ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಚಿಕ್ಕಬಳ್ಳಾಪುರ
Murder Case: ಹೋಟೆಲ್‌ನಲ್ಲಿ ಪ್ರಿಯತಮೆಯ ಇರಿದು ಕೊಂದು ಪ್ರಿಯಕರ ಪರಾರಿ

ಹೋಟೆಲ್‌ನಲ್ಲಿ ಪ್ರಿಯತಮೆಯ ಇರಿದು ಕೊಂದು ಪ್ರಿಯಕರ ಪರಾರಿ

Murder Case: ಜೂನ್ 6 ರಂದು ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಸಿ ಟಿವಿ ಕ್ಯಾಮೆರಾ ಆಧರಿಸಿ ಜೋಡಿಯ ವಿವರಗಳನ್ನು ಪತ್ತೆಹಚ್ಚಲಾಗಿದೆ. ಕೊಲೆಗಾರನ ತಲಾಶ್‌ನಲ್ಲಿ ಪೊಲೀಸರು ತೊಡಗಿದ್ದಾರೆ.

ಸ್ನಾತಕ ಪದವಿ ಪರೀಕ್ಷೆಗಳು ಪಾರದರ್ಶಕವಾಗಿ ನಡೆದರೆ ಮಾತ್ರ ಗುಣಾತ್ಮಕ ಶಿಕ್ಷಣಕ್ಕೆ ಅರ್ಥ ಬರಲಿದೆ: ಮೌಲ್ಯಮಾಪನ ಕುಲ ಸಚಿವ ಲೋಕನಾಥ್ ಅಭಿಮತ

ಪರೀಕ್ಷೆಗಳು ಪಾರದರ್ಶಕವಾಗಿ ನಡೆದರೆ ಗುಣಾತ್ಮಕ ಶಿಕ್ಷಣಕ್ಕೆ ಅರ್ಥ ಬರಲಿದೆ

ಚಿಕ್ಕಬಳ್ಳಾಪುರ ವಿಶ್ವವಿದ್ಯಾಲಯದ ಉದ್ದೇಶ ಈಡೇರಬೇಕಾದರೆ ಪರಿಣಾಮಕಾರಿ ಬೋಧನೆ ಮತ್ತು ಪಾರದರ್ಶಕ ಪರೀಕ್ಷಾ ವ್ಯವಸ್ಥೆಯಿಂದ ಮಾತ್ರ ಸಾಧ್ಯ ಈ ಕರ್ತವ್ಯಕ್ಕೆ ನಿಯೋಜನೆಗೊಳ್ಳುವವರು ವೃತ್ತಿಬದ್ಧತೆ ಪ್ರದರ್ಶನ ಮಾಡಿದಾಗ ಮಾತ್ರ ವಿಶ್ವವಿದ್ಯಾಲಯಕ್ಕೆ ಹೆಸರು ಬರಲಿದೆ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಮೌಲ್ಯಮಾಪನ ಕುಲ ಸಚಿವ ಡಾಕ್ಟರ್ ಲೋಕನಾಥ್ ಅಭಿಪ್ರಾಯ ಪಟ್ಟರು

Chikkaballapur News: 4ನೇ ಅಖಿಲ ಭಾರತ ಸಾಹಿತ್ಯ ಪರಿಷದ್ ಸಮ್ಮೇಳನದಲ್ಲಿ ಬಿ.ಆರ್.ಕೃಷ್ಣರಿಗೆ ಸನ್ಮಾನ

ಪರಿಷದ್ ಸಮ್ಮೇಳನದಲ್ಲಿ ಬಿ.ಆರ್.ಕೃಷ್ಣರಿಗೆ ಸನ್ಮಾನ

ಬಾಗಲಕೋಟೆಯ ಸಾಹಿತಿ ಎಸ್.ಜಿ. ಕೋಟಿ ಅಧಿವೇಶನದ ಅವರು ಅಧ್ಯಕ್ಷತೆ ವಹಿಸಿದ್ದರು. ಸತತ ಎರಡು ದಿನಗಳ ಕಾಲ ನಡೆದ ಸಮ್ಮೇಳನದಲ್ಲಿ ಕವಿಗೋಷ್ಠಿ, ವಿಚಾರಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮಗಳು, ಸಾಹಿತ್ಯ ಸಮ್ಮೇಳನಗಳು, ಕನ್ನಡಕ್ಕಾಗಿ ಸೇವೆ ಸಲ್ಲಿಸಿದ ಕವಿ, ಸಾಮಾಜಿ ಕಾರ್ಯಕರ್ತರಿಗೆ ಸನ್ಮಾನ ಮಾಡಲಾಯಿತು.

Bakrid: ಬಾಗೇಪಲ್ಲಿ ತಾಲ್ಲೂಕಿನಾದ್ಯಂತ ಶ್ರದ್ಧಾ ಭಕ್ತಿಯಿಂದ ಬಕ್ರೀದ್ ಆಚರಣೆ

ಬಾಗೇಪಲ್ಲಿ ತಾಲ್ಲೂಕಿನಾದ್ಯಂತ ಶ್ರದ್ಧಾ ಭಕ್ತಿಯಿಂದ ಬಕ್ರೀದ್ ಆಚರಣೆ

ಮುಸ್ಲಿಂ ಧರ್ಮದಲ್ಲಿ ಪ್ರತಿಯೊಬ್ಬರು ತಮ್ಮ ಬದುಕಿನಲ್ಲಿ ನಮಾಜ್, ಹಜ್, ರೋಜಾ, ಜಕಾತ, ಸಿತ್ರಾ ಈ ಪಂಚ ಸೂತ್ರಗಳನ್ನು ಪಾಲಿಸಿದಾಗ ಮಾತ್ರ ಅಲ್ಲಾಹನ ಕೃಪೆಗೆ ಪಾತ್ರರಾಗಿ ಮೋಕ್ಷ ಪಡೆಯಲು ಸಾಧ್ಯ. ಅನಿವಾರ್ಯ ಸಂದರ್ಭದಲ್ಲಿ ದೇಶ, ಧರ್ಮ ಹಾಗೂ ಮಾನವ ಕುಲಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡಲು ಸನ್ನದ್ಧಗೊಳಿಸುವುದು ಈ ಹಬ್ಬದ ಆಚರಣೆಯ ಉದ್ದೇಶವಾಗಿದೆ

Chikkaballapur News: ಪರಿಸರ ಸ್ನೇಹಿ ಕೃಷಿ ತಾಂತ್ರಿಕತೆಯಿಂದ ಸುಸ್ಥಿರ ಕೃಷಿ ಸಾಧನೆ

ಪರಿಸರ ಸ್ನೇಹಿ ಕೃಷಿ ತಾಂತ್ರಿಕತೆಯಿಂದ ಸುಸ್ಥಿರ ಕೃಷಿ ಸಾಧನೆ

ಪ್ರಕೃತಿ ವಿಕೋಪಗಳು ಈಗ ನಮ್ಮ ಕಣ್ಮುಂದೆ ಕಾಣು ತ್ತಿವೆ. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಮರಗಳನ್ನು ಕಡಿದು ವಾಣಿಜ್ಯ ಮಟ್ಟದಲ್ಲಿ ಹೆಚ್ಚು ರಾಸಾಯ ನಿಕಗಳನ್ನು ಬಳಸಿ ಕೃಷಿ ಮಾಡಿ ಹಣಗಳಿಸುತ್ತಿರುವು ದರಿಂದ, ಆರೋಗ್ಯದಲ್ಲಿ ವ್ಯತ್ಯಾಸಗಳು ಕಾಣಿಸಿ ಕೊಂಡು ಆಸ್ಪತ್ರೆಗಳಿಗೆ ಖರ್ಚು ಮಾಡಲಾಗುತ್ತಿದೆಂದು ಸದ್ಯದ ಪರಿಸರದ ಪರಿಸ್ಥಿತಿಯ ಬಗ್ಗೆ ಸಂಕ್ಷಿಪ್ತವಾಗಿ ರೈತರಿಗೆ ಮನದಟ್ಟು ಮಾಡಿಕೊಟ್ಟರು.

Bakrid at Chikkaballapur: ಚಿಕ್ಕಬಳ್ಳಾಪುರದಲ್ಲಿ ಶ್ರದ್ಧಾಭಕ್ತಿಯಿಂದ ಬಕ್ರೀದ್ ಆಚರಣೆ

ಚಿಕ್ಕಬಳ್ಳಾಪುರದಲ್ಲಿ ಶ್ರದ್ಧಾಭಕ್ತಿಯಿಂದ ಬಕ್ರೀದ್ ಆಚರಣೆ

ಹಬ್ಬದ ಪ್ರಯುಕ್ತ ನಗರದಲ್ಲಿ ಮುಸ್ಲಿಂ ಬಾಂಧವರು ನಗರದ ಮಸ್ಜಿದೆ ಖುರ್ದ್ ಬಳಿ ಜಮಾಯಿಸಿ, ದೇವರ ನಾಮ ಸ್ಮರಣೆ ಮಾಡಿ, ಬಳಿಕ ಮೆರವಣಿಗೆ ಸಾಗಿದ ನೂರಾರು ಮುಸ್ಲಿಂ ಬಾಂಧವರು ಬಜಾರ್ ರಸ್ತೆ, ಭುವನೇಶ್ವರಿ ವೃತ್ತ,ಗಂಗಮ್ಮ ಗುಡಿ ರಸ್ತೆ ಹಾಗೂ ಎಂ.ಜಿ.ರಸ್ತೆ ಮಾರ್ಗವಾಗಿ ಸಾಗಿ ಪ್ರಶಾಂತ ನಗರದಲ್ಲಿರುವ ಈದ್ಗಾ ಮೈದಾನದ ಬಳಿ ಸೇರಿದರು.

Self Harming: ಶಾಲೆ ಸೇರಿಸುವ ವಿಷಯಕ್ಕೆ ಪತಿಯೊಂದಿಗೆ ಜಗಳ, ಮಕ್ಕಳೊಂದಿಗೆ ಕೆರೆಗೆ ಹಾರಿದ ತಾಯಿ

ಶಾಲೆ ಸೇರಿಸುವ ವಿಷಯಕ್ಕೆ ಜಗಳ, ಮಕ್ಕಳೊಂದಿಗೆ ಕೆರೆಗೆ ಹಾರಿದ ತಾಯಿ

Self Harming: ಶಾಲೆಗೆ ದಾಖಲಾತಿ ಮಾಡಿಸಲು ಗುರುವಾರ ಗಂಡ, ಹೆಂಡತಿ ಇಬ್ಬರು ಮಕ್ಕಳನ್ನು ಕರೆದುಕೊಂಡು ಹೋಗಿದ್ದರು. ಮಕ್ಕಳ ದಾಖಲಾತಿ ಮಾಡಿಸು, ಶಾಲಾ ಶುಲ್ಕವನ್ನು ಸೋಮವಾರ ಕಟ್ಟೋಣ ಎಂದು ಹೆಂಡತಿಗೆ ಹೇಳಿ ಗಂಡ ಅಲ್ಲಿಂದ ಹೋಗಿದ್ದಾರೆ. ಪತ್ನಿ ಮರಳಿ ಬಂದು ಮಕ್ಕಳ ಜೊತೆಗೆ ಕೆರೆಗೆ ಹಾರಿದ್ದಾರೆ.

Chikkaballapur news: ಜೂ.19ಕ್ಕೆ ನಂದಿ ಗಿರಿಧಾಮದಲ್ಲಿ ರಾಜ್ಯ ಸಚಿವ ಸಂಪುಟ ಸಭೆ: ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ

ಜೂ.19ಕ್ಕೆ ನಂದಿ ಗಿರಿಧಾಮದಲ್ಲಿ ರಾಜ್ಯ ಸಚಿವ ಸಂಪುಟ ಸಭೆ

ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಸಚಿವ ಸಂಪುಟ ಸಭೆ ಏರ್ಪಾಡಾಗಿದ್ದು ಸಭೆ ನಡೆಯುವ ಜಾಗದಲ್ಲಿ ಸಭಾ ವೇದಿಕೆಯನ್ನು ಸಿದ್ಧಪಡಿಸಬೇಕು. ಸಭೆಯ ನಂತರ ಪತ್ರಿಕಾಗೋಷ್ಠಿ ಏರ್ಪಡಿಸಲು ಕ್ರಮ ವಹಿಸಬೇಕು, ಸಭೆಯಲ್ಲಿ ಭಾಗವಹಿಸುವ ಗಣ್ಯರಿಗೆ ವ್ಯಾಸ್ತವ್ಯ ವ್ಯವಸ್ಥೆ ಮಾಡಬೇಕು. ಕುಡಿಯುವ ನೀರಿನ ವ್ಯವಸ್ಥೆ, ಊಟ ತಿಂಡಿ ವ್ಯವಸ್ಥೆಯಾಗಬೇಕು.

Chikkaballapur News: ಅಖಿಲ ಕರ್ನಾಟಕ ರೈತ ಸಂಘದ ವತಿಯಿಂದ ಪ್ರತಿಭಟನೆ

ಅಖಿಲ ಕರ್ನಾಟಕ ರೈತ ಸಂಘದ ವತಿಯಿಂದ ಪ್ರತಿಭಟನೆ

ಯಾವುದೇ ಆದೇಶವಿಲ್ಲದಿದ್ದರೂ ತರಕಾರಿ ಮತ್ತು ಹೂವಿನ ಮಾರುಕಟ್ಟೆ ವರ್ತಕರಿಂದ ಸುಂಕ ವಸೂಲಿ ಮಾಡಲಾಗುತ್ತಿದೆ, ರೈತರ ಅನುಕೂಲಕ್ಕಾಗಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿಯೇ ರಾಗಿ ಮತ್ತು ತೊಗರಿ ಮಾರಾಟ ಕೇಂದ್ರ ದೊಡ್ಡ ಜಾನುವಾರಗಳ ಸಂತೆ, ಹಾಗೂ ವಾರದ ಸಂತೆಯನ್ನು ಪ್ರಾರಂಭ ಮಾಡ ಬೇಕು ಹಾಗೂ ರೈತರ ಜ್ವಲಂತ ಬೇಡಿಕೆಗಳನ್ನು ಈ ಕೂಡಲೆ ಈಡೇರಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು

ವೈಚಾರಿಕತೆ ಮತ್ತು ವೈಜ್ಞಾನಿಕ ಜಾಗೃತಿಯ ಹರಿಕಾರ ಹೆಚ್.ಎನ್.ಯುವಕರಿಗೆ ಮಾದರಿ : ಪ್ರಾಧಿಕಾರದ ಅಧ್ಯಕ್ಷ ಶಿವಶಂಕರ್‌ರೆಡ್ಡಿ

ವೈಜ್ಞಾನಿಕ ಜಾಗೃತಿಯ ಹರಿಕಾರ ಹೆಚ್.ಎನ್.ಯುವಕರಿಗೆ ಮಾದರಿ

ಡಾ.ಎಚ್.ನರಸಿಂಹಯ್ಯನವರು ಕಡುಬಡತನದಲ್ಲಿ ಶಿಕ್ಷಣ ಪಡೆದು ಉನ್ನತ ಮಟ್ಟ ವ್ಯಾಸಂಗ ಮಾಡಿ ಶಿಕ್ಷಣ ಪಡೆದವರು. ಬೆಂಗಳೂರು ನಗರಕ್ಕೆ ಬಸ್ ಸೌಕರ್ಯವಿಲ್ಲದ ಅ ಕಾಲದಲ್ಲಿ ಕಾಲ್ನಡಿಗೆಯಲ್ಲಿ ಬೆಂಗಳೂರಿಗೆ ಹೋಗಿ ವಿಧ್ಯಾಭ್ಯಾಸ ಕಲಿತರು. ಊಟಕ್ಕಾಗಿ ಉಚಿತ ಛತ್ರಗಳಲ್ಲಿ ಮಲಗಿ ವಾರನ್ನ ಉಂಡು ತಮ್ಮ ಶಿಕ್ಷಣ ಪಡೆದ ಯೋಗಿ.

Chikkaballapur News: ಕಾಲ್ತುಳಿತದಲ್ಲಿ ಮೃತರಾದವರಿಗೆ 1 ಕೋಟಿ ಪರಿಹಾರ ನೀಡಲು ಸಮಿತಿ ಆಗ್ರಹ

ಕಾಲ್ತುಳಿತದಲ್ಲಿ ಮೃತರಾದವರಿಗೆ 1 ಕೋಟಿ ಪರಿಹಾರ ನೀಡಲು ಸಮಿತಿ ಆಗ್ರಹ

ಕಾಲ್ತುಳಿತ ಘಟನೆಯ ದುರಂತದಲ್ಲಿ ಸಾವಿಗೀಡಾದವರ ಸಾವಿಗೆ ನ್ಯಾಯ ಕೊಡಿಸುವವರು ಯಾರು? ಈ ಹಿಂದೆ ಕೇರಳದಲ್ಲಿ ಆನೆಯ ಕಾಲ್ತುಲಿತಕ್ಕೆ ಬಲಿಯಾದವನಿಗೆ ರಾಜ್ಯ ಸರ್ಕಾರದ ವತಿಯಿಂದ 25 ಲಕ್ಷ ರೂಪಾಯಿಗಳ ಪರಿಹಾರ ನೀಡಿದೆ. ಆದರೆ ಮೊನ್ನೆ ನಡೆದ ಕಾಲ್ತುಳಿತ ದುರಂತದಲ್ಲಿ ಮಡಿದವರಿಗೆ ರಾಜ್ಯ ಸರ್ಕಾರ ಕೇವಲ ಹತ್ತು ಲಕ್ಷ ರೂಪಾಯಿಗಳ ಪರಿಹಾರವನ್ನು ಘೋಷಣೆ ಮಾಡಿರುವುದು ಸರಿಯಲ್ಲ

ರೈತ ಮಿತ್ರನಂತೆ ಮಹೇಂದ್ರ ಟ್ರಾಕ್ಟರ್ ಕಂಪನಿ ಕೆಲಸ ಮಾಡುತ್ತಿದೆ: ಸಚಿವ ಕೆ.ಹೆಚ್.ಮುನಿಯಪ್ಪ ಬಣ್ಣನೆ

ರೈತ ಮಿತ್ರನಂತೆ ಮಹೇಂದ್ರ ಟ್ರಾಕ್ಟರ್ ಕಂಪನಿ ಕೆಲಸ ಮಾಡುತ್ತಿದೆ

50 ವರ್ಷಗಳಿಗೂ ಹೆಚ್ಚು ಕಾಲದಿಂದ ಮಹಿಂದ್ರಾ ಟ್ರಾಕ್ಟರ್ ಕಂಪನಿ ದೇಶದ ರೈತಾಪಿ ವರ್ಗದ ಮಿತ್ರ ನಂತೆ ಕೆಲಸ ಮಾಡುತ್ತಿದೆ. ಇಂತಹ ಕಂಪನಿಯ ಶಾಖೆಯನ್ನು ಚಿಕ್ಕಬಳ್ಳಾಪುರ ನಗರ ಹೊರವಲಯದಲ್ಲಿ ನನ್ನ ಮಿತ್ರ ಶ್ರೀನಿವಾಸಪುರದ ನಾರಾಯಣಸ್ವಾಮಿ ತಮ್ಮ ಮಗಳಿಗಾಗಿ ಪ್ರಾರಂಭಿಸಿರುವುದು ಸಂತೋಷ ತಂದಿದೆ

Power Cut: ಜೂ.8ರಂದು ಚಿಕ್ಕಬಳ್ಳಾಪುರದ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

ಜೂ.8ರಂದು ಚಿಕ್ಕಬಳ್ಳಾಪುರದ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

Power Cut: ಚಿಕ್ಕಬಳ್ಳಾಪುರ ನಗರ ಉಪವಿಭಾಗ ವ್ಯಾಪ್ತಿಯಲ್ಲಿ ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ನಗರದ ವಿವಿಧ ಪ್ರದೇಶಗಳಲ್ಲಿ ಜೂ.8 ರಂದು ಭಾನುವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 4 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಈ ಕುರಿತ ವಿವರ ಇಲ್ಲಿದೆ.

World Environment Day: ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಬೇಕಿದೆ: ಮುಖ್ಯ ಶಿಕ್ಷಕ ಆರ್.ಹನುಮಂತ ರೆಡ್ಡಿ

ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಬೇಕಿದೆ

ಪ್ಲಾಸ್ಟಿಕ್ ವಸ್ತುಗಳು ಭೂಮಿಯಲ್ಲಿ ಕರಗದೆ ಸಾವಿರಾರು ವರ್ಷ ಹಾಗೇ ಉಳಿಯುತ್ತವೆ. ಇದು ಮಣ್ಣು ಆರೋಗ್ಯ ಮತ್ತು ಪರಿಸರವನ್ನು ಹಾಳು ಮಾಡುತ್ತದೆ. ಜಲ ಮೂಲವನ್ನು ಮಾಲಿನ್ಯ ಗೊಳಿಸುತ್ತದೆ. ಇದನ್ನು ಅರಿತು ಜನರು ಪಾಸ್ಟಿಕ್ ಬಳಕೆ ತ್ಯಜಿಸಬೇಕು

Chikkaballapur News: ಸ್ತ್ರೀ ಚೇತನ ಮತ್ತು ದುಡಿಯೋಣ ಬಾ ಅಭಿಯಾನ, ಗ್ರಾಮೀಣ ಜನರಿಗೆ ಸಹಕಾರಿ

ಸ್ತ್ರೀ ಚೇತನ ಮತ್ತು ದುಡಿಯೋಣ ಬಾ ಅಭಿಯಾನ, ಗ್ರಾಮೀಣ ಜನರಿಗೆ ಸಹಕಾರಿ

ಕೂಲಿಕಾರರಿಗೆ ನಿರಂತರ ಕೆಲಸ ನೀಡಲಾಗು ತ್ತಿದೆ. ಜತೆಗೆ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಿಸಲು ಸ್ತ್ರೀ ಚೇತನ ಅಭಿಯಾನ ಕೈಗೊಳ್ಳಲಾಗಿದೆ. ಎಲ್ಲರೂ ಈ ಅಭಿಯಾನಗಳ ಸೌಲಭ್ಯ ಸದುಪಯೋಗ ಪಡೆದುಕೊಳ್ಳಬೇಕು. ಗ್ರಾಮ ಪಂಚಾಯಿತಿ ಸಿಬ್ಬಂದಿ ದಿನಕ್ಕೆ ಎರಡು ಬಾರಿ ಎನ್‌ಎಂಎMಎಸ್ ಹಾಜರಿ ಕಡ್ಡಾಯವಾಗಿ ಮಾಡಬೇಕು.

JEE 697th Rank: ಜೆಇಇ 697ನೇ ರ‍್ಯಾಂಕ್ ಮೂಲಕ ಐಐಟಿಗೆ ಸ್ಥಾನ ಪಡೆದ ಕಿಶೋರ್ ಪ್ರೀತಂ

ಜೆಇಇ 697ನೇ ರ‍್ಯಾಂಕ್ ಮೂಲಕ ಐಐಟಿಗೆ ಸ್ಥಾನ ಪಡೆದ ಕಿಶೋರ್ ಪ್ರೀತಂ

ಪ್ರತಿಷ್ಠಿತ ಬಿ.ಜಿ.ಎಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಯಾದ ಎಂ. ಎಸ್. ಕಿಶೋರ್ ಪ್ರೀತಂ ಏಪ್ರಿಲ್ ತಿಂಗಳಲ್ಲಿ ನಡೆದ ಜೆಇಇ ಅಡ್ವಾನ್ಸ್ ಪರೀಕ್ಷೆಯಲ್ಲಿ ಶೇ 95 ಅಂಕಗಳೊಂದಿಗೆ 697 ನೇ ರ‍್ಯಾಂಕ್ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಈ ಮೂಲಕ ಭಾರತದ ಪ್ರತಿಷ್ಠಿತ ಐಐಟಿ ಸಂಸ್ಥೆಯಲ್ಲಿ ಸೀಟು ಪಡೆದಿದ್ದಾರೆ.ಕಿಶೋರ್ ಪ್ರೀತಂ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಕೂಡ ಶೇ 94 ಅಂಕಗಳ ಸಾಧನೆ ಮಾಡಿದ್ದಾರೆ

ಪರಿಸರ ಉಳಿಸಿ ಬೆಳಸಿ ಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡಬೇಕು: ನ್ಯಾ.ಗಣೇಶ್

ಅಭಿಮತ ಪ್ಲಾಸ್ಟಿಕ್ ಬಳಕೆಗೆ ಸಂಪೂರ್ಣ ಕಡಿವಾಣ ಹಾಕಬೇಕು: ನ್ಯಾ.ಪುಷ್ಟ

ಪರಿಸರ ನಮ್ಮ ಜೀವನ ಅಂಗ ವಾಗಿದೆ ನಿತ್ಯ ನಾವು ಸೇವಿಸುವ ಗಾಳಿ ಶುದ್ದವಾಗಿರಬೇಕು. ಜಲ ನೆಲ ಗಿಡಗಳನ್ನು ನೆಟ್ಟು ಇವುಗಳ ಸಂರಕ್ಷಣ ಮಾಡಬೇಕಿದೆ. ಸಂವಿಧಾನದಲ್ಲಿ ಪರಿಸರ ಕಾಪಾಡುವುದು ನಮ್ಮ ಕರ್ತವ್ಯವಾಗಿದೆ ಪರಿಸರಕ್ಕೆ ಧಕ್ಕೆ ಮಾಡಿದರೆ ಕಾನೂನುನಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಉದಾ,ಮರಗಿಡಗಳ ಕಡಿವುದು ಪರಿಸರ ಮಾಲಿನ್ಯ ಮಾಡುವುದು ಅಪರಾಧವಾಗಿದೆ

RCB Celebration in Chikkaballapur: 18 ವರ್ಷಗಳ ಬಳಿಕ ಆರ್‌ಸಿಬಿ ಐತಿಹಾಸಿಕ ಚೊಚ್ಚಲ ಐಪಿಎಲ್ ಕಿರೀಟ : ಬಾಗೇಪಲ್ಲಿಯಲ್ಲಿ ವಿರಾಟ್ ಕೊಹ್ಲಿಯ ಅಭಿಮಾನಿಗಳ ವಿಜಯೋತ್ಸವ

ಬಾಗೇಪಲ್ಲಿಯಲ್ಲಿ ವಿರಾಟ್ ಕೊಹ್ಲಿಯ ಅಭಿಮಾನಿಗಳ ವಿಜಯೋತ್ಸವ

ಆರ್‌ಸಿಬಿಯ ಈ ವಿಜಯದಲ್ಲಿ ವಿರಾಟ್ ಕೊಹ್ಲಿಯ ೧೮ ವರ್ಷಗಳ ಕಾಲದ ತಪಸ್ಸಿದೆ. ನಿಷ್ಠೆ, ಬದ್ಧತೆ ಯಿದೆ. ಬೌಲಿಂಗ್, ಬ್ಯಾಟಿಂಗ್, ಫೀಲ್ಡಿಂಗ್ ಹೀಗೆ ಎಲ್ಲಾ ವಿಭಾಗದಲ್ಲೂ ಆರ್‌ಸಿಬಿ ಪ್ರತಿ ಆಟಗಾರರು ಚಾಂಪಿಯನ್ ಪ್ರದರ್ಶನ ನೀಡಿದ್ದಾರೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಇದು ಇತಿಹಾಸ ಸೃಷ್ಟಿಸಿದೆ, ಆರ್.ಸಿ.ಬಿ ವಿರುದ್ಧ ಮಾತನಾಡಿವವರಿಗೆ ಈ ಬಾರಿ ಐಪಿಎಲ್ ಕಪ್ ಗೆಲ್ಲುವ ಮೂಲಕ ಬಾಯಿ ಮುಚ್ಚಿಸಿದ್ದಾರೆ

Chikkaballapur News: 12ರಂದು ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ

12ರಂದು ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ

ಜೂನ್ 12ರಂದು "ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ" ಪ್ರಯುಕ್ತ  ಎಲ್ಲಾ ಸರ್ಕಾರಿ ಕಚೇರಿಗಳು ಮತ್ತು ಶಾಲಾ-ಕಾಲೇಜುಗಳಲ್ಲಿ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಬೇಕು. ಜಿಲ್ಲೆಯ ಗ್ರಾಮ,ತಾಲ್ಲೂಕು,ಜಿಲ್ಲಾ ಪಂಚಾಯಿತಿಗಳ ಚುನಾಯಿತ ಪ್ರತಿನಿಧಿಗಳು, ಇತರೆ ಜನ ಪ್ರತಿನಿಧಿಗಳು ಈ ಕಾರ್ಯಕ್ರಮ ಗಳಲ್ಲಿ ಭಾಗವಹಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ವಹಿಸಬೇಕು.

Chikkaballapur News: ಬಾಗೇಪಲ್ಲಿ: ಶಾಸಕರಿಂದ ಬಿತ್ತನೆ ಬೀಜ ವಿತರಣೆ

ಬಾಗೇಪಲ್ಲಿ: ಶಾಸಕರಿಂದ ಬಿತ್ತನೆ ಬೀಜ ವಿತರಣೆ

ಪಟ್ಟಣದ ಕೃಷಿ ಇಲಾಖೆ ಆವರಣದಲ್ಲಿ 2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕೃಷಿ ಇಲಾಖೆ ಯಿಂದ ಸರಕಾರಿ ಸಹಾಯಧನದಡಿ ರೈತರಿಗೆ ನೀಡುವ ಬೀಜ ವಿತರಣೆ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು. ಈ ವರ್ಷ ಮುಂಗಾರು ಮಳೆ ಒಂದು ವಾರ ಮುಂಚಿತವಾಗಿ ಪ್ರಾರಂಭವಾಗಿದ್ದು ಒಳ್ಳೆಯ ಮಳೆಯಾಗುತ್ತಿದೆ.

Chikkaballapur News: ದುರಹಂಕಾರ ತೋರದೆ ಮೊದಲು ಕ್ಷಮೆ ಕೇಳಲಿ: ಕರವೇ ಜಿಲ್ಲಾ ಅಧ್ಯಕ್ಷ ಸುರೇಶಬಾಬು

ದುರಹಂಕಾರ ತೋರದೆ ಮೊದಲು ಕ್ಷಮೆ ಕೇಳಲಿ

ಕನ್ನಡಕ್ಕೆ ತನ್ನದೇ ಅದ ಇತಿಹಾಸ ಪರಂಪರೆ ಇದೆ ನಮ್ಮ ಭಾಷೆಗೆ ಎರಡು ಸಾವಿರ ಐದು ನೂರು ವರ್ಷ ಗಳ ಭವ್ಯ ಪರಂಪರೆ ಇರುವ ಭಾಷೆ ನಮ್ಮದು ಇಂತಹ ಭಾಷೆಗೆ ಅರಿವು ಇಲ್ಲದೆ ತಮಿಳು ಭಾಷೆಯಿಂದ ಕನ್ನಡ ಬಂದಿರುವುದು ಎಂದು ಅವೈಜ್ಞಾನಿಕ ಹೇಳಿಕೆ ನಿಜಕ್ಕೂ ಖಂಡನೀಯ

Chikkaballapur News: ಶಾಂತಿ, ಸೌಹಾರ್ಧತೆಯಿಂದ ಎಲ್ಲಾ ಸಮುದಾಯಗಳ ಸಹಯೋಗದೊಂದಿಗೆ ಬಕ್ರೀದ್ ಹಬ್ಬ ಆಚರಿಸಿ.

ಎಲ್ಲಾ ಸಮುದಾಯಗಳ ಸಹಯೋಗದೊಂದಿಗೆ ಬಕ್ರೀದ್ ಹಬ್ಬ ಆಚರಿಸಿ

ಮೆರವಣಿಗೆ ಹೋಗುವಾಗ ಮತ್ತು ವಾಪಸ್ ಬರುವಾಗ ವಾಹನಗಳ ಅಪಘಾತಗಳ ಸಂದರ್ಭವಿರು ತ್ತದೆ. ವಾಹನ ಟಚ್ ಆಗಿದೆ ಎಂದು ಅನ್ಯ ಕೋಮಿನವರೊಂದಿಗೆ ಗಲಾಟೆಯಾಗುವ ಸಂಭವವಿದೆ. ದ್ವಿಚಕ್ರವಾಹನಗಳ ವೀಲಿಂಗ್, ತ್ರಿಬಲ್ ರೈಡಿಂಗ್, ವೇಗವಾಗಿ ಚಲಾಯಿಸುವುದನ್ನು ಮಾಡಬಾ ರದು. ಮಸೀದಿಗಳಲ್ಲಿ ಹುಡುಗರಿಗೆ ಮತ್ತು ಯುವಕರಿಗೆ ಈ ರೀತಿ ಮಾಡಬಾರದು ಎಂದು ಬುದ್ದಿ ಹೇಳಬೇಕು.

Chikkaballapur News: ಪೋಷಕರ ಶ್ರಮವನ್ನು ಮರೆಯದಿರಿ: ನಾಗಾರ್ಜುನ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಗೋಪಾಲಕೃಷ್ಣ

ಪೋಷಕರ ಶ್ರಮವನ್ನು ಮರೆಯದಿರಿ

ಪೋಷಕರು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಹಗಲಿರುಳು ಎನ್ನದೆ ಸರ್ವಸ್ವವನ್ನು ತ್ಯಾಗ ಮಾಡುತ್ತಾರೆ. ಮಕ್ಕಳ ಭವಿಷ್ಯವೇ ತಮ್ಮ ಜೀವನದ ಪರಮ ಗುರಿ ಎಂದು ನಿಮಗಾಗಿ ಹಗಲಿರುಳು ಕಾಳಜಿ ವಹಿಸುತ್ತಾರೆ. ನೀವು ಉದ್ಯೋಗ ಪಡೆದ ಮೇಲೆ ಹೆತ್ತವರ ಕಣ್ಣಲ್ಲಿ ಸಂತೋಷ ತರಬೇಕೆ ವಿನಃ ಕಣ್ಣೀರು ತರಿಸಬಾರದು ಎಂದರು.

Chikkaballapur Crime: ಸೈಜುಕಲ್ಲು ಮುಖದ ಮೇಲೆ ಎತ್ತಿಹಾಕಿ ವ್ಯಕ್ತಿಯ ಬರ್ಬರ ಕೊಲೆ

ಸೈಜುಕಲ್ಲು ಮುಖದ ಮೇಲೆ ಎತ್ತಿಹಾಕಿ ವ್ಯಕ್ತಿಯ ಬರ್ಬರ ಕೊಲೆ

ವ್ಯಕ್ತಿಯೊಬ್ಬರ ತಲೆಯ ಮೇಲೆ ಸೈಜುಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಗರದ ಹೃದಯ ಭಾಗದಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ. ಇಲ್ಲಿನ ಅಂಬೇಡ್ಕರ್ ನಗರ (ಚಾಮರಾಜಪೇಟೆ) ನಿವಾಸಿ  ಶ್ರೀಕಾಂತ್ (೨೯) ಎಂಬುವರೇ ದಾರುಣವಾಗಿ ಕೊಲೆಯಾದ ದುರ್ದೈವಿ. ಐದು ವರ್ಷಗಳ ಹಿಂದೆ ವಿವಾಹಿತರಾದ ಅವರಿಗೆ ಇಬ್ಬರು ಗಂಡು ಮಕ್ಕಳಿದ್ದು ಮೃತ ಶ್ರೀಕಾಂತ್ ವೆಲ್ಡಿಂಗ್ ಕೆಲಸ ಮಾಡುವರು.