅಡ್ಡಿಯಾಗಬಹುದು ಎಂಬ ನಂಬಿಕೆ ಇದೆ.

ಬಿಹಾರದಲ್ಲಿ ನಾಗರಿಕ ಸಮಾಜ ತಲೆತಗ್ಗಿಸುವ ಘಟನೆ: ಮಹಿಳೆ ಮೇಲೆ ಗ್ಯಾಂಗ್ ರೇಪ್, ಖಾಸಗಿ ಅಂಗಕ್ಕೆ ಗುಂಡು, ಕಲ್ಲು ತುರುಕಿ ವಿಕೃತಿ ಮೆರೆದ ದುಷ್ಕರ್ಮಿಗಳು

ಮಹಿಳೆ ಮೇಲೆ ಗ್ಯಾಂಗ್ ರೇಪ್, ಖಾಸಗಿ ಅಂಗಕ್ಕೆ ಗುಂಡು ತುರುಕಿದ ಪಾಪಿಗಳು

Bihar Horror: ಬಿಹಾರದ ಬೆಗುಸರಾಯ್‌ನಲ್ಲಿ ಐವರು ದುಷ್ಕರ್ಮಿಗಳು ಮಹಿಳೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಅಮಾನವೀಯ ಕೃತ್ಯ ಮೆರೆದಿದ್ದಾರೆ. ಚಿಕಿತ್ಸೆ ವೇಳೆ ಸಂತ್ರಸ್ತೆಯ ಖಾಸಗಿ ಅಂಗದಿಂದ ಸಜೀವ ಗುಂಡು, ಕಲ್ಲು ಮತ್ತು ಮರದ ತುಂಡುಗಳನ್ನು ವೈದ್ಯರು ಹೊರತೆಗೆದಿದ್ದಾರೆ. ಘಟನೆ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದ್ದು, ಆರೋಪಿಗಳ ಬಂಧನಕ್ಕಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಭಾರತಕ್ಕೆ ಮತ್ತೊಮ್ಮೆ ಮಗ್ಗುಲ ಮುಳ್ಳಾದ ಚೀನಾ; ಗಡಿಯ 50 ಕಿ.ಮೀ. ದೂರಲ್ಲಿ ಬ್ರಹ್ಮಪುತ್ರ ನದಿಗೆ ಹೊಸ ಮೆಗಾ ಡ್ಯಾಮ್: ಇದರಿಂದ ನಮಗೇಕೆ ಆತಂಕ?

ಬ್ರಹ್ಮಪುತ್ರ ನದಿಯಲ್ಲಿ ಚೀನಾದಿಂದ ಮೆಗಾ ಡ್ಯಾಮ್ ನಿರ್ಮಾಣ

ಟಿಬೆಟ್‌ನ ಯಾರ್ಲುಂಗ್ ತ್ಸಾಂಗ್ಪೋ (ಬ್ರಹ್ಮಪುತ್ರ) ನದಿಯಲ್ಲಿ ಚೀನಾ ಜಗತ್ತಿನ ಅತಿದೊಡ್ಡ ಜಲವಿದ್ಯುತ್ ಅಣೆಕಟ್ಟು ನಿರ್ಮಾಣ ಆರಂಭಿಸಿದೆ. ಭಾರತದ ಗಡಿಯ ಸಮೀಪದಲ್ಲಿರುವ ಈ ಯೋಜನೆಯಿಂದ ನದಿಯ ಹರಿವು ಬದಲಾಗಲಿದ್ದು, ಪರಿಸರ ಸಮತೋಲನ ಹಾಗೂ ಈಶಾನ್ಯ ಭಾರತದ ಭದ್ರತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ನೀರಿನ ನಿಯಂತ್ರಣವನ್ನು ವ್ಯೂಹಾತ್ಮಕವಾಗಿ ಚೀನಾ ಬಳಸಿಕೊಳ್ಳಬಹುದೆಂಬ ಆತಂಕವನ್ನು ಭಾರತ ವ್ಯಕ್ತಪಡಿಸಿದೆ.

ರಾಮ ಮಂದಿರ ಕಳವು ಪ್ರಕರಣ: ಸಿಸಿಟಿವಿ ತಿರುಚಿದ ಶಂಕೆ, SITಗೆ ಮಹತ್ವದ ಸುಳಿವು

ರಾಮ ಮಂದಿರ ಕಳವು ಪ್ರಕರಣಕ್ಕೆ ಹೊಸ ಟ್ವಿಸ್ಟ್

Ram Temple Donation Case: ಉತ್ತರ ಪ್ರದೇಶದ ಅಯೋಧ್ಯೆ ರಾಮಮಂದಿರ ದೇಣಿಗೆ ಪೆಟ್ಟಿಗೆ ಕಳವು ಪ್ರಕರಣದಲ್ಲಿ ಸಿಸಿಟಿವಿ ದೃಶ್ಯಗಳನ್ನು ತಿರುಚಿರುವ ಶಂಕೆ ವ್ಯಕ್ತವಾಗಿದೆ. ವಿಶೇಷ ತನಿಖಾ ತಂಡ (SIT) ಮಹತ್ವದ ಸುಳಿವುಗಳನ್ನು ಪತ್ತೆಹಚ್ಚಿದ್ದು, ಭದ್ರತಾ ವ್ಯವಸ್ಥೆ ಹಾಗೂ ಸಂಬಂಧಿತ ಸಿಬ್ಬಂದಿಯ ಪಾತ್ರವನ್ನು ಪರಿಶೀಲಿಸುತ್ತಿದೆ.

ಶೀಘ್ರದಲ್ಲೇ EPFO 3.0 ಲಾಂಚ್; PF ಹಣ ಪಡೆಯುವ ನಿಯಮಗಳಲ್ಲಿ ದೊಡ್ಡ ಬದಲಾವಣೆ

PF ಸದಸ್ಯರಿಗೆ ಗುಡ್ ನ್ಯೂಸ್..!

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ತನ್ನ ಹೊಸ EPFO 3.0 ಡಿಜಿಟಲ್ ವೇದಿಕೆಯನ್ನು ಜೂನ್ ಅಂತ್ಯದೊಳಗೆ ಜಾರಿಗೆ ತರಲು ಸಿದ್ಧತೆ ನಡೆಸಿದೆ. ಈ ವ್ಯವಸ್ಥೆಯಡಿ ಸದಸ್ಯರು ತಮ್ಮ PF ಹಣವನ್ನು UPI ಹಾಗೂ ATMಗಳ ಮೂಲಕ ತ್ವರಿತವಾಗಿ ಪಡೆಯಲು ಸಾಧ್ಯವಾಗಲಿದೆ. PF ಕ್ಲೇಮ್‌ಗಳ ಆಟೋ-ಸೆಟಲ್‌ಮೆಂಟ್ ಮಿತಿಯನ್ನೂ ₹1 ಲಕ್ಷದಿಂದ ₹5 ಲಕ್ಷಕ್ಕೆ ಹೆಚ್ಚಿಸಲಾಗಿದೆ.

ಮರಳು ಗಣಿಗಾರಿಕೆ ವಿವಾದ; ಬಿಜೆಪಿ ನಾಯಕ ಸೇರಿ ಮೂವರನ್ನು ಕಾರಿನಲ್ಲೇ ಸುಟ್ಟು ಹತ್ಯೆ ಮಾಡಿದ ಪಾಪಿಗಳು!

ಬಿಜೆಪಿ ನಾಯಕ ಸೇರಿ ಮೂವರನ್ನು ಕಾರಿನಲ್ಲೇ ಸುಟ್ಟು ಹತ್ಯೆ ಮಾಡಿದ ಪಾಪಿಗಳು!

ಛತ್ತೀಸ್‌ಗಢದ ಕೊರಿಯಾ ಜಿಲ್ಲೆಯಲ್ಲಿ ಮರಳು ಗಣಿಗಾರಿಕೆ ವಿವಾದದ ಹಿನ್ನೆಲೆ ಬಿಜೆಪಿ ನಾಯಕ ಭರತ್ ಸಿಂಗ್ ಅಲಿಯಾಸ್ ಲಲ್ಲಾ ಸಿಂಗ್ ಸೇರಿದಂತೆ ಮೂವರನ್ನು ಫಾರ್ಚುನರ್ ಕಾರಿನಲ್ಲೇ ಜೀವಂತವಾಗಿ ಸುಟ್ಟು ಹತ್ಯೆ ಮಾಡಿರುವ ಆರೋಪ ಕೇಳಿಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಬೆನ್ನ ಮೇಲೆ ಪತ್ನಿ, ಮನದಲ್ಲಿ ನೋವು: ಸರ್ಕಾರಿ ಸೌಲಭ್ಯಕ್ಕಾಗಿ ಅಧಿಕಾರಿಗಳ ಮುಂದೆ ಕಣ್ಣೀರಿಟ್ಟ ಕುಟುಂಬ

ಪತ್ನಿಯನ್ನು ಬೆನ್ನ ಮೇಲೆ ಹೊತ್ತು ನ್ಯಾಯಕ್ಕಾಗಿ ಹೋರಾಡಿದ ವ್ಯಕ್ತಿ

ಮಧ್ಯಪ್ರದೇಶದ ಪನ್ನಾದಲ್ಲಿ ವ್ಯಕ್ತಿಯೊಬ್ಬರು ನಡೆಯಲು ಅಸಮರ್ಥಳಾದ ಪತ್ನಿಯನ್ನು ಬೆನ್ನ ಮೇಲೆ ಹೊತ್ತು ಸಾರ್ವಜನಿಕ ಅಹವಾಲು ಸಭೆಗೆ ಹಾಜರಾಗಿ, ಕಳೆದ 10 ವರ್ಷಗಳಿಂದ ರೇಷನ್ ಸೇರಿದಂತೆ ವಿವಿಧ ಸರ್ಕಾರಿ ಯೋಜನೆಗಳ ಸೌಲಭ್ಯಗಳಿಂದ ತಮ್ಮ ಕುಟುಂಬ ವಂಚಿತವಾಗಿದೆ ಎಂದು ಅಧಿಕಾರಿಗಳ ಮುಂದೆ ಮನವಿ ಸಲ್ಲಿಸಿದರು. ಪ್ರಕರಣದ ಪರಿಶೀಲನೆ ನಡೆಸಿ ಅಗತ್ಯ ನೆರವು ನೀಡುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದ್ದಾರೆ.

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ತಿಂಗಳಿಗೆ 3 ದಿನ ಪಿರಿಯಡ್ಸ್ ರಜೆ? ಆರೋಗ್ಯ-ಶಿಕ್ಷಣದ ನಡುವೆ ಹೊಸ ಚರ್ಚೆ

ಶಾಲಾ ಬಾಲಕಿಯರಿಗೆ ಪಿರಿಯಡ್ಸ್ ರಜೆ: ಕೇರಳದ ಪ್ರಸ್ತಾವನೆಗೆ ದೇಶಾದ್ಯಂತ ಚರ್ಚೆ

ಕೇರಳ ಸರ್ಕಾರವು ಶಾಲಾ ಬಾಲಕಿಯರಿಗೆ ಪಿರಿಯಡ್ಸ್ ಸಮಯದಲ್ಲಿ ತಿಂಗಳಿಗೆ ಮೂರು ದಿನಗಳ ರಜೆ ನೀಡುವ ಪ್ರಸ್ತಾವನೆ ಮುಂದಿಟ್ಟಿದ್ದು, ಇದು ಆರೋಗ್ಯ, ಶಿಕ್ಷಣ ಮತ್ತು ಮಹಿಳಾ ಹಕ್ಕುಗಳ ಕುರಿತು ದೇಶಾದ್ಯಂತ ಚರ್ಚೆಗೆ ಕಾರಣವಾಗಿದೆ. ಕೆಲವರು ಇದನ್ನು ವಿದ್ಯಾರ್ಥಿನಿಯರ ಆರೋಗ್ಯದ ದೃಷ್ಟಿಯಿಂದ ಸ್ವಾಗತಿಸಿದ್ದರೆ, ಇನ್ನು ಕೆಲವರು ಖಾಸಗಿತನ ಮತ್ತು ಶೈಕ್ಷಣಿಕ ಪರಿಣಾಮಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ವಾಯುಪಡೆ ಅಧಿಕಾರಿ ಪತ್ನಿಯ ಬಲವಂತದ ಮತಾಂತರ ಕೇಸ್‌: ತಲೆಮರೆಸಿಕೊಂಡಿದ್ದ ಮೌಲಾನಾ ಬಂಧನ

ಬಲವಂತದ ಮತಾಂತರ ಪ್ರಕರಣ: ಪ್ರಮುಖ ಮೌಲಾನಾ ಬಂಧನ

24 ವರ್ಷದ ಯುವತಿಯನ್ನು ಬಲವಂತವಾಗಿ ಮತಾಂತರಗೊಳಿಸಿದ ಆರೋಪಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಹಜ್ರತ್ ಮೌಲಾನಾವನ್ನು ನಾಗಪುರ ಪೊಲೀಸರು ಮಧ್ಯಪ್ರದೇಶದಲ್ಲಿ ಬಂಧಿಸಿದ್ದಾರೆ. ಮತಾಂತರ ಹಾಗೂ ನಿಕಾಹ್ ಪ್ರಕ್ರಿಯೆಯಲ್ಲಿ ಮೌಲಾನಾ ಪ್ರಮುಖ ಪಾತ್ರ ವಹಿಸಿದ್ದಾನೆ ಎಂದು ಆರೋಪಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರು ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲಿದ್ದಾರೆ.

ಭಾರತ–ಅಮೆರಿಕ ಸಂಬಂಧದಲ್ಲಿ ಬಿರುಕು? ಡೊನಾಲ್ಡ್‌ ಟ್ರಂಪ್ ನೀತಿಗಳಿಂದ ಹೆಚ್ಚಿದ ಉದ್ವಿಗ್ನತೆ

ಭಾರತ–ಅಮೆರಿಕ ಬಾಂಧವ್ಯದಲ್ಲಿ ಬಿರುಕು?

ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಮರಳಿದ ಬಳಿಕ ಭಾರತ–ಅಮೆರಿಕ ಸಂಬಂಧಗಳು ಹಲವು ವಿಷಯಗಳಲ್ಲಿ ಸವಾಲುಗಳನ್ನು ಎದುರಿಸುತ್ತಿವೆ. ಹೆಚ್ಚುವರಿ ಸುಂಕ, ವಲಸೆ ನೀತಿ, ಪಾಕಿಸ್ತಾನದೊಂದಿಗಿನ ಅಮೆರಿಕದ ಭಾಂದವ್ಯ ಹಾಗೂ ರಷ್ಯಾದಿಂದ ತೈಲ ಖರೀದಿಸುವ ವಿಚಾರದಲ್ಲಿ ಉಂಟಾದ ಭಿನ್ನಾಭಿಪ್ರಾಯಗಳು ಉಭಯ ರಾಷ್ಟ್ರಗಳ ನಡುವಿನ ಉದ್ವಿಗ್ನತೆಯನ್ನು ಹೆಚ್ಚಿಸಿವೆ. ಇದರಿಂದ ಭಾರತ–ಅಮೆರಿಕ ಬಾಂಧವ್ಯದ ಭವಿಷ್ಯದ ಬಗ್ಗೆ ಹೊಸ ಚರ್ಚೆ ಆರಂಭವಾಗಿದೆ.

ಇರಾನ್‌ಗೆ 300 ಬಿಲಿಯನ್ ಡಾಲರ್ ನೆರವು ನೀಡುತ್ತಾ ಅಮೆರಿಕ? ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ನೀಡಿದ ಸ್ಪಷ್ಟನೆಯಲ್ಲಿ ಏನಿದೆ?

ಇರಾನ್‌ಗೆ ನೆರವು ಅಲ್ಲ, ಹೂಡಿಕೆಗೆ ಮಾತ್ರ ಅವಕಾಶ: ಜೆ.ಡಿ. ವ್ಯಾನ್ಸ್

JD Vance: ಅಮೆರಿಕವು ಇರಾನ್‌ಗೆ 300 ಬಿಲಿಯನ್ ಡಾಲರ್ ನೆರವು ನೀಡುತ್ತಿದೆ ಎಂಬ ವರದಿಗಳನ್ನು ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ತಳ್ಳಿ ಹಾಕಿದ್ದಾರೆ. ಒಪ್ಪಂದದ ಷರತ್ತುಗಳನ್ನು ಇರಾನ್ ಪಾಲಿಸಿದರೆ ಮಾತ್ರ ಇತರ ರಾಷ್ಟ್ರಗಳಿಗೆ ಅಲ್ಲಿನ ಅಭಿವೃದ್ಧಿ ಯೋಜನೆಗಳಲ್ಲಿ ಹೂಡಿಕೆ ಮಾಡಲು ಅವಕಾಶ ನೀಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಮಹಾರಾಷ್ಟ್ರ ರಾಜಕೀಯದಲ್ಲಿ ಮತ್ತೆ ಬಂಡಾಯದ ಬಿರುಗಾಳಿ? ಉದ್ಧವ್ ಸೇನೆ ಸಂಸದರಿಗೆ 15 ಕೋಟಿ ರೂ. ಆಮಿಷದ ಆರೋಪ

ಉದ್ಧವ್ ಸೇನೆಗೆ ಮತ್ತೆ ಬಂಡಾಯ ಭೀತಿ? ಸಂಸದರಿಗೆ 15 ಕೋಟಿ ರೂ. ಆಮಿಷದ ಆರೋಪ

ಮಹಾರಾಷ್ಟ್ರ ರಾಜಕೀಯದಲ್ಲಿ ಮತ್ತೆ ಬಂಡಾಯದ ಭೀತಿ ಎದುರಾಗಿದೆ. ಶಿವಸೇನೆ (ಯುಬಿಟಿ) ಸಂಸದರನ್ನು ಸೆಳೆಯಲು ತಲಾ ₹15 ಕೋಟಿ ಆಮಿಷ ನೀಡಲಾಗುತ್ತಿದೆ ಎಂದು ಸಂಜಯ್ ರಾವತ್ ಆರೋಪಿಸಿದ್ದು, ಕೆಲ ಸಂಸದರು ಏಕನಾಥ್ ಶಿಂಧೆ ಬಣದ ಸಂಪರ್ಕದಲ್ಲಿದ್ದಾರೆ ಎಂಬ ವರದಿಗಳು ರಾಜಕೀಯ ಚರ್ಚೆಗೆ ಕಾರಣವಾಗಿವೆ.

ಜಿ7 ಶೃಂಗಸಭೆಯಲ್ಲಿ ಮತ್ತೆ ಸದ್ದು ಮಾಡಿದ ‘ಮೆಲೋಡಿ’ ಜೋಡಿ; "ಇನ್ಸ್ಟಾಗ್ರಾಂ ಫೇವರೆಟ್ ಕಪಲ್‌" ಎಂದ ಮೆಲೋನಿ!

ಜಿ7 ಶೃಂಗಸಭೆಯಲ್ಲಿ ಮೋದಿ–ಮೆಲೋನಿ ಮಾತುಕತೆ ವೈರಲ್

ಫ್ರಾನ್ಸ್‌ನಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ನಡುವಿನ ಸ್ನೇಹಪೂರ್ಣ ಸಂಭಾಷಣೆ ಮತ್ತೆ ‘ಮೆಲೋಡಿ’ ಟ್ರೆಂಡ್‌ಗೆ ಜೀವ ತುಂಬಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ಕ್ಷಣವು ಭಾರತ–ಇಟಲಿ ಸ್ನೇಹ ಸಂಬಂಧದ ಸಂಕೇತವಾಗಿ ಗಮನ ಸೆಳೆಯುತ್ತಿದೆ.

Vastu Tips: ಅಡುಗೆಮನೆಯ ಈ 5 ವಾಸ್ತು ನಿಯಮ ಪಾಲಿಸಿದರೆ ಮನೆಯಲ್ಲಿ ಹೆಚ್ಚಲಿದೆ ಸುಖ-ಸಮೃದ್ಧಿ

ಧನಾತ್ಮಕ ಶಕ್ತಿಗೆ ಕಿಚನ್‌ನಲ್ಲಿ ಈ ಬದಲಾವಣೆ ಮಾಡಿ

ವಾಸ್ತು ಶಾಸ್ತ್ರದ ಪ್ರಕಾರ ಅಡುಗೆಮನೆಯು ಮನೆಯ ಅತ್ಯಂತ ಪ್ರಮುಖ ಸ್ಥಳಗಳಲ್ಲಿ ಒಂದಾಗಿದೆ. ಅಡುಗೆಮನೆಯ ಸರಿಯಾದ ದಿಕ್ಕು, ಸ್ವಚ್ಛತೆ, ಗಾಳಿಯ ಹರಿವು ಹಾಗೂ ಬಣ್ಣಗಳ ಆಯ್ಕೆಯು ಕುಟುಂಬದ ಆರೋಗ್ಯ, ಸಂತೋಷ ಮತ್ತು ಸಮೃದ್ಧಿಯ ಮೇಲೆ ಪರಿಣಾಮ ಬೀರುತ್ತದೆ ಎನ್ನಲಾಗುತ್ತದೆ. ಈ 5 ಸರಳ ವಾಸ್ತು ಸಲಹೆಗಳು ಮನೆಯೊಳಗೆ ಧನಾತ್ಮಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗುತ್ತವೆ.

Astro Tips: ಪೂಜೆಯಲ್ಲಿ ತೆಂಗಿನಕಾಯಿ ಅರ್ಪಿಸುವುದಕ್ಕೂ ಇದೆ ನಿಯಮ; ಯಾವ ದೇವರಿಗೆ ಹೇಗೆ ಸಮರ್ಪಿಸಬೇಕು?; ಇಲ್ಲಿದೆ ಮಾಹಿತಿ

ದೇವರಿಗೆ ತೆಂಗಿನಕಾಯಿ ಅರ್ಪಿಸುವ ಮುನ್ನ ಈ ವಿಷಯ ತಿಳಿಯಿರಿ

ಹಿಂದೂ ಧರ್ಮದಲ್ಲಿ ತೆಂಗಿನಕಾಯಿಯನ್ನು ಶ್ರೀಫಲವೆಂದು ಪರಿಗಣಿಸಲಾಗುತ್ತದೆ. ಪೂಜೆ, ವ್ರತ ಹಾಗೂ ಶುಭ ಕಾರ್ಯಗಳಲ್ಲಿ ತೆಂಗಿನಕಾಯಿಗೆ ವಿಶೇಷ ಸ್ಥಾನವಿದ್ದು, ವಿವಿಧ ದೇವತೆಗಳಿಗೆ ವಿಭಿನ್ನ ರೀತಿಯಲ್ಲಿ ಅರ್ಪಿಸುವ ಸಂಪ್ರದಾಯವಿದೆ. ತೆಂಗಿನಕಾಯಿಯ ಧಾರ್ಮಿಕ ಮಹತ್ವ ಹಾಗೂ ಅದನ್ನು ಅರ್ಪಿಸುವ ನಿಯಮಗಳ ಬಗ್ಗೆ ಇಲ್ಲಿದೆ ಮಾಹಿತಿ.

ಹೊರ್ಮುಜ್ ಜಲಸಂಧಿಯಲ್ಲಿ 'ಟೋಲ್' ಇಲ್ಲ, ಕೇವಲ 'ಸೇವಾ ಶುಲ್ಕ': ಇರಾನ್ ಹೇಳಿಕೆಯ ಹಿಂದಿನ ಮರ್ಮವೇನು?

ಹೊರ್ಮುಜ್‌ನಲ್ಲಿ ಶುಲ್ಕ ವಿಧಿಸಲು ಇರಾನ್ ಸಿದ್ಧತೆ

Strait Of Hormuz: ಹೊರ್ಮುಜ್ ಜಲಸಂಧಿಯಲ್ಲಿ ಸಂಚರಿಸುವ ವಾಣಿಜ್ಯ ಹಡಗುಗಳಿಂದ ಭದ್ರತೆ ಹಾಗೂ ಇತರ ಕಡಲ ಸೇವೆಗಳ ಹೆಸರಿನಲ್ಲಿ ಶುಲ್ಕ ವಿಧಿಸುವುದಾಗಿ ಇರಾನ್ ಸೂಚಿಸಿದೆ. ಇದು ಟೋಲ್ ಅಲ್ಲ, ಸೇವೆಗಳಿಗೆ ನೀಡುವ ಶುಲ್ಕ ಎಂದು ಇರಾನ್ ಸ್ಪಷ್ಟಪಡಿಸಿದರೂ, ಅಂತಾರಾಷ್ಟ್ರೀಯ ಸಮುದಾಯದಲ್ಲಿ ಆತಂಕ ಮೂಡಿಸಿದೆ. ಹೊರ್ಮುಜ್‌ನಂತಹ ನೈಸರ್ಗಿಕ ಜಲಮಾರ್ಗದಲ್ಲಿ ಸಂಚಾರಕ್ಕೆ ಶುಲ್ಕ ವಿಧಿಸುವುದು ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ದೆಹಲಿಯಲ್ಲಿ ಪಾಕಿಸ್ತಾನ ಗುಪ್ತಚರ ಸಂಸ್ಥೆ ಐಎಸ್‌ಐ ಬೆಂಬಲಿತ ಉಗ್ರ ಜಾಲ ಪತ್ತೆ: 7 ಮಂದಿ ಬಂಧನ

ಐಎಸ್‌ಐ ಬೆಂಬಲಿತ ಉಗ್ರ ಜಾಲ ಭೇದಿಸಿದ ದೆಹಲಿ ಪೊಲೀಸರು

ಪಾಕಿಸ್ತಾನದ ಐಎಸ್‌ಐ ಬೆಂಬಲಿತ ಉಗ್ರ ಹಾಗೂ ಅಪರಾಧ ಜಾಲವನ್ನು ದೆಹಲಿ ಪೊಲೀಸರು ಭೇದಿಸಿದ್ದು, ಏಳು ಮಂದಿಯನ್ನು ಬಂಧಿಸಿದ್ದಾರೆ. ಈ ಜಾಲವು ಡ್ರೋನ್‌ಗಳ ಮೂಲಕ ಶಸ್ತ್ರಾಸ್ತ್ರ ಮತ್ತು ಮಾದಕ ದ್ರವ್ಯಗಳನ್ನು ಭಾರತಕ್ಕೆ ಕಳ್ಳ ಸಾಗಣೆ ಮಾಡುತ್ತಿದ್ದು, ಸೂಕ್ಷ್ಮ ಪ್ರದೇಶಗಳ ಮಾಹಿತಿಯನ್ನು ಪಾಕಿಸ್ತಾನಕ್ಕೆ ರವಾನಿಸುತ್ತಿತ್ತು. ಬಂಧಿತರಿಂದ ಶಸ್ತ್ರಾಸ್ತ್ರಗಳು, ಕಾರತೂಸುಗಳು, ಮೊಬೈಲ್ ಫೋನ್‌ಗಳು ಮತ್ತು ಇತರ ಸಾಕ್ಷ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕಾಕ್ರೋಚ್ ಜನತಾ ಪಾರ್ಟಿ ಸ್ಥಾಪಕನ ಮೇಲೆ ಜೈಪುರದಲ್ಲಿ ಹಲ್ಲೆ: ನಿರುದ್ಯೋಗವೇ ಕಾರಣ ಎಂದ ಅಭಿಜಿತ್‌ ದೀಪ್ಕೆ

ಯುವಕರಿಗೆ ಉದ್ಯೋಗವಿದ್ದರೆ ಹಲ್ಲೆ ಆಗುತ್ತಿರಲಿಲ್ಲ: ಅಭಿಜಿತ್‌ ದಿಪ್ಕೆ

Abhijeet Dipke: ರಾಜಸ್ಥಾನದ ಜೈಪುರದಲ್ಲಿ ನಡೆದ ಪ್ರತಿಭಟನೆ ವೇಳೆ ತಮ್ಮ ಮೇಲಾದ ಹಲ್ಲೆ ಮತ್ತು ಕಪಾಳಮೋಕ್ಷದ ಘಟನೆಗೆ ದೇಶದ ಹೆಚ್ಚುತ್ತಿರುವ ನಿರುದ್ಯೋಗವೇ ಕಾರಣ ಎಂದು ಕಾಕ್ರೋಚ್ ಜನತಾ ಪಾರ್ಟಿಯ ಸ್ಥಾಪಕ ಅಭಿಜೀತ್ ದೀಪ್ಕೆ ಹೇಳಿದ್ದಾರೆ. ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಅವರ ರಾಜೀನಾಮೆಗೆ ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ಈ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ. ದಾಳಿಕೋರರು ರಾಜಕೀಯ ಪಕ್ಷವೊಂದಕ್ಕೆ ಸೇರಿದವರು ಎಂದು ಸಿಜೆಪಿಯ ನಾಯಕರು ಆರೋಪಿಸಿದ್ದಾರೆ.

ವಾಯುಪಡೆ ಅಧಿಕಾರಿ ಪತ್ನಿ ಮೇಲೆ ಅತ್ಯಾಚಾರ ಎಸಗಿ, ಮತಾಂತರಕ್ಕೆ ಯತ್ನ- ಬೆಚ್ಚಿ ಬೀಳಿಸುವ ವಿಡಿಯೊ ವೈರಲ್‌

ಅತ್ಯಾಚಾರ, ಬ್ಲ್ಯಾಕ್‌ಮೇಲ್ ಆರೋಪ: ಇಬ್ಬರು ಅರೆಸ್ಟ್

Viral Video: ನಾಗಪುರದ ಭಾರತೀಯ ವಾಯುಪಡೆ ಅಧಿಕಾರಿಯ ಪತ್ನಿಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ. ಮಾದಕ ವಸ್ತು ನೀಡಿ ತಮ್ಮ ಮೇಲೆ ಅತ್ಯಾಚಾರ ಎಸಗಿ, ಅಶ್ಲೀಲ ವಿಡಿಯೊ ಮೂಲಕ ಬ್ಲ್ಯಾಕ್‌ಮೇಲ್ ಮಾಡಿ, ಬಲವಂತವಾಗಿ ಮತಾಂತರಗೊಳಿಸಲಾಗಿದೆ ಎಂದು ಆರೋಪಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಮತ್ತೋರ್ವನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ವೈರಲ್ ಆಗಿರುವ ವಿಡಿಯೋವನ್ನು ಪ್ರಮುಖ ಸಾಕ್ಷ್ಯವಾಗಿ ಪರಿಗಣಿಸಿ ತನಿಖೆ ಮುಂದುವರಿದಿದೆ.

ಐಸಿಸ್ ಲಿಂಕ್ ಆರೋಪ: ಖಾಜಾ ಮೊಯಿದ್ದೀನ್, ಸಹಚರ ಕೋರ್ಟ್‌ನಿಂದ ಖುಲಾಸೆ

ಉಗ್ರ ನಿಗ್ರಹ ಪ್ರಕರಣದಲ್ಲಿ ಖಾಜಾ ಮೊಯಿದ್ದೀನ್‌ಗೆ ಮುಕ್ತಿ

Khaja Moideen: ಐಸಿಸ್‌ ಜಾಲದ ಪ್ರಮುಖ ಸೂತ್ರಧಾರ ಎಂದು ಎನ್‌ಐಎ ಆರೋಪಿಸಿದ್ದ ಖಾಜಾ ಮೊಯಿದ್ದೀನ್ ಮತ್ತು ಅನ್ಸಾರ್ ಮೀರನ್ ವಿರುದ್ಧದ ಉಗ್ರ ಪಿತೂರಿ ಆರೋಪಗಳನ್ನು ಚೆನ್ನೈಯ ವಿಶೇಷ ಎನ್‌ಐಎ ನ್ಯಾಯಾಲಯ ವಜಾಗೊಳಿಸಿದೆ. ಖಾಜಾ ಮೊಯಿದ್ದೀನ್ ವಿರುದ್ಧ ಯಾವುದೇ ದೃಢ ಸಾಕ್ಷ್ಯ ಸಿಕ್ಕಿಲ್ಲ ಎಂದು ಕೋರ್ಟ್ ಹೇಳಿದ್ದು, ಇದನ್ನು ಎನ್‌ಐಎಗೆ ದೊಡ್ಡ ಹಿನ್ನಡೆಯಾಗಿ ಪರಿಗಣಿಸಲಾಗಿದೆ.

ಕೇರಳದಲ್ಲಿ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ; ‘ಪ್ರಿಯದರ್ಶಿನಿ’ ಯೋಜನೆಗೆ ಅದ್ಧೂರಿ ಚಾಲನೆ

ಕೇರಳದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ

ಕೇರಳ ಸರ್ಕಾರ ಮಹಿಳೆಯರು ಮತ್ತು ಟ್ರಾನ್ಸ್‌ಜೆಂಡರ್‌ಗಳಿಗಾಗಿ 'ಪ್ರಿಯದರ್ಶಿನಿ' ಉಚಿತ ಬಸ್ ಪ್ರಯಾಣ ಯೋಜನೆಗೆ ತೃಶೂರ್‌ನಲ್ಲಿ ಚಾಲನೆ ನೀಡಿದೆ. ಮಹಿಳಾ ಸಬಲೀಕರಣ ಮತ್ತು ಸುರಕ್ಷಿತ ಸಂಚಾರವನ್ನು ಉತ್ತೇಜಿಸುವ ಉದ್ದೇಶದಿಂದ ಜಾರಿಗೊಂಡಿರುವ ಈ ಯೋಜನೆಯು ಲಕ್ಷಾಂತರ ಮಹಿಳೆಯರ ಸಾರಿಗೆ ವೆಚ್ಚವನ್ನು ಕಡಿಮೆ ಮಾಡುವ ನಿರೀಕ್ಷೆಯಿದೆ.

Loading...