Crime news: ಮಾಜಿ ಪಂಚಾಯಿತಿ ಸದಸ್ಯನ ಕೊಲೆಗೆ ಸಂಬಂಧಿಕರೇ ಕೊಟ್ರು ಸುಪಾರಿ!
ಉತ್ತರ ಪ್ರದೇಶದ ಬಹ್ರೈಚ್ನಲ್, ಉತ್ತರ ಪ್ರದೇಶ ವಿಶೇಷ ಕಾರ್ಯಪಡೆ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಮತ್ತು ಬಿಜೆಪಿ ನಾಯಕ ವಿಜಯ್ದೇವರು ಡಿಸಿಂಗ್ರನ್ನು ಕೊಲೆಗೈಯಲು ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿದೆ. ಬಂಧಿತ ಆರೋಪಿಗಳನ್ನು ಪ್ರದೀಪ್ ಯಾದವ್, ಪರಶುರಾಮ್ ಮೌರ್ಯ ಮತ್ತು ಸಾಕೇತ್ ರಾವತ್ ಎಂದು ಗುರುತಿಸಲಾಗಿದೆ.

ವಿಜಯ್ ಸಿಂಗ್ ಮತ್ತು ಆರೋಪಿಗಳು -

ಬಹ್ರೈಚ್: ಉತ್ತರ ಪ್ರದೇಶದ (Uttar Pradesh) ಬಹ್ರೈಚ್ನಲ್ಲಿ (Bahraich), ಉತ್ತರ ಪ್ರದೇಶ ವಿಶೇಷ ಕಾರ್ಯಪಡೆ (Uttar Pradesh Special Task Force) ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಮತ್ತು ಬಿಜೆಪಿ ನಾಯಕ ವಿಜಯ್ ಸಿಂಗ್ರನ್ನು ಕೊಲೆಗೈಯಲು ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿದೆ. ಬಂಧಿತ ಆರೋಪಿಗಳನ್ನು ಪ್ರದೀಪ್ ಯಾದವ್, ಪರಶುರಾಮ್ ಮೌರ್ಯ ಮತ್ತು ಸಾಕೇತ್ ರಾವತ್ ಎಂದು ಗುರುತಿಸಲಾಗಿದೆ.
ಅಧಿಕಾರಿಗಳ ಪ್ರಕಾರ, ಈ ಮೂವರು ಆರೋಪಿಗಳು ವಿಜಯ್ ಸಿಂಗ್ರನ್ನು ಕೊಲೆಗೈಯಲು ತೆರಳುತ್ತಿದ್ದರು. ತನಿಖಾಧಿಕಾರಿಗಳು ಬಹಿರಂಗಪಡಿಸಿದಂತೆ, ವಿಜಯ್ ಸಿಂಗ್ರ ಸಹೋದರನ ಅಳಿಯ ಆಲೋಕ್ ಸಿಂಗ್, ಈ ಕೊಲೆಗಾಗಿ 10 ಲಕ್ಷ ರೂ.ಗಳ ಒಪ್ಪಂದವನ್ನು ಮಾಡಿಕೊಂಡು ಆರೋಪಿಗಳಿಗೆ ನೀಡಿದ್ದ. ಆಸ್ತಿ ವಿವಾದದಿಂದ ಉಂಟಾದ ಕುಟುಂಬ ದ್ವೇಷದಿಂದಾಗಿ ಈ ಸುಪಾರಿಯನ್ನು ನೀಡಲಾಗಿತ್ತು. ಆಲೋಕ್ ಸಿಂಗ್, 150 ಬಿಘಾ ಭೂಮಿಯನ್ನು ಮಾರಾಟ ಮಾಡಲು ಯೋಜಿಸಿದ್ದ, ಆದರೆ ವಿಜಯ್ ಸಿಂಗ್ ಇದಕ್ಕೆ ಅಡ್ಡಿಯಾಗಿದ್ದರು. ಆದ್ದರಿಂದ, ಆಲೋಕ್ ಸಿಂಗ್ ಈ ಕೊಲೆಯ ಪ್ಲಾನ್ ಮಾಡಿದ್ದರೂ.
ಈ ಸುದ್ದಿಯನ್ನು ಓದಿ:Viral News: ಪ್ರೇಯಸಿಯ ಫೋನ್ ಬ್ಯುಸಿ ಬಂದಿದ್ದಕ್ಕೆ ಗ್ರಾಮದ ವಿದ್ಯುತ್ ಸಂಪರ್ಕವನ್ನೇ ಕಡಿತಗೊಳಿಸಿದ ಪಾಗಲ್ ಪ್ರೇಮಿ!
ಪ್ರದೀಪ್ ಯಾದವ್ ಮತ್ತು ಪರಶುರಾಮ್ ಮೌರ್ಯ ಈ ಹಿಂದೆ ತಲಾ 12 ವರ್ಷಗಳ ಜೈಲು ಶಿಕ್ಷೆ ಅನುಭವಿಸಿದ್ದರು. ಜೈಲಿನಿಂದ ಬಿಡುಗಡೆಯಾದ ನಂತರ, ಅವರು ಈಗ ಜೈಲಿನಲ್ಲಿರುವ ಸಾಕೇತ್ ರಾವತ್ನೊಂದಿಗೆ ಸೇರಿ ವಿಜಯ್ ಸಿಂಗ್ ಕೊಲೆಗೆ ಸಂಚು ರೂಪಿಸಿದ್ದರು. ಎಸ್ಟಿಎಫ್ಗೆ ಗುಪ್ತ ಮಾಹಿತಿ ದೊರಕಿದ ನಂತರ, ಬಹ್ರೈಚ್ನ ಕೈಸರ್ಗಂಜ್ನಲ್ಲಿ ಶನಿವಾರ ರಾತ್ರಿ 8:15ರ ಸುಮಾರಿಗೆ ಈ ನಾಲ್ವರನ್ನು (ಸುಪಾರಿ ಪಡೆದ ಮೂವರು ಮತ್ತು ಆಲೋಕ್ ಸಿಂಗ್) ಬಂಧಿಸಲಾಯಿತು. ಘಟನೆಯ ಸ್ಥಳದಿಂದ ಎರಡು ಪಿಸ್ತೂಲ್ಗಳು, ಒಂದು ರಿವಾಲ್ವರ್, ಗುಂಡುಗಳು ಮತ್ತು ಬೈಕ್ ವಶಪಡಿಸಿಕೊಳ್ಳಲಾಗಿದೆ. ಕೈಸರ್ಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.