ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಭಾವೀ ಪತಿಯನ್ನು ಕೊಲ್ಲುವ ಮುನ್ನ ಇನ್ಸ್ಟಾಗ್ರಾಂ ಪೋಸ್ಟ್‌; ಉದ್ಯಮಿ ಕೊಲೆ ನಡೆದಿದ್ದೇಗೆ?

ಮಹಾರಾಷ್ಟ್ರದ ಪುಣೆ ಜಿಲ್ಲೆಯ ಲೋಹಗಡ್ ಕೋಟೆಯಲ್ಲಿ 26 ವರ್ಷದ ರಿಯಲ್ ಎಸ್ಟೇಟ್ ನಿರ್ದೇಶಕ ಕೇತನ್‌ ವಿಶಾಲ್ ಅಗರ್ವಾಲ್ ಸಾವಿನ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಇದೀಗ ಸಿಯಾ ಗೋಯಲ್ ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳು ವೈರಲ್‌ ಆಗುತ್ತಿವೆ. ಸಿಯಾ ಮತ್ತು ಕೇತನ್ ಫೆಬ್ರವರಿಯಲ್ಲಿ ತಮ್ಮ ನಿಶ್ಚಿತಾರ್ಥವನ್ನು ಘೋಷಿಸಿದ್ದರು.

ಭಾವೀ ಪತಿಯನ್ನು ಕೊಲ್ಲುವ ಮುನ್ನ ಇನ್ಸ್ಟಾಗ್ರಾಂ ಪೋಸ್ಟ್‌

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Jun 24, 2026 9:57 AM

ಪುಣೆ: ಮಹಾರಾಷ್ಟ್ರದ ಪುಣೆ ಜಿಲ್ಲೆಯ ಲೋಹಗಡ್ ಕೋಟೆ (Lohagad Fort)ಯಲ್ಲಿ 26 ವರ್ಷದ ರಿಯಲ್ ಎಸ್ಟೇಟ್ ನಿರ್ದೇಶಕ ಕೇತನ್‌ ವಿಶಾಲ್ ಅಗರ್ವಾಲ್ (Ketan Vishal Agrawal) ಸಾವಿನ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಇದೀಗ ಸಿಯಾ ಗೋಯಲ್ ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳು ವೈರಲ್‌ ಆಗುತ್ತಿವೆ. ಸಿಯಾ ಮತ್ತು ಕೇತನ್ ಫೆಬ್ರವರಿಯಲ್ಲಿ ತಮ್ಮ ನಿಶ್ಚಿತಾರ್ಥವನ್ನು ಘೋಷಿಸಿದ್ದರು ಮತ್ತು ನವೆಂಬರ್‌ನಲ್ಲಿ ಖಾಸಗಿ ಜೆಟ್‌ಗಳು ಮತ್ತು ಅರಮನೆಗಳನ್ನು ಒಳಗೊಂಡ ಅದ್ದೂರಿ ವಿವಾಹವನ್ನು ನಿಗದಿಪಡಿಸಲಾಗಿತ್ತು.

ಸರಿಯಾಗಿ ಒಂದು ತಿಂಗಳ ನಂತರ ಒಂದು ತಿಂಗಳ ನಂತರ, ಸಿಯಾ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ಪೋಸ್ಟ್‌ನಲ್ಲಿ ನನ್ನ ಹೃದಯ ಮನೆಯನ್ನು ಕಂಡುಕೊಂಡಿದೆ ಎಂದು ಬರೆದುಕೊಂಡಿದ್ದಾರೆ. ಶೀರ್ಷಿಕೆಯೊಂದಿಗೆ ಮೇಣದಬತ್ತಿಯಿಂದ ಬೆಳಗಿದ ಕೇಕ್‌ನ ಚಿತ್ರವನ್ನು ಹಂಚಿಕೊಂಡರು ಮತ್ತು ಕೇತನ್ ಅವರನ್ನು ಟ್ಯಾಗ್ ಮಾಡಿದ್ದರು. ಮೇ ತಿಂಗಳಲ್ಲಿ ನಡೆದ ಮತ್ತೊಂದು ಪೋಸ್ಟ್‌ನಲ್ಲಿ ಕೇತನ್ ಸಿಯಾಳಿಗೆ ಹೂವನ್ನು ನೀಡುತ್ತಿರುವುದು ಕಂಡು ಬಂದಿದೆ.

ಏನಿದು ಘಟನೆ?

ಕೇತನ್ ಅಗರ್ವಾಲ್ ಅವರು ಜೂನ್ 18ರ ಗುರುವಾರದಂದು ತಮ್ಮ ಭಾವಿ ಪತ್ನಿ ಸಿಯಾ ಗೋಯಲ್ ಅವರ ಜನ್ಮದಿನವನ್ನು ಆಚರಿಸಲು ಅವರೊಂದಿಗೆ ಲೋಹಗಢಕ್ಕೆ ಚಾರಣ ತೆರಳಿದ್ದರು. ಅಲ್ಲಿ ಕೇತನ್ ಅವರು ಪ್ರಪಾತಕ್ಕೆ ಬಿದ್ದು ಮೃತಪಟ್ಟಿದ್ದರು. ಜೊತೆಯಲ್ಲಿದ್ದ ಸಿಯಾ ಈ ಬಗ್ಗೆ ಪೊಲೀಸರಿಗೆ ಫೋಟೋಗಳಿಗೆ ಪೋಸ್ ನೀಡುವಾಗ ಕೇತನ್ ಕಾಲು ಜಾರಿ ಕಣಿವೆಗೆ ಬಿದ್ದರು ಎಂದು ತಿಳಿಸಿದ್ದಳು. ಮೂರು ಗಂಟೆಗಳ ಸುದೀರ್ಘ ಕಾರ್ಯಾಚರಣೆಯ ನಂತರ ರಕ್ಷಣಾ ತಂಡವು ಮೃತದೇಹವನ್ನು ಹೊರತೆಗೆದಿತ್ತು.

ಲೋನಾವಾಲಾ ಗ್ರಾಮಾಂತರ ಪೊಲೀಸರ ತನಿಖೆಯ ವೇಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಅನುಮಾನಗಳು ಕಾಡಿದ್ದವು. ಮೊಬೈಲ್ ಡೇಟಾ, ಕರೆ ದಾಖಲೆಗಳ ಪರಿಶೀಲನೆ ಮತ್ತು ಸ್ಥಳದಲ್ಲಿದ್ದ ಜನರ ಹೇಳಿಕೆಗಳನ್ನು ಪಡೆದುಕೊಂಡ ಬಳಿಕವಂತೂ ಪೊಲೀಸರ ಶಂಕೆ ತೀವ್ರವಾಯಿತು. ತಕ್ಷಣವೇ ಪೊಲೀಸರು ಆಕೆ ಮತ್ತು ಆಕೆಯ ಪ್ರೇಮಿಯನ್ನು ವಶಕ್ಕೆ ಪಡೆದರು. ತನಿಖಾಧಿಕಾರಿಗಳ ಪ್ರಕಾರ, ಭಾವಿ ಪತ್ನಿ ಸಿಯಾ ಮತ್ತು ಆಕೆಯ ಪ್ರೇಮಿ ಚೇತನ್ ಚೌಧರಿ ಸೇರಿ ಕೇತನ್‌ನನ್ನು ಆಳವಾದ ಪ್ರಪಾತಕ್ಕೆ ತಳ್ಳಿದ್ದಾರೆ ಎಂದು ತಿಳಿದುಬಂದಿದೆ. ಈ ಆರೋಪಿಗಳಿಗೆ ಬೇರೆ ಯಾರಾದರೂ ಸಹಾಯ ಮಾಡಿದ್ದಾರೆಯೇ ಎಂಬ ನಿಟ್ಟಿನಲ್ಲಿ ಪೊಲೀಸರು ಈಗ ತನಿಖೆ ನಡೆಸುತ್ತಿದ್ದಾರೆ.

Bengaluru Murder Case: ಆಸ್ತಿ ವಿಚಾರಕ್ಕೆ ಜಗಳ; ಪುತ್ರನ ಜತೆ ಸೇರಿ ಹೆತ್ತ ತಾಯಿಯನ್ನೇ ಕೊಲೆಗೈದ ಮಗಳು!

ಕೇತನ್ ಭಾವಿ ಪತ್ನಿ ಸಿಯಾ ಗೋಯಲ್‌ಗೆ ಈ ಮದುವೆ ಇಷ್ಟವಿರಲಿಲ್ಲ. ಆತನಿಂದ ದೂರವಾಗಲು ಸಂಚು ರೂಪಿಸಿದ ಆಕೆ, ತನ್ನ ಸ್ನೇಹಿತ ಹಾಗೂ ಪ್ರೇಮಿಯ ಸಹಾಯ ಪಡೆದಿದ್ದಳು. ತನ್ನ ಜನ್ಮದಿನದ ನೆಪದಲ್ಲಿ ಕೇತನ್‌ನನ್ನು ಲೋಹಗಢಕ್ಕೆ ಟ್ರೆಕ್ಕಿಂಗ್ ಕರೆದೊಯ್ದಿದ್ದಳು. ಅಲ್ಲಿ ಸೂಕ್ತ ಸಮಯ ಸಿಕ್ಕಾಗ, ಚೇತನ್ ಸಹಾಯದಿಂದ ಕೇತನ್‌ನನ್ನು ಆಳವಾದ ಕಣಿವೆಗೆ ತಳ್ಳಿದ್ದಾಳೆ.