ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ
Profile

Priyanka P

Freelance Writer

priyankagowda593@gmail.com

ನನ್ನ ಹೆಸರು ಪ್ರಿಯಾಂಕಾ. ನಮ್ಮೂರು ಉಪ್ಪಿನಂಗಡಿ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಎಂಸಿಜೆ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ್ದೇನೆ. ಪ್ರಜಾ ಟಿವಿ, ದಿಗ್ವಿಜಯ ನ್ಯೂಸ್ ಚಾನೆಲ್, ಅವಧಿ ಮ್ಯಾಗಝೀನ್, ಕನ್ನಡ ದುನಿಯಾ, ವಿಜಯಕರ್ನಾಟಕ ಮತ್ತು ಹಿಂದೂಸ್ತಾನ್ ಟೈಮ್ಸ್ ಕನ್ನಡದಲ್ಲಿ ಕೆಲಸ ನಿರ್ವಹಿಸಿದ್ದೇನೆ. ಈ ಮೊದಲು ಸುದ್ದಿ ಮತ್ತು ಜೀವನಶೈಲಿ ವಿಭಾಗದಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ, ವಿಶ್ವವಾಣಿಯಲ್ಲಿ ವೈರಲ್ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Articles
ರೈಲ್ವೇ ಹಳಿಯಲ್ಲಿ ಆತ್ಮಹತ್ಯೆಗೆ ಶರಣಾದ ತಾಯಿ-ಮಕ್ಕಳು; ಸಂಬಂಧಿಕರಲ್ಲಿ ಕ್ಷಮೆ ಕೇಳಿದ್ದೇಕೆ?

ರೈಲ್ವೇ ಹಳಿಯಲ್ಲಿ ಆತ್ಮಹತ್ಯೆಗೆ ಶರಣಾದ ತಾಯಿ-ಮಕ್ಕಳು

ರೈಲ್ವೇ ಹಳಿಯಲ್ಲಿ ತಾಯಿ ಮತ್ತು ಮಕ್ಕಳು ಆತ್ಮಹತ್ಯೆಗೆ ಶರಣಾದ ದುರ್ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಮಹಿಳೆ ತನ್ನ ಸಂಬಂಧಿಕರಿಗೆ ಕ್ಷಮೆ ಕೇಳಿ ಪತ್ರ ಬರೆದಿದ್ದು, ಡೆತ್ ನೋಟ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದು, ಈ ಹೃದಯ ವಿದ್ರಾವಕ ಘಟನೆಯ ಹಿಂದಿನ ಕಾರಣಗಳನ್ನು ಪತ್ತೆಹಚ್ಚಲು ಮುಂದಾಗಿದ್ದಾರೆ.

ಪ್ರಧಾನಿ ದೇಶವನ್ನೇ ಮಾರಿದ್ದಾರೆ: ಅಮೆರಿಕ ವ್ಯಾಪಾರ ಒಪ್ಪಂದದ ಬಗ್ಗೆ ರಾಹುಲ್ ಗಾಂಧಿ ಆರೋಪ

ಪ್ರಧಾನಿ ರಾಜಿ ಮಾಡಿಕೊಂಡಿದ್ದಾರೆ ಎಂದ ರಾಹುಲ್ ಗಾಂಧಿ

Rahul Gandhi’s allegation: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅಮೆರಿಕ–ಭಾರತ ವ್ಯಾಪಾರ ಒಪ್ಪಂದದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ಆರೋಪ ಹೊರಿಸಿದ್ದಾರೆ. ಪ್ರಧಾನಿ ಮೋದಿ ರಾಜಿ ಮಾಡಿಕೊಂಡಿದ್ದಾರೆ ಮತ್ತು ದೇಶವನ್ನು ಮಾರಾಟ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಕುಡಿದ ಮತ್ತಿನಲ್ಲಿ ಅರೆಬೆತ್ತಲೆಯಾಗಿ ಪತ್ನಿ ಮೇಲೆ ಹಲ್ಲೆ ನಡೆಸಿದ ಕಾನ್‌ಸ್ಟೇಬಲ್; ಚಿಕ್ಕ ಮಗು ಕೈಲಿದ್ರೂ ಮನಸ್ಸು ಕರಗಲಿಲ್ಲ

ಅರೆಬೆತ್ತಲೆಯಾಗಿ ಪತ್ನಿಯ ಮೇಲೆ ಹಲ್ಲೆ ನಡೆಸಿದ ಪೊಲೀಸ್ ಪೇದೆ

Constable attacks wife: ಕುಡಿದ ಮತ್ತಿನಲ್ಲಿ ಕಾನ್‌ಸ್ಟೇಬಲ್‍ ಒಬ್ಬ ತನ್ನ ಪತ್ನಿಯ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ. ಪತ್ನಿಯು ತನ್ನ ಮಗುವನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದರೆ, ಪೇದೆಯು ಅರೆಬೆತ್ತಲೆಯಾಗಿದ್ದು, ಮನಬಂದಂತೆ ಹೆಂಡತಿಗೆ ಥಳಿಸಿದ್ದಾನೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕೈಯಿಂದಲ್ಲ, ಬಾಯಿಯಿಂದ ನಾಗರಹಾವನ್ನು ಹಿಡಿದ ವ್ಯಕ್ತಿ; ಮೈಜುಮ್ಮೆನ್ನಿಸುವ ವಿಡಿಯೊ ವೈರಲ್

ಕೈಯಿಂದಲ್ಲ, ಬಾಯಿಯಿಂದ ನಾಗರಹಾವನ್ನು ಹಿಡಿದ ವ್ಯಕ್ತಿ

Cobra caught with mouth: ಕೈಯಿಂದಲ್ಲ, ಬಾಯಿಯಿಂದಲೇ ನಾಗರಹಾವನ್ನು ಹಿಡಿದ ವ್ಯಕ್ತಿಯೊಬ್ಬನ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಈ ಅಪಾಯಕಾರಿ ಕೃತ್ಯವು ಬೆಚ್ಚಿ ಬೀಳಿಸುವಂತಿದ್ದು, ವ್ಯಕ್ತಿಯ ಧೈರ್ಯ ಮತ್ತು ಅಜಾಗರೂಕತೆಯ ಬಗ್ಗೆ ಚರ್ಚೆ ಹುಟ್ಟು ಹಾಕಿದೆ. ಒಡಿಶಾದ ಬಾಲಸೋರ್‌ನಲ್ಲಿ ಈ ಘಟನೆ ನಡೆದಿದೆ.

ಬೋಯಿಂಗ್ 787 ಫ್ಲೀಟ್‌ನ ಇಂಧನ ನಿಯಂತ್ರಣ ಸ್ವಿಚ್‌ಗಳ ಪರಿಶೀಲನೆ ಪ್ರಾರಂಭಿಸಿದ ಏರ್ ಇಂಡಿಯಾ

ಡ್ರೀಂಲೈನರ್‌ನಲ್ಲಿ ಸ್ವಿಚ್ ದೋಷ; ಏರ್ ಇಂಡಿಯಾದಿಂದ ಮರುಪರಿಶೀಲನೆ

Air India begins inspection: ಏರ್ ಇಂಡಿಯಾ ಬೋಯಿಂಗ್ 787 ಫ್ಲೀಟ್‌ನ ಎಲ್ಲ ವಿಮಾನಗಳಲ್ಲಿ ಇಂಧನ ನಿಯಂತ್ರಣ ಸ್ವಿಚ್‌ಗಳ ಪರಿಶೀಲನೆಯನ್ನು ಆರಂಭಿಸಿದೆ. ಡ್ರೀಂಲೈನರ್‌ನಲ್ಲಿ ಸ್ವಿಚ್ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಈ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಸಂಸ್ಥೆ ತಿಳಿಸಿದೆ. ವಿಮಾನಯಾನ ಸಂಸ್ಥೆಯು ಪ್ರಸ್ತುತ 33 ಬೋಯಿಂಗ್ 787 ಡ್ರೀಮ್‌ಲೈನರ್‌ಗಳನ್ನು ನಿರ್ವಹಿಸುತ್ತಿದೆ.

ಭಾರತ-ಅಮೆರಿಕ ವ್ಯಾಪಾರ ಒಪ್ಪಂದ: ರಾಜ್ಯಸಭೆ ಕಲಾಪ ಬಹಿಷ್ಕರಿಸಿ ಹೊರ ನಡೆದ ವಿಪಕ್ಷ

ಭಾರತ-ಅಮೆರಿಕ ವ್ಯಾಪಾರ ಒಪ್ಪಂದ: ರಾಜ್ಯಸಭೆಯಿಂದ ವಿಪಕ್ಷಗಳ ಸಭಾತ್ಯಾಗ

India–US trade deal: ಭಾರತ–ಅಮೆರಿಕ ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿದ ವಿವಾದದ ನಡುವೆ, ಈ ವಿಷಯದ ಕುರಿತು ಚರ್ಚೆ ನಡೆಸುವಂತೆ ಆಗ್ರಹಿಸಿ ವಿರೋಧ ಪಕ್ಷಗಳು ರಾಜ್ಯಸಭೆಯಿಂದ ಸಭಾತ್ಯಾಗ ನಡೆಸಿವೆ. ಒಪ್ಪಂದವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಏಕಪಕ್ಷೀಯವಾಗಿ ಘೋಷಿಸಿದ್ದೇಕೆ ಎಂದು ವಿಪಕ್ಷಗಳು ಸರ್ಕಾರವನ್ನು ಪ್ರಶ್ನಿಸಿವೆ.

ನೇಪಾಳದಂತೆ ಭಾರತದಲ್ಲೂ ಜೆನ್ ಝೀ ಪ್ರತಿಭಟನೆಗೆ ಸೋನಮ್ ವಾಂಗ್ಚುಕ್ ಕುಮ್ಮಕ್ಕು: ಕೇಂದ್ರ ಸರ್ಕಾರ ಆರೋಪ

ಜೆನ್ ಝೀ ಪ್ರತಿಭಟನೆಗೆ ಸೋನಮ್ ವಾಂಗ್ಚುಕ್ ಕುಮ್ಮಕ್ಕು: ಕೇಂದ್ರ

Sonam Wangchuk: ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ನೇಪಾಳದ ಮಾದರಿಯಂತೆ ಭಾರತದಲ್ಲಿಯೂ ಜೆನ್ ಝೀ ಹಿಂಸಾಚಾರಕ್ಕೆ ಪ್ರಚೋದಿಸಿದ್ದಾರೆ ಎಂದು ಕೇಂದ್ರ ಸರ್ಕಾರ ಆರೋಪಿಸಿದೆ. ಈ ಬಗ್ಗೆ ಕೇಂದ್ರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶದ ಆಡಳಿತವು ಸುಪ್ರೀಂ ಕೋರ್ಟ್‌ಗೆ ತಿಳಿಸಿವೆ.

ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಲು 6 ವರ್ಷದ ಪುತ್ರಿಯನ್ನೇ ಕೊಲೆ ಮಾಡಿದ ಪಾಪಿ ತಂದೆ

ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಲು ಮಗುವನ್ನು ಕೊಂದ ಅಪ್ಪ

Father kills his daughter: ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶದಿಂದ ತನ್ನ ಆರು ವರ್ಷದ ಪುತ್ರಿಯನ್ನೇ ತಂದೆ ಹತ್ಯೆ ಮಾಡಿರುವ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. ಈ ಅಮಾನವೀಯ ಕೃತ್ಯ ಸಾರ್ವಜನಿಕರಲ್ಲಿ ಆಕ್ರೋಶ ಮತ್ತು ಆಘಾತ ಮೂಡಿಸಿದ್ದು, ಪ್ರಕರಣ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಎಸ್‌ಬಿಐ ಎಟಿಎಂ ಹೊರಗೆ ಉದ್ಯಮಿ ಮೇಲೆ ಗುಂಡು ಹಾರಿಸಿ 6 ಲಕ್ಷ ರೂ. ದರೋಡೆ!

ಉದ್ಯಮಿ ಮೇಲೆ ಗುಂಡು ಹಾರಿಸಿ 6 ಲಕ್ಷ ರೂ. ದರೋಡೆ

SBI ATM robbery: ಎಸ್‌ಬಿಐ ಎಟಿಎಂ ಹೊರಗೆ ಕೇರಳ ಮೂಲದ ಉದ್ಯಮಿಯ ಮೇಲೆ ಗುಂಡು ಹಾರಿಸಿ 6 ಲಕ್ಷ ರೂ. ಹಣವನ್ನು ದರೋಡೆ ಮಾಡಿದ ಘಟನೆ ತೆಲಂಗಾಣ ಹೈದರಾಬಾದ್‍ನಲ್ಲಿ ನಡೆದಿದೆ. ಹಣ ತೆಗೆಯುವ ವೇಳೆ ಆರೋಪಿಗಳು ದಾಳಿ ನಡೆಸಿದ್ದು, ಗಾಯಗೊಂಡ ಉದ್ಯಮಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಮದುವೆಯಂದು ಕುದುರೆ ಸವಾರಿ ಮಾಡಿದ್ದಕ್ಕಾಗಿ ದಲಿತ ವರನ ಮೇಲೆ ಹಲ್ಲೆ; ಗುಜರಾತ್‌ನಲ್ಲೊಂದು ಅಮಾನವೀಯ ಘಟನೆ

ಕುದುರೆ ಸವಾರಿ ಮಾಡಿದ್ದಕ್ಕಾಗಿ ದಲಿತ ವರನ ಮೇಲೆ ಹಲ್ಲೆ

Dalit groom attacked: ವಿವಾಹದ ಸಂದರ್ಭದಲ್ಲಿ ದಲಿತ ವರನು ಕುದುರೆ ಸವಾರಿ ಮಾಡಿದ ಕಾರಣ ಆತನ ಮೇಲೆ ಕತ್ತಿಯಿಂದ ಹಲ್ಲೆ ನಡೆಸಲಾಗಿದೆ. ಗುಜರಾತ್‌ನಲ್ಲಿ ಈ ಘಟನೆ ನಡೆದಿದ್ದು, ಸಾಮಾಜಿಕ ವರ್ಗಭೇದದಿಂದ ಉಂಟಾದ ಹಿಂಸಾತ್ಮಕ ಘಟನೆ ಎಂದು ಹೇಳಲಾಗಿದೆ. ವಿಜ್ಞಾನ-ತಂತ್ರಜ್ಞಾನದಲ್ಲಿ ಎಷ್ಟೇ ಮುಂದುವರಿದರೂ ಪುರಾತನ ಜಾತಿ ವ್ಯವಸ್ಥೆ ಇನ್ನೂ ತೊಲಗಿಲ್ಲ ಎಂಬುದು ವಿಚಾರವೇ ಆತಂಕ ಮೂಡಿಸುತ್ತಿದೆ ಎಂದು ನೆಟ್ಟಿಗರು ತಿಳಿಸಿದ್ದಾರೆ.

ದತ್ತು ಪುತ್ರನ ತಾಯಿಯನ್ನು ಹುಡುಕಲು 7 ಸಾವಿರ ಕಿ.ಮೀ. ದೂರದಿಂದ ಭಾರತಕ್ಕೆ ಬಂದ ಡೆನ್ಮಾರ್ಕ್ ದಂಪತಿ

ದತ್ತು ಪುತ್ರನ ತಾಯಿಯನ್ನು ಹುಡುಕಲು ಭಾರತಕ್ಕೆ ಬಂದ ಡೆನ್ಮಾರ್ಕ್ ದಂಪತಿ

ದತ್ತು ಪಡೆದ ಪುತ್ರನ ತಾಯಿಯನ್ನು ಹುಡುಕುವ ಉದ್ದೇಶದಿಂದ ಡೆನ್ಮಾರ್ಕ್‌ನಿಂದ ಭಾರತಕ್ಕೆ ದಂಪತಿ ಬಂದಿದ್ದಾರೆ. ವರ್ಷಗಳ ಹಿಂದೆ ನಡೆದ ದತ್ತು ಪ್ರಕ್ರಿಯೆಯ ಹಿನ್ನೆಲೆಯಲ್ಲಿನ ಈ ಹುಡುಕಾಟಕ್ಕೆ ಭಾವನಾತ್ಮಕ ಸ್ಪರ್ಶ ಸಿಕ್ಕಿದೆ. ದಂಪತಿ ಹೋದಲ್ಲೆಲ್ಲ ಗ್ರಾಮಸ್ಥರು ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು.

ಬೆಂಗಳೂರಿನಲ್ಲಿ ಹಾಡಹಗಲೇ ದರೋಡೆ: ಖಾಸಗಿ ಕಂಪನಿ ಉದ್ಯೋಗಿಯ ಮೇಲೆ ಹಲ್ಲೆ ನಡೆಸಿ 31 ಲಕ್ಷ ರುಪಾಯಿ ದೋಚಿದ ಡಕಾಯಿತರು

ಬೆಂಗಳೂರಿನಲ್ಲಿ ಹಾಡಹಗಲೇ ದರೋಡೆ; 31 ಲಕ್ಷ ರುಪಾಯಿ ದೋಚಿದ ಖದೀಮರು

Robbery in Bengaluru: ಬೆಂಗಳೂರು ನಗರದ ಬನ್ನೇರುಘಟ್ಟದಲ್ಲಿ ಮಧ್ಯಾಹ್ನದ ಹೊತ್ತಿನಲ್ಲಿ ನಡೆದ ದರೋಡೆ ಭೀತಿ ಮೂಡಿಸಿದೆ. ಖಾಸಗಿ ಕಂಪನಿಯ ಉದ್ಯೋಗಿಯ ಮೇಲೆ ದಾಳಿ ನಡೆಸಿ 31 ಲಕ್ಷ ರುಪಾಯಿಯನ್ನು ದರೋಡೆಕೋರರು ದೋಚಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ. ಘಟನೆಯ ವಿಡಿಯೊ ವೈರಲ್ ಆಗಿದೆ.

ಎಲಾನ್ ಮಸ್ಕ್ ಹೇಳಿಕೆ ಉಲ್ಲೇಖಿಸಿ ಭಾರತದ ಆರ್ಥಿಕತೆಯ ಬಗ್ಗೆ ರಾಹುಲ್ ಗಾಂಧಿಗೆ ಪಾಠ ಮಾಡಿದ ಸಚಿವ ಕಿರಣ್ ರಿಜಿಜು

ರಾಹುಲ್ ಗಾಂಧಿಗೆ ಪಾಠ ಮಾಡಿದ ಸಚಿವ ಕಿರಣ್ ರಿಜಿಜು

Minister Kiren Rijiju: ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಸಂಸತ್ತಿನ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಭಾರತದ ಆರ್ಥಿಕತೆ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳ ವಿರುದ್ಧ ರಾಹುಲ್ ಗಾಂಧಿ ಮಾಡಿದ್ದ ಟೀಕೆಗೆ ಉತ್ತರವಾಗಿ, ಭಾರತ ಜಾಗತಿಕ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ರಿಜಿಜು ಒತ್ತಿ ಹೇಳಿದ್ದಾರೆ.

36 ಗಂಟೆಗಳಲ್ಲಿ 8 ಹೆಣ್ಮಕ್ಕಳು ಸೇರಿ 12 ಅಪ್ರಾಪ್ತ ಮಕ್ಕಳು ನಾಪತ್ತೆ; ಮುಂಬೈಯಲ್ಲಿ ಹೈ ಅಲರ್ಟ್

36 ಗಂಟೆಗಳಲ್ಲಿ 8 ಹೆಣ್ಮಕ್ಕಳು ಸೇರಿ 12 ಅಪ್ರಾಪ್ತ ಮಕ್ಕಳು ನಾಪತ್ತೆ

Missing children: ಮುಂಬೈನಲ್ಲಿ ಕೇವಲ 36 ಗಂಟೆಗಳ ಅವಧಿಯಲ್ಲಿ 8 ಹೆಣ್ಮಕ್ಕಳು ಸೇರಿ ಒಟ್ಟು 12 ಅಪ್ರಾಪ್ತ ಮಕ್ಕಳು ನಾಪತ್ತೆಯಾಗಿರುವ ಘಟನೆ ಭಾರಿ ಆತಂಕಕ್ಕೆ ಕಾರಣವಾಗಿದೆ. ಪ್ರಕರಣದ ಗಂಭೀರತೆಯನ್ನು ಗಮನಿಸಿದ ಪೊಲೀಸ್ ಇಲಾಖೆ ಹೈ ಅಲರ್ಟ್ ಘೋಷಿಸಿದ್ದು, ಮಕ್ಕಳ ಪತ್ತೆಗೆ ವ್ಯಾಪಕ ಶೋಧ ಕಾರ್ಯಾಚರಣೆ ಆರಂಭಿಸಿದೆ. ನಗರದ ಬೀದಿಗಳು, ಕೊಳೆಗೇರಿಗಳು, ರೈಲ್ವೆ ನಿಲ್ದಾಣಗಳು ಮತ್ತು ಬಸ್ ಡಿಪೋಗಳಲ್ಲಿ ಕಾಣೆಯಾದ ಮಕ್ಕಳ ಹುಡುಕಾಟ ತೀವ್ರಗೊಂಡಿದೆ.

ಹಸುವಿನ ಮೇಲೆ ಅತ್ಯಾಚಾರವೆಸಗಿದ ಮುಸ್ಲಿಂ ವ್ಯಕ್ತಿ! ಹಿಂದೂಗಳಿಂದ ಭಾರಿ ಆಕ್ರೋಶ

ಹಸುವಿನ ಮೇಲೆ ಅತ್ಯಾಚಾರವೆಸಗಿದ ಮುಸ್ಲಿಂ ವ್ಯಕ್ತಿ

ಹಸುವಿನ ಮೇಲೆ ಅತ್ಯಾಚಾರ ನಡೆದಿದೆ ಎನ್ನಲಾದ ಆರೋಪದ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಬೇತುಲ್ ಜಿಲ್ಲೆಯಲ್ಲಿ ತೀವ್ರ ಉದ್ವಿಗ್ನತೆ ಉಂಟಾಗಿದೆ. ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯರು, ಅಂಗಡಿಗಳು ಹಾಗೂ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸ್‌ ಪಡೆಗಳನ್ನು ನಿಯೋಜಿಸಲಾಗಿದೆ. ಪ್ರಕರಣ ಸಂಬಂಧ ತನಿಖೆ ಮುಂದುವರಿದಿದೆ.

ರಸ್ತೆಯಲ್ಲೇ ಫ್ಲೈಯಿಂಗ್ ಕಿಸ್; ಕಾರು ಚಾಲಕನಿಂದ ಮಹಿಳೆಗೆ ಕಿರುಕುಳ, ಇಲ್ಲಿದೆ ವಿಡಿಯೊ

ರಸ್ತೆಯಲ್ಲೇ ಫ್ಲೈಯಿಂಗ್ ಕಿಸ್; ಕಾರು ಚಾಲಕನಿಂದ ಮಹಿಳೆಗೆ ಕಿರುಕುಳ

Flying kiss harassment: ರಸ್ತೆಯಲ್ಲೇ ಕಾರು ಚಾಲಕನೊಬ್ಬ ಮಹಿಳೆಯತ್ತ ಫ್ಲೈಯಿಂಗ್ ಕಿಸ್ ನೀಡಿ ಕಿರುಕುಳ ನೀಡಿದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಾರ್ವಜನಿಕ ರಸ್ತೆಯಲ್ಲಿ ನಡೆದ ಈ ಅಸಭ್ಯ ವರ್ತನೆಯ ವಿಡಿಯೊ ಈಗ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಮಹಿಳೆಯರ ಸುರಕ್ಷತೆ ಬಗ್ಗೆ ಮತ್ತೊಮ್ಮೆ ಗಂಭೀರ ಚರ್ಚೆಗೆ ಕಾರಣವಾಗಿದೆ.

ಕಟ್ಟುನಿಟ್ಟಿನ ನಿಯಮ ಇದ್ದರೂ ಕೇಂದ್ರ ಕಾರಾಗೃಹದಲ್ಲಿ ಪ್ರೇಮ ಪಕ್ಷಿಗಳ  ರೀಲ್ಸ್; ಕಾನೂನು ಉಲ್ಲಂಘಿಸಿ ವಿಡಿಯೊ ಶೂಟ್‌ ಮಾಡಿದ್ದು ಹೇಗೆ?

ಜೈಲಿನಲ್ಲಿರುವ ಪ್ರೇಮಿಯೊಂದಿಗೆ ಯುವತಿಯ ರೀಲ್ಸ್

Raipur Central Jail: ಛತ್ತೀಸ್‌ಗಢದ ರಾಯ್‌ಪುರ ಕೇಂದ್ರ ಕಾರಾಗೃಹದ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬೆನ್ನಲ್ಲೇ ಮತ್ತೊಮ್ಮೆ ವಿವಾದಕ್ಕೀಡಾಗಿದೆ. ಜೈಲಿನ ಭೇಟಿ ವೇಳೆಯಲ್ಲಿ ಯುವತಿಯೊಬ್ಬಳು ತನ್ನ ಪ್ರೇಮಿ ಖೈದಿಯೊಂದಿಗೆ ಮುಕ್ತವಾಗಿ ವಿಡಿಯೊ ರೆಕಾರ್ಡಿಂಗ್ ಮಾಡಿ, ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾಳೆ. ವಿಡಿಯೊ ವೈರಲ್ ಆಗುತ್ತಿದ್ದಂತೆ ಆಕ್ರೋಶ ಭುಗಿಲೆದ್ದಿದೆ.

ಇನ್ಮುಂದೆ ಆಟಿಸಂ ಸ್ಪೆಕ್ಟ್ರಮ್ ರೋಗಕ್ಕೆ ಸ್ಟೆಮ್ ಸೆಲ್ ಚಿಕಿತ್ಸೆ ನಡೆಸುವಂತಿಲ್ಲ; ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ಆಟಿಸಂ ಸ್ಪೆಕ್ಟ್ರಮ್ ರೋಗಕ್ಕೆ ಸ್ಟೆಮ್ ಸೆಲ್ ಚಿಕಿತ್ಸೆ ನಡೆಸುವಂತಿಲ್ಲ

Stem cell therapy: ಭಾರತದಲ್ಲಿ ವೈದ್ಯಕೀಯ ನೈತಿಕತೆ ಮತ್ತು ರೋಗಿಗಳ ಸುರಕ್ಷತೆಯ ಕುರಿತಾಗಿ ಮಹತ್ವದ ತೀರ್ಪೊಂದನ್ನು ನೀಡಿರುವ ಸುಪ್ರೀಂ ಕೋರ್ಟ್, ಆಟಿಸಂ ಸ್ಪೆಕ್ಟ್ರಮ್ ರೋಗಕ್ಕೆ (ASD) ಸ್ಟೆಮ್ ಸೆಲ್ ಚಿಕಿತ್ಸೆಯನ್ನು ಕ್ಲಿನಿಕಲ್ ಟ್ರಯಲ್‌ಗಳ ಹೊರತಾಗಿ ಬಳಸಲು ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದೆ. ವೈಜ್ಞಾನಿಕ ಸಾಕ್ಷ್ಯವಿಲ್ಲದ ಹಾಗೂ ನಿಯಂತ್ರಣವಿಲ್ಲದ ಪ್ರಯೋಗಾತ್ಮಕ ಚಿಕಿತ್ಸೆಯನ್ನು ರೋಗಿಗಳಿಗೆ ನೀಡುವುದು ನೈತಿಕವಲ್ಲ ಎಂದು ಹೇಳಿದೆ.

ಕುಗ್ಗಿಲ್ಲ ಇನ್ನೂ ಮೋದಿ ಹವಾ;  ಲೋಕಸಭಾ ಚುನಾವಣೆ ನಡೆದರೆ ಎನ್‌ಡಿಎಗೆ 350ಕ್ಕೂ ಹೆಚ್ಚು ಸ್ಥಾನಗಳು!

ಇಂದು ಲೋಕಸಭಾ ಚುನಾವಣೆ ನಡೆದರೆ ಬಿಜೆಪಿ ಗೆಲ್ಲುತ್ತೆ- ಸಮೀಕ್ಷೆ

Modi wave continues: ಪ್ರಧಾನಮಂತ್ರಿ ನರೇಂದ್ರ ಮೋದಿಯ ಅಲೆ ಮುಂದುವರಿಯುತ್ತಿದ್ದು, ಇಂದು ಲೋಕಸಭಾ ಚುನಾವಣೆಯು ನಡೆದರೆ ಬಿಜೆಪಿ ನೇತೃತ್ವದ ಎನ್‌ಡಿಎ 350ಕ್ಕೂ ಹೆಚ್ಚು ಸೀಟುಗಳನ್ನು ಗೆಲ್ಲುವ ಸಾಧ್ಯತೆ ಇದೆ ಎಂದು ಸಮೀಕ್ಷೆ ಕಂಡುಹಿಡಿದೆ. ಈ ಬಗ್ಗೆ ಇಲ್ಲಿದೆ ಮತ್ತಷ್ಟು ವಿವರ.

ಹೆಲ್ಮೆಟ್ ಇಲ್ಲದೆ ಬೈಕ್ ಚಲಾಯಿಸಿದ್ದಕ್ಕಾಗಿ ಶಾಸಕರ ಸಹೋದರನಿಗೆ ದಂಡ; ಪೊಲೀಸರ ಮೇಲೆಯೇ ದರ್ಪ ತೋರಿದ ವ್ಯಕ್ತಿ

ಹೆಲ್ಮೆಟ್ ಇಲ್ಲದೆ ಬೈಕ್ ಚಲಾಯಿಸಿದ್ದಕ್ಕಾಗಿ ಶಾಸಕರ ಸಹೋದರನಿಗೆ ದಂಡ

MLA’s brother fined: ಹೆಲ್ಮೆಟ್ ಇಲ್ಲದೆ ಬೈಕ್ ಚಲಾಯಿಸಿದ ಪ್ರಕರಣದಲ್ಲಿ ಶಾಸಕರ ಸಹೋದರನಿಗೆ ದಂಡ ವಿಧಿಸಲಾಗಿದ್ದು, ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆದಿದೆ. ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ದಂಡದ ಕುರಿತು ಹೆಡ್ ಕಾನ್‌ಸ್ಟೆಬಲ್ ಜೊತೆ ಮಾತನಾಡುವಂತೆ ಕೇಳಿದಾಗ, ಬೈಕ್ ಸವಾರ ಕೋಪಗೊಂಡರು ಎನ್ನಲಾಗಿದೆ.

ಕುಪ್ವಾರಾದ ಎಲ್‌ಒಸಿ ಬಳಿ ಪಾಕಿಸ್ತಾನಿ ಡ್ರೋನ್‌ಗಳು ಪತ್ತೆ; ಭಾರತೀಯ ಸೇನೆಯಿಂದ ಕಾರ್ಯಾಚರಣೆ ಶುರು

ಕುಪ್ವಾರಾದ ಎಲ್‌ಒಸಿ ಬಳಿ ಪಾಕಿಸ್ತಾನಿ ಡ್ರೋನ್‌ಗಳು ಪತ್ತೆ

Pakistani drones spotted: ಉತ್ತರ ಕಾಶ್ಮೀರದ ಕುಪ್ವಾರಾ ಜಿಲ್ಲೆಯ ನಿಯಂತ್ರಣ ರೇಖೆ (LoC) ಬಳಿ ಪಾಕಿಸ್ತಾನಿ ಡ್ರೋನ್‌ಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಭಾರತೀಯ ಸೇನೆ ಗುಂಡು ಹಾರಿಸಿದೆ. ನಂತರ ಡ್ರೋನ್‌ಗಳು ಹಿಂದಕ್ಕೆ ತಿರುಗಿ ಗಡಿಯ ಇನ್ನೊಂದು ಬದಿಗೆ ದಾಟಿದವು ಎಂದು ವರದಿಯಾಗಿದೆ. ಕೇರನ್ ಸೆಕ್ಟರ್‌ನ ಜೋಧಾ ಮಕಾನ್ ಬೀರಂದೋರಿ ಪ್ರದೇಶದ ಸಮೀಪ ಸುಮಾರು 15 ಪಾಕಿಸ್ತಾನಿ ಡ್ರೋನ್‌ಗಳು ಪತ್ತೆಯಾಗಿದೆ.

16,000 ಉದ್ಯೋಗಿಗಳನ್ನು ವಜಾಗೊಳಿಸಿದ ಅಮೆಜಾನ್; ಭಾರತದಲ್ಲೂ ನೂರಾರು ಉದ್ಯೋಗಿಗಳ ಮೇಲೆ ಪರಿಣಾಮ

16,000 ಉದ್ಯೋಗಿಗಳನ್ನು ವಜಾಗೊಳಿಸಿದ ಅಮೆಜಾನ್

Amazon layoffs: ಅಮೆಜಾನ್ 16,000 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದ್ದು, ಭಾರತದಲ್ಲೂ ನೂರಾರು ಉದ್ಯೋಗಿಗಳು ಇದರ ಪರಿಣಾಮಕ್ಕೆ ಒಳಗಾಗಿದ್ದಾರೆ. ಈ ಹೊಸ ಲೇಆಫ್ ಕಂಪನಿಯ ಜಾಗತಿಕ ಮರುರಚನೆಯ ಭಾಗವಾಗಿದೆ. ಬೆಂಗಳೂರು, ಚೆನ್ನೈ ಮತ್ತು ಹೈದರಾಬಾದ್‌ನಂತಹ ನಗರಗಳಲ್ಲಿ ಕೆಲಸಮಾಡುತ್ತಿರುವ ಹಲವರ ಮೇಲೆ ಪರಿಣಾಮ ಬೀರಿದೆ.

ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಪಟ್ಟ? ಗರಿಗೆದರಿದ ರಾಜಕೀಯ ಚಟುವಟಿಕೆ

ಮಹಾರಾಷ್ಟ್ರ ಡಿಸಿಎಂ ಆಗ್ತಾರಾ ಸುನೇತ್ರಾ ಪವಾರ್?

Mahayuti alliance: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಹುದ್ದೆಗೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ಪರಿಗಣಿಸುವ ಸಾಧ್ಯತೆ ಇದೆ. ರಾಜಕೀಯ ವಲಯಗಳಲ್ಲಿ ಈ ಕುರಿತು ಚರ್ಚೆ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಅಧಿಕೃತ ಘೋಷಣೆ ಹೊರಬರುವ ಬಗ್ಗೆ ನಿರೀಕ್ಷಿಸಲಾಗಿದೆ. ಸುನೇತ್ರಾ ಪವಾರ್ ಪ್ರಸ್ತುತ ರಾಜ್ಯಸಭಾ ಸದಸ್ಯರಾಗಿದ್ದಾರೆ.

‘ʼನಾವು ಒಂದೇ ದಿಕ್ಕಿನಲ್ಲಿ ಜತೆಗೆ ಸಾಗುತ್ತಿದ್ದೇವೆ’ʼ: ರಾಹುಲ್ ಗಾಂಧಿ ಭೇಟಿ ಬಳಿಕ ಶಶಿ ತರೂರ್ ಹೇಳಿಕೆ

ನಾವು ಒಂದೇ ದಿಕ್ಕಿನಲ್ಲಿ ಜತೆಗೆ ಸಾಗುತ್ತಿದ್ದೇವೆ: ಶಶಿ ತರೂರ್‌

Shashi Tharoor’s statement: ರಾಹುಲ್ ಗಾಂಧಿ ಅವರೊಂದಿಗೆ ಸಭೆ ನಡೆಸಿದ ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರು, ಪಕ್ಷದೊಳಗಿನ ಸಂಬಂಧ ಮತ್ತು ಭವಿಷ್ಯದ ಬಗ್ಗೆ ಆತ್ಮವಿಶ್ವಾಸದ ಸಂದೇಶ ರವಾನಿಸಿದ್ದಾರೆ. ನಾವು ಒಂದೇ ದಿಕ್ಕಿನಲ್ಲಿ ಜತೆಗೆ ಸಾಗುತ್ತಿದ್ದೇವೆ ಎಂದು ಹೇಳಿದರು.

Loading...