ʼಅಡ್ಡಕಸುಬಿʼಗಳ ಪತ್ತೆಗೆ ಪಣ
ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಶಾಸಕರು ಅಡ್ಡಮತದಾನ ಮಾಡಿರುವುದು ಜಾಹೀರಾಗಿದೆ. ಅಡ್ಡ ಮತದಾನದ ಹೊಡೆತದಿಂದ ಬಿಜೆಪಿ ಹಾಗೂ ಜೆಡಿಎಸ್ನಲ್ಲಿ ನಾಯಕತ್ವ ಕೊರತೆ ಎದ್ದು ಕಾಣುತ್ತಿದೆ. ಕೈ ಹೂಡಿರುವ ದಾಳಕ್ಕೆ ಮೈತ್ರಿಗಳು ಮುದುಡಿ ಕುಳಿತಂತಾಗಿದೆ. ಅತ್ತ ಅಡ್ಡ ಮತದಾನ ಮಾಡಬಹುದೆಂದು ಗೊತ್ತಿದ್ದರೂ ಅಭ್ಯರ್ಥಿಯನ್ನು ನಿಲ್ಲಿಸುವ ಮೂಲಕ, ಜೆಡಿಎಸ್ ತಂತ್ರಗಾರಿಕೆ ನಡೆಸಿದೆ. ಇದು ಪರೋಕ್ಷವಾಗಿ ಜೆಡಿಎಸ್, ಬಿಜೆಪಿ ಯಲ್ಲಿ ಹಿತಶತ್ರುಗಳ ಪತ್ತೆಗೆ ಕಾರಣವಾಗಿದೆ. ಕಾಂಗ್ರೆಸ್ ಅಡ್ಡಮತಕ್ಕೆ ಪ್ರೇರಣೆ ನೀಡಿದೆ ಎಂಬ ಕೂಗು ಹೆಚ್ಚಾಗಲೂ ಕಾರಣವಾಗಿದೆ.