ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Profile

ವಿದ್ಯಾ ಇರ್ವತ್ತೂರು

vidyaIrvathur@gmail.com

Articles
Vastu Tips: ಮನೆಯ ಈ ಭಾಗದಲ್ಲಿ ಎಂದಿಗೂ ಚಪ್ಪಲಿ ಇಡಬೇಡಿ

ಅಪ್ಪಿತಪ್ಪಿಯೂ ಮನೆಯ ಈ ಭಾಗದಲ್ಲಿ ಚಪ್ಪಲಿ ಇಡಬೇಡಿ

ಮನೆಯ ಪ್ರತಿಯೊಂದು ದಿಕ್ಕು ಕೂಡ ಪವಿತ್ರವಾಗಿರುತ್ತದೆ. ಒಂದೊಂದು ದಿಕ್ಕಿನಲ್ಲಿ ಒಂದೊಂದು ದೇವರು ಇರುತ್ತಾರೆ ಎನ್ನುವ ನಂಬಿಕೆ ಹಿಂದೂಗಳದ್ದು. ಹೀಗಿರುವಾಗ ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಕೆಲವೊಂದು ಭಾಗದಲ್ಲಿ ಶೂ, ಚಪ್ಪಲಿಗಳನ್ನು ಇಡಲೇಬಾರದು. ಇದರಿಂದ ಮನೆ ಮಂದಿಗೆ ಸಮಸ್ಯೆಗಳು ಎದುರಾಗುತ್ತವೆ ಎನ್ನಲಾಗಿದೆ. ಈ ಕುರಿತು ಇಲ್ಲಿದೆ ಮಾಹಿತಿ.

Manipur Violence: ಮಣಿಪುರದಲ್ಲಿ ಎಟಿ ನಾಯಕನ ಬಂಧನ ಖಂಡಿಸಿ ಉಗ್ರ ಪ್ರತಿಭಟನೆ; ಪೆಟ್ರೋಲ್‌ ಸುರಿದುಕೊಂಡು ಬೆಂಬಲಿಗರಿಂದ  ಬೆದರಿಕೆ

ಮಣಿಪುರ ಜನಾಂಗೀಯ ಘರ್ಷಣೆ ತನಿಖೆಗೆ ಎದುರಾಗುತ್ತಿದೆ ಭಾರಿ ವಿರೋಧ

ಮೈಥಿ ಮತ್ತು ಕುಕಿ ಸಮುದಾಯಗಳ ಘರ್ಷಣೆಯಲ್ಲಿ ಪಾಲ್ಗೊಂಡಿರುವ ಆರೋಪದಲ್ಲಿ ಭದ್ರತಾ ಪಡೆಗಳು ಎಟಿ ನಾಯಕ ಕಾನನ್ ಸಿಂಗ್ ಅವರನ್ನು ಶನಿವಾರ ಬಂಧಿಸಿತ್ತು. ಇದಾದ ಬಳಿಕ ಶನಿವಾರ ರಾತ್ರಿ ಮಣಿಪುರದ ರಾಜಧಾನಿ ಇಂಫಾಲ್‌ನಲ್ಲಿ ಪ್ರತಿಭಟನೆಗಳು ಭುಗಿಲೆದ್ದವು. ಈ ವೇಳೆ ಯುವಕರ ಗುಂಪೊಂದು ತಮ್ಮ ತಲೆಗೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳುವುದಾಗಿ ಬೆದರಿಕೆ ಹಾಕಿದೆ.

Viral Video: ಬೀಚ್‌ನಲ್ಲಿ ರೊಮ್ಯಾನ್‌ ಮಾಡುತ್ತ ಮೈಮರೆತ ಜೋಡಿ: ಮಹಿಳೆ ನೀರುಪಾಲು...ವೈರಲ್ ಆಯ್ತು ಭಯಾನಕ ವಿಡಿಯೊ

ಬೀಚ್‌ನಲ್ಲಿ ರೋಮ್ಯಾನ್ಸ್‌ನಲ್ಲಿದ್ದಾಗ ನಡೆಯಿತು ದುರಂತ

ಸುಂದರ ಕ್ಷಣಗಳನ್ನು ಕಳೆಯುವ ಆಸೆಯಲ್ಲಿ ಅವರಿಬ್ಬರು ಬೀಚ್‌ಗೆ ಬಂದಿದ್ದರು. ಆದರೆ ಅಲ್ಲಿ ಆಗಿದ್ದೇ ಬೇರೆ. ಮಹಿಳೆ ತನ್ನ ಗೆಳೆಯನೊಂದಿಗೆ ಬೀಚ್‌ಗೆ ಬಂದಿದ್ದು, ಜತೆಜತೆಯಾಗಿ ಹೆಜ್ಜೆ ಹಾಕುತ್ತಿದ್ದಾಗಲೇ ಬೃಹತ್ ಅಲೆಯೊಂದು ಎದುರಾಗಿದೆ. ಈ ಅಲೆಗೆ ಸಿಲುಕಿ ಮಹಿಳೆ ಕೊಚ್ಚಿಕೊಂಡು ಹೋಗಿರುವ ಘಟನೆ ರಷ್ಯಾದಲ್ಲಿ ನಡೆದಿದೆ. ಇದರ ವಿಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

Kamal Haasan: ಭಾಷಾ ಹೇರಿಕೆ ವಿರುದ್ಧ ಕರ್ನಾಟಕದ ಪರವಾಗಿದ್ದೇನೆ ಎಂದ ಕಮಲ್

ವಿವಾದದ ಬಳಿಕ ಕನ್ನಡಿಗರೊಂದಿಗೆ ಇದ್ದೇನೆ ಎಂದ ಕಮಲ್ ಹಾಸನ್

Kannada Language Row: ಕಮಲ್‌ ಹಾಸನ್‌ ದಕ್ಷಿಣದಲ್ಲಿ ಹಿಂದಿ ಭಾಷಾ ಹೇರಿಕೆ ಬಗ್ಗೆ ಮಾತನಾಡಿದ್ದಾರೆ. ದಕ್ಷಿಣ ರಾಜ್ಯಗಳಲ್ಲಿ ಹಿಂದಿ ಹೇರಿಕೆ ಮಾಡಲಾಗುತ್ತಿದೆ ಎಂಬ ಆರೋಪಗಳಿಗೆ ತಮ್ಮ ಹೊಸ ಚಿತ್ರ 'ಥಗ್ ಲೈಫ್' ಪ್ರಚಾರದ ವೇಳೆ ಪ್ರತಿಕ್ರಿಯಿಸಿರುವ ಅವರು, ನಾವು ಹಿಂದಿ ಭಾಷೆ ಹೇರಿಕೆ ಮಾಡದಿದ್ದರೂ ಕಲಿಯುತ್ತೇವೆ. ನಮಗೆ ಭಾಷೆ ಹೇರಿಕೆ ಮಾಡುವ ಅಗತ್ಯವಿಲ್ಲ. ಈ ವಿಚಾರದಲ್ಲಿ ನಾನು ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತಮಿಳುನಾಡಿನ ಪರವಾಗಿ ನಿಲ್ಲುತ್ತೇನೆ ಎಂದು ಹೇಳಿದ್ದಾರೆ.

Viral Video: ಮದುವೆಯಾದ ಬೆನ್ನಲ್ಲೇ ಭರ್ಜರಿಯಾಗಿ ಹೆಜ್ಜೆ ಹಾಕಿದ ಸಂಸದೆ ಮಹುವಾ ಮೊಯಿತ್ರಾ; ವಿಡಿಯೊ  ವೈರಲ್

ಮದುವೆ ನೃತ್ಯದ ವಿಡಿಯೊ ಹಂಚಿಕೊಂಡ ಮಹುವಾ ಮೊಯಿತ್ರಾ

ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಹಿರಿಯ ವಕೀಲ ಮತ್ತು ಬಿಜೆಡಿ ಮಾಜಿ ಸಂಸದ ಪಿನಾಕಿ ಮಿಶ್ರಾ ಅವರನ್ನು ಇತ್ತೀಚೆಗೆ ಜರ್ಮನಿಯಲ್ಲಿ ವಿವಾಹವಾಗಿದ್ದು, ನವ ದಂಪತಿಗಳ ನೃತ್ಯದ ವಿಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಈ ವಿಡಿಯೊವನ್ನು ಮಹುವಾ ಮೊಯಿತ್ರಾ ಹಂಚಿಕೊಂಡಿದ್ದಾರೆ.

Self Harming: ಅಲ್ಲಾನಿಗೆ ಮೇಕೆ ಬದಲು ನನ್ನ ತ್ಯಾಗ ಮಾಡುತ್ತೇನೆ ಎಂದು ಹೇಳಿ ವ್ಯಕ್ತಿ ಆತ್ಮಹತ್ಯೆ

ಮೇಕೆ ಬದಲು ತನ್ನನ್ನು ತಾನೇ ಬಲಿ ಕೊಟ್ಟುಕೊಂಡ ವೃದ್ಧ!

ಬಕ್ರೀದ್ ಹಬ್ಬದ ಸಲುವಾಗಿ ಶನಿವಾರ ಬೆಳಗ್ಗೆ ಸುಮಾರು 10 ಗಂಟೆಗೆ ಸುಲ್ತಾನ್ ಸೈಯದ್ ಮಖ್ದೂಮ್ ಅಶ್ರಫ್ ಶಾ ಅವರ ದರ್ಗಾದಲ್ಲಿ ಈದ್ ಪ್ರಾರ್ಥನೆಯನ್ನು ಸಲ್ಲಿಸಿ ಬಂದ ಇಶ್ ಮೊಹಮ್ಮದ್ ಅನ್ಸಾರಿ ಅವರು ತಮ್ಮ ಮನೆಯ ಪಕ್ಕದ ಗುಡಿಸಲಿನಲ್ಲಿ ಚಾಕುವಿನಿಂದ ಕತ್ತು ಸೀಳಿಕೊಂಡು ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾರೆ.

Indore Couple missing: ಇಂದೋರ್‌ ಜೋಡಿ ಮಿಸ್ಸಿಂಗ್‌ ಕೇಸ್‌ನಲ್ಲಿ ಮಹತ್ವದ ಸುಳಿವು; ಆ ದಿನ ಅವರ ಜೊತೆಗಿದ್ದ ಆ ಮೂವರು ಯಾರು?

ಇಂದೋರ್ ದಂಪತಿ ನಾಪತ್ತೆ ಕೇಸ್‌; ಮಹತ್ವ ಸುಳಿವು ಪತ್ತೆ

ಮೇಘಾಲಯದ ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯಲ್ಲಿ ಹನಿಮೂನ್ ನಡೆಸುತ್ತಿದ್ದ ರಾಜಾ ರಘುವಂಶಿ ಮತ್ತು ಅವರ ಪತ್ನಿ ಸೋನಮ್ ಸೊಹ್ರಾದಲ್ಲಿ (Indore Couple missing) ನಾಪತ್ತೆಯಾಗಿದ್ದರು. ರಾಜಾ ರಘುವಂಶಿ ಅವರ ಶವ ಪತ್ತೆಯಾಗಿದ್ದು, ಸೋನಮ್ ಇನ್ನೂ ಕಾಣೆಯಾಗಿದ್ದಾರೆ. ಅವರನ್ನು ಪತ್ತೆಹಚ್ಚಲು ಶೋಧ ಕಾರ್ಯಾಚರಣೆ ಮುಂದುವರಿದಿದೆ.

Physical assault: ಐಸಿಯುನಲ್ಲೇ ನಡೀತು ಹೀನ ಕೃತ್ಯ! ಮತ್ತು ಬರೋ ಇಂಜೆಕ್ಷನ್‌ ಕೊಟ್ಟು ಮಹಿಳೆ ಮೇಲೆ ಅತ್ಯಾಚಾರ

ಶಾಕಿಂಗ್‌! ಐಸಿಯುನಲ್ಲಿದ್ದ ಮಹಿಳೆ ಮೇಲೆ ಅತ್ಯಾಚಾರ

ಐಸಿಯು ವಾರ್ಡ್ (ICU Ward) ನಲ್ಲಿ ದಾಖಲಾಗಿದ್ದ 32 ವರ್ಷದ ಮಹಿಳೆಗೆ ನಿದ್ರೆ ಬರುವ ಇಂಜೆಕ್ಷನ್ ನೀಡಿ ನರ್ಸಿಂಗ್ ಸಿಬ್ಬಂದಿಯೊಬ್ಬ (Nursing Staff) ಅತ್ಯಾಚಾರ (Physical assault) ನಡೆಸಿರುವ ಘಟನೆ ರಾಜಸ್ಥಾನದ (Rajasthan) ಅಲ್ವಾರ್ ನಲ್ಲಿರುವ ವೈದ್ಯಕೀಯ ಕಾಲೇಜಿನಲ್ಲಿ ಜೂನ್ 4ರಂದು ರಾತ್ರಿ ನಡೆದಿದೆ. ಮಹಿಳೆಯು ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಲು ಆಸ್ಪತ್ರೆಗೆ ದಾಖಲಾಗಿದ್ದರು.

Health Tips: ತರಹೇವಾರಿ ಒಣ ದ್ರಾಕ್ಷಿಯಲ್ಲಿ ಯಾವುದು ಒಳ್ಳೆಯದು ಗೊತ್ತಿದೆಯೇ?

ಒಣ ದ್ರಾಕ್ಷಿ: ಯಾವ ಬಣ್ಣದ್ದು ಒಳ್ಳೆಯದು?

ಹಣ್ಣುಗಳ ಬಣ್ಣ, ರುಚಿ ನೋಡಿ ಕೆಲವೊಮ್ಮೆ ಮೋಸ ಹೋಗುವುದು ಇದೆ. ಆದರೆ ಒಣ ದ್ರಾಕ್ಷಿ ವಿಚಾರದಲ್ಲಿ ಈ ಬಗ್ಗೆ ಹೆಚ್ಚು ಯೋಚಿಸಬೇಕು. ಯಾಕೆಂದರೆ ಮಾರುಕಟ್ಟೆಯಲ್ಲಿ ತರಹೇವಾರಿಯಾಗಿ ಸಿಗುವ ಒಣದ್ರಾಕ್ಷಿಗಳು ವಿಭಿನ್ನ ಗುಣ ಲಕ್ಷಣಗಳೊಂದಿಗೆ ವಿಭಿನ್ನ ರೀತಿಯ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಯಾವುದು, ಹೇಗೆ ಎನ್ನುವ ಮಾಹಿತಿ ಇಲ್ಲಿದೆ.

Sonali Bendre: ರಾಜ್ ಠಾಕ್ರೆ ಜತೆ ಸಂಬಂಧ ವದಂತಿ; ಬೇಸರವಾಗಿದೆ...ಇದರಲ್ಲಿ ನನ್ನ ಕುಟುಂಬವೂ ಭಾಗಿಯಾಗಿದೆ  ಎಂದ  ನಟಿ ಸೋನಾಲಿ ಬೇಂದ್ರೆ

ರಾಜ್ ಠಾಕ್ರೆ ಜತೆ ಸಂಬಂಧ ವದಂತಿಗೆ ಸ್ಪಷ್ಟನೆ ಕೊಟ್ಟ ನಟಿ ಸೋನಾಲಿ ಬೇಂದ್ರೆ

ಬಾಲಿವುಡ್ ನಟಿ ಸೋನಾಲಿ ಬೇಂದ್ರೆ ಮೇಲೆ ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಂಎನ್ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಅವರಿಗೆ ಕ್ರಶ್ ಇತ್ತು ಎನ್ನುವ ಗಾಸಿಪ್ ಗಳು ಇತ್ತೀಚೆಗೆ ಜೋರಾಗಿ ಕೇಳಿ ಬಂದಿದೆ. ಇದಕ್ಕೆ ಈಗ ನಟಿ ಸ್ಪಷ್ಟನೆಯನ್ನು ನೀಡಿದ್ದಾರೆ. ರಾಜ್ ಠಾಕ್ರೆಗೂ ತಮಗೂ ಏನು ಸಂಬಂಧ, ಈ ಗಾಸಿಪ್ ಹುಟ್ಟಲು ಕರಣವಾಗಿದ್ದಾದರೂ ಏನು ಎನ್ನುವ ಕುರಿತು ಸಂದರ್ಶನವೊಂದರಲ್ಲಿ ನಟಿ ಹೇಳಿಕೊಂಡಿದ್ದಾರೆ.

Bollywood Actors: ಸಸ್ಯಾಹಾರವನ್ನೇ ಇಷ್ಟಪಡುವ ಬಾಲಿವುಡ್ ಸೆಲೆಬ್ರಿಟಿಗಳು ಇವರು

ಸಸ್ಯಾಹಾರವೆಂದರೆ ಈ ಬಾಲಿವುಡ್‌ ಕಲಾವಿದರಿಗೆ ಪ್ರೀತಿ

ಇತ್ತೀಚೆಗೆ ಹಲವು ಬಾಲಿವುಡ್ ಸೆಲೆಬ್ರಿಟಿಗಳು ಆರೋಗ್ಯ, ನೀತಿಶಾಸ್ತ್ರ ಅಥವಾ ಪ್ರಾಣಿಗಳ ಮೇಲಿನ ಪ್ರೀತಿಯಿಂದ ಪ್ರೇರಿತರಾಗಿ ಸಸ್ಯಾಹಾರಿ ಜೀವನ ಶೈಲಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇವರಲ್ಲಿ ಅಮಿತಾಭ್‌ ಬಚ್ಚನ್, ಜಾನ್ ಅಬ್ರಹಾಂ, ಶಾಹಿದ್ ಕಪೂರ್ ಕೂಡ ಸೇರಿದ್ದಾರೆ. ಇವರು ಸಸ್ಯಾಹಾರವನ್ನು ಹೆಚ್ಚು ಇಷ್ಟ ಪಟ್ಟು ತಿನ್ನುತ್ತಿರುವುದಾಗಿ ಅನೇಕ ಬಾರಿ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ.

Indian Actresses: ಇವರು ಸಿನಿ ತಾರೆಯರು ಮಾತ್ರವಲ್ಲ ವೈದ್ಯರೂ ಹೌದು

ವೈದ್ಯ ಪದವಿ ಪಡೆದರೂ ಚಿತ್ರರಂಗದಲ್ಲಿ ಹೆಸರು ಮಾಡಿರುವ ಸಿನಿ ತಾರೆಯರು

ಸಿನಿಮಾ ರಂಗಕ್ಕೆ ಬಂದ ಮೇಲೆ ಓದು ಸಾಧ್ಯವಿಲ್ಲ. ಹೆಚ್ಚು ಓದಿದವರು ಸಿನಿಮಾರಂಗಕ್ಕೆ ಬರಲು ಸಾಧ್ಯವಿಲ್ಲ ಎಂಬುದನ್ನು ಈ ನಟಿಯರು ಸುಳ್ಳು ಮಾಡಿದ್ದಾರೆ. ಯಾಕೆಂದರೆ ಇವರೆಲ್ಲ ಓದಿ ವೈದ್ಯರಾದವರು. ಆದರೂ ಇವತ್ತು ವಿಶ್ವದಾದ್ಯಂತ ಸಿನಿ ತಾರೆಯರಾಗಿ ಹೆಸರುಗಳಿಸಿದ್ದಾರೆ. ವೈದ್ಯರಾಗಿದ್ದುಕೊಂಡು ಸಿನಿಮಾರಂಗದಲ್ಲಿ ಹೆಸರು ಮಾಡಿರುವ 6 ಪ್ರಮುಖ ತಾರೆಯರ ಕುರಿತು ಇಲ್ಲಿದೆ ಮಾಹಿತಿ.

Eid Fashion: ಬಾಲಿವುಡ್ ತಾರೆಯರ ಟ್ರೆಡೀಶನಲ್‌ ಲುಕ್‌ ಹೇಗಿದೆ ಗೊತ್ತಾ? ಈ ಫೋಟೋಸ್‌ ನೋಡಿ

ಬಾಲಿವುಡ್ ತಾರೆಯರ ಟ್ರೆಡೀಶನಲ್‌ ಲುಕ್‌ಗೆ ಮರುಳಾಗದವರುಂಟೇ?

ಹಬ್ಬಕ್ಕೆ (Eid Fashion) ಹೊಸ ಉಡುಗೆತೊಡುಗೆಗಳನ್ನು ಖರೀದಿ ಮಾಡುವುದು ಸಂಪ್ರದಾಯ. ಈ ಬಾರಿ ಈದ್ ಸಂಭ್ರಮ ಹೆಚ್ಚಿಸಲು ಹೊಸ ಬಟ್ಟೆ ಖರೀದಿ ಮಾಡುವ ಯೋಚನೆ ಇದ್ದರೆ ಬಾಲಿವುಡ್ ಸೆಲೆಬ್ರಿಟಿಗಳು ತೊಟ್ಟಿರುವ ಈ ದಿರಿಸುಗಳು ಮಾರುಕಟ್ಟೆಯಲ್ಲಿ ಇದೆಯೇ ಎಂಬುದನ್ನು ನೋಡಬಹುದು. ಕರೀನಾ ಕಪೂರ್, ಸಾರ ಅಲಿ ಖಾನ್, ಸೋನಾಕ್ಷಿ ಸೇರಿದಂತೆ ಇನ್ನು ಹಲವು ಬಾಲಿವುಡ್ ನಟಿಯರು ಸಾಂಪ್ರದಾಯಿಕ ಉಡುಗೆಯಲ್ಲಿ ಈ ಬಾರಿ ಈದ್ ಆಚರಿಸಿಕೊಂಡಿದ್ದಾರೆ.

Dakota Johnson: ಟ್ರಾನ್ಸ್‌ಪರೆಂಟ್‌ ಬಟ್ಟೆ ಧರಿಸಿ ಪಡ್ಡೆ ಹುಡುಗರ ಟೆಂಪರೇಚರ್‌ ಹೆಚ್ಚಿಸಿದ ಸ್ಟಾರ್‌ ನಟಿ- ಫೋಟೋಗಳು ಇಲ್ಲಿವೆ

ಟ್ರಾನ್ಸ್‌ಪರೆಂಟ್‌ ಬಟ್ಟೆಯಲ್ಲಿ ಮಿಂಚಿದ ನಟಿ-ನೆಟ್ಟಿಗರು ಫುಲ್‌ ಫಿದಾ!

ಸುಮಾರು ಎಂಟು ವರ್ಷಗಳ ಕಾಲ ಗಾಯಕ ಕ್ರಿಸ್ ಮಾರ್ಟಿನ್ ಜೊತೆಗೆ ಡೇಟಿಂಗ್ ನಡೆಸುತ್ತಿದ್ದ ನಟಿ (actress) ಡಕೋಟಾ ಜಾನ್ಸನ್ (Dakota Johnson) ಬೇರೆಬೇರೆಯಾದ ಬಳಿಕ ರಿವೆಂಜ್ ಡ್ರೆಸ್ ನಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ತಮ್ಮ ಮುಂಬರುವ ಚಿತ್ರ ಮೆಟೀರಿಯಲಿಸ್ಟ್‌ ನ ಪ್ರಚಾರದಲ್ಲಿ ಪಾಲ್ಗೊಂಡ ಡಕೋಟಾ ಕಪ್ಪು ಬಣ್ಣದ ಬಹುತೇಕ ಪಾರದರ್ಶಕ ಉಡುಗೆಯಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ. ಅವರು ಲೇಟ್ ನೈಟ್ ವಿತ್ ಸೇಥ್ ಮೇಯರ್ಸ್ ಸ್ಟುಡಿಯೋದಲ್ಲಿ ಇತ್ತೀಚೆಗೆ ಕಾಣಿಸಿಕೊಂಡರು.

Los Angeles Violence: ಲಾಸ್ ಏಂಜಲೀಸ್ ನಲ್ಲಿ ಭುಗಿಲೆದ್ದ ಗಲಭೆ-  44 ಮಂದಿ ಅರೆಸ್ಟ್‌

ಲಾಸ್ ಏಂಜಲೀಸ್‌ನಲ್ಲಿ ಭುಗಿಲೆದ್ದ ಗಲಭೆ- 44 ಮಂದಿ ಅರೆಸ್ಟ್‌

ICE immigration raid: ನಕಲಿ ದಾಖಲೆಗಳನ್ನು ಹೊಂದಿರುವವರ ಸಾಮೂಹಿಕ ಗಡಿಪಾರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶಿಸಿದ ಬಳಿಕ ಫೆಡರಲ್ ವಲಸೆ ಅಧಿಕಾರಿಗಳು ಲಾಸ್ ಏಂಜಲೀಸ್‌ನಾದ್ಯಂತ 44 ಮಂದಿಯನ್ನು ಬಂಧಿಸಿದ್ದಾರೆ. ಫೆಡರಲ್ ಅಧಿಕಾರಿಗಳ ದಾಳಿ ಕುರಿತು ಮಾಹಿತಿ ಹಬ್ಬುತ್ತಿದ್ದಂತೆ ಹಲವೆಡೆ ಪ್ರತಿಭಟನೆಗಳು ಭುಗಿಲೆದ್ದವು. ಫೆಡರಲ್ ಬಂಧನ ಕೇಂದ್ರಗಳ ಹೊರಗೆ ನೂರಾರು ಪ್ರತಿಭಟನಾಕಾರರು ಸೇರಿ ಬಂಧಿತರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.

Anti Naxal Operation: ತಲೆಗೆ 45ಲಕ್ಷ ರೂ. ಇನಾಮು ಹೊಂದಿದ್ದ ನಕ್ಸಲ್‌ ಕಮಾಂಡರ್‌  ಎನ್‌ಕೌಂಟರ್‌

45ಲಕ್ಷ ರೂ. ಇನಾಮು ಹೊಂದಿದ್ದ ನಕ್ಸಲ್‌ ಕಮಾಂಡರ್‌ ಎನ್‌ಕೌಂಟರ್‌

ಬಿಜಾಪುರ ಜಿಲ್ಲೆಯ ರಾಷ್ಟ್ರೀಯ ಉದ್ಯಾನವನ ಪ್ರದೇಶದಲ್ಲಿ ನಡೆದ ನಕ್ಸಲ್ ವಿರೋಧಿ ಕಾರ್ಯಾಚರಣೆ (Anti Naxal Operation) ಸಂದರ್ಭದಲ್ಲಿ ಭದ್ರತಾ ಪಡೆಗಳು ಉನ್ನತ ನಕ್ಸಲ್ ಕಮಾಂಡರ್ ಭಾಸ್ಕರ್ ಅವರನ್ನು ಗುಂಡಿಕ್ಕಿ ಕೊಂದಿದೆ. ತೆಲಂಗಾಣದ ಆದಿಲಾಬಾದ್ ಜಿಲ್ಲೆಯ ನಿವಾಸಿಯಾಗಿರುವ ಭಾಸ್ಕರ್, ಮಾವೋವಾದಿಗಳ ಟಿಎಸ್‌ಸಿಯ ಮಂಚೇರಿಯಲ್-ಕೊಮರಾಂಭೀಮ್ (ಎಂಕೆಬಿ) ವಿಭಾಗದ ಕಾರ್ಯದರ್ಶಿಯಾಗಿದ್ದ.

Vastu Tips: ಬೆಳಗ್ಗೆ ಕಸ ಗುಡಿಸುವಾಗ ಈ ನಿಯಮ ಪಾಲಿಸಿ; ಮನೆಗೆ ಸಂಪತ್ತು ಆಕರ್ಷಿಸಿ

ಸಂಪತ್ತನ್ನು ಆಕರ್ಷಿಸಲು ಬೆಳಗ್ಗೆ ಈ ನಿಯಮ ಪಾಲಿಸಿ

ಪ್ರತಿಯೊಂದು ಮನೆಯಲ್ಲೂ ಸಾಮಾನ್ಯವಾಗಿ ಬೆಳಗ್ಗೆ ಕಸ ಗುಡಿಸಿ ಸ್ವಚ್ಛಗೊಳಿಸುವ ವಾಡಿಕೆ ಇದೆ. ಆದರೆ ಈ ಸಂದರ್ಭದಲ್ಲಿ ಕೆಲವೊಂದು ನಿಯಮಗಳನ್ನು ಪಾಲಿಸುವುದರಿಂದ ಮನೆಗೆ ಸುಖ, ಶಾಂತಿ, ಸಮೃದ್ಧಿಯನ್ನು ಆಹ್ವಾನಿಸಬಹುದು. ವಾಸ್ತು ಶಾಸ್ತ್ರದ ಪ್ರಕಾರ ಬೆಳಗ್ಗೆ ಮನೆಯನ್ನು ಸ್ವಚ್ಛಗೊಳಿಸುವುದು ಸಕಾರಾತ್ಮಕ ಶಕ್ತಿಯನ್ನು ಆಹ್ವಾನಿಸಲು ಇರುವ ಒಂದು ಪ್ರಮುಖ ದಾರಿ.

Health Tips: ಹುಷಾರ್‌! ರೋಗಗಳನ್ನು ಹೊತ್ತು ತರಬಹುದು ಪಾರಿವಾಳಗಳು

ಪಾರಿವಾಳಗಳು ರೋಗ ಹೊತ್ತು ಬರಬಹುದು ಎಚ್ಚರ

ಪಾರಿವಾಳಗಳು (Pigeons) ಇದ್ದಲ್ಲೆಲ್ಲ ಹತ್ತಿಯಂಥ ಪುಕ್ಕಗಳು, ಗರಿಯ ತುಣುಕುಗಳು ಬಿದ್ದಿರುವುದು ಅಥವಾ ಗಾಳಿಯಲ್ಲಿ ತೇಲಾಡುತ್ತಿರುವುದು ಕಾಣುತ್ತದೆ. ಮಾತ್ರವಲ್ಲ ನೆಲದ ನಕ್ಷೆಯೇ ಬದಲಾಗುವಂತೆ ಹಕ್ಕಿಪಿಕ್ಕೆಯ ರಾಶಿಯೂ ಕಾಣುತ್ತದೆ. ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಇವುಗಳು ಮೂಲ ಕಾರಣವಾಗುತ್ತದೆ.

Indian Railways: ರೈಲ್ವೇ ಪ್ರಯಾಣಿಕರೇ ಅಲರ್ಟ್‌...ಅಲರ್ಟ್‌! ತತ್ಕಾಲ್ ಟಿಕೆಟ್‌ ಬುಕ್ಕಿಂಗ್‌ಗೆ ಬಂದಿದೆ ಹೊಸ ರೂಲ್‌

ಗಮನಿಸಿ....! ತತ್ಕಾಲ್ ಟಿಕೆಟ್‌ ಬುಕ್ಕಿಂಗ್‌ಗೆ ಬಂದಿದೆ ಹೊಸ ರೂಲ್‌

ತತ್ಕಾಲ್ ಯೋಜನೆಯ ದುರಪಯೋಗದ ಬಗ್ಗೆ ಭಾರಿ ಟೀಕೆಗಳು ಕೇಳಿ ಬಂದ ಬಳಿಕ ಇದೀಗ ಇದನ್ನು ತಡೆಗಟ್ಟಲು ರೈಲ್ವೆ ಇಲಾಖೆಯು (Indian Railways) ಒಂದು ಮಹತ್ವದ ಹೆಜ್ಜೆಯನ್ನು ಇಟ್ಟಿದೆ. ಪ್ರಯಾಣದ ಕೊನೆಯ ಹಂತದಲ್ಲಿ ಟಿಕೆಟ್ ಬುಕ್ಕಿಂಗ್ ಮಾಡುವಾಗ ಹೆಚ್ಚಿನ ಪಾರದರ್ಶಕತೆಯನ್ನು ತೋರ್ಪಡಿಸಲು ಜೂನ್ ತಿಂಗಳ ಅಂತ್ಯದ ವೇಳೆಗೆ ತತ್ಕಾಲ್ ಟಿಕೆಟ್ ಬುಕ್ಕಿಂಗ್ ಗಳಿಗೆ ಇ-ಆಧಾರ್ ದೃಢೀಕರಣವನ್ನು ಕಡ್ಡಾಯಗೊಳಿಸಲಾಗುವುದು ಎಂದು ಭಾರತೀಯ ರೈಲ್ವೆ ಇಲಾಖೆ ಹೇಳಿದೆ.

Thug Life: ಕಮಲ್ ಹಾಸನ್‌ ಹಠದಿಂದ ಥಗ್ ಲೈಫ್ ಚಿತ್ರತಂಡಕ್ಕೆ ಆದ ನಷ್ಟ ಎಷ್ಟು ಗೊತ್ತೇ?

ಕರ್ನಾಟಕದಲ್ಲಿ ಬ್ಯಾನ್: ಥಗ್ ಲೈಫ್ ಚಿತ್ರತಂಡಕ್ಕೆ ಆದ ನಷ್ಟವೆಷ್ಟು?

ಕಮಲ್ ಹಾಸನ್ ಹೇಳಿಕೆಯಿಂದ ಉಂಟಾಗಿರುವ ವಿವಾದದಿಂದಾಗಿ ಕರ್ನಾಟಕದಲ್ಲಿ ಥಗ್ ಲೈಫ್ (Thug Life) ಚಿತ್ರ ಬಿಡುಗಡೆಯಾಗಿಲ್ಲ. ಇದು ಚಿತ್ರತಂಡಕ್ಕೆ ಬಹುದೊಡ್ಡ ನಷ್ಟವನ್ನು ಉಂಟು ಮಾಡಲಿದೆ. ಯಾಕೆಂದರೆ ಚಿತ್ರದ ಮೊದಲ ದಿನದ ಕಲೆಕ್ಷನ್ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ (box office collection) ಸೋಲುವ ಭೀತಿಯನ್ನು ಉಂಟು ಮಾಡಿದೆ.

Eve Jobs Wedding: ಸ್ಟೀವ್ ಜಾಬ್ಸ್  ಪುತ್ರಿಯ ಮದ್ವೆಗೆ ಭರ್ಜರಿ ತಯಾರಿ; ವರನಾರು ಗೊತ್ತೇ?

ಸ್ಟೀವ್ ಜಾಬ್ಸ್ ಪುತ್ರಿಯ ಮದ್ವೆಗೆ ಭರ್ಜರಿ ತಯಾರಿ; ವರನಾರು ಗೊತ್ತೇ?

ಆಪಲ್ ಕಂಪೆನಿಯ ಸಹ ಸಂಸ್ಥಾಪಕ ( Apple co-founder ) ಸ್ಟೀವ್ ಜಾಬ್ಸ್ (Steve Jobs) ಅವರ ಕಿರಿಯ ಪುತ್ರಿ ಈವ್ ಜಾಬ್ಸ್ (Eve Jobs Wedding) ಈ ವರ್ಷದ ಆಗಸ್ಟ್‌ನಲ್ಲಿ ವೈವಾಹಿಕ ಜೀವನಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. ಈವ್ ಜಾಬ್ಸ್ ಅವರು 2023ರಿಂದ ಡೇಟಿಂಗ್ ನಡೆಸುತ್ತಿರುವ ಗೆಳೆಯ ಹ್ಯಾರಿ ಚಾರ್ಲ್ಸ್ (Harry Charles) ಜೊತೆ ಇಂಗ್ಲೆಂಡ್‌ನ (England) ಗ್ರಾಮಾಂತರ ಪ್ರದೇಶವಾದ ಕೋಟ್ಸ್‌ವೋಲ್ಡ್ಸ್‌ನಲ್ಲಿ ಅದ್ದೂರಿಯಾಗಿ ವಿವಾಹವಾಗಲಿದ್ದಾರೆ.

Fraud case: ಬ್ಯಾಂಕ್‌ ಮ್ಯಾನೇಜರ್‌ನಿಂದಲೇ ಭಾರೀ ದೋಖಾ! ಜನರ ದುಡ್ಡನ್ನು ಈಕೆ ಮಾಡಿದ್ದೇನು ಗೊತ್ತಾ?

ಜನರ ದುಡ್ಡಿನಲ್ಲಿ ಬ್ಯಾಂಕ್‌ ಮ್ಯಾನೇಜರ್‌ ಫುಲ್‌ ಮಜಾ!

ಸಾಮಾನ್ಯವಾಗಿ ಎಲ್ಲರೂ ಬ್ಯಾಂಕ್ ನಲ್ಲಿ ಹಣವಿಟ್ಟರೆ ಅದು ಸುರಕ್ಷಿತವಾಗಿರುತ್ತದೆ ಎಂದುಕೊಳ್ಳುತ್ತಾರೆ. ಆದರೆ ಇದು ಗ್ರಾಹಕರಿಗೆ ಶಾಕ್ ಕೊಡುವ ಸುದ್ದಿಯಾಗಿದೆ. ರಾಜಸ್ಥಾನದ ಕೋಟಾದ ಬ್ಯಾಂಕ್ ಅಧಿಕಾರಿಯೊಬ್ಬರು ಗ್ರಾಹಕರ 4 ಕೋಟಿ ರೂ.ಗಿಂತ ಹೆಚ್ಚಿನ ಹಣವನ್ನು ದುರ್ಬಳಕೆ (Fraud case) ಮಾಡಿಕೊಂಡಿದ್ದಾರೆ. ಅವರು ಅದನ್ನು ಷೇರುಗಳಲ್ಲಿ ಹೂಡಿಕೆ ಮಾಡಿ ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭ ಗಳಿಸುವ ಉದ್ದೇಶವನ್ನು ಹೊಂದಿದ್ದರು.

Elon Musk: ತಾರಕಕ್ಕೇರಿದ ಸ್ನೇಹಿತರ ಮುನಿಸು- ತಮ್ಮ ಬೆಂಬಲ ಇಲ್ಲದಿದ್ದರೆ ಟ್ರಂಪ್‌ ಸೋಲುತ್ತಿದ್ದರು ಎಂದ ಎಲಾನ್‌ ಮಸ್ಕ್‌

ತಾರಕಕ್ಕೇರಿದ ಟ್ರಂಪ್‌- ಮಸ್ಕ್‌ ಮುನಿಸು!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇತ್ತೀಚೆಗೆ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅವರು ಎಲೆಕ್ಟ್ರಿಕ್ ವಾಹನಗಳಿಗೆ (ಇವಿ) ಸಬ್ಸಿಡಿಗಳನ್ನು ತೆಗೆದುಹಾಕಿರುವುದಕ್ಕೆ ಅಸಮಾಧಾನಗೊಂಡಿದ್ದಾರೆ ಎಂದು ಆರೋಪಿಸಿರುವುದಕ್ಕೆ ಪ್ರತಿಯಾಗಿ ಮಾತನಾಡಿರುವ ಎಲಾನ್ ಮಸ್ಕ್, ತಮ್ಮ ಬೆಂಬಲವಿಲ್ಲದೆ ಇದ್ದಿದ್ದರೆ ಡೊನಾಲ್ಡ್ ಟ್ರಂಪ್ 2024 ರ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋಲುತ್ತಿದ್ದರು ಎಂದು ಹೇಳಿದರು.

Operation Sindoor: ಭಾರತ-ಪಾಕ್ ನಡುವೆ ಡೊನಾಲ್ಡ್ ಟ್ರಂಪ್‌ ಮಧ್ಯಸ್ಥಿಕೆ ವಿಚಾರ; ಶಶಿ ತರೂರ್‌ ಖಡಕ್‌ ಪ್ರತಿಕ್ರಿಯೆ

ಭಾರತವು ಯಾರಿಂದಲೂ ಮಧ್ಯಸ್ಥಿಕೆಯನ್ನು ಕೋರಿಲ್ಲ: ಶಶಿ ತರೂರ್

ಭಯೋತ್ಪಾದನೆ ವಿರುದ್ಧ ಭಾರತದ ಶೂನ್ಯ ಸಹಿಷ್ಣುತೆಯ ಸಂದೇಶವನ್ನು ಜಗತ್ತಿಗೆ ಸಾರಲು ಹೊರಟಿರುವ ಕಾಂಗ್ರೆಸ್ ಸಂಸದ ಶಶಿ ತರೂರ್ ನೇತೃತ್ವದ ನಿಯೋಗವು ವಾಷಿಂಗ್ಟನ್ ಡಿಸಿಯಲ್ಲಿದ್ದು,ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು ಹಲವು ವಿಚಾರಗಳನ್ನು ಪ್ರಸ್ತಾವಿಸಿದ್ದಾರೆ. ಭಾರತ- ಪಾಕಿಸ್ತಾನದ ನಡುವೆ ಮಧ್ಯಸ್ಥಿಕೆ ನಡೆಸಿದ್ದೇನೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಹೇಳಿಕೆಯನ್ನು ತಿರಸ್ಕರಿಸಿರುವ ಅವರು ಭಾರತವು ತನ್ನ ಸಂಘರ್ಷದಲ್ಲಿ ಯಾರಿಂದಲೂ ಮಧ್ಯಸ್ಥಿಕೆಯನ್ನು ಕೋರಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.