ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ
Profile

Sushmitha Jain

jainsushmithajain@gmail.com

Articles
ಸುಧಾರಿತ ರಾಮ್‌ಜೆಟ್ ಕ್ಷಿಪಣಿ ತಂತ್ರಜ್ಞಾನದ ಯಶಸ್ವಿ ಪರೀಕ್ಷೆ; ಎಲೈಟ್ ರಾಷ್ಟ್ರಗಳ ಪಟ್ಟಿಗೆ ಸೇರಿದ ಭಾರತ

ಸುಧಾರಿತ ರಾಮ್‌ಜೆಟ್ ಕ್ಷಿಪಣಿ ಪರೀಕ್ಷೆ ಯಶಸ್ವಿ

ಘನ ಇಂಧನ ಡಕ್ಟೆಡ್ ರಾಮ್‌ಜೆಟ್ ತಂತ್ರಜ್ಞಾನವನ್ನು ಮಂಗಳವಾರ ಒಡಿಶಾ ಕರಾವಳಿಯ ಚಾಂಡಿಪುರದಲ್ಲಿರುವ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ (ITR)ನಿಂದ ಯಶಸ್ವಿಯಾಗಿ ಹಾರಾಟ ನಡೆಸಲಾಗಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ SFDR ತಂತ್ರಜ್ಞಾನದ ಯಶಸ್ವಿ ಪರೀಕ್ಷೆಗಾಗಿ ಡಿಆರ್‌ಡಿಒಗೆ ಅಭಿನಂದನೆ ಸಲ್ಲಿಸಿದ್ದಾರೆ.

ʼʼಅತ್ಯುತ್ತಮ ಒಪ್ಪಂದʼʼ: ಭಾರತ–ಅಮೆರಿಕ ವ್ಯಾಪಾರ ಒಪ್ಪಂದದ ಬಗ್ಗೆ ಸಚಿವ ಪಿಯೂಷ್ ಗೋಯಲ್ ಹೇಳಿದ್ದೇನು?

ಭಾರತ–ಅಮೆರಿಕ ವ್ಯಾಪಾರ ಒಪ್ಪಂದ ಅತ್ಯುತ್ತಮ: ಪಿಯೂಷ್ ಗೋಯಲ್

India -US Trade Deal: ಭಾರತ–ಅಮೆರಿಕ ಮಧ್ಯೆ ಒಪ್ಪಂದದ ವಿವರಗಳನ್ನು ಸಂಸತ್ತಿನಲ್ಲಿ ಹಂಚಿಕೊಳ್ಳಲು ಬಯಸಿದ್ದೆ. ಆದರೆ ಲೋಕಸಭೆಯಲ್ಲಿ ನಡೆದ ಗದ್ದಲದ ಕಾರಣ ಸಾಧ್ಯವಾಗಲಿಲ್ಲ ಎಂದು ಸಚಿವ ಪಿಯೂಷ್ ಗೋಯಲ್ ಹೇಳಿದರು. ಈ ವೇಳೆ ವಿರೋಧ ಪಕ್ಷದ ನಾಯಕರನ್ನು ತೀವ್ರವಾಗಿ ಟೀಕಿಸಿದ ಅವರು, ರಾಹುಲ್ ಗಾಂಧಿ ನಕಾರಾತ್ಮಕ ಮನಸ್ಥಿತಿಯ ವ್ಯಕ್ತಿ. ಅವರು ದೇಶದ ಬೆಳವಣಿಗೆಯನ್ನು ವಿರೋಧಿಸುತ್ತಿದ್ದಾರೆ ಎಂದು ಆರೋಪಿಸಿದರು.

ಭಾರತದ ಗೌಪ್ಯತಾ ಕಾನೂನು ಪಾಲಿಸಲು ಆಗದಿದ್ದರೆ ದೇಶ ಬಿಟ್ಟು ಹೋಗಿ: ವಾಟ್ಸ್‌ಆ್ಯಪ್‌ಗೆ ಸುಪ್ರೀಂ ಕೋರ್ಟ್ ಎಚ್ಚರಿಕೆ

ವಾಟ್ಸ್‌ಆ್ಯಪ್‌ ಗೌಪ್ಯತಾ ನೀತಿ: ಮೆಟಾಗೆ ಸುಪ್ರೀಂ ಕಠಿಣ ಎಚ್ಚರಿಕೆ

Supreme Court: ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸಿಕೊಳ್ಳುವುದನ್ನು ಯಾವುದೇ ರೀತಿಯಲ್ಲಿ ಸಹಿಸಿಕೊಳ್ಳುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿದೆ. ವಾಟ್ಸ್‌ಆ್ಯಪ್‌ ಗೌಪ್ಯತಾ ನೀತಿ ವಿಚಾರದಲ್ಲಿ ಮೆಟಾ ಸಂಸ್ಥೆಯನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದು, ಭಾರತೀಯ ಬಳಕೆದಾರರ ಗೌಪ್ಯತೆಯನ್ನು ಕಾಪಾಡಬೇಕು, ಅವರ ಡೇಟಾದ ಅಲ್ಪಾಂಶವನ್ನೂ ಅನಧಿಕೃತವಾಗಿ ಬಳಸಲು ಅವಕಾಶ ಇಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಗೌಪ್ಯತೆಯನ್ನು ಉಳಿಸಲು ಸಾಧ್ಯವಿಲ್ಲದಿದ್ದರೆ ಭಾರತದಲ್ಲಿ ಕಾರ್ಯನಿರ್ವಹಿಸುವ ಅಗತ್ಯ ಇಲ್ಲ ಎಂಬ ಕಠಿಣ ಸಂದೇಶ ರವಾನಿಸಿದೆ.

ಹೆಚ್ಚಿನ ಸುಂಕ, ಬೆದರಿಕೆ, ಒಪ್ಪಂದ; ಅಮೆರಿಕ-ಭಾರತ ವ್ಯಾಪಾರ ಡೀಲ್‌ ಸಾಗಿ ಬಂದ ಉದ್ವಿಗ್ನತೆಯ ಹಾದಿ

ಅಮೆರಿಕ–ಭಾರತ ವ್ಯಾಪಾರ ಒಪ್ಪಂದ ಘರ್ಷಣೆ ಹೇಗಿತ್ತು?

ಭಾರತ–ಅಮೆರಿಕ ನಡುವಿನ ದೀರ್ಘಕಾಲದ ಸುಂಕ ವಿವಾದಕ್ಕೆ ತೆರೆ ಬಿದ್ದಿದ್ದು, ಐತಿಹಾಸಿಕ ವ್ಯಾಪಾರ ಒಪ್ಪಂದಕ್ಕೆ ಎರಡೂ ದೇಶಗಳು ಒಪ್ಪಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತೀಯ ರಫ್ತುಗಳ ಮೇಲಿನ ಸುಂಕವನ್ನು ಶೇ. 50ರಿಂದ ಶೇ. 18ಕ್ಕೆ ಇಳಿಸುವುದಾಗಿ ಘೋಷಿಸಿದ್ದಾರೆ. ಇದರಿಂದ ಭಾರತೀಯ ರಫ್ತುದಾರರಿಗೆ ದೊಡ್ಡ ರಿಲೀಫ್ ಸಿಕ್ಕಿದೆ. ಪ್ರಧಾನಿ ಮೋದಿ ಜತೆಗಿನ ಮಾತುಕತೆಯ ಬಳಿಕ ಸ್ನೇಹ ಮತ್ತು ಪರಸ್ಪರ ಗೌರವದ ಸಂಕೇತವಾಗಿ ಈ ಒಪ್ಪಂದ ಜಾರಿಗೆ ಬಂದಿದೆ.

Astro Tips: ವಜ್ರ ಧಾರಣೆ: ಯಾವ ರಾಶಿಗೆ ಶುಭ? ಯಾರಿಗೆ ಅಶುಭ? ಜ್ಯೋತಿಷ್ಯ ಹೇಳುವುದೇನು?

ವಜ್ರ ಧರಿಸುವ ಮೊದಲು ಈ ವಿಷಯ ತಿಳಿದುಕೊಳ್ಳಿ

ಜ್ಯೋತಿಷ್ಯದಲ್ಲಿ ವಜ್ರಕ್ಕೆ ವಿಶೇಷ ಸ್ಥಾನವಿದ್ದು, ಅದು ಶುಕ್ರ ಗ್ರಹಕ್ಕೆ ಸಂಬಂಧಿಸಿದೆ. ಸರಿಯಾದ ವಿಧಾನದಲ್ಲಿ ಹಾಗೂ ಅನುಕೂಲಕರ ಜಾತಕ ಹೊಂದಿರುವವರು ವಜ್ರ ಧರಿಸಿದರೆ ಸುಖ, ಸಮೃದ್ಧಿ ಮತ್ತು ವೈವಾಹಿಕ ಜೀವನದಲ್ಲಿ ಸುಧಾರಣೆ ಕಾಣಬಹುದು. ಹಾಗಾದ್ರೆ ಜ್ಯೋತಿಷ್ಯ ಶಾಸ್ತ್ರ ಪ್ರಕಾರ ಯಾವಾಗ, ಯಾರು ವಜ್ರ ಧರಿಸಿದ್ದರೆ ಒಳ್ಳೆಯದು..? ಅದಕ್ಕೆ ಪಾಲಿಸಬೇಕಾದ ಕ್ರಮಗಳು ಏನು ಎಂಬುದನ್ನು ತಿಳಿದುಕೊಳ್ಳೋಣ.

Vastu Tips: ನಿಮ್ಮ ಮನೆಯ ದಕ್ಷಿಣ ಭಾಗದಲ್ಲಿ ನೆಡುವ ಈ ಗಿಡಗಳು ದುರದೃಷ್ಟ ತರುತ್ತವೆ!

ಮನೆಯ ದಕ್ಷಿಣ ದಿಕ್ಕಿನಲ್ಲಿ ಈ ಗಿಡ ನೆಟ್ಟರೆ ನೆಮ್ಮದಿಯಿಲ್ಲ!

ವಾಸ್ತು ಶಾಸ್ತ್ರದ ಪ್ರಕಾರ ಮನೆಯ ದಕ್ಷಿಣ ದಿಕ್ಕಿನಲ್ಲಿ ಕೆಲವು ಗಿಡಗಳನ್ನು ನೆಡುವುದು ಅಶುಭವೆಂದು ಪರಿಗಣಿಸಲಾಗಿದೆ. ತುಳಸಿ, ಮನಿ ಪ್ಲಾಂಟ್, ಶಮಿ, ರೋಸ್ಮರಿ ಮತ್ತು ಬಾಳೆ ಗಿಡಗಳನ್ನು ದಕ್ಷಿಣ ದಿಕ್ಕಿನಲ್ಲಿ ಇಟ್ಟರೆ ಆರ್ಥಿಕ ನಷ್ಟ, ಅಶಾಂತಿ ಮತ್ತು ಧನಾತ್ಮಕ ಶಕ್ತಿಯ ಕೊರತೆ ಉಂಟಾಗಬಹುದು ಎಂದು ನಂಬಲಾಗುತ್ತದೆ. ಈ ಗಿಡಗಳನ್ನು ಉತ್ತರ, ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿ ನೆಡುವುದರಿಂದ ಶುಭ ಫಲ ಮತ್ತು ಸಮೃದ್ಧಿ ದೊರೆಯುತ್ತದೆ ಎಂದು ವಾಸ್ತು ಶಾಸ್ತ್ರ ತಿಳಿಸುತ್ತದೆ.

ಮುನಿಸು ಬಿಟ್ಟು ರಾಹುಲ್ ಗಾಂಧಿಯನ್ನು ಮತ್ತೆ ಬೆಂಬಲಿಸಿದ ಶಶಿ ತರೂರ್

ರಾಹುಲ್ ಗಾಂಧಿಯ ನಿಲುವಿಗೆ ಶಶಿ ತರೂರ್ ಬೆಂಬಲ

ಬಿಜೆಪಿ ಸೇರ್ಪಡೆಯ ವದಂತಿ ಮತ್ತು ಪಕ್ಷದ ನಾಯಕತ್ವದೊಂದಿಗೆ ಮುನಿಸಿಕೊಂಡಿದ್ದಾರೆ ಎಂಬ ವರದಿಗಳ ನಡುವೆ, ಶಶಿ ತರೂರ್ ಮತ್ತೆ ರಾಹುಲ್ ಗಾಂಧಿ ಪರ ಧ್ವನಿ ಎತ್ತಿದ್ದಾರೆ. ಸದನದಲ್ಲಿ ಅಪ್ರಕಟಿತ ಪುಸ್ತಕ ವಿಚಾರವನ್ನು ಪ್ರಸ್ತಾಪಿಸಿ ಟೀಕೆಗೆ ಗುರಿಯಾದ ರಾಹುಲ್ ಗಾಂಧಿ ಅವರ ನಿಲುವಿಗೆ ತರೂರ್ ಬೆಂಬಲ ವ್ಯಕ್ತಪಡಿಸಿದ್ದು, ಇದು ಪಕ್ಷದ ಒಳರಾಜಕೀಯದಲ್ಲಿ ಮಹತ್ವದ ಬೆಳೆವಣಿಯಾಗಿದೆ.

ಚೀನಾ ಗಡಿ ಸಂಘರ್ಷ: ಮಾಜಿ ಸೇನಾಧಿಕಾರಿಯ ಅಪ್ರಕಟಿತ ಪುಸ್ತಕ ಪ್ರಸ್ತಾಪಿಸಿದ ರಾಹುಲ್ ಗಾಂಧಿ; ಸಂಸತ್‌ನಲ್ಲಿ ಗದ್ದಲ

ಅಪ್ರಕಟಿತ ಪುಸ್ತಕ ಉಲ್ಲೇಖಿಸಿ ಸದನದಲ್ಲಿ ಟೀಕೆಗೆ ಗುರಿಯಾದ ರಾಹುಲ್ ಗಾಂಧಿ

ಸಂಸತ್‌ನಲ್ಲಿ ಸೋಮವಾರ ರಾಷ್ಟ್ರಪತಿ ಭಾಷಣಕ್ಕೆ ಸಂಬಂಧಿಸಿದಂತೆ ವಂದನಾ ನಿರ್ಣಯದ ಮೇಲಿನ ಚರ್ಚೆ ಕೈಗೆತ್ತಿಕೊಳ್ಳಲಾಯಿತು. ಈ ವೇಳೆ ರಾಹುಲ್ ಗಾಂಧಿ, ಭಾರತದ ಮಾಜಿ ಸೇನಾಧಿಕಾರಿ ಎಂ.ಎಂ. ನರವಾಣೆ ಅವರ ಕುರಿತಾದ ಪುಸ್ತಕ ಪ್ರಕಟಿಸಲು ಕೇಂದ್ರ ಅನುಮೋದನೆ ನೀಡಿಲ್ಲ. 2020ರ ಭಾರತ-ಚೀನಾ ಗಡಿ ಸಂಘರ್ಷ ಸಮಯದಲ್ಲಿನ ಮಹತ್ವದ ಅಂಶಗಳು ಪುಸ್ತಕದಲ್ಲಿವೆ ಎಂದು ಹೇಳಿದರು.

ಫ್ರೀ ಮೊಮೊಸ್‌ ಆಸೆಗೆ 85 ಲಕ್ಷ ರುಪಾಯಿ ಮೌಲ್ಯದ ಚಿನ್ನಾಭರಣ ಕಳೆದುಕೊಂಡ 7ನೇ ತರಗತಿ ಬಾಲಕ

ಮೊಮೊಸ್‌ಗಾಗಿ ಮನೆಯಲ್ಲಿದ್ದ ಚಿನ್ನಾಭರಣ ಕೊಟ್ಟ ಬಾಲಕ

ಉತ್ತರ ಪ್ರದೇಶದಲ್ಲಿ 7ನೇ ತರಗತಿ ಬಾಲಕನಿಗೆ ಉಚಿತ ಮೊಮೊಸ್‌ ನೀಡುವ ಆಮಿಷ ತೋರಿಸಿ, ಮೂವರು ವ್ಯಾಪಾರಿಗಳು ಕುಟುಂಬದ ಸುಮಾರು 85 ಲಕ್ಷ ರುಪಾಯಿ ಮೌಲ್ಯದ ಚಿನ್ನಾಭರಣಗಳನ್ನು ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಬಾಲಕ ಮನೆಯ ಲಾಕರ್‌ನಲ್ಲಿದ್ದ ಆಭರಣಗಳನ್ನು ಹಂತ ಹಂತವಾಗಿ ತೆಗೆದುಕೊಂಡು ಅವರಿಗೆ ಒಪ್ಪಿಸಿದ್ದಾನೆ. ಅತ್ತೆ ಆಭರಣ ಕೇಳಿದ ವೇಳೆ ಕಬೋರ್ಡ್ ತೆರೆಯುತ್ತಿದ್ದಾಗ ವಿಷಯ ಬಹಿರಂಗವಾಗಿದೆ. ತಂದೆ ವಿಮಲೇಶ್ ಮಿಶ್ರಾ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಉತ್ತರ ಪ್ರದೇಶ ಮರ್ಯಾದಾ ಹತ್ಯೆ: ಥೂ ಇವನೆಂಥಾ ಅಪ್ಪ?! ಕರೆಂಟ್ ಶಾಕ್ ನೀಡಿ ಮಗಳನೇ ಕೊಂದ ರಾಕ್ಷಸ

ಪ್ರೀತಿಸಿದ್ದಕ್ಕೆ ವಿದ್ಯುತ್ ಶಾಕ್ ನೀಡಿ ಮಗಳನ್ನೇ ಕೊಲೆ ಮಾಡಿದ ತಂದೆ

ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯ ಥೋರ್ಹಾನ್ಸ್ ಗ್ರಾಮದಲ್ಲಿ ದೂರದ ಸಂಬಂಧಿಯನ್ನು ಮದುವೆಯಾಗಲು ಬಯಸಿದ 19 ವರ್ಷದ ಯುವತಿಯನ್ನು ಆಕೆಯ ತಂದೆ ಮತ್ತು ಸಹೋದರರು ‘ಗೌರವ ಹತ್ಯೆ’ ರೂಪದಲ್ಲಿ ವಿದ್ಯುತ್ ಶಾಕ್ ನೀಡಿ ಕೊಲೆ ಮಾಡಿದ್ದಾರೆ. ಘಟನೆಯನ್ನು ಅಪಘಾತವೆಂದು ತೋರಿಸಲು ಪ್ರಯತ್ನಿಸಿದರೂ, ಮರಣೋತ್ತರ ಪರೀಕ್ಷೆ ಮತ್ತು ತಾಂತ್ರಿಕ ಸಾಕ್ಷ್ಯಗಳಿಂದ ಸತ್ಯ ಬಹಿರಂಗವಾಗಿದೆ. ಯುವತಿಯ ಭಾವಿ ಪತಿ ನೀಡಿದ ದೂರಿನ ಮೇರೆಗೆ ಇಬ್ಬರನ್ನೂ ಬಂಧಿಸಿ, ಕೊಲೆ ಪ್ರಕರಣ ದಾಖಲಿಸಲಾಗಿದೆ.

ಸಮುದಾಯಗಳ ನಡುವೆ ಕೋಮು ಘರ್ಷಣೆ; ಮನೆಗಳು, ವಾಹನಗಳಿಗೆ ಬೆಂಕಿ, ಮೂವರ ಬಂಧನ

ಹತ್ಖೋಜ್‌ನಲ್ಲಿ ಸಾಮುದಾಯಿಕ ಘರ್ಷಣೆ, ಮೂವರು ಬಂಧನ

ಗರಿಯಾಬಂದ್ ಜಿಲ್ಲೆಯ ಹತ್ಖೋಜ್ ಗ್ರಾಮದಲ್ಲಿ ಎರಡು ಸಮುದಾಯಗಳ ನಡುವಿನ ಘರ್ಷಣೆ ಹಿಂಸಾಚಾರಕ್ಕೆ ತಿರುಗಿ, ಮನೆಗಳು ಮತ್ತು ವಾಹನಗಳಿಗೆ ಬೆಂಕಿ ಹಚ್ಚಲಾಯಿತು. ಪೊಲೀಸರು ಭಾರೀ ಬಂದೋಬಸ್ತ್ ಮಾಡಿ, ಹಳೆಯ ಪ್ರಕರಣಗಳಿಗೆ ಸಂಬಂಧಪಟ್ಟ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

Union Budget 2026: ಗ್ರಾಮೀಣ ಆರ್ಥಿಕತೆಗೆ ಬಲ, 2026ರ ಬಜೆಟ್‌ನಲ್ಲಿ ರೈತರು ಮತ್ತು ಮಹಿಳಾ ನೇತೃತ್ವದ ಉದ್ಯಮಗಳಿಗೆ ಆದ್ಯತೆ!

ಮೀನುಗಾರಿಕೆ, ಪಶುಸಂಗೋಪನೆಗೆ ಉತ್ತೇಜನ; ಸಬ್ಸಿಡಿ ಕಡಿತ ಘೋಷಣೆ

ಕೇಂದ್ರ ಬಜೆಟ್ 2026–27ರಲ್ಲಿ ರೈತರು, ಪಶುಸಂಗೋಪನೆ, ಮೀನುಗಾರಿಕೆ ಹಾಗೂ ಮಹಿಳಾ ನೇತೃತ್ವದ ಗ್ರಾಮೀಣ ಉದ್ಯಮಗಳಿಗೆ ವಿಶೇಷ ಒತ್ತು ನೀಡಲಾಗಿದೆ. ಮೀನುಗಾರಿಕೆ ವಲಯ ಅಭಿವೃದ್ಧಿಗೆ 500 ಅಮೃತ ಸರೋವರಗಳ ಯೋಜನೆ, ತೆಂಗು, ಗೋಡಂಬಿ ಮತ್ತು ಕೋಕೋ ಬೆಳೆಗಳ ಉತ್ಪಾದಕತೆ ಹೆಚ್ಚಿಸುವ ಕಾರ್ಯಕ್ರಮಗಳು ಹಾಗೂ ಕೃಷಿಗೆ ಬಹುಭಾಷಾ AI ಆಧಾರಿತ ಮಾಹಿತಿ ಉಪಕರಣ ಘೋಷಿಸಲಾಗಿದೆ.

Union Budget 2026: ಅತಿ ಚಿಕ್ಕ ಅವಧಿಯ ಬಜೆಟ್ ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

81 ನಿಮಿಷಗಳಲ್ಲಿ ಬಜೆಟ್ ಭಾಷಣ ಮುಗಿಸಿದ ನಿರ್ಮಲಾ ಸೀತಾರಾಮನ್

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2026–27ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಸುಮಾರು 81 ನಿಮಿಷಗಳ ಅವಧಿಯಲ್ಲಿ ಮಂಡಿಸಿದರು. ಇದು ಅವರ ಹಿಂದಿನ ದೀರ್ಘಾವಧಿಯ ಬಜೆಟ್ ಭಾಷಣಗಳಿಗೆ ಹೋಲಿಕೆ ಮಾಡಿದ್ದರೆ ತುಲನಾತ್ಮಕವಾಗಿ ಇದು ಅತೀ ಕಡಿಮೆ ಸಮಯದ್ದಾಗಿದೆ. ಬಿಜೆಪಿಯ ನೇತೃತ್ವದ ಎನ್‌ಡಿಎ ಸರ್ಕಾರದ ಮೂರನೇ ಅವಧಿಯ ಮೂರನೇ ಬಜೆಟ್ ಆಗಿದ್ದು, ಸೀತಾರಾಮನ್ ಅವರ ಒಂಬತ್ತನೇ ಬಜೆಟ್ ಇದಾಗಿದೆ.

Union Budget 2026: ಶಿಕ್ಷಣ–ಆರೋಗ್ಯ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ಭರ್ಜರಿ ಉತ್ತೇಜನ; ಪ್ರತಿ ಜಿಲ್ಲೆಯಲ್ಲಿ ಬಾಲಕಿಯರ ಹಾಸ್ಟೆಲ್‌, 3 ಹೊಸ ಆಯುರ್ವೇದ ಏಮ್ಸ್‌ ಸ್ಥಾಪನೆ

ಕೇಂದ್ರ ಬಜೆಟ್ 2026: ಶಿಕ್ಷಣ–ಆರೋಗ್ಯ ಕ್ಷೇತ್ರಕ್ಕೆ ಒತ್ತು

ಕೇಂದ್ರ ಬಜೆಟ್ 2026ರಲ್ಲಿ ಶಿಕ್ಷಣ, ಸಂಶೋಧನೆ ಹಾಗೂ ಆರೋಗ್ಯ ಕ್ಷೇತ್ರಗಳಿಗೆ ಸರ್ಕಾರ ವಿಶೇಷ ಆದ್ಯತೆ ನೀಡಲಾಗಿದೆ. ಪ್ರತಿ ಜಿಲ್ಲೆಯಲ್ಲಿ ಬಾಲಕಿಯರ ಹಾಸ್ಟೆಲ್‌ಗಳು, ಐದು ಹೊಸ ವಿಶ್ವವಿದ್ಯಾಲಯ ಪಟ್ಟಣ, 15,000 ಶಾಲೆಗಳಲ್ಲಿ ಪ್ರಯೋಗಾಲಯಗಳು, ಮೂರು ಹೊಸ ಆಯುರ್ವೇದ ಏಮ್ಸ್‌ಗಳ ಸ್ಥಾಪನೆ ಮತ್ತು ಯೋಗ–ಕ್ಷೇಮ ಸೇವೆಗಳ ವಿಸ್ತರಣೆ ಪ್ರಮುಖ ಘೋಷಣೆಗಳಾಗಿವೆ.

Union Budget 2026: ಕೇಂದ್ರ ಬಜೆಟ್ ಪ್ರತಿ ವರ್ಷ ಫೆಬ್ರವರಿ 1ರಂದೇ ಏಕೆ ಮಂಡಿಸಲಾಗುತ್ತದೆ?

ಫೆಬ್ರವರಿ 1ರಂದೇ ಬಜೆಟ್ ಮಂಡನೆ ಮಾಡೋದು ಯಾಕೆ?

ಪ್ರತಿ ವರ್ಷ ಫೆಬ್ರವರಿ 1ರಂದು ಹಣಕಾಸು ಸಚಿವರು ಕೇಂದ್ರ ಬಜೆಟ್ ಅನ್ನು ಮಂಡಿಸುತ್ತಾರೆ. ಈ ಮೊದಲು ಬಜೆಟ್ ಅನ್ನು ಫೆಬ್ರವರಿ ತಿಂಗಳ ಅಂತ್ಯದಲ್ಲಿ ಮಂಡಿಸಲಾಗುತ್ತಿತ್ತು. ಹಾಗಾದರೆ, ದಿನಾಂಕವನ್ನು ಫೆಬ್ರವರಿ 1ಕ್ಕೆ ಏಕೆ ಬದಲಾಯಿಸಲಾಯಿತು ಎಂಬುವುದನ್ನು ತಿಳಿಯೋಣ ಬನ್ನಿ

Union Budget 2026: ಹೊಸ ದಾಖಲೆ ಬರೆದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್; ಅತಿಹೆಚ್ಚು ಕೇಂದ್ರ ಬಜೆಟ್ ಮಂಡಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ

ನಿರ್ಮಲಾ ಸೀತಾರಾಮನ್ ಎಷ್ಟು ಬಜೆಟ್ ಮಂಡನೆ ಮಾಡಿದ್ದಾರೆ?

Nirmala Sitharaman: ಫೆಬ್ರವರಿ 1ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸತತ 9ನೇ ಕೇಂದ್ರ ಬಜೆಟ್ ಮಂಡಿಸಲು ಸಜ್ಜಾಗಿದ್ದಾರೆ. 2019ರಿಂದ 2024ರ ಮಧ್ಯಂತರ ಬಜೆಟ್ ಸೇರಿ ಈಗಾಗಲೇ 8 ಬಜೆಟ್ ಮಂಡಿಸಿರುವ ಅವರು, ಈ ಸಾಧನೆಯೊಂದಿಗೆ ಪಿ. ಚಿದಂಬರಂ ಅವರ ದಾಖಲೆಗೆ ಸಮಾನರಾಗಲಿದ್ದಾರೆ.

Union Budget 2026: ಸತತ 9ನೇ ಬಾರಿಗೆ ಬಜೆಟ್‌ ಮಂಡಿಸುತ್ತಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌; ಲೈವ್‌ ನೋಡುವುದು ಹೇಗೆ?

ಇಂದು ಕೇಂದ್ರ ಬಜೆಟ್‌ ಮಂಡನೆ

ಕೇಂದ್ರ ಬಜೆಟ್ 2026 ಮಂಡನೆ ಹಿನ್ನೆಲೆಯಲ್ಲಿ ಭಾರತೀಯ ಷೇರುಪೇಟೆ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ (ಬಿಎಸ್‌ಇ) ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ (ಎನ್‌ಎಸ್‌ಇ) ಭಾನುವಾರ ರಜಾದಿನವಾಗಿದ್ದರೂ ಕಾರ್ಯ ನಿರ್ವಹಿಸಲಿದೆ. ಕೇಂದ್ರ ಬಜೆಟ್ ಮಂಡನೆಯಾಗುವ ಕಾರಣ ಷೇರುಪೇಟೆಯಲ್ಲಿ ಲೈವ್‌ ಟ್ರೇಡಿಂಗ್ ಸೆಷನ್ ಕೂಡ ಇರಲಿದೆ ಎಂದು ಷೇರು ವಿನಿಮಯ ಕೇಂದ್ರಗಳು ಸುತ್ತೋಲೆಯಲ್ಲಿ ತಿಳಿಸಿವೆ. ಭಾರತೀಯ ಷೇರು ವಿನಿಮಯ ಕೇಂದ್ರಗಳು ಸಾಮಾನ್ಯವಾಗಿ ಎಲ್ಲ ಶನಿವಾರ ಮತ್ತು ಭಾನುವಾರ ವಹಿವಾಟು ನಡೆಸುವುದಿಲ್ಲ. ಕೇಂದ್ರ ಬಜೆಟ್ ಮಂಡನೆ ಈ ಹಿಂದೆ ಭಾನುವಾರ ನಡೆಸಿದ ಉದಾಹರಣೆಗಳೂ ಇದೆ. ಆಗ ವಹಿವಾಟು ನಡೆಸಿದ್ದೂ ಇದೆ.

Astro Tips: ಶನಿವಾರ ಕಪ್ಪು ಹಸು ಎದುರಿಗೆ ಬಂದರೆ ಏನರ್ಥ ಗೊತ್ತಾ?

ಶನಿವಾರ ಕಪ್ಪು ಹಸು ಎದುರಿಗೆ ಬಂದರೆ ಏನರ್ಥ ಗೊತ್ತಾ?

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿವಾರದಂದು ಕೆಲವು ವಿಶೇಷ ಶುಭ ಸೂಚನೆಗಳು ಕಾಣಿಸಿಕೊಂಡರೆ, ಅದನ್ನು ಶನಿದೇವರ ಕೃಪೆಯ ಲಕ್ಷಣವೆಂದು ಭಾವಿಸಲಾಗುತ್ತದೆ. ಹಾಗಾದ್ರೆ ಶನಿವಾರ ಯಾವ ವಸ್ತುಗಳು ಕಣ್ಣಿಗೆ ಬಿದ್ದರೆ ಒಳ್ಳೆಯದು ಎಂದು ತಿಳಿದುಕೊಳ್ಳಬೇಕು? ಹಾಗಾದ್ರೆ ಈ ಸುದ್ದಿ ಓದಿ.

Vastu Tips: : ವಾಸ್ತುಶಾಸ್ತ್ರದ ಪ್ರಕಾರ ಎಂಥ ಸಮಯದಲ್ಲಿಯೂ ಯಾರಿಂದಲೂ ಈ ವಸ್ತುಗಳನ್ನು ಸಾಲ ಪಡೆಯಬೇಡಿ!

ಇನ್ನೊಬ್ಬರ ಬಳಿಯಿಂದ ಪೆನ್ನು ಸಾಲ ಪಡೆಯುವುದು ದುರದೃಷ್ಟ!

ನಮ್ಮ ದೈನಂದಿನ ಜೀವನದಲ್ಲಿ ಸ್ನೇಹಿತರು ಅಥವಾ ಸಂಬಂಧಿಕರಿಂದ ವಸ್ತುಗಳನ್ನು ಎರವಲು ಪಡೆಯುವುದು ಸಾಮಾನ್ಯ. ಆದರೆ ವಾಸ್ತುಶಾಸ್ತ್ರದ ಪ್ರಕಾರ, ಕೈಗಡಿಯಾರ, ಪೊರಕೆ, ಪೆನ್ನು ಮತ್ತು ಉಪ್ಪು ಮುಂತಾದ ಕೆಲವು ವಸ್ತುಗಳು ವ್ಯಕ್ತಿಯ ಅದೃಷ್ಟ ಹಾಗೂ ಹಣೆಬರಹಕ್ಕೆ ಸಂಬಂಧಿಸಿರುತ್ತವೆ. ಇವುಗಳನ್ನು ಎರವಲು ಕೊಡುವುದು ಅಥವಾ ಪಡೆಯುವುದು ಅಶುಭಕರವೆಂದು ನಂಬಲಾಗುತ್ತದೆ.

ಧರ್ಮಸ್ಥಳ ಬುರುಡೆ ಪ್ರಕರಣ: SIT ಮಧ್ಯಂತರ ವರದಿ ಬಹಿರಂಗಗೊಳಿಸಲು ವಿಳಂಬ ಏಕೆ? ಸರ್ಕಾರಕ್ಕೆ ಸುರೇಶ್ ಕುಮಾರ್ ಪ್ರಶ್ನೆ

ಬುರುಡೆ ಗ್ಯಾಂಗ್ ವಿರುದ್ಧ ಸುರೇಶ್ ಕುಮಾರ್ ಕಿಡಿ

ಧರ್ಮಸ್ಥಳದ ಕುರಿತಾದ ಸತ್ಯಾಸತ್ಯತೆ ಹೊರಬರಲಿ ಎಂದು ಸರ್ಕಾರ ಎಸ್‌ಐಟಿ ರಚಿಸಿತ್ತು. "ಸಾಮಾನ್ಯ ಪೊಲೀಸ್‌ ತನಿಖೆಯಿಂದ ಜನರಲ್ಲಿ ನಂಬಿಕೆ ಉಳಿಯುವುದಿಲ್ಲ ಎಂಬ ಕಾರಣಕ್ಕೆ ಎಸ್‌ಐಟಿ ಮಾಡಲಾಗಿತ್ತು, ಆದರೆ ತನಿಖೆ ಯಾವ ಹಂತದಲ್ಲಿದೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ಸುರೇಶ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು. “ಧರ್ಮಸ್ಥಳ ವಿಚಾರದಲ್ಲಿ SIT ಅಗತ್ಯವಿಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದರು. ಆದರೂ SIT ರಚನೆ ಮಾಡಲಾಯಿತು. ನಂತರ SIT ಸದಸ್ಯರು ಹೊರಬಂದರು. ಸತ್ಯ ಹೊರಬರಲಿ ಎಂಬ ಕಾರಣಕ್ಕೆ ನಾವು ವಿರೋಧಿಸಲಿಲ್ಲ. ಈಗ ತನಿಖೆ ಯಾವ ಹಂತದಲ್ಲಿದೆ?” ಎಂದು ಪ್ರಶ್ನಿಸಿದರು.

ದೆಹಲಿ ಪೊಲೀಸ್‌ ಕಮಾಂಡೋ ಹತ್ಯೆ ಕೇಸ್‌; ಕೊಲೆಗೂ ಮುನ್ನ ವಿಡಿಯೋ ಮಾಡಿದ್ದ ಪಾಪಿ ಪತಿ

ಗರ್ಭಿಣಿ ಪತ್ನಿಯನ್ನು ಡಂಬಲ್ಸ್‌ನಿಂದ ಹೊಡೆದು ಕೊಲೆ ಮಾಡಿದ ಪತಿ

ದೆಹಲಿಯ ಪೊಲೀಸ್ ಇಲಾಖೆಯ SWAT ಟೀಮ್‌ನಲ್ಲಿ ಕಮಾಂಡೊ ಆಗಿದ್ದ 27 ವರ್ಷದ ನಾಲ್ಕು ತಿಂಗಳ ಗರ್ಭಿಣಿ ಮಹಿಳೆಯನ್ನು ಪತಿಯೇ ಕ್ರೂರವಾಗಿ ಹತ್ಯೆ ಮಾಡಿದ ಪ್ರಕರಣದಲ್ಲಿ ಮತ್ತೊಂದು ಬೆಚ್ಚಿಬೀಳಿಸುವ ಸಂಗತಿ ಬೆಳಕಿಗೆ ಬಂದಿದೆ. ಪತ್ನಿ ತನ್ನ ಸಹೋದರಿಯೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದ ವೇಳೆ, ಆರೋಪಿ ಅಂಕುರ್ ಚೌಧರಿ ಡಂಬ್ಬೆಲ್‌ನಿಂದ ಹಲ್ಲೆ ಆರಂಭಿಸಿದ್ದು, ನಂತರ ಫೋನ್ ಕಿತ್ತುಕೊಂಡು “ಈ ಮಾತನ್ನು ರೆಕಾರ್ಡ್ ಮಾಡಿಕೊ, ಪೊಲೀಸರಿಗೆ ಸಾಕ್ಷಿಯಾಗುತ್ತದೆ. ನಾನು ನಿನ್ನ ತಂಗಿಯನ್ನು ಕೊಲ್ಲುತ್ತಿದ್ದೇನೆ” ಎಂದು ಹೇಳಿದ್ದ ಎನ್ನಲಾಗಿದೆ.

Astro Tips: ದಾಂಪತ್ಯ ಸುಖ, ಐಶ್ವರ್ಯ ಮತ್ತು ಅದೃಷ್ಟ ವೃದ್ಧಿಗಾಗಿ ಹೀಗೆ ಮಾಡಿ

ಶುಕ್ರವಾರ ಪತ್ನಿಗೆ ಉಡುಗೊರೆ ನೀಡಿದ್ರೆ ಅದೃಷ್ಟಲಕ್ಷ್ಮಿ ಖುಷ್!

ವಿವಾಹಿತರು ಶುಕ್ರವಾರ ಸಂಜೆ ಲಕ್ಷ್ಮಿ ದೇವಿಯನ್ನು ವಿಧಿವಿಧಾನಗಳೊಂದಿಗೆ ಪೂಜಿಸುವುದು ಅತ್ಯಂತ ಶುಭಕರವೆಂದು ಧರ್ಮಗ್ರಂಥಗಳು ಹೇಳುತ್ತವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶುಕ್ರವಾರ ಈ 6 ಸರಳ ಉಪಾಯಗಳನ್ನು ಪಾಲಿಸಿದರೆ, ದಾಂಪತ್ಯ ಜೀವನದಲ್ಲಿ ನೆಮ್ಮದಿ ದೊರೆಯುವುದರ ಜೊತೆಗೆ ಹಣಕಾಸಿನ ಸ್ಥಿತಿಯೂ ಬಲವಾಗುತ್ತದೆ ಎಂದು ನಂಬಿಕೆ ಇದೆ.

Vastu Tips: Vastu Tips: ಈ ವಾಸ್ತು ನಿಯಮಗಳನ್ನು ಪಾಲಿಸಿದ್ರೆ ಮನೆಯಲ್ಲಿ ಅತ್ತೆ-ಸೊಸೆ ಜಗಳವೇ ಇರೊಲ್ಲ!

ಮನೆಯಲ್ಲಿ ಅತ್ತೆ ಸೊಸೆ ಸಂಬಂಧ ಗಟ್ಟಿಯಾಗಲು ಇಲ್ಲಿದೆ ವಾಸ್ತು ಟಿಪ್ಸ್!

ಅತ್ತೆ–‌ ಸೊಸೆ ನಡುವಿನ ಭಿನ್ನಾಭಿಪ್ರಾಯಗಳು ಮನೆಯ ಶಾಂತಿಗೆ ಧಕ್ಕೆ ತರಬಹುದು. ವಾಸ್ತು ಶಾಸ್ತ್ರದ ಪ್ರಕಾರ ನೈಋತ್ಯ ಮತ್ತು ಈಶಾನ್ಯ ದಿಕ್ಕಿನ ಸರಿಯಾದ ಬಳಕೆ, ಸ್ಫಟಿಕ ಕಲ್ಲು, ದೀಪ, ಮಲಗುವ ದಿಕ್ಕು ಹಾಗೂ ಬಣ್ಣಗಳ ಆಯ್ಕೆ, ಜೊತೆಗೆ ಆಧ್ಯಾತ್ಮಿಕ ಆಚರಣೆಗಳನ್ನು ಪಾಲಿಸಿದರೆ ಗೃಹಕ್ಲೇಶ ನಿವಾರಣೆಯಾಗಿ ಕುಟುಂಬದಲ್ಲಿ ಸೌಹಾರ್ದತೆ ಮತ್ತು ನೆಮ್ಮದಿ ಹೆಚ್ಚಾಗುತ್ತದೆ.

ಪಂಚಭೂತಗಳಲ್ಲಿ ಅಜಿತ್ ಪವಾರ್‌ ಲೀನ; ಕಣ್ಣೀರು ಹಾಕುತ್ತಲೇ ಚಿತೆಗೆ ಅಗ್ನಿಸ್ಪರ್ಶ ಮಾಡಿದ ಮಗ

ಬಾರಾಮತಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಜಿತ್‌ ಪವಾರ್‌ ಅಂತ್ಯಕ್ರಿಯೆ.

Ajit Pawar: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಪಾರ್ಥಿವ ಶರೀರವನ್ನು ಬುಧವಾರ ಸಂಜೆ ಪುಣೆ ಜಿಲ್ಲೆಯ ಬಾರಾಮತಿಯಲ್ಲಿರುವ ವಿದ್ಯಾ ಪ್ರತಿಷ್ಠಾನಕ್ಕೆ ತರಲಾಗಿತ್ತು. ಈ ವೇಳೆ ದುಃಖಭರಿತ ವಾತಾವರಣ ಆವರಿಸಿದ್ದು, ಎನ್‌ಸಿಪಿ ಕಾರ್ಯಕರ್ತರು ಹಾಗೂ ಸ್ಥಳೀಯರು ಕಣ್ಣೀರಿನೊಂದಿಗೆ ದಿವಂಗತ ನಾಯಕನಿಗೆ ನಮನ ಸಲ್ಲಿಸಿದರು. “ಅಜಿತ್ ದಾದಾ ಅಮರ್ ರಹೇ”, “ಅಜಿತ್ ದಾದಾ ಪರತ್ ಯಾ” ಎಂಬ ಘೋಷಣೆಗಳು ಪ್ರತಿಧ್ವನಿಸಿದವು.

Loading...