ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Profile

ರೂಪಾ ಗುರುರಾಜ್

rgururaj628@gmail.com

ಮೂಲತಃ ಬೆಂಗಳೂರಿನವರಾದ ಶ್ರೀಮತಿ. ರೂಪ ಗುರುರಾಜ್ ರೇಡಿಯೋ ಉದ್ಘೋಷಕಿಯಾಗಿ, ದೂರದರ್ಶನಗಳಲ್ಲಿ ನಿರೂಪಕಿ ಹಾಗೂ ವಾರ್ತಾ ವಾಚಕಿಯಾಗಿ, ಸೃಜನಾತ್ಮಕ ಬರಹಗಾರರಾಗಿ, ರೂಪದರ್ಶಿ, ನಟನೆ, ಸಮಾಜ ಸೇವೆ ಹೀಗೆ ಹಲವು ರಂಗಗಳಲ್ಲಿ ಅನುಭವ ಹೊಂದಿದ್ದಾರೆ.‌ - ಬೆಂಗಳೂರು ದೂರದರ್ಶನದ ಚಂದನ ವಾಹಿನಿ. - ಆಕಾಶವಾಣಿ ನಿಲಯ. - ಎಫ್.ಎಂ ರೈನ್ ಬೋ ಕಂಪನಾಂಕ. - ಅಂತಾರಾಷ್ಟ್ರೀಯ ಡಿಜಿಟಲ್ ರೇಡಿಯೋ "ನಮ್ ರೇಡಿಯೋ" ಕಾರ್ಯಕ್ರಮಗಳಲ್ಲಿ ರೂಪ ಗುರುರಾಜ್ ಅವರ ಧ್ವನಿ ಚಿರಪರಿಚಿತ. ಕಳೆದ ಒಂದೂವರೆ ದಶಕಕ್ಕೂ ಅಧಿಕ ಕಾಲ ನಿರೂಪಣಾ ಕ್ಷೇತ್ರದಲ್ಲಿ ದೇಶ ವಿದೇಶಗಳಲ್ಲಿ 800ಕ್ಕೂ ಅಧಿಕ ಕಾರ್ಯಕ್ರಮಗಳ ನಿರೂಪಣೆ ಕಿರುತೆರೆ, ಹಲವು ಸಿನೆಮಾಗಳಲ್ಲಿ ಅಭಿನಯಿಸಿರುವುದಲ್ಲದೇ, ರೂಪದರ್ಶಿಯಾಗಿ ಉಡುಪು ಹಾಗೂ ಬೆಳ್ಳಿ ಆಭರಣ ಸಂಸ್ಥೆಗಳ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಸ್ತುತ ವಿಶ್ವವಾಣಿ ದೈನಿಕದಲ್ಲಿ ಅಂಕಣಗಾರ್ತಿಯಾಗಿ "ಒಂದೊಳ್ಳೆ ಮಾತು" ಅಂಕಣವನ್ನು ಕಳೆದ 4 ವರ್ಷಗಳಿಂದ ಪ್ರತಿದಿನ ಬರೆಯುತ್ತಿದ್ದಾರೆ. ಅದಲ್ಲದೇ ಕನ್ನಡದ ಅನುಭವ ಮಂಟಪ ಎಂದೇ ಖ್ಯಾತಿ ಪಡೆದ "ವಿಶ್ವವಾಣಿ ಕ್ಲಬ್ ಹೌಸ್" ನ ಸಹ ನಿರೂಪಕಿಯಾಗಿ ಸತತ0 4 ವರ್ಷಗಳಿಂದ ( 1,100) ಪ್ರತಿದಿನ ನಡೆಸಿಕೊಂಡು ಬರುತ್ತಿದ್ದಾರೆ. ವಿಶ್ವವಾಣಿ ಟಿವಿಯಲ್ಲಿ ( ಯೂಟ್ಯೂಬ್ ಚಾನೆಲ್) ನಲ್ಲಿ ಇವರ “ಒಂದೊಳ್ಳೆ ಮಾತು “ ಸರಣಿ ವಿಡಿಯೋಗಳು ಬಿತ್ತರಗೊಳ್ಳುತ್ತಿವೆ. 50 ಕವನ ಸಂಕಲನಗಳ "ರೂಪಾಂತರ" ಹಾಗೂ ಮೂರು ಸಂಚಿಕೆಗಳ "ಒಂದೊಳ್ಳೆ ಮಾತು" ಪುಸ್ತಕಗಳು ಲೋಕಾರ್ಪಣೆಗೊಂಡಿದೆ. ಮನ: ಪ್ರಸಾದ, ಪ್ರೇರಣ ಮುಂತಾದ ಸರ್ಕಾರೇತರ ಸಂಸ್ಥೆಗಳಲ್ಲಿ ಸಮಾಜಸೇವೆಗಾಗಿ ತೊಡಗಿಸಿಕೊಂಡಿದ್ದಾರೆ.‌

Articles
Roopa Gururaj Column: ಓದಿ ತಿಳಿದುಕೊಂಡವನಿಗೆ ಮೂರ್ಖತ್ವವಿಲ್ಲ

Roopa Gururaj Column: ಓದಿ ತಿಳಿದುಕೊಂಡವನಿಗೆ ಮೂರ್ಖತ್ವವಿಲ್ಲ

ಹಿರಿಯರು ಹೀಗೆನ್ನುತ್ತಾರೆ: “ಪಠತೋ ನಾಸ್ತಿ ಮೂರ್ಖತ್ವಂ, ಜಪತೋ ನಾಸ್ತಿ ಪಾತಕಂ, ಮೌನಿನಃ ಕಲಹೋ ನಾಸ್ತಿ ನಭಯಂ ಚಾಸ್ತಿ ಜಾಗ್ರತಃ"- ಅಂದರೆ, ಓದಿ ತಿಳಿದುಕೊಂಡವರಿಗೆ ಮೂರ್ಖತ್ವವಿಲ್ಲ, ಜಪ ಮಾಡುವವನಿಗೆ ಪಾಪವಿಲ್ಲ, ಮೌನವಾಗಿರುವವನಿಗೆ ಜಗಳವಿಲ್ಲ, ಎಚ್ಚರ ವಹಿಸಿದವನಿಗೆ ಭಯವಿಲ್ಲ" ಎಂದರ್ಥ

Roopa Gururaj Column: ವಿಷ್ಣು ಸಹಸ್ರನಾಮದ ಮಹತ್ವ

Roopa Gururaj Column: ವಿಷ್ಣು ಸಹಸ್ರನಾಮದ ಮಹತ್ವ

. ಶರಪಂಜರದ ಮೇಲೆ ಮಲಗಿದ್ದ ಭೀಷ್ಮರನ್ನು ಧರ್ಮರಾಜ ಕೇಳುತ್ತಾನೆ, ‘ಇಡೀ ಜಗತ್ತಿನ ದೈವ ಯಾರು? ಯಾರ ಸ್ತುತಿ, ಕೀರ್ತನೆ, ಅರ್ಚನೆಯಿಂದ ನಮಗೆ ಶ್ರೇಯಸ್ಸಾಗುತ್ತದೆ? ಸಮಸ್ತ ಧರ್ಮಗಳಲ್ಲಿ ಶ್ರೇಷ್ಠ ಧರ್ಮ ಯಾವುದು? ಯಾರ ಜಪ ಮಾಡುವು ದರಿಂದ ಸಮಸ್ತ ಪಾಪ, ಜನನ-ಮರಣಗಳ ಚಕ್ರದಿಂದ ಮುಕ್ತರಾಗಬಹುದು? ಈ ಎಲ್ಲ ಪ್ರಶ್ನೆಗಳಿಗೂ ಭೀಷ್ಮಾಚಾರ್ಯರು ಶ್ರೀವಿಷ್ಣು ಸಹಸ್ರನಾಮವೆಂದು ಒಂದೇ ಉತ್ತರ ಹೇಳುತ್ತಾರೆ.

Roopa Gururaj Column: ಐತಿಹ್ಯದ ಹಿನ್ನೆಲೆಯ ಓಣಂ ಹಬ್ಬ

Roopa Gururaj Column: ಐತಿಹ್ಯದ ಹಿನ್ನೆಲೆಯ ಓಣಂ ಹಬ್ಬ

ಹತ್ತು ದಿನಗಳ ಕಾಲ ನಡೆಯುವ ಈ ವಿಶೇಷ ಉತ್ಸವದಲ್ಲಿ ಕೇರಳದ ಸಾಂಸ್ಕೃತಿಕ ವೈಭವವೆಲ್ಲ ಮೈದಾ ಳಿರುತ್ತದೆಯಲ್ಲದೆ, ಜನರ ಉತ್ಸಾಹ, ಸಂಭ್ರಮಗಳು ಮುಗಿಲು ಮುಟ್ಟುತ್ತವೆ. ಓಣಂ ಉತ್ಸವಾಚರಣೆಯ ಅತ್ಯಂತ ಆಕರ್ಷಣೀಯ ಅಂಶವೆಂದರೆ ‘ತಿರುಓಣಂ’ನಂದು (10 ದಿನಗಳ ಹಬ್ಬದ ಪ್ರಮುಖ ಕೊನೆಯ ದಿನ) ದಿವಸ ತಯಾರಿಸಲಾಗುವ ‘ಓಣಂ ಸದ್ಯ’ ಎಂಬ ಅದ್ಭುತ ಭೋಜನ.

Roopa Gururaj Column: ಚಂದ್ರಗ್ರಹಣದ ಪೌರಾಣಿಕ ಹಿನ್ನೆಲೆ

Roopa Gururaj Column: ಚಂದ್ರಗ್ರಹಣದ ಪೌರಾಣಿಕ ಹಿನ್ನೆಲೆ

ಚಂದ್ರಗ್ರಹಣದ ಪೌರಾಣಿಕ ಹಿನ್ನೆಲೆಯು ಅಮೃತ ಮಂಥನದ ಸಂದರ್ಭದಲ್ಲಿ ರಾಹು ಹಾಗೂ ಕೇತು ಗ್ರಹಗಳು ರೂಪುಗೊಂಡ ಪರಿಯನ್ನು ವಿಶದವಾಗಿ ವಿವರಿಸುತ್ತದೆ. ಸಮುದ್ರ ಮಥನ ಕಾಲದಲ್ಲಿ ಅಮೃತವು ಹೊರಬಂದಾಗ, ದೇವತೆಗಳೊಂದಿಗೆ ಸ್ವಭಾನು ಎಂಬ ರಾಕ್ಷಸನಿಗೂ ಅದು ಸಲ್ಲುತ್ತಿದೆ ಎಂಬುದು ಅರಿವಿಗೆ ಬಂದಾಗ ಮಹಾವಿಷ್ಣು ಸ್ವಭಾನುವನ್ನು ಚಕ್ರಾಯುಧದಿಂದ ಮರ್ದಿಸುವ ಕಥೆಯದು.

Roopa Gururaj Column: ಶ್ರೀಮದ್‌ ಭಾಗವತದ ಮಹಿಮೆ

Roopa Gururaj Column: ಶ್ರೀಮದ್‌ ಭಾಗವತದ ಮಹಿಮೆ

ಪೂರ್ವದಲ್ಲಿ ತುಂಗಾತೀರದಲ್ಲಿ ಒಂದು ಪಟ್ಟಣ. ಅಲ್ಲಿ ವೇದಶಾಸ್ತ್ರ ಪಂಡಿತನಾದ ಆತ್ಮದೇವ ಎನ್ನುವ ಬ್ರಾಹ್ಮಣ ಇದ್ದನು. ಅವನಿಗೆ ಸಂತಾನ ಭಾಗ್ಯವಿರಲಿಲ್ಲ. ಒಮ್ಮೆ ಆ ಊರಿಗೆ ಬಂದ ಯತಿ ಗಳು ಅವನಿಗೆ ಆಶೀರ್ವದಿಸಿ ಒಂದು ಹಣ್ಣನ್ನು ನೀಡುತ್ತಾರೆ. ಇದನ್ನು ಪತ್ನಿಗೆ ಕೊಡು ಎನ್ನುತ್ತಾರೆ. ಆದರೆ ಆತನ ಪತ್ನಿಗೆ ಅದರಲ್ಲಿ ನಂಬಿಕೆ ಇಲ್ಲದ ಕಾರಣ ಕೊಟ್ಟಿಗೆಯಲ್ಲಿದ್ದ ಗೋವಿಗೆ ಅದನ್ನು ನೀಡಿ ಬಿಡುತ್ತಾಳೆ.

Roopa Gururaj Column: ತಾಯಿಯ ಪ್ರೀತಿ ಅತೀ ಶ್ರೇಷ್ಠವಾದುದು

Roopa Gururaj Column: ತಾಯಿಯ ಪ್ರೀತಿ ಅತೀ ಶ್ರೇಷ್ಠವಾದುದು

ಇಂತಹ ತಾಯಿಯ ನೆರಳು ಆಶೀರ್ವಾದ ಜೀವನದಲ್ಲಿ ಇರುವವರೆಗೆ ನಮಗೆ ಯಾವ ದುಷ್ಟ ಶಕ್ತಿಯ ಭಯವೂ ಇರುವುದಿಲ್ಲ. ನೂರು ದೇವರುಗಳಿಗಿಂತ, ತಾಯಿ ದೇವರು ಮೇಲು. ತಾಯಿಯ ಮನಸ್ಸನ್ನು ಎಂದಿಗೂ ನೋಯಿಸಬೇಡಿ ಅವಳು ನಿಟ್ಟುಸಿರಿಟ್ಟರೆ ನಮಗೆ ಖಂಡಿತ ಒಳ್ಳೆಯದಾಗುವುದಿಲ್ಲ.

Roopa Gururaj Column: ಲಲಿತಾ ಸಹಸ್ರನಾಮದ ಮಹತ್ವ

Roopa Gururaj Column: ಲಲಿತಾ ಸಹಸ್ರನಾಮದ ಮಹತ್ವ

ಲಲಿತಾ ದೇವಿಯನ್ನು ಲಲಿತಾ ತ್ರಿಪುರ ಸುಂದರಿ ಎಂದು ಸಹ ಹೇಳುತ್ತಾರೆ. ತ್ರಿಪುರ ಸುಂದರಿ ಎಂದರೆ ಮೂರು ಲೋಕಗಳಲ್ಲಿ ಅತ್ಯಂತ ಸುಂದರವಾದವಳು ಎಂದರ್ಥ. ತ್ರಿಪುರ ಅಂದರೆ ಮೂರು ಕಾಲ ಗಳಿಗೆ, ಮೂರು ಸ್ಥಿತಿಗಳಿಗೆ ಮತ್ತು ಮೂರು ಶಕ್ತಿಗಳಿಗೆ ಪ್ರತೀಕವಾದದ್ದು ಎಂದು ಬ್ರಹ್ಮಾಂಡ ಪುರಾಣ ಹೇಳುತ್ತದೆ.

Roopa Gururaj Column: ಪರಸ್ಪರರಿಗೆ ಕೇಡು ಬಗೆದು, ನಗೆಪಾಟಲಾದ ನಾರದ, ತುಂಬೂರರು

ಪರಸ್ಪರರಿಗೆ ಕೇಡು ಬಗೆದು, ನಗೆಪಾಟಲಾದ ನಾರದ, ತುಂಬೂರರು

ನಾರದ ಮತ್ತು ತುಂಬೂರರು ತಮ್ಮ ಮುಖದ ನಿಜಸ್ವರೂಪವನ್ನು ಕನ್ನಡಿಯಲ್ಲಿ ನೋಡಿ ಬೆಚ್ಚಿಬಿದ್ದರು. ಅವರು ವಿಷ್ಣುವಿನ ಲೀಲೆಯನ್ನು ಅರಿತುಕೊಂಡರು. “ನಾವು ಸ್ವಾರ್ಥದಿಂದ ದೇವರನ್ನೇ ಮೋಸಗೊಳಿ ಸಲು ಯತ್ನಿಸಿದ್ದೇವೆ. ಆದರೆ ಈ ಲೀಲೆಯಿಂದ ನಾವು ಅಹಂಕಾರದಿಂದ ಮುಕ್ತಿ ಹೊಂದಿದ್ದೇವೆ, ಅಂತರಾತ್ಮದ ಭಕ್ತಿಯಲ್ಲಿ ಸೌಂದರ್ಯ ಅಡಗಿರು ತ್ತದೆ " ಎಂದು ಮನಸಲ್ಲಿ ಅರಿತು ವಿಷ್ಣುವಿಗೆ ಶರಣಾ ದರು.

Roopa Gururaj Column: ಕೃಷ್ಣನನ್ನೂ ಕಾಡಿದ ಚೌತಿ ಚಂದ್ರ ದರ್ಶನದ ಶಾಪ

ಕೃಷ್ಣನನ್ನೂ ಕಾಡಿದ ಚೌತಿ ಚಂದ್ರ ದರ್ಶನದ ಶಾಪ

ತ್ರೇತಾಯುಗದ ರಾಮನ ಭಂಟನಾಗಿದ್ದ ಜಾಂಬವಂತನೂ ಸೋಲಲಿಲ್ಲ. ದ್ವಾಪರದಲ್ಲಿ ಕೃಷ್ಣಾವತಾರ ದಲ್ಲಿದ್ದ ನಾರಾಯಣನೂ ಸೋಲ ಲಿಲ್ಲ. ಕಡೆಗೆ ಕೃಷ್ಣ ಪರಮಾತ್ಮ ಶ್ರೀರಾಮನಾಗಿ ಜಾಂಬವಂತನಿಗೆ ದರ್ಶನ ನೀಡಿದ. ತನ್ನ ತಪ್ಪನ್ನು ಅರಿತ ಜಾಂಬವಂತ ತನ್ನ ಮಗಳು ಹಾಗೂ ಕನ್ಯಾಮಣಿಯಾದ ಜಾಂಬವತಿಯನ್ನು ಕೃಷ್ಣನಿಗೆ ಕೊಟ್ಟು ಮದುವೆ ಮಾಡಿ, ಶಮಂತಕ ಮಣಿ ಕೊಟ್ಟು, ಆನಂದದಿಂದ ಕಳುಹಿಸಿಕೊಟ್ಟ. ಕೃಷ್ಣ ಶಮಂತಕ ಮಣಿಯೊಂದಿಗೆ ಮರಳಿದಾಗ ಜನರು ತಮ್ಮ ತಪ್ಪನ್ನು ಮನ್ನಿಸುವಂತೆ ಕೃಷ್ಣನನ್ನು ಕೋರಿದರು.

Roopa Gururaj Column: ಚಿಂತಾಮಣಿ ಮರಳಿಸಿ ಹಾಗೆಯೇ ಕರೆಯಿಸಿಕೊಂಡ ಗಣಪತಿ

ಚಿಂತಾಮಣಿ ಮರಳಿಸಿ ಹಾಗೆಯೇ ಕರೆಯಿಸಿಕೊಂಡ ಗಣಪತಿ

ದಯಾಮಯಿಯಾದ ಗಣಪತಿಯು ಅವನ ವಿನಂತಿಯನ್ನು ಮನ್ನಿಸಿದನು. ಗಣಪತಿಯು ಕಪಿಲ ಮುನಿಗಳ ಚಿಂತಾಮಣಿಯನ್ನು ಪುನಃ ಸಿಗುವಂತೆ ಮಾಡಿದ್ದರಿಂದ ಗಣಪತಿಗೆ ಚಿಂತಾಮಣಿ ಎಂದೂ ಕರೆಯುತ್ತಾರೆ. ನಮ್ಮದಲ್ಲದ ವಸ್ತುವಿನ ಬಗ್ಗೆ ಆಸೆ ಪಟ್ಟರೆ, ಅದನ್ನು ಭಗವಂತ ಒಂದಲ್ಲ ಒಂದು ರೀತಿಯಲ್ಲಿ ಅದನ್ನು ನಮ್ಮಿಂದ ದೂರ ಮಾಡುತ್ತಾನೆ. ಯಾವುದನ್ನು ಪಡೆಯವುದಕ್ಕೂ ಯೋಗ ಯೋಗ್ಯತೆ ಎರಡೂ ಇರಬೇಕು.

Roopa Gururaj Column: ಜೇಷ್ಠ ಗೌರಿ ಹಾಗೂ ಕನಿಷ್ಠ ಗೌರಿಯ ಕಥೆ

Roopa Gururaj Column: ಜೇಷ್ಠ ಗೌರಿ ಹಾಗೂ ಕನಿಷ್ಠ ಗೌರಿಯ ಕಥೆ

‘ಭಾದ್ರಪದ ತಿಂಗಳಿನಲ್ಲಿ ಕೆರೆಯ ದಂಡೆಗೆ ಹೋಗಿ ಎರಡು ಕಲ್ಲುಗಳನ್ನು ಮನೆಗೆ ತಂದು ಅವುಗಳನ್ನು ಬಿಸಿನೀರಿನಿಂದ ತೊಳೆಯಬೇಕು. ಜ್ಯೇಷ್ಠ ಗೌರಿ ಮತ್ತು ಕನಿಷ್ಠ ಗೌರಿ ಎಂದು ಅವುಗಳನ್ನು ಸ್ಥಾಪಿಸಿ ಪೂಜೆ ಮಾಡಬೇಕು. ಎರಡನೆಯ ದಿನ ಹೋಳಿಗೆ ಮತ್ತು ಮೂರನೆ ದಿನ ಪಾಯಸದ ನೈವೇದ್ಯವನ್ನು ಅರ್ಪಿಸ ಬೇಕು.

Roopa Gururaj Column: ತನ್ನ ಜೀವನವನ್ನೇ ಲಕ್ಷ್ಮಣನಿಗಾಗಿ ತ್ಯಾಗ ಮಾಡಿದ ಊರ್ಮಿಳ

ತನ್ನ ಜೀವನವನ್ನೇ ಲಕ್ಷ್ಮಣನಿಗಾಗಿ ತ್ಯಾಗ ಮಾಡಿದ ಊರ್ಮಿಳ

ರಾಮಾಯಣದಲ್ಲಿ ಸೀತೆಯ ತ್ಯಾಗ ಬಲಿದಾನದ ಬಗ್ಗೆ ಉಲ್ಲೇಖವಿದೆಯೇ ವಿನಃ ಲಕ್ಷ್ಮಣನ ಹೆಂಡತಿ ಯಾದ ಊರ್ಮಿಳೆಯ ಬಗ್ಗೆ ಹೆಚ್ಚು ತಿಳಿಯಲು ಅವಕಾಶವಿಲ್ಲ. ಪಿತೃವಾಕ್ಯ ಪರಿಪಾಲನೆಗಾಗಿ ರಾಮನು ಲಕ್ಷ್ಮಣ ಮತ್ತು ಸೀತೆಯರೊಂದಿಗೆ ಕಾಡಿಗೆ ವನವಾಸಕ್ಕೆ ತೆರಳುವ ಸಂದರ್ಭದಲ್ಲಿ ಊರ್ಮಿಳೆಯೂ ತನ್ನ ಪತಿಯನ್ನು ಅನುಸರಿಸಿದಾಗ ಲಕ್ಷ್ಮಣನು ಅವಳಿಗೆ ಅರಮನೆಯಲ್ಲಿಯೇ ಇದ್ದು ಅತ್ತೆಮಾವಂದಿರ ಸೇವೆ ಮಾಡಬೇಕೆಂದು ಅನುನಯಿಸುತ್ತಾನೆ.

Roopa Gururaj Column: ಎಲ್ಲಿಯೂ ಸಲ್ಲದ ತ್ರಿಶಂಕು ಸ್ವರ್ಗ

Roopa Gururaj Column: ಎಲ್ಲಿಯೂ ಸಲ್ಲದ ತ್ರಿಶಂಕು ಸ್ವರ್ಗ

ದೇವತೆಗಳ ಆಗ್ರಹಕ್ಕೆ ಮಣಿದ ವಿಶ್ವಾಮಿತ್ರರು ತ್ರಿಶಂಕುವನ್ನು ಅಲ್ಲಿಯೇ ಇರಿಸಿ, ಭೂಮಿಗೂ ಸ್ವರ್ಗಕ್ಕೂ ನಡುವೆ ಇದ್ದ ಆತನ ನೆಲೆಯನ್ನು ತ್ರಿಶಂಕು ಸ್ವರ್ಗವೆಂದು ಕರೆದರು. ಎಲ್ಲಿಯೂ ಸಲ್ಲದವರ ಸ್ಥಿತಿ ತ್ರಿಶಂಕು ವಿನ ಸ್ಥಿತಿ ಎಂದೇ ಹೆಸರಾಯಿತು. ಪ್ರಕೃತಿಗೆ ವಿರುದ್ಧವಾಗಿ ನಮ್ಮ ಆಸೆಗಳನ್ನು ಪೂರೈಸಿಕೊಳ್ಳಲು ಪ್ರಯತ್ನಿಸಿದಾಗ ನಮ್ಮ ಸ್ಥಿತಿಯೂ ಹೀಗೇ ಆಗುತ್ತದೆ.

Roopa Gururaj Column: ಸುರಸಳ ಶಕ್ತಿ ಮುಂದೆ ಯುಕ್ತಿ ಪ್ರದರ್ಶಿಸಿದ ಹನುಮಂತ

ಸುರಸಳ ಶಕ್ತಿ ಮುಂದೆ ಯುಕ್ತಿ ಪ್ರದರ್ಶಿಸಿದ ಹನುಮಂತ

ಬದುಕಿನಲ್ಲಿ ಎಲ್ಲರನ್ನೂ ಹಣ, ಅಧಿಕಾರ ಶಕ್ತಿಯಿಂದ ಎದುರಿಸಲು ಸಾಧ್ಯವಿಲ್ಲ. ಅನೇಕ ಬಾರಿ ಅವೆಲ್ಲಾ ಇದ್ದರೂ ಪ್ರಯೋಜನವಾಗುವುದಿಲ್ಲ. ಕೆಲವೊಮ್ಮೆ ಅತೀ ಶಕ್ತಿವಂತರ ಮುಂದೆ ನಾವು ಶಕ್ತಿ ಪ್ರದರ್ಶನಕ್ಕೆ ನಿಲ್ಲುವುದಕ್ಕಿಂತ, ಯುಕ್ತಿಯಿಂದ ಆ ಸಂದರ್ಭವನ್ನು ನಿಭಾಯಿಸಬೇಕು. ಆಗ ಅನಗತ್ಯ ಸಂಕಟ, ನೋವು ಗಳಿಂದ ಪಾರಾಗಿ ನಮ್ಮ ಕೆಲಸವನ್ನು ಕೂಡ ಜಾಣತನದಿಂದ ನೆರವೇರಿಸಿಕೊಳ್ಳ ಬಹುದು. ಅದಕ್ಕೆ ಹಿರಿಯರು ಹೇಳುವುದು ಶಕ್ತಿಗಿಂತ ಯುಕ್ತಿ ಮೇಲು ಎಂದು.

Roopa Gururaj Column: ಶಕ್ತಿ-ಯುಕ್ತಿ ಎರಡೂ ಮೇಳೈಸಿದ ಬಲರಾಮ

Roopa Gururaj Column: ಶಕ್ತಿ-ಯುಕ್ತಿ ಎರಡೂ ಮೇಳೈಸಿದ ಬಲರಾಮ

ಹೀಗೆ ಬಲರಾಮನ ಯುಕ್ತಿ, ಶಕ್ತಿ ಅಪರಮಿತ. ಅವನು ಶ್ರೀ ಕೃಷ್ಣನ ವಿಸ್ತರಣೆಯಂತೆ. ಬಲರಾಮ ಸರ್ವ ಶಕ್ತ. ಬಲವೆಂದರೆ ಕೇವಲ ದೈಹಿಕ ಬಲವಲ್ಲ, ಆಧ್ಯಾತ್ಮಿಕ ಶಕ್ತಿ ಕೂಡ. ಜೀವನದಲ್ಲಿ ಏನೇ ಬಂದರೂ ಮೊದಲು ಅದನ್ನು ಸಮಾಧಾನದಿಂದ ಪರಿಹರಿಸುವ ಪ್ರಯತ್ನ ಮಾಡಬೇಕು. ಅದು ನಡೆಯದಿದ್ದಾಗ ಮುಂದಿನ ಹೆಜ್ಜೆ.

Roopa Gururaj Column: ಬುದ್ಧನಾಗಬೇಕಾದರೆ ಏನು ಮಾಡಬೇಕು ?

ಬುದ್ಧನಾಗಬೇಕಾದರೆ ಏನು ಮಾಡಬೇಕು ?

ಮನುಷ್ಯ ಬದುಕಿಗೆ ಬೇಕಾದ ಪ್ರೀತಿ ಪ್ರೇಮ, ಸಹನೆ,ಕರುಣೆ, ಮಮತೆ, ಪ್ರಾಮಾಣಿಕತೆ, ಶಿಸ್ತು ಎಲ್ಲವೂ ನಮ್ಮೊಳಗೆ ಇರುತ್ತದೆ. ಎಂದಿಗೆ ನಾವು ಅದನ್ನು ಕಂಡುಕೊಂಡು ಸಾಕ್ಷಾತ್ಕಾರಗೊಳಿಸಿಕೊಳ್ಳುತ್ತೇವೆಯೋ ಅಂದಿಗೆ ನಾವು ಮತ್ತು ಉತ್ತಮ ಸ್ಥರಕ್ಕೆ ತಲುಪುತ್ತೇವೆ. ಆದ್ದರಿಂದ ಜೀವನದಲ್ಲಿ ನಾವು ಯಾರ್ಯಾರೋ ಆಗುವ ಪ್ರಯತ್ನದಲ್ಲಿ ನಮ್ಮನ್ನೇ ಕಳೆದು ಕೊಳ್ಳುವ ಬದಲು, ನಾವು ನಾವಾಗುವ ಪ್ರಯತ್ನ ಮಾಡಬೇಕು.

Roopa Gururaj Column: ಕೃಷ್ಣನಿಂದ ಪೂಜಿಸಲ್ಪಡುವ ಭಕ್ತರ ಪಾದ ಧೂಳಿ

Roopa Gururaj Column: ಕೃಷ್ಣನಿಂದ ಪೂಜಿಸಲ್ಪಡುವ ಭಕ್ತರ ಪಾದ ಧೂಳಿ

ಪ್ರತಿ ಮನೆಯಲ್ಲೂ ಕೃಷ್ಣನ ರೂಪ. ಪ್ರತಿ ಬಾರಿ ನಾರದರನ್ನು ನೋಡಿದಾಗಲೂ ಇದೇನು ಪೂಜ್ಯರೇ ಬಂದಿದ್ದೀರಿ ಎಂದು ಹೊಸದಾಗಿ ಮಾತನಾಡಿಸಿ ಅವರಿಗೆ ಉಪಚಾರ ಮಾಡುತ್ತಿದ್ದ. ನಾರದರಿಗೆ ಆಶ್ಚರ್ಯವಾದರೂ.. ಮತ್ತೆ ಬರುವೆ ಎಂದು ನೆಪ ಹೂಡಿ ಮುಂದಿನ ಮನೆಗೆ ಹೋಗುತ್ತಿದ್ದರು ಅಲ್ಲಿಯೂ ಅದೇ ಕಥೆ. ಅಂತೂ ಹಟ ಬಿಡದೆ ಅವರೂ ಎಲ್ಲಾ ಮನೆಗಳಲ್ಲೂ ಇದ್ದ ಕೃಷ್ಣನನ್ನು ಕಂಡು ಮಾತನಾಡಿಸುತ್ತಾ ಕೊನೆಯ ಮನೆಗೆ ಬಂದರು.

Roopa Gururaj Column: ಭೀಮನ ಅಹಂಕಾರ ಅಡಗಿಸಿದ ಆಂಜನೇಯ

Roopa Gururaj Column: ಭೀಮನ ಅಹಂಕಾರ ಅಡಗಿಸಿದ ಆಂಜನೇಯ

ವಿಧೇಯತೆಯನ್ನು ನೋಡಿ ಸಂತೃಪ್ತನಾದ ಹನುಮಂತನು, ‘ನೀನು ಇದುವರೆಗೆ ಹೇಳುತ್ತಿದ್ದ ಆ ವಾಯುಪುತ್ರ ಹನುಮಂತ ನಾನೇ, ನಾವಿಬ್ಬರೂ ವಾಯುಪುತ್ರರಾದುದರಿಂದ ಸೋದರರಲ್ಲವೇ? ನೀನು ಹೊರಟ ಕಾರ್ಯ ನೆರವೇರುತ್ತದೆ, ಯೋಚಿಸಬೇಡ’ ಎಂದು ಆಶೀರ್ವದಿಸಿದ. ಆ ಮಾತುಗಳನ್ನು ಕೇಳಿ ಸಂತೋಷಗೊಂಡ ಭೀಮಸೇನನು ಅಣ್ಣನ ಪಾದಗಳಿಗೆರಗಿದನು.

Roopa Gururaj Column: ಕೃಷ್ಣನ ಕೈಯಲ್ಲಿ ಕೊಳಲಾದ ಬಿದಿರು

Roopa Gururaj Column: ಕೃಷ್ಣನ ಕೈಯಲ್ಲಿ ಕೊಳಲಾದ ಬಿದಿರು

ಯಾರಿಗೂ ಬೇಡದ ಬಿದಿರು ಈಗ ಕೃಷ್ಣನ ಪ್ರೀತಿಯ ಕೊಳಲಾಗಿ ಸದಾ ಕೃಷ್ಣನೊಂದಿಗೆ ಇರುತ್ತಿತ್ತು. ತನ್ನೊಳಗೆ ಸಂತೋಷ ಉಕ್ಕಿದಾಗೆಲ್ಲ, ಕೃಷ್ಣ ಕೊಳಲನ್ನು ಎತ್ತಿಕೊಂಡು ನುಡಿಸುತ್ತಿದ್ದ ಅವನ ಕೊಳಲಿನ ಸ್ವರಗಳು ಕೇಳುವ ಎಲ್ಲರ ಹೃದಯಗಳನ್ನು ಶುದ್ಧ ಪ್ರೀತಿ ಮತ್ತು ತೀವ್ರವಾದ ಆನಂದದಿಂದ ತುಂಬು ತ್ತಿದ್ದವು.

Roopa Gururaj Column: ಬದುಕನ್ನು ಎದುರಿಸಲು ಭಗೀರಥ ಪ್ರಯತ್ನ ಬೇಕು

ಬದುಕನ್ನು ಎದುರಿಸಲು ಭಗೀರಥ ಪ್ರಯತ್ನ ಬೇಕು

ತಪೋನಿರತರಾದ ಕಪಿಲ ಮುನಿಗಳು ಕೋಪಗೊಂಡು ಕಣ್ಬಿಟ್ಟಾಗ ರಾಜಕುಮಾರರು ಸುಟ್ಟು ಬೂದಿ ಯಾದರು. ತನ್ನ ಚಿಕ್ಕಪ್ಪಂದಿರನ್ನು ಹುಡುಕುತ್ತಾ ಬಂದಂತಹ ಅದೇ ವಂಶದ ಅಂಶುಮಂತನು, ಕಪಿಲ ಮಹರ್ಷಿಯ ಆಶ್ರಮದಲ್ಲಿಯಾಗದ ಕುದುರೆಯನ್ನು ಮತ್ತು ಬೃಹದಾದ ಬೂದಿಯ ರಾಶಿಯನ್ನು ನೋಡಿದನು.

Roopa Gururaj Column: ಏಕ ಶ್ಲೋಕಿ ಮಜ್ಜಿಗೆ ರಾಮಾಯಣದ ಸಾರ

ಏಕ ಶ್ಲೋಕಿ ಮಜ್ಜಿಗೆ ರಾಮಾಯಣದ ಸಾರ

ಒಮ್ಮೆ ಪಂಡಿತನೊಬ್ಬ ಮತ್ತೊಂದು ಹಳ್ಳಿಗೆ ನಡೆದುಹೋಗುತ್ತಾ ಇರುತ್ತಾನೆ. ದಾರಿಯಲ್ಲಿ ವಿಪರೀತ ಬಾಯಾರಿಕೆಯಾಗುತ್ತದೆ. ಮೊದಲು ಸಿಕ್ಕ ಮನೆಯ ಕದ ಬಡಿಯುತ್ತಾನೆ. ಪುಟ್ಟ ಹುಡುಗಿಯೊಬ್ಬಳು ಬಾಗಿಲು ತೆಗೆಯುತ್ತಾಳೆ. ‘ಆಸರೆಗೆ ಏನಾದರೂ ಕೊಡು’ ಅನ್ನುತ್ತಾನೆ ಪಂಡಿತ. ಹುಡುಗಿ ಅಡುಗೆಮನೆ ತಡಕಾಡಿ, ಒಂದು ಲೋಟ ಮಜ್ಜಿಗೆ ಹಿಡಿದು ಬರುತ್ತಾಳೆ ‘ಮಜ್ಜಿಗೆ ಹೊರತಾಗಿ ನಿಮಗೆ ಕೊಡಲು ಬೇರೇನೂ ಇಲ್ಲ

Roopa Gururaj Column: ಶ್ರೀಕೃಷ್ಣ ಕೆಳಗಿಳಿದ ಕೂಡಲೇ ಹೊತ್ತಿ ಉರಿದ ಅರ್ಜುನನ ರಥ

ಶ್ರೀಕೃಷ್ಣ ಕೆಳಗಿಳಿದ ಕೂಡಲೇ ಹೊತ್ತಿ ಉರಿದ ಅರ್ಜುನನ ರಥ

ಅರ್ಜುನನಿಗೆ ಸ್ವಲ್ಪ ಗೊಂದಲವಾದರೂ ಕೃಷ್ಣನ ಮಾತಿಗೆ ಎದುರಾಡದೆ ಅತ್ಯಂತ ವಿಧೇಯತೆ ಯಿಂದ ತನ್ನ ಅಸ್ತ್ರಗಳನ್ನು ತೆಗೆದುಕೊಂಡು ರಥದಿಂದ ಕೆಳಗೆ ಇಳಿದ. ನಂತರ ಕೃಷ್ಣನು ತನ್ನ ಬಾರುಕೋಲು, ಕಡಿವಾಣಗಳನ್ನು ಅಲ್ಲಿಯೇ ಬಿಟ್ಟು ರಥದಿಂದ ಕೆಳಕ್ಕೆ ಧುಮುಕಿದನು. ಆಗ ಎಲ್ಲರೂ ನೋಡುತ್ತಿದ್ದಂತೆ ಆ ಬಂಗಾರದ ರಥವು ಇದ್ದಕ್ಕಿದ್ದಂತೆ ಹತ್ತಿಕೊಂಡು ಉರಿದು ಕ್ಷಣ ಮಾತ್ರದಲ್ಲಿ ಬೂದಿಯಾಯಿತು.

Roopa Gururaj Column: ವೆಂಕಟೇಶ ಸುಪ್ರಭಾತದ ಹಿನ್ನೆಲೆ

Roopa Gururaj Column: ವೆಂಕಟೇಶ ಸುಪ್ರಭಾತದ ಹಿನ್ನೆಲೆ

ಇಲ್ಲಿ ವಿಶ್ವಾಮಿತ್ರ ಋಷಿಯು ಕಾಡಿನಲ್ಲಿ ಮಲಗಿದ್ದ ದಶರಥ ನಂದನ ರಾಮನನ್ನು ಸುಪ್ರಭಾತ ಹೇಳು ತ್ತಾ ಎಬ್ಬಿಸುತ್ತಿದ್ದಾನೆ. ರಾಮ ನೇಕೆ ಕಾಡಿನಲ್ಲಿ ಮಲಗಿದ್ದ? ವಿಶ್ವಾಮಿತ್ರರೇಕೆ ಅವನನ್ನು ಎಬ್ಬಿಸಿದರು? ಎನ್ನುವುದಕ್ಕೆ ಒಂದು ಹಿನ್ನೆಲೆಯಿದೆ. ವಿಶ್ವಾಮಿತ್ರ ಋಷಿ ತನ್ನ ಯಾಗ ರಕ್ಷಣೆಗಾಗಿ ರಾಮ ಲಕ್ಷ್ಮಣರನ್ನು ಕಳುಹಿಸುವಂತೆ ದಶರಥ ನಲ್ಲಿ ಕೇಳುತ್ತಾನೆ.

Roopa Gururaj Column: ನಂಬುವುದಾದರೆ ಸಂಪೂರ್ಣ ನಂಬು ಎನ್ನುವ ಶ್ರೀಕೃಷ್ಣ

Roopa Gururaj Column: ನಂಬುವುದಾದರೆ ಸಂಪೂರ್ಣ ನಂಬು ಎನ್ನುವ ಶ್ರೀಕೃಷ್ಣ

ಬದುಕಿನುದ್ದಕ್ಕೂ ನ್ಯಾಯ, ಧರ್ಮ ಸಂಸ್ಥಾಪನೆಗಾಗಿ ಹೋರಾಡಿ, ತಂತ್ರ, ಕಪಟ ನೀತಿಯನ್ನೂ ತನ್ನದಾ ಗಿಸಿ ಜಗತ್ತು ಬಿಟ್ಟು ಹೋಗುವಾಗ ಎಲ್ಲವನ್ನೂ ಇಲ್ಲಿಯೇ ಬಿಟ್ಟು ಏನನ್ನೂ ತನ್ನೊಡನೆ ಒಯ್ಯದ ಎಲ್ಲಾ ಐಹಿಕ, ಲೌಕಿಕ, ಲೋಕದೊಳಗಿದ್ದು, ಏನನ್ನೂ ಅಂಟಿಸಿಕೊಳ್ಳದೆ ಕೊನೆಯಲ್ಲಿ ತನ್ನ ಕುಲ, ವಂಶ ನಾಶ ಆಗುವುದನ್ನೂ ನೋಡಿ ಕೇವಲ ಬದುಕಿನ ಕರ್ತವ್ಯವನ್ನು ನಿಭಾಯಿಸುವ ಶ್ರೀಕೃಷ್ಣ.

Loading...