ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Profile

ವಿದ್ಯಾ ಇರ್ವತ್ತೂರು

[email protected]

ಕಾರ್ಕಳ ತಾಲೂಕಿನ ಇರ್ವತ್ತೂರಿನವರಾದ ಇವರು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದು ಕನ್ನಡಪ್ರಭ ದಿನಪತ್ರಿಕೆಯಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭಿಸಿದರು. ಬಳಿಕ ಉದಯವಾಣಿ ದಿನಪತ್ರಿಕೆಯಲ್ಲಿ ಹಿರಿಯ ಉಪಸಂಪಾದಕಿಯಾಗಿ ಕಾರ್ಯನಿರ್ವಹಿಸಿದ್ದು, ನವಸಮಾಜ, ನ್ಯೂಸ್ ಆ್ಯರೋ, ವಿಸ್ತಾರ ನ್ಯೂಸ್ ವೆಬ್‌ಸೈಟ್‌ನಲ್ಲೂ ಕಾರ್ಯ ನಿರ್ವಹಿಸಿದ್ದಾರೆ. ಮುದ್ರಣ ಮತ್ತು ಡಿಜಿಟಲ್ ಮಾಧ್ಯಮದಲ್ಲಿ ಸುಮಾರು 16 ವರ್ಷ ಕೆಲಸ ಮಾಡಿದ ಅನುಭವವನ್ನು ಹೊಂದಿದ್ದು, ಬರವಣಿಗೆ, ಓದು, ಪ್ರವಾಸ ಇವರ ನೆಚ್ಚಿನ ಹವ್ಯಾಸ. 2024ರ ಆಗಸ್ಟ್‌ನಿಂದ ವಿಶ್ವವಾಣಿ ವೆಬ್‌ಸೈಟ್‌ಗೆ ಸುದ್ದಿ, ವಿಶೇಷ ಲೇಖನಗಳನ್ನು ಬರೆಯುತ್ತಿದ್ದಾರೆ.

Articles
ಹೊರ್ಮುಜ್ ಜಲಸಂಧಿ ದಾಟಿ ಭಾರತಕ್ಕೆ ಬರಲು ಸಿದ್ಧವಾಗಿದೆ ಇನ್ನೆರಡು ಎಲ್‌ಪಿಜಿ ಟ್ಯಾಂಕರ್‌ಗಳು

ಭಾರತಕ್ಕೆ ಬರಲಿದೆ ಇನ್ನೆರಡು ಎಲ್‌ಪಿಜಿ ಟ್ಯಾಂಕರ್‌ಗಳು

ಇರಾನ್ ಯುದ್ಧ ಪ್ರಾರಂಭವಾದಾಗಿನಿಂದ ತೈಲ ಸರಕು ಸಾಗಾಟಕ್ಕೆ ಬಹುದೊಡ್ಡ ಅಡ್ಡಿಯಾಗಿರುವುದು ಹೊರ್ಮುಜ್ ಜಲಸಂಧಿ. ಇಸ್ರೇಲ್ ಮತ್ತು ಯುಎಸ್ ಸೇನಾ ಪಡೆಯು ಇರಾನ್ ಮೇಲೆ ನಡೆಸಿದ ದಾಳಿಗೆ ಪ್ರತಿಯಾಗಿ ಇರಾನ್ ಹೊರ್ಮುಜ್ ಜಲಸಂಧಿಯನ್ನು ಮುಚ್ಚಿ ಮಧ್ಯ ಪ್ರಾಚ್ಯ ರಾಷ್ಟ್ರಗಳ ಸರಕು ಸಾಗಣೆಗೆ ಅಡ್ಡಿ ಪಡಿಸಿದೆ. ಈ ಮೂಲಕ ಜಾಗತಿಕ ಮಾರುಕಟ್ಟೆ ಮೇಲೆ ಪರಿಣಾಮ ಉಂಟು ಮಾಡಿದೆ. ಆದರೆ ಇದೀಗ ಈ ಜಲಸಂಧಿಯಿಂದ ಎರಡು ಎಲ್‌ಪಿಜಿ ಟ್ಯಾಂಕರ್‌ಗಳು ಭಾರತಕ್ಕೆ ಬರಲು ಸಿದ್ಧವಾಗಿದೆ.

ʼʼಹೇಡಿಗಳುʼʼ: ಇರಾನ್‌ ಮೇಲಿನ ಯುದ್ಧಕ್ಕೆ ಬೆಂಬಲ ನೀಡದ ನ್ಯಾಟೋ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಗರಂ

ನ್ಯಾಟೋ ಕೇವಲ ಕಾಗದದ ಹುಲಿ ಎಂದ ಡೊನಾಲ್ಡ್ ಟ್ರಂಪ್

ಇರಾನ್ ವಿರುದ್ಧ ಮಿಲಿಟರಿ ಸಹಾಯ ಕೇಳಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸೇನಾ ಪಡೆಗೆ ಯಾರೂ ಸಹಾಯ ಮಾಡಲು ಮುಂದೆ ಬಾರದೇ ಇರುವುದರಿಂದ ಆಕ್ರೋಶಗೊಂಡ ಅವರು ಅಮೆರಿಕದ ಮಿತ್ರರಾಷ್ಟ್ರಗಳನ್ನು ಹೇಡಿಗಳು ಎಂದು ಕರೆದಿದ್ದು, ಅಮೆರಿಕವಿಲ್ಲದೇ ಇದ್ದರೆ ನ್ಯಾಟೋ ಕೇವಲ ಕಾಗದದ ಹುಲಿ ಎಂದು ಹೇಳಿದ್ದಾರೆ.

ಎಟಿಎಂನಲ್ಲಿ ಹಣ ಬಾರದೇ ಇರುವುದಕ್ಕೆ ಸಿಕ್ಕಿತು  3.28 ಲಕ್ಷ ರೂ. ಪರಿಹಾರ

ಬ್ಯಾಂಕ್ ಆಫ್ ಬರೋಡಾ ವಿರುದ್ಧ ಹೋರಾಟಕ್ಕೆ ಸಿಕ್ಕಿತು ಗೆಲುವು

ಎಟಿಎಂನಿಂದ ಹಣ ಪಡೆಯಲು ಹೋದವನಿಗೆ ಹಣ ಸಿಗಲಿಲ್ಲ. ಬ್ಯಾಂಕ್ ಖಾತೆಯಿಂದ ಹಣ ಕಡಿತಗೊಂಡಿತ್ತು. ಈ ಬಗ್ಗೆ ದೂರು ಸಲ್ಲಿಸಿದ ಸೂರತ್‌ನ ಜಿಲ್ಲಾ ಗ್ರಾಹಕ ವಿವಾದ ಪರಿಹಾರ ಆಯೋಗವು ಒಂಬತ್ತು ವರ್ಷಗಳ ಬಳಿಕ ಗ್ರಾಹಕನಿಗೆ 3.28 ಲಕ್ಷ ರೂ. ಪರಿಹಾರವನ್ನು ಪಾವತಿಸುವಂತೆ ಸಾರ್ವಜನಿಕ ವಲಯದ ಬ್ಯಾಂಕಿಗೆ ಆದೇಶಿಸಿದೆ.

ಅಮೆರಿಕ ಇರಾನ್ ಸಂಘರ್ಷ: ರಿಯಾದ್‌ನಲ್ಲಿ ಮತ್ತೊಬ್ಬ ಭಾರತೀಯ ಬಲಿ

ರಿಯಾದ್‌ನಲ್ಲಿ ಮತ್ತೊಬ್ಬ ಭಾರತೀಯ ಬಲಿ

ಅಮೆರಿಕ ಮತ್ತು ಇರಾನ್ ಸಂಘರ್ಷಕ್ಕೆ ಸೌದಿ ಅರೇಬಿಯಾದ ರಿಯಾದ್‌ನಲ್ಲಿ ಭಾರತೀಯನೊಬ್ಬ ಬಲಿಯಾಗಿದ್ದಾನೆ. ಮಾರ್ಚ್ 18ರಂದು ಭಾರತೀಯ ಪ್ರಜೆ ಸಾವನ್ನಪ್ಪಿದ್ದು, ಈ ಮೂಲಕ ರಿಯಾದ್‌ನಲ್ಲಿ ಸಾವಿನ ಸಂಖ್ಯೆ 6ಕ್ಕೇರಿದೆ. ಎಂಟಿ ಸೇಫ್‌ಸೀ ವಿಷ್ಣು ತೈಲ ಟ್ಯಾಂಕರ್‌ನಿಂದ ರಕ್ಷಿಸಲ್ಪಟ್ಟ ೧೫ ಭಾರತೀಯ ಸಿಬ್ಬಂದಿ ಮಾರ್ಚ್ 20 ರಂದು ತವರಿಗೆ ಮರಳುವ ನಿರೀಕ್ಷೆಯಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಇರಾನ್ ಯುದ್ಧ ಎಫೆಕ್ಟ್: 11 ವಾಯುಪ್ರದೇಶ ತಪ್ಪಿಸಲು ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ಕೇಂದ್ರದ ಸೂಚನೆ

11 ವಾಯುಪ್ರದೇಶಕ್ಕಿಲ್ಲ ಭಾರತದ ವಿಮಾನ ಎಂಟ್ರಿ

ಇಸ್ರೇಲ್ ಮತ್ತು ಯುಎಸ್ ಸೇನಾ ಪಡೆ ಮತ್ತು ಇರಾನ್ ನಡುವಿನ ಸಂಘರ್ಷ ತೀವ್ರಗೊಂಡಿರುವುದರಿಂದ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಭಾರತದ ವಿಮಾನಯಾನ ಸಂಸ್ಥೆಗಳು ಇರಾನ್, ಇಸ್ರೇಲ್, ಲೆಬನಾನ್ ಸೇರಿದಂತೆ ಹೆಚ್ಚಿನ ಅಪಾಯ ವಲಯಗಳಾದ 11 ವಾಯುಪ್ರದೇಶಗಳನ್ನು ಬಿಟ್ಟು ಪ್ರಯಾಣಿಸಲು ಕೇಂದ್ರ ಸರ್ಕಾರ ಸೂಚನೆ ನೀಡಿದೆ.

ನಾನು ಇನ್ನೂ ಬದುಕಿದ್ದೇನೆ: ಸಾವಿನ ವದಂತಿಗೆ ಬೆಂಜಮಿನ್ ನೆತನ್ಯಾಹು ಸ್ಪಷ್ಟನೆ

ನಾನು ಜೀವಂತವಾಗಿದ್ದೇನೆ: ಬೆಂಜಮಿನ್ ನೆತನ್ಯಾಹು

ನಾನು ಇನ್ನೂ ಜೀವಂತವಾಗಿದ್ದೇನೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸ್ಪಷ್ಟನೆ ನೀಡಿದ್ದಾರೆ. ಕೃತಕ ಬುದ್ಧಿಮತ್ತೆಯನ್ನು ಬಳಸಿ ತಯಾರಿಸಿರುವ ತಮ್ಮ ಸಾವಿನ ವಿಡಿಯೊ ಬಗ್ಗೆ ಸ್ಪಷ್ಟಿಕರಣ ನೀಡಿದ ಅವರು, ಮಾರ್ಚ್ 12ರಂದು ದೂರದರ್ಶನದಲ್ಲಿ ಪ್ರಸಾರವಾದ ತಮ್ಮ ಭಾಷಣವನ್ನು ಎಐ ಬಳಸಿ ಸೃಷ್ಟಿಸಲಾಗಿದೆ ಎಂದು ಹೇಳಿದರು.

ಸಂಕಷ್ಟದ ವೇಳೆ ಯುಎಇ ಪ್ರವಾಸಿಗರಿಗೆ ಆಪತ್ಬಾಂಧವನಾದ 'ಕನ್ನಡಿಗಾಸ್ ಹೆಲ್ಪ್ ಲೈನ್’

ಕನ್ನಡಿಗಾಸ್ ಹೆಲ್ಪ್ ಲೈನ್ ಗೆ ಅನಿವಾಸಿಗಳಿಂದ ಮೆಚ್ಚುಗೆ

ಅಮೆರಿಕ- ಇಸ್ರೇಲ್ ಹಾಗೂ ಇರಾನ್ ನಡುವಿನ ಸಂಘರ್ಷದ ಪರಿಣಾಮವಾಗಿ ಮಧ್ಯೆ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಸಂದರ್ಭದಲ್ಲಿ ಯುಎಇಯಲ್ಲಿ ಸಂಕಷ್ಟಕ್ಕೀಡಾಗಿದ್ದ ಪ್ರವಾಸಿ ಕನ್ನಡಿಗರನ್ನು ರಕ್ಷಿಸಲು ಆಪತ್ಬಾಂಧವನಾಗಿ ಹಗಲಿರುಳು ಕಾರ್ಯನಿರ್ವಹಿಸಿದ 'ಕನ್ನಡಿಗಾಸ್ ಹೆಲ್ಪ್ ಲೈನ್’ ಗೆ ಅನಿವಾಸಿಗಳು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಂಘರ್ಷ ವಾತಾವರಣದ ನಡುವೆಯೇ ತೈಲ ರಫ್ತು ಆರಂಭಿಸಿದ ಇರಾಕ್

ಇರಾಕ್ ನಿಂದ ತೈಲ ರಫ್ತು ಆರಂಭ

ಇರಾನ್ ಮತ್ತು ಇಸ್ರೇಲ್ ಹಾಗೂ ಯುಎಸ್ ಸೇನಾ ಪಡೆಗಳ ಸಂಘರ್ಷದ ಪರಿಣಾಮ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಉದ್ವಿಗ್ನತೆ ಉಂಟಾಗಿದ್ದು, ಜಾಗತಿಕ ಮಟ್ಟದಲ್ಲಿ ತೈಲ ಬಿಕ್ಕಟ್ಟಿಗೆ ಕಾರಣವಾಗಿದೆ. ಸಂಘರ್ಷದ ಆತಂಕದ ನಡುವೆಯೇ ಇದೀಗ ಇರಾಕ್ ತೈಲ ರಫ್ತು ಚಟುವಟಿಕೆಯನ್ನು ಪ್ರಾರಂಭಿಸಿದೆ. ಇದಕ್ಕಾಗಿ ಇರಾಕ್ ಗೆ ಟರ್ಕಿ ಸಾಥ್ ನೀಡಿದೆ.

Ugadi 2026: ಯುಗಾದಿ ವಿಶೇಷ: ಹೊಸ ನಿರೀಕ್ಷೆಯೊಂದಿಗೆ ಹೊಸ ಆರಂಭ ಮಾಡೋಣ

ಹೊಸ ವರ್ಷಕ್ಕೆ ಜೀವನದಲ್ಲಿ ಏನು ಬದಲಾವಣೆ ಮಾಡಬಹುದು?

ಹೊಸ ವರ್ಷ ಬಂದಾಗ ಉತ್ಸಾಹದಿಂದ ಮಾಡಬೇಕಾದ ಕಾರ್ಯಗಳ ಪಟ್ಟಿ ಮಾಡುತ್ತೇವೆ. ಆದರೆ ಒಂದೆರಡು ವಾರಗಳ ಬಳಿಕ ಆ ಪಟ್ಟಿ ಯಾರಿಗೂ ನೆನಪಿರುವುದಿಲ್ಲ. ಆದರೆ ಈ ಬಾರಿ ಯಾವುದೇ ಪಟ್ಟಿ ಬೇಡ. ಬದಲಿಗೆ ಜೀವನದಲ್ಲಿ ಸಕಾರಾತ್ಮಕತೆಯನ್ನು ತುಂಬಿಕೊಳ್ಳುವ ಕೆಲವು ಅಂಶಗಳನ್ನು ಅಳವಡಿಸಿಕೊಳ್ಳೋಣ. ಇದು ನಮ್ಮ ಬದುಕಿನ ಗುರಿ ಸಾಧನೆಗೆ ಪೂರಕವಾಗುವುದರಲ್ಲಿ ಸಂದೇಹವಿಲ್ಲ.

ಇಸ್ರೇಲ್ ದಾಳಿಗೆ ಬಲಿಯಾದ ಮತ್ತೊಬ್ಬ ಇರಾನ್ ನಾಯಕ

ಇಸ್ರೇಲ್ ದಾಳಿಗೆ ಮತ್ತೊಬ್ಬ ಇರಾನ್ ನಾಯಕ ಬಲಿ

ಇರಾನ್‌ನ ಗುಪ್ತಚರ ಸಚಿವ ಎಸ್ಮಾಯಿಲ್ ಖತೀಬ್ ಅವರನ್ನು ಇಸ್ರೇಲ್ ಹತ್ಯೆಗೈದಿದೆ. ಖತೀಬ್ ಅವರನ್ನು ಬುಧವಾರ ರಾತ್ರಿಯಿಡೀ ನಡೆದ ದಾಳಿಯಲ್ಲಿ ಹತ್ಯೆ ಮಾಡಲಾಗಿದ್ದು, ಅವರ ಸಾವನ್ನು ಇರಾನ್ ದೃಢಪಡಿಸಿಲ್ಲ ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ತಿಳಿಸಿದ್ದಾರೆ. ಅವರನ್ನು ಕೊಳ್ಳಲು ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಮಿಲಿಟರಿಗೆ ಮುಕ್ತ ಅವಕಾಶ ನೀಡಿದ್ದರು ಎಂದು ಕಾಟ್ಜ್ ಹೇಳಿದರು.

ಶ್ರೀಮಂತರಾಗಬೇಕೆ? ಈ ತಪ್ಪುಗಳನ್ನು ಮಾಡಲೇಬಾರದು

ಹಣ ಗಳಿಸುವುದು ಹೇಗೆ?

ಶ್ರೀಮಂತನಾಗುವ ಆಸೆ ಎಲ್ಲರಲ್ಲೂ ಇರುತ್ತದೆ. ಆದರೆ ನಾವು ಮಾಡುವ ಕೆಲವೊಂದು ಸಣ್ಣ ಪುಟ್ಟ ತಪ್ಪುಗಳು ನಮ್ಮನ್ನು ಶ್ರೀಮಂತ ಆಗದಂತೆ ತಡೆಯುತ್ತದೆ. ಹೀಗಾಗಿ ಶ್ರೀಮಂತನಾಗಬೇಕಾದರೆ ಕೆಲವೊಂದು ತಪ್ಪುಗಳನ್ನು ಮಾಡಲೇಬಾರದು ಎನ್ನುತ್ತಾರೆ ತಜ್ಞರು. ಅಂತಹ ತಪ್ಪುಗಳು ಯಾವುದು ಎನ್ನುವ ಕುರಿತು ಮೈಂಡ್ ಥೆರಪಿಸ್ಟ್, ವೆಲ್ತ್ ಎಕ್ಸ್‌ಪರ್ಟ್‌ ಮೈಸೂರಿನ ಸುರೇಶ ಶೈವ ʼವಿಶ್ವವಾಣಿ ಟಿವಿ ಸ್ಪೆಷಲ್‌ʼ ಯೂಟ್ಯೂಬ್‌ ಚಾನೆಲ್‌ನಲ್ಲಿ ಹೇಳಿರುವುದು ಹೀಗೆ...

ವಿಮಾನ ಯಾತ್ರಿಕರಿಗೆ ಗುಡ್ ನ್ಯೂಸ್; ಹೆಚ್ಚುವರಿ ಶುಲ್ಕವಿಲ್ಲ, ಶೇಕಡಾ 60ರಷ್ಟು ಸೀಟು ಉಚಿತ

ವಿಮಾನ ಪ್ರಯಾಣಿಕರಿಗೆ ಶುಭ ಸುದ್ದಿ

ಯುಗಾದಿಗೂ ಮುನ್ನವೇ ದೇಶದ ವಿಮಾನ ಯಾತ್ರಿಕರಿಗೆ ಶುಭ ಸುದ್ದಿಯೊಂದು ಸಿಕ್ಕಿದೆ. ಇನ್ನು ಮುಂದೆ ವಿಮಾನ ಟಿಕೆಟ್ ಬುಕ್ಕಿಂಗ್ ವೇಳೆ ಯಾವುದೇ ಗುಪ್ತ ಶುಲ್ಕವನ್ನು ವಿಧಿಸಲಾಗುವುದಿಲ್ಲ. ಪ್ರಯಾಣಿಕರಿಗೆ ಪರಿಹಾರವಾಗಿ ಹೆಚ್ಚುವರಿ ಶುಲ್ಕವಿಲ್ಲದೆ ಶೇಕಡಾ 60ರಷ್ಟು ಸೀಟು ಉಚಿತವಾಗಿ ನೀಡುವುದಾಗಿ ಭಾರತೀಯ ವಿಮಾನಯಾನ ಸಂಸ್ಥೆಯು ತಿಳಿಸಿದೆ.

ನಮ್ಮನ್ನು ಪ್ರೀತಿಸಿ, ಮೋದಿಯವರನ್ನು ಮದುವೆಯಾದಿರಿ: ದೇವೇಗೌಡರಿಗೆ ಟಾಂಗ್ ಕೊಟ್ಟ ಮಲ್ಲಿಕಾರ್ಜುನ ಖರ್ಗೆ ಮಾತಿಗೆ ನಕ್ಕ ಪ್ರಧಾನಿ ಮೋದಿ

ವಿದಾಯ ಭಾಷಣದಲ್ಲಿ ಪ್ರಧಾನಿಯನ್ನು ನಗಿಸಿದ ಮಲ್ಲಿಕಾರ್ಜುನ ಖರ್ಗೆ

ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಅಧಿಕಾರಾವಧಿ ಕೊನೆಗೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ಅವರು ಬುಧವಾರ ತಮ್ಮ ವಿದಾಯ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಅವರು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಮತ್ತು ಎನ್‌ಸಿಪಿ ಸಂಸ್ಥಾಪಕ ಶರದ್ ಪವಾರ್ ಅವರ ಬಗ್ಗೆ ಮಾತನಾಡಿದ್ದು, ಇದು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅಲ್ಲಿದ್ದವರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿತು.

ವಾಯುಪ್ರದೇಶ ನಿರ್ಬಂಧದ ನಡುವೆ ಕತಾರ್ ಏರ್‌ವೇಸ್‌ನಲ್ಲಿ ತವರಿಗೆ ಮರಳಿದ 1,600 ಭಾರತೀಯರು

5 ಕತಾರ್ ಏರ್‌ವೇಸ್‌ ವಿಮಾನಗಳಲ್ಲಿ ತವರಿಗೆ ಮರಳಿದ ಭಾರತೀಯರು

ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಉಂಟಾಗಿರುವ ಉದ್ವಿಗ್ನತೆಯ ಪರಿಣಾಮ ವಿಶ್ವದ ಎಲ್ಲ ರಾಷ್ಟ್ರಗಳನ್ನು ತಟ್ಟಿದೆ. ಅಲ್ಲಲ್ಲಿ ಸಿಲುಕಿರುವ ವಿದೇಶಿಗರು ತವರಿಗೆ ಮರಳಲು ಕಾತರಿಸುತ್ತಿದ್ದಾರೆ. ವಾಯುಪ್ರದೇಶದ ನಿರ್ಬಂಧಗಳ ನಡುವೆ ಇದೀಗ 5 ಕತಾರ್ ಏರ್‌ವೇಸ್‌ ವಿಮಾನಗಳಲ್ಲಿ 1,600 ಭಾರತೀಯರು ತವರಿಗೆ ಮರಳಿದ್ದಾರೆ ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.

ಇಫ್ತಾರ್ ಬಳಿಕ ಗಂಗಾ ನದಿಗೆ ಮಾಂಸ ತ್ಯಾಜ್ಯ ಎಸೆದ ಯುವಕರ ಬಂಧನ

ಇಫ್ತಾರ್ ಕೂಟ ಆಯೋಜಿಸಿದ್ದವರ ಬಂಧನ

ಇಫ್ತಾರ್ ಕೂಟದ ಬಳಿಕ ಯುವಕರ ಗುಂಪೊಂದು ದೋಣಿಯಲ್ಲಿ ಬಂದು ವಾರಣಾಸಿಯ ಗಂಗಾ ನದಿಗೆ ಮಾಂಸದ ತ್ಯಾಜ್ಯಗಳನ್ನು ಎಸೆದು ಹೋಗಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಇದಕ್ಕೆ ಸಂಬಂಧಿಸಿ ಪ್ರಕರಣ ದಾಖಲಿಸಿರುವ ಪೊಲೀಸರು 14 ಜನರನ್ನು ಬಂಧಿಸಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

3 ತಿಂಗಳು ಮೇಲ್ಪಟ್ಟ ಮಗು ದತ್ತು ಪಡೆದ ತಾಯಿಗೆ ಹೆರಿಗೆ ರಜೆ ನಿರಾಕರಿಸುವಂತಿಲ್ಲ: ಸುಪ್ರೀಂ ಕೋರ್ಟ್

ದತ್ತು ಪಡೆದ ತಾಯಿಗೂ ಇದೆ ಹೆರಿಗೆ ರಜೆ

ಹೆತ್ತ ಮತ್ತು ದತ್ತು ಪಡೆದ ಮಗುವಿಗೆ ಯಾವುದೇ ವ್ಯತ್ಯಾಸವಿಲ್ಲ. ಹೀಗಾಗಿ ದೊಡ್ಡ ಮಗುವನ್ನು ದತ್ತು ಪಡೆದ ತಾಯಿಗೂ 3 ತಿಂಗಳ ಹೆರಿಗೆ ರಜೆಯನ್ನು ನೀಡಬೇಕು. ಇದರಲ್ಲಿ ಮಗುವಿನ ವಯಸ್ಸನ್ನು ಪರಿಗಣಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಪಾರ್ದಿವಾಲಾ ಮತ್ತು ನ್ಯಾಯಮೂರ್ತಿ ಮಹಾದೇವನ್ ಅವರ ದ್ವಿಸದಸ್ಯ ಪೀಠ ತೀರ್ಪು ನೀಡಿದೆ.

ರಾಜ್ಯಸಭಾ ಚುನಾವಣೆಯಲ್ಲಿ ಮಹಾಘಟಬಂಧನ್‌ಗೆ ಹಿನ್ನಡೆ; ಬಿಹಾರದ ಎಲ್ಲ ಸ್ಥಾನಗಳನ್ನು ಗೆದ್ದ ಎನ್‌ಡಿಎ

ರಾಜ್ಯಸಭಾ ಚುನಾವಣೆ: ಮೇಲುಗೈ ಸಾಧಿಸಿದ ಎನ್‌ಡಿಎ

ಬಿಹಾರದ ಎಲ್ಲಾ 5 ರಾಜ್ಯಸಭಾ ಸ್ಥಾನಗಳು, ಒಡಿಶಾದ 2 ಸ್ಥಾನಗಳನ್ನು ಎನ್ ಡಿಎ ಗೆದ್ದುಕೊಂಡಿದ್ದು, ಇದರಿಂದ ಮಹಾಘಟಬಂಧನ್ ಗೆ ಭಾರಿ ಹಿನ್ನಡೆಯಾಗಿದೆ. 10 ರಾಜ್ಯಗಳಾದ್ಯಂತ 37 ರಾಜ್ಯಸಭೆ ಸ್ಥಾನಗಳಿಗೆ ಸೋಮವಾರ ನಡೆದ ಚುನಾವಣೆಯಲ್ಲಿ ಬಿಹಾರ, ಒಡಿಶಾ ಮತ್ತು ಹರಿಯಾಣದ ಒಟ್ಟು 11 ಸ್ಥಾನಗಳಿಗೆ ಚುನಾವಣೆ ನಡೆಸಲಾಗಿದ್ದು, ಇತರ ಏಳು ರಾಜ್ಯಗಳ 26 ಸ್ಥಾನಗಳಿಗೆ ಅವಿರೋಧ ಆಯ್ಕೆ ಮಾಡಲಾಗಿದೆ.

Vishwavani TV: ಎಲ್‌ಪಿಜಿ ಗ್ರಾಹಕರಿಗೆ ಗ್ಯಾಸ್‌ ವಿತರಕನ ಅಭಯ; 1 ಕೋಟಿ ವೀವ್ಸ್‌ ಕಂಡ ವೈರಲ್‌ ವಿಡಿಯೋ ಇಲ್ಲಿದೆ

1 ಕೋಟಿ ವೀಕ್ಷಣೆ ಗಳಿಸಿದ Vishwavani TV ವಿಡಿಯೊ

ದೇಶಾದ್ಯಂತ ಎಲ್‌ಪಿಜಿ ಕೊರತೆಯಾಗಿಲ್ಲವಾದರೂ ಕೂಡ ಜನರು ಗೊಂದಲಕ್ಕೆ ಒಳಗಾಗಿದ್ದಾರೆ. ಕಾರಣ ಬುಕ್ಕಿಂಗ್ ಮತ್ತು ಪೂರೈಕೆಯಲ್ಲಿ ಆಗುತ್ತಿರುವ ವಿಳಂಬ. ಈ ಕುರಿತು ಪದೇ ಪದೇ ಕೇಂದ್ರ ಸರ್ಕಾರ ಸ್ಪಷ್ಟನೆಯನ್ನು ನೀಡುತ್ತಿದ್ದರೂ ಜನರು ಅಡುಗೆ ಅನಿಲ ಪಡೆಯಲು ಮುಗಿ ಬೀಳುತ್ತಿದ್ದಾರೆ. ಈ ಕುರಿತು ಈಗ ವಿಶ್ವವನಿಗೆ ಗ್ಯಾಸ್ ವಿತರಕರೊಬ್ಬರು ನೀಡಿರುವ ಹೇಳಿಕೆ ವಿಡಿಯೊ ಇಲ್ಲಿದೆ. ಈ ವಿಡಿಯೊವನ್ನು 1 ಕೋಟಿಗೂ ಹೆಚ್ಚು ಮಂದಿ ವೀಕ್ಷಿಸಿರುವುದು ಈಗ ದಾಖಲೆಯಾಗಿದೆ.

ದೇಶದಲ್ಲಿ ಎಲ್‌ಪಿಜಿ ಕೊರತೆಯಾಗಿಲ್ಲ, ವಿತರಣೆಗೆ ಬೇಕಾಗುವಷ್ಟು ಇದೆ: ಕೇಂದ್ರ ಸರ್ಕಾರ ಸ್ಪಷ್ಟನೆ

ದೇಶದಲ್ಲಿ ಎಲ್‌ಪಿಜಿ ಕೊರತೆ ಇಲ್ಲ

ಪಶ್ಚಿಮ ಏಷ್ಯಾ ಸಂಘರ್ಷದ ಪರಿಣಾಮವಾಗಿ ದೇಶದಲ್ಲಿ ಏಕಾಏಕಿ ತೈಲ, ಅಡುಗೆ ಅನಿಲ ಬೇಡಿಕೆ ಹೆಚ್ಚಿತ್ತು. ಇದರ ಪರಿಣಾಮ ವಿತರಣೆಯಲ್ಲಿ ಉಂಟಾದ ವ್ಯತ್ಯಯದಿಂದ ದೇಶಾದ್ಯಂತ ತೈಲ, ಅಡುಗೆ ಅನಿಲ ಬಿಕ್ಕಟ್ಟು ಕಾಣಿಸಿಕೊಂಡಿದೆ. ದೇಶದಲ್ಲಿ ಎಲ್‌ಪಿಜಿ ಕೊರತೆ ಇಲ್ಲ. ಈ ಕುರಿತು ವಿತರಕರಿಂದ ಯಾವುದೇ ದೂರುಗಳು ಬಂದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆಯನ್ನು ನೀಡಿದೆ.

ಹೊರ್ಮುಜ್ ಜಲಸಂಧಿ ರಕ್ಷಣೆಗೆ ಅಮೆರಿಕದ ಜತೆ ನಿಲ್ಲುತ್ತಾ ಚೀನಾ?

ಇರಾನ್ ವಿರುದ್ಧ ಸಂಘರ್ಷಕ್ಕೆ ಇಳಿಯುತ್ತ ಚೀನಾ?

ಯುಎಸ್ ಮತ್ತು ಇಸ್ರೇಲ್ ಸೇನಾ ಪಡೆಯು ಇರಾನ್ ಮೇಲೆ ದಾಳಿ ನಡೆಸಿದ ಬಳಿಕ ಇರಾನ್ ಹೊರ್ಮುಜ್ ಜಲಸಂಧಿಯನ್ನು ಮುಚ್ಚಿ ಜಾಗತಿಕ ವ್ಯಾಪಾರ ಚಟುವಟಿಕೆಯ ಮೇಲೆ ಗಮನಾರ್ಹ ಪರಿಣಾಮ ಬೀರಿದೆ. ಹೀಗಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ಜಲಸಂಧಿಯ ದಾರಿಯನ್ನು ಸುರಕ್ಷಿತಗೊಳಿಸಲು ಚೀನಾ ಸೇರಿದಂತೆ ಹಲವಾರು ರಾಷ್ಟ್ರಗಳ ಬೆಂಬಲ ಕೋರಿದ್ದರು. ಇದಕ್ಕೆ ಈಗ ಚೀನಾ ಮೊದಲ ಪ್ರತಿಕ್ರಿಯೆ ನೀಡಿದೆ.

ಭಾರತಕ್ಕೆ ಎಲ್‌ಪಿಜಿ ಹೊತ್ತು ತರುವ ನೌಕೆಗೆ ಮಾತ್ರ  ಹೊರ್ಮುಜ್ ಜಲಸಂಧಿಯ ದಾರಿ ಬಿಡಲು ಇರಾನ್ ಒಪ್ಪಿಗೆ

ಹೊರ್ಮುಜ್ ಜಲಸಂಧಿಯಲ್ಲಿ ಭಾರತಕ್ಕೆ ದಾರಿ ಬಿಡಲು ಒಪ್ಪಿದ ಇರಾನ್

ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಉಂಟಾಗಿರುವ ಉದ್ವಿಗ್ನತೆಯ ಪರಿಣಾಮ ಇರಾನ್ ಹೊರ್ಮುಜ್ ಜಲಸಂಧಿಯಲ್ಲಿ ಸರಕು ಸಾಗಣೆಗೆ ಅಡ್ಡಿ ಪಡಿಸಿತ್ತು. ಆದರೆ ಇದೀಗ ಅದು ಭಾರತಕ್ಕೆ ಸರಕು ಸಾಗಿಸುವ ನೌಕೆಗಳನ್ನು ಬಿಡಲು ಒಪ್ಪಿಕೊಂಡಿದೆ. ಈ ಕುರಿತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಭಾನುವಾರ ತಿಳಿಸಿದ್ದಾರೆ.

ಎಲ್‌ಪಿಜಿ ಸಿಲಿಂಡರ್‌ ಬುಕಿಂಗ್‌ ನಿಯಮದಲ್ಲಿ ಬದಲಾವಣೆ; ಸಬ್ಸಿಡಿ ಪಡೆಯಲು ಇ-ಕೆವೈಸಿ ಕಡ್ಡಾಯ?

ಇ-ಕೆವೈಸಿ ಮಾಡದಿದ್ರೆ ಎಲ್‌ಪಿಜಿ ಸಬ್ಸಿಡಿ ಸಿಗೋದಿಲ್ಲ

ಗೃಹ ಬಳಕೆಯ ಅಡುಗೆ ಅನಿಲ ಬಳಸುವ ಗ್ರಾಹಕರು ಇ-ಕೆವೈಸಿ ಮಾಡುವಂತೆ ಕೇಂದ್ರ ಸರ್ಕಾರ ಹೇಳಿದೆ. ಒಂದು ವೇಳೆ ಇ-ಕೆವೈಸಿ ಮಾಡದೇ ಇದ್ದರೆ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ (ಪಿಎಂಯುವೈ) 105.1 ಮಿಲಿಯನ್‌ಗಿಂತಲೂ ಹೆಚ್ಚು ಫಲಾನುಭವಿಗಳಿಗೆ ಸಿಗುವ ಸಬ್ಸಿಡಿ ಸಿಗದೇ ಇರಬಹುದು. ಇದಕ್ಕಾಗಿ ಇ-ಕೆವೈಸಿ ಮಾಡುವಂತೆ ಸಲಹೆ ನೀಡಿದೆ.

2026ರ ವಿಧಾನಸಭಾ ಚುನಾವಣೆ: ಮೂರು ರಾಜ್ಯಗಳಲ್ಲಿ ಬಿಜೆಪಿಗೆ ಕಾದಿದೆ ಅಗ್ನಿ ಪರೀಕ್ಷೆ; ಈ ಬಾರಿಯಾದರೂ ಕಮಲ ಅರಳುತ್ತಾ?

ಈ ಬಾರಿಯ ವಿಧಾನ ಸಭಾ ಚುನಾವಣೆ ಬಿಜೆಪಿ ಪಾಲಿಗೆ ಅಗ್ನಿ ಪರೀಕ್ಷೆ

ನಾಲ್ಕು ರಾಜ್ಯಗಳು, ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನ ಸಭಾ ಚುನಾವಣೆಗೆ ದಿನ ನಿಗದಿಯಾದ ಬೆನ್ನಲ್ಲೇ ಈ ಬಾರಿ ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿ ಭಾರಿ ಸವಾಲು ಎದುರಾಗಿದೆ. ಇಸ್ರೇಲ್, ಯುಎಸ್ ಸೇನಾ ಪಡೆಯು ಇರಾನ್ ಮೇಲೆ ನಡೆಸಿದ ದಾಳಿಯ ಪರಿಣಾಮ ಜಾಗತಿಕ ಮಟ್ಟದಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾಗಿದ್ದು, ಈ ನಡುವೆ ಬಿಜೆಪಿ ವಿಧಾನ ಸಭಾ ಚುನಾವಣೆಯನ್ನು ಎದುರಿಸಬೇಕಾಗಿದೆ.

ಇಂದು ಅಥವಾ ನಾಳೆ ಭಾರತೀಯ ಬಂದರು ತಲುಪಲಿದೆ ಎಲ್‌ಪಿಜಿ

ಶೀಘ್ರದಲ್ಲೇ ಭಾರತಕ್ಕೆ ಬರಲಿದೆ ಎಲ್‌ಪಿಜಿ

ಲೈಬೀರಿಯಾ ಧ್ವಜದೊಂದಿಗೆ ಸೌದಿ ಅರೇಬಿಯಾದಿಂದ ಹೊರಟಿದ್ದ ತೈಲ ಟ್ಯಾಂಕರ್ ಹೊರ್ಮುಜ್ ಜಲಸಂಧಿ ದಾಟಿ ಬಂದಿದ್ದು, ಮುಂಬೈ ತಲುಪಿದೆ. ಹಡಗು ಟ್ರ್ಯಾಕಿಂಗ್ ದತ್ತಾಂಶದ ಪ್ರಕಾರ ತೈಲ ಟ್ಯಾಂಕರ್ ಸ್ಮಿರ್ನಿ 1 ಮಿಲಿಯನ್ ಬ್ಯಾರೆಲ್‌ಗಳಷ್ಟು ಸೌದಿ ಅರೇಬಿಯನ್ ಕಚ್ಚಾ ತೈಲವನ್ನು ಹೊತ್ತುಕೊಂಡು ಭಾರತದ ಬಂದರು ಸಮೀಪ ಬಂದಿದೆ. ಇನ್ನು ಎಲ್‌ಪಿಜಿ ಹೊತ್ತ ಟ್ಯಾಂಕರ್ ಸೋಮವಾರ ಅಥವಾ ಮಂಗಳವಾರ ಭಾರತೀಯ ಬಂದರು ತಲುಪುವ ಸಾಧ್ಯತೆ ಇದೆ.

Loading...