ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Profile

ವಿಶ್ವೇಶ್ವರ ಭಟ್‌

Editor in Chief, Author, Columnist

info1@vishwavani.news

ವಿಶ್ವೇಶ್ವರ ಭಟ್ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಮೂರೂರಿನವರು. ಧಾರವಾಡ ವಿವಿಯಲ್ಲಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದ ಬಳಿಕ, ಪತ್ರಿಕೋದ್ಯಮದಲ್ಲೂ ಸ್ನಾತಕೋತ್ತರ ಪದವಿ ಗಳಿಸಿದರು. ನಂತರ ಲಂಡನ್ನಲ್ಲಿ ಪತ್ರಿಕೋದ್ಯಮ ಕುರಿತಂತೆ ವಿಶೇಷ ಶಿಕ್ಷಣ ಪಡೆದರು. ಸಂಯುಕ್ತ ಕರ್ನಾಟಕದ ಮೂಲಕ ವೃತ್ತಿ ಆರಂಭಿಸಿದರು. ಬಳಿಕ ಕೇಂದ್ರ ಸಚಿವರಾಗಿದ್ದ ಅನಂತಕುಮಾರ್ ಅವರಿಗೆ ಮಾಧ್ಯಮ ಸಲಹೆಗಾರರಾಗಿ, ಏಷ್ಯನ್ ಕಾಲೇಜ್ ಆಫ್ ಜರ್ನಲಿಸಂನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದರು. ನಂತರ ವಿಜಯ ಕರ್ನಾಟಕ, ಕನ್ನಡಪ್ರಭ ಪ್ರಧಾನ ಸಂಪಾದಕರಾಗಿ ಆ ಪತ್ರಿಕೆಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ದರು. 2016ರಲ್ಲಿ ವಿಶ್ವವಾಣಿ ದಿನ ಪತ್ರಿಕೆ ಆರಂಭಿಸಿದರು. ವಿಶ್ವವಾಣಿ ಸಮೂಹ ಇದೀಗ ಲೋಕಧ್ವನಿ, ವಿಶ್ವವಾಣಿ ಟಿವಿ ಮತ್ತು ವಿಶ್ವವಾಣಿ ಪುಸ್ತಕ ಪ್ರಕಾಶನವನ್ನು ಒಳಗೊಂಡು ಬೆಳೆಯುತ್ತಿದೆ. ವಿಶ್ವೇಶ್ವರ ಭಟ್ 97 ಕೃತಿಗಳನ್ನು ರಚಿಸಿದ್ದಾರೆ. 'ನೂರೆಂಟು ವಿಶ್ವ', 'ಸಂಪಾದಕರ ಸದ್ಯಶೋಧನೆ', ಭಟ್ಟರ್ ಸ್ಕಾಚ್, 'ಇದೇ ಅಂತರಂಗ ಸುದ್ದಿ' ಹಾಗೂ 'ಆಸ್ಕ್ ದಿ ಎಡಿಟರ್' ಅಂಕಣಗಳನ್ನು ಬರೆಯುತ್ತಿದ್ದಾರೆ.

Articles
Vishweshwar Bhat Column: ವಿಮಾನದಲ್ಲಿ ಆನೆ ಸಾಗಾಟ ಹೇಗೆ ?

ವಿಮಾನದಲ್ಲಿ ಆನೆ ಸಾಗಾಟ ಹೇಗೆ ?

ಪ್ರಾಣಿ ವಿನಿಮಯ ಕಾರ್ಯಕ್ರಮದಡಿ ಬನ್ನೇರುಘಟ್ಟ ಜೈವಿಕ ಉದ್ಯಾನದ ನಾಲ್ಕು ಆನೆಗಳನ್ನು ವಿಮಾನದ ಮೂಲಕ ಜಪಾನಿಗೆ ಕಳುಹಿಸಿದ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗಿದೆಯಷ್ಟೆ. ಆನೆ ಯಂಥ ಬೃಹತ್ ಪ್ರಾಣಿಗಳನ್ನು ವಿಮಾನದಲ್ಲಿ ಹೇಗೆ ಸಾಗಿಸುತ್ತಾರೆ? ಇದು ನಿಜಕ್ಕೂ ಕುತೂಹಲ ಕಾರಿ. ಆನೆಯಂಥ ದೈತ್ಯ ಪ್ರಾಣಿಯನ್ನು ಸುಮಾರು ಎಂಟು ಗಂಟೆಗಳ ಕಾಲ ವಿಮಾನದಲ್ಲಿ ಸಾಗಿಸುವುದು ಅತ್ಯಂತ ಸಂಕೀರ್ಣ ಪ್ರಕ್ರಿಯೆ.

Vishweshwar Bhat Column: ಎಂಜಿನ್‌ಗೆ ನಾಣ್ಯ ಎಸೆಯಬಹುದೇ ?

ಎಂಜಿನ್‌ಗೆ ನಾಣ್ಯ ಎಸೆಯಬಹುದೇ ?

ಚೀನಾ ಸದರ್ನ್ ವಿಮಾನದಲ್ಲಿ ಗುವಾಂಗ್ಝೌಗೆ ಹೊರಟಿದ್ದ ಈಕೆ, ಸುಖ ಮತ್ತು ಸುರಕ್ಷಿತ ಪ್ರಯಾಣಕ್ಕೆ ದೇವರಲ್ಲಿ ಪ್ರಾರ್ಥಿಸಿ, ಎಂಜಿನ್ ಕಡೆಗೆ ಒಂದು ಮುಷ್ಟಿ ನಾಣ್ಯಗಳನ್ನು ಎಸೆದಳು. ಇದು ಸುರಕ್ಷಿತ ಪ್ರಯಾಣಕ್ಕೆ ದೇವರಿಗೆ ಸಲ್ಲಿಸುವ ಕಾಣಿಕೆ ಎಂದು ಆಕೆ ಭಾವಿಸಿದ್ದಳು. ಆ ನಾಣ್ಯಗಳಲ್ಲೊಂದು ನಿಜಕ್ಕೂ ಎಂಜಿನ್ ಒಳಗೆ ಹೋಗಿ ಬಿಟ್ಟಿತು. ಈ ಘಟನೆ ಸಣ್ಣದಾಗಿ ಕಂಡರೂ, ಪರಿಣಾಮಗಳು ದೊಡ್ಡದಾಗಿದ್ದವು. ಅದನ್ನು ಉಪೇಕ್ಷಿಸುವಂತಿರಲಿಲ್ಲ. ಇದನ್ನು ನೋಡಿದ ಗ್ರೌಂಡ್ ಸ್ಟಾಫ್, ತುರ್ತುಸ್ಥಿತಿಯನ್ನು ಘೋಷಿಸಿದ.

Vishweshwar Bhat Column: ಕಣ್ಣಿಗೆ ಕಾಣದ ಮೌಲ್ಯಗಳೇ ಸಂಸ್ಥೆಗಳ ನಡೆಸುವ ತೋರುದೀಪ !

ಕಣ್ಣಿಗೆ ಕಾಣದ ಮೌಲ್ಯಗಳೇ ಸಂಸ್ಥೆಗಳ ನಡೆಸುವ ತೋರುದೀಪ !

ಯಾವುದೇ ಮಾನವ ಸಮುದಾಯದ ಅದೃಶ ಸಂಪತ್ತೆಂದರೆ ಮೌಲ್ಯಗಳು. ಅದು ಸಂಸ್ಥೆಯಾಗಿರ ಬಹುದು, ಸಾಮಾಜಿಕ ಸಂಘಟನೆಯಿರಬಹುದು ಅಥವಾ ದೇಶವಿರಬಹುದು ಅವುಗಳಿಗೆ ಮೌಲ್ಯಗಳೇ ಮುಖ್ಯ. ಮೌಲ್ಯಗಳಲ್ಲಿ ಸ್ವಲ್ಪ ಬದಲಾವಣೆಯಾದರೆ ಅಥವಾ ಮೌಲ್ಯಗಳಲ್ಲಿ ತುಸು ಏರುಪೇರಾದರೆ ಸರ್ವತ್ರ ಅದರ ಪರಿಣಾಮ ಕಂಡುಬರುತ್ತದೆ. ಫ್ರೆಂಚ್ ಕ್ರಾಂತಿ ಇರಬಹುದು, ಅಮೆರಿಕದ ನಾಗರಿಕ ಹಕ್ಕುಗಳ ಚಳವಳಿ ಇರಬಹುದು, ಬ್ರಿಟನ್‌ನ ಕೈಗಾರಿಕಾ ಕ್ರಾಂತಿ ಇರಬಹುದು,

Vishweshwar Bhat Column: ಇದೊಂದು ಪುಟ್ಟ ಪ್ರಪಂಚ

ಇದೊಂದು ಪುಟ್ಟ ಪ್ರಪಂಚ

ಇಲ್ಲಿ ನಡೆಯುವ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಇದು ನಿಜಕ್ಕೂ ಒಂದು ಪುಟ್ಟ ಜಗತ್ತೇ ಅನ್ನಿಸುತ್ತದೆ. ವಿಮಾನ ನಿಲ್ದಾಣಗಳು ಜಾಗತಿಕ ಸಂಪರ್ಕದ ಕೇಂದ್ರಬಿಂದುಗಳಾಗಿವೆ. ಇಲ್ಲಿ ಜಗತ್ತಿನ ನಾನಾ ಮೂಲೆಗಳಿಂದ ಬರುವ ಜನರು ಭೇಟಿಯಾಗುತ್ತಾರೆ. ವಿವಿಧ ದೇಶಗಳ ಪ್ರಯಾಣಿಕರು, ವಿವಿಧ ಭಾಷೆಗಳನ್ನು ಮಾತನಾಡುವವರು, ವಿಭಿನ್ನ ಉಡುಪುಗಳನ್ನು ಧರಿಸಿದವರು, ಬೇರೆ ಬೇರೆ ಸಂಸ್ಕೃತಿಗಳ ಹಿನ್ನೆಲೆಯುಳ್ಳವರು ಇಲ್ಲಿ ಒಂದೆಡೆ ಸೇರುತ್ತಾರೆ.

Vishweshwar Bhat Column: ವಿಮಾನ ನಿಲ್ದಾಣ ನಿದ್ರಿಸುವುದಿಲ್ಲ

ವಿಮಾನ ನಿಲ್ದಾಣ ನಿದ್ರಿಸುವುದಿಲ್ಲ

ಅತ್ಯಾವಶ್ಯಕ ಸರಕುಗಳು, ಔಷಧಿಗಳು, ತಾಜಾ ಆಹಾರ ಪದಾರ್ಥಗಳು, ಇಲೆಕ್ಟ್ರಾನಿಕ್ಸ್ ಮತ್ತು ಇ-ಕಾಮರ್ಸ್ ವಸ್ತುಗಳು ನಿರಂತರವಾಗಿ ಸಾಗಣೆಯಾಗುತ್ತಿರುತ್ತವೆ. ಈ ಸರಕು ಸಾಗಣೆ ಕಾರ್ಯಾಚರಣೆಗಳು ಹೆಚ್ಚಾಗಿ ರಾತ್ರಿಯಲ್ಲಿ ನಡೆಯುತ್ತವೆ. ಏಕೆಂದರೆ ಆಗ ಪ್ರಯಾಣಿಕರ ವಿಮಾನಗಳ ದಟ್ಟಣೆ ಕಡಿಮೆ ಯಾಗಿರುತ್ತದೆ ಮತ್ತು ವಿಮಾನ ನಿಲ್ದಾಣದ ರನ್‌ವೇ ಮತ್ತು ಗೇಟ್‌ಗಳು ಸರಕು ವಿಮಾನಗಳಿಗೆ ಹೆಚ್ಚು ಲಭ್ಯವಿರುತ್ತವೆ. ‌ತುರ್ತು ವೈದ್ಯಕೀಯ ಹಾರಾಟಗಳು ( Medical Evacuations), ಮಾನವೀಯ ನೆರವು ವಿಮಾನ ಗಳು ಮತ್ತು ಮಿಲಿಟರಿ ಕಾರ್ಯಾಚರಣೆಗಳು ದಿನದ 24 ಗಂಟೆಯೂ ಸಿದ್ಧವಾಗಿರಬೇಕು.

Vishweshwar Bhat Column: ರನ್‌ ವೇ ಮೇಲಿನ ಗುರುತುಗಳು

ರನ್‌ ವೇ ಮೇಲಿನ ಗುರುತುಗಳು

ರನ್‌ವೇಯ ಪ್ರಾರಂಭದಲ್ಲಿ ದೊಡ್ಡ ಬಿಳಿ ಸಂಖ್ಯೆಗಳನ್ನು (ಉದಾಹರಣೆಗೆ 27 ಅಥವಾ 09) ನೀವು ನೋಡಿರುತ್ತೀರಿ. ಇವು ರನ್‌ವೇಯ ಕಾಂತೀಯ ದಿಕ್ಕನ್ನು ಸೂಚಿಸುತ್ತವೆ. ಉದಾಹರಣೆಗೆ, ‘27’ ಎಂದರೆ ರನ್‌ವೇಯು 270 ಡಿಗ್ರಿ (ಪಶ್ಚಿಮ) ದಿಕ್ಕಿನಲ್ಲಿ ಇದೆ ಎಂದು ಅರ್ಥ. ಹಾಗೆಯೇ ‘09’ ಎಂದರೆ 90 ಡಿಗ್ರಿ ಪೂರ್ವ ದಿಕ್ಕಿನಲ್ಲಿದೆ ಎಂದು ಅರ್ಥ.

Vishweshwar Bhat Column: ವಿಮಾನದ ಸಂಚಾರ ದೀಪಗಳು

Vishweshwar Bhat Column: ವಿಮಾನದ ಸಂಚಾರ ದೀಪಗಳು

ಹಸಿರು ಮತ್ತು ಬಿಳಿ ದೀಪಗಳು ಮಾತ್ರ ಕಾಣಿಸಿದರೆ ವಿಮಾನವು ನಿಮ್ಮಿಂದ ದೂರ ಸರಿಯುತ್ತಿದೆ ( Away from you) ಮತ್ತು ಅದರ ಎಡಭಾಗವು ನಿಮ್ಮ ಕಡೆಗಿದೆ ಎಂದರ್ಥ. ಕೆಂಪು ಮತ್ತು ಬಿಳಿ ದೀಪಗಳು ಮಾತ್ರ ಕಾಣಿಸಿದರೆ ವಿಮಾನವು ನಿಮ್ಮಿಂದ ದೂರ ಸರಿಯುತ್ತಿದೆ ಮತ್ತು ಅದರ ಬಲಭಾಗವು ನಿಮ್ಮ ಕಡೆಗಿದೆ ಎಂದರ್ಥ.

Vishweshwar Bhat Column: ಸರಕಾರಿ ಕಚೇರಿಗಳಲ್ಲಿ ನನ್ನ ಫೋಟೋ ಬೇಡ ಎಂದ ಸೆನೆಗಲ್‌ ಅಧ್ಯಕ್ಷರು !

ಸರಕಾರಿ ಕಚೇರಿಗಳಲ್ಲಿ ನನ್ನ ಫೋಟೋ ಬೇಡ ಎಂದ ಸೆನೆಗಲ್‌ ಅಧ್ಯಕ್ಷರು !

ಬಸಿರು ಡಿಯೋಮಯೆ ಫಾಯೆ ಸೆನೆಗಲ್‌ನ ಅಧ್ಯಕ್ಷರಾಗಿ ಅಧಿಕಾರ ವಹಿಸಿ ಕೊಂಡರು. ಅವರು ಕೇವಲ ೪೪ ವರ್ಷ ವಯಸ್ಸಿನವರಾಗಿದ್ದು, ಆಫ್ರಿಕಾದ ಅತ್ಯಂತ ಕಿರಿಯ ಅಧ್ಯಕ್ಷರಲ್ಲಿ ಒಬ್ಬರು. ಭ್ರಷ್ಟಾಚಾರ ವಿರೋಧಿ ಹೋರಾಟಗಾರರಾಗಿ ಮತ್ತು ವ್ಯವಸ್ಥೆಯ ಬದಲಾವಣೆಯ ಪ್ರತಿಪಾದಕರಾಗಿ ಅವರು ಗುರುತಿಸಿಕೊಂಡಿದ್ದಾರೆ. ಅವರ ಆ ಒಂದು ಹೇಳಿಕೆ ಅವರು ಪ್ರತಿಪಾದಿಸುವ ಮೌಲ್ಯಗಳು ಮತ್ತು ಆಡಳಿತ ವೈಖರಿಗೆ ಕನ್ನಡಿಯಾಗಿದೆ. ಅಷ್ಟಕ್ಕೂ ಬಸಿರು ಡಿಯೋಮಯೆ ಫಾಯೆ ಹೇಳಿದ್ದಾದರೂ ಏನು?

Vishweshwar Bhat Column: ಫ್ಲೈಟ್‌ ಟ್ರ್ಯಾಕಿಂಗ್‌ ಪ್ರಯೋಜನ

ಫ್ಲೈಟ್‌ ಟ್ರ್ಯಾಕಿಂಗ್‌ ಪ್ರಯೋಜನ

ವಿಮಾನವು ಯಾವುದೇ ಕ್ಷಣದಲ್ಲಿ ಎಲ್ಲಿದೆ ಎಂಬುದನ್ನು ಪೈಲಟ್‌ಗಳು ಮತ್ತು ವಾಯು ಸಂಚಾರ ನಿಯಂತ್ರಕರು ( Air Traffic Controllers) ಇದರಿಂದ ತಿಳಿದುಕೊಳ್ಳುತ್ತಾರೆ. ಇದು ಹೇಗೆ ಕಾರ್ಯ ನಿರ್ವಹಿ ಸುತ್ತದೆ? ವಿಮಾನದ ಸ್ಥಾನವನ್ನು ವಿಮಾನದಲ್ಲಿ ಅಳವಡಿಸಲಾಗಿರುವ GPS (Global Positioning System ), ನ್ಯಾವಿಗೇಷನ್ ಸಿಸ್ಟಮ್‌ಗಳು ಮತ್ತು ನೆಲ-ಆಧಾರಿತ ರಡಾರ್ ( Ground-based Radar ) ವ್ಯವಸ್ಥೆಗಳನ್ನು ಬಳಸಿ ನಿರ್ಧರಿಸಲಾಗುತ್ತದೆ.

Vishweshwar Bhat Column: ಇದು ವಿಮಾನವನ್ನು ಕೆಳಗಿಳಿಸುವುದಷ್ಟೇ ಅಲ್ಲ

ಇದು ವಿಮಾನವನ್ನು ಕೆಳಗಿಳಿಸುವುದಷ್ಟೇ ಅಲ್ಲ

ಅಷ್ಟಕ್ಕೂ ಲ್ಯಾಂಡಿಂಗ್ ಒಂದು ಸಂಕೀರ್ಣವಾದ, ಪೂರ್ವಯೋಜಿತ ಪ್ರಕ್ರಿಯೆಯಾಗಿದ್ದು, ಅದು ಹಲವು ಹಂತಗಳನ್ನು ಒಳಗೊಂಡಿದೆ. ಲ್ಯಾಂಡಿಂಗ್‌ನಲ್ಲಿ ಫ್ಲೇರ್ ( Flare )ಎನ್ನುವುದು ನಿರ್ಣಾಯಕ ಹಂತ. ವಿಮಾನವು ರನ್‌ವೇಗೆ ಹತ್ತಿರವಾದಾಗ, ಪೈಲಟ್‌ಗಳು ವಿಮಾನದ ಮೂಗ ( nose ) ನ್ನು ನಿಧಾನವಾಗಿ ಮೇಲಕ್ಕೆತ್ತುತ್ತಾರೆ. ಇದರಿಂದ ವಿಮಾನದ ಇಳಿಯುವ ವೇಗ ( descent rate ) ಕಡಿಮೆ ಯಾಗುತ್ತದೆ.

Vishweshwar Bhat Column: ಆಪ್ತ ಕಾರ್ಯದರ್ಶಿ ಹೆಚ್ಚು ಆಪ್ತರಾದರೆ ಎಷ್ಟು ಆಪತ್ತು !

ಆಪ್ತ ಕಾರ್ಯದರ್ಶಿ ಹೆಚ್ಚು ಆಪ್ತರಾದರೆ ಎಷ್ಟು ಆಪತ್ತು !

ಮಥಾಯ್ ಬಗ್ಗೆ ಖುಷ್ವಂತ್ ಸಿಂಗ್ ಹೇಳಿದ್ದಾರೆ - ‘ಅವನು ಕುಬ್ಜ ಮನುಷ್ಯ. ಅದೇ ಅವನ ಸಮಸ್ಯೆ. ಸಣ್ಣ ಕಾಲುಗಳುಳ್ಳ ಮನುಷ್ಯನನ್ನು ನಂಬಬಾರದು. ಕಾರಣ ಅವನ ಮಿದುಳು ನೆಲಕ್ಕೆ ಹತ್ತಿರ ದಲ್ಲಿರುತ್ತದೆ.’ ಆಪ್ತ ಕಾರ್ಯದರ್ಶಿ ಎಷ್ಟು ಆಪ್ತವಾಗಿರಬೇಕು ಎಂಬ ವಿಷಯ ಪ್ರಸ್ತಾಪವಾದಾಗಲೆಲ್ಲ ಮಥಾಯ್ ನೆನಪಾಗುತ್ತಾರೆ! ಏನೇ ಆದರೂ, ಮಥಾಯ್ ಅವರಷ್ಟು ಆಪ್ತರಾಗಬಾರದು!

Vishweshwar Bhat Column: ವಿಮಾನ ನಿರ್ವಹಣಾ ತಂತ್ರಜ್ಞರು

Vishweshwar Bhat Column: ವಿಮಾನ ನಿರ್ವಹಣಾ ತಂತ್ರಜ್ಞರು

ಇಂಧನ ದಕ್ಷತೆ ಮತ್ತು ಇತರ ಪ್ರಮುಖ ಕಾರ್ಯಕ್ಷಮತೆಯನ್ನು ಪರಿಶೀಲಿಸಲಾಗುತ್ತದೆ. ಇದು ಎಂಜಿನ್ ವಿಮಾನದಲ್ಲಿ ಹಾರುವ ಮೊದಲು ಸುರಕ್ಷಿತವಾಗಿ ಮತ್ತು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಖಚಿತಪಡಿಸುತ್ತದೆ. ಇತ್ತೀಚಿನ ವರ್ಷಗಳಲ್ಲಿ ಎಂಜಿನ್ ನಿರ್ವಹಣೆಯಲ್ಲಿ ಸುಧಾರಿತ ತಂತ್ರಜ್ಞಾನಗಳನ್ನು ಬಳಸಿಕೊಳ್ಳಲಾಗುತ್ತದೆ.

Vishweshwar Bhat Column: ವಿಮಾನದ ಟಾಯ್ಲೆಟ್‌ ಕತೆ

ವಿಮಾನದ ಟಾಯ್ಲೆಟ್‌ ಕತೆ

ವಿಮಾನದಲ್ಲಿರುವ ಶೌಚಾಲಯವು, ನಮ್ಮ ಮನೆಗಳಲ್ಲಿರುವ ಶೌಚಾಲಯಕ್ಕಿಂತ ಸಂಪೂರ್ಣವಾಗಿ ವಿಭಿನ್ನ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಮನೆಯಲ್ಲಿರುವ ಟಾಯ್ಲೆಟ್ಟಿನಲ್ಲಿ ನಾವು ನೀರನ್ನು ಬಳಸಿದರೆ, ವಿಮಾನದಲ್ಲಿ ತ್ಯಾಜ್ಯವನ್ನು ತೆಗೆದು ಹಾಕಲು ನಿರ್ವಾತ ಹೀರಿಕೊಳ್ಳುವ (ವ್ಯಾಕ್ಯೂಮ್ ಸಕ್ಷನ್) ತಂತ್ರಜ್ಞಾನವನ್ನು ಬಳಸಲಾಗುತ್ತದೆ. ಪ್ರತಿ ಫ್ಲಶ್‌ಗೆ ಕೇವಲ ಅರ್ಧ ಗ್ಯಾಲನ್ ದ್ರವವನ್ನು (ಸುಮಾರು 2 ಲೀಟರ್‌ಗಿಂತ ಕಡಿಮೆ) ಬಳಸುವ ಈ ವಿಧಾನ ನಂಬಲಾಗದಷ್ಟು ಪರಿಣಾಮಕಾರಿ ಯಾಗಿದೆ.

Vishweshwar Bhat Column: ಪೈಲಟ್‌ ಮತ್ತು ಪರಿಸ್ಥಿತಿ ಅರಿವು

ಪೈಲಟ್‌ ಮತ್ತು ಪರಿಸ್ಥಿತಿ ಅರಿವು

ಉತ್ತಮ ಪೈಲಟ್‌ಗಳು ಹಾರಾಟದ ಸಮಯದಲ್ಲಿ ನಿರಂತರವಾಗಿ ಈ ಚಿತ್ರಣವನ್ನು ಮನಸ್ಸಿನಲ್ಲಿ ರೂಪಿಸಿಕೊಳ್ಳುತ್ತಾರೆ. ಇದು ಕೇವಲ ಮಾಹಿತಿಯನ್ನು ಸಂಗ್ರಹಿಸುವುದಲ್ಲ, ಬದಲಿಗೆ ಆ ಮಾಹಿತಿ ಯನ್ನು ಅರ್ಥೈಸಿಕೊಂಡು ಭವಿಷ್ಯದ ಬಗ್ಗೆ ಊಹಿಸುವ ಸಾಮರ್ಥ್ಯವಾಗಿದೆ. ಪರಿಸ್ಥಿತಿಯ ಅರಿವನ್ನು ಮೂರು ಮುಖ್ಯ ಹಂತಗಳಲ್ಲಿ ವಿಂಗಡಿಸಬಹುದು.

Vishweshwar Bhat Column: ಮಾಯವಾದ ಮ್ಯಾಜಿಷಿಯನ್‌ ಸಂಪಾದಕ

ಮಾಯವಾದ ಮ್ಯಾಜಿಷಿಯನ್‌ ಸಂಪಾದಕ

ಕೆಬಿಜಿ ಸಂಗ್ರಹದಲ್ಲಿ ಓಶೋ ಪುಸ್ತಕಗಳಿದ್ದವು, ಅವೆಲ್ಲವನ್ನೂ ಅವರು ಓದಿಕೊಂಡಿದ್ದರು. ಒಮ್ಮೆ ನಾನು ಮೈಸೂರಿನ ಸಿದ್ಧಾರ್ಥ ನಗರದಲ್ಲಿರುವ ಅವರ ಮನೆಗೆ ಹೋದಾಗ ಓಶೋ ಪುಸ್ತಕಗಳ ಸಂಗ್ರಹವನ್ನು ತೋರಿಸಿದ್ದರು. ಅದಾದ ಬಳಿಕ ನಾನು ಅವರ ಸಂಪರ್ಕಕ್ಕೆ ಬಂದೆ. ನಾನು ಸಂಪಾದಕ ನಾಗಿದ್ದ ‘ವಿಜಯ ಕರ್ನಾಟಕ’, ‘ಕನ್ನಡ ಪ್ರಭ’ ಮತ್ತು ಈಗಿನ ನನ್ನ ಸಂಪಾದಕತ್ವದ ‘ವಿಶ್ವವಾಣಿ’ಯಲ್ಲಿ ಒಳ್ಳೆಯ ಶೀರ್ಷಿಕೆ ಗಳನ್ನು ಓದಿದಾಗ, ಹೊಸ ಪ್ರಯೋಗ ಮಾಡಿದಾಗ, ಉತ್ತಮ ವರದಿಗಳನ್ನು ಕಂಡಾಗ, ಕೆಬಿಜಿ ತಪ್ಪದೇ ಫೋನ್ ಮಾಡುತ್ತಿದ್ದರು.

Vishweshwar Bhat Column: ಕೊನೆಗೂ ಗಡ್ಡ ಕೆರೆದ ನಂತರವೇ ಆತ ನೇಣಿಗೆ ಕೊರಳು ಕೊಟ್ಟ !

ಕೊನೆಗೂ ಗಡ್ಡ ಕೆರೆದ ನಂತರವೇ ಆತ ನೇಣಿಗೆ ಕೊರಳು ಕೊಟ್ಟ !

ಅಂದು ಬೆಳಗಿನ ಉಪಾಹಾರ ಸೇವಿಸುವಾಗ, ನನ್ನ ಸ್ನೇಹಿತ ಹಿಡಿದ ಚಮಚ, ಪ್ಲೇಟಿಗೆ ತಾಕಿ ಸದ್ದು ಮಾಡುತ್ತಿತ್ತು. ನನಗೂ ಆ ಸದ್ದು ತುಸು ಕಿರಿಕಿರಿ ಅನಿಸುತ್ತಿತ್ತು. ಪೂಜಾರಿಯವರು ನನ್ನ ಸ್ನೇಹಿತ ನನ್ನುದ್ದೇಶಿಸಿ, “ನೀವು ಪತ್ರಕರ್ತರು. ಗಣ್ಯವ್ಯಕ್ತಿಗಳ ಜತೆ ಊಟ ಮಾಡುವ ಅವಕಾಶ ನಿಮಗೆ ಮೇಲಿಂದ ಮೇಲೆ ಸಿಗುತ್ತದೆ. ಹೀಗಾಗಿ ಟೇಬಲ್ ಮ್ಯಾನರ್ಸ್ ಬಹಳ ಮುಖ್ಯ. ನಾವು ಆಹಾರ ಸೇವಿಸುವಾಗ, ಬಾಯಿ ಮುಚ್ಚಿ ತಿನ್ನಬೇಕು. ಇಲ್ಲದಿದ್ದರೆ ನಾಯಿ ತಿನ್ನುವಾಗ ‘ಪಚಪಚ’ ಅಂತ ಸಪ್ಪಳವಾಗುತ್ತದಲ್ಲ, ಅಂಥ ಸಪ್ಪಳ ಬರುತ್ತದೆ.

Vishweshwar Bhat Column: ಏರ್‌ ಸ್ಪೇಸ್‌ ಎಂದರೇನು ?

ಏರ್‌ ಸ್ಪೇಸ್‌ ಎಂದರೇನು ?

ಏರ್‌ಸ್ಪೇಸ್ (Airspace) ಎಂದರೆ ಭೂಮಿ ಮೇಲಿರುವ ಗಗನ ಪ್ರದೇಶ, ವಿಶೇಷವಾಗಿ ವಿಮಾನಗಳು ಹಾರಾ ಡಲು ನಿರ್ದಿಷ್ಟ ಪಡಿಸಲಾಗಿರುವ ವ್ಯಾಪ್ತಿ. ಇದು ಯಾವುದೇ ದೇಶದ ಭೌಗೋಳಿಕ ಗಡಿಗಳ ಮೇಲಿರುವ ಗಗನ ಪ್ರದೇಶವಾಗಿರಬಹುದು ಅಥವಾ ಅಂತಾರಾಷ್ಟ್ರೀಯ ಸಮುದ್ರದ ಮೇಲಿರುವ ಹವಾಮಾನ ಸಂಬಂಧಿತ ಪ್ರದೇಶವಾಗಿರಬಹುದು.

Vishweshwar Bhat Column: ಆಟೋ ಪೈಲಟ್‌ ಬಗ್ಗೆ ಸಂದೇಹ

ಆಟೋ ಪೈಲಟ್‌ ಬಗ್ಗೆ ಸಂದೇಹ

ಆಟೋ ಪೈಲಟ್ ತಂತ್ರಜ್ಞಾನ ಜಾಗತಿಕ ವಿಮಾನಗಳಲ್ಲಿ ಅತ್ಯಂತ ಪ್ರಗತಿಶೀಲವಾಗಿರುವುದು ನಿಜ. ವಿಮಾನ ಹಾರಾಟದ ವಿವಿಧ ಹಂತಗಳಲ್ಲಿ (ಟೇಕಾಫ್, ಲ್ಯಾಂಡಿಂಗ್ ಕ್ರೂಸಿಂಗ್) ಆಟೋ ಪೈಲಟ್ ವಿಶ್ವಾಸಾರ್ಹ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ದೀರ್ಘ ಪ್ರಯಾಣದ ಸಂದರ್ಭದಲ್ಲಿ ಪೈಲಟ್‌ ನ ಶ್ರಮ ಅಥವಾ ದಣಿವನ್ನು ಕಮ್ಮಿ ಮಾಡಲು ಆಟೋ ಪೈಲಟ್ ನೆರವಾಗುವುದು ಸುಳ್ಳಲ್ಲ. ‌

Vishweshwar Bhat Column: ಇಲ್ಲಿ ಮೀನು ಮಾರುಕಟ್ಟೆ ಶಾಂತ, ಜನಜೀವನ ಪ್ರಶಾಂತ !

ಇಲ್ಲಿ ಮೀನು ಮಾರುಕಟ್ಟೆ ಶಾಂತ, ಜನಜೀವನ ಪ್ರಶಾಂತ !

ನಾನು ಯಾವುದೇ ಊರಿಗೆ ಹೋದರೂ, ಬೆಳಗ್ಗೆ ರೂಮಿಗೆ ಪತ್ರಿಕೆ ಹಾಕುವಂತೆ ಹೇಳುತ್ತೇನೆ. ಒಂದು ವೇಳೆ ಸಾಧ್ಯವಿಲ್ಲ ಅಂತ ಹೇಳಿದರೆ, ನನ್ನ ಬುಕಿಂಗ್ ರದ್ದು ಮಾಡುವುದಾಗಿ ಹುಸಿ ಕೋಪ ಪ್ರದರ್ಶಿಸುತ್ತೇನೆ. ಒಂದು ಪತ್ರಿಕೆಯನ್ನು ಪೂರೈಸಲು ಆಗದಿದ್ದರೆ ಹೇಗೆ ಎಂದು ಸಣ್ಣ ಮುನಿಸು ವ್ಯಕ್ತಪಡಿಸಿದ ಬಳಿಕ ಯಾರೂ ಇಲ್ಲ ಎಂದು ಹೇಳುವುದಿಲ್ಲ.

Vishweshwar Bhat Column:  ನೀರು, ದುಂಬಿ ಇತ್ಯಾದಿ

ನೀರು, ದುಂಬಿ ಇತ್ಯಾದಿ

ಭಾಷಾ ತಜ್ಞರ ಪ್ರಕಾರ, ಯಾವುದೇ ಭಾಷೆಯಲ್ಲಿ ಒಂದು ಪದವನ್ನು ಹೇಳಲು ಆರಕ್ಕಿಂತ ಹೆಚ್ಚು ಪದಗಳಿ ದ್ದರೆ, ಆ ಭಾಷೆ ಸಂಪದ್ಭರಿತವಾದ, ಜನಬಳಕೆಯ ಭಾಷೆ. ಸಂಸ್ಕೃತ ಯಾಕೆ ಪರಿಪೂರ್ಣ ಮತ್ತು ಸಂಪದ್ಭ ರಿತ ಭಾಷೆ ಎನ್ನಲು ಇದೊಂದೇ ನಿದರ್ಶನ ಸಾಕು. ಸಂಸ್ಕೃತದಲ್ಲಿ ಬಹುತೇಕ ಪದಗಳನ್ನು ಬಣ್ಣಿಸಲು ಐದಕ್ಕಿಂತ ಹೆಚ್ಚು ಪದಗಳಿವೆ.

Vishweshwar Bhat Column: ವಿಮಾನದ ಟೈರುಗಳ ಮಹತ್ವ

ವಿಮಾನದ ಟೈರುಗಳ ಮಹತ್ವ

ವಿಮಾನಗಳು ತೀವ್ರ ವೇಗದಲ್ಲಿ ಲ್ಯಾಂಡ್ ಆಗುವಾಗ ಅದರ ಸಂಪೂರ್ಣ ಭಾರ ಬೀಳುವುದೇ ಟೈರುಗಳ ಮೇಲೆ. ವಿಮಾನದ ಟೈರುಗಳು ಭೂಮಿಯ ಮೇಲಿನ ಚಲನವಲನಗಳಿಗಾಗಿ ಮಾತ್ರ ಬೇಕು. ಇವು ಟೇಕ್-ಆಫ್ (Take-off) , ಲ್ಯಾಂಡಿಂಗ್ ( Landing ), ಟ್ಯಾಕ್ಸಿಯಿಂಗ್ ( Taxiing) ವೇಳೆ ವಿಮಾನವನ್ನು ಪರಿಣಾಮಕಾರಿಯಾಗಿ ಸಮರ್ಥಿಸಿಕೊಳ್ಳುವ ಶಕ್ತಿಶಾಲಿ ಭಾಗಗಳಾಗಿವೆ. ‌

Vishweshwar Bhat Column: ವಿಮಾನವನ್ನು ಪಾರ್ಕ್‌ ಮಾಡುವುದು

ವಿಮಾನವನ್ನು ಪಾರ್ಕ್‌ ಮಾಡುವುದು

ವಿಮಾನ ನಿಲ್ದಾಣದಲ್ಲಿ ವಿಮಾನಗಳನ್ನು ನಿಲ್ಲಿಸಲು (ಪಾರ್ಕ್ ಮಾಡುವುದು) ಒಂದು ಕ್ರಮವಿದೆ. ವಿಮಾನವನ್ನು ಏರೋ ಬ್ರಿಡ್ಜ್‌ ಹತ್ತಿರ ನಿಲ್ಲಿಸುವ ಪ್ರಕ್ರಿಯೆ ಬಹುಮಟ್ಟಿಗೆ ಸೂಕ್ಷ್ಮ ಹಾಗೂ ನಿರ್ದಿಷ್ಟ ಮಾರ್ಗಸೂಚಿಗಳ ಪಾಲನೆಯಿಂದ ಕೂಡಿದೆ. ಈ ಪ್ರಕ್ರಿಯೆಯಲ್ಲಿ ಗ್ರೌಂಡ್ ಸ್ಟಾಫ್ ಅಥವಾ ನೆಲದ ಸಿಬ್ಬಂದಿಯ ಪಾತ್ರ ಅತ್ಯಂತ ಮುಖ್ಯ. ಅವರು ನೀಡುವ ಸೂಚನೆಗಳು ವಿಮಾನವನ್ನು ‌ ಸುರಕ್ಷಿತ ವಾಗಿ, ನಿರ್ದಿಷ್ಟ ಸ್ಥಳದಲ್ಲಿ ನಿಲ್ಲಿಸಲು ನೆರವಾಗುತ್ತದೆ.

Vishweshwar Bhat Column: ತಕ್ಷಣ ಲ್ಯಾಂಡ್‌ ಮಾಡಬಹುದಾ ?

ತಕ್ಷಣ ಲ್ಯಾಂಡ್‌ ಮಾಡಬಹುದಾ ?

ವಿಮಾನದ ಭಾರ ಜಾಸ್ತಿಯಿರುವಾಗ ಲ್ಯಾಂಡ್ ಮಾಡುವುದು ಸುರಕ್ಷಿತವಲ್ಲ. ವಿಮಾನ ಲ್ಯಾಂಡ್ ಆಗುವಾಗ ಅದರ ಗರಿಷ್ಠ ಇಳಿಯುವ ತೂಕ ಒಂದು ಮಿತಿಗಿಂತ ಜಾಸ್ತಿಯಾದರೆ, ಲ್ಯಾಂಡಿಂಗ್ ಗಿಯರ್ (landing gear)ಗಳ ಮೇಲೆ ಭಾರ ಬಿದ್ದು ಅದಕ್ಕೆ ಧಕ್ಕೆಯಾಗಬಹುದು. ಇದು ವಿಮಾನದ ರಚನೆಯ ಮೇಲೆ ಬಲವಾದ ಪ್ರಭಾವ (structural damage) ಬೀರಬಹುದು.

Vishweshwar Bhat Column: ಬೆಳಗಾವಿಗೆ ಹೋಗಿ ಕುಂದಾ ನೋಡಿ, ರುಚಿ ಸವಿಯದೇ ಬಂದಂತೆ !

ಬೆಳಗಾವಿಗೆ ಹೋಗಿ ಕುಂದಾ ನೋಡಿ, ರುಚಿ ಸವಿಯದೇ ಬಂದಂತೆ !

ವಿಶಾಲವಾದ ನದಿಯೊಂದು ಇದ್ದಕ್ಕಿದ್ದಂತೆ ಜಲಪಾತವಾದರೆ ಹೇಗಿರುವುದೋ, ಹಾಗಿದೆ. ಅಷ್ಟು ಎತ್ತರದಿಂದ ನೀರು ಧುಮುಕಿದರೂ, ಸ್ವಲ್ಪವೂ ಸದ್ದೇ ಇಲ್ಲ. ಇದನ್ನು ಮೌನ ಜಲಪಾತ ಅಂತಾನೂ ಕರೆಯುತ್ತಾರೆ. ಆ ಫಾಲ್ಸ್‌ಗೆ ಹೋಗುವುದೇ ಒಂದು ವಿಶೇಷ ಅನುಭವ. ಆ ಮಾರ್ಗವೇ ಒಂದು ಪ್ರೇಕ್ಷಣೀಯ ಸ್ಥಳ. ಇದು ಕೇವಲ ಜಲಪಾತವಲ್ಲ.

Loading...