Vishwavani Special: ವಾರಕ್ಕೆ ಮೂರು ದಿನ ಕಾವೇರಿ ಆರತಿ
ಆಗಮ ಶಾಸ್ತ್ರದಲ್ಲಿ ಈಗಾಗಲೇ ಪರಣತಿ ಹೊಂದಿರುವವರನ್ನು ಆಯ್ಕೆ ಮಾಡಿ ಅವರಿಗೆ ತರಬೇತಿ ನೀಡುವ ಕಾರ್ಯವಾಗುತ್ತಿದೆ. ಸಂಸ್ಕೃತ ಪೀಠದಲ್ಲಿ ನೀಡುತ್ತಿರುವ ತರಬೇತಿ ಮೇಲ್ವಿಚಾರಣೆಯನ್ನು ಧಾರ್ಮಿಕ ದತ್ತಿ ಇಲಾಖೆ ಮಾಡುತ್ತಿದೆ ಎನ್ನಲಾಗಿದೆ. ಈಗಾಗಲೇ ಈ ಎರಡು ಕೇಂದ್ರದಲ್ಲಿ ಆರತಿಯ ಬಗ್ಗೆ ತರಬೇತಿ ನೀಡಲಾಗುತ್ತಿದೆ.


ಚುಂಚನಗಿರಿ, ಸುತ್ತೂರು ಸಂಸ್ಕೃತ ಪೀಠದ ಮೂಲಕ 300 ಜನರಿಗೆ ಆರತಿ ತರಬೇತಿ
ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮಹತ್ವಾಕಾಂಕ್ಷೆ ಘೋಷಣೆ ಯಾಗಿರುವ ಕಾವೇರಿ ಆರತಿಗೆ ಸಿದ್ಧತೆಗಳು ಆರಂಭಗೊಂಡಿವೆ. ಬುಧವಾರ ವಿಧಾನಸೌಧದಲ್ಲಿ ಸಚಿವರು, ಶಾಸಕರು, ರೈತ ಮುಖಂಡರ ಜೊತೆ ಸಭೆ ನಡೆಸಿದ ಬಳಿಕ ಮಾತನಾಡಿದ ಡಿಸಿಎಂ, ಕೆಆರ್ಎಸ್ಗೆ ಹೊಸ ರೂಪ ಕೊಡಲು ಪ್ರಾರಂಭ ಮಾಡಿದ್ದೇವೆ. ವಾರಕ್ಕೆ ಮೂರು ದಿನ ಕಾವೇರಿ ಆರತಿ ನಡೆಯಲಿದೆ.
10 ಸಾವಿರ ಆಸನಗಳ ವ್ಯವಸ್ಥೆ ಮಾಡುತ್ತೇವೆ. ಇದರಲ್ಲಿ ಶೇ. 70% ಆಸನಗಳು ಉಚಿತ, ಶೇ. 30% ಸೀಟುಗಳನ್ನು ಟಿಕೆಟ್ ಮೂಲಕ ಹಂಚಿಕೆ ಮಾಡಲಾಗುವುದು ಎಂದು ಹೇಳಿದರು. ಈ ನಡುವೆ ಕಾವೇರಿ ಆರತಿಯ ಪೂರ್ಜಾ ಕೈಂಕರ್ಯವನ್ನು ಮುನ್ನಡೆಸಲು ಬರೋಬ್ಬರಿ 300 ಜನರಿಗೆ ತರಬೇತಿ ನೀಡಲಾಗುತ್ತಿದೆ. ಆದಿಚುಂಚನಗಿರಿ ಹಾಗೂ ಜೆಎಸ್ಎಸ್ನಲ್ಲಿರುವ ಸಂಸ್ಕೃತ ಪೀಠದ ಮೂಲಕ 300 ಜನರಿಗೆ ಕಾವೇರಿ ಆರತಿಗೆ ಸಂಬಂಧಿಸಿದ ತರಬೇತಿ ನೀಡಲಾಗುತ್ತಿದೆ.
ಆಗಮ ಶಾಸ್ತ್ರದಲ್ಲಿ ಈಗಾಗಲೇ ಪರಣತಿ ಹೊಂದಿರುವವರನ್ನು ಆಯ್ಕೆ ಮಾಡಿ ಅವರಿಗೆ ತರಬೇತಿ ನೀಡುವ ಕಾರ್ಯವಾಗುತ್ತಿದೆ. ಸಂಸ್ಕೃತ ಪೀಠದಲ್ಲಿ ನೀಡುತ್ತಿರುವ ತರಬೇತಿ ಮೇಲ್ವಿಚಾರಣೆಯನ್ನು ಧಾರ್ಮಿಕ ದತ್ತಿ ಇಲಾಖೆ ಮಾಡುತ್ತಿದೆ ಎನ್ನಲಾಗಿದೆ. ಈಗಾಗಲೇ ಈ ಎರಡು ಕೇಂದ್ರದಲ್ಲಿ ಆರತಿಯ ಬಗ್ಗೆ ತರಬೇತಿ ನೀಡಲಾಗುತ್ತಿದೆ.
ಇದನ್ನೂ ಓದಿ: Roopa Gururaj Column: ಕೋಳೂರಿನ ಚೆನ್ನಮ್ಮನ ಶಿವಭಕ್ತಿ
ವಿಶ್ವ ಪ್ರಸಿದ್ಧ ಹರಿದ್ವಾರ ಹಾಗೂ ವಾರಾಣಾಸಿ ಗಂಗಾರತಿಯಲ್ಲಿ ತರಬೇತಿ ನೀಡುತ್ತಿರುವವರು ಹಾಗೂ ತರಬೇತಿ ಪಡೆದ ಕೆಲವರು ಭಾಗವಹಿಸಿ, ಅಲ್ಲಿನ ಪುರೋಹಿತರೊಂದಿಗೆ ಚರ್ಚೆ ನಡೆಸಿದ್ದಾರೆ. ಈ ವೇಳೆ ಯಾವೆಲ್ಲ ಧಾರ್ಮಿಕ ಆಚರಣೆಗಳು ಆರತಿಯ ಸಮಯದಲ್ಲಿ ನಡೆಯಬೇಕು ಎನ್ನುವ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಇದೀಗ ಕರ್ನಾಟಕಕ್ಕೆ ಸರಿಹೊಂದುವಂತೆ, ಕೆಲ ಮಾರ್ಪಾಟುಗ ಳೊಂದಿಗೆ ಕಾವೇರಿ ಆರತಿ ನೆರವೇರಿಸಲು ತೀರ್ಮಾನಿ ಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಹೆಚ್ಚುವರಿ ಜನರಿಗೆ ತರಬೇತಿ: ಹರಿದ್ವಾರ ಹಾಗೂ ಕಾಶಿಯಲ್ಲಿ ಒಂದೇ ಸಮಯದಲ್ಲಿ ನಾಲ್ಕೈದು ತಂಡವಾಗಿ ಗಂಗಾರತಿಯನ್ನು ಮಾಡಲಾಗುತ್ತದೆ. ಆದರೆ ಕಾವೇರಿ ಆರತಿಯನ್ನು ಒಂದೇ ತಂಡ ದಿಂದ ಮಾಡಲಾಗುವುದೇ ಅಥವಾ ನಾಲ್ಕೈದು ತಂಡದಿಂದ ಏಕಕಾಲಕ್ಕೆ ಮಾಡಲಾಗುವುದೋ ಎನ್ನುವ ಸ್ಪಷ್ಟನೆಯಿಲ್ಲ. ಆದ್ದರಿಂದ 300 ಜನರಿಗೆ ತರಬೇತಿ ನೀಡಲಾಗುತ್ತಿದೆ. ಪಾಳಿಯ ರೀತಿಯಲ್ಲಿ ತರಬೇತಿ ಪಡೆದವರಿಗೆ ಆರತಿಗೆ ಅವಕಾಶ ನೀಡುವ ಬಗ್ಗೆ ಚರ್ಚೆ ನಡೆದಿದೆ.
ಸುಮಾರು ಒಂದು ಗಂಟೆಯ ವಿಶೇಷ ಸಂಗೀತ: ಕಾವೇರಿ ಆರತಿ ಕೇವಲ ಧಾರ್ಮಿಕ ಕಾರ್ಯ ಕ್ರಮದ ರೀತಿಯಾಗದೇ ಸಾಂಸ್ಕೃ ತಿಕ ನೆಲೆಗಟ್ಟಿನಲ್ಲಿ ಹಾಗೂ ಕಾವೇರಿಯ ಇತಿಹಾಸವನ್ನು ಜನರಿಗೆ ತಿಳಿಸುವ ರೀತಿಯಲ್ಲಿರಬೇಕು ಎನ್ನುವ ತೀರ್ಮಾನಕ್ಕೆ ಸರಕಾರ ಬಂದಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಈಗಾಗಲೇ ನಾಡಿನ ಹಿರಿಯ ಸಂಗೀತ ನಿರ್ದೇಶಕರಾದ ಹಂಸಲೇಖ, ಸಾಧು ಕೋಕಿಲ, ಅರ್ಜುನ್ ಜನ್ಯ ಸೇರಿದಂತೆ ಪ್ರಮುಖರಿಗೆ ಪತ್ರ ಬರೆದು ಕಾವೇರಿ ಆರತಿಗೆ ವಿಶೇಷ ಗೀತೆಯನ್ನು ಸಂಯೋಜಿಸುವಂತೆ ಮನವಿ ಮಾಡಿದ್ದಾರೆ.
ಕಾವೇರಿಯ ಹುಟ್ಟು, ಮಹತ್ವ ಹಾಗೂ ಪ್ರಾಮುಖ್ಯತೆಯನ್ನು ತಿಳಿಸುವ ಒಂದು ಗಂಟೆಯ ಅವಽಯ ಈ ಗೀತೆಗಳನ್ನು ರಚಿಸಲಾಗುತ್ತಿದೆ ಎಂದು ತಿಳಿದುಬಂದಿದೆ.
*
ಕಾವೇರಿ ಆರತಿಯಲ್ಲಿ ಸ್ಥಳೀಯ ಪುರೋಹಿತರು, ಕಲಾವಿದರಿಗೆ ಅವಕಾಶ ಕಲ್ಪಿಸಲಾಗುವುದು. ಆದಿಚುಂಚನಗಿರಿ ಮಠದಲ್ಲಿ ಪುರೋಹಿತರಿಗೆ ತರಬೇತಿ ನೀಡಲಾಗುವುದು. ನೂರಾರು ಕಲಾವಿದರು ಭಾಗವಹಿಸಲಿದ್ದಾರೆ. ಕಾವೇರಿ ಹುಟ್ಟುವ ಕೊಡಗಿನಿಂದ ಕಾವೇರಿ ಸಮುದ್ರಕ್ಕೆ ಸೇರುವವರೆಗೂ ಎಷ್ಟು ಪ್ರದೇಶಗಳಲ್ಲಿ ವಿಭಿನ್ನ ಸಂಸ್ಕೃತಿ ಇದೆಯೋ ಅವುಗಳನ್ನು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಒಳಗೊಳ್ಳುವಂತೆ ಕ್ರಮವಹಿಸಲಾಗುವುದು.
-ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ