ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ
Profile

ರೂಪಾ ಗುರುರಾಜ್

rgururaj628@gmail.com

ಮೂಲತಃ ಬೆಂಗಳೂರಿನವರಾದ ಶ್ರೀಮತಿ. ರೂಪ ಗುರುರಾಜ್ ರೇಡಿಯೋ ಉದ್ಘೋಷಕಿಯಾಗಿ, ದೂರದರ್ಶನಗಳಲ್ಲಿ ನಿರೂಪಕಿ ಹಾಗೂ ವಾರ್ತಾ ವಾಚಕಿಯಾಗಿ, ಸೃಜನಾತ್ಮಕ ಬರಹಗಾರರಾಗಿ, ರೂಪದರ್ಶಿ, ನಟನೆ, ಸಮಾಜ ಸೇವೆ ಹೀಗೆ ಹಲವು ರಂಗಗಳಲ್ಲಿ ಅನುಭವ ಹೊಂದಿದ್ದಾರೆ.‌ - ಬೆಂಗಳೂರು ದೂರದರ್ಶನದ ಚಂದನ ವಾಹಿನಿ. - ಆಕಾಶವಾಣಿ ನಿಲಯ. - ಎಫ್.ಎಂ ರೈನ್ ಬೋ ಕಂಪನಾಂಕ. - ಅಂತಾರಾಷ್ಟ್ರೀಯ ಡಿಜಿಟಲ್ ರೇಡಿಯೋ "ನಮ್ ರೇಡಿಯೋ" ಕಾರ್ಯಕ್ರಮಗಳಲ್ಲಿ ರೂಪ ಗುರುರಾಜ್ ಅವರ ಧ್ವನಿ ಚಿರಪರಿಚಿತ. ಕಳೆದ ಒಂದೂವರೆ ದಶಕಕ್ಕೂ ಅಧಿಕ ಕಾಲ ನಿರೂಪಣಾ ಕ್ಷೇತ್ರದಲ್ಲಿ ದೇಶ ವಿದೇಶಗಳಲ್ಲಿ 800ಕ್ಕೂ ಅಧಿಕ ಕಾರ್ಯಕ್ರಮಗಳ ನಿರೂಪಣೆ ಕಿರುತೆರೆ, ಹಲವು ಸಿನೆಮಾಗಳಲ್ಲಿ ಅಭಿನಯಿಸಿರುವುದಲ್ಲದೇ, ರೂಪದರ್ಶಿಯಾಗಿ ಉಡುಪು ಹಾಗೂ ಬೆಳ್ಳಿ ಆಭರಣ ಸಂಸ್ಥೆಗಳ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಸ್ತುತ ವಿಶ್ವವಾಣಿ ದೈನಿಕದಲ್ಲಿ ಅಂಕಣಗಾರ್ತಿಯಾಗಿ "ಒಂದೊಳ್ಳೆ ಮಾತು" ಅಂಕಣವನ್ನು ಕಳೆದ 4 ವರ್ಷಗಳಿಂದ ಪ್ರತಿದಿನ ಬರೆಯುತ್ತಿದ್ದಾರೆ. ಅದಲ್ಲದೇ ಕನ್ನಡದ ಅನುಭವ ಮಂಟಪ ಎಂದೇ ಖ್ಯಾತಿ ಪಡೆದ "ವಿಶ್ವವಾಣಿ ಕ್ಲಬ್ ಹೌಸ್" ನ ಸಹ ನಿರೂಪಕಿಯಾಗಿ ಸತತ0 4 ವರ್ಷಗಳಿಂದ ( 1,100) ಪ್ರತಿದಿನ ನಡೆಸಿಕೊಂಡು ಬರುತ್ತಿದ್ದಾರೆ. ವಿಶ್ವವಾಣಿ ಟಿವಿಯಲ್ಲಿ ( ಯೂಟ್ಯೂಬ್ ಚಾನೆಲ್) ನಲ್ಲಿ ಇವರ “ಒಂದೊಳ್ಳೆ ಮಾತು “ ಸರಣಿ ವಿಡಿಯೋಗಳು ಬಿತ್ತರಗೊಳ್ಳುತ್ತಿವೆ. 50 ಕವನ ಸಂಕಲನಗಳ "ರೂಪಾಂತರ" ಹಾಗೂ ಮೂರು ಸಂಚಿಕೆಗಳ "ಒಂದೊಳ್ಳೆ ಮಾತು" ಪುಸ್ತಕಗಳು ಲೋಕಾರ್ಪಣೆಗೊಂಡಿದೆ. ಮನ: ಪ್ರಸಾದ, ಪ್ರೇರಣ ಮುಂತಾದ ಸರ್ಕಾರೇತರ ಸಂಸ್ಥೆಗಳಲ್ಲಿ ಸಮಾಜಸೇವೆಗಾಗಿ ತೊಡಗಿಸಿಕೊಂಡಿದ್ದಾರೆ.‌

Articles
Roopa Gururaj Column: ನಮ್ಮ ದೌರ್ಬಲ್ಯಗಳನ್ನೇ ಅಸ್ತ್ರವಾಗಿಸಿಕೊಳ್ಳಬೇಕು

Roopa Gururaj Column: ನಮ್ಮ ದೌರ್ಬಲ್ಯಗಳನ್ನೇ ಅಸ್ತ್ರವಾಗಿಸಿಕೊಳ್ಳಬೇಕು

ಇಡೀ ಕ್ರೀಡಾಂಗಣ ಎದ್ದು ನಿಂತು ಚಪ್ಪಾಳೆ ತಟ್ಟಿತು. ವಾಪಸ್ ಬರುವಾಗ ಹುಡುಗ ಗುರುಗಳನ್ನು ಕೇಳಿದ, “ನಾನು ಒಂದೇ ಒಂದು ಪಟ್ಟಿನಿಂದ ಹೇಗೆ ಗೆದ್ದೆ?" ಗುರುಗಳು ಹೇಳಿದರು- “ಮಗು, ನೀನು ಕಲಿತ ಪಟ್ಟು ಜೂಡೋದ ಅತ್ಯಂತ ಕಷ್ಟಕರವಾದದ್ದು. ಅದರಿಂದ ಪಾರಾಗಲು ಎದುರಾಳಿಗೆ ಇರುವ ಏಕೈಕ ದಾರಿ ಎಂದರೆ, ನಿನ್ನ ಬಲಗೈಯನ್ನು ಹಿಡಿದು ಎಳೆಯುವುದು. ಆದರೆ ನಿನಗೆ ಆ ಕೈಯೇ ಇಲ್ಲವಲ್ಲ!". ಆತನ ದೊಡ್ಡ ದೌರ್ಬಲ್ಯವೇ ಅವನ ಅತ್ಯಂತ ಶಕ್ತಿಶಾಲಿ ಅಸ್ತ್ರವಾಗಿ ಬದಲಾಗಿತ್ತು.

Roopa Gururaj Column: ಹಿಮದ ಸುಂಟರಗಾಳಿಯೆದುರು ಹಿಮಪರ್ವತವಾದ ಮಿನಿ ಫ್ರೀಮನ್

ಹಿಮದ ಸುಂಟರಗಾಳಿಯೆದುರು ಹಿಮಪರ್ವತವಾದ ಮಿನಿ ಫ್ರೀಮನ್

ಶಾಲೆಯ ಚಾವಣಿಯ ಒಂದು ಭಾಗ ಕುಸಿದು ಬಿದ್ದಾಗ, ಹಿಮದ ಹನಿಗಳು ಚೂಪಾದ ಗಾಜಿನ ಚೂರು ಗಳಂತೆ ಮಕ್ಕಳ ಮೈಗೆ ಚುಚ್ಚತೊಡಗಿದವು. ಮಕ್ಕಳು ಗಾಬರಿಯಿಂದ ಕಿರುಚುತ್ತಾ ಹೊರಗೆ ಓಡಲು ಯತ್ನಿಸಿದರು. ಆದರೆ, ಅವರ ಇನ್ನೂ ಚಿಕ್ಕವಯಸಿನ ಶಿಕ್ಷಕಿ ಮಿನಿಗೆ ತಿಳಿದಿತ್ತು- ಈ ಮಾರುತದಲ್ಲಿ ಹೆಜ್ಜೆ ಇಟ್ಟರೆ ಸಾವು ಖಚಿತ ಎಂದು. ಮಿನಿ ಫ್ರೀಮನ್ ಕೇವಲ 19 ವರ್ಷದ ಹುಡುಗಿಯಾಗಿದ್ದರೂ, ಆ ಕ್ಷಣದಲ್ಲಿ ಅಪ್ರತಿಮ ನಾಯಕಿಯಾದಳು.

Roopa Gururaj Column: ಕನ್ನಡಿಗರ ಬದುಕಿಗೆ ಜೀವ ತುಂಬಿದ ರಾಜರ್ಷಿಯ ತ್ಯಾಗ

ಕನ್ನಡಿಗರ ಬದುಕಿಗೆ ಜೀವ ತುಂಬಿದ ರಾಜರ್ಷಿಯ ತ್ಯಾಗ

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕೇವಲ ಒಂದು ಅಣೆಕಟ್ಟು ಕಟ್ಟಲಿಲ್ಲ; ಅವರು ಲಕ್ಷಾಂತರ ಜನರ ಬದುಕಿಗೆ ಭರವಸೆಯ ಅಡಿಪಾಯ ಹಾಕಿದರು. ಅವರ ಆ ತ್ಯಾಗವಿಲ್ಲದಿದ್ದರೆ ಇಂದು ದಕ್ಷಿಣ ಕರ್ನಾಟಕದ ಚಿತ್ರಣವೇ ಬೇರೆಯಾಗಿರುತ್ತಿತ್ತು. ಅದಕ್ಕಾಗಿಯೇ ಇಂದಿಗೂ ರೈತರು ಮೊದಲ ಬೆಳೆಯನ್ನು ಕಾವೇರಿಗೆ ಅರ್ಪಿಸುವಾಗ ಆ ರಾಜರ್ಷಿಯನ್ನು ನೆನೆಯುತ್ತಾರೆ.

Roopa Gururaj Column: ಕೃಷ್ಣ-ಸುಧಾಮರ ಅಪೂರ್ವ ಮೈತ್ರಿ

Roopa Gururaj Column: ಕೃಷ್ಣ-ಸುಧಾಮರ ಅಪೂರ್ವ ಮೈತ್ರಿ

ಎಂದಿಗೆ ನಾವು ಯಾವುದೇ ಸ್ನೇಹ ಪ್ರೀತಿಯಲ್ಲಿ ಅಪೇಕ್ಷೆಯನ್ನು ಇರಿಸಿಕೊಳ್ಳದೆ ಕೊಡಲು ಸಾಧ್ಯ ವಾಗುತ್ತದೋ ಅಂದಿಗೆ ಮಾತ್ರ ಅದು ಸಾರ್ಥಕ. ನಮ್ಮ ಇಂದಿನ ಯಾಂತ್ರಿಕ ಬದುಕಿನಲ್ಲಿ, ಲಾಭ-ನಷ್ಟಗಳನ್ನು ಲೆಕ್ಕ ಹಾಕುವ ಸಂಬಂಧಗಳ ನಡುವೆ ನಾವೂ ಕೃಷ್ಣ -ಸುಧಾಮರ ಪವಿತ್ರ ಸ್ನೇಹ ದಂತಹ ಶುದ್ಧ ಭಾವನೆಯನ್ನು ಉಳಿಸಿಕೊಂಡರೆ ನಮ್ಮೊಳಗಿನ ಕೃಷ್ಣ ನಮ್ಮನ್ನು ಎಂದಿಗೂ ಕೈಬಿಡುವುದಿಲ್ಲ.

Roopa Gururaj Column: ಇರುವೆಗಳಿಂದ ಮದ್ದು ಮಾಡಿಸಿಕೊಳ್ಳುವ ಕಾಗೆ

ಇರುವೆಗಳಿಂದ ಮದ್ದು ಮಾಡಿಸಿಕೊಳ್ಳುವ ಕಾಗೆ

ಇರುವೆಗಳು ರಕ್ಷಣೆಗಾಗಿ ತಮ್ಮ ದೇಹದಿಂದ ‘ಫಾರ್ಮಿಕ್ ಆಸಿಡ್’ ಎಂಬ ರಾಸಾಯನಿಕ ವನ್ನು ಹೊರ ಹಾಕುತ್ತವೆ. ಈ ಆಮ್ಲವು ಕಾಗೆಯ ಪಾಲಿಗೆ ಅದ್ಭು ಸಂಹಾರಕ. ರೆಕ್ಕೆಗಳ ನಡುವೆ ಅಡಗಿರುವ ಬ್ಯಾಕ್ಟೀರಿಯಾ, ಶಿಲೀಂಧ್ರ ಮತ್ತು ಕ್ರಿಮಿಗಳನ್ನು ಈ ಆಮ್ಲವು ನಾಶಪಡಿಸುತ್ತದೆ. ಕಾಗೆ ಎಷ್ಟು ಜಾಣ ಎಂದರೆ, ಕೆಲವೊಮ್ಮೆ ತನ್ನ ಕೊಕ್ಕಿನಿಂದ ಇರುವೆಗಳನ್ನು ಹಿಡಿದು, ರೆಕ್ಕೆಗಳ ಕೆಳಗೆ ಎಲ್ಲಿ ಹೆಚ್ಚು ತುರಿಕೆ ಇದೆಯೋ ಅಲ್ಲಿ ಸಾವಕಾಶವಾಗಿ ಉಜ್ಜಿಕೊಳ್ಳುತ್ತದೆ.

Roopa Gururaj Column: ಅವಿದ್ಯಾವಂತ ತಂದೆಯ ನೆನಪಿಗಾಗಿ ಇಮ್ಯಾಜಿನೇಷನ್‌ ಲೈಬ್ರರಿ ಕಟ್ಟಿದ ಮಗಳು

ತಂದೆಯ ನೆನಪಿಗಾಗಿ ಇಮ್ಯಾಜಿನೇಷನ್‌ ಲೈಬ್ರರಿ ಕಟ್ಟಿದ ಮಗಳು

2020ರಲ್ಲಿ ಕೋವಿಡ್ ಸಮಯದಲ್ಲಿ, ಈಕೆ ‘ಮಾಡರ್ನಾ’ ಲಸಿಕೆಯ ಸಂಶೋಧನೆಗಾಗಿ 1 ಮಿಲಿ ಯನ್ ಡಾಲರ್ ದೇಣಿಗೆ ನೀಡಿದ್ದರು. ಇವರು ನೀಡಿದ ಈ ಸಮಯೋಚಿತ ಆರ್ಥಿಕ ನೆರವು ಲಸಿಕೆಯು ಬೇಗನೆ ಸಿದ್ಧವಾಗಲು ಪ್ರಮುಖ ಕಾರಣವಾಯಿತು. 2016ರಲ್ಲಿ ತಮ್ಮ ತವರು ಪ್ರಾಂತ್ಯ ದಲ್ಲಿ ಕಾಳ್ಗಿಚ್ಚು ಉಂಟಾದಾಗ ಮನೆ ಕಳೆದುಕೊಂಡವರಿಗೆ ನೆರವು ನೀಡಿ ಸಂತ್ರಸ್ತ ಕುಟುಂಬ ಗಳಿಗೆ ಪ್ರತಿ ತಿಂಗಳು ಹಣದ ಸಹಾಯ ನೀಡಿ ಅವರು ಮತ್ತೆ ಜೀವನ ಕಟ್ಟಿಕೊಳ್ಳಲು ಆಸರೆಯಾ ದರು.

‌Roopa Gururaj Column: ಬದುಕಿಗೆ ಮರು ಉಡುಗೊರೆ ನೀಡಿದ ಗ್ರೇಸ್‌ ಗ್ರೋನರ್

ಬದುಕಿಗೆ ಮರು ಉಡುಗೊರೆ ನೀಡಿದ ಗ್ರೇಸ್‌ ಗ್ರೋನರ್

ಗ್ರೇಸ್ ಗ್ರೋನರ್ ಕಥೆ ನಮಗೆ ಕಲಿಸುವುದು ಕೇವಲ ಹಣದ ಹೂಡಿಕೆಯನ್ನಲ್ಲ; ಬದಲಾಗಿ ಸಂಸ್ಕಾರದ ಹೂಡಿಕೆಯನ್ನು. ಶ್ರೀಮಂತಿಕೆ ಎಂದರೆ ಪ್ರದರ್ಶನವಲ್ಲ, ಅದು ನಮ್ಮ ಅಂತ‌ ರಂಗದ ನೆಮ್ಮದಿ. ಅವರು ಕೊನೆಗೆ ತಮ್ಮ ಷೇರುಗಳು, ತಮ್ಮ ಸರಳತೆ ಹೀಗೆ ಯಾವುದನ್ನೂ ಮಾರಾಟ ಮಾಡಲಿಲ್ಲ. ಇಂದು ಗ್ರೇಸ್ ದೈಹಿಕವಾಗಿ ನಮ್ಮೊಂದಿಗಿಲ್ಲದಿದ್ದರೂ, ಸಾವಿರಾರು ವಿದ್ಯಾರ್ಥಿಗಳ ಕಣ್ಣಿನ ಹೊಳಪಿನಲ್ಲಿ ಅವರು ಇಂದಿಗೂ ಜೀವಂತವಾಗಿದ್ದಾರೆ.

Roopa Gururaj Column: ದುರ್ಬಲ ಮಕ್ಕಳ ಬಗ್ಗೆ ಹೆಚ್ಚು ಕಾಳಜಿ ಮಾಡುವ ತಂದೆ-ತಾಯಿ

ದುರ್ಬಲ ಮಕ್ಕಳ ಬಗ್ಗೆ ಹೆಚ್ಚು ಕಾಳಜಿ ಮಾಡುವ ತಂದೆ-ತಾಯಿ

ಮನೆಯಲ್ಲಿ ತಂದೆ-ತಾಯಿಗಳು ಕೆಲವೊಮ್ಮೆ ಸಹಜವಾಗಿ ದುರ್ಬಲ ಮಕ್ಕಳ ಬಗ್ಗೆ ಹೆಚ್ಚು ಕಾಳಜಿ ಮಾಡುತ್ತಾರೆ. ಇದನ್ನು ಕಂಡು ಅಸೂಯೆ ಪಡುವುದು ಬೇಡ. ತಂದೆ-ತಾಯಿಗಳಿಗೆ ಎಲ್ಲರ ಬಗ್ಗೆಯೂ ಸಮಾನ ಪ್ರೀತಿ ಇರುತ್ತದೆ; ಆದರೆ ಕಾಳಜಿಯು ಆ ಮಕ್ಕಳ ಮಾನಸಿಕ, ದೈಹಿಕ ಸಾಮರ್ಥ್ಯದ ಮೇಲೆ ಅವಲಂಬಿತವಾಗಿರುತ್ತದೆ.

Roopa Gururaj Column: ಸಗಣಿ ಉಂಡೆ ಮತ್ತು ಕರ್ಮದ ಫಲ

Roopa Gururaj Column: ಸಗಣಿ ಉಂಡೆ ಮತ್ತು ಕರ್ಮದ ಫಲ

“ರಾಜಾ, ನಿನ್ನ ಬಗ್ಗೆ ಜನರು ಆಡಿಕೊಂಡ ಕೆಟ್ಟ ಮಾತುಗಳ ಮೂಲಕ ನಿನ್ನ ಪಾಪದ ಬೆಟ್ಟವನ್ನು ಅವರೇ ಹಂಚಿಕೊಂಡರು. ಆದರೆ ಈ ಉಳಿದಿರುವ ಸಣ್ಣ ಉಂಡೆಯು ನೀನು ಉದ್ದೇಶಪೂರ್ವಕವಾಗಿ ಮಾಡಿದ ದ್ರೋಹದ ಫಲ. ಇದನ್ನು ನೀನು ಅನುಭವಿಸಲೇಬೇಕು". ರಾಜನು ತನ್ನ ತಪ್ಪನ್ನು ಪೂರ್ಣ ವಾಗಿ ಒಪ್ಪಿಕೊಂಡು, ಮುಂದಿನ ಜನ್ಮದ ಸಂಕೋಲೆಗಿಂತ ಈ ಜನ್ಮದ ಪ್ರಾಯಶ್ಚಿತ್ತವೇ ಲೇಸೆಂದು ಭಾವಿಸಿ, ಆ ಸಗಣಿ ಉಂಡೆಯನ್ನು ಪ್ರಸಾದದಂತೆ ಸೇವಿಸಿದನು.

Roopa Gururaj Column: ಪ್ರೀತಿಯ ಪಯಣ: 7 ಸಾವಿರ ಕಿಲೋ ಮೀಟರ್‌ ಸಾಹಸ

ಪ್ರೀತಿಯ ಪಯಣ: 7 ಸಾವಿರ ಕಿಲೋ ಮೀಟರ್‌ ಸಾಹಸ

ನಾನು ನನ್ನ ಸ್ವಂತ ಶಕ್ತಿಯ ಮೇಲೆ ನಿನ್ನ ಬಳಿಗೆ ಬರುತ್ತೇನೆ, ನಿರೀಕ್ಷಿಸು’ ಎಂದು ಭಾಷೆ ನೀಡಿದರು. 1978ರ ಆರಂಭದಲ್ಲಿ, ಪಿಕೆ ತಮ್ಮ ಜೀವನದ ಅತ್ಯಂತ ಸಾಹಸಮಯ ನಿರ್ಧಾರ ಕೈಗೊಂಡರು. ಒಂದು ಸಣ್ಣ ಬ್ಯಾಗ್ ಮತ್ತು ಒಂದು ಹಳೆಯ ಸೈಕಲ್ ಹಿಡಿದು ಅವರು ಸ್ವೀಡನ್ ಕಡೆಗೆ ಪ್ರಯಾಣ ಬೆಳೆಸಿದರು. ಅವರ ಬಳಿ ಹಣವಿರಲಿಲ್ಲ, ಕೇವಲ ಪ್ರೀತಿಸಿದ ಜೀವ ಷಾರ್ಲೆಟ್ ವಿಳಾಸವಿತ್ತು

Roopa Gururaj Column: ದೇವರನ್ನು ಕಾಣಲು ಅಂತರಂಗ ಶುದ್ಧವಾಗಿರಬೇಕು

Roopa Gururaj Column: ದೇವರನ್ನು ಕಾಣಲು ಅಂತರಂಗ ಶುದ್ಧವಾಗಿರಬೇಕು

13ನೇ ಶತಮಾನದ ಸೂಫಿ ಸಂತ ಮತ್ತು ಮಹಾನ್ ಕವಿ ಜಲಾಲ್-ಉದ್-ದಿನ್ ರೂಮಿಯವರು ಕಥೆಗಳನ್ನು ಕೇವಲ ಮನರಂಜನೆಗಾಗಿ ಹೇಳಲಿಲ್ಲ, ಬದಲಿಗೆ ಅವುಗಳನ್ನು ಆತ್ಮದ ಪ್ರತಿಬಿಂಬಗಳು ಎಂದು ಪರಿಗಣಿಸಿದರು. ಅವರ ಪ್ರಸಿದ್ಧ ಕಥೆಗಳು ಹೆಚ್ಚಾಗಿ ಅವರ ಬೃಹತ್ ಕೃತಿಯಾದ ‘ಮಸ್ನವಿ’ ಯಿಂದ ಬಂದವು. ಇದು ಆರು ಸಂಪುಟಗಳನ್ನು ಒಳಗೊಂಡಿರುವ ಆಧ್ಯಾತ್ಮಿಕ ದ್ವಿಪದಿಗಳ ಸಂಗ್ರಹ.

Roopa Gururaj Column: ತಮ್ಮದೇ ಅಹಂಕಾರದಿಂದ ಅಂತ್ಯ ಕಂಡ ಮಧು-ಕೈಟಭಾಸುರರು

ತಮ್ಮದೇ ಅಹಂಕಾರದಿಂದ ಅಂತ್ಯ ಕಂಡ ಮಧು-ಕೈಟಭಾಸುರರು

ತಮ್ಮ ಮಾತಿನ ಬಲೆಯಲ್ಲಿ ತಾವೇ ಸಿಲುಕಿದ ಅಸುರರು ಗಾಬರಿಗೊಂಡರು. ತಪ್ಪಿಸಿಕೊಳ್ಳಲು ಕೊನೆಯ ಪ್ರಯತ್ನವಾಗಿ, “ಸರಿ, ಆದರೆ ನಮ್ಮನ್ನು ಎಲ್ಲಿ ನೀರಿಲ್ಲವೋ ಅಂಥ ಒಣಪ್ರದೇಶದಲ್ಲಿ ಮಾತ್ರ ಕೊಲ್ಲಬೇಕು" ಎಂಬ ಷರತ್ತು ಹಾಕಿದರು. ಆಗ ಮಹಾವಿಷ್ಣುವು ತನ್ನ ವಿರಾಟ ರೂಪವನ್ನು ತಾಳಿ, ಅಸುರರಿಬ್ಬರನ್ನೂ ತನ್ನ ಬಲಿಷ್ಠ ತೊಡೆಗಳ ಮೇಲೆ ಮಲಗಿಸಿಕೊಂಡನು (ನೀರಿಲ್ಲದ ಜಾಗವನ್ನಾಗಿ ತನ್ನ ತೊಡೆಯನ್ನೇ ಬಳಸಿದನು). ಅಲ್ಲಿ ತನ್ನ ಸುದರ್ಶನ ಚಕ್ರದಿಂದ ಅವರಿಬ್ಬರ ಶಿರಚ್ಛೇದ ಮಾಡಿದನು.

Roopa Gururaj Column: ನಾಲ್ಕು ಪಕ್ಷಿಗಳ ರಹಸ್ಯ

Roopa Gururaj Column: ನಾಲ್ಕು ಪಕ್ಷಿಗಳ ರಹಸ್ಯ

ಭಗವಂತನು ಮಾನವ ರೂಪದಲ್ಲಿ ಏಕೆ ಅವತರಿಸಬೇಕು? ದ್ರೌಪದಿಯು ಐವರು ಪತಿಗಳನ್ನು ಏಕೆ ಸ್ವೀಕರಿಸ ಬೇಕಾಯಿತು? ಎಂಬಂಥ ಪ್ರಶ್ನೆಗಳು ಅವರನ್ನು ಕಾಡುತ್ತಿದ್ದವು. ಮಾರ್ಕಂಡೇಯರು ಈ ಪ್ರಶ್ನೆ ಗಳಿಗೆ ಉತ್ತರ ನೀಡಲು ವಿಂಧ್ಯ ಪರ್ವತದಲ್ಲಿ ನೆಲೆಸಿರುವ ನಾಲ್ಕು ವಿದ್ವಾಂಸ ಪಕ್ಷಿಗಳ ಬಳಿ ಹೋಗಲು ಸೂಚಿಸಿದರು. ಜೈಮಿನಿ ಋಷಿಗಳು ವಿಂಧ್ಯ ಪರ್ವತಕ್ಕೆ ತೆರಳಿ ಆ ನಾಲ್ಕು ದ್ರೋಣಪುತ್ರ ಪಕ್ಷಿಗಳನ್ನು ಭೇಟಿಯಾದಾಗ, ಆ ಪಕ್ಷಿಗಳು ಅತ್ಯಂತ ಗೌರವದಿಂದ ಅವರನ್ನು ಸ್ವಾಗತಿಸಿದವು.

Roopa Gururaj Column: ಕತ್ತಲ ಕೋಣೆಯ ಬೆಳಕು: ನೆಲ್ಲಿ ಬ್ಲೈ ಸಾಹಸ

Roopa Gururaj Column: ಕತ್ತಲ ಕೋಣೆಯ ಬೆಳಕು: ನೆಲ್ಲಿ ಬ್ಲೈ ಸಾಹಸ

ಸೆಪ್ಟೆಂಬರ್ 1887. ನ್ಯೂಯಾರ್ಕ್ ನಗರದ ಬೀದಿಗಳಲ್ಲಿ ಒಬ್ಬ ಯುವತಿ ಅಲೆದಾಡುತ್ತಿದ್ದಳು. ಆಕೆಯ ಹೆಸರು ನೆಲ್ಲಿ ಬ್ಲೈ. ಕೇವಲ ಇಪ್ಪತ್ಮೂರು ವರ್ಷದ ಈಕೆ ಸಾಧಾರಣ ಯುವತಿಯಲ್ಲ; ಸತ್ಯವನ್ನು ಹುಡುಕಿ ಹೊರಟ ದಿಟ್ಟ ಪತ್ರಕರ್ತೆ. ಅಂದು ಆಕೆ ಒಂದು ವಸತಿ ನಿಲಯಕ್ಕೆ ಕಾಲಿಟ್ಟು, ತನಗೆ ಹುಚ್ಚು ಹಿಡಿದಂತೆ ನಟಿಸಲು ಆರಂಭಿಸಿದಳು.

Roopa Gururaj Column: ಕಾಲಕ್ಕಿಂತ ಮುಂದಿದ್ದ ದೂರದರ್ಶಿ ನಿಕೋಲಾ ಟೆಸ್ಲಾ

Roopa Gururaj Column: ಕಾಲಕ್ಕಿಂತ ಮುಂದಿದ್ದ ದೂರದರ್ಶಿ ನಿಕೋಲಾ ಟೆಸ್ಲಾ

1884ರಲ್ಲಿ ಅಮೆರಿಕಕ್ಕೆ ಬಂದ ಟೆಸ್ಲಾ ಬರಿಗೈಲಿ ಬಂದಿರಲಿಲ್ಲ, ಬದಲಿಗೆ ಕನಸುಗಳ ಭಂಡಾರವನ್ನೇ ಹೊತ್ತು ತಂದಿದ್ದರು. ಥಾಮಸ್ ಎಡಿಸನ್‌ನ ‘ಡೈರೆಕ್ಟ್ ಕರೆಂಟ್’ (ಡಿ.ಸಿ) ಮಿತಿಯನ್ನು ಮೀರಿ, ಅವರು ‘ಆಲ್ಟರ್ನೇಟಿಂಗ್ ಕರೆಂಟ್’ (ಎ.ಸಿ) ಎಂಬ ಅದ್ಭುತ ಶಕ್ತಿಯನ್ನು ಪರಿಚಯಿಸಿದವರು. ಇಂದು ನಮ್ಮ ಮನೆಗಳಲ್ಲಿ ಬೆಳಗುವ ಪ್ರತಿಯೊಂದು ದೀಪವೂ ಟೆಸ್ಲಾರ ಈ ಯಶಸ್ವಿಗೆ ತಕ್ಕ ಸಾಕ್ಷಿ.

Roopa Gururaj Column: ಕಪಿಲ ಮುನಿ ಮತ್ತು ದೇವಹೂತಿಯ ಸಂವಾದ, ಭಾಗವತದ ಕಥೆ

ಕಪಿಲ ಮುನಿ ಮತ್ತು ದೇವಹೂತಿಯ ಸಂವಾದ, ಭಾಗವತದ ಕಥೆ

ಭಾಗವತದ ಕಥೆಗಳು ನಮಗೆ ಅಚಲವಾದ ಭಕ್ತಿ, ವಿನಯ ಮತ್ತು ಶರಣಾಗತಿಯ ಮಹತ್ವ ವನ್ನು ಬೋಧಿಸುತ್ತವೆ. ಅಹಂಕಾರ ಮತ್ತು ಅತಿಯಾದ ಆಸೆಗಳು ಮನುಷ್ಯನ ಪತನಕ್ಕೆ ಕಾರಣವಾಗು ತ್ತವೆ ಎಂದು ಇವು ಎಚ್ಚರಿಸುತ್ತವೆ. ಪ್ರತಿಯೊಂದು ಸನ್ನಿವೇಶದಲ್ಲೂ ಧರ್ಮದ ಹಾದಿಯಲ್ಲಿ ನಡೆದು, ಸುಖ-ದುಃಖಗಳನ್ನು ಸಮಾನವಾಗಿ ಸ್ವೀಕರಿಸುವುದೇ ಜೀವನದ ಸಾರ್ಥಕತೆ ಎಂಬುದು ಇದರ ಸಾರವಾಗಿದೆ.

Roopa Gururaj Column: ಶನೈಶ್ವರನ ವಾಹನ ಕಾಗೆ: ಶರಣಾಗತಿಯ ಕಥೆ

Roopa Gururaj Column: ಶನೈಶ್ವರನ ವಾಹನ ಕಾಗೆ: ಶರಣಾಗತಿಯ ಕಥೆ

ವಿಷ್ಣುವಿನ ಕೋಪಕ್ಕೆ ಹೆದರಿದ ಕಾಕಾಸುರನು ಪ್ರಾಣಭಯದಿಂದ ಮುಕ್ಕಣ್ಣ ಶಿವನ ಬಳಿಗೆ ಓಡಿ ಹೋಗಿ ರಕ್ಷಿಸುವಂತೆ ಬೇಡಿಕೊಂಡನು. ಆದರೆ ಈಶ್ವರನು, ಲೋಕಮಾತೆಗೆ ಅಪಚಾರ ಮಾಡಿದ ನಿನಗೆ ಶಿಕ್ಷೆ ಖಂಡಿತ. ನಾರಾಯಣನ ಕೋಪದಿಂದ ನಿನ್ನನ್ನು ಉಳಿಸಲು ನನ್ನಿಂದಲೂ ಸಾಧ್ಯವಿಲ್ಲ. ನಿನಗೆ ಈಗ ದಾರಿ ತೋರಿಸಬಲ್ಲವನು ಶನೈಶ್ಚರ ಮಾತ್ರ. ಆತನ ಪಾದಕ್ಕೆ ಶರಣಾಗು ಎಂದು ಸಲಹೆ ನೀಡಿದನು.

R‌oopa Gururaj Column: ಒಂದು ನಗರವನ್ನೇ ನಿರ್ಮಿಸಿದ ಜೂಲಿಯಾ ಮಾರ್ಗನ್

ಒಂದು ನಗರವನ್ನೇ ನಿರ್ಮಿಸಿದ ಜೂಲಿಯಾ ಮಾರ್ಗನ್

1906ರ ಏಪ್ರಿಲ್ 18ರಂದು ಭೀಕರ ಭೂಕಂಪವು ಸ್ಯಾನ್ ಫ್ರಾನ್ಸಿಸ್ಕೋವನ್ನು ಧ್ವಂಸಗೊಳಿಸಿತು. ನಗರ ದಲ್ಲಿ ಶೇ.80ರಷ್ಟು ಕಟ್ಟಡಗಳು ಕುಸಿದವು. ಸಾವಿರಾರು ಜನರು ಸಾವನ್ನಪ್ಪಿದರು. ಆದರೆ ಓಕ್‌ಲ್ಯಾಂಡಿನ ಮಿಲ್ಸ್ ಕಾಲೇಜಿನಲ್ಲಿ ಜೂಲಿಯಾ ವಿನ್ಯಾಸಗೊಳಿಸಿದ reinforced concrete ನ ಘಂಟಾಗೋಪುರ ಅಚಲವಾಗಿ ನಿಂತಿತ್ತು. ಅವಳ ಕೆಲಸವೇ ಅವಳ ಉತ್ತರವಾಗಿತ್ತು.‌

Roopa Gururaj Column: ಬೃಹದೀಶ್ವರ ದೇವಾಲಯದ ಮುಂದಿನ ಅಳಗಿ ಕೊಳ

Roopa Gururaj Column: ಬೃಹದೀಶ್ವರ ದೇವಾಲಯದ ಮುಂದಿನ ಅಳಗಿ ಕೊಳ

ಎಚ್ಚರವಾದ ರಾಜನು ಅಜ್ಜಿ ಯಾರು ಎಂದು ಹುಡುಕಿಸಿ, ಅವಳ ಗುಡಿಸಲಿಗೆ ಬಂದನು. ಅವಳ ಶ್ರದ್ಧೆ, ಭಕ್ತಿ ಮತ್ತು ಸೇವಾಭಾವವನ್ನು ತಿಳಿದು ತುಂಬಾ ಮೆಚ್ಚಿದನು. ದೇವಾಲಯದ ಪ್ರತಿಷ್ಠಾಪನೆಯ ದಿನ, ಅಜ್ಜಿಯ ಸ್ಮರಣಾರ್ಥವಾಗಿ ರಾಜನು ಅವಳ ಹೆಸರಿನಲ್ಲಿ ದೇವಾಲಯದ ಸಮೀಪವೇ ಒಂದು ಸುಂದರ ವಾದ ನೀರಿನ ಕೊಳವನ್ನೂ ಕಟ್ಟಿಸಿದನು. ಆ ಕೊಳ ಇಂದಿಗೂ ಅಲ್ಲಿ ಕಾಣಿಸುತ್ತದೆ.

Roopa Gururaj Column: ಬೆಂಕಿ ಹತ್ತಿದ ಬಸ್ಸಿಗೆ ನುಗ್ಗಿ ಮಕ್ಕಳ ಪ್ರಾಣ ಉಳಿಸಿದ 11ರ ಹುಡುಗ

ಬೆಂಕಿ ಹತ್ತಿದ ಬಸ್ಸಿಗೆ ನುಗ್ಗಿ ಮಕ್ಕಳ ಪ್ರಾಣ ಉಳಿಸಿದ 11ರ ಹುಡುಗ

ಬಸ್ಸಿನೊಳಗೆ ಅಚಾನಕ್ ಬೆಂಕಿ ಕಾಣಿಸಿಕೊಂಡು ಹೊಗೆ ತುಂಬಿತು. ಮಕ್ಕಳು ಭಯಭೀತ ರಾಗಿ ಕೂಗಿದರು. ಬಸ್ಸು ಇದ್ದಕ್ಕಿದ್ದಂತೆ ಮಕ್ಕಳಿಗೆ ಸಾವಿನ ಕೋಪವಾಯಿತು. ಅದೇ ಸಮಯದಲ್ಲಿ ಬಸ್ಸಿನ ಹೊರಗೆ ಜನಸಮೂಹದ ನಡುವೆ ನಿಂತಿದ್ದವನು ಈ 11 ವರ್ಷದ ಬಾಲಕ ಓಂ ಪ್ರಕಾಶ್. ಬಸ್ಸಿನಲ್ಲಿದ್ದ ದೊಡ್ಡವರು ಆಘಾತದಿಂದ ಏನು ಮಾಡಲೂ ತೋಚದೆ ಸ್ಥಬ್ಧರಾಗಿದ್ದಾಗ, ಓಂ ಕಾರ್ಯಪ್ರವೃತ್ತನಾದನು.

Roopa Gururaj Column: ಬಡ ಮಹಿಳೆಯ ಬಡತನ ನೀಗಿಸಿದ ಕನಕಧಾರ ಸ್ತೋತ್ರ

ಬಡ ಮಹಿಳೆಯ ಬಡತನ ನೀಗಿಸಿದ ಕನಕಧಾರ ಸ್ತೋತ್ರ

ಆ ನಿಸ್ವಾರ್ಥ ದಾನವನ್ನು ಕಂಡ ಶಂಕರನ ಹೃದಯ ಕರಗಿತು. ತನಗೆ ತಿನ್ನಲು ಇಲ್ಲದಿದ್ದ ರೂ, ಇದ್ದುದನ್ನೇ ದಾನ ಮಾಡಿದ ಆ ತಾಯಿಯ ತ್ಯಾಗ ಶಂಕರನನ್ನು ಆಳವಾಗಿ ಸ್ಪರ್ಶಿಸಿತು. ತಕ್ಷಣವೇ ಆಕಾಶದತ್ತ ದೃಷ್ಟಿಸಿ, ತಾಯಿ ಮಹಾಲಕ್ಷ್ಮಿಯನ್ನು ಸ್ತುತಿಸಿ 22 ಶ್ಲೋಕಗಳ ದಿವ್ಯ ಸ್ತೋತ್ರವನ್ನು ಪಠಿಸಿದನು. ಅದೇ ‘ಕನಕಧಾರ ಸ್ತೋತ್ರ’.

Roopa Gururaj Column: ಭಜಗೋವಿಂದಂ, ಭಜಗೋವಿಂದಂ ಗೋವಿಂದಂ ಭಜ ಮೂಡಮತೇ

ಭಜಗೋವಿಂದಂ, ಭಜಗೋವಿಂದಂ ಗೋವಿಂದಂ ಭಜ ಮೂಡಮತೇ

ಒಮ್ಮೆ ಆದಿ ಶಂಕರಾಚಾರ್ಯರು ತಮ್ಮ ಶಿಷ್ಯರೊಂದಿಗೆ ಕಾಶಿ ನಗರದಲ್ಲಿ ಸಂಚರಿಸುತ್ತಿದ್ದರು. ಕಾಶಿಯು ಜ್ಞಾನ ಮತ್ತು ಮೋಕ್ಷದ ಕೇಂದ್ರವೆಂದು ಪ್ರಸಿದ್ಧವಾದ ಸ್ಥಳ. ಅಲ್ಲಿನ ಗಲ್ಲಿ ಗಲ್ಲಿಗಳಲ್ಲಿ ವೇದ, ಶಾಸ್ತ್ರ, ವ್ಯಾಕರಣ ಪಠಣದ ಧ್ವನಿಗಳು ಸದಾ ಕೇಳಿಸುತ್ತಿದ್ದವು. ಆ ಸಂದರ್ಭದಲ್ಲಿ ಶಂಕರಾಚಾ ರ್ಯರ ಕಣ್ಣಿಗೆ ಒಂದು ದೃಶ್ಯ ಬಿತ್ತು

Roopa Gururaj Column: ಭಗವದ್ಗೀತಾ ಪಠಣದ ಮಹತ್ವ

Roopa Gururaj Column: ಭಗವದ್ಗೀತಾ ಪಠಣದ ಮಹತ್ವ

ಇಂಥ ಅದ್ಭುತ ಧರ್ಮಗ್ರಂಥಗಳನ್ನು ನಮ್ಮ ಹಿರಿಯರು ನಮಗಾಗಿ ನೀಡಿ ಹೋಗಿದ್ದಾರೆ. ಭಾರ ತೀಯ ಸನಾತನ ಧರ್ಮದ ಬೇರುಗಳಾದ ಈ ಮಹಾಗ್ರಂಥಗಳಲ್ಲಿ ಜೀವನಕ್ಕೆ ಬೇಕಾದ ಮುಕ್ತಿಮಾರ್ಗ, ಮೌಲ್ಯ ಗಳು, ಕಷ್ಟಕ್ಕೆ ಬೇಕಾದ ಸಾಂತ್ವನ, ಮನಸ್ಸಿಗೆ ಬೇಕಾದ ನೆಮ್ಮದಿ-ಆತ್ಮವಿಶ್ವಾಸ ಬದುಕಿಗೆ ಬೇಕಾದ ಭರವಸೆ ಎಲ್ಲವೂ ಹಂತಹಂತವಾಗಿ ನಮಗೆ ದಕ್ಕುತ್ತಾ ಹೋಗುತ್ತವೆ.

Roopa Gururaj Column: ದೃಢಸಂಕಲ್ಪದಿಂದ ನಕ್ಷತ್ರವಾಗಿ ಮಿನುಗಿದ ಧ್ರುವ

Roopa Gururaj Column: ದೃಢಸಂಕಲ್ಪದಿಂದ ನಕ್ಷತ್ರವಾಗಿ ಮಿನುಗಿದ ಧ್ರುವ

ನಾರಾಯಣನು, ‘ರಾಜಕುಮಾರನೇ, ನಿನ್ನ ಎಲ್ಲಾ ಆಸೆಗಳು ಈಡೇರು ತ್ತವೆ. ನಿನ್ನ ಭಕ್ತಿಗೆ ಮೆಚ್ಚಿ ಜ್ಯೋತಿಷ್ಯ ಚಕ್ರ ಮತ್ತು ಅದರ ಸುತ್ತ ಸುತ್ತುವ ಎಲ್ಲಾ ಗ್ರಹಗಳು, ನಕ್ಷತ್ರಗಳು ಇದೆಲ್ಲಕ್ಕಿಂತ ಮಿಗಿಲಾಗಿ ಜಗತ್ತನ್ನು ನಾನು ನಿನಗೆ ದಯಪಾಲಿಸುತ್ತಿದ್ದೇನೆ. ಅದು ಮಹಾ ಪ್ರಳಯದ ಅವಧಿಯಲ್ಲಿಯೂ ಎಂದಿಗೂ ನಾಶವಾಗುವುದಿಲ್ಲ. ಸಪ್ತರ್ಷಿಗಳೂ ಸಹ ನಕ್ಷತ್ರ ಗಳೊಂದಿಗೆ ಅದನ್ನು ಪ್ರದಕ್ಷಿಣೆ ಮಾಡುತ್ತಾರೆ. ಈ ಲೋಕವನ್ನು ನಿನ್ನ ಹೆಸರಿನಿಂದ ಧ್ರುವ ಲೋಕ ಎಂದು ಕರೆಯಲಾಗುತ್ತದೆ.

Loading...