ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad
Profile

Yashaswi Devadiga

Sub Editor

[email protected]

ಉತ್ತರ ಕನ್ನಡ ಜಿಲ್ಲೆಯ ಶಿರಸಿ ಹುಟ್ಟೂರು. ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಜಯಪುರದಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಜತೆಗೆ ಚಿನ್ನದ ಪದಕ ಪಡೆದುಕೊಂಡಿದ್ದೇನೆ. ವಿಸ್ತಾರ ನ್ಯೂಸ್ ವೆಬ್ಸೈಟ್ ನಲ್ಲಿ ಉಪಸಂಪಾದಕಿಯಾಗಿ ವೃತ್ತಿ ಪ್ರಾರಂಭ. ಬಳಿಕ ನ್ಯೂಸ್ 18 ಕನ್ನಡದಲ್ಲಿ ಉಪಸಂಪಾದಕಿಯಾಗಿ ಕಾರ್ಯ ನಿರ್ವಹಿಸಿದ್ದೇನೆ. ಮೂರು ವರ್ಷಗಳಿಂದ ಕೆಲಸ ಮಾಡಿದ ಅನುಭವ. ಜೊತೆಗೆ ಕನ್ನಡ ಸಿನಿಮಾವೊಂದಕ್ಕೆ ಸಹಾಯಕಿ ನಿರ್ದೇಶಕಿಯಾಗಿ ಕೆಲಸ ಮಾಡಿದ್ದೇನೆ. ಸಿನಿಮಾ ವೀಕ್ಷಣೆ, ಸಿನಿಮಾ ಮೇಕಿಂಗ್, ಸಿನಿಮಾ ವಿಮರ್ಶೆ, ಬರವಣಿಗೆ, ಓದು ನೆಚ್ಚಿನ ಹವ್ಯಾಸ.

Articles
Amruthadhaare Serial: ಕೂದಲನ್ನು ತೆಗೆಸಿದ ಭೂಮಿಕಾ; ಸಂಕಷ್ಟದ ಸಮಯದಲ್ಲೂ ತೂಕದ ಮಾತಿಗೆ ವೀಕ್ಷಕರು ಫಿದಾ

Amruthadhaare: ಸಂಕಷ್ಟದ ಸಮಯದಲ್ಲೂ ಭೂಮಿ ತೂಕದ ಮಾತಿಗೆ ವೀಕ್ಷಕರು ಫಿದಾ!

Amruthadhaare: ಭೂಮಿಕಾ ಕ್ಯಾನ್ಸರ್‌ಗೆ (Bhoomika Cancer) ತುತ್ತಾಗಿರೋ ವಿಷಯ ಮನೆಯ ಎಲ್ಲಾ ಸದಸ್ಯರಿಗೂ ಗೊತ್ತಾಗಿದೆ. ಇನ್ನೊಂದೆಡೆ, ಜೈದೇವ್ ಮತ್ತು ಶಕುಂತಲಾಗೂ ಈ ವಿಷಯ ತಿಳಿದಿದ್ದು, ಅವರು ಸಕತ್​ ಖುಷಿಯಾಗಿದ್ದಾರೆ. ತಾವು ಮಾಡಲು ಸಾಧ್ಯವಾಗದ್ದು ವಿಧಿಯೇ ಮಾಡಿಸಿತು ಎಂದು ಇನ್ನಿಲ್ಲದಂತೆ ಗೆದ್ದು ಬೀಗುತ್ತಿದ್ದಾರೆ. ಈ ನಡುವೆ ಭೂಮಿಕಾ ತನ್ನ ಕೂದಲು ತೆಗೆಸಿದ್ದಾಳೆ.

Rakul Preet Singh: ಶೂರ್ಪನಖಿ ಪಾತ್ರ ಆಯ್ಕೆ ಹಿಂದಿನ  ಕಾರಣ ಏನು? ರಕುಲ್ ಹೇಳಿದ್ದೇನು?

ಶೂರ್ಪನಖಿ ಪಾತ್ರ ಆಯ್ಕೆ ಹಿಂದಿನ ಕಾರಣ ಏನು? ರಕುಲ್ ಹೇಳಿದ್ದೇನು?

Rakul Preet Singh: ಚಿತ್ರದಲ್ಲಿ ಅವರ ಲುಕ್ ಮತ್ತು ಅವರ ಅಭಿನಯಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತು. ಶೂರ್ಪನಖಿಯ ಕಥೆ ಕೇವಲ ಅವಳ ರೂಪಕ್ಕೆ ಸೀಮಿತವಾಗಿಲ್ಲ. ಅದರಲ್ಲಿ ಭಾವನೆ, ತಿರಸ್ಕಾರ, ಅವಮಾನ ಎಲ್ಲವೂ ಸೇರಿದೆ ಹಲವು ಕಥೆಗಳಲ್ಲಿ ಆಕೆಯನ್ನು ಭಾರತೀಯ ಪುರಾಣದ ಅತ್ಯಂತ ಸುಂದರ ಮಹಿಳೆಯರಲ್ಲಿ ಒಬ್ಬಳು ಎಂದು ಪರಿಗಣಿಸಲಾಗಿತ್ತು. ರಾಮಾಯಣ ಭಾಗ ಒಂದು ದೀಪಾವಳಿಯಂದು ನವೆಂಬರ್ 8 ರಂದು ಜಾಗತಿಕವಾಗಿ ಬಿಡುಗಡೆಯಾಗಲಿದೆ.

Salman Khan: 'ನಾನು 16 ಕೆಜಿ ತೂಕ ಇಳಿಸಿಕೊಂಡಿದ್ದೇನೆ':  ಸಲ್ಮಾನ್ ಖಾನ್ ವಿಡಿಯೋ ವೈರಲ್‌

'ನಾನು 16 ಕೆಜಿ ತೂಕ ಇಳಿಸಿಕೊಂಡಿದ್ದೇನೆ': ಸಲ್ಮಾನ್ ಖಾನ್ ವಿಡಿಯೋ ವೈರಲ್‌

Salman: ಸಲ್ಮಾನ್ ಖಾನ್ (Salman Khan) ತುಂಬಾ ಸಣ್ಣಗಾಗಿದ್ದಾರೆ ಎಂಬ ಚರ್ಚೆ ಬಹುದಿನಗಳಿಂದ ನಡೆಯುತ್ತಲೇ ಇತ್ತು. ಇದು ಅವರ ಆರೋಗ್ಯದ ಬಗ್ಗೆ ಅನೇಕರಿಗೆ ಕಳವಳವನ್ನುಂಟುಮಾಡಿತು. ಅಂತಿಮವಾಗಿ, ಸಲ್ಮಾನ್ ಖಾನ್ ತಮ್ಮ ಹಠಾತ್ ತೂಕ ಇಳಿಕೆಯ ಬಗ್ಗೆ ವದಂತಿಗಳಿಗೆ ಸ್ಪಷ್ಟನೆ ನೀಡಲು ಮುಂದೆ ಬಂದಿದ್ದಾರೆ. ನಟ ಉದ್ದೇಶಪೂರ್ವಕವಾಗಿ ತಮ್ಮ ಲುಕ್ ಬದಲಾಯಿಸಿಕೊಂಡಿರುವುದಾಗಿ ಒಪ್ಪಿಕೊಂಡಿದ್ದಾರೆ.

Kangana Ranaut : ಸೋನಾಕ್ಷಿ ಸಿನ್ಹಾ ವಿರುದ್ಧ ಕಂಗನಾ ಗರಂ? ಅಷ್ಟಕ್ಕೂ ಆಗಿದ್ದೇನು?

ಸೋನಾಕ್ಷಿ ಸಿನ್ಹಾ ವಿರುದ್ಧ ಕಂಗನಾ ಗರಂ? ಅಷ್ಟಕ್ಕೂ ಆಗಿದ್ದೇನು?

Kangana Ranaut : ಕಾಕ್ರೋಚ್ ಜನತಾ ಪಕ್ಷದ ನೀಟ್ ಪ್ರತಿಭಟನೆಗಳು ಕೊನೆಗೊಂಡಾಗಿನಿಂದ ಕಂಗನಾ ರನೌತ್ ವಿವಿಧ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಹೇಳಿಕೆಗಳು ನಿರಂತರವಾಗಿ ಅವರನ್ನು ವಿವಾದಗಳಿಂದ ಸುತ್ತುವರೆದಿವೆ. ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲ ನೀಡಿದ ನಟಿಯೊಬ್ಬರ ವಿರುದ್ಧ ಕಂಗನಾ ರಣಾವತ್ ಗರಂ ಆಗಿದ್ದಾರೆ. ಸೋನಾಕ್ಷಿ ಸಿನ್ಹಾ ಅವರನ್ನು ಗುರಿಯಾಗಿಸಿಕೊಂಡೇ ಕಂಗನಾ ರಣಾವತ್ ಈ ರೀತಿ ಹೇಳಿದ್ದಾರೆ ಎಂದು ನೆಟ್ಟಿಗರು ಅಂದಾಜಿಸುತ್ತಿದ್ದಾರೆ. ಅಷ್ಟಕ್ಕೂ ಆ ಪೋಸ್ಟ್​​ನಲ್ಲಿ ಏನಿದೆ?

Suriya: ಜ್ಯೋತಿಕಾ-ಸೂರ್ಯ ಜೋಡಿಯ ಪ್ರೀತಿಯ ರಹಸ್ಯ ಇದು!

Suriya: ಜ್ಯೋತಿಕಾ-ಸೂರ್ಯ ಜೋಡಿಯ ಪ್ರೀತಿಯ ರಹಸ್ಯ ಇದು!

Suriya: ಚೆನ್ನೈನಲ್ಲಿ ನಡೆದ ತಮ್ಮ ಮುಂಬರುವ ಚಿತ್ರ 'ವಿಶ್ವನಾಥ್ & ಸನ್ಸ್' ಪ್ರಚಾರ ಕಾರ್ಯಕ್ರಮದಲ್ಲಿ, ಸೂರ್ಯ ಅವರು ತಮ್ಮ ಲವ್‌ ಸೀಕ್ರೆಟ್‌ ಬಗ್ಗೆ ಬಹಿರಂಗಪಡಿಸಿದರು. ತಮ್ಮ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ನಟ, ಸಂಗಾತಿಯ ಮೇಲಿನ ಪ್ರೀತಿಯನ್ನು ಗೌರವದಿಂದ ಹೇಗೆ ಸಹಾಯ ಮಾಡಬೇಕು ಎಂದು ಹೇಳಿದರು.ಸೂರ್ಯ ಮತ್ತು ಜ್ಯೋತಿಕಾ 1999 ರ ತಮಿಳು ಚಿತ್ರ ಪೂವೆಲ್ಲಾಮ್ ಕೆಟ್ಟುಪ್ಪರ್ ನಲ್ಲಿ ಒಟ್ಟಿಗೆ ಕೆಲಸ ಮಾಡುವಾಗ ಭೇಟಿಯಾಗಿ, ಆ ಬಳಿಕ ಡೇಟಿಂಗ್ ಪ್ರಾರಂಭಿಸಿದರು. ಸೆಪ್ಟೆಂಬರ್ 11, 2006 ರಂದು ಚೆನ್ನೈನಲ್ಲಿ ವಿವಾಹವಾದರು.

Ramayana Movie: ರಣಬೀರ್ ʻರಾಮʼನ ಪಾತ್ರದಲ್ಲಿ ಅತ್ಯಂತ ವೀಕ್‌! ರಾಮಲೀಲಾ ಸಂಘದಿಂದ ಬಂತು ಈ ಎಚ್ಚರಿಕೆ

ರಾಮಾಯಣ ವಿವಾದ; ರಾಮಲೀಲಾ ಸಂಘದಿಂದ ಬಂತು ಈ ಎಚ್ಚರಿಕೆ!

Ramayana Movie: ಸಿನಿಮಾ ಬಿಡುಗಡೆಗೂ ಮುನ್ನ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಯಾವುದೇ ದೃಶ್ಯಗಳು ಅಥವಾ ಸಂಭಾಷಣೆಗಳಿಲ್ಲ ಎಂಬುದರ ಖಚಿತತೆಗಾಗಿ ತಮ್ಮ ಸಂಘಟನೆಯ ಪ್ರತಿನಿಧಿಗಳಿಗಾಗಿ ವಿಶೇಷ ಪ್ರದರ್ಶನವೊಂದನ್ನು ಏರ್ಪಡಿಸುವಂತೆ 'ಶ್ರೀ ರಾಮಲೀಲಾ ಮಹಾಸಂಘ'ವು ಚಿತ್ರತಂಡವನ್ನು ಒತ್ತಾಯಿಸಿದೆ. ತಮ್ಮ ಮನವಿಯನ್ನು ಪರಿಗಣಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿಯೂ ಎಚ್ಚರಿಕೆ ನೀಡಿದೆ.

Kannada Serials:  ಬರ್ತಿದೆ ಬಿಗ್‌ಬಾಸ್‌! ಇದೇ ತಿಂಗಳಲ್ಲಿ ಅಂತ್ಯ ಕಾಣಲಿವೆ ಈ ಧಾರಾವಾಹಿಗಳು

ಬರ್ತಿದೆ ಬಿಗ್‌ಬಾಸ್‌! ಇದೇ ತಿಂಗಳಲ್ಲಿ ಅಂತ್ಯ ಕಾಣಲಿವೆ ಈ ಧಾರಾವಾಹಿಗಳು

Kannada Serials: ಬಿಗ್ ಬಾಸ್ ಕನ್ನಡ ಸೀಸನ್ 13ರ ಮೊದಲ ಅಧಿಕೃತ ಪ್ರೋಮೋ (Promo) ಬಿಡುಗಡೆಯಾಯಿತು. ʼನಮಸ್ತೆ ಕರ್ನಾಟಕ, the Bigg wait is over!ʼ ಎಂಬ ಶೀರ್ಷಿಕೆಯಲ್ಲಿ 50 ಸೆಕೆಂಡ್‌ಗಳ ಪ್ರೋಮೋ ಬಿಡುಗಡೆ ಮಾಡಲಾಗಿದೆ. ಸುದೀಪ್‌ ಸಹ ಸಖತ್‌ ಸ್ಟೈಲಿಶ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸೀಸನ್‌ ಸೆಪ್ಟೆಂಬರ್‌ ತಿಂಗಳಿನಿಂದ ಶುರುವಾಗಲಿದೆ. ಹಾಗಾದ್ರೆ, ಇದೇ ತಿಂಗಳು ಕಲರ್ಸ್ ಕನ್ನಡ ವಾಹಿನಿಯಲ್ಲಿ ಅಂತ್ಯವಾಗಲಿರುವ ಎರಡು ಟಾಪ್‌ ಸೀರಿಯಲ್‌ಗಳು ಯಾವುವು?

Bigg Boss Kannada 13: ಹೊಸ ಸೀಸನ್‌ಗೆ ಜಡ್ಜ್‌ಗಳಾಗಿ ಬರಲಿದ್ದಾರಾ  ಗಿಲ್ಲಿ, ಸಂಗೀತಾ? ಏನಿದು ಹೊಸ ಟ್ವಿಸ್ಟ್‌?

Bigg Boss: ಹೊಸ ಸೀಸನ್‌ಗೆ ಜಡ್ಜ್‌ಗಳಾಗಿ ಬರಲಿದ್ದಾರಾ ಗಿಲ್ಲಿ, ಸಂಗೀತಾ?

Bigg Boss Kannada 13: ಈ ಮೊದಲು ಬಿಗ್ ಬಾಸ್ ಟೀಂ ಆಯ್ಕೆ ಮಾಡಿದವರಿಗೆ ನೇರವಾಗಿ ಎಂಟ್ರಿ ಸಿಗುತ್ತಿತ್ತು. ಆದರೆ, ಇತ್ತೀಚೆಗೆ ಇದನ್ನು ಬದಲಿಸಲಾಗಿತ್ತು. ಈ ಬಾರಿ ಈ ಶೈಲಿಯನ್ನು ಮತ್ತಷ್ಟು ಬದಲಿಸೋ ಸಾಧ್ಯತೆ ಇದೆ. ಈಗಾಗಲೇ ಕಾಮನ್ ಮ್ಯಾನ್ ಆಡಿಷನ್ ಪ್ರಕ್ರಿಯೆ ಮುಗಿಸಿದ್ದಾರೆ. ಆಡಿಷನ್‌ ರೌಂಡ್‌ನಲ್ಲಿ ಸೆಲೆಕ್ಟ್ ಆದವರನ್ನ ಮುಂದಿನ ಹಂತಕ್ಕೆ ಕರೆತರಲಾಗಿದೆ. ಆಡಿಷನ್ಸ್ ಮೂಲಕ ಆಯ್ಕೆ ಆಗಿರುವ ಜನಸಾಮಾನ್ಯರು ‘ಬಿಗ್ ಬಾಸ್ - ಅಗ್ನಿಪರೀಕ್ಷೆ’ ಎದುರಿಸಬೇಕು. ಅಗ್ನಿಪರೀಕ್ಷೆಯಲ್ಲಿ ಪಾಸ್ ಆದವರು ‘ಬಿಗ್ ಬಾಸ್ ಕನ್ನಡ 13’ ಅಧಿಕೃತ ಟಿವಿ ಸೀಸನ್‌ಗೆ ಆಯ್ಕೆ ಆಗಲಿದ್ದಾರೆ.

SIIMA Awards 2026: ಸೈಮಾ ಅವಾರ್ಡ್ 14ನೇ ಸೀಸನ್; ಪ್ರತಿನಿಧಿಸುವ ನಟ ಶ್ರೀಮುರುಳಿ

ಸೈಮಾ ಅವಾರ್ಡ್ 14ನೇ ಸೀಸನ್; ಪ್ರತಿನಿಧಿಸುವ ನಟ ಶ್ರೀಮುರುಳಿ

SIIMA Awards 2026: ಈ ಬಾರಿಯ 14ನೇ ಆವೃತ್ತಿಯ ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭವು ಬರುವ ಸೆಪ್ಟೆಂಬರ್ 11 ಮತ್ತು 12 ರಂದು ವೈಭವಯುತವಾಗಿ ನಡೆಯಲಿದೆ. ಈ ಸಂಬಂಧ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಅದ್ಧೂರಿ ಪತ್ರಿಕಾಗೋಷ್ಠಿಯಲ್ಲಿ ಸೈಮಾ ಅಧ್ಯಕ್ಷೆ ಬೃಂದಾ ಪ್ರಸಾದ್, ನಟ ಶ್ರೀಮುರಳಿ, ನಟಿಯರಾದ ಪ್ರಣೀತಾ ಸುಭಾಷ್, ಶಾನ್ವಿ ಶ್ರೀವಾಸ್ತವ ಹಾಗೂ ಫಾರಿಯಾ ಅಬ್ದುಲ್ಲಾ ಉಪಸ್ಥಿತರಿದ್ದು ಕಾರ್ಯಕ್ರಮದ ಮಾಹಿತಿಯನ್ನು ಹಂಚಿಕೊಂಡರು.

Sonu Nigam: ಸ್ಟಾರ್ ಗಾಯಕನಿಗೆ ಬಹಿಷ್ಕಾರ ಹಾಕಿದ್ದವು ಈ ಮ್ಯೂಸಿಕ್ ಕಂಪನಿಗಳು!

ಸ್ಟಾರ್ ಗಾಯಕನಿಗೆ ಬಹಿಷ್ಕಾರ ಹಾಕಿದ್ದವು ಈ ಮ್ಯೂಸಿಕ್ ಕಂಪನಿಗಳು!

Sonu Nigam: ಗಾಯಕ ಸೋನು ನಿಗಮ್ (Sonu Nigam೦ ತಮ್ಮ ವೃತ್ತಿಜೀವನದ ಏಳುಬೀಳುಗಳನ್ನು ನೆನಪಿಸಿಕೊಂಡಿದ್ದಾರೆ. ಗಾಯಕರ ರಾಯಲ್ಟಿ ಮತ್ತು ಕೃತಿಸ್ವಾಮ್ಯದ ಹಕ್ಕುಗಳಿಗಾಗಿ ( copyright battle) ಧ್ವನಿ ಎತ್ತಿದ್ದಕ್ಕೆ ಮ್ಯೂಸಿಕ್ ಕಂಪನಿಗಳು ತಮಗೆ ಬಹಿಷ್ಕಾರ ಹಾಕಿದ್ದವು ಎಂದು ಖ್ಯಾತ ಗಾಯಕ ಸೋನು ನಿಗಮ್ ಹೇಳಿದ್ದಾರೆ.

Aditi Sharma: ಪತಿ, ಅತ್ತೆ ಮತ್ತು ನಾದಿನಿ ವಿರುದ್ಧ ದೂರು ದಾಖಲಿಸಿದ ಖ್ಯಾತ ಕಿರುತೆರೆ ನಟಿ

ಪತಿ, ಅತ್ತೆ ಮತ್ತು ನಾದಿನಿ ವಿರುದ್ಧ ದೂರು ದಾಖಲಿಸಿದ ಖ್ಯಾತ ಕಿರುತೆರೆ ನಟಿ

Aditi Sharma: ತಮ್ಮ ದೂರಿನಲ್ಲಿ, ಅದಿತಿ ಅವರು ಆ ಮೂವರು ವ್ಯಕ್ತಿಗಳ ವಿರುದ್ಧ ದೈಹಿಕ ಹಾಗೂ ಮಾನಸಿಕ ಕಿರುಕುಳ, ಕೌಟುಂಬಿಕ ದೌರ್ಜನ್ಯ, ಹಲ್ಲೆ, ನಿಂದನೆ, ತಮ್ಮ ಚಾರಿತ್ರ್ಯ ವಧೆ ಮತ್ತು ತಮ್ಮ 'ಮದುವೆಯ ಒಡವೆಗಳನ್ನು' ದುರುಪಯೋಗಪಡಿಸಿಕೊಳ್ಳುವುದು ಮುಂತಾದ ಆರೋಪಗಳನ್ನು ಮಾಡಿದ್ದಾರೆ. ಈ ವರ್ಷದ ಆರಂಭದಲ್ಲಿಯೂ ಈ ಜೋಡಿಯ ಸಂಬಂಧ ಹಳಸಿತ್ತು. ಮಾರ್ಚ್ 2025 ರಲ್ಲಿ, ಅಭಿನೀತ್ ಅವರು ಅಪೋಲೆನಾ ಸಹನಟಿ ಸಮರ್ಥ್ಯ ಗುಪ್ತಾ ಅವರೊಂದಿಗೆ ಅದಿತಿ ವಿವಾಹೇತರ ಸಂಬಂಧ ಹೊಂದಿದ್ದಾರೆಂದು ಆರೋಪ ಮಾಡಿದ್ದರು.

Idhayam Murali OTT:  ಅತ್ಯಂತ ಭಾವನಾತ್ಮಕ ಕಥೆ; ಈ ಸೌತ್‌ ಮೂವಿ ಸ್ಟ್ರೀಮಿಂಗ್‌ ಎಲ್ಲಿ?

ಅತ್ಯಂತ ಭಾವನಾತ್ಮಕ ಕಥೆ; ಈ ಸೌತ್‌ ಮೂವಿ ಸ್ಟ್ರೀಮಿಂಗ್‌ ಎಲ್ಲಿ?

Idhayam Murali OTT: ಅಥರ್ವ ಅಭಿನಯದ 'ಇಧಯಂ ಮುರಳಿ' ಚಿತ್ರವು OTT ಗೆ (OTT) ಪದಾರ್ಪಣೆ ಮಾಡಲು ಸಜ್ಜಾಗಿದೆ. ತನ್ನ ಯೌವ್ವನದ ಕಥೆ ಮತ್ತು ಭಾವನಾತ್ಮಕ ಕ್ಷಣಗಳಿಂದ ಚಿತ್ರಮಂದಿರಗಳಲ್ಲಿ ಗಮನ ಸೆಳೆದ ಈ ಸಿನಿಮಾ ಶೀಘ್ರದಲ್ಲೇ ಸ್ಟ್ರೀಮಿಂಗ್‌ಗೆ ಲಭ್ಯವಿರುತ್ತದೆ. ದೊಡ್ಡ ಪರದೆಯ ಮೇಲೆ ಚಿತ್ರವನ್ನು ವೀಕ್ಷಿಸಲು ಸಾಧ್ಯವಾಗದ ಮತ್ತು ಅದರ ಡಿಜಿಟಲ್ ಬಿಡುಗಡೆಗಾಗಿ ಕಾಯುತ್ತಿರುವ ವೀಕ್ಷಕರಿಗೆ ಇದು ಒಳ್ಳೆಯ ಸುದ್ದಿಯಾಗಿದೆ.

Bigg Boss Season 13: ಬಿಗ್ ಬಾಸ್ 13ರ ಹವಾ ಇನ್ಮುಂದೆ ಶುರು; ಕಿಚ್ಚನ ಲುಕ್‌ ಕಂಡು ವೀಕ್ಷಕರು ಖುಷ್‌

ಬಿಗ್ ಬಾಸ್ 13ರ ಹವಾ ಇನ್ಮುಂದೆ ಶುರು; ಕಿಚ್ಚನ ಲುಕ್‌ ಕಂಡು ವೀಕ್ಷಕರು ಖುಷ್‌

Bigg Boss Kannada: ನಮಸ್ತೆ ಕರ್ನಾಟಕ, the Bigg wait is over! ಎಂದು ಪ್ರೋಮೋ ಹಂಚಿಕೊಂಡಿದೆ ವಾಹಿನಿ. ಆದರೆ ಯಾವಾಗಿನಿಂದ ಶುರು ಅನ್ನೋದು ಮಾತ್ರ ತಿಳಿಸಿಲ್ಲ. ಇತ್ತೀಚೆಗೆ ಜಿಯೋ ಹಾಟ್‌ಸ್ಟಾರ್, ಸೆಪ್ಟೆಂಬರ್‌ನಿಂದ 6 ಭಾಷೆಗಳಲ್ಲಿ ಬಿಗ್‌ಬಾಸ್ ಆರಂಭವಾಗಲಿದೆ ಎಂದು ಮಾಹಿತಿ ನೀಡಿತ್ತು. ಈ ಪ್ರೋಮೋದಲ್ಲಿ ಕಿಚ್ಚ ಹೊಸ ಲುಕ್‌ನ ಝಲಕ್ ಇದೆ. ಶಾರ್ಟ್ ಹೇರ್ ಸ್ಟೈಲ್ ಲುಕ್ ಇದರಲ್ಲಿ ರಿವೀಲ್ ಆಗಿದೆ. ಕಪ್ಪು ಬಣ್ಣದ ಕಾಸ್ಟೂಮ್ ಅಲ್ಲಿಯೇ ಸುದೀಪ್ ಇಲ್ಲಿ ಕಾಣಿಸಿಕೊಂಡಿದ್ದಾರೆ.

Rajinikanth:  ರಜನೀಕಾಂತ್‌ಗಾಗಿ ಈ ನಿಯಮ ಮುರಿದ ನಟ ವಿಜಯ್ ಸೇತುಪತಿ

ರಜನೀಕಾಂತ್‌ಗಾಗಿ ಈ ನಿಯಮ ಮುರಿದ ನಟ ವಿಜಯ್ ಸೇತುಪತಿ

Rajinikanth: 2023ರ ಬ್ಲಾಕ್‌ಬಸ್ಟರ್ ಚಿತ್ರದ ಮುಂಬರುವ ಮುಂದುವರಿದ ಭಾಗ ಜೈಲರ್ 2 ಆಗಿದ್ದು, ಇದರಲ್ಲಿ ರಜನಿಕಾಂತ್ ಮುತ್ತುವೇಲ್ ಪಾಂಡಿಯನ್ ಪಾತ್ರವನ್ನು ಮತ್ತೆ ನಿರ್ವಹಿಸುತ್ತಿದ್ದಾರೆ. ಮೊದಲ ಕಂತಿನ ಘಟನೆಗಳ ನಂತರ ಈ ಚಿತ್ರವು ಕಥೆಯನ್ನು ಮುಂದುವರಿಸುವ ನಿರೀಕ್ಷೆಯಿದೆ. ರಜನಿಕಾಂತ್ ಅವರಲ್ಲದೆ , ಈ ಚಿತ್ರದಲ್ಲಿ ಮಿಥುನ್ ಚಕ್ರವರ್ತಿ, ವಿದ್ಯಾ ಬಾಲನ್, ಎಸ್‌ಜೆ ಸೂರ್ಯ ಮತ್ತು ಸೂರಜ್ ವೆಂಜರಮೂಡು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದಲ್ಲದೆ, ಮೋಹನ್ ಲಾಲ್, ವಿಜಯ್ ಸೇತುಪತಿ, ಹೃತಿಕ್ ರೋಷನ್ ಮತ್ತು ಶಿವ ರಾಜ್‌ಕುಮಾರ್ ತಮ್ಮ ಪಾತ್ರಗಳನ್ನು ಪುನರಾವರ್ತಿಸುವ ನಿರೀಕ್ಷೆಯಿದೆ.

Lenin Movie OTT : ಅಖಿಲ್ ಅಕ್ಕಿನೇನಿ ಹಿಟ್‌ ಮೂವಿ 'ಲೆನಿನ್' ಒಟಿಟಿ ರಿಲೀಸ್‌ ಡೇಟ್‌ ಅನೌನ್ಸ್‌!

ಅಖಿಲ್ ಅಕ್ಕಿನೇನಿ ಹಿಟ್‌ ಮೂವಿ 'ಲೆನಿನ್' ಒಟಿಟಿ ರಿಲೀಸ್‌ ಡೇಟ್‌ ಅನೌನ್ಸ್‌!

Lenin Movie OTT : ಅಖಿಲ್ ಅಕ್ಕಿನೇನಿ (akhil akkineni) ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆಗಳನ್ನು ಸೃಷ್ಟಿಸಿದ್ದಾರೆ ಮತ್ತು 'ಲೆನಿನ್' ಚಿತ್ರದ ಮೂಲಕ ತಮ್ಮ ವೃತ್ತಿಜೀವನದ ಅತಿದೊಡ್ಡ ಬ್ಲಾಕ್‌ಬಸ್ಟರ್ ಹಿಟ್ ಗಳಿಸಿದ್ದಾರೆ. ಮುರಳಿ ಕಿಶೋರ್ ಅಬ್ಬೂರ್ ನಿರ್ದೇಶನದ ಈ ಮಾಸ್ ಆಕ್ಷನ್ ಎಂಟರ್‌ಟೈನರ್ ಈಗ ಒಟಿಟಿಯಲ್ಲಿ ರಂಜಿಸಲು ಸಿದ್ಧವಾಗಿದೆ. ಅಖಿಲ್ ತಮ್ಮ ಹೊಸ ಗೆಟಪ್ ಮತ್ತು ಆಕ್ಷನ್ ಅಭಿನಯದಿಂದ ಮಾಸ್ ಪ್ರೇಕ್ಷಕರನ್ನು ಮೆಚ್ಚಿಸಿದ್ದಾರೆ. ಭಾಮಾ ಭಾಗ್ಯಶ್ರೀ ಬೋರ್ಸೆ ನಾಯಕಿಯಾಗಿ ಅಖಿಲ್ ಅವರನ್ನು ರಂಜಿಸಿದರೆ, ಎಸ್. ಥಮನ್ ಅವರ ಮಾಸ್ ಬೀಟ್ಸ್ ಮತ್ತು ಹಿನ್ನೆಲೆ ಸಂಗೀತ ಚಿತ್ರದ ಪ್ರಮುಖ ಆಕರ್ಷಣೆಯಾಗಿತ್ತು.

Ramayana Movie: ಬರ್ತಿದೆ ರಾಮಾಯಣ ಧಾರಾವಾಹಿ ಕುರಿತು ಸಾಕ್ಷ್ಯಚಿತ್ರ!  ವಿಶೇಷತೆ ಏನು?

ಬರ್ತಿದೆ ರಾಮಾಯಣ ಧಾರಾವಾಹಿ ಕುರಿತು ಸಾಕ್ಷ್ಯಚಿತ್ರ! ವಿಶೇಷತೆ ಏನು?

Ramayana Movie: ರಾಮಾನಂದ ಸಾಗರ್ ಅವರ ಟಿವಿ ಸರಣಿ ರಾಮಾಯಣವು ಇದುವರೆಗೆ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಭಾರತೀಯ ಧಾರಾವಾಹಿಯಾಗಿ ಉಳಿದಿದೆ. 1987-88ರ ಅವಧಿಯಲ್ಲಿ ಪ್ರಸಾರವಾದ ಈ ಸರಣಿಯು ಇನ್ನೂ ಯಾವುದೇ ಭಾರತೀಯ ಧಾರಾವಾಹಿಯ ಅತ್ಯಧಿಕ ಟಿಆರ್‌ಪಿಯನ್ನು ಹೊಂದಿದೆ. 2020 ರಲ್ಲಿ ಕೊರೋನಾ ಸಮಯದಲ್ಲಿ ಮರುಪ್ರಸಾರವಾದಾಗ ಅದು ಮತ್ತೆ ಟಿವಿ ರೇಟಿಂಗ್‌ನಲ್ಲಿ ಅಗ್ರಸ್ಥಾನ ಪಡೆದಿರುವುದು ಇದರ ಜನಪ್ರಿಯತೆಗೆ ಸಾಕ್ಷಿಯಾಗಿದೆ.

Anupama Parameswaran:  ಬ್ರೇಕಪ್ ಬಗ್ಗೆ ಮೌನ ಮುರಿದ ಅನುಪಮಾ ಪರಮೇಶ್ವರನ್!

ಬ್ರೇಕಪ್ ಬಗ್ಗೆ ಮೌನ ಮುರಿದ ಅನುಪಮಾ ಪರಮೇಶ್ವರನ್!

Anupama Parameswaran: ಇತ್ತೀಚೆಗೆ, ಅವರ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಸುದ್ದಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಡುತ್ತಿವೆ. ತಮಿಳು ನಟ ಧ್ರುವ ವಿಕ್ರಮ್ ಅವರನ್ನು ಪ್ರೀತಿಸುತ್ತಿದ್ದಾರೆ ಎಂಬ ವದಂತಿ ಕೆಲವು ಸಮಯದಿಂದ ನಡೆಯುತ್ತಿದ್ದರೆ, ಈಗ ಇಬ್ಬರೂ ಬೇರ್ಪಟ್ಟಿದ್ದಾರೆ ಎಂಬ ಸುದ್ದಿ ಚಲನಚಿತ್ರ ವಲಯಗಳಲ್ಲಿ ಬಿಸಿ ವಿಷಯವಾಗಿದೆ. ಬ್ರೇಕಪ್ (Breakup) ವದಂತಿಗಳ ಕುರಿತು ನಟಿ ಅನುಪಮಾ ಪರಮೇಶ್ವರನ್ ಕೊನೆಗೂ ಪ್ರತಿಕ್ರಿಯಿಸಿದ್ದಾರೆ.

Ramayana:  ಕನ್ನಡದ ನಟಿಯೊಬ್ಬರಿಗೂ ಸೀತೆಯ ಪಾತ್ರದ ಅವಕಾಶ ಬಂದಿತ್ತು! ಯಾರದು?

ಕನ್ನಡದ ನಟಿಯೊಬ್ಬರಿಗೂ ಸೀತೆಯ ಪಾತ್ರದ ಅವಕಾಶ ಬಂದಿತ್ತು! ಯಾರದು?

Ramayana: ಸೀತೆಯ (Sita Role) ಪಾತ್ರ ನಿರ್ವಹಿಸಿರುವ ಸಾಯಿ ಪಲ್ಲವಿ ಬಗ್ಗೆ ಭಿನ್ನ-ಭಿನ್ನ ಅಭಿಪ್ರಾಯಗಳು ಕೇಳಿ ಬರುತ್ತಿವೆ. ಕೆಲವರು ಸಾಯಿ ಪಲ್ಲವಿ ಸೂಕ್ತ ಆಯ್ಕೆ ಎಂದರೆ, ಇನ್ನು ಕೆಲವರು ಅಲ್ಲ ಎನ್ನುತ್ತಿದ್ದಾರೆ. ಅಂದಹಾಗೆ ‘ರಾಮಾಯಣ’ದಲ್ಲಿ ಸೀತೆ ಪಾತ್ರ ಮಾಡುವ ಅವಕಾಶ ಕನ್ನಡದ ನಟಿಗೆ ಬಂದಿತ್ತು. ಈ ಹಿಂದೆಯೇ ಈ ಬಗ್ಗೆ ಚರ್ಚೆಗಳೂ ಆಗಿದ್ದವು.

Kannada New Movie: ವಿವೇಕ್‌ ಸಿಂಹ ಅಭಿನಯದ ‘ಅನಿರೀಕ್ಷಿತ ಅತಿಥಿಗಳು’ ಸೆಪ್ಟೆಂಬರ್‌ನಲ್ಲಿ ತೆರೆಗೆ

ವಿವೇಕ್‌ ಸಿಂಹ ಅಭಿನಯದ ‘ಅನಿರೀಕ್ಷಿತ ಅತಿಥಿಗಳು’ ಸೆಪ್ಟೆಂಬರ್‌ನಲ್ಲಿ ತೆರೆಗೆ

Kannada New Movie: ಮನೋಜ್ ಅಣ್ಣಯ್ಯ (Manoj Annayya) ನಿರ್ದೇಶನದಲ್ಲಿ ಹಾಗೂ ಬಿ. ವಿನೋದ್ ಕುಮಾರ್ ನಿರ್ಮಿಸಿರುವ ತೇಜ್ವಿನ್ ಪ್ರೊಡಕ್ಷನ್ಸ್ ಬ್ಯಾನರ್‌ನಡಿ ಮೂಡಿಬಂದಿರುವ ಈ ಚಿತ್ರಕ್ಕೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ 'ಎ' vivek simha starrer anireekshita atithigalu gets a certificate from cbfc ಪ್ರಮಾಣಪತ್ರ ನೀಡಿದೆ. ಹಿಂಸಾತ್ಮಕ ದೃಶ್ಯಗಳಿಗೆ ಸಂಬಂಧಿಸಿದಂತೆ ಕೆಲ ಬದಲಾವಣೆಗಳನ್ನು ಸೂಚಿಸಿದ್ದ ಸೆನ್ಸಾರ್ ಸಮಿತಿಯ ನಿರ್ದೇಶನಗಳನ್ನು ಪಾಲಿಸಿದ ಬಳಿಕ ಚಿತ್ರಕ್ಕೆ ಅಂತಿಮ ಪ್ರಮಾಣಪತ್ರ ಲಭಿಸಿದೆ.

Kannada New Movie: ಸಿದ್ದು ಪೂರ್ಣಚಂದ್ರ ನಿರ್ದೇಶನದ `ಬ್ರಹ್ಮ ಕಮಲ' ಟ್ರೈಲರ್ ಔಟ್‌!

ಸಿದ್ದು ಪೂರ್ಣಚಂದ್ರ ನಿರ್ದೇಶನದ `ಬ್ರಹ್ಮ ಕಮಲ' ಟ್ರೈಲರ್ ಔಟ್‌!

Kannada New Movie: ಸಿದ್ದು ಪೂರ್ಣಚಂದ್ರ ಈ ಮೂಲಕ ನಿರ್ದೇಶಕನಾಗಿ ತನ್ನದು ಭಿನ್ನಪಥ ಎಂಬ ಸಂದೇಶ ರವಾನಿಸಿದ್ದ ಅವರು, ಮತ್ತೊಂದು ಸೂಕ್ಷ್ಮ ಕಥನಕ್ಕೆ ದೃಶ್ಯರೂಪ ನೀಡಿದ್ದಾರೆ. ನಮ್ಮ ನಡುವಿನ ಕೌಟುಂಬಿಕ ವ್ಯವಸ್ಥೆಯೊಳಗಿನ ಹೆಣ್ಣೊಬ್ಬಳ ಒಳತೋಟಿಗೆ ಕಣ್ಣಾದ ಆ ಕಥನವೀಗ ಬ್ರಹ್ಮಕಮಲ ಎಂಬ ಶೀರ್ಷಿಕೆಯೊಂದಿಗೆ ಬಿಡುಗಡೆಗೆ ಅಣಿಗೊಂಡಿದೆ. ಇದೀಗ ಈ ಸಿನಿಮಾದ ಟ್ರೈಲರ್ ಬಿಡುಗಡೆಗೊಂಡು, ಪ್ರೇಕ್ಷಕರ ವಲಯದಲ್ಲಿ ಚರ್ಚೆಗೆ ಅನುವು ಮಾಡಿಕೊಟ್ಟಿದೆ.

Salman Khan: ರಿಯಾಲಿಟಿ ಶೋಗೆ ಎಂಟ್ರಿ  ಕೊಟ್ಟ ಸಲ್ಮಾನ್ ಖಾನ್; ಅಭಿಮಾನಿಗಳಿಗೆ ಶಾಕ್

ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟ ಸಲ್ಮಾನ್ ಖಾನ್; ಅಭಿಮಾನಿಗಳಿಗೆ ಶಾಕ್

Salman Khan: ನಟ ಸೊಹೈಲ್ ಖಾನ್ ಪ್ರಸ್ತುತ ರಿಯಾಲಿಟಿ ಶೋ ಅಲೈಯನ್ಸ್‌ನಲ್ಲಿ ಸ್ಪರ್ಧಿಯಾಗಿದ್ದಾರೆ. ಅವರ ಮಾಜಿ ಪತ್ನಿ ಸೀಮಾ ಸಜ್ದೇಹ್ ವೈಲ್ಡ್‌ಕಾರ್ಡ್ ಸ್ಪರ್ಧಿಯಾಗಿ ಈ ಕಾರ್ಯಕ್ರಮಕ್ಕೆ ಪ್ರವೇಶಿಸಿದ್ದರು, ಆದರೆ ಈಗ ಅವರನ್ನು ಹೊರಹಾಕಲಾಗಿದೆ ಸೊಹೈಲ್ ಅವರಿಗೆ ಶೋನಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿವೆ. ಈ ವಾರವಂತೂ ಅವರಿಗೆ ಬಹಳ ಕಷ್ಟಕರವಾಗಿತ್ತು. ಈಗ ಮನೆಯಲ್ಲಿ ಸೊಹೈಲ್ ಅವರಿಗೆ ಬೆಂಬಲ ಸೂಚಿಸಲು ಅವರ ಸಹೋದರ, ಸ್ಟಾರ್ ನಟ ಸಲ್ಮಾನ್ ಖಾನ್ ಶೋಗೆ ಪ್ರವೇಶಿಸಿದ್ದಾರೆ.

Bhavantara Movie: ಬಾಲನಟ ಕಾರ್ತಿಕ್‌ ಶರ್ಮ ಈಗ ನಿರ್ದೇಶಕ: ಮೆಲೋಡಿ ಸಾಂಗ್ ರಿಲೀಸ್

ಬಾಲನಟ ಕಾರ್ತಿಕ್‌ ಶರ್ಮ ಈಗ ನಿರ್ದೇಶಕ: ಮೆಲೋಡಿ ಸಾಂಗ್ ರಿಲೀಸ್

Bhavantara Movie: ಈ ಸಿನಿಮಾದ ‘ಮೊದಮೊದಲಿದು’ ಎಂಬ ಮೆಲೋಡಿ ಹಾಡು ಇತ್ತೀಚೆಗೆ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕನ್ನಡದ ಹೆಮ್ಮೆಯ ನಿರ್ಮಾಣ ಸಂಸ್ಥೆಯಾದ ‘ಹೊಂಬಾಳೆ ಫಿಲ್ಮ್ಸ್’ ತನ್ನದೇ ಆದ ‘ಹೊಂಬಾಳೆ ಮ್ಯೂಸಿಕ್’ ಆಡಿಯೋ ಲೇಬಲ್ ಮೂಲಕ ಈ ಚಿತ್ರದ ಆಡಿಯೋ ಹಕ್ಕುಗಳನ್ನು ಪಡೆದುಕೊಂಡಿದ್ದು, ಹೊಸಬರ ಈ ವಿಭಿನ್ನ ಪ್ರಯತ್ನಕ್ಕೆ ಸಾಥ್ ನೀಡಿದೆ.

Brahmagantu Serial: 'ಬ್ರಹ್ಮಗಂಟು' ಧಾರವಾಹಿ ಅಂತ್ಯ; ದಿಲೀಪ್ ರಾಜ್ ಪತ್ನಿ ಭಾವುಕ ಪೋಸ್ಟ್‌

'ಬ್ರಹ್ಮಗಂಟು' ಧಾರವಾಹಿ ಅಂತ್ಯ; ದಿಲೀಪ್ ರಾಜ್ ಪತ್ನಿ ಭಾವುಕ ಪೋಸ್ಟ್‌

Brahmagantu Serial: ಜೂನ್‌ 17, 2024ರಲ್ಲಿ ‘ಬ್ರಹ್ಮಗಂಟು’ ಧಾರಾವಾಹಿ ತನ್ನ ಮೊದಲ ಸಂಚಿಕೆ ಆರಂಭ ಮಾಡಿತು. ಇದು ಜೀ ಕನ್ನಡ ವಾಹಿನಿಯ ಹೆಮ್ಮೆಯ ಧಾರಾವಾಹಿ. ಈ ಹಿಂದೆ ಇದೇ ಟೈಟಲ್‌ನಲ್ಲಿ ನಟಿ ಗೀತಾ ಭಾರತಿ ಭಟ್‌ ಅವರನ್ನ ಪರಿಚಯಿಸಿತ್ತು ವಾಹಿನಿ. ಆಗ ಖ್ಯಾತ ನಿರ್ಮಾಪಕಿ ಶ್ರುತಿ ನಾಯ್ಡು ಅವರು ಈ ಧಾರಾವಾಹಿಗೆ ಬಂಡವಾಳ ಹೂಡಿದ್ದರು. 'ಬಾಡಿ ಶೇಮಿಂಗ್‌'ನಂತಹ ಗಂಭೀರ ಕಥೆಯನ್ನ ಸೊಗಸಾಗಿ ಹೆಣೆಯಲಾಗಿತ್ತು.

Amruthdhaare Serial: ಭೂಮಿಕಾಗೆ ಕ್ಯಾನ್ಸರ್; ಸಿಹಿ ತಿಂದು ಸಂಭ್ರಮಿಸಿದ ಶಕುಂತಲಾ, ಜೈದೇವ್‌!

ಭೂಮಿಕಾಗೆ ಕ್ಯಾನ್ಸರ್; ಸಿಹಿ ತಿಂದು ಸಂಭ್ರಮಿಸಿದ ಶಕುಂತಲಾ, ಜೈದೇವ್‌!

Amruthdhaare Serial: ಭೂಮಿಕಾಗೆ ಚಿಂತೆ ಕಾಡುತ್ತಿದೆ. ತಾನು ಸತ್ತರೆ ಮಕ್ಕಳ ಮುಂದಿನ ಭವಿಷ್ಯ ಏನು ಎಂದು ಚಿಂತಿತಳಾಗಿದ್ದಾಳೆ. ಮುಂದಿನ ದಿನಗಳಲ್ಲಿ ತನ್ನ ಕ್ಯಾನ್ಸರ್ ಚಿಕಿತ್ಸೆ ಪ್ರಾರಂಭವಾದ್ರೆ ಮಕ್ಕಳು ಪ್ರಶ್ನಿಸಿದ್ರೆ ಏನು ಮಾಡಬೇಕೆಂದು ಮಲ್ಲಿ ಸಹಾಯ ಕೇಳಿದ್ದಾಳೆ. ಮಕ್ಕಳನ್ನು ಅಜ್ಜಿ ಮನೆಗೆ ಕಳುಹಿಸುವಂತೆ ಮಲ್ಲಿ ಸಲಹೆ ನೀಡಿದ್ದಾಳೆ. ಮಲ್ಲಿ ಮಾತಿನಂತೆ ಮಕ್ಕಳನ್ನು ತವರಿಗೆ ಕಳುಹಿಸಲು ಭೂಮಿಕಾ ನಿರ್ಧರಿಸಿದ್ದಾಳೆ.

Loading...