ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Profile

Sushmitha Jain

jainsushmithajain@gmail.com

Articles
Asaduddin Owaisi:  ಉಗ್ರರನ್ನು ಖಂಡಿಸಿದ ಓವೈಸಿ ಹೇಳಿಕೆಗೆ ಎಲ್ಲೆಡೆ ಮೆಚ್ಚುಗೆ; ವೈರಲ್ ಆಯ್ತು ಆ ವಿಡಿಯೊ

ಪಹಲ್ಗಾಮ್‌ ದಾಳಿ ಬಗ್ಗೆ ಒವೈಸಿ ಹೇಳಿದ್ದೇನು ಗೊತ್ತಾ...?

Owaisi on Pahalagam attack: ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಅವರು ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗುರುವಾರದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅವರ ಹೇಳಿಕೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Kerala Murder Case: 2022ರ ಕೇರಳ ಕೊಲೆ ಪ್ರಕರಣದಲ್ಲಿ ತಮಿಳುನಾಡಿನ ವ್ಯಕ್ತಿಗೆ ಗಲ್ಲು ಶಿಕ್ಷೆ

ಕೇರಳ ಕೊಲೆ ಪ್ರಕರಣ- ತಮಿಳುನಾಡಿನ ವ್ಯಕ್ತಿಗೆ ಗಲ್ಲು ಶಿಕ್ಷೆ

Death sentence: ಕೇರಳದ 38 ವರ್ಷದ ಮಹಿಳೆ ವಿನೀತಾ ಅವರನ್ನು 2022ರಲ್ಲಿ ಕೊಲೆಗೈದ ಆರೋಪದಡಿ ತಮಿಳುನಾಡಿನ 42 ವರ್ಷದ ರಾಜೇಂದ್ರನ್‌ಗೆ ತಿರುವನಂತಪುರಂನ ನ್ಯಾಯಾಲಯವು ಗುರುವಾರ ಗಲ್ಲು ಶಿಕ್ಷೆ(Kerala Murder Case) ವಿಧಿಸಿದೆ. ತಿರುವನಂತಪುರಂನ ಏಳನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ನ್ಯಾಯಾಧೀಶ ಪ್ರಸೂನ್ ಮೋಹನ್, ಫೆಬ್ರವರಿ 6, 2022ರಂದು ವಿನೀತಾ ಅವರ ಕೊಲೆಗೈದ ರಾಜೇಂದ್ರನ್‌ನನ್ನು ಗಲ್ಲಿಗೇರಿಸುವಂತೆ ಆದೇಶಿಸಿದ್ದಾರೆ.

Pahalgam Terror Attack: ಬಾಯ್‌ ಫ್ರೆಂಡ್‌ಗಾಗಿ ಭಾರತಕ್ಕೆ ಬಂದ ಸೀಮಾ ಹೈದರ್‌ ಪಾಕಿಸ್ತಾನಕ್ಕೆ ಹೋಗ್ತಾಳಾ?

ಪಾಕ್‌ನಿಂದ ಓಡಿಬಂದ ಸೀಮಾ ಹೈದರ್‌ ಮುಂದಿನ ದಾರಿ ಏನು?

Pahalgam Terror Attack: ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ ಕನಿಷ್ಠ 26 ಪ್ರವಾಸಿಗರು ಸಾವನ್ನಪ್ಪಿದ ಬೆನ್ನಲ್ಲೇ, ಭಾರತ ಸರ್ಕಾರವು ಪಾಕಿಸ್ತಾನದ ವಿರುದ್ಧ ರಾಜತಾಂತ್ರಿಕ ಮತ್ತು ನೀತಿಗತ ಕ್ರಮಗಳನ್ನು ಕೈಗೊಂಡಿದೆ. ಈ ಕ್ರಮಗಳು ಭಾರತದಲ್ಲಿ ವಾಸಿಸುತ್ತಿರುವ ಪಾಕಿಸ್ತಾನದ ನಾಗರಿಕರ ಸ್ಥಿತಿಗತಿಯ ಬಗ್ಗೆ, ವಿಶೇಷವಾಗಿ ತನ್ನ ಭಾರತೀಯ ಪ್ರಿಯಕರನನ್ನು ಭೇಟಿಯಾಗಲು ಅಕ್ರಮವಾಗಿ ದೇಶ ಪ್ರವೇಶಿಸಿದ ಸೀಮಾ ಹೈದರ್‌ರಂತಹ ವ್ಯಕ್ತಿಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿವೆ.

Abir Gulaal Ban In India: ಪಾಕ್ ನಟ ಫವಾದ್ ಖಾನ್ ಅಭಿನಯದ ಬಾಲಿವುಡ್‌ ಚಿತ್ರ 'ಅಬೀರ್ ಗುಲಾಲ್’ ಬ್ಯಾನ್

ಪಾಕ್ ನಟನ ಸಿನಿಮಾ ರಿಲೀಸ್‌ಗೆ ನಿಷೇಧ ಹೇರಿದ ಭಾರತ

Abir Gulaal Ban In India: ಪಾಕಿಸ್ತಾನಿ ನಟ ಫವಾದ್ ಖಾನ್ ಅಭಿನಯದ ಬಾಲಿವುಡ್ ಚಿತ್ರ ಅಬೀರ್ ಗುಲಾಲ್ ಭಾರತದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಈ ಚಿತ್ರದಲ್ಲಿ ವಾಣಿ ಕಪೂರ್ ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಏಪ್ರಿಲ್ 22ರ ಮಂಗಳವಾರ ನಡೆದ ಭೀಕರ ಭಯೋತ್ಪಾದಕ ದಾಳಿಯ ಬೆನ್ನಲ್ಲೇ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಭಾರತದ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಸಂಬಂಧಿಸಿದ ಮೂಲಗಳು ತಿಳಿಸಿವೆ.

Pahalgam Terror Attack: ಹಮಾಸ್- ಪಾಕ್ ಬೆಂಬಲಿತ ಲಷ್ಕರ್ ನಡುವೆ ಸಂಪರ್ಕ ಇದೆ ಎಂದ ಇಸ್ರೇಲ್ ರಾಯಭಾರಿ

ಪಹಲ್ಗಾಮ್‌ ದಾಳಿಯನ್ನು ಹಮಾಸ್ ದಾಳಿಗೆ ಹೋಲಿಸಿದ ಇಸ್ರೇಲ್‌ ರಾಯಭಾರಿ

Pahalgam Terror Attack: ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿನಡೆದ ಭಯೋತ್ಪಾದಕ ದಾಳಿಯನ್ನು ಇಸ್ರೇಲ್‌ನ ರಾಯಭಾರಿ ರಿಯುವೆನ್ ಅಜಾರ್ ಅವರು 2023ರ ಅಕ್ಟೋಬರ್ 7ರ ಹಮಾಸ್ ದಾಳಿಗೆ ಹೋಲಿಸಿದ್ದಾರೆ. ಈ ಎರಡೂ ದಾಳಿಗಳು ನಾಗರಿಕರನ್ನು ಗುರಿಯಾಗಿಸಿಕೊಂಡಿರುವುದರಿಂದ ಸಾಮ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.

Pahalgam Terror Attack: 2 ದಿನಗಳಲ್ಲಿ ಪಾಕಿಸ್ತಾನ ವಿರುದ್ಧ 7 ದೊಡ್ಡ ನಿರ್ಧಾರ ಕೈಗೊಂಡ ಭಾರತ

ಪಾಕಿಸ್ತಾನದ ವಿರುದ್ಧ ಭಾರತದ ಪ್ರತೀಕಾರ ಹೇಗಿದೆ ಗೊತ್ತಾ..?

Pahalgam Terror Attack: ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯನ್ನು ಖಂಡಿಸಿ ಭಾರತ ದಿಟ್ಟ ಹೆಜ್ಜೆ ಇಟ್ಟಿದ್ದು, ಭಾರತವು ಅಟಾರಿ ಗಡಿ ಬಂದ್ ಮಾಡಿದ್ದು, ಪಾಕಿಸ್ತಾನದ ಮೇಲೆ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿರುವ ಭಾರತ, ಪಾಕಿಸ್ತಾನದೊಂದಿಗಿನ ತನ್ನ ರಾಜತಾಂತ್ರಿಕ ಸಂಬಂಧವನ್ನು ಕಡಿತಗೊಳಿಸಿದೆ. ಪಾಕಿಸ್ತಾನಿಗರಿಗೆ ವೀಸಾ ಸೇವೆ ಸ್ಥಗಿತಗೊಳಿಸಿದ್ದು, ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ. ಇದರಿಂದ ಪಾಕಿಸ್ತಾನ ಕಂಗಾಲಾಗಿದೆ. ಈ ಕುರಿತು ಇಲ್ಲಿದೆ ಹೆಚ್ಚಿನ ಮಾಹಿತಿ.

INS Surat: ಪಹಲ್ಗಾಮ್ ದಾಳಿ ಬಳಿಕ ಅರೇಬಿಯನ್ ಸಮುದ್ರದಲ್ಲಿ ಕ್ಷಿಪಣಿ ಹಾರಿಸಿದ ಭಾರತದ INS ಸೂರತ್

ಅರಬ್ಬಿ ಸಮುದ್ರದಲ್ಲಿ ಭಾರತೀಯ ನೌಕಾಶಕ್ತಿ ಅನಾವರಣ

Pahalgam Terror Attack: ಭಾರತೀಯ ನೌಕಾಪಡೆಯ ಇತ್ತೀಚಿನ ಯುದ್ಧನೌಕೆ ಐಎನ್‌ಎಸ್ ಸೂರತ್ ತನ್ನ ಅತ್ಯಾಧುನಿಕ ವಾಯು ರಕ್ಷಣಾ ಸಾಮರ್ಥ್ಯವನ್ನು ಪ್ರದರ್ಶಿಸುತ್ತಾ, ಅರೇಬಿಯನ್ ಸಮುದ್ರದಲ್ಲಿ ಗುರುವಾರ ಮಧ್ಯಮ ವ್ಯಾಪ್ತಿಯ ಭೂಮಿಯಿಂದ ಗಾಳಿಗೆ ಹಾರುವ ಕ್ಷಿಪಣಿ ಯಶಸ್ವಿಯಾಗಿ ಪರೀಕ್ಷಿಸಿದೆ. ಕಡಿಮೆ ಎತ್ತರದಲ್ಲಿ ರಾಡಾರ್‌ಗೆ ಸಿಗದಂತೆ ಚಲಿಸುವ ಗುರಿಗಳನ್ನು ಸಮರ್ಥವಾಗಿ ಎದುರಿಸುವ ಈ ಯುದ್ಧನೌಕೆಯ ಸಾಮರ್ಥ್ಯವನ್ನು ಈ ಪರೀಕ್ಷೆ ಒತ್ತಿಹೇಳಿದೆ.

Pahalgam Terror Attack: ''ಹಂದಿಗೆ ಲಿಪ್‌ಸ್ಟಿಕ್ ಹಚ್ಚಿದರೂ ಅದು ಹಂದಿಯೇ''- ಪಾಕ್‌ ವಿರುದ್ಧಅಮೆರಿಕದ ಮಾಜಿ ಅಧಿಕಾರಿ ವ್ಯಂಗ್ಯ

ʻಹಂದಿಗೆ ಲಿಪ್‌ಸ್ಟಿಕ್ ಹಚ್ಚಿದರೂ ಅದು ಹಂದಿಯೇʼ- ಪಾಕ್‌ ವಿರುದ್ಧ ವ್ಯಂಗ್ಯ

Pahalgam Terror Attack: ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಸೀಮ್ ಮುನೀರ್ ಅವರನ್ನು ದಿವಂಗತ ಅಲ್-ಖೈದಾ ನಾಯಕ ಒಸಾಮಾ ಬಿನ್ ಲಾಡೆನ್‌ಗೆ ಹೋಲಿಸಿರುವ ಮಾಜಿ ಪೆಂಟಗನ್ ಅಧಿಕಾರಿ ಮೈಕಲ್ ರೂಬಿನ್ , ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಪಾಕಿಸ್ತಾನದ ಪಾತ್ರವನ್ನು ತೀವ್ರವಾಗಿ ಖಂಡಿಸಿದ್ದಾರೆ.

JD Vance: ತಾಜ್‌ಮಹಲ್ ಅಂದಕ್ಕೆ ಮನಸೋತ ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್- ಫೋಟೋಗಳು ಇಲ್ಲಿವೆ

ತಾಜ್ ಮಹಲ್ ಎದುರು ಫೋಟೋಕ್ಕೆ ಪೋಸ್ ನೀಡಿದ ಜೆಡಿ ವ್ಯಾನ್ಸ್ ದಂಪತಿ

ಅಮೆರಿಕ ಉಪಾಧ್ಯಕ್ಷ (US Vice President) ಜೆಡಿ ವ್ಯಾನ್ಸ್ (JD Vance) ಗುರುವಾರ ಆಗ್ರಾದಲ್ಲಿ ರೋಮಾಂಚಕ ದಿನವನ್ನು ತಾಜ್‌ಮಹಲ್‌ ಬಳಿ (Taj Mahal) ಕಳೆದು, ಕುಟುಂಬದೊಂದಿಗಿನ ಸುಂದರ ಕ್ಷಣವನ್ನು ಫೋಟೋ ಮೂಲಕ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರವು ತಾಜ್‌ಮಹಲ್‌ನ ವೈಭವವನ್ನು ಮಾತ್ರವಲ್ಲದೆ, ವ್ಯಾನ್ಸ್ ಕುಟುಂಬದ ಭಾರತದ ಅನುಭವದ ಖುಷಿಯ ಕ್ಷಣವನ್ನೂ ತೋರಿಸುತ್ತದೆ.

Manipur Violence: ಮಣಿಪುರದಲ್ಲಿ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಎರಡು ಗ್ರಾಮಗಳು ಭಸ್ಮ

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ

ಮಣಿಪುರದ ಕಾಮ್‌ಜಾಂಗ್ ಜಿಲ್ಲೆಯ ಗಂಪಾಲ್ ಮತ್ತು ಅದರ ಗ್ರಾಮಾಂತರ ಪ್ರದೇಶವಾದ ಹಯಾಂಗ್‌ನಲ್ಲಿ ಬುಧವಾರ ಬೆಳಗ್ಗೆ ಕೆಲವು ದುಷ್ಕರ್ಮಿಗಳು ಬೆಂಕಿ ಹಚ್ಚಿದ ಪರಿಣಾಮ ಎರಡು ಗ್ರಾಮಗಳು ಭಸ್ಮವಾಗಿವೆ(Manipur Violence). ಬುಧವಾರ ಬೆಳಿಗ್ಗೆ ಸುಮಾರು 9 ಗಂಟೆ ಸುಮಾರಿಗೆ ಅಪರಿಚಿತರು ಗಂಪಾಲ್ ಮತ್ತು ಹಯಾಂಗ್ ಗ್ರಾಮಗಳಿಗೆ ಬೆಂಕಿ ಹಚ್ಚಿದ್ದಾರೆ.

Medha Patkar: ಅರೆಸ್ಟ್‌ ಆಗ್ತಾರಾ ಮೇಧಾ ಪಾಟ್ಕರ್? ಜಾಮೀನು ರಹಿತ ವಾರೆಂಟ್ ಜಾರಿಯಾಗಿದ್ದೇಕೆ?

ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್‌ಗೆ ಬಂಧನ ಭೀತಿ...!

Medha Patkar: ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ದಾಖಲಿಸಿದ್ದ ಮಾನಹಾನಿ ಪ್ರಕರಣದಲ್ಲಿ ದೋಷಿಯೆಂದು ಘೋಷಿತರಾದ ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ವಿರುದ್ಧ ದೆಹಲಿಯ ಸೆಷನ್ಸ್ ಕೋರ್ಟ್ ಜಾಮೀನು ರಹಿತ ವಾರಂಟ್ ಜಾರಿ ಮಾಡಿದೆ. ಕಾನೂನು ರಕ್ಷಣೆಯ ದುರುಪಯೋಗ ಮತ್ತು ಕೋರ್ಟ್ ಆದೇಶಗಳನ್ನು ನಿರ್ಲಕ್ಷಿಸಿದ ಆರೋಪದ ಮೇಲೆ ಈ ವಾರಂಟ್ ಜಾರಿಯಾಗಿದೆ.

Pahalgam Terror Attack: ಪತ್ನಿ ಜೊತೆ ಖುಷಿಯಾಗಿದ್ದ ಲೆಫ್ಟಿನೆಂಟ್ ವಿನಯ್ ನರ್ವಾಲ್- ಕೊನೆಯ ಕ್ಷಣದ ವಿಡಿಯೋ ವೈರಲ್

ಉಗ್ರರ ದಾಳಿಗೂ ಮುನ್ನ ಪತ್ನಿ ಜೊತೆ ಡಾನ್ಸ್‌ ಮಾಡಿದ್ದ ‘ವಿನಯ್ ನರ್ವಾಲ್’

Navy Officer Vinay Narwal Last video: ಮಂಗಳವಾರ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಹತನಾದ ನೌಕಾಪಡೆ ಅಧಿಕಾರಿ ವಿನಯ್ ನರ್ವಾಲ್ ಅವರ ಕೊನೆಯ ವಿಡಿಯೋ ಎನ್ನಲಾದ ದೃಶ್ಯ ಬಹಿರಂಗವಾಗಿದೆ. 18 ಸೆಕೆಂಡ್‌ಗಳ ಈ ವಿಡಿಯೋದಲ್ಲಿ, ವಿನಯ್ ತಮ್ಮ ಪತ್ನಿ ಹಿಮಾಂಶಿ ಜೊತೆ ಪಾಕಿಸ್ತಾನಿ ಗೀತೆ "ಝೋಲ್"ಗೆ ನೃತ್ಯ ಮಾಡುತ್ತಿರುವುದನ್ನು ಕಾಣಬಹುದು.

Khalistani Terrorist: 1995ರಿಂದ ತಲೆಮರೆಸಿಕೊಂಡಿದ್ದ ಮೋಸ್ಟ್‌ ವಾಂಟೆಡ್‌ ಖಾಲಿಸ್ತಾನಿ ಉಗ್ರ ಅರೆಸ್ಟ್‌

ಖಾಕಿ ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಖಲಿಸ್ತಾನಿ ಉಗ್ರ

Khalistani Terrorist: ಕಳೆದ ಮೂರು ದಶಕಗಳಿಂದ ತಲೆಮರೆಸಿಕೊಂಡಿದ್ದ ಖಲಿಸ್ತಾನಿ ಗುಂಪಿನ ಸದಸ್ಯನನ್ನು ಪಂಜಾಬ್‌ನ ಅಮೃತಸರದ ಗ್ರಾಮವೊಂದರಲ್ಲಿ ಬುಧವಾರ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಂಗತ್ ಸಿಂಗ್ ಎಂಬಾತನ ಬಂಧನಕ್ಕೆ ₹25,000 ಬಹುಮಾನ ಘೋಷಿಸಲಾಗಿತ್ತು. ಉತ್ತರ ಪ್ರದೇಶದ ಭಯೋತ್ಪಾದಕ ನಿಗ್ರಹ ದಳ (ATS) ಮತ್ತು ಸಾಹಿಬಾಬಾದ್ ಪೊಲೀಸ್ ಠಾಣೆಯ ಅಧಿಕಾರಿಗಳ ಜಂಟಿ ತಂಡವು ಆತನನ್ನು ಬಂಧಿಸಿದೆ.

Pahalgam Terror Attack: ಪಹಲ್ಗಾಮ್ ದಾಳಿ ಮಾಡಿದ ಉಗ್ರರಿಗೆ ಧನ್ಯವಾದ ಹೇಳಿ ವಿಕೃತಿ- ಕಿಡಿಗೇಡಿ ಅರೆಸ್ಟ್

ಪಹಲ್ಗಾಮ್ ದಾಳಿಯನ್ನು ಸಂಭ್ರಮಿಸಿದ ಕಿಡಿಗೇಡಿ

Pahalgam Terror Attack: ಪಹಲ್ಗಾಮ್ ನಲ್ಲಿ 28 ಮುಗ್ಧ ಜನರನ್ನು ಹೇಡಿಗಳಂತೆ ಬಂದು ಬಹಳ ಕ್ರೂರವಾಗಿ ಹತ್ಯೆಗೈದ ಘಟನೆಗೆ ಇಡೀ ದೇಶವೇ ಮರಗುತ್ತಿದೆ. ಆದರೆ ಇಲ್ಲೊಬ್ಬ ಪಾಪಿ ಪ್ರವಾಸಿಗರನ್ನು ಕೊಂದ ಉಗ್ರರಿಗೆ ಧನ್ಯವಾದ ಹೇಳಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ಈಗ ಪೊಲೀಸರ ಅತಿಥಿಯಾಗಿ ಕಂಬಿ ಎಣಿಸುತ್ತಿದ್ದಾನೆ. ಜಾರ್ಖಂಡ್ ನ ಬೊಕಾರೊ ನಿವಾಸಿ ಮೊಹಮ್ಮದ್ ನೌಶಾದ್ ಬಂಧಿತ ಕಿಡಿಗೇಡಿ.

Pahalgam Terror Attack: ಉಗ್ರನ ಕೈಯಿಂದ ರೈಫಲ್ ಕಸಿಯಲು ಯತ್ನಿಸಿದ ಕುದುರೆ ಸವಾರನೂ ಗುಂಡಿಗೆ ಬಲಿ

ಕೊನೆ ಕ್ಷಣದಲ್ಲೂ ಉಗ್ರರ ವಿರುದ್ದ ಸೆಣಸಾಡಿದ ಕುದುರೆ ಸವಾರ..!

Pahalgam Terror Attack: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನ ಬೈಸರನ್ ಹುಲ್ಲುಗಾವಲಿನಲ್ಲಿ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದಾಗ ಪ್ರವಾಸಿಗರು ಸುರಕ್ಷಿತ ಸ್ಥಳಗಳಿಗೆ ಓಡಾಡಿದರು. ಆದರೆ, ಕುದುರೆ ಸವಾರಿ ನಿರ್ವಾಹಕ ಸೈಯದ್ ಆದಿಲ್ ಹುಸೇನ್ ಶಾ ಧೈರ್ಯದಿಂದ ಭಯೋತ್ಪಾದಕನ ಕೈಯಿಂದ ರೈಫಲ್ ಕಸಿದುಕೊಳ್ಳಲು ಯತ್ನಿಸಿದರು. ಈ ಪ್ರಯತ್ನದಲ್ಲಿ ಗುಂಡೇಟು ತಿಂದು ಅವರು ಸಾವನ್ನಪ್ಪಿದ್ದಾರೆ.

Anupam Kher: ʻಕಾಶ್ಮೀರ್‌ ಫೈಲ್‌ʼ ಬಂದಾಗ ಪ್ರೊಪಗಾಂಡ ಅಂದ್ರು... ಹಾಗಿದ್ರೆ ಈಗ ಏನಾಗ್ತಿರೋದು? ನಟ ಅನುಪಮ್ ಖೇರ್ ಕಿಡಿ

ಪಹಲ್ಗಾಮ್‌ ದಾಳಿ ಬಗ್ಗೆ ಅನುಪಮ್ ಖೇರ್ ಹೇಳಿದ್ದೇನು...?

Anupam Kher: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ಮಂಗಳವಾರ ಮಧ್ಯಾಹ್ನ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಪ್ರವಾಸಿಗರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಈ ಘಟನೆಯನ್ನು ಖಂಡಿಸಿ, ಕಾಶ್ಮೀರಿ ಪಂಡಿತರಾದ ನಟ ಅನುಪಮ್ ಖೇರ್ ಮಂಗಳವಾರ ರಾತ್ರಿ ವಿಡಿಯೋ ಸಂದೇಶ ಹಂಚಿಕೊಂಡಿದ್ದಾರೆ. ದಾಳಿಕೋರರಿಗೆ ಕಠಿಣ ಶಿಕ್ಷೆಯಾಗಬೇಕೆಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಮನವಿ ಮಾಡಿದ್ದಾರೆ.

Pahalgam Terror Attack: ಪಹಲ್ಗಾಮ್ ದಾಳಿ ಹಿಂದಿನ ರೆಸಿಸ್ಟೆನ್ಸ್ ಫ್ರಂಟ್ ಎಂದರೇನು? ಮಾಸ್ಟರ್‌ಮೈಂಡ್ ಸೈಫುಲ್ಲಾ ಖಾಲಿದ್ ಯಾರು?

ಪಹಲ್ಗಾಮ್ ದಾಳಿಯ ಮಾಸ್ಟರ್‌ಮೈಂಡ್ ಬಗ್ಗೆ ಇಲ್ಲಿದೆ ಮಾಹಿತಿ

The Resistance Front Terrorist Group: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಮಂಗಳವಾರ ನಡೆದ ಭಯೋತ್ಪಾದಕ ದಾಳಿಯಲ್ಲಿ ಕನಿಷ್ಟ 26 ಪ್ರವಾಸಿಗರು ಸಾವನ್ನಪ್ಪಿದ್ದು, ಈ ಘಟನೆಯ ಹೊಣೆಯನ್ನು ಲಷ್ಕರ್-ಎ-ತೊಯ್ಬಾದ ಶಾಖೆಯಾದ ರೆಸಿಸ್ಟೆನ್ಸ್ ಫ್ರಂಟ್ ಒಪ್ಪಿಕೊಂಡಿದೆ. ಈ ದಾಳಿಯ ಮಾಸ್ಟರ್‌ಮೈಂಡ್ ಎಂದು ಶಂಕಿಸಲಾಗಿರುವ ಸೈಫುಲ್ಲಾ ಖಾಲಿದ್‌ನ ಕುರಿತು ಗುಪ್ತಚರ ವರದಿಗಳು ಮಾಹಿತಿ ಬಿಚ್ಚಿಟ್ಟಿವೆ.

PM Narendra Modi: ಉಗ್ರರನ್ನು ಮಟ್ಟ ಹಾಕಲು ಮಾಸ್ಟರ್‌ ಪ್ಲ್ಯಾನ್‌! ಪ್ರಧಾನಿ ಮೋದಿ ಹೈವೋಲ್ಟೇಜ್‌ ಮೀಟಿಂಗ್‌

ದೆಹಲಿಯಲ್ಲಿ ಪ್ರಧಾನಿ ಮೋದಿ ಹೈವೋಲ್ಟೇಜ್‌ ಮೀಟಿಂಗ್‌

PM Narendra Modi: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನ ಬೈಸರನ್ ಹುಲ್ಲುಗಾವಲಿನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಕನಿಷ್ಠ 26 ಜನರು ಸಾವನ್ನಪ್ಪಿದ್ದು, 10 ಜನರು ಗಾಯಗೊಂಡಿದ್ದಾರೆ. ಈ ಘಟನೆಯ ಬಳಿಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಬೆಳಿಗ್ಗೆ ಕೇಂದ್ರ ಸುರಕ್ಷತಾ ಸಮಿತಿ ಜೊತೆ ಪ್ರಮುಖ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ದಾಳಿಗೆ ಪ್ರತಿಕ್ರಿಯೆ ಮತ್ತು ರಕ್ಷಣಾ ಕಾರ್ಯತಂತ್ರವನ್ನು ರೂಪಿಸಲಾಗುವುದು.

Pahalgam Terror Attack: ಎರಡು ದಶಕಗಳಲ್ಲೇ ಅತಿದೊಡ್ಡ ದಾಳಿ ಇದು...! ಕೆಲವೇ ದಿನಗಳ ಹಿಂದೆ ನಡೆದಿತ್ತು ಹಮಾಸ್‌, ಲಷ್ಕರ್‌ ಉಗ್ರರ ಬೃಹತ್‌ ಸಭೆ

ಕೆಲವೇ ದಿನಗಳ ಹಿಂದೆ ನಡೆದಿತ್ತು ಹಮಾಸ್‌, ಲಷ್ಕರ್‌ ಉಗ್ರರ ಬೃಹತ್‌ ಸಭೆ!

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ75 ದಿನಗಳ ಹಿಂದೆ ಹಮಾಸ್‌ನ (Hamas) ಹಿರಿಯ ನಾಯಕರು, ಲಷ್ಕರ್-ಎ-ತೊಯ್ಬಾ ಮತ್ತು ಲಷ್ಕರ್-ಎ-ಮುಸ್ತಫಾಭಯೋತ್ಪಾದಕ ಸಂಘಟನೆಗಳ ಮುಖ್ಯಸ್ಥರೊಂದಿಗೆ ರಾವಲಕೋಟ್‌ನಲ್ಲಿ ನಡೆದ ಸಾರ್ವಜನಿಕ ಸಭೆಯ ನಂತರ, ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ(Pahalgam Terror Attack) ಎರಡು ದಶಕಗಳಲ್ಲೇ ಅತ್ಯಂತ ಘೋರ ನಾಗರಿಕರ ಮೇಲಿನ ಭಯೋತ್ಪಾದಕ ದಾಳಿ ನಡೆದಿದೆ.

Pahalgam Terror Attack: ಹಿಂತಿರುಗಿ ನೋಡದೆ ಓಡಿದೆವು- ಭಯೋತ್ಪಾದಕ ದಾಳಿಯಿಂದ ಪಾರಾದ ಮಹಾರಾಷ್ಟ್ರ ದಂಪತಿ

ಉಗ್ರರ ಕಣ್ಣಿನಿಂದ ಪಾರಾದ ಮಹಾರಾಷ್ಟ್ರ ದಂಪತಿ ಹೇಳಿದ್ದೇನು..?

Pahalgam Terror Attack: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಪ್ರವಾಸಿಗರು ಸಾವನ್ನಪ್ಪಿದ್ದು, ಇತ್ತೀಚಿನ ವರ್ಷಗಳಲ್ಲಿನ ಅತ್ಯಂತ ಭೀಕರ ನಾಗರಿಕರ ಮೇಲಿನ ದಾಳಿಯಾಗಿದೆ. ಆದರೆ, ಕೇವಲ 20 ನಿಮಿಷಗಳ ಅಂತರದಿಂದ ಮಹಾರಾಷ್ಟ್ರದ ಕುಟುಂಬವೊಂದು ಅದೃಷ್ಟವಶಾತ್ ಬದುಕುಳಿದಿದೆ. ದಾಳಿಯ ಇಂಚಿಂಚು ಮಾಹಿತಿಯನ್ನು ಅವರು ಹಂಚಿಕೊಂಡಿದ್ದಾರೆ.

Pahalgam Terror Attack: ಪಹಲ್ಗಾಮ್ ಕಣಿವೆಯಲ್ಲಿ ಅಟ್ಟಹಾಸ ಮೆರೆದ ಉಗ್ರರು; ಇಲ್ಲಿದೆ ದಾಳಿಯ ಭೀಕರ ದೃಶ್ಯ

ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ ರಣಭೀಕರ ವಿಡಿಯೊ ಇಲ್ಲಿದೆ

Pahalgam Terror Attack: ​ಜಮ್ಮು-ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯ ಪಹಲ್ಗಾಮ್ ನಬೈಸರನ್ ಕಣಿವೆಯಲ್ಲಿ ಉಗ್ರರು ಅಟ್ಟಹಾಸಕ್ಕೆ 27 ಮಂದಿ ಬಲಿಯಾಗಿದ್ದು, ಹಲವಾರು ಗಾಯಗೊಂಡಿದ್ದಾರೆ. ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಿದ್ದು, ಕರ್ನಾಟಕ, ಒಡಿಶಾ ಸೇರಿದಂತೆ ವಿವಿಧ ರಾಜ್ಯಗಳಿಂದ ಪ್ರವಾಸಕ್ಕೆ ಬಂದಿದ್ದರು. ವಾಸಿಗರ ಮೇಲೆ ಉಗ್ರರು ನಡೆಸಿದ ಭೀಕರ ಗುಂಡಿನ ದಾಳಿಗೆ ಕನ್ನಡಿಗರು ಸೇರಿದಂತೆ ವಿದೇಶಿ ಪ್ರವಾಸಿಗರು ಮೃತಪಟ್ಟಿದ್ದು, ಈ ದಾಳಿಯ ಭಯಾನಕ ವಿಡಿಯೋ ಇಲ್ಲಿದೆ.

Nandini Milk: ದೆಹಲಿ ಬಳಿಕ ರಾಜಸ್ಥಾನ, ಮಧ್ಯಪ್ರದೇಶಕ್ಕೆ ಎಂಟ್ರಿ ಕೊಡಲಿದೆ ನಂದಿನಿ

ನೆರೆ ರಾಜ್ಯಕ್ಕೂ ಕಾಲಿಟ್ಟ ನಂದಿನಿ...?

Nandini Milk: ರಾಜ್ಯದ ಜನಪ್ರಿಯ ಹಾಲಿನ ಬ್ರಾಂಡ್ ನಂದಿನಿ, ದೇಶದ ಎರಡನೇ ಅತಿದೊಡ್ಡ ಹಾಲು ಉತ್ಪಾದಕ ರಾಜ್ಯವಾದ ರಾಜಸ್ಥಾನಕ್ಕೆ ಪ್ರವೇಶಿಸಲು ಸಜ್ಜಾಗಿದೆ. ದಕ್ಷಿಣ ಭಾರತದಾಚೆಗೆ (ತನ್ನ ವ್ಯಾಪ್ತಿಯನ್ನು ವಿಸ್ತರಿಸುವ ಯೋಜನೆಯ ಭಾಗವಾಗಿ ಕರ್ನಾಟಕ ಹಾಲು ಮಹಾಮಂಡಳಿ ಈ ನಿರ್ಧಾರ ಕೈಗೊಂಡಿದೆ.

Humanoids:  ಹಾಫ್ ಮ್ಯಾರಥಾನ್‌ನಲ್ಲಿ ಮನುಷ್ಯರ ಜೊತೆ ಓಡಿದ 21 ರೋಬೋಟ್‌ಗಳು

ಬೀಜಿಂಗ್‌ನ ಹಾಫ್‌ ಮ್ಯಾರಥಾನ್‌ನಲ್ಲಿ ಸ್ಪರ್ಧಿಸಿದ ರೋಬೋಟ್‌ಗಳು

Humanoids in Beijing Half Marathon : ಚೀನಾದ ಬೀಜಿಂಗ್‌ನಲ್ಲಿ ನಡೆದ ಹಾಫ್‌ ಮ್ಯಾರಥಾನ್‌ ಸ್ಪರ್ಧೆಯಲ್ಲಿ ಮನುಷ್ಯರ ಜೊತೆ ರೋಬೋಟ್‌ಗಳು ಕೂಡಾ ಪಾಲ್ಗೊಂಡಿದ್ದು, ಸುಮಾರು 21.1 ಕಿ.ಮೀ. ಓಟ ಓಡಿದ್ದಾರೆ. ಮಾನವರ ಜೊತೆ ರೋಬೋ ಸ್ಪರ್ಧೆ ಮಾಡಿರುವುದು ಇದೇ ಮೊದಲಾಗಿದ್ದು, ರೇಸ್‌ನಲ್ಲಿ ವಿಭಿನ್ನ ವಿನ್ಯಾಸದ 20 ರೋಬೋಟ್‌ಗಳು ಭಾಗಿಯಾಗಿದ್ದವು. ಈ ಸ್ಪರ್ಧೆಯಲ್ಲಿ ಅಗ್ರಸ್ಥಾನ ಪಡೆದ ಪುರುಷ ಸ್ಪರ್ಧಿ 1 ಗಂಟೆ 2 ನಿಮಿಷದಲ್ಲಿ ಗುರಿ ತಲುಪಿದರೆ, ರೋಬೋಟ್‌ಗಳ ಪೈಕಿ ಮೊದಲ ಸ್ಥಾನಿಯಾದ ಟಿಯಾಂಗಾಂಗ್‌ ಅಲ್ಟ್ರಾ ಗುರಿ ತಲುಪಲು 2 ಗಂಟೆ 40 ನಿಮಿಷ ತೆಗೆದುಕೊಂಡಿತು.

Anti-Sikh Riots: 1984ರ ಸಿಖ್ ವಿರೋಧಿ ಗಲಭೆ ಪ್ರಮುಖ ಸಾಕ್ಷಿಗೆ ಜೀವ ಬೆದರಿಕೆ

ಸಿಖ್ ವಿರೋಧಿ ದಂಗೆ ಪ್ರಕರಣದ ಸಾಕ್ಷಿಗೆ ಬೆದರಿಕೆ..!

1984 Anti-Sikh Riots: 1984ರ ಸಿಖ್ ವಿರೋಧಿ ಗಲಭೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿ, ಪ್ರಮುಖ ಸಾಕ್ಷಿಯಾದ ಸುರೇಂದರ್ ಸಿಂಗ್ ಅವರು ಬೆದರಿಕೆಗಳಿಂದಾಗಿ ತಮ್ಮ ಹೇಳಿಕೆಯನ್ನು ಬದಲಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ವಿಷಯವನ್ನು ದೆಹಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿಯ ಮಾಜಿ ಅಧ್ಯಕ್ಷ ಮಂಜೀತ್ ಸಿಂಗ್ ಜಿಕೆ, ಸೋಮವಾರ ರೋಸ್ ಅವೆನ್ಯೂ ಕೋರ್ಟ್‌ನಲ್ಲಿ ತಮ್ಮ ಸಾಕ್ಷ್ಯದ ವೇಳೆ ಬಹಿರಂಗಪಡಿಸಿದರು.