ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಚಿಕ್ಕಬಳ್ಳಾಪುರ

Kannada Sahitya Parishad: ಕನ್ನಡ ಸಾಹಿತ್ಯ ಪರಿಷತ್ತಿನ 112ನೇ ಸಂಸ್ಥಾಪನಾ ದಿನಾಚರಣೆ

ಕನ್ನಡ ಸಾಹಿತ್ಯ ಪರಿಷತ್ತಿನ 112ನೇ ಸಂಸ್ಥಾಪನಾ ದಿನಾಚರಣೆ

ಕನ್ನಡ ಸಾಹಿತ್ಯ ಪರಿಷತ್ತು, ಚಿಕ್ಕಬಳ್ಳಾಪುರ ಜಿಲ್ಲೆ ಹಾಗೂ ತಾಲ್ಲೂಕು ಸಹಯೋಗದಲ್ಲಿ ಶಾಂತಿ ನಿಕೇತನ್ಸ್ ಪದವಿ ಪೂರ್ವ ಕಾಲೇಜು, ಚಿಕ್ಕಬಳ್ಳಾಪುರ ಇವರ ಸಂಯುಕ್ತಾ ಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ 112ನೇ ಸಂಸ್ಥಾಪನಾ ದಿನಾಚರಣೆಯನ್ನು ಮೇ 5 ರಂದು ಬೆಳಿಗ್ಗೆ 9.30 ಗಂಟೆಗೆ ನಗರದ ಶಾಂತಿನಿಕೇತನ್ಸ್ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದೆ.

ಶ್ರೀನಿವಾಸ ಸಾಗರದಲ್ಲಿ ಮುಳುಗಿ 12 ವರ್ಷದ ಪ್ರವಾಸಿ ಸಬಿಹಾ ಸಾವು

ಶ್ರೀನಿವಾಸ ಸಾಗರದಲ್ಲಿ ಮುಳುಗಿ 12 ವರ್ಷದ ಪ್ರವಾಸಿ ಸಬಿಹಾ ಸಾವು

ಗದಗ್ ಜಿಲ್ಲೆ ಶಿರಹಟ್ಟಿ ತಾಲೂಕಿನಿಂದ ಆಗಮಿಸಿದ್ದ ಹಜರತ್ ಅಲಿ ಮಾತನಾಡಿ ನಾವು 15 ಮಂದಿ ಚಿಂತಾಮಣಿ ತಾಲೂಕಿನ ಪುರಾಣಪ್ರಸಿದ್ಧ ಸ್ಥಳಗಳನ್ನು ನೋಡಿಕೊಂಡು ಹೋಗಲು ಪ್ರವಾಸಕ್ಕೆ ಬಂದಿದ್ದೆವು. ಇದೇ ವೇಳೆ ಹತ್ತಿರದಲ್ಲಿ ಯಾವುದಾದರೂ ಜಲಾಶಯಗಳಿಗೆ ಭೇಟಿ ನೀಡೋಣ ಎಂದು ಹೆಣ್ಣು ಮಕ್ಕಳು ಒತ್ತಾಯ ಮಾಡಿದರು.

Chikkaballapur News: ಕುಡಿಯುವ ನೀರಿನ ಪೂರೈಕೆ ಕೆಲಸವನ್ನು ಮೊದಲ ಆದ್ಯತೆಯಾಗಿ ಮಾಡಬೇಕು: ಜಿಲ್ಲಾಧಿಕಾರಿ ಜಿ.ಪ್ರಭು ತಾಕೀತು

ಮೊದಲ ಆದ್ಯತೆಯಾಗಿ ಕುಡಿಯುವ ನೀರಿನ ಪೂರೈಕೆ ಕೆಲಸ ಮಾಡಬೇಕು

ಜಿಲ್ಲೆಯ 32 ಗ್ರಾಮಗಳು, 12 ವಾರ್ಡ್ಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು ಮುಂದಿನ ದಿನಗಳಲ್ಲಿ 107 ಗ್ರಾಮಗಳಲ್ಲಿ 20 ವಾರ್ಡ್ಗಳಲ್ಲಿ ಸಮಸ್ಯೆ ಎದುರಾಗಬಹುದು. ಹೀಗಾಗಿ ಕುಡಿಯುವ ನೀರಿನ ಪೂರೈಕೆಯ ಕಾರ್ಯಗಳನ್ನು ಮೊದಲ ಆದ್ಯತೆಯಾಗಿ ಪರಿಗಣಿಸಿ ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸಲು ತಹಸೀಲ್ದಾರ್, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿಗಳು, ಸ್ಥಳೀಯಾ ಡಳಿತ ಸಂಸ್ಥೆಗಳ ಮುಖ್ಯಸ್ಥರಿಗೆ ಜಿಲ್ಲಾಧಿಕಾರಿಗಳು ಕ್ರಮ ವಹಿಸಲು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು.

MLA S.R.Vishwanath: ಡಾ.ಬಿ.ಆರ್.ಅಂಬೇಡ್ಕರ್ ಸೇರಿದಂತೆ ಮಹಾನ್ ಪುರುಷರು, ಸಂತರು ಒಂದು ಜಾತಿ, ಧರ್ಮಕ್ಕೆ ಸೀಮಿತವಾದವರಲ್ಲ: ಶಾಸಕ ಎಸ್.ಆರ್.ವಿಶ್ವನಾಥ್

ಸಂತರು ಒಂದು ಜಾತಿ, ಧರ್ಮಕ್ಕೆ ಸೀಮಿತವಾದವರಲ್ಲ: ಎಸ್.ಆರ್.ವಿಶ್ವನಾಥ್

ಅಂಬೇಡ್ಕರ್ ಭಾರತಕ್ಕೆ ನೀಡಿದ ಸಂವಿಧಾನದಿಂದ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರಕಾರದ ಸೌಲಭ್ಯ ಹಾಗೂ ಸಮಾನವಾದ ಹಕ್ಕು ಸಿಗುತ್ತಿದೆ. ಆದರೆ, ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಕಾಂಗ್ರೆಸ್‌ ನವರು ಮೊದಲಿನಿಂದಲೂ ಅಪಮಾನಿಸಿಕೊಂಡೇ ಬಂದರು. ಅವರ ನಿಧನದ ನಂತರವೂ ಅವರಿಗೆ ದಿಲ್ಲಿಯಲ್ಲಿ ಸ್ಮಾರಕ ನಿರ್ಮಾಣಕ್ಕೆ ಜಾಗ ಕೊಡಲಿಲ್ಲ

Gauribidabur News: ಅಣ್ಣೆ ಫಾತಿಮಾ ಶಿಕ್ಷಕರ ತರಬೇತಿ ಸಂಸ್ಥೆಯ ಗುರು ಶಿಷ್ಯರ ಸಮಾಗಮ

ಅಣ್ಣೆ ಫಾತಿಮಾ ಶಿಕ್ಷಕರ ತರಬೇತಿ ಸಂಸ್ಥೆಯ ಗುರು ಶಿಷ್ಯರ ಸಮಾಗಮ

ಅಣ್ಣೆ ಫಾತಿಮಾ ಶಿಕ್ಷಕರ ತರಬೇತಿ ಸಂಸ್ಥೆ ಮೂರು ದಶಕಗಳ  ಕಾಲ ಉತ್ಕೃಷ್ಟ ಶಿಕ್ಷಣ ನೀಡಿ, ಗುಣಮಟ್ಟ ದ ಶಿಕ್ಷಕರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದೆ. ಸಂಸ್ಥೆ ನಮಗೆ ಅನ್ನ, ನಿಮಗೆ ಅಕ್ಷರ ನೀಡಿದೆ. ಆದ್ದರಿಂದ ನಾವು ಸಂಸ್ಥೆಗೆ ಕೃತಜ್ಞರಾಗಿ ಸಮಾಜದಲ್ಲಿ ಉತ್ತಮ ಕೆಲಸಗಳನ್ನು ಮಾಡಬೇಕಾಗಿದೆ. ಗುರು ಶಿಷ್ಯರ ಪರಂಪರೆ ಹೀಗೆ ಮುಂದುವರೆಯಬೇಕು. ತಾವುಗಳು ಸಂಸ್ಥೆಯಿಂದ ಪಡೆದಿರುವ ಮೌಲ್ಯಯುತ ಶಿಕ್ಷಣ ಮತ್ತು  ಸಂಸ್ಕಾರವನ್ನು ಸಮಾಜಕ್ಕೆ ನೀಡಬೇಕು.

Protest for Drinking water: ಬಾಯಾರಿದ ಚಿಂತಾಮಣಿ 22ನೇ ವಾರ್ಡ್: ರಸ್ತೆಗಿಳಿದು ಆಡಳಿತಕ್ಕೆ ಬಿಸಿ ಮುಟ್ಟಿಸಿದ ಜನತೆ

ನೀರಿಗಾಗಿ ರಸ್ತೆ ತಡೆದು ವಾರ್ಡ್ ನಂ. 22ರ ನಿವಾಸಿಗಳ ಬೃಹತ್ ಪ್ರತಿಭಟನೆ

ವಾರ್ಡ್ನ ಪುರುಷರು,ಮಹಿಳೆಯರು ಮತ್ತು ಮಕ್ಕಳು ರಸ್ತೆಯಲ್ಲೇ ಕುಳಿತು ಸಂಚಾರಕ್ಕೆ ಅಡ್ಡಿ ಪಡಿಸಿದರು. ಸಾರ್ವಜನಿಕ ಸಾರಿಗೆ ಬಸ್‌ಗಳನ್ನು ತಡೆದು ನಿಲ್ಲಿಸಿದ ಪ್ರತಿಭಟನಾಕಾರರು, ಅಧಿಕಾರಿ ಗಳ ವಿರುದ್ಧ ಘೋಷಣೆಗಳನ್ನು ಕೂಗಿದರು."ನಮಗೆ ಕುಡಿಯುವ ನೀರು ಕೊಡಿ ಇಲ್ಲವೇ ಅಧಿಕಾರ ಬಿಟ್ಟು ತೊಲಗಿ" ಎಂದು ಆಕ್ರೋಶ ವ್ಯಕ್ತಪಡಿಸಿದರು.

Chinthamani News: ಕಾಂಗ್ರೆಸ್ ಅಭ್ಯರ್ಥಿಗಳ ಭರ್ಜರಿ ಗೆಲುವು: ಚಿಂತಾಮಣಿಯಲ್ಲಿ ಕೈ ಕಾರ್ಯಕರ್ತರಿಂದ ಸಂಭ್ರಮ

ಚಿಂತಾಮಣಿಯಲ್ಲಿ ಕೈ ಕಾರ್ಯಕರ್ತರಿಂದ ಸಂಭ್ರಮ

ರಾಜ್ಯದಲ್ಲಿ ನಡೆದ ಉಪ ಚುನಾವಣಾ ಫಲಿತಾಂಶದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ದಾವಣಗೆರೆ ಮತ್ತು ಬಾಗಲಕೋಟೆ ಕ್ಷೇತ್ರಗಳಲ್ಲಿ ಭರ್ಜರಿ ಜಯ ದಾಖಲಿಸಿದ್ದಾರೆ.ಈ ಗೆಲುವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಚಿಂತಾಮಣಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನಗರದ ತಾಲೂಕು ಆಫೀಸ್ ಮುಂಭಾಗ ಪಟಾಕಿ ತಿಳಿಸಿ ಸಿಹಿ ಹಂಚಿ ಸಂಭ್ರಮ ಮಾಡಿದರು.

Gauribidanur News: ಹೊಸೂರು ಶಾಲೆ ಅರಿವಿನ ಚಿಗುರು ಸಮಾರೋಪ

ಹೊಸೂರು ಶಾಲೆ ಅರಿವಿನ ಚಿಗುರು ಸಮಾರೋಪ

ತಾಲ್ಲೂಕಿನ ಹೊಸೂರು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಮತ್ತು ಹಿರಿಯ ವಿದ್ಯಾರ್ಥಿಗಳ ಸಂಘದ ಸಂಯು-ಕ್ತಾಶ್ರಯದಲ್ಲಿ 'ಅರಿವಿನ ಚಿಗುರು' ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಶುಕ್ರವಾರ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.

Chinthamani News: ಶಿಕ್ಷಕರ ಸಂಘದ ಚುನಾವಣೆ: ಅಶೋಕ್ ಕುಮಾರ್ ಬಣದ ಅಭ್ಯರ್ಥಿಗಳ ದಿಗ್ವಿಜಯ

ಅಶೋಕ್ ಕುಮಾರ್ ಬಣದ ಅಭ್ಯರ್ಥಿಗಳ ದಿಗ್ವಿಜಯ

ಪುರುಷ ಅಭ್ಯರ್ಥಿ ಗಳ ವಿಭಾಗದಲ್ಲಿ ರವಣಪ್ಪ ಕೆ.323 ಮತಗಳನ್ನು ಪಡೆಯುವ ಮೂಲಕ ಅತ್ಯಧಿಕ ಮತ ಗಳೊಂದಿಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಉಳಿದಂತೆ ಸಿ.ಮಂಜುನಾಥ್ 310 ಮತಗಳನ್ನು ಶಿವರಾಜ ಕೆ.306 ಮತಗಳನ್ನು ಹಾಗೂ ಬಣದ ನೇತೃತ್ವ ವಹಿಸಿದ್ದ ಅಶೋಕ ಕುಮಾರ್ ಆರ್.305 ಮತಗಳನ್ನು ಪಡೆಯುವ ಮೂಲಕ ಭರ್ಜರಿ ಜಯ ಸಾಧಿಸಿದ್ದಾರೆ.

ಹಾಡಹಗಲೇ ಮಹಿಳೆಯ ಸರಗಳವು : ಬೆಚ್ಚಿಬಿದ್ದ ಜನತೆ

ಹಾಡಹಗಲೇ ಮಹಿಳೆಯ ಸರಗಳವು : ಬೆಚ್ಚಿಬಿದ್ದ ಜನತೆ

ಮೇಲ್ಮಡಿಯಲ್ಲಿದ್ದ ಪ್ರಿಯಾ ಅವರು ತಳಮಹಡಿಗೆ ಸಂಪ್ ಪರೀಕ್ಷೆ ಮಾಡಲು ಬರುತ್ತಿದ್ದಂತೆ ಹೊಂಚು ಹಾಕಿ ಕಾದಿದ್ದ ಕಳ್ಳರು ಸರಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ. ಘಟನೆಯಾದ ಕೂಡಲೇ ಪ್ರಿಯಾ ಅವರ ಪತಿ ಕಾರ್ತಿಕ್ ಮನೆಗೆ ಬಂದು ಮಾಹಿತಿ ಪಡೆದು ಕೂಡಲೇ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ವೆಂಕಟಪುರದಲ್ಲಿ ಶ್ರೀ ಗಂಗಮ್ಮ ದೇವಿಯ ಪ್ರಥಮ ವರ್ಷದ ವಾರ್ಷಿಕೋತ್ಸವ ಸಂಭ್ರಮ

ಗಂಗಮ್ಮನ ಸನ್ನಿಧಿಯಲ್ಲಿ ಮಂಡಲ ಪೂಜೆಯ ವೈಭವ

ವಾರ್ಷಿಕೋತ್ಸವದ ಅಂಗವಾಗಿ ಗ್ರಾಮಸ್ಥರಿಗೆ ಹಾಗೂ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಿಂದ ಬಂದಿದ್ದ ಭಕ್ತಾದಿಗಳಿಗೆ ಬೃಹತ್ ಅನ್ನದಾನ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ತೀರ್ಥ ಪ್ರಸಾದ ಸ್ವೀಕರಿಸಿದರು.ಭವ್ಯವಾಗಿ ಅಲಂಕರಿಸಲ್ಪಟ್ಟ ಗೋಪುರ ಮತ್ತು ದೇವಿಯ ವಿಗ್ರಹವು ಭಕ್ತರ ಕಣ್ಮನ ಸೆಳೆಯಿತು.

NEET: ಬಿಗಿ ಭದ್ರತೆಯ ನಡುವೆ ಜಿಲ್ಲೆಯಲ್ಲಿ ಯಶಸ್ವಿಯಾಗಿ ನಡೆದ ನೀಟ್ ಪರೀಕ್ಷೆ

ಬಿಗಿ ಭದ್ರತೆಯ ನಡುವೆ ಜಿಲ್ಲೆಯಲ್ಲಿ ಯಶಸ್ವಿಯಾಗಿ ನಡೆದ ನೀಟ್ ಪರೀಕ್ಷೆ

ಭಾನುವಾರ 2 ರಿಂದ 5 ಗಂಟೆಯವರೆಗೆ ನಡೆದ ಪರೀಕ್ಷೆಗೆ ಆಗಮಿಸಿದ್ದ ವಿದ್ಯಾರ್ಥಿಗಳನ್ನು 11 ಗಂಟೆಯಿಂದಲೇ ತಪಾಸಣೆಗೆ ಒಳಪಡಿಸಲಾಗಿತ್ತು. ಎಲ್ಲಾ 10 ಪರೀಕ್ಷಾ ಕೇಂದ್ರಗಳ 100 ಮೀ ಸುತ್ತಲೂ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು.ಈ ಸಂಬಂಧ ಜಿಲ್ಲಾಡಳಿತ ವೂ ಕೂಡ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದ್ದು ಕೂಡ ವಿದ್ಯಾರ್ಥಿಗಳು ಸುಗಮವಾಗಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಿತ್ತು.

Chinthamani News: ಭಾಗವತವು ಭಗವಂತನಲ್ಲಿ ನಂಬಿಕೆ ಹೆಚ್ಚಿಸುತ್ತದೆ: ಧರ್ಮಾಧಿಕಾರಿ ಡಾ||ಎಂ.ಆರ್.ಜಯರಾಮ್

ಭಾಗವತವು ಭಗವಂತನಲ್ಲಿ ನಂಬಿಕೆ ಹೆಚ್ಚಿಸುತ್ತದೆ

ಭಗವಂತನ ಅವತಾರ ಮತ್ತು ಲೀಲೆಗಳನ್ನು ಕುರಿತು ಭಾಗವತವು ರಚಿತವಾಗಿದೆ. ಭಾಗವತ ದಲ್ಲಿರುವ ಕಥೆಗಳು ಮಹತ್ವಪೂರ್ಣವಾದುದು. ಭಾಗವತವು ಗುರುಉಪದೇಶವಿದ್ದಂತೆ. ಗುರು ಉಪದೇಶವೆಂದರೆ ಆತ್ಮದ ಉದ್ದಾರ. ಭಾಗವತದ ಸಂದೇಶಗಳಿಂದ ಆತ್ಮಪ್ರಕಾಶವಾಗುತ್ತದೆ. ಗುರುಗಳು ಹೇಳಿರುವ ಸಾಧನೆಯ ಮಾರ್ಗವನ್ನು ಅನುಸರಿಸಿದರೆ ಪರಮಾತ್ಮನ ದರ್ಶನವನ್ನು ಮಾಡಬಹುದು.

ತಿಂಗಳಿಂದ ತಿಂಗಳಿಗೆ ಭಕ್ತರ ಪಾಲ್ಗೊಳ್ಳುವಿಕೆ ಹೆಚ್ಚುತ್ತೆ ಎಂಬುದು ನನ್ನ ನಂಬಿಕೆ: ಸಂಸದ ಡಾ.ಕೆ. ಸುಧಾಕರ್

ಅರುಣಾಚಲೇಶ್ವರ ದೇವಾಲಯದ ಮಾದರಿ ಅಭಿವೃದ್ದಿಯೆ ಗಿರಿ ಪ್ರದಕ್ಷಿಣೆ ಉದ್ದೇಶ

ನಮ್ಮ ಇವತ್ತಿನ ಗಿರಿಪ್ರದಕ್ಷಿಣೆ ಕಾರ್ಯಕ್ರಮಕ್ಕೆ ಸ್ವಾಮೀಜಿಗಳು ಬಂದಿದ್ದು ಮತ್ತಷ್ಟು ಕಳೆ ಬಂದಿದೆ ಭಕ್ತರ ಇಚ್ಛೆಯಂತೆ ಗಿರಿ ಪ್ರದಕ್ಷಿಣೆ ಪ್ರಾರಂಭ ಮಾಡಿದ್ದೇವೆ. ಇದು ತಮಿಳುನಾಡು ಅರುಚಲೇಶ್ವರ ದೇವಾಲಯ ಸುತ್ತಿದಷ್ಟೆ ಪವಿತ್ರ ಮತ್ತು ಪಾವನವಾದ ಪ್ರದಕ್ಷಿಣೆ ಎಂದು ನಾನು ಭಾವಿಸಿದ್ದೇನೆ. ಪ್ರದಕ್ಷಿಣೆ ಪ್ರಾರಂಭ ಮಾಡಿ ಮೂರು ತಿಂಗಳಾಗಿದೆ ಪ್ರತಿ ಹುಣ್ಣಿಮೆಗೆ ನಡೆಯುವ ಈ ಗಿರಿ ಪ್ರದಕ್ಷಿಗೆ ತಿಂಗಳಿಂದ ತಿಂಗಳಿಗೆ ಭಕ್ತರ ಸಂಖ್ಯೆ ಹೆಚ್ಚಳವಾಗುತ್ತಿದೆ.

Gudibande News: ಗುಡಿಬಂಡೆ ತಾಲ್ಲೂಕು ಶಿಕ್ಷಕರ ಸಂಘದ ಚುನಾವಣೆ: ಬಾಲಾಜಿ, ಶ್ರೀರಾಮರೆಡ್ಡಿ ಹಾಗೂ ಸುಬ್ಬಲಕ್ಷ್ಮಮ್ಮಗೆ ಜಯ

ಗುಡಿಬಂಡೆ ತಾಲ್ಲೂಕು ಶಿಕ್ಷಕರ ಸಂಘದ ಚುನಾವಣೆ

ಪಟ್ಟಣದ ಕೆಪಿಎಸ್ ಶಾಲಾ ಆವರಣದಲ್ಲಿ ನಡೆದ ಈ ಪ್ರಕ್ರಿಯೆಯು ರಾಜಕೀಯ ಚುನಾವಣೆಯಷ್ಟೇ ಪೈಪೋಟಿಯಿಂದ ಕೂಡಿದ್ದು ಎಲ್ಲರ ಗಮನ ಸೆಳೆಯಿತು. ಸಾಮಾನ್ಯ ಕ್ಷೇತ್ರದ ಎರಡು ಸ್ಥಾನಗಳಿಗಾಗಿ ಒಟ್ಟು 4 ಅಭ್ಯರ್ಥಿಗಳು ಕಣದಲ್ಲಿದ್ದರು. ಚುನಾವಣೆಯಲ್ಲಿ ಬಾಲಾಜಿ 80 ಮತಗಳನ್ನು ಪಡೆಯುವ ಮೂಲಕ ಪ್ರಥಮ ಸ್ಥಾನ ಗಳಿಸಿದರೆ, ಇ.ಎನ್. ಶ್ರೀರಾಮರೆಡ್ಡಿ 72 ಮತಗಳನ್ನು ಪಡೆದು ಜಯಶಾಲಿ ಯಾದರು.

Gauribidanur News: ಡಿ.ಪಾಳ್ಯದಲ್ಲಿ ಬ್ರಹ್ಮ ರಥೋತ್ಸವ

Gauribidanur News: ಡಿ.ಪಾಳ್ಯದಲ್ಲಿ ಬ್ರಹ್ಮ ರಥೋತ್ಸವ

ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿವಿಧ ರೀತಿಯ ದೇವತಾ ಕಾರ್ಯ ಗಳು ನೆರೆವೇರಿದವು, ಮಹಾ ಮಂಗಳಾರತಿಯ ನಂತರ ಅಭಿಜಿತ್ ಮುಹೂರ್ತದಲ್ಲಿ ಸಾವಿರಾರು ಮಂದಿ ಭಕ್ತರ ಜಯ ಘೋಷ ದೊಂದಗೆ ಬ್ರಹ್ಮ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಗ್ರಾಮದ ರಾಜ ಬೀದಿಗಳಲ್ಲಿ ಸಾಗಿದ ಬ್ರಹ್ಮ ರಥೋತ್ಸವಕ್ಕೆ ಗ್ರಾಮಸ್ಥರು ಪೂಜೆಯನ್ನು ನೆರವೇರಿಸಿದರು

Chinthamani News: ಕಾರ್ಮಿಕರ 8 ಗಂಟೆ ಕೆಲಸದ ಹಕ್ಕಿಗಾಗಿ ನಡೆದ ಹೋರಾಟದ ಇತಿಹಾಸ ಸ್ಮರಿಸಿದ ಮೊಹಮ್ಮದ್ ಬೇಗ್

ಚಿಂತಾಮಣಿಯಲ್ಲಿ ಅದ್ದೂರಿ ಕಾರ್ಮಿಕ ದಿನಾಚರಣೆ

ರಾಜ್ಯ ಟೈಲ್ಸ್ ಮತ್ತು ಗ್ರಾನೈಟ್ ಹಾಗೂ ಇತರ ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘ ಸೇರಿದಂತೆ ಹಲವು ಸಂಘಟನೆಗಳ ಪದಾಧಿಕಾರಿಗಳು ಮತ್ತು ಸದಸ್ಯರು ಮೆರವಣಿಗೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. "ಕಾರ್ಮಿಕರ ದಿನಾಚರಣೆ ಶುಭಾಶಯಗಳು" ಮತ್ತು "ಎಲ್ಲಾ ಕೂಲಿ ಕಾರ್ಮಿಕರಿಗೆ ಜಯವಾಗಲಿ" ಎಂಬ ಘೋಷಣೆಗಳು ಮೆರವಣಿಗೆಯುದ್ದಕ್ಕೂ ಮೊಳಗಿದವು.

ಮೇ.9ಕ್ಕೆ ಕೈಪು ಲಕ್ಷ್ಮೀನರಸಿಂಹಶಾಸ್ತ್ರೀಗಳಿಗೆ 1 ಲಕ್ಷ ನಗದು ಸಹಿತ ನಾರೇಯಣ ಪ್ರಶಸ್ತಿ : ಧರ್ಮಾಧಿಕಾರಿ ಎಂ.ಆರ್.ಜಯರಾಮ್

ಮೇ.9ಕ್ಕೆ ಕೈಪು ಲಕ್ಷ್ಮೀನರಸಿಂಹಶಾಸ್ತ್ರೀಗಳಿಗೆ ನಾರೇಯಣ ಪ್ರಶಸ್ತಿ

ಟ್ರಸ್ಟ್ ಸಮಿತಿಯ ಸದಸ್ಯರ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ. ಕೈವಾರ ತಾತಯ್ಯ ನವರ 300ನೇ ಜಯಂತಿಯನ್ನು ವರ್ಷಪೂರ್ತಿ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಸೂಕ್ತ ವ್ಯಕ್ತಿಗಳಿಗೆ ನಾರೇಯಣ ಪ್ರಶಸ್ತಿ ನೀಡಿ ಗೌರವಿಸಲು ತೀರ್ಮಾನಿಸಲಾಗಿದೆ. ಅದರಂತೆ ಕೈಪು ಲಕ್ಷ್ಮೀನರಸಿಂಹ ಶಾಸ್ತ್ರೀಗಳಿಗೆ ಪ್ರಥಮವಾಗಿ ನಾರೇಯಣ ಪ್ರಶಸ್ತಿ ನೀಡಲಾಗುತ್ತಿದೆ

Chikkaballapur News: ಬೇಸಿಗೆ ಶಿಬಿರಗಳು ರಜಾ ಅವಧಿಯಲ್ಲಿ ಮಕ್ಕಳಲ್ಲಿ ಸೃಜನಶೀಲತೆ, ಕೌಶಲ್ಯ, ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿ : ಪಿಡಿಒ ಲೋಕೇಶ್ ಬಣ್ಣನೆ

ಬೇಸಿಗೆ ಶಿಬಿರಗಳು ಸೃಜನಶೀಲತೆ, ಕೌಶಲ್ಯ, ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿ

ಮಕ್ಕಳು ವರ್ಷವೆಲ್ಲ ಶಾಲೆಯಲ್ಲಿ ಓದು, ಪಾಠ ಪ್ರವಚನ, ಪರೀಕ್ಷೆಯೆಂದು ಹೆಚ್ಚು ತಲ್ಲೀನ ರಾಗಿರುತ್ತಾರೆ. ಪರೀಕ್ಷೆಯ ನಂತರ ಬರುವ ಬೇಸಿಗೆ ರಜೆಯಲ್ಲಿ ಈ ರೀತಿಯ ಬೇಸಿಗೆ ಶಿಬಿರ ಆಯೋಜಿಸುವುದರಿಂದ ಮಕ್ಕಳಲ್ಲಿ ಹೆಚ್ಚಿನ ಉತ್ಸಾಹ, ಚೈತನ್ಯ ಮೂಡಲು ಹಾಗೂ ಲವಲವಿಕೆ ಯಿಂದ ಇರುತ್ತಾರೆ. ಆದ್ದರಿಂದ ಲೇ ಬೇಸಿಗೆ ಶಿಬಿರಗಳು ಮಕ್ಕಳಿಗೆ ಸಹಕಾರಿ ಎಂದರು

Chikkaballapur News: ಕಾರ್ಮಿಕರು ತಮ್ಮ ಶ್ರಮದ ಹಣವನ್ನು ದುಂದುವೆಚ್ಚಗಳಿಗೆ ಬಳಸಿದರೆ ಭವಿಷ್ಯ ಮಂಕಾಗಲಿದೆ: ನ್ಯಾ.ಟಿ.ಪಿ.ರಾಮಲಿಂಗೇಗೌಡ ಆತಂಕ

ಕಾರ್ಮಿಕರು ದುಂದುವೆಚ್ಚಗಳಿಗೆ ತಮ್ಮ ಶ್ರಮದ ಹಣ ಬಳಸಿದರೆ ಭವಿಷ್ಯ ಮಂಕು

ಸಮಯದ ಅರಿವಿಲ್ಲದೆ ದುಡಿಯುವ ಕಾರ್ಮಿಕರು ಜಾಣರಾಗಬೇಕು. ಜಾಗರೂಕರಾಗಿ ಬದುಕು ಕಟ್ಟಿ ಕೊಳ್ಳಬೇಕು. ಅದನ್ನು ಬಿಟ್ಟು ಮೊಬೈಲ್ ಹಾಗೂ ಇತರ ವಿಲಾಸಿ ವಸ್ತುಗಳ ಖರೀದಿಯಂತಹ ದುಂದು ವೆಚ್ಚಗಳಿಗೆ ಬಹುತೇಕ ಸಂಬಳವನ್ನು ಬಳಕೆ ಮಾಡದೆ, ಅಗತ್ಯಕ್ಕೆ ತಕ್ಕಂತೆ ಬಳಸಿ ಉಳಿಸುವ ಮೂಲಕ ಮಕ್ಕಳ ಭವಿಷ್ಯದತ್ತ ಗಮನ ಹರಿಸಬೇಕಿದೆ

Karaga Mahotsav: ಶ್ರೀ ಪೂಜಮ್ಮ ದೇವಿಯ 58ನೇ ವರ್ಷದ ಕರಗ ಅದ್ಧೂರಿ ಕರಗ ಮಹೋತ್ಸವ

ಶ್ರೀ ಪೂಜಮ್ಮ ದೇವಿಯ 58ನೇ ವರ್ಷದ ಕರಗ ಅದ್ಧೂರಿ ಕರಗ ಮಹೋತ್ಸವ

ತಾಲೂಕಿನ ಜಂಗಮಕೋಟೆಯಲ್ಲಿ ಶ್ರೀ ಪೂಜಮ್ಮ ದೇವಿಯ 58ನೇ ವರ್ಷದ ಕರಗ ಮಹೋತ್ಸವವು ಭಕ್ತಿಭಾವದಿಂದ ಅದ್ದೂರಿಯಾಗಿ ನೆರವೇರಿತು. ಶ್ರೀ ಪೂಜಮ್ಮ ದೇವಿ ಟ್ರಸ್ಟ್ ವತಿಯಿಂದ ಆಯೋಜಿಸ ಲಾದ ಮಹೋತ್ಸವದಲ್ಲಿ ಧಾರ್ಮಿಕ ವಿಧಿ ವಿಧಾನಗಳು, ವಾದ್ಯಗೋಷ್ಠಿ ಹಾಗೂ ಪೂಜಾ ಕಾರ್ಯಕ್ರಮ ಗಳು ಜರುಗಿದವು.

ವಸತಿ ರಹಿತರಿಗೆ ಗುಡ್ ನ್ಯೂಸ್:ಅರ್ಹ ಫಲಾನುಭವಿಗಳ ಆಯ್ಕೆಗೆ ಗ್ರಾಮ ಸಭೆಯಲ್ಲಿ ಚಾಲನೆ

ಕಾಗತಿ ಗ್ರಾಮ ಪಂಚಾಯತಿಯಲ್ಲಿ ಗ್ರಾಮ ಸಭೆ

ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸರ್ಕಾರಿ ಜಮೀನು ಲಭ್ಯವಿಲ್ಲ ದಿದ್ದಲ್ಲಿ, ಪಕ್ಕದ ಗ್ರಾಮಗಳಲ್ಲಿ ಜಮೀನು ಗುರುತಿಸಿ ಲೇಔಟ್ ನಿರ್ಮಿಸುವ ಮೂಲಕ ವಸತಿ ರಹಿತರಿಗೆ ನ್ಯಾಯ ಒದಗಿಸುವ ಭರವಸೆ ಯನ್ನು ನೀಡಿದರು. ಗ್ರಾಮ ಪಂಚಾಯತಿಯ ಅಧಿಕಾರಿಗಳು ಮನೆ-ಮನೆಗೆ ಭೇಟಿ ನೀಡಿ ಸರ್ವೇ ನಡೆಸಿದ ನಂತರವೇ ಅಂತಿಮ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು

Election: 4 ಮಂದಿ ಮಹಿಳಾ ನಿರ್ದೇಶಕರು, 8 ಮಂದಿ ಪುರುಷ ನಿರ್ದೇಶಕರ ಆಯ್ಕೆ ಪ್ರಕ್ರಿಯೆ ಪೂರ್ಣ

ತಾಲೂಕು ಶಿಕ್ಷಕರ ಸಂಘದ ಚುನಾವಣೆ : ಮಧ್ಯರಾತ್ರಿವರೆಗೂ ನಡೆದ ಮತ ಎಣಿಕೆ

ಚುನಾವಣಾಧಿಕಾರಿಯಾಗಿ ಪಾರದರ್ಶಕವಾಗಿ ಕಾರ್ಯನಿರ್ವಹಿಸಿದ ಪೆರೇಸಂದ್ರ ಪ್ರೌಢಶಾಲೆಯ ನರಸಿಂಹರೆಡ್ಡಿ ಘೋಷಣೆ ಮಾಡಿದಂತೆ ಮಹಿಳಾ ವಿಭಾಗಕ್ಕೆ 7 ಮಂದಿ ಸ್ಪರ್ಧೆ ಮಾಡಿದ್ದು ಅಪ್ಸರ-260, ಚಂದ್ರಕಲಾ-193, ಜಯಭಾರತಿ-255, ಲಾವಣ್ಯ-203, ವಹೀದಾಭಾನು-313, ಪ್ರೇಮಾವತಿ-205, ವಿಜಯ ಲಕ್ಷ್ಮೀ-179 ಮತಗಳನ್ನು ಪಡೆದಿದ್ದರು. ಈ ಪೈಕಿ ಅತಿ ಹೆಚ್ಚು ಮತಗಳನ್ನು ಪಡೆದ ವಹಿದಾ ಭಾನು-313, ಅಪ್ಸರ-260, ಜಯಭಾರತಿ-255, ಪ್ರೇಮಾವತಿ-205, ನಾಲ್ಕು ಮಂದಿ ಆಯ್ಕೆಯಾದರು.

ಬಿರುಗಾಳಿ–ಆಲಿಕಲ್ಲು ಮಳೆ ಅಬ್ಬರ; ತೋಟಗಾರಿಕೆ ಬೆಳೆಗಳಿಗೆ ಭಾರೀ ಹಾನಿ

ಬಿರುಗಾಳಿ–ಆಲಿಕಲ್ಲು ಮಳೆ ಅಬ್ಬರ; ತೋಟಗಾರಿಕೆ ಬೆಳೆಗಳಿಗೆ ಭಾರೀ ಹಾನಿ

ಕೆ.ಮತ್ತುಕದಹಳ್ಳಿ, ಕನ್ನಮಂಗಲ, ಚಿಂತಡಿಪಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಮಳೆಯ ತೀವ್ರತೆ ಹೆಚ್ಚಾಗಿ ಕಂಡುಬಂದಿದ್ದು, ಮಾವು, ದ್ರಾಕ್ಷಿ ಸೇರಿದಂತೆ ವಿವಿಧ ತೋಟಗಾರಿಕೆ ಬೆಳೆಗಳು ನೆಲಕಚ್ಚಿವೆ. ಆಲಿಕಲ್ಲು ಮಳೆಯ ಅಬ್ಬರಕ್ಕೆ ಹಣ್ಣುಗಳು ಕೊಯ್ಯುವ ಹಂತದಲ್ಲಿದ್ದ ಬೆಳೆಗಳು ಹಾನಿಗೊಳಗಾಗಿ ರೈತರು ಆರ್ಥಿಕ ನಷ್ಟಕ್ಕೆ ಗುರಿಯಾಗಿದ್ದಾರೆ.

Loading...