ಸಂಜೀವನಗರ ಶೌಚಾಲಯಕ್ಕೆ ಚಾಲನೆ
ಪಟ್ಟಣದ ಸಂಜೀವನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂಲ ಸೌಕರ್ಯಗಳ ಕೊರತೆ ಕುರಿತು ಜುಲೈ 26ರಂದು ವಿಶ್ವವಾಣಿ ದಿನ ಪತ್ರಿಕೆಯಲ್ಲಿ ಪ್ರಕಟ ವಾಗಿದ್ದ ವಿಶೇಷ ವರದಿಗೆ ಕರ್ನಾಟಕ ಹೈಕೋರ್ಟ್ನ ಬಾಲ ನ್ಯಾಯ ಸಮಿತಿ ಸ್ಪಂದಿಸಿದೆ. ವರದಿಯ ಬೆನ್ನಲ್ಲೇ ಶಾಲೆಯಲ್ಲಿ ಶೌಚಾಲಯ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯ ಗಳಿಗೆ ಚಾಲನೆ ದೊರೆತಿದೆ.