ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Profile

Pushpa Kumari

Pushpakumarisangee@gamil.com

Articles
Viral Video: ತಂದೂರಿ ರೋಟಿಗಾಗಿ ರಣರಂಗವಾಯ್ತು ಮದುವೆ: ನೆಟ್ಟಿಗರಿಂದ ಭಾರಿ ಟೀಕೆ

ತಂದೂರಿ ರೋಟಿಗಾಗಿ ಮದುವೆ ಮನೆಯಲ್ಲಿ ಮುಗಿಬಿದ್ದ ಅತಿಥಿಗಳು

ಇಲ್ಲೊಂದು ಮದುವೆ ಸಮಾರಂಭದಲ್ಲಿ ತಂದೂರಿ ರೋಟಿಗಾಗಿ ಮದುವೆ ಮನೆಯೇ ರಣರಂಗವಾಗಿದೆ. ಹರಿಯಾಣದ ಸಿರ್ಸಾ ಜಿಲ್ಲೆಯ ಗೊಲ್ಚಾ ಪ್ಯಾಲೇಸ್‌ನಲ್ಲಿ ಈ ಘಟನೆ ನಡೆದಿದ್ದು ಆಹಾರ ವಿತರಣೆಯ ವೇಳೆ ಉಂಟಾದ ತೀವ್ರ ಅವ್ಯವಸ್ಥೆಯಿಂದಾಗಿ ಮದುವೆ ಸಭಾಂಗಣದಲ್ಲೇ ಜಗಳ ಉಂಟಾಗಿದೆ.‌ ತಂದೂರಿ ರೋಟಿಗಾಗಿ ಅತಿಥಿಗಳು ತೋರಿದ ಅಸಭ್ಯ ವರ್ತನೆಯ ವಿಡಿಯೊ ವೈರಲ್ ಆಗಿದ್ದು ವ್ಯಾಪಕ ಟೀಕೆಗೆ ಕಾರಣವಾಗಿದೆ.

ಬೆಂಗಳೂರಿನಲ್ಲಿ ಚಹಾ ಸೇವಿಸಿದ ‌ವಿದೇಶಿ ವ್ಲಾಗರ್‌ನಿಂದ ಭಾರತೀಯ ಆತಿಥ್ಯಕ್ಕೆ ಮೆಚ್ಚುಗೆ: ವಿಡಿಯೊ ಇಲ್ಲಿದೆ

ಬೆಂಗಳೂರಿನ ಆತಿಥ್ಯಕ್ಕೆ ಮನಸೋತ ವಿದೇಶಿ ಪ್ರವಾಸಿಗ

Viral Video: ಇತ್ತೀಚೆಗೆ ಅಮೆರಿಕದ ವ್ಲಾಗರ್ ಒಬ್ಬರು ಬೆಂಗಳೂರಿಗೆ ಭೇಟಿ ನೀಡಿದ್ದು ಭಾರತೀಯ ಜನರ ಔದರ್ಯ ಗುಣದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಅವರು ಬೆಂಗಳೂರಿನ ಡಿ.ಜೆ. ಹಳ್ಳಿಯಲ್ಲಿ ಆದ ಒಂದು ವಿಶಿಷ್ಟ ಅನುಭವವನ್ನು ಶೇರ್ ಮಾಡಿದ್ದಾರೆ. ಸಣ್ಣ ಚಹಾ ಅಂಗಡಿಯೊಂದರ ಮಾಲೀಕರೊಬ್ಬರು ತನ್ನ ಬಳಿ ಹಣ ಪಡೆಯಲು ನಿರಾಕರಿಸಿದ ಸರಳ ಸೌಜನ್ಯಕ್ಕೆ ಅವರು ಫಿದಾ ಆಗಿದ್ದು ವಿಡಿಯೊ ಮೂಲಕ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

Viral Video: ಭಾರತದ ಬಸ್ ಯೂರೋಪ್‌ಗಿಂತ ಬೆಸ್ಟ್ ಎಂದ ಕೆನಡಾ ವ್ಲಾಗರ್‌

ಭಾರತದಲ್ಲಿನ ಬಸ್‌ಗಳ ಸೌಕರ್ಯಕ್ಕೆ ಮನ ಸೋತ ಕೆನಡಾ ಪ್ರವಾಸಿಗ

ಪಶ್ಚಿಮ ಬಂಗಾಳದ ಕೋಲ್ಕತ್ತಾದಿಂದ ರಾತ್ರಿಯ ಬಸ್ ಪ್ರಯಾಣ ಮಾಡಿದ ಕೆನಡಾದ ಪ್ರವಾಸಿಗರೊಬ್ಬರು ಇಲ್ಲಿನ ವ್ಯವಸ್ಥೆಯನ್ನು ಹಾಡಿ ಹೊಗಳಿದ್ದಾರೆ. ಸ್ಲೀಪರ್ ಬಸ್‌ಗಳಲ್ಲಿ ಕೊಡುವ ವಿವಿಧ ಸೌಲಭ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭಾರತೀಯ ಬಸ್‌ನಲ್ಲಿ ಇರುವ ಸೌಲಭ್ಯಗಳು ಯುರೋಪಿಯನ್ ಬಸ್‌ಗಳಿಗಿಂತಲೂ ಮೇಲ್ಮಟ್ಟದಲ್ಲಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ವಿಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಶೀಘ್ರದಲ್ಲೇ ಅದ್ದೂರಿಯಾಗಿ ಮೂಡಿ ಬರಲಿದೆ ʼರಾಯರ ದರ್ಶನʼ ಆಲ್ಬಂ ಸಾಂಗ್

ʼರಾಯರ ದರ್ಶನʼ ಆಲ್ಬಂ ಸಾಂಗ್ ಶೀಘ್ರದಲ್ಲೇ ಅನಾವರಣ

Rayara Darshan Album Song: ರಾಯರ ಕುರಿತು ಸಾಕಷ್ಟು ಭಕ್ತಿಗೀತೆಗಳು ಬಂದಿವೆ. ಆದರೆ ಈವರೆಗೂ ಯಾರು ಹೇಳದ ಹಾಗೂ ತೋರಿಸದ ರಾಯರ ಬಗೆಗಿನ ಕೆಲವು ವಿಷಯಗಳನ್ನು ʼರಾಯರ ದರ್ಶನʼ ಆಲ್ಭಂನಲ್ಲಿ ತೋರಿಸಲಾಗುತ್ತಿದೆ. ಲಕ್ಷ್ಮೀ ಗಣೇಶ ಪ್ರೊಡಕ್ಷನ್ಸ್ ಹಾಗೂ ದಿ ನ್ಯೂ ಇಂಡಿಯನ್ ಟೈಮ್ಸ್ ಲಾಂಛನದಲ್ಲಿ ಸುಗುಣ ರಘು ಈ ಅಲ್ಭಂ ನಿರ್ಮಾಣ ಮಾಡಿದ್ದಾರೆ.

ರಸ್ತೆ ಮಧ್ಯೆಯೇ ಅಡುಗೆ ಮಾಡಿದ ದಂಪತಿ; ಪ್ರಶ್ನಿಸಿದ ವ್ಯಕ್ತಿಯನ್ನೇ ತರಾಟೆಗೆ ತೆಗೆದುಕೊಂಡ ಮಹಿಳೆ

ರಸ್ತೆ ಮಧ್ಯೆ ಅಡುಗೆ ಮಾಡಿದ ಮಹಿಳೆ: ನೆಟ್ಟಿಗರು ಹೇಳಿದ್ದೇನು?

Viral Video: ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾರ್ಗ ಮಧ್ಯೆಯೇ ಮಹಿಳೆಯೊಬ್ಬರು ಅಡುಗೆ ಮಾಡುತ್ತಿರುವ ವಿಡಿಯೊ ವೈರಲ್ ಆಗಿದೆ. ಮಹಿಳೆ ಮತ್ತು ಆಕೆಯ ಪತಿ ಮಾರ್ಗ ಮಧ್ಯೆಯೇ ಕಾರನ್ನು ನಿಲ್ಲಿಸಿ ರಸ್ತೆ ಮೇಲೆ ದಿನಸಿ ಸಾಮಗ್ರಿ ಎಲ್ಲ ಹರಡಿ ಅಡುಗೆ ಮಾಡುತ್ತಿರುವ ದೃಶ್ಯಗಳು ವೈರಲ್ ಆಗಿದೆ.‌ ಜನನಿಬಿಡ ಪ್ರದೇಶದಲ್ಲಿ ದಂಪತಿ ಯಾವುದೇ ಭಯ, ಅಂಜಿಕೆ ಇಲ್ಲದೆ ಮುಕ್ತವಾಗಿ ಅಡುಗೆ ಮಾಡುತ್ತಿದ್ದ ಈ ವಿಡಿಯೊ ಚರ್ಚೆ ಹುಟ್ಟು ಹಾಕಿದೆ.

ಅಂಬಾನಿ ಮದುವೆಯನ್ನು ಮೀರಿಸಿದ ಸಮಾರಂಭ ಇದು; ಇಲ್ಲಿ ಅತಿಥಿಗಳಿಗೆ ರಾಜಾತಿಥ್ಯ

ಈ ಸಮಾರಂಭಕ್ಕೆ ಹೋದವರೇ ಅದೃಷ್ಟವಂತರು; ವೈರಲ್‌ ವಿಡಿಯೊ ನೋಡಿ

ಮದುವೆ ಸಮಾರಂಭದ ಔತಣ ಕೂಟಕ್ಕೆ ಆಗಮಿಸಿದ ಅತಿಥಿಗಳಿಗೆ ರಾಜಾತಿಥ್ಯ ನೀಡಲಾಗಿದೆ. ರಾಜ ಮಹಾರಾಜರ ಕಾಲದ ಅದ್ಧೂರಿ ಔತಣಕೂಟವನ್ನು ರೀ ಕ್ರಿಯೆಟ್ ಮಾಡಿರುವ ಘಟನೆ ದಕ್ಷಿಣ ಭಾರತದ ವಿವಾಹ ಸಮಾರಂಭವೊಂದರಲ್ಲಿ ನಡೆದಿದೆ. ಮದುವೆಯ ಊಟದ ಛತ್ರವು ಸಂಪೂರ್ಣ ಮಾರ್ಪಾಡಾಗಿದ್ದು ಸೆಲೆಬ್ರಿಟಿಗಳ ಔತಣಕೂಟವನ್ನು ಕೂಡ ಮೀರಿಸುವಂತಿದೆ. ಸದ್ಯ ಈ ವಿಡಿಯೊ ವೈರಲ್‌ ಆಗಿದೆ.

ವಾಕಿಂಗ್ ಮಾಡುವಾಗ ನಮ್ಮ ಪಾದರಕ್ಷೆ ಹೇಗಿರಬೇಕು?

ವಾಕಿಂಗ್ ಹೋಗುವಾಗ ಇಂತಹ ಪಾದರಕ್ಷೆ ಬಳಸಿ!

Walking for health: ನಮ್ಮ ನಡಿಗೆಯ ಭಾಗವಾಗಿರುವ ಪಾದ ಮತ್ತು ಪಾದರಕ್ಷೆಯ ನಾವೆಷ್ಟು ಜಾಗ್ರತೆ ವಹಿಸುತ್ತೇವೆ? ದಿನದ ವಾಕಿಂಗ್‌ಗೆ ಯಾವುದಾದರೂ ಒಂದು ಪಾದರಕ್ಷೆ ತೊಟ್ಟು ಹೋದರಾಯಿತು ಎಂಬ ಧೋರಣೆಯಿದ್ದರೆ, ಕಾಲುಗಳ ಸಮಸ್ಯೆಗೆ ಮೂಲವಾಗಬಹುದು. ಹಾಗಾದರೆ ಇದಕ್ಕಾಗಿಯೇ ವಿನ್ಯಾಸಗೊಳಿಸಿದ ಪಾದರಕ್ಷೆಗಳು ನಮಗೆ ಬೇಕೆ? ಬೇಕಾದರೆ ಯಾಕೆ?

ಬೆಳಗಿನ ಹೊತ್ತು ಸರಣಿ ಸೀನುಗಳೇ? ಇಲ್ಲಿದೆ ಕಾರಣ

ಬೆಳಗ್ಗಿನ ಸಮಯ ಸೀನುಗಳ ಸಮಸ್ಯೆಯೇ? ಇಲ್ಲಿದೆ ಪರಿಹಾರ

ಸೀನುವುದೇನು ರೋಗವೇ ಎಂದರೆ, ಅಲ್ಲ. ಸರಳವಾಗಿ ಹೇಳುವುದಾದರೆ, ದೇಹಕ್ಕೆ ಅಗತ್ಯ ಇಲ್ಲದ ಯಾವುದೋ ವಸ್ತು ದೇಹವನ್ನು ಪ್ರವೇಶಿಸಿದಾಗ ಉಂಟಾಗುವ ಪ್ರತಿಕ್ರಿಯೆಯಿದು. ಹೀಗೆ ಸೀನುವುದರಿಂದ ಆರೋಗ್ಯಕ್ಕೆ ಹಾನಿಯೂ ಆಗುವುದಿಲ್ಲ. ಆದರೆ ಬೆಳಗ್ಗೆ ಇರುವ ಎಲ್ಲ ಕೆಲಸಗಳನ್ನೂ ಬಿಟ್ಟು ಕಣ್ಣು-ಮೂಗು ಒರೆಸಿಕೊಂಡು ಕೂತಿರುವುದೇ ದೊಡ್ಡದಾಗಿ ಸಿಕ್ಕಾಪಟ್ಟೆ ಕಿರಿಕಿರಿ ಎನಿಸುತ್ತದೆ.

ಮಕ್ಕಳಲ್ಲಿ ದೃಷ್ಟಿ ದೋಷ ಬರಲು ಕಾರಣ ಏನು? ಇಲ್ಲಿದೆ ಸರಳ ಆಯುರ್ವೇದದ ಪರಿಹಾರ ಕ್ರಮ

ಮಕ್ಕಳಲ್ಲಿ ದೃಷ್ಟಿ ದೋಷ ಸಮಸ್ಯೆ ಬರದಿರಲು ಈ ಆಯುರ್ವೇದ ವಿಧಾನ ಬಳಸಿ!

ಎಳೆ ಮಕ್ಕಳಿಗೆ ಈ ದೃಷ್ಟಿ ಸಮಸ್ಯೆ ಕಂಡು ಬರುವ ಪ್ರಮಾಣ ಗಣನೀಯವಾಗಿ ಹೆಚ್ಚಾಗುತ್ತಿದೆ. ಮಕ್ಕಳಲ್ಲಿ ಕಂಡು ಬರುವ ವಿಟಮಿನ್ ಡಿ ಕೊರತೆ, ಆಹಾರದಲ್ಲಿ ಪೋಷಕಾಂಶ ಸರಿಯಾದ ಪ್ರಮಾಣದಲ್ಲಿ ಲಭ್ಯವಾಗದಿರುವುದು ಇದಕ್ಕೆ ಮುಖ್ಯ ಕಾರಣವಾಗಿದೆ. ಹೀಗಾಗಿ ಮಕ್ಕಳ ಲಾಲನೆ ಪಾಲನೆ ಮಾಡುವಾಗ ಈ ಎಲ್ಲ ವಿಚಾರದ ಕಡೆ ಗಮನಹರಿಸಬೇಕು ಎಂದು ವಿಶ್ವವಾಣಿ ಹೆಲ್ತ್ ಚಾನೆಲ್ ನಲ್ಲಿ ಖ್ಯಾತ ಆಯು ರ್ವೇದದ ವೈದ್ಯರಾದ ಡಾ. ಪದ್ಮಾವತಿ ರಾಥೋಡ್ ಅವರು ತಿಳಿಸಿಕೊಟ್ಟಿದ್ದಾರೆ.

Horoscope Today December 13th: ರವಿಯಿಂದ ಇಂದು ಈ ರಾಶಿಗೆ ಅದೃಷ್ಟದ ಸೂಚನೆ!

ಇಂದು ರವಿಯ ಪ್ರಭಾವ: ಈ ರಾಶಿಯವರಿಗೆ ಇಂದಿದೆ ಕೋಟ್ಯಾಧಿಪತಿ ಯೋಗ!

ನಿತ್ಯ ಭವಿಷ್ಯ ಡಿಸೆಂಬರ್ 13, 2025: ಇಂದು ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ಹಿಮದೃತು ಮಾರ್ಗಶಿರಾ ಮಾಸೆ, ಕೃಷ್ಣ ಪಕ್ಷದ, ಉತ್ತರ ಪಾಲ್ಗುಣಿ ನಕ್ಷತ್ರದ ಡಿಸೆಂಬರ್ 13ನೇ ತಾರೀಖಿನ ಶನಿವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿ ಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ

Dev Anand: ಬ್ಲಾಕ್‌ ಕೋಟ್‌ ಹಾಕಿದ್ರೆ ಜೈಲು ಎಂದು ಈ ನಟನಿಗೆ ನ್ಯಾಯಲಯವೇ ಎಚ್ಚರಿಕೆ ನೀಡಿತ್ತು! ಅಂಥದ್ದೇನಿದೆ?

ಬಾಲಿವುಡ್ ನಟ ದೇವ್ ಆನಂದ್ ಬ್ಲ್ಯಾಕ್ ಕೋಟ್ ಹಿಂದಿನ ಸ್ಟೋರಿ ಏನು ಗೊತ್ತಾ?

ಭಾರತೀಯ ಸಿನಿಮಾ ಇಂಡಸ್ಟ್ರಿಯಲ್ಲಿ ನಟ ದೇವಾನಂದ್ ಅವರು ಅನೇಕ ವರ್ಷದಿಂದ ಕಲಾ ಸೇವೆ ನೀಡಿದ್ದಾರೆ. 1958ರಲ್ಲಿ ತೆರೆಕಂಡ ಕಾಲಾ ಪಾನಿ (Kala Pani) ಮತ್ತು 1961ರಲ್ಲಿ ತೆರೆಕಂಡ ಹಮ್ ದೋನೋ (Hum Dono) ಸಿನಿಮಾಗಳಲ್ಲಿ ಬ್ಲ್ಯಾಕ್ ಕೋಟ್ ಧರಿಸಿ ಅದನ್ನೇ ಒಂದು ಫ್ಯಾಷನ್ ಆಗಿ ಅವರು ಮಾರ್ಪ‌ಡಿಸಿದ್ದರು.

Viral Video: ರೀಲ್ಸ್ ಕ್ರೇಜ್‌ಗಾಗಿ  ಪತ್ನಿ ಜೊತೆಗಿನ 'ಖಾಸಗಿ' ವೀಡಿಯೋ ಶೇರ್ ಮಾಡಿದ ಯುವಕ!

ರೀಲ್ಸ್ ಹುಚ್ಚುಗಾಗಿ ಪತ್ನಿಯ ಖಾಸಗಿ ವಿಡಿಯೊವನ್ನು ವೈರಲ್ ಮಾಡಿದ ಯುವಕ!

ಯುವಕನೊಬ್ಬ ತನ್ನ ಪತ್ನಿಯ ಖಾಸಗಿ ವಿಡಿಯೊವನ್ನೇ ರೆಕಾರ್ಡ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾನೆ. ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ಈ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.. ಜನರು ತನ್ನನ್ನು ಗುರುತಿಸಬೇಕು, ನಾನು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಬೇಕು ಎಂಬ ಉದ್ದೇಶದಿಂದ ಹೀಗೆ ಮಾಡಿದ್ದೇನೆ ಎಂದು ಯುವಕ ತನ್ನ ಹೆಂಡತಿ ಬಳಿಯೇ ಹೇಳಿ ಕೊಂಡಿದ್ದಾನಂತೆ.‌ ಸದ್ಯ ಪತಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಅಪ್ಪ ಐ ಲವ್‌ ಯೂ: ಮಗಳಿಗಾಗಿ ಮನೆ ಊಟ ತಂದು ರೈಲ್ವೇ ಸ್ಟೇಶನ್‌ನಲ್ಲಿ ಚಳಿಯಲ್ಲಿ ನಡುಗುತ್ತಾ ಕಾದ ತಂದೆ: ಭಾವುಕ ಕ್ಷಣ ಇಲ್ಲಿದೆ

ಚಳಿಯಲ್ಲಿಯೂ ಮಗಳಿಗಾಗಿ ರೈಲ್ವೇ ಸ್ಟೇಶನ್‌ನಲ್ಲಿ ಕಾದ ತಂದೆ

ತಂದೆ ಮತ್ತು ಮಗಳ ನಡುವೆ ಇರುವ ಪ್ರೀತಿ , ವಾತ್ಸಲ್ಯವು ಎಲ್ಲದಕ್ಕೂ ಮಿಗಿಲಾಗಿದೆ. ತಂದೆಯಾದವನು ತನ್ನ ಮಕ್ಕಳಿಗಾಗಿ ಎಂತಹ ಕಷ್ಟವನ್ನು ಕೂಡ ಸಹಿಸಬಲ್ಲ, ಮಕ್ಕಳ ಏಳ್ಗೆಗಾಗಿ ಏನು ಬೇಕಾದರೂ ಮಾಡುತ್ತಾನೆ. ಅಂತೆಯೇ ದೆಹಲಿಯಿಂದ ಉದಯಪುರಕ್ಕೆ ಪ್ರಯಾಣಿಸುತ್ತಿದ್ದ ಯುವತಿಯೊಬ್ಬಳು ತನ್ನ ತಂದೆಯ ಬಗ್ಗೆ ಭಾವನಾತ್ಮಕ ವಿಡಿಯೋ ಒಂದನ್ನು ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿ ದ್ದಾರೆ.

ಬೆಂಗಳೂರಿನ ರಸ್ತೆ ಬದಿ ಕಸ ಸುರಿಯುವ ವಿಡಿಯೊ ವೈರಲ್‌ ಆದ ಬೆನ್ನಲ್ಲೇ ಬಿತ್ತು ಫೈನ್‌; ಕಿರಣ್ ಮಜುಂದಾರ್ ಶಾ ಅಸಮಾಧಾನಗೊಂಡಿದ್ದೇಕೆ?

ರಸ್ತೆಗೆ ಕಸ ಎಸೆದವರಿಗೆ ತಕ್ಕ ಶಾಸ್ತ್ರಿ: ಐದು ಸಾವಿರ ದಂಡ ವಿಧಿಸಿದ ಅಧಿಕಾರಿ

ಇತ್ತೀಚೆಗೆ ನಗರ ಪ್ರದೇಶದಲ್ಲಿ ಎಲ್ಲೆಂದರಲ್ಲಿ ಕಸ ಹಾಕುತ್ತಿರುವ ಪ್ರಮಾಣ ಹೆಚ್ಚಾಗಿದೆ. ಅದರಲ್ಲೂ ಬೆಂಗಳೂರಿನಲ್ಲಿ ಎಷ್ಟೇ ಎಚ್ಚರಿಕೆ ನೀಡಿದರೂ ಪದೇ ಪದೇ ತ್ಯಾಜ್ಯ ನಿರ್ವಹಣೆಯಲ್ಲಿ ಉಲ್ಲಂಘನೆಗಳು ಹೆಚ್ಚಾಗುತ್ತಿದೆ. ಇದೀ‌ಗ ಬೆಂಗಳೂರು ನಗರದ ಸರ್ವಜ್ಞನಗರ ವಿಭಾಗದ ರಸ್ತೆಯಲ್ಲಿ ಇಬ್ಬರು ವ್ಯಕ್ತಿಗಳು ಕಸವನ್ನು ಎಸೆದು ಹೋಗಿರುವ ಘಟನೆ ಬೆಳಕಿಗೆ ಬಂದಿದೆ. ಈ ವಿಚಾರ ತಿಳಿದ ಅಧಿಕಾರಿಗಳು ವಾಹನ ಮಾಲೀಕರಿಗೆ ಐದು ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ.

Viral Video: ರೀಲ್ಸ್‌ಗಾಗಿ ಮೊಸಳೆಯ ಬಾಲ ಹಿಡಿಯಲು ಯತ್ನಿಸಿದ ಯುವಕ: ಅಪಾಯಕಾರಿ ವಿಡಿಯೊ ವೈರಲ್

ಮೊಸಳೆಯ ಬಾಲ ಹಿಡಿಯಲು ಹೋದ ಯುವಕ: ಮುಂದೇನಾಯ್ತು ನೋಡಿ

ಆಲ್ವಾರ್‌ನ ಸಿಲಿಸೆರ್ ಸರೋವರದ ಬಳಿ ಈ ಆಘಾತಕಾರಿ ಘಟನೆ ನಡೆದಿದೆ. ಯುವಕರ ಗುಂಪೊಂದು ಈ ಅಪಾಯಕಾರಿ ಸ್ಥಳಕ್ಕೆ ಭೇಟಿ ನೀಡಿದ್ದು ರೀಲ್ಸ್ ಹುಚ್ಚಿಗಾಗಿ ಮೊಸಳೆ ಜೊತೆ ಹುಚ್ಚಾಟ ಮೆರಿದಿದ್ದಾರೆ. ಸರೋವರದ ಸಮೀಪ ವಿಶ್ರಾಂತಿ ಪಡೆಯುತ್ತಿದ್ದ ಮೊಸಳೆಗಳ ಸಮೀಪಕ್ಕೆ ಹೋಗಿ ಯುವಕರು ಸೆಲ್ಫಿ ಕ್ಲಿಕಿಸಿಕೊಂಡಿದ್ದಾರೆ. ಇದಕ್ಕಿಂತಲೂ ಅಪಾಯಕಾರಿ ಎಂದರೆ ಈ ಗುಂಪಿನಲ್ಲಿದ್ದ ಒಬ್ಬ ಯುವಕ ಮೊಸಳೆಯ ಬಾಲ ಹಿಡಿಯಲು ಪ್ರಯತ್ನ ಮಾಡಿದ್ದಾನೆ‌.

Horoscope Today December 12th: ಶುಕ್ರನಿಂದ ಇಂದು ಯಾರಿಗೆ ಒಳಿತು? ಯಾರಿಗೆ ಕೆಡುಕು?

ಇಂದು ಶುಕ್ರನ ಪ್ರಭಾವ: ಈ ರಾಶಿಯವರು ಇಂದು ಎಚ್ಚರದಲ್ಲಿರಿ!

ನಿತ್ಯ ಭವಿಷ್ಯ ಡಿಸೆಂಬರ್ 12, 2025: ಇಂದು ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ಹಿಮದೃತು ಮಾರ್ಗಶಿರಾ ಮಾಸೆ, ಕೃಷ್ಣ ಪಕ್ಷದ, ಅಷ್ಟಮಿ ತಿಥಿ, ಪೂರ್ವ ಪಾಲ್ಗುಣಿ ನಕ್ಷತ್ರದ ಡಿಸೆಂಬರ್ 12ನೇ ತಾರೀಖಿನ ಶುಕ್ರವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿ ಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ..

Breast cancer: ಇತ್ತೀಚಿನ ವರ್ಷದಲ್ಲಿ ಅವಿವಾಹಿತರಿಗೆ ಸ್ತನ ಕ್ಯಾನ್ಸರ್ ಹೆಚ್ಚಾಗಲು ಕಾರಣ ಏನು ಗೊತ್ತಾ?

ಸ್ತನ ಕ್ಯಾನ್ಸರ್ ಗೆ ಕಾರಣ ಏನು? ಈ ಬಗ್ಗೆ ವೈದ್ಯರ ಸಲಹೆ ಏನು?

ಇತ್ತೀಚಿನ ಜನರ ಜೀವನ ಶೈಲಿಯು ಸ್ತನ ಕ್ಯಾನ್ಸರ್ ಉಂಟಾಗಲು ಕಾರಣವಾಗುತ್ತಿದ್ದು ಈ ಬಗ್ಗೆ ಮೊದಲೇ ಎಚ್ಚೆತ್ತುಕೊಂಡರೆ ಮುಂದಾಗುವ ಸಮಸ್ಯೆ ತಡೆಗಟ್ಟಬಹುದಾಗಿದೆ. ಕ್ಯಾನ್ಸರ್ ಗುಣಪಡಿಸಲು ಇರುವ ವಿವಿಧ ಚಿಕಿತ್ಸಾ ವಿಧಾನಗಳ ಬಗ್ಗೆ ಇತ್ತೀಚೆಗಷ್ಟೇ ವಿಶ್ವವಾಣಿ ಹೆಲ್ತ್ ಚಾನೆಲ್ ನಲ್ಲಿ ಖ್ಯಾತ ಆಯು ರ್ವೇದದ ವೈದ್ಯರಾದ ಡಾ. ಮಾಲಿನಿ ಎಸ್. ಸುತ್ತೂರು ಅವರು ತಿಳಿಸಿಕೊಟ್ಟಿದ್ದಾರೆ. ಮಹಿಳೆಯರಲ್ಲಿ ಕ್ಯಾನ್ಸರ್ ಉಂಟಾಗಲು ಕಾರಣ ಏನು? ಇದರ ಬಗ್ಗೆ ವೈದ್ಯರು ನೀಡುವ ಸಲಹೆ ಏನು ಎಂಬಿತ್ಯಾದಿ ವಿಚಾರಗಳ ಬಗ್ಗೆ ಮಾಹಿತಿ ಇಲ್ಲಿದೆ

Viral Video: ಶೂಟಿಂಗ್‌ ವೇಳೆ  ಗೋಡೆ ಏರಿದ ಅಕ್ಷಯ ಕುಮಾರ್‌; ಮೈ ಝುಂ ಎನ್ನುವ ಸಾಹಸ ದೃಶ್ಯ ವೈರಲ್‌

ಶೂಟಿಂಗ್ ಸೆಟ್ ನಲ್ಲಿ ಅಕ್ಷಯ್ ಕುಮಾರ್ ಸಾಹಸಮಯ ದೃಶ್ಯ: ವಿಡಿಯೊ ವೈರಲ್!

ಅಕ್ಷಯ್ ಕುಮಾರ್ ಸಾಹಸ ದೃಶ್ಯಗಳನ್ನು ಮಾಡುವ ಮೂಲಕ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಸದ್ಯ 2010 ರಲ್ಲಿ ತೆರೆಕಂಡ ಸಾಜಿದ್ ಖಾನ್ ನಿರ್ದೇಶನದ 'ಹೌಸ್‌ಫುಲ್' ಚಿತ್ರದ ಸೆಟ್‌ ನ ದೃಶ್ಯ ವೊಂದು ವೈರಲ್ ಆಗಿದ್ದು ಅಕ್ಷಯ್ ಸಾಹಸಮಯ ದೃಶ್ಯ ದಲ್ಲಿ ಭಾಗಿಯಾಗಿರುವುದು ಕಂಡು ಬರುತ್ತಿದೆ. ವಿಡಿಯೋದಲ್ಲಿ, ಅಕ್ಷಯ್ ಕುಮಾರ್ ಯಾರದೇ ಬೆಂಬಲವಿಲ್ಲದೆ ಗೋಡೆ ಯೊಂದನ್ನು ಅತ್ಯಂತ ಸಲೀಸಾಗಿ ಏರುತ್ತಿ ರುವುದು ಕಂಡುಬರುತ್ತದೆ.

Narendra Modi: 'ಧುರಂಧರ್' ಸ್ಟೈಲ್‌ನಲ್ಲಿ ಮೋದಿ; ಪುಟಿನ್‌, ಟ್ರಂಪ್‌ ಜೊತೆಗಿನ ವಿಡಿಯೋ ಸಖತ್‌ ವೈರಲ್‌

'ಧುರಂಧರ್' ಮ್ಯೂಸಿಕ್‌ ವಿಡಿಯೋದಲ್ಲಿ ವಿಶ್ವ ನಾಯಕರ ಜೊತೆ ಪಿಎಂ ಮೋದಿ!

‌ಮಧ್ಯಪ್ರದೇಶ ಸರ್ಕಾರವು ಪ್ರಧಾನಿ ನರೇಂದ್ರ ಮೋದಿಯವರ ಮಾಂಟೇಜ್ ವೊಂದನ್ನು ಬಿಡುಗಡೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಜಾಗತಿಕ ರಾಜಕಾರಣಿಯಾಗಿ ತೋರ್ಪಡಿಸುವ ಈ ವಿಡಿಯೋವು 'ಧುರಂಧರ್' ಚಿತ್ರದ ಹಾಡಿನ ಟ್ರಾಕ್ ಗೆ ಎಡಿಟ್ ಮಾಡಲಾಗಿದೆ. ಸದ್ಯ ಈ ದೃಶ್ಯ ಅಕ್ಷಯ್ ಖನ್ನಾ ನಿರ್ವಹಿಸಿದ 'ರೆಹಮಾನ್ ಡಕಾಯತ್' ಪಾತ್ರದ ಶೈಲಿಯಿಂದ ಸ್ಫೂರ್ತಿ ಪಡೆದಿದೆ. ಸದ್ಯ ಈ ವಿಡಿಯೊ ಭಾರೀ ವೈರಲ್ ಆಗಿದ್ದು ಜನರ ಮೆಚ್ಚುಗೆ ಗಳಿಸಿದೆ.

Salman Khan: ವ್ಯಕ್ತಿತ್ವ ಹಕ್ಕುಗಳ ರಕ್ಷಣೆಗೆ ದೆಹಲಿ ಹೈಕೋರ್ಟ್ ಮೊರೆ ಹೋದ ಸಲ್ಮಾನ್ ಖಾನ್

ವ್ಯಕ್ತಿತ್ವ ಹಕ್ಕುಗಳ ರಕ್ಷಣೆಗೆ ದೆಹಲಿ ಹೈಕೋರ್ಟ್ ಮೊರೆ ಹೋದ ಸಲ್ಮಾನ್ ಖಾನ್

ಫೋಟೊ, ಹೆಸರು, ಧ್ವನಿ ಇತ್ಯಾದಿಗಳನ್ನು ಅನುಮತಿ ಇಲ್ಲದೆ ಬೇರೆ ಬೇರೆ ಕಾರಣಕ್ಕಾಗಿ ಬಳಸಲಾ ಗುತ್ತಿದ್ದು ಅಂತವರ ವಿರುದ್ಧ ಶಿಸ್ತು ಬದ್ಧ ಕ್ರಮ ಕೈಗೊಳ್ಳುವಂತೆ ನಟ ಸಲ್ಮಾನ್ ಖಾನ್ ಅವರು ದೆಹಲಿಯ ಹೈ ಕೋರ್ಟ್ ಮೊರೆ ಹೋಗಿದ್ದಾರೆ. ಪ್ರಚಾರಕ್ಕಾಗಿ ತನ್ನ ಹೆಸರು ಬಳಸಿ ತಮ್ಮ ಉದ್ದೇಶ ಸಾಧಿಸಿಕೊಳ್ಳುವ ಕೆಲವು ವ್ಯಕ್ತಿಗಳನ್ನು ಶೀಘ್ರವೇ ವಿಚಾರಣೆ ನಡೆಸಬೇಕು ಮತ್ತು ಇನ್ನು ಮುಂದೆ ಇಂತಹ ನಡೆ ಯಾರು ತೋರದಂತೆ ಕ್ರಮ ಜರಗಿಸಬೇಕೆಂದು ಅವರು ಕೋರ್ಟ್ ಗೆ ಮನವಿ ಮಾಡಿದ್ದಾರೆ.

Viral Video: ಪಾಕಿಸ್ತಾನಿ ಮದುವೆಯಲ್ಲಿ ಧುರಂಧರ್ ಸಿನಿಮಾದ ಹವಾ; ಟೈಟಲ್‌ ಸಾಂಗ್‌ಗೆ  ಭರ್ಜರಿ ಸೆಪ್ಟ್ ಹಾಕಿದ ಯುವಕರು

ಧುರಂಧರ್ ಸಿನಿಮಾದ ಹಾಡಿಗೆ ಭರ್ಜರಿ ಡ್ಯಾನ್ಸ್ ಮಾಡಿದ ಪಾಕಿಸ್ತಾನಿ ಯುವಕರು!

ಧುರಂಧರ್ ಸಿನಿಮಾದ ಅಬ್ಬರ ಜೋರಾಗಿದ್ದು ರಣವೀರ್ ಸಿಂಗ್ ಅಭಿನಯಕ್ಕೆ ಪ್ರೇಕ್ಷಕರು ಫಿದಾ ಆಗಿ ದ್ದಾರೆ. ಸಿನಿಮಾ ಕೇವಲ ಭಾರತದಲ್ಲಿ ಮಾತ್ರವಲ್ಲದೆ ಜಾಗತಿಕವಾಗಿ ಕೂಡ ಅಬ್ಬರಿಸುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಪಾಕಿಸ್ತಾನದಲ್ಲೂ ಕೂಡ ಈ ಚಿತ್ರ ಜನಪ್ರಿಯತೆ ಗಳಿಸಿದೆ. ಪಾಕಿಸ್ತಾನದ ಲಾಹೋರ್‌ನಲ್ಲಿ ನಡೆದ ಮದುವೆಯೊಂದರಲ್ಲಿ ಮೂವರು ಯುವಕರು ಧುರಂಧರ್ ಚಿತ್ರದ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ್ದು ಅಲ್ಲಿನ ಜನರು ಕೂಡ ಫಿದಾ ಆಗಿದ್ದಾರೆ..

ಪಾನಿಪುರಿ ರುಚಿಗೆ ಫಿದಾ ಆದ ನೈಜೀರಿಯಾದ ಮಹಿಳೆ: ಭಾರೀ ವೈರಲ್ ಆಗ್ತಿದೆ ಈ ವಿಡಿಯೊ

ಭಾರತೀಯ ವಿವಾಹ ಸಂಭ್ರಮದಲ್ಲಿ ಪಾನಿಪುರಿ ಸವಿದು ಖುಷಿಪಟ್ಟ ನೈಜೀರಿಯಾದ ಮಹಿಳೆ

Viral Video: ನೈಜೀರಿಯಾದ ಮಹಿಳೆಯೊಬ್ಬರು ಭಾರತೀಯ ವಿವಾಹವೊಂದರಲ್ಲಿ ಪಾನಿಪುರಿ ಸವಿದು ಖುಷಿಪಟ್ಟಿರುವ ವಿಡಿಯೊವೊಂದು ವೈರಲ್ ಆಗಿದೆ. ಮಹಿಳೆಯೂ ಪಾನಿಪುರಿಯ ರುಚಿಯನ್ನು ಸವಿದು ತೃಪ್ತಿ ಪಟ್ಟಿರುವ ಈ ದೃಶ್ಯ ಭಾರತೀಯ ಆಹಾರದ ರುಚಿಯ ಪ್ರೀತಿಯನ್ನು ಹೆಚ್ಚಿಸಿದೆ..

Horoscope Today December 11th: ಕೇತುವಿನಿಂದ ಈ ರಾಶಿಗೆ ವೃತ್ತಿ ಪ್ರಗತಿಯ ಜೊತೆ ಆರ್ಥಿಕ ಲಾಭ

ದಿನ ಭವಿಷ್ಯ- ಮಘಾ ನಕ್ಷತ್ರದಿಂದ ಈ ರಾಶಿಯವರಿಗೆ ಇಂದು ಧನ ಸಂಪತ್ತು ವೃದ್ಧಿ

ನಿತ್ಯ ಭವಿಷ್ಯ ಡಿಸೆಂಬರ್ 11, 2025: ಇಂದು ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ಹಿಮದೃತು ಮಾರ್ಗಶಿರಾ ಮಾಸೆ, ಕೃಷ್ಣ ಪಕ್ಷದ, ಸಪ್ತಮಿ ತಿಥಿ, ಮಘಾ ನಕ್ಷತ್ರದ ಡಿಸೆಂಬರ್ 11 ನೇ ತಾರೀಖಿನ ಗುರುವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿ ಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ

ಸಾವಿನಲ್ಲಿ ಕೊನೆಯಾದ ಬರ್ತ್ ಡೇ ಸಂಭ್ರಮ; ಭಿಕ್ಷುಕನನ್ನು ತಮಾಷೆ ಮಾಡಿದ ಯುವಕನನ್ನು ಕೊಂದ ಸ್ನೇಹಿತರು

ಬರ್ತ್ ಡೇ ಸಂಭ್ರಮದ ವೇಳೆ ಸ್ನೇಹಿತನಿಗೆ ಚಾಕು ಇರಿದು ಕೊಲೆ

ಗುಜರಾತ್‌ನ ರಾಜ್‌ಕೋಟ್ ನಗರದಲ್ಲಿ ಹುಟ್ಟುಹಬ್ಬದ ಆಚರಣೆಯಲ್ಲಿ ಯುವಕರ ತಂಡ ಭಾಗಿಯಾಗಿತ್ತು. ಆದರೆ ಅವರ ನಡುವೆಯೇ ಉಂಟಾದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದೆ. 18 ವರ್ಷದ ಹದಿಹರೆಯದವನನ್ನು ಆತನ ಸ್ನೇಹಿತರೆ ಚಾಕುವಿನಿಂದ ಇರಿದು ಕೊಂದಿದ್ದಾರೆ. ಹುಟ್ಟುಹಬ್ಬದ ಆಚರಣೆಗಾಗಿ ಸೇರಿದ್ದ ಸ್ನೇಹಿತರ ಗುಂಪಿನ ನಡುವೆ ವಾಗ್ವಾದ ನಡೆದಿದ್ದು ಯುವಕ ಪ್ರಾಣವನ್ನೆ ಕಳೆದುಕೊಂಡಿದ್ದಾನೆ.

Loading...