ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Profile

ವಿಶ್ವೇಶ್ವರ ಭಟ್‌

Editor in Chief, Author, Columnist

info1@vishwavani.news

ವಿಶ್ವೇಶ್ವರ ಭಟ್ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಮೂರೂರಿನವರು. ಧಾರವಾಡ ವಿವಿಯಲ್ಲಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದ ಬಳಿಕ, ಪತ್ರಿಕೋದ್ಯಮದಲ್ಲೂ ಸ್ನಾತಕೋತ್ತರ ಪದವಿ ಗಳಿಸಿದರು. ನಂತರ ಲಂಡನ್ನಲ್ಲಿ ಪತ್ರಿಕೋದ್ಯಮ ಕುರಿತಂತೆ ವಿಶೇಷ ಶಿಕ್ಷಣ ಪಡೆದರು. ಸಂಯುಕ್ತ ಕರ್ನಾಟಕದ ಮೂಲಕ ವೃತ್ತಿ ಆರಂಭಿಸಿದರು. ಬಳಿಕ ಕೇಂದ್ರ ಸಚಿವರಾಗಿದ್ದ ಅನಂತಕುಮಾರ್ ಅವರಿಗೆ ಮಾಧ್ಯಮ ಸಲಹೆಗಾರರಾಗಿ, ಏಷ್ಯನ್ ಕಾಲೇಜ್ ಆಫ್ ಜರ್ನಲಿಸಂನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದರು. ನಂತರ ವಿಜಯ ಕರ್ನಾಟಕ, ಕನ್ನಡಪ್ರಭ ಪ್ರಧಾನ ಸಂಪಾದಕರಾಗಿ ಆ ಪತ್ರಿಕೆಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ದರು. 2016ರಲ್ಲಿ ವಿಶ್ವವಾಣಿ ದಿನ ಪತ್ರಿಕೆ ಆರಂಭಿಸಿದರು. ವಿಶ್ವವಾಣಿ ಸಮೂಹ ಇದೀಗ ಲೋಕಧ್ವನಿ, ವಿಶ್ವವಾಣಿ ಟಿವಿ ಮತ್ತು ವಿಶ್ವವಾಣಿ ಪುಸ್ತಕ ಪ್ರಕಾಶನವನ್ನು ಒಳಗೊಂಡು ಬೆಳೆಯುತ್ತಿದೆ. ವಿಶ್ವೇಶ್ವರ ಭಟ್ 97 ಕೃತಿಗಳನ್ನು ರಚಿಸಿದ್ದಾರೆ. 'ನೂರೆಂಟು ವಿಶ್ವ', 'ಸಂಪಾದಕರ ಸದ್ಯಶೋಧನೆ', ಭಟ್ಟರ್ ಸ್ಕಾಚ್, 'ಇದೇ ಅಂತರಂಗ ಸುದ್ದಿ' ಹಾಗೂ 'ಆಸ್ಕ್ ದಿ ಎಡಿಟರ್' ಅಂಕಣಗಳನ್ನು ಬರೆಯುತ್ತಿದ್ದಾರೆ.

Articles
Vishweshwar Bhat Column: ಟೊಯೋಟಾ ಮಾದರಿ

ಟೊಯೋಟಾ ಮಾದರಿ

1980ರ ದಶಕದಲ್ಲಿ, ಟೊಯೋಟಾದ ಕಾರ್ಖಾನೆಯಲ್ಲಿ ಒಂದು ಘಟನೆ ಸಂಭವಿಸಿತು. ಕಾರಿನ ಚಕ್ರ ಗಳನ್ನು ಅಳವಡಿಸುವ ಪ್ರಕ್ರಿಯೆಯಲ್ಲಿ ನಿರಂತರವಾಗಿ ವಿಳಂಬವಾಗುತ್ತಿತ್ತು. ಈ ಸಮಸ್ಯೆಯನ್ನು ವಿವರ ವಾಗಿ ಪರಿಶೀಲಿಸಲು ಟೊಯೋಟಾ 5 Why's ವಿಧಾನವನ್ನು ಬಳಸಿತು. ಚಕ್ರ ಅಳವಡಿಸುವ ಸಮಯ ಹೆಚ್ಚು ತೆಗೆದುಕೊಳ್ಳುತ್ತಿದೆ ಏಕೆ? ಯಂತ್ರ ಗಳು ಸರಿಯಾದ ದಾರಿಗೆ ಬಂದಿಲ್ಲ ಏಕೆ? ಯಂತ್ರದ ನಿರ್ವಹಣೆ ನಿಯತವಾಗಿಲ್ಲ ಏಕೆ? ನಿರ್ವಹಣೆ ಗಾಗಿ ನಿಗದಿತ ಕಾಲಮಿತಿ ಇಲ್ಲ ಏಕೆ? ನಿರ್ವಹಣಾ ಯೋಜನೆಯನ್ನು ಸರಿಯಾಗಿ ರೂಪಿಸಿಲ್ಲ ಏಕೆ?

Vishweshwar Bhat Column: ವಿಶ್ವಶಾಂತಿ ಕದಡಲು ಅಮೆರಿಕ ಅಧ್ಯಕ್ಷರ ಒಂದು ಮಾತು ಸಾಕು !

ವಿಶ್ವಶಾಂತಿ ಕದಡಲು ಅಮೆರಿಕ ಅಧ್ಯಕ್ಷರ ಒಂದು ಮಾತು ಸಾಕು !

ಒಂದು ದೇಶಕ್ಕೆ ಹೋದಾಗ, ಅನುಕೂಲಕ್ಕೆ ತಕ್ಕ ಹಾಗೆ ಮಾತಾಡುವುದರಿಂದ ಸಮಸ್ಯೆಯನ್ನು ಆಹ್ವಾನಿಸಿ ಕೊಳ್ಳುತ್ತಾರೆ. ಸಿರಿಯಾ ಮೇಲೆ ಯುದ್ಧ ಸಾರುತ್ತೇನೆ ಎಂಬ ಅಮೆರಿಕ ಅಧ್ಯಕ್ಷರ ಒಂದು ಹೇಳಿಕೆ World order ಅನ್ನು ಬುಡಮೇಲು ಮಾಡುತ್ತದೆ. ಆ ಮಾತು ಹೇಳಿದ ಒಂದು ವರ್ಷದ ನಂತರವೂ ಪರಿಣಾಮ ಬುದುಗುಡುತ್ತಿರುತ್ತದೆ. ಇಡೀ ಜಗತ್ತು ಮೌನವ್ರತದಲ್ಲಿರುವುದೂ ಒಂದೇ, ಅಮೆರಿಕ ಅಧ್ಯಕ್ಷ ಮಾತಾಡು ವುದೂ ಒಂದೇ

Vishweshwar Bhat Column: ಇದು ಸೈಕಲ್‌ ದೇಶ

ಇದು ಸೈಕಲ್‌ ದೇಶ

ವಿಶ್ವದಲ್ಲಿಯೇ ನೆದರ್ ಲ್ಯಾಂಡ್ಸ್ ಗೆ ಸೈಕಲ್ ಬಳಕೆಯಲ್ಲಿ ಮೊದಲ ಸ್ಥಾನ. ಇಬ್ಬರು ಭೇಟಿಯಾದರೆ, ಸೈಕಲ್ ವಿಷಯದಿಂದಲೇ ಅವರ ಮಾತುಕತೆ ಆರಂಭವಾಗುತ್ತದೆ ಮತ್ತು ಕೊನೆಯಲ್ಲಿ ಆ ವಿಷಯ ದೊಂದಿಗೇ ಅಂತ್ಯವಾಗುತ್ತದೆ. ತಾವು ಖರೀದಿಸಿದ ಹೊಸ ಸೈಕಲ್, ಮಾರುಕಟ್ಟೆಗೆ ಬಂದ ನೂತನ ಸೈಕಲ್‌ ಗಳ ಕುರಿತು ಅಲ್ಲಿನ ಜನ ಮಾತಾಡಲು ಇಷ್ಟಪಡುತ್ತಾರೆ

Vishweshwar Bhat Column: ಜಪಾನಿನಲ್ಲಿ ಹಿತವಾದ ಆಘಾತಗಳು

ಜಪಾನಿನಲ್ಲಿ ಹಿತವಾದ ಆಘಾತಗಳು

ನೀವು ಯಾವುದೇ ದೇಶಕ್ಕೆ ಹೋದರೂ ನಿಮಗೆ ಸಾಂಸ್ಕೃತಿಕ ಅಥವಾ ಸಾಮಾಜಿಕ ಆಘಾತ ಆಗು ವುದು ಸಹಜ. ಇದನ್ನು ಇಂಗ್ಲಿಷಿನಲ್ಲಿ culture shock ಅಥವಾ social shock ಎಂದು ಕರೆಯುತ್ತಾರೆ. ಅಲ್ಲಿನ ರೀತಿ-ರಿವಾಜು, ಜೀವನ ವಿಧಾನ, ಆಚರಣೆಗಳನ್ನು ನೋಡಿ ನಮಗೆ ವಿಸ್ಮಯ ವಾಗುತ್ತದೆ. ಇದನ್ನು ‘ಹಿತವಾದ ಆಘಾತ’ ಎಂದೂ ಕರೆಯಬಹುದು

Vishweshwar Bhat Column: ಪೊಲೀಸ್‌ ಚೌಕಿ ಪಾತ್ರ

ಪೊಲೀಸ್‌ ಚೌಕಿ ಪಾತ್ರ

1874ರಲ್ಲಿ ಟೋಕಿಯೋದಲ್ಲಿ ಮೊದಲ ‘ಗಸ್ತು ಪೋಸ್ಟ್’ ಸ್ಥಾಪಿತವಾಯಿತು. ಇವು ಆರಂಭದಲ್ಲಿ ಕೇವಲ ಚೌಕಿಗಳಂತಿದ್ದರೂ, ಕ್ರಮೇಣ ಇವು ಪೊಲೀಸ್ ಅಧಿಕಾರಿ ಮತ್ತು ಸಾರ್ವಜನಿಕರ ನಡುವಣ ಸಂಪರ್ಕ ಬಿಂದುವಾಗಿ ಬೆಳೆದವು. 1918ರ ವೇಳೆಗೆ ಈ ಗಸ್ತು ಚೌಕಿಗಳು ಕೊಬಾನ್ ಎಂಬ ಹೆಸರನ್ನು ಪಡೆದವು. 20ನೇ ಶತಮಾನದಲ್ಲಿ ನಗರೀಕರಣ ಹೆಚ್ಚಾದಂತೆ, ಕೊಬಾನ್‌ಗಳ ಸಂಖ್ಯೆ ಕೂಡಾ ಹೆಚ್ಚುತ್ತಾ ಬಂದಿತು

Vishweshwar Bhat Column: ಟೋಕಿಯೋದಲ್ಲಿ ಮಕ್ಕಳ ಸುರಕ್ಷತೆ

ಟೋಕಿಯೋದಲ್ಲಿ ಮಕ್ಕಳ ಸುರಕ್ಷತೆ

ಬೆಂಗಳೂರಿನಲ್ಲಿ ತಂದೆ-ತಾಯಂದಿರು 10-15 ವರ್ಷದವರನ್ನೂ ಖುದ್ದಾಗಿ ಶಾಲೆಗೆ ಬಿಟ್ಟು ಬರುವುದು ಸಾಮಾನ್ಯ. ಆದರೆ ಒಂದನೇ ತರಗತಿ ಮಕ್ಕಳೂ ಅಲ್ಲಿ ನಿರಾತಂಕವಾಗಿ ಒಬ್ಬರೇ ಶಾಲೆಗೆ ಹೋಗುತ್ತಾರೆ. ಕೆಲ ವರ್ಷಗಳ ಹಿಂದೆ, ಅಮೆರಿಕದ ಪತ್ರಿಕೆಯೊಂದು ಮುಖಪುಟ ದಲ್ಲಿ ಈ ವಿಷಯವನ್ನೇ ದೊಡ್ಡದಾಗಿ ಪ್ರಕಟಿಸಿ, ‘ಟೋಕಿಯೋ ವಿಶ್ವದಲ್ಲಿಯೇ ಸುರಕ್ಷಿತ ನಗರ’ ಎಂದು ಬರೆದಿತ್ತು. ಟೋಕಿಯೋದಲ್ಲಿ ಐದು ವರ್ಷದ ಮಕ್ಕಳು ಸ್ವತಂತ್ರವಾಗಿ ಸಾರ್ವಜನಿಕ ಸಾರಿಗೆ ಯಲ್ಲಿ ಯಾರ ಸಹಾಯವಿಲ್ಲದೇ ಸಂಚರಿಸುತ್ತಾರೆ

Vishweshwar Bhat Column: ಜಪಾನಿನಲ್ಲಿ ಮಾಂಗ ಮುದ್ರಣಕ್ಕೆ ಟಾಯ್ಲೆಟ್‌ ಪೇಪರ್‌ʼಗಿಂತ ಹೆಚ್ಚು ಕಾಗದ ಬಳಸುತ್ತಾರೆ !

ಮಾಂಗ ಮುದ್ರಣಕ್ಕೆ ಟಾಯ್ಲೆಟ್‌ ಪೇಪರ್‌ʼಗಿಂತ ಹೆಚ್ಚು ಕಾಗದ ಬಳಸುತ್ತಾರೆ !

ಜಪಾನಿನ ಮಾಂಗಗಳು ಜಗತ್ತಿನಲ್ಲಿಯೇ ಪ್ರಸಿದ್ಧ. ಚಿಕ್ಕಮಕ್ಕಳಿಗೆ ಜಪಾನ್ ಯಾವುದಕ್ಕೆ ಪ್ರಸಿದ್ಧ ಎಂದು ಕೇಳಿದರೆ, ಹತ್ತರಲ್ಲಿ ಒಂಬತ್ತು ಮಂದಿ ‘ಮಾಂಗ’ ಎಂದು ಹೇಳುವುದರಲ್ಲಿ ಸಂದೇಹವಿಲ್ಲ. ಮಾಂಗ ಸಾಮಾನ್ಯವಾಗಿ ಬಿಳಿ ಮತ್ತು ಕಪ್ಪು ಬಣ್ಣಗಳಲ್ಲಿ ಮುದ್ರಿತವಾಗಿದ್ದು, ಕಥೆಯು ಚಿತ್ರರೇಖೆ ಗಳ ಮೂಲಕ ಮುಂದುವರಿಯುತ್ತದೆ.

Vishweshwar Bhat Column: ಇವರ ಇಂಗ್ಲಿಷ್‌ ತುಟ್ಟಿಯೇ

ಇವರ ಇಂಗ್ಲಿಷ್‌ ತುಟ್ಟಿಯೇ

ಜಪಾನಿಯರು ಇಂಗ್ಲಿಷ್ ಮಾತನಾಡುವಾಗ ತಪ್ಪಾಗಬಹುದೆಂಬ ಭಯದಿಂದಲೇ ಮಾತನಾಡುವುದು ತಪ್ಪಿಸುತ್ತಾರೆ. ದೋಷವಿಲ್ಲದೆ ಮಾತನಾಡುವುದನ್ನು ಮೊದಲ ಆದ್ಯತೆಯಾಗಿ ಪರಿಗಣಿಸುತ್ತಾರೆ. ಇದರಿಂದಾಗಿ ಭಾಷೆ ಕಲಿಯುವಲ್ಲಿ ನೈಜ ಸಂವಹನದ ಪ್ರಯತ್ನ ಕಡಿಮೆ ಯಾಗುತ್ತದೆ. ಜಪಾನಿನಲ್ಲಿ ಬೇರೆ ಭಾಷೆಯ ಬಳಕೆಯ ಅಗತ್ಯ ಕಡಿಮೆ

Vishweshwar Bhat Column: ಸಾರ್ವಜನಿಕ ಪ್ರಾಮಾಣಿಕತೆ

ಸಾರ್ವಜನಿಕ ಪ್ರಾಮಾಣಿಕತೆ

ಹೆದ್ದಾರಿಗಳ ಮೇಲೆ ಸಂಚಾರ ಸುಗಮವಾಗಿಡಲು, ವಾಹನ ಚಾಲಕರನ್ನು ತಡೆಯದೇ ಸರಾಗವಾಗಿ ಹೋಗಲು ಅವಕಾಶ ನೀಡಲಾಯಿತು. ವಾಹನ ಚಾಲಕರಿಗೆ ‘ಮೊದಲು ನೀವು ಸಂಚರಿಸಿ, ನಂತರ ಟೋಲ್ ಹಣವನ್ನು ಆನ್‌ಲೈನ್‌ನಲ್ಲಿ ಪಾವತಿಸಬಹುದು’ ಎಂದು ತಿಳಿಸಲಾಯಿತು. ಹೀಗೆ ನಿರ್ಬಂಧ ವಿಲ್ಲದೇ ಹೆದ್ದಾರಿಯಲ್ಲಿ ಸಂಚರಿಸಿದವರು ಟೋಲ್ ಪಾವತಿಸಲೇಬೇಕು ಎಂಬ ಒತ್ತಾಯವಿರಲಿಲ್ಲ

Vishweshwar Bhat Column: ನಮ್ಮಂತೆ ಅವರೂ ದ್ವೀಪ ನಿರ್ಮಿಸುತ್ತಿದ್ದಾರೆ, ಆದರೆ ಎಷ್ಟು ವ್ಯತ್ಯಾಸ ?

ನಮ್ಮಂತೆ ಅವರೂ ದ್ವೀಪ ನಿರ್ಮಿಸುತ್ತಿದ್ದಾರೆ, ಆದರೆ ಎಷ್ಟು ವ್ಯತ್ಯಾಸ ?

There is no problem that Dubai can't solve ಎಂಬುದು ಅವರ ಪರಮ ಧ್ಯೇಯ ವಾಕ್ಯ. ಜಗತ್ತಿನ ಇತರ ದೇಶಗಳ ನಾಯಕರು ಇಲ್ಲದ ಉಸಾಬರಿಯಲ್ಲಿ ತಲೆ ಕೆಡಿಸಿಕೊಂಡಿದ್ದರೆ, ಮಕ್ತೋಮ್ ಮಾತ್ರ ದುಬೈ ಯನ್ನು ಮತ್ತಷ್ಟು ಅಭಿವೃದ್ಧಿ ಮಾಡುವುದು ಹೇಗೆ, ದುಬೈ ಮಟ್ಟವನ್ನು ಇನ್ನಷ್ಟು ಎತ್ತರಿಸುವುದು ಹೇಗೆ, ಅಲ್ಲಿ ಮತ್ತಷ್ಟು ಅಚ್ಚರಿಗಳನ್ನು ಬಿತ್ತುವುದು ಹೇಗೆ ಎಂಬ ಬಗ್ಗೆ ತಲೆ ಕೆಡಿಸಿಕೊಂಡಿರುತ್ತಾರೆ.

Vishweshwar Bhat Column: ಅತಿ ಕೆಲಸ ತರುವ ಕುತ್ತು

ಅತಿ ಕೆಲಸ ತರುವ ಕುತ್ತು

ಜಪಾನಿ ಮೂಲದ ಈ ಪದವನ್ನು ಇಂಗ್ಲಿಷಿನಲ್ಲೂ ಬಳಸಲಾರಂಭಿಸಿದರು. 1991ರಲ್ಲಿ ಮಾತ್ಸುಶಿತಾ ಕಂಪನಿಯ ಯುವ ಉದ್ಯೋಗಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಳು. 24 ವರ್ಷದ ಯುವತಿ, ಆತ್ಮ ಹತ್ಯೆಗೆ ಶರಣಾದಾಗ, ಆಕೆ ವಾರದಲ್ಲಿ 90 ಗಂಟೆಗಳಷ್ಟು ಕೆಲಸ ಮಾಡುತ್ತಿರುವುದೇ ಕಾರಣ ಎಂಬುದು ಗೊತ್ತಾಯಿತು. ಇದಾದ ಬಳಿಕ ಅತಿಯಾದ ಕೆಲಸದ ಒತ್ತಡ ಒಂದು ರಾಷ್ಟ್ರೀಯ ಸಮಸ್ಯೆ ಎಂಬಂತೆ ಬಿಂಬಿತವಾಯಿತು

Vishweshwar Bhat Column: ಟೋಕಿಯೋ: ನೀರಿನ ನಗರ

ಟೋಕಿಯೋ: ನೀರಿನ ನಗರ

ಕಾಲುವೆಗಳನ್ನು ನಿರ್ಮಿಸುವ ಮೂಲಕ, ನೀರನ್ನು ಮಾತ್ರವಲ್ಲದೇ ಸಾಗಣೆಯ ವ್ಯವಸ್ಥೆಯನ್ನೂ ಸುಧಾರಿಸಲಾಯಿತು. ಟೋಕಿಯೋದ ಭೌಗೋಳಿಕ ಅಂಶವನ್ನು ನೋಡಿದರೆ, ಇದು ನೀರಿನಿಂದ ಆವೃತ ವಾದ ಪ್ರದೇಶ ಎಂಬುದು ಗೊತ್ತಾಗುತ್ತದೆ. ಇದನ್ನು ’East Capital on Water’ ಎಂದೂ ಕರೆದಿದ್ದಾರೆ

Vishweshwar Bhat Column: ವಿಶ್ವದ ಅತ್ಯಂತ ಪುರಾತನ ಹೋಟೆಲ್

ವಿಶ್ವದ ಅತ್ಯಂತ ಪುರಾತನ ಹೋಟೆಲ್

ಆತ ಜಪಾನಿನ ಅತ್ಯಂತ ಪ್ರಭಾವಿ ಮಿಲಿಟರಿ ನಾಯಕರುಗಳಾದ ಟಾಕೆಡಾ ಶೋಗುನ್‌ಗಳಿಗೆ ಸೇವೆ ಸಲ್ಲಿಸುತ್ತಿದ್ದ. ಆತ ಈ ಪ್ರದೇಶದ ಬಿಸಿನೀರಿನ ಬುಗ್ಗೆ (ಹಾಟ್ ಸ್ಪ್ರಿಂಗ್) ಗಳನ್ನು ಕಂಡು, ಯೋಧರ ವಿಶ್ರಾಂತಿ ಮತ್ತು ಪುನಶ್ಚೇತನಕ್ಕಾಗಿ ಈ ಹೋಟೆಲ್ ಅನ್ನು ಸ್ಥಾಪಿಸಿದ. ‘ನಿಶಿಯಾಮಾ ಓನ್ಸೆನ್ ಕೆಯು ನ್ಕನ್ ಹೋಟೆಲ್’ ತನ್ನ ಸ್ಥಾಪನೆಯಿಂದ ಇಂದಿನವರೆಗೆ, ಸುಮಾರು 52 ತಲೆಮಾರುಗಳ ಕಾಲ ಒಂದೇ ಕುಟುಂಬದವರಿಂದ ನಿರ್ವಹಿಸಲ್ಪಡುತ್ತಿರುವುದು ವಿಶೇಷ

Vishweshwar Bhat Column: ಶಾಪವಾದ ದೀರ್ಘಾಯುಷ್ಯ

ಶಾಪವಾದ ದೀರ್ಘಾಯುಷ್ಯ

ಆತ ಕಳೆದ 16 ವರ್ಷಗಳಿಂದ ತನ್ನ ಮನೆಯಲ್ಲಿ ಒಂಟಿಯಾಗಿದ್ದ. ಆತನನ್ನು ನೋಡಲು ಯಾರೂ ಬರುತ್ತಿರಲಿಲ್ಲ. ನಗರ ಪ್ರದೇಶದಲ್ಲಿ ಪುನರ್ವಸತಿ ಕಲ್ಪಿಸುವುದಾಗಿ ಸರಕಾರ ಹೇಳಿದರೂ ಆತ ತನ್ನ ಸ್ವಂತ ಮನೆಯಲ್ಲಿಯೇ ಜೀವಿಸುತ್ತಿದ್ದ. ಒಂದು ದಿನ ಆತ ತೀರಿಕೊಂಡ. ಆದರೆ ಅದು ಹೊರಜಗತ್ತಿಗೆ ಗೊತ್ತಾಗಲು 4 ತಿಂಗಳುಗಳೇ ಹಿಡಿದವು.

Vishweshwar Bhat Column: ಅವರು ತಮ್ಮ ದೋಷವನ್ನು ಮೀರಿ ನಿಲ್ಲಲು ನಿತ್ಯ ಹೆಣಗುತ್ತಾರೆ !

ಅವರು ತಮ್ಮ ದೋಷವನ್ನು ಮೀರಿ ನಿಲ್ಲಲು ನಿತ್ಯ ಹೆಣಗುತ್ತಾರೆ !

ಜಪಾನಿಯರು ಪರಿಪೂರ್ಣವಾದಿಗಳೂ ಹೌದು, ಅದ್ಭುತ ಮಂದಿಯೂ ಹೌದು. ಪರಿಪೂರ್ಣರು ಎಂದ ಮಾತ್ರಕ್ಕೆ ಅವರಲ್ಲಿ ದೋಷವೇ ಇಲ್ಲ ಎಂದು ಭಾವಿಸಬೇಕಿಲ್ಲ. ಅವರಲ್ಲೂ ಬೇರೆಯವರಂತೆ ದೋಷ ಗಳಿವೆ. ಆದರೆ ಅವರು ಸಣ್ಣ ಸಣ್ಣ ವಿಷಯ ಹಾಗೂ ಸೂಕ್ಷ್ಮ ಸಂಗತಿಗಳ ಬಗ್ಗೆ ಇತರರಿಗಿಂತ ಹೆಚ್ಚು ಗಮನ ಕೊಡುತ್ತಾರೆ. ನಿರಂತರವಾಗಿ ತಮ್ಮನ್ನು ಸುಧಾರಿಸಿಕೊಳ್ಳುತ್ತಾ ಹೋಗುತ್ತಾರೆ. ಹೆಜ್ಜೆ ಹೆಜ್ಜೆಗೂ ಪರಿಪೂರ್ಣರಾಗಲು ಹಂಬಲಿಸಿ, ಆ ನಿಟ್ಟಿನಲ್ಲಿ ಪ್ರಯತ್ನಿಸುತ್ತಾರೆ. ತಮ್ಮ ದೋಷವನ್ನು ಮೀರಿ ನಿಲ್ಲಲು ಹೆಣಗುತ್ತಾರೆ.

Vishweshwar Bhat Column: ಬೆಕ್ಕುಗಳಿಗೂ ಇಲ್ಲಿ ರಾಜಯೋಗ !

ಬೆಕ್ಕುಗಳಿಗೂ ಇಲ್ಲಿ ರಾಜಯೋಗ !

ಅವನ್ನು ಕೇವಲ ಸಾಕುಪ್ರಾಣಿಯಾಗಷ್ಟೇ ಅಲ್ಲ, ಸಂಪತ್ತು, ಧೈರ್ಯ ಮತ್ತು ರಕ್ಷಣೆಗಳ ಸಂಕೇತ ಗಳಾಗಿ ಕೂಡ ಪರಿಗಣಿಸಲಾಗುತ್ತದೆ. ಜಪಾನಿನ ಶಿಂಟೋ ಮತ್ತು ಬೌದ್ಧ ಧರ್ಮಗಳಲ್ಲಿ ಬೆಕ್ಕುಗಳಿಗೆ ವಿಶೇಷ ಸ್ಥಾನ. ಅಲ್ಲಿನ ಪುರಾಣಗಳಲ್ಲಿ ಬೆಕ್ಕುಗಳನ್ನು ಶಕ್ತಿಶಾಲಿ ಮತ್ತು ಅತೀಂದ್ರಿಯ ಪ್ರಾಣಿಯಂತೆ ಚಿತ್ರಿಸ ಲಾಗಿದೆ. ಕೆಲವೊಂದು ಕಥೆಗಳಲ್ಲಿ ಅವನ್ನು ಶಕ್ತಿಶಾಲಿ ದೇವತೆಗಳಂತೆ ಬಿಂಬಿಸಲಾಗಿದೆ.

Vishweshwar Bhat Column: ಚೌಕಾಕಾರದ ಕಲ್ಲಂಗಡಿಗಳು

ಚೌಕಾಕಾರದ ಕಲ್ಲಂಗಡಿಗಳು

ಜಪಾನಿನಲ್ಲಿ ಅದು ಒಂದು ವಿಶಿಷ್ಟ ಆಕರ್ಷಣೆ. ಈ ವಿಶಿಷ್ಟ ಹಣ್ಣುಗಳು ಜಪಾನಿನ ಕೃಷಿ ತಂತ್ರಜ್ಞಾನ, ನಾವೀನ್ಯ ಮತ್ತು ಸೌಂದರ್ಯದ ಪ್ರತಿಬಿಂಬವಾಗಿವೆ. 1970ರ ದಶಕದಲ್ಲಿ ಜಪಾನಿನ ಜೆನ್ಸೇಕಿ ಟೋಜು ಎಂಬ ಕೃಷಿ ತಜ್ಞ ಚೌಕಾಕಾರದ ಕಲ್ಲಂಗಡಿಗಳ ಆವಿಷ್ಕಾರ ಮಾಡಿದ. ಆತ ಕಾಗಾವಾ ಪ್ರಾಂತದಲ್ಲಿರುವ ಕೃಷಿ ಕಾಲೇಜಿನಲ್ಲಿ ಈ ಪರಿಕಲ್ಪನೆಯನ್ನು ಅಭಿವೃದ್ಧಿಪಡಿಸಿದ

Vishweshwar Bhat Column: ಸ್ವಚ್ಛ ಭಾರತದಂತೆ, ಸ್ವಚ್ಛ ದೇಗುಲ ಆಂದೋಲನವೂ ಆಗಲಿ !

ಸ್ವಚ್ಛ ಭಾರತದಂತೆ, ಸ್ವಚ್ಛ ದೇಗುಲ ಆಂದೋಲನವೂ ಆಗಲಿ !

ಪ್ರತಿ ದೇವಾಲಯದ ಹಿಂದೆ ಧಾರ್ಮಿಕ ಕಾರಣಗಳೇನೇ ಇರಲಿ, ಅದನ್ನು ಕಟ್ಟಿದ ಕತೆಯೇ ರೋಚಕ. ಯಾವುದೋ ಒಂದು ಬೋಳುಗುಡ್ಡದ ಮೇಲೆ ರಾತ್ರೋರಾತ್ರಿ ಒಂದು ಕಲ್ಲನ್ನು ನೆಟ್ಟರೆ ಸಾಕು, ಅದು ಬೆಳಗಾಗುವ ಹೊತ್ತಿಗೆ ಒಂದು ಪುಣ್ಯಕ್ಷೇತ್ರವಾಗಿರುತ್ತದೆ. ಅದರ ಸುತ್ತಮುತ್ತ ನೂರಾರು ಕತೆಗಳು ಹುಟ್ಟಿ ಕೊಳ್ಳುತ್ತವೆ.

Vishweshwar Bhat Column: ಹೈಕುಗಳು: ಜಪಾನಿನ ಕೊಡುಗೆ

ಹೈಕುಗಳು: ಜಪಾನಿನ ಕೊಡುಗೆ

ಹೈಕು ಬರವಣಿಗೆಯನ್ನು ಪ್ರಖ್ಯಾತಿಗೆ ತಂದವರು ಮತ್ಸುಒ ಬಾಶೋ ಎಂಬ ಪ್ರಸಿದ್ಧ ಕವಿ. ಅವರು ಆ ದಿನಗಳಲ್ಲಿ ತನ್ನ ಹೈಕುಗಳ ಮೂಲಕ ಜಪಾನಿನ ಕಾವ್ಯವೈಭವವನ್ನು ಹೊಸ ಎತ್ತರಕ್ಕೆ ಕೊಂಡೊಯ್ದರು. ಅವರ ಹೈಕುಗಳಲ್ಲಿ ಪ್ರಕೃತಿ, ಬೌದ್ಧತತ್ವಗಳು ಹಾಗೂ ಮಾನವೀಯ ಅನುಭವಗಳ ಗಂಭೀರತೆಯಿದೆ.

Vishweshwar Bhat Column: ಬಿಳಿ ಸಾಕ್ಸ್‌ ಸ್ವಚ್ಛತೆ ನಿಜವಾ?

ಬಿಳಿ ಸಾಕ್ಸ್‌ ಸ್ವಚ್ಛತೆ ನಿಜವಾ?

ಪಾನ್ ಎಷ್ಟು ಶುದ್ಧವಾಗಿದೆಯೆಂದರೆ, ನೀವು ಬಿಳಿ ಸಾಕ್ಸ್‌ ಧರಿಸಿ ನಡೆದಾಡಿದರೂ ಅದು ಕೊಳೆಯಾಗುವು ದಿಲ್ಲ ಎಂಬ ಮಾತನ್ನು ಅಕ್ಷರಶಃ ಅರ್ಥೈಸು ವುದಕ್ಕೆ ಬದಲಾಗಿ, ಆ ದೇಶದ ಸಾರ್ವಜನಿಕ ಸ್ಥಳಗಳ ಪರಿಪಾಲನೆ, ನಿತ್ಯ ತೊಳೆದಂತೆ ತೋರಿಸುವ ರಸ್ತೆಗಳಿಗೆ ಪ್ರತಿನಿಧಿಯಾಗಿರುವ ಶ್ಲೇಷೆ ಎಂದು ಭಾವಿಸಿದರೆ ಅದು ಹೆಚ್ಚು ಸಮರ್ಪಕ ವಾದೀತು.

Vishweshwar Bhat Column: ಉಡುಗೊರೆ ಸಂಸ್ಕೃತಿ

ಉಡುಗೊರೆ ಸಂಸ್ಕೃತಿ

ಜಪಾನಿಯರಿಗೆ ಉಡುಗೊರೆ ಕೊಡಲು ಅಥವಾ ಸ್ವೀಕರಿಸಲು ಯಾವ ನೆಪವೂ ಬೇಕಿಲ್ಲ. ಎರಡು ತಿಂಗಳಿಗೊಮ್ಮೆ ಏನಾದರೂ ಒಂದು ನೆಪ ಹುಡುಕಿಕೊಂಡು ಗಿಫ್ಟ್ ವಿನಿಮಯ ಮಾಡಿಕೊಳ್ಳು ತ್ತಾರೆ. ಜಪಾನಿನಲ್ಲಿ ಹಲವಾರು ಸಂದರ್ಭಗಳಲ್ಲಿ ಉಡುಗೊರೆ ನೀಡುವ ಪರಿಪಾಠ ಇದೆ. ವರ್ಷದ ಮಧ್ಯದಲ್ಲಿ ಅಂದರೆ ಜುಲೈನಲ್ಲಿ ಉಡುಗೊರೆ ಕೊಡುವ ಸಂಪ್ರ‌ ದಾಯಕ್ಕೆ ‘ಒಚುಗೆ’ ಎಂದು ಅವರು ಕರೆಯುತ್ತಾರೆ.

Vishweshwar Bhat Column: ಕಡಲಾಮೆಗಳನ್ನು ಉಳಿಸಲು ಅವರು ರೈಲುಮಾರ್ಗದಲ್ಲಿ ಸುರಂಗ ಕೊರೆದರು !

ಕಡಲಾಮೆಗಳನ್ನು ಉಳಿಸಲು ಅವರು ರೈಲುಮಾರ್ಗದಲ್ಲಿ ಸುರಂಗ ಕೊರೆದರು !

ಕಡಲಾಮೆಗಳು ಹಳಿಗಳ ನಡುವೆ ಸಿಕ್ಕಿಹಾಕಿಕೊಂಡರೆ, ರೈಲು ಚಾಲಕರು ತಕ್ಷಣ ಬ್ರೇಕ್ ಹಾಕಬೇಕಾಗುತ್ತದೆ. ಇದರಿಂದ ರೈಲು ಸಂಚಾರ ವಿಳಂಬವಾಗುತ್ತದೆ. ಹಳಿಗಳ ಮೇಲೆ ಸಿಕ್ಕಿರುವ ಕಡಲಾಮೆಗಳನ್ನು ಹಳಿಯಿಂದ ತೆಗೆದು ಹಾಕುವ ಪ್ರಕ್ರಿಯೆ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ, ಇದರಿಂದ ಪ್ರಯಾಣಿಕರಿಗೆ ತೊಂದರೆ ಆಗಬಹುದು.

Vishweshwar Bhat Column: ದಾರಿ ತಪ್ಪಿದರೆ ರಾಘವೇಂದ್ರ ಬೇಕಿಲ್ಲ !

ದಾರಿ ತಪ್ಪಿದರೆ ರಾಘವೇಂದ್ರ ಬೇಕಿಲ್ಲ !

‘ಇದೋ ನೀವು ಏರಬೇಕಿರುವ ಬಸ್’ ಎಂದು ಹೇಳಿದ. ನಾನು ಅವನಿಗೆ ಧನ್ಯವಾದಗಳನ್ನು ಹೇಳಿದೆ. ಆದರೆ ಆತ ‘ನಿಮ್ಮ ಧನ್ಯವಾದ ಇರಲಿ, ಇದು ನನ್ನ ಕರ್ತವ್ಯ’ ಎಂಬಂತೆ ನಿರ್ಲಿಪ್ತ ನಾಗಿದ್ದ. ನನಗೆ ದಾರಿ ತೋರಿಸಲೆಂದು ಕೈಯಲ್ಲಿ ಲಗೇಜ್ ಹಿಡಿದು ಒಂದು ಮೈಲಿ ನಡೆದು ಬಂದ ಆತನ ನಡೆ ನನಗೆ ಅತಿ ವಿಶೇಷವಾಗಿ ಕಂಡಿತು.

Vishweshwar Bhat Column: ಇನ್ನಷ್ಟು ಅಚ್ಚರಿಯ ಸಂಗತಿಗಳು

ಇನ್ನಷ್ಟು ಅಚ್ಚರಿಯ ಸಂಗತಿಗಳು

ಹತ್ತಿಯನ್ನು ಚೀಲದಲ್ಲಿ ಹಾಕಿ ಗಿಡಿಯುವಂತೆ ಜನರನ್ನೂ ಬೋಗಿಯೊಳಗೆ ಹಾಕಿ ತಳ್ಳುತ್ತಾನೆ. ಆತನಿಗೆ ಜನರನ್ನು ಬೋಗಿಯೊಳಗೆ ತಳ್ಳುವುದೇ ಕೆಲಸ. ರೈಲುಗಳ ಸಂಚಾರ ವನ್ನು ಹೆಚ್ಚಿಸುವ ಬದಲು, ಜಪಾನ್ ರೈಲ್ವೆ ಇಲಾಖೆ ಪ್ರಯಾಣಿಕರನ್ನು ತಳ್ಳಲು ಜನರನ್ನು ನೇಮಿಸಿ ಕೊಂಡಿರುವುದು ವಿಚಿತ್ರವಾದ ಸತ್ಯ.