ಇಚ್ಛಾಶಕ್ತಿ ಕೊರತೆ: ಕಾರಂಜಾ ಸಂತ್ರಸ್ಥರಿಗಿನ್ನೂ ಸಿಕ್ಕಿಲ್ಲ ನ್ಯಾಯ
ಕಾರಂಜಾ ಸಂತ್ರಸ್ತರ ಹಿತರಕ್ಷಣಾ ಸಮಿತಿಯ ಸದಸ್ಯರ ಸಾಮೂಹಿಕ ಆತ್ಮಹತ್ಯೆಯತ್ನಕ್ಕೂ ಸರಕಾರ ಮಣಿದಿಲ್ಲ. ಇಲ್ಲಿನ ಸಂತ್ರಸ್ತರ ಪಾಲಿಗೆ ಪರಿಹಾರ ಗಗನಕುಸುಮವಾಗಿದೆ. ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆಯಿಂದ ಇದುವರೆಗೂ ಸೂಕ್ತ ಪರಿಹಾರ ಬಂದಿಲ್ಲ. ಈ ವಿಚಾರದಲ್ಲಿ ಕಾಲಕ್ಕೆ ತಕ್ಕಂತೆ ರಾಜಕಾರಣ ಮಾಡಲಾಗುತ್ತಿದೆ ಎಂಬುದು ರೈತರ ಅಳಲು. ಯಾವುದೇ ಷರತ್ತು ಇಲ್ಲದೆ 4 ದಶಕಗಳ ಹಿಂದೆ ಭೂಮಿ ನೀಡಿದ ರೈತರ ಬದುಕು ದುಸ್ತರ ಆಗಿದೆ.