ಹೃದಯದೊಳಗೆ ಭಗವಂತನಿರಲೇಬೇಕು
ಹನುಮಂತನ ಉತ್ತರವನ್ನು ಕೇಳಿ ನಾರದ ಮುನಿಗಳು ಸಂತೋಷಪಟ್ಟರು. ಅವರು ಹನುಮಂತ ನನ್ನು ಅಪ್ಪಿಕೊಂಡು ರಾಮನ ಮೇಲಿನ ಅಪ್ರತಿಮ ಭಕ್ತಿಯನ್ನು ಹೊಗಳಿದರು. ನಡೆದ ಈ ಘಟನೆ ಕಾಲ್ಪನಿಕ ವಿರಬಹುದು, ಆದರೆ ಅದು ಸಾರುವ ವೃತ್ತಾಂತ ಮಾತ್ರ ಹೃದಯಕ್ಕೆ ನಿಲುಕುವಂಥದ್ದು.
ಮೂಲತಃ ಬೆಂಗಳೂರಿನವರಾದ ಶ್ರೀಮತಿ. ರೂಪ ಗುರುರಾಜ್ ರೇಡಿಯೋ ಉದ್ಘೋಷಕಿಯಾಗಿ, ದೂರದರ್ಶನಗಳಲ್ಲಿ ನಿರೂಪಕಿ ಹಾಗೂ ವಾರ್ತಾ ವಾಚಕಿಯಾಗಿ, ಸೃಜನಾತ್ಮಕ ಬರಹಗಾರರಾಗಿ, ರೂಪದರ್ಶಿ, ನಟನೆ, ಸಮಾಜ ಸೇವೆ ಹೀಗೆ ಹಲವು ರಂಗಗಳಲ್ಲಿ ಅನುಭವ ಹೊಂದಿದ್ದಾರೆ. - ಬೆಂಗಳೂರು ದೂರದರ್ಶನದ ಚಂದನ ವಾಹಿನಿ. - ಆಕಾಶವಾಣಿ ನಿಲಯ. - ಎಫ್.ಎಂ ರೈನ್ ಬೋ ಕಂಪನಾಂಕ. - ಅಂತಾರಾಷ್ಟ್ರೀಯ ಡಿಜಿಟಲ್ ರೇಡಿಯೋ "ನಮ್ ರೇಡಿಯೋ" ಕಾರ್ಯಕ್ರಮಗಳಲ್ಲಿ ರೂಪ ಗುರುರಾಜ್ ಅವರ ಧ್ವನಿ ಚಿರಪರಿಚಿತ. ಕಳೆದ ಒಂದೂವರೆ ದಶಕಕ್ಕೂ ಅಧಿಕ ಕಾಲ ನಿರೂಪಣಾ ಕ್ಷೇತ್ರದಲ್ಲಿ ದೇಶ ವಿದೇಶಗಳಲ್ಲಿ 800ಕ್ಕೂ ಅಧಿಕ ಕಾರ್ಯಕ್ರಮಗಳ ನಿರೂಪಣೆ ಕಿರುತೆರೆ, ಹಲವು ಸಿನೆಮಾಗಳಲ್ಲಿ ಅಭಿನಯಿಸಿರುವುದಲ್ಲದೇ, ರೂಪದರ್ಶಿಯಾಗಿ ಉಡುಪು ಹಾಗೂ ಬೆಳ್ಳಿ ಆಭರಣ ಸಂಸ್ಥೆಗಳ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಸ್ತುತ ವಿಶ್ವವಾಣಿ ದೈನಿಕದಲ್ಲಿ ಅಂಕಣಗಾರ್ತಿಯಾಗಿ "ಒಂದೊಳ್ಳೆ ಮಾತು" ಅಂಕಣವನ್ನು ಕಳೆದ 4 ವರ್ಷಗಳಿಂದ ಪ್ರತಿದಿನ ಬರೆಯುತ್ತಿದ್ದಾರೆ. ಅದಲ್ಲದೇ ಕನ್ನಡದ ಅನುಭವ ಮಂಟಪ ಎಂದೇ ಖ್ಯಾತಿ ಪಡೆದ "ವಿಶ್ವವಾಣಿ ಕ್ಲಬ್ ಹೌಸ್" ನ ಸಹ ನಿರೂಪಕಿಯಾಗಿ ಸತತ0 4 ವರ್ಷಗಳಿಂದ ( 1,100) ಪ್ರತಿದಿನ ನಡೆಸಿಕೊಂಡು ಬರುತ್ತಿದ್ದಾರೆ. ವಿಶ್ವವಾಣಿ ಟಿವಿಯಲ್ಲಿ ( ಯೂಟ್ಯೂಬ್ ಚಾನೆಲ್) ನಲ್ಲಿ ಇವರ “ಒಂದೊಳ್ಳೆ ಮಾತು “ ಸರಣಿ ವಿಡಿಯೋಗಳು ಬಿತ್ತರಗೊಳ್ಳುತ್ತಿವೆ. 50 ಕವನ ಸಂಕಲನಗಳ "ರೂಪಾಂತರ" ಹಾಗೂ ಮೂರು ಸಂಚಿಕೆಗಳ "ಒಂದೊಳ್ಳೆ ಮಾತು" ಪುಸ್ತಕಗಳು ಲೋಕಾರ್ಪಣೆಗೊಂಡಿದೆ. ಮನ: ಪ್ರಸಾದ, ಪ್ರೇರಣ ಮುಂತಾದ ಸರ್ಕಾರೇತರ ಸಂಸ್ಥೆಗಳಲ್ಲಿ ಸಮಾಜಸೇವೆಗಾಗಿ ತೊಡಗಿಸಿಕೊಂಡಿದ್ದಾರೆ.
ಬ್ರಹ್ಮದೇವ, ಸ್ವಲ್ಪ ಸಮಯದ ಹಿಂದೆಯಷ್ಟೇ ನನ್ನನ್ನು ಸೃಷ್ಟಿ ಮಾಡಿದ್ದಾನೆ, ಈ ಕಾಡಿನಲ್ಲಿ ಒಬ್ಬ ಒಳ್ಳೆಯ ರಾಜನಿಲ್ಲ ಅದಕ್ಕಾಗಿ ಎಲ್ಲಾ ಪ್ರಾಣಿಗಳಿಗೂ ನೀನೇ ರಾಜನಾಗು ಎಂದು ಹೇಳಿ ನನಗೆ ‘ಕಕುದ್ರು ಮ’ ಎಂದು ಹೆಸರು ಕೊಟ್ಟು, ನನ್ನನ್ನು ಇಲ್ಲಿಗೆ ಕಳುಹಿಸಿದ್ದಾನೆ. ಅವನ ಆದೇಶದ ಮೇರೆಗೆ ನಾನು ಇಲ್ಲಿಗೆ ಬಂದಿದ್ದೇನೆ ನೀವೆಲ್ಲರೂ ನನ್ನನ್ನು ರಾಜನನ್ನಾಗಿ ಸ್ವೀಕರಿಸಿ ನನ್ನ ಆeಯನ್ನು ಪ್ರಶ್ನಿಸದೇ, ಪರಿ ಪಾಲಿಸ ಬೇಕು ಇದು ಬ್ರಹ್ಮದೇವನ ಆದೇಶ ಎಂದಿತು.
ಒಂದಾನೊಂದು ಕಾಲದಲ್ಲಿ ಷಣ್ಮುಖನು ಋಷಿಗಳ ಕೋರಿಕೆಯಂತೆ ಬನಶಂಕರೀ ದೇವಿಯ ಪುಣ್ಯ ಚರಿತ್ರೆಯನ್ನು ಹೇಳಿದ್ದನು. ಅಗಸ್ತ್ಯ ಮಹಾಮುನಿಯು ತನ್ನ ಸತಿ ಶಿರೋಮಣಿಗೆ ಹೇಳುತ್ತಾನೆ. ಪೂರ್ವದಲ್ಲಿ ನಮ್ಮೀ ದೇಶವು ಭಯಂಕರವಾದ ಕಾಡುಗಳಿಂದ ಕೂಡಿದ್ದಾಗಿತ್ತು. ಇವುಗಳಲ್ಲಿ ಕಳ್ಳ ಕಾಕರು ಬೀಡು ಮಾಡಿಕೊಂಡು ಸಿಕ್ಕ ಸಿಕ್ಕವರನ್ನು ಸುಲಿಗೆ ಮಾಡುವುದೇ ಇವರ ಮುಖ್ಯ ಉದ್ಯೋಗ ವಾಗಿತ್ತು
ನಗುವವರು ನಗಲಿ, ಉಳಿದುಕೊಳ್ಳುವವರು ಉಳಿಯಲಿ. ಇದು ನನ್ನ ಕೃಷ್ಣನ ಆದೇಶ, ನಾನಂತೂ ಅದನ್ನು ಪಾಲಿಸುವೆ ಎಂದುಕೊಂಡು ಒಂದು ಎತ್ತಿನ ಗಾಡಿ ತರಿಸಿ, ಅದರಲ್ಲಿ ಮನೆಯಲ್ಲಿಯ ಎಲ್ಲಾ ಸಾಮಗ್ರಿಗಳನ್ನು ಹಾಕಿಸಿ, ತನ್ನ ಕೃಷ್ಣನ ಮೂರ್ತಿ ಕೈಯಲ್ಲಿ ಹಿಡಿದು ಮುದುಕಿ ನಡೆದೇ ಬಿಟ್ಟಳು. ಅವಳನ್ನು ನೋಡಿ ಎಂಥ ಮೂರ್ಖತನ ಎಂದು ಜನ ನಗತೊಡಗಿದರು.
ಜ್ಞಾನಿಯಾದ ಅಣಿಮಾಂಡವ್ಯ ಕೊಟ್ಟ ಶಾಪದಿಂದ ಯಮನೇ ಮುಂದೆ ಧರ್ಮರಾಯನಾಗಿ ಹುಟ್ಟಿ ಅನೇಕ ಕಷ್ಟಗಳನ್ನು ಎದುರಿಸಿ, ಕೋಪಗೊಳ್ಳದೇ ಧಾರ್ಮಿಕನಾಗಿಯೇ ಉಳಿಯುತ್ತಾನೆ. ಅಣಿಮಾಂಡವ್ಯ ರ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಾಗ ಯಮರಾಜ ತಪ್ಪು ಮಾಡಿದ್ದರು ಕೂಡ ನಂತರ ಅದನ್ನು ತಿದ್ದುಕೊಂಡು ವಿಷ್ಣುವಿನ ಬಳಿ ಅವರ ಪರವಾಗಿ ಮಾತನಾಡಿದ್ದರ ಪರಿಣಾಮ ವಾಗಿ ಧಾರ್ಮಿಕ ನಾಗಿಯೇ ಉಳಿದು ಧರ್ಮರಾಯನಾಗಿ ಜನಿಸುವ ಅವಕಾಶ ಸಿಗುತ್ತದೆ.
ಪುರಿ ಜಗನ್ನಾಥ ದೇವಾಲಯವು ವಿಷ್ಣುವಿನ ಒಂದು ರೂಪವಾದ ಜಗನ್ನಾಥ ದೇವರು ಮತ್ತು ಅವನ ಇಬ್ಬರು ಸಹೋದರರಾದ ಬಲರಾಮ ಮತ್ತು ಸುಭದ್ರರಿಗೆ ಸಮರ್ಪಿತವಾದ ದೇವಾಲಯ. ಪ್ರಪಂಚ ದಲ್ಲೇ ಅತ್ಯಂತ ದೊಡ್ಡದಾದ ಪುರಿ ಜಗನ್ನಾಥ್ ಅಡುಗೆ ಮನೆಯ ವಿಶೇಷ ನೀವು ತಿಳಿಯಬೇಕು. ಬರೋ ಬ್ಬರಿ 1000 ಬಾಣಸಿಗರಿಂದ ಇಲ್ಲಿಯ ಅಡುಗೆ ತಯಾರಾಗತ್ತೆ. ಕಟ್ಟಿಗೆ ಒಲೆಯ ಮೇಲೆಯೇ ಮಹಾಪ್ರಸಾದ ಮಾಡುವುದು ಇಲ್ಲಿಯ ನಿಯಮ. ಅಲ್ಲಿ ಅಡುಗೆಗೆ ಬಳಸುವ ಕಟ್ಟಿಗೆ ಸಾಮಾನ್ಯದಲ್ಲ
ಒಮ್ಮೆ ಯೋಚಿಸಿ ನೋಡಿ, ಮೌನವಾಗಿ ನಮಗೇ ಅರಿವಿಲ್ಲದಂತೆ ಮತ್ತೊಬ್ಬರ ಬದುಕಿನಲ್ಲಿ ಒಳಿತನ ಮಾಡುವುದು ಎಂಥ ಚಂದದ ಅನುಭವ. ಯಾರಾದರೂ ಬಹಳ ದಿನಗಳ ನಂತರ ಬಂದು ನಿಮ್ಮಿಂದ ಇಂತಹ ಉಪಕಾರವಾಗಿತ್ತು ಅದರಿಂದ ನಮ್ಮ ಜೀವನ ಬದಲಾಯಿತು ಎಂದಾಗ ಮನಸ್ಸಿಗೆ ಎಷ್ಟು ಸಂತೋಷವಾಗುತ್ತದೆ. ಹೇಳಿ ಮಾಡುವ ಉಪಕಾರಕ್ಕಿಂತ ನಮಗೆ ಅರಿವಿಲ್ಲದೆ ಆಗುವ ಉಪಕಾರ, ನೂರು ಪಟ್ಟು ಹೆಚ್ಚಿನ ತೂಕವುಳ್ಳದ್ದು
ಬುದ್ಧನ ಸಾವಿನ ನಂತರವಷ್ಟೇ ಆನಂದನಿಗೆ ಸ್ವಂತದ ಸಾಧನೆಗಾಗಿ ಸಮಯ ಸಿಕ್ಕಿತು. ಅದೇ ಸಮಯ ದಲ್ಲಿ ಬುದ್ಧನ ಇನ್ನೊಬ್ಬ ಪ್ರಧಾನ ಶಿಷ್ಯ ಅರ್ಹತ ಮಹಾಕಶ್ಯಪ, ಪ್ರಪ್ರಥಮ ಬೌದ್ಧ ಸಮಾವೇಶವನ್ನು ಆಯೋಜಿಸುತ್ತಿದ್ದ. ಈ ಸಮಾವೇಶದಲ್ಲಿ ಬುದ್ಧನ ಎಲ್ಲ ಜ್ಞಾನೋದಯ ಹೊಂದಿದ ಶಿಷ್ಯರು ಮತ್ತು ಬೌದ್ಧ ವಿದ್ವಾಂಸರು ಸೇರಿಕೊಂಡು ಬುದ್ಧನ ಎಲ್ಲ ಜ್ಞಾನವನ್ನು ಕ್ರೂಢೀಕರಿಸುವ ಪ್ರಯತ್ನ ಮಾಡು ವವರಿದ್ದರು.
ಕಳ್ಳನನ್ನು ಅಟ್ಟಿಸಿಕೊಂಡು ಬರುತ್ತಿದ್ದ ಸೇವಕನಿಗೆ ಒಂದಷ್ಟು ದೂರ ಓಡಿ ಬಂದಮೇಲೆ ಕಳ್ಳ ಕಾಣಿಸಲೇ ಇಲ್ಲ. ಅವನು ಅತ್ತ ಇತ್ತ ತಿರುಗಿ ಮರದ ಕೆಳಗೆ ಕೂತಿದ್ದ ಸಾಧುವನ್ನು ಕೇಳಿದ ಕಳ್ಳನೊಬ್ಬನನ್ನು ಇಲ್ಲಿ ಎಲ್ಲಾದರೂ ನೋಡಿದಿರಾ? ಆಗ ಸಾಧು ಹೇಳಿದ ,ಇಲ್ಲಿ ಯಾರೂ ಬರಲೇ ಇಲ್ಲವಲ್ಲ ಬೇರೆದಾರಿಯಲ್ಲಿ ಹೋಗಿರಬೇಕು ಎಂದ.
ಸ್ವಲ್ಪ ಬೇಸರದಿಂದ ಆಚಾರ್ಯರು ತಾವೇ ಸ್ವತಃ ಪುಸ್ತಕ ಬಂಡಾರಕ್ಕೆ ಹೋಗಿ ಲಲಿತಾಸಹಸ್ರನಾಮ ಪುಸ್ತಕವನ್ನು ಕೈಯಲ್ಲಿ ಎತ್ತಿಕೊಳ್ಳುತ್ತಿರುವಾಗ, ಪುಸ್ತಕ ಬಂಡಾರದಲ್ಲಿದ್ದ ಶಾರದಾಂಬೆಯ ವಿಗ್ರಹದಿಂದ ಧ್ವನಿ ಬಂತು. ‘ಶಂಕರ, ಸಮಸ್ತ ಮಾನವಕೋಟಿಯ ಉದ್ಧಾರಕ್ಕೆ ಇರುವ ಸ್ತೋತ್ರ ವಿಷ್ಣುಸಹಸ್ರನಾಮ. ಕಲಿಯುಗದ ಜನರಿಗೆ ವಿಷ್ಣು ಸಹಸ್ರನಾವದ ಅಗತ್ಯವು, ಲಲಿತಾಸಹಸ್ರ ನಾಮಕ್ಕಿಂತಲೂ ಹೆಚ್ಚಾಗಿ ಇದೆ, ಕಲಿಯುಗದಲ್ಲಿ ಈ ಸ್ತೋತ್ರವನ್ನು ಭಕ್ತಿಯಿಂದ ಪಾರಾಯಣ ಮಾಡುವುದೇ ತಪಸ್ಸು.
ನಕ್ಕೀರ ತನ್ನ ಕೆಲಸದಲ್ಲಿ ಎಷ್ಟು ನಿರತನಾಗಿದ್ದರೆಂದರೆ ಅವನ ಮುಂದೆ ಸಾಕ್ಷಾತ್ ಶಿವನೇ ಬಂದು ನಿಂತರೂ ಅವನಿಗೆ ಗೊತ್ತಾಗಲಿಲ್ಲ. ಶಿವನನ್ನು ಗಮನಿಸದೆ ನೀರಿನಲ್ಲಿ ಮುಳುಗಿದ. ಈಗ ಶಿವನಿಗೆ ಅವನ ಮೇಲೆ ಬಹಳ ಕೋಪ ಬಂತು. ಇವನನ್ನು ಮಹಾ ಶಿವಭಕ್ತನೆಂದು ಜನ ಕೊಂಡಾಡುತ್ತಿದ್ದಾರೆ, ತಾನೇ ಎದುರಿಗೆ ಬಂದು ನಿಂತರೂ ಇವನು ನನ್ನನ್ನು ಗಮನಿಸುತ್ತಲೇ ಇಲ್ಲವಲ್ಲ ಎಂದುಕೊಂಡ.
ಬಲರಾಮ ಮತ್ತು ಸಾತ್ಯಕಿಗೆ ಆಶ್ಚರ್ಯವಾಯಿತು. ಇದು ಹೇಗಾಯಿತು ಎಂದಾಗ ಕೃಷ್ಣ ನಗುತ್ತಾ ಹೇಳಿದ ಈ ರಾಕ್ಷಸ ಕೋಪದ ಸಾಕಾರ ಮೂರ್ತಿಯು, ಮತ್ತು ಕೋಪಕ್ಕೆ ಉತ್ತರ ಕೋಪವಲ್ಲ, ನೀವಿಬ್ಬರೂ ಮತ್ತೆ ಮತ್ತೆ ಕೋಪಗೊಳ್ಳುತ್ತಲೇ ಜಗಳವಾಡಿದ್ದೀರಿ. ಅದಕ್ಕಾಗಿಯೇ ನೀವು ಅವನ ಕೈಯಲ್ಲಿ ಸೋತುಬಿಟ್ಟಿರಿ ಎಂದು ಕೃಷ್ಣ ಹೇಳಿದನು
ಪತಿ ಕಹೋಡ ಮಹರ್ಷಿಗೆ ಸಮಸ್ತ ವಿಷಯವನ್ನು ತಿಳಿಸುತ್ತಾಳೆ. ಆದರೆ ವಿದ್ಯೆಯ ಮದವೇರಿದ್ದ ಕಹೋಡರಿಗೆ ತಮ್ಮ ತಪ್ಪಿನ ಅರಿವಾಗುವದಿಲ್ಲ. ಬದಲಾಗಿ ತಮ್ಮನ್ನು ಎಂಟು ಸಲ ಗೇಲಿ ಮಾಡಿ ನಕ್ಕ ಗರ್ಭದಲ್ಲಿನ ಮಗುವಿನ ಮೇಲೆ ಅಸಾಧ್ಯ ಕೋಪ ಬರುತ್ತದೆ. ತಕ್ಷಣವೇ ಸುಜಾತೆಯ ಗರ್ಭಕ್ಕೆ ‘ಎಂಟು ಸಲ ನನ್ನನ್ನು ಅವಮಾನಿಸಿದ ನಿನ್ನ ಎಂಟು ಅಂಗಗಳು ಕೂಡ ಊನವಾಗಲಿ..’ ಅಂತ ಶಪಿಸುತ್ತಾರೆ. ಹಾಗೆ ಎಂಟು ಅಂಗಗಳನ್ನು ಹೊತ್ತುಕೊಂಡು ಹುಟ್ಟಿದವನೇ ಅಷ್ಟಾವಕ್ರ
ನಿರಾಶನಾಗದ ಏಕಲವ್ಯನು, ದಿನವೂ ದೂರದಲ್ಲಿ ನಿಂತು ದ್ರೋಣಾಚಾರ್ಯರು ಕೌರವರಿಗೆ, ಪಾಂಡವ ರಿಗೆ ಹೇಳಿಕೊಡುತ್ತಿದ್ದ ವಿದ್ಯೆಯನ್ನು ಮನನ ಮಾಡಿಕೊಂಡು, ಕಾಡಿಗೆ ಮರಳಿ ದ್ರೋಣರ ಮಣ್ಣಿನ ಮೂರ್ತಿಯನ್ನು ಮಾಡಿ ಅವರನ್ನೇ ತನ್ನ ಮಾನಸ ಗುರುವೆಂದು ನಂಬಿ ಬಿಲ್ವಿದ್ಯೆಯನ್ನು ಸಾಧಿಸಿ ಕೊಳ್ಳುತ್ತಾನೆ
ದೇವರ ಮುಂದಿಟ್ಟಿರುವ ಇವರಿಬ್ಬರ ನ್ಯಾಯ ಇನ್ನೂ ಇತ್ಯರ್ಥವಾಗಿಲ್ಲ. ದೇವರು ಇಂದಿಗೂ ಪ್ರಯತ್ನಿಸು ತ್ತಲೇ ಇದ್ದಾನೆ, ಆದರೆ ಸೂರ್ಯನ ಮುಂದೆ ಕತ್ತಲು ಎಂದೂ ಬಂದೇ ಇಲ್ಲ.ಅದು ಸಾಧ್ಯವೂ ಇಲ್ಲ. ಸೂರ್ಯನಿದ್ಧಲ್ಲಿ ಕತ್ತಲು ಎಂದೂ ಬರುವುದಿಲ್ಲ. ಹಾಗೆಯೇ ದೆವ್ವ, ಭೂತ ಪಿಶಾಚಿಗಳೆಂಬ ದುಷ್ಟ ಶಕ್ತಿಗಳೆಲ್ಲಾ ಕತ್ತಲೆ ಇದ್ದಂತೆ ಅವು ದೇವರ ಅಭಾವದಲ್ಲಿ ಹುಟ್ಟಿಬಿಡುವ ನಕಾರಾತ್ಮಕ ಶಕ್ತಿಗಳು.
ಬಿರುಗಾಳಿ ಬರಲಿ ನಾವೇನು ಹೆದರುವುದಿಲ್ಲ ಸೋಲುವುದಿಲ್ಲ, ಮುರಿದುಬಿದ್ದರೂ ಸರಿಯೇ ನಾವು ಮಾತ್ರ ತಲೆಬಾಗುವುದಿಲ್ಲ ಎಂದುಕೊಂಡು ಅವು ನೆಟ್ಟಗೇ ನಿಂತಿದ್ದವು. ಚಿಕ್ಕ ಚಿಕ್ಕ ಸಸಿಗಳು ಯಾವುದೇ ಬಗೆಯ ಅಹಂಕಾರವನ್ನೂ ಸೊಕ್ಕನ್ನು ತೋರಿಸಲಿಲ್ಲ, ಬಿರುಗಾಳಿಯೊಂದಿಗೆ ಸೆಣಸಾ ಡಲೂ ಇಲ್ಲಾ, ಅವು ಬಿರುಗಾಳಿಯೊಂದಿಗೆ ಆಟವಾಡಿದವಷ್ಟೇ, ಬಿರುಗಾಳಿ ಅವುಗಳನ್ನು ಬಗ್ಗಿಸಿ ದಾಗ ಅವು ಬಗ್ಗಿದವು, ಪ್ರೇಮದಿಂದ ಗಾಳಿಯೊಡನೆ ವಾಲಿದವು. ಅವು ಯಾವುದೇ ವಿರೋಧವನ್ನೂ ವ್ಯಕ್ತಪಡಿಸ ಲಿಲ್ಲ. ಬಿರುಗಾಳಿ ಅವುಗಳಲ್ಲಿದ್ದ ಧೂಳು ಕೊಳಕುಗಳನ್ನೆಲ್ಲಾ, ಜಾಡಿಸಿ ತೆಗೆದು ಅವುಗಳನ್ನ ಶುದ್ಧ ಗೊಳಿಸಿ ತಷ್ಟೇ.
ಇತ್ತ ದಮಯಂತಿಯ ತಂದೆ ರಾಜ ಭೀಮನು ತನ್ನ ಮಗಳ ವಿವಾಹಕ್ಕಾಗಿ ಸ್ವಯಂವರವನ್ನು ಏರ್ಪಡಿಸಿ ದನು. ಈ ಸ್ವಯಂವರದಲ್ಲಿ ರಾಜರು ಸೇರಿದಂತೆ ಅನೇಕ ದೇವರುಗಳು ಭಾಗವಹಿಸಿದ್ದರು. ಆದರೆ, ಎಲ್ಲಾ ರಾಜಕುಮಾರರು ನಳನ ರೂಪದಲ್ಲಿದ್ದರು. ಆದರೂ ದಮಯಂತಿ ತಾನು ಪ್ರೀತಿಸು ತ್ತಿದ್ದ ನಳನನ್ನೇ ಪತಿಯಾಗಿ ಆಯ್ದುಕೊಂಡಳು. ರಾಜಕುಮಾರ ನಳನಿಗೂ ರಾಜಕುಮಾರಿ ದಮಯಂತಿಗೂ ವಿವಾಹ ನಡೆಯಿತು.
ಹಕ್ಕಿಗಳು ಗೆಲ್ಲುವ ಸ್ಥಿತಿ ಕಂಡು ಬಂದಾಗ, ಬಾವಲಿಗಳು ಅವುಗಳ ಪರ ಸೇರುತ್ತಿದ್ದವು, ಪ್ರಾಣಿಗಳು ಗೆಲ್ಲು ವಂತೆ ಕಂಡಾಗ, ಅವುಗಳೊಂದಿಗೆ ಸೇರಿಕೊಳ್ಳುತ್ತಿದ್ದವು. ಹೀಗೆ ಅನೇಕ ದಿನ ಹೋರಾಟ ನಡೆದರೂ ಯಾವ ಪಕ್ಷಕ್ಕೂ ಜಯ ಮಾತ್ರ ಲಭಿಸಲಿಲ್ಲ. ಪ್ರಾಣಿ ಪಕ್ಷಿಗಳು ಹೋರಾಟ ನಡೆಸಿ, ಮಡಸಿ, ಬಹಳವಾಗಿ ಬಳಲಿ, ಸಂಧಿ ಮಾಡಿಕೊಳ್ಳಲು ಮುಂದಾದವು. ಪಕ್ಷಿಗಳ ರಾಜ, ಹಾಗೂ ಪ್ರಾಣಿಗಳ ರಾಜ ಎರಡೂ ಒಟ್ಟಿಗೆ ಕುಳಿತು ಮಾತನಾಡಿ, ಶಾಶ್ವತ ಶಾಂತಿಗಾಗಿ, ಚರ್ಚೆ ನಡೆಸಿ, ತಮ್ಮ ಹಳೆಯ ದ್ವೇಷವನ್ನು ಮರೆತು, ಎರಡೂ ಪಕ್ಷದವರು ಇನ್ನು ಮುಂದೆ ಸ್ನೇಹಿತರಾಗಿರಬೇಕೆಂದು ತೀರ್ಮಾನಿಸಿದವು.
ತಮಿಳುನಾಡಿನ “ರಾಮೇಶ್ವರಂ" ಶಿವನ ದ್ವಾದಶ ಜ್ಯೋತಿಲಿಂಗಗಳಲ್ಲಿ ಒಂದಾಗಿದೆ. ಹಿನ್ನೆಲೆ ಪ್ರಕಾರ ತ್ರೇತಾಯುಗದ ರಾಮಾಯಣದಲ್ಲಿ ರಾವಣ ಸೀತೆಯನ್ನು ಮೋಸದಿಂದ ಅಪಹರಿಸಿದನು. ಆಕೆಯನ್ನು ಬಂಧನದಿಂದ ಬಿಡಿಸಿ ತರಲು ರಾಮ-ರಾವಣರಿಗೆ ಯುದ್ಧವಾಯಿತು. ರಾವಣನನ್ನು ರಾಮ ಸಂಹರಿಸಿದ. ರಾವಣನಿಗೆ ರಾಕ್ಷಸ ಗುಣಗಳಿದ್ದರೂ ಅವನು ಬ್ರಾಹ್ಮಣ. ಮಹರ್ಷಿಗಳ ಮಗ. ಮೇಲಾಗಿ ಅತಿರೇಕದ ಶಿವ ಭಕ್ತನಾಗಿದ್ದ. ರಾವಣ ಶಿವನ ಕುರಿತು ಕಠಿಣ ತಪಸ್ಸು ಮಾಡಿ ಆತ್ಮಲಿಂಗವನ್ನೇ ತಂದಂತಹ ಮಹಾನ್ ಶಿವ ಭಕ್ತ
ಮಲ್ಲಯ್ಯ, ಬಾ ತಾಯಿ ಎಂದು ಒಂದು ಮರದ ಕೆಳಗೆ ಕುಳಿತು ತನ್ನ ಬಳೆದಿಂಡಿನ ಗಂಟನ್ನು ಬಿಚ್ಚಿ ಹರಡಿ ಅವಳಿಗೆ ಬಳೆಯನ್ನು ತೋರಿಸಿದ. ಹೊಳೆಯುವ ಕೆಂಪು, ಹಸಿರು, ಹಳದಿ, ನೀಲಿ ಬಳೆಗಳನ್ನು ಆರಿಸಿ ಎರಡೂ ಕೈಗಳ ತುಂಬಾ ಹಾಕಿಸಿ ಕೂಂಡಳು. ಬಳೆಗಾರನಿಗೆ, ಮಲ್ಲಾರ ಇದು ನನ್ನ ಗಂಡನ ಮನೆ, ಪಕ್ಕದ ‘ಗೌರಿಹಳ್ಳಿ’ಯ ರಥ ಬೀದಿಯಲ್ಲಿ ಊರ ಹೆಂಚಿನ ದೊಡ್ಡ ಮಾಳಿಗೆ ಮನೆ ಇದೆ.
ಗುರುಗಳು ಶಾಂತ ಚಿತ್ತದಿಂದ ನೀನು ಬಾಗಿಲ ಮೇಲೆ ಹಾಗೂ ನಿನ್ನ ಶೂಗಳ ಮೇಲೆ ಕೋಪ ಮಾಡಿ ಕೊಂಡೆ ಎಂದ ಮೇಲೆ ಅದುಕೂ ನಿನಗೂ ಏನಾದರು ಸಂಬಂಧವಿರಬೇಕು ಅಲ್ಲವೇ? ನಿನಗೆ ಯಾರ ಮೇಲೆ ಕೋಪ ಮಾಡಿಕೊಳ್ಳುವ ಅರ್ಹತೆ ಇದೆಯೋ ಅವುಗಳ ಮೇಲೆ ನಿನಗೆ ಪ್ರೀತಿಸುವ ಜವಾಬ್ದಾರಿ ಯೂ ಇರಬೇಕು? ಆದ್ದರಿಂದ ನೀನು ಯಾವಾಗ ಯಾವ ವಸ್ತುಗಳ ಮೇಲೆ ಅಥವಾ ವ್ಯಕ್ತಿಗಳ ಮೇಲೆ ಕೋಪ ಮಾಡಿಕೊಳ್ಳುವೆಯೋ ಅವರಿಗೆ ಕ್ಷಮೆ ಕೇಳಲೇಬೇಕು.
ರಾಜ ಹಣ್ಣುಗಳನ್ನು ನೋಡಿ ಹೇಳಿದ, ಹೌದೌದು ಹಣ್ಣುಗಳು ಬಹಳ ಚೆನ್ನಾಗಿವೆ ನನಗೆ ಸಂತೋಷ ವಾಗಿದೆ . ನಂತರ ರಾಜ ಶ್ರೀಮಂತ ರೈತನನ್ನು ದೃಷ್ಟಿಸಿ ನೋಡಿದ. ದೊಡ್ಡ ಬಂಡಿ ತುಂಬ ಒಳ್ಳೆಯ ಮಾವಿನ ಹಣ್ಣು ತಂದಿದ್ದಾನೆ. ಇವನು ಬಡವನಲ್ಲ ಎಂದುಕೊಂಡು ಹಾಗೆ ಅವನ ಕೈ ಬೆರಳುಗಳಲ್ಲಿ ಉಂಗುರ ಹಾಕಿದ ಗುರುತುಗಳನ್ನು ಗಮನಿಸಿ, ಈ ರೈತ ಕಷ್ಟಪಟ್ಟು ದುಡಿದವನಲ್ಲ ಸಾಕಷ್ಟು ಶ್ರೀಮಂತ ನಾಗಿದ್ದಾನೆ ಎಂಬುದನ್ನು ತಿಳಿದುಕೊಂಡ ರಾಜ, ಈ ಮೊದಲೇ ಬಡ ರೈತ ತಂದುಕೊಟ್ಟ ಒಂದೇ ಮಾವಿನ ಹಣ್ಣನ್ನು ಸೇವಕರಿಂದ ತರಿಸಿ ಅದನ್ನು ಶ್ರೀಮಂತನ ಕೈಯಲ್ಲಿಟ್ಟು ಇದು ಸಾಧಾರಣ ಹಣ್ಣಲ್ಲ, ನನಗೆ ಪ್ರಿಯವಾದ ಹಣ್ಣು. ಇದನ್ನು ಒಬ್ಬ ಬಡ ರೈತ ಶ್ರಮದಿಂದ ಬೆಳೆದ ಫಲ.