ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Profile

ವಿಶ್ವೇಶ್ವರ ಭಟ್‌

Editor in Chief, Author, Columnist

info1@vishwavani.news

ವಿಶ್ವೇಶ್ವರ ಭಟ್ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಮೂರೂರಿನವರು. ಧಾರವಾಡ ವಿವಿಯಲ್ಲಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದ ಬಳಿಕ, ಪತ್ರಿಕೋದ್ಯಮದಲ್ಲೂ ಸ್ನಾತಕೋತ್ತರ ಪದವಿ ಗಳಿಸಿದರು. ನಂತರ ಲಂಡನ್ನಲ್ಲಿ ಪತ್ರಿಕೋದ್ಯಮ ಕುರಿತಂತೆ ವಿಶೇಷ ಶಿಕ್ಷಣ ಪಡೆದರು. ಸಂಯುಕ್ತ ಕರ್ನಾಟಕದ ಮೂಲಕ ವೃತ್ತಿ ಆರಂಭಿಸಿದರು. ಬಳಿಕ ಕೇಂದ್ರ ಸಚಿವರಾಗಿದ್ದ ಅನಂತಕುಮಾರ್ ಅವರಿಗೆ ಮಾಧ್ಯಮ ಸಲಹೆಗಾರರಾಗಿ, ಏಷ್ಯನ್ ಕಾಲೇಜ್ ಆಫ್ ಜರ್ನಲಿಸಂನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದರು. ನಂತರ ವಿಜಯ ಕರ್ನಾಟಕ, ಕನ್ನಡಪ್ರಭ ಪ್ರಧಾನ ಸಂಪಾದಕರಾಗಿ ಆ ಪತ್ರಿಕೆಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ದರು. 2016ರಲ್ಲಿ ವಿಶ್ವವಾಣಿ ದಿನ ಪತ್ರಿಕೆ ಆರಂಭಿಸಿದರು. ವಿಶ್ವವಾಣಿ ಸಮೂಹ ಇದೀಗ ಲೋಕಧ್ವನಿ, ವಿಶ್ವವಾಣಿ ಟಿವಿ ಮತ್ತು ವಿಶ್ವವಾಣಿ ಪುಸ್ತಕ ಪ್ರಕಾಶನವನ್ನು ಒಳಗೊಂಡು ಬೆಳೆಯುತ್ತಿದೆ. ವಿಶ್ವೇಶ್ವರ ಭಟ್ 97 ಕೃತಿಗಳನ್ನು ರಚಿಸಿದ್ದಾರೆ. 'ನೂರೆಂಟು ವಿಶ್ವ', 'ಸಂಪಾದಕರ ಸದ್ಯಶೋಧನೆ', ಭಟ್ಟರ್ ಸ್ಕಾಚ್, 'ಇದೇ ಅಂತರಂಗ ಸುದ್ದಿ' ಹಾಗೂ 'ಆಸ್ಕ್ ದಿ ಎಡಿಟರ್' ಅಂಕಣಗಳನ್ನು ಬರೆಯುತ್ತಿದ್ದಾರೆ.

Articles
Vishweshwar Bhat Column: ಅತಿ ಹೆಚ್ಚು ಜನರಿದ್ದ ವಿಮಾನ

Vishweshwar Bhat Column: ಅತಿ ಹೆಚ್ಚು ಜನರಿದ್ದ ವಿಮಾನ

ಒಂದು ಬೋಯಿಂಗ್ 747 ವಿಮಾನವು ಸುಮಾರು 400-500 ಪ್ರಯಾಣಿ ಕರನ್ನು ಹೊತ್ತೊಯ್ಯಬಲ್ಲದು. ಆದರೆ, ಈ ತುರ್ತು ಕಾರ್ಯಾಚರಣೆಯಲ್ಲಿ ಸಾಧ್ಯವಾದಷ್ಟು ಹೆಚ್ಚು ಜನರನ್ನು ಕರೆತರಲು ವಿಮಾನ ದೊಳಗಿನ ಎಲ್ಲ ಆಸನಗಳನ್ನು ತೆಗೆದು ಹಾಕಲಾಯಿತು. ಅಧಿಕೃತ ವಾಗಿ ವಿಮಾನ ಹತ್ತುವಾಗ 1086 ಪ್ರಯಾಣಿಕರಿದ್ದರು. ಆದರೆ, ಪ್ರಯಾಣದ ಸಮಯದಲ್ಲಿ ವಿಮಾನದಲ್ಲಿಯೇ ಮಗುವೊಂದು ಜನಿಸಿದ್ದ ರಿಂದ, ವಿಮಾನವು ಇಸ್ರೇಲ್ ನಲ್ಲಿ ಇಳಿದಾಗ ಒಟ್ಟು ಪ್ರಯಾಣಿಕರ ಸಂಖ್ಯೆ 1087 ಆಗಿತ್ತು.

Vishweshwar Bhat Column: ಸ್ವತಂತ್ರ ವಿದ್ಯುತ್‌ ವ್ಯವಸ್ಥೆ

Vishweshwar Bhat Column: ಸ್ವತಂತ್ರ ವಿದ್ಯುತ್‌ ವ್ಯವಸ್ಥೆ

ಸಣ್ಣ ವಿದ್ಯುತ್ ವ್ಯತ್ಯಯವಾದರೂ, ಅದು ದೊಡ್ಡ ಗೊಂದಲಕ್ಕೆ ಮತ್ತು ಅಪಾಯಕ್ಕೆ ಕಾರಣವಾಗ ಬಹುದು. ಆದ್ದರಿಂದ, ವಿಮಾನ ನಿಲ್ದಾಣಗಳು ತಮ್ಮದೇ ಆದ ಸ್ವತಂತ್ರ ಮತ್ತು ಸುಭದ್ರ ವಿದ್ಯುತ್ ವ್ಯವಸ್ಥೆಗಳನ್ನು ಹೊಂದಿರುತ್ತವೆ. ಸ್ವತಂತ್ರ ವಿದ್ಯುತ್ ವ್ಯವಸ್ಥೆ ಏಕೆ ಬೇಕು? ವಿಮಾನ ನಿಲ್ದಾಣದ ಕಾರ್ಯಾಚರಣೆಗಳಿಗೆ ನಿರಂತರ ವಿದ್ಯುತ್ ಪೂರೈಕೆ ಅತ್ಯಗತ್ಯ

Vishweshwar Bhat Column: ಈಗಲೂ ವಾರದಲ್ಲಿ ಒಂದು ದಿನ ಇಸ್ರೇಲಿಗರು ಮೊಬೈಲ್‌ ಮುಟ್ಟುವುದಿಲ್ಲ !

ಈಗಲೂ ವಾರದಲ್ಲಿ ಒಂದು ದಿನ ಇಸ್ರೇಲಿಗರು ಮೊಬೈಲ್‌ ಮುಟ್ಟುವುದಿಲ್ಲ !

ಶಬ್ಬತ್ ದಿನದಲ್ಲಿ ಯಹೂದಿಗಳು ಬಹುತೇಕ ಎಲ್ಲ ಕೆಲಸಗಳಿಂದ ದೂರವಿದ್ದು, ವಿಶ್ರಾಂತಿ, ಪ್ರಾರ್ಥನೆ, ಕುಟುಂಬ ಜೀವನಕ್ಕೆ ಹೆಚ್ಚು ಒತ್ತುಕೊಡುತ್ತಾರೆ. ಕೆಲವರು ಅಂದು ಮೊಬೈಲ್ ಕರೆಗಳನ್ನು ಸಹ ಸ್ವೀಕರಿಸುವುದಿಲ್ಲ. ಇನ್ನು ಕೆಲವರು ವಾಟ್ಸಾಪ್ ಮತ್ತು ಇಮೇಲ್‌ಗೂ ಪ್ರತಿಕ್ರಿಯಿಸುವುದಿಲ್ಲ.

V‌ishweshwar Bhat Column: ವಿಮಾನ ನಿಲ್ದಾಣ ಕೋಡ್

V‌ishweshwar Bhat Column: ವಿಮಾನ ನಿಲ್ದಾಣ ಕೋಡ್

ಇಂಟರ್‌ನ್ಯಾಷನಲ್ ಏರ್ ಟ್ರಾನ್ಸ್‌ಪೋರ್ಟ್ ಅಸೋಸಿಯೇಷನ್ (IATA) ಮತ್ತು ಇಂಟರ್‌ನ್ಯಾಷನಲ್ ಸಿವಿಲ್ ಏವಿಯೇಷನ್ ಆರ್ಗನೈಸೇಷನ್ (ICAO). ಈ ಕೋಡ್‌ಗಳು ವಿಮಾನ ಪ್ರಯಾಣದ ವ್ಯವಸ್ಥೆ ಯನ್ನು ಸುಲಭ ಮತ್ತು ಸುರಕ್ಷಿತವಾಗಿಸಲು ಸಹಾಯ ಮಾಡುತ್ತವೆ. ಇಂಟರ್‌ ನ್ಯಾಷನಲ್ IATA ಸಂಸ್ಥೆ ಯು ಏರ್‌ಲೈನ್‌ಗಳು, ಪ್ರಯಾಣ ಏಜೆಂಟರು ಮತ್ತು ಇತರ ಸಂಬಂಧಿತ ವ್ಯಾಪಾರಗಳಿಗೆ ಜಾಗತಿಕ ಗುಣಮಟ್ಟಗಳನ್ನು ರೂಪಿಸುವ ಖಾಸಗಿ ಸಂಸ್ಥೆಯಾಗಿದೆ.

Vishweshwar Bhat Column: ಎಡದಿಂದ ಏರಿಳಿಯುತ್ತಾರೆ ಏಕೆ?

Vishweshwar Bhat Column: ಎಡದಿಂದ ಏರಿಳಿಯುತ್ತಾರೆ ಏಕೆ?

ಆರಂಭಿಕ ವಿಮಾನಗಳಲ್ಲಿ, ಎಡ ಭಾಗದ ಬಾಗಿಲುಗಳು ಸಾಮಾನ್ಯವಾಗಿದ್ದವು, ಏಕೆಂದರೆ ಇದು ಗ್ರೌಂಡ್ ಕಾರ್ಯಾಚರಣೆಗೆ ಸುಲಭವಾಗಿತ್ತು. ವಿಮಾನದ ಕಾಕ್‌ಪಿಟ್‌ನಲ್ಲಿ, ಕ್ಯಾಪ್ಟನ್ (ಪೈಲಟ್) ಸಾಮಾನ್ಯವಾಗಿ ಎಡಗಡೆಯ ಸೀಟಿನಲ್ಲಿ ಕುಳಿತುಕೊಳ್ಳುತ್ತಾನೆ. ಇದರಿಂದಾಗಿ, ವಿಮಾನವನ್ನು ಟರ್ಮಿನಲ್‌ಗೆ ಜೋಡಿ ಸುವ ಜೆಟ್ ಬ್ರಿಡ್ಜ್ ( Jet bridge) ಎಡಭಾಗದಲ್ಲಿ ಇರುವುದು ಸುಲಭವಾಗಿರು ತ್ತದೆ.

Vishweshwar Bhat Column: ಕೆಲವೊಮ್ಮೆ ಸೋಲುಗಳು ನಮ್ಮ ಸಾಮರ್ಥ್ಯವನ್ನು ತೋರಿಸುತ್ತವೆ !

ಕೆಲವೊಮ್ಮೆ ಸೋಲುಗಳು ನಮ್ಮ ಸಾಮರ್ಥ್ಯವನ್ನು ತೋರಿಸುತ್ತವೆ !

ಇದು ನಮಗೇ ಗೊತ್ತಿಲ್ಲದೇ ನಮ್ಮೊಳಗೆ ನಡೆಯುವ ಹಕೀಕತ್ತು. ನಮ್ಮೊಳಗೆ ನಾವೇ ಸಾಕಿಕೊಂಡು ಪೊರೆಯುವ ಸೋಲಿನ ಅಸಲಿಯತ್ತು. ಅಷ್ಟಕ್ಕೂ ಅಂದು ಆಗಿದ್ದೇನೆಂದರೆ, ದಕ್ಷಿಣ ಆಫ್ರಿಕಾದಲ್ಲಿ ಗಾರ್ಡ್‌ನ್ ರೂಟ್ ಎಂಬ ಮಾರ್ಗವಿದೆ. ಅದು ಹೆಸರೇ ಸೂಚಿಸುವಂತೆ, ಪ್ರಕೃತಿಯ ಸೊಬಗನ್ನೆಲ್ಲ ತನ್ನ ಮೇಲೆ ಬೋರಲು ಹಾಕಿಕೊಂಡ ನಯನ ಮನೋಹರ ಪ್ರದೇಶ.

Vishweshwar Bhat Column: ಹೆಸರಿನ ಬಗ್ಗೆ ಮತ್ತಷ್ಟು

Vishweshwar Bhat Column: ಹೆಸರಿನ ಬಗ್ಗೆ ಮತ್ತಷ್ಟು

ವ್ಯಕ್ತಿಗಳ ಹೆಸರಿನಲ್ಲಿ ಸಂಖ್ಯೆಯಿರುವುದು ತೀರಾ ವಿಚಿತ್ರ, ವಿಲಕ್ಷಣ ಎಂದೆನಿಸಿತು. ಹಾಗಂತ ಈಕೆ ಸಾಮಾನ್ಯಳೇನೂ ಅಲ್ಲ. ‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆಯಲ್ಲಿ ಕೆಲಸ ಮಾಡಿದವಳು. ‘ದಿ ಬೋಸ್ಟನ್ ಗ್ಲೋಬಲ್’ ಪತ್ರಿಕೆಯಲ್ಲೂ ಕೆಲಸ ಮಾಡಿದ್ದಾಳೆ. ನಿಕೋಡ್ ಇಮೊಜಿ ಸಮಿತಿಯಲ್ಲಿ‌ ಕೆಲಸ ಮಾಡಿ ದವಳು. ಅಂದರೆ ಯುನಿಕೋಡ್‌ನಲ್ಲಿ ಬಳಸುವ ಇಮೊಜಿಯನ್ನು ಬಳಕೆಗೆ ಬಿಡುವ ಮುನ್ನ ಪರಿಶೀಲಿ ಸುವ ಸಮಿತಿಯದು.

Vishweshwar Bhat Column: ಸುರಕ್ಷತೆಗೆ ಮೊದಲ ಆದ್ಯತೆ

Vishweshwar Bhat Column: ಸುರಕ್ಷತೆಗೆ ಮೊದಲ ಆದ್ಯತೆ

ವಿಮಾನ ಮತ್ತು ವಿಮಾನಯಾನದಲ್ಲಿ ಯಾವತ್ತೂ ಸುಧಾರಣೆಗೆ ಒಳಗಾಗುವುದು ಭದ್ರತೆ ಮತ್ತು ಸುರಕ್ಷತೆ ಯೊಂದೇ. ಈ ಎರಡು ವಿಷಯಗಳಲ್ಲಿ ಯಾವ ಕಾರಣಕ್ಕೂ ರಾಜಿ ಮಾಡಿಕೊಳ್ಳುವುದಿಲ್ಲ. ಒಂದು ಸಣ್ಣ ಸುಧಾರಣೆಗೆ ಅವಕಾಶವಿದ್ದರೂ, ಅದನ್ನು ನಿರ್ಲಕ್ಷಿಸುವುದಿಲ್ಲ. ಅಮೆರಿಕದ ವಿಮಾನ ಯಾನ ಕಂಪನಿ ಗಳು ತಮ್ಮ ಹೊಸ ವಿಮಾನಗಳಲ್ಲಿ ಈಗ ಎರಡನೇ ಗೇಟ್ (ಸೆಕೆಂಡರಿ ಕಾಕ್‌ಪಿಟ್ ಬ್ಯಾರಿಯರ್) ಅಳವಡಿಸುವುದನ್ನು ಕಡ್ಡಾಯ ಮಾಡಲಾಗಿದೆ.

Vishweshwar Bhat Column: ವಿಮಾನದಲ್ಲಿ ಕಿಟಕಿಗಳ ಮಹತ್ಚ

Vishweshwar Bhat Column: ವಿಮಾನದಲ್ಲಿ ಕಿಟಕಿಗಳ ಮಹತ್ಚ

ವಿಮಾನದ ಕಿಟಕಿಗಳು ಒಂದು ಪ್ರಮುಖ ಸುರಕ್ಷತಾ ಕಾರ್ಯವನ್ನು ನಿರ್ವಹಿಸುತ್ತವೆ. ಅನಿರೀಕ್ಷಿತ ಸಂದರ್ಭಗಳಲ್ಲಿ, ವಿಮಾನದಲ್ಲಿ ಏನಾದರೂ ತೊಂದರೆ ಉಂಟಾದಾಗ, ಸಿಬ್ಬಂದಿ ಮತ್ತು ಪ್ರಯಾಣಿಕರು ವಿಮಾನದ ಹೊರಗಿನ ಪರಿಸ್ಥಿತಿಗಳನ್ನು ನೋಡಲು, ಅರಿಯಲು ಇವು ಸಹಾಯ ಮಾಡುತ್ತವೆ. ಇದರಿಂದ, ಹೊರಗಡೆ ಬೆಂಕಿ ಅಥವಾ ಇನ್ನಾವುದೇ ಅಪಾಯಗಳಿವೆಯೇ ಎಂದು ಪರಿಶೀಲಿಸಿ, ಸ್ಥಳಾಂತರ ಗೊಳ್ಳುವುದು ಸುರಕ್ಷಿತ ವೇ ಎಂದು ನಿರ್ಧರಿಸಲು ಸಹಾಯವಾಗುತ್ತದೆ.

Vishweshwar Bhat Column: ನಾಯಿಗಳಿಗೂ ವಿಮಾನಯೋಗ

Vishweshwar Bhat Column: ನಾಯಿಗಳಿಗೂ ವಿಮಾನಯೋಗ

ITA Airways ಮತ್ತು Neos ನಂಥ ಕೆಲವು ಪ್ರಮುಖ ಏರ್ ಲೈನ್ಸ್‌ಗಳು ಈಗಾಗಲೇ ಈ ನೀತಿಯನ್ನು ಅನುಸರಿಸಲು ಪ್ರಾರಂಭಿಸಿವೆ. ಅವು ಪ್ರಾಣಿಗಳನ್ನು ಕೇವಲ ಸಾಮಾನುಗಳಂತೆ ನೋಡದೇ, ಪ್ರಯಾಣಿಕ ರಂತೆ ಪರಿಗಣಿಸಿ ಸೀಟು ಗಳನ್ನು ಒದಗಿಸುತ್ತಿವೆ. ಇದು ಪ್ರಾಣಿಗಳ ಕಲ್ಯಾಣಕ್ಕೆ ಒಂದು ದೊಡ್ಡ ಹೆಜ್ಜೆಯಾಗಿದೆ. ಅವುಗಳಿಗೆ ಪ್ರಯಾಣದ ಸಮಯದಲ್ಲಿ ಸುರಕ್ಷತೆ ಮತ್ತು ಸೌಕರ್ಯ ದೊರಕುತ್ತದೆ.

Vishweshwar Bhat Column: ಇಸ್ರೇಲಿಗಳ ಈ ಸಿನೆಮಾ ಮುಗಿಯಲು ಇನ್ನೆಷ್ಟು ಇಂಟರ್ವಲ್ಲುಗಳು ಬಾಕಿಯಿದೆಯೋ ?!

ಇಸ್ರೇಲಿಗಳ ಈ ಸಿನೆಮಾ ಮುಗಿಯಲು ಇನ್ನೆಷ್ಟು ಇಂಟರ್ವಲ್ಲುಗಳು ಬಾಕಿಯಿದೆಯೋ ?!

2023ರ ಆರಂಭದಿಂದ, ಪ್ರತಿ ವಾರ ಲಕ್ಷಾಂತರ ಇಸ್ರೇಲಿಗರು, ವಿಶೇಷವಾಗಿ ಟೆಲ್ ಅವಿವ್ ಮತ್ತು ಜೆರುಸಲೆಮ್ ನಗರಗಳಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಇದನ್ನು ಇಸ್ರೇಲ್‌ನ ಇತಿಹಾಸ ದಲ್ಲಿಯೇ ಅತಿ ದೊಡ್ಡ ಪ್ರತಿಭಟನಾ ಚಳವಳಿ ಎಂದು ಪರಿಗಣಿಸಲಾಗಿದೆ. ಈ ಬಿಕ್ಕಟ್ಟು ಇಸ್ರೇಲಿ ಸಮಾಜದೊಳಗಿನ ಹಳೆಯ ಬಿರುಕು ಗಳನ್ನು ಮತ್ತಷ್ಟು ಆಳವಾಗಿಸಿದೆ.

Vishweshwar Bhat Column: ಭೈರಪ್ಪನವರ ಸ್ನೇಹಿತರು

Vishweshwar Bhat Column: ಭೈರಪ್ಪನವರ ಸ್ನೇಹಿತರು

ಮೈಸೂರಿನ ರೈಲು ಬರಲು ಇನ್ನೂ ಸಮಯವಿತ್ತು. ಆಗ ಅಲ್ಲಿಗೆ ಬಂದ ಭೈರಪ್ಪನವರ ಸ್ನೇಹಿತರು, ಗಣೇಶರನ್ನು ಗುರುತಿಸಿ ಮಾತಾಡಿಸಿದರು. ಹಾಗೆ ಅದೂ- ಇದೂ ಮಾತಾಡುತ್ತಾ ಗಣೇಶ್, “ನಿಮಗೆ ಭೈರಪ್ಪನವರ ಪರಿಚಯ ಎಷ್ಟು ಕಾಲದಿಂದ? ಅವರ ಎಷ್ಟು ಕಾದಂಬರಿಗಳನ್ನು ಓದಿದ್ದೀರಿ?" ಎಂದು ಕೇಳಿದರು. ಅದಕ್ಕೆ ಭೈರಪ್ಪನವರ ಸ್ನೇಹಿತರು, “ಸುಮಾರು ಇಪ್ಪತ್ತೈದು ವರ್ಷಗಳಿಂದ ಅವರು ನನ್ನ ಗೆಳೆಯರು. ಆದರೆ ನಾನು ಅವರ ಒಂದು ಕಾದಂಬರಿಯನ್ನೂ ಓದಿಲ್ಲ" ಎಂದರು.

Vishweshwar Bhat Column: ಪ್ರಣಬ್‌ ರಾಷ್ಟ್ರಪತಿ ಆಯ್ಕೆ

Vishweshwar Bhat Column: ಪ್ರಣಬ್‌ ರಾಷ್ಟ್ರಪತಿ ಆಯ್ಕೆ

ಅನ್ಸಾರಿಯವರನ್ನು ರಾಷ್ಟ್ರಪತಿ ಚುನಾವಣೆಗೆ ನಿಲ್ಲಿಸಿದರೆ, ಎಲ್ಲ ಪಕ್ಷಗಳಿಂದ ನಿರೀಕ್ಷಿತ ಬೆಂಬಲ ಸಿಗಲಿಕ್ಕಿಲ್ಲವೆಂದು ಸೋನಿಯಾಗೆ ಅನಿಸಿತಂತೆ. ಆ ಚುನಾವಣೆಯಲ್ಲಿ ಗೆಲ್ಲಲು ಮಮತಾ ಬ್ಯಾನರ್ಜಿ ಯವರ ಬೆಂಬಲ ತೀರಾ ಅಗತ್ಯವಾಗಿತ್ತು. ಬಂಗಾಳದ ಅಭ್ಯರ್ಥಿಯನ್ನು ಮಮತಾ ಬೆಂಬಲಿಸ ಬಹುದು ಎನಿಸಿದ್ದರಿಂದ ಪ್ರಣಬ್ ಪರ ಸೋನಿಯಾ ವಾಲಿದರು.

Vishweshwar Bhat Column: ಇದು ಭಾಗ್ಯ...ಇದು ಭಾಗ್ಯ !

ಇದು ಭಾಗ್ಯ...ಇದು ಭಾಗ್ಯ !

ಅದ್ಯಾವ ಗಳಿಗೆಯಲ್ಲಿ ಅವರ ತಾಯಿ ಈ ಪುಣ್ಯಾತ್ಮನನ್ನು ಹೆತ್ತಳೋ ಏನೋ? ಅದೃಷ್ಟ ಅಂದರೆ ಇದು! ರಿಚರ್ಡ್ ನಿಕ್ಸನ್ ಅಧ್ಯಕ್ಷರಾಗಿದ್ದಾಗ, ಅವರಿಗೆ ಸ್ಪೈರೋ ಅಗ್ನೆವ್ ಎಂಬುವವರು ಉಪಾ ಧ್ಯಕ್ಷರಾದ್ದರು. 1973ರಲ್ಲಿ ಅಗ್ನೆವ್ ಅವರು ಮೇರಿಲ್ಯಾಂಡ್ ಗವರ್ನರ್ ಅವರಿಂದ 30000 ಡಾಲರ್ ಲಂಚ ಸ್ವೀಕರಿಸಿದ ಆಪಾದನೆ ಕೇಳಿ ಬಂದಾಗ ಬೇರೆ ದಾರಿಯಿಲ್ಲದೇ ರಾಜೀನಾಮೆ ನೀಡುತ್ತಾರೆ.

Vishweshwar Bhat Column: ಸೀಟ್‌ ಬೆಲ್ಟ್‌ ಏಕೆ ಕಟ್ಟಿಕೊಳ್ಳಬೇಕು ?

ಸೀಟ್‌ ಬೆಲ್ಟ್‌ ಏಕೆ ಕಟ್ಟಿಕೊಳ್ಳಬೇಕು ?

ಹಾರಾಟದ ಸಮಯದಲ್ಲಿ ವಿಮಾನ ಸ್ವಲ್ಪ ಅದುರಲಾರಂಭಿಸಿದಾಗ, ತಕ್ಷಣ ಸೀಟ್ ಬೆಲ್ಟ್ ಕಟ್ಟಿ ಕೊಳ್ಳು ವಂತೆ ಧ್ವನಿವರ್ಧಕದಲ್ಲಿ‌ ಹೇಳುತ್ತಾರೆ. ಇನ್ನು ವಿಮಾನ ಲ್ಯಾಂಡ್ ಆಗುವಾಗಲೂ ಸೀಟ್ ಬೆಲ್ಟ್ ಕಟ್ಟಿ ಕೊಂಡಿದ್ದೀರಾ ಇಲ್ಲವಾ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ನಿಮ್ಮ‌ ಆಸನದ ಸನಿಹ ಬಂದು ಗಮನಿಸುತ್ತಾರೆ. ವಿಮಾನ ಹಾರಾಟದ ಸಂದರ್ಭದಲ್ಲಿ ಸೀಟ್ ಬೆಲ್ಟ್ ಕಟ್ಟಿಕೊಂಡಿದ್ದರೆ ಒಳ್ಳೆಯದು ಎಂಬ ಕಿವಿ‌ ಮಾತನ್ನು ಕನಿಷ್ಠ‌ ಒಂದೆರಡು ಸಲವಾದರೂ ಹೇಳುತ್ತಾರೆ.

Vishweshwar Bhat Column: ಸಂಪಾದಕರು ತಲೆತಗ್ಗಿಸುವುದು ಯಾವಾಗ ?

ಸಂಪಾದಕರು ತಲೆತಗ್ಗಿಸುವುದು ಯಾವಾಗ ?

ಸಾಮಾನ್ಯ ಜ್ಞಾನ ಇಲ್ಲದ ಉಪಸಂಪಾದಕನೊಬ್ಬ ಸಂಪಾದಕನ ಮರ್ಯಾದೆ ಕಳೆದಿದ್ದ. ಇಂಥ ಪ್ರಮಾದಗಳಾದಾಗ, ಸಂಪಾದಕನಿಗೆ ತಲೆತಗ್ಗಿಸಿ, ‘ತಪ್ಪಾಯ್ತು, ಕ್ಷಮಿಸಿ’ ಎಂದು ಹೇಳುವುದರ ಹೊರತಾಗಿ ಬೇರೆ ಯಾವ ಮಾರ್ಗವೂ ಇರುವುದಿಲ್ಲ. ಟೈಟಾನಿಕ್ ಹಡಗು ಮುಳುಗಿದಾಗ, ಅಮೆರಿಕದ ‘ಸಿರಾಕ್ಯೂಸ್ ಹೆರಾಲ್ಡ್’ ಪತ್ರಿಕೆ, World's Biggest Ship Crashes Into Iceberg At Night ಎಂದು ಪ್ರಿಂಟ್ ಮಾಡಿ ಯಡವಟ್ಟು ಮಾಡಿತ್ತು.

Vishweshwar Bhat Column: ರಾಜನೇ ಅರಸೊತ್ತಿಗೆ ಕಿತ್ತೊಗೆದು ಪ್ರಜಾಪ್ರಭುತ್ವವನ್ನು ಸ್ಥಾಪಿಸಿದ !

ರಾಜನೇ ಅರಸೊತ್ತಿಗೆ ಕಿತ್ತೊಗೆದು ಪ್ರಜಾಪ್ರಭುತ್ವವನ್ನು ಸ್ಥಾಪಿಸಿದ !

ಅಧಿಕಾರದ ವಿಷಯದಲ್ಲಿ ಎಲ್ಲರೂ ಪರಮ ಸ್ವಾರ್ಥಿಗಳೇ. ತಾವು ಅನುಭವಿಸುತ್ತಿರುವ ಅಧಿಕಾರ ವನ್ನು ಪತ್ನಿಗೋ, ಮಗನಿಗೋ ಕೊಡುವ ಸಂದರ್ಭದಲ್ಲೂ ಪೂರ್ಣ ಮನಸ್ಸಿನಿಂದ ವರ್ತಿಸಿದವರ ನಿದರ್ಶನ ಗಳು ವಿರಳ. ಹೆಂಡತಿಗೆ ಅಧಿಕಾರವನ್ನು ಹಸ್ತಾಂತರಿಸಿದಾಗಲೂ, ಅದನ್ನು ತಾವೇ ಚಲಾಯಿಸುವ ಒಂದು ತಂತ್ರದಂತೆ ಪ್ರಯೋಗಿಸಿದವರು ಚರಿತ್ರೆಯಲ್ಲಿ ಸಿಗುತ್ತಾರೆ.

Vishweshwar Bhat Column: ಸುರಕ್ಷತೆಯೇ ಬೀಜಮಂತ್ರ

Vishweshwar Bhat Column: ಸುರಕ್ಷತೆಯೇ ಬೀಜಮಂತ್ರ

ಏರ್ ಫ್ರಾನ್ಸ್‌ನ ಬೋಯಿಂಗ್ 777-300 ER ವಿಮಾನ, ರಾತ್ರಿ 11:30ಕ್ಕೆ ನ್ಯೂಯಾರ್ಕ್‌‌ ನ ಜಾನ್ ಎಫ್. ಕೆನಡಿ(ಜೆಎಫ್‌ ಕೆ) ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟು ಪ್ಯಾರಿಸ್ ಮಾರ್ಗದಲ್ಲಿ ಕ್ರಮಿಸುತ್ತಿತ್ತು. ಇದು ಸಾಮಾನ್ಯವಾಗಿ ದೀರ್ಘ ಪ್ರಯಾಣದ ವಿಮಾನಗಳಿಗೆ ಬಳಸಲಾಗುವ ಎರಡು ಎಂಜಿನ್‌ಗಳನ್ನು ಹೊಂದಿರುವ ಅತ್ಯಾಧುನಿಕ ವಿಮಾನವಾಗಿತ್ತು.

Vishweshwar Bhat Column: ಐದಾರು ಪ್ಯಾರಗಳಲ್ಲಿ ಡಾ.ಕಲಾಂ

Vishweshwar Bhat Column: ಐದಾರು ಪ್ಯಾರಗಳಲ್ಲಿ ಡಾ.ಕಲಾಂ

ಬಾಪು ಅವರ ಎಲ್ಲ ವಿಚಾರಗಳನ್ನು ಸ್ವೀಕರಿಸಲು ಅಸಮರ್ಥನಾದರೂ, ನಾನು ನನ್ನನ್ನು ಗಾಂಧಿವಾದಿ ಎಂದು ಕರೆದುಕೊಳ್ಳುತ್ತೇನೆ. ಡಾ.ಕಲಾಂ ಅವರು ವಿಜ್ಞಾನ ಮತ್ತು ಧರ್ಮದ ಮಧ್ಯೆ ಯಾವ ವೈರುಧ್ಯ ಅಥವಾ ಸಂಘರ್ಷಗಳನ್ನು ಕಾಣುವುದಿಲ್ಲ. ಅವರೊಂದಿಗೆ ಮಾತಾಡುವಾಗ, ‘ಸ್ವರ್ಗ ಮತ್ತು ನರಕ ಎಂಬುದಿಲ್ಲ. ಅವೇನಾದರೂ ಇದ್ದರೆ ನಮ್ಮ ಮನಸ್ಸಿನಲ್ಲಿ ಮಾತ್ರ’ ಎಂದು ಹೇಳಿದರು.

Vishweshwar Bhat Column: ಇದು ಭೂತಾನ್‌ ಜಗತ್ತಿಗೆ ನೀಡಿದ ಅನನ್ಯ ಮಾದರಿ !

ಇದು ಭೂತಾನ್‌ ಜಗತ್ತಿಗೆ ನೀಡಿದ ಅನನ್ಯ ಮಾದರಿ !

ಇಡೀ ವ್ಯವಸ್ಥೆ ತನಗರಿವಿಲ್ಲದೇ ಒಂದು ಶಿಸ್ತಿಗೆ, ಅಚ್ಚುಕಟ್ಟುತನಕ್ಕೆ ಒಳಗಾಗಿರುವುದು ಎದ್ದು ಕಾಣುತ್ತದೆ. ಇಡೀ ಜಗತ್ತು ಯಾವುದನ್ನು ಅಭಿವೃದ್ಧಿ ಎಂದು ಪರಿಗಣಿಸಿದೆಯೋ, ಯಾವುದಕ್ಕೆ ಇನ್ನಿಲ್ಲದ ಪ್ರಾಶಸ್ತ್ಯ, ಪ್ರಾಮುಖ್ಯ ನೀಡುತ್ತಿದೆಯೋ, ಭೂತಾನ್ ಅವನ್ನು ಅಪಸವ್ಯವೆಂದು ಭಾವಿಸಿ, ತನ್ನ ಜನರ ಜೀವನ ನೆಮ್ಮದಿಗೆ ಬೇಕಾದವುಗಳನ್ನೇ ಅಭಿವೃದ್ಧಿ ಎಂದು ಭಾವಿಸಿದೆ.

Vishweshwar Bhat Column: ತುರ್ತುಸ್ಥಿತಿ ಅಲ್ಲದ ತುರ್ತುಸ್ಥಿತಿ

Vishweshwar Bhat Column: ತುರ್ತುಸ್ಥಿತಿ ಅಲ್ಲದ ತುರ್ತುಸ್ಥಿತಿ

ಎಟಿಸಿ ನಿಯಂತ್ರಕರು ತುರ್ತುಸ್ಥಿತಿಯನ್ನು ಘೋಷಿಸಿ, ವಿಮಾನಕ್ಕೆ ಆದ್ಯತೆಯ ಲ್ಯಾಂಡಿಂಗ್ ಅವಕಾಶ ಕಲ್ಪಿಸಿದರು. ಅವರು ವಿಮಾನದ ಇಳಿಕೆ, ವೇಗ ಮತ್ತು ಭೂಸ್ಪರ್ಶದ ತಯಾರಿಗಳಿಗೆ ಸ್ಪಷ್ಟ ಮಾರ್ಗ ದರ್ಶನ ನೀಡಿದರು. ವಿಮಾನವು ಸ್ಥಳೀಯ ಕಾಲಮಾನ ಬೆಳಗ್ಗೆ 8.57ಕ್ಕೆ ನಿಗದಿತ ರನ್‌ವೇ ಮೇಲೆ ಸುರಕ್ಷಿತವಾಗಿ ಭೂಸ್ಪರ್ಶ ಮಾಡಿತು.

Vishweshwar Bhat Column: ವಿಮಾನಗಳು ಡಿಕ್ಕಿಯಾಗದಿರಲು ಕಾರಣ ?

Vishweshwar Bhat Column: ವಿಮಾನಗಳು ಡಿಕ್ಕಿಯಾಗದಿರಲು ಕಾರಣ ?

ಪ್ರತಿ ವಿಮಾನಕ್ಕೂ ವಾಯುಪಥ (airways) ಮತ್ತು ಎತ್ತರದ ಮಟ್ಟಗಳನ್ನು (flight levels) ನಿಯೋಜಿಸ ಲಾಗುತ್ತದೆ, ಇದರಿಂದ ಅವು ಒಂದಕ್ಕೊಂದು ಸಮೀಪಕ್ಕೆ ಬರದಂತೆ ತಡೆಯಲಾಗುತ್ತದೆ. ರಾಡಾರ್ ಮತ್ತು ಜಿಪಿಎಸ್ ವ್ಯವಸ್ಥೆಯ ಮೂಲಕ ವಿಮಾನಗಳ ಸ್ಥಾನ, ವೇಗ ಮತ್ತು ದಿಕ್ಕನ್ನು ನಿರಂತರವಾಗಿ ಗಮನಿಸ ಲಾಗುತ್ತದೆ.

Vishweshwar Bhat Column: ವಿಮಾನದಲ್ಲಿ ಬಿಸಿ ಆಹಾರ ಹೇಗೆ ?

Vishweshwar Bhat Column: ವಿಮಾನದಲ್ಲಿ ಬಿಸಿ ಆಹಾರ ಹೇಗೆ ?

ವಿಮಾನದಲ್ಲಿ ಆಹಾರವನ್ನು ತಯಾರಿಸುವುದಿಲ್ಲ. ಬದಲಿಗೆ, ನೆಲದ ಮೇಲೆ ತಯಾರಿಸಿ ವಿಮಾನ ದಲ್ಲಿ ಮರುಬಿಸಿ ಮಾಡಲಾಗುತ್ತದೆ. ಆಹಾರವನ್ನು ವಿಮಾನಯಾನ ಕಂಪನಿಗಳು ಅಥವಾ ಅವರೊಂದಿಗೆ ಒಪ್ಪಂದ ಮಾಡಿಕೊಂಡ ಕ್ಯಾಟರಿಂಗ್ ಕಂಪನಿಗಳು ನೆಲದಲ್ಲಿ ತಯಾರಿಸುತ್ತವೆ. ಮಾಂಸಾಹಾರಿ ಭಕ್ಷ್ಯ ಗಳನ್ನು ಭಾಗಶಃ ಪಾಕ ಮಾಡಲಾಗುತ್ತದೆ:

Vishweshwar Bhat Column: ವಿಮಾನದಲ್ಲಿ ಪ್ರಯಾಣಿಕ ಕಿರುಚಿದರೆ..

ವಿಮಾನದಲ್ಲಿ ಪ್ರಯಾಣಿಕ ಕಿರುಚಿದರೆ..

ಪ್ರಯಾಣಿಕನೊಬ್ಬ ಭಯದಿಂದ ಕಿರುಚಿದ ತಕ್ಷಣ, ಹತ್ತಿರದಲ್ಲಿರುವ ಕ್ಯಾಬಿನ್ ಸಿಬ್ಬಂದಿ ತಕ್ಷಣವೇ ಆ ಪ್ರಯಾಣಿಕನ ಬಳಿ ಹೋಗಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಾರೆ. ಸಿಬ್ಬಂದಿ ಆ ಪ್ರಯಾಣಿಕನೊಂದಿಗೆ ಮಾತನಾಡಿ, ಅವರ ಭಯಕ್ಕೆ ಕಾರಣವನ್ನು ಅರ್ಥಮಾಡಿ ಕೊಳ್ಳಲು ಪ್ರಯತ್ನಿಸುತ್ತಾರೆ.

Loading...