Rakul Preet Singh: ಶೂರ್ಪನಖಿ ಪಾತ್ರ ಆಯ್ಕೆ ಹಿಂದಿನ ಕಾರಣ ಏನು? ರಕುಲ್ ಹೇಳಿದ್ದೇನು?
Rakul Preet Singh: ಚಿತ್ರದಲ್ಲಿ ಅವರ ಲುಕ್ ಮತ್ತು ಅವರ ಅಭಿನಯಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತು. ಶೂರ್ಪನಖಿಯ ಕಥೆ ಕೇವಲ ಅವಳ ರೂಪಕ್ಕೆ ಸೀಮಿತವಾಗಿಲ್ಲ. ಅದರಲ್ಲಿ ಭಾವನೆ, ತಿರಸ್ಕಾರ, ಅವಮಾನ ಎಲ್ಲವೂ ಸೇರಿದೆ ಹಲವು ಕಥೆಗಳಲ್ಲಿ ಆಕೆಯನ್ನು ಭಾರತೀಯ ಪುರಾಣದ ಅತ್ಯಂತ ಸುಂದರ ಮಹಿಳೆಯರಲ್ಲಿ ಒಬ್ಬಳು ಎಂದು ಪರಿಗಣಿಸಲಾಗಿತ್ತು. ರಾಮಾಯಣ ಭಾಗ ಒಂದು ದೀಪಾವಳಿಯಂದು ನವೆಂಬರ್ 8 ರಂದು ಜಾಗತಿಕವಾಗಿ ಬಿಡುಗಡೆಯಾಗಲಿದೆ.
ರಕುಲ್ ಪ್ರೀತ್ ಸಿಂಗ್ -
ಕೆಲವು ದಿನಗಳ ಹಿಂದೆ ರಾಮಾಯಣ ಟ್ರೇಲರ್ (Ramayana Trailer) ಬಿಡುಗಡೆಯಾಗಿದ್ದು, ಅದು ಸಾಮಾಜಿಕ ಮಾಧ್ಯಮದಲ್ಲಿ ತಕ್ಷಣವೇ ವೈರಲ್ ಆಗಿತ್ತು. ರಾಮನಾಗಿ ರಣಬೀರ್ ಕಪೂರ್ (Ranbir Kapoor) ನಿಂದ ಸೀತೆಯಾಗಿ ಸಾಯಿ ಪಲ್ಲವಿಯವರೆಗೆ ಪಾತ್ರಗಳ ಪರಿಚಯವೂ ಆಯಿತು. ಆದರೆ ಟ್ರೇಲರ್ನಿಂದ ಎಲ್ಲರನ್ನೂ ಅಚ್ಚರಿಗೊಳಿಸಿದ ಒಂದು ಹೈಲೈಟ್ ಇದ್ದರೆ, ಅದು ಶೂರ್ಪನಖಿಯಾಗಿ ರಕುಲ್ ಪ್ರೀತ್ ಸಿಂಗ್ ಅವರ ಝಲಕ್. ಚಿತ್ರದಲ್ಲಿ ಅವರ ಲುಕ್ ಮತ್ತು ಅವರ ಅಭಿನಯಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತು. ಶೂರ್ಪನಖಿಯ (Surpanakha) ಕಥೆ ಕೇವಲ ಅವಳ ರೂಪಕ್ಕೆ ಸೀಮಿತವಾಗಿಲ್ಲ. ಅದರಲ್ಲಿ ಭಾವನೆ, ತಿರಸ್ಕಾರ, ಅವಮಾನ ಎಲ್ಲವೂ ಸೇರಿದೆ ಹಲವು ಕಥೆಗಳಲ್ಲಿ ಆಕೆಯನ್ನು ಭಾರತೀಯ ಪುರಾಣದ ಅತ್ಯಂತ ಸುಂದರ ಮಹಿಳೆಯರಲ್ಲಿ ಒಬ್ಬಳು ಎಂದು ಪರಿಗಣಿಸಲಾಗಿತ್ತು.
ನಟಿ ಈ ಪಾತ್ರ ಒಪ್ಪಿಕೊಂಡಿದ್ದೇಕೆ?
ಈಗ, ಅಭಿಮಾನಿಯೊಬ್ಬರು ಈ ನಟಿಗೆ ಮುಕ್ತ ಪತ್ರ ಬರೆದಿದ್ದಾರೆ. ಆ ಪಾತ್ರದಲ್ಲಿ ನಟಿಸಲು ಆಸಕ್ತಿ ತೋರಿದ್ದೇಕೆ ಎಂದು ಪ್ರಶ್ನೆ ಇಟ್ಟಿದ್ದಾರೆ. ರಾವಣನ ಸಹೋದರಿ ಶೂರ್ಪನಖಿ ಕಥೆಯ ಮುಖ್ಯ ಸಂಘರ್ಷಕ್ಕೆ ಕಾರಣವಾಗುತ್ತಾಳೆ. ಅವಳು ಭಗವಾನ್ ರಾಮನನ್ನು ಪ್ರೀತಿಸುತ್ತಾಳೆ ಆದರೆ ಸಹೋದರ ಲಕ್ಷ್ಮಣನಿಂದ ತಿರಸ್ಕರಿಸಲ್ಪಡುತ್ತಾಳೆ. ನಂತರ ಸೀತೆಯ ಮೇಲೆ ದಾಳಿ ಮಾಡಲು ಪ್ರಯತ್ನಿಸುತ್ತಾಳೆ ಮತ್ತು ಅಂತಿಮವಾಗಿ ಮೂಗು ಕತ್ತರಿಸುವಂತಾಗುತ್ತೆ ಇದು ಕಥೆ.
ಇದನ್ನೂ ಓದಿ: Suriya: ಜ್ಯೋತಿಕಾ-ಸೂರ್ಯ ಜೋಡಿಯ ಪ್ರೀತಿಯ ರಹಸ್ಯ ಇದು!
ಈ ಬಗ್ಗೆ ನಟಿ ಪ್ರತಿಕ್ರಿಯೆ ನೀಡಿದ್ದು ಹೀಗೆ. "ಈ ಸುಂದರವಾದ ಪತ್ರಕ್ಕೆ ಧನ್ಯವಾದಗಳು. ಶೂರ್ಪನಖಿಗೆ ನಾನು ಹೌದು ಎಂದು ಹೇಳಲು ಕಾರಣವಾದದ್ದು ನೀವು ಹೇಳಿದಂತೆಯೇ - ಅವಳ ಸಂಕೀರ್ಣತೆ. ಇತಿಹಾಸ. ಆಕೆಯ ಕಥೆಯಲ್ಲಿ ಇನ್ನೂ ಹೆಚ್ಚಿನ ಸಂಗತಿಗಳಿವೆ. ಒಬ್ಬ ನಟಿಯಾಗಿ, ಗ್ರಹಿಕೆಗೆ ಸವಾಲು ಹಾಕುವ ಪಾತ್ರಗಳು ಅತ್ಯಂತ ರೋಮಾಂಚಕಾರಿ. ರಾಮಾಯಣ ಬಂದಾಗ ಪ್ರೇಕ್ಷಕರು ಆಕೆಯನ್ನು ಮುಕ್ತ ಮನಸ್ಸಿನಿಂದ ಕಂಡುಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ರಾಮಾಯಣವು ವಿಶ್ವದ ಅತ್ಯಂತ ಹಳೆಯ ಸಾಹಿತ್ಯ ಕೃತಿಗಳಲ್ಲಿ ಒಂದಾದ ವಾಲ್ಮೀಕಿಯ ಮಹಾಕಾವ್ಯದ ಇತ್ತೀಚಿನ ರೂಪಾಂತರವಾಗಿದೆ. ಇದು ವಿಷ್ಣುವಿನ ಅವತಾರವಾದ ಭಗವಾನ್ ರಾಮನ (ರಣಬೀರ್ ಕಪೂರ್ ನಿರ್ವಹಿಸಿದ) ಕಥೆಯನ್ನು ಮತ್ತು ಅಸುರ ರಾಜ ರಾವಣ (ಯಶ್ ನಿರ್ವಹಿಸಿದ) ತನ್ನ ಪತ್ನಿ ಸೀತೆಯನ್ನು (ಸಾಯಿ ಪಲ್ಲವಿ ನಿರ್ವಹಿಸಿದ) ಅಪಹರಿಸಿದ ನಂತರ ಅವನ ವಿರುದ್ಧದ ಯುದ್ಧವನ್ನು ಹೇಳುತ್ತದೆ.
Thank you for this beautiful letter. ❤️
— Rakul Singh (@Rakulpreet) August 3, 2026
What made me say yes to Surpanakha was exactly what you mentioned - her complexity. History often remembers her for one moment, but there is so much more to her story. As an actor, roles that challenge perception are the most exciting. I… https://t.co/1wFWmfwNNd
ರಾಮಾಯಣ ಭಾಗ ಒಂದು ದೀಪಾವಳಿಯಂದು ನವೆಂಬರ್ 8 ರಂದು ಜಾಗತಿಕವಾಗಿ ಬಿಡುಗಡೆಯಾಗಲಿದೆ. ಎರಡನೇ ಭಾಗವು 2027 ರಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರಗಳಲ್ಲಿ ಸನ್ನಿ ಡಿಯೋಲ್ ಹನುಮಾನ್ ಪಾತ್ರದಲ್ಲಿ ಮತ್ತು ರವಿ ದುಬೆ ಲಕ್ಷ್ಮಣ್ ಪಾತ್ರದಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: Salman Khan: 'ನಾನು 16 ಕೆಜಿ ತೂಕ ಇಳಿಸಿಕೊಂಡಿದ್ದೇನೆ': ಸಲ್ಮಾನ್ ಖಾನ್ ವಿಡಿಯೋ ವೈರಲ್
ಈ ಚಿತ್ರವು ₹ 4,000 ಕೋಟಿ ಬಜೆಟ್ನಲ್ಲಿದ್ದು, ಎಆರ್ ರೆಹಮಾನ್ ಮತ್ತು ಹ್ಯಾನ್ಸ್ ಜಿಮ್ಮರ್ ಸಂಗೀತ ಸಂಯೋಜಿಸಿದ್ದಾರೆ ಎಂದು ವರದಿಯಾಗಿದೆ .