ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad
Profile

Yashaswi Devadiga

Sub Editor

[email protected]

ಉತ್ತರ ಕನ್ನಡ ಜಿಲ್ಲೆಯ ಶಿರಸಿ ಹುಟ್ಟೂರು. ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಜಯಪುರದಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಜತೆಗೆ ಚಿನ್ನದ ಪದಕ ಪಡೆದುಕೊಂಡಿದ್ದೇನೆ. ವಿಸ್ತಾರ ನ್ಯೂಸ್ ವೆಬ್ಸೈಟ್ ನಲ್ಲಿ ಉಪಸಂಪಾದಕಿಯಾಗಿ ವೃತ್ತಿ ಪ್ರಾರಂಭ. ಬಳಿಕ ನ್ಯೂಸ್ 18 ಕನ್ನಡದಲ್ಲಿ ಉಪಸಂಪಾದಕಿಯಾಗಿ ಕಾರ್ಯ ನಿರ್ವಹಿಸಿದ್ದೇನೆ. ಮೂರು ವರ್ಷಗಳಿಂದ ಕೆಲಸ ಮಾಡಿದ ಅನುಭವ. ಜೊತೆಗೆ ಕನ್ನಡ ಸಿನಿಮಾವೊಂದಕ್ಕೆ ಸಹಾಯಕಿ ನಿರ್ದೇಶಕಿಯಾಗಿ ಕೆಲಸ ಮಾಡಿದ್ದೇನೆ. ಸಿನಿಮಾ ವೀಕ್ಷಣೆ, ಸಿನಿಮಾ ಮೇಕಿಂಗ್, ಸಿನಿಮಾ ವಿಮರ್ಶೆ, ಬರವಣಿಗೆ, ಓದು ನೆಚ್ಚಿನ ಹವ್ಯಾಸ.

Articles
Bigg Boss kannada 13: ಕಾಮನ್ ಮ್ಯಾನ್ ಸ್ಪರ್ಧಿಗಳ ಅತಿರೇಕದ ವರ್ತನೆ! ಕಿಚ್ಚನ ಕ್ಲಾಸ್ ನೆನೆದು ಮಂಜುಗೆ ಭಯ

ಕಾಮನ್ ಮ್ಯಾನ್ ಸ್ಪರ್ಧಿಗಳ ಅತಿರೇಕದ ವರ್ತನೆ! ಕಿಚ್ಚನ ನೆನೆದು ಮಂಜುಗೆ ಭಯ

Bigg Boss kannada 13: ಬಿಗ್ ಬಾಸ್ ಕನ್ನಡ 13ರಲ್ಲಿ ಮಾಡರ್ನ್ ಮಹಾಕವಿ (Mahakavi Manja) ಮಂಜು ನಡೆದುಕೊಳ್ಳುತ್ತಿರುವ ರೀತಿ ಹಾಗೂ ಸಹ-ಸ್ಪರ್ಧಿಗಳ ಕ್ಯಾರೆಕ್ಟರ್ ಬಗ್ಗೆ ಆಡಿದ ಮಾತುಗಳು ತೀವ್ರ ವಿವಾದಕ್ಕೆ ಕಾರಣವಾಗಿವೆ. ಕಿಚ್ಚ ಸುದೀಪ್ ಅವರಿಂದ ತಮಗೆ ಭಾರಿ ಕ್ಲಾಸ್ ಕಾದಿದೆ ಎಂದು ಸ್ವತಃ ಮಂಜನೇ ಭಯ ಹೊರ ಹಾಕಿದ್ದಾರೆ. ಕಾಮನ್ ಮ್ಯಾನ್ ಸ್ಪರ್ಧಿಗಳ ಆಟ ದಿಕ್ಕು ತಪ್ಪಿದ್ದು, ಬೇರೆಯವರ ಆಹಾರ ಕದ್ದು ತಿನ್ನುವ ಮೂಲಕ ಸಹ-ಸ್ಪರ್ಧಿಗಳು ಹಾಗೂ ವೀಕ್ಷಕರ ಆಕ್ರೋಶಕ್ಕೆ ಈಡಾಗಿದ್ದಾರೆ.

Amruthadhaare Serial: ಹೊಸ ರೂಪ - ಹೊಸ ತಿರುವು! ಭೂಮಿಕಾ ಪ್ರತಿರೂಪ, ಯಾರಿದು ದೀಪಿಕಾ ?

ಹೊಸ ರೂಪ - ಹೊಸ ತಿರುವು! ಭೂಮಿಕಾ ಪ್ರತಿರೂಪ, ಯಾರಿದು ದೀಪಿಕಾ ?

Amruthadhaare Serial: ಅಮೃತಧಾರೆ ಹೊಸ ರೂಪ ಪಡೆದುಕೊಂಡು ಸಾಗುತ್ತಿದೆ. ಅಮೃತಧಾರೆ ಧಾರಾವಾಹಿಯಲ್ಲಿ ಜೈದೇವ್ ಸತ್ತಿಲ್ಲ. ಆ ಸತ್ಯ ಅನಾವರಣ ಆಗಿದೆ. ಕಥೆಯು ಹೊಸ ತಿರುವು ಪಡೆಯುವ ಸೂಚನೆ ಈ ಹಿಂದೆಯೇ ಸೀರಿಯಲ್‌ ನೀಡಿತ್ತು. ಹೊಸ ರೂಪ - ಹೊಸ ತಿರುವು. ಭೂಮಿಕಾ ಪ್ರತಿರೂಪ ದೀಪಿಕಾ ಈಗ ಎಂಟ್ರಿ ಆಗಿದೆ.

Bigg Boss Kannada 13: ಮುಚ್ಚೋ ಬಾಯಿ; ಶಾಸ್ತ್ರಿ ಕಿರಿಕ್, ಆಸಿಯಾ ಆವಾಜ್‌!

ಮುಚ್ಚೋ ಬಾಯಿ; ಶಾಸ್ತ್ರಿ ಕಿರಿಕ್, ಆಸಿಯಾ ಆವಾಜ್‌!

Bigg Boss Kannada 13:ಕಿರಣ್ ಶಾಸ್ತ್ರಿ ಹಾಗೂ ಆಸಿಯಾ ನಡುವೆ ಭಾರಿ ಹೈ-ವೋಲ್ಟೇಜ್ ಕಿತ್ತಾಟ ನಡೆದಿದೆ. ಕ್ಯಾಪ್ಟನ್ಸಿ ಹಾಗೂ ಗೇಮ್ ಟಾಸ್ಕ್ ವಿಚಾರವಾಗಿ ಮಾತುಕತೆ ನಡೆಯುವ ವೇಳೆ, ಕಿರಣ್ ಶಾಸ್ತ್ರಿ ಅವರು ಆಸಿಯಾ ಅವರನ್ನು ಉದ್ದೇಶಪೂರ್ವಕವಾಗಿ ಟ್ರಿಗರ್ ಮಾಡುವಂತಹ ಮಾತುಗಳನ್ನು ಆಡಿದ್ದಾರೆ.ಕೋ ಪೈಲೆಟ್‌ನಾ ಮನವೊಲಿಸಬೇಕಿತ್ತು. ಹೀಗಾಗಿ ಸ್ಪರ್ಧಿಗಳೆಲ್ಲರೂ ಆಸಿಯಾ ಮನವೊಲಿಸಲು ನೋಡಿದರು. ಆದರೆ ಕಿರಣ್‌ ಮಾತ್ರ ಪದೇ ಪದೇ ಟ್ರಿಗರ್‌ ಮಾಡುತ್ತಿದ್ದರು. ಇದೀಗ ಆಸಿಯಾ (Asia) ಅವರು ಕಿರಣ್‌ ಶಾಸ್ತ್ರಿ (kiran shastri) ಮೇಲೆ ಗರಂ ಆಗಿದ್ದಾರೆ. ಮುಚ್ಚೋ ಬಾಯಿ ಅಂತ ಕೂಗಾಡಿದ್ದಾರೆ.

Bigg Boss Kannada 13:  ಮಂಜ ನಡವಳಿಕೆಗೆ ಬೇಸತ್ತು ಬಿಗ್ ಬಾಸ್ ಶೋನಿಂದ ಹೊರಗೆ ಬರಲು ನಿರ್ಧರಿಸಿದ ಅವಿನಾಶ್

ಮಂಜ ನಡವಳಿಕೆಗೆ ಬೇಸತ್ತು ಶೋನಿಂದ ಹೊರಗೆ ಬರಲು ನಿರ್ಧರಿಸಿದ ಅವಿನಾಶ್

Bigg Boss Kannada 13: ಬಿಗ್‌ ಬಾಸ್‌ ಮನೆಯಲ್ಲಿ ಮಂಜನ (mahakavi Manja) ಹಾವಳಿ ಕಿತಾಪತಿ ಜೋರಾಗಿದೆ. ಇದರಿಂದಾಗಿ ಸ್ಪರ್ಧಿಗಳು ಪರದಾಡುವಂತಾಗಿದೆ. ಸ್ಪರ್ಧಿಗಳೆಲ್ಲರೂ ಮಲಗಿರುವಾಗ, ಮಂಜು, ಲಿಖಿತ್‌ ಮತ್ತು ಧನುಷ್‌ ಮನಸಿಗೆ ಬಂದಂತೆ ಅಡುಗೆ ಮಾಡಿ ತಿಂದಿದ್ದಾರೆ. ಇದೇ ವಿಚಾರಕ್ಕೆ ಬೇಸರಗೊಂಡ ಅವಿನಾಶ್‌ ರೇಗಾಡಿದ್ದಾರೆ. ಇಂಥ ವ್ಯಕ್ತಿಗಳ ಜೊತೆಯಲ್ಲಿ ತಾವು ಇರುವುದಿಲ್ಲ ಎಂದು ಅವಿನಾಶ್ ಬಿಗ್‌ ಬಾಸ್‌ ಮನೆಯಿಂದ ಹೊರ ಹೋಗಲು ನಿರ್ಧರಿಸಿದ್ದಾರೆ.

PM Modi: ಬಾಲಿವುಡ್‌ ಸೆಲೆಬ್ರಿಟಿಗಳಿಂದ ಮೋದಿಗೆ ಶುಭಾಶಯ! ಶಾರುಖ್, ಸಲ್ಮಾನ್‌ ಟ್ವೀಟ್‌ ವೈರಲ್‌

PM Modi: ಬಾಲಿವುಡ್‌ ಸೆಲೆಬ್ರಿಟಿಗಳಿಂದ ಮೋದಿಗೆ ಶುಭಾಶಯ!

PM Modi: ನರೇಂದ್ರ ಮೋದಿ ಅವರ 76 ನೇ ಹುಟ್ಟುಹಬ್ಬಕ್ಕೆ ಬಾಲಿವುಡ್ ತಾರೆಯರಾದ ಶಾರುಖ್ ಖಾನ್ , ಸಲ್ಮಾನ್ ಖಾನ್ , ಅಜಯ್ ದೇವಗನ್ ಮತ್ತು ಅಕ್ಷಯ್ ಕುಮಾರ್ ಸಾಮಾಜಿಕ ಮಾಧ್ಯಮಗಳ ಮೂಲಕ ಶುಭ ಹಾರೈಸಿದರು . ನಟರು ಅವರಿಗೆ ಉತ್ತಮ ಆರೋಗ್ಯ ಮತ್ತು ಸಂತೋಷವನ್ನು ಹಾರೈಸುವ ಸಂದೇಶಗಳನ್ನು ಹಂಚಿಕೊಂಡರು. ಶಾರುಖ್ ಖಾನ್ ಶ್ಲಾಘಿಸಿದರೆ, ಸಲ್ಮಾನ್ ತಮ್ಮ ಹುಟ್ಟುಹಬ್ಬದ ಸಂದೇಶದಲ್ಲಿ ಪ್ರಧಾನಿಯನ್ನು "ನರೇಂದ್ರ ಭಾಯ್‌ ಮೋದಿ" ಎಂದು ಹೇಳಿದ್ದಾರೆ.

Varanasi movie: ವಾರಣಾಸಿ ಸಿನಿಮಾದ ಪ್ರಚಾರ ಹೇಗಿರಲಿದೆ? ಇಲ್ಲಿದೆ ಬಿಗ್‌ ಅಪ್‌ಡೇಟ್‌

ವಾರಣಾಸಿ ಸಿನಿಮಾದ ಪ್ರಚಾರ ಹೇಗಿರಲಿದೆ? ಇಲ್ಲಿದೆ ಬಿಗ್‌ ಅಪ್‌ಡೇಟ್‌

Varanasi movie: ಎಸ್.ಎಸ್. ರಾಜಮೌಳಿ ತಮ್ಮ ಬಹುನಿರೀಕ್ಷಿತ ಚಿತ್ರ ವಾರಣಾಸಿ ಸಿನಿಮಾದ ಪ್ರಮೋಷನ್​​ಗೆ ದೊಡ್ಡ ಯೋಜನೆ ಹಾಕಿಕೊಂಡಿದ್ದಾರೆ. ಭಾರಿ ಮೊತ್ತವನ್ನು ಅದಕ್ಕಾಗಿ ಖರ್ಚು ಸಹ ಮಾಡಲಿದ್ದಾರೆ. ಈ ಸಿನಿಮಾ ಮುಂದಿನ ವರ್ಷ ಏಪ್ರಿಲ್ ತಿಂಗಳಲ್ಲಿ ಬಿಡುಗಡೆ ಆಗಲಿದೆ. ‘ವಾರಣಾಸಿ’ ಭಾರತದ ಈ ವರೆಗಿನ ಅತಿ ದೊಡ್ಡ ಬಜೆಟ್​ ಸಿನಿಮಾ ಎನ್ನಲಾಗುತ್ತಿದೆ.

Kannada New Movie: ವಿಭಿನ್ನ ಕಥಾಹಂದರ, ಕುತೂಹಲ ಕೆರಳಿಸಿದ ‘ಜನ್ಮೋತ್ಸವ’ ಚಿತ್ರದ ಟ್ರೇಲರ್!

ವಿಭಿನ್ನ ಕಥಾಹಂದರ, ಕುತೂಹಲ ಕೆರಳಿಸಿದ ‘ಜನ್ಮೋತ್ಸವ’ ಚಿತ್ರದ ಟ್ರೇಲರ್!

Kannada New Movie: ಗಣೇಶೋತ್ಸವ ಮತ್ತು ವಿಸರ್ಜನೆಯ ಭವ್ಯ ಬೆಳಕಿನ ಹಿನ್ನೆಲೆಯಲ್ಲಿ, ಕೇವಲ ಒಂದೇ ರಾತ್ರಿಯಲ್ಲಿ ತೆರೆದುಕೊಳ್ಳುವ ವಿಭಿನ್ನ ಕಥಾಹಂದರ ಹೊಂದಿರುವ ‘ಜನ್ಮೋತ್ಸವ’ ಚಿತ್ರದ ಅಧಿಕೃತ ಟ್ರೇಲರ್ ಬಿಡುಗಡೆಯಾಗಿದ್ದು, ಪ್ರೇಕ್ಷಕರಲ್ಲಿ ಭಾರಿ ನಿರೀಕ್ಷೆ ಮೂಡಿಸಿದೆ. ನಂಬಿಕೆ, ಭಯ ಮತ್ತು ವಿಧಿ ಮುಖಾಮುಖಿಯಾಗುವ ಸಂಕೀರ್ಣ ಸನ್ನಿವೇಶಗಳನ್ನು ಒಳಗೊಂಡಿರುವ ಈ ಚಿತ್ರವು ಭಕ್ತಿ, ಭಾವನೆ ಹಾಗೂ ಹೈ-ವೋಲ್ಟೇಜ್ ರೋಮಾಂಚನವನ್ನು ಬೆಳ್ಳಿತೆರೆಯ ಮೇಲೆ ಕಟ್ಟಿಕೊಡಲು ಸಜ್ಜಾಗಿದೆ.

Bigg Boss kannada 13: ತಾಂಡವ್‌ ಲವ್‌ ಟ್ರ್ಯಾಕ್‌; ಎಲ್ಲವೂ 'ಕಾವ್ಯ'ಮಯ! Video

ತಾಂಡವ್‌ ಲವ್‌ ಟ್ರ್ಯಾಕ್‌; ಎಲ್ಲವೂ 'ಕಾವ್ಯ'ಮಯ!

Bigg Boss kannada 13:ಬಿಗ್​​ಬಾಸ್ ಮನೆಯಲ್ಲಿ ಕಳೆದ ಕೆಲ ದಿನಗಳಿಂದಲೂ ಬರೀ ಜಗಳ, ಸಿಟ್ಟು, ಕೂಗಾಟಗಳೇ ತುಂಬಿದ್ದವು. ಇದೀಗ ಸ್ಪರ್ಧಿಗಳು ಪರಸ್ಪರ ಸಂತಸದಲ್ಲಿ ಒಂದಷ್ಟು ಹೊತ್ತು ಕಾಲೆ ಕಳೆದಿದ್ದಾರೆ.ಕಾವ್ಯ ಅವರ ಬಗ್ಗೆ ತಾಂಡವ್ ಅವರು ತಮಾಷೆಯ ಮಾತುಗಳನ್ನಾಡಿದ್ದು, ಇದನ್ನು ಕೇಳಿ ಕಾವ್ಯ ಮುಗುಳು ನಕ್ಕಿದ್ದಾರೆ.

Bigg Boss Kannada 13: ಮನೆ ಕೆಲಸ ವಿಚಾರದಲ್ಲಿ ನಡೀತಿದ್ಯಾ ತಾರತಮ್ಯ ? ಸಂಗೀತಾ ಭಟ್‌ ಗರಂ

ಮನೆ ಕೆಲಸ ವಿಚಾರದಲ್ಲಿ ನಡೀತಿದ್ಯಾ ತಾರತಮ್ಯ ? ಸಂಗೀತಾ ಭಟ್‌ ಗರಂ

Bigg Boss Kannada 13: ಬಿಗ್‌ ಬಾಸ್‌ ಮನೆಯಲ್ಲಿ ಪ್ರತಿಯೊಂದಕ್ಕೂ ಜಗಳ ಶುರು ಆಗಿದೆ. ಮೊದಲ ವಾರದಲ್ಲೇ ಮನೆಯ ಕೆಲಸ ವಿಚಾರವಾಗಿ ಜಗಳ ಆಗಿತ್ತು. ಈ ಬಗ್ಗೆ ವೀಕೆಂಡ್‌ನಲ್ಲಿ ಚರ್ಚೆಗಳೂ ಆಯ್ತು. ಇದೀಗ ಮತ್ತೆ ಮನೆ ಕೆಲಸ ವಿಚಾರದಲ್ಲಿ ತಾರತಮ್ಯ ಶುರುವಾದಂತಿದೆ. ಲಿಖಿತ್‌ ಹಾಗೂ ಸಂಗೀತಾ (Sangeetha) ನಡುವೆ ಮಾತಿನ ಚಕಮಕಿ ನಡೆದಿದೆ.

Bigg Boss Kannada 13: ದೊಡ್ಮನೆಯಲ್ಲಿ ನಾಲಿಗೆ ಹರಿಬಿಟ್ಟ ಕಿರಣ್ ಶಾಸ್ತ್ರಿ;  ಎದೆ ಮೇಲೆ ಕಾಲಿಕ್ತೀನಿ ಎಂದು ಗುಡುಗಿದ ತಾಂಡವ್!

ನಾಲಿಗೆ ಹರಿಬಿಟ್ಟ ಕಿರಣ್ ಶಾಸ್ತ್ರಿ; ಎದೆ ಮೇಲೆ ಕಾಲಿಕ್ತೀನಿ ಎಂದ ತಾಂಡವ್!

Bigg Boss Kannada 13: ನಾಮಿನೇಷನ್ ಕದನ ಸ್ಫೋಟಗೊಂಡಿದೆ. ಕಿರಣ್ ಶಾಸ್ತ್ರಿ ಅಖಾಡಕ್ಕಿಳಿದು ವೈಷ್ಣವಿ ಕೌಂಡಿನ್ಯ, ಕಾವ್ಯ ಮೇಲೆ ವಾಗ್ದಾಳಿ ನಡೆಸಿದಲ್ಲದೇ, ತಾಂಡವ್ ರಾಮ್ ಮೇಲೆ ಜಗಳಕ್ಕೆ ಬಿದ್ದಿದ್ದಾರೆ. ‘ಅಗ್ನಿಪರೀಕ್ಷೆ’ಯಿಂದ ಆಯ್ಕೆ ‘ಬಿಗ್ ಬಾಸ್’ ಮನೆಯೊಳಗೆ ಬಂದ ನಾಲ್ವರ ಪೈಕಿ ಕಿರಣ್ ಶಾಸ್ತ್ರಿ ಬರಬರುತ್ತಲೇ ಪ್ರಥಮ ಪ್ರಸಾದ್‌ ಜೊತೆ ಕಿರಿಕ್‌ ಮಾಡಿಕೊಂಡಿದ್ದರು. ಇದೀಗ ತಾಂಡವ್‌ ಸರದಿ.

Amruthadhaare Serial: ಜೈದೇವ್ ಸತ್ತಿಲ್ಲ;‌ ಮತ್ತೆ ಶುರು ಆಯ್ತು ಕೇಡಿ-ಟೀಚರಮ್ಮ ವಾರ್!

ಜೈದೇವ್ ಸತ್ತಿಲ್ಲ;‌ ಮತ್ತೆ ಶುರು ಆಯ್ತು ಕೇಡಿ-ಟೀಚರಮ್ಮ ವಾರ್!

Amruthadhaare Serial: ಕೊಲೆ ಮಾಡಿರುವ ಪಶ್ಚಾತ್ತಾಪದಲ್ಲಿದ್ದ ಭೂಮಿಕಾ ಪೊಲೀಸರಿಗೆ ಶರಣಾಗುವ ನಿಟ್ಟಿನಲ್ಲಿ ಇದ್ದಳು. ಜೈದೇವನ ಬಾಡಿಯನ್ನು ತೆಗೆದು ಪೊಲೀಸರಿಗೆ ತಿಳಿಸಲು ಹೋದರೆ ಅಲ್ಲಿ ಶವವೇ ಇರಲಿಲ್ಲ. ಅದನ್ನು ನೋಡಿ ಮಲ್ಲಿಗೆ ಎಲ್ಲಾ ವಿಷಯ ತಿಳಿಸಿದ್ದಾಳೆ ಭೂಮಿಕಾ. ಬಳಿಕ, ಅಲ್ಲಿಯ ಅಧಿಕಾರಿಗಳ ಮಾಹಿತಿ ಪಡೆದ ಮಲ್ಲಿ, ಸಿಸಿಟಿವಿ ಫುಟೇಜ್​ ಚೆಕ್​ ಮಾಡಿಸಿದ್ದಾಳೆ. ಜೈದೇವನ ಸಮಾಧಿಯಲ್ಲಿ ಕೈ ಹೊರಕ್ಕೆ ಬಂದಿದ್ದು, ಕಾಪಾಡುವಂತೆ ಆತ ಕೇಳಿಕೊಂಡಿದ್ದಾನೆ. ಅಲ್ಲಿಗೆ ಆತ ಜೀವಂತ ಇರುವುದು ತಿಳಿದಿದೆ.

Hanuman Ansh : 100 ಕೋಟಿ ರೂ‌  OTT ಒಪ್ಪಂದ ಬಗ್ಗೆ ʻಹನುಮಾನ್ ಅಂಶ್’ ತಂಡ ಹೇಳಿದ್ದೇನು?

100 ಕೋಟಿ ರೂ‌ OTT ಒಪ್ಪಂದ ಬಗ್ಗೆ ʻಹನುಮಾನ್ ಅಂಶ್’ ತಂಡ ಹೇಳಿದ್ದೇನು?

Hanuman Ansh : ಹನುಮಾನ್ ಅಂಶ್' ಚಿತ್ರದ ಬಾಕ್ಸ್ ಆಫೀಸ್ ಯಶಸ್ಸಿನ ಸುತ್ತ ಹರಿದಾಡುತ್ತಿರುವ ಸುದ್ದಿಗಳ ನಡುವೆ, ನಿರ್ಮಾಪಕಿ ರಾಗಿಣಿ ಸೋನಾ (Ragini sona) ಅವರು ಚಿತ್ರವು 100 ಕೋಟಿ ರೂ.ಗಳ ಬೃಹತ್ OTT ಒಪ್ಪಂದವನ್ನು ಪಡೆದುಕೊಂಡಿದೆ ಎಂಬ ವರದಿಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಅವರ ಪ್ರಕಾರ, ಅಂತಹ ಹೇಳಿಕೆಗಳು ಆಧಾರರಹಿತ ಊಹಾಪೋಹಗಳಾಗಿವೆ.

Toxic Actor: 'ಟಾಕ್ಸಿಕ್' ನೆಗೆಟಿವ್ ರಿವ್ಯೂಸ್‌ಗೆ ಯಶ್ ಸಹನಟ  ಖಡಕ್ ಉತ್ತರ

'ಟಾಕ್ಸಿಕ್' ನೆಗೆಟಿವ್ ರಿವ್ಯೂಸ್‌ಗೆ ಯಶ್ ಸಹನಟ ಖಡಕ್ ಉತ್ತರ

Toxic Actor: ಟಾಕ್ಸಿಕ್: ಎ ಫೇರಿ ಟೇಲ್ (Toxic) ಫಾರ್ ಗ್ರೋನ್-ಅಪ್ಸ್ ಆಗಸ್ಟ್ 26 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಆದರೆ ವಿಮರ್ಶಕರು ಮತ್ತು ಪ್ರೇಕ್ಷಕರು ಇದನ್ನು ಟೀಕಿಸಿದರು. ಯಶ್ ಪ್ರಮುಖ ಪಾತ್ರದಲ್ಲಿ ನಟಿಸಿದ ಈ ಚಿತ್ರವು ಬೃಹತ್ ಬಜೆಟ್‌ನಲ್ಲಿ ನಿರ್ಮಿಸಲ್ಪಟ್ಟಿದ್ದರೂ ಸಹ ವಿಶ್ವದಾದ್ಯಂತ ಸುಮಾರು ₹ 300 ಕೋಟಿ ಗಳಿಸಿದೆ. ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ ನಟ ಬೆನೆಡಿಕ್ಟ್ ಗ್ಯಾರೆಟ್, ನಕಾರಾತ್ಮಕ ವಿಮರ್ಶೆಗಳ ವಿರುದ್ಧ ಅದನ್ನು ಸಮರ್ಥಿಸಿಕೊಂಡರು.

Bigg Boss Kannada 13: ತಾಂಡವ್-ಗಗನ್‍‍ಗೆ ಕಿಚ್ಚನ ತರಾಟೆ! ಜಗದೀಶ್ ವಿಚಾರದಲ್ಲಿ ಗರಂ ಏಕೆ?

ತಾಂಡವ್-ಗಗನ್‍‍ಗೆ ಕಿಚ್ಚನ ತರಾಟೆ! ಜಗದೀಶ್ ವಿಚಾರದಲ್ಲಿ ಗರಂ ಏಕೆ?

Bigg Boss Kannada 13: ಮೊದಲ ವಾರಾಂತ್ಯದ ಕಿಚ್ಚನ ಪಂಚಾಯ್ತಿಯ (sueep Panchayti) ಸರದಿ ಬಂದಿದೆ. ಎಂದಿನಂತೆ ಕಿಚ್ಚ ಸುದೀಪ್ ವಾರಪೂರ್ತಿ ಮನೆಯಲ್ಲಿ ನಡೆದ ಪ್ರಮುಖ ಘಟನೆಗಳನ್ನು ಚರ್ಚಿಸಲಿದ್ದು, ಈಗಾಗಲೇ ಬಿಡುಗಡೆಯಾಗಿರುವ ಮೊದಲ ಪ್ರೋಮೋ ಭಾರಿ ಕುತೂಹಲ ಮೂಡಿಸಿದೆ. ಆಟದ ಮೂಲ ನಿಯಮಗಳನ್ನು ಮೂಲೆಗೆ ತಳ್ಳಿ, ತಮಗೆ ಬೇಕಾದಂತೆ ನಿರ್ಧಾರಗಳನ್ನು ತೆಗೆದುಕೊಂಡಿದ್ದನ್ನು ಸುದೀಪ್ ನೇರವಾಗಿ ಪ್ರಶ್ನಿಸಲಿದ್ದಾರೆ.

The Paradise: ರಿಲೀಸ್‌ ಆಗ್ತಿಲ್ಲ ನಾನಿ ಸಿನಿಮಾ ಟ್ರೇಲರ್‌! ಕಾರಣ ಇದು

ರಿಲೀಸ್‌ ಆಗ್ತಿಲ್ಲ ನಾನಿ ಸಿನಿಮಾ ಟ್ರೇಲರ್‌! ಕಾರಣ ಇದು

The Paradise: ಶ್ರೀಕಾಂತ್ ಒಡೆಲಾ ಮತ್ತು ನಾನಿ ಅವರ ಎರಡನೇ ಚಿತ್ರ 'ದಿ ಪ್ಯಾರಡೈಸ್' ( The Paradise) ಘೋಷಣೆಯಾದಾಗ, ಚಲನಚಿತ್ರ ನಿರ್ಮಾಪಕ ಮತ್ತು ನಟ ಇನ್ನೇನು ಕಾಯ್ದಿರಿಸಿದ್ದಾರೆ ಎಂದು ನೋಡಲು ಅಭಿಮಾನಿಗಳು ಉತ್ಸುಕರಾಗಿದ್ದರು. ಬದಲಾಗಿ, ಚಿತ್ರದ ಬಿಡುಗಡೆಯನ್ನು ಹಲವು ಬಾರಿ ವಿಳಂಬ ಮಾಡಲಾಯಿತು. ಶುಕ್ರವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತಂಡವು ಈಗ 'ದಿ ಪ್ಯಾರಡೈಸ್' ( The Paradise Trailer) ಚಿತ್ರದ ಟ್ರೇಲರ್ ಇರುವುದಿಲ್ಲ ಎಂದು ಘೋಷಿಸಿದೆ.

Spirit Movie: ವಿಮರ್ಶಕರಿಗೆ ಸಂದೀಪ್ ರೆಡ್ಡಿ ವಂಗಾ  ಸಹೋದರ ಖಡಕ್ ವಾರ್ನಿಂಗ್

ವಿಮರ್ಶಕರಿಗೆ ಸಂದೀಪ್ ರೆಡ್ಡಿ ವಂಗಾ ಸಹೋದರ ಖಡಕ್ ವಾರ್ನಿಂಗ್

Spirit Movie: ಸಂದೀಪ್ ರೆಡ್ಡಿ ವಂಗಾ ಅವರ ಸಹೋದರ, ಭದ್ರಕಳಿ ಪಿಕ್ಚರ್ಸ್‌ನ ಪ್ರಣಯ್ ರೆಡ್ಡಿ ವಂಗಾ ಇತ್ತೀಚೆಗೆ ರೋಮಂಚಕಂ ಎಂಬ ಚಿತ್ರವನ್ನು ನಿರ್ಮಿಸಿದರು. ಈ ಚಿತ್ರ ಸೆಪ್ಟೆಂಬರ್ 3 ರಂದು ಬಿಡುಗಡೆಯಾಯಿತು ಮತ್ತು ನೀರಸ ವಿಮರ್ಶೆಗಳನ್ನು ಪಡೆಯಿತು. ತಮ್ಮ 'ರೋಮಾಂಚಕಂ' ಚಿತ್ರದ ಸೋಲಿಗೆ ನೆಗೆಟಿವ್ ರಿವ್ಯೂಗಳೇ ಕಾರಣ ಎಂದಿರುವ ಅವರು, ಪ್ರಭಾಸ್ ನಟನೆಯ 'ಸ್ಪಿರಿಟ್' ಸಿನಿಮಾವನ್ನು ಮುಗಿಸಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.

Shrimad Bhagavatam Part 1: ಸಾಗರ್ ಪಿಕ್ಚರ್ಸ್‌ನಿಂದ  ಬರಲಿದೆ  ‘ಶ್ರೀಮದ್ಭಾಗವತಂ’; ಪೋಸ್ಟರ್‌ ಔಟ್‌

ಸಾಗರ್ ಪಿಕ್ಚರ್ಸ್‌ನಿಂದ ಬರಲಿದೆ ‘ಶ್ರೀಮದ್ಭಾಗವತಂ’; ಪೋಸ್ಟರ್‌ ಔಟ್‌

Shrimad Bhagavatam Part 1: ಶ್ರೀಮದ್ ಭಾಗವತ ಭಾಗ I: ವಿಷ್ಣುರತವನ್ನು ತರುತ್ತಿದೆ. ಪೌರಾಣಿಕ ಕಥಾಹಂದರದ ಸಿನಿಮಾಗಳ ಬಗ್ಗೆ ಪ್ರೇಕ್ಷಕರ ಆಸಕ್ತಿ ಹೆಚ್ಚುತ್ತಿದೆ. ಈ ಸಂದರ್ಭದಲ್ಲಿ ‘ಸಾಗರ್ ಪಿಕ್ಚರ್ಸ್ ಎಂಟರ್‌ಟೈನ್‌ಮೆಂಟ್’ ಸಂಸ್ಥೆಯ ಕಡೆಯಿಂದ 7 ಭಾಗಗಳ ಬೃಹತ್ ಸಿನಿಮಾ ಘೋಷಣೆ ಆಗಿದೆ. ತಯಾರಕರು ಮುಂಬರುವ ಚಿತ್ರದ ಟೀಸರ್ ಪೋಸ್ಟರ್ ಅನ್ನು ಅಧಿಕೃತವಾಗಿ ಅನಾವರಣಗೊಳಿಸಿದ್ದು, ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿದೆ. ಶ್ರೀ ಕೃಷ್ಣನ ಆಶೀರ್ವಾದ ಹಸ್ತವನ್ನು ಚಿತ್ರಿಸುವ ಮತ್ತು ಧಾರ್ಮಿಕ, ಸ್ಮರಣೀಯ ಮತ್ತು ಸಂಪ್ರದಾಯದಲ್ಲಿ ಮುಳುಗಿರುವ ಈ ಪೋಸ್ಟರ್ ಮುಂದಿನ ಏಳು ಭಾಗಗಳಿಗೆ ನಾಂದಿ ಹಾಡುತ್ತದೆ.

Bigg Boss Kannada 13: ಕಿರಣ್‌ , ಮಂಜ ಮಾಡಿದ್ರು ಎಡವಟ್ಟು; ಅಪಾಯದಲ್ಲಿ ಸ್ಪರ್ಧಿಗಳು

ಕಿರಣ್‌ , ಮಂಜ ಮಾಡಿದ್ರು ಎಡವಟ್ಟು; ಅಪಾಯದಲ್ಲಿ ಸ್ಪರ್ಧಿಗಳು

Bigg Boss Kannada 13:ಬಿಗ್ ಬಾಸ್ ಕನ್ನಡ ಸೀಸನ್ 13’ (Bigg Boss Kannada 13) ಶುರುವಾಗಿ ಇನ್ನೇನು ಮೊದಲ ವಾರ ಮುಗಿಯೋಕೆ ಬಂತು. ಆದ್ರೆ ಶುರುವಲ್ಲೇ ಕಿಚ್ಚನ (Sudeep) ಮನೆ ರಣರಂಗವಾಗಿದೆ! ಒಂದ್ಕಡೆ ಸೆಲೆಬ್ರಿಟಿಗಳು, ಇನ್ನೊಂದ್ಕಡೆ ಕಾಮನ್‌ ಮ್ಯಾನ್ ಸ್ಪರ್ಧಿಗಳು. ಕಾಮನರ್ ಸ್ಪರ್ಧಿಗಳಾದ ಮಂಜ ಮತ್ತು ಕಿರಣ್ ಶಾಸ್ತ್ರಿ (Kiran Shastri) ಟಾಸ್ಕ್​ನಲ್ಲಿ ಹಿಂದೆ ಬಿದ್ದಿದ್ದಾರೆ. ಆದರೆ ಬರೀ ಮಾತಿನಲ್ಲಿ ಬಡಾಯಿ ಕೊಚ್ಚಿಕೊಂಡು ಇನ್ನುಳಿದ ಸ್ಪರ್ಧಿಗಳನ್ನು ಕೂಡ ಅಪಾಯಕ್ಕೆ ತಳ್ಳಿದ್ದಾರೆ.

Badshah Isha Rikhi: ಇಶಾ ರಿಖಿಗೆ ಮೋಸ ಮಾಡಿದ್ರಾ ಬಾದ್‌ಶಾ? ಬಿಗ್‌ ಬಾಸ್‌ ಮನೆಯಲ್ಲಿ ಹೇಳಿದ್ದೇನು?

ಇಶಾ ರಿಖಿಗೆ ಮೋಸ ಮಾಡಿದ್ರಾ ಬಾದ್‌ಶಾ? ಬಿಗ್‌ ಬಾಸ್‌ ಮನೆಯಲ್ಲಿ ಹೇಳಿದ್ದೇನು?

Badshah Isha Rikhi: ಗಾಯಕ ಬಾದ್‌ಶಾ ಮತ್ತು ಇಶಾ ರಿಖಿಯ ವಿವಾಹದ ಫೋಟೋಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಾಗ ಅವರ ವೈಯಕ್ತಿಕ ಜೀವನವು ಭಾರಿ ಸುದ್ದಿಯಾಯ್ತು. ಕೆಲವೇ ದಿನಗಳಲ್ಲಿ ಜೋಡಿ ಡಿವೋರ್ಸ್‌ ಘೋಷಿಸಿತು. ಈಗ, ಇಶಾ ಸಲ್ಮಾನ್ ಖಾನ್ ಅವರ "ಬಿಗ್ ಬಾಸ್ 20" ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿದ್ದು, ಬಾದ್‌ಶಾ ತಮಗೆ ದ್ರೋಹ ಎಸಗಿದ್ದಾರೆ ಎಂಬುದರ ಪರೋಕ್ಷ ಸುಳಿವು ನೀಡುವಂತೆ ಮಾತನಾಡಿದ್ದಾರೆ.

KBC 18: IIT ವೃತ್ತಿಯ ಜತೆ ಪತ್ನಿಯನ್ನೂ ನೀಡಿದೆ; ಅಮಿತಾಬ್ ಮುಂದೆ ಕೆಬಿಸಿ  ಸ್ಪರ್ಧಿ ಹೇಳಿದ್ದೇನು?

IIT ವೃತ್ತಿಯ ಜತೆ ಪತ್ನಿಯನ್ನೂ ನೀಡಿದೆ; ಕೆಬಿಸಿ ಸ್ಪರ್ಧಿ ಹೇಳಿದ್ದೇನು?

KBC 18: ಅಮಿತಾಬ್ ಬಚ್ಚನ್ ಪ್ರಸ್ತುತ ಕೌನ್ ಬನೇಗಾ ಕರೋಡ್ ಪತಿ 18 ಅನ್ನು ಆಯೋಜಿಸುವಲ್ಲಿ ನಿರತರಾಗಿದ್ದಾರೆ . ಸವಾಲಿನ ಪ್ರಶ್ನೆಗಳೊಂದಿಗೆ ಸ್ಪರ್ಧಿಗಳನ್ನು ಕಠಿಣ ಸ್ಥಾನದಲ್ಲಿ ಇಡುವುದರ ಜೊತೆಗೆ, ಬಿಗ್ ಬಿ ಅವರ ಕಥೆಗಳನ್ನು ಕೇಳುತ್ತಾರೆ ಮತ್ತು ಕೆಲವೊಮ್ಮೆ ಅವರೊಂದಿಗೆ ತಮಾಷೆಯ ಮಾತುಗಳಲ್ಲಿ ತೊಡಗುತ್ತಾರೆ. ಇತ್ತೀಚಿನ ಸಂಚಿಕೆ ಒಂದರಲ್ಲಿ, ವೃತ್ತಿಜೀವನದ ಜೊತೆಗೆ, ಐಐಟಿ (IIT) ಹೆಂಡತಿಯನ್ನು ಸಹ ನೀಡಿದೆ ಎಂದು ಬಹಿರಂಗಪಡಿಸಿದ ಸ್ಪರ್ಧಿಯ ಕುರಿತು ಅಮಿತಾಭ್‌ ಮಾತನಾಡಿದ್ದಾರೆ .

Samantha: ಮಗು ಬೇಡ ಅಂದುಕೊಂಡಿದ್ದ ಸಮಂತಾ! ಪ್ರೆಗ್ನೆನ್ಸಿ ಬಗ್ಗೆ ನಟಿ ಹೇಳಿದ್ದೇನು?

ಮಗು ಬೇಡ ಅಂದುಕೊಂಡಿದ್ದ ಸಮಂತಾ! ಪ್ರೆಗ್ನೆನ್ಸಿ ಬಗ್ಗೆ ನಟಿ ಹೇಳಿದ್ದೇನು?

Samantha: ಕಳೆದ ವರ್ಷ ಡಿಸೆಂಬರ್‌ನಲ್ಲಿ ಈ ವಿಷಯವನ್ನು ಅಧಿಕೃತಗೊಳಿಸಿದ ದಂಪತಿ ಈ ವರ್ಷದ ಜೂನ್‌ನಲ್ಲಿ ತಾವು ಪೋಷಕರಾಗಲಿದ್ದೇವೆ ಎಂದು ಘೋಷಿಸಿದರು. ಮಗು ಇಲ್ಲದಿದ್ದರೂ ಪರವಾಗಿಲ್ಲ ಎಂದುಕೊಂಡಿದ್ದ ತಮಗೆ ಈ ಗರ್ಭಧಾರಣೆ (Pregnancy) ದೊಡ್ಡ ಸರ್ಪ್ರೈಸ್ ನೀಡಿದೆ ಎಂದು ಹೇಳಿಕೊಂಡಿದ್ದಾರೆ.

DC producer gifts BMW: ʻDC' ಸಿನಿಮಾದ ಭರ್ಜರಿ ಯಶಸ್ಸು; ಬಿಎಂಡಬ್ಲ್ಯು ಕಾರು ಉಡುಗೊರೆ ಕೊಟ್ಟ ಕಲಾನಿಧಿ ಮಾರನ್

ʻDC' ಸಿನಿಮಾದ ಭರ್ಜರಿ ಯಶಸ್ಸು; ಬಿಎಂಡಬ್ಲ್ಯು ಕಾರು ಉಡುಗೊರೆ

DC producer gifts BMW: ಚಿತ್ರದ ಯಶಸ್ವಿ ಪ್ರದರ್ಶನದ ನಂತರ ಚಿತ್ರದ ಪ್ರಮುಖ ತಂಡಕ್ಕೆ ಹೊಚ್ಚ ಹೊಸ ಬಿಎಂಡಬ್ಲ್ಯು ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ ನಿರ್ದೇಶಕ ಅರುಣ್ ಮಾಥೇಶ್ವರನ್, ನಟ ಲೋಕೇಶ್ ಕನಕರಾಜ್ ಮತ್ತು ಸಂಗೀತ ಸಂಯೋಜಕ ಅನಿರುದ್ಧ್ ರವಿಚಂದರ್ (Anirudh Ravichandar) ಅವರಿಗೆ ಬಿಎಂಡಬ್ಲ್ಯು ಕಾರುಗಳನ್ನು ನೀಡಲಾಯಿತು.

Bigg Boss Kannada 13: ಗಗನ್ ಪಕ್ಷಪಾತ ಆಟ; ಇನ್ನೊಂದು ಕಡೆ ಆಸಿಯಾಗೆ ಸಿಗದ ಚಾನ್ಸ್‌!

ಗಗನ್ ಪಕ್ಷಪಾತ ಆಟ; ಇನ್ನೊಂದು ಕಡೆ ಆಸಿಯಾಗೆ ಸಿಗದ ಚಾನ್ಸ್‌!

Bigg Boss Kannada 13:ಬಿಗ್‌ ಬಾಸ್‌ ಮನೆಯಲ್ಲಿ ಗಗನ್‌ ಚಿನ್ನಪ್ಪ (Gagan Chinnappa) ಸಖತ್‌ ಸೌಂಡ್‌ ಮಾಡುತ್ತಿದ್ದಾರೆ. ಬಿಗ್ ಬಾಸ್ ಸೀಸನ್‌-13’ ಕಾಯಕ್ರಮ ಆರಂಭವಾಗಿ 4 ದಿನಗಳು ಕಳೆದಿವೆ. ಫ್ಲೈಟ್‌ನಲ್ಲಿ (Flight) ಪ್ರಯಾಣಿಸುತ್ತಿರುವ 8 ಜನರು ನಾಮಿನೇಟ್ ಆಗಿದ್ದಾರೆ. ಹೀಗಾಗಿ ಪ್ರತಿ ಟಾಸ್ಕ್‌ ಗೆಲ್ಲುವ ಅನಿರ್ವಾತೆ ಇದೆ. ಇದೀಗ ಟಾಸ್ಕ್‌ ವೇಳೆ ಬಿಗ್ ಬಾಸ್ ಮನೆಯಲ್ಲಿ ವಿಐಪಿ (VIP) ಪಟ್ಟದಲ್ಲಿರುವ ಗಗನ್ ಚಿನ್ನಪ್ಪ (Gagan Chinnappa)ತಾಂಡವ್ ರಾಮ್ ತಂಡಕ್ಕೆ (Thadav Ram) ಬೆಂಬಲ ನೀಡುವ ಮೂಲಕ ಪಕ್ಷಪಾತ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

Bigg Boss Kannada 13: ಅಧಿಕ ಪ್ರಸಂಗ ಬೇಡ, ಬಾಯಿ ಬಡ್ಕೋಬೇಡ ನನ್ನತ್ರ ನಡೆಯಲ್ಲ; ಕಾವ್ಯಾಗೆ ಗಗನ್‌ ವಾರ್ನಿಂಗ್‌

ಬಾಯಿ ಬಡ್ಕೋಬೇಡ ನನ್ನತ್ರ ನಡೆಯಲ್ಲ; ಕಾವ್ಯಾಗೆ ಗಗನ್‌ ವಾರ್ನಿಂಗ್‌

Bigg Boss Kannada 13: ಬಿಗ್‌ ಬಾಸ್‌ ಮನೆಯಲ್ಲಿ ಗಗನ್‌ ಚಿನ್ನಪ್ಪ ಹಾವಳಿ ಜೋರಾಗಿದೆ. ಗಗನ್ ಚಿನ್ನಪ್ಪ ತಾಂಡವ್ ರಾಮ್ ತಂಡಕ್ಕೆ ಬೆಂಬಲ ನೀಡುವ ಮೂಲಕ ಪಕ್ಷಪಾತ ಮಾಡುತ್ತಿದ್ದಾರೆ ಎಂಬ ಆರೋಪ ಬೆನ್ನಲ್ಲೇ ಇದೀಗ ಹೊಸ ಪ್ರೋಮೋ ಸಖತ್‌ ಸದ್ದು ಮಾಡುತ್ತಿದೆ. ಕಾವ್ಯ ಗೌಡಗೆ (Kavya Gowda) ಕಸದ ವಿಚಾರವಾಗಿ ಬೇಕಾಬಿಟ್ಟಿ ಮಾತನಾಡಿದ್ದಾರೆ.

Loading...