ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Profile

Sushmitha Jain

jainsushmithajain@gmail.com

Articles
Supreme Court: ಶಿಕ್ಷೆ ಅವಧಿ ಮುಗಿದರೂ 4.7 ವರ್ಷ ಹೆಚ್ಚುವರಿ ಸೆರೆವಾಸ; ಕೈದಿಗೆ 25 ಲಕ್ಷ ರೂ. ಪರಿಹಾರಕ್ಕೆ ಸುಪ್ರೀಂ ಕೋರ್ಟ್ ಆದೇಶ

ಹೆಚ್ಚುವರಿ ಜೈಲುವಾಸ ಅನುಭವಿಸಿದ ವ್ಯಕ್ತಿಗೆ ಭರ್ಜರಿ ಆಫರ್ ನೀಡಿದ ಕೋರ್ಟ್

ವ್ಯಕ್ತಿಯೋರ್ವನನ್ನು ಶಿಕ್ಷಾವಧಿ ಮುಗಿದರೂ ನಾಲ್ಕೂವರೆ ವರ್ಷ ಹೆಚ್ಚುವರಿ ಸೆರೆವಾಸ ಅನುಭವಿಸಿದ್ದಕ್ಕೆ ವ್ಯಕ್ತಿಗೆ 25 ಲಕ್ಷ ರೂ. ಪರಿಹಾರ ನೀಡುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಅಲ್ಲದೇ ಈ ಬೇಜವಾಬ್ದಾರಿ ಮಾಡಿದ ಮಧ್ಯ ಪ್ರದೇಶ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.

Viral Video: ಇನ್‌ಸ್ಟಾಗ್ರಾಮ್ ರೀಲ್‌ಗಾಗಿ ಮುಳುಗುವ ನಾಟಕ: ಪೊಲೀಸರು ‘ಶವ’ ತೆಗೆಯಲು ಬಂದಾಗ ಎದ್ದ ವ್ಯಕ್ತಿ

ರೀಲ್ಸ್ ಚಟಕ್ಕೆ ನದಿಯಲ್ಲಿ ಮುಳುಗಿದ ಭೂಪ! ಮುಂದೇನಾಯ್ತು?

ಸೋಶಿಯಲ್ ಮೀಡಿಯಾ ಬಂದ ಮೇಲಂತೂ ಜನರ ಹುಚ್ಚಾಟ ಹೆಚ್ಚಾಗಿದ್ದು, ಅತಿರೇಕದ ವರ್ತನೆಯಿಂದ ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಿದ್ದಾರೆ. ಮೊದಲು ಸೆಲ್ಫಿ ತೆಗೆಯುವ ಹುಚ್ಚಿತ್ತು. ಇದೀಗ ರೀಲ್ಸ್ ಮಾಡುವ ಹುಚ್ಚು ಶುರುವಾಗಿದೆ. ಅಪಾಯಕಾರಿ ಸ್ಥಳಗಳಲ್ಲಿ ರೀಲ್ಸ್, ಫೋಟೊ ತೆಗೆಯಲು ಹೋಗಿ ಜೀವ ಕಳೆದುಕೊಂಡ ಎಷ್ಟೋ ನಿದರ್ಶನಗಳನ್ನು ನಾವು ನೋಡಿದ್ದೇವೆ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿ ರೀಲ್ಸ್ ಚಟಕ್ಕೆ ನದಿಯಲ್ಲಿ ಮುಳುಗಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Haryana AC Blast: ಮನೆಯಲ್ಲಿ ಎಸಿ ಸ್ಫೋಟ- ಒಂದೇ ಕುಟುಂಬದ ಮೂವರು ಸಾವು- ಶ್ವಾನವೂ ಬಲಿ...!

ಮನೆಯಲ್ಲಿ ಎಸಿ ಸ್ಫೋಟ- ಮೂವರು ಬಲಿ

ಮನೆಯಲ್ಲಿ ಏರ್ ಕಂಡಿಷನ್(ಎಸಿ) ಸ್ಫೋಟಗೊಂಡ ಪರಿಣಾಮ ಒಂದೇ ಕುಟುಂಬದ ಮೂವರು ಮೃತಪಟ್ಟ ದಾರುಣ ಘಟನೆ ಹರಿಯಾಣದ ಫರಿದಾಬಾದ್‌ನ ಸಮೀಪ ನಡೆದಿದೆ. ತಿಂಡಿವಾನಂ ಸಮೀಪದ ಸಚಿನ್ ಕಪೂರ್, ಆತನ ಪತ್ನಿ ರಿಂಕು ಕಪೂರ್, ಮತ್ತು ಮಗಳು ಸುಜನ್ ಕಪೂರ್ ದುರ್ಘಟನೆಯಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮನೆಯ ಕೋಣೆಯೊಂದರಲ್ಲಿ ರಾತ್ರಿ ಮಲಗಿದ್ದ ವೇಳೆ ಶಾರ್ಟ್ ಸರ್ಕ್ಯೂಟ್ ನಿಂದ ಏರ್ ಕಂಡಿಷನ್ ಸ್ಫೋಟಗೊಂಡಿದ್ದು, ಬಳಿಕ ಬೆಂಕಿ ಬೆಡ್ ರೂಮ್ ಗೆ ಆವರಿಸಿದ ಪರಿಣಾಮ ಮೂವರು ಸಜೀವ ದಹನವಾಗಿದ್ದಾರೆ.

Humans In Mars: ಮಂಗಳ ಗ್ರಹದಲ್ಲಿ ವಾಸಿಸಲು ನಾಲ್ವರು ರೆಡಿ- ಕೆಂಪು ಗ್ರಹದಲ್ಲಿ ಜೀವನ ಸಾಗಿಸಲು ಸವಾಲುಗಳೇನು?

ಮಂಗಳ ಗ್ರಹದಲ್ಲಿ ಬದುಕಲು ಸವಾಲುಗಳೆಷ್ಟು?

ಮಂಗಳ ಗ್ರಹದಲ್ಲಿ ಜೀವಿಗಳ ವಾಸ್ತವ್ಯದ ಬಗ್ಗೆ ಹಾಗೂ ಅದರ ಸಾಧ್ಯತೆಯ ಬಗ್ಗೆ ಹಲವು ವರ್ಷಗಳಿಂದ ಚರ್ಚೆಗಳು ನಡೆಯುತ್ತಿವೆ. ಅಲ್ಲಿ ಬದುಕುಳಿಯುವುದು ಸಾಧ್ಯ ಎಂದು ಕೆಲವರು ವಾದಿಸಿದರೆ, ಇನ್ನು ಕೆಲವರು ಇಲ್ಲ ಎಂದು ಚರ್ಚಿಸುತ್ತಾರೆ. ಮತ್ತೊಂದೆಡೆ, ವಿಜ್ಞಾನಿಗಳು ಮಂಗಳನಲ್ಲಿ ಸಂಶೋಧನೆ ನಡೆಸುತ್ತಿದ್ದು, ಕಠಿಣ ಪರಿಸ್ಥಿತಿಗಳಲ್ಲಿ ಮಂಗಳ ಗ್ರಹದಲ್ಲಿ ವಾಸಿಸಲು ಸಾಧ್ಯವಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಸೌರವ್ಯೂಹದ ಗ್ರಹಗಳಲ್ಲಿ ಮಂಗಳ ಗ್ರಹವೇ ಸಂಶೋದನೆಯ ಮುಖ್ಯ ಗುರಿಯಾಗಿದ್ದು, ಮಂಗಳ ಗ್ರಹದಲ್ಲಿ 4 ಮಂದಿ ರೆಡಿಯಾಗಿದ್ದಾರೆ ಎನ್ನಲಾಗಿದೆ

Crime News: ಸಾರ್ವಜನಿಕ ಸ್ಥಳದಲ್ಲಿ ಮೂತ್ರ ಮಾಡಬೇಡ ಅಂದಿದ್ದೇ ತಪ್ಪಾಯ್ತೇ? ಅಮೆರಿಕದಲ್ಲಿ ಭಾರತೀಯನ ಶೂಟೌಟ್‌!

ಭಾರತೀಯರ ಮೇಲೆ ಅಮೆರಿಕದಲ್ಲಿ ಪದೇ ಪದೇ ಶೂಟೌಟ್!

Haryana Man Killed in US: ಅಮೆರಿಕ ದೇಶದಲ್ಲಿ ಶೂಟೌಟ್ ಪ್ರಕರಣಗಳು ಪದೇ ಪದೇ ವರದಿಯಾಗುತ್ತಿವೆ. ದೇಶದ ಎಲ್ಲೆಂದರಲ್ಲಿ ಗುಂಡಿನ ಆರ್ಭಟ ಕೇಳಿ ಬರುತ್ತಿದೆ. ಅಲ್ಲಿ ಭಾರತೀಯರ ಸರಣಿ ಹತ್ಯೆಗಳು ನಡೆಯುತ್ತಿದ್ದು, ಅದು ಅಲ್ಲಿರುವ ಭಾರತ ಮೂಲದವರಿಗೆ ತೀವ್ರ ಆತಂಕ ತಂದೊಡ್ಡಿದೆ. ಈ ಮಧ್ಯೆ ಇದೀಗ ಮತ್ತೇ ಮತ್ತೊಬ್ಬ ಭಾರತೀಯನ ಹತ್ಯೆಯಾಗಿದೆ. ಕ್ಯಾಲಿಫೋರ್ನಿಯಾದ ಸಾರ್ವಜನಿಕ ಸ್ಥಳದಲ್ಲಿ ಮಾಡುತ್ತಿದ್ದ ವ್ಯಕ್ತಿಯನ್ನು ತಡೆದಿದ್ದಕ್ಕೆ, ಭಾರತ ಮೂಲದ ಯುವಕನ ಮೇಲೆ ಗುಂಡು ಹಾರಿಸಿ ಆತನನ್ನು ಹತ್ಯೆ ಮಾಡಿದ್ದಾನೆ.

Viral Video: ವಿವಾಹದ ಸಂಭ್ರಮದಲ್ಲಿದ್ದವರಿಗೆ ಶಾಕ್‌ ; ನವದಂಪತಿಯ 88 ಲಕ್ಷ ಮೌಲ್ಯದ ಗಿಫ್ಟ್ ಬಾಕ್ಸ್ ಎಗರಿಸಿದ ಕಳ್ಳ

ಮದುಮಕ್ಕಳ ಲಕ್ಷಾಂತರ ಉಡುಗೊರೆ ಹಣ ಕದ್ದ ಭೂಪ

ಅಮೆರಿಕದ ಕ್ಯಾಲಿಫೋರ್ನಿಯಾದ ಗ್ಲೆಂಡೇಲ್‌ನಲ್ಲಿ ಆಗಸ್ಟ್ 30ರಂದು ನಡೆದ ವಿವಾಹ ಸಮಾರಂಭದಲ್ಲಿ ಆನಂದದ ಸಮಯ ದುರಂತವಾಗಿ ಮಾರ್ಪಟ್ಟಿದೆ. ಜಾರ್ಜ್ (George) ಮತ್ತು ನದೀನ್ ಫರಾಹತ್ ಜೋಡಿಯ ವಿವಾಹ ನಡೆಯುತ್ತಿತ್ತು. ಈ ಶುಭ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ 70 ರಿಂದ 88 ಲಕ್ಷ ರೂ. (80,000 ರಿಂದ 1,00,000 ಡಾಲರ್) ಮೌಲ್ಯದ ನಗದು ಮತ್ತು ಚೆಕ್‌ಗಳಿರುವ ಉಡುಗೊರೆಯ ಬಾಕ್ಸ್ ಕದ್ದು ಪರಾರಿಯಾಗಿದ್ದಾನೆ.

Umang Singhar: ಬುಡಕಟ್ಟು ಜನರು ಹಿಂದೂಗಳಲ್ಲ: ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕನ ಹೇಳಿಕೆ

ಬುಡಕಟ್ಟು ಜನರು ವಿರುದ್ಧ ನಾಲಗೆ ಹರಿಬಿಟ್ಟ ಉಮಂಗ್ ಸಿಂಘಾರ್‌

ಮಧ್ಯಪ್ರದೇಶದ ರಾಜಕೀಯದಲ್ಲಿ “ಬುಡಕಟ್ಟು ಜನರು ಹಿಂದೂಗಳಲ್ಲ” ಎಂಬ ವಿರೋಧ ಪಕ್ಷದ ನಾಯಕ ಉಮಂಗ್ ಸಿಂಘಾರ್‌ ಅವರ ಹೇಳಿಕೆಯಿಂದ ತೀವ್ರ ವಿವಾದ ಭುಗಿಲೆದ್ದಿದೆ. ಛಿಂದ್‌ವಾರಾದಲ್ಲಿ ಬುಡಕಟ್ಟು ಜನರ ಅಭಿವೃದ್ಧಿ ಮಂಡಳಿ ಸಭೆ ಮತ್ತು ರಾಷ್ಟ್ರೀಯ ಕರಮದಾರ್ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ, BJP ಮತ್ತು RSS ಬುಡಕಟ್ಟು ಜನರ ಸಮುದಾಯದ ಮೇಲೆ ಹಿಂದೂ ಗುರುತನ್ನು ಹೇರುತ್ತಿವೆ ಎಂದು ಆರೋಪಿಸಿದ್ದಾರೆ.

Crime News: ನನ್ನ ಸಂಪಾದನೆ ಎಲ್ಲಾ ಅವ್ಳ ಖರ್ಚಿಗೆ ಸಾಕಾಗ್ತಿತು; ಪತ್ನಿಯ ಕಾಟಕ್ಕೆ ಬೇಸತ್ತು ಅವಳಿಗೇ ಗುಂಡಿಟ್ಟ ಪತಿ

ಹೆಂಡತಿಯನ್ನು ಗುಂಡಿಟ್ಟು ಕೊಂದ ಗಂಡ...!

ಉತ್ತರ ಪ್ರದೇಶದ ಗೋರಖ್‌ಪುರದ ಶಾಹ್‌ಪುರದಲ್ಲಿ ಬುಧವಾರ ಸಂಜೆ ವಿಚ್ಛೇದನ ವಿವಾದದ ಹಿನ್ನೆಲೆಯಲ್ಲಿ ಗಂಡನೊಬ್ಬ ತನ್ನ ಹೆಂಡತಿಯನ್ನು ಗುಂಡಿಟ್ಟು ಕೊಂದ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ವಿಶ್ವಕರ್ಮಾ ಚೌಹಾಣ್ ಎಂದು ಗುರುತಿಸಲಾಗಿದ್ದು, ಘಟನೆಯ ತಕ್ಷಣವೇ ಆತನನ್ನು ಸ್ಥಳದಲ್ಲಿಯೇ ಬಂಧಿಸಲಾಗಿದೆ.

Crime News: ಸ್ಪೈ ಕ್ಯಾಮೆರಾ ಬಳಸಿ ಮಹಿಳೆಯರ ಅಶ್ಲೀಲ ವಿಡಿಯೊ ಸೆರೆ; ಕಾಮುಕ ಪೈಲಟ್‌ ಅರೆಸ್ಟ್‌

ಸ್ಪೈ ಕ್ಯಾಮೆರಾ ಬಳಸಿ ಮಹಿಳೆ ವಿಡಿಯೊ ರೆಕಾರ್ಡ್‌-ಪೈಲಟ್‌ ಅರೆಸ್ಟ್‌

Filming Women with Spy Camera: ಇತ್ತೀಚಿನ ದಿನಗಳಲ್ಲಿ ಸ್ಪೈ ಕ್ಯಾಮೆರಾಗಳಲ್ಲಿ ಹುಡುಗಿಯರನ್ನು ಶೂಟ್ ಮಾಡುವ ಘಟನೆಗಳು ಹೆಚ್ಚಾಗುತ್ತಿವೆ. ಈ ಕಾರಣದಿಂದಾಗಿ, ಅನೇಕ ಮಹಿಳೆಯರು ಯಾರೊಂದಿಗೆ ಮಾತನಾಡಬೇಕೆಂದು ತಿಳಿಯದೆ ತೀವ್ರ ಭಾವನಾತ್ಮಕ ನೋವಿನಿಂದ ಬಳಲುತ್ತಿದ್ದಾರೆ. ಇದೀಗ ಅಂತದೇ ದುರ್ಘಟನೆಯೊಂದು ನಡೆದಿದ್ದು, ಮಹಿಳೆಯೊಬ್ಬರ ಆಕ್ಷೇಪಾರ್ಹ ವೀಡಿಯೊ ರೆಕಾರ್ಡ್ ಮಾಡಿದ್ದ ಆರೋಪದ ಮೇಲೆ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ.

Halal Lifestyle Township: ವಸತಿ ಯೋಜನೆಯ ಜಾಹೀರಾತಿಗೂ ಹಲಾಲ್‌ ಟಚ್‌! ಏನಿದು ಹೊಸ ವಿವಾದ?

ವಸತಿ ಯೋಜನೆಯ ಜಾಹೀರಾತಿಗೂ ಹಲಾಲ್‌ ಟಚ್‌! ಏನಿದು ವಿವಾದ?

Halal Lifestyle Township’ Near Mumbai: ಮಹಾರಾಷ್ಟ್ರದ ನೇರಲ್‌ನಲ್ಲಿ, ತಲೆ ಎತ್ತಲಿರುವ ಸಮುಚ್ಛಯ ಭವನದ ಜಾಹೀರಾತೊಂದು ವಿವಾದದ ಕಿಡಿ ಹೊತ್ತಿಸಿದ್ದು, ‘ಸುಕೂನ್ ಎಂಪೈರ್’ ಎಂಬ ವಸತಿ ಸಮುಚ್ಛಯ ಕಟ್ಟಡದ ಜಾಹೀರಾತು ಇದಾಗಿದೆ. ಹೌದು ‘ಹಲಾಲ್ ಲೈಫ್‌ಸ್ಟೈಲ್ ಟೌನ್‌ಶಿಪ್’ ಎಂದು ಪ್ರಚಾರ ಮಾಡುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಾಜಕೀಯ ವಿವಾದಕ್ಕೆ ಕಾರಣವಾಗಿದೆ. “ಹಲಾಲ್ ಲೈಫ್‌ಸ್ಟೈಲ್ ಟೌನ್‌ಶಿಪ್” ಎಂದಿರುವ ಈ ಯೋಜನೆ, ಧಾರ್ಮಿಕವಾಗಿ ಜನರನ್ನು ಪ್ರಚೋದಿಸುವ ಅಂಶವನ್ನು ಹೊಂದಿದೆ ಎಂದು ಟೀಕೆಗೊಳಗಾಗಿದೆ

Viral Video: ಡಿಸಿಎಂ ಮತ್ತು IPS ಅಧಿಕಾರಿ ನಡುವೆ ಜಟಾಪಟಿ- ವಿಡಿಯೊ ವೈರಲ್

ಮಹಿಳಾ IPS ಅಧಿಕಾರಿ ಜೊತೆ ಡಿಸಿಎಂ ಜಟಾಪಟಿ!

ಅಕ್ರಮವಾಗಿ ಮಣ್ಣು ತೆಗೆಯುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್‌ ಹಾಗೂ ಮಹಿಳಾ ಐಪಿಎಸ್‌ ಅಧಿಕಾರಿ ನಡುವೆ ಮಾತಿನ ಚಕಮಕಿ ನಡೆದಿದ್ದು, ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಅಕ್ರಮವಾಗಿ ಮಣ್ಣು ತೆಗೆಯುವ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ವಾಗ್ವಾದದ ನಡೆದಿದ್ದು, ಅಜಿತ್ ಪವಾರ್‌, ನಾನು ಉಪಮುಖ್ಯಮಂತ್ರಿ, ತಕ್ಷಣ ಕಾರ್ಯಾಚರಣೆ ನಿಲ್ಲಿಸಿ ಅಲ್ಲಿಂದ ತೆರಳಿ ಎಂದು ಸೂಚನೆ ನೀಡುತ್ತಿರುವ ಸಂಭಾಷಣೆಯ ವೈರಲ್ ಆಗಿದೆ.

Israel- Hamas War: ಇಸ್ರೇಲ್ ಕಪಿಮುಷ್ಟಿಯಲ್ಲಿ ಗಾಜಾದ ಶೇ.40ರಷ್ಟು ಭೂ ಭಾಗ!

ಇಸ್ರೇಲ್ ಕಪಿಮುಷ್ಟಿಯಲ್ಲಿ ಗಾಜಾದ ಶೇ.40ರಷ್ಟು ಭೂ ಭಾಗ!

ಸುಮಾರು ಎರಡು ವರ್ಷಗಳಿಂದ ಹಮಾಸ್ ಜೊತೆ ಯುದ್ಧ ಮಾಡುತ್ತಿರುವ ಇಸ್ರೇಲ್, ಗಾಜಾ ನಗರವನ್ನು ವಶಪಡಿಸಿಕೊಳ್ಳಲು ಸಿದ್ಧವಾಗಿದ್ದು, ಈಗಾಗಲೇ ಗಾಜಾ ನಗರವನ್ನು ವಶಪಡಿಸಿಕೊಳ್ಳಲು ಇಸ್ರೇಲ್ ಭದ್ರತಾ ಸಚಿವ ಸಂಪುಟ ಯೋಜನೆ ರೂಪಿಸಿ ಅದಕ್ಕೆ ಅನುಮೋದನೆ ಪಡೆದುಕೊಂಡಿದೆ. ಇದರ ಭಾಗವಾಗಿ ಈಗಾಗಲೇ ಶೇ 40ರಷ್ಟು ಗಾಜಾವನ್ನು ಇಸ್ರೇಲ್ ವಶಪಡಿಸಿಕೊಂಡಿದ್ದು, ಗುರುವಾರ ಇಸ್ರೇಲ್‌ನ ವೈಮಾನಿಕ ದಾಳಿಗಳಿಂದ ಗಾಜಾ ನಗರದಲ್ಲಿ 30ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಗಾಜಾದ ಸಿವಿಲ್ ಡಿಫೆನ್ಸ್ ಏಜೆನ್ಸಿ ವರದಿ ಮಾಡಿದೆ.

Blood Moon 2025: ಖಗ್ರಾಸ ಚಂದ್ರ ಗ್ರಹಣ ಯಾವಾಗ ಸಂಭವಿಸುತ್ತೆ? ಎಲ್ಲೆಲ್ಲಿ ಗೋಚರಿಸುತ್ತೆ? ಇಲ್ಲಿದೆ ಡಿಟೇಲ್ಸ್‌

ಖಗ್ರಾಸ ಚಂದ್ರ ಗ್ರಹಣ ಯಾವಾಗ ಸಂಭವಿಸುತ್ತೆ? ಎಲ್ಲೆಲ್ಲಿ ಗೋಚರಿಸುತ್ತೆ?

ಕೆಂಪು ರಕ್ತ ಚಂದ್ರ ಗ್ರಹಣ ಎಂದು ಕರೆಯಲಾಗುವ ಸಂಪೂರ್ಣ ಚಂದ್ರ ಗ್ರಹಣವು ಸೆ.7ರ ರಾತ್ರಿ ಸಂಭವಿಸಲಿದೆ. ಇದು ವರ್ಷದ ಎರಡನೇ ಹಾಗೂ ಕೊನೆಯ ಚಂದ್ರಗ್ರಹಣವಾಗಿದ್ದು, ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ಬಂದಾಗ ಮತ್ತು ಎಲ್ಲಾ ಮೂರು ಸರಳ ರೇಖೆಯಲ್ಲಿ ನಿಂತಾಗ, ನಂತರ ಚಂದ್ರ ಗ್ರಹಣ ಸಂಭವಿಸುತ್ತದೆ. ಇದರ ಪರಿಣಾಮವೂ ವೈಜ್ಞಾನಿಕವಾಗಿದೆ ಮತ್ತು ಜ್ಯೋತಿಷ್ಯ ಶಾಸ್ತ್ರದ ಪ್ರಕಾರವೂ ಇದಕ್ಕೆ ಹೆಚ್ಚಿನ ಮಹತ್ವವಿದೆ. ಇದು ಸೂರ್ಯಗ್ರಹಣ ಅಥವಾ ಚಂದ್ರಗ್ರಹಣವಾಗಿರಲಿ, ಜ್ಯೋತಿಷ್ಯಶಾಸ್ತ್ರದ ಪ್ರಕಾರ ಇದನ್ನು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ.

Rahul Mamkootathil: ಕೇರಳ ಶಾಸಕ ರಾಹುಲ್ ಮಾಂಕೂಟತ್ತಿಲ್‌ ವಿರುದ್ಧ ಕಿರುಕುಳ, ಬೆದರಿಕೆ ಆರೋಪ; ಪ್ರಕರಣ ದಾಖಲು

ಕಾಂಗ್ರೆಸ್‌ ಶಾಸಕ ರಾಹುಲ್ ಮಾಂಕೂಟತ್ತಿಲ್‌ ಮೇಲೆ ಬಿತ್ತು ಕೇಸ್

ಮಹಿಳೆಯರಿಗೆ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ಪಾಲಕ್ಕಾಡ್ ಶಾಸಕ ರಾಹುಲ್ ಮಾಂಕೂಟತ್ತಿಲ್‌ ವಿರುದ್ಧ ಕಾಂಗ್ರೆಸ್ ಕ್ರಮ ಕೈಗೊಂಡಿತು. ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಲಾಗಿತು. ಇದೀಗ ಮತ್ತೆ ಈ ನಾಯಕನ ಮೇಲೆ ಕಿರುಕುಳ ಆರೋಪ ಕೇಳಿ ಬಂದಿದೆ.

ಮೊದಲ ಪ್ರಯಾಣ ಆರಂಭಿಸಿದ ಕೆಲವೇ ನಿಮಿಷಗಳಲ್ಲಿ ಮುಳುಗಡೆಯಾದ 10 ಕೋಟಿ ರೂ. ಮೌಲ್ಯದ ಐಷಾರಾಮಿ ಹಡಗು

ಸಮುದ್ರದಲ್ಲಿ ಮುಳುಗಿದ 10 ಕೋಟಿ ರೂ. ಮೌಲ್ಯದ ಐಷಾರಾಮಿ ಹಡಗು

ಟರ್ಕಿಯ ಜೊಂಗುಲ್ಡಾಕ್ ಕರಾವಳಿಯಲ್ಲಿ ಡಾಲ್ಸ್ ವೆಂಟೋ ಎಂಬ ಐಷಾರಾಮಿ ಹಡಗೊಂದು ಮುಳುಗಡೆಯಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಮುಳುಗಡೆಗೆ ನಿಖರ ಕಾರಣ ಏನು ಎಂಬುದು ಇನ್ನೂ ತಿಳಿದು ಬಂದಿಲ್ಲ. ಮೊಬೈಲ್ ಫೋನ್‌ನಲ್ಲಿ ಘಟನೆಯ ದೃಶ್ಯ ಸೆರೆಯಾಗಿದೆ.

ಜಾರ್ಖಂಡ್‌ನಲ್ಲಿ ನಕ್ಸಲ್ ಎನ್‌ಕೌಂಟರ್ ವೇಳೆ ಇಬ್ಬರು ಯೋಧರು ಹುತಾತ್ಮ; ಛತ್ತೀಸ್‌ಗಢದಲ್ಲಿ 20 ನಕ್ಸಲರು ಶರಣು

ಜಾರ್ಖಂಡ್‌ ಅಲ್ಲಿ ಗುಂಡಿನ ಚಕಮಕಿ; 2 ಭದ್ರತಾ ಸಿಬ್ಬಂದಿ ಹುತಾತ್ಮ

ಜಾರ್ಖಂಡ್‌ನ ಪಲಮು ಜಿಲ್ಲೆಯಲ್ಲಿ ಸೆಪ್ಟೆಂಬರ್‌ 3ರ ತಡರಾತ್ರಿ ನಕ್ಸಲರು ಹಾಗೂ ಭದ್ರತಾ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ ನಡೆದಿದೆ. ಮನಾಟು ಪೊಲೀಸ್ ಠಾಣೆ ವ್ಯಾಪ್ತಿಯ ಕೇದಾಲ್ ಪ್ರದೇಶದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದು, ಒಬ್ಬ ಸಿಬ್ಬಂದಿಗೆ ಗಂಭೀರ ಗಾಯಗಳಾಗಿದೆ. ಅವರನ್ನು ಮೇದಿನಿರೈ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪಲಮು ಡಿಐಜಿ ನೌಶಾದ್ ಆಲಂ ತಿಳಿಸಿದ್ದಾರೆ.

Arun Gawli: 17 ವರ್ಷಗಳ ಸೆರೆವಾಸದ ಬಳಿಕ ಭೂಗತ ದೊರೆ ರಿಲೀಸ್‌; ಯಾರೀತ? ಏನಿವನ ಹಿನ್ನೆಲೆ?

17 ವರ್ಷಗಳ ಸೆರೆವಾಸದ ಬಳಿಕ ಭೂಗತ ದೊರೆ ರಿಲೀಸ್‌; ಯಾರೀತ?

ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾದ ಗ್ಯಾಂಗ್​ಸ್ಟರ್​​ ಅರುಣ್​ ಗಾವ್ಲಿ ಷರತ್ತಿನ ಅನ್ವಯ ಜಾಮೀನು ಮಂಜೂರು ಆಗಿದ್ದು, 2007ರಲ್ಲಿ ಮುಂಬೈನ ಶಿವ ಸೇನಾ ಕಾರ್ಪೋರೇಟರ್​ ಕಮಲಕರ್​ ಜಮ್ಸಂದೆಕರ್​ ಕೊಲೆ ಪ್ರಕರಣದಲ್ಲಿ ಗವಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಮಾಕೋಕಾ ನಿಬಂಧನೆ ಅಡಿಯಲ್ಲಿ ಗಾವ್ಲಿ ಕೊಲೆ ಪ್ರಕರಣದಡಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದನು. ಈ ವೇಳೆ 17 ಲಕ್ಷ ರೂ ದಂಡ ಕೂಡ ವಿಧಿಸಲಾಗಿತ್ತು.

Jawaharlal Nehru Bungalow: ಜವಾಹರಲಾಲ್ ನೆಹರು ಅವರ ಲುಟಿಯನ್ಸ್ ಬಂಗಲೆ 1,100 ಕೋಟಿಗೆ ಮಾರಾಟ; ಖರೀದಿಸಿದವರು ಯಾರು ಗೊತ್ತಾ?

ಕೋಟಿ ಮೊತ್ತಕ್ಕೆ ಸೇಲ್ ಆಯ್ತು ನೆಹರು ಲುಟಿಯನ್ಸ್ ಬಂಗಲೆ!

ಭಾರತ ದೇಶದ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಅವರ ಮೊದಲ ಅಧಿಕೃತ ನಿವಾಸ ಮಾರಾಟವಾಗಿದ್ದು, ದೆಹಲಿಯ ಲುಟಿಯನ್ಸ್ ಪ್ರದೇಶದಲ್ಲಿರುವ ಈ ಬಂಗಲೆಯನ್ನು ಸುಮಾರು 1,100 ಕೋಟಿ ರೂ. ಮೊತ್ತಕ್ಕೆ ಸೇಲ್ ಆಗಿದೆ ಎನ್ನಲಾಗಿದೆ. ರಾಜಸ್ಥಾನಿ ರಾಜಮನೆತನದ ರಾಜಕುಮಾರಿ ಕಕ್ಕರ್ ಮತ್ತು ಬೀನಾ ರಾಣಿ ಈ ಬಂಗಲೆಯನ್ನು ಮಾರಾಟ ಮಾಡಿದ್ದು, ಉದ್ಯಮಿಯೊಬ್ಬರು ಈ ಐಷರಾಮಿ ಬಂಗಲೆಯನ್ನು ಖರೀದಿಸಿದ್ದಾರೆ ಎನ್ನಲಾಗಿದೆ.

Actor Ashish Kapoor: ಬಾತ್‌ರೂಂನಲ್ಲಿ ಮಹಿಳೆ ಮೇಲೆ ಅತ್ಯಾಚಾರ; ಖ್ಯಾತ ನಟ ಅರೆಸ್ಟ್‌

ಬಾತ್‌ರೂಂನಲ್ಲಿ ಮಹಿಳೆ ಮೇಲೆ ಅತ್ಯಾಚಾರ; ಖ್ಯಾತ ನಟ ಅರೆಸ್ಟ್‌

Physical Abuse: ಕಿರುತರೆ ನಟ ಆಶಿಶ್ ಕಪೂ‌ರ್ ಮೇಲೆ ಲೈಂಗಿಕ ದೌಜನ್ಯ ಆರೋಪ ಕೇಳಿ ಬಂದಿದ್ದು, ಕಳೆದ ತಿಂಗಳು ದೆಹಲಿಯಲ್ಲಿ ನಡೆದ ಪಾರ್ಟಿಯೊಂದರಲ್ಲಿ ತನ್ನ ಮೇಲೆ ಬಾತೂಮ್‌ನಲ್ಲಿ ಲೈಂಗಿಕ ದೌರ್ಜನ್ಯ ಮಾಡಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಆಶಿಶ್ ಕಪೂ‌ರ್ ನನ್ನು ಪೊಲೀಸರು ಬಂಧಿಸಿದ್ದು, ಅತ್ಯಾಚಾರ ನಡೆದ ಘಟನೆಯನ್ನು ರೆಕಾರ್ಡ್ ಮಾಡಲಾಗಿದೆ ಎಂದು ಮಹಿಳೆ ಹೇಳಿಕೊಂಡಿದ್ದಾಳೆ. ಆದರೆ ಯಾವುದೇ ವೀಡಿಯೊ ಕಂಡುಬಂದಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Crime News: 17 ವರ್ಷದ ಬಾಲಕನ ಜತೆ ಓಡಿಹೋದ 27 ವರ್ಷದ ಇಬ್ಬರು ಮಕ್ಕಳ ತಾಯಿಯ ಬಂಧನ

17 ವರ್ಷದ ಬಾಲಕನ ಜತೆ ಓಡಿ ಹೋದ 27 ವರ್ಷದ ಮಹಿಳೆ

ಹದಿ ಹರೆಯದ ಯುವಕನೊಂದಿಗೆ ಮಹಿಳೆಯೋರ್ವರು ಕೇರಳದಿಂದ ಕೊಲ್ಲೂರಿಗೆ ಓಡಿ ಬಂದಿದ್ದು, ವಸತಿಗೃಹದಲ್ಲಿ ಆತನ ಜತೆ ಉಳಿದಿದ್ದ ವೇಳೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಮಹಿಳೆಯ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

Shehbaz Sharif: ಬೀಜಿಂಗ್‌ನಲ್ಲಿ ಶೆಹಬಾಜ್ ಶರೀಫ್‌ಗೆ ಮತ್ತೆ ಮುಜುಗರ: ಇಯರ್‌ಫೋನ್ ಧರಿಸಲು ಪರದಾಡಿದ ಪಾಕ್ ಪ್ರಧಾನಿ

ಮತ್ತೆ ನಾಚಿಕೆಗೀಡಾದ ಪಾಕ್ ಪ್ರಧಾನಿ ಶೆಹಬಾಜ್ ಶರೀಫ್‌

ಪಾಕಿಸ್ತಾನದ ಪ್ರಧಾನಮಂತ್ರಿ ಶೆಹಬಾಜ್ ಶರೀಫ್‌ಗೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಮತ್ತೊಮ್ಮೆ ಮುಜುಗರ ಎದುರಾಗಿದೆ. ಚೀನಾದಲ್ಲಿ ಆಗಸ್ಟ್ 31ರಿಂದ ಸೆಪ್ಟೆಂಬರ್ 1ರವರೆಗೆ ನಡೆದ ಶಾಂಘೈ ಸಹಕಾರ ಸಂಸ್ಥೆ ಶೃಂಗಸಭೆಯ ಸಂದರ್ಭದಲ್ಲಿ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜತೆಗಿನ ಚರ್ಚೆಯ ವೇಳೆ ಶರೀಫ್ ಇಯರ್‌ಫೋನ್ ಬಳಸಲು ತಡವರಿಸಿದ್ದು ಘಟನೆಯ ವಿಡಿಯೊ ವೈರಲ್ ಆಗಿದೆ.

Manpal Badli: ಕಾಂಬೋಡಿಯಾದಲ್ಲಿ ಹರಿಯಾಣದ ಭೂಗತ ದೊರೆ ಮಾನ್‌ಪಾಲ್ ಬಾದ್ಲಿ ಬಂಧನ

ಭೂಗತ ದೊರೆ ಮಾನ್‌ಪಾಲ್ ಬಾದ್ಲಿ ಬಂಧನ

ಹರಿಯಾಣದ ಮೋಸ್ಟ್ ವಾಂಟೆಡ್ ಗ್ಯಾಂಗ್‌ಸ್ಟರ್ ಮಾನ್‌ಪಾಲ್ ಬಾದ್ಲಿಯನ್ನು ಕಾಂಬೋಡಿಯಾದಲ್ಲಿ ಭಾರತೀಯ ಭದ್ರತಾ ಸಂಸ್ಥೆಗಳು ಮತ್ತು ಹರಿಯಾಣ ಪೊಲೀಸರ ಜಂಟಿ ಕಾರ್ಯಾಚರಣೆ ನಡೆಸಿ ಸುಮಾರು 10 ದಿನಗಳ ಹಿಂದೆ ಬಂಧಿಸಿವೆ. ಕೊಲೆ ಸೇರಿದಂತೆ ಹಲವು ಗಂಭೀರ ಅಪರಾಧಗಳಲ್ಲಿ ಆರೋಪಿಯಾಗಿರುವ ಬಾದ್ಲಿಯನ್ನು ಭಾರತಕ್ಕೆ ಕರೆತರಲು ತೀವ್ರ ಪ್ರಯತ್ನಗಳು ನಡೆಯುತ್ತಿವೆ.

Crime News: ಬೇರೊಬ್ಬನ ಜತೆ ನಿಶ್ಚಿತಾರ್ಥ ಮಾಡಿಕೊಂಡಳೆಂದು ಪ್ರಿಯತಮೆ ಮೇಲೆ ಗುಂಡು ಹಾರಿಸಿದ ಪ್ರೇಮಿ

ಪ್ರಿಯತಮೆ ಮೇಲೆ ಗುಂಡು ಹಾರಿಸಿದ ಪ್ರಿಯಕರ

ಗುಜರಾತ್‌ನ ಅಹಮದಾಬಾದ್‌ನಲ್ಲಿ ಮಂಗಳವಾರ ಮಧ್ಯಾಹ್ನ ಆಘಾತಕಾರಿ ಘಟನೆಯೊಂದು ನಡೆದಿದ್ದು, 28 ವರ್ಷದ ಮಹಿಳೆಯೊಬ್ಬರ ಮೇಲೆ ಆಕೆಯ ಮಾಜಿ ಪ್ರಿಯಕರ ಅರ್ಬಾಜ್ ಎಂಬಾತ ಗುಂಡು ಹಾರಿಸಿದ್ದಾನೆ. ಮಹಿಳೆಯು ಇನ್ನೊಬ್ಬ ವ್ಯಕ್ತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಕ್ಕೆ ಕೋಪಗೊಂಡ ಅರ್ಬಾಜ್ ಆಕೆಯನ್ನು ಕೊಲೆ ಮಾಡಲು ಯೋಜನೆ ರೂಪಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Crime News: ಇನ್‌ಸ್ಟಾಗ್ರಾಂನಲ್ಲಿ ಲವ್ವಿ-ಡವ್ವಿ; ಫಿಲ್ಟರ್ ಬಳಸಿ ವಯಸ್ಸು ಮುಚ್ಚಿಟ್ಟ ಮಹಿಳೆ- ಕೊನೆಗೆ ಪ್ರಿಯಕರನಿಂದಲೇ ಕೊಲೆಯಾದ್ಳು

ಇನ್‌ಸ್ಟಾಗ್ರಾಂನಲ್ಲಿ ಶುರುವಾದ ಲವ್ವಿ-ಡವ್ವಿ ಕೊಲೆಯಲ್ಲಿ ಅಂತ್ಯ!

ಸಾಮಾಜಿಕ ಜಾಲತಾಣದಲ್ಲಿ ಪರಿಚಯ ಗೆಳತನವಾಗಿ, ಸ್ನೇಹ ಪ್ರೀತಿಯಾಗಿ ಹೋದ ಕೆಲವರು ಮೋಸಕ್ಕೆ ಒಳಗಾಗುತ್ತಿದ್ದಾರೆ. ಕೆಲವೊಮ್ಮೆ ಇಂತಹ ಪ್ರಕರಣಗಳಲ್ಲಿ ರಕ್ತಪಾತವೂ ನಡೆದಿದ್ದು, ಈ ಸೋಷಿಯಲ್ ಮೀಡಿಯಾ ಮೂಲಕ ಕಿರುಕುಳ ನೀಡುವುದು ಕೂಡ ಜಾಸ್ತಿಯಾಗುತ್ತಿದೆ. ಇದೀಗ ಇಂತದೇ ಒಂದು ಪ್ರಕರಣ ಬೆಳಕಿಗೆ ಬಂದಿದ್ದು, ಉತ್ತರ ಪ್ರದೇಶದ ಫರೂಕಾಬಾದ್ ಜಿಲ್ಲೆಯ 52 ವರ್ಷದ ಮಹಿಳೆಯೋರ್ವರನ್ನು ಹತ್ಯೆ ಮಾಡಿದ ಘಟನೆ ನಡೆದಿದೆ.

Loading...