ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ
Profile

ವಿಶ್ವೇಶ್ವರ ಭಟ್‌

Editor in Chief, Author, Columnist

info1@vishwavani.news

ವಿಶ್ವೇಶ್ವರ ಭಟ್ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಮೂರೂರಿನವರು. ಧಾರವಾಡ ವಿವಿಯಲ್ಲಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದ ಬಳಿಕ, ಪತ್ರಿಕೋದ್ಯಮದಲ್ಲೂ ಸ್ನಾತಕೋತ್ತರ ಪದವಿ ಗಳಿಸಿದರು. ನಂತರ ಲಂಡನ್ನಲ್ಲಿ ಪತ್ರಿಕೋದ್ಯಮ ಕುರಿತಂತೆ ವಿಶೇಷ ಶಿಕ್ಷಣ ಪಡೆದರು. ಸಂಯುಕ್ತ ಕರ್ನಾಟಕದ ಮೂಲಕ ವೃತ್ತಿ ಆರಂಭಿಸಿದರು. ಬಳಿಕ ಕೇಂದ್ರ ಸಚಿವರಾಗಿದ್ದ ಅನಂತಕುಮಾರ್ ಅವರಿಗೆ ಮಾಧ್ಯಮ ಸಲಹೆಗಾರರಾಗಿ, ಏಷ್ಯನ್ ಕಾಲೇಜ್ ಆಫ್ ಜರ್ನಲಿಸಂನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದರು. ನಂತರ ವಿಜಯ ಕರ್ನಾಟಕ, ಕನ್ನಡಪ್ರಭ ಪ್ರಧಾನ ಸಂಪಾದಕರಾಗಿ ಆ ಪತ್ರಿಕೆಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ದರು. 2016ರಲ್ಲಿ ವಿಶ್ವವಾಣಿ ದಿನ ಪತ್ರಿಕೆ ಆರಂಭಿಸಿದರು. ವಿಶ್ವವಾಣಿ ಸಮೂಹ ಇದೀಗ ಲೋಕಧ್ವನಿ, ವಿಶ್ವವಾಣಿ ಟಿವಿ ಮತ್ತು ವಿಶ್ವವಾಣಿ ಪುಸ್ತಕ ಪ್ರಕಾಶನವನ್ನು ಒಳಗೊಂಡು ಬೆಳೆಯುತ್ತಿದೆ. ವಿಶ್ವೇಶ್ವರ ಭಟ್ 97 ಕೃತಿಗಳನ್ನು ರಚಿಸಿದ್ದಾರೆ. 'ನೂರೆಂಟು ವಿಶ್ವ', 'ಸಂಪಾದಕರ ಸದ್ಯಶೋಧನೆ', ಭಟ್ಟರ್ ಸ್ಕಾಚ್, 'ಇದೇ ಅಂತರಂಗ ಸುದ್ದಿ' ಹಾಗೂ 'ಆಸ್ಕ್ ದಿ ಎಡಿಟರ್' ಅಂಕಣಗಳನ್ನು ಬರೆಯುತ್ತಿದ್ದಾರೆ.

Articles
Vishweshwar Bhat Column: ಒಳ್ಳೆಯ ಯೋಜನೆ, ಕೆಟ್ಟ ಅನುಷ್ಠಾನ

Vishweshwar Bhat Column: ಒಳ್ಳೆಯ ಯೋಜನೆ, ಕೆಟ್ಟ ಅನುಷ್ಠಾನ

ಪರಿಸರ ಪ್ರೇಮಿಗಳು ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳು ಇದಕ್ಕೆ ಬೆಂಬಲ ನೀಡಿದ್ದವು. ಈ ಯೋಜನೆ ಯ ಮುಖ್ಯಗುರಿ- ಜೈವಿಕ ವೈವಿಧ್ಯವನ್ನು ಹೆಚ್ಚಿಸುವುದು, ಪ್ರವಾಸೋದ್ಯಮದ ಮೂಲಕ ದೇಶದ ಆರ್ಥಿಕತೆಯನ್ನು ಸುಧಾರಿಸುವುದು, ಅಳಿವಿನಂಚಿನಲ್ಲಿರುವ ಪ್ರಾಣಿಗಳಿಗೆ ಹೊಸ ಆವಾಸ ಸ್ಥಾನ ಕಲ್ಪಿಸುವುದು.

Vishweshwar Bhat Column: ಹೋಲಿ ಗ್ರೇಲ್‌ ಎಂದರೇನು ?

Vishweshwar Bhat Column: ಹೋಲಿ ಗ್ರೇಲ್‌ ಎಂದರೇನು ?

ಕ್ರೈಸ್ತ ಧರ್ಮದ ನಂಬಿಕೆಗಳ ಪ್ರಕಾರ, ಏಸು ಕ್ರಿಸ್ತ ತಮ್ಮ ಶಿಷ್ಯರೊಂದಿಗೆ ನಡೆಸಿದ ಕೊನೆಯ ಔತಣ ಕೂಟದಲ್ಲಿ (The Last Supper) ದ್ರಾಕ್ಷಾರಸ ಕುಡಿಯಲು ಬಳಸಿದ ಕಪ್ ಅಥವಾ ಪಾತ್ರೆ ಯನ್ನು ‘ಹೋಲಿ ಗ್ರೇಲ್’ ಎಂದು ಕರೆಯಲಾಗುತ್ತದೆ. ಮತ್ತೊಂದು ಪ್ರಬಲ ನಂಬಿಕೆಯ ಪ್ರಕಾರ, ಕ್ರಿಸ್ತರನ್ನು ಶಿಲುಬೆಗೇರಿಸಿ ದಾಗ ಅವರ ದೇಹದಿಂದ ಹರಿದ ಪವಿತ್ರ ರಕ್ತವನ್ನು ಸಂಗ್ರಹಿಸಲು ಜೋಸೆಫ್ ಆಫ್ ಅರಿಮತಿಯಾ ಇದೇ ಪಾತ್ರೆಯನ್ನು ಬಳಸಿದ್ದರು ಎನ್ನಲಾಗುತ್ತದೆ. ‌

Vishweshwar Bhat Column: ವಿಶ್ವದಲ್ಲಿ ಸ್ಟಾರ್‌ಬಕ್ಸ್ ಇಲ್ಲದ ದೇಶವಿಲ್ಲ, ಇಸ್ರೇಲ್‌ʼನಲ್ಲಿ ಅದೂ ಇಲ್ಲ !

ವಿಶ್ವದಲ್ಲಿ ಸ್ಟಾರ್‌ಬಕ್ಸ್ ಇಲ್ಲದ ದೇಶವಿಲ್ಲ, ಇಸ್ರೇಲ್‌ʼನಲ್ಲಿ ಅದೂ ಇಲ್ಲ !

ಇಸ್ರೇಲಿಗಳು ಕಾಫಿ ವಿಷಯದಲ್ಲಿ ಬಹಳ ಕಟ್ಟುನಿಟ್ಟು. ಅವರಿಗೆ ಕಾಫಿ ಎಂದರೆ ಕೇವಲ ಒಂದು ಪಾನೀಯವಲ್ಲ, ಅದೊಂದು ಭಾವನೆ ಮತ್ತು ಸಂಸ್ಕೃತಿ. 2001ರಲ್ಲಿ ಸ್ಟಾರ್‌ಬಕ್ಸ್ ಬಹಳ ಅದ್ದೂರಿ‌ ಯಾಗಿ ಇಸ್ರೇಲ್ ಮಾರುಕಟ್ಟೆಗೆ ಪ್ರವೇಶಿಸಿತು. ‘ಶಾಲೋಮ್ ಕಾಫಿ ಲಿಮಿಟೆಡ್’ ಎಂಬ ಸ್ಥಳೀಯ ಸಂಸ್ಥೆಯೊಂದಿಗೆ ಕೈಜೋಡಿಸಿ ಆರು ಶಾಖೆಗಳನ್ನು ತೆರೆಯಿತು. ಆದರೆ, ಕೇವಲ ಎರಡು ವರ್ಷ ಕಳೆಯುವಷ್ಟರಲ್ಲಿ (2003) ಸುಮಾರು 6 ಮಿಲಿಯನ್ ಡಾಲರ್ ನಷ್ಟ ಅನುಭವಿಸಿ ತನ್ನೆಲ್ಲ ಶಾಖೆ ಗಳನ್ನು ಮುಚ್ಚಿತು.

Vishweshwar Bhat Column: ಇನ್ನೂರು ವರ್ಷಗಳ ಬಳಿಕ ಸಿಕ್ಕಿತು !

Vishweshwar Bhat Column: ಇನ್ನೂರು ವರ್ಷಗಳ ಬಳಿಕ ಸಿಕ್ಕಿತು !

ಸುಮಾರು 100 ವರ್ಷಗಳ ಹಿಂದೆ, ಈ ಚಿತ್ರವನ್ನು ಪತ್ತೆಹಚ್ಚಲು ನಡೆದ ಗಂಭೀರ ಪ್ರಯತ್ನಗಳ ಬಗ್ಗೆ ಡಾಯ್ಲ್ ವರದಿ ಮಾಡಿದ್ದರು. ‘ಸ್ಕಾಟ್ಲೆಂಡ್‌ನ ಶ್ರೇಷ್ಠ ಕಲಾವಿದ ಚಿತ್ರಿಸಿದ ಶ್ರೇಷ್ಠ ಸ್ಕಾಟ್ಸ್‌ಮನ್‌ನ ಭಾವ ಚಿತ್ರ’ ಎಂದು ಇದನ್ನು ಕರೆಯಲಾಗುತ್ತಿತ್ತು. ಬರ್ನ್ಸ್‌ ಅವರ ಅಭಿಮಾನಿಗಳು ಮತ್ತು ಕಲಾರಸಿಕರು ಇದನ್ನು ‘ಕಲಾಪ್ರಪಂಚದ ಹೋಲಿ ಗ್ರೇಲ್’ ಎಂದು ಪರಿಗಣಿಸಿದ್ದರು.

Vishweshwar Bhat Column: ಪ್ರತಿಭಟನೆಯಲ್ಲಿ ಸೃಜನಶೀಲತೆ

Vishweshwar Bhat Column: ಪ್ರತಿಭಟನೆಯಲ್ಲಿ ಸೃಜನಶೀಲತೆ

ಇಂಥದೇ ಘಟನೆ ಸರ್ಬಿಯಾ ದೇಶದಲ್ಲೂ ನಡೆದಿದೆ. ಅಲ್ಲಿನ ನೊವಿಸಾದ್ ಎಂಬ ನಗರದಲ್ಲಿ ನಡೆದ ‘ರಬ್ಬರ್ ಬಾತುಕೋಳಿಗಳ ಕ್ರಾಂತಿ’ ನಾಗರಿಕ ಸಮಾಜಕ್ಕೆ ಒಂದು ಹೊಸ ಪಾಠವನ್ನು ಕಲಿಸಿದೆ. ರಸ್ತೆಯ ಗುಂಡಿಗಳ ಬಗ್ಗೆ ಅಧಿಕಾರಿಗಳ ಮೇಲೆ ಕೂಗಾಡಿ, ಪ್ರತಿಭಟನೆ ಮಾಡುವ ಬದಲು, ಸೃಜನ ಶೀಲತೆ ಮತ್ತು ಹಾಸ್ಯದ ಮೂಲಕ ಹೇಗೆ ಬದಲಾವಣೆ ತರಬಹುದು ಎಂಬುದಕ್ಕೆ ಅದು ಅದ್ಭುತ ಉದಾಹರಣೆ.

Vishweshwar Bhat Column: ಡಾ.ರಾಜಾರಾಮಣ್ಣ ಎಂಬ ನಿತ್ಯ ನೆನಪಿನ ಸ್ಥಾವರ

ಡಾ.ರಾಜಾರಾಮಣ್ಣ ಎಂಬ ನಿತ್ಯ ನೆನಪಿನ ಸ್ಥಾವರ

ಜನವರಿ 28. ಖ್ಯಾತ ಅಣುವಿಜ್ಞಾನಿ, ಪದ್ಮವಿಭೂಷಣ ಡಾ.ರಾಜಾ ರಾಮಣ್ಣ ಅವರ ಜನ್ಮದಿನ. ಅವರು ಬದುಕಿದ್ದಿದ್ದರೆ ಅವರಿಗೆ ನಿನ್ನೆ 101 ವರ್ಷ ಆಗುತ್ತಿತ್ತು. ನನಗೆ ಅವರೊಂದಿಗೆ ಸುಮಾರು ಹನ್ನೆರಡು ವರ್ಷಗಳ ಅನ್ಯೋನ್ಯ ಸಂಬಂಧವಿತ್ತು. ಅಣುವಿಜ್ಞಾನಿಯಾಗಿದ್ದ ಕಾರಣದಿಂದಲೋ, ಅವರು ಏರಿದ ಎತ್ತರದಿಂದಲೋ, ನನಗೆ ಅವರ ಜತೆ ಬೆರೆಯುವುದು ಆರಂಭದಲ್ಲಿ ಸುಲಭವಾಗಿರ ಲಿಲ್ಲ. ನಮ್ಮಿಬ್ಬರ ನಡುವಿನ ಅಂತರವನ್ನು ಕಿರಿದು ಮಾಡಿದವರು ಅವರೇ.

Vishweshwar Bhat Column: ಬಜೆಟ್‌ ಪ್ರೆಸ್‌ ಅಂತರಂಗ

Vishweshwar Bhat Column: ಬಜೆಟ್‌ ಪ್ರೆಸ್‌ ಅಂತರಂಗ

ನಾರ್ಥ್ ಬ್ಲಾಕ್‌ನ ಬಜೆಟ್ ಪ್ರೆಸ್ ಕೇವಲ ಯಂತ್ರಗಳಿರುವ ಜಾಗವಲ್ಲ. ಅದು ಭಾರತದ ಆರ್ಥಿಕ ಸಾರ್ವ ಭೌಮತ್ವದ ಮತ್ತು ಶಿಸ್ತಿನ ಸಂಕೇತ. ತಂತ್ರಜ್ಞಾನ ಎಷ್ಟೇ ಬೆಳೆದರೂ, ಬಜೆಟ್‌ನ ಗೌಪ್ಯತೆಯನ್ನು ಕಾಪಾ ಡುವಲ್ಲಿ ಈ ಸ್ಥಳವು ಇಂದಿಗೂ ತನ್ನದೇ ಆದ ಮಹತ್ವವನ್ನು ಉಳಿಸಿಕೊಂಡಿದೆ. ಅಲ್ಲಿ ನಡೆಯುವ ಪ್ರತಿಯೊಂದು ಮುದ್ರಣದ ಹೆಜ್ಜೆಯೂ ದೇಶದ ಅಭಿವೃದ್ಧಿಯ ಹಾದಿಯನ್ನು ನಿರ್ಧರಿಸುತ್ತದೆ.

V‌ishweshwar Bhat Column: ಎಡೆಲ್ಮನ್‌ ಟ್ರಸ್ಟ್‌ ಬ್ಯಾರೋಮೀಟರ್

ಎಡೆಲ್ಮನ್‌ ಟ್ರಸ್ಟ್‌ ಬ್ಯಾರೋಮೀಟರ್

ಜಗತ್ತಿನ ಅನೇಕ ದೇಶಗಳಲ್ಲಿ ಕಳೆದ ಇಪ್ಪತ್ತಾರು ವರ್ಷಗಳಿಂದ ಈ ಸಮೀಕ್ಷೆ ನಡೆಯುತ್ತಿದೆ. ಆ ಪ್ರಕಾರ ಜಗತ್ತಿನೆಡೆ ನಂಬಿಕೆ ಕ್ಷೀಣಿಸುತ್ತಿದೆ’ ಎಂದು ಹೇಳಿದರು. ಹಾಗಾದರೆ ಎಡೆಲ್ಮನ್ ಟ್ರಸ್ಟ್‌ ಬ್ಯಾರೋಮೀಟರ್ ಸಮೀಕ್ಷೆ ಅಂದ್ರೆ ಏನು? ಈ ಸಮೀಕ್ಷೆಗೆ ಯಾಕೆ ಅಷ್ಟು ಮಹತ್ವ? ಇದು ಜಾಗತಿಕ ಮಟ್ಟದಲ್ಲಿ ಸರಕಾರಗಳು, ವ್ಯವಹಾರ ಸಂಸ್ಥೆಗಳು, ಮಾಧ್ಯಮಗಳು ಮತ್ತು ಎನ್‌ಜಿಒ ಗಳ (NGO) ಮೇಲಿರುವ ಸಾರ್ವಜನಿಕ ನಂಬಿಕೆಯನ್ನು ಅಳೆಯುವ ಒಂದು ವಾರ್ಷಿಕ ಸಮೀಕ್ಷೆಯಾಗಿದೆ. ‌

Vishweshwar Bhat Column: ಮಾರ್ಕ್ ಟಲಿ ನೆನಪು

Vishweshwar Bhat Column: ಮಾರ್ಕ್ ಟಲಿ ನೆನಪು

ನೀವು 80 ಮತ್ತು 90ರ ದಶಕದ ಕಾಲಕ್ಕೆ ಹೋಗಿ ನೋಡಿ. ಆಗಿನ್ನೂ ಚಾನೆಲ್‌ಗಳ ಅಬ್ಬರ ಇರಲಿಲ್ಲ, ಬ್ರೇಕಿಂಗ್ ನ್ಯೂಸ್‌ಗಳ ಆರ್ಭಟವಿರಲಿಲ್ಲ. ಸಂಜೆ ಏಳೋ ಎಂಟೋ ಗಂಟೆಯಾ ದಾಗ ಹಳ್ಳಿಹಳ್ಳಿಯ ಕಟ್ಟೆಗಳ ಮೇಲೆ ಕುಳಿತ ಜನರೆಲ್ಲ ಕಿವಿಗೊಡುತ್ತಿದ್ದುದು ರೇಡಿಯೋಕ್ಕೆ. ಇಂಗ್ಲಿಷ್ ಬಲ್ಲ ನಗರ ಪ್ರದೇಶಗಳ ಕೆಲ ಜನ ಬಿಬಿಸಿಯ ಆ ಒಂದು ಕಂಠಕ್ಕೆ ಎದುರು ನೋಡುತ್ತಿದ್ದರು- ‘ದಿಸ್ ಈಸ್ ಬಿಬಿಸಿ... ಐ ಆಮ್ ಮಾರ್ಕ್ ಟಲಿ’. ಅವರು ಹಾಗೆ ಇಂಗ್ಲಿಷ್‌ ನಲ್ಲಿ ಮಾತಾಡು ತ್ತಿದ್ದರೂ, ಇಂಗ್ಲಿಷ್ ಬಲ್ಲವರೆಲ್ಲರಿಗೂ ಅರ್ಥವಾಗುತ್ತಿತ್ತು.

Vishweshwar Bhat Column: ತಜ್ಞರ ಸಲಹೆ ತೀರಾ ಅಗತ್ಯ

Vishweshwar Bhat Column: ತಜ್ಞರ ಸಲಹೆ ತೀರಾ ಅಗತ್ಯ

ಬ್ಯಾಂಕ್ ಖಾತೆಗಳಲ್ಲಿ ಆಗುವ ಗಡಿಬಿಡಿಗಳಲ್ಲಿ ಇದೂ ಒಂದು. ಇಂಥ ಘಟನೆ ನಡೆದಾಗ ಆಗುವ ತಲ್ಲಣ ಊಹಿಸುವುದಕ್ಕೂ ಅಸಾಧ್ಯ. ಯಾರೂ ರಾಜಕುಮಾರ್ ಅವರ ನಡವಳಿಕೆ ಯ ಬಗ್ಗೆ ಸಂದೇಹಿಸುವುದು ಸಾಧ್ಯವಿರಲಿಲ್ಲ. ನೀವು ಎಂದಾದರೂ ಇಂಥ ವಿಚಿತ್ರ ಸನ್ನಿವೇಶ ಎದುರಿಸಿ ದಲ್ಲಿ, ನಿಮ್ಮ ದೃಷ್ಟಿಕೋನ ಸರಿಯಿದೆ ಎಂದಾದಲ್ಲಿ, ಇನ್ನೊಬ್ಬರ ದೃಷ್ಟಿಕೋನದಲ್ಲಿ ಅದು ತಪ್ಪಿರಲೂಬಹುದು.

Vishweshwar Bhat Column: ಟೆಲ್‌ ಅವಿವ್‌ʼನ ಮನೆ ಗೋಡೆಯೂ ಬದುಕುಳಿಯುವ ಅದಮ್ಯ ಚೇತನಕ್ಕೆ ಸಾಕ್ಷಿ!

ಟೆಲ್‌ ಅವಿವ್‌ʼನ ಮನೆ ಗೋಡೆಯೂ ಬದುಕುಳಿಯುವ ಅದಮ್ಯ ಚೇತನಕ್ಕೆ ಸಾಕ್ಷಿ!

ಹೀಬ್ರೂ ಭಾಷೆಯಲ್ಲಿ ‘ಮಮದ್’ ಎಂದರೆ ‘ವೈಯಕ್ತಿಕ ವಸತಿ ಸುರಕ್ಷಿತ ಸ್ಥಳ’ ಎಂದರ್ಥ. ಇದು ಮನೆಯ ಒಳಗೇ ಇರುವ ಒಂದು ಬಲವಾದ ಕಾಂಕ್ರೀಟ್ ಕೊಠಡಿ. 1990-91ರ ಕೊಲ್ಲಿ ಯುದ್ಧದ ಸಮಯದಲ್ಲಿ ಇಸ್ರೇಲ್ ಮೇಲೆ ರಾಕೆಟ್ ದಾಳಿಗಳು ನಡೆದ ನಂತರ, ಇಸ್ರೇಲ್ ಸರಕಾರ ಒಂದು ಕಟ್ಟುನಿಟ್ಟಾದ ನಿಯಮವನ್ನು ಜಾರಿಗೆ ತಂದಿತು.

Vishweshwar Bhat Column: ಶ್ವಾನರಕ್ಷಕ ಪಟ್ಟಿ

Vishweshwar Bhat Column: ಶ್ವಾನರಕ್ಷಕ ಪಟ್ಟಿ

ಸೌರಶಕ್ತಿಯಿಂದ ನಡೆಯುವ ಈ ‘ಮಿನುಗುವ ಪಟ್ಟಿ’ಗಳು ಇಂದು ಕೀನ್ಯಾದ ಬೀದಿನಾಯಿ ಗಳ ಪಾಲಿಗೆ ರಕ್ಷಾಕವಚವಾಗಿವೆ. ಏನಿದು ಮಿನುಗುವ ಪಟ್ಟಿಯ ತಂತ್ರಜ್ಞಾನ? ಕೀನ್ಯಾದ ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಬೀದಿನಾಯಿಗಳ ಸಂಖ್ಯೆ ಹೆಚ್ಚಿದೆ. ಕತ್ತಲೆಯಲ್ಲಿ ಈ ನಾಯಿಗಳು ರಸ್ತೆ ದಾಟುವಾಗ ವಾಹನ ಸವಾರರಿಗೆ ಕಾಣಿಸುವುದಿಲ್ಲ, ಇದರಿಂದಾಗಿ ಅಪಘಾತಗಳು ಸಂಭವಿಸುತ್ತಿದ್ದವು. ಈ ಸಮಸ್ಯೆಗೆ ಪರಿಹಾರವಾಗಿ ‘ಸೋಲಾರ್ ಕಾಲರ್’ಗಳನ್ನು ಪರಿಚಯಿಸ ಲಾಗಿದೆ.

‌Vishweshwar Bhat Column: ಪಾರಿವಾಳ ಮತ್ತು ಜಿಪಿಎಸ್

‌Vishweshwar Bhat Column: ಪಾರಿವಾಳ ಮತ್ತು ಜಿಪಿಎಸ್

ಪಾರಿವಾಳಗಳು ಸಾವಿರಾರು ಕಿಮೀ ದೂರದ ಅಪರಿಚಿತ ಪ್ರದೇಶಗಳಿಂದಲೂ ತಮ್ಮ ಗೂಡಿಗೆ ಅತ್ಯಂತ ನಿಖರವಾಗಿ ಮರಳಿ ಬರುವ ಸಾಮರ್ಥ್ಯವನ್ನು ಹೊಂದಿವೆ. ಈ ಅದ್ಭುತ ಶಕ್ತಿಯನ್ನು ’ಹೋಮಿಂಗ್ ಇನ್‌ಸ್ಟಿಂಕ್ಟ್’ (Homing Instinct) ಎಂದು ಕರೆಯಲಾಗುತ್ತದೆ. ಮಾನವನು ಜಿಪಿಎಸ್ ಕಂಡುಹಿಡಿಯುವ ಶತಮಾನಗಳ ಮೊದಲೇ ಪಾರಿವಾಳಗಳು ಈ ನೈಸರ್ಗಿಕ ತಂತ್ರಜ್ಞಾನ ವನ್ನು ಬಳಸುತ್ತಿದ್ದವು.

Vishweshwar Bhat Column: ಹದಿನೇಳು ವರ್ಷಗಳ ದ್ವೇಷ ಮತ್ತು ಸ್ನೇಹದ ಮರುಜನ್ಮ

ಹದಿನೇಳು ವರ್ಷಗಳ ದ್ವೇಷ ಮತ್ತು ಸ್ನೇಹದ ಮರುಜನ್ಮ

ಯಾವಾಗ ಇಬ್ಬರು ವ್ಯಕ್ತಿಗಳು ತಮ್ಮ ಕ್ಷೇತ್ರದಲ್ಲಿ ಅತ್ಯುನ್ನತ ಶಿಖರವನ್ನು ಏರುತ್ತಾರೋ, ಆಗ ಅವರ ನಡುವೆ ‘ನಾನು’ ಎಂಬ ಭಾವನೆ ಹೆಮ್ಮರವಾಗಿ ಬೆಳೆದು ಬಿಡುತ್ತವೆ. ದೈತ್ಯ ಪ್ರತಿಭೆಗಳ ನಡುವೆ ಎಷ್ಟೇ ಗೌರವವಿದ್ದರೂ, ಅಂತರಾಳದಲ್ಲಿ ಒಂದು ರೀತಿಯ ಸೂಕ್ಷ್ಮ ಸ್ಪರ್ಧೆ ಇದ್ದರಂತೂ ಅದು ಯಾವ ಕ್ಷಣದದರೂ ಸ್ಪೋಟಗೊಳ್ಳಲು ಒಂದು ಸಣ್ಣ ಕಿಡಿಗಾಗಿ ಕಾಯುತ್ತಿರುತ್ತದೆ.

Vishweshwar Bhat Column: ಯಾರು ಈ ಅರ್ಮಾಂಡೋ ?

Vishweshwar Bhat Column: ಯಾರು ಈ ಅರ್ಮಾಂಡೋ ?

ಅರ್ಮಾಂಡೋ ಕೇವಲ ಒಂದು ಹಕ್ಕಿಯಲ್ಲ, ಅದು ರೇಸಿಂಗ್ ಜಗತ್ತಿನಲ್ಲಿ ಅಜೇಯ ಶಕ್ತಿಯಾಗಿ ಗುರುತಿಸಲ್ಪಟ್ಟ ಅತ್ಯುನ್ನತ ಅಥ್ಲೀಟ್. 2019ರ ಮಾರ್ಚ್ ನಲ್ಲಿ ಆನ್‌ಲೈನ್ ಹರಾಜು ಸಂಸ್ಥೆಯಾದ ಪೈಪ (PIPA) ಮೂಲಕ ಅರ್ಮಾಂಡೋ ಹರಾಜಿಗೆ ಬಂದಿತು. ಆರಂಭದಲ್ಲಿ ಈ ಪಾರಿವಾಳವು ಸುಮಾರು 4-5 ಲಕ್ಷ ಯುರೋಗಳಿಗೆ ಮಾರಾಟವಾಗಬಹುದು ಎಂದು ಅಂದಾಜಿಸಲಾಗಿತ್ತು.

Vishweshwar Bhat Column: ಪಾರಿವಾಳಗಳ ರೇಸಿಂಗ್

Vishweshwar Bhat Column: ಪಾರಿವಾಳಗಳ ರೇಸಿಂಗ್

ಪಾರಿವಾಳಗಳ ರೇಸಿಂಗ್ (Pigeon Racing) ಎಂಬುದು ಕೇವಲ ಒಂದು ಹವ್ಯಾಸವಲ್ಲ, ಇದೊಂದು ಕೋಟ್ಯಂತರ ರುಪಾಯಿಗಳ ವಹಿವಾಟು ನಡೆಯುವ ಅಂತಾರಾಷ್ಟ್ರೀಯ ಕ್ರೀಡೆಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಒಂದು ರೇಸಿಂಗ್ ಪಾರಿವಾಳವು ಬರೋಬ್ಬರಿ 14-15 ಕೋಟಿ ರುಪಾಯಿ ಗಳಿಗೆ (1.9 ಮಿಲಿಯನ್ ಡಾಲರ್) ಮಾರಾಟವಾಗಿ ಇಡೀ ವಿಶ್ವವನ್ನೇ ಬೆರಗುಗೊಳಿಸಿತ್ತು

Vishweshwar Bhat Column: ಆಸ್ಟ್ರೇಲಿಯಾದಲ್ಲಿ ಅರೇಬಿಕ್‌ ಭಾಷೆ

Vishweshwar Bhat Column: ಆಸ್ಟ್ರೇಲಿಯಾದಲ್ಲಿ ಅರೇಬಿಕ್‌ ಭಾಷೆ

ಆಸ್ಟ್ರೇಲಿಯಾ ಇಂದು ವಿಶ್ವದ ಅತ್ಯಂತ ವೈವಿಧ್ಯಮಯ ದೇಶಗಳಲ್ಲಿ ಒಂದಾಗಿದೆ. ಇಂಗ್ಲಿಷ್ ಪ್ರಾಬಲ್ಯದ ಈ ನಾಡಿನಲ್ಲಿ ಅರೇಬಿಕ್ ಭಾಷೆ ಮೂರನೇ ಅತಿ ಹೆಚ್ಚು ಮಾತನಾಡುವ ಭಾಷೆಯಾಗಿ ಹೊರಹೊಮ್ಮಿದೆ ಅಂದರೆ ಅನೇಕರಿಗೆ ಅಚ್ಚರಿಯಾಗಬಹುದು. ಆಸ್ಟ್ರೇಲಿಯಾಕ್ಕೆ ಅರೇಬಿಕ್ ಭಾಷಿಕರ ಆಗಮನವು 19ನೇ ಶತಮಾನದ ಅಂತ್ಯದ ಆರಂಭವಾಯಿತು.

Vishweshwar Bhat Column: ದುರಂತಗಳ ಮೌನಜಾಡು

Vishweshwar Bhat Column: ದುರಂತಗಳ ಮೌನಜಾಡು

ದೊಡ್ಡ ತಾಂತ್ರಿಕ ದೋಷಗಳು ತಕ್ಷಣವೇ ಎಚ್ಚರಿಕೆಯ ಗಂಟೆ ಬಾರಿಸುತ್ತವೆ, ಚೆಕ್‌ಲಿಸ್ಟ್‌ಗಳನ್ನು ನೆನಪಿಸು ತ್ತವೆ ಮತ್ತು ಪೈಲಟ್ ತಕ್ಷಣದ ನಿರ್ಧಾರ ತೆಗೆದುಕೊಳ್ಳುವಂತೆ ಮಾಡುತ್ತವೆ. ಆದರೆ ಸಣ್ಣ ದೋಷಗಳು ಹಾಗಲ್ಲ. ಒಂದು ಸೆನ್ಸರ್ ವಿಮಾನದ ವೇಗವನ್ನು ಕೇವಲ ಶೇ.5ರಷ್ಟು ಕಡಿಮೆ ತೋರಿಸುತ್ತಿದ್ದರೆ, ಪೈಲಟ್‌ ಗೆ ಅದು ತಕ್ಷಣಕ್ಕೆ ತಿಳಿಯುವುದಿಲ್ಲ.

Vishweswhar Bhat Column: ಇಸ್ರೇಲಿಗೆ ಯುದ್ದದಲ್ಲಿ ಸೋಲುವ ಆಯ್ಕೆಯೇ ಇಲ್ಲ, ಸೋತರೆ ಅಸ್ತಿತ್ವವೇ ಇಲ್ಲ !

ಇಸ್ರೇಲಿಗೆ ಯುದ್ದದಲ್ಲಿ ಸೋಲುವ ಆಯ್ಕೆಯೇ ಇಲ್ಲ, ಸೋತರೆ ಅಸ್ತಿತ್ವವೇ ಇಲ್ಲ !

ವಿಶ್ವದ ಬಹುತೇಕ ರಾಷ್ಟ್ರಗಳು ತಮ್ಮ ರಕ್ಷಣಾ ಬಜೆಟ್ ಅನ್ನು ಅಧಿಕೃತವಾಗಿ ಘೋಷಿಸುತ್ತವೆ. ಆದರೆ ಇಸ್ರೇಲ್ ತನ್ನ ರಕ್ಷಣಾ ವೆಚ್ಚದ ನಿಖರ ಅಂಕಿ-ಅಂಶಗಳನ್ನು ಎಂದಿಗೂ ಸಂಪೂರ್ಣವಾಗಿ ಬಹಿರಂಗ ಪಡಿಸುವುದಿಲ್ಲ. ಜಗತ್ತಿನ ಯಾವುದೇ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗಿಂತ ಇಸ್ರೇಲ್ ತನ್ನ ಒಟ್ಟು ರಾಷ್ಟ್ರೀಯ ಉತ್ಪನ್ನದ (ಜಿಡಿಪಿ) ಅತಿ ದೊಡ್ಡ ಪಾಲನ್ನು ರಕ್ಷಣೆಗಾಗಿ ಮೀಸಲಿಡುತ್ತದೆ.

Vishweshwar Bhat Column: ಸಾಕುಪ್ರಾಣಿಗಳು ಬೇಕು

Vishweshwar Bhat Column: ಸಾಕುಪ್ರಾಣಿಗಳು ಬೇಕು

ಜಾಗರೂಕವಾಗಿ ಸಾಕುಪ್ರಾಣಿಗಳ ಮಾರುಕಟ್ಟೆಯು 2025ರ ವೇಳೆಗೆ ಸುಮಾರು 273 ಶತಕೋಟಿ ಡಾಲರ್ ತಲುಪುವ ಅಂದಾಜಿದೆ. ಸಾಕುಪ್ರಾಣಿಗಳಿಗಾಗಿ ಅತಿ ಹೆಚ್ಚು ಹಣ ವ್ಯಯಿಸುವ ದೇಶಗಳ ಪಟ್ಟಿಯಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದೆ. ಅಮೆರಿಕದ ಸುಮಾರು ಶೇ.70ರಷ್ಟು ಮನೆಗಳಲ್ಲಿ ಕನಿಷ್ಠ ಒಂದು ಸಾಕುಪ್ರಾಣಿಯಾದರೂ ಇದೆ.

V‌ishweshwar Bhat Column: ವೈ ವೈ: ನೇಪಾಳದ ಜಾಗತಿಕ ಬ್ರ್ಯಾಂಡ್

V‌ishweshwar Bhat Column: ವೈ ವೈ: ನೇಪಾಳದ ಜಾಗತಿಕ ಬ್ರ್ಯಾಂಡ್

1980ರ ದಶಕದ ಆರಂಭದಲ್ಲಿ ನೇಪಾಳದ ‘ಚೌಧರಿ ಗ್ರೂಪ್’ (CG Corp Global) ಥೈಲ್ಯಾಂಡ್‌ನ ಕಂಪನಿ ಯೊಂದರ ಸಹಯೋಗದೊಂದಿಗೆ ಈ ನೂಡಲ್ಸ್ ಉತ್ಪಾದನೆಯನ್ನು ಪ್ರಾರಂಭಿಸಿತು. ಕುತೂಹಲದ ಸಂಗತಿಯೆಂದರೆ, ಬಿನೋದ್ ಚೌಧರಿ ಅವರು ಥೈಲ್ಯಾಂಡ್‌ನಿಂದ ನೇಪಾಳಕ್ಕೆ ಬರುವ ವಿಮಾನಗಳಲ್ಲಿ ಜನರು ಹೆಚ್ಚಿನ ಪ್ರಮಾಣದಲ್ಲಿ ನೂಡಲ್ಸ ಪ್ಯಾಕೆಟ್ಗಳನ್ನು ತರುತ್ತಿರುವುದನ್ನು ಗಮನಿಸಿದರು. ‌

Vishweshwar Bhat Column: ನಿಮ್ಮ ಬಲಗೈ ಸದಾ ನನ್ನ ತಲೆ ಮೇಲಿರಲಿ !

Vishweshwar Bhat Column: ನಿಮ್ಮ ಬಲಗೈ ಸದಾ ನನ್ನ ತಲೆ ಮೇಲಿರಲಿ !

ಹಿಂತಿರುಗಿ ನೋಡಿದಾಗ ಅಚ್ಚರಿಯಾಗುತ್ತದೆ. ಎದುರಾದ ಸವಾಲುಗಳು ಹಿಮಾಲಯದಷ್ಟಿದ್ದರೂ, ಅದನ್ನು ದಾಟುವ ಛಲವೂ ನನಗಿತ್ತು, ಈಗಲೂ ಇದೆ. ಅಡೆತಡೆಗಳನ್ನೇ ಮೆಟ್ಟಿಲುಗಳನ್ನಾಗಿ ಮಾಡಿ ಕೊಂಡು ಸಾಗಿದ ಈ ಪಯಣದಲ್ಲಿ ಸೋಲಿಗಿಂತ ಗೆಲುವಿನ ರುಚಿಯೇ ಹೆಚ್ಚು ಆಪ್ತ. ಇಂದು ‘ವಿಶ್ವವಾಣಿ’ ಬೆಳೆದು ನಿಂತಿರುವ ರೀತಿಗೆ ಹತ್ತು ವರ್ಷಗಳ ಹಿಂದೆ ಇಟ್ಟ ಆ ಸಣ್ಣ ಹೆಜ್ಜೆಯೇ ಕಾರಣ.

Vishweshwar Bhat Column: ಎತ್ತರದಲ್ಲಿ ಹಾರುವ ಅದ್ಭುತ

Vishweshwar Bhat Column: ಎತ್ತರದಲ್ಲಿ ಹಾರುವ ಅದ್ಭುತ

ಏರ್ ಬಸ್ A350 ಈ ವಿಷಯದಲ್ಲಿ ಮುಂಚೂಣಿಯಲ್ಲಿರಲು ಕಾರಣಗಳೇನು? ಸಾಂಪ್ರದಾಯಿಕ ವಿಮಾನ ಗಳನ್ನು ಅಲ್ಯೂಮಿನಿಯಂನಿಂದ ತಯಾರಿಸಲಾಗುತ್ತಿತ್ತು. ಆದರೆ(CFRP)ನಂಥ ಸಂಯೋಜಿತ ವಸ್ತು ಗಳಿಂದ ಮಾಡಲಾಗಿದೆ. ಲೋಹಕ್ಕಿಂತ ಹಗುರವಾಗಿದ್ದರೂ, ಇವು ಅಷ್ಟೇ ಬಲವಾಗಿರುತ್ತವೆ. ವಿಮಾನದ ತೂಕ ಕಡಿಮೆಯಾದಷ್ಟೂ, ತೆಳುವಾದ ಗಾಳಿ ಇರುವ ಎತ್ತರದ ಪ್ರದೇಶಗಳಲ್ಲಿ ವಿಮಾನವು ಸುಲಭವಾಗಿ ತೇಲಬಲ್ಲದು. ಅಲ್ಯೂಮಿನಿಯಂಗೆ ಹೋಲಿಸಿದರೆ ಇವುಗಳಿಗೆ ತುಕ್ಕು ಹಿಡಿಯುವುದಿಲ್ಲ, ಇದು ವಿಮಾನದ ದೀರ್ಘಾಯುಷ್ಯಕ್ಕೆ ಪೂರಕ.

Vishweshwar Bhat Column: ವಿಮಾನದ ಹಿಂಭಾಗ ನೆಲಕ್ಕಪ್ಪಳಿಸಿದರೆ ?

ವಿಮಾನದ ಹಿಂಭಾಗ ನೆಲಕ್ಕಪ್ಪಳಿಸಿದರೆ ?

ವಿಮಾನವು ಟೇಕಾಫ್ ಆಗುವಾಗ ಅದರ ಹಿಂಭಾಗವು (Tail) ನೆಲಕ್ಕೆ ತಗುಲುವ ಘಟನೆ‌ ಯನ್ನು ತಾಂತ್ರಿಕ ಪರಿಭಾಷೆಯಲ್ಲಿ ‘ಟೇಲ್‌ಸ್ಟ್ರೈಕ್’ ಎಂದು ಕರೆಯಲಾಗುತ್ತದೆ. ರನ್‌ವೇ ಮೇಲೆ ವಿಮಾನ ವು ವೇಗವಾಗಿ ಚಲಿಸಿ, ಗಾಳಿಯಲ್ಲಿ ಏರಲು ಸಿದ್ಧವಾದಾಗ ಅದರ ಮುಂಭಾಗವನ್ನು ಮೇಲಕ್ಕೆ ಎತ್ತಲಾಗುತ್ತದೆ. ಈ ಹಂತದಲ್ಲಿ ಸಮತೋಲನ ತಪ್ಪಿ ತುಸು ಎಡವಟ್ಟಾದರೆ ಹಿಂಭಾಗ ನೆಲಕ್ಕೆ ಅಪ್ಪಳಿಸುವ ಅಪಾಯವಿರುತ್ತದೆ.

Loading...